Pervez Musharraf Died: ಮುಷರಫ್‌ ಸಾವಿಗೆ ಕಾರಣವಾದ ಅಪರೂಪದ ಆರೋಗ್ಯ ಸಮಸ್ಯೆ, ಏನಿದು Amyloidosis? - Vistara News

ಆರೋಗ್ಯ

Pervez Musharraf Died: ಮುಷರಫ್‌ ಸಾವಿಗೆ ಕಾರಣವಾದ ಅಪರೂಪದ ಆರೋಗ್ಯ ಸಮಸ್ಯೆ, ಏನಿದು Amyloidosis?

ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಈಗ ದುಬೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಎದುರಿಸುತ್ತಿರುವ ಸಮಸ್ಯೆ Amyloidosis. ಏನಿದು ಅಪರೂಪದ ತೊಂದರೆ?

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರು ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ(Pervez Musharraf Died). ಕಳೆದ ಕೆಲವು ತಿಂಗಳಿನಿಂದ ಅವರು ಯುಎಇನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾದರೆ ಮುಷರಫ್‌ ಅವರಿಗೆ ಏನು ಆಗಿತ್ತು(Amyloidosis)? ಅವರ ಅಂಗಗಳ ಕಾರ್ಯಕ್ಷಮತೆ ಕ್ಷೀಣಿಸಲು ಏನು ಕಾರಣ? ಇಲ್ಲಿದೆ ಮಾಹಿತಿ.

ಮುಷರಫ್‌ ಅವರ ಈ ಅಪರೂಪದ ಸಮಸ್ಯೆಗೆ ಅಮೈಲೋಡೋಸಿಸ್‌ (Amyloidosis) ಎಂದು ಹೇಳಲಾಗುತ್ತದೆ. ದೇಹದ ಪ್ರಮುಖ ಅಂಗಗಳಲ್ಲಿ ಅಸಾಮಾನ್ಯ ರೀತಿಯಲ್ಲಿ ಪ್ರೊಟೀನ್ ಜಮಾವಣೆಗೊಂಡು, ಆ ಅಂಗಗಳ ಕಾರ್ಯಕ್ಷಮತೆಯನ್ನು ಕ್ಷೀಣಿಸುತ್ತದೆ. ಅಮೈಲಾಯ್ಡ್‌ ಸಾಮಾನ್ಯವಾಗಿ ದೇಹದಲ್ಲಿ ಇರುವುದಿಲ್ಲ. ಆದರೆ ಬೇರೆ ಬೇರೆ ರೀತಿಯ ಪ್ರೊಟೀನ್‌ಗಳಿಂದ ಇವು ರೂಪುಗೊಳ್ಳುವುದಕ್ಕೆ ಸಾಧ್ಯವಿದೆ. ಹೃದಯ, ಮೂತ್ರಪಿಂಡ, ಯಕೃತ್‌ ಮತ್ತು ಜೀರ್ಣಾಂಗದಂಥ ಪ್ರಮುಖ ಭಾಗಗಳಲ್ಲಿ ಇವು ರೂಪುಗೊಂಡು ಪ್ರಾಣಾಪಾಯನ್ನೂ ತರಬಹುದು.

‌2018ರಲ್ಲಿ ಅವರಿಗೆ ಅಮೈಲೋಡೋಸಿಸ್‌ ಇರುವುದು ಪತ್ತೆಯಾಗಿತ್ತು. ಇದರಿಂದ ನರ ಮತು ಹೃದಯ ಸಂಬಂಧೀ ಸಮಸ್ಯೆಗಳಿಗೆ ಅವರು ಚಿಕಿತ್ಸೆ ತೆಗೆದುಕೊಳ್ಳುವಂತಾಗಿತ್ತು. ಇದೀಗ ಈ ಸಮಸ್ಯೆ ಉಲ್ಭಣಗೊಂಡಿದ್ದು, ಅವರ ನರಮಂಡಲ ಸಂಪೂರ್ಣ ದುರ್ಬಲಗೊಂಡಿದೆ ಎಂದು ಅವರ ಸಮೀಪವರ್ತಿಗಳು ತಿಳಿಸಿದ್ದಾರೆ.

ಕಾರಣಗಳೇನು?
ಅಮೈಲೋಡೋಸಿಸ್‌ ಎನ್ನುವುದು ನಾನಾ ಆರೋಗ್ಯ ಸಮಸ್ಯೆಗಳ ಉಪ ಉತ್ಪನ್ನ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಜೀನ್‌ ಮ್ಯುಟೇಷನ್‌ನಿಂದ ಈ ಸಮಸ್ಯೆ ಬರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಕಾರಣಗಳೇ ಗೊತ್ತಾಗುವುದಿಲ್ಲ. ಅಮೈಲೋಡೋಸಿಸ್‌ನಲ್ಲಿ ಲೈಟ್‌ ಚೈನ್‌ ಅಮೈಲೋಡೋಸಿಸ್‌, ಎಎ ಅಮೈಲೋಡೋಸಿಸ್‌, ಟ್ರಾನ್ಸ್‌ ಥೈರೆಟಿನ್‌ ಅಮೈಲೋಡೋಸಿಸ್‌ ಎಂಬ ಮೂರು ಪ್ರಕಾರಗಳಿವೆ.

ಇದನ್ನೂ ಓದಿ: Pervez Musharraf Died: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

ಪ್ರಮುಖ ಲಕ್ಷಣಗಳು
– ದೇಹ ತುಂಬ ದುರ್ಬಲವಾಗುವುದು, ಆಯಾಸ
– ಯಾವುದೇ ಕಾರಣವಿಲ್ಲದೆ ದೇಹದ ತೂಕ ಕುಸಿತ
– ಸೊಂಟ, ಕಾಲು, ಮೊಣಗಂಟು ಮತ್ತು ಪಾದಗಳಲ್ಲಿ ಊತ
– ಕೈ ಮತ್ತು ಪಾದಗಳಲ್ಲಿ ನೋವು, ಇರುವೆ ಹರಿದಂತಾಗುವುದು
– ಚರ್ಮದಲ್ಲಿ ಕೆಲವು ಕಡೆ ಉರಿಯೂತ
– ನಾಲಿಗೆ ದಪ್ಪ ಆಗುವುದು
– ಉಸಿರಾಟದ ಅವಧಿ ಕಡಿಮೆ, ಏದುಸಿರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Benefits of Poppy Seeds: ಗಸೆಗಸೆ ನಿದ್ದೆಗಷ್ಟೇ ಅಲ್ಲ, ಪೌಷ್ಟಿಕಾಂಶಗಳ ಆಗರವೂ ಹೌದು!

ಗಸಗಸೆ ಎನ್ನುವ ಪುಟ್ಟ ಬೀಜಗಳ ಹೆಸರು ಕೇಳುತ್ತಿದ್ದಂತೆ ಗಸಗಸೆ ಪಾಯಸ, ಖೀರು ಕುಡಿದು ನಿದ್ದೆ ಹೊಡೆಯುವವರ ನೆನಪಾಗಬಹುದು. ಆದರೆ ಗಸಗಸೆಯ ಬಳಕೆ ಅದಷ್ಟಕ್ಕೇ ಸೀಮಿತವಲ್ಲ. ಹಲವರು ರೀತಿಯ ಪಕ್ವಾನ್ನಗಳಲ್ಲಿ ಇದನ್ನು ಮಸಾಲೆಯಾಗಿ ಸೇರಿಸಲಾಗುತ್ತದೆ. ಇದರಿಂದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸಬಹುದು. ಏನು ಸತ್ವಗಳಿವೆ (Benefits of Poppy Seeds) ಗಸಗಸೆಯಲ್ಲಿ?

VISTARANEWS.COM


on

Benefits of Poppy Seeds
Koo

ನೈಋತ್ಯ ಭಾಗದಲ್ಲಿ ಮುಂಗಾರು ಮಾರುತಗಳು ಬಂದರೂ, ಸೆಕೆ ಕಡಿಮೆಯಾಗಿಲ್ಲ. ಹಾಗಾಗಿ ದೇಹ ತಂಪಾಗಿಸುವುದಕ್ಕೆ ಹಲವು ಉಪಾಯಗಳು ಬೇಕಾಗುತ್ತವೆ. ಅವುಗಳಲ್ಲಿ ಗಸಗಸೆಯೂ ಒಂದು. ಅದರ ಹೆಸರು ಕೇಳುತ್ತಿದ್ದಂತೆ ಗಸಗಸೆ ಪಾಯಸ, ಖೀರಿನದ್ದೇ ನೆನಪಾಗಬಹುದು. ಆದರೆ ಗಸಗಸೆಯ ಬಳಕೆ ಅದಷ್ಟಕ್ಕೇ ಸೀಮಿತವಲ್ಲ. ಅಂಟಿನುಂಡೆ, ಡ್ರೈಫ್ರೂಟ್ಸ್‌ ಲಡ್ಡುಗಳಲ್ಲಿ ಇದನ್ನು ಸೇರಿಸುವವರಿದ್ದಾರೆ. ಹಲವರು ರೀತಿಯ ಪಕ್ವಾನ್ನಗಳಲ್ಲಿ ಇದನ್ನು ಮಸಾಲೆಯಾಗಿ ಸೇರಿಸಲಾಗುತ್ತದೆ. ಇದರಿಂದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸಬಹುದು. ಏನು ಸತ್ವಗಳಿವೆ (Benefits of Poppy Seeds) ಗಸಗಸೆಯಲ್ಲಿ?

Poppy Seeds

ಸತ್ವಗಳು ಬಹಳಷ್ಟು

ಕ್ಯಾಲ್ಸಿಯಂ, ಮೆಗ್ನೀಶಿಯಂ, ಫಾಸ್ಫರಸ್‌, ಕಬ್ಬಿಣ ಸೇರಿದಂತೆ ಹಲವು ರೀತಿಯ ಖನಿಜಗಳು ಗಸೆಗಸೆಯಲ್ಲಿವೆ. ಈ ಪುಟ್ಟ ಬೀಜಗಳಲ್ಲಿ ಥಿಯಾಮಿನ್‌, ರೈಬೊಫ್ಲೆವಿನ್‌, ನಯಾಸಿನ್‌ ಸೇರಿದಂತೆ ವಿವಿಧ ರೀತಿಯ ಬಿ ಜೀವಸತ್ವಗಳಿವೆ. ಇವೆಲ್ಲ ಆಹಾರವನ್ನು ಶಕ್ತಿಯಾಗಿ ಸಂಚಯಿಸುವಲ್ಲಿ ಮತ್ತು ನರಗಳ ಕ್ಷಮತೆ ಹೆಚ್ಚಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತವೆ. ಜೊತೆಗೆ, ಪಾಲಿಫೆನಾಲ್‌ಗಳು ಮತ್ತು ಫ್ಲೆವನಾಯ್ಡ್‌ಗಳಂಥ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ ಈ ಕಿರುಬೀಜಗಳು. ಆರೋಗ್ಯಕರ ಕೊಬ್ಬು ಸಹ ಇದರ ಭಾಗ. ಈ ಎಲ್ಲ ಸತ್ವಗಳಿಂದ ದೇಹಕ್ಕೆ ಬಹಳಷ್ಟು ರೀತಿಯಲ್ಲಿ ಪ್ರಯೋಜನಗಳಿವೆ.

Sleeping Tips

ನಿದ್ದೆಗೆ ಪೂರಕ

ಶರೀರಕ್ಕೆ ಆರಾಮ ನೀಡಿ, ನಿದ್ದೆ ಬರಿಸುವಂಥ ಸಾಮರ್ಥ್ಯ ಗಸಗಸೆಗೆ ಇದೆಯೆನ್ನುವುದು ಭಾರತೀಯರ ಪರಂಪರಾಗತ ತಿಳುವಳಿಕೆ. ಇದರಲ್ಲಿರುವ ಆಲ್ಕಲಾಯ್ಡ್‌ ಮತ್ತು ಪೆಪ್ಟೈಡ್‌ಗಳಿಗೆ ನೋವು ನಿವಾರಿಸುವ ಮತ್ತು ನಿದ್ದೆ ಬರಿಸುವಂಥ ಗುಣಗಳಿವೆ. ಇವು ನರಗಳನ್ನು ಶಾಂತಗೊಳಿಸುತ್ತವೆ. ಹಾಗಾಗಿ ತೀವ್ರ ಆಯಾಸವಾಗಿದ್ದರೆ, ಶ್ರಮದ ಕೆಲಸದಿಂದ ಮೈ-ಕೈ ನೋವಾಗಿದ್ದರೆ, ನಿದ್ದೆಯಿಲ್ಲದೆ ಒದ್ದಾಡುತ್ತಿದ್ದರೆ, ಸಂಜೆಯ ಹೊತ್ತಿಗೆ ಗಸಗಸೆ ಖೀರು ಕುಡಿದು ನಿದ್ದೆ ಹೊಡೆಯುವುದು ಒಳ್ಳೆಯ ಉಪಾಯ.

Improves Digestion Karela Benefits

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ಈ ಪುಟ್ಟ ಬೀಜಗಳಲ್ಲಿ ನಾರಿನಂಶ ಹೇರಳವಾಗಿದೆ. ಇವುಗಳ ಸೇವನೆಯಿಂದ ಮಲಬದ್ಧತೆಯಂಥ ತೊಂದರೆಯನ್ನು ದೂರ ಮಾಡಲು ಅನುಕೂಲವಾಗುತ್ತದೆ. ನಾರು ಹೆಚ್ಚಿರುವ ಆಹಾರಗಳು ಹೊಟ್ಟೆಯನ್ನು ನಿಯಮಿತವಾಗಿ ಖಾಲಿ ಮಾಡಿಸಿ, ಮಲಬದ್ಧತೆಯನ್ನು ನಿವಾರಿಸಿ, ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಇದರಲ್ಲಿರುವ ಜೆಲ್‌ನಂಥ ವಸ್ತುಗಳು, ಜೀರ್ಣಾಂಗಗಳಲ್ಲಿರುವ ಉರಿಯೂತ ನಿವಾರಣೆಗೆ ನೆರವಾಗುತ್ತವೆ.

Antioxidants in it keep immunity strong Benefits Of Mandakki

ಪ್ರತಿರೋಧಕ ಶಕ್ತಿ ಸುಧಾರಣೆ

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತವೆ. ಇದರಿಂದ ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚುತ್ತದೆ. ಇದರಲ್ಲಿರುವ ಸತು ಮತ್ತು ಮ್ಯಾಂಗನೀಸ್‌ನಂಥ ಸತ್ವಗಳು ಪ್ರತಿರೋಧಕ ಸಾಮರ್ಥ್ಯ ಹೆಚ್ಚಿಸುವಲ್ಲಿ ನೆರವಾಗುತ್ತವೆ. ಬೇಸಿಗೆ ಮುಗಿಯುತ್ತಾ ಬಂದು, ಮಳೆಗಾಲದ ಹೊಸಿಲಲ್ಲಿರುವಾಗ ದೇಹಕ್ಕೆ ಬೇಕಾದ ರೋಗ ನಿರೋಧಕತೆಯ ರಕ್ಷಣೆ ನೀಡುವಲ್ಲಿ ಇದು ಸಹಾಯ ಮಾಡಬಲ್ಲದು.

Hair And Skin Care Tips For Monsoon

ಚರ್ಮ, ಕೂದಲಿನ ಆರೋಗ್ಯ

ಇದರಲ್ಲಿರುವ ಒಮೇಗಾ 6 ಮತ್ತು ಒಮೇಗಾ 3 ಕೊಬ್ಬಿನಾಮ್ಲಗಳು ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ನೀಡಬಲ್ಲವು. ಇವು ಚರ್ಮ ಮತ್ತು ಕೂದಲಿನ ಆರೋಗ್ಯ ರಕ್ಷಣೆಯಲ್ಲಿ ಹಲವು ರೀತಿಯ ಅನುಕೂಲಗಳನ್ನು ಒದಗಿಸುತ್ತವೆ. ಚರ್ಮದ ಹಿಗ್ಗುವಿಕೆಯನ್ನು ವೃದ್ಧಿಸಿ, ಕೊಲಾಜಿನ್‌ ಹೆಚ್ಚಿಸಿ, ಈ ಮೂಲಕ ಸುಕ್ಕುಗಳನ್ನು ಕಡಿಮೆ ಮಾಡಿ ತ್ವಚೆಗೆ ತಾರುಣ್ಯ ಮರಳಿಸುವ ಸಾಮರ್ಥ್ಯ ಹೊಂದಿವೆ. ಇದರಲ್ಲಿರುವ ಜಿಂಕ್‌ ಅಂಶದಿಂದ ಕೊಲಾಜಿನ್‌ ವೃದ್ಧಿಯಾಗಿ, ಕೂದಲಿನ ಆರೋಗ್ಯ ಸುಧಾರಿಸುತ್ತದೆ. ಕೂದಲು ಬಲಕಳೆದುಕೊಂಡು ತುಂಡಾಗುತ್ತಿದ್ದರೆ, ಅದನ್ನು ತಡೆಯುವುದಕ್ಕೆ ಕೊಲಾಜಿನ್‌ ನೆರವಾಗುತ್ತದೆ. ಹಾಗಾಗಿ ಗಸೆಗಸೆಯನ್ನು ಅಲ್ಪ ಪ್ರಮಾಣದಲಾದರೂ ಬಳಕೆ ಮಾಡುವುದು ದೇಹಾರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Benefits Of Litchi: ಸಿಹಿಯಾದ, ರುಚಿಯಾದ ಲಿಚಿ ಹಣ್ಣನ್ನು ತಿಂದರೆ ಆರೋಗ್ಯ ಲಾಭ ಹಲವಾರು

Continue Reading

ಆರೋಗ್ಯ

Microplastics: ನಮಗೆ ಗೊತ್ತೇ ಆಗದಂತೆ ನಮ್ಮ ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್‌!

ಕಣ್ಣಿಗೆ ಕಾಣದ ಪ್ಲಾಸ್ಟಿಕ್‌ ಕಣಗಳು (Microplastics) ಎಷ್ಟೋ ಬಾರಿ ಆಹಾರದ ಜೊತೆಗೆ ನಮಗೆ ಗೊತ್ತೇ ಆಗದಂತೆ ನಮ್ಮ ಹೊಟ್ಟೆ ಸೇರುತ್ತದೆ. ಮೈಕ್ರೋ ಪ್ಲಾಸ್ಟಿಕ್‌ ಎಂದರೆ ಐದು ಎಂಎಂಗೂ ಸಣ್ಣದಾದ ಪ್ಲಾಸ್ಟಿಕ್‌ನ ಕಣಗಳು. ಬಹಳ ಸೂಕ್ಷ್ಮವಾದ ಈ ಪ್ಲಾಸ್ಟಿಕ್‌ ಕಣಗಳು ನಾವು ಉಸಿರಾಡುವ ಗಾಳಿಯಲ್ಲಿ ತೇಲಾಡುತ್ತಾ ವಾತಾವರಣದಲ್ಲಿ ಇರುತ್ತವೆ. ವಾತಾವರಣದಲ್ಲಿರುವ ಇವು ಅನೇಕ ಬಾರಿ ತೆರೆದ ಆಹಾರದ ಮೇಲೆಯೂ ಸಂಗ್ರಹವಾಗುತ್ತವೆ. ಬಹಳ ಸಾರಿ, ಕಾರ್ಖಾನೆಗಳಲ್ಲಿ ಸಂಸ್ಕರಿಸಿದ ಆಹಾರ ತಯಾರಿಸುವಾಗಲೇ ಪ್ಯಾಕೇಜಿನ ಜೊತೆಗೂ ಇವು ಸೇರಿಕೊಂಡು ಬಿಟ್ಟಿರುತ್ತವೆ.

VISTARANEWS.COM


on

Microplastics
Koo

ನಾವು ನಿತ್ಯವೂ ತಿನ್ನುವ ಆಹಾರದಲ್ಲಿ ಪ್ಲಾಸ್ಟಿಕ್‌ (Microplastics) ಇದೆ ಎಂದರೆ ನಂಬುತ್ತೀರಾ? ಹೌದು. ಮೈಕ್ರೋ ಪ್ಲಾಸ್ಟಿಕ್‌ ಎಂಬ ಕಣ್ಣಿಗೆ ಕಾಣದ ಪ್ಲಾಸ್ಟಿಕ್‌ ಕಣಗಳು ಎಷ್ಟೋ ಬಾರಿ ಆಹಾರದ ಜೊತೆಗೆ ನಮಗೆ ಗೊತ್ತೇ ಆಗದಂತೆ ನಮ್ಮ ಹೊಟ್ಟೆ ಸೇರುತ್ತದೆ. ಮೈಕ್ರೋ ಪ್ಲಾಸ್ಟಿಕ್‌ ಎಂದರೆ ಐದು ಎಂಎಂಗೂ ಸಣ್ಣದಾದ ಪ್ಲಾಸ್ಟಿಕ್‌ನ ಕಣಗಳು. ಬಹಳ ಸೂಕ್ಷ್ಮವಾದ ಈ ಪ್ಲಾಸ್ಟಿಕ್‌ ಕಣಗಳು ನಾವು ಉಸಿರಾಡುವ ಗಾಳಿಯಲ್ಲಿ ತೇಲಾಡುತ್ತಾ ವಾತಾವರಣದಲ್ಲಿ ಇರುತ್ತವೆ. ವಾತಾವರಣದಲ್ಲಿರುವ ಇವು ಅನೇಕ ಬಾರಿ ತೆರೆದ ಆಹಾರದ ಮೇಲೆಯೂ ಸಂಗ್ರಹವಾಗುತ್ತವೆ. ಬಹಳ ಸಾರಿ, ಕಾರ್ಖಾನೆಗಳಲ್ಲಿ ಸಂಸ್ಕರಿಸಿದ ಆಹಾರ ತಯಾರಿಸುವಾಗಲೇ ಪ್ಯಾಕೇಜಿನ ಜೊತೆಗೂ ಇವು ಸೇರಿಕೊಂಡು ಬಿಟ್ಟಿರುತ್ತವೆ. ನಾವು ಕುಡಿಯುವ ನೀರಿನಲ್ಲಿ, ಕುಡಿಯುವ ಪೇಯಗಳಲ್ಲಿ ಅಥವಾ ಯಾವುದೇ ತೆರೆದ, ತೆರೆಯದ ಆಹಾರಗಳ ಮೇಲೆ ಇಂತಹ ಕಣಗಳು ನಮಗೆ ತಿಳಿಯದೆ ಸೇರಿರುತ್ತವೆ. ಹೀಗಾಗಿ ಮುಚ್ಚಿಟ್ಟ ಆಹಾರದಲ್ಲಿಯೂ, ಮೊದಲೇ ಪ್ಯಾಕಟ್ಟಿನಲ್ಲಿರುವ ಆಹಾರದಲ್ಲಿಯೂ ಇಂತಹ ಮೈಕ್ರೋ ಪ್ಲಾಸ್ಟಿಕ್‌ ಕಣಗಳು ಬಂದಿರುವ ಸಾಧ್ಯತೆ ಇರುವುದರಿಂದ ನಾವು ಎಷ್ಟೇ ಜಾಗರೂಕತೆಯಿಂದ ಆಹಾರಗಳನ್ನು ಕಾಪಿಟ್ಟರೂ, ಇವು ಮೊದಲೇ ಸೇರಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ಅಷ್ಟೇ ಅಲ್ಲ, ನಾವು ಓಡಾಡುವ ಪರಿಸರದ ವಾತಾವರಣದಲ್ಲಿಯೂ ಇರುವುದರಿಂದ ಇದು ಈಚೆಗೆ ಸಹಜವೇ ಆಗಿದೆ. ಒಂದು ಅಧಯಯನದ ಪ್ರಕಾರ, ಉಪ್ಪು, ಮೀನು ಮತ್ತಿತರ ಸಮುದ್ರ ಜೀವಿಗಳು, ಮಾಂಸ, ಪೇಯಗಳು ಸೇರಿದಂತೆ ಹಲು ಪ್ಯಾಕೇಜ್ಡ್‌ ಆಹಾರಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ ಇರುವ ಸಾಧ್ಯತೆಗಳು ಹೆಚ್ಚಿವೆಯಂತೆ.

food microplastics

ಮೈಕ್ರೋ ಪ್ಲಾಸ್ಟಿಕ್‌ ಹಾವಳಿ

ಒಂದು ಅಧ್ಯಯನದ ಪ್ರಕಾರ 1990ರಿಂದ 2018ರವರೆಗೆ 109 ದೇಶಗಳ ಪೈಕಿ ಸಮುದ್ರ ತೀರದಲ್ಲಿರುವ ದೇಶಗಳ ಮೇಲೆ ಈ ಮೈಕ್ರೋ ಪ್ಲಾಸ್ಟಿಕ್‌ ಹಾವಳಿ ಹೆಚ್ಚಿದೆಯಂತೆ. ಅದರಲ್ಲೂ ಇಂಡೋನೇಷ್ಯಾ ಈ ಸಮಸ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆಯಂತೆ. ತಿಂಗಳಿಗೆ ಇಲ್ಲಿ 15 ಗ್ರಾಂಗಳಷ್ಟು ಮೈಕ್ರೋ ಪ್ಲಾಸ್ಟಿಕ್‌ ಇಲ್ಲಿನ ಮಂದಿಯ ಹೊಟ್ಟೆ ಸೇರುತ್ತದಂತೆ. ಇನ್ನುಳಿದಂತೆ ಏಷ್ಯಾ, ಅಮೆರಿಕಾ, ಆಫ್ರಿಕಾ ಖಂಡದ ದೇಶಗಳಲ್ಲಿ (ಚೈನಾ ಹಾಗೂ ಯುಎಸ್‌ ಸೇರಿದಂತೆ) ಈ ಮೈಕ್ರೋ ಪ್ಲಾಸ್ಟಿಕ್‌ ದೇಹ ಸೇರುವ ಪ್ರಮಾಣ ಇತ್ತೀಚೆಗಿನ ವರ್ಷಗಳಲ್ಲಿ ಆರು ಪಟ್ಟು ಹೆಚ್ಚಿದೆಯಂತೆ.

ಹಾರ್ಮೋನುಗಳನ್ನೇ ನಕಲು ಮಾಡುತ್ತವೆ

ಸಂಶೋಧನೆಗಳ ಪ್ರಕಾರ, ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳಾದ ಬಿಪಿಎ, ಪ್ಥಲೇಟ್ಸ್‌ ಹಾಗೂ ಪಿಎಫ್‌ಎಎಸ್‌ ನಂತಹುಗಳು ಮಾನವನ ದೇಹದ ಹಾರ್ಮೋನುಗಳನ್ನೇ ನಕಲು ಮಾಡುತ್ತವೆ. ಇದರಿಂದ ಸಂತಾನಹೀನತೆಯೂ ಸೇರಿದಂತೆ ಕ್ಯಾನ್ಸರ್‌ವರೆಗೂ ಹಲವು ಆರೋಗ್ಯ ಸಮಸ್ಯೆಗಳು ಬರುವ ಲಕ್ಷಣಗಳಿವೆ.
ಹಾಗಾದರೆ ಇದರಿಂದ ದೂರವಿರಲು ಏನು ಮಾಡಬಹುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಈ ಕೆಲವು ಜಾಗರೂಕತೆಗಳನ್ನು ನೀವು ವಹಿಸಬಹುದು.

ಇದನ್ನೂ ಓದಿ: Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!

ಅವು ಯಾವುವೆಂದರೆ

  1. ಪ್ಲಾಸ್ಟಿಕ್‌ನ ಪಾತ್ರೆಗಳನ್ನು, ಬೌಲ್‌ಗಳನ್ನು ಮೈಕ್ರೋವೇವ್‌ನಲ್ಲಿಡಬೇಡಿ. ಅದರ ಅತಿಯಾದ ಉಷ್ಣತೆ ಪ್ಲಾಸ್ಟಿಕ್‌ನಿಂದ ಕೆಟ್ಟ ರಾಸಾಯನಿಕಗಳನ್ನು ಬಿಡುಗಡೆ ಮಾಡುವಂತೆ ಮಾಡುತ್ತವೆ. ಹೀಗಾಗಿ ಮೈಕ್ರೋವೇವ್‌ಗೆ ಸೆರಾಮಿಕ್‌ ಅಥವಾ ಗ್ಲಾಸ್‌ ಬೌಲ್‌ಗಳನ್ನೇ ಇಡಿ.
  2. ಗ್ಲಾಸ್‌ ಅಥವಾ ಸ್ಟೀಲ್‌ ನೀರಿನ ಬಾಟಲ್‌ಗಳನ್ನೇ ಬಳಸಿ. ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಬೇಡಿ.
  3. ಆದಷ್ಟೂ ಸಾವಯುವ ವಸ್ತುಗಳನ್ನೇ ಬಳಸಿ. ಕ್ರಿಮಿನಾಶಕಗಳನ್ನು ಬಳಸಿದ ತರಕಾರಿಗಳನ್ನು ಕಡಿಮೆ ಮಾಡಿ.
  4. ಮಾಂಸವನ್ನು ತಿನ್ನುವುದನ್ನು ಕಡಿಮೆ ಮಾಡಿ. ಇವು ಅತಿಯಾದ ಕೊಬ್ಬಿನ ಆಹಾರಗಳಾಗಿರುವುದರಿಂದ ಹಾಗೂ ಪ್ರಾಣಿ ಮೂಲಮೂಲವಾಗಿರುವುದರಿಂದ ಇವುಗಳಲ್ಲಿ ರಾಸಾಯನಿಕಗಳು ಹೆಚ್ಚು ಸಂಗ್ರಹವಾಗುತ್ತವೆ.
Continue Reading

ಆರೋಗ್ಯ

Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!

ಪುಟ್ಟ ಚೆರ್ರಿಗಳನ್ನು ತಿನ್ನುವುದರ ಲಾಭಗಳು (Benefits Of Cherries) ಬಹಳಷ್ಟಿವೆ. ಮೈಕೈ ನೋವು ಮಾಯ ಮಾಡುವುದರಿಂದ ಹಿಡಿದು, ಹೃದಯದ ಆರೋಗ್ಯ ಕಾಪಾಡುವವರೆಗೆ ಇದರ ಸಾಮರ್ಥ್ಯವಿದೆ. ಇದಲ್ಲದೆ ಇನ್ನೂ ಏನೇನು ಲಾಭಗಳಿವೆ ಚೆರ್ರಿ ತಿನ್ನುವುದರಿಂದ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

VISTARANEWS.COM


on

Benefits Of Cherries
Koo

ಯಾವುದೇ ಕೇಕ್‌ ಮೇಲೆ ಅಥವಾ ಸೋಡಾದಲ್ಲಿ ಕೂತು ಕರೆಯುವ ಚೆರ್ರಿಯನ್ನು ನೋಡಿ ತಿನ್ನಲು ಆಸೆ ಪಡುವವರು ಎಷ್ಟೋ ಮಂದಿ. ಕೆಲವೊಮ್ಮೆ ಸಕ್ಕರೆಭರಿತ ಕೃತಕ ಚೆರ್ರಿಗಳು ಕೇಕ್‌ಗಳನ್ನು ಅಲಂಕರಿಸಿದರೆ, ಹಲವು ಬಾರಿ ನಿಜವಾದ ಚೆರ್ರಿ ಹಣ್ಣುಗಳೇ ಕೂತು, ತಿನ್ನುವವರ ನಡುವೆ ಜಗಳ ಸೃಷ್ಟಿಸುತ್ತವೆ. ವಿಶ್ವದೆಲ್ಲೆಡೆ ದೊರೆಯುವ ಚೆರ್ರಿಗಳನ್ನು ಗಮನಿಸಿದರೆ ನೂರಾರು ಬಗೆಗಳಿವೆ. ಆದರೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ದೊರೆಯುವುದು ಬಿಂಗ್‌ ಚೆರ್ರಿ. ಕಡುಕೆಂಪು ಬಣ್ಣದ ಸಿಹಿಯಾದ ಚೆರ್ರಿಗಳಿವು. ಇದೊಂದೇ ಅಲ್ಲ, ಹುಳಿಯಾದ ಟಾರ್ಟ್‌ ಚೆರ್ರಿ, ರೇನರ್‌ ಚೆರ್ರಿ, ಕಪ್ಪು ಚೆರ್ರಿ, ತುಸು ಕೆಂಪು ಬಣ್ಣದ್ದು, ಅಚ್ಚ ಕೆಂಪು ಬಣ್ಣದ್ದು- ಹೀಗೆ ನಾನಾ ರೀತಿಯ ಚೆರ್ರಿಗಳು ಪ್ರಾಂತ್ಯಾವಾರ ಭಿನ್ನತೆಯೊಂದಿಗೆ ಲಭ್ಯವಿವೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೇನು ಲಾಭಗಳಿವೆ (Benefits Of Cherries) ಎಂಬುದನ್ನು ನೋಡೋಣ.

Cherries Fruits You Can Easily Grow In Your Home Garden

ಸತ್ವಗಳೇನು?

ನೂರು ಗ್ರಾಂ ಚೆರ್ರಿಯಲ್ಲಿ ಇರುವಂಥ ಸತ್ವಗಳನ್ನು ಗಮನಿಸಿದರೆ- ಇದರಿಂದ ಸುಮಾರು 97 ಕ್ಯಾಲರಿ ಶಕ್ತಿ ದೊರೆಯುತ್ತದೆ. ಪ್ರೊಟೀನ್-‌ 2 ಗ್ರಾಂ, ಪಿಷ್ಟ- 26 ಗ್ರಾಂ, ಸಕ್ಕರೆ- 20 ಗ್ರಾಂ, ನಾರು- 3 ಗ್ರಾಂ, ವಿಟಮಿನ್‌ ಸಿ- 18%, ಪೊಟಾಶಿಯಂ- 10%, ತಾಮ್ರ ಮತ್ತು ಮೆಗ್ನೀಶಿಯಂ- 5% ಮುಂತಾದವು. ಕಪ್ಪು ಮತ್ತು ಕಡುಕೆಂಪು ಬಣ್ಣದಿಂದ ಹಿಡಿದು ಹಳದಿ ಬಣ್ಣದವರೆಗೆ ಚೆರ್ರಿಯ ವರ್ಣಗಳು ಭಿನ್ನವಾಗಿವೆ. ಎಲ್ಲವೂ ಆರೋಗ್ಯಕ್ಕೆ ಒಳ್ಳೆಯವೇ ಆದರೂ ವರ್ಣ ಗಾಢವಾದಷ್ಟೂ ಅದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು ಎಂದು ಹೇಳಬಹುದು.

Pain in knee joint inflammation on gray background Lemon Water Benefits

ಉರಿಯೂತ ಶಾಮಕ

ಬಣ್ಣ ಯಾವುದೇ ಆದರೂ, ಚೆರ್ರಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿವೆ. ಇದರಲ್ಲಿ ಪಾಲಿಫೆನಾಲ್‌ಗಳು ಹೇರಳವಾಗಿವೆ. ಮುಕ್ತ ಕಣಗಳಿಂದ ದೇಹದ ಕೋಶಗಳಿಗೆ ಹಾನಿಯಾಗುವುದನ್ನು ತಪ್ಪಿಸಬಲ್ಲಂಥ ಸಸ್ಯಜನ್ಯ ರಾಸಾಯನಿಕಗಳಿವು. ಕೆಲವು ರೀತಿಯ ಕ್ಯಾನ್ಸರ್‌ಗಳಿಂದ ಹಿಡಿದು, ಹೃದಯದ ತೊಂದರೆಗಳು, ಮಧುಮೇಹದವರೆಗೆ ಮಾರಕ ರೋಗಗಳ ದಾಳಿಯಿಂದ ಶರೀರವನ್ನು ಕಾಪಾಡುವಂಥವು. ಜೊತೆಗೆ ಇದರಲ್ಲಿರುವ ಕೆರೊಟಿನಾಯ್ಡ್‌ಗಳು ಸಹ ಉರಿಯೂತ ನಿವಾರಣೆ ಮಾಡುವಂಥ ಸಾಮರ್ಥ್ಯವನ್ನು ಹೊಂದಿವೆ.

ಶೀಘ್ರ ಚೇತರಿಕೆ

ಕಠಿಣವಾದ ದೇಹಶ್ರಮ ಇಲ್ಲವೇ ವ್ಯಾಯಾಮದ ನಂತರ ಕಾಣಿಸಿಕೊಳ್ಳುವ ಸ್ನಾಯುಗಳ ನೋವಿನಿಂದ ಚೆರ್ರಿಗಳು ಶೀಘ್ರ ಚೇತರಿಕೆ ನೀಡುತ್ತವೆ. ಸ್ನಾಯುಗಳ ನೋವು, ಊತದಿಂದ ಬೇಗ ಉಪಶಮನ ಒದಗಿಸುತ್ತವೆ. ಈ ಕೆಲಸಕ್ಕೆ ಟಾರ್ಟ್‌ ಚೆರ್ರಿಯನ್ನು ವಿಶೇಷವಾಗಿ ಉಪಯೋಗಿಸಲಾಗುತ್ತದೆ. ಸಿಹಿ ಚೆರ್ರಿಗಳಿಗಿಂತ ಕೊಂಚ ಹುಳಿಯಾದ ಚೆರ್ರಿಯಲ್ಲಿ ಈ ಸಾಮರ್ಥ್ಯ ಹೆಚ್ಚು ಎನ್ನಲಾಗುತ್ತದೆ. ಇದನ್ನು ಮ್ಯಾರಥಾನ್‌ ಓಡುವವರು, ಸೈಕ್ಲಿಸ್ಟ್‌ಗಳಂಥ ಕ್ರೀಡಾಳುಗಳು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಅವರು ಮಾತ್ರವೇ ಅಲ್ಲ, ಸಾಮಾನ್ಯರು ಸಹ ಹುಳಿ ಚೆರ್ರಿಯನ್ನು ಚೇತರಿಕೆಗಾಗಿ ಬಳಸಬಹುದು.

Heart Health Fish Benefits

ಹೃದಯದ ಸ್ನೇಹಿತ

ಪೊಟಾಶಿಯಂ ಭರಪೂರ ಇರುವಂಥ ಹಣ್ಣಿದು. ರಕ್ತದೊತ್ತಡ ನಿರ್ವಹಣೆಯಲ್ಲಿ ಪೊಟಾಶಿಯಂ ಪಾತ್ರ ಹಿರಿದು. ದೇಹಕ್ಕೆ ಹೊರೆಯಾಗಿರುವ ಸೋಡಿಯಂ ಅಂಶವನ್ನು ಹೊರಹಾಕಲು ಪೊಟಾಶಿಯಂ ಅಗತ್ಯ. ದಿನವೊಂದಕ್ಕೆ ದೇಹಕ್ಕೆ ಬೇಕಾದ ಶೇ. ೧೦ ಪೊಟಾಶಿಯಂ ಒಂದು ಕಪ್‌ ಚೆರ್ರಿಯಿಂದ ದೊರೆಯುತ್ತದೆ. ಜೊತೆಗೆ, ಇದರಲ್ಲಿರುವ ಪಾಲಿಫೆನಾಲ್‌ಗಳು, ಆಂಥೋಸಯನಿನ್‌ಗಳು ಮತ್ತು ಫ್ಲೆನಾಲ್‌ಗಳು ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಕೆಲಸ ಮಾಡುತ್ತವೆ.

Image Of Anti Infective Foods

ಆರ್ಥರೈಟಿಸ್‌ ನೋವು ಶಮನ

ದೇಹದಲ್ಲಿ ಉರಿಯೂತ ಹೆಚ್ಚಿದಾಗ ಕಾಡುವ ರೋಗಗಳಲ್ಲಿ ಆರ್ಥರೈಟಿಸ್‌ ಸಹ ಒಂದು. ಶರೀರದಲ್ಲಿ ಯೂರಿಕ್‌ ಆಮ್ಲದ ಜಮಾವಣೆ ಹೆಚ್ಚಿ ಕಾಡುವಂಥದ್ದು ಗೌಟ್‌ ಆರ್ಥರೈಟಿಸ್‌. ಇವುಗಳ ನೋವು ಶಮನಕ್ಕೆ ಚೆರ್ರಿ ಸೇವನೆಯು ನೆರವು ನೀಡುತ್ತದೆ. ದೇಹದಲ್ಲಿ ಯೂರಿಕ್‌ ಆಮ್ಲ ಜಮೆಯಾಗುವುದನ್ನು ಚೆರ್ರಿ ಕಡಿಮೆ ಮಾಡುತ್ತದೆ. ಇದಲ್ಲದೆ, ಉಳಿದ ನೋವುಗಳ ಶಮನಕ್ಕೂ ಚೆರ್ರಿ ಸಹಕಾರಿ ಎನ್ನುತ್ತದೆ ಹಲವು ಅಧ್ಯಯನಗಳು.

Mouth Sleeping

ನಿದ್ದೆಗೆ ಪೂರಕ

ಚೆರ್ರಿಯಲ್ಲಿ ಮೆಲಟೋನಿನ ಅಂಶವಿದೆ. ಇದು ನಿದ್ರೆಯನ್ನು ಗಾಢವಾಗಿಸುತ್ತದೆ. ಜೊತೆಗೆ ನಿದ್ದೆಗೊಂದು ಸಮಯವನ್ನು ನಿಗದಿ ಮಾಡುವ ಸನ್ನಾಹದಲ್ಲಿದ್ದರೆ, ಚೆರ್ರಿ ತಿನ್ನುವುದು ಸೂಕ್ತವಾದದ್ದು. ಇದರಿಂದ ನಿದ್ದೆಯಲ್ಲಿ ಆಗಾಗ ಎಚ್ಚರಾಗುವುದು, ಕಡಿಮೆ ನಿದ್ದೆ, ಸೂಕ್ಷ್ಮ ನಿದ್ದೆಯಂಥ ತೊಂದರೆಗಳು ಮಾಯವಾಗಿ, ಗಡದ್ದಾಗಿ ರಾತ್ರಿ ಮಲಗಿ ಬೆಳಗ್ಗೆ ಎಚ್ಚರಾಗುವಂತೆ ಮಾಡುತ್ತದೆ.

Continue Reading

ಬಳ್ಳಾರಿ

Bellary VIMS Hospital : ಲೇಡಿ ಡಾಕ್ಟರ್‌ ಜುಟ್ಟು ಹಿಡಿದು ಎಳೆದಾಡಿ ಹೊಡೆದ; ವಿಮ್ಸ್‌ ಆಸ್ಪತ್ರೆಯಲ್ಲಿ ದಿಢೀರ್‌ ಪ್ರತಿಭಟನೆ

VIMS Hospital : ತಂದೆ ಸಾವಿನಿಂದ ಸಿಟ್ಟಾದ ವ್ಯಕ್ತಿಯೊಬ್ಬ ವಿಮ್ಸ್‌ ಆಸ್ಪತ್ರೆಯ ವೈದ್ಯೆಗೆ ಹಲ್ಲೆ ನಡೆಸಿದ್ದಾನೆ. ಮಹಿಳಾ ವೈದ್ಯೆಯ ಜುಟ್ಟು ಹಿಡಿದು ಎಳೆದಾಡಿ ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದು, ಇದನ್ನೂ ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳು (Bellary VIMS Hospital) ಪ್ರತಿಭಟಿಸಿದ್ದಾರೆ.

VISTARANEWS.COM


on

By

Bellary VIMS Hospital
Koo

ಬಳ್ಳಾರಿ: ವಿಮ್ಸ್‌ ಆಸ್ಪತ್ರೆಯಲ್ಲಿ (Bellary VIMS Hospital) ಚಿಕಿತ್ಸೆ ಪಡೆಯುತ್ತಿದ್ದ ತಂದೆ ವೈದ್ಯರ ನಿರ್ಲಕ್ಷ್ಯದಿಂದಲೇ (Medical Negligence) ಸಾವನ್ನಪ್ಪಿದ್ದಾರೆ ಎಂದು ಸಿಟ್ಟಾದ ಮಗನೊಬ್ಬ ವಿಮ್ಸ್‌ನ ಮಹಿಳಾ (VIMS Hospital ) ವೈದ್ಯೆ ಮೇಲೆ ಹಲ್ಲೆ (Assault Case) ನಡೆಸಿದ್ದಾನೆ. ವೈದ್ಯೆಯ ತಲೆ ಜುಟ್ಟು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೈದ್ಯೆ ಮೇಲಿನ ಹಲ್ಲೆ ಖಂಡಿಸಿ ಬಳ್ಳಾರಿಯ ವಿಮ್ಸ್ ತುರ್ತು ಚಿಕಿತ್ಸಾ ಘಟಕದ ಮುಂದೆ ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ತಡರಾತ್ರಿ ದಿಢೀರ್ ಪ್ರತಿಭಟಿಸಿದರು. ವೈದ್ಯರ ರಕ್ಷಣೆ ಕೋರಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಗೂಡಾರ್‌ನಗರ ನಾಗೇಶ್ ಎಂಬಾತ ಕರ್ತವ್ಯ ನಿರತ ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾನೆ. ನಾಗೇಶ್‌ನ ತಂದೆ ಅನಾರೋಗ್ಯದಿಂದ ವಿಮ್ಸ್‌ಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ನಾಗೇಶ್‌ ಕರ್ತವ್ಯದಲ್ಲಿದ್ದ ವೈದ್ಯೆ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಸೆಕ್ಯುರಿಟಿ ಸಮಸ್ಯೆಯಿಂದಲೇ ಹೀಗೆ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದೆ. ವಿಮ್ಸ್‌ನಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು. ವಿಷಯ ತಿಳಿಯುತ್ತಿದ್ದಂತೆ ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದ ವಿಮ್ಸ್ ನಿರ್ದೇಶಕ ಡಾ.ಗಂಗಾಧರ‌ಗೌಡ್ ಹಾಗೂ ಕೌಲ್‌ಬಜಾರ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಹಲ್ಲೆ ನಡೆಸಿದವರ ವಿರುದ್ಧ ಕ್ರಮವಹಿಸಲಾಗುವುದು. ಜತೆಗೆ ವಿಮ್ಸ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೆ ಸೂಕ್ತ ರೀತಿಯ ಭದ್ರತೆಯನ್ನು ವಹಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ದಿಢೀರ್‌ ಕೈಗೊಂಡ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ಇದನ್ನೂ ಓದಿ: Election Results 2024: ಜಯನಗರ ಮತ ಎಣಿಕೆ ಕೇಂದ್ರದಲ್ಲಿ ಟಿ ಶರ್ಟ್‌ ಕಿರಿಕ್‌; ಕೆಆರ್‌ಎಸ್ ಪಾರ್ಟಿಯ ಅಭ್ಯರ್ಥಿ ಔಟ್‌

ಪ್ರತ್ಯೇಕ ಕಡೆ‌ ಕರೆಂಟ್‌ ಶಾಕ್‌ಗೆ ಲೈನ್‌ಮ್ಯಾನ್‌ ಸೇರಿ ಹಸು ಬಲಿ

ಉಡುಪಿ/ ಆನೇಕಲ್‌: ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ (Electric shock) ಲೈನ್‌ಮ್ಯಾನ್ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಉಡುಪಿಯ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಅವಘಡ ನಡೆದಿದೆ.

ಲೈನ್ ಮ್ಯಾನ್ ಸಲೀಂ (38) ಮೃತ ದುರ್ದೈವಿ. ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವಾಗ ಶಾಕ್‌ ಹೊಡೆದಿದೆ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕರ್ನಾಟಕದ ಮುಂಡಗೋಡು ನಿವಾಸಿಯಾಗಿರುವ ಸಲೀಂ, ಬೈಂದೂರು ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೈಂದೂರಿನಲ್ಲಿ ಸಲೀಂ ಜನಸ್ನೇಹಿ ಲೈನ್‌ಮ್ಯಾನ್ ಆಗಿದ್ದರು.

ಇದನ್ನೂ ಓದಿ: Road Accident : ಎದುರಿಗೆ ಬಂದ ಬೈಕ್‌ ತಪ್ಪಿಸಲು ಹೋಗಿ ಮಹಿಳೆಗೆ ಗುದ್ದಿದ ಕಾರು; ಎಗರಿ ಬಿದ್ದವಳು ಸ್ಥಳದಲ್ಲೇ ಸಾವು

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೂಕಜೀವಿ ಬಲಿ

ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಮಂಚನಹಳ್ಳಿಯಲ್ಲಿ ವಿದ್ಯುತ್ ಶಾಕ್‌ನಿಂದ ಹಸುವೊಂದು ದಾರುಣವಾಗಿ ಮೃತಪಟ್ಟಿದೆ. ಕರೆಂಟ್ ಶಾಕ್‌ನಿಂದ ಹಸು ಮೃತಪಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕರಗಪ್ಪ ಎಂಬುವವರು ಹಸುಗಳನ್ನ ಮೇಯಿಸಿಕೊಂಡು ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದ ಬಳಿ ಕರೆಂಟ್ ಗ್ರೌಂಡಿಂಗ್ ಆಗಿ ಹಸು ಮೃತಪಟ್ಟಿದೆ. ಇದೇ ರೀತಿ ನಾಲ್ಕೈದು ಹಸುಗಳಿಗೆ ಅದೇ ಜಾಗದಲ್ಲಿ ಗ್ರೌಂಡಿಂಗ್‌ನಿಂದ ಶಾಕ್ ಆಗಿದೆ.

ರೈತನ ಜೀವನಾಧಾರೆಯಾಗಿದ್ದ ಹಸು ಮೃತಪಟ್ಟಿದ್ದಕ್ಕೆ ಜಿಗಣಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಒಂದು ಲಕ್ಷಕ್ಕೂ ಬೆಲೆಬಾಳುವ ಹಸುವನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ. ಬೆಸ್ಕಾಂ ಇಲಾಖೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಕರಗಪ್ಪ ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Election Results 2024
Lok Sabha Election 20244 mins ago

Election Results 2024: ಅತಿ ಹೆಚ್ಚು ಮತ್ತು ಅತಿ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಿವರು!

Chikkodi Lok Sabha Result:
ಪ್ರಮುಖ ಸುದ್ದಿ14 mins ago

Chikkodi Lok Sabha Result : ಕಾಂಗ್ರೆಸ್​ ವಿಜಯೋತ್ಸವದಲ್ಲಿ ಪಾಕಿಸ್ತಾನ ಪರ ಜೈಕಾರ ಕೂಗಿದ ಜಮೀರನ ಬಂಧನ

Election Results 2024 chandrababu naidu nitish kumar 2
ಪ್ರಮುಖ ಸುದ್ದಿ21 mins ago

Election Results 2024: ನಿತೀಶ್‌ಕುಮಾರ್, ಚಂದ್ರಬಾಬು ನಾಯ್ಡು ನೆರವಿಲ್ಲದೆ ಮೋದಿ ಸರ್ಕಾರ ನಡೆಸಲಾಗದೆ?

Election Results 2024
ದೇಶ51 mins ago

Election Results 2024: ಸುದೀರ್ಘ ಅವಧಿಗೆ ಪ್ರಧಾನಿ ಆಗ್ತಾರಾ ಮೋದಿ?; ನೆಹರೂ, ಇಂದಿರಾ ಸಾಲಿಗೆ ಸೇರೋದು ಪಕ್ಕಾನಾ?

World Environment Day
ಪರಿಸರ1 hour ago

World Environment Day: ಇಂದು ವಿಶ್ವ ಪರಿಸರ ದಿನ; ಭೂಮಿಯನ್ನು ಉಳಿಸಲು ಈ 5 ಸೂತ್ರ ಪಾಲಿಸೋಣ

Election Results 2024
Lok Sabha Election 20241 hour ago

Election Results 2024: ವಾರಣಾಸಿಯಲ್ಲಿ ಮೋದಿ ಮತ ಗಳಿಕೆ ಪ್ರಮಾಣ ಕುಸಿಯುವಂತೆ ಮಾಡಿದ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ

Election Results 2024
ದೇಶ1 hour ago

Election Results 2024: ಹ್ಯಾಟ್ರಿಕ್‌ ಸರದಾರ ಮೋದಿಗೆ ವಿಶ್ವನಾಯಕರಿಂದ ಅಭಿನಂದನೆ

election results 2024 Modi and Yogi
ಪ್ರಮುಖ ಸುದ್ದಿ2 hours ago

Election Results 2024: ರಾಮ ಮಂದಿರ ಭದ್ರ, ಯುಪಿ ಅಭದ್ರ: ಉತ್ತರ ಪ್ರದೇಶದಲ್ಲಿ ಬಿಜೆಪಿ 64ರಿಂದ 36ಕ್ಕೆ ಕುಸಿಯಲು ಕಾರಣ ಇಲ್ಲಿದೆ

Election Results 2024
ದೇಶ2 hours ago

Election Results 2024: 543ರಲ್ಲಿ 542 ಕ್ಷೇತ್ರಗಳ ಫಲಿತಾಂಶ ಘೋಷಣೆ; ಪಕ್ಷಗಳ ಅಂತಿಮ ಬಲಾಬಲ ಹೀಗಿದೆ

Car Stunt
ಪ್ರಮುಖ ಸುದ್ದಿ2 hours ago

Car Stunt : ಬೈಕ್​ ವೀಲಿಂಗ್ ಆಯ್ತು; ಇದೀಗ ಬೆಂಗಳೂರು ಮಹಾನಗರದಲ್ಲಿ ಕಾರಿನಲ್ಲಿ ಸ್ಟಂಟ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ1 day ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌