ವಾರದ ವ್ಯಕ್ತಿ ಚಿತ್ರ: ಹಿಸ್ಟರಿ ರಿಪೀಟ್ಸ್​; ಭಾರತೀಯ ಕ್ರಿಕೆಟ್​ ಕ್ಷೇತ್ರದಲ್ಲಿ ಮತ್ತೆ ವಿಲನ್ ಎನಿಸಿಕೊಂಡ ಚೇತನ್​ ಶರ್ಮಾ - Vistara News

ಕ್ರಿಕೆಟ್

ವಾರದ ವ್ಯಕ್ತಿ ಚಿತ್ರ: ಹಿಸ್ಟರಿ ರಿಪೀಟ್ಸ್​; ಭಾರತೀಯ ಕ್ರಿಕೆಟ್​ ಕ್ಷೇತ್ರದಲ್ಲಿ ಮತ್ತೆ ವಿಲನ್ ಎನಿಸಿಕೊಂಡ ಚೇತನ್​ ಶರ್ಮಾ

ಭಾರತ ಹಿರಿಯರ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಚೇತನ್​ ಶರ್ಮಾ (Chetan sharma) ಸ್ಥಾನ ಅಧಿಕಾರ ಕಳೆದುಕೊಂಡಿದ್ದು ಯಾಕೆ? ಮಾಜಿ ಕ್ರಿಕೆಟಿಗರಾಗಿರುವ ಅವರ ಸಾಧನೆಗಳೇನು ಎಂಬ ವಿವರ ಇಲ್ಲಿದೆ.

VISTARANEWS.COM


on

chetan sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1986ರಲ್ಲಿ ನಡೆದ ಆಸ್ಟ್ರಾಲ್​- ಏಷ್ಯಾ ಕಪ್​ನ ಫೈನಲ್​ ಪಂದ್ಯವದು. ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡ ಟ್ರೋಫಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿತ್ತು. ಪಾಕಿಸ್ತಾನ ತಂಡದ ಗೆಲುವಿಗೆ ಇನಿಂಗ್ಸ್​ನ ಕೊನೇ ಎಸೆತದಲ್ಲಿ ನಾಲ್ಕು ರನ್​ ಬೇಕಾಗಿತ್ತು. ವೇಗಿ ಚೇತನ್​ ಶರ್ಮಾ (Chetan sharma) ಎಸೆದ ಆ ಎಸೆತವನ್ನು ಪಾಕಿಸ್ತಾನ ತಂಡದ ನಾಯಕ ಜಾವೆದ್​ ಮಿಯಾಂದಾದ್ ಸಿಕ್ಸರ್​ಗಟ್ಟಿದ್ದರು. ಅಂದು ಭಾರತ ಕ್ರಿಕೆಟ್​ ಅಭಿಮಾನಿಗಳ ಹೃದಯವೇ ಒಡೆದು ಹೋಗಿತ್ತು. ಚೇತನ್​ ಶರ್ಮಾ ಎಂಬ ವೇಗದ ಬೌಲರ್ ಆ ಕ್ಷಣದಿಂದ ವಿಲನ್ ಪಟ್ಟ​. ಆ ಒಂದು ಎಸೆತ ಅವರು ಅಷ್ಟು ದಿನ ಮಾಡಿದ್ದ ಸಾಧನೆಗಳನ್ನು ಮಂಕಾಗಿಸಿದವು. ಹೋದ ಕಡೆಯಲ್ಲೆಲ್ಲ ಕ್ರಿಕೆಟ್​ ಅಭಿಮಾನಿಗಳು ಛೀಮಾರಿ ಹಾಕಿದರು. ಚೇತನ್ ಚೈತನ್ಯ ಕಳೆದುಕೊಂಡಿದ್ದರು.

ಹಿಸ್ಟರಿ ರಿಪೀಟ್ಸ್​….ಅಂಥದ್ದೇ ಸ್ಥಿತಿಯನ್ನು ಚೇತನ್​ ಶರ್ಮಾ ಮತ್ತೆ ಎದುರಿಸುತ್ತಿದ್ದಾರೆ. ಕೋಲ್ಕೊತಾದ ಈಡನ್​ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್​ ಪಂದ್ಯವನ್ನು ತಣ್ಣನೆ ಕುಳಿತು ನೋಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ದಶ ದಿಕ್ಕುಗಳಿಂದ ಎದುರಾದ ಒತ್ತಡಕ್ಕೆ ಮಣಿದಿರುವ ಅವರು ಬಿಸಿಸಿಐನಲ್ಲಿ ತಮಗೆ ಸಿಕ್ಕಿರುವ ದೊಡ್ಡ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಎರಡೆರಡು ಬಾರಿ ದೊರಕಿದ ಭಾರತ ಹಿರಿಯರ ಕ್ರಿಕೆಟ್​ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನ ಕೈಯಾರೆ ನಷ್ಟ ಮಾಡಿಕೊಂಡಿದ್ದಾರೆ. ಅವರ ಮಾತು ಮನೆ ಕೆಡಿಸಿದೆ. ಸುದ್ದಿ ಮಾಧ್ಯಮಗಳಲ್ಲೂ ಅವರದ್ದೇ ಸದ್ದು. ಪತ್ರಕರ್ತರಿಂದ ತಲೆ ಮರೆಸಿಕೊಂಡು ಹೋಗುತ್ತಿದ್ದಾರೆ.

ಇವೆಲ್ಲ ಸ್ವಯಂಕೃತ ಅಪರಾಧ ಎನ್ನುತ್ತಿದ್ದಾರೆ ಭಾರತೀಯ ಕ್ರಿಕೆಟ್​ ಪ್ರೇಮಿಗಳು. ಖಾಸಗಿ ಸುದ್ದಿ ಮಾಧ್ಯಮವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ತಾವು ಅಧ್ಯಕ್ಷರಾಗಿದ್ದ ಬಿಸಿಸಿಐ ಆಯ್ಕೆ ಸಮಿತಿಯ ಒಳ ರಹಸ್ಯಗಳನ್ನು ಬಾಯ್ಬಿಟ್ಟಿದ್ದಾರೆ. ಯಾವುದನ್ನು ಯಾರ ಮುಂದೆ ಮಾತನಾಡಬಾರದಿತ್ತೋ ಅವರೆಲ್ಲನ್ನೂ ಬಡಬಡಾಯಿಸಿದ್ದಾರೆ. ಅವರು ಹೇಳಿದ್ದಲ್ಲವೂ ಸತ್ಯವೊ, ಸುಳ್ಳು ಎಂಬುದು ಗೊತ್ತಿಲ್ಲ. ಆದರೆ, ತಮ್ಮ ಹಾಗೂ ಬಿಸಿಸಿಐ ಮಾನವನ್ನು ಏಕ ಕಾಲಕ್ಕೆ ಹರಾಜು ಹಾಕಿದ್ದಾರೆ. ಜಾಗತಿಕ ಕ್ರಿಕೆಟ್​ನ ಅತ್ಯಂತ ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐಗೆ ದೊಡ್ಡ ಡ್ಯಾಮೇಜ್​ ಮಾಡಿಟ್ಟಿದ್ದಾರೆ. ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ, ಮಾಜಿ ನಾಯಕ ವಿರಾಟ್​ ಕೊಹ್ಲಿ, ಸೀಮಿತ ಓವರ್​ಗಳ ತಂಡದ ಹಂಗಾಮಿ ನಾಯಕ ಹಾರ್ದಿಕ್​ ಪಾಂಡ್ಯ ಮತ್ತಿತರರಿಗೂ ಕಿರಿಕಿರಿ ಉಂಟು ಮಾಡಿದ್ದಾರೆ.

ಬಿಸಿಸಿಐ ಬಲಿಷ್ಠ ಸಂಸ್ಥೆ. ಸಣ್ಣ ಪುಟ್ಟ ತಪ್ಪುಗಳನ್ನೂ ಸಹಿಸಿಕೊಳ್ಳುವುದಿಲ್ಲ. ಭಾರತ ತಂಡದಲ್ಲಿ ಗುಂಪುಗಾರಿಕೆ, ಫಿಟ್ನೆಸ್​ಗಾಗಿ ಇಂಜೆಕ್ಷನ್, ಬಿಸಿಸಿಐ ಮುಖ್ಯಸ್ಥರಿಗೆ ಅಹಂ ಎಂದೆಲ್ಲ ಮಾತನಾಡಿದ ಚೇತನ್​ ಶರ್ಮಾ ಬಿಟ್ಟಿತೇ? ನಿರೀಕ್ಷೆಯಂತೆ ಅವರ ರಾಜೀನಾಮೆ ಕೇಳಿದೆ. ಕೋಲ್ಕೊತಾದಲ್ಲಿ ಆಯ್ಕೆ ಸಮಿತಿಯ ಸಹ ಸದಸ್ಯರ ಜತೆ ಕುಳಿತು ರಣಜಿ ಮ್ಯಾಚ್ ನೋಡುತ್ತಿದ್ದ ಅವರು ಅಲ್ಲಿಂದಲೇ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.

#image_title

ಚೇತನ್​ ಶರ್ಮಾ ಉಂಟು ಮಾಡಿದ ವಿವಾದವೇನು?

ಕೆಲವು ದಿನಗಳ ಹಿಂದೆ ದೇಶದ ಪ್ರತಿಷ್ಠಿತ ಟಿವಿ ಮಾಧ್ಯಮವೊಂದು ವಿಶೇಷ ವರದಿ ಮಾಡಿತು. ಭಾರತ ಕ್ರಿಕೆಟ್​ ತಂಡದಲ್ಲಿ ಎಲ್ಲವೂ ಸರಿಯಿಲ್ಲ. ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಎಂಬ ಎರಡು ಬಣಗಳಿವೆ. ಮಾಜಿ ನಾಯಕ ಸೌರವ್​ ಗಂಗೂಲಿ ಹಾಗೂ ವಿರಾಟ್​ ಕೊಹ್ಲಿಯ ನಡುವೆ ಅಹಂ ಸಮಸ್ಯೆ ಇತ್ತು. ದೈಹಿಕವಾಗಿ ಫಿಟ್​ ಆಗಿರದ ಜಸ್​ಪ್ರಿತ್​ ಬುಮ್ರಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಬಿಸಿಸಿಐ ಯತ್ನಿಸುತ್ತಿದೆ. ಈ ವಿಚಾರದಲ್ಲಿ ಆಯ್ಕೆ ಸಮಿತಿಯ ಜತೆ ಚರ್ಚೆಯೇ ನಡೆಸುವುದಿಲ್ಲ. ಫಿಟ್ನೆಸ್​ಗಾಗಿ ಆಟಗಾರರು ಇಂಜೆಕ್ಷನ್​ ತೆಗೆದುಕೊಳ್ಳುತ್ತಾರೆ. ಟಿ20 ತಂಡಕ್ಕೆ ಇನ್ನು ಮುಂದೆ ಪಾಂಡ್ಯ ನಾಯಕ. ಅವರು ಆಗಾಗ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್​ ಶರ್ಮಾ ಮನೆಗೆ ಹೋಗಿ ಪ್ರಭಾವ ಬೀರುತ್ತಾರೆ. ವಿರಾಟ್​ ಕೊಹ್ಲಿ ಹಾಗೂ ರೋಹಿತ್ ಶರ್ಮ ಜೋಡಿಗೆ ಟಿ20 ತಂಡದಲ್ಲಿ ಚಾನ್ಸ್​ ಸಿಗುವುದಿಲ್ಲ ಎಂದು ಎಳೆಎಳೆಯಾಗಿ ವಿವರಣೆ ಕೊಟ್ಟಿತ್ತು.

ಇದನ್ನೂ ಓದಿ : ವಾರದ ವ್ಯಕ್ತಿಚಿತ್ರ: ಅದಾನಿ ಷೇರು ಕುಸಿತಕ್ಕೆ ಕಾರಣವಾದ ಹಿಂಡೆನ್‌ಬರ್ಗ್‌ ಸ್ಥಾಪಕ ನಾಥನ್ ಆ್ಯಂಡರ್ಸನ್‌ ಯಾರು?

ಸುದ್ದಿಗೆ ಮೂಲ ಎಲ್ಲಿ ಎಂದು ಹುಡುಕಿದಾಗಲೇ ಗೊತ್ತಾಗಿದ್ದು. ಇಷ್ಟೆಲ್ಲವನ್ನೂ ಹೇಳಿದ್ದು ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್​ ಶರ್ಮಾ. ಸುದ್ದಿ ಮಾಧ್ಯಮ ರಹಸ್ಯ ಕ್ಯಾಮೆರಾದೊಂದಿಗೆ ಚೇತನ್ ಜತೆ ಮಾತನಾಡಿದಾಗ ಅಷ್ಟೊಂದು ಗುಟ್ಟುಗಳನ್ನು ಅರಿವಿಲ್ಲದೇ ಬಿಟ್ಟುಕೊಟ್ಟಿದ್ದರು. ಸ್ವತಃ ಚೇತನ್​ ಶರ್ಮಾ ಇದನ್ನು ನಿರೀಕ್ಷಿಸಿರಲಿಲ್ಲ. ಬಿಸಿಸಿಐ ಅಧಿಕಾರಿಗಳು ಉತ್ತರಿಸದಾದರೂ. ಅಂತೂ ಚೇತನ್​ ಶರ್ಮಾ ಅವರು ತಾವು ವಹಿಸಿರುವ ಹುದ್ದೆಯ ಬಗ್ಗೆ ಅನಗತ್ಯ ಮಾತುಗಳನ್ನಾಡಿ ಇಕ್ಕಟ್ಟಿಗೆ ಸಿಲುಕಿದರು. ರಾಜೀನಾಮೆ ಅನಿವಾರ್ಯವಾಯಿತು.

ಪಾಲಿಗೆ ಬಂದದ್ದನ್ನು ಕೈಯಾರೆ ಕಳೆದುಕೊಂಡ ಚೇತನ್​

ಚೇತನ್​ ಶರ್ಮಾ ಬಿಸಿಸಿಐ ಹಾಗೂ ಕ್ರಿಕೆಟ್​ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ನಡೆದ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿ ಹಾಗೂ ಟಿ20 ವಿಶ್ವ ಕಪ್​ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿದಾಗಲೂ ಅವರು ಟೀಕೆಗಳನ್ನು ಎದುರಿಸಿದ್ದರು. ಬಲಿಷ್ಠ ತಂಡವನ್ನು ಆಯ್ಕೆ ಮಾಡಲು ಚೇತನ್​ ಎಡವಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು. ಅವರ ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ ಬರ್ಖಾಸ್ತು ಮಾಡಿತು. ಕೆಲವು ದಿನಗಳ ಬಳಿಕ ಅವರಿಂದ ಭರವಸೆ ಪಡೆದು ಮತ್ತದೇ ಸ್ಥಾನ ಕಲ್ಪಿಸಿಕೊಡಲಾಗಿತ್ತು. ಹಾಗೆ ಮತ್ತೆ ಸಿಕ್ಕಿದ ಅವಕಾಶ ಬಳಸಿಕೊಳ್ಳುವಲ್ಲಿ ಚೇತನ್​ ಶರ್ಮಾ ವಿಫಲಗೊಂಡಿದ್ದಾರೆ. ಮತ್ತೊಂದು ವಿವಾದ ಸೃಷ್ಟಿಸಿ ಹೊರನಡೆದಿದ್ದಾರೆ.

ವಿರಾಟ್​ ಕೊಹ್ಲಿಯಿಂದ ಏಕ ದಿನ ತಂಡದ ನಾಯಕತ್ವವನ್ನು ಬಿಸಿಸಿಐ ಕಸಿದುಕೊಂಡಾಗಲೂ ಚೇತನ್​ ಶರ್ಮಾ ಹೆಸರು ಮುನ್ನೆಲೆಗೆ ಬಂದಿತ್ತು. 2021ರಲ್ಲಿ ನಡೆದ ಟಿ20 ವಿಶ್ವ ಕಪ್​ನಲ್ಲಿ ಭಾರತ ತಂಡ ಕಪ್​ ಗೆಲ್ಲದೇ ಹೋದಾಗ ನಾಯಕರಾಗಿದ್ದ ವಿರಾಟ್​ ಕೊಹ್ಲಿ ತಮ್ಮ ಜವಾಬ್ದಾರಿಗೆ ಗುಡ್​ಬೈ ಹೇಳಿದ್ದರು. ಆದರೆ, ಅವರು ಏಕ ದಿನ ಹಾಗೂ ಟೆಸ್ಟ್​ ತಂಡದ ನಾಯಕರಾಗಿ ಮುಂದುವರಿಯುವ ಇರಾದೆ ವ್ಯಕ್ತಪಡಿಸಿದ್ದರು. ಏತನ್ಮಧ್ಯೆ, ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾಗ, ಚೇತನ್​ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಕೊಹ್ಲಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಏಕ ದಿನ ತಂಡದಿಂದ ನಾಯಕತ್ವದಿಂದ ಕೆಳಕ್ಕೆ ಇಳಿಸುವುದಾಗಿ ಸೂಚಿಸಿತ್ತು. ಕೋಪಗೊಂಡ ವಿರಾಟ್​, ಪತ್ರಿಕಾಗೋಷ್ಠಿ ಕರೆದು ಅಸಮಾಧಾನ ವ್ಯಕ್ತಪಡಿಸಿದ್ದರು. ಕೊಹ್ಲಿಗೆ ಹಾನಿ ಉಂಟು ಮಾಡಲು ಗಂಗೂಲಿ ಯತ್ನಿಸಿದರು ಎಂಬ ಮಾತುಗಳೂ ಕೇಳಿಬಂದವು. ಬಳಿಕ ವಿರಾಟ್​ ಟೆಸ್ಟ್​ ತಂಡಕ್ಕೂ ರಾಜೀನಾಮೆ ಕೊಟ್ಟರು. ಅದಾದ ಬಳಿಕ ಚೇತನ್​ ಶರ್ಮಾ ಹಾಗೂ ಗಂಗೂಲಿ ಸೇರಿಕೊಂಡು ವಿರಾಟ್​ ಕೆರಿಯರ್​ ಹಾಳು ಮಾಡಿದರು ಎಂದು ಕೊಹ್ಲಿಯ ಅಭಿಮಾನಿಗಳು ದೂರಿದರು.

ಇದನ್ನೂ ಓದಿ: ವಾರದ ವ್ಯಕ್ತಿ ಚಿತ್ರ | Nitin Gadkari | ರಸ್ತೆ ಕ್ರಾಂತಿಯ ರೂವಾರಿ ನಿತಿನ್‌ ಗಡ್ಕರಿ, ಅವರು ನಡೆದದ್ದೇ ಹೆದ್ದಾರಿ!

ಕೊಹ್ಲಿಯಿಂದ ನಾಯಕತ್ವ ವಾಪಸ್​ ಪಡೆಯಲು ನಾನೇ ಕಾರಣ ಎಂಬ ಮಾತು ಕುಟುಕು ಕಾರ್ಯಾಚರಣೆಯಲ್ಲಿ ದಾಖಲಾಗಿದೆ. ಕೊಹ್ಲಿಯನ್ನು ಯಾವುದೇ ಮಾದರಿಯ ತಂಡದ ನಾಯಕತ್ವದಿಂದ ಕೆಳಕ್ಕಿಳಿಸುವ ಯೋಚನೆ ಗಂಗೂಲಿಗೆ ಇರಲಿಲ್ಲ ಎಂದೂ ಚೇತನ್​ ಶರ್ಮಾ ಹೇಳಿದ್ದಾರೆ.

ಯಾರಿವರು ಚೇತನ್​ ಶರ್ಮಾ?

#image_title

ಪಂಜಾಬ್​ ಮೂಲದ ಚೇತನ್​ ಶರ್ಮಾ 1966 ಜನವರಿ 3ರಂದು ಜನಿಸಿದ್ದಾರೆ. ಲೂಧಿಯಾನ ಮೂಲದ ಈ ಕ್ರಿಕೆಟಿಗ, ಕಪಿಲ್​ ದೇವ್​ ಅವರ ಬಳಿಕ ಭಾರತ ತಂಡದಲ್ಲಿ ಆಡಿದ ಅತ್ಯುತ್ತಮ ಆಲ್​ರೌಂಡರ್​ ಎನಿಕೊಂಡಿದ್ದರು. ಪಂಜಾಬ್​ ತಂಡದ ಮೂಲಕ ದೇಶೀಯ ಕ್ರಿಕೆಟ್​ಗೆ ಎಂಟ್ರಿ ಪಡೆದಿದ್ದರು. 1984ರಿಂದ 1994ರ ತನಕ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡವರು. ಈ ಅವಧಿಯಲ್ಲಿ 23 ಟೆಸ್ಟ್​ ಹಾಗೂ 65 ಏಕ ದಿನ ಪಂದ್ಯಗಳಲ್ಲಿ ಪಾಲ್ಗೊಂಡು ಅನುಕ್ರಮವಾಗಿ 61 ಹಾಗೂ 67 ವಿಕೆಟ್​ಗಳು ಮತ್ತು 396 ಮತ್ತು 456 ರನ್​ ಬಾರಿಸಿದ್ದರು.

ವೆಸ್ಟ್​ ಇಂಡೀಸ್​ ವಿರುದ್ದ 1983 ಡಿಸೆಂಬರ್​ 7ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆಗ ಅವರಿಗೆ 17 ವರ್ಷ. 1984ರಲ್ಲಿ ಪಾಕಿಸ್ತಾನ ತಂಡ ವಿರುದ್ದ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು ಮೊದಲ ಓವರ್​ನಲ್ಲಿಯೇ ವಿಕೆಟ್​ ಕಬಳಿಸಿ, ಈ ಸಾಧನೆ ಮಾಡಿರುವ ಭಾರತದ ಮೂರನೇ ಬೌಲರ್​ ಎನಿಸಿಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ 1987ರಲ್ಲಿ ನ್ಯೂಜಿಲ್ಯಾಂಡ್​ನಲ್ಲಿ ನಡೆದ ರಿಲಯನ್ಸ್​ ವಿಶ್ವ ಕಪ್​ನ ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡಿದ್ದರು. ಈ ಮೂಲಕ ಅವರು ವಿಶ್ವ ಕಪ್​ನಲ್ಲಿ ಹ್ಯಾಟ್ರಿಕ್​ ಸಾಧನೆ ಮಾಡಿದ ಮೊದಲ ಬೌಲರ್​ ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದರು. ಇಂಗ್ಲೆಂಡ್​ನ ಬರ್ಮಿಂಗ್ಹಮ್​ನಲ್ಲಿ 1986ರಲ್ಲಿ ನಡೆದ ಟೆಸ್ಟ್​ ಸರಣಿಯ ಪಂದ್ಯವೊಂದರಲ್ಲಿ 10 ವಿಕೆಟ್​ ಕಬಳಿಸಿದ್ದರು. ಇಂಗ್ಲೆಂಡ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಭಾರತೀಯ ಚೇತನ್​ ಶರ್ಮಾ. ಲಂಡನ್​ನ ಲಾರ್ಡ್ಸ್​ ಕ್ರಿಕೆಟ್​ ಸ್ಟೇಡಿಯಮ್​ನ ಹಾಲ್​ ಆಫ್ ಫೇಮ್​ನಲ್ಲಿ ಚೇತನ್​ ಅವರ ಹೆಸರಿದೆ. ಆ ವೇಳೆ ಅವರಿಗೆ ಕೇವಲ 20 ವರ್ಷ. ಆರಂಭದಲ್ಲಿ ಉತ್ತಮ ಬೌಲಿಂಗ್ ಸಾಧನೆ ತೋರಿದ್ದರೂ ಬಳಿಕ ಗಾಯದ ಸಮಸ್ಯೆಯ ಸುಳಿಗೆ ಬಿದ್ದು ಪ್ರದರ್ಶನ ವೈಫಲ್ಯ ಎದುರಿಸಿ ಅವಕಾಶಗಳನ್ನು ಕಳೆದುಕೊಂಡರು.

ಇದನ್ನೂ ಓದಿ : ವಾರದ ವ್ಯಕ್ತಿಚಿತ್ರ: ಮದ್ರಾಸ್ ಹೈಕೋರ್ಟ್‌ ಜಡ್ಜ್ ಗೌರಿ; ಹೋರಾಟವೇ ಇವರ ಹಾದಿ

ರಾಜಕೀಯ ಆಟ

ನಿವೃತ್ತಿಯ ಬಳಿಕ ಚೇತನ್​ ಶರ್ಮಾ ಅವರು ಕ್ರಿಕೆಟ್​ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ಜತೆಗೆ 2004ರಲ್ಲಿ ಪಂಚಕುಲಾದಲ್ಲಿ ವೇಗದ ಬೌಲಿಂಗ್ ಅಕಾಡೆಮಿ ಆರಂಭಿಸಿದ್ದು, ಅದು 2009ಕ್ಕೆ ಮುಚ್ಚಿ ಹೋಯಿತು. ಏತನ್ಮಧ್ಯೆ 2009ರಲ್ಲಿ ಅವರು ಬಿಎಸ್​ಪಿ ಮೂಲಕ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದುಕೊಂಡರು. ಆ ಸೋಲಿನ ಬಳಿಕ ಬಿಜೆಪಿ ಸೇರಿಕೊಂಡರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

IPL 2024: ವಿಶೇಷ ಎಂದರೆ ಎಲಿಮಿನೇಟರ್​​ನಲ್ಲಿ ಲಕ್ನೋವನ್ನು ಸೋಲಿಸಿದ ನಂತರ ಆರ್​ಸಿಬಿ ತಂಡವು 2022 ರ ಋತುವಿನಲ್ಲಿ ಕ್ವಾಲಿಫೈಯರ್ 2 ಹಂತದಲ್ಲಿ ರಾಲ್ಸ್​​ನಿಂದಲೇ ಹೊಡೆತ ತಿಂದು ಹೊರಕ್ಕೆ ಬಿದ್ದಿತ್ತು. 2020 ಮತ್ತು 2021ರಲ್ಲಿಯೂ ಆರ್​ಸಿಬಿ ಎಲಿಮಿನೇಟರ್​ನಲ್ಲಿ ಸೋಲು ಕಂಡಿತ್ತು. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​​ಸಿಬಿ ಕೊನೆಯ ಬಾರಿ ಫೈನಲ್ ತಲುಪಿತ್ತು.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಆರ್​ಸಿಬಿಯ (RCB) ಭರವಸೆಗಳು ಮೇ 22 ರ ಬುಧವಾರ ಕೊನೆಗೊಂಡವು. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ವಿರುದ್ಧ ಸೋತ ನಂತರ ಐಪಿಎಲ್ 2024 ರ (IPL 2024) ಎಲಿಮಿನೇಟರ್​ ಹಂತದಲ್ಲಿಯೇ ರೆಡ್​ಆರ್ಮಿ ಹೊರಕ್ಕೆ ಬಿತ್ತು. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಪಂದ್ಯಾವಳಿಯ ನಾಕೌಟ್ ಹಂತದಲ್ಲಿ ತನ್ನ ಆವೇಗ ಉಳಿಸಿಕೊಳ್ಳಲಿಲ್ಲ. ಆರು ಪಂದ್ಯಗಳ ಗೆಲುವಿನ ನಂಬಲಾಗದ ಓಟವನ್ನು ಮುಂದುವರಿಸಲಿಲ್ಲ. ಮತ್ತದೇ ಹಳೆ ರಾಗವೆಂಬಂತೆ ಸೋಲಿನ ಸುಳಿಗೆ ಸಿಲುಕಿ ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.

ನಾಕೌಟ್ ಹಂತದಲ್ಲಿ ಒತ್ತಡಕ್ಕೆ ಒಳಗಾಗುವ ಆರ್​​ಸಿಬಿ ಚಾಳಿ ಇಲ್ಲಿಯೂ ಮುಂದುವರಿಯಿತು. ಆರ್​ಆರ್​ ತಂಡದ ಹಿಂದೆ ಈ ಹಿಂದೆ ನಾಕೌಟ್​ ಹಂತದಲ್ಲಿ ಸೋತಂತೆ ಇಂದೂ ಸೋತಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಇಬ್ಬನಿ ಪರಿಣಾಮ ಸೇರಿದಂತೆ ರನ್​ ಚೇಸ್ ಮಾಡುವ ತಂಡಕ್ಕೆ ಅನುಕೂಲವಾಗಿದ್ದ ಪರಿಸ್ಥಿತಿಯಲ್ಲಿ ಕಡಿಮೆ ಸ್ಕೋರ್ ಆಗಿತ್ತು. ಹೀಗಾಗಿ ಸೋಲು ಸಹಜವಾಗಿಯೇ ಬಂದಿದೆ. ಇದೇ 17 ಆವೃತ್ತಿಗಳು ಮುಗಿದರೂ ಆರ್​ಸಿಬಿಯ ಕಪ್​ ಬರ ನೀಗಲಿಲ್ಲ. ಕಪ್​ಗಾಗಿ ಕಾಯುವ ದಿನಗಳು ಮತ್ತಷ್ಟು ಮುಂದೂಡಿಕೆಯಾದವು.

ವಿಶೇಷ ಎಂದರೆ ಎಲಿಮಿನೇಟರ್​​ನಲ್ಲಿ ಲಕ್ನೋವನ್ನು ಸೋಲಿಸಿದ ನಂತರ ಆರ್​ಸಿಬಿ ತಂಡವು 2022 ರ ಋತುವಿನಲ್ಲಿ ಕ್ವಾಲಿಫೈಯರ್ 2 ಹಂತದಲ್ಲಿ ರಾಲ್ಸ್​​ನಿಂದಲೇ ಹೊಡೆತ ತಿಂದು ಹೊರಕ್ಕೆ ಬಿದ್ದಿತ್ತು. 2020 ಮತ್ತು 2021ರಲ್ಲಿಯೂ ಆರ್​ಸಿಬಿ ಎಲಿಮಿನೇಟರ್​ನಲ್ಲಿ ಸೋಲು ಕಂಡಿತ್ತು. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​​ಸಿಬಿ ಕೊನೆಯ ಬಾರಿ ಫೈನಲ್ ತಲುಪಿತ್ತು.

ಪಂದ್ಯದಲ್ಲಿ ಏನಾಯಿತು?

ಬೌಲರ್​ಗಳ ಸಂಘಟಿತ ಹೋರಾಟ ಹಾಗೂ ಯಶಸ್ವಿ ಜೈಸ್ವಾಲ್ (45 ರನ್​) ಹಾಗೂ ರಿಯಾನ್ ಪರಾಗ್​ (36 ರನ್​) ಬ್ಯಾಟಿಂಗ್ ಬಲದಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಸತತ ನಾಲ್ಕು ಸೋಲು ಹಾಗೂ ಮಳೆಯಿಂದಾಗಿ ಒಂದು ಪಂದ್ಯ ರದ್ದುಗೊಂಡ ಕಾರಣ ಬೇಸರಕ್ಕೆ ಒಳಗಾಗಿದ್ದ ರಾಜಸ್ಥಾನ್ ಬಳಗ ಈ ಗೆಲುವಿನೊಂದಿಗೆ ಖುಷಿ ಕಂಡು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಅಲ್ಲಿ ಸಂಜು ಬಳಗ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

ಈ ಸೋಲಿನೊಂದಿಗೆ ಆರ್​ಸಿಬಿ ತಂಡದ 2024ರ ಐಪಿಎಲ್​ ಅಭಿಯಾನ ಮುಕ್ತಾಯಗೊಂಡಿತು. ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿರುವುದೇ ರೆಡ್​ ಆರ್ಮಿಯ ದೊಡ್ಡ ಸಾಧನೆ ಎನಿಸಿಕೊಂಡಿತು. ಜತೆಗೆ ಆರ್​​ಸಿಬಿಯ ಅಪಾರ ಅಭಿಮಾನಿಗಳ ಹೃದಯ ಛಿದ್ರಗೊಂಡಿತು. ಈ ಬಾರಿಯಾದರೂ ಕಪ್​ ಗೆಲ್ಲಬೇಕೆಂಬ ಆಸೆ ಕಮರಿತು. ಕಷ್ಟದಲ್ಲಿ ಪ್ಲೇಆಫ್​ ಹಂತಕ್ಕೇರಿದ ಹೊರತಾಗಿಯೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಚೆನ್ನೈ ವಿರುದ್ಧದ ಲೀಗ್ ಪಂದ್ಯದಲ್ಲಿ ಹೆಚ್ಚು ನಿಖರವಾಗಿ ಆಡಿದ್ದ ಆರ್​ಸಿಬಿ ಈ ಪಂದ್ಯದಲ್ಲಿ ನಿರ್ಲಕ್ಷ್ಯ ತೋರಿತು. ಬ್ಯಾಟಿಂಗ್​ನಲ್ಲಿ ಅನಗತ್ಯವಾಗಿ ವಿಕೆಟ್​ ಒಪ್ಪಿಸಿದರೆ ಬೌಲಿಂಗ್ ವೇಳೆಯೂ ಕ್ಯಾಚ್​ ಕೈಚೆಲ್ಲಿ, ಕಳಪೆ ಫೀಲ್ಡಿಂಗ್ ಮಾಡಿ, ರನ್​ಔಟ್​ ಚಾನ್ಸ್​ ಕಳೆದುಕೊಂಡಿತು. ಇದು ಸೋಲಿಗೆ ಕಾರಣವಾಯಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

Continue Reading

ಕ್ರೀಡೆ

IPL 2024 : ಐಪಿಎಲ್​ 17ನೇ ಆವೃತ್ತಿಯಲ್ಲಿ ಆರ್​ಸಿಬಿ ಅಭಿಯಾನ ಅಂತ್ಯ; ರಾಜಸ್ಥಾನ್​ 2ನೇ ಕ್ವಾಲಿಫೈಯರ್​ಗೆ

IPL 2024: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

VISTARANEWS.COM


on

IPL 2024
Koo

ಅಹಮದಾಬಾದ್​​​: ಬೌಲರ್​ಗಳ ಸಂಘಟಿತ ಹೋರಾಟ ಹಾಗೂ ಯಶಸ್ವಿ ಜೈಸ್ವಾಲ್ (45 ರನ್​) ಹಾಗೂ ರಿಯಾನ್ ಪರಾಗ್​ (36 ರನ್​) ಬ್ಯಾಟಿಂಗ್ ಬಲದಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಸತತ ನಾಲ್ಕು ಸೋಲು ಹಾಗೂ ಮಳೆಯಿಂದಾಗಿ ಒಂದು ಪಂದ್ಯ ರದ್ದುಗೊಂಡ ಕಾರಣ ಬೇಸರಕ್ಕೆ ಒಳಗಾಗಿದ್ದ ರಾಜಸ್ಥಾನ್ ಬಳಗ ಈ ಗೆಲುವಿನೊಂದಿಗೆ ಖುಷಿ ಕಂಡು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಅಲ್ಲಿ ಸಂಜು ಬಳಗ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಎದುರಿಸಲಿದೆ.

ಈ ಸೋಲಿನೊಂದಿಗೆ ಆರ್​ಸಿಬಿ ತಂಡದ 2024ರ ಐಪಿಎಲ್​ ಅಭಿಯಾನ ಮುಕ್ತಾಯಗೊಂಡಿತು. ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿರುವುದೇ ರೆಡ್​ ಆರ್ಮಿಯ ದೊಡ್ಡ ಸಾಧನೆ ಎನಿಸಿಕೊಂಡಿತು. ಜತೆಗೆ ಆರ್​​ಸಿಬಿಯ ಅಪಾರ ಅಭಿಮಾನಿಗಳ ಹೃದಯ ಛಿದ್ರಗೊಂಡಿತು. ಈ ಬಾರಿಯಾದರೂ ಕಪ್​ ಗೆಲ್ಲಬೇಕೆಂಬ ಆಸೆ ಕಮರಿತು. ಕಷ್ಟದಲ್ಲಿ ಪ್ಲೇಆಫ್​ ಹಂತಕ್ಕೇರಿದ ಹೊರತಾಗಿಯೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಚೆನ್ನೈ ವಿರುದ್ಧದ ಲೀಗ್ ಪಂದ್ಯದಲ್ಲಿ ಹೆಚ್ಚು ನಿಖರವಾಗಿ ಆಡಿದ್ದ ಆರ್​ಸಿಬಿ ಈ ಪಂದ್ಯದಲ್ಲಿ ನಿರ್ಲಕ್ಷ್ಯ ತೋರಿತು. ಬ್ಯಾಟಿಂಗ್​ನಲ್ಲಿ ಅನಗತ್ಯವಾಗಿ ವಿಕೆಟ್​ ಒಪ್ಪಿಸಿದರೆ ಬೌಲಿಂಗ್ ವೇಳೆಯೂ ಕ್ಯಾಚ್​ ಕೈಚೆಲ್ಲಿ, ಕಳಪೆ ಫೀಲ್ಡಿಂಗ್ ಮಾಡಿ, ರನ್​ಔಟ್​ ಚಾನ್ಸ್​ ಕಳೆದುಕೊಂಡಿತು. ಇದು ಸೋಲಿಗೆ ಕಾರಣವಾಯಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಹೊರಟ ರಾಜಸ್ಥಾನ್ ತಂಡಕ್ಕೆ ಆರಂಭದಲ್ಲಿ ರನ್​ ಗಳಿಸಲು ಕಷ್ಟವಾಯಿತು. ಆದರೆ ಆ ಬಳಿಕ ಯಶಸ್ವಿ ಜೈಸ್ವಾಲ್​ ಸ್ಕೋರ್​ ಹೆಚ್ಚಿಸುವ ಮಾರ್ಗ ಕಂಡುಕೊಂಡರು. ಅವರು 30 ಎಸೆತಕ್ಕೆ 45 ರನ್​ ಬಾರಿಸಿ ಅಗತ್ಯ ಆರಂಭ ಕೊಟ್ಟರು. ಟಾಮ್​ ಕ್ಯಾಡ್​ಮೋರ್​ 20 ರನ್​ ಗೆಔಟಾದರೆ ಸಂಜು ಸ್ಯಾಮ್ಸನ್​ 17 ರನ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರಿಸ್​ಗೆ ಬಂದ ರಿಯಾನ್ ಪರಾಗ್ (36 ರನ್​) ಮತ್ತೊಂದು ಉಪಯುಕ್ತ ಇನಿಂಗ್ಸ್​ನೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. ಹೆಟ್ಮಾಯರ್​ 26 ರನ್ ಕೊಡುಗೆ ಕೊಟ್ಟಿತು.

ಈ ಬಾರಿ ಮಿಂಚದ ಬ್ಯಾಟರ್​ಗಳು

ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡದ ಆರಂಭ ನಿರೀಕ್ಷಿತವಾಗಿರಲಿಲ್ಲ. ಕೊಹ್ಲಿ ಸ್ವಲ್ಪ ಚೈತನ್ಯ ತೋರಿದರೂ ಫಾಫ್​ ಡು ಪ್ಲೆಸಿಸ್​ ತಿಣುಕಾಡಲು ಶುರು ಮಾಡಿದ್ದರು. ಆದಾಗ್ಯೂ ಆರಂಭಿಕರು ಮೊದಲ ವಿಕೆಟ್​ಗೆ 37 ಬೇರ್ಪಟ್ಟರು. ಬೌಲ್ಟ್​ ಎಸೆತಕ್ಕೆ ದೊಡ್ ಹೊಡೆದ ಬಾರಿಸಲು ಮುಂದಾದ ಫಾಫ್​ ಡು ಪ್ಲೆಸಿಸ್​ ರೋವ್ಮನ್ ಪೊವೆಲ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಅದಕ್ಕಿಂತ ಮೊದಲು ಅವರು 17 ರನ್ ಬಾರಿಸಿದರು. ನಂತರ ಆಡಲು ಬಂದ ಕ್ಯಾಮೆರಾನ್ ಗ್ರೀನ್​ 21 ಎಸೆತಕ್ಕೆ 27 ರನ್ ಬಾರಿಸಿದರು. ಅವರು ಔಟಾಗುವ ಮೊದಲು ಕೊಹ್ಲಿಯ ವಿಕೆಟ್​ ಪತನಗೊಂಡಿತು. 24 ಎಸೆತಕ್ಕೆ 33 ರನ್ ಬಾರಿಸಿದ್ದ ಕೊಹ್ಲಿ ಚಹಲ್ ಎಸೆತಕ್ಕೆ ಔಟಾದರು.

ಬಳಿಕ ಬಂದ ರಜತ್ ಪಾಟೀದಾರ್ ಉತ್ತಮ ಮೊತ್ತ ಪೇರಿಸುವ ಲಕ್ಷಣ ತೋರಿದರೂ 34 ರನ್​ಗೆ ಸೀಮಿತಗೊಂಡರು. ಆರ್​ಆರ್​ ಬೌಲರ್​ಗಳು ಆ ಬಳಿಕ ಮೇಲುಗೈ ಸಾಧಿಸಿದರು. ಗ್ಲೆನ್ ಮ್ಯಾಕ್ಸ್​ ಮತ್ತೊಂದು ಬಾರಿ ಬೇಜವಾಬ್ದಾರಿ ಆಟವಾಡಿ ಶೂನ್ಯಕ್ಕೆ ಔಟಾದರು. ಬಳಿಕ ಮಹಿಪಾಲ್ ಲಾಮ್ರೋರ್​ 32 ರನ್​ ಗಳಿಸಿ ಸ್ಪರ್ಧಾತ್ಮಕ ಮೊತ್ತಕ್ಕೆ ನೆರವಾದರು. ದಿನೇಶ್​ ಕಾರ್ತಿಕ್​ ಕಡೆಯಿಂದ ಹೆಚ್ಚು ರನ್ ಮೂಡಿ ಬರಲಿಲ್ಲ. ಅವರು 11 ರನ್​ಗೆ ಸೀಮಿತಗೊಂಡರು.

Continue Reading

ಪ್ರಮುಖ ಸುದ್ದಿ

IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

IPL 2024 : ಆನ್-ಫೀಲ್ಡ್ ಅಂಪೈರ್​ ನೀಡಿದ ಎಲ್ಬಿಡಬ್ಲ್ಯು ಕರೆಯನ್ನು ಪರಿಶೀಲಿಸಲು ಪಾಲುದಾರ ಮಹಿಪಾಲ್ ಲೊಮ್ರೊರ್ ಮನವೊಲಿಸಬೇಕಾಗಿ ಬಂದಿತ್ತು. ಹೀಗಾಗಿ ದಿನೇಶ್ ಕಾರ್ತಿಕ್​ಗೆ ತಾವು ಔಟ್ ಆಗಿರುವುದು ಮನವರಿಕೆಯಾಯಿತು. ಹಿಂದಿನ ಎಸೆತದಲ್ಲಿ ರಜತ್ ಪಾಟಿದಾರ್ ವಿಕೆಟ್ ಪಡೆದ ನಂತರ ಹೆಚ್ಚಿನ ಆತ್ಮವಿಶ್ವಾಸದಲ್ಲಿದ್ದ ಅವೇಶ್ ಖಾನ್ ಖುಷಿಯಲ್ಲಿದ್ದರು.

VISTARANEWS.COM


on

IPL 2024
Koo

ಅಹಮದಾಬಾದ್ : ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ (ಮೇ 22) ನಡೆದ ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್​ ನಡುವಿನ ಐಪಿಎಲ್ 2024 ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಎಲ್​ಬಿಡಬ್ಲ್ಯು ಡಿಆರ್​ಎಷ್​ ಪರಿಶೀಲೆನ ವಿವಾದಕ್ಕೆ ಕಾರಣವಾಯಿತು. ಆರ್​ಸಿಬಿ ಇನ್ನಿಂಗ್ಸ್​ನ 15 ನೇ ಓವರ್​ನಲ್ಲಿ ಕಾರ್ತಿಕ್ ಎದುರಿಸಿದ ಮೊದಲ ಎಸೆತದಲ್ಲೇ ಎಲ್​ಬಿಡಬ್ಲ್ಯು ಔಟ್​ ನೀಡಲಾಯಿತು. ಪರಿಶೀಲನೆಯ ನಂತರ ಮೂರನೇ ಅಂಪೈರ್ ನಿರ್ಧಾರವನ್ನು ಬದಲಿಸುವಂತೆ ಫೀಲ್ಡ್​ ಅಂಪೈರ್​ಗೆ ಸೂಚಿಸಿದರು. ಅವೇಶ್ ಖಾನ್​ಗೆ ಮತ್ತೊಂದು ವಿಕೆಟ್ ನೀಡಲು ನಿರಾಕರಿಸಿದರು. ಥರ್ಡ್ ಅಂಪೈರ್ ಅನಿಲ್ ಚೌಧರಿ ಅವರ ನಿರ್ಧಾರವು ವೀಕ್ಷಕ ವಿವರಣೆಗಾರರಾದ ಸುನಿಲ್ ಗವಾಸ್ಕರ್ ಮತ್ತು ರವಿ ಶಾಸ್ತ್ರಿ ಸೇರಿದಂತೆ ಹಲವರಿಗೆ ಆಶ್ಚರ್ಯ ಮತ್ತು ಆಘಾತವನ್ನುಂಟು ಮಾಡಿತು.

ಆನ್-ಫೀಲ್ಡ್ ಅಂಪೈರ್​ ನೀಡಿದ ಎಲ್ಬಿಡಬ್ಲ್ಯು ಕರೆಯನ್ನು ಪರಿಶೀಲಿಸಲು ಪಾಲುದಾರ ಮಹಿಪಾಲ್ ಲೊಮ್ರೊರ್ ಮನವೊಲಿಸಬೇಕಾಗಿ ಬಂದಿತ್ತು. ಹೀಗಾಗಿ ದಿನೇಶ್ ಕಾರ್ತಿಕ್​ಗೆ ತಾವು ಔಟ್ ಆಗಿರುವುದು ಮನವರಿಕೆಯಾಯಿತು. ಹಿಂದಿನ ಎಸೆತದಲ್ಲಿ ರಜತ್ ಪಾಟಿದಾರ್ ವಿಕೆಟ್ ಪಡೆದ ನಂತರ ಹೆಚ್ಚಿನ ಆತ್ಮವಿಶ್ವಾಸದಲ್ಲಿದ್ದ ಅವೇಶ್ ಖಾನ್ ಖುಷಿಯಲ್ಲಿದ್ದರು.

ದಿನೇಶ್ ಕಾರ್ತಿಕ್ ವಿಮರ್ಶೆ ತೆಗೆದುಕೊಂಡ ನಂತರ, ಮೂರನೇ ಅಂಪೈರ್ ಎಸೆತದ ರಿಪ್ಲೇ ನೋಡಿದರು. ಈ ನಿರ್ಧಾರವು ಬರಿಗಣ್ಣಿಗೆ ಪ್ಲಮ್ ಆಗಿ ಕಂಡರೂ, ಅಲ್ಟ್ರಾ-ಎಡ್ಜ್ ತಂತ್ರಜ್ಞಾನವು ಚೆಂಡು ಬ್ಯಾಟ್ ಅನ್ನು ದಾಟುವಾಗ ಸ್ಪೈಕ್ ಅನ್ನು ತೋರಿಸಿರು. ಅದೇ ಸಮಯದಲ್ಲಿ, ಬ್ಯಾಟ್ ಕೂಡ ಪ್ಯಾಡ್​ಗೆ ಬಡಿದಿತ್ತು. ಆದಾಗ್ಯೂ, ಮೂರನೇ ಅಂಪೈರ್ ಹೆಚ್ಚಿನ ರಿಪ್ಲೇಗಳನ್ನು ನೋಡದೆ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡರು.

ಇದನ್ನೂ ಓದಿ: Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

ಮೂರನೇ ಅಂಪೈರ್ ಅವರು ಅಲ್ಟ್ರಾ-ಎಡ್ಜ್ ಮೂಲಕ ಚೆಂಡು ಹೊಡೆದಿದೆ ಎಂದು ಹೇಳಿದ್ದರು. ಒಂದು ವೇಳೆ ಬ್ಯಾಟ್​​ ಪ್ಯಾಡ್​ಗೆ ಬಡಿಯುವಾಗ ಸದ್ದು ಬಂದಿರಬಹುದು ಎಂಬುದು ಕೆಲವರ ವಾದವಾಗಿತ್ತು. ಅದರಿಂದ ಸ್ಪೈಕ್ ಸಾಧ್ಯತೆಯನ್ನು ಅನಿಲ್ ಚೌಧರಿ ಏಕೆ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅಭಿಪ್ರಾಯವೇನು?

ಅನಿಲ್ ಚೌಧರಿ ಅವರ ನಿರ್ಧಾರವನ್ನು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಆಘಾತಕಾರಿ ಎಂದರು. “ಇದಕ್ಕೆ ಒಂದು ಪದವಿದ್ದರೆ ಅದು ಸಂಪೂರ್ಣ ಆಘಾತಕಾರಿ” ಎಂದು ಶಾಸ್ತ್ರಿ ವೀಕ್ಷಕವಿವರಣೆಯ ಸಮಯದಲ್ಲಿ ಹೇಳಿದ್ದಾರೆ.

ಬ್ಯಾಟ್ ಪ್ಯಾಡ್ಗೆ ಹೊಡೆಯುವುದನ್ನು ಸ್ಪಷ್ಟವಾಗಿ ನೋಡಿದ್ದೇನೆ ಮತ್ತು ಚೆಂಡಿನೊಂದಿಗೆ ಬ್ಯಾಟ್​ಗೆ ಯಾವುದೇ ಸಂಪರ್ಕ ಆಗಿಲ್ಲ ಎಂದು ಲೆಜೆಂಡರಿ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅನಿಲ್ ಚೌಧರಿ ಅವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ವಾಸ್ತವವಾಗಿ, ರಾಜಸ್ಥಾನದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ನಿರ್ಧಾರದಿಂದ ನಿರಾಶೆಗೊಂಡಿದ್ದರು. ನಿರ್ಧಾರ ತೆಗೆದುಕೊಂಡ ನಂತರ ಅವರು ಸ್ಥಳದಲ್ಲಿ ಪಂದ್ಯದ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂತು.

Continue Reading

ಪ್ರಮುಖ ಸುದ್ದಿ

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Yuzvendra Chahal: ಚಹಲ್ ಈಗಾಗಲೇ ರಾಯಲ್ಸ್ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಶೇನ್ ವಾರ್ನ್ ಅವರನ್ನು ಹಿಂದಿಕ್ಕಿದ್ದಾರೆ. ವಾರ್ನ್ ಐಪಿಎಲ್​​ನಲ್ಲಿ ಆರ್ಆರ್ ಪರ 57 ವಿಕೆಟ್​ಗಳನ್ನು ಪಡೆದಿದ್ದರು. ಆರ್​ಆರ್​​ ಸ್ಪಿನ್ನರ್ ಚಹಲ್​, 4 ಓವರ್​ಗಳಲ್ಲಿ 43 ರನ್​ಗಳಿಗೆ 1 ಅಂಕಿಅಂಶಗಳೊಂದಿಗೆ ತಮ್ಮ ಸ್ಪೆಲ್ ಅನ್ನು ಕೊನೆಗೊಳಿಸಿದರು.

VISTARANEWS.COM


on

IPL 2024
Koo

ಬೆಂಗಳೂರು: ಮೇ 22 ರಂದು ಆರ್​ಸಿಬಿ ವಿರುದ್ಧ ನಡೆದ ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ಯಜ್ವೇಂದ್ರ ಚಹಲ್ (Yuzvendra Chahal) ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅಹ್ಮದಾಬಾದ್​ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಚಹಲ್ ರಾಯಲ್ಸ್ ಪರ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದ ಹಾಗೆ ಚಹಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಕೊಹ್ಲಿಯನ್ನು ಔಟ್ ಮಾಡಿದ್ದು ಇದೇ ಮೊದಲು.

ಪವರ್ಪ್ಲೇ ಮುಗಿದ ನಂತರ ಚಹಲ್ ಬೌಲಿಂಗ್ ಮಾಡಲು ಬಂದರು. ಕೊಹ್ಲಿ ಆಕ್ರಮಣಕಾರಿಯಾಗಿ 24 ಎಸೆತಗಳಲ್ಲಿ 33 ರನ್ ಗಳಿಸಿದ್ದರು. ಅಂತೆಯೇ ಆರ್​ಸಿಬಿ ಸ್ಟಾರ್ ಚಹಲ್ ಅವರನ್ನು ಎದುರಿಸಲು ಮುಂದಾಗಿ ಸ್ಲಾಗ್ ಸ್ವೀಪ್​ ಮಾಡಿದರು. ಈ ಪ್ರಯತ್ನ ಅವರಿಗೆ ಹಾಲಿ ಋತುವಿನಲ್ಲಿ ಸಾಕಷ್ಟು ಯಶಸ್ಸನ್ನು ತಂದುಕೊಟ್ಟಿತು. ಆದಾಗ್ಯೂ, ಡೊನೊವನ್ ಫೆರೇರಾ ಅವರನ್ನು ಬೌಂಡರಿ ಕ್ಯಾಚ್ ಹಿಡಿದರು. ಇದರೊಂದಿಗೆ ಐಪಿಎಲ್​​ನಲ್ಲಿ ರಾಜಸ್ಥಾನ್​ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಿದ್ಧಾರ್ಥ್ ತ್ರಿವೇದಿ ಅವರನ್ನು ಚಹಲ್ ಹಿಂದಿಕ್ಕಿದರು.

ಚಹಲ್ ಈಗಾಗಲೇ ರಾಯಲ್ಸ್ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಶೇನ್ ವಾರ್ನ್ ಅವರನ್ನು ಹಿಂದಿಕ್ಕಿದ್ದಾರೆ. ವಾರ್ನ್ ಐಪಿಎಲ್​​ನಲ್ಲಿ ಆರ್ಆರ್ ಪರ 57 ವಿಕೆಟ್​ಗಳನ್ನು ಪಡೆದಿದ್ದರು. ಆರ್​ಆರ್​​ ಸ್ಪಿನ್ನರ್ ಚಹಲ್​, 4 ಓವರ್​ಗಳಲ್ಲಿ 43 ರನ್​ಗಳಿಗೆ 1 ಅಂಕಿಅಂಶಗಳೊಂದಿಗೆ ತಮ್ಮ ಸ್ಪೆಲ್ ಅನ್ನು ಕೊನೆಗೊಳಿಸಿದರು.

ಐಪಿಎಲ್​ನಲ್ಲಿ ಆರ್​ಆರ್​ ಪರ ಅತಿ ಹೆಚ್ಚು ವಿಕೆಟ್ ಪಡೆದವರು


  • 66 – ಯಜುವೇಂದ್ರ ಚಹಲ್
  • 65 – ಸಿದ್ಧಾರ್ಥ್ ತ್ರಿವೇದಿ
  • 61 – ಶೇನ್ ವ್ಯಾಟ್ಸನ್
  • 57 – ಶೇನ್ ವಾರ್ನ್
  • 47 – ಜೇಮ್ಸ್ ಫಾಲ್ಕನರ್

ಕಾಕತಾಳೀಯವೆಂಬಂತೆ, ಚಹಲ್ ಅವರು ಆರ್​ಸಿಬಿ ಪರ ಆಡಿದ ಸಮಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿ ಪಡೆದಿದ್ದರು. 2014ರಿಂದ 2021ರವರೆಗೆ ಬೆಂಗಳೂರು ಪರ ಆಡಿರುವ ಚಹಲ್ 113 ಪಂದ್ಯಗಳಲ್ಲಿ 139 ವಿಕೆಟ್ ಕಬಳಿಸಿದ್ದಾರೆ.

ಐಪಿಎಲ್ 2024ರಲ್ಲಿ ಚಹಲ್ ಪ್ರದರ್ಶನ ಹೇಗಿದೆ?

ಚಹಲ್ ಈ ಋತುವಿನಲ್ಲಿ ಆರ್​ಅರ್​​ ಪರ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಸ್ಪಿನ್ನರ್ ಪ್ರಸ್ತುತ ಈ ಋತುವಿನಲ್ಲಿ ರಾಯಲ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಚಹಲ್ 14 ಪಂದ್ಯಗಳಿಂದ 26.88ರ ಸರಾಸರಿಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚಾಹಲ್ ಐಪಿಎಲ್​​ನಲ್ಲಿ 200 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಐಪಿಎಲ್ನಲ್ಲಿ ಅವರ ಪ್ರದರ್ಶನವು ಅವರನ್ನು 2024 ರ ಟಿ 20 ವಿಶ್ವಕಪ್ಗಾಗಿ ಭಾರತೀಯ ತಂಡಕ್ಕೆ ಮರಳಿ ಪಡೆಯುತ್ತದೆ.

Continue Reading
Advertisement
Viral Video
ವೈರಲ್ ನ್ಯೂಸ್6 mins ago

Viral Video: ಛೇ…ಇವರೆಂಥಾ ರಾಕ್ಷಸರು! ಕೈ ಕಾಲು ಕಟ್ಟಿ ಚೆನ್ನಾಗಿ ಥಳಿಸಿ ಯುವಕನ ಹತ್ಯೆ-ವಿಡಿಯೋ ನೋಡಿ

Indian 2
ಸಿನಿಮಾ18 mins ago

Indian 2: ಕಮಲ್‌ ಹಾಸನ್‌ ಅಭಿನಯದ ʼಇಂಡಿಯನ್‌ 2ʼ ಚಿತ್ರದ ಮೊದಲ ಹಾಡು ರಿಲೀಸ್‌; ಕುದುರೆ ಏರಿ ಬಂದ ಉಳಗನಾಯಗನ್‌

dhavala dharini column buddha ಧವಳ ಧಾರಿಣಿ
ಅಂಕಣ41 mins ago

ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

Karnataka Weather
ಕರ್ನಾಟಕ1 hour ago

Karnataka Weather: ಇಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

Brain Tumour In Kids
ಆರೋಗ್ಯ1 hour ago

Brain Tumour In Kids: ಮಕ್ಕಳ ಜೀವ ಹಿಂಡುವ ಮೆದುಳಿನ ಟ್ಯೂಮರ್‌ನ ಲಕ್ಷಣಗಳಿವು

Buddha Purnima
ಧಾರ್ಮಿಕ2 hours ago

Buddha Purnima: ಇಂದು ಬುದ್ಧ ಪೂರ್ಣಿಮೆ; ಬುದ್ಧನ ಬೋಧನೆಯನ್ನು ಸ್ಮರಿಸಿಕೊಳ್ಳುವ ದಿನ

Health Benefits Of Okra
ಆರೋಗ್ಯ2 hours ago

Health Benefits Of Okra: ಬೆಂಡೆಕಾಯಿ ತಿನ್ನುತ್ತೀರಿ ನಿಜ; ಅದರಿಂದಾಗುವ ಪ್ರಯೋಜನಗಳೇನು ಗೊತ್ತಿದೆಯಾ?

dina bhavishya read your daily horoscope predictions for May 23 2024
ಭವಿಷ್ಯ3 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

IPL 2024
ಕ್ರೀಡೆ8 hours ago

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

Karnataka police
ಪ್ರಮುಖ ಸುದ್ದಿ8 hours ago

ವಿಸ್ತಾರ ಸಂಪಾದಕೀಯ: ಒಂದು ಕಡೆ ಸರಣಿ ಕೊಲೆ, ಇನ್ನೊಂದೆಡೆ ಪೊಲೀಸರ ಬೀದಿ ಸುಲಿಗೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ3 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌