Beauty Tips: ಬೇಸಗೆಯ ಬಿಸಿಲಲ್ಲೂ ಹೊಳೆವ ಆರೋಗ್ಯಕರ ಸೌಂದರ್ಯಕ್ಕೆ ಸಪ್ತ ಸೂತ್ರಗಳು! - Vistara News

ಆರೋಗ್ಯ

Beauty Tips: ಬೇಸಗೆಯ ಬಿಸಿಲಲ್ಲೂ ಹೊಳೆವ ಆರೋಗ್ಯಕರ ಸೌಂದರ್ಯಕ್ಕೆ ಸಪ್ತ ಸೂತ್ರಗಳು!

ಎಲ್ಲ ಹೆಂಗಳೆಯರೂ ಮೊದಲು ಮುಖ ಮುಚ್ಚಿಕೊಳ್ಳುವಲ್ಲಿ ಮಾತ್ರ ಗಮನ ಕೊಟ್ಟರೆ ಹೇಗೆ ಹೇಳಿ? ಬೇಸಗೆಯಲ್ಲಿ ಚರ್ಮ ಕಾಂತಿಯುಕ್ತವಾಗಿರಬೇಕಾದರೆ, ಕೇವಲ ಮುಖದ ಲೇಪನ, ಸೂರ್ಯನ ಬಿಸಿಲಿನಿಂದ ರಕ್ಷಿಸಿಕೊಂಡರಷ್ಟೇ ಸಾಲದು. ನಮ್ಮ ಆಹಾರ ಕ್ರಮ, ಜೀವನಕ್ರಮದಲ್ಲಿ ಕೊಂಚ ಮಾರ್ಪಾಡು ಮಾಡಿಕೊಳ್ಳುವುದರಿಂದ ಆರೋಗ್ಯಕರ ಸೌಂದರ್ಯ ಒಳಗಿನಿಂದ ಚಿಮ್ಮುತ್ತದೆ.

VISTARANEWS.COM


on

Beauty Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೇಸಗೆ ಬರುತ್ತಿದ್ದರೆ ಸಾಕು, ಎಲ್ಲೇ ಹೋಗಲಿ, ಮಾನಿನಿಯರ ಮುಖದರ್ಶನ ಕಷ್ಟ. ಸೂರ್ಯ ಪ್ರಕಾಶಮಾನವಾಗಿ ಉರಿಯಲು ಶುರು ಮಾಡಿದ ತಕ್ಷಣ ಹುಡುಗಿಯರು ಸೂರ್ಯನ ಝಳಕ್ಕೆ ತಮ್ಮ ಮುಖದ ಚರ್ಮವೆಲ್ಲಿ ಬಾಡಿಹೋದೀತು ಎಂದು ಗಲಿಬಿಲಿಗೊಳಗಾಗಿ ಕಣ್ಣು ಮಾತ್ರ ಕಾಣುವಂತೆ ಮುಖಕ್ಕೆ ಸ್ಕಾರ್ಫ್‌ ಬಿಗಿದುಕೊಂಡು ತಮ್ಮ ಸ್ಕೂಟಿ ಏರುತ್ತಾರೆ. ಆದರೂ ಸನ್‌ಬರ್ನ್‌, ಮೊಡವೆ, ಕಜ್ಜಿ, ಬೆವರುಸಾಲೆ, ಕಪ್ಪುಕಲೆಯಂತಹ ಸಮಸ್ಯೆಗಳು ಕಾಡದೆ ಬಿಡುವುದಿಲ್ಲ. ಹಾಗಾದರೆ ಈಗ ಬರುತ್ತಿರುವ ಬೇಸಿಗೆಯಲ್ಲಿ ಬಿಡದೆ ಕಾಡುವ ಉಷ್ಣದ ಅಲೆಯಿಂದ ಪಾರಾಗುವುದು ಹೇಗೆ ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆ (beauty tips) ಎಂಬ ವಿವರಗಳು ಇಲ್ಲಿವೆ.

ಎಲ್ಲ ಹೆಂಗಳೆಯರೂ ಮೊದಲು ಮುಖ ಮುಚ್ಚಿಕೊಳ್ಳುವಲ್ಲಿ ಮಾತ್ರ ಗಮನ ಕೊಟ್ಟರೆ ಹೇಗೆ ಹೇಳಿ? ಬೇಸಗೆಯಲ್ಲಿ ಚರ್ಮ ಕಾಂತಿಯುಕ್ತವಾಗಿರಬೇಕಾದರೆ, ಕೇವಲ ಮುಖದ ಲೇಪನ, ಸೂರ್ಯನ ಬಿಸಿಲಿನಿಂದ ರಕ್ಷಿಸಿಕೊಂಡರಷ್ಟೇ ಸಾಲದು. ಬ್ಯೂಟಿಪಾರ್ಲರಿಗೆ ಎಷ್ಟು ಬಾರಿ ಎಡತಾಕಿದರೂ ನಮ್ಮ ಆಹಾರ ಕ್ರಮ, ಜೀವನಕ್ರಮದಲ್ಲಿ ಕೊಂಚ ಮಾರ್ಪಾಡು ಮಾಡಿಕೊಳ್ಳುವುದರಿಂದ ಆರೋಗ್ಯಕರ ಸೌಂದರ್ಯ ಒಳಗಿನಿಂದ ಚಿಮ್ಮುತ್ತದೆ ಎಂಬ ಸಾಮಾನ್ಯ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಸಿಂಪಲ್‌ ಆಹಾರದತ್ತ ಹೊರಳುವುದು ಉತ್ತಮ. ರಸಂ, ತೊವ್ವೆ, ತಂಬುಳಿ, ಮಜ್ಜಿಗೆ, ಪಲ್ಯದಂತಹ ಸರಳ ಅಡುಗೆಗಳು ಬೇಸಿಗೆಯಲ್ಲಿ ಸೂಕ್ತ.

ಇದರ ಜೊತೆಗೆ ಸ್ನ್ಯಾಕ್‌ ಟೈಂನಲ್ಲಿ ನೀರು ಮಜ್ಜಿಗೆ, ಲಸ್ಸಿ, ಎಳನೀರು, ನಿಂಬೆ ಜ್ಯೂಸ್‌, ತಾಳೆಹಣ್ಣು, ಕೋಕಂ ಜ್ಯೂಸ್‌, ಖರ್ಬೂಜ ಹಾಗೂ ಕಲ್ಲಂಗಡಿ ಜ್ಯೂಸ್‌ ಮತ್ತಿತರ ಪಾನೀಯಗಳನ್ನು ತೆಗೆದುಕೊಳ್ಳಬಹುದು. ಸೌತೆಕಾಯಿ, ಮೊಳಕೆಕಾಳುಗಳೂ ಕೂಡಾ ಒಳ್ಳೆಯದು. ಕುರುಕಲು, ತುಂಬ ಸ್ಟಾರ್ಚ್‌ ಇರುವಂತಹ ಆಹಾರಗಳು, ಕಾರ್ಬೋನೇಟೆಡ್‌ ಡ್ರಿಂಕ್‌ಗಳು, ಮಾರುಕಟ್ಟೆಯಲ್ಲಿ ಸಿಗುವ ಟೆಟ್ರಾಪ್ಯಾಕ್‌ ಜ್ಯೂಸ್‌ಗಳು, ಆಲ್ಕೋಹಾಲ್‌ ಇತ್ಯಾದಿಗಳನ್ನು ಸೇವಿಸದಿರುವುದು ಉತ್ತಮ. ಆಗಾಗ ನೀರು ಸೇವಿಸುತ್ತಿರುವುದು ಅತ್ಯಂತ ಸುಲಭ ಹಾಗೂ ಸರಳ ಉಪಾಯವಷ್ಟೇ ಅಲ್ಲ, ಸೌಂದರ್ಯದ ಗುಟ್ಟೂ ಕೂಡಾ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.  

೧. ಬಿಸಿಲಿನ ಝಳಕ್ಕೆ ಕೈಕಾಲುಗಳು ಉರಿದಂತೆ ಅನಿಸುವುದುಂಟು. ಹೀಗಾದಲ್ಲಿ, ಹಾಗಲಕಾಯಿಯನ್ನು ಉರುಟಾಗಿ ಕತ್ತರಿಸಿ ಅದರಿಂದ ಕೈಕಾಲಿನ ಚರ್ಮಕ್ಕೆ ಉಜ್ಜಿಕೊಳ್ಳಬಹುದು. ಉರಿ ಶಮನವಾಗುತ್ತದೆ.

Beauty Tips

೨. ಇನ್ನೂ ಕೆಲವರಿಗೆ ಅತೀವ ಬಿಸಿಲಿನಿಂದ ಕಣ್ಣೂ ಉರಿದಂತಾಗಬಹುದು. ಅಂಥವರು ಯಾವಾಗಲೂ ಮನೆಯಲ್ಲಿ ಟೀಬ್ಯಾಗ್‌ಗಳನ್ನು ಫ್ರಿಡ್ಜ್‌ನಲ್ಲಿಟ್ಟಿರುವುದು ಒಳ್ಳೆಯದು. ಬಳಸಿದ ಟೀ ಬ್ಯಾಗ್‌ಗಳನ್ನು ಶೇಖರಿಸಿಟ್ಟರೂ ಓಕೆ. ಹೀಗೆ ತಂಪಾದ ಟೀ ಬ್ಯಾಗನ್ನು ಮನೆಗೆ ಬಂದ ಮೇಲೆ ಫ್ರಿಡ್ಜ್‌ನಿಂದ ತೆಗೆದು ಕಣ್ಣ ಮೇಲಿಟ್ಟುಕೊಂಡು ಸ್ವಲ್ಪ ಹೊತ್ತು ರಿಲ್ಯಾಕ್ಸ್‌ ಮಾಡಿ. ಸೌತೆಕಾಯಿಯ ಉರುಟಾದ ಹೋಳನ್ನೂ ಹೀಗೆ ಕಣ್ಣಿನ ಮೇಲಿಟ್ಟುಕೊಳ್ಳಬಹುದು.

೩. ಬಾಡಿಹೋದ ಮುಖಕ್ಕೆ ತಾಜಾ ಅನುಭೂತಿ ನೀಡಲು, ರೋಸ್‌ವಾಟರ್‌ ಫ್ರಿಡ್ಜ್‌ನಲ್ಲಿಟ್ಟು ಅದನ್ನು ಚಿಮುಕಿಸಿಕೊಳ್ಳುತ್ತಿರಬಹುದು. ಅಮ್ಮಂದಿರು ಬಿಸಿಲಲ್ಲಿ ಆಟವಾಡಿ ಬಂದ ತಮ್ಮ ಮಕ್ಕಳಿಗೂ ಇದನ್ನು ಮಾಡಬಹುದು.

ಇದನ್ನೂ ಓದಿ: Twinkle Khanna: ಸುಕ್ಕಿನ ನಿರಿಗೆಗಳು ಪಾರಿತೋಷಕಗಳಂತೆ: ಟ್ವಿಂಕಲ್‌ ಖನ್ನಾ ಸೌಂದರ್ಯ ಮೀಮಾಂಸೆ

೪. ಯಾವತ್ತಿಗೂ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಬಿಸಾಡಬೇಡಿ. ಹೊರಗೆ ಹೋಗುವ ಮೊದಲು ಕಲ್ಲಂಗಡಿ ಸಿಪ್ಪೆಯಿಂದ ಕೈಕಾಲಿನ ಚರ್ಮಕ್ಕೆ ಉಜ್ಜಿಕೊಂಡು ಹೊರಗೆ ಹೋಗಿ. ಇದರಿಂದ ಚರ್ಮಕ್ಕೆ ಬೇಕಾದ ತೇವಾಂಶ ಸಿಗುವುದಲ್ಲದೆ, ಚರ್ಮ ಉರಿದಂತಾಗುವುದು ಕಡಿಮೆಯಾಗುತ್ತದೆ. ಅಲ್ಲದೆ ಬೆವರುಸಾಲೆ, ಕಜ್ಜಿಯೂ ಉಂಟಾಗುವುದಿಲ್ಲ.

face care

೫. ಚರ್ಮದ ಮೇಲಿರುವ ಮೊಡವೆಗಳ ಕುಳಿಗಳು, ಕಪ್ಪುಕಲೆಗಳು ಬಿಸಿಲಿನ ಝಳದಲ್ಲಿ ಇನ್ನಷ್ಟು ಕಪ್ಪಗಾಗಿ ಕೆಟ್ಟದಾಗಿ ಕಾಣುತ್ತಿದ್ದರೆ, ಟೊಮೇಟೋ ರಸವನ್ನು ಮುಖಕ್ಕೆ ಹಚ್ಚಿ.

೬. ತಲೆಯ ಮೇಲೆ ಕೂದಲ ಬುಡದಲ್ಲಿ ಕಜ್ಜಿ, ತುರಿಕೆಗಳಾಗುತ್ತಿದ್ದರೆ ಕಹಿಬೇವಿನ ಸೊಪ್ಪನ್ನು ನೀರಿನಲ್ಲಿ ಕುದಿಸಿ ತಣಿಸಿ ಶಾಂಪೂ ಹಾಕಿ ಸ್ನಾನ ಮಾಡಿದ ಮೇಲೆ ಈ ಕಹಿಬೇವಿನ ನೀರಿನಿಂದ ತೊಳೆಯಿರಿ.ಮುಲ್ತಾನಿ ಮಿಟ್ಟಿಯನ್ನು ಮೊಸರಿನಲ್ಲಿ ಕಲಸಿ ತಲೆಯಲ್ಲಾದ ಕಜ್ಜಿಗಳಿಗೆ ಹಚ್ಚಿದರೂ ಪರಿಹಾರ ಸಿಗುತ್ತದೆ.

೭. ಬಿಸಿಲಿನಿಂದಾಗಿ ಬೆವರು ಅತೀವ ವಾಸನೆ ಬರುತ್ತಿದ್ದರೆ, ಸಿಂಥೆಟಿಕ್‌ ಬಟ್ಟೆಗಳನ್ನು ಧರಿಸದೆ ಹತ್ತಿ ಅಥವಾ ಟಸ್ಸಾರ್‌ ಬಟ್ಟೆಗಳನ್ನು ಧರಿಸಿ. ಲಿನಿನ್‌ ಕೂಡಾ ಬೇಸಿಗೆಗೆ ಒಳ್ಳೆಯ ಆಯ್ಕೆ. ಸ್ನಾನದ ನೀರಿಗೆ ಲ್ಯಾವೆಂಡರ್‌, ನಿಂಬೆ, ಜೆರಾನಿಯಂ ಮತ್ತಿತರ ಎಸೆನ್ಶಿಯಲ್‌ ಎಣ್ಣೆಯನ್ನು ಕೂಡಾ ಸೇರಿಸಿ ಸ್ನಾನ ಮಾಡಬಹುದು. ಸೀ ಸಾಲ್ಟ್‌, ನಿಂಬೆ ಹೋಳು, ಮಲ್ಲಿಗೆ ಹೂಗಳ್ನು ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡಬಹುದು.

ಇದನ್ನೂ ಓದಿ: Prerane | ಮನಸ್ಸಿನ ಸ್ಥಿಮಿತದಲ್ಲಿದೆ ಬದುಕಿನ ಸೌಂದರ್ಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

ಆಹಾರ ಸುರಕ್ಷತೆಯ ಹೆಚ್ಚಿನ ಕ್ರಮಗಳು ಪಾಲನೆಯಾಗುವುದು ಅಥವಾ ಉಲ್ಲಂಘನೆ ಆಗುವುದು ಅಡುಗೆಮನೆಗಳಲ್ಲೇ. ಬೆಳೆಯುವ ಹಂತದಿಂದ ಹಿಡಿದು, ದಾಸ್ತಾನು ಮಾಡುವವರೆಗೂ ಆಹಾರ ಸುರಕ್ಷಾ ನಿಯಮದ ಉಲ್ಲಂಘನೆಗಳು ಆಗುತ್ತಲೇ ಇದ್ದರೂ, ಕೆಲಮಟ್ಟಿಗೆ ಅವುಗಳನ್ನು ಬಳಕೆಯೋಗ್ಯ ಮಾಡುವುದು ಬಳಕೆದಾರರ ಕೈಯಲ್ಲೂ ಇದೆ. ಇಂದು ವಿಶ್ವ ಆಹಾರ ಸುರಕ್ಷತಾ ದಿನ (World Food Safety Day).

VISTARANEWS.COM


on

World Food Safety Day
Koo

ಆಹಾರ ಸೇವನೆ ಬದುಕುಳಿಯುವುದಕ್ಕೆ ಮಾತ್ರವೇ ಅಗತ್ಯವಲ್ಲ; ನಮ್ಮ ಸ್ವಾಸ್ಥ್ಯದ ಸೋಪಾನವದು. ಒಳ್ಳೆಯ ಆಹಾರದಿಂದ ದೇಹಕ್ಕೆ ಸಾಕಷ್ಟು ಪೋಷಕಸತ್ವಗಳು ದೊರೆಯುವ ಹಾಗೆಯೇ, ತಿನ್ನುವ ಆಹಾರ ಸರಿಯಿಲ್ಲದಿದ್ದರೆ ಸಾಕಷ್ಟು ರೋಗಗಳನ್ನೂ ಆಹ್ವಾನಿಸುತ್ತದೆ. ಕೆಟ್ಟ ಆಹಾರ ತಿಂದರೂ, ಆಹಾರ ಕೆಟ್ಟ ಮೇಲೆ ತಿಂದರೂ ಅನಾರೋಗ್ಯ ತಪ್ಪಿದ್ದಲ್ಲ. ಹಾಗಾಗಿ ಸುರಕ್ಷತೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಜೂನ್‌ ತಿಂಗಳ 7ನೇ ದಿನವನ್ನು ಜಾಗತಿಕ ಆಹಾರ ಸುರಕ್ಷತಾ ದಿನವೆಂದು (World Food Safety Day) ಗುರುತಿಸಲಾಗಿದೆ.
ಆಹಾರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಬೇಕೆಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2018ರಲ್ಲಿ ಕೈಗೊಳ್ಳಲಾಗಿತ್ತು. ಆಹಾರದಿಂದ ಉಂಟಾಗುವ ಅನಾರೋಗ್ಯಗಳನ್ನು ತಡೆಯುವ, ನಿರ್ವಹಿಸುವ ಮತ್ತು ಪತ್ತೆ ಮಾಡುವ ಉದ್ದೇಶ ಇದರ ಹಿಂದಿದೆ. ವಿಶ್ವ ಸಂಸ್ಥೆಯ ಅಡಿಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳು ಜಂಟಿಯಾಗಿ ಈ ದಿನವನ್ನು ಆಚರಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷ ಹೊರಡಿಸಿರುವ ಘೋಷವಾಕ್ಯ- ಆಹಾರ ಸುರಕ್ಷತೆ: ಅನಿರೀಕ್ಷಿತಗಳಿಗೆ ಸಜ್ಜಾಗಿ. ಆಹಾರ ಸುರಕ್ಷತೆಯ ಹೆಚ್ಚಿನ ಕ್ರಮಗಳು ಪಾಲನೆಯಾಗುವುದು ಅಥವಾ ಉಲ್ಲಂಘನೆ ಆಗುವುದು ಅಡುಗೆಮನೆಗಳಲ್ಲೇ. ಆದರೆ ಅದಕ್ಕೂ ಮುನ್ನ, ಬೆಳೆಯುವ ಹಂತದಿಂದ ಹಿಡಿದು, ದಾಸ್ತಾನು ಮಾಡುವವರೆಗೂ ಆಹಾರ ಸುರಕ್ಷಾ ನಿಯಮದ ಉಲ್ಲಂಘನೆಗಳು ಆಗುತ್ತಲೇ ಇರುತ್ತವೆ. ಅತಿಯಾದ ಕೀಟನಾಶಕಗಳ ಬಳಕೆ, ಕಳೆನಾಶಕಗಳನ್ನು ಸುರಿಯುವುದು, ಸಾವಯವ ಪದ್ಧತಿಗಳ ಅವನತಿ, ದಾಸ್ತಾನು ಮಾಡುವಾಗಲೂ ಬಳಕೆಯಾಗುವ ರಾಸಾಯನಿಕಗಳು, ಕಲಬೆರಕೆಗಳು- ಇವೆಲ್ಲ ಆಹಾರದ ಸುರಕ್ಷಾ ಗುಣಮಟ್ಟ ಕುಸಿಯುವಂತೆ ಮಾಡುತ್ತವೆ. ಆದಾಗ್ಯೂ ಕೆಲಮಟ್ಟಿಗೆ ಅವುಗಳನ್ನು ಬಳಕೆಯೋಗ್ಯ ಮಾಡುವುದು ಬಳಕೆದಾರರ ಕೈಯಲ್ಲೂ ಇದೆ. ಇಲ್ಲಿವೆ ಕೆಲವು ಸರಳ ಕ್ರಮಗಳು-

Food Cleaning Tips Kannada

ಸ್ವಚ್ಛತೆಗೆ ಆದ್ಯತೆ

ಹಣ್ಣು, ತರಕಾರಿಗಳನ್ನು ಉಪಯೋಗಿಸುವ ಮುನ್ನ ಕೆಲಕಾಲ ನೆನೆಸಿ, ಸ್ವಚ್ಛವಾಗಿ ತೊಳೆಯಿರಿ. ಅಡುಗೆಮನೆಯ ನೈರ್ಮಲ್ಯ ಮತ್ತು ಬಳಸುವ ಉಪಕರಣಗಳ ಸ್ವಚ್ಛತೆಗೂ ಆದ್ಯತೆ ನೀಡಿ. ಆಹಾರ ಬೇಯಿಸುವ ಕೈಗಳು ಸಹ ಶುಚಿಯಾಗಿರಲಿ.

ಹಸಿ ಆಹಾರಗಳ ಬಗ್ಗೆ ಎಚ್ಚರ

ಮೊಟ್ಟೆ ಮತ್ತು ಮಾಂಸಾಹಾರಗಳನ್ನೂ ಎಂದಿಗೂ ಹಸಿಯಾಗಿ ಸೇವಿಸಬೇಡಿ. ಸಾದಾ ಹಾಲಿನ ಬದಲು ಪ್ಯಾಶ್ಚರೈಸ್‌ ಮಾಡಿದ ಹಾಲು ಬಳಕೆಗೆ ಹೆಚ್ಚು ಸುರಕ್ಷಿತ.

ಕೀಟಗಳು

ಅಡುಗೆ ಮನೆಯಲ್ಲಿ ಇಲಿ, ಜಿರಳೆ, ಕೀಟಗಳೆಲ್ಲ ಇದ್ದಷ್ಟೂ ಆಹಾರದ ಸುರಕ್ಷತೆ ನಿಭಾಯಿಸುವುದು ಕಷ್ಟ. ಹಾಗಾಗಿ ಇಂಥ ಪ್ರಾಣಿಗಳಿಂದ ಪಾಕಗೃಹವನ್ನು ಮುಕ್ತಗೊಳಿಸಿಕೊಳ್ಳಿ.

ICMR Dietary Guidelines

ತಾಜಾತನ

ಆಹಾರ ಬಿಸಿಯಾಗಿರುವಾಗಲೇ ಸೇವಿಸಿದರೆ ರುಚಿ, ಆರೋಗ್ಯ ಎರಡನ್ನೂ ಸಾಧಿಸಬಹುದು. ಇದಕ್ಕಾಗಿ ಮನೆಯ ಎಲ್ಲರೂ ಒಟ್ಟಿಗೆ ಊಟ ಮಾಡುವ ಅಭ್ಯಾಸ ಜಾರಿಗೆ ತನ್ನಿ. ಇದರಿಂದ ಮನೆಮಂದಿಯ ಬಾಂಧವ್ಯವೂ ಹೆಚ್ಚುತ್ತದೆ.

ಉಳಿಕೆ ಬಗ್ಗೆ ಜಾಗ್ರತೆ

ಉಳಿಕೆ ಆಹಾರವನ್ನು ಪ್ಲಾಸ್ಟಿಕ್‌ ಬದಲಿಗೆ ಲೋಹ ಅಥವಾ ಗಾಜಿನ ಪಾತ್ರೆಗಳಲ್ಲಿ ಶೀಥಲೀಕರಿಸಿ. ಉಳಿಕೆ ಆಹಾರವನ್ನು ಸೇವಿಸುವಾಗ, ಫ್ರಿಜ್‌ನಿಂದ ತೆಗೆದು ಚೆನ್ನಾಗಿ ಹಬೆಯಾಡುವಂತೆ ಬಿಸಿಮಾಡಿ. ಒಮ್ಮೆ ಬಿಸಿ ಮಾಡಿದ ಉಳಿಕೆ ಆಹಾರವನ್ನು ಮತ್ತೆ ಫ್ರಿಜ್‌ನಲ್ಲಿಟ್ಟು ಸೇವಿಸಬೇಡಿ, ಉಳಿದರೆ ಬಿಸಾಡಿ.

Drinking Water Before Meals

ನೀರು

ಕುಡಿಯುವ ನೀರನ್ನು ಕುದಿಸಿ ಕುಡಿಯಿರಿ ಅಥವಾ ಆಧುನಿಕ ಪ್ಯೂರಿಫೈಯರ್‌ ಬಳಸಿ. ನಿತ್ಯವೂ ನೀರಿನ ಬಾಟಲಿಗಳನ್ನು ಬಳಸುವ ಅಭ್ಯಾಸವಿದ್ದರೆ, ಅವುಗಳನ್ನು ಆಗಾಗ ತೊಳೆದು ಶುಚಿ ಮಾಡಿ.

Continue Reading

ಆರೋಗ್ಯ

Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

ತರಕಾರಿ, ಮಾಂಸ ಇತ್ಯಾದಿಗಳ ಅಡುಗೆ ಮಾಡಿದಾಗಲೂ ಬೇಕಾಗುವ ಆಹಾರ ಸಾಮಗ್ರಿಗಳ ಪೈಕಿ ಈ ಬೇಳೆಕಾಳುಗಳೂ (Pulses Benefits) ಇರುತ್ತವೆ. ನಮ್ಮ ಅಡುಗೆಯ ರುಚಿ ಹೆಚ್ಚಿಸಿ, ಪೋಷಕಾಂಶವನ್ನೂ ನಮ್ಮ ದೇಹಕ್ಕೆ ನೀಡುವ ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಆಹಾರಗಳ ಪೈಕಿ ಇವು ಪ್ರಮುಖವಾದವು. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯೂಟದವರೆಗೆ ಹಲವು ಬಗೆಯಲ್ಲಿ ಇಡೀ ದಿನ ಒಂದಲ್ಲ ಒಂದು ರೂಪದಲ್ಲಿ ಇವು ಹೊಟ್ಟೆಗಿಳಿಯುತ್ತವೆ. ಆದರೆ ಎಲ್ಲ ಪೋಷಕಾಂಶಗಳೂ ನಮ್ಮ ಹೊಟ್ಟೆ ಸೇರುತ್ತವೆಯೆ?

VISTARANEWS.COM


on

pulses benefits
Koo

ದಾಲ್‌ ಅಥವಾ ಬೇಳೆಕಾಳುಗಳು (Pulses Benefits) ನಮ್ಮ ನಿತ್ಯ ಬಳಕೆಯಲ್ಲಿ ಬಳಸಲ್ಪಡುವ ಆಹಾರಗಳು. ತರಕಾರಿ ಇಲ್ಲದಿದ್ದರೂ, ಬೇಳೆಕಾಳುಗಳಲ್ಲಿಯೇ ಏನಾದರೊಂದು ರುಚಿಕರ ಅಡುಗೆ ಮಾಡಿಕೊಂಡು ತಿನ್ನಲು ಸಾಧ್ಯವಿದೆ. ತರಕಾರಿ, ಮಾಂಸ ಇತ್ಯಾದಿಗಳ ಅಡುಗೆ ಮಾಡಿದಾಗಲೂ ಬೇಕಾಗುವ ಆಹಾರ ಸಾಮಗ್ರಿಗಳ ಪೈಕಿ ಈ ಬೇಳೆಕಾಳುಗಳೂ ಇರುತ್ತವೆ. ನಮ್ಮ ಅಡುಗೆಯ ರುಚಿ ಹೆಚ್ಚಿಸಿ, ಪೋಷಕಾಂಶವನ್ನೂ ನಮ್ಮ ದೇಹಕ್ಕೆ ನೀಡುವ ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಆಹಾರಗಳ ಪೈಕಿ ಇವು ಪ್ರಮುಖವಾದವು. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯೂಟದವರೆಗೆ ಹಲವು ಬಗೆಯಲ್ಲಿ ಇಡೀ ದಿನ ಒಂದಲ್ಲ ಒಂದು ರೂಪದಲ್ಲಿ ಇವು ಹೊಟ್ಟೆಗಿಳಿಯುತ್ತವೆ. ಐಸಿಎಂಆರ್‌ (ICMR) ವರದಿಯ ಪ್ರಕಾರ, ಈ ಬೇಳೆಕಾಳುಗಳನ್ನು ನಾವು ಅತಿಯಾಗಿ ಬೇಯಿಸುವ ಮೂಲಕ ಇದರಲ್ಲಿರುವ ಪೋಷಕಾಂಶಗಳನ್ನು ಬಹುತೇಕ ಮಂದಿ ನಷ್ಟ ಮಾಡುವುದೇ ಹೆಚ್ಚು ಎಂದಿದೆ. ಅಗತ್ಯಕ್ಕಿಂತ ಹೆಚ್ಚು ಕಾಲ ಬೇಳೆಯನ್ನು ಬೇಯಿಸುವುದರಿಂದ ಇದರಲ್ಲಿರುವ ಪೋಷಕಾಂಶಗಳ್ನು ನಷ್ಟಮಾಡುತ್ತದೆ. ಮುಖ್ಯವಾಗಿ ಲೈಸೀನ್‌ ಎಂಬ ಅಂಶ ನಷ್ಟವಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ನೀರನ್ನು ಹಾಕಿ ಬೇಯಿಸುವುದೂ ಕೂಡಾ ಒಳ್ಲೆಯದಲ್ಲ. ಬನ್ನಿ, ಬೇಳೆಕಾಳುಗಳನ್ನು ಅತಿಯಾಗಿ ಬೇಯಿಸುವುದರಿಂದಾಗುವ ಅಡ್ಡ ಪರಿಣಾಮಗಳೇನು ಎಂಬುದನ್ನು ನೋಡೋಣ.

Portrait of a Lentil Pulse

ಪ್ರೊಟೀನ್‌ ನಷ್ಟವಾಗುತ್ತವೆ

ಬೇಳೆಕಾಳುಗಳಲ್ಲಿ ಪ್ರೊಟೀನ್‌ಗಳು ಹೆಚ್ಚಿವೆ. ಇವು ನಮ್ಮ ದೇಹದಲ್ಲಿ ಬಿಲ್ಡಿಂಗ್‌ ಬ್ಲಾಕ್‌ನಂತೆ ಕೆಲಸ ಮಾಡುತ್ತವೆ. ಆದರೆ ಇದು ಸರಿಯಾಗಿ ಇದ್ದಾಗ, ಪೂರೈಕೆಯಾದಾಗ ಮಾತ್ರ ಹೀಗಾಗುತ್ತದೆ. ಇಲ್ಲವಾದರೆ, ಅತಿಯಾಗಿ ಬೇಳೆಗಳು ಬೆಂದಾಗ ಇದರಲ್ಲಿರುವ ಪ್ರೊಟೀನ್‌ನ ರಚನೆಯಲ್ಲೇ ವ್ಯತ್ಯಾಸವಾಗಿ ಇದರ ಪರಿಣಾಮದಲ್ಲೂ ವ್ಯತ್ಯಾಸವಾಗುತ್ತದೆ.

ವಿಟಮಿನ್‌ಗಳೂ ನಷ್ಟವಾಗುತ್ತವೆ

ಬೇಳೆಕಾಳುಗಳಲ್ಲಿ ವಿಟಮಿನ್‌ ಬಿ ಹಾಗೂ ಸಿ ಹೇರಳವಾಗಿ ಇದ್ದು, ಇವು ಉಷ್ಣತೆಗೆ ಒಳಪಟ್ಟರೆ ಅವುಗಳ ನಿಜವಾದ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಹಾಗಾಗಿ, ಒಂದು ಮಿತಿಗಿಂತ ಹೆಚ್ಚು ಬೇಯಿಸುವುದರಿಂದ ಇವುಗಳೂ ಕೂಡಾ ನಷ್ಟವೇ ಆಗುತ್ತವೆ. ಇವುಗಳ ನಿಜವಾದ ಲಾಭ ಸಿಗುವುದಿಲ್ಲ.

Husked Brown Gram Pulse

ರುಚಿಯ ಮೇಲೆ ಪರಿಣಾಮ ಬೀರುತ್ತವೆ

ಅತಿಯಾಗಿ ಬೇಳೆಕಾಳುಗಳ್ನು ಬೇಯಿಸಿದಾಗ ಅದು ಖಂಡಿತವಾಗಿ ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ಬೆಂದಾಗ ಅವು ಕರಿದಂತಾಗಿ ಬೇಳೆಯ ಸ್ವಾದ ಕೆಡುತ್ತದೆ.

ಫೈಟಿಕ್‌ ಆಸಿಡ್‌ನ ಅಂಶ ಇಳಿಕೆಯಾಗುತ್ತದೆ

ಐಸಿಎಂಆರ್‌ ಮಾರ್ಗಸೂಚಿಯಲ್ಲಿ ವಿವರಿಸಿರುವಂತೆ ಬೇಳೆಕಾಳುಗಳನ್ನು ಸರಿಯಾದ ಹದದಲ್ಲಿ ಬೇಯಿಸಿದಾಗ ಅದರಲ್ಲಿರುವ ಫೈಟಿಕ್‌ ಆಸಿಡ್‌ನ ಅಂಶ ಇಳಿಕೆಯಾಗುತ್ತದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ಬೆಂದರೆ, ಫೈಟಿಕ್‌ ಆಸಿಡ್‌ ಹೆಚ್ಚಾಗಿ ವಿರುದ್ಧ ಪರಿಣಾಮಗಳನ್ನು ನೀಡಬಹುದು. ಇದರಿಂದ ಕಬ್ಬಿಣಾಂಶ, ಝಿಂಕ್‌, ಮೆಗ್ನೀಶಿಯಂ ಹಾಗೂ ಕ್ಯಾಲ್ಶಿಯಂನ ಹೀರುವಿಕೆಯ ಶಕ್ತಿಯೂ ಕಡಿಮೆಯಾಗುತ್ತದೆ. ಹೆಚ್ಚಾದ ಫೈಟಿಕ್‌ ಆಸಿಡ್‌ನಿಂದ ಗ್ಯಾಸ್‌ ಹಾಗೂ ಹೊಟ್ಟೆಯುಬ್ಬರದ ಸಮಸ್ಯೆಗಳೂ ಬರಬಹುದು.

ಇದನ್ನೂ ಓದಿ: Uric Acid: ಆರೋಗ್ಯ ಹದಗೆಡಿಸುವ ಯೂರಿಕ್ ಆಮ್ಲವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನಗಳಿವು

ಬೇಯಿಸುವ ಸರಿಯಾದ ಕ್ರಮ

ಹಾಗಾದರೆ, ಬೇಳೆಕಾಳುಗಳನ್ನು ಬೇಯಿಸುವ ಸರಿಯಾದ ಕ್ರಮ ಯಾವುದು ಎಂದರೆ ಅದಕ್ಕೆ ಐಸಿಎಂಆರ್‌ ಹೀಗೆ ವಿವರಿಸುತ್ತದೆ. ಬೇಳೆಕಾಳುಗಳನ್ನು ಮೊದಲು ಸರಿಯಾಗಿ ಎರಡು ಮೂರು ಬಾರಿ ನೀರಿನಲ್ಲಿ ತೊಳೆಯಿರಿ. ತೊಳೆದ ನೀರು ಸ್ವಚ್ಛವಾಗಿ ಕಾಣುವಂತಾದರೆ, ಸರಿಯಾಗಿ ತೊಳೆದಿದ್ದೀರಿ ಎಂದರ್ಥ. ಈ ಬೇಳೆಕಾಳುಗಳನ್ನು ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆ ಹಾಕಿ. ಹೀಗೆ ನೆನೆ ಹಾಕುವುದರಿಂದ ಇದು ಸರಿಯಾಗಿ ಜೀರ್ಣವಾಗುತ್ತವೆ. ಜೊತೆಗೆ ಹೊಟ್ಟೆಯುಬ್ಬರ ಹಾಗೂ ಗ್ಯಾಸ್‌ ಆಗುವ ಸಮಸ್ಯೆಯೂ ತಪ್ಪುತ್ತದೆ. ಅಗತ್ಯವಿದ್ದಷ್ಟೇ ನೀರು ಹಾಕಿ ಬೇಯಿಸಿ. ಪ್ರೆಷರ್‌ ಕುಕ್ಕರ್‌ನಲ್ಲಿಯೂ ಬೇಯಿಸಬಹುದು. ಪಾತ್ರೆಯ ಮುಚ್ಚಳ ಮುಚ್ಚಿ ಬೇಯಿಸಿ. ಆಗ ಹೆಚ್ಚಾದ ನೀರನ್ನು ಚೆಲ್ಲುವ ಪ್ರಮೇಯ ಬರುವುದಿಲ್ಲ. ಬೇಯಿಸುವಾಗ ಒಂದೆರಡು ಹನಿ ಎಣ್ಣೆ ಹಾಕಿ. ಉಪ್ಪು ಹಾಕಬೇಡಿ. ಇದರಿಂದ ಬೇಳೆಕಾಳುಗಳಲ್ಲಿರುವ ಪೋಷಕಾಂಶಗಳು ಸರಿಯಾಗಿ ಹೊರಬಂದು, ನಮ್ಮ ದೇಹಕ್ಕೆ ಸೇರಲು ತಯಾರಾಗುತ್ತದೆ.

Continue Reading

ಆರೋಗ್ಯ

Vijayanagara News: ತಾಯಿ, ಶಿಶು ಮರಣ ಪ್ರಕರಣ ಮರುಕಳಿಸಿದರೆ ಶಿಸ್ತು ಕ್ರಮ: ಡಿಸಿ ದಿವಾಕರ್

Vijayanagara News: ಆರೋಗ್ಯ ಇಲಾಖೆಯ ಆಡಳಿತ ವ್ಯೆದ್ಯರ ನಿರ್ಲಕ್ಷ್ಯ ಅಥವಾ ಆಸ್ಪತ್ರೆಯ ಯಾವುದಾದರು ಸಿಬ್ಬಂದಿಯ ನಿರ್ಲಕ್ಷ್ಯತೆಯಿಂದ ತಾಯಿ ಅಥವಾ ಮಗು ಸಾವಿಗೀಡಾದ ಬಗ್ಗೆ ದೂರು ಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಎಫ್‌ಐಆರ್ ದಾಖಲಿಸಿ ಸೇವೆಯಿಂದ ಅಮಾನತು ಮಾಡುವುದಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Disciplinary action if cases of mother and child deaths recur DC Diwakar warns
Koo

ಹೊಸಪೇಟೆ: ಆರೋಗ್ಯ ಇಲಾಖೆಯ ಆಡಳಿತ ವ್ಯೆದ್ಯರ ನಿರ್ಲಕ್ಷ್ಯ ಅಥವಾ ಆಸ್ಪತ್ರೆಯ ಯಾವುದಾದರು ಸಿಬ್ಬಂದಿಯ ನಿರ್ಲಕ್ಷ್ಯತೆಯಿಂದ ತಾಯಿ ಅಥವಾ ಮಗು ಸಾವಿಗೀಡಾದ ಬಗ್ಗೆ ದೂರು ಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಎಫ್‌ಐಆರ್ ದಾಖಲಿಸಿ ಸೇವೆಯಿಂದ ಅಮಾನತು ಮಾಡುವುದಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ (Vijayanagara News) ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ತಾಯಿ ಮತ್ತು ಶಿಶು ಮರಣ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: World Environment Day: ಬೆಂಗಳೂರಿನಲ್ಲಿ ಎನ್‌ಸಿಸಿ ತಂಡದಿಂದ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮ

ತಾಯಿ ಮತ್ತು ಶಿಶು ಮರಣ ತಡೆಗೆ ವಿಶೇಷ ಗಮನ ಹರಿಸಬೇಕು. ತಾಯಿ ಮತ್ತು ಶಿಶು ಮರಣಕ್ಕೆ ವೈದ್ಯರು ಅಥವಾ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನುವ ದೂರು ಬಾರದ ಹಾಗೆ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು. ಪ್ರತಿ ದಿನ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಆರೈಕೆಯ ಬಗ್ಗೆ ಗಮನ ಹರಿಸಬೇಕು. ಶುಶ್ರೂಷಣಾ ಸಿಬ್ಬಂದಿ ರೋಗಿಗಳೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳಬೇಕು. ಚಿಕಿತ್ಸೆ ಕೊಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು. ಬೇರೊಬ್ಬರನ್ನು ಹೊಣೆಯಾಗಿಸಬಾರದು. ಸಕಾಲದಲ್ಲಿ ಸಿಗಬೇಕಾಗಿದ್ದ ಆರೋಗ್ಯ ಸೇವೆ ಸಿಗದ ಕಾರಣಕ್ಕೆ ತಾಯಿ ಮರಣ, ಶಿಶುಮರಣ ಪ್ರಕರಣಗಳು ದಾಖಲಾಗುತ್ತಿವೆ ಎನ್ನುವ ದೂರುಗಳು ಬಂದಲ್ಲಿ ಮತ್ತು ತಾಯಿ ಮತ್ತು ಶಿಶು ಮರಣ ಪ್ರಕರಣಗಳು ಮತ್ತೆ ಮರುಕಳಿಸಿದಲ್ಲಿ ಯಾವುದೇ ಮುಲಾಜಿಲ್ಲದೇ ತನಿಖೆಗೊಳಪಡಿಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಂತವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Uric Acid: ಆರೋಗ್ಯ ಹದಗೆಡಿಸುವ ಯೂರಿಕ್ ಆಮ್ಲವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನಗಳಿವು

ಸರ್ಕಾರಿ ಆಸ್ಪತ್ರೆಗಳಿಗೆ ಬಹುತೇಕ ಕೃಷಿ ಕಾರ್ಮಿಕರು, ಕಡು ಬಡವರೇ ಹೆಚ್ಚಾಗಿ ಬರುತ್ತಾರೆ. ವೈದ್ಯರೇ ದೇವರೆಂದು ಭಾವಿಸಿ ಅವರು ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿಯ ಮೇಲೆ ಪ್ರೀತಿ ವಿಶ್ವಾಸ ಇಟ್ಟುಕೊಂಡಿರುತ್ತಾರೆ. ವೈದ್ಯರು ಏನೇ ಹೇಳಿದರು ಅವರು ಅದಕ್ಕೆ ಸಮ್ಮತಿ ಸೂಚಿಸುತ್ತಾರೆ. ನನ್ನ ಮಗಳು ಆರಾಮಿರಬೇಕು. ಹೆರಿಗೆ ಸುಸೂತ್ರವಾಗಿ ನಡೆದು ಕೂಸು ಬದುಕಬೇಕು ಎಂಬುದು ಪ್ರತಿಯೊಬ್ಬ ತಂದೆ ತಾಯಿ ಪಾಲಕರ ಆಸೆ ಆಗಿರುತ್ತದೆ. ಆಸ್ಪತ್ರೆಗೆ ಯಾರೆ ಬರಲಿ ಅವರೊಂದಿಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ನಡೆದುಕೊಳ್ಳಬೇಕು. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು.

ಹೆರಿಗೆಯಂತಹ ಸಂದರ್ಭದಲ್ಲಿ ವಿಳಂಬಕ್ಕೆ ಆವಕಾಶ ಮಾಡಿಕೊಡದೇ ಸಕಾಲಕ್ಕೆ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಎಂಬುದು ಗೊತ್ತಾದಾಗ ವಿಳಂಬ ಮಾಡದೇ ಮೇಲಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಕೂಡಲೇ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರು ವೈದ್ಯರು ಮತ್ತು ಸಿಬ್ಬಂದಿಯ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಹಾಗೆ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: Money Guide: ಈ ಯೋಜನೆಯಲ್ಲಿ ಪ್ರತಿ ತಿಂಗಳು 3,475 ರೂ. ಹೂಡಿಕೆ ಮಾಡಿ 1 ಲಕ್ಷ ರೂ. ಮಾಸಿಕ ಪಿಂಚಣಿ ಪಡೆಯಿರಿ

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು, ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳು, ಆಡಳಿತ ವ್ಯೆದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಹಾಜರಿದ್ದರು.

Continue Reading

ಆರೋಗ್ಯ

Uric Acid: ಆರೋಗ್ಯ ಹದಗೆಡಿಸುವ ಯೂರಿಕ್ ಆಮ್ಲವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನಗಳಿವು

ಯೂರಿಕ್‌ ಆಮ್ಲ (Uric Acid) ನಮ್ಮ ಶರೀರಕ್ಕೆ ಬೇಕು. ಆದರೆ ಅದೇ ಹೆಚ್ಚಾದರೆ ಸಮಸ್ಯೆಗಳಿಗೆ ಮೂಲವಾಗುತ್ತದೆ. ಕೀಲುಗಳಲ್ಲಿ, ಗಂಟುಗಳಲ್ಲಿ ನೋವು, ಸಂಧಿವಾತ, ಹೃದಯದ ತೊಂದರೆಗಳು, ಮೂತ್ರಪಿಂಡದಲ್ಲಿ ಕಲ್ಲಿನಂಥ ಸಮಸ್ಯೆಗಳಿಗೆ ಎಡೆಯಾಗುತ್ತದೆ. ಯೂರಿಕ್‌ ಆಮ್ಲವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ವಿಧಾನಗಳಿವು.

VISTARANEWS.COM


on

Uric Acid
Koo

ನಾವು ತಿಂದಿದ್ದೆಲ್ಲಾ ಪಚನವಾಗಿ, ದೇಹದೊಳಗೆ ಹೀರಲ್ಪಡುತ್ತವೆ ಎಂದು ತಿಳಿದಿದ್ದರೆ… ತಪ್ಪು! ಏನೇ ತಿಂದರೂ ಅದರಲ್ಲಿ ದೇಹಕ್ಕೆ ಬೇಡದ್ದು ತ್ಯಾಜ್ಯವಾಗಲೇಬೇಕು. ಅಂಥ ತ್ಯಾಜ್ಯಗಳಲ್ಲಿ ಯೂರಿಕ್‌ ಆಮ್ಲ ಸಹ ಒಂದು. ಅದರಲ್ಲೂ ಪ್ಯೂರಿನ್‌ಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಿದಾಗ ನಡೆಯುವ ವಿಘಟನೆಯಲ್ಲಿ ಯೂರಿಕ್‌ ಆಮ್ಲ (Uric Acid) ಪ್ರಧಾನವಾಗಿ ಉತ್ಪತ್ತಿಯಾಗುತ್ತದೆ. ಈ ತ್ಯಾಜ್ಯವು ರಕ್ತದೊಂದಿಗೆ ಸೇರಿ, ಮೂತ್ರಪಿಂಡಗಳ ಮೂಲಕ ದೇಹದಿಂದ ಹೊರಗೆ ಹೋಗುತ್ತದೆ. ಆದರೆ ಈ ಯೂರಿಕ್‌ ಆಮ್ಲದ ತ್ಯಾಜ್ಯದ ಪ್ರಮಾಣ ಅತಿಯಾದರೆ ಗೌಟ್‌ ಆರ್ಥರೈಟಿಸ್‌ಗೆ ಮೂಲವಾಗುತ್ತದೆ. ಯೂರಿಕ್‌ ಆಮ್ಲ ನಮ್ಮ ಶರೀರಕ್ಕೆ ಬೇಕು. ಆದರೆ ಅದೇ ಹೆಚ್ಚಾದರೆ ಏನಾಗುತ್ತದೆ ದೇಹದಲ್ಲಿ? ಆರಂಭದ ದಿನಗಳಲ್ಲಿ ದೇಹದಲ್ಲಿ ಯೂರಿಕ್‌ ಆಮ್ಲದ ಸಾಂದ್ರತೆ ಹೆಚ್ಚಿದ್ದರೆ ಸಮಸ್ಯೆ ಎನಿಸುವುದಿಲ್ಲ. ಇದೇ ಮುಂದುವರಿದರೆ ಕ್ರಮೇಣ ಸಮಸ್ಯೆಗಳಿಗೆ ಮೂಲವಾಗುತ್ತದೆ. ಕೀಲುಗಳಲ್ಲಿ, ಗಂಟುಗಳಲ್ಲಿ ನೋವು, ಸಂಧಿವಾತ, ಹೃದಯದ ತೊಂದರೆಗಳು, ಮೂತ್ರಪಿಂಡದಲ್ಲಿ ಕಲ್ಲು ಮುಂತಾದ ಸಮಸ್ಯೆಗಳಿಗೆ ಎಡೆಯಾಗುತ್ತದೆ. ಹಾಗಾಗಿ ದೇಹ ಆರೋಗ್ಯವಾಗಿರಬೇಕೆಂದರೆ ಶರೀರದಲ್ಲಿ ತ್ಯಾಜ್ಯ ಉಳಿಯಬಾರದು.

Uric Acid

ಲಕ್ಷಣಗಳೇನು?

ಅದನ್ನು ರಕ್ತ ಪರೀಕ್ಷೆಯಿಂದ ಪತ್ತೆ ಮಾಡಬಹುದು. ಕೀಲುಗಳಲ್ಲಿ ಬಿಗಿಯುವ ಅನುಭವವಿದ್ದರೆ, ಮೂತ್ರ ವಿಸರ್ಜನೆಯ ವೇಳೆಗೆ ನೋವಿದ್ದರೆ ವೈದ್ಯರನ್ನು ಕಾಣುವುದು ಸೂಕ್ತ. ಕೆಂಬಣ್ಣದ ಮಾಂಸ, ಶೆಲ್‌ ಫಿಶ್‌ನಂಥ ಮೀನುಗಳು, ಚಿಕನ್‌, ಅಂಗಾಂಗಗಳ ಮಾಂಸ ಇತ್ಯಾದಿಗಳಲ್ಲಿ ಪ್ಯೂರಿನ್‌ ಅಂಶ ಅತಿ ಹೆಚ್ಚು. ಇವುಗಳ ವಿಘಟನೆಯಲ್ಲಿ ಹೆಚ್ಚಿನ ಪ್ರಮಾಣದ ಯೂರಿಕ್‌ ಆಮ್ಲ ಬಿಡುಗಡೆಯಾಗುತ್ತದೆ. ಹಾಗಾಗಿ ಪ್ಯೂರಿನ್‌ ಹೆಚ್ಚಿರುವಂಥ ಯಾವುದೇ ಆಹಾರಗಳಿಂದ ದೂರ ಇರಿ ಅಥವಾ ಕಡಿಮೆ ಮಾಡಿ. ಜೊತೆಗೆ, ದೇಹದಲ್ಲಿನ ಎಲ್ಲಾ ತ್ಯಾಜ್ಯಗಳನ್ನು ಹೊರಹಾಕುವಲ್ಲಿ ನೀರು ಮಹತ್ವದ ಪಾತ್ರ ವಹಿಸುತ್ತದೆ. ದೇಹಕ್ಕೆ ಸಾಕಷ್ಟು ನೀರು ದೊರೆಯುವುದರಿಂದ ಮೂತ್ರಪಿಂಡಗಳ ಕೆಲಸವೂ ಸುಗಮವಾಗುತ್ತದೆ. ತ್ಯಾಜ್ಯವೂ ಹೊರಹೋಗುತ್ತದೆ.

ಆಯುರ್ವೇದ ಸಹಕಾರಿ

ಕೆಲವು ಸರಳ ಕ್ರಮಗಳು ಮತ್ತು ಆಯುರ್ವೇದದ ಉಪಾಯಗಳು ಯೂರಿಕ್‌ ಆಮ್ಲ ಕಡಿಮೆ ಮಾಡುವಲ್ಲಿ ನೆರವಾಗುತ್ತವೆ. ಉದಾ, ತ್ರಿಫಲ ಚೂರ್ಣ ಎಂದೇ ಕರೆಸಿಕೊಳ್ಳುವ ನೆಲ್ಲಿಕಾಯಿ, ತಾರೆಕಾಯಿ ಮತ್ತು ಅಳಲೆಕಾಯಿ ಎಂಬ ಮೂರು ಫಲಗಳ ಮಿಶ್ರಣವು, ದೇಹದ ಚಯಾಪಚಯ ಹೆಚ್ಚಿಸಿ, ತ್ಯಾಜ್ಯವನ್ನು ಹೊರಗೆಸೆಯುವಲ್ಲಿ ಸಾಮರ್ಥವಾಗಿ ಕೆಲಸ ಮಾಡುತ್ತದೆ. ಇದಲ್ಲದೆ, ಅಮೃತಬಳ್ಳಿ, ಬೇವು ಮುಂತಾದ ಮೂಲಿಕೆಗಳ ಕೂಡಾ ಯೂರಿಕ್‌ ಆಮ್ಲದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಉಪಯುಕ್ತ ಎನಿಸಿವೆ.

Drinking warm water with a little lemon juice on an empty stomach in the morning is beneficial for health Benefits Of Lemon Water

ನಿಂಬೆರಸದ ನೀರು

ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕುವಲ್ಲಿ ನಿಂಬೆ ನೀರು ಸಹ ಒಳ್ಳೆಯ ಉಪಾಯ. ಬೆಳಗಿನ ಹೊತ್ತು ಇದನ್ನು ಡಿಟಾಕ್ಸ್‌ ಪೇಯದಂತೆ ಸೇವಿಸಬಹುದು. ಯೂರಿಕ್‌ ಆಮ್ಲ ಹೆಚ್ಚಿದ್ದರಿಂದ ಕಿಡ್ನಿಯಲ್ಲಿ ಉಂಟಾಗುವ ಹರಳುಗಳನ್ನು ಕರಗಿಸಲು ಇದು ಸಹಕಾರಿ. ಬೆಚ್ಚಗಿನ ನೀರಿಗೆ ಕೆಲವು ಹನಿ ನಿಂಬೆರಸವನ್ನು ಸೇರಿಸಿ ಬೆಳಗಿನ ಹೊತ್ತು ಕುಡಿಯುವುದು ಸಹಾಯವಾಗಬಹುದು.

Soaking mentha seeds in water at night and drinking it on an empty stomach in the morning is beneficial Benefits Of Fenugreek Water

ಮೆಂತೆ ನೀರು

ರಾತ್ರಿ ಮಲಗುವಾಗ ಒಂದು ಚಮಚ ಮೆಂತೆಯನ್ನು ನೀರಿಗೆ ಹಾಕಿ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ಇದರಿಂದ ಯೂರಿಕ್‌ ಆಮ್ಲದ ಮಟ್ಟವನ್ನು ಸುಧಾರಿಸುವುದರ ಜೊತೆಗೆ, ಇದರಿಂದಾಗುವ ಉರಿಯೂತವನ್ನೂ ಕಡಿಮೆ ಮಾಡಬಹುದು.

Apple cider vinegar for Fungal Infection Home Remedies

ಆಪಲ್‌ ಸೈಡರ್‌ ವಿನೆಗರ್

ಒಂದಿಡೀ ಗ್ಲಾಸ್‌ ನೀರಿಗೆ ಒಂದು ದೊಡ್ಡ ಚಮಚ ಆಪಲ್‌ ಸೈಡರ್‌ ವಿನೇಗರ್‌ ಮಿಶ್ರ ಮಾಡಿಕೊಂಡು ಬೆಳಗಿನ ಹೊತ್ತು ಸೇವಿಸಬಹುದು. ಇದು ಕೀಲುಗಳಲ್ಲಿ ಜಮೆಯಾಗಿರುವ ಯೂರಿಕ್‌ ಆಮ್ಲವನ್ನು ಕರಗಿಸಲು ಸಹಾಯ ಮಾಡುತ್ತದೆ. ಇದಕ್ಕಿರುವ ಉತ್ಕರ್ಷಣ ನಿರೋಧದ ಗುಣದಿಂದ ಕೀಲುಗಳಲ್ಲಿರುವ ನೋವು ಸಹ ಕಡಿಮೆಯಾಗುತ್ತದೆ.

Ginger tea

ಶುಂಠಿ ಕಷಾಯ

ಶುಂಠಿಯನ್ನು ನೀರಲ್ಲಿ ಕುದಿಸಿ, ಶೋಧಿಸಿ ಬೆಳಗಿನ ಹೊತ್ತು ಕುಡಿಯಬಹುದು. ಇದರಿಂದ ದೇಹದಲ್ಲಿನ ಉರಿಯೂತ ಕಡಿಮೆಯಾಗುತ್ತದೆ. ಜೊತೆಗೆ, ಜಮೆಯಾಗಿ ಕುಳಿತ ಯೂರಿಕ್‌ ಆಮ್ಲವನ್ನೂ ಹೊರಹಾಕುತ್ತದೆ ಶುಂಠಿ. ಇವುಗಳ ಜೊತೆಗೆ, ನಮ್ಮ ಪ್ರತಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

Continue Reading
Advertisement
T20 World Cup
ಪ್ರಮುಖ ಸುದ್ದಿ7 mins ago

T20 World Cup : ಪಾಕಿಸ್ತಾನ ತಂಡಕ್ಕೆ ಕರಾಳ ದಿನ; ಮಾಜಿ ಆಟಗಾರರಿಂದ ಟೀಕೆ

World Food Safety Day
ಆರೋಗ್ಯ12 mins ago

World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

NDA Meeting
ದೇಶ17 mins ago

NDA Meeting: ಎನ್‌ಡಿಎ ಸಭೆಯಲ್ಲಿ ಮೋದಿಯ ಪಾದ ಮುಟ್ಟಿ ನಮಸ್ಕರಿಸಲು ಹೋದ ನಿತೀಶ್ ಕುಮಾರ್! ವಿಡಿಯೊ ನೋಡಿ

Viral Video
ವೈರಲ್ ನ್ಯೂಸ್18 mins ago

Viral Video: ಮಕ್ಕಳು ಆಟವಾಡ್ತಿದ್ದ ವಾಟರ್‌ ಪಾರ್ಕ್‌ಗೆ ಏಕಾಏಕಿ ನುಗ್ಗಿದ ಬುಲ್ಡೋಜರ್‌; ಆಮೇಲೆ ನಡೆದಿದ್ದೇ ಬೇರೆ- ವಿಡಿಯೋ ನೋಡಿ

Valmiki Corporation Scam
ಕರ್ನಾಟಕ22 mins ago

Valmiki Corporation Scam: ಬಿ. ನಾಗೇಂದ್ರ ನೀಡಿದ ರಾಜೀನಾಮೆ ಅಂಗೀಕಾರ ಮಾಡಿದ ರಾಜ್ಯಪಾಲರು

Heera Mandi Fashion
ಫ್ಯಾಷನ್30 mins ago

Heera Mandi Fashion: ರೀಕ್ರಿಯೆಟ್‌ ಆಗುತ್ತಿದೆ ಹೀರಾಮಂಡಿ ಲುಕ್‌!

Chandan Shetty divorce main Reason children
ಸ್ಯಾಂಡಲ್ ವುಡ್39 mins ago

Niveditha Gowda: ಮಗು ವಿಚಾರಕ್ಕೆ ಮುನಿಸು; ಒಂದೇ ಕಾರಲ್ಲಿ ಬಂದು ಡಿವೋರ್ಸ್‌ ಅರ್ಜಿ ಸಲ್ಲಿಸಿದ ಚಂದನ್‌-ನಿವೇದಿತಾ!

Pawan Kalyan
ರಾಜಕೀಯ46 mins ago

Pawan Kalyan: ಪವನ್ ಕಲ್ಯಾಣ್ ಗಾಳಿಯಲ್ಲ ಬಿರುಗಾಳಿ ಎಂದ ಮೋದಿ! ಮೋದಿ ಇರುವವರೆಗೆ ದೇಶ ತಲೆಬಾಗುವುದಿಲ್ಲ ಎಂದ ಪವನ್‌!

Sigandur launch
ಶಿವಮೊಗ್ಗ58 mins ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Money Guide
ಮನಿ ಗೈಡ್1 hour ago

Money Guide: ಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 weeks ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌