Pre Menstrual Syndrome: ಮುಟ್ಟಿನ ಸಂದರ್ಭದ ಮಾನಸಿಕ ತುಮುಲಗಳಿಗೆ ಸರಳ ಪರಿಹಾರಗಳು! - Vistara News

ಆರೋಗ್ಯ

Pre Menstrual Syndrome: ಮುಟ್ಟಿನ ಸಂದರ್ಭದ ಮಾನಸಿಕ ತುಮುಲಗಳಿಗೆ ಸರಳ ಪರಿಹಾರಗಳು!

VISTARANEWS.COM


on

periods
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರಿ-ಮೆನ್‌ಸ್ಟ್ರುವಲ್‌ ಸಿಂಡ್ರೋಮ್‌ ಬಹಳಷ್ಟು ಮಹಿಳೆಯರನ್ನು ಕಾಡುವ ಸಮಸ್ಯೆ. ಮುಟ್ಟಿನ ಅಥವಾ ಋತುಚಕ್ರದ ಮೊದಲು ಭಾವನೆಗಳ ಏರಿಳಿತ ಇದು. ಬಹಳಷ್ಟು ಮಹಿಳೆಯರಲ್ಲಿ ಮುಟ್ಟಿನ ದಿನಗಳಲ್ಲಿ ಮಾನಸಿಕ ತುಮುಲಗಳು, ಕೋಪ, ಅಸಹನೆ ಜಾಸ್ತಿಯಾದರೆ, ಇನ್ನೂ ಕೆಲವರಲ್ಲಿ ಮುಟ್ಟಿಗೂ ಸುಮಾರು 10-12 ದಿನಗಳ ಮೊದಲೇ ಈ ಭಾವನೆಗಳ ವೈಪರೀತ್ಯ (Pre Menstrual Syndrome) ಆರಂಭವಾಗುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ಒತ್ತಡ ಹೆಚ್ಚಾಗುವುದು, ರೇಗುವುದು, ಕಿರಿಕಿರಿ ಎನಿಸಿವುದು, ಕೆಲಸದಲ್ಲಿ ಆಲಸ್ಯ ಇತ್ಯಾದಿ ತೊಂದರೆಗಳನ್ನು ಬಿಟ್ಟೂ ಬಿಡದಂತೆ ಕಾಡುತ್ತವೆ. ಇದು ಸಾಮಾನ್ಯ ಸಮಸ್ಯೆಯೇ ಆದರೂ, ಮಹಿಳೆಯರ ನಿತ್ಯ ಆಗುಹೋಗುಗಳ ಮೇಲೆ ಬಹಳಷ್ಟು ಪರಿಣಾಮ ಬೀರುವ ಅಂಶವಾಗಿದೆ. ಸ್ತನದಲ್ಲಿ ನೋವು, ಕೆಳಹೊಟ್ಟೆ ಹಾಗೂ ಸೊಂಟದ ಸುತ್ತ ಸೆಳೆತ, ನೋವು, ಹೊಟ್ಟೆ ಉಬ್ಬರಿಸಿದಂತಾಗುವುದು, ತಲೆಸುತ್ತು, ವಿಪರೀತ ಸುಸ್ತು ಇತ್ಯಾದಿಗಳೆಲ್ಲ ಮುಟ್ಟಿನ ಸಂದರ್ಭ ಸಾಮಾನ್ಯ ಕೂಡಾ.

ಆದರೆ, ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕಿಕೊಳ್ಳದಿದ್ದರೆ, ಪ್ರತೀ ತಿಂಗಳ ಆಸುಪಾಸಿನಲ್ಲೂ ಕಷ್ಟಪಡುವುದನ್ನೇ ಕಣ್ಣಿಗೊತ್ತಿಕೊಂಡು ಬದುಕುವುದು ಕಷ್ಟ. ಅದರ ಪರಿಹಾರಕ್ಕೆ ಪ್ರಯತ್ನ ಬಹಳ ಮುಖ್ಯ. ನಾವು ನಿತ್ಯ ಉಣ್ಣುವ ಆಹಾರದಲ್ಲೇ ಹಲವು ತಪ್ಪುಗಳನ್ನು, ನಮ್ಮ ದೇಹಕ್ಕೆ ಹೊಂದಿಕೊಳ್ಳದ ವಿಚಾರಗಳೂ ಘಟಿಸುತ್ತಿರುತ್ತದೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಂಡು ಹುಡುಕಿಕೊಂಡು ಆಹಾರದಲ್ ಕೊಂಚ ಬದಲಾವಣೆ ಮಾಡಿಕೊಂಡರೂ ಕೂಡಾ ಗಮನಾರ್ಹ ಸುಧಾರಣೆ ಕಂಡುಬರುವುದುಂಟು. ಹಾಗಾಗಿ ಸೂಕ್ಷ್ಮವಾಗಿ ನಮ್ಮ ದೇಹವನ್ನು ನಾವು ಗಮನಿಸುವುದೂ ಮುಖ್ಯವೇ ಆಗಿದೆ.

menstrual leave for students

ಮುಟ್ಟಿನ ದಿನಗಳು ಹತ್ತಿರ ಬಂದಂತೆ ಅತಿಯಾಗಿ ಕುರುಕಲು, ಚಿಪ್ಸ್‌ ತಿನ್ನಬೇಕೆಂಬ ಬಯಕೆ ಕೆಲವರಿಗೆ ಆಗುವುದುಂಟು. ಚಿಪ್ಸ್‌ನಲ್ಲಿರುವ ಅತಿಯಾದ ಉಪ್ಪು, ದೇಹದಲ್ಲಿ ನೀರು ಸಂಗ್ರಹವಾಗುವಂತೆ ಮಾಡುತ್ತದೆ. ಹಾಗಾಗಿ, ಮುಟ್ಟು ಹತ್ತಿರ ಬರುತ್ತಿದ್ದಂತೆ ಉಪ್ಪಿನಂಶವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಇಂತಹ ತೊಂದರೆಗಳಲ್ಲಿ ಕೊಂಚ ಬದಲಾವಣೆ ಕಾಣಬಹುದು.

ಕೇವಲ ಇಷ್ಟೇ ಅಲ್ಲ. ಇನ್ನೂ ಕೆಲವು ವಿಚಾರಗಳನ್ನು ನಾವು ನಮ್ಮ ದೇಹಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಪರಿಗಣಿಸಿದರೆ, ಈ ತೊಂದರೆಯಿಂದ ಕೊಂಚ ನೆಮ್ಮದಿ ಕಾಣಬಹುದು. ಹಾಗಾಗಿ ಮಹಿಳೆಯರು, ತಮ್ಮ ಭಾವನೆಗಳಲ್ಲಿ ಹತೋಟಿ ಹೊಂದಲು, ನೋವುಗಳಿಂದ ಮುಕ್ತರಾಗಲು, ಕೆಲವು ಸರಳ ಸೂತ್ರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಮಹಿಳೆಯರ ಆರೋಗ್ಯಕ್ಕೆ ಇವು ಅಗತ್ಯ ಕೂಡಾ. ಅವುಗಳ ವಿವರ ಇಲ್ಲಿದೆ.

1 ಮಹಿಳೆಯರು ಕ್ಯಾಲ್ಶಿಯಂನಿಂದ ಶ್ರೀಮಂತವಾಗಿರುವ ಆಹಾರವನ್ನು ಹಾಗೂ ವಿಟಮಿನ್‌ ಡಿಯನ್ನು ತೆಗೆದುಕೊಳ್ಳುವುದರಿಂದ ಮುಟ್ಟಿನ ಸಮಯದ ಭಾವನಾತ್ಮಕ ಏರುಪೇರುಗಳು ಸಮತೋಲನಕ್ಕೆ ಬರುತ್ತವೆ ಎನ್ನುತ್ತದೆ ಬಹಳಷ್ಟು ಅಧ್ಯಯನಗಳು. ಪ್ರತಿದಿನವೂ ಮಹಿಳೆಯರು, ಕೊಬ್ಬು ಕಡಿಮೆಯಿರುವ ಹಾಲು, ಮೊಸರು, ಪನೀರ್‌ ಸೋಯಾ ಹಾಲನ್ನು ಮಹಿಳೆಯರು ಸೇವಿಸಬೇಕು.

Menstrual Hygiene Day

ಇದನ್ನೂ ಓದಿ: ಮೊದಲ ಬಾರಿಗೆ ಮುಟ್ಟಿನ ಬಗ್ಗೆ ತಿಳಿದುಕೊಂಡ ಕ್ಷಣ ವಿವರಿಸಿದ ದೀಪಿಕಾ ಪಡುಕೋಣೆ

2. ಸಮತೋಲನವಾದ ಆಹಾರ ಬಹಳ ಮುಖ್ಯ. ಎಲ್ಲ ಬಣ್ಣದ ತರಕಾರಿಗಳು, ನಾರಿನಂಶ ಹೆಚ್ಚಿರುವ ಆಹಾರ, ಹಣ್ಣುಗಳು, ಧಾನ್ಯಗಳು, ಮೊಳಕೆ ಕಾಳುಗಳು ಸೇರಿದಂಥ ಪೋಷಕಾಂಶಯುಕ್ತ ಆಹಾರವನ್ನು ಈ ಸಮಸ್ಯೆ ಇರುವ ಮಂದಿ ಸೇವಿಸಬೇಕು. ಪ್ರತಿನಿತ್ಯ ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

3. ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿ. ಇಸ್ಟ್ರೋಜನ್‌ ಹಾಗೂ ಪ್ರೊಜೆಸ್ಟೆರಾನ್‌ ಹಾರ್ಮೋನಿನ ಮಟ್ಟ ಏರುಪೇರಾಗುವುದರಿಂದಲೇ ಮಹಿಳೆಯರಲ್ಲಿ ಬಾವನೆಯ ಏರಿಳಿತಗಳೂ ತೀವ್ರವಾಗುತ್ತದೆ. ಇದು ಸಿಹಿತಿಂಡಿಯನ್ನು ಹೆಚ್ಚು ಹೆಚ್ಚು ತಿನ್ನಬೇಕೆಂಬ ಬಯಕೆಯನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ಆದಷ್ಟೂ ಸಕ್ಕರೆಯಿಂದ ದೂರವಿರಿ.

4. ಎಂದಿಗೂ ಬೆಳಗಿನ ಉಪಹಾರವನ್ನು ಬಿಡಬೇಡಿ. ಹಾರ್ಮೋನಿನ ಏರುಪೇರು ಹಸಿವನ್ನೂ ಏರುಪೇರಾಗಿಸುತ್ತದೆ. ಆದರೆ, ಎಂದಿಗೂ ಬೆಳಗಿನ ಉಪಹಾರವನ್ನು ಬಿಡಬೇಡಿ. ಉಪಹಾರ ಬಿಟ್ಟರೆ ರಕ್ತದಲ್ಲಿನ ಸಕ್ಕರೆಯ ಮಟ್ಟವೂ ಏರುಪೇರಾಗುತ್ತದೆ.

ಇದನ್ನೂ ಓದಿ: Menstrual Hygiene day: ಮುಟ್ಟು ಕಳಂಕವಲ್ಲ, ಕೊಳಕೂ ಅಲ್ಲ; ಮೌಢ್ಯ ಬಿಟ್ಟು ಸ್ವಚ್ಛತೆಯತ್ತ ಗಮನಕೊಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

World Milk Day: ಹಾಲಿಗೊಂದು ದಿನವೇ ಬೇಕೆಂದಿಲ್ಲ, ವರ್ಷವಿಡೀ ಆಚರಿಸಬಹುದು!

ಹಾಲು ಸರ್ವರಿಗೂ ಸಲ್ಲುವಂಥ ಆಹಾರ. ವಿಶ್ವದ ಎಲ್ಲ ದೇಶಗಳಲ್ಲಿ ಇದನ್ನು ಒಂದಿಲ್ಲೊಂದು ರೀತಿಯಲ್ಲಿ ನಿಶ್ಚಿತವಾಗಿ ಬಳಸುತ್ತಾರೆ. ಹಾಗಾಗಿಯೇ ಜೂನ್‌ ತಿಂಗಳ ಮೊದಲ ದಿನವನ್ನು ವಿಶ್ವ ಕ್ಷೀರ ದಿನವೆಂದು ಗುರುತಿಸಿದ್ದಾರೆ. ಆದರೆ ಅದೇ ದಿನಕ್ಕೆ ಕಾಯಬೇಕಿಲ್ಲ, ವರ್ಷವಿಡೀ ಕ್ಷೀರ ದಿನವನ್ನು (World Milk Day) ಆಚರಿಸಬಹುದು.

VISTARANEWS.COM


on

World Milk Day
Koo

ಹಾಲನ್ನೇಕೆ ಕುಡಿಯಬೇಕು ಎಂದು ಕೇಳಿದರೆ ಯಾರಾದರೂ ನಕ್ಕಾರು. ಹಾಗಂತ ನಗುವವರಿಗೆಲ್ಲ ಹಾಲಿನ ಸದ್ಗುಣಗಳು ಗೊತ್ತಿರುತ್ತವೆ ಎಂದಲ್ಲ. ಆದರೆ ಹಾಲು ಪೌಷ್ಟಿಕವಾದ ಆಹಾರ ಎಂಬುದನ್ನಂತೂ ಎಲ್ಲರೂ ಕೇಳಿ ತಿಳಿದಿರುತ್ತಾರೆ. ಏನಿವೆ ಅಂಥ ಪೌಷ್ಟಿಕಾಂಶಗಳು ಹಾಲಿನಲ್ಲಿ? ಎಲ್ಲರೂ ಹಾಲನ್ನು ಕುಡಿಯುವುದಕ್ಕೆ ಮಾತ್ರ ಬಳಸುತ್ತಾರೆಂದಿಲ್ಲ. ಮೊಸರು, ಬೆಣ್ಣೆ, ತುಪ್ಪ, ಚೀಸ್‌, ಪನೀರ್‌ಗಳನ್ನು ಮಾಡಬಹುದು. ಹಾಲಿನಲ್ಲಿ ಸಿಹಿಗಳನ್ನು ತಯಾರಿಸಬಹುದು, ಶೇಖ್‌ ಮತ್ತು ಸ್ಮೂದಿಗಳಿಗೆ ಬಳಸಬಹುದು, ಸೀರಿಯಲ್‌ಗಳಿಗೆ ಹಾಕಿ ತಿನ್ನಬಹುದು. ಅಂತೂ ಹಾಲು ಎಲ್ಲರಿಗೂ ಎಲ್ಲ ಹೊತ್ತಿಗೂ ಸಲ್ಲುವಂಥದ್ದು. ಹಾಗಾಗಿ ಜೂನ್‌ ತಿಂಗಳ ಮೊದಲ ದಿನವನ್ನು ವಿಶ್ವ ಕ್ಷೀರ ದಿನವೆಂದು ಗುರುತಿಸಿದ್ದರೂ, ನಾವು ವರ್ಷವಿಡೀ ಕ್ಷೀರ ದಿನವನ್ನು (World Milk Day) ಆಚರಿಸಬಹುದು.

glass of milk

ಕ್ಯಾಲ್ಶಿಯಂ ಹೇರಳ

ನಮ್ಮ ಮೂಳೆಗಳು, ಹಲ್ಲುಗಳೆಲ್ಲ ಬಲಯುತವಾಗಿ ಇರಬೇಕೆಂದರೆ ಕ್ಯಾಲ್ಶಿಯಂ ಬೇಕು. ಕೇವಲ ಅದಕ್ಕಷ್ಟೇ ಅಲ್ಲ, ನಾವು ಮಾಡುವ ಪ್ರತಿಯೊಂದು ದೈಹಿಕ ಚಟುವಟಿಕೆಗೂ ಕ್ಯಾಲ್ಶಿಯಂ ಬಲದ ಅಗತ್ಯವಿದೆ. ಮೂಳೆಗಳು ಟೊಳ್ಳಾಗದಂತೆ, ಅವುಗಳ ಸಾಂದ್ರತೆ ಕಾಪಾಡಿಕೊಳ್ಳುವುದಕ್ಕೂ ಇದು ಬೇಕು. ಹಾಗಾಗಿ ದಿನಕ್ಕೆ 150 ಎಂ.ಎಲ್‌. ಗ್ಲಾಸ್‌ನಲ್ಲಿ ಮೂರು ಗ್ಲಾಸ್‌ ಹಾಲು ನಮ್ಮ ನಿತ್ಯದ ಕ್ಯಾಲ್ಶಿಯಂ ಅಗತ್ಯವನ್ನು ಪೂರೈಸುತ್ತದೆ.

ಉತ್ಕೃಷ್ಟ ಪ್ರೊಟೀನ್‌

ಹಾಲಿನಲ್ಲಿ ಉತ್ಕೃಷ್ಟ ಗುಣಮಟ್ಟದ ಪ್ರೊಟೀನ್‌ ದೊರೆಯುತ್ತದೆ. ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿಗೆ ಇಂಥ ಪರಿಪೂರ್ಣ ಪ್ರೊಟೀನ್‌ ಅಗತ್ಯ. ಅದರಲ್ಲೂ ಬೆಳೆಯುವ ಮಕ್ಕಳ ದೇಹಕ್ಕೆ ಆವಶ್ಯಕವಾದ ಪ್ರೊಟೀನ್‌ಗಳು ಹಾಲಿನಲ್ಲಿವೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ, ಋತುಬಂಧದ ಆಚೀಚೆ ಇರುವ ಮಹಿಳೆಯರಿಗೆ, ವೃದ್ಧರಿಗೆ- ಹೀಗೆ ಎಲ್ಲ ವಯಸ್ಸಿನವರಿಗೂ ಅವರವರ ಅಗತ್ಯಗಳನ್ನು ಪೂರೈಸುವಂಥ ಪೋಷಕಾಂಶಗಳು ಹಾಲಿನಲ್ಲಿವೆ.

Fresh Milk

ವಿಟಮಿನ್‌, ಖನಿಜಗಳು

ಬಹಳಷ್ಟು ರೀತಿಯ ಜೀವಸತ್ವಗಳು ಮತ್ತು ಖನಿಜಗಳು ಹಾಲಿನಲ್ಲಿವೆ. ವಿಟಮಿನ್‌ ಡಿ, ವಿಟಮಿನ್‌ ಬಿ12, ರೈಬೊಪ್ಲೇವಿನ್‌, ಫಾಸ್ಫರಸ್‌, ಪೊಟಾಶಿಯಂ, ಸೆಲೆನಿಯಂ, ಮೆಗ್ನೀಶಿಯಂ ಮುಂತಾದ ಸತ್ವಗಳು ಇದರಲ್ಲಿವೆ. ಇವೆಲ್ಲವೂ ನಮ್ಮ ಶರೀರದ ಶಕ್ತಿಯನ್ನು ಸುಸ್ಥಿರವಾಗಿ ಕಾಯ್ದುಕೊಳ್ಳುವುದಕ್ಕೆ ಬೇಕಾದಂಥವು. ಅದಲ್ಲದೆ, ನರಗಳ ಕ್ಷಮತೆ ಕಾಯ್ದುಕೊಳ್ಳುವುದಕ್ಕೆ ಮತ್ತು ಶರೀರದ ಚಯಾಪಚಯ ನಿರ್ವಹಣೆಯಲ್ಲೂ ಇವು ಪ್ರಮುಖವಾಗಿವೆ.

ಸತ್ವಗಳು ಇಷ್ಟೇ ಅಲ್ಲ

ಒಂದು ಲೋಟ ಹಸುವಿನ ಹಾಲಿನಿಂದ 145 ಕ್ಯಾಲರಿ ಶಕ್ತಿ ದೊರೆಯುತ್ತದೆ. ಅದರಲ್ಲಿ ಸುಮಾರು 8 ಗ್ರಾಂ ಪ್ರೊಟೀನ್‌, ಅಷ್ಟೇ ಪ್ರಮಾಣದ ಕೊಬ್ಬು, ಶೇ. 28ರಷ್ಟು ಕ್ಯಾಲ್ಶಿಯಂ, 24% ವಿಟಮಿನ್‌ ಡಿ, 26% ವಿಟಮಿನ್‌ ಬಿ2, 18% ವಿಟಮಿನ್‌ ಬಿ12, 22% ಫಾಸ್ಫರಸ್‌, 13% ಸೆಲೆನಿಯಂ ಇದರಲ್ಲಿ ಪ್ರಮುಖವಾಗಿ ದೊರೆಯುತ್ತದೆ. ಇದಲ್ಲದೆ, ವಿಟಮಿನ್‌ ಎ, ಸತು ಮತ್ತು ಥಿಯಮಿನ್‌ ಸಹ ಇವೆ.

Food Tips Kannada adulterated food effect health

ಎಲ್ಲದಕ್ಕೂ ಸಲ್ಲುತ್ತದೆ

ಕಾಫಿ, ಚಹಾ, ಮಿಲ್ಕ್‌ಶೇಖ್‌, ಸ್ಮೂದಿ, ಸೀರಿಯಲ್‌ಗಳು, ಪಾಯಸ, ಖೀರು, ಹಲ್ವಾಗಳು, ಕೇಕ್‌ಗಳು, ಗ್ರೇವಿಗಳು ಮುಂತಾದ ಬಹಳಷ್ಟು ರೀತಿಯ ಅಡುಗೆಗಳಿಗೆ ಹಾಲು ನೇರವಾಗಿ ಸಲ್ಲುತ್ತದೆ. ಅದಲ್ಲದೆ, ಮೊಸರು, ಚೀಸ್‌, ಪನೀರ್‌, ಬೆಣ್ಣೆ-ತುಪ್ಪಗಳನ್ನು ಇನ್ನೂ ಹೆಚ್ಚಿನ ಆಹಾರಗಳಿಗೆ ಪೂರಕವಾಗಿ ಬಳಸಬಹುದು. ಹಾಗೆಂದು ಹಾಲಿನ ಕೊಬ್ಬಿನಿಂದ ಮಾಡಿದ ಪದಾರ್ಥಗಳನ್ನು ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಬಹುದು.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಜಾಗ್ರತೆ ಮಾಡಿ

ಹಾಲು ಸರ್ವರಿಗೂ ಸಲ್ಲುವಂಥ ಆಹಾರ. ಅನಾರೋಗ್ಯದ ಸಂದರ್ಭಗಳಲ್ಲೂ ಕೆಲವೊಮ್ಮೆ ಹಾಲಿನ ಸೇವನೆ ಪ್ರಯೊಜನ ನೀಡಬಹುದು. ಆದರೆ ಅತಿ ಸ್ಥೂಲ ದೇಹಿಗಳು ಮತ್ತು ಕೆಲವು ಆರೋಗ್ಯ ಸಮಸ್ಯೆ ಇರುವವರು ಎಚ್ಚರ ವಹಿಸುವುದು ಅಗತ್ಯ. ಈಗಾಗಲೇ ಬೊಜ್ಜಿನ ಸಮಸ್ಯೆ ಇದ್ದವರು ಕಡಿಮೆ ಕೊಬ್ಬಿನ ಹಾಲನ್ನು ಸೇವಿಸುವುದು ಉತ್ತಮ. ಏರಿದ ಕೊಲೆಸ್ಟ್ರಾಲ್‌, ಹೃದಯ ರೋಗಗಳನ್ನು ಹೊಂದಿದವರು ಸಹ ಕೊಬ್ಬು ರಹಿತ ಹಾಲು ಕುಡಿಯುವುದು ಒಳ್ಳೆಯ ಆಯ್ಕೆ. ಲ್ಯಾಕ್ಟೋಸ್‌ ಅಲರ್ಜಿ ಇರುವವರಿಗೆ ಹಾಲು ಆಗಿ ಬರುವುದಿಲ್ಲ. ಒಂದೊಮ್ಮೆ ಹಾಲು ಸೇವಿಸಿದರೂ ಹೊಟ್ಟೆ ನೋವು, ಹೊಟ್ಟೆಯುಬ್ಬರ, ಡಯರಿಯಾದಂಥ ತೊಂದರೆಗಳು ಬಾಧಿಸಬಹುದು.

Continue Reading

ಆರೋಗ್ಯ

Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಯಾವುದೇ ಆಹಾರ ತಯಾರಿಸುವ ಸಂದರ್ಭ ಚಿಟಿಕೆ ಏಲಕ್ಕಿಯನ್ನು ಅದಕ್ಕೆ ಹಾಕಿದರೂ ಸಾಕು, ಅದು ಏಲಕ್ಕಿಯ ಘಮವನ್ನು ಪಡೆದುಕೊಂಡುಬಿಡುತ್ತದೆ. ಅದಕ್ಕಾಗಿಯೇ, ಇದು ಸಿಹಿತಿಂಡಿಗಳಿಗೆ ಹೇಳಿ ಮಾಡಿಸಿದ ಮಸಾಲೆ. ಒಂದು ಚಿಟಿಕೆ ಏಲಕ್ಕಿ ಹಾಕಿದ ಪಾಯಸದ ರುಚಿಯೇ ಬೇರೆ. ಆದರೆ, ಏಲಕ್ಕಿ, ಕೇವಲ ತನ್ನ ಘಮದಲ್ಲಷ್ಟೇ ಶ್ರೀಮಂತಿಕೆ ಮೆರೆದಿಲ್ಲ. ಗುಣದಲ್ಲೂ ಏಲಕ್ಕಿ ಶ್ರೀಮಂತಿಕೆಯಲ್ಲಿ ಯಾವುದಕ್ಕೂ (cardamom benefits) ಕಡಿಮೆಯಿಲ್ಲ.

VISTARANEWS.COM


on

Cardamom Benefits
Koo

ಮಸಾಲೆಗಳ ರಾಣಿ ಎಂದೇ ಹೆಸರಾದ ಏಲಕ್ಕಿಗೆ ಒಂದು ಅಪರೂಪದ ಘಮವಿದೆ. ತನ್ನ ಘಮದ ಮೂಲಕ ಯಾವುದೇ ಆಹಾರವನ್ನು ಕ್ಷಣ ಮಾತ್ರದಲ್ಲಿ ತನ್ನತನವನ್ನು ಅದಕ್ಕೆ ಕೊಡುವ ಶಕ್ತಿಯಿದೆ. ಯಾವುದೇ ಆಹಾರ ತಯಾರಿಸುವ ಸಂದರ್ಭ ಚಿಟಿಕೆ ಏಲಕ್ಕಿಯನ್ನು ಅದಕ್ಕೆ ಹಾಕಿದರೂ ಸಾಕು, ಅದು ಏಲಕ್ಕಿಯ ಘಮವನ್ನು ಪಡೆದುಕೊಂಡುಬಿಡುತ್ತದೆ. ಅದಕ್ಕಾಗಿಯೇ, ಇದು ಸಿಹಿತಿಂಡಿಗಳಿಗೆ ಹೇಳಿ ಮಾಡಿಸಿದ ಮಸಾಲೆ. ಒಂದು ಚಿಟಿಕೆ ಏಲಕ್ಕಿ ಹಾಕಿದ ಪಾಯಸದ ರುಚಿಯೇ ಬೇರೆ. ಆದರೆ, ಏಲಕ್ಕಿ, ಕೇವಲ ತನ್ನ ಘಮದಲ್ಲಷ್ಟೇ ಶ್ರೀಮಂತಿಕೆ ಮೆರೆದಿಲ್ಲ. ಗುಣದಲ್ಲೂ ಏಲಕ್ಕಿ ಶ್ರೀಮಂತಿಕೆಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಬನ್ನಿ, ಏಲಕ್ಕಿಯ ಆರೋಗ್ಯಕರ ಲಾಭಗಳನ್ನು (cardamom benefits) ತಿಳಿಯೋಣ.

Blood Pressure Regulation Cucumber Benefits

ರಕ್ತದೊತ್ತಡಕ್ಕೆ ಪರಿಹಾರ

ಅಧಿಕ ರಕ್ತದೊತ್ತಡ ಇರುವ ಮಂದಿಗೆ ಏಲಕ್ಕಿಯಿಂದ ಲಾಭಗಳಿವೆ. ಒಂದು ಸಂಶೋಧನೆಯ ಪ್ರಕಾರ, ಅಧಿಕ ರಕ್ತದೊತ್ತಡ ಸಮಸ್ಯೆ ಆರಂಭವಾದ 20 ಮಂದಿಗೆ ಪ್ರತಿದಿನ ಮೂರು ಗ್ರಾಂಗಳಷ್ಟು ಏಲಕ್ಕಿ ಪುಡಿ ಪ್ರತಿಯೊಬ್ಬರೂ ಸೇವಿಸದಾಗ 12 ವಾರಗಳಲ್ಲೇ ಅವರ ರಕ್ತದೊತ್ತಡ ಸಮತೋಲನಕ್ಕೆ ಬಂದಿರುವುದು ಸಾಬೀತಾಗಿದೆ. ಇದಕ್ಕೆ ಕಾರಣ, ಏಲಕ್ಕಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು.

ealthy internal organs of human digestive system / highlighted blue organs

ಜೀರ್ಣಕಾರಿ ಗುಣಗಳಿವೆ

ಏಲಕ್ಕಿಯಲ್ಲಿ ಜೀರ್ಣಕಾರಿ ಗುಣಗಳಿವೆ. ಏಲಕ್ಕಿಯಲ್ಲಿರುವ ಮೆಂಥೋನ್‌ ಎಂಬ ಎಣ್ಣೆಯಂಶಕ್ಕೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಗುಣವಿದೆ. ಇದು ಅಸಿಡಿಟಿ, ಅಜೀರ್ಣ ಹಾಗೂ ಹೊಟ್ಟೆ ನೋವಿನಂಥ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಇದಕ್ಕೆ ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಗುಣವಿದೆ.

ವಾಂತಿಗೆ ಪರಿಹಾರ

ಏಲಕ್ಕಿಯಲ್ಲಿ ವಾಂತಿ ಹಾಗೂ ತಲೆಸುತ್ತಿನಂಥ ಸಮಸ್ಯೆಗೆ ಪರಿಹಾರವಿದೆ. ವಾಂತಿಯಾದ ಮೇಲೆ ಆಗುವ ಗಂಟಲಿನ ಹುಳಿ ರುಚಿಯಂಥ ಕಿರಿಕಿರಿ ಗಂಟಲು ಕೆರೆತದ ಭಾವಕ್ಕೆ ಏಲಕ್ಕಿ ಒಳ್ಳೆಯ ಪರಿಹಾರ. ಅಷ್ಟೇ ಅಲ್ಲ, ಪ್ರಯಾಣದಲ್ಲಿ ಆಗುವ ವಾಂತಿಯಂಥ ಸಮಸ್ಯೆಗೂ ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

Woman Suffering from Toothache Benefits Of Drinking Green Tea

ಹಲ್ಲು ನೋವು ನಿವಾರಣೆ

ಏಲಕ್ಕಿಯಲ್ಲಿ ಆಂಟಿ ಸೆಪ್ಟಿಕ್‌ ಹಾಗೂ ಆಂಟಿ ಮೈಕ್ರೋಬಿಯಲ್‌ ಗುಣಗಳಿವೆ. ಇದರಿಂದಾಗಿ ಇದು ಹಲ್ಲಿನ ಸಮಸ್ಯೆಗಳಿಗೆ ಒಳ್ಳೆಯದು. ಏಲಕ್ಕಿಯಲ್ಲಿರುವ ಎಣ್ಣೆಯ ಅಂಶ ಹಲ್ಲು ನೋವಿಗೆ ಒಳ್ಳೆಯ ಔಷಧಿ. ಯಾಕೆಂದರೆ ಇದರಲ್ಲಿರುವ ಆಂಟಿ ಸೆಪ್ಟಿಕ್‌ ಗುಣವು ಕ್ಯಾವಿಟಿಗೆ ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಹಲ್ಲು ಹುಳುಕಾಗುವುದನ್ನೂ ಇದು ತಡೆಯುತ್ತದೆ.

ಶೀತ ಬಾಧೆ ನಿವಾರಣೆ

ಶೀತ ಹಾಗೂ ನೆಗಡಿಗೂ ಏಲಕ್ಕಿ ಒಳ್ಳೆಯದು ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು. ಏಲಕ್ಕಿಯಲ್ಲಿರುವ ವಿಶೇಷ ಗುಣವು ಕಫ ಕಟ್ಟುವುದನ್ನು ತಡೆಯುತ್ತದೆ. ಇದು ಶ್ವಾಸಕೋಶದಲ್ಲಿ ರಕ್ತ ಪರಿಚಲನೆಯನ್ನು ಚುರುಕಾಗಿಸುತ್ತದೆ. ಇದರಿಂದ ಉಸಿರಾಟದ ಗತಿಯೂ ಚುರುಕಾಗುತ್ತದೆ.

ಅತ್ಯುತ್ತಮ ಡಿಟಾಕ್ಸ್‌

ಏಲಕ್ಕಿ ಅತ್ಯುತ್ತಮ ಡಿಟಾಕ್ಸ್‌ ಕೂಡಾ ಹೌದು. ಇದು ರಕ್ತದಲ್ಲಿರುವ ವಿಷಕಾರಿ ಅಂಶವನ್ನು ದೇಹದಿಂದ ಹೊರಕ್ಕೆ ಕಳುಹಿಸುತ್ತದೆ. ಏಲಕ್ಕಿಯಲ್ಲಿರುವ ಏಸೆನ್ಶಿಯಲ್ ಆಯಿಲ್‌ ಹಾಗೂ ಫೈಟೋಕೆಮಿಕಲ್‌ಗಳಲ್ಲಿ ಡಿಟಾಕ್ಸ್‌ ಗುಣವಿದೆ.

ನಿಕೋಟಿನ್‌ನಿಂದ ಹೊರ ಬರಲು ಮದ್ದು

ನಿಕೋಟಿನ್‌ ಚಟಕ್ಕೆ ಬಿದ್ದ ಮಂದಿ, ಇದರಿಂದ ಹೊರಬರುವ ಇಚ್ಛೆಯಿದ್ದರೆ ನೈಸರ್ಗಿಕ ಉಪಾಯ ಎಂದರೆ ಅದು ಏಲಕ್ಕಿ. ಏಲಕ್ಕಿಯನ್ನು ದಿನಕ್ಕೆ ನಾಲ್ಕೈದು ಬಾರಿ ಜಗಿಯುವ ಮೂಲಕ ನಿಕೋಟಿನ್‌ ಬಯಕೆಯನ್ನು ನಿಧಾನವಾಗಿ ಹತ್ತಿಕ್ಕಬಹುದು. ಖಿನ್ನತೆಯಂತ ಸಮಸ್ಯೆ ಇರುವ ಮಂದಿಯ ನಿದ್ದೆಗೂ ಇದು ಒಳ್ಳೆಯದು.

Women with Breast Cancer Prevention Benefits Of Drinking Green Tea

ಕ್ಯಾನ್ಸರ್‌ ವಿರೋಧಿ ಗುಣ

ಏಲಕ್ಕಿಯಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳೂ ಇವೆ. ದೇಹದಲ್ಲಿರುವ ಕ್ಯಾನ್ಸರ್‌ ವಿರೋಧಿ ಕಿಣ್ವಗಳನ್ನು ಮತ್ತಷ್ಟು ಚುರುಕಾಗಿಸುವ ಮೂಲಕ ಏಲಕ್ಕಿ ಕ್ಯಾನ್ಸರ್‌ನಂತಹ ಕಾಯಿಲೆಯ ವಿರುದ್ಧವೂ ಹೋರಾಡುವ ಗುಣ ಹೊಂದಿದೆ. ಇತ್ತೀಚೆಗೆ ನಡೆದ ಅಧ್ಯಯನವೊಂದು ಇದನ್ನು ಪುಷ್ಠೀಕರಿಸುತ್ತದೆ. ಕ್ಯಾನ್ಸರ್‌ನ ಗಡ್ಡೆಯ ಅಂಗಾಂಶಗಳನ್ನು ಕೊಲ್ಲಲು ಏಲಕ್ಕಿಯಲ್ಲಿರುವ ವಿಶೇಷ ಗುಣವು ಸಹಾಯ ಮಾಡುತ್ತದೆ.

ಇದನ್ನೂ ಓದಿ: Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

ಏನು ಮಾಡಬಹುದು?

ಏಲಕ್ಕಿಯ ಈ ಆರೋಗ್ಯಕರ ಗುಣಗಳನ್ನು ಪಡೆಯಲು ನಾವು ಏನು ಮಾಡಬಹುದು, ಹೇಗೆ ಇದನ್ನು ಸೇವಿಸಬೇಕು ಎಂಬುದು ಈಗ ಬಹುತೇಕರಲ್ಲಿರುವ ಪ್ರಶ್ನೆ. ಏಲಕ್ಕಿಯ ಒಂದೆರಡು ಬೀಜಗಳನು ಬಾಯಲ್ಲಿ ಹಾಕಿ ಮೌತ್‌ ಫ್ರೆಶ್ನರ್‌ನ ಹಾಗೆ ಬಳಸಬಹುದು. ಅಥವಾ ಏಲಕ್ಕಿ, ಜಾಯಿಕಾಯಿ, ಅರಿಶಿನ, ಕರಿಮೆಣಸು ಇತ್ಯಾದಿಗಳ ಪುಡಿ ಮಾಡಿ ಇಟ್ಟುಕೊಂಡು ರಾತ್ರಿ ಮಲಗುವ ಮುನ್ನ ಕುಡಿಯುವ ಹಾಲಿಗೆ ಚಿಟಿಕೆ ಪುಡಿ ಸೇರಿಸಿ ಕುಡಿಯಬಹುದು. ಇದರಿಂದ ಸೊಂಪಾದ ನಿದ್ರೆಯೂ ಬರುತ್ತದೆ. ಅಥವಾ ನಿತ್ಯವೂ ಕುಡಿಯುವ ನೀರಿಗೆ ಏಲಕ್ಕಿಯ ಎಸಳೊಂದನ್ನು ಹಾಕಿಡಬಹುದು. ಇನ್ನುಳಿದಂತೆ, ಆಹಾರದ ಮೂಲಕ, ಸಿಹಿತಿಂಡಿಗಳ ಮೂಲಕ ಏಲಕ್ಕಿ ಆಗಾಗ ದೇಹ ಸೇರುತ್ತಲೇ ಇರುತ್ತದೆ. ಈ ಎಲ್ಲ ವಿಧಾನಗಳ ಮೂಲಕ ಏಲಕ್ಕಿಯ ಲಾಭವನ್ನು ನಾವು ಪಡೆಯಬಹುದು.

Continue Reading

ಆಹಾರ/ಅಡುಗೆ

Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ (healthy salad tips) ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ.

VISTARANEWS.COM


on

Healthy Salad Tips
Koo

ಪೋಷಕಾಂಶಯುಕ್ತ ಆಹಾರ ಎಂದಾಕ್ಷಣ ಸುಲಭವಾಗಿ ನೆನಪಿಗೆ ಬರುವುದು ಸಲಾಡ್‌ಗಳು. ಸುಲಭವಾಗಿ ಮಾಡಬಹುದಾದ, ಹೆಚ್ಚೂ ಶ್ರಮ ಬೇಡದ, ಬೇಗ ಹೊಟ್ಟೆ ತುಂಬಿಸುವ ಗುಣ ಉಳ್ಳ ಸಲಾಡ್‌ಗಳು ತೂಕ ಇಳಿಸುವ ಮಂದಿಯ ಪರಮಾಪ್ತ ಸ್ನೇಹಿತನಂತೆ. ಕಚೇರಿಗಳಿಗೆ ಬಿಡು ಹೊತ್ತಿನಲ್ಲಿ ತಿನ್ನಬಹುದಾದ ಸ್ನ್ಯಾಕ್‌ಗಳ ಬದಲಿಗೂ ಈ ಸಲಾಡ್‌ಗಳು ಅನೇಕರಿಗೆ ಸುಲಭವಾಗಿ ಮಾಡಬಹುದಾದ ಆಹಾರವೇ ಆಗಿದೆ. ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ. ಬನ್ನಿ, ನೀವು ಸಲಾಡ್‌ಗಳನ್ನು ಮಾಡುವ ಸಂದರ್ಭ ಈ ಕೆಳಗಿನ ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ, ಆರೋಗ್ಯಕ್ಕೆ ಒಳಿತಾಗುವ ರೀತಿಯಲ್ಲಿ ತಿದ್ದಿಕೊಳ್ಳಿ. ಬನ್ನಿ, ಸಲಾಡ್‌ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ (healthy salad tips) ಮಾಡುವ ತಪ್ಪುಗಳೇನು ಎಂಬುದನ್ನು ನೋಡೋಣ.

Greek Salad

ಡ್ರೆಸ್ಸಿಂಗ್‌ ಅತಿಯಾಗಿ ಮಾಡುವುದು

ಹೌದು, ಸಲಾಡ್‌ ಎಂದಾಕ್ಷಣ ಡ್ರೆಸ್ಸಿಂಗ್‌ ಸಹಜ. ಯಾಕೆಂದರೆ ಸಲಾಡ್‌ಗೆ ಒಂದು ರುಚಿಯನ್ನು ನೀಡುವುದೇ ಈ ಡ್ರೆಸ್ಸಿಂಗ್‌. ಆದರೆ, ಅತಿಯಾದ ಡ್ರೆಸ್ಸಿಂಗ್‌ ಮಾಡುವುದರಿಂದ ಸಲಾಡ್‌ನಲ್ಲಿ ಕೊಬ್ಬು ಜಾಸ್ತಿಯಾಗಬಹುದು. ಹೆಚ್ಚು ಕ್ಯಾಲರಿ ಸೇರಿಕೊಳ್ಳಬಹುದು. ಕೇವಲ ರುಚಿಗೆ ತಕ್ಕಷ್ಟೇ ಡ್ರೆಸ್ಸಿಂಗ್‌ ಮಾಡಿ.

ತರಕಾರಿಗಳನ್ನು ತೊಳೆಯದೆ ಇರುವುದು

ಹಸಿಯಾದ ತರಕಾರಿಗಳನ್ನು ಹಾಗೆಯೇ ಸಲಾಡ್‌ಗೆ ಬಳಸುವುದರಿಂದ ತರಕಾರಿಗಳನ್ನು ತೊಳೆಯುವುದು ಅತ್ಯಂತ ಮುಖ್ಯವಾದ ಘಟ್ಟ. ಹಾಗಾಗಿ ತರಕಾರಿಗಳನ್ನು ಒಮ್ಮೆ ಉಪ್ಪು ನೀರಿನಲ್ಲಿ ಹಾಕಿಟ್ಟು ತೊಳೆಯುವುದನ್ನು ರೂಢಿ ಮಾಡಿಕೊಳ್ಳಿ. ಯಾಕೆಂದರೆ ಇಲ್ಲಿ ತರಕಾರಿ ಬೇಯುವುದಿಲ್ಲವಾದ್ದರಿಂದ ಕೆಲವು ರಾಸಾಯನಿಕಗಳು ತರಕಾರಿಗೆ ಸಿಂಪಡಿಸಲ್ಪಟ್ಟದ್ದು ಹಾಗೆಯೇ ಉಳಿದಿರುವ ಸಾಧ್ಯತೆಯೂ ಇದೆ. ಹಾಗಾಗಿ, ತರಕಾರಿಯನ್ನು ಎರಡೆರಡು ಬಾರಿ ತೊಳೆದುಕೊಂಡು ಬಳಸಿ.

ಇದನ್ನೂ ಓದಿ: Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

ಅತಿಯಾಗಿ ತರಕಾರಿಗಳನ್ನು ಬಳಸುವುದು

ಸಲಾಡ್‌ ಎಂದಾಕ್ಷಣ ಬೇಕಾದ ಹಾಗೆ ತರಕಾರಿಗಳನ್ನು ಬಳಸಬಹುದು ಎಂಬ ನಿಮ್ಮ ಎಣಿಕೆಯಾಗಿದ್ದರೆ ಅದು ತಪ್ಪು. ತರಕಾರಿಗಳ ಸಂಖ್ಯೆಯೂ ಅತಿಯಾಗಬಾರದು. ಒಂದಕ್ಕೊಂದು ಹೊಂದಿಕೊಳ್ಳುವ ಮೂರ್ನಾಲ್ಕು ಬಗೆಯ ತರಕಾರಿಗಳಿಗಿಂತ ಹೆಚ್ಚು ಬಳಸಬೇಡಿ. ತರಕಾರಿಗಳು ಅತಿಯಾದರೆ, ಅವು ಹಸಿಯಾಗಿರುವುದರಿಂದ ಇವು ಗ್ಯಾಸ್‌ನಂತಹ ಸಮಸಯೆಯನ್ನು ತಂದೊಡ್ಡಬಹುದು. ಜೀರ್ಣದ ಸಮಸ್ಯೆಗಳೂ ತಲೆದೋರಬಹುದು. ಕೆಲವರಿಗೆ ಹಸಿ ತರಕಾರಿಗಳು ಕರಗುವುದಿಲ್ಲ. ಇಂಥ ಮಂದಿ ತರಕಾರಿಗಳನ್ನು ಸ್ವಲ್ಪ ಬೇಯಿಸಿಕೊಂಡು ತಿನ್ನಬಹುದು. ಹೀಗೆ ಮಾಡುವುದರಿಂದ ಜೀರ್ಣ ಸಮಸ್ಯೆಗಳು ಬರದು.

Continue Reading

ಆರೋಗ್ಯ

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

Vijayanagara News: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದು ವಿಜಯನರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
Koo

ಹೊಸಪೇಟೆ: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ (Vijayanagara News) ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ದಡಾರಾ ಮತ್ತು ರುಬೆಲ್ಲಾ 2024 ಡಿಸೆಂಬರ್‌ದೊಳಗೆ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ ನಡೆಯಬೇಕು. ಮಗುವಿಗೆ 9 ತಿಂಗಳ ತುಂಬಿದ ನಂತರ ಮೊದಲನೇ ಡೋಸ್ ನೀಡಬೇಕು. ಆ ಬಳಿಕ ಒಂದೂವರೆ ವರ್ಷಕ್ಕೆ ಎರಡನೇ ಡೋಸ್ ನೀಡುವ ಕಾರ್ಯವು ಜಿಲ್ಲೆಯಲ್ಲಿ ಶೇ. 100ರಷ್ಟು ಆಗಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇದನ್ನೂ ಓದಿ: Forest Man Of India: ಇವರೇ ನೋಡಿ ಭಾರತದ ಫಾರೆಸ್ಟ್‌ ಮ್ಯಾನ್‌; ಏಕಾಂಗಿಯಾಗಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ ಸಾಹಸಿ

ಮಕ್ಕಳಿಗೆ ಲಸಿಕೆಯನ್ನು ಹಾಕಿಸಲು ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಜನರು ಸಹಕರಿಸುವುದಿಲ್ಲ. ಆದ್ದರಿಂದ ದಡಾರ ಮತ್ತು ರುಬೆಲ್ಲಾ ಲಸಿಕೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ, ಮಹಿಳಾ ಸಂಘ-ಸಂಸ್ಥೆಗಳ, ಆಶಾ ಕಾರ್ಯಕರ್ತೆಯರ ಸಹಕಾರ ಪಡೆದುಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಶಂಕರ್ ನಾಯ್ಕ್ ಎಲ್. ಮಾತನಾಡಿ, ಗ್ರಾಮೀಣ ಭಾಗದ ಕೆಲ ಜನರು ಮೂಢ ನಂಬಿಕೆಗಳಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಆರೋಗ್ಯ ಇಲಾಖೆಯ ಯಾವುದೇ ಲಸಿಕೆ ಮತ್ತು ಅದರ ಮಹತ್ವದ ಕುರಿತು ವ್ಯಾಪಕವಾಗಿ ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯವು ಲಸಿಕಾ ಅಭಿಯಾನದ ಜತೆಜತೆಗೆ ಸಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಮಕ್ಕಳಲ್ಲಿ ಜ್ವರ ಮತ್ತು ತದ್ದು ಕಂಡು ಬರುತ್ತಿದ್ದಲ್ಲಿ ಪಾಲಕರು ನಿರ್ಲಕ್ಷ್ಯ ಮಾಡಬಾರದು. ಅಂತಹ ಮಕ್ಕಳಿದ್ದಲ್ಲಿ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಜ್ವರ ಮತ್ತು ತದ್ದು ಕಂಡು ಬರುವ ಮಕ್ಕಳೇನಾದರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ ಈ ಬಗ್ಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗೆ ವರದಿ ಮಾಡಬೇಕು ಎಂದು ತಿಳಿಸಿದರು.

ಎನ್‌ಪಿಎಸ್‌ಪಿ ಸರ್ವೆಲನ್ಸ್ ನೋಡಲ್ ಅಧಿಕಾರಿ ಡಾ.ಶ್ರೀಧರ ಆರ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ.ಷಣ್ಮುಖ ನಾಯ್ಕ ಬಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಎಂ.ಪಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಕೆ.ಕಮಲಮ್ಮ, ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ರಾಧಿಕಾ, ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಭಾಸ್ಕರ್, ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಜಗದೀಶ್ ಪಾಟ್ನೆ ಸೇರಿದಂತೆ ಇತರರು ಇದ್ದರು.

Continue Reading
Advertisement
exit poll 2024
ಪ್ರಮುಖ ಸುದ್ದಿ6 mins ago

Exit Poll 2024: ಮುಸ್ಲಿಮರ ಶೇ.72ರಷ್ಟು ಮತಗಳು ಕಾಂಗ್ರೆಸ್‌ಗೆ; ಮೋದಿ ವಿರುದ್ಧ ಒಂದಾದ ಅಲ್ಪಸಂಖ್ಯಾತರು

Union Minister Pralhad Joshi showed humanity by taking the injured to the hospital in his convoy vehicle
ಕರ್ನಾಟಕ17 mins ago

Pralhad Joshi: ಗಾಯಾಳುಗಳನ್ನು ಬೆಂಗಾವಲು ವಾಹನದಲ್ಲೇ ಆಸ್ಪತ್ರೆಗೆ ಸೇರಿಸಿದ ಪ್ರಲ್ಹಾದ್‌ ಜೋಶಿ

Air Conditioner Safety
ತಂತ್ರಜ್ಞಾನ20 mins ago

Air Conditioner Safety: ಎಸಿ ಏಕೆ ಬ್ಲಾಸ್ಟ್ ಆಗುತ್ತದೆ? ಅಪಾಯ ತಡೆಯುವುದು ಹೇಗೆ?

Valmiki Corporation Scam
ಕರ್ನಾಟಕ37 mins ago

Valmiki Corporation Scam: ವಾಲ್ಮೀಕಿ ನಿಗಮದ ಇಬ್ಬರು ಅಧಿಕಾರಿಗಳಿಗೆ 6 ದಿನ ಎಸ್‌ಐಟಿ ಕಸ್ಟಡಿ

Ballari DC Prashanth Kumar Mishra visit to Vote counting centre Review of final preparations
ಬಳ್ಳಾರಿ47 mins ago

Lok Sabha Election 2024: ಬಳ್ಳಾರಿಯ ಮತ ಎಣಿಕೆ ಕೇಂದ್ರಕ್ಕೆ ಡಿಸಿ ಭೇಟಿ: ಅಂತಿಮ ಸಿದ್ಧತೆ ಪರಿಶೀಲನೆ

Exit poll 2024
ಪ್ರಮುಖ ಸುದ್ದಿ47 mins ago

Exit Poll 2024 : ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟ, ಕಾಂಗ್ರೆಸ್​ಗೆ ಲಾಭ ; ಜೆಡಿಎಸ್​ಗೆ +1

100 kg of banned plastic seized by municipal council in Shira
ಕರ್ನಾಟಕ49 mins ago

Shira News: ಶಿರಾದಲ್ಲಿ ನಗರಸಭೆಯಿಂದ ಗೋದಾಮಿನ ಮೇಲೆ ದಾಳಿ; 100 ಕೆಜಿ ನಿಷೇಧಿತ ಪ್ಲಾಸ್ಟಿಕ್‌ ವಶ

Selco India SELCO Suryamitra Annual Award to Richard Hansen of America
ಕರ್ನಾಟಕ50 mins ago

Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್ ಹ್ಯಾನ್ಸೆನ್‌ಗೆ ಸೆಲ್ಕೋ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ

union Minister Pralhad Joshi latest statement about Valmiki Corporation scam
ಕರ್ನಾಟಕ52 mins ago

Pralhad Joshi: ವಾಲ್ಮೀಕಿ ನಿಗಮದ ಹಗರಣ; ಸಚಿವ ನಾಗೇಂದ್ರರನ್ನು ಬಂಧಿಸಿ, ಸಿಬಿಐ ತನಿಖೆಗೆ ಪ್ರಲ್ಹಾದ್‌ ಜೋಶಿ ಆಗ್ರಹ

Exit Poll 2024
Lok Sabha Election 20241 hour ago

Exit Poll 2024: ಮೋದಿ ಹ್ಯಾಟ್ರಿಕ್‌ ಖಚಿತ, ಇಂಡಿಯಾ ಒಕ್ಕೂಟಕ್ಕೆ ಸೋಲು ನಿಶ್ಚಿತ; ಇಲ್ಲಿದೆ ಎಕ್ಸಿಟ್‌ ಪೋಲ್‌ ವರದಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು3 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌