Viral Video: ತನ್ನ ಮರಿಯನ್ನು ಹಿಡಿದ ಹಾವಿನೊಂದಿಗೆ ಸೆಣೆಸಾಟಕ್ಕೆ ನಿಂತ ಹಲ್ಲಿ; ಕಚ್ಚಿದರೂ, ಕುಕ್ಕಿದರೂ ಫಲಿಸಲಿಲ್ಲ ಯತ್ನ - Vistara News

ವೈರಲ್ ನ್ಯೂಸ್

Viral Video: ತನ್ನ ಮರಿಯನ್ನು ಹಿಡಿದ ಹಾವಿನೊಂದಿಗೆ ಸೆಣೆಸಾಟಕ್ಕೆ ನಿಂತ ಹಲ್ಲಿ; ಕಚ್ಚಿದರೂ, ಕುಕ್ಕಿದರೂ ಫಲಿಸಲಿಲ್ಲ ಯತ್ನ

ವಿಡಿಯೊ ನೋಡಿದರೆ ನಮಗೂ ಮನಸಿಗೆ ಕಸಿವಿಸಿ ಆಗುತ್ತದೆ. ಹಾಗೇ ಸೋಷಿಯಲ್ ‌ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ವಿಡಿಯೊ ಮಾಡುವ ಬದಲು ಹೋಗಿ ಆ ಹಲ್ಲಿ ಮರಿಯನ್ನು ಹಾವಿನಿಂದ ಬಿಡಿಸಬಹುದಿತ್ತಲ್ಲ ಎಂದು ಕೆಲವರು ಕೇಳಿದ್ದಾರೆ.

VISTARANEWS.COM


on

Lizard Fights With Snake viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೀವನವಿಡೀ ಹೋರಾಡುತ್ತಲೇ ಇರಬೇಕು. ಹಸಿವು ನೀಗಿಸಿಕೊಳ್ಳಲು, ಕಷ್ಟಗಳನ್ನು ಎದುರಿಸಲು..ಬಲಿಷ್ಠರು ಮಾಡುವ ಆಕ್ರಮಣಗಳನ್ನು ತಡೆದುಕೊಳ್ಳಲು…ಇದು ಮನುಷ್ಯರಿಗಷ್ಟೇ ಅನ್ವಯವಲ್ಲ‌. ಪ್ರಕೃತಿಯ ಪ್ರತಿ ಜೀವಿಯ ಬದುಕೂ ಹೀಗೇ ನಡೆಯುತ್ತಿರುತ್ತದೆ. ಪ್ರಾಣಿ ಜಗತ್ತು ಇನ್ನಷ್ಟು ವಿಸ್ಮಯ. ಅಲ್ಲಿ ಬಲಿಷ್ಠ ಪ್ರಾಣಿ ತಮಗಿಂತ ಚಿಕ್ಕಪ್ರಾಣಿಗಳನ್ನು ತಿಂದು ತಾನು ಉಳಿಯಲು ನೋಡುತ್ತದೆ. ಆ ಚಿಕ್ಕಪುಟ್ಟ ಪ್ರಾಣಿಗಳು ದೊಡ್ಡ ಪ್ರಾಣಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸದಾ ಪ್ರಯತ್ನಪಡುತ್ತಲೇ ಇರುತ್ತವೆ. ಅದ್ಯಾವುದೋ ಮೃಗದ ಬಾಯಿಗೆ ಬಿದ್ದು, ಹೊಟ್ಟೆ ಸೇರುವವರೆಗೂ ಜೀವ ಉಳಿಸಿಕೊಳ್ಳಲು ಮಿಸುಕಾಡುತ್ತಲೇ‌ ಇರುವ ದೃಶ್ಯಗಳನ್ನೆಲ್ಲ ನಾವೂ ನೋಡಿದ್ದೇವೆ.

ಈಗ ಹಾವೊಂದು ಹಲ್ಲಿ ಮರಿಯನ್ನು ‌ಬೇಟೆಯಾಡಿದ ಮತ್ತು ಅದನ್ನು ಕಾಪಾಡಲು ತಾಯಿ ಹಲ್ಲಿ ಪ್ರಯತ್ನಿಸಿದ ವಿಡಿಯೊ ವೈರಲ್ ‌ಆಗುತ್ತಿದೆ. ಸರೀಸೃಪವಾದ ಹಾವು, ಮತ್ತೊಂದು ಪ್ರಬೇಧದ ಸರೀಸೃಪ ‌ಹಲ್ಲಿ ಮರಿಯನ್ನು ತಿನ್ನಲೆಂದು ಹಿಡಿದುಕೊಂಡಿದೆ. ಅದನ್ನು ಗಟ್ಟಿಯಾಗಿ ಸುತ್ತಿಕೊಂಡಿದೆ. ಅಲ್ಲೇ ಗೋಡೆ ಮೇಲಿದ್ದ ದೊಡ್ಡದಾದ ಹಲ್ಲಿ ಆ ಹಾವಿನ ಹಿಡಿತದಿಂದ‌ ತನ್ನ ‌ಮರಿಯನ್ನು ಬಿಡಿಸಿಕೊಳ್ಳಲು ಪ್ರಯತ್ನ ಮಾಡುವುದನ್ನು ನೋಡಬಹುದು. ಅದು ಹಾವಿನ ತಲೆಗೆ ಕಚ್ಚುತ್ತದೆ. ಕುಕ್ಕುತ್ತದೆ. ಆದರೆ ಅದರ ಪ್ರಯತ್ನ ವಿಫಲವಾಗುತ್ತದೆ. ಮರಿಯನ್ನು ಹಾವು ಬಿಡುವುದಿಲ್ಲ.

ಈ ವಿಡಿಯೊ ನೋಡಿದರೆ ನಮಗೂ ಮನಸಿಗೆ ಕಸಿವಿಸಿ ಆಗುತ್ತದೆ. ಹಾಗೇ ಸೋಷಿಯಲ್ ‌ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ವಿಡಿಯೊ ಮಾಡುವ ಬದಲು ಹೋಗಿ ಆ ಹಲ್ಲಿ ಮರಿಯನ್ನು ಹಾವಿನಿಂದ ಬಿಡಿಸಬಹುದಿತ್ತಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ನಿಸರ್ಗ ಸಹಜತೆ ಇದು. ಹಾವಿನ ಹೊಟ್ಟೆ ತುಂಬಬೇಕಲ್ಲ!.’ ಎಂದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Police Raid: ಸ್ಕೂಟರ್‌ನಲ್ಲಿ ಬರುತ್ತಿದ್ದ ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸ್‌ ಪೇದೆ!

Police Raid: ಕೊರಟಗೆರೆ ಪೊಲೀಸ್ ಠಾಣೆಯ ಪೇದೆಯೊಬ್ಬರು ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದಿದ್ದಾರೆ. ಪೊಲೀಸ್ ಕಾನ್‌ಸ್ಟೇಬಲ್ ಕರ್ತವ್ಯ ನಿಷ್ಠೆಗೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

Koo

ತುಮಕೂರು: ಜಿಲ್ಲೆಯ ಪೊಲೀಸ್‌ ಪೇದೆಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಸಿನೀಮಿಯ ಶೈಲಿಯಲ್ಲಿ ಕಳ್ಳನೊಬ್ಬನನ್ನು ಹಿಡಿದಿರುವ ಘಟನೆ (Police Raid) ನಡೆದಿದ್ದು, ಕಳ್ಳನನ್ನು ಹಿಡಿಯುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್ ಕಾನ್‌ಸ್ಟೇಬಲ್ ಕರ್ತವ್ಯ ನಿಷ್ಠೆಗೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮಂಜೇಶ್@420 ಮಂಜ @ಹೊಟ್ಟೆ ಮಂಜ ಪೊಲೀಸ್ ಕೈಗೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ. ಕೊರಟಗೆರೆ ಪೊಲೀಸ್ ಠಾಣೆಯ ಪೇದೆ ದೊಡ್ಡಲಿಂಗಯ್ಯ ಕಳ್ಳನನ್ನು ಹಿಡಿದವರು. ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ 420 ಮಂಜನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯ ಸಿಗ್ನಲ್ ಬಳಿ ಪೇದೆ ಸೆರೆ ಹಿಡಿದಿದ್ದಾರೆ.

ಕಳ್ಳ ಮಂಜ ಮತ್ತು ಪೊಲೀಸ್‌ ಪೇದೆ ದೊಡ್ಡಲಿಂಗಯ್ಯ

ಸಿಗ್ನಲ್‌ನಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಕಳ್ಳನನ್ನು ಪೇದೆ ಅಡ್ಡಗಟ್ಟಿದ್ದಾರೆ. ಆದರೂ ಅವರನ್ನು ಎಳೆದುಕೊಂಡು ಕಳ್ಳ ಮುಂದೆ ಸಾಗಿದ್ದಾನೆ. ಪಟ್ಟು ಬಿಡದ ಪೊಲೀಸ್‌, ಕಳ್ಳನನ್ನು ಬೆನ್ನಟ್ಟಿ ಕಾಲನ್ನು ಹಿಡಿದು ನೆಲಕ್ಕೆ ಬೀಳಿಸಿದ್ದಾರೆ. ಬಳಿಕ ಅಲ್ಲಿದ್ದ ಟ್ರಾಫಿಕ್‌ ಪೊಲೀಸರು ಕಳ್ಳನನ್ನು ಹಿಡಿಯಲು ನೆರವಾಗಿದ್ದಾರೆ. ನಂತರ ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿ ಕಳ್ಳನಿಗೆ ಹಿಗ್ಗಾಮುಗ್ಗಾ ಬಾರಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಖತರ್ನಾಕ್ ಕಳ್ಳನಿಗೆ ಚಿನ್ನದ ಸರ ಹಾಕಿರುವ ವೃದ್ಧೆಯರೇ ಟಾರ್ಗೆಟ್. ವೃದ್ಧೆಯರನ್ನೇ ಟಾರ್ಗೆಟ್ ಮಾಡಿ, ಪಿಂಚಣಿ, ಸರ್ಕಾರದ ಸವಲತ್ತು ಕೊಡಿಸುತ್ತೇನೆಂದು ನಂಬಿಸಿ, ಚಿನ್ನದ ಸರ ಕದ್ದು ಖತರ್ನಾಕ್ ಮಂಜ ಪರಾರಿಯಾಗುತ್ತಿದ್ದ. ಈತನ ವಿರುದ್ಧ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಹೆಬ್ಬೂರು ಪೊಲೀಸ್ ಠಾಣೆ ಸೇರಿ ಸುಮಾರು 10ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿದ್ದವು.

ಸುಮಾರು 1 ತಿಂಗಳಿಂದ ಪೊಲೀಸರ ಕೈಗೆ ಸಿಗದೇ ಕಣ್ತಪ್ಪಿಸಿ ಓಡಾಡುತ್ತಿದ್ದ 420 ಮಂಜ, ಬೆಂಗಳೂರಿನ ಮತ್ತಿಕೆರೆ ಕಡೆಯಿಂದ ಸದಾಶಿವನಗರ ಪೊಲೀಸ್ ಠಾಣೆ ಕಡೆಗೆ, ಬಿಳಿ ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ಬರುತ್ತಿರುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದರು. ಸದಾಶಿವನಗರ ಠಾಣೆ ಸಿಗ್ನಲ್ ಬಳಿ 420 ಮಂಜನನ್ನು ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ದೊಡ್ಡಲಿಂಗಯ್ಯ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಳ್ಳನನ್ನ ಹಿಡಿದಿದ್ದಾರೆ.

Bangladesh Unrest: ಬಾಂಗ್ಲಾ ಹಿಂಸಾಚಾರ; ಬಹುರಾಷ್ಟ್ರೀಯ ಕಂಪನಿಗಳು ತತ್ತರ; ಭಾರತದ ಉದ್ಯಮಗಳ ಮೇಲೇನು ಪರಿಣಾಮ?

couple's fight

ಸದ್ಯ ಖತರ್ನಾಕ್ ಕಳ್ಳ 420 ಮಂಜನನ್ನು ಬಂಧಿಸಿ ಕೊರಟಗೆರೆ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ತನಿಖೆ ಮುಂದುವರಿದಿದೆ.

ಸಪ್ತಪದಿ ತುಳಿದ ಕೆಲವೇ ಹೊತ್ತಿನಲ್ಲಿ ನವದಂಪತಿ ಹೊಡೆದಾಟ; ವಧು ಸಾವು!

couple's fight
couple's fight

ಕೋಲಾರ: ಮದುವೆಯಾದ ಹಲವು ತಿಂಗಳು, ವರ್ಷಗಳ ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡುವುದು ಸಾಮಾನ್ಯ. ಆದರೆ, ಇಲ್ಲೊಂದು ಜೋಡಿ ಸಪ್ತಪದಿ ತುಳಿದ ಕೆಲವೇ ಹೊತ್ತಿನಲ್ಲಿ ಹೊಡೆದಾಡಿಕೊಂಡಿದ್ದು (Couple’s fight), ಇವರಿಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.

ಹೌದು, ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು-ವರ ಹೊಡೆದಾಡಿಕೊಂಡು, ವಧು ಸಾವಿಗೀಡಾಗಿ, ವರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ತ್ಯಂಬರಸನಹಳ್ಳಿಯಲ್ಲಿ ನಡೆದಿದೆ. ಲಿಖಿತಶ್ರೀ ಮೃತ ವಧು, ನವೀನ್ ಗಾಯಾಳು ವರ.

ಅದ್ಧೂರಿಯಾಗಿ ಲಿಖಿತಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಆದರೆ ಅದೇನಾಯಿತೋ ಗೊತ್ತಿಲ್ಲ, ಕೆಲ‌ಗಂಟೆಗಳ ನಂತರ ರೂಮ್‌ಗೆ ಹೋಗಿದ್ದ ನವದಂಪತಿ ಅಲ್ಲೇ‌ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ವಧು ಕೊನೆಯುಸಿರೆಳೆದಿದ್ದಾಳೆ.

ಇದನ್ನೂ ಓದಿ | Actor Darshan: ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ; ಎಫ್‌ಎಸ್‌ಎಲ್ ವರದಿಯಲ್ಲಿ ದೃಢ

ವರ ನವೀನ್ ಸ್ಥಿತಿ ಕೂಡ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಆ್ಯಂಡರ್‌ಸನ್ ಪೇಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

Latest

Viral Video: 11 ವರ್ಷಗಳ ಹಿಂದೆ ಸತ್ತಿದ್ದ ಗಂಡ ಕನಸಲ್ಲಿ ಬಂದು ʼಸೇರಿದʼ; ಹಾಗಾಗಿ ಮಗು ಹುಟ್ಟಿತು ಅಂತಿದ್ದಾಳೆ ಈ ಹೆಂಗಸು!

Viral Video: ಮಹಿಳೆಯೊಬ್ಬಳು 11 ವರ್ಷಗಳ ಹಿಂದೆ ಸತ್ತ ಪತಿ ಕನಸಿನಲ್ಲಿ ಬಂದು ತನ್ನ ಜೊತೆ ಸಂಸಾರ ಮಾಡಿ ತನ್ನನ್ನು ಗರ್ಭಿಣಿ ಮಾಡಿ ಮಗುವನ್ನು ನೀಡಿದ್ದಾನೆ ಎಂದು ಹೇಳುತ್ತಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈಕೆ ಹೇಳುವ ಕತೆ ದಿಗಿಲು ಹುಟ್ಟಿಸುತ್ತದೆ. 11 ವರ್ಷಗಳ ಹಿಂದೆ ಗಂಡ ಸತ್ತ ಮೇಲೆ ಆತನಿಂದ ಮಗುವನ್ನು ಹೇಗೆ ಪಡೆದೆ ಎಂಬ ಪ್ರಶ್ನೆಗೆ ಆಕೆ ನೀಡಿರುವ ಉತ್ತರ ಬೆಚ್ಚಿ ಬೀಳಿಸುತ್ತದೆ. ಈ ವಿಡಿಯೊ ನೋಡಿ.

VISTARANEWS.COM


on

Viral Video
Koo


ದೆವ್ವದ ಜೊತೆ ಮದುವೆಯಾಗಿ ಸಂಸಾರ ಮಾಡುವಂತಹ ಹಾಗೂ ದೆವ್ವಗಳು ಬಂದು ಹುಡುಗಿಯನ್ನು ರೇಪ್ ಮಾಡುವಂತಹ ಘಟನೆಗಳನ್ನು ನಾವು ಸಿನಿಮಾಗಳಲ್ಲಿ ನೋಡುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ 11 ವರ್ಷಗಳ ಹಿಂದೆ ಸತ್ತ ಪತಿ ಕನಸಿನಲ್ಲಿ ಬಂದು ತನ್ನ ಜೊತೆ ಸಂಸಾರ ಮಾಡಿ ತನ್ನನ್ನು ಗರ್ಭಿಣಿ ಮಾಡಿ ಮಗುವನ್ನು ನೀಡಿದ್ದಾನೆ ಎಂದು ಹೇಳುತ್ತಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಗತಿ ಹೊಂದುತ್ತಿರುವ ಇಂದಿನ ವಿಜ್ಞಾನಯುಗಕ್ಕೆ ಈ ಘಟನೆ ಒಂದು ಸವಾಲು ಹಾಕಿದಂತಾಗಿದೆ. ಈ ವಿಡಿಯೊವನ್ನು ನೋಡುತ್ತಿರುವವರು ಒಮ್ಮೆ ತಲೆ ಹಿಡಿದುಕೊಂಡು ಯೋಚಿಸುವುದಂತೂ ಖಂಡಿತ. ಯಾಕೆಂದರೆ ಇದು ಮಾನವ ಜೀವನದಲ್ಲಿ ಅಸಾಧ್ಯವಾದುದ್ದಾಗಿದೆ.

ಈ ವಿಡಿಯೊದಲ್ಲಿ ಯೂಟ್ಯೂಬರ್ ಒಬ್ಬರು ಕೈಯಲ್ಲಿ ಹಸು ಕಂದನನ್ನು ಎತ್ತಕೊಂಡ ಮಹಿಳೆಯೊಬ್ಬರಿಗೆ ಪ್ರಶ್ನೆ ಕೇಳುತ್ತಿದ್ದಾರೆ. ಆಕೆಯ ಉತ್ತರ ಕ್ಷಣ ಕ್ಷಣಕ್ಕೂ ವಿಚಿತ್ರ ಎನಿಸುತ್ತದೆ. ಯಾಕೆಂದರೆ ಆಕೆ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಹಾಗೂ ಆ ಮಗು ತನ್ನ ಗಂಡನಿಂದ ತನಗೆ ದೊರಕಿದೆ ಎಂದು ಹೇಳುತ್ತಾಳೆ. ಆದರೆ ಆಕೆ ತನ್ನ ಪತಿ 11 ವರ್ಷಗಳ ಹಿಂದೆಯೇ ಸತ್ತು ಹೋಗಿದ್ದಾರೆ ಎಂದು ಹೇಳಿದ್ದಾಳೆ.

ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತಿದೆ. ಹಾಗಾದ್ರೆ ಆಕೆಯ ಪತಿ 11 ವರ್ಷಗಳ ಹಿಂದೆ ಸತ್ತ ಮೇಲೆ ಆತನಿಂದ ಮಗುವನ್ನು ಹೇಗೆ ಪಡೆದಳು ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಅದಕ್ಕೆ ಉತ್ತರಿಸಿದ ಮಹಿಳೆ ತನ್ನ ಪತಿ ತನ್ನ ಕನಸಿನಲ್ಲಿ ಬಂದು ತನ್ನ ಜೊತೆ ಸಂಸಾರ ಮಾಡುತ್ತಿದ್ದನು. ಹಾಗಾಗಿ ಅವಳು ಗರ್ಭಿಣಿಯಾದಳು ಎಂದು ಹೇಳಿದ್ದಾಳೆ. ಮಹಿಳೆಯ ಈ ಉತ್ತರ ಕೇಳುಗರಲ್ಲಿ ಆಶ್ಚರ್ಯನ್ನುಂಟು ಮಾಡಿದೆ. ಮಹಿಳೆಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

ಮಹಿಳೆಯು ಒಂಬತ್ತು ತಿಂಗಳ ಗರ್ಭಧಾರಣೆಯ ನಂತರ ಮಗುವಿಗೆ ಜನ್ಮ ನೀಡುತ್ತಾಳೆ. ಅಂದರೆ ಮಹಿಳೆ ಸಾಮಾನ್ಯವಾಗಿ ಒಂಬತ್ತು ತಿಂಗಳವರೆಗೆ ಮಾತ್ರ ಗರ್ಭಧರಿಸಲು ಸಾಧ್ಯ. ಇದಕ್ಕೆ ಹೊರತಾಗಿ, ಕೆಲವು ಮಹಿಳೆಯರ ಗರ್ಭಧಾರಣೆಯ ಅವಧಿಯಲ್ಲಿ ವ್ಯತ್ಯಾಸವಾಗಿ ಒಂದು ಅಥವಾ ಎರಡು ವಾರಗಳವರೆಗೆ ಬದಲಾಗಬಹುದು. ಆದರೆ ಪತಿಯ ಮರಣದ 11 ವರ್ಷಗಳ ನಂತರ ಆತನ ಮಗುವಿಗೆ ಮಹಿಳೆ ಜನ್ಮ ನೀಡಿದ್ದು, ಅದೂ ಆತ ಕನಸಿನಲ್ಲಿ ಬಂದು ಆಕೆಯ ಜೊತೆ ಸಂಸಾರ ಮಾಡಿದ್ದು, ಮತ್ತು ಅದರಿಂದ ಅವಳು ಗರ್ಭಿಣಿಯಾದಳು ಎಂಬ ತರ್ಕ ಊಹೆಗೆ ನಿಲುಕದ್ದು! ಹಾಗಾಗಿ ಈ ವಿಡಿಯೊ ವಿಚಿತ್ರ ಕಾರಣಕ್ಕಾಗಿ ಭಾರಿ ಸದ್ದು ಮಾಡುತ್ತಿದೆ.

Continue Reading

Latest

Viral Video: ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!

Viral Video: ರೀಲ್ಸ್ ಮಾಡುವ ಹುಚ್ಚು ಈಗ ಜನರಿಗೆ ಹೆಚ್ಚಾಗಿದೆ. ಸಾಮಾನ್ಯ ಜನರ ವಿಷಯ ಬಿಡಿ ಈ ಬಗ್ಗೆ ಜನರಿಗೆ ತಿಳಿ ಹೇಳಬೇಕಾಗಿದ್ದ ಪೊಲೀಸ್ ಅಧಿಕಾರಿಗೂ ಕೂಡ ರೀಲ್ಸ್ ಮಾಡುವ ಹುಚ್ಚು ಹಿಡಿದಿದೆ. ಇತ್ತೀಚೆಗೆ ಕರ್ತವ್ಯ ಪ್ರಜ್ಞೆಯನ್ನು ಮರೆತು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪ್ರೇಯಸಿಯ ಕೈಗೆ ಪಿಸ್ತೂಲ್ ಕೊಟ್ಟು ರೀಲ್ಸ್ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

VISTARANEWS.COM


on

Viral Video
Koo


ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಯುವ ಜನರಲ್ಲಿ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫೇಮಸ್ ಆಗಲು ಹಾಗೂ ಹೆಚ್ಚು ಫಾಲೋವರ್ಸ್‍ಗಳನ್ನು ಪಡೆಯಲು ಜನರು ಎಲ್ಲೆಂದರಲ್ಲಿ ಜೀವದ ಅಪಾಯವನ್ನು ಅರಿಯದೇ ರೀಲ್ಸ್ ಮಾಡಲು ಮುಂದಾಗುತ್ತಾರೆ. ಈಗಾಗಲೇ ಅನೇಕ ಜನರು ರೀಲ್ಸ್ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದಾರೆ ಹಾಗೇ ಎಷ್ಟೋ ಜನರು ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಅಲ್ಲದೇ ಇಂತಹ ಅಪಾಯಕಾರಿ ರೀಲ್ಸ್ ಮಾಡುವವರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟಾದರೂ ಜನರಿಗೆ ಇನ್ನೂ ರೀಲ್ಸ್ ಮಾಡುವ ಹುಚ್ಚು ಬಿಡಲಿಲ್ಲ. ಸಾಮಾನ್ಯ ಜನರ ವಿಷಯ ಬಿಡಿ ಈ ಬಗ್ಗೆ ಜನರಿಗೆ ತಿಳಿ ಹೇಳಬೇಕಾಗಿದ್ದ ಪೊಲೀಸ್ ಅಧಿಕಾರಿಗೂ ಕೂಡ ರೀಲ್ಸ್ ಮಾಡುವ ಹುಚ್ಚು ಹಿಡಿದಿದೆ. ಇತ್ತೀಚೆಗೆ ಕರ್ತವ್ಯ ಪ್ರಜ್ಞೆಯನ್ನು ಮರೆತು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪ್ರೇಯಸಿಯ ಕೈಗೆ ಪಿಸ್ತೂಲ್ ಕೊಟ್ಟು ರೀಲ್ಸ್ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video)ಆಗಿದೆ.‌

ವೈರಲ್ ಆದ ವಿಡಿಯೊದಲ್ಲಿ ಬೆಡ್ ರೂಂನಲ್ಲಿ ಅರೆ ನಗ್ನ ಸ್ಥಿತಿಯಲ್ಲಿ ಕುಳಿತಿದ್ದ ಗರ್ಲ್ ಫ್ರೆಂಡ್ ಕೈಗೆ ಪಿಸ್ತೂಲ್ ಕೊಟ್ಟು ಸಮವಸ್ತ್ರದಲ್ಲಿಯೇ ಪೊಲೀಸ್ ಅಧಿಕಾರಿ ರೀಲ್ಸ್ ಮಾಡಿದ್ದಾರೆ. ಇಬ್ಬರೂ ಜೊತೆಯಾಗಿ ಕುಳಿತು ಮೇರಾ ಬಲಂ ತಾನೆದಾ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಅಜಯ್ (ajayku68704718) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದು, ಅದಕ್ಕೆ “ಗೆಳತಿಯ ಕೈಗೆ ಪಿಸ್ತೂಲ್ ಕೊಟ್ಟು ರೀಲ್ಸ್ ವಿಡಿಯೊ ಮಾಡುತ್ತಾ ಕುಳಿತ ಪೊಲೀಸ್ ಅಧಿಕಾರಿ” ಎಂಬ ಶೀರ್ಷಿಕೆ ನೀಡಿದ್ದಾರೆ.

ಆಗಸ್ಟ್ 5ರಂದು ಹಂಚಿಕೊಳ್ಳಲಾದ ಈ ವಿಡಿಯೊ 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಹಾಗೂ ಹಲವರು ಇದಕ್ಕೆ ಕಾಮೆಂಟ್ ಮಾಡದ್ದಾರೆ. ಒಬ್ಬ ಬಳಕೆದಾರರು ʼಛಿ… ಛೀ ನಾಚಿಕೆಗೇಡಿನ ಸಂಗತಿʼ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂಬ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ರಸ್ತೆಯಲ್ಲಿ ಚುಡಾಯಿಸಿದ ಪುಂಡನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿನಿ; ವಿಡಿಯೊ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅಪಾಯಕಾರಿ ರೀಲ್ಸ್ ಗಳನ್ನು ಕಂಡು ಕೆಲವರು ಇಂತಹ ಅಪಾಯಕಾರಿ ರೀಲ್ಸ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರು. ಆದರೆ ಇಲ್ಲಿ ‘ಬೇಲಿಯೇ ಎದ್ದು ಹೊಲ ಮೇದಂತೆ’ ಎಂಬಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾದ ಅಧಿಕಾರಿಯೇ ಇಂತಹ ಘನ ಕಾರ್ಯದಲ್ಲಿ ತೊಡಗಿದ ಮೇಲೆ ಜನರು ಮನವಿ ಮಾಡುವುದಾದರೂ ಯಾರ ಬಳಿ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಮನೆಮಾಡಿದೆ.

Continue Reading

Latest

Viral News: ಚಹಾ ಮಾರಾಟದಿಂದ ಇವರಿಗೆ ಪ್ರತಿ ತಿಂಗಳು 2 ಲಕ್ಷ ರೂ. ಆದಾಯ!

Viral News: ಚಹಾ ಎಂದರೆ ಬಹಳ ಇಷ್ಟಪಡುವಂತಹ ಸ್ಥಳವಾದ ಮಹಾರಾಷ್ಟ್ರದ ಧಾರಾಶಿವ್‌ನ ಸ್ಥಳೀಯ ಚಹಾ ಮಾರಾಟಗಾರರೊಬ್ಬರು ತಮ್ಮ ವಿಶಿಷ್ಟ ವ್ಯವಹಾರದಿಂದಾಗಿ ಹೆಚ್ಚು ಗಮನ ಸೆಳೆದಿದ್ದಾರೆ. ತೇರ್ ಗ್ರಾಮದ ನಿವಾಸಿ ಮಹಾದೇವ್ ನಾನಾ ಮಾಲಿ, ಚಹಾ ಮಾರಾಟಕ್ಕೆ ವಿಶಿಷ್ಟ ವಿಧಾನವನ್ನು ಬಳಸಿಕೊಂಡಿದ್ದಾರೆ. ಅದು ಹೆಚ್ಚು ಲಾಭದಾಯಕವೆಂದು ಸಾಬೀತುಪಡಿಸಿದ್ದಾರೆ. ಫೋನ್ ಮೂಲಕ ಆರ್ಡರ್‌ಗಳನ್ನು ತೆಗೆದುಕೊಂಡು ಚಹಾ ಪೂರೈಸುತ್ತ ಭಾರಿ ಲಾಭ ಗಳಿಸುತ್ತಿದ್ದಾರೆ.

VISTARANEWS.COM


on

Viral News
Koo


ಚಹಾ ಹೆಚ್ಚಿನವರಿಗೆ ಪ್ರಿಯವಾದ ಪಾನೀಯವಾಗಿದೆ. ಹೆಚ್ಚಿನ ಜನರು ತಮ್ಮ ದಿನವನ್ನು ಚಹಾ ಕುಡಿಯುವ ಮೂಲಕ ಪ್ರಾರಂಭಿಸುತ್ತಾರೆ. ಕೆಲವರು ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿದರೆ ಇಡೀ ದಿನ ಲವಲವಿಕೆಯಿಂದ ಕೆಲಸ ಮಾಡುತ್ತಾರೆ. ಇದೇ ಚಹಾವನ್ನು ಬಂಡವಾಳವಾಗಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಒಬ್ಬ ಚಹಾ ಮಾರಾಟಗಾರರೊಬ್ಬರು ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಒಂದು ಕಪ್ ಚಹಾಕ್ಕೆ 5-10 ರೂ. ಪಡೆದು ಅದು ಹೇಗೆ ಆತ ಲಕ್ಷಾಗಟ್ಟಲೆ ಸಂಪಾದಿಸುತ್ತಾನೆ ಎಂದು ನಿಮಗೆ ಕೇಳಿ ಆಶ್ಚರ್ಯವಾಗಬಹುದು. ಅದರ ಬಗ್ಗೆ ಮಾಹಿತಿ ಈಗ ವೈರಲ್‌ (Viral News) ಆಗಿದೆ.

ಚಹಾ ಎಂದರೆ ಬಹಳ ಇಷ್ಟಪಡುವಂತಹ ಸ್ಥಳವಾದ ಮಹಾರಾಷ್ಟ್ರದ ಧಾರಾಶಿವ್‌ನ ಸ್ಥಳೀಯ ಚಹಾ ಮಾರಾಟಗಾರರೊಬ್ಬರು ತಮ್ಮ ವಿಶಿಷ್ಟ ವ್ಯವಹಾರದಿಂದಾಗಿ ಹೆಚ್ಚು ಗಮನ ಸೆಳೆದಿದ್ದಾರೆ. ತೇರ್ ಗ್ರಾಮದ ನಿವಾಸಿ ಮಹಾದೇವ್ ನಾನಾ ಮಾಲಿ ಅವರು ಚಹಾ ಮಾರಾಟಕ್ಕೆ ವಿಶಿಷ್ಟ ವಿಧಾನವನ್ನು ಬಳಸಿಕೊಂಡಿದ್ದಾರೆ. ಅದು ಹೆಚ್ಚು ಲಾಭದಾಯಕವೆಂದು ಸಾಬೀತುಪಡಿಸಿದ್ದಾರೆ. ಕೇವಲ ಮೂರನೇ ಕ್ಲಾಸ್‍ವರೆಗೆ ಓದಿದ್ದ ಮಹಾದೇವ್ ಮಾಲಿ ಕಳೆದ 20 ವರ್ಷಗಳಿಂದ ಚಹಾ ಮಾರಾಟ ಮಾಡುತ್ತಿದ್ದಾರೆ. ಫೋನ್ ಮೂಲಕ ಆರ್ಡರ್‌ಗಳನ್ನು ತೆಗೆದುಕೊಳ್ಳುವ ಹೊಸ ವಿಧಾನದ ಮೂಲಕ ಅವರ ಈ ಚಹಾ ಮಾರಾಟ ವ್ಯವಹಾರವು ತುಂಬಾ ಲಾಭದಾಯಕವಾಗಿ ನಡೆಯುತ್ತಿದೆ. ಬಿಸಿಲು ಮಳೆ ಎನ್ನದೇ ಮಾಲಿ ತಮಗೆ ಬಂದ ಆರ್ಡರ್ ಗಳನ್ನು ಸ್ವೀಕರಿಸಿ ಸಮಯಕ್ಕೆ ಸರಿಯಾಗಿ ಚಹಾವನ್ನು ತಲುಪಿಸುತ್ತಾರೆ.

ಈ ಪ್ರದೇಶದ ಸುಮಾರು 15,000 ಗ್ರಾಮಸ್ಥರ ಚಹಾ ಬೇಡಿಕೆಯನ್ನು ಪೂರೈಸಲು, ಮಾಲಿಗೆ ಪ್ರತಿದಿನ 50ರಿಂದ 60 ಲೀಟರ್ ಹಾಲು ಬೇಕಾಗುತ್ತದೆ. ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರ ಸಹಾಯದಿಂದ ಈ ಕೆಲಸ ಮಾಡುತ್ತಿದ್ದಾರೆ ಮತ್ತು 2ರಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಟೆರ್ ಮತ್ತು ನೆರೆಯ ಹಳ್ಳಿಗಳಿಗೆ ಸೇವೆ ಸಲ್ಲಿಸುತ್ತಾರೆ. ಪ್ರತಿ ಕಪ್ ಚಹಾದ ಬೆಲೆ ಕೇವಲ 5 ರೂ. ಮಾತ್ರ.

ಇದನ್ನೂ ಓದಿ: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

ಮಾಲಿಯು ಈ ವ್ಯವಹಾರದಲ್ಲಿ ಪ್ರತಿದಿನ 1,500ರಿಂದ 2,000 ಕಪ್ ಚಹಾದವರೆಗೆ ಮಾರಾಟ ಮಾಡುತ್ತಾರೆ. ಇದರಿಂದ ಅವರ ದಿನದ ಗಳಿಕೆ ಸುಮಾರು 7,000ರಿಂದ 10,000 ರೂ. ಆಗಿದೆ. ಈ ಆದಾಯದಿಂದ ಮಾಲಿ ಮತ್ತು ಅವರ ಕುಟುಂಬ ಹಣಕಾಸಿನ ಸಮಸ್ಯೆಯಿಲ್ಲದೇ ಸುಖಕರವಾದ ಜೀವನ ನಡೆಸುತ್ತಿದೆ. ಪ್ರತಿ ತಿಂಗಳು ಅವರು ಚಹಾ ಮಾರಾಟದಿಂದ ಸುಮಾರು 2 ಲಕ್ಷ ರೂ. ಗಳಿಸುತ್ತಾರೆ.

Continue Reading
Advertisement
Mirabai Chanu
ಕ್ರೀಡೆ3 hours ago

Mirabai Chanu: ಕೂದಲೆಳೆಯಲ್ಲಿ ಪದಕ ಕೈಚೆಲ್ಲಿದ ಮೀರಾಬಾಯಿ ಚಾನು; ಭಾರತಕ್ಕೆ ಮತ್ತೆ ನಿರಾಸೆ

Arvind Kejriwal
ದೇಶ6 hours ago

Arvind Kejriwal: ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ; ಸ್ವಾತಿ ಮಾಲಿವಾಲ್‌ ಕೇಸ್‌ನಲ್ಲೂ ಸಿಎಂ ವಿರುದ್ಧ ಚಾರ್ಜ್‌ಶೀಟ್!

ಕರ್ನಾಟಕ7 hours ago

Police Raid: ಸ್ಕೂಟರ್‌ನಲ್ಲಿ ಬರುತ್ತಿದ್ದ ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸ್‌ ಪೇದೆ!

John Abraham
ಕ್ರೀಡೆ7 hours ago

John Abraham: ಮನು ಭಾಕರ್‌ ಗೆದ್ದ ಒಲಿಂಪಿಕ್ಸ್‌ ಪದಕ ಮುಟ್ಟಿದ ಜಾನ್‌ ಅಬ್ರಾಹಂ; ನೆಟ್ಟಿಗರಿಂದ ನಟನಿಗೆ ಕ್ಲಾಸ್‌ ಏಕೆ?

Karnataka Governor
ಕರ್ನಾಟಕ7 hours ago

Karnataka Governor: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರನ್ನು ಭೇಟಿ ಮಾಡಿದ ಮಧ್ಯಪ್ರದೇಶದ ಸಿಎಂ

Dinesh Gundu Rao
ಬೆಂಗಳೂರು7 hours ago

Dinesh Gundu Rao: ರಾಜ್ಯದಲ್ಲಿ ಕಳಪೆ ಔಷಧಗಳ ಜಾಲ; ಅಧಿಕಾರಿಗಳಿಗೆ ಆರೋಗ್ಯ ಸಚಿವರ ತರಾಟೆ

Bangladesh Unrest
ವಿದೇಶ8 hours ago

Bangladesh Unrest: ಬಾಂಗ್ಲಾ ಹಿಂಸಾಚಾರ; ಬಹುರಾಷ್ಟ್ರೀಯ ಕಂಪನಿಗಳು ತತ್ತರ; ಭಾರತದ ಉದ್ಯಮಗಳ ಮೇಲೇನು ಪರಿಣಾಮ?

couple's fight
ಕರ್ನಾಟಕ8 hours ago

Couple’s fight: ಸಪ್ತಪದಿ ತುಳಿದ ಕೆಲವೇ ಹೊತ್ತಿನಲ್ಲಿ ನವದಂಪತಿ ಹೊಡೆದಾಟ; ವಧು ಸಾವು!

Bangladesh Unrest
ವಿದೇಶ8 hours ago

Bangladesh Unrest: ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದಾಳಿಗೆ ಇಸ್ಲಾಮಿಕ್‌ ರಾಷ್ಟ್ರಗಳಿಂದ ಹಣ; ಇಲ್ಲಿದೆ ಸ್ಫೋಟಕ ಮಾಹಿತಿ

World Breastfeeding Week 2024
ಆರೋಗ್ಯ8 hours ago

World Breastfeeding Week 2024: ಹಾಲುಣಿಸುವುದು ನಿಲ್ಲಿಸಿದ ಮೇಲೆ ತಾಯಿಯ ತೂಕ ಹೆಚ್ಚುವುದೇಕೆ? ಆಗೇನು ಮಾಡಬೇಕು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು1 day ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 day ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ7 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ7 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ7 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌