Manipal Hospitals : ಮಣಿಪಾಲ್‌ ಹಾಸ್ಪಿಟಲ್ಸ್‌ ಸರಣಿ ಆಸ್ಪತ್ರೆಗಳನ್ನು ಖರೀದಿಸಿದ ಸಿಂಗಾಪುರದ ಟೆಮಾಸೆಕ್‌ ಹೋಲ್ಡಿಂಗ್ಸ್: ವರದಿ - Vistara News

ಪ್ರಮುಖ ಸುದ್ದಿ

Manipal Hospitals : ಮಣಿಪಾಲ್‌ ಹಾಸ್ಪಿಟಲ್ಸ್‌ ಸರಣಿ ಆಸ್ಪತ್ರೆಗಳನ್ನು ಖರೀದಿಸಿದ ಸಿಂಗಾಪುರದ ಟೆಮಾಸೆಕ್‌ ಹೋಲ್ಡಿಂಗ್ಸ್: ವರದಿ

ಮಣಿಪಾಲ್‌ ಹಾಸ್ಪಿಟಲ್ಸ್‌ ಸರಣಿ ಆಸ್ಪತ್ರೆಗಳನ್ನು ಸಿಂಗಾಪುರ ಮೂಲದ ಟೆಮಾಸೆಕ್‌ ಹೋಲ್ಡಿಂಗ್ಸ್‌ 29,000 ಕೋಟಿ ರೂ.ಗೆ ಖರೀದಿಸಿದೆ. (Manipal Hospitals) ವಿವರ ಇಲ್ಲಿದೆ.

VISTARANEWS.COM


on

Manipal Hospitals
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಭಾರತದ ಪ್ರಸಿದ್ಧ ಆಸ್ಪತ್ರೆಗಳ ಸರಣಿ, ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ನ 59% ಷೇರುಗಳನ್ನು ಸಿಂಗಾಪುರದ ಸರಕಾರಿ ಸ್ವಾಮ್ಯದ ಟೆಮಾಸೆಕ್‌ ಹೋಲ್ಡಿಂಗ್ಸ್‌ ಕಂಪನಿಯು ಖರೀದಿಸಿದೆ. ಮಣಿಪಾಲ್‌ ಹೆಲ್ತ್‌ನಲ್ಲಿ ಈಗಾಗಲೇ 18% ಷೇರುಗಳನ್ನು ಹೊಂದಿದ್ದ ಟೆಮಾಸೆಕ್‌ ಅಧೀಣಧ ಶಿಯಾರ್ಸ್‌ ಹೆಲ್ತ್‌, ಹೆಚ್ಚುವರಿ 41% ಷೇರುಗಳನ್ನು ಪ್ರವರ್ತಕರು ಹಾಗೂ ಹೂಡಿಕೆದಾರರಿಂದ ಖರೀದಿಸಿದೆ. 29,000 ಕೋಟಿ ರೂ.ಗೆ ಡೀಲ್‌ ನಡೆದಿದೆ ಎಂದು ವರದಿಯಾಗಿದೆ.

ಈ ಬೆಳವಣಿಗೆಯೊಂದಿಗೆ ಮಣಿಪಾಲ್‌ ಹೆಲ್ತ್‌ನಲ್ಲಿ ಪ್ರವರ್ತಕ ರಂಜನ್‌ ಪೈ ಮತ್ತು ಕುಟುಂಬದ ಷೇರು ಪಾಲು 30% ಕ್ಕೆ ಇಳಿಕೆಯಾಗಿದೆ. ಹಾಲಿ ಹೂಡಿಕೆದಾರ ಟಿಪಿಜಿಯ ಷೇರು ಪಾಲು 11%ಕ್ಕೆ ಇಳಿಕೆಯಾಗಿದೆ. ಇತ್ತೀಚೆಗೆ ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ಕೋಲ್ಕೊತಾ ಮೂಲದ ಎಎಂಆರ್‌ಐ ಹಾಸ್ಪಿಟಲ್ಸ್‌ ಅನ್ನು 2,400 ಕೋಟಿ ರೂ.ಗೆ ಖರೀದಿಸಿದೆ ಎಂದು ವರದಿಯಾಗಿತ್ತು.

ಮಣಿಪಾಲ್‌ ಹಾಸ್ಪಿಟಲ್ಸ್‌ ಭಾರತದ ಎರಡನೇ ಅತಿ ದೊಡ್ಡ ಆಸ್ಪತ್ರೆಗಳ ಸರಣಿಯಾಗಿದೆ. ಇದು ಮಣಿಪಾಲ್‌ ಎಜುಕೇಶನ್‌ & ಮೆಡಿಕಲ್‌ ಗ್ರೂಪ್‌ನ ಭಾಗವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Nagarjuna Sagar: ನಾಗಾರ್ಜುನಸಾಗರದ ಈ ಸ್ಥಳಗಳು ವಾರಾಂತ್ಯ ಪ್ರವಾಸಕ್ಕೆ ಸೂಕ್ತ

ವಾರಾಂತ್ಯ ಬಂದಾಗ ಎಲ್ಲಾದರೂ ಹೋಗಬೇಕು ಅಂದುಕೊಳ್ಳುವವರಿಗೆ ನಾಗಾರ್ಜುನಸಾಗರ (Nagarjuna Sagar) ಹೇಳಿ ಮಾಡಿಸಿದ ಸ್ಥಳ. ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಎಲ್ಲಾ ಜಂಜಡಗಳನ್ನು ನೀವು ಮರೆತು ಹೊಸ ಉತ್ಸಾಹವನ್ನು ತುಂಬಿಕೊಳ್ಳಬಹುದು. ನಾಗಾರ್ಜುನ ಸಾಗರದ ಸುತ್ತಮುತ್ತಲಿನ ಈ ಸ್ಥಳಗಳು ರಮಣೀಯವಾಗಿವೆ. ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾಗಿದೆ. ಈ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

Nagarjuna Sagar
Koo

ಬೆಂಗಳೂರು: ಪ್ರತಿದಿನ ದಿನ ಒತ್ತಡದ ಬದುಕು, ಕೆಲಸದಲ್ಲಿ ಮುಳುಗಿರುವ ಜನರು ವಾರಾಂತ್ಯದ (Nagarjuna Sagar)ವೇಳೆ ತಮ್ಮ ಕುಟುಂಬದ ಜೊತೆ ಮೋಜು ಮಸ್ತಿ ಮಾಡಲು ಬಯಸುತ್ತಾರೆ. ಅದಕ್ಕಾಗಿ ಟೂರ್, ಹೋಟೆಲ್ ಮುಂತಾದಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಅಂತವರು ವಾರಾಂತ್ಯದ ವೇಳೆಗೆ ಆಂಧ್ರಪ್ರದೇಶದಲ್ಲಿರುವ ನಾಗಾರ್ಜುನಸಾಗರದ ಈ ಸ್ಥಳಗಳಿಗೆ ಭೇಟಿ ನೀಡಿ. ನಾಗಾರ್ಜುನಸಾಗರ ಗದ್ದಲಗಳಿಂದ ಮುಕ್ತವಾದ ಪ್ರದೇಶವಾಗಿದೆ. ಇಲ್ಲಿ ಪ್ರಶಾಂತವಾದ ವಾತಾವರಣ ಹಾಗೂ ಅನೇಕ ಆಕರ್ಷಕ ಸ್ಥಳಗಳನ್ನು ಹೊಂದಿವೆ. ವಾರಾಂತ್ಯದ ಪ್ರವಾಸಕ್ಕೆ ಇದು ಸೂಕ್ತವಾದ ಸ್ಥಳ. ಪ್ರಕೃತಿ ಪ್ರೇಮಿಗಳಿಗೆ, ಇತಿಹಾಸಗಾರರಿಗೆ ಇದು ಹೇಳಿ ಮಾಡಿಸಿದ ಸ್ಥಳ. ಹಾಗಾಗಿ ನಾಗಾರ್ಜುನಸಾಗರಕ್ಕೆ ಬಂದಾಗ ಇಲ್ಲಿನ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ.

Nagarjuna Sagar

ನಾಗಾರ್ಜುನಸಾಗರ ಅಣೆಕಟ್ಟು

ಇದು ವಿಶ್ವದ ಅತಿದೊಡ್ಡ ಕಲ್ಲಿನ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದನ್ನು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇಲ್ಲಿ ಅದ್ಭುತವಾದ ಪರಿಸರವಿದೆ. ಪ್ರವಾಸಿಗರು ಇಲ್ಲಿ ಖುಷಿಯಾಗಿ ವಾಕಿಂಗ್ ಮಾಡಬಹುದು. ಹಾಗೇ ಜಲಾಶಯದ ಮೇಲಿನ ಪ್ರಶಾಂತವಾದ ನೀರಿನಲ್ಲಿ ದೋಣಿ ವಿಹಾರ ಮಾಡುತ್ತಾ ಸುತ್ತಲಿನ ಬೆಟ್ಟ ಹಾಗೂ ಕಾಡುಗಳ ನೋಟವನ್ನು ಸವಿಯಬಹುದಾಗಿದೆ.

Weekend Getaway

ಎತ್ತಿಪೋತಲ ಜಲಪಾತ

ನಲ್ಲಮಲ ಬೆಟ್ಟದ ಹಸಿರಿನ ನಡುವೆ ನೆಲೆಸಿರುವ ಎತ್ತಿಪೋತಲ ಜಲಪಾತ ಪ್ರಕೃತಿ ಪ್ರಿಯರಿಗೆ ಇಷ್ಟವಾದ ಸ್ಥಳವಾಗಿದೆ. ಇಲ್ಲಿನ ಹಸಿರಾದ ಪರಿಸರದ ನಡುವೆ 70 ಅಡಿ ಎತ್ತರದಿಂದ ಧುಮುಕುವ ಜಲಪಾತ ಅದ್ಭುತ ನೋಟವನ್ನು ನೀಡುತ್ತದೆ. ಜಲಪಾತದ ಕೆಳಗಿರುವ ನೀರಿನಲ್ಲಿ ಪ್ರವಾಸಿಗರು ಸ್ನಾನ ಮಾಡಬಹುದಾಗಿದೆ. ಇಲ್ಲಿ ದಟ್ಟವಾದ ಕಾಡಿನ ನಡುವೆ ಚಾರಣ ಮಾಡಬಹುದು. ಇಲ್ಲಿ ಅನೇಕ ರೀತಿಯ ಪ್ರಾಣಿಗಳು ಮತ್ತು ಸಸ್ಯಗಳು ಕಂಡುಬರುತ್ತವೆ.

Weekend Getaway

ನಾಗಾರ್ಜುನಕೊಂಡ ದ್ವೀಪ

ಇಲ್ಲಿ ಕ್ರಿ.ಪೂ 3ನೇ ಶತಮಾನಕ್ಕೆ ಸೇರಿದ ಪ್ರಾಚೀನ ಬೌದ್ಧ ಅವಶೇಷಗಳನ್ನು ಅನ್ವೇಷಿಸಬಹುದಂತೆ. 3 ನೇ ಶತಮಾನದಲ್ಲಿ ಈ ದ್ವೀಪ ಬೌದ್ಧ ಧರ್ಮ ಮತ್ತು ಸಂಸ್ಕೃತಿಯನ್ನು ಕಲಿಯುವ ವಿದ್ಯೆ ಕೇಂದ್ರವಾಗಿತ್ತಂತೆ. ಹಾಗಾಗಿ ನಾವು ಇಲ್ಲಿ ಮಠಗಳು, ಸ್ತೂಪಗಳು ಮತ್ತು ಶಿಲ್ಪಗಳು ಇತ್ಯಾದಿಗಳ ಅವಶೇಷಗಳನ್ನು ಕಾಣಬಹುದಂತೆ. ಇದಲ್ಲದೇ ಇಲ್ಲಿಗೆ ಹೋಗಲು ದೋಣಿ ಸವಾರಿಯನ್ನು ಮಾಡಬೇಕಾಗುತ್ತದೆಯಂತೆ. ಇದು ಬಹಳ ಸಾಹಸಮಯವಾಗಿದೆಯಂತೆ.

Weekend Getaway

ಶ್ರೀಶೈಲಂ ವನ್ಯಜೀವಿ ಅಭಯಾರಣ್ಯ

ನಾಗಾರ್ಜುನ ಸಾಗರದಲ್ಲಿರುವ ಶ್ರೀಶೈಲಂ ವನ್ಯಜೀವಿ ಅಭಯಾರಣ್ಯ ಪ್ರಕೃತಿ ಹಾಗೂ ವನ್ಯಜೀವಿ ಪ್ರಿಯರಿಗೆ ಉತ್ತಮವಾದ ಸ್ಥಳವಾಗಿದೆ. ಇದು ನಲ್ಲಮಲ ಬೆಟ್ಟಗಳ ಭೂಪ್ರದೇಶದಲ್ಲಿ ಹರಡಿದೆ. ಇಲ್ಲಿ ಅನೇಕ ರೀತಿಯ ಪಕ್ಷಿಗಳು, ಹುಲಿಗಳು, ಚಿರತೆಗಳು ಮತ್ತು ಕರಡಿಯಂತಹ ಅನೇಕ ವಿಭಿನ್ನ ಪ್ರಾಣಿ ಪ್ರಭೇದಗಳು ಕಂಡುಬರುತ್ತದೆಯಂತೆ. ಹಾಗೇ ಇಲ್ಲಿ ವನ್ಯಜೀವಿಗಳನ್ನು ನೋಡಲು ಸಫಾರಿ ನಡಿಗೆಗಳನ್ನು ಆಯೋಜಿಸಲಾಗಿದೆಯಂತೆ.

Weekend Getaway

ನಾಗಾರ್ಜುನಸಾಗರ ವನ್ಯಜೀವಿ ಅಭಯಾರಣ್ಯ

ಇದು ಪ್ರಕೃತಿ ಹಾಗೂ ವನ್ಯಜೀವಿ ಪ್ರಿಯರಿಗೆ ಖುಷಿ ನೀಡುವ ಮತ್ತೊಂದು ಅದ್ಭುತವಾದ ಸ್ಥಳವಾಗಿದೆ. ಇಲ್ಲಿ ವಿವಿಧ ಸಸ್ಯ ಮತ್ತು ಪ್ರಾಣಿಗಳು ಕಂಡುಬರುತ್ತವೆಯಂತೆ. ಈ ಅಭಯಾರಣ್ಯ ಪೂರ್ವ ಘಟ್ಟಗಳ ಒರಟು ಭೂಪ್ರದೇಶದಲ್ಲಿ ಇದೆ. ಇಲ್ಲಿ ಹುಲಿಗಳು, ಚಿರತೆಗಳು, ಭಾರತೀಯ ಕಾಡೆಮ್ಮೆ ಮುಂತಾದ ಹಲವಾರು ಪ್ರಾಣಿಗಳ ಜೊತೆಗೆ ಸಸ್ಯಗಳನ್ನು ನೊಡಬಹುದಂತೆ. ಅಲ್ಲದೇ ಇಲ್ಲಿ ಸಂದರ್ಶಕರಿಗೆ ಸಫಾರಿ ನಡಿಗೆ ಅಥವಾ ಪಕ್ಷಿ ವೀಕ್ಷಣೆಯ ಮೂಲಕ ಈ ಪ್ರದೇಶವನ್ನು ಅನ್ವೇಷಣೆ ಮಾಡಲು ಅವಕಾಶವಿದೆಯಂತೆ.

ಇದನ್ನೂ ಓದಿ: Delhi Tour: ದೆಹಲಿಗೆ ಪ್ರವಾಸಕ್ಕೆ ಹೋದಾಗ ಮಿಸ್ ಮಾಡದೇ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ!

ಒಟ್ಟಾರೆ ನಾಗಾರ್ಜುನಸಾಗರ ವನ್ಯಜೀವಿ ಪ್ರಿಯರಿಗೆ, ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ಹಾಗಾಗಿ ವಾರಾಂತ್ಯದಲ್ಲಿ ಇಲ್ಲಿಗೆ ಬರುವುದನ್ನು ಮರೆಯಬೇಡಿ.

Continue Reading

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

ಒಬ್ಬ ಸಿನೆಮಾ ನಟ ತಾನು ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ, ನಿಜ ಜೀವನದಲ್ಲಿ ಆತನ ವ್ಯಕ್ತಿತ್ವಕ್ಕೂ ಅಜಗಜಾಂತರ ಇದೆ ಅಂತಾದರೆ ಸಹಿಸಿಕೊಳ್ಳುವುದು ಹೇಗೆ? ಒಬ್ಬ ಸ್ಟಾರ್ ನಟ ಆಪಾದಿತನಾಗಿ ಕಟಕಟೆಯಲ್ಲಿ ತಲೆ ತಗ್ಗಿಸಿ ನಿಂತಾಗಲೂ ಜೈಕಾರ ಹಾಕುವ ಹುಚ್ಚು ಅಭಿಮಾನಿಗಳಿಗೆ ಏನೆಂದು ಹೇಳಬೇಕು? ಒಬ್ಬ ಸ್ಟಾರ್ ನಟನ ಕೋಟಿ ಅಭಿಮಾನಿಗಳು ಆತನ ಖಾಸಗಿ ಜೀವನವನ್ನು ಅನುಕರಣೆ ಮಾಡಲು ಹೋದರೆ ಸಮಾಜ ಹೇಗಿರಬಹುದು?

VISTARANEWS.COM


on

Actor Darshan
Koo

ರಾಜೇಂದ್ರ ಭಟ್ ಕೆ

Rajendra-Bhat-Raja-Marga-Main-logo

ಮೊದಲೇ ಹೇಳಿಬಿಡುತ್ತೇನೆ, ನಾನು ಯಾವುದೇ ಸಿನಿಮಾ ನಟನ ಅಭಿಮಾನಿಯಲ್ಲ. ದರ್ಶನ್ (Actor Darshan) ಎಂಬ ಕನ್ನಡದ ಸ್ಟಾರ್ ನಟನ ಬದುಕಿನಲ್ಲಿ ಈ ಎರಡು ದಿನಗಳ ಅವಧಿಯಲ್ಲಿ ಏನೆಲ್ಲ ಆಗಿದೆ ಅದರ ಬಗ್ಗೆ ನಾನು ತೀರ್ಪು ಕೊಡಲು ಹೋಗುವುದಿಲ್ಲ. ಆದರೆ ಈ ಘಟನೆಯು ಸಮಾಜಕ್ಕೆ ಬಹು ದೊಡ್ಡ ಸಂದೇಶ ಉಳಿಸಿ ಹೋಗಿದೆ. ಆತನ ಸಿನೆಮಾಗಳಲ್ಲಿ ಅವನು ಮಾಡುವ ಪಾತ್ರಗಳು, ಕೊಡುವ ಪೋಸ್, ಹೊಡೆಯುವ ಡೈಲಾಗುಗಳು, ಪ್ರಕಟಿಸುವ ಮೌಲ್ಯಗಳು….
ಛೇ! ಹೀಗಾಗಬಾರದಿತ್ತು. ಅವನನ್ನು ಕೋರ್ಟಿಗೆ ವಿಚಾರಣೆಗೆ ಕರೆತಂದಾಗ ಅಲ್ಲಿದ್ದ ಕೆಲವು ಅಭಿಮಾನಿಗಳು ‘ ಡಿ ಬಾಸಿಗೆ ಜಯವಾಗಲಿ’ ಅಂತ ಘೋಷಣೆ ಕೂಗಿದರಂತೆ! ಇನ್ನು ಅವನು ಈ ಕೇಸನ್ನು ಗೆದ್ದು ಬಂದರೆ ಸಾವಿರಾರು ಅಭಿಮಾನಿಗಳು ಮಾಲೆ ಹಿಡಿದು ಜೈಕಾರ ಹಾಕಲು ಕಾಯುತ್ತಿರುತ್ತಾರೆ! ಅಂಧಾಭಿಮಾನ ಈ ಮಟ್ಟಕ್ಕೆ ಹೋಗಬಾರದು.

ನಮ್ಮ ಖಾಸಗಿ ಜೀವನ ಮತ್ತು ವೃತ್ತಿ ಜೀವನ

ಪ್ರತಿಯೊಬ್ಬ ವ್ಯಕ್ತಿಗೂ ಒಂದು ಖಾಸಗಿ ಜೀವನ ಮತ್ತು ಇನ್ನೊಂದು ವೃತ್ತಿ ಜೀವನ ಇರುತ್ತದೆ. ಅದರ ಮಧ್ಯೆ ಒಂದು ಸಣ್ಣ ಗ್ಯಾಪ್ ಇದ್ದೇ ಇರುತ್ತದೆ. ಅದು ಸಹಜ ಕೂಡ.

ಆದರೆ ಅದೇ ಗ್ಯಾಪ್ ದೊಡ್ಡದಾದರೆ? ಒಬ್ಬ ಸಿನೆಮಾ ನಟ ತಾನು ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ, ನಿಜ ಜೀವನದಲ್ಲಿ ಆತನ ವ್ಯಕ್ತಿತ್ವಕ್ಕೂ ಅಜಗಜಾಂತರ ಇದೆ ಅಂತಾದರೆ ಸಹಿಸಿಕೊಳ್ಳುವುದು ಹೇಗೆ? ಒಬ್ಬ ಸ್ಟಾರ್ ನಟ ಆಪಾದಿತನಾಗಿ ಕಟಕಟೆಯಲ್ಲಿ ತಲೆ ತಗ್ಗಿಸಿ ನಿಂತಾಗಲೂ ಜೈಕಾರ ಹಾಕುವ ಹುಚ್ಚು ಅಭಿಮಾನಿಗಳಿಗೆ ಏನೆಂದು ಹೇಳಬೇಕು? ಒಬ್ಬ ಸ್ಟಾರ್ ನಟನ ಕೋಟಿ ಅಭಿಮಾನಿಗಳು ಆತನ ಖಾಸಗಿ ಜೀವನವನ್ನು ಅನುಕರಣೆ ಮಾಡಲು ಹೋದರೆ ಸಮಾಜ ಹೇಗಿರಬಹುದು? ಒಬ್ಬ ಬಡ ಕುಟುಂಬದ ಹುಡುಗ ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿ ತೊಂದರೆ ಕೊಟ್ಟ ಎಂಬ ಕಾರಣಕ್ಕೆ ಸ್ಟಾರ್ ನಟ ಮತ್ತು ಅವನ ಗೆಳೆಯರು ಹೊಡೆದು ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾರೆ (ನನಗೆ ಗೊತ್ತಿಲ್ಲ) ಅಂದರೆ ಅದೆಂತಹ ಕ್ರೌರ್ಯ? ದರ್ಶನ್ ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ ಇಂತಹ ಘಟನೆಗಳಿಗೂ ಎಷ್ಟೊಂದು ವ್ಯತ್ಯಾಸ ಅಲ್ವಾ?

ಹುಚ್ಚು ಅಭಿಮಾನಿಗಳ ಅತಿರೇಕಗಳು!:

ಬಹಳ ಹಿಂದೆ ಡಾಕ್ಟರ್ ರಾಜಕುಮಾರ್ ಅವರ ‘ಸಮಯದ ಗೊಂಬೆ ‘ ಸಿನೆಮಾ ಬಿಡುಗಡೆ ಆಗಿತ್ತು. ನಾನು ಅದನ್ನು ಬೆಂಗಳೂರಿನ ಒಂದು ಥಿಯೇಟರ್ ಒಳಗೆ ಕೂತು ನೋಡುತ್ತಾ ಇದ್ದೆ. ಅದರಲ್ಲಿ ರಾಜ್ ಅವರದ್ದು ಒಬ್ಬ ಸಾಮಾನ್ಯ ಕಾರ್ ಡ್ರೈವರ್ ಪಾತ್ರ ಆಗಿತ್ತು. ನಟ ಶ್ರೀನಾಥ್ ಅವರದ್ದು ಆ ಕಾರ್ ಯಜಮಾನನ ಪಾತ್ರ. ಒಂದು ಭಾವನಾತ್ಮಕ ಪಾತ್ರದಲ್ಲಿ ಸಿಟ್ಟು ಮಾಡಿಕೊಂಡ ಶ್ರೀನಾಥ್ ತನ್ನ ಡ್ರೈವರ್ ಆದ ರಾಜಕುಮಾರ್ ಅವರ ಕಪಾಳಕ್ಕೆ ಹೊಡೆಯುವ ಸನ್ನಿವೇಶ. ಸಿನೆಮಾದ ಕಥೆಯೇ ಹಾಗಿತ್ತು. ಆದರೆ ಅದನ್ನು ರಾಜ್ ಅಭಿಮಾನಿಗಳು ಸಹಿಸಿಕೊಳ್ಳಲಿಲ್ಲ.
‘ಏನೋ, ನಮ್ಮ ಅಣ್ಣಾವ್ರಿಗೆ ಹೊಡೀತಿಯೇನೋ?’ ಎಂದೆಲ್ಲ ಕೂಗಾಡಿದರು. ಥಿಯೇಟರ್ ಮೇಲೆ ಕಲ್ಲು ಬಿತ್ತು. ಶ್ರೀನಾಥ್ ಎಂಬ ನಟನಿಗೆ ಬೈಗುಳದ ಅಭಿಷೇಕವೇ ಆಯಿತು. ಕೊನೆಗೆ ಚಿತ್ರ ನಿರ್ಮಾಪಕರು ಕ್ಷಮೆ ಕೇಳಿ ಆ ದೃಶ್ಯವನ್ನು ಕತ್ತರಿಸುವ ಭರವಸೆ ಕೊಟ್ಟ ನಂತರ ಪ್ರೇಕ್ಷಕರ ಆಕ್ರೋಶವು ತಣಿಯಿತು.

ತಮಿಳುನಾಡಿನಲ್ಲಿ ಈ ಹುಚ್ಚು ಅಭಿಮಾನ ಇನ್ನೂ ಜಾಸ್ತಿ. ಎಂ ಜಿ ಆರ್, ಜಯಲಲಿತಾ, ಅಜಿತ್, ವಿಜಯ್, ರಜನೀಕಾಂತ್ ಅವರನ್ನು ದೇವರಾಗಿ ಕಂಡ ಜನ ಅವರು. ನಟಿ ಖುಷ್ಬೂಗೆ ಒಂದು ದೇವಸ್ಥಾನವನ್ನು ಕಟ್ಟಿದ ಜನ ಅವರು! ಒಬ್ಬ ನಟನ ಅಭಿಮಾನಿಗಳು ಇನ್ನೊಬ್ಬ ನಟನ ಅಭಿಮಾನಿಗಳ ಮೇಲೆ ಹಲ್ಲೆ ನಡೆಸುವ ಘಟನೆಗಳು ಅಲ್ಲಿ ನಿತ್ಯವೂ ನಡೆಯುತ್ತವೆ. ಅಂತಹ ಅಂಧಾಭಿಮಾನಿಗಳಿಗೆ ಕಪಾಳಕ್ಕೆ ಹೊಡೆದ ಹಾಗೆ ನಡೆದಿದೆ ಈ ಮರ್ಡರ್ ಕಥೆ. ಆದರೆ ಬಲಿಯಾದದ್ದು ಒಬ್ಬ ಬಡ ಅಪ್ಪ , ಅಮ್ಮನ ಒಬ್ಬನೇ ಮಗ, ಕುಟುಂಬದ ಒಬ್ಬನೇ ಆಧಾರ ಅನ್ನೋದು, ಒಬ್ಬ ಚೊಚ್ಚಲ ಬಾಣಂತಿಯ ಗಂಡ ಅನ್ನೋದು ಮಾತ್ರ ದುರಂತ!

ಕರಾವಳಿಯ ಜನ ಬುದ್ಧಿವಂತರು!:

ಇಲ್ಲಿಯ ಸಿನೆಮಾ ಪ್ರೇಕ್ಷಕರು ಕೇವಲ ಮನರಂಜನೆಗಾಗಿ ಸಿನೆಮಾ ನೋಡುತ್ತಾರೆ. ಕಥೆ ಚೆನ್ನಾಗಿದ್ದರೆ ಮಾತ್ರ ನೋಡುತ್ತಾರೆ. ಯಾವ ಸ್ಟಾರ್ ನಟ ಅಥವಾ ಸ್ಟಾರ್ ನಟಿಯ ಸಿನೆಮಾ ಬಂದರೂ ಆ ಸ್ಟಾರಗಿರಿಗೆ ಮೆಚ್ಚಿ ಸಿನೆಮಾ ನೋಡಲು ಬರುವುದೇ ಇಲ್ಲ. ‘ಹೀರೋ ವರ್ಶಿಪ್ ‘ ಕರಾವಳಿಯಲ್ಲಿ ತುಂಬಾ ಕಡಿಮೆ. ಈ ಪ್ರಬುದ್ಧತೆಯೇ ಇಂದು ನಿಜವಾಗಿ ಬೇಕಾಗಿರುವುದು. ಹಾಗೆಯೇ ನಾನು ಹಿಂದೊಮ್ಮೆ ಬರೆದ ವರನಟ ರಾಜಕುಮಾರ್ ಅವರ ಮಾತುಗಳನ್ನು ಇಲ್ಲಿ ಉಲ್ಲೇಖ ಮಾಡಬೇಕು.

ಇದನ್ನೂ ಓದಿ: Rajeev Taranath : ಮಹೋನ್ನತ ಪ್ರತಿಭೆಯ ರಾಜೀವ್ ತಾರಾನಾಥ್ ಸರೋದ್ ಲೋಕದ ಅದ್ಭುತ!

‘ನಮ್ಮಂತಹ ನಟರನ್ನು ಸಾವಿರಾರು ಅಭಿಮಾನಿಗಳು ಅನುಕರಣೆ ಮಾಡುತ್ತಾರೆ. ಆದ್ದರಿಂದ ನಮ್ಮ ಖಾಸಗಿ ಜೀವನವೂ ಅವರಿಗೆ ಅನುಕರಣೀಯ ಆಗಿರಬೇಕು.’ ಅವರು ತೆರೆಯ ಮೇಲೆ ಯಾವ ಪಾತ್ರಗಳನ್ನು ಮಾಡಿದ್ದರೋ ಅದೇ ರೀತಿ ಬದುಕಿದ್ದರು. ‘ನನ್ನ ಜೀವನವೇ ನನ್ನ ಸಂದೇಶ ‘ ಅಂದಿದ್ದರು ಗಾಂಧೀಜಿ. ಅವರ ಬದುಕಿನಲ್ಲಿಯೂ ಕೆಲವು ಕಪ್ಪು ಪುಟಗಳು ಇದ್ದವು. ಅದ್ಯಾವುದನ್ನೂ ಅವರು ಮುಚ್ಚಿಡಲಿಲ್ಲ. ಅವರ ಆತ್ಮಚರಿತ್ರೆಯ ಪುಸ್ತಕವಾದ
‘ಸತ್ಯಾನ್ವೇಷಣೆ ‘ಯಲ್ಲಿ ಅವರು ಆ ಕಪ್ಪು ಪುಟಗಳನ್ನು ಬರೆಯಲು ಹೇಸಿಗೆ ಮಾಡಲಿಲ್ಲ. ಅದಕ್ಕಾಗಿ ಅವರು ಲೆಜೆಂಡ್ ಆದರು. ನಮ್ಮ ಬದುಕು ಕೂಡ ಒಂದು ತೆರೆದ ಪುಸ್ತಕ ಆಗೋದು ಯಾವಾಗ?

Continue Reading

ಉದ್ಯೋಗ

Job Alert: ಎಚ್‌ಎಎಲ್‌ನಲ್ಲಿದೆ ಉದ್ಯೋಗಾವಕಾಶ; ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Job Alert: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನಲ್ಲಿ ಖಾಲಿ ಇರುವ 116 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಟೆಕ್ನಿಶಿಯನ್ ಹುದ್ದೆ ಇದಾಗಿದ್ದು, ತಾತ್ಕಾಲಿಕ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್‌ 20.

VISTARANEWS.COM


on

Job Alert
Koo

ಬೆಂಗಳೂರು: ಒಂದೊಳ್ಳೆ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (Hindustan Aeronautics Limited)ನಲ್ಲಿ ಖಾಲಿ ಇರುವ 116 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (HAL Recruitment 2024). ಟೆಕ್ನಿಶಿಯನ್ ಹುದ್ದೆ ಇದಾಗಿದ್ದು, ತಾತ್ಕಾಲಿಕ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್‌ 20 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಮೆಕ್ಯಾನಿಕಲ್ 64 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಮೆಕ್ಯಾನಿಕಲ್‌ / ಪ್ರೊಡಕ್ಷನ್‌.
ಎಲೆಕ್ಟ್ರಿಕಲ್ 44 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಎಲೆಕ್ಟ್ರಿಕಲ್‌ / ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌.
ಎಲೆಕ್ಟ್ರಾನಿಕ್ಸ್‌ 8 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಎಲೆಕ್ಟ್ರಾನಿಕ್ಸ್‌ / ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌ / ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌ / ಎಲೆಕ್ಟ್ರಾನಿಕ್ಸ್‌ & ಟೆಲಿಕಮ್ಯುನಿಕೇಷನ್‌.

ವಯೋಮಿತಿ

ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ-ಎನ್‌ಸಿಎಸ್‌ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಜುಲೈ 7ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಆಯ್ಕೆಯಾದವರಿಗೆ ಬೆಂಗಳೂರು (ಕರ್ನಾಟಕ), ಜೋಧಪುರ (ರಾಜಸ್ಥಾನ), ನಾಗತಲಾವ್ (ರಾಜಸ್ಥಾನ), ಭುವನೇಶ್ವರ್ (ಒಡಿಸ್ಸಾ), ಪೋರ್‌ಬಂದರ್‌ (ಗುಜರಾತ್), ರತ್ನಗಿರಿ (ಮಹಾರಾಷ್ಟ್ರ), ಶಿಕ್ರಾ-ಮುಂಬೈ (ಮಹಾರಾಷ್ಟ್ರ), ಕೊಚ್ಚಿ (ಕೇರಳ), ಪುದುಚೇರಿ, ಪರುಂಡು-ರಾಮೇಶ್ವರಂ, ಚೆನ್ನೈ, ಸೂಲೂರು (ತಮಿಳುನಾಡು), ದೇಗಾ ವೈಜಾಗ್, ತೇಜ್ಪುರ್ (ಅಸ್ಸಾಂ), ಮಿಸ್ಸಮರಿ (ಅಸ್ಸಾಂ), ದಿಂಜನ್ (ಅಸ್ಸಾಂ), ಲಿಕಾಬಲಿ (ಅಸ್ಸಾಂ), ಉಧಂಪುರ (ಜಮ್ಮು ಮತ್ತು ಕಾಶ್ಮೀರ), ಲೇಹ್, ಭಟಿಂಡಾ (ಪಂಜಾಬ್), ಮಾಮುನ್ (ಪಂಜಾಬ್), ಹಲ್ದ್ವಾನಿ (ಉತ್ತರಖಂಡ), ಟಿಬ್ರಿ (ಪಂಜಾಬ್) ಪೈಕಿ ಒಂದು ಕಡೆ ಪೋಸ್ಟಿಂಗ್‌ ನೀಡಲಾಗುತ್ತದೆ.

HAL Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (halmro.formflix.com).
  • ಅಗತ್ಯ ಮಾಹಿತಿ ತುಂಬಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಕ್ಯಾಪ್ಚಾ ನಮೂದಿಸಿ.
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂನ ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಇದನ್ನು ಗಮನಿಸಿ

  • ಭಾರತೀಯ ನಾಗರಿಕರು ಮಾತ್ರ ಅಪ್ಲೈ ಮಾಡಬಹುದು
  • ಒಬ್ಬರು ಒಂದು ಪೋಸ್ಟ್‌ಗೆ ಮಾತ್ರ ಅರ್ಜಿ ಸಲ್ಲಿಸಬೇಕು.
  • ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಮತ್ತೆ ತಿದ್ದಲು ಅವಕಾಶವಿಲ್ಲ.
  • ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು.
  • ಇವು ಖಾಯಂ ಹುದ್ದೆಗಳಲ್ಲ. ತಾತ್ಕಾಲಿಕ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Job Alert: ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading

ಪ್ರಮುಖ ಸುದ್ದಿ

Rajeev Taranath : ಮಹೋನ್ನತ ಪ್ರತಿಭೆಯ ರಾಜೀವ್ ತಾರಾನಾಥ್ ಸರೋದ್ ಲೋಕದ ಅದ್ಭುತ!

Rajeev Taranath: ಹಾಗೆ ನೋಡಿದರೆ ರಾಜೀವ್ ತಾರಾನಾಥ್ ಅವರು ಬಹಳ ಅದ್ಭುತ ಲೇಖಕರು. ಅಂದಿನ ನಮ್ಮ ಹಾಟ್ ಫೇವರಿಟ್ ಲೇಖಕ ಯು.ಆರ್.ಅನಂತಮೂರ್ತಿಯವರ ಕಥಾ ಸಂಕಲನ ‘ಮೌನಿ’ ಕೃತಿಗೆ ಅತ್ಯುತ್ತಮ ಮುನ್ನುಡಿ ಬರೆದಿದ್ದರು. ಅದೆಷ್ಟು ಒಳ್ಳೆಯ ಮುನ್ನುಡಿ ಬರೆದಿದ್ದರೆಂದರೆ, ಸಂಕಲನಕ್ಕಿಂತ ಮುನ್ನುಡಿಯನ್ನೇ ನಾವೆಲ್ಲ ನಾಲ್ಕಾರು ಬಾರಿ ಓದಿದ್ದೆವು. ತೊಂಬತ್ತೆರಡು ವರ್ಷ ಇದ್ದ ರಾಜೀವ್ ಇನ್ನಿಲ್ಲ. ಹಾಗೆನ್ನುವಾಗ, ನಮ್ಮ “ಯಾದೊಂಕೀ ಬಾರಾತ್”ನಲ್ಲಿ ಅವರ ಬರವಣಿಗೆ, ಅವರ ಮಾತು, ಅವರ ತುಂಬು ಕಂಠ, ಅವರ ಅಸದೃಶ ಸರೋದ್ ವಾದನ ಎಲ್ಲವೂ ಒಟ್ಟೊಟ್ಟಿಗೇ ನುಗ್ಗಿನುಗ್ಗಿ ಬರುತ್ತಿವೆ.

VISTARANEWS.COM


on

Rajiv Taranath
Koo

ಮಂಜುನಾಥ ಅಜ್ಜಂಪುರ

ಸಂಗೀತವೇ ಅದ್ಭುತ. ಅದರಲ್ಲೂ ಹಿಂದೂಸ್ತಾನಿ ಸಂಗೀತವೆಂಬುದು ಅನೂಹ್ಯ, ಅಸಾಮಾನ್ಯ. ಅದರ ಭಾವಲೋಕದ ಸಾಧ್ಯತೆಗಳೇ ಅಪಾರ. ಕ್ಷಣಕಾಲ ಕಣ್ಣುಮುಚ್ಚಿ ಕೇಳಿದರೂ ಅನುಭವ ಅನುಭಾವವಾಗಿಬಿಡುತ್ತದೆ.
ಬಾಲ್ಯದಲ್ಲಿ ಕರ್ನಾಟಕ ಸಂಗೀತದ ಕೆಲವು ವಾದ್ಯಗಳನ್ನು ನೋಡಿ ಪರಿಚಯ ಮಾಡಿಕೊಂಡಿದ್ದರೂ ಸಿತಾರ್, ಸರೋದ್, ಸಂತೂರ್, ಬಾನ್ಸುರಿ, ಸಾರಂಗಿಗಳಂತಹ ವಾದ್ಯಗಳನ್ನು ನೋಡುವ ಅವಕಾಶವೇ ಇರಲಿಲ್ಲ. ನಮ್ಮ ತಂದೆಯವರು (ಅಜ್ಜಂಪುರದ ಎ.ಪಿ. ನಾಗರಾಜ ಶ್ರೇಷ್ಠಿಯವರು) ರೇಡಿಯೋದಲ್ಲಿ ಮುಂಜಾನೆ ಬರುತ್ತಿದ್ದ ರಾಮರಾವ್ ನಾಯಕ್, ಮಲ್ಲಿಕಾರ್ಜುನ ಮನ್ಸೂರ್ ಮೊದಲಾದವರ ಗಾಯನ ಕೇಳುತ್ತಿದ್ದರು. ಕೇಳಿ ಕೇಳಿ ನಾನೂ ಹಿಂದೂಸ್ತಾನಿ ಸಂಗೀತ ಕೇಳುವ – ಆನಂದಿಸುವ ಸಂಸ್ಕಾರ ಬೆಳೆಸಿಕೊಂಡೆ. 1970ರ ದಶಕದ ಆರಂಭದ ಆ ಕಾಲದಲ್ಲಿ, ಪ್ರತಿ ವರ್ಷ ಆಕಾಶವಾಣಿಯಲ್ಲಿ ಬರುತ್ತಿದ್ದ ರೇಡಿಯೋ ಸಂಗೀತ ಸಮ್ಮೇಳನಗಳು, ಗಾಯನ ಮತ್ತು ವಾದ್ಯ ಸಂಗೀತಗಳ ಪರಮಾದ್ಭುತ ಲೋಕಕ್ಕೆ ಕರೆದೊಯ್ಯುತ್ತಿದ್ದವು. ಹಾಗೆ ವಿಜಯರಾಘವ ರಾವ್, ಬಿಸ್ಮಿಲ್ಲಾ ಖಾನ್, ಪರ್ವೀನ್ ಸುಲ್ತಾನಾ, ಶಿವಕುಮಾರ್ ಶರ್ಮ ಮೊದಲಾದವರ ದಿವ್ಯ ಸಂಗೀತದ ಪರಿಚಯವಾಯಿತು. ವಿಶೇಷವಾಗಿ ಸರೋದ್, ಸಂತೂರ್ ಮತ್ತು ಬಾನ್ಸುರಿಗಳು ಅಂದಿಗೂ – ಇಂದಿಗೂ ನನಗೆ ಬಹಳ ಬಹಳ ಆಪ್ಯಾಯಮಾನ.

ಇಂದಿಗೂ ಪ್ರತಿನಿತ್ಯ ಕೇಳುತ್ತೇನೆ

ಹಾಗೆ ತಮ್ಮ ಸರೋದ್ ನಿಂದ ಪರಿಚಯವಾದವರು ರಾಜೀವ್ ತಾರಾನಾಥ್ (Rajeev Taranath). ಹಾಗೆ ನೋಡಿದರೆ, ಅವರು ಬಹಳ ಅದ್ಭುತ ಲೇಖಕರು. ಅಂದಿನ ನಮ್ಮ ಹಾಟ್ ಫೇವರಿಟ್ ಲೇಖಕ ಯು.ಆರ್.ಅನಂತಮೂರ್ತಿಯವರ ಕಥಾ ಸಂಕಲನ “ಮೌನಿ” ಕೃತಿಗೆ ಅತ್ಯುತ್ತಮ ಮುನ್ನುಡಿ ಬರೆದಿದ್ದರು. ಅದೆಷ್ಟು ಒಳ್ಳೆಯ ಮುನ್ನುಡಿ ಬರೆದಿದ್ದರೆಂದರೆ, ಸಂಕಲನಕ್ಕಿಂತ ಮುನ್ನುಡಿಯನ್ನೇ ನಾವೆಲ್ಲ ನಾಲ್ಕಾರು ಬಾರಿ ಓದಿದ್ದೆವು. ಇದೆಲ್ಲ ಅರ್ಧ ಶತಮಾನಕ್ಕೂ ಹಿಂದಿನ ವಿಷಯ.

ಬಹುಮುಖ ಪ್ರತಿಭೆಯ ಮತ್ತು ಕ್ರಾಂತಿಕಾರಿ ವ್ಯಕ್ತಿತ್ವದ ತಾರಾನಾಥರು ಇವರ ತಂದೆ. ಸಾಹಿತ್ಯವಂತೂ ಸಹಜವಾಗಿಯೇ ರಾಜೀವರಿಗೆ ಒಲಿದಿತ್ತು. ಆದರೂ ಅನಂತರದ ವರ್ಷಗಳಲ್ಲಿ ಅವರು ಸಂಗೀತಕ್ಕೆ ಆದ್ಯತೆ, ಪ್ರಾಧಾನ್ಯ ನೀಡಿದರು. ಬೆಂಗಳೂರಿನಲ್ಲಿ ಒಮ್ಮೆ ಅವರ ಸರೋದ್ ವಾದನದ ಕಛೇರಿ ಇತ್ತು. ಪ್ರಾಯಶಃ 1979 ಇಲ್ಲವೇ 1980 ಇರಬಹುದು. ಬಸವನಗುಡಿಯ ದೊಡ್ಡ ಗಣೇಶನ ಬಳಿಯ ಕಹಳೆ ಬಂಡೆಯ ಬಳಿ ಮುಂಜಾನೆಯೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜೀವರನ್ನು ಮತ್ತು ಸರೋದ್ ವಾದ್ಯವನ್ನು ಮೊದಲ ಬಾರಿಗೆ ನೋಡುವ ಅವಕಾಶ. ಲೇಖಕ ರಾಜೀವರ ಅಭಿಮಾನಿಗಳಾದ ಮತ್ತು ಸರೋದ್ ವಾದನದ ಅಭಿಮಾನಿಗಳೂ ಆದ ನಮ್ಮಂತಹವರಿಗೆ ಅದೊಂದು ಸುವರ್ಣಾವಕಾಶವಾಗಿತ್ತು. “ಕ್ಯಾಲಿಫೋರ್ನಿಯಾದಿಂದ ಬಂದೆ” ಎಂದಿದ್ದರು. ನಾನೂ, ಮಾಲಾ ಸರೋದ್ ಕಚೇರಿ ಕೇಳಿದ್ದೇ ಅದೇ ಮೊದಲು. ರೇಡಿಯೋದಲ್ಲಿ ಕೇಳುವುದಕ್ಕೂ, ಮಹಾನ್ ಕಲಾವಿದರನ್ನು ನೇರಾನೇರ ನೋಡುತ್ತ ಕೇಳುವುದಕ್ಕೂ ತುಂಬ ವ್ಯತ್ಯಾಸವಿದೆ.

ಇನ್ನೊಮ್ಮೆ ಆರ್.ವಿ.ಕಾಲೇಜಿನಲ್ಲೂ ಅದೇ ಕಾಲಘಟ್ಟದಲ್ಲಿ ರಾಜೀವ್ ತಾರಾನಾಥರ ಸರೋದ್ ವಾದನ ಕೇಳುವ ದಿವ್ಯ ಅವಕಾಶ ನಮಗೆ ದೊರೆತಿತ್ತು. ಆ ಕಾಲವೇ ಹಾಗಿತ್ತು. ರೇಡಿಯೋ ಬಿಟ್ಟರೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾತ್ರವೇ ಕೇಳುವ – ನೋಡುವ ಅವಕಾಶ ಲಭ್ಯ.

ಇದನ್ನೂ ಓದಿ: Rajeev Taranath: ಖ್ಯಾತ ಸರೋದ್‌ ವಾದಕ ರಾಜೀವ್ ತಾರಾನಾಥ್ ಇನ್ನಿಲ್ಲ

ದಿಗ್ಗಜರ ಒಡನಾಟ

ರಾಜೀವ್ ತಾರಾನಾಥರ ಬಹು ಆಯಾಮಗಳ ಪ್ರತಿಭೆಯ ಆಸ್ವಾದನಕ್ಕೆ ದೊರೆತ ಮತ್ತೊಂದು ಅವಕಾಶ ಎಂದರೆ, 1983ರಲ್ಲಿ ಗಿರೀಶ್ ಕಾಸರವಳ್ಳಿಯವರು ನಡೆಸಿಕೊಟ್ಟ 8 ದಿನಗಳ ಚಲನಚಿತ್ರ ರಸಗ್ರಹಣ ಶಿಬಿರ. ಗೆಳೆಯ ಅಪೂರ್ವ ಅಜ್ಜಂಪುರ ಅವರೊಂದಿಗೆ, ನಾನೂ – ಮಾಲಾ ಶಿಬಿರದಲ್ಲಿ ಭಾಗವಹಿಸಿದ್ದೆವು. ಇಂದಿಗೂ ನೆನಸಿಕೊಳ್ಳುವಂತಹ ಅಪೂರ್ವ ಶಿಬಿರವದು. ಚಲನಚಿತ್ರಗಳ ಸಂಗೀತದ ಆಯಾಮದ ಬಗೆಗೆ ರಾಜೀವ್ ವಿವರಣೆ ನೀಡುತ್ತಿದ್ದರು. ನೆನಪು ಮಾಡಿಕೊಂಡರೆ, ಇಂದಿಗೂ ರೋಮಾಂಚನವಾಗುತ್ತದೆ. ಅದು ಅಕ್ಷರಶಃ ದಿಗ್ಗಜರ ಒಡನಾಟ.
ಒಮ್ಮೆ ಜರ್ಮನಿಯ ಯಾತನಾ ಶಿಬಿರಗಳ ಸಾಕ್ಷ್ಯಚಿತ್ರ “ನೈಟ್ ಅಂಡ್ ಫಾಗ್” ತೋರಿಸಿದರು. Rarest ಎನ್ನಬಹುದಾದ ದೃಶ್ಯಗಳ ತುಣುಕುಗಳು ಅವು. ಮನಸ್ಸು, ಹೃದಯಗಳನ್ನು ಬಹುಕಾಲ ಕಲಕಿಬಿಡುವಂತಹ ಅನುಭವವಾಯಿತು. ಆ ಸಾಕ್ಷ್ಯಚಿತ್ರ ನೋಡಿ ಮುಗಿದ ಮೇಲೆ ನಮಗೆ, ಅಂದರೆ ಶಿಬಿರಾರ್ಥಿಗಳಿಗೆ, ರಾಜೀವ್ ” ಹಿಟ್ಲರನ ಸೈನ್ಯದ ಮೆರೆವಣಿಗೆಯ ದೃಶ್ಯದ ಅವಧಿಯಲ್ಲಿ ಹಿನ್ನೆಲೆ ಸಂಗೀತಕ್ಕೆ ಸಂಬಂಧಿಸಿದಂತೆ ಏನು ಗಮನಿಸಿದಿರಿ?” ಎಂದರು. ಆ ಇಡೀ ಸಾಕ್ಷ್ಯಚಿತ್ರ ಅತ್ಯಂತ ವೇದನಾದಾಯಕವಾದುದರಿಂದ, ಶಿಬಿರಾರ್ಥಿಗಳಿಗೆ ಹಿನ್ನೆಲೆ ಸಂಗೀತದ ಆ different ಆಯಾಮವನ್ನು ಗಮನಿಸಲು ಆಗಿರಲೇ ಇಲ್ಲ. ಕೊನೆಗೆ ರಾಜೀವ್ ಆ ದೃಶ್ಯವನ್ನು ಇನ್ನೊಮ್ಮೆ play ಮಾಡಿಸಿದರು. ಸೈನಿಕರ ಆ ಪಥಸಂಚಲನಕ್ಕೆ ಅಳುವ ಹಿನ್ನೆಲೆ ಸಂಗೀತವನ್ನು (Mourning Music) ನೀಡಲಾಗಿತ್ತು. ಅದು ಸೈನಿಕರ ಅಬ್ಬರದ ಪಥಸಂಚಲನವಾದರೂ, ಹಿಟ್ಲರನ ಪಡೆಗಳು ಎಸಗಿದ ಅಪಾರ ಕ್ರೌರ್ಯವನ್ನು ಆ ಸಂಗೀತ ಅದ್ಭುತವಾಗಿ ಪರಿಣಾಮಕಾರಿಯಾಗಿ ತೆರೆಯಮೇಲೆ ಹೊಮ್ಮಿಸಿತ್ತು.

ಡಾ|| ಯು.ಆರ್.ಅನಂತಮೂರ್ತಿ ಅವರ “ಸಮಕ್ಷಮ” ಅಪರೂಪದ ಸಂದರ್ಶನಗಳ ಸಂಕಲನವೂ ಹೌದು. ಅಲ್ಲಿ ರಾಜೀವ್ ತಾರಾನಾಥರ ಸಂದರ್ಶನವೂ ಇತ್ತು. ಶಿಬಿರದ ಬಿಡುವಿನಲ್ಲಿ ರಾಜೀವ್ ಅವರೊಂದಿಗೆ ಮಾತನಾಡುವಾಗ ಸಹಜವಾಗಿಯೇ ಅವರ ಆ ಸಂದರ್ಶನದ ವಿಷಯವು ಪ್ರಸ್ತಾಪವಾಗಿ ರೋಮಾಂಚನವಾಗುತ್ತಿತ್ತು.
ತೊಂಬತ್ತೆರಡು ವರ್ಷ ಇದ್ದ ರಾಜೀವ್ ಇನ್ನಿಲ್ಲ. ಹಾಗೆನ್ನುವಾಗ, ನಮ್ಮ “ಯಾದೊಂಕೀ ಬಾರಾತ್”ನಲ್ಲಿ ಅವರ ಬರವಣಿಗೆ, ಅವರ ಮಾತು, ಅವರ ತುಂಬು ಕಂಠ, ಅವರ ಅಸದೃಶ ಸರೋದ್ ವಾದನ ಎಲ್ಲವೂ ಒಟ್ಟೊಟ್ಟಿಗೇ ನುಗ್ಗಿನುಗ್ಗಿ ಬರುತ್ತಿವೆ.

ಅವರ ಅಪಾರ ಪ್ರತಿಭೆಗೆ ನಮೋ ನಮಃ.

Continue Reading
Advertisement
Nagarjuna Sagar
ಪ್ರವಾಸ7 mins ago

Nagarjuna Sagar: ನಾಗಾರ್ಜುನಸಾಗರದ ಈ ಸ್ಥಳಗಳು ವಾರಾಂತ್ಯ ಪ್ರವಾಸಕ್ಕೆ ಸೂಕ್ತ

Actor Darshan
ಪ್ರಮುಖ ಸುದ್ದಿ12 mins ago

ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

Job Alert
ಉದ್ಯೋಗ26 mins ago

Job Alert: ಎಚ್‌ಎಎಲ್‌ನಲ್ಲಿದೆ ಉದ್ಯೋಗಾವಕಾಶ; ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Actor Darshan political leaders appeal to the CM and Home Minister not to twist case
ಸ್ಯಾಂಡಲ್ ವುಡ್28 mins ago

Actor Darshan : ದರ್ಶನ್‌ ಪರ ವಹಿಸಿ ಸಿಎಂ, ಗೃಹ ಸಚಿವರಿಗೆ ಮನವಿ ಮಾಡಿದ್ರಾ ರಾಜಕೀಯ ನಾಯಕರು?

Actor Darshan Renukaswamy Send His Photos To Pavitra Gowda
ಸ್ಯಾಂಡಲ್ ವುಡ್31 mins ago

Actor Darshan: ಪವಿತ್ರಾಗೆ ಮರ್ಮಾಂಗದ ಫೋಟೊ ಕಳುಹಿಸಿದ್ರಾ ರೇಣುಕಾಸ್ವಾಮಿ? ದರ್ಶನ್​ಗೆ ತಿಳಿದಿದ್ದು ಹೇಗೆ?

Fraud Case
ಕ್ರೈಂ36 mins ago

Fraud Case: 300 ರೂ. ಬೆಲೆಯ ನಕಲಿ ಆಭರಣವನ್ನು ವಿದೇಶಿ ಮಹಿಳೆಗೆ 6 ಕೋಟಿ ರೂ.ಗೆ ಮಾರಿದರು!

Vastu Tips
ಧಾರ್ಮಿಕ55 mins ago

Vastu Tips: ಈ ನಕಾರಾತ್ಮಕ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ!

Altroz Racer launched by Tata Motors
ಕರ್ನಾಟಕ59 mins ago

Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

Pawan Kalyan
ದೇಶ60 mins ago

Pawan Kalyan: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪವನ್‌ ಕಲ್ಯಾಣ್‌ ಆಯ್ಕೆ; ಇಂದು ಪ್ರಮಾಣ ವಚನ ಸ್ವೀಕಾರ

Minister Dinesh Gundurao drives 10 days Yogotsava programme in Bengaluru
ಕರ್ನಾಟಕ1 hour ago

Bengaluru News: 10 ದಿನಗಳ ‘ಯೋಗೋತ್ಸವ’ಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ16 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ18 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ19 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ20 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ22 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌