Mind- Body Nexus: ದೇಹ-ಮನಸ್ಸುಗಳು ಬೇರೆಯಲ್ಲ, ಅಖಂಡ; ಹೊಸ ಅಧ್ಯಯನ - Vistara News

ಆರೋಗ್ಯ

Mind- Body Nexus: ದೇಹ-ಮನಸ್ಸುಗಳು ಬೇರೆಯಲ್ಲ, ಅಖಂಡ; ಹೊಸ ಅಧ್ಯಯನ

Mind- Body Nexus: ಮೆದುಳಿನ ಜೈವಿಕ ಲೆಕ್ಕಾಚಾರದ ಕಾರ್ಯಗಳ ಒಟ್ಟು ಮೊತ್ತವನ್ನೇ ʻಮನಸ್ಸುʼ ಎನ್ನಬಹುದು. ಈ ಹಿನ್ನೆಲೆಯಲ್ಲಿ, ಮೆದುಳು ಮಾತ್ರವಲ್ಲದೆ, ʻಮನಸ್ಸುʼ ಮತ್ತು ದೇಹದ ಹೊಂದಾಣಿಕೆಯ ಬಗ್ಗೆ ಈಗಿನ ಅಧ್ಯಯನ ಹೆಚ್ಚಿನ ವಿಷಯ ತಿಳಿಸುತ್ತದೆ.

VISTARANEWS.COM


on

Body-minds are not separate, are same, Says new study
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾನವನ ಮೆದುಳು ಅಥವಾ ಮನಸ್ಸು ಮತ್ತು ದೇಹದ ನಡುವಿನ ನಂಟಿನ ಬಗೆಗಿನ ಕುತೂಹಲಕ್ಕೆ ಕೊನೆಯೇ ಇಲ್ಲ. ಅರಿಸ್ಟಾಟಲ್‌ನಿಂದ ಹಿಡಿದು ಆಧುನಿಕ ಕಾಲದ ತತ್ವಜ್ಞಾನಿಗಳವರೆಗೆ, ವಿಜ್ಞಾನಿಗಳವರೆಗೆ ಎಲ್ಲರಿಗೂ ಚಕ್ರವ್ಯೂಹದಂಥ ಮೆದುಳಿನ ಬಗ್ಗೆ ಅದರ ಕಾರ್ಯವ್ಯಾಪ್ತಿಯ ಬಗ್ಗೆ ಚೋದ್ಯ ಹೆಚ್ಚುತ್ತಲೇ ಇದೆ. ಇತ್ತೀಚೆಗಿನ ಸಂಶೋಧನೆಯೊಂದು ಮೆದುಳಿನ ಅಥವಾ ಮನಸ್ಸಿನ ನಂಟು (Mind- body nexus) ದೇಹದೊಂದಿಗೆ ಹೇಗಿದೆ ಎಂಬ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದೆ.

ಮೆದುಳಿನ ಮೋಟರ್‌ ಕಾರ್ಟೆಕ್ಸ್‌ ಎಂಬ ಭಾಗದ ಕ್ಯಾರ್ಯವ್ಯಾಪ್ತಿಯ ಮೇಲೆ ಹೆಚ್ಚಿನ ಸಂಶೋಧನೆ ನಡೆಸಿರುವ ವಿಜ್ಞಾನಿಗಳು, ಈವರೆಗೆ ತಿಳಿದಿದ್ದಕ್ಕಿಂತ ಇನ್ನಷ್ಟು ಹೊಸ ವಿಷಯಗಳನ್ನು ಅರಿತುಕೊಂಡಿದ್ದಾರೆ. ಮುಖ, ಕೈ, ಕಾಲು ಸೇರಿದಂತೆ ದೇಹದ ಹಲವಾರು ಭಾಗಗಳ ಚಲನೆಯ ಒಡೆತನವು ಮೆದುಳಿನ ಈ ಮೋಟರ್‌ ಕಾರ್ಟೆಕ್ಸ್‌ ಭಾಗದ ಮೇಲಿತ್ತು. ಆದರೆ ಅದಷ್ಟೇ ಅಲ್ಲ, ಯೋಚನೆ, ಯೋಜನೆ, ನೋವು ಮತ್ತಿತರ ಭಾವನೆಗಳು, ರಕ್ತದೊತ್ತಡ ಮತ್ತು ಎದೆ ಬಡಿತವನ್ನೂ ಇದೇ ಭಾಗ ನಿರ್ವಹಿಸುತ್ತದೆ (Mind- body nexus) ಎನ್ನುವ ವಿಷಯ ಪತ್ತೆಯಾಗಿದೆ.

ಮೋಟರ್‌ ಕಾರ್ಟೆಕ್ಸ್‌ ಒಳಗಿನ ಒಂದು ಮಡಿಕೆಯ ಗೆಣ್ಣಿನಲ್ಲಿ ಸುಪ್ತವಾಗಿರುವ ಈ ಭಾಗವನ್ನು ಶಾರೀರಿಕ ಅರಿವಿನ ಕ್ರಿಯಾ ಜಾಲ (Somato-cognitive action network) ಎಂದು ವಿಜ್ಞಾನಿಗಳು ಕರೆದಿದ್ದಾರೆ. ದೇಹದ ಕ್ರಿಯಾ ಯೋಜನೆಗಳನ್ನು, ಅಂದರೆ ಯೋಜನೆಗಳನ್ನು ರೂಪಿಸುವ ಮತ್ತು ಗುರಿ ಹೊಂದುವಂಥ ಕೆಲಸಗಳನ್ನು ನಿರ್ವಹಿಸಲು ಅಗತ್ಯವಾದ ಕೆಲಸಗಳನ್ನು ಮೆದುಳಿನ ಈ ಭಾಗ ನಡೆಸುತ್ತದೆ. ಮೆದುಳಿನ ಹೊರಭಾಗದ ಸೆರೆಬ್ರೆಲ್‌ ಕಾರ್ಟೆಕ್ಸ್‌ನ ಒಂದು ಭಾಗ ಈ ಮೋಟರ್‌ ಕಾರ್ಟೆಕ್ಸ್‌.

ಮಂಗಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ, ಮೆದುಳಿನ ಈ ಭಾಗವು ಹೊಟ್ಟೆ, ಅಡ್ರಿನಲ್‌ ಗ್ರಂಥಿ ಸೇರಿದಂತೆ ದೇಹದ ಆಂತರಿಕ ಅಂಗಗಳ ಮೇಲೆಯೂ ಕೆಲವು ವಿಷಯಗಳಲ್ಲಿ ಹಿಡಿತ ಹೊಂದಿದ್ದು ಕಂಡುಬಂದಿದೆ. ಬೆವರುವುದು, ಎದೆಬಡಿತ ಹೆಚ್ಚಿಸುವುದು ಮುಂತಾದ ಪ್ರತಿಕ್ರಿಯೆಗಳನ್ನು ಇದು ನಿರ್ವಹಿಸುತ್ತದೆ. “ಮಾನದ ದೇಹದ ಚಲನೆಗಳ ಕೇಂದ್ರ ಕೇವಲ ಒಂದೇ ಅಲ್ಲ. ಇದಕ್ಕೆ ಎರಡು ಪ್ರತ್ಯೇಕ ನಿಯಂತ್ರಣ ಕೇಂದ್ರಗಳಿವೆ. ನಮ್ಮ ಕೈ, ಮುಖ ಮತ್ತು ಕಾಲುಗಳ ಚಲನೆಗೆ ಕಾರಣವಾಗುವಂಥದ್ದು ಒಂದು. ಇದರಿಂದ ಬರೆಯುವುದು, ಮಾತಾಡುವುದು ಮುಂತಾದ ಕೆಲಸಗಳು ನಡೆಯುತ್ತವೆ. ಅಂದರೆ ಇದರಲ್ಲಿ ಕೇವಲ ಒಂದು ಕೆಲಸ ಒಮ್ಮೆಲೆ ಆಗುತ್ತದೆ. ಇನ್ನೊಂದು- ಒಂದಕ್ಕಿಂತ ಹೆಚ್ಚು ಕೆಲಸಗಳು ಒಟ್ಟಿಗೆ ಜರುಗುವಂಥ ಏಕೀಕೃತವಾದ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಉನ್ನತ ಮಟ್ಟದ ಯೋಜನೆ ಮತ್ತು ಯೋಜನೆಗಳೂ ಇಲ್ಲಿ ನಡೆಯುತ್ತವೆ” ಎಂಬುದು ಈ ಅಧ್ಯಯನದಲ್ಲಿ ಪಾಲ್ಗೊಂಡ ತಜ್ಞರ ಅಭಿಮತ.

ಇದನ್ನೂ ಓದಿ: World Liver Day: ಯಕೃತ್ತಿನ ಕ್ಷೇಮದಲ್ಲಿದೆ ಆರೋಗ್ಯದ ಸೂತ್ರ

ಅಧ್ಯಯನದ ಕೆಲವು ವಿವರಗಳನ್ನು ಹೇಳುವುದಾದರೆ, ಮೆದುಳಿನ ಜೈವಿಕ ಲೆಕ್ಕಾಚಾರದ ಕಾರ್ಯಗಳ ಒಟ್ಟು ಮೊತ್ತವನ್ನೇ ʻಮನಸ್ಸುʼ ಎನ್ನಬಹುದು. ಆಧುನಿಕ ನರವಿಜ್ಞಾನದಲ್ಲಿ ಮನಸ್ಸು-ದೇಹದ ಸಂವಹನದ ಬಗ್ಗೆ ಹೆಚ್ಚಿನ ಸಂವಾದಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ, ಮೆದುಳು ಮಾತ್ರವಲ್ಲದೆ, ಮನಸ್ಸು ಮತ್ತು ದೇಹದ ಹೊಂದಾಣಿಕೆಯ ಬಗ್ಗೆ ಈಗಿನ ಅಧ್ಯಯನ ಹೆಚ್ಚಿನ ವಿಷಯ ತಿಳಿಸುತ್ತದೆ. ಅದರಲ್ಲೂ, ಅಸಂಬದ್ಧ ಅಥವಾ ಸುಸಂಬದ್ಧ ಯೋಚನೆ-ಯೋಜನೆಗಳು, ಪ್ರೇರಣೆಯಂಥ ಸಂಪೂರ್ಣ ಮಾನಸಿಕ ಮಟ್ಟದ್ದೇ ಆದ ವಿಷಯಗಳು ಮತ್ತು ಇದಕ್ಕೆ ದೇಹ ಸ್ಪಂದಿಸುವ ರೀತಿಯ ಬಗ್ಗೆ ಬಹಳಷ್ಟು ವಿಷಯಗಳು ಈಗ ಬಹಿರಂಗಗೊಂಡಿವೆ. ದೇಹ ಮತ್ತು ಮನಸ್ಸು ಒಂದಕ್ಕೊಂದು ಭಿನ್ನವಾದದ್ದಲ್ಲ (Mind-body nexus) ಎಂಬ ವಾದಕ್ಕೆ ಈಗ ಪುಷ್ಟಿ ದೊರೆಯುವ ಹಂತದಲ್ಲಿದೆ.

ಇದಕ್ಕಾಗಿ ನವಜಾತ ಶಿಶುಗಳಿಂದ ಹಿಡಿದು, ವಯಸ್ಕರವರೆಗೆ ಹಲವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅದರಲ್ಲೂ ನವಜಾತ ಶಿಶುಗಳಲ್ಲಿ ಶಾರೀರಿಕ ಅರಿವಿನ ಕ್ರಿಯಾ ಜಾಲ ಇನ್ನೂ ಬಲಿತಿಲ್ಲದಿರುವುದು ಕಂಡುಬಂದಿದೆ. ಹತ್ತು ವರ್ಷದೊಳಗಿನ ಮಕ್ಕಳಲ್ಲೂ ಈ ಜಾಲ, ವಯಸ್ಕರಲ್ಲಿದ್ದಂತೆ ಹೆಚ್ಚಿನ ಪ್ರವರ್ಧಮಾನವನ್ನು ತೋರಿಸಿಲ್ಲ.

“ಮೆದುಳಿನ ಉದ್ದೇಶದ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ. ನಮ್ಮ ಸುತ್ತಲಿನ ಜಗತ್ತನ್ನು ಅರಿತು, ವಿ‍ಶ್ಲೇಷಿಸುವುದು ಮೆದುಳಿನ ಉದ್ದೇಶ ಎಂದು ಕೆಲವು ನರಶಾಸ್ತ್ರಜ್ಞರು ವಿವರಿಸುತ್ತಾರೆ. ಆದರೆ ಇನ್ನೂ ಹಲವರ ಪ್ರಕಾರ, ಯಾವುದೇ ಒಂದು ಸನ್ನಿವೇಶದಲ್ಲಿ ಉಳಿಯುವ ಮತ್ತು ವಿಕಾಸ ಹೊಂದುವ ಅತ್ತ್ಯುತ್ತಮ ಮಾರ್ಗವನ್ನು ನಮ್ಮ ಶಾರೀರಿಕ ಕ್ರಿಯೆ ಮತ್ತು ಬೌಧ್ಧಿಕ ನಡವಳಿಕೆಯ ಮೂಲಕ ತೋರ್ಪಡಿಸುವುದು ಮೆದುಳಿನ ಉದ್ದೇಶ. ಈ ಎರಡೂ ಸರಿಯೆಂದೇ ತೋರುತ್ತದೆ” ಎಂಬುದು ಅಧ್ಯಯನಕಾರರ ಮಾತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Cotton Candy: ಕಾಟನ್‌ ಕ್ಯಾಂಡಿ ಯಾಕೆ ಎಷ್ಟೊಂದು ಅಪಾಯಕಾರಿ ಗೊತ್ತೆ?

ಬಣ್ಣ ನೋಡಿ ಮರುಳಾಗುವ ಅಭ್ಯಾಸ ಒಳ್ಳೆಯದಲ್ಲ ಎನ್ನುವುದಕ್ಕೆ ಕಾಟನ್‌ ಕ್ಯಾಂಡಿ ಸಾಕ್ಷಿ. ರಂಗುರಂಗಿನ ಸಕ್ಕರೆ ಮಿಠಾಯಿಯ ಹಿಂದಿರುವ ಕಪ್ಪನ್ನು ಅರ್ಥ ಮಾಡಿಕೊಂಡು ಜಾಗೃತರಾಗುವುದು ಗ್ರಾಹಕರ ಕರ್ತವ್ಯ. ಈ ಸಿಹಿ ಕ್ಯಾಂಡಿಯಿಂದ (Cotton Candy) ಆರೋಗ್ಯಕ್ಕಾಗುವ ಹಾನಿಯೇನು? ಇದನ್ನು ಯಾಕೆ ನಾವು ತಿನ್ನಬಾರದು? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Cotton Candy
Koo

ಬಣ್ಣಬಣ್ಣದ ಹತ್ತಿಯ ಉಂಡೆಯಂಥ ಕಾಟನ್‌ ಕ್ಯಾಂಡಿ ಇತ್ತೀಚೆಗೆ ಸುದ್ದಿಯಾಗಿದೆ. ಕಡು ಗುಲಾಬಿ ಬಣ್ಣದಲ್ಲಿ ಸಾಮಾನ್ಯವಾಗಿ ಕಂಡು ಬರುತಿದ್ದ ಕಾಟನ್‌ ಕ್ಯಾಂಡಿಗಳು ಇತ್ತೀಚೆಗೆ ವರ್ಣಾಂತರ ಹೊಂದಿ, ಹಸಿರು, ನೇರಳೆಯಂಥ ಕಣ್ಣು ಕೋರೈಸುವ ಬಣ್ಣಗಳಿಂದ ಶೋಭಿಸಿ, ಚಿಣ್ಣರ ಬಾಯಲ್ಲಿ ನೀರೂರಿಸುತ್ತಿದ್ದವು. ಆದರೆ ಆರೋಗ್ಯಾಧಿಕಾರಿಗಳು ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆಸಿದ ದಾಳಿಯಲ್ಲಿ, ಇಂಥ ವರ್ಣರಂಜಿತ ಕಾಟನ್‌ಕ್ಯಾಂಡಿಗಳ ಹಿಂದಿನ ಬಣ್ಣ ಬಯಲು ಮಾಡಿದ್ದಾರೆ. ಏನಿತ್ತು ಈ ಬಣ್ಣದ ಹತ್ತಿಯುಂಡೆಯಂಥ ಕ್ಯಾಂಡಿಗಳಲ್ಲಿ? ಅವು ಆರೋಗ್ಯಕ್ಕೆ (Cotton Candy) ಹಾಳು ಎಂದೇಕೆ ಹೇಳಲಾಗುತ್ತಿದೆ? ಜವಳಿ ಉದ್ದಿಮೆಗಳಲ್ಲಿ ಬಳಸಲಾಗುವ ರೋಡಮೈನ್‌ ಬಿ (Harmful Effects of ‘Rhodamine B’) ಎನ್ನುವ ಡೈ ಈ ತಿನ್ನುವ ವಸ್ತುಗಳಲ್ಲಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಈ ಬಗೆಗಿನ ವಿವರಗಳಿಲ್ಲಿವೆ. ರೋಡಮೈನ್‌ ಬಿ ಎನ್ನುವುದು ಸಿಂಥೆಟಿಕ್‌ ಡೈ. ಇದನ್ನು ಯಾವುದೇ ತಿನ್ನುವ ವಸ್ತುಗಳಲ್ಲಿ ಬಳಸುವಂತಿಲ್ಲ. ಆದರೆ ಕಾಟನ್‌ ಕ್ಯಾಂಡಿಗೆ ಕಡು ಗುಲಾಬಿಯಿಂದ ಹಿಡಿದು ತರಹೇವಾರಿ ಬಣ್ಣಗಳನ್ನು ನೀಡುವಲ್ಲಿ ಇಂಥ ಸಿಂಥೆಟಿಕ್‌ ಬಣ್ಣಗಳು ಪ್ರಧಾನವಾಗಿ ಬಳಕೆಯಲ್ಲಿವೆ. ಆರೋಗ್ಯವನ್ನು ಕಡೆಗಣಿಸಿ, ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ, ಕ್ಯಾಂಡಿ ತಯಾರಕರು ಇಂಥ ಹಾನಿಕಾರಕ ಬಣ್ಣಗಳನ್ನು ಬಳಸುತ್ತಿರುವುದು ಆಘಾತಕಾರಿ. ಏನು ಇಂಥ ಬಣ್ಣಗಳು ಉಂಟುಮಾಡುವ ಕೆಟ್ಟ ಪರಿಣಾಮಗಳು?

Cotton Candy

ಕ್ಯಾನ್ಸರ್‌ಕಾರಕ

ರೋಡಮೈನ್‌ ಬಿ ಮನುಷ್ಯರಲ್ಲಿ ಕ್ಯಾನ್ಸರ್‌ ಉಂಟುಮಾಡುವ, ಅದರಲ್ಲೂ ಪ್ರಧಾನವಾಗಿ ಮೂತ್ರಜನಕಾಂಗಗಳ ಕ್ಯಾನ್ಸರ್‌ ತರುವ ಸಾಧ್ಯತೆಯಿದೆ ಎನ್ನುತ್ತದೆ ಕ್ಯಾನ್ಸರ್‌ ಸಂಶೋಧನೆ ಕುರಿತಾದ ಅಂತಾರಾಷ್ಟ್ರೀಯ ಸಂಸ್ಥೆ (ಐಎಆರ್‌ಸಿ). ಈ ಬಗ್ಗೆ ವಿಶ್ವ ಮಟ್ಟದಲ್ಲಿ ನಡೆದಿರುವ ಕೆಲವು ಅ‍ಧ್ಯಯನಗಳು ಸಹ ಈ ವಿಷಯವನ್ನು ದೃಢಪಡಿಸಿವೆ.

ಅಲರ್ಜಿ

ಈ ರಾಸಾಯನಿಕ ಹಲವು ರೀತಿಯಲ್ಲಿ ಅಲರ್ಜಿಗಳನ್ನು ತರಬಲ್ಲದು. ಸೂಕ್ಷ್ಮ ಚರ್ಮದವರಿಗೆ ತುರಿಕೆಯಾಗಿ ಚರ್ಮ ಕೆಂಪಾಗಿ ಉರಿಯೇಳುವ ಸಾಧ್ಯತೆಯಿದೆ. ಕಣ್ಣಿಗೇನಾದರೂ ಹೋದರೆ ಕಣ್ಣುರಿ, ಕೆಂಪಾಗುವುದು, ನೀರು ಸುರಿಯುವುದು, ಕಿರಿಕಿರಿಯಂಥ ಸಮಸ್ಯೆಗಳು ಎದುರಾಗಬಹುದು. ಶ್ವಾಸಕೋಶದಲ್ಲಿ ಉರಿಯೂತ ಕಾಣಿಸಿಕೊಂಡು ಅಸ್ತಮಾ, ಉಸಿರಾಟದ ತೊಂದರೆ, ಕೆಮ್ಮಿನಂಥ ಆರೋಗ್ಯ ತೊಂದರೆಗಳು ಕಾಣಬಹುದು. ಇವೆಲ್ಲ ಸೂಕ್ಷ್ಮ ಇರುವವರಿಗೆ ಮಾತ್ರವೇ ಅಲ್ಲ, ಯಾರಲ್ಲಿಯೂ ಅಲರ್ಜಿ ಸಮಸ್ಯೆಗಳನ್ನು ಹುಟ್ಟುಹಾಕಬಹುದು.

ealthy internal organs of human digestive system / highlighted blue organs

ಜೀರ್ಣಾಂಗದ ತೊಂದರೆಗಳು

ರೋಡಮೈನ್‌ ಹೊಟ್ಟೆಗೆ ಹೋಗುವುದರಿಂದ ಜೀರ್ಣಾಂಗಗಳಲ್ಲಿ ಹಲವು ರೀತಿಯ ವೈಪರಿತ್ಯಗಳು ಕಂಡುಬಂದೀತು. ಹೊಟ್ಟೆ ತೊಳೆಸುವುದು, ಹೊಟ್ಟೆ ನೋವು, ವಾಂತಿ, ಡಯರಿಯದಂಥ ಸಮಸ್ಯೆಗಳು ಸಾಮಾನ್ಯ. ಕೆಲವು ಅಪರೂಪದ ಪ್ರಕರಣಗಳಲ್ಲಿ ಜೀರ್ಣಾಂಗಗಳಲ್ಲಿ ರಕ್ತಸ್ರಾವವೂ ಆಗಬಹುದು.

ಭ್ರೂಣಕ್ಕೆ ತೊಂದರೆ

ಗರ್ಭಿಣಿಯರು ಈ ರಾಸಾಯನಿಕವನ್ನು ಸೇವಿಸಿದಲ್ಲಿ ಹೊಟ್ಟೆಯಲ್ಲಿರುವ ಶಿಶುವಿಗೆ ತೊಂದರೆ ಸಂಭವಿಸಬಹುದು. ಮಗುವಿನ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಯನ್ನು ಅಧ್ಯಯನಗಳು ಸೂಚಿಸುತ್ತವೆ. ಈ ರಾಸಾಯನಿಕಕ್ಕೆ ಅತಿಯಾಗಿ ತೆರೆದುಕೊಂಡಲ್ಲಿ ಫಲವಂತಿಕೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು.

ಇದನ್ನೂ ಓದಿ: Dates Benefits: ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ದಿನಕ್ಕೊಂದು ಖರ್ಜೂರ ತಿಂದರೆ ಸಾಕು!

ಪರಿಸರದ ಮೇಲಿನ ಪರಿಣಾಮ

ಮಣ್ಣಿನಲ್ಲಿ ಸುಲಭವಾಗಿ ಕರಗದಿರುವಂಥ ರಾಸಾಯನಿಕವಿದು. ವಾತಾವರಣದಲ್ಲಿ ದೀರ್ಘಕಾಲದವರೆಗೆ ಅಳಿಯದೇ ಉಳಿಯುವಂಥ ಈ ವಸ್ತುವು, ಮಣ್ಣು, ನೀರು, ಗಾಳಿಯನ್ನೆಲ್ಲ ಮಲಿನ ಮಾಡಬಲ್ಲದು. ಜಲಚರಗಳ ಆರೋಗ್ಯಕ್ಕೆ ಹಾನಿ ಮಾಡಬಲ್ಲದು. ಎಲ್ಲಾ ನಿಸರ್ಗ ಮೂಲಗಳ ಮೂಲಕ ಮತ್ತೆ ನಮ್ಮದೇ ದೇಹವನ್ನು ಪ್ರವೇಶಿಸಿ, ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಬಲ್ಲದು.

Continue Reading

ಆರೋಗ್ಯ

Vitamin Side Effects: ವಿಟಮಿನ್‌ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?

ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ದೇಹಕ್ಕೆ ಪೂರಕ ಎನ್ನುವ ಉದ್ದೇಶದಿಂದ ಅತಿಯಾಗಿ ವಿಟಮಿನ್‌ ಪೂರಕಗಳನ್ನು ಸೇವಿಸುವುದು ನಿಶ್ಚಿತವಾಗಿ ಸಮಸ್ಯೆಗಳನ್ನು ತರಬಲ್ಲದು. ಜೀವಸತ್ವಗಳ ಪ್ರಮಾಣ ಹೆಚ್ಚಾದರೆ (Vitamin Side Effects) ಅದರ ಅಡ್ಡ ಪರಿಣಾಮಗಳೇನು ಎಂಬುದರ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Vitamin Side Effects
Koo

ವಿಟಮಿನ್‌ಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳು. ಶರೀರ ಆರೋಗ್ಯವಾಗಿರಲು ಮಾತ್ರವಲ್ಲ, ತನ್ನ ಕೆಲಸವನ್ನು ಮಾಡಿಕೊಳ್ಳಲು ಸಹ ಜೀವಸತ್ವಗಳ ಅಗತ್ಯವಿದೆ. ಆಹಾರದ ಮೂಲಕ ದೊರೆಯುವ ಈ ಸತ್ವಗಳು ಸಾಕಾಗದು ಎನಿಸಿದ ಬಹಳಷ್ಟು ಮಂದಿ ವಿಟಮಿನ್‌ ಪೂರಕಗಳನ್ನು ಸೇವಿಸುತ್ತಾರೆ. ಇದಕ್ಕೆ ವೈದ್ಯರ ಸಲಹೆ ಅಗತ್ಯ. ಪೂರಕಗಳನ್ನು ತಮ್ಮಷ್ಟಕ್ಕೆ ಇಷ್ಟ ಬಂದಂತೆ ಸೇವಿಸಿದರೆ ಸಮಸ್ಯೆಗಳಾಗಬಹುದು. ಕಾರಣ, ವಿಟಮಿನ್‌ ಅತಿಯಾದರೆ (Vitamin Side Effects) ಅದಕ್ಕೂ ಅಡ್ಡಪರಿಣಾಮಗಳಿಗೆ. ಏನದು? ಜೀವಸತ್ವಗಳಲ್ಲಿ ಕೆಲವು ನೀರಿನಲ್ಲಿ ಕರಗಬಲ್ಲಂಥವು, ಕೆಲವು ಕೊಬ್ಬಿನಲ್ಲಿ ಕರಗಬಲ್ಲವು. ನೀರಲ್ಲಿ ಕರಗಬಲ್ಲ ಸಿ ವಿಟಮಿನ್‌ನಂಥವು ಕೊಂಚ ಹೆಚ್ಚಾದರೆ ಅತಿಯಾದ ದುಷ್ಪರಿಣಾಮಗಳೇನು ಆಗುವುದಿಲ್ಲ. ಕಾರಣ, ಇವು ಹೆಚ್ಚಾದಷ್ಟು ಮೂತ್ರದಲ್ಲಿ ಹೊರಗೆ ಹೋಗಿಬಿಡುತ್ತದೆ. ಆದರೆ ಕೊಬ್ಬಿನಲ್ಲಿ ಕರಗಬಲ್ಲ ವಿಟಮಿನ್‌ ಎ, ಡಿ, ಇ ಮತ್ತು ಕೆ-ನಂಥವು ಸಮಸ್ಯೆಗಳು ತರಬಲ್ಲವು. ಏಕೆಂದರೆ, ದೇಹದ ಕೊಬ್ಬಿನ ಕೋಶಗಳಲ್ಲಿ ಉಳಿಯುವ ಇವನ್ನು ದೇಹದಿಂದ ವರ್ಜಿಸುವುದು ಕಷ್ಟವಾಗಿಬಿಡಬಹುದು. ಯಾವ ವಿಟಮಿನ್‌ ಅತಿಯಾದರೆ ಆರೋಗ್ಯದ ಮೇಲಿನ ಪರಿಣಾಮವೇನು ಎಂಬುದನ್ನು ಗಮನಿಸೋಣ.

Vitamin A

ವಿಟಮಿನ್‌ ಎ

ಯಾವುದೇ ಜೀವಸತ್ವಗಳು ಆಹಾರದ ಮೂಲಕ ದೇಹ ಸೇರಿದರೆ ಹೆಚ್ಚು ಸುರಕ್ಷಿತ. ಹಾಗಲ್ಲದೆ ಪೂರಕಗಳನ್ನು ಸೇವಿಸುವಾಗ ಮಾತ್ರ ಎಚ್ಚರ ಬೇಕು. ಎ ಜೀವಸತ್ವ ಹೆಚ್ಚಾದರೆ ತಲೆನೋವು, ತಲೆಸುತ್ತು, ಹೊಟ್ಟೆ ತೊಳೆಸುವುದು, ಚರ್ಮದ ಕಿರಿಕಿರಿ, ಮೂಳೆ ಮತ್ತು ಕೀಲುಗಳಲ್ಲಿ ನೋವುಗಳು ಸಾಮಾನ್ಯವಾಗಿ ಕಂಡುಬರುವಂಥ ಅಡ್ಡ ಪರಿಣಾಮಗಳು. ಆದರೆ ವಿಪರೀತ ಹೆಚ್ಚಾದ ಪ್ರಕರಣಗಳಲ್ಲಿ, ದೃಷ್ಟಿದೋಷ, ಮೂಳೆಗಳಲ್ಲಿ ಉರಿಯೂತ, ಕೂದಲು ಉದುರುವುದು, ಚರ್ಮ ಒಣಗುವುದು, ಯಕೃತ್‌ಗೆ ಹಾನಿಯಾಗುವಂಥದ್ದು ಕಂಡು ಬರಬಹುದು.

Vitamin D

ವಿಟಮಿನ್‌ ಡಿ

ಆಹಾರದ ಮೂಲಕ ಅಥವಾ ಸೂರ್ಯನ ಬೆಳಕಿನ ಮೂಲಕ ನಮ್ಮ ದೇಹ ಸೇರುವ ರೀತಿಯೇ ಸೂಕ್ತವಾದದ್ದು. ಆದರೆ ವಿಟಮಿನ್‌ ಡಿ ಕೊರತೆಯಾದ ಸಂದರ್ಭಗಳಲ್ಲಿ ವೈದ್ಯರ ಸೂಚನೆಯ ಮೇರೆಗೆ ಪೂರಕ ಮಾತ್ರೆಗಳನ್ನು ಸೇವಿಸಬೇಕು. ಅದಿಲ್ಲದಿದ್ದರೆ, ಹೊಟ್ಟೆ ತೊಳೆಸುವುದು, ವಾಂತಿ, ಅಶಕ್ತತೆ ಕಾಡಬಹುದು. ತೀವ್ರವಾದ ಪ್ರಕರಣಗಳಲ್ಲಿ ರಕ್ತದಲ್ಲಿ ಕ್ಯಾಲ್ಶಿಯಂ ಮಟ್ಟ ಏರುವುದು ಅಥವಾ ಕಿಡ್ನಿ ತೊಂದರೆಗಳು ಬಾಧಿಸಬಹುದು.

Vitamin E

ಇ ಜೀವಸತ್ವ

ಈ ವಿಟಮಿನ್‌ ಅಧಿಕವಾದರೆ ಆಗುವ ಅಡ್ಡ ಪರಿಣಾಮಗಳು ತೀವ್ರವಾಗುವ ಸಾಧ್ಯತೆ ಹೆಚ್ಚು. ಇದು ಕಾಡುವುದು ಆಂತರಿಕ ರಕ್ತಸ್ರಾವದ ರೂಪದಲ್ಲಿ. ನೈಸರ್ಗಿಕವಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಲ್ಲಿ ಹೆಚ್ಚುವರಿ ವಿಟಮಿನ್‌ ಇ ಅಡ್ಡಗಾಲು ಹಾಕುತ್ತದೆ. ಇದರಿಂದ ಹೆಮೊರೇಜ್‌ಗಳ ಭೀತಿ ಹೆಚ್ಚಬಹುದು. ಇದಲ್ಲದೆ, ದುಷ್ಪರಿಣಾಮ ಸೌಮ್ಯ ಸ್ವರೂಪದಲ್ಲಿದ್ದರೆ, ವಾಂತಿ, ಡಯರಿಯ, ಹೊಟ್ಟೆ ನೋವು, ತಲೆನೋವು, ಅಲರ್ಜಿಯ ಸೂಚನೆಗಳು ಕಾಡಬಹುದು.

Vitamin K

ವಿಟಮಿನ್‌ ಕೆ

ಈ ಸತ್ವವು ಹೆಚ್ಚಾಗುವ ಮಟ್ಟಿಗೆ ದೇಹ ಸೇರುವ ಸಾಧ್ಯತೆ ಉಳಿದವಕ್ಕೆ ಹೋಲಿಸಿದರೆ ಕಡಿಮೆ. ಆದಾಗ್ಯೂ ಕೆ ಜೀವಸತ್ವ ಹೆಚ್ಚಾದರೆ ಕೆಂಪುರಕ್ತಕಣಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ, ಯಕೃತ್‌ಗೂ ತೊಂದರೆ ನೀಡಬಹುದು. ರಕ್ತ ನೀರಾಗುವಂಥ ಔಷಧಿ ಸೇವಿಸುವವರಲ್ಲಿ, ಈ ಔಷಧಿಯ ಪರಿಣಾಮದಲ್ಲೂ ಅಡ್ಡಗಾಲು ಹಾಕುತ್ತದೆ ಕೆ ಜೀವಸತ್ವ.

Vitamin C

ವಿಟಮಿನ್‌ ಸಿ

ಈವರೆಗೆ ಹೇಳಿದ ಜೀವಸತ್ವಗಳೆಲ್ಲವೂ ಕೊಬ್ಬಿನಲ್ಲಿ ಕರಗುವಂಥವು. ಇನ್ನು ಮೇಲಿನವು ನೀರಲ್ಲಿ ಕರಗಬಲ್ಲ ಜೀವಸತ್ವಗಳು. ಆಸ್ಕಾರ್ಬಿಕ್‌ ಆಮ್ಲವೆಂದೂ ಕರೆಯಲಾಗುವ ಇದು ಹೆಚ್ಚಾದರೆ ಸಾಮಾನ್ಯವಾಗಿ ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತದೆ. ಈ ಮಿತಿಯನ್ನೂ ಮೀರಿ ವಿಟಮಿನ್‌ ಸಿ ಸೇವಿಸಿದರೆ, ಜೀರ್ಣಾಂಗಗಳ ತೊಂದರೆ ಬಾಧಿಸಬಹುದು. ಇನ್ನೂ ಹೆಚ್ಚಾದರೆ ಮೂತ್ರಪಿಂಡಗಳಲ್ಲಿ ಕಲ್ಲುಗಳು ಉಂಟಾಗಬಹುದು.

Vitamin B

ವಿಟಮಿನ್‌ ಬಿ

ಇದರಲ್ಲಿ ಹಲವಾರು ವಿಟಮಿನ್‌ಗಳಿವೆ. ಒಂದೊಂದನ್ನೂ ಪ್ರತ್ಯೇಕವಾಗಿ ಹೇಳುವುದಾದರೆ- ವಿಟಮಿನ್‌ ಬಿ೩ ಹೆಚ್ಚಾದರೆ, ಚರ್ಮ ಕೆಂಪಾಗಿ ಬಿಸಿಯಾಗುವುದು, ಹೃದಯ ಬಡಿತ ಏರುವುದು, ವಾಂತಿ, ಯಕೃತ್‌ಗೆ ಹಾನಿ ಮತ್ತು ಜೀರ್ಣಾಂಗಗಳ ಸಮಸ್ಯೆ ಉಂಟಾಗಬಹುದು. ವಿಟಮಿನ್‌ ಬಿ೬ ಹೆಚ್ಚಾದರೆ, ನರಗಳಿಗೆ ಹಾನಿಯಾಗಬಹುದು, ಸ್ನಾಯುಗಳು ದುರ್ಬಲವಾಗಬಹುದು. ಫಾಲಿಕ್‌ ಆಮ್ಲ ಅಥವಾ ಬಿ9 ಜೀವಸತ್ವ ಅತಿಯಾದರೆ, ವಿಟಮಿನ್‌ ಬಿ12 ಕೊರತೆಯನ್ನು ಮರೆಮಾಚಿಬಿಡುತ್ತದೆ. ಇದರಿಂದ ನರಗಳ ಸಮಸ್ಯೆಯೂ ತಲೆದೋರಬಹುದು. ವಿಟಮಿನ್‌ ಬಿ12 ವಿಪರೀತವಾದರೆ ತಲೆನೋವು, ತಲೆಸುತ್ತು, ವಾಂತಿ, ಒತ್ತಡಗಳು ಕಾಡಬಹುದು.

ಇದನ್ನೂ ಓದಿ: Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

Continue Reading

Latest

Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

ಕಡಿಮೆ ಚಟುವಟಿಕೆಯುಳ್ಳ ಪುರುಷರು ಮತ್ತು ಮಹಿಳೆಯರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದ್ದು, ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Dietary Guidelines
Koo

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಡಿಮೆ ಚಟುವಟಿಕೆ ಹೊಂದಿರುವ ಪುರುಷರು (men) ಮತ್ತು ಮಹಿಳೆಯರು (women) ಆಹಾರದಲ್ಲಿ (food) ಪೌಷ್ಟಿಕಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದು, ಇದಕ್ಕಾಗಿ ಇಂಥವರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದೆ.

ಉಪಾಹಾರದಲ್ಲಿ ಏನು ಇರಬೇಕು?

ಐಸಿಎಂಆರ್ ಪ್ರಕಾರ ಕಡಿಮೆ ಚಟುವಟಿಕೆ ಹೊಂದಿರುವ ಪುರುಷರ ಉಪಾಹಾರದಲ್ಲಿ ನೆನೆಸಿದ ಮತ್ತು ಬೇಯಿಸಿದ ಬಜ್ರಾ 90 ಗ್ರಾಂ ಮತ್ತು ತರಕಾರಿಗಳು 50 ಗ್ರಾಂ ಒಳಗೊಂಡಿರಬೇಕು. ಅದೇ ರೀತಿ ಮಹಿಳೆಯರಿಗೆ ನೆನೆಸಿದ ಮತ್ತು ಬೇಯಿಸಿದ ಬಜ್ರಾವನ್ನು ಉಪಾಹಾರದಲ್ಲಿ 60 ಗ್ರಾಂ ಮತ್ತು ತರಕಾರಿಗಳು 100 ಗ್ರಾಂ ಸೇರಿಸಿಕೊಳ್ಳಬೇಕು.

ಊಟದಲ್ಲಿ ಏನು ಇರಬೇಕು?

ಮಧ್ಯಾಹ್ನದ ಊಟದಲ್ಲಿ ಪುರುಷರು ಧಾನ್ಯಗಳನ್ನು 100 ಗ್ರಾಂ ಮತ್ತು ಬೇಳೆಕಾಳುಗಳು 30 ಗ್ರಾಂ, ಮಹಿಳೆಯರು ಮಧ್ಯಾಹ್ನದ ಊಟದಲ್ಲಿ ಧಾನ್ಯಗಳು 80 ಗ್ರಾಂ ಮತ್ತು ದ್ವಿದಳ ಧಾನ್ಯಗಳನ್ನು 20 ಗ್ರಾಂ ತೆಗೆದುಕೊಳ್ಳಬಹುದು. ಸಂಜೆ ಇಬ್ಬರಿಗೂ 50 ಮಿಲಿ ಲೀಟರ್ ಹಾಲು ಕುಡಿಯಲು ಸೂಚಿಸಲಾಗುತ್ತದೆ.


ನಮ್ಮ ಆಹಾರ ಹೇಗಿರಬೇಕು?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಧುನಿಕ ಆಹಾರ ಪದ್ಧತಿಗೆ ಸರಿ ಹೊಂದುವಂತೆ ಭಾರತೀಯರಿಗೆ ನವೀಕರಿಸಿದ ಆಹಾರ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.

ಐಸಿಎಂಆರ್ ನ ಆಹಾರ ಮಾರ್ಗಸೂಚಿಗಳ ಪ್ರಕಾರ ಆರೋಗ್ಯಕರ ಊಟವು ಹೆಚ್ಚಿನ ತರಕಾರಿ, ಸಾಕಷ್ಟು ಧಾನ್ಯ, ಕಾಳು, ಬೀನ್ಸ್, ಬೀಜಗಳು, ಹಣ್ಣುಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಮೊಸರು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಹೆಚ್ಚುವರಿ ಸಕ್ಕರೆಗಳಿಂದ ಮುಕ್ತ ಅಥವಾ ಅತೀ ಕಡಿಮೆ ಪ್ರಮಾಣದಲ್ಲಿ ಎಣ್ಣೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಒಳ್ಳೆಯ ಆಯ್ಕೆಯಾಗಿರುತ್ತದೆ.

ಆರೋಗ್ಯಕರವಾಗಿರಲು ಆಹಾರ ಮಾತ್ರವಲ್ಲ ದೈಹಿಕವಾಗಿ ಸಕ್ರಿಯವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಇದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡಲು ಸೂಚಿಸಲಾಗಿದೆ. ತಾಜಾ ಆಹಾರ ಸೇವಿಸುವುದು ಬಹು ಮುಖ್ಯ. ಆಹಾರ ಸುರಕ್ಷತೆಯ ಕಡೆಗೂ ಗಮನವಿರಬೇಕು. ಕನಿಷ್ಠ ಸಂಸ್ಕರಿಸಿದ ಆಹಾರಗಳ ಆಯ್ಕೆ ಒಳ್ಳೆಯದು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

ದೈಹಿಕ ಚಟುವಟಿಕೆ ಹೇಗಿರಬೇಕು?

ಮಾರ್ಗಸೂಚಿಗಳ ಪ್ರಕಾರ ಎಲ್ಲಾ ವಯಸ್ಸಿನ ವ್ಯಕ್ತಿಗಳು ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 30ರಿಂದ 45 ನಿಮಿಷಗಳ ಮಧ್ಯಮ, ತೀವ್ರತೆಯ ದೈಹಿಕ ಚಟುವಟಿಕೆಯನ್ನು ನಡೆಸಲೇಬೇಕು. ಮಕ್ಕಳಲ್ಲಿ ದಿನಕ್ಕೆ ಕನಿಷ್ಠ 60 ನಿಮಿಷಗಳ ನಿಯಮಿತ ದೈಹಿಕ ಚಟುವಟಿಕೆ ಇದ್ದರೆ ಅಧಿಕ ತೂಕ ಮತ್ತು ಸ್ಥೂಲಕಾಯತೆಯನ್ನು ತಡೆಯಬಹುದು ಎನ್ನುತ್ತದೆ ಐಸಿಎಂಆರ್ ಮಾರ್ಗಸೂಚಿ.

Continue Reading

ಆರೋಗ್ಯ

Veg v/s Non Veg Thali: ಭಾರತದಲ್ಲಿ ನಾನ್‌ವೆಜ್‌ ಊಟಕ್ಕಿಂತ ವೆಜ್ ಊಟ ದುಬಾರಿ! ಏಕೆ ಗೊತ್ತಾ?

ಕಳೆದ ಒಂದು ವರ್ಷದಲ್ಲಿ ವಿವಿಧ ಕಾರಣಗಳಿಂದ ತರಕಾರಿ ಬೆಳೆಗಳು ಗಗನಕ್ಕೇರಿದ್ದು, ಮನೆಯಲ್ಲಿ ತಯಾರಿಸುವ ವೆಜ್ ಥಾಲಿ ಬೆಲೆ ನಾನ್ ವೆಜ್ ಥಾಲಿಗಿಂತ (Veg v/s Non Veg Thali) ದುಬಾರಿಯಾಗಿದೆ. ಇದಕ್ಕೆ ಹಲವು ಕಾರಣಗಳೂ ಇವೆ. ಭಾರತದಲ್ಲಿ ಮಾಂಸಾಹಾರಿ ಊಟಕ್ಕಿಂತ ಸಸ್ಯಾಹಾರಿ ಊಟ ದುಬಾರಿ ಆಗಿರುವುದರ ಕುತೂಹಲಕರ ಹಿನ್ನೆಲೆ ಇಲ್ಲಿದೆ.

VISTARANEWS.COM


on

By

Veg v/s Non Veg Thali
Koo

ಭಾರತದಲ್ಲಿ ಸಸ್ಯಾಹಾರಿ ಊಟವು ಮಾಂಸಾಹಾರಿ ಊಟಕ್ಕಿಂತ (Veg v/s Non Veg Thali) ದುಬಾರಿಯಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ (onion) ಬೆಲೆ ಶೇ. 41, ಟೊಮೆಟೊ (tomato) ಬೆಲೆ ಶೇ.40 ಮತ್ತು ಆಲೂಗಡ್ಡೆ (potato) ಬೆಲೆ ಶೇ. 38ರಷ್ಟು ಹೆಚ್ಚಳವಾಗಿರುವ ಕಾರಣ ಮನೆಯಲ್ಲಿ ತಯಾರಿಸುವ ಸಸ್ಯಾಹಾರಿ ಊಟದ ಪ್ಲೇಟ್ ಬೆಲೆ ಶೇ. 13ರಷ್ಟು ಹೆಚ್ಚಾಗಿದೆ ಎಂದು ಸಿಆರ್ ಐಎಸ್‌ಐಎಲ್ (CRISIL) ವರದಿ ತಿಳಿಸಿದೆ.

ಮನೆಯಲ್ಲಿ ತಯಾರಿಸುವ ಥಾಲಿಯಲ್ಲಿ ಧಾನ್ಯ, ಬೇಳೆಕಾಳು, ತರಕಾರಿ, ಮಸಾಲೆ, ಖಾದ್ಯ ತೈಲ ಮತ್ತು ಅಡುಗೆ ಅನಿಲವೆಲ್ಲ ಸೇರಿ ಸರಾಸರಿ ವೆಚ್ಚವನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದೆ. ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಚಾಲ್ತಿಯಲ್ಲಿರುವ ಬೆಲೆಗಳ ಆಧಾರದ ಮೇಲೆ ಲೆಕ್ಕಹಾಕಲಾಗಿದೆ. ಇದು ಸಾಮಾನ್ಯ ಮನುಷ್ಯನ ವೆಚ್ಚದ ಮೇಲೆ ತೀವ್ರ ಪ್ರಭಾವ ಬೀರುತ್ತಿದೆ.

ವೆಜ್ ಥಾಲಿ ಬೆಲೆ ಎಷ್ಟು ಹೆಚ್ಚಳ?

ಮನೆಯಲ್ಲಿ ಬೇಯಿಸಿದ ವೆಜ್ ಥಾಲಿಯ ಬೆಲೆ ಏಪ್ರಿಲ್‌ನಲ್ಲಿ ಶೇ. 8ರಷ್ಟು ಏರಿಕೆಯಾಗಿದೆ. ಆದರೆ ಮಾಂಸಾಹಾರಿ ಥಾಲಿಯ ಬೆಲೆ ಶೇ.4ರಷ್ಟು ಕಡಿಮೆಯಾಗಿದೆ.

ಕಾರಣ ಏನು?

ಕಳೆದ ಆರ್ಥಿಕ ವರ್ಷದ ಕ್ರಮವಾಗಿ ಈರುಳ್ಳಿ, ಟೊಮ್ಯಾಟೊ ಮತ್ತು ಆಲೂಗೆಡ್ಡೆಗಳ ಬೆಲೆಗಳು ವರ್ಷಕ್ಕೆ ಶೇ.41, ಶೇ. 40 ಮತ್ತು ಶೇ. 38ರಷ್ಟು ಏರಿಕೆಯಾದ ಕಾರಣ ಸಸ್ಯಾಹಾರಿ ಥಾಲಿಯ ಬೆಲೆ ಹೆಚ್ಚಾಗಿದೆ. ಬೆಳೆ ಬೆಳೆಯುವ ಪ್ರಮಾಣದಲ್ಲಿ ಗಮನಾರ್ಹ ಕುಸಿತ ಮತ್ತು ಪಶ್ಚಿಮ ಬಂಗಾಳದಲ್ಲಿ ಆಲೂಗಡ್ಡೆ ಬೆಳೆ ಹಾನಿ, ಕಡಿಮೆ ಈರುಳ್ಳಿ ಮಾರುಕಟ್ಟೆಗೆ ಬಂದಿದ್ದು ಬೆಲೆ ಏರಿಕೆಗೆ ಮುಖ್ಯ ಕಾರಣ.

ಅಕ್ಕಿಯ ಬೆಲೆ ಶೇ. 13ರಿಂದ ಶೇ.14ರಷ್ಟು, ಬೇಳೆಕಾಳುಗಳ ಬೆಲೆ ಶೇ. 9ರಿಂದ ಶೇ. 20ರಷ್ಟು ವರ್ಷಕ್ಕೆ ಏರಿಕೆಯಾಗಿದೆ.
ಜೀರಿಗೆ, ಮೆಣಸಿನಕಾಯಿ ಮತ್ತು ಸಸ್ಯಜನ್ಯ ಎಣ್ಣೆಯ ಬೆಲೆಗಳು ಕ್ರಮವಾಗಿ ಶೇ. 40, ಶೇ. 31 ಮತ್ತು ಶೇ. 10ರಷ್ಟು ಕುಸಿತವಾಗಿದೆ. ಇದು ಥಾಲಿ ವೆಚ್ಚದಲ್ಲಿ ಮತ್ತಷ್ಟು ಹೆಚ್ಚಾಳಕ್ಕೆ ಕೊಂಚ ನಿಯಂತ್ರಣ ಹಾಕಿದೆ.


ಮಾಂಸಾಹಾರಿ ಥಾಲಿ ಬೆಲೆಯಲ್ಲಿ ಇಳಿಕೆ

ಕಳೆದ ಹಣಕಾಸು ವರ್ಷದಲ್ಲಿ ಮಾಂಸದ ಕೋಳಿಗಳ ಬೆಲೆಯಲ್ಲಿ ವರ್ಷದಲ್ಲಿ ಕುಸಿತವಾಗಿದ್ದರೂ ತಿಂಗಳಿನಲ್ಲಿ ಸ್ಥಿರವಾಗಿತ್ತು. ಇದರಿಂದ ಮಾಂಸಾಹಾರಿ ಥಾಲಿಯ ಬೆಲೆ ಕೇವಲ ಶೇ. 3ರಷ್ಟು ಹೆಚ್ಚಳವಾಗಿತ್ತು. ಈರುಳ್ಳಿ ಬೆಲೆಯಲ್ಲಿನ ಶೇ. 4ರಷ್ಟು ಇಳಿಕೆಯಿಂದಾಗಿ ಮಾಂಸಾಹಾರಿ ಥಾಲಿಯು ತಿಂಗಳ ಬೆಲೆ ಸ್ಥಿರವಾಗಿತ್ತು. ಇಂಧನ ವೆಚ್ಚದಲ್ಲಿ ಶೇ. 3ರಷ್ಟು ಕುಸಿತವಾಗಿದ್ದು, ಟೊಮೆಟೊ ಮತ್ತು ಆಲೂಗಡ್ಡೆ ಬೆಲೆ ಏರಿಕೆಯಾಗಿತ್ತು.

ಮಾಂಸಾಹಾರಿ ಥಾಲಿಯ ಬೆಲೆಯು ಬ್ರಾಯ್ಲರ್‌ಗಳ ಬೆಲೆಯಲ್ಲಿ ಅಂದಾಜು ಶೇ. 4ರಷ್ಟು ಹೆಚ್ಚಳದಿಂದಾಗಿ ಏರಿಕೆಯಾಗಿದೆ. ಇದು ಹೆಚ್ಚಿನ ಬೇಡಿಕೆ ಮತ್ತು ಹೆಚ್ಚುತ್ತಿರುವ ವೆಚ್ಚಗಳ ಕಾರಣದಿಂದಾಗಿ ಎನ್ನಲಾಗಿದೆ.
ಕಡಿಮೆ ಕೋಳಿ ಬೆಲೆಗಳಿಂದಾಗಿ ಮನೆಯಲ್ಲಿ ಬೇಯಿಸಿದ, ಮಾಂಸಾಹಾರಿ ಥಾಲಿಯ ಬೆಲೆ ಏಪ್ರಿಲ್‌ನಲ್ಲಿ ಕಡಿಮೆಯಾಗಿದೆ. ಆದರೆ ಈರುಳ್ಳಿ, ಆಲೂಗೆಡ್ಡೆ ಮತ್ತು ಟೊಮ್ಯಾಟೊ ಬೆಲೆಗಳ ಏರಿಕೆಯೊಂದಿಗೆ ಸಸ್ಯಾಹಾರಿ ಥಾಲಿಯನ್ನು ತಯಾರಿಸುವ ವೆಚ್ಚವನ್ನು ಹೆಚ್ಚಾಗಿದೆ.

ಇದನ್ನೂ ಓದಿ: Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

ಎಷ್ಟು ಹೆಚ್ಚಳ?

ಮನೆಯಲ್ಲಿ ತಯಾರಿಸುವ ವೆಜ್ ಥಾಲಿ ಬೆಲೆ 2022ರ ಡಿಸೆಂಬರ್‌ನಿಂದ 2023ರ ಜೂನ್‌ವರೆಗೆ 26.7ರ ಒಳಗೆ ಇತ್ತು ಹಾಗೂ ಮಾಂಸಾಹಾರಿ ಥಾಲಿ ಬೆಲೆ 60.5ರ ಒಳಗಿತ್ತು. ಜುಲೈ ಮತ್ತು ಆಗಸ್ಟ್ ನಲ್ಲಿ ವೆಜ್ ಥಾಲಿ ಬೆಲೆ 34.1ರ ಸಮೀಪವಿದ್ದು, ಮಾಂಸಾಹಾರಿ ಥಾಲಿ 62.8 ರವರೆಗೆ ತಲುಪಿತ್ತು. ಬಳಿಕ ವೆಜ್ ಮತ್ತು ನಾನ್ ವೆಜ್ ಥಾಲಿ ಬೆಲೆ ಇಳಿಕೆಯಾಗಿದ್ದು, 2024ರ ಏಪ್ರಿಲ್ ನಲ್ಲಿ ವೆಜ್ ಥಾಲಿ ಬೆಲೆ 27.4ಕ್ಕೆ ತಲುಪಿದ್ದು, ನಾನ್ ವೆಜ್ ಥಾಲಿ ಬೆಲೆ 56.3ಕ್ಕೆ ತಲುಪಿದೆ.

Continue Reading
Advertisement
Food Poisoning
ಚಿತ್ರದುರ್ಗ1 min ago

Food Poisoning: ಮದುವೆ ಮನೆ ಊಟ ತಿಂದವರಿಗೆ ವಾಂತಿ, ಭೇದಿ; ನೂರಾರು ಮಂದಿ ಅಸ್ವಸ್ಥ

Gold Rate Today
ಕರ್ನಾಟಕ14 mins ago

Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

Heavy Rain
ಕರ್ನಾಟಕ25 mins ago

Heavy Rain: ಧಾರಾಕಾರ ಮಳೆಯಿಂದ ಮನೆಗೆ ನುಗ್ಗಿದ ನೀರು; ಮರ ಉರುಳಿ ವಾಹನಗಳು ಜಖಂ

Murder case in Bengaluru rural
ಬೆಂಗಳೂರು ಗ್ರಾಮಾಂತರ37 mins ago

Murder case : ತಡರಾತ್ರಿ ಹರಿದ ನೆತ್ತರು; ಕತ್ತು ಸೀಳಿ ಯುವಕನ ಬರ್ಬರ ಹತ್ಯೆ

Narendra Modi
ದೇಶ39 mins ago

Narendra Modi: “ದಿವ್ಯಾಂಗ ಸಹೋದರಿಯರಿಗೆ ವ್ಯವಸ್ಥೆ ಮಾಡಿ.. ಅಲ್ಲಿವರೆಗೆ ಭಾಷಣ ಮುಂದುವರೆಸಲ್ಲ”; ಪ್ರಧಾನಿ ಮೋದಿ ವಿಡಿಯೋ ವೈರಲ್

Prajwal Revanna Case
ಕರ್ನಾಟಕ43 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಎಸ್‌ಐಟಿಯ ವಿಶೇಷ ತಂಡ ರಚನೆ; ಶೀಘ್ರ ರೆಡ್‌ ಕಾರ್ನರ್ ನೋಟಿಸ್‌ ಜಾರಿ

K S Rajanna
ದೇಶ2 hours ago

K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

Viral News
ಕ್ರೈಂ2 hours ago

ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಹಾವಳಿ; ಹಾಡ ಹಗಲೇ ಯುವತಿಗೆ ಅನ್ಯಕೋಮಿನ ಯುವಕರಿಂದ ಕಿರುಕುಳ

CAA
ದೇಶ2 hours ago

CAA: ಕೇಂದ್ರ ಸೂಚನೆ ಕೊಟ್ಟ ಕೂಡಲೇ ಮಧ್ಯಪ್ರದೇಶದಲ್ಲಿ ಸಿಎಎ ಜಾರಿ; ಸಿಎಂ ಮೋಹನ್‌ ಯಾದವ್‌

Heavy Rain
ಕರ್ನಾಟಕ3 hours ago

Heavy Rain: ಬೆಂಗಳೂರಿನಲ್ಲಿ ಮಳೆಯ ಅಬ್ಬರ; ಹಲವೆಡೆ ರಸ್ತೆಯಲ್ಲೇ ಹರಿದ ನೀರು, ಸಂಚಾರ ಅಸ್ತವ್ಯಸ್ತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ21 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ22 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ24 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ1 day ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ2 days ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಟ್ರೆಂಡಿಂಗ್‌