World Liver Day: ಯಕೃತ್ತಿನ ಕ್ಷೇಮದಲ್ಲಿದೆ ಆರೋಗ್ಯದ ಸೂತ್ರ - Vistara News

ಆರೋಗ್ಯ

World Liver Day: ಯಕೃತ್ತಿನ ಕ್ಷೇಮದಲ್ಲಿದೆ ಆರೋಗ್ಯದ ಸೂತ್ರ

1990ನೇ ಸಾಲಿಗೆ ಹೋಲಿಸಿದಲ್ಲಿ, 2017ರ ಹೊತ್ತಿಗೆ ಲಿವರ್‌ ಕ್ಯಾನ್ಸರ್‌ ಪ್ರಕರಣಗಳಲ್ಲಿ ನೂರು ಪ್ರತಿಶತ ಹೆಚ್ಚಳ ಕಂಡುಬಂದಿರುವುದು ಕಳವಳಕಾರಿ. ಯಕೃತ್‌ ಜಾಗೃತಿ ದಿನದ (World Liver Day) ಸಂದರ್ಭದಲ್ಲಿ ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

World Liver Day tips for Liver Health
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ಪಿತ್ತಜನಕಾಂಗದ ಕುರಿತು ವಿಶ್ವದೆಲ್ಲೆಡೆ ಜಾಗೃತಿ ಹರಡುವ ದಿನ. ಸದ್ದಿಲ್ಲದೆ ಹರಡುವ ಯಕೃತ್ತಿನ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿ, ಈ ಬಗ್ಗೆ ಕಾಳಜಿ ತೆಗೆದುಕೊಳ್ಳುವಂತೆ ಜನರನ್ನು ಪ್ರಚೋದಿಸುವ ಉದ್ದೇಶದಿಂದ ಎಪ್ರಿಲ್‌ ತಿಂಗಳ ೧೯ನೇ ದಿನವನ್ನು ವಿಶ್ವ ಯಕೃತ್‌ ದಿನ (World Liver Day) ಎಂದು ಗುರುತಿಸಲಾಗಿದೆ.

ಆಹಾರ ಮತ್ತು ಜೀವನಶೈಲಿಯ ಬಗ್ಗೆ ವಿಪರೀತ ಎನ್ನುವಂಥ ಅಡ್ಡದಾರಿಗಳಿರುವ ಇಂದಿನ ಜಗತ್ತಿನಲ್ಲಿ, ಮಾನವ ದೇಹದ ಒಂದೊಂದೇ ಅಂಗಾಂಗಗಳು ಜಖಂಗೊಳ್ಳುತ್ತಿರುವ ವರ್ತಮಾನಗಳು ಹೆಚ್ಚುತ್ತಿವೆ. ಅದರಲ್ಲೂ ನಾವು ತಿಂದಿದ್ದನ್ನೆಲ್ಲಾ ಚೂರ್ಣಿಸುವ ಹೊಣೆಯನ್ನು ಹೊತ್ತಿರುವ ಪಿತ್ತಜನಕಾಂಗ ಸದ್ದಿಲ್ಲದೆ ಅನಾರೋಗ್ಯದತ್ತ ಸಾಗುತ್ತಿದೆ. ಹೆಪಟೈಟಿಸ್‌ ಎ, ಹೆಪಟೈಟಿಸ್‌ ಬಿ, ಲಿವರ್‌ ಸಿರೋಸಿಸ್‌, ಲಿವರ್‌ ಕ್ಯಾನ್ಸರ್‌, ಅಲ್ಕೋಹಾಲ್‌ ಮೂಲದಿಂದಲ್ಲದ ಫ್ಯಾಟಿ ಲಿವರ್‌ ಮುಂತಾದ ಯಕೃತ್‌ ತೊಂದರೆ ವಿಪರೀತ ಎನ್ನುವಂತೆ ಬಾಧಿಸುತ್ತಿವೆ. 1990ನೇ ಸಾಲಿಗೆ ಹೋಲಿಸಿದಲ್ಲಿ, 2017ರ ಹೊತ್ತಿಗೆ ಲಿವರ್‌ ಕ್ಯಾನ್ಸರ್‌ ಪ್ರಕರಣಗಳಲ್ಲಿ ನೂರು ಪ್ರತಿಶತ ಹೆಚ್ಚಳ ಕಂಡುಬಂದಿರುವುದು ಕಳವಳಕಾರಿ ಎನಿಸಿದ್ದು, ಯಕೃತ್‌ ಕುರಿತ ಜಾಗೃತಿ ದಿನದ (World Liver Day) ಮಹತ್ವವನ್ನು ಹೆಚ್ಚಿಸಿದೆ. ಈ ಬಾರಿಯ ಘೋಷ ವಾಕ್ಯ: “ಜಾಗೃತರಾಗಿರಿ, ನಿಯಮಿತವಾಗಿ ಯಕೃತ್‌ ತಪಾಸಣೆ ಮಾಡಿಸಿಕೊಳ್ಳಿ, ಫ್ಯಾಟಿ ಲಿವರ್‌ ಯಾರನ್ನೂ ಕಾಡಬಹುದು”

ಮೆದುಳಿನ ನಂತರ, ದೇಹದ ಎರಡನೇ ದೊಡ್ಡ ಅಂಗವೆಂದರೆ ಯಕೃತ್ತು. ದೇಹದಲ್ಲಿ ಒಂದಿಷ್ಟು ಮಹತ್ವದ ಹೊಣೆಗಾರಿಕೆಯ ನಿರ್ವಹಣೆ ಪಿತ್ತಜನಕಾಂಗದ ಪಾಲಿಗಿದೆ. ದೇಹದ ಡಿಟಾಕ್ಸ್‌, ಅಂದರೆ ದೇಹವನ್ನು ವಿಷಮುಕ್ತ ಮಾಡುವುದರಿಂದ ಹಿಡಿದು, ದೇಹದ ಚಯಾಪಚಯ ನಿಭಾಯಿಸಿ, ಪೋಷಕಾಂಶಗಳನ್ನು ದಾಸ್ತಾನು ಮಾಡಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ, ಆಹಾರ ಪಚನ ಮಾಡುವ ಪಿತ್ತರಸ (bile juice) ಉತ್ಪಾದನೆಯವರೆಗೆ ದಿನವಿಡೀ ಕೆಲಸ ಮಾಡುತ್ತಿರುತ್ತದೆ ಯಕೃತ್ತು. ಯಕೃತ್ತನ್ನು ಕ್ಷೇಮವಾಗಿ ಇರಿಸಿಕೊಳ್ಳುವುದರಿಂದ ಬೊಜ್ಜು, ಕೊಲೆಸ್ಟ್ರಾಲ್, ಮಧುಮೇಹ ಮುಂತಾದ ಹಲವಾರು ಸಮಸ್ಯೆಗಳನ್ನು ದೂರ ಇರಿಸಲು ಸಾಧ್ಯ.

ಇದನ್ನೂ ಓದಿ: Fatty Liver Disease: ಯಕೃತ್ತಿನ ಕೊಬ್ಬು, ಏನೀ ಸಮಸ್ಯೆ? ಪರಿಹಾರಗಳೇನು?

ತೊಂದರೆಗಳು ಹಲವು

ಕೆಲವು ರೀತಿಯ ವೈರಸ್‌ ಸೋಂಕುಗಳು ಯಕೃತ್ತಿಗೆ ಹಾನಿ ಮಾಡಬಲ್ಲವು. ಉದಾ, ಹೆಪಟೈಟಿಸ್‌ ಎ, ಬಿ, ಸಿಯಂಥ ರೋಗಾಣುಗಳು. ಇದಲ್ಲದೆ, ಅಲ್ಕೋಹಾಲ್‌ನಿಂದಾಗುವ ಫ್ಯಾಟಿ ಲಿವರ್‌ (ಅಲ್ಕೋಹಾಲ್‌ ಜನ್ಯವಲ್ಲದ ಫ್ಯಾಟಿಲಿವರ್‌ ಸಮಸ್ಯೆಯೂ ಇತ್ತೀಚೆಗೆ ಸಿಕ್ಕಾಪಟ್ಟೆ ಹೆಚ್ಚಿದೆ), ಆಟೋಇಮ್ಯೂನ್‌ ಸಮಸ್ಯೆಯಿಂದಾಗಿ ಅಮರಿಕೊಳ್ಳುವ ಲಿವರ್‌ ತೊಂದರೆಗಳು- ಹೀಗೆ ಹಲವು ಸಮಸ್ಯೆಗಳು ಪಿತ್ತಜನಕಾಂಗವನ್ನು ಕಾಡಬಹುದು. ಕಣ್ಣು, ಚರ್ಮ ಹಳದಿಯಾಗುವುದು, ಕಣ್ಣಿನಲ್ಲಿ ಬಿಳಿಯ ಕಲೆಗಳು, ಅಕಾರಣವಾಗಿ ತೂಕ ಇಳಿಯುವುದು, ಅತೀತ ಸುಸ್ತು ಇಂಥ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರಲ್ಲಿ ಯಕೃತ್‌ ತಪಾಸಣೆ ಮಾಡಿಸುವುದು ಅಗತ್ಯ.

ನಿಯಮಿತವಾದ ವ್ಯಾಯಾಮ, ಸಂತುಲಿತ ಆಹಾರ, ಅಲ್ಕೋಹಾಲ್‌ ಮತ್ತು ಸಂಸ್ಕರಿತ ಆಹಾರಗಳ ಸೇವನೆಯಿಂದ ದೂರ ಇರುವುದು ಮುಂತಾದ ಕೆಲವು ಸರಳ ಬದಲಾವಣೆಗಳಿಂದ ನಮ್ಮ ಯಕೃತ್ತನ್ನು ಕ್ಷೇಮವಾಗಿ ಕಾಪಾಡಿಕೊಂಡು, ರೋಗಮುಕ್ತರಾಗಿ ಬದುಕುವುದಕ್ಕೆ ಸಾಧ್ಯವಿದೆ. ಆಹಾರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದರಿಂದ ಯಕೃತ್ತಿನ ಆರೋಗ್ಯ ಗಣನೀಯ ಪ್ರಮಾಣದಲ್ಲಿ ಸುಧಾರಿಸಬಲ್ಲದು.

ಗ್ರೀನ್‌ ಟೀ: ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಈ ಪೇಯ, ದೇಹದಲ್ಲಿ ಉರಿಯೂತ ಶಮನ ಮಾಡಬಲ್ಲದು. ಇದರಿಂದ ಯಕೃತ್ತಿನ ಆರೋಗ್ಯವೂ ಸುಧಾರಿಸುತ್ತದೆ.

ಹಸಿರು ತರಕಾರಿಗಳು: ಎಲೆಕೋಸು, ಹೂಕೋಸು, ಬ್ರೊಕೊಲಿಯಂಥ ತರಕಾರಿಗಳು ಸಹ ಪಿತ್ತಜನಕಾಂಗದ ಆರೋಗ್ಯ ರಕ್ಷಣೆಗೆ ನೆರವಾಗಬಲ್ಲವು.

ಬೀಜಗಳು: ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಬಾದಾಮಿ, ವಾಲ್‌ನಟ್‌ ಮುಂತಾದ ಬೀಜಗಳು ಲಿವರ್‌ನ ಕ್ಷಮತೆಯನ್ನು ಹೆಚ್ಚಿಸಬಲ್ಲವು

ಬೆಳ್ಳುಳ್ಳಿ: ಪಿತ್ತಜನಕಾಂಗದ ಉರಿಯೂತವನ್ನು ಕಡಿಮೆ ಮಾಡಿ, ಉತ್ಕರ್ಷಣ ನಿರೋಧಕವಾಗಿಯೂ ಬೆಳ್ಳುಳ್ಳಿ ಕೆಲಸ ಮಾಡಬಲ್ಲದು.

ಬೆರ್ರಿಗಳು: ಬ್ಲೂಬೆರ್ರಿ, ಸ್ಟ್ರಾಬೆರ್ರಿಯಂಥವು ದೇಹಕ್ಕೆ ಹೆಚ್ಚಿನ ನಾರಿನಂಶದೊಂದಿಗೆ ಪಿತ್ತಜನಕಾಂಗದ ರಕ್ಷಣೆಗೆ ಅಗತ್ಯ ಸತ್ವಗಳನ್ನು ನೀಡಬಲ್ಲವು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

ಭಾರತೀಯರಿಗಾಗಿಯೇ ವಿಶೇಷವಾಗಿ ಈ ಆಹಾರ ಮಾರ್ಗದರ್ಶನಗಳನ್ನು ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಬಿಡುಗಡೆ ಮಾಡಿದೆ. ಐಎಂಆರ್‌ಸಿ ಅಡಿಯಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ನೇಮಿಸಲಾದ ತಜ್ಞರ ಸಮಿತಿ ಈ ಶಿಫಾರಸಿ ಜೀವನಶೈಲಿಯ ರೋಗಗಳನ್ನು ದೂರ ಇರಿಸಲು ಅಗತ್ಯವಾದ ಸೂಚನೆಗಳನ್ನು 13 ವರ್ಷಗಳ ನಂತರ ಬಿಡುಗಡೆ ಮಾಡಿದೆ. ಯಾವುದೇ ಉತ್ಪನ್ನವನ್ನು ಖರೀದಿಸುವಾಗ ಅದರ ಲೇಬಲ್‌ ಮೇಲೆ ನಮೂದಿಸಿರುವ ಮಾಹಿತಿಯನ್ನು ಪರಿಶೀಲಿಸಿ (Protein Supplements) ಎಂದು ಗ್ರಾಹಕರಿಗೆ ತಿಳಿಸಿದೆ.

VISTARANEWS.COM


on

Protein Supplements
Koo

ದೇಹದ ಸ್ನಾಯುಗಳನ್ನು ಹೆಚ್ಚಿಸುವ ಉದ್ದೇಶದಿಂದ ದೀರ್ಘಕಾಲ ತೆಗೆದುಕೊಳ್ಳುವ ಎಲ್ಲ ಪೂರಕಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಎಂಆರ್‌ಸಿ) ಎಚ್ಚರಿಸಿದೆ. ಬದಲಿಗೆ, ಸಮತೋಲಿತ ಆಹಾರದ ಮೂಲಕವೇ ಸತ್ವಗಳನ್ನು ದೇಹಕ್ಕೆ ಒದಗಿಸುವುದಕ್ಕೆ ಶಿಫಾರಸು ಮಾಡಿದೆ. ಪ್ರೊಟೀನ್‌ ಮತ್ತು ವಿಟಮಿನ್‌ಗಳ (Protein Supplements) ಪೂರಕಗಳನ್ನು ಸೇವಿಸುವ ಬಗ್ಗೆ ಕೆಲವು ಮಾರ್ಗದರ್ಶಿಸೂತ್ರಗಳನ್ನು ಈ ಸಂಸ್ಥೆ ಬಿಡುಗಡೆ ಮಾಡಿದ್ದು, ಉಪ್ಪು, ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳ ಸೇವನೆಗೆ ಕಡಿವಾಣ ಹಾಕುವ ಅಗತ್ಯವನ್ನು ಒತ್ತಿಹೇಳಿದೆ. ಭಾರತೀಯರಿಗಾಗಿಯೇ ವಿಶೇಷವಾಗಿ ಈ ಮಾರ್ಗದರ್ಶನಗಳನ್ನು, ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಬಿಡುಗಡೆ ಮಾಡಿದೆ. ಐಎಂಆರ್‌ಸಿ ಅಡಿಯಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ನೇಮಿಸಲಾದ ತಜ್ಞರ ಸಮಿತಿ ಈ ಶಿಫಾರಸಿ ಜೀವನಶೈಲಿಯ ರೋಗಗಳನ್ನು ದೂರ ಇರಿಸಲು ಅಗತ್ಯವಾದ ಸೂಚನೆಗಳನ್ನು 13 ವರ್ಷಗಳ ನಂತರ ಇದಾಗಿದೆ. ಯಾವುದೇ ಉತ್ಪನ್ನವನ್ನು ಖರೀದಿಸುವಾಗ ಅದರ ಲೇಬಲ್‌ ಮೇಲೆ ನಮೂದಿಸಿರುವ ಮಾಹಿತಿಯನ್ನು ಪರಿಶೀಲಿಸಿ ಎಂದು ಗ್ರಾಹಕರಿಗೆ ತಿಳಿಸಿದೆ.

Protein Supplements

ಪೂರಕಗಳೇಕೆ ಬೇಡ?

ದೀರ್ಘ ಕಾಲದವರೆಗೆ ಪ್ರೊಟೀನ್‌ ಪೂರಕಗಳನ್ನು ಸೇವಿಸುವುದರಿಂದ ಕಿಡ್ನಿ ತೊಂದರೆಗಳು ಕಾಡಬಹುದು; ಮೂಳೆಗಳಲ್ಲಿನ ಖನಿಜಾಂಶ ಕ್ಷೀಣಿಸಬಹುದು. ಹಾಗಾಗಿ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಆಹಾರದ ಮೂಲಕವೇ ತೆಗೆದುಕೊಳ್ಳುವುದು ಸುರಕ್ಷಿತವಾದ ಮಾರ್ಗ ಎಂದು ಸಂಸ್ಥೆ ಹೇಳಿದೆ. ಪ್ರೊಟೀನ್‌ ಪೂರಕಗಳನ್ನು ಮೊಟ್ಟೆ, ಹಾಲು, ಸೋಯ, ಬಟಾಣಿ ಮುಂತಾದ ವಸ್ತುಗಳಿಂದ ಮಾಡಲಾಗುತ್ತದೆ. ಆದರೆ ಕೆಲವು ಉತ್ಪನ್ನಗಳಲ್ಲಿ ರುಚಿ ಹೆಚ್ಚಿಸುವ ಉದ್ದೇಶದಿಂದ ಸಕ್ಕರೆ ಅಥವಾ ಯಾವುದಾದರೂ ಕೃತಕ ವಸ್ತುಗಳನ್ನು ಸೇರಿಸಲಾಗುತ್ತದೆ. ಇಂಥವುಗಳನ್ನು ದೀರ್ಘಕಾಲದವರೆಗೆ ಸೇವಿಸುವುದು ಆರೋಗ್ಯಕ್ಕೆ ಸೂಕ್ತವಲ್ಲ. ಶೇ. ೫೬ಕ್ಕೂ ಹೆಚ್ಚಿನ ಭಾರತೀಯರಿಗೆ ಹೆಚ್ಚಿನ ಸಾರಿ ಅನಾರೋಗ್ಯಗಳು ಕಾಡುವುದು ಅಸಮರ್ಪಕ ಆಹಾರ ಪದ್ಧತಿಯಿಂದ. ಹಾಗಾಗಿ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವುದು ರೋಗಮುಕ್ತವಾಗುವಲ್ಲಿ ಮಹತ್ವದ್ದು ಎಂದು ಹೇಳಿದೆ.

Protein Supplements

ಆಹಾರ ಹೇಗಿರಬೇಕು?

ಸಮತೋಲಿತ ಆಹಾರ ಪದ್ಧತಿಯೆಂದರೆ ಹೇಗಿರಬೇಕು? ಆಹಾರದಲ್ಲಿ ಯಾವುದು ಎಷ್ಟು ಇದ್ದರೆ ಸರಿ ಅಥವಾ ತಪ್ಪು? ಸಂಸ್ಥೆಯ ಪ್ರಕಾರ, ದಿನದ ಒಟ್ಟು ಕ್ಯಾಲರಿಗಳಲ್ಲಿ ಶೇ ೫. ರಷ್ಟು ಮಾತ್ರವೇ ಸಕ್ಕರೆಯ ಕ್ಯಾಲರಿಯಿಂದ ಬರಬಹುದು. ಉಳಿದಂತೆ ಧಾನ್ಯ ಮತ್ತು ಸಿರಿಧಾನ್ಯಗಳಿಂದ ದೊರೆಯುವ ಶಕ್ತಿಯು ಶೇ. 45ನ್ನು ಮೀರುವಂತಿಲ್ಲ. ಕಾಳುಗಳು, ಮಾಂಸ ಮುಂತಾದವುಗಳ ಕ್ಯಾಲರಿ ಶೇ. 15 ಇದ್ದರೆ ಸಾಕಾಗುತ್ತದೆ. ಉಳಿದ ಶಕ್ತಿಗಳೆಲ್ಲ ಕಾಯಿ-ಬೀಜಗಳು, ತರಕಾರಿ-ಹಣ್ಣುಗಳು ಮತ್ತು ಡೇರಿ ಉತ್ಪನ್ನಗಳಿಂದ ಬರಬೇಕು. ಈ ಎಲ್ಲಾ ಕ್ಯಾಲರಿಗಳಲ್ಲೂ ಶೇ. 30ಕ್ಕಿಂತ ಕಡಿಮೆ ಶಕ್ತಿ ಕೊಬ್ಬಿನಿಂದ ಬಂದರೆ ಸಾಕಾಗುತ್ತದೆ. ಆದರೆ ಮಾಂಸ ಮತ್ತು ಕಾಳುಗಳ ಬೆಲೆ ದುಬಾರಿ ಎನ್ನುವ ಕಾರಣಕ್ಕಾಗಿ ಧಾನ್ಯಗಳನ್ನು ಭಾರತೀಯರು ಮಿತಿಮೀರಿ ಬಳಸುತ್ತಿದ್ದಾರೆ. ಇದು ಅತಿಯಾದ ಪಿಷ್ಟದ ಸೇವನೆಗೆ ಕಾರಣವಾಗುತ್ತಿದೆ. ಹಾಗಾಗಿ ಅಗತ್ಯ ಅಮೈನೊ ಆಮ್ಲಗಳು ಮತ್ತು ಕೊಬ್ಬಿನಾಮ್ಲಗಳು ಸರಿಯಾಗಿ ದೊರೆಯದಿದ್ದರೆ, ಸತ್ವಗಳ ಕೊರತೆ ಉಂಟಾಗುತ್ತದೆ. ಮಾತ್ರವಲ್ಲ, ರಕ್ತದೊತ್ತಡ ಮತ್ತು ಟೈಪ್‌ 2 ಮಧುಮೇಹಕ್ಕೂ ಕಾರಣವಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.
ಅವಧಿಗೆ ಮುನ್ನವೇ, ಅಂದರೆ ಪೂರ್ಣಾಯಸ್ಸು ಬದುಕದೆಯೇ ಸಾವನ್ನಪ್ಪುವವರ ಸಂಖ್ಯೆ ಇದರಿಂದ ಹೆಚ್ಚಾಗುತ್ತಿದೆ. ತಪ್ಪಾದ ಆಹಾರ ಪದ್ಧತಿ ಮತ್ತು ಅದರಿಂದ ಬರುತ್ತಿರುವ ಜೀವನಶೈಲಿಯ ರೋಗಗಳನ್ನು ಸರಿಪಡಿಸಿಕೊಳ್ಳುವುದರಿಂದ ಇಂಥ ಸಾವನ್ನು ತಡೆಯಬಹುದು. ಇದಕ್ಕಾಗಿ ಪೋಷಕಾಂಶಗಳು ಸಮತೋಲನೆಯಲ್ಲಿ ದೊರೆಯುವಂತೆ ಆಹಾರ ಸೇವಿಸಬೇಕು. ವ್ಯಾಯಾಮವೆಂಬುದು ಬದುಕಿನ ಭಾಗ ಆಗಿರಬೇಕು. ಸಂಸ್ಕರಿತ ಆಹಾರಗಳು ಹಾಗೂ ಅದರಿಂದ ಬರುವ ಉಪ್ಪು ಮತ್ತು ಸಕ್ಕರೆಯಂಶಗಳನ್ನು ನಿಯಂತ್ರಿಸಬೇಕು. ಆಗ ಮಾತ್ರ ಸತ್ವಗಳ ಕೊರತೆ ಮತ್ತು ಬೊಜ್ಜಿನಂಥ ತೊಂದರೆಗಳಿಂದ ದೂರವಾಗುವುದಕ್ಕೆ ಸಾಧ್ಯ.

ಇದನ್ನೂ ಓದಿ: Vitamin Side Effects: ವಿಟಮಿನ್‌ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?

ಪ್ರೊಟೀನ್‌ ಮೂಲಗಳೇನು?

ಪ್ರೊಟೀನ್‌ ಪೂರಕಗಳು ಬೇಡವೆಂದರೆ, ಅಗತ್ಯ ಪ್ರಮಾಣದ ಸತ್ವ ಯಾವುದರಿಂದ ಬರಬೇಕು? ಎಂಥಾ ಆಹಾರವನ್ನು ಸೇವಿಸಬೇಕು? ಲೀನ್‌ ಮೀಟ್‌ ಅಥವಾ ಕಡಿಮೆ ಕೊಬ್ಬಿನ ಮಾಂಸಗಳು, ಮೀನುಗಳು, ಮೊಟ್ಟೆ, ಡೇರಿ ಉತ್ಪನ್ನಗಳು, ಕಾಳುಗಳು ಮತ್ತು ಕಾಯಿ-ಬೀಜಗಳಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್‌ ನೈಸರ್ಗಿಕವಾಗಿ ದೊರೆಯುತ್ತದೆ.

Continue Reading

ಆರೋಗ್ಯ

International Nurses’s Day: ಇಂದು ನರ್ಸ್‌ಗಳ ದಿನ; ಈ ದಿನಾಚರಣೆ ಹಿನ್ನೆಲೆ ಏನು?

ಕಠಿಣ ಸಂದರ್ಭಗಳಲ್ಲೂ ಧೃತಿಗೆಡದಂತೆ ರೋಗಿಗಳ ಶುಶ್ರೂಷೆ ನಿರ್ವಹಿಸುವ ನರ್ಸ್‌ಗಳ (International Nurses’s Day) ಸೇವಾ ಮನೋಭಾವಕ್ಕೆ ಧನ್ಯವಾದ ಹೇಳುವುದಕ್ಕೆಂದು ನಿಗದಿಯಾದ ದಿನವೇ ಮೇ 12. ನರ್ಸಿಂಗ್‌ ಕ್ಷೇತ್ರಕ್ಕೆ ಹೊಸಭಾಷ್ಯ ಬರೆದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರನ್ನು ನೆನಪಿಸಿಕೊಳ್ಳುವ ಸಂದರ್ಭವೂ ಇದು ಹೌದು. ಈ ದಿನದ ಹಿನ್ನೆಲೆ ಏನು? ಸಂದೇಶ ಏನು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

International Nurses’s Day
Koo

ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕೆ ನರ್ಸ್‌ಗಳು (International Nurses’s Day) ಅಥವಾ ವೈದ್ಯಕೀಯ ಶುಶ್ರೂಷಕಿಯರು ನೀಡುತ್ತಿರುವ ಕೊಡುಗೆ ದೊಡ್ಡದು. ಆಸ್ಪತ್ರೆ ಸಣ್ಣದೇ ಇರಲಿ, ದೊಡ್ಡದೇ ಇರಲಿ. ಶುಶ್ರೂಷಕರಿಲ್ಲದೆ ಕೆಲಸ ನಡೆಯುವುದಿಲ್ಲ. ಇಂದು ಸರಳ ಅಂದಾಜಿನ ಪ್ರಕಾರ, 12 ತಾಸಿನ ಪಾಳಿಯೊಂದರಲ್ಲಿ, ನರ್ಸ್‌ಗಳು ಸುಮಾರು 5-6 ಮೈಲುಗಳಷ್ಟು ದೂರ ನಡೆಯುತ್ತಾರೆ. ಕೋವಿಡ್‌ ಸಮಯದಲ್ಲಿ ನರ್ಸ್‌ಗಳು ಮಾಡಿದ ಕೆಲಸಕ್ಕೆ ಇಡೀ ಲೋಕ ಸಾಕ್ಷಿಯಾಗಿದೆ. ಆದರೂ ಇಂಥ ವೃತ್ತಿಯ ಬಗ್ಗೆ ಇರಬೇಕಾದ ಗೌರವ ಇಲ್ಲ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಮಾತ್ರ ಸಾಕ್ಷಿಗಳು ಬೇಕಿಲ್ಲ. ಪ್ರತಿ ವರ್ಷ ಮೇ ತಿಂಗಳ 12ನೇ ದಿನವನ್ನು ʻಅಂತಾರಾಷ್ಟ್ರೀಯ ಶುಶ್ರೂಷಕರ ದಿನʼ ಎಂದು ಗುರುತಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.

Elder Woman in Wheelchair with Caregiver

ಅಂದೇ ಏಕೆ

ಆಧುನಿಕ ಕಾಲದಲ್ಲಿ ಶುಶ್ರೂಷಕರ ವೃತ್ತಿಗೆ ಹೊಸ ಭಾಷ್ಯ ಬರೆದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಜನ್ಮ ದಿನದ ನೆನಪಿಗಾಗಿ ಮೇ 12ರಂದು ಈ ದಿನವನ್ನು ಆಚರಿಸಲಾಗುತ್ತಿದೆ. 1850ರ ಯುದ್ಧ ಕಾಲದಲ್ಲಿ ಗಾಯಗೊಂಡಿದ್ದ ಬ್ರಿಟನ್‌ ಸೈನಿಕರನ್ನು ನೈಟಿಂಗೇಲ್‌ ಮತ್ತು ಆಕೆಯ ತಂಡ ಆರೈಕೆ ಮಾಡಿದ್ದ ರೀತಿ ಇಂದಿಗೂ ಚರಿತ್ರೆಯ ಭಾಗವಾಗಿ ನಿಂತಿದೆ. ಮೊದಲಿಗೆ ಆಕೆ ಆಸ್ಪತ್ರೆಗೆ ಆಗಮಿಸಿದಾಗ ಅಲ್ಲಿನ ಸ್ಥಿತಿಗತಿಯನ್ನು ನೋಡಿ ಹೌಹಾರಿದ್ದಳು. ಇಡೀ ಸ್ಥಳ ಕೊಳಕು ಕೂಪದಂತೆ ಕಾಣುತ್ತಿತ್ತು. ಆ ಸ್ಥಳವನ್ನೆಲ್ಲ ಸ್ವಚ್ಛಗೊಳಿಸಿ, ಅಲ್ಲಿ ಅಗತ್ಯವಿದ್ದಷ್ಟು ಆಹಾರ ಮತ್ತು ಔಷಧಿಗಳನ್ನು ತರಿಸಿಕೊಂಡಳು. 1860ರಲ್ಲಿ ಲಂಡನ್‌ನಲ್ಲಿ ನರ್ಸಿಂಗ್‌ ಶಾಲೆಯೊಂದನ್ನು ತೆರೆದಳು. ಆನಂತರದಿಂದ ವಿಶ್ವದ ಹಲವೆಡೆಗಳನ್ನು ನರ್ಸಿಂಗ್‌ಗಾಗಿ ಪ್ರತ್ಯೇಕ ಶಾಲೆಗಳು, ಕೋರ್ಸ್‌ಗಳು ಅಗತ್ಯವೆನ್ನುವ ಅರಿವು ಹೆಚ್ಚಿತು. ಹಾಗಾಗಿ ಈ ಮೇರು ವ್ಯಕ್ತಿಯನ್ನು ಸಹ ಮೇ 12ರಂದು ನೆನಪಿಸಿಕೊಳ್ಳಲಾಗುತ್ತದೆ.
ಆಸ್ಟ್ರೇಲಿಯ, ಕೆನಡಾ, ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವಾರು ದೇಶಗಳಲ್ಲಿ ಇಡೀ ವಾರವನ್ನೇ ಶುಶ್ರೂಷಕರ ಸಪ್ತಾಹವೆಂದು ಆಚರಿಸುವ ಕ್ರಮವಿದೆ. ಇದಕ್ಕಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ತಮಗೆ ಆರೈಕೆ ಮಾಡಿದ ನರ್ಸ್‌ಗಳಿಗೆ ಧನ್ಯವಾದದ ರೂಪವಾಗಿ ಉಡುಗೊರೆಗಳನ್ನೂ ನೀಡಲಾಗುತ್ತದೆ. ಮಾತ್ರವಲ್ಲ, ನರ್ಸಿಂಗ್‌ ವೃತ್ತಿಯ ಬಗ್ಗೆ ಸಮಾಜದಲ್ಲಿರುವ ತರತಮದ ಭಾವಗಳನ್ನು ಹೋಗಲಾಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ.

Nurse with senior patient

ಸವಾಲುಗಳೇನು?

ಈ ಬಾರಿಯ ಶುಶ್ರೂಷಕರ ದಿನದ ಘೋಷವಾಕ್ಯ- “ನಮ್ಮ ಶುಶ್ರೂಷಕರು; ನಮ್ಮ ಭವಿಷ್ಯ. ಆರೈಕೆಯ ಹಿಂದಿನ ಆರ್ಥಿಕ ಶಕ್ತಿ”. ಈ ವೃತ್ತಿಯಲ್ಲಿರುವಂಥ ಅವಕಾಶಗಳು, ಇದಕ್ಕಿರುವ ಘನತೆ, ಬಡವ-ಬಲ್ಲಿದನೆಂಬ ಭೇದವಿಲ್ಲದಂತೆ ಸೇವೆ ಮಾಡುವ ಮನೋಭಾವ, ಸಹನೆಯಂಥ ಘನ ಗುಣಗಳನ್ನು ಹೆಚ್ಚಾಗಿ ಪ್ರಚುರ ಪಡಿಸುವುದರಿಂದ ಆರೈಕೆಗೆ ಆರ್ಥಿಕ ಬಲವೂ ಲಭ್ಯವಾಗಲು ಸಾಧ್ಯವಿದೆ. ಯುದ್ಧ, ನೈಸರ್ಗಿಕ ಪ್ರಕೋಪಗಳು, ಕೋವಿಡ್‌ನಂಥ ಮಹಾಮಾರಿ- ಹೀಗೆ ಯಾವುದೇ ಸಂದರ್ಭದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾದರೂ, ಇದರ ಒತ್ತಡ ಬೀಳುವುದು ಶುಶ್ರೂಷಕರ ಮೇಲೆ. ರೋಗಿಗಳ ನೋವು, ಅಸಹಾಯಕತೆ; ತಮ್ಮವರನ್ನು ಕಳೆದುಕೊಂಡವರ ಕೋಪ-ತಾಪಗಳೆಲ್ಲ ಕೆಲವೊಮ್ಮೆ ತಿರುಗುವು ಶುಶ್ರೂಷಕರ ಮೇಲೆ. ಅಂಥ ಸಂದರ್ಭದಲ್ಲೂ ಕರುಣೆಯಿಂದಲೇ ವರ್ತಿಸಿ, ಅವರನ್ನು ಆರೈಕೆ ಮಾಡುವುದು, ಸಮಾಧಾನ ಮಾಡುವುದು ಅತ್ಯಂತ ಕಷ್ಟದ ಕೆಲಸ. ಆದರೆ ಅದನ್ನಾದರೂ ನರ್ಸ್‌ಗಳು ಧೃತಿಗೆಡದಂತೆ ಮಾಡುತ್ತಾರೆ. ಹಾಗಾಗಿ ಅವರಿಗೆ ಧನ್ಯವಾದ ಹೇಳುವಂಥ ನಿಮ್ಮಿಷ್ಟದ ಸಣ್ಣ, ಸರಳ ಕೆಲಸ ಯಾವುದನ್ನಾದರೂ ಮಾಡಬಹುದು.

Continue Reading

ಆರೋಗ್ಯ

ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ

ಕೆಲವೊಮ್ಮೆ ತಿನ್ನುವ ಕಡು ಬಯಕೆಯನ್ನು ನಿಯಂತ್ರಿಸುವುದು ಕಷ್ಟ. ಈ ಸಂದರ್ಭದಲ್ಲಿ ಪರ್ಯಾಯವಾಗಿ ಬಳಸಬಹುದಾದ ಕೆಲವು ಆಹಾರ ಪದಾರ್ಥಗಳಿವೆ. ಈ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾರ್ಗಸೂಚಿಯನ್ನು (ICMR Dietary Guidelines) ಬಿಡುಗಡೆ ಮಾಡಿದೆ. ಈ ಬಗ್ಗೆ ಇಲ್ಲಿದೆ ವಿಸ್ತೃತ ಮತ್ತು ಉಪಯುಕ್ತ ಮಾಹಿತಿ.

VISTARANEWS.COM


on

By

ICMR Dietary Guidelines
Koo

ಬೆಳಗ್ಗೆ ಉಪಾಹಾರ (breakfast) ಚೆನ್ನಾಗಿಯೇ ಆಗಿದೆ. ಆದರೂ ಊಟಕ್ಕಿಂತ (lunch) ಮೊದಲು ಏನಾದರೂ ತಿನ್ನಬೇಕು ಎನ್ನುವ ಕಡು ಬಯಕೆ ಉಂಟಾಗುವುದು ಸಾಮಾನ್ಯ. ಆದರೆ ಎಲ್ಲರಿಗೂ ಇದನ್ನು ನಿಯಂತ್ರಿಸಲಾಗದು. ಹೀಗಾಗಿ ಕರಿದ ತಿಂಡಿಗಳು, ಕುರುಕಲು ತಿಂಡಿಗಳು (snaks), ಸಾಫ್ಟ್ ಡ್ರಿಂಕ್ಸ್ (soft drinks), ಜ್ಯೂಸ್‌ (juice) ಮೊದಲಾದವುಗಳ ಮೊರೆ ಹೋಗುತ್ತೇವೆ. ಆದರೆ ಇದು ಆರೋಗ್ಯಕರವಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಭಾರತೀಯರ ಆಹಾರ ಕ್ರಮ ಹೇಗಿರಬೇಕು ಎನ್ನುವ ಮಾರ್ಗಸೂಚಿಯನ್ನು (ICMR Dietary Guidelines) ಬಿಡುಗಡೆ ಮಾಡಿದ್ದು, ಇದರಲ್ಲಿ ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳಿಗೆ ಪರ್ಯಾಯ ಬಳಕೆ ಮಾಡಬಹುದಾದ ಪದಾರ್ಥಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಯಾವುದು ಆರೋಗ್ಯಕರ?

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳಿಗೆ ಪರ್ಯಾಯವಾಗಿ ಆರೋಗ್ಯಕರ ಪದಾರ್ಥಗಳನ್ನು ಉಲ್ಲೇಖಿಸಿದೆ. ಇದರಲ್ಲಿ ಪಿಜ್ಜಾ, ಡೊನಟ್ಸ್ ಮತ್ತು ಹಾಟ್‌ಡಾಗ್‌ಗಳ ಬದಲಿಗೆ ಸಲಾಡ್‌ ಮತ್ತು ಮೊಳಕೆ ಭರಿಸಿದ ಕಾಳುಗಳನ್ನು ಸೇವಿಸಬಹುದು. ಆಳವಾದ ಕರಿದ ತಿಂಡಿಗಳ ಬದಲಿಗೆ ಬೀಜಗಳು ಮತ್ತು ತರಕಾರಿ ಬೀಜಗಳನ್ನು ತಿನ್ನಬಹುದು.

ಹಣ್ಣಿನ ರಸವನ್ನು ಸೇವಿಸುವ ಬದಲು ಸಂಪೂರ್ಣ ಹಣ್ಣುಗಳನ್ನು ಸೇವಿಸಬೇಕು. ಜಾಮ್ ಮತ್ತು ಸಾಸ್‌ಗಳ ಬದಲಿಗೆ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಚಟ್ನಿ ಮತ್ತು ಡಿಪ್‌ಗಳನ್ನು ಬಳಸಬಹುದು.


ಇದನ್ನೂ ಓದಿ: ICMR Dietary Guidelines: ಬೊಜ್ಜು ತಡೆಯಲು ಏನು ಮಾಡಬೇಕು? ಮಾರ್ಗಸೂಚಿ ಬಿಡುಗಡೆ ಮಾಡಿದ ಸಂಶೋಧನಾ ಸಂಸ್ಥೆ

ನಾವು ಸೇವಿಸುವ ಆಹಾರದಲ್ಲಿ ಹೆಚ್ಚು ಫ್ಯಾಟ್, ಸಕ್ಕರೆ, ಉಪ್ಪು, ಸಂಸ್ಕರಿಸಿದ ಆಹಾರಗಳ ಬಳಕೆಯನ್ನು ಕಡಿಮೆ ಮಾಡಿದಷ್ಟು ಹೆಚ್ಚು ಕಾಲ ನಾವು ಆರೋಗ್ಯವಾಗಿ ಜೀವಿಸಬಹುದು.


ಕುಡಿಯಲು ಏನಿರಬೇಕು?

ರೆಡಿಮೇಡ್ ಸಾಫ್ಟ್ ಡ್ರಿಂಕ್ಸ್ ,ಜ್ಯೂಸುಗಳ ಬದಲಿಗೆ ಎಳನೀರು, ಮಜ್ಜಿಗೆ, ಲಿಂಬೆ ಹಣ್ಣುಮ್ ಚಿಯಾ ಬೀಜ, ಕಿತ್ತಳೆ, ಕಲ್ಲಂಗಡಿ, ಮಾವಿನ ಹಣ್ಣು, ಫೈನಾಪಲ್, ದಾಳಿಂಬೆ ಹಣ್ಣಿನ ರಸವನ್ನು ಕುಡಿಯಬಹುದು.

ಟೀ, ಕಾಫಿಯನ್ನು ಬರಿ ಹೊಟ್ಟೆಯಲ್ಲಿ ಊಟಕ್ಕಿಂತ ಅರ್ಧ ಗಂಟೆ ಮೊದಲು ಅಥವಾ ಅನಂತರ ಸೇವಿಸುವುದು ಒಳ್ಳೆಯದಲ್ಲ. ಇದರ ಬದಲು ಗ್ರೀನ್ ಟೀ, ಬ್ಲಾಕ್ ಟೀ ಕುಡಿಯಬಹುದು. ಆಲ್ಕೋಹಾಲ್ ಸೇವನೆಯು ಆರೋಗ್ಯಕರವಲ್ಲ. ಇದರ ಬದಲಿಗೆ ಫ್ರೆಶ್ ಹಣ್ಣಿನ ರಸವನ್ನು ಸೇವನೆ ಮಾಡಬಹುದು.

ತಿನ್ನಲು ಯಾವುದಿರಬೇಕು?

  1. 1. ಪಿಜ್ಜಾ, ಡೋನಟ್ ಬದಲಿಗೆ ಸಲಾಡ್, ತರಕಾರಿ ಬೀಜಗಳನ್ನು ಸೇವಿಸಬಹುದು.

2. ಡೀಪ್ ಫ್ರೈಡ್ ತಿಂಡಿಗಳ ಬದಲು ಬೀಜ, ಧಾನ್ಯಗಳನ್ನು ಸೇವಿಸಿ.

3. ಕೇಕ್, ಚಾಕಲೇಟ್, ಸ್ವೀಟ್ಸ್ ಬದಲಿಗೆ ಮನೆಯಲ್ಲೇ ಮಾಡಿರುವ ವಿವಿಧ ಧಾನ್ಯಗಳ ಉಂಡೆಗಳು, ಚಿಕ್ಕಿ, ಹುರಿದ ಕಾಳು, ಬೀಜಗಳನ್ನು ತಿನ್ನಬಹುದು.

4. ಜಾಮ್, ಸಾಸ್ ಬದಲಿಗೆ ಮನೆಯಲ್ಲೇ ಮಾಡಿರುವ ಚಟ್ನಿ, ಡಿಪ್ ಗಳನ್ನು ಸೇವಿಸಬಹುದು.

Continue Reading

ಆರೋಗ್ಯ

Sleeping Tips: ನಿಮಗೆ ರಾತ್ರಿ ನಿದ್ದೆ ಬರುತ್ತಿಲ್ಲವೆ? ಮಲಗುವ ಮುನ್ನ ಈ ಪೇಯಗಳನ್ನು ಕುಡಿಯಿರಿ!

ಅರೆಬರೆ ನಿದ್ದೆಯಂಥ ಭಾವ ಅಥವಾ ನಿದ್ದೆ ಬರಲು ಹೆಚ್ಚು ಸಮಯ ಹಿಡಿಯುವುದು ಇತ್ಯಾದಿ ಸಮಸ್ಯೆಗಳು ನಿಮ್ಮದಾಗಿದ್ದರೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಇತ್ತೀಚೆಗಿನ ದಿನಗಳಲ್ಲಿ ಈ ಸಮಸ್ಯೆ ಬಹಳ ಮಂದಿಯನ್ನು ಕಾಡುತ್ತಿದೆ. ಅತಿಯಾದ ಕೆಲಸ, ನಿದ್ದೆಯ ಸಮಯದ ಏರಿಳಿತ, ಕಚೇರಿಯ ಒತ್ತಡ, ತಡರಾತ್ರಿಯವರೆಗೆ ಮೊಬೈಲ್‌ ವೀಕ್ಷಣೆ, ಸಾಮಾಜಿಕ ಜಾಲತಾಣಗಳ ವೀಕ್ಷಣೆ, ಮಿತಿ ಮೀರಿ ಸಿನಿಮಾ ನೋಡುವುದು ಇತ್ಯಾದಿಗಳಿಂದಾಗಿ ನಿದ್ದೆಯ ಸಮಯ ಅಲ್ಲೋಲಕಲ್ಲೋಲವಾಗಿದೆ. ಇದಕ್ಕೇನು ಪರಿಹಾರ? ಇಲ್ಲಿದೆ (Sleeping Tips) ಸಲಹೆ.

VISTARANEWS.COM


on

Sleeping tips
Koo

ಪ್ರತಿದಿನ ನಿದ್ದೆ ಮಾಡುವುದು ಹೇಗೆ ಎಂದು ಹೆಣಗಾಡುತ್ತಿದ್ದೀರಾ? ಬೇಗ ನಿದ್ದೆ ಮಾಡಬೇಕು ಎಂದು ಹೊರಟು ನಿದ್ದೆ ಬರದೆ, ಬಂದ ನಿದ್ದೆಯಲ್ಲೂ ಏನೇನೋ ಕನಸುಗಳು, ಅರೆಬರೆ ನಿದ್ದೆಯಂಥ ಭಾವ ಅಥವಾ ನಿದ್ದೆ ಬರಲು ಹೆಚ್ಚು ಸಮಯ ಹಿಡಿಯುವುದು ಇತ್ಯಾದಿ ಸಮಸ್ಯೆಗಳು ನಿಮ್ಮದಾಗಿದ್ದರೆ ಅದರ ಬಗ್ಗೆ ನೀವು ಮೊದಲೇ ಎಚ್ಚೆತ್ತುಕೊಳ್ಳಬೇಕು. ಇತ್ತೀಚೆಗಿನ ದಿನಗಳಲ್ಲಿ ಈ ಸಮಸ್ಯೆ ಬಹಳ ಮಂದಿಯನ್ನು ಕಾಡುತ್ತಿದೆ. ಕಾರಣ ಗೊತ್ತೇ ಇದೆ. ಅತಿಯಾದ ಕೆಲಸ, ನಿದ್ದೆಯ ಸಮಯದ ಏರಿಳಿತ, ಕಚೇರಿಯ ಒತ್ತಡ, ತಡರಾತ್ರಿಯವರೆಗೆ ಮೊಬೈಲ್‌ ವೀಕ್ಷಣೆ, ಸಾಮಾಜಿಕ ಜಾಲತಾಣಗಳ ವೀಕ್ಷಣೆ, ಸಿನಿಮಾ ನೋಡುವುದು ಇತ್ಯಾದಿಗಳಿಂದಾಗಿ ನಿದ್ದೆಯ ಸಮಯವಿದು ಅಲ್ಲೋಲಕಲ್ಲೋಲವಾಗಿದೆ. ಹೀಗಾಗಿ, ಕೆಲವೊಮ್ಮೆ ಬೇಕೆಂದರೂ ನಿದ್ದೆ ಬರುವುದಿಲ್ಲ. ನಿದ್ದೆಯ ಈ ಸಮಸ್ಯೆಯಿಂದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾದರೆ, ಇಂಥ ಸಮಸ್ಯೆ ಇರುವ ಮಂದಿ ಇದು ವಿಕೋಪಕ್ಕೆ ಹೋಗುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ನಿದ್ದೆಗೆ ಸಹಕಾರಿಯಾಗುವ ಆಹಾರವೂ ಸೇರಿದಂತೆ ನಿದ್ದೆಗೆ ಒಂದೆರಡು ಗಂಟೆಯ ಮೊದಲೇ ಮೊಬೈಲನ್ನು ದೂರವಿಡುವುದು, ಸಿನಿಮಾ ವೀಕ್ಷಣೆ ನಿಲ್ಲಿಸುವುದು ಇತ್ಯಾದಿ ಮುಂಜಾಗರೂಕತೆ ವಹಿಸಿಕೊಂಡರೆ, ಮತ್ತೆ ನಿಮ್ಮ ನಿದ್ರಾದೇವಿ ನಿಮ್ಮ ಬಳಿಗೆ ಬರುತ್ತಾಳೆ. ಸರಿಯಾದ ಆಹಾರಕ್ರಮದ ಜೊತೆಗೆ ಈ ಕೆಳಗಿನ ಕೆಲವು ಡ್ರಿಂಕ್‌ಗಳನ್ನು ರಾತ್ರಿ ಸೇವಿಸಿ ಮಲಗುವುದರಿಂದ ನಿಮಗೆ ನಿದ್ದೆ (Sleeping Tips) ಸುಲಭವಾಗುತ್ತದೆ.

Milk and Other Forest Products Foods Consumed By Lord Rama During His 14 Year Exile

ಮಲಗುವ ಮೊದಲು ಹಾಲು ಕುಡಿಯಿರಿ

ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿಯಾದ ಹಾಲು ಕುಡಿಯುವುದರಿಂದ ಸೊಂಪಾದ ನಿದ್ರೆ ಬರುತ್ತದೆ. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ. ದೇಹಕ್ಕೆ ಬೇಕಾದ ಕ್ಯಾಲ್ಶಿಯಂ ಕೂಡಾ ಹಾಲಿನಲ್ಲಿ ದೊರೆಯುವ ಜೊತೆಗೆ, ಈ ಕ್ಯಾಲ್ಶಿಯಂನಿಂದ ನಿದ್ರಾಹೀನತೆಯ ಸಮಸ್ಯೆಯೂ ಪರಿಹಾರವಾಗುತ್ತದೆ. ಹಾಲಿನಲ್ಲಿರುವ ಸೆರೆಟೋನಿನ್‌ ಎಂಬ ಅಂಶವು ನಮ್ಮನ್ನು ರಿಲ್ಯಾಕ್ಸ್‌ ಮಾಡಿಸುತ್ತದೆ.

Coconut water Foods For Fight Against Dengue Fever

ಎಳನೀರು ಕುಡಿಯಿರಿ

ಮೆಗ್ನೀಶಿಯಂನ ಕೊರತೆ ಕೂಡ ಖಿನ್ನತೆ ಹಾಗೂ ಉದ್ವೇಗದಂತಹ ಸಮಸ್ಯೆಯನ್ನು ತರುತ್ತದೆ. ಇದರಿಂದಾಗಿ ನಿದ್ರಾಹೀನತೆಯೂ ಕೂಡಾ ಬರುತ್ತದೆ. ಹಾಗಾಗಿ ಹೆಚ್ಚು ಮೆಗ್ನೀಶಿಯಂ ಇರುವ ಎಳನೀರನ್ನು ಕುಡಿಯುವುದರಿಂದಲೂ ಈ ಸಮಸ್ಯೆಗೆ ಉತ್ತರ ದೊರೆಯುತ್ತದೆ. ಮನಸ್ಸನ್ನೂ ಇದು ಶಾಂತಿಯುತವಾಗಿ ಇರಿಸುತ್ತದೆ.

Banana shake

ಬಾಳೆಹಣ್ಣಿನ ಶೇಕ್‌

ಬಾಳೆಹಣ್ಣಿನಲ್ಲಿ ಮೆಗ್ನೀಶಿಯಂ ಹಾಗೂ ಪೊಟಾಶಿಯಂ ಹೇರಳವಾಗಿ ಇರುವುದರಿಂದ ರಾತ್ರಿ ಮಲಗುವ ಮೊದಲು ಬಾಳೆಹಣ್ಣಿನ ಶೇಕ್‌ ಮಾಡಿಯೂ ಕುಡಿಯಬಹುದು. ಮಧುಮೇಹ ಹಾಗೂ ಇತರ ಸಮಸ್ಯೆಗಳಿಲ್ಲದವರು ಹೀಗೆ ಮಾಡುವ ಮೂಲಕ ರಾತ್ರಿ ಸೊಂಪಾದ ನಿದ್ದೆಯನ್ನು ಮಾಡಬಹುದು.

ಇದನ್ನೂ ಓದಿ: Cotton Candy: ಕಾಟನ್‌ ಕ್ಯಾಂಡಿ ಯಾಕೆ ಎಷ್ಟೊಂದು ಅಪಾಯಕಾರಿ ಗೊತ್ತೆ?

ಬಾದಾಮಿ ಹಾಲು

ಬಿಸಿಬಿಸಿಯಾದ ಬಾದಾಮಿ ಹಾಲನ್ನು ಕುಡಿಯುವುದರಿಂದಲೂ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಬಾದಾಮಿ ಹಾಲು ಮಾಡಿಕೊಂಡು, ಅದಕ್ಕೆ ಕೇಸರಿ ದಳಗಳನ್ನು ಹಾಕಿ ಕುಡಿಯುವುದು ಬಹಳ ಒಳ್ಳೆಯದು. ಇದು ನರ ಸಂಬಂಧೀ ಸಮಸ್ಯೆಗಳನ್ನು ಪರಿಹಾರ ಮಾಡಿ ಸೊಂಪಾದ ನಿದ್ರೆಯನ್ನು ಕರುಣಿಸುತ್ತದೆ.

Chamomile tea

ಕ್ಯಾಮೋಮೈಲ್‌ ಚಹಾ

ಕ್ಯಾಮೋಮೈಲ್‌ ಚಹಾ ಕುಡಿಯುವುದರಿಂದಲೂ ಪರಿಹಾರ ಸಿಗುತ್ತದೆ. ಇದರಲ್ಲಿ ಫ್ಲೇವನಾಯ್ಡ್‌ಗಳು ಇರುವುದರಿಂದ ಇದು ನಿದ್ದೆಗೆ ಸಹಾಯ ಮಾಡುತ್ತದೆ. ಆದಷ್ಟೂ ಸಂಜೆಯಾದ ಮೇಲೆ ಕೆಫೀನ್‌ ಇರುವ ಡ್ರಿಂಕ್‌ಗಳನ್ನು ಸೇವಿಸದಿರಿ. ರಾತ್ರಿಯೂಟ ಆದಷ್ಟೂ ಸರಳವಾಗಿರಲಿ. ಹಿತಮಿತವಾಗಿರಲಿ. ಮಲಗುವುದಕ್ಕೂ ಮೊದಲು ಮೂರು ಗಂಟೆಗಳ ಮೊದಲೇ ಊಟ ಮುಗಿಸಿಕೊಳ್ಳಿ. ಚುರುಕಾಗಿರಿ. ಮೊಬೈಲನ್ನು ದೂರವಿಟ್ಟು, ಮನೆಯವರೊಂದಿಗೆ ಖುಷಿಯಿಂದ ಸಮಯ ಕಳೆದು ನಿದ್ದೆಗೆ ಜಾರಿ. ಈ ಶಿಸ್ತುಬದ್ಧ ಜೀವನ ಅಳವಡಿಸಿಕೊಂಡರೆ ನಿದ್ದೆ ಸಮಸ್ಯೆಯಾಗದು. ಆರೋಗ್ಯವೂ ವೃದ್ಧಿಯಾಗುತ್ತದೆ.

Continue Reading
Advertisement
esim cyber safety column
ಅಂಕಣ7 mins ago

ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

Nijjar Killing Case
ವಿದೇಶ19 mins ago

Nijjar Killing Case: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆ; ನಾಲ್ಕನೇ ಆರೋಪಿ ಅರೆಸ್ಟ್‌

HD Revanna
ಪ್ರಮುಖ ಸುದ್ದಿ19 mins ago

HD Revanna: 3 ದಿನದಿಂದ ಕುಟುಂಬಸ್ಥರನ್ನು ಭೇಟಿಯಾಗದೆ ಜೈಲಲ್ಲಿ ರೇವಣ್ಣ ಪರದಾಟ; ಪತ್ರಿಕೆಯೇ ಸಂಗಾತಿ!

Maggi Tragedy
ದೇಶ55 mins ago

Maggi Tragedy: ಮ್ಯಾಗಿ ತಿಂದ ಬಳಿಕ 10 ವರ್ಷದ ಬಾಲಕ ಸಾವು, ಒಂದೇ ಕುಟುಂಬದ ಐವರು ಅಸ್ವಸ್ಥ

Viral News
ವೈರಲ್ ನ್ಯೂಸ್1 hour ago

Viral News: ಲಾರಿಗೆ ಡಿಕ್ಕಿ ಹೊಡೆಯಿತು ಕಂತೆ ಕಂತೆ ನಗದು ಸಾಗಿಸುತ್ತಿದ್ದ ವ್ಯಾನ್‌; ನೋಟಿನ ರಾಶಿ ಹೇಗಿದೆ ನೋಡಿ

Morning Tips
ಲೈಫ್‌ಸ್ಟೈಲ್2 hours ago

Morning Tips: ಬೆಳಗ್ಗೆ 7 ಗಂಟೆಯೊಳಗೆ ನೀವು ಈ 7 ಕೆಲಸಗಳನ್ನು ಮಾಡುತ್ತೀರಾ?

Karnataka Weather Forecast
ಮಳೆ3 hours ago

Karnataka Weather : ಮೇ 13ರ ತನಕ ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಯಂಕರ ಮಳೆ; ಬಿರುಗಾಳಿಯು ಸಾಥ್‌

Solar
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ ಸಾಧನೆ ಶ್ಲಾಘನೀಯ

Protein Supplements
ಆರೋಗ್ಯ4 hours ago

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

Shankara Jayanti 2024
ಧಾರ್ಮಿಕ4 hours ago

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು18 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ3 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ3 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

ಟ್ರೆಂಡಿಂಗ್‌