Health tips: ಬಾಯಿಯ ದುರ್ವಾಸನೆಯೇ? ನಿಮ್ಮಲ್ಲೇ ಇವೆ ಪರಿಹಾರಗಳು! - Vistara News

ಆರೋಗ್ಯ

Health tips: ಬಾಯಿಯ ದುರ್ವಾಸನೆಯೇ? ನಿಮ್ಮಲ್ಲೇ ಇವೆ ಪರಿಹಾರಗಳು!

ಬಹಳ ಸಾರಿ ಗೊತ್ತೇ ಆಗದ ಕೆಲವು ಅಂಶಗಳು ಈ ಬಾಯಿವಾಸನೆಗೆ ಕಾರಣವಾಗಿರುತ್ತದೆ. ಹಾಗಾಗಿ, ಸ್ವಚ್ಛತೆಯನ್ನು ಆದ್ಯತೆಯಾಗಿಟ್ಟುಕೊಂಡು, ಸುಲಭವಾಗಿ ಸಾಧ್ಯವಿರುವ ಈ ಅಂಶಗಳನ್ನು ರೂಢಿಸಿಕೊಳ್ಳುವ ಮೂಲಕ ಬಾಯಿ ವಾಸನೆಯಿಂದ ದೂರವಿರಲು ನೀವು ಪ್ರಯತ್ನಿಸಬಹುದು.

VISTARANEWS.COM


on

mouth odour
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಯಿಯ ದುರ್ವಾಸನೆ (mouth odour) ಎಂಬುದು ಬಹಳ ಮುಜುಗರದ ವಿಚಾರವೇ ಹೌದು. ಬಾಯಿಯ ಸ್ವಚ್ಛತೆ ಪ್ರತಿಯೊಬ್ಬನೂ ಅತ್ಯಂತ ಹೆಚ್ಚು ಕಾಳಜಿ ವಹಿಸಬೇಕಾದುದು ಹೌದಾದರೂ, ಇತರರ ಮೇಲೂ ಪರಿಣಾಮ ಬೀರುವ ಅಂಶವೂ ಇದರಲ್ಲಿರುವುದು ನಿಜವೇ. ಮೊದಲ ಭೇಟಿ, ಪ್ರೀತಿಪಾತ್ರರ ಜೊತೆ ಮಾತು- ಕಥೆ- ನಗು- ತಮಾಷೆ, ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಬೆರೆಯುವುದು, ಪಕ್ಕದಲ್ಲಿ ಹಾದುಹೋದ ಯಾರೋ ಅಪರಿಚಿತ ಹೀಗೆ ಯಾರೊಂದಿಗೆ ಮುಖಾಮುಖಿಯಾಗಿ ಮಾತು ವಿನಿಮಯವಾದರೂ ಅಲ್ಲೊಂದು ಹೇಳಿಕೊಳ್ಳಲಾಗದ ಇರುಸು ಮುರುಸು ಕೂಡಾ ಉದ್ಭವಿಸುತ್ತದೆ. ಎದುರಿಗಿರುವ ವ್ಯಕ್ತಿ ಎಷ್ಟೇ ಆಪ್ತನಾಗಿರಲಿ, ಬಾಯಿಯಿಂದ ದುರ್ವಾಸನೆ ಬೀರುತ್ತಾ ಮುಖದ ಸಮೀಪ ಬಂದು ಮಾತಾಡಿದರೆ, ಆಗುವ ಹಿಂಸೆ ಅಷ್ಟಿಷ್ಟಲ್ಲ. ಹಾಗಾಗಿ ಪ್ರತಿಯೊಬ್ಬರೂ, ತಮ್ಮ ತಮ್ಮ ಬಾಯಿಯ ಸ್ವಚ್ಛತೆಯ ಬಗ್ಗೆ ನಿತ್ಯ ಆದ್ಯತೆ ನೀಡಬೇಕು. ಬೆಳಗ್ಗೆ ಎದ್ದ ಕೂಡಲೇ ಹಾಗೂ ರಾತ್ರಿ ಮಲಗುವ ಮೊದಲು ಹಲ್ಲುಜ್ಜಿವುದನ್ನು ರೂಢಿಸಿಕೊಂಡರಷ್ಟೇ ಸಾಲದು, ಬಹಳ ಸಾರಿ ಗೊತ್ತೇ ಆಗದ ಕೆಲವು ಅಂಶಗಳು ಈ ಬಾಯಿವಾಸನೆಗೆ ಕಾರಣವಾಗಿರುತ್ತದೆ. ಹಾಗಾಗಿ, ಸ್ವಚ್ಛತೆಯನ್ನು ಆದ್ಯತೆಯಾಗಿಟ್ಟುಕೊಂಡು, ಸುಲಭವಾಗಿ ಸಾಧ್ಯವಿರುವ ಈ ಅಂಶಗಳನ್ನು ರೂಢಿಸಿಕೊಳ್ಳುವ ಮೂಲಕ ಬಾಯಿ ವಾಸನೆಯಿಂದ ದೂರವಿರಲು ನೀವು ಪ್ರಯತ್ನಿಸಬಹುದು.

1. ಬಾಯಿ ತೊಳೆಯಿರಿ: ಬಿಸಿನೀರಿನಿಂದ ಅಥವಾ ಉಪ್ಪು ನೀರಿನಿಂದ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ. ಮೌತ್‌ ವಾಶ್‌ ಬಳಸಿ ಮುಕ್ಕಳಿಸಿದರು ಸರಿಯೇ. ಇದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಕ್ಕೆ ಮುಕ್ತಿ ಸಿಕ್ಕಿ ಬಾಯಿ ವಾಸನೆಯಿಂದ ಪರಿಹಾರ ಸಿಗುತ್ತದೆ. ದಿನಕ್ಕೆರಡು ಬಾರಿಯಾದರೂ ಹೀಗೆ ಮಾಡಿ.

2. ನಾಲಿಗೆ ಕ್ಲೀನ್‌ ಮಾಡಿ: ಬಹಳಷ್ಟು ಮಂದಿ ಹಲ್ಲಿನ ಸ್ವಚ್ಛತೆಗೆ ಗಮನ ನೀಡಿದಷ್ಟು ನಾಲಿಗೆಯ ಸ್ವಚ್ಛತೆಯ ಬಗ್ಗೆ ಗಮನ ನೀಡುವುದಿಲ್ಲ. ಹಾಗಾಗಿ ನಾಲಿಗೆ ಬ್ಯಾಕ್ಟೀರಿಯಾಗಳ ಆವಾಸಸ್ಥಾನವಾಗಿ ಬದಲಾಗಿಬಿಡುತ್ತದೆ. ಹಲ್ಲುಜ್ಜಿದ ಕೂಡಲೇ ನಾಲಿಗೆಯನ್ನು ಸ್ವಚ್ಛ ಮಾಡುವುದನ್ನು ಮರೆಯಬೇಡಿ.

3. ಸೋಂಪು: ಸಾಂಪ್ರದಾಯಿಕವಾಗಿ ಊಟವಾದ ಮೇಲೆ ಸೋಂಪು ಕೊಡುವುದು ಅಭ್ಯಾಸ. ಇದರ ಕಾರಣವೂ ಇದೇ. ಬಾಯಿಯನ್ನು ಫ್ರೆಶ್‌ ಆಗಿಡುವಲ್ಲಿ ಇದರ ಪಾತ್ರ ದೊಡ್ಡದು. ಇದರಲ್ಲಿರುವ ಪರಿಮಳಯುಕ್ತ ತೈಲವು ಬಾಯಿಯಲ್ಲಿ ಬಹಳಕಾಲ ಇರುವುದರಿಂದ ಬಾಯಿಯನ್ನು ಬಹಳ ಹೊತ್ತು ತಾಜಾ ಆಗಿಡುತ್ತದೆ. ಆದರೆ ಸಕ್ಕರೆ ಸಹಿತವಾಗಿರುವ, ಬಣ್ಣದ ಸೋಂಪುಗಳಿಗಿಂತ ಸಾದಾ, ಬಣ್ಣ ಹಾಗೂ ಸಕ್ಕರೆರಹಿತ ಸೋಂಪನ್ನೇ ಬಳಸಿ.

4. ಲವಂಗ: ಬಾಯಿಗೆ ಸಂಬಂಧಪಟ್ಟ ತೊಂದರೆಗಳಿಗೆ ಸಾಂಪ್ರದಾಯಿಕವಾಗಿ ಹಲವು ವರ್ಷಗಳಿಂದ ಲವಂಗದ ಬಳಕೆ ಎಲ್ಲರಿಗೂ ಗೊತ್ತಿರುವಂಥದ್ದೇ. ಹಾಗಾಗಿ, ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಒಂದು ಲವಂಗವನ್ನು ಬಾಯಲ್ಲಿಟ್ಟುಕೊಂಡು ಜಗಿಯುತ್ತಿರಿ. ಕೆಟ್ಟವಾಸನೆಯಿಂದ ಮುಕ್ತಿ ಸಿಗುತ್ತದೆ.

5. ಚೂಯಿಂಗ್‌ಗಮ್:‌ ಹೌದು, ಚೂಯಿಂಗ್‌ ಗಮ್‌ ಕೂಡಾ ಬಹಳ ಸಾರಿ ಉಪಯೋಗಕ್ಕೆ ಬರುತ್ತದೆ. ಕೆಟ್ಟ ವಾಸನೆ ತೆಗೆಯಲು, ಪುದಿನದಂತಹ ಫ್ಲೇವರ್‌ಗಳ ಚೂಯಿಂಗ್‌ಗಮ್‌ ಬಾಯಿಯಲ್ಲಿ ತಾಜಾ ಉಸಿರನ್ನು ನೀಡುತ್ತದೆ.

ಇದನ್ನೂ ಓದಿ: Health Tips: ಸಿಪ್ಪೆ ಎಂಬ ಪೋಷಕಾಂಶಗಳ ಪ್ಯಾಕೇಜ್:‌ ತರಕಾರಿ ಹಣ್ಣುಗಳ ಸಿಪ್ಪೆಯನ್ನು ತಿಪ್ಪೆಗೆ ಎಸೆಯದಿರಿ!

6. ನೀರು ಕುಡಿಯಿರಿ: ನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ಕೇವಲ ದೇಹವನ್ನು ಹೈಡ್ರೇಟ್‌ ಆಗಿಡಲು ನೀರು ಕುಡಿಯುವುದು ಉತ್ತಮ ಅಭ್ಯಾಸ ಎಂದು ನೀವಂದುಕೊಂಡಿದ್ದೀರಾ? ನೀರು ಕುಡಿಯುವುದರಿಂದ ಹಲವು ಬೇರೆ ಉಪಯೋಗಗಳೂ ಇವೆ. ಬಾಯಿ ಒಣಗಿದ್ದರೆ, ಎಷ್ಟೋ ಹೊತ್ತು ನೀರು ಕುಡಿಯದೆ ಇರುವುದರಿಂದ ಕೆಟ್ಟ ವಾಸನೆ ಬರಲು ಅರಂಭಿಸುತ್ತದೆ. ಹಾಗಾಗಿ ನೀರು ಆಹಾಗ ಕುಡಿಯುವ ಮೂಲಕ ಬಾಯಿಯನ್ನು ಒಣವಾಗಿಸದೆ, ಒದ್ದೆಯಾಗಿರಿಸುವ ಮೂಲಕ ಕೆಟ್ಟ ವಾಸನೆ ಬರದಂತೆ ತಡೆಗಟ್ಟಬಹುದು.

7. ಸಿಟ್ರಸ್‌ ಹಣ್ಣುಗಳು: ನಿಂಬೆಹಣ್ಣು, ಕಿತ್ತಳೆ, ಮೂಸಂಬಿ ಮತ್ತಿತರ ಸಿಟ್ಸ್‌ ಹಣ್ಣುಗಳು ಹಲ್ಲಿನ ಆರೋಗ್ಯಕ್ಕೆ ಉತ್ತಮ. ನಿಮ್ಮ ದಿನನಿತ್ಯದ ಆಹಾರದಲ್ಲಿ ಸಿಟ್ರಸ್‌ ಹಣ್ಣುಗಳ ಪಾತ್ರ ಬಹುಮುಖ್ಯ.

8. ಬ್ಯ್ಲಾಕ್‌ ಟೀ: ಬ್ಲ್ಯಾಕ್‌ ಟೀ ಬಾಯಿಯ ದುರ್ವಾಸನೆಗೆ ಒಳ್ಳೆಯ ಮನೆಮದ್ದು. ಇದನ್ನು ಕುಡಿಯುವ ಮೂಲಕ ಕೆಟ್ಟ ವಾಸನೆಯ ಸಮಸ್ಯೆಯಿಂದ ದೂರ ಇರಬಹುದು.

ಇದನ್ನೂ ಓದಿ: Health Tips: ಮೊಸರಿನ ಜೊತೆಗೆ ಯಾವೆಲ್ಲ ಆಹಾರಗಳನ್ನು ತಿನ್ನಬಾರದಂತೆ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

World Brain Tumor Day: ಇಂದು ವಿಶ್ವ ಬ್ರೇನ್‌ ಟ್ಯೂಮರ್‌ ದಿನ; ಮೊದಲೇ ಎಚ್ಚೆತ್ತುಕೊಂಡರೆ ಈ ಕಾಯಿಲೆಯಿಂದ ಪಾರಾಗಬಹುದು

ತಲೆನೋವು ಬಂದಾಕ್ಷಣ ತಲೆಯೊಳಗೆ ಏನೋ ಆಗಬಾರದ್ದು ಆಗಿದೆಯೆಂದು ಹೆದರುವ ಅಗತ್ಯವಿಲ್ಲ. ಆದರೆ ಬ್ರೇನ್‌ ಟ್ಯೂಮರ್‌ ಲಕ್ಷಣಗಳನ್ನು ತಿಳಿದಿದ್ದರೆ, ಪ್ರಾರಂಭಿಕ ಲಕ್ಷಣಗಳನ್ನು ಪತ್ತೆ ಮಾಡಿ, ರೋಗಿಗೆ ಶಾಶ್ವತ ಹಾನಿ ಆಗದಂತೆ ತಡೆಯಬಹುದು. ವಿಶ್ವ ಬ್ರೇನ್‌ ಟ್ಯೂಮರ್‌ ದಿನದ (World Brain Tumor Day) ಹಿನ್ನೆಲೆಯಲ್ಲಿ ಅರಿವಿನ ಲೇಖನವಿದು.

VISTARANEWS.COM


on

World Brain Tumor Day
Koo

ಪ್ರತಿವರ್ಷ ಜೂನ್‌ ತಿಂಗಳ ಎಂಟನೇ ದಿನವನ್ನು (ಜೂನ್‌ 8) ವಿಶ್ವ ಬ್ರೇನ್‌ ಟ್ಯೂಮರ್‌ ಜಾಗೃತಿ ದಿನ (World Brain Tumor Day) ಎಂದು ಗುರುತಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿಯೇ ಈ ಸಮಸ್ಯೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಮಹತ್ವವನ್ನು ಸಾರುವುದು ಈ ಜಾಗೃತಿ ದಿನದ ಉದ್ದೇಶ. ಎಲ್ಲಾ ವಯೋಮಾನದವರನ್ನೂ ಕಾಡುವ ಮೆದುಳಿನ ಟ್ಯೂಮರ್‌ಗಳು, ಕ್ಯಾನ್ಸರ್‌ಕಾರಕವಾಗದೆಯೂ ಬೆಳೆಯಬಲ್ಲಂಥವು. ಆದರೆ ಇದರ ಸೂಚನೆಗಳನ್ನು ಶೀಘ್ರ ಗುರುತಿಸುವುದು, ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಮುಖ್ಯವಾಗುತ್ತದೆ. ಮಸ್ತಿಷ್ಕದಲ್ಲಿ ಅಷ್ಟಾಗಿ ಸಕ್ರಿಯವಲ್ಲದ ಭಾಗಗಳಲ್ಲಿ ಗಡ್ಡೆಗಳು ಕಾಣಿಸಿಕೊಂಡರೆ, ಹೆಚ್ಚಿನ ಲಕ್ಷಣಗಳು ಕಾಣಿಸುವಷ್ಟರಲ್ಲಿ ಗಡ್ಡೆಗಳು ಬಹಳಷ್ಟು ಬೆಳೆದಿರಬಹುದು. ಆದರೆ ಸಕ್ರಿಯ ಭಾಗಗಳಲ್ಲಿ ಗಂಟುಗಳು ಮೂಡಿದರೆ ಅಥವಾ ಅವು ಕ್ಯಾನ್ಸರ್‌ಕಾರಕ ಆಗಿದ್ದರೆ ಆಗ ಲಕ್ಷಣಗಳು ಶೀಘ್ರವೇ ಗೋಚರಿಸಲು ಸಾಧ್ಯವಿದೆ. ಜೊತೆಗೆ, ಮೆದುಳಿನ ಯಾವ ಭಾಗದಲ್ಲಿ ಟ್ಯೂಮರ್‌ ಉಂಟಾಗಿದೆ ಎಂಬುದರ ಮೇಲೆ ಲಕ್ಷಣಗಳು ಕೊಂಚ ಭಿನ್ನವಾಗುವ ಸಾಧ್ಯತೆಯೂ ಇದೆ. ಒಂದೆಡೆಯಿಂದ ಇನ್ನೊಂದೆಡೆಗೆ ಹರಡುವಂಥ ಮೆಟಾಸ್ಟಾಟಿಕ್‌ ಬ್ರೇನ್‌ ಟ್ಯೂಮರ್‌ ಸಹ ಗಂಟು ಬೀಳಬಹುದು. ಈ ಎಲ್ಲವುಗಳ ಬಗ್ಗೆ ಮಾಹಿತಿ ಇಲ್ಲಿದೆ.

Woman having headache. stressed, Migraine, World Brain Tumor day

ಲಕ್ಷಣಗಳೇನು?

ಯಾವುದೇ ಅಸಹಜ ಬೆಳವಣಿಗೆಗಳು ತಲೆಯೊಳಗೆ ನಡೆದರೆ, ಅಲ್ಲಿ ಒತ್ತಡ ಹೆಚ್ಚುವುದು ಸಾಮಾನ್ಯ. ಹಾಗಾಗಿ ಸಣ್ಣ ಗಂಟಾದರೂ, ಮೊದಲಿಗೆ ಕಾಣಿಸಿಕೊಳ್ಳುವುದು ತಲೆನೋವು. ಇದರರ್ಥ ತಲೆನೋವು ಬಂದಾಕ್ಷಣ ಮೆದುಳಿಗೇನೋ ಆಗಿದೆ ಎಂದಲ್ಲ. ಸೌಮ್ಯವಾಗಿ ಪ್ರಾರಂಭವಾಗುವ ನೋವು ಕ್ರಮೇಣ ತೀಕ್ಷ್ಣವಾಗಬಹುದು. ಜೊತೆಗೆ ಹೊಟ್ಟೆ ತೊಳೆಸುವುದು, ವಾಂತಿ, ತಲೆ ಸುತ್ತುವುದು, ಸ್ಮೃತಿ ತಪ್ಪುವುದು, ಫಿಟ್ಸ್‌ ಬರುವುದು, ತನ್ನಷ್ಟಕ್ಕೇ ಕೈ-ಕಾಲುಗಳಲ್ಲಿ ಚಲನೆ, ದೇಹದ ಸಮತೋಲನ ತಪ್ಪುವುದು ನಡೆಯಲು ಕಷ್ಟವಾಗಿ ಬೀಳುವುದು, ಆಗಾಗ ಎಡವುವುದು ಇಂಥವು ಕಂಡರೆ ನರರೋಗ ತಜ್ಞರನ್ನು ಭೇಟಿ ಮಾಡುವುದು ಅಗತ್ಯ. ಇವು ಮಾತ್ರವಲ್ಲ, ದೃಷ್ಟಿಗೆ ಇದ್ದಕ್ಕಿದ್ದಂತೆ ಬೆಳಕು ಗೋಚರಿಸುವುದು, ಎದುರಿನ ವಸ್ತು ಸರಿಯಾಗಿ ಗೋಚರಿಸದಿರುವುದು ಅಥವಾ ಒಂದಿದ್ದಿದ್ದು ಎರಡಾಗಿ ಕಾಣುವುದು ಸಹ ವೈದ್ಯರನ್ನು ಕಾಣಬೇಕು ಎಂಬುದರ ಸೂಚನೆಗಳು.

ಪರೀಕ್ಷೆಗಳೇನು?

ನರಗಳ ಕಾರ್ಯಚಟುವಟಿಕೆಯನ್ನು ಕುರಿತಂತೆ ವೈದ್ಯರು ಮೊದಲಿಗೆ ವಿವರವಾಗಿ ದೈಹಿಕ ಪರೀಕ್ಷೆ ನಡೆಸುತ್ತಾರೆ. ಕಣ್ಣುಗಳ ಪರೀಕ್ಷೆಯನ್ನೂ ನಡೆಸುತ್ತಾರೆ. ತಲೆಯೊಳಗೆ ಒತ್ತಡ ಹೆಚ್ಚಿದರೆ ಅದು ಕಣ್ಣಿನ ನರಗಳ ಮೇಲೂ ಪರಿಣಾಮ ತೋರಿಸುತ್ತದೆ. ಈ ಪ್ರಾಥಮಿಕ ಪರೀಕ್ಷೆಗಳ ನಂತರ ಅಗತ್ಯ ಎನಿಸಿದರೆ ಹೆಚ್ಚಿನ ಪರೀಕ್ಷೆಗಳಿಗೆ, ಅಂದರೆ ಸ್ಕ್ಯಾನ್‌ ಅಥವಾ ಎಂಆರ್‌ಐಯಂಥ ಪರೀಕ್ಷೆಗಳನ್ನು ವೈದ್ಯರು ಸೂಚಿಸಬಹುದು.

World Brain Tumor Day pic

ಚಿಕಿತ್ಸೆ

ಕೆಲವು ಟ್ಯೂಮರ್‌ಗಳನ್ನು ಗುಣ ಮಾಡಬಹುದು. ಆದರೆ ಈ ಸಮಸ್ಯೆ ಎಷ್ಟು ಬೇಗ ಪತ್ತೆಯಾಗುತ್ತದೊ ಅಷ್ಟು ಪರಿಣಾಮಕಾರಿಯಾಗಿ ಚಿಕಿತ್ಸೆಯನ್ನು ನೀಡಬಹುದು. ಟ್ಯೂಮರ್‌ ಮೆದುಳಿನ ಯಾವ ಭಾಗದಲ್ಲಿದೆ, ಎಂಥಾ ಟ್ಯೂಮರ್‌, ಎಷ್ಟು ದೊಡ್ಡದಿದೆ ಮತ್ತು ಆ ವ್ಯಕ್ತಿಯ ಆರೋಗ್ಯ ಉಳಿದಂತೆ ಹೇಗಿದೆ ಎನ್ನುವುದರ ಮೇಲೆ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ, ಕೀಮೊಥೆರಪಿ, ರೇಡಿಯೇಶನ್‌ ಚಿಕಿತ್ಸೆಗಳು ಬೇಕಾಗುತ್ತವೆ.

ಇದನ್ನೂ ಓದಿ: Health Tips Kannada: ಯಾವ ಬೀಜ ತಿಂದರೆ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನ?

ಹಾನಿ ತಡೆ

ತಲೆಯೊಳಗಿನ ಭಾಗದಲ್ಲಿ ಬೆಳೆಯುವ ಗಂಟುಗಳು ನರವ್ಯೂಹದ ಮೇಲೆ ಅಪಾರ ಪ್ರಮಾಣದ ಒತ್ತಡವನ್ನು ಹಾಕುತ್ತವೆ. ಇದರಿಂದ ಮೆದುಳಿನ ಕೆಲವು ಗುರುತರ ಭಾಗಗಳಿಗೆ ಅಥವಾ ನರಗಳಿಗೆ ಹಾನಿಯಾಗಬಹುದು. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಮೆದುಳಿಗೆ ಶಾಶ್ವತ ಹಾನಿಯಾಗುವ ಭೀತಿ ಇದೆ. ಪಾರ್ಶ್ವವಾಯು, ಮಾತಾಡಲು ಆಗದಿರುವುದು, ಬುದ್ಧಿ ಮಂದವಾಗುವುದು, ದೇಹದ ಸಮತೋಲನ ನಷ್ಟವಾಗುವುದು- ಇಂಥ ದೀರ್ಘಕಾಲೀನ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಪ್ರಾರಂಭಿಕ ಲಕ್ಷಣಗಳು ಗೋಚರಿಸಿದಾಗಲೇ ಜಾಗ್ರತೆ ವಹಿಸುವುದು ಅತಿ ಮುಖ್ಯ.

Continue Reading

ಆರೋಗ್ಯ

Health Tips Kannada: ಯಾವ ಬೀಜ ತಿಂದರೆ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನ?

ವಿಟಮಿನ್‌ಗಳು, ಖನಿಜಾಂಶಗಳು, ಒಳ್ಳೆಯ ಕೊಬ್ಬು, ಪ್ರೊಟೀನ್‌ ಸೇರಿದಂತೆ ಎಲ್ಲವೂ ಇರುವ ಬೀಜಗಳು ತಿನ್ನಲು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಇರುತ್ತವೆ. ಹಲವು ರೋಗಗಳು ಬರದಂತೆ ತಡೆಯುವ, ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಈ ಬೀಜಗಳ ಸೇವನೆಯಿಂದ ನಮ್ಮ ಸೌಂದರ್ಯವೂ ಸೇರಿದಂತೆ ಆರೋಗ್ಯವೂ ವೃದ್ಧಿಯಾಗುತ್ತದೆ. ಯಾವ ಬೀಜ ಸೇವಿಸಿದರೆ ಯಾವ ಲಾಭ ಪಡೆಯಬಹುದು ಎಂಬ ಮಾಹಿತಿ (Health Tips Kannada) ಇಲ್ಲಿದೆ.

VISTARANEWS.COM


on

Health Tips Kannada
Koo

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು (Health Tips Kannada) ಎಂಬ ಹಳೇ ಗಾದೆಯನ್ನು ಈ ಬೀಜಗಳ ವಿಚಾರಕ್ಕೆ ಹೇಳಬಹುದೇನೋ. ಯಾಕೆಂದರೆ ಬೀಜಗಳು ನೋಡಲು ಚಿಕ್ಕದಾದರೂ, ಅದರಲ್ಲಿರುವ ಪೋಷಕಾಂಶಗಳ ವಿಚಾರಕ್ಕೆ ಬಂದರೆ ದೇಹಕ್ಕೆ ಅಗತ್ಯವಾಗಿರುವ ಎಲ್ಲವನ್ನೂ ಒಳಗೊಂಡಿವೆ. ವಿಟಮಿನ್‌ಗಳು, ಖನಿಜಾಂಶಗಳು, ಒಳ್ಳೆಯ ಕೊಬ್ಬು, ಪ್ರೊಟೀನ್‌ ಸೇರಿದಂತೆ ಎಲ್ಲವೂ ಇರುವ ಬೀಜಗಳು ತಿನ್ನಲು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಇರುತ್ತವೆ. ಹಲವು ರೋಗಗಳು ಬರದಂತೆ ತಡೆಯುವ, ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಈ ಬೀಜಗಳ ಸೇವನೆಯಿಂದ ನಮ್ಮ ಸೌಂದರ್ಯವೂ ಸೇರಿದಂತೆ ಆರೋಗ್ಯವೂ ವೃದ್ಧಿಯಾಗುತ್ತದೆ. ಬನ್ನಿ, ಯಾವೆಲ್ಲ ಬೀಜಗಳಿಂದ ಯಾವ ಲಾಭಗಳನ್ನು ನಾವು ಪ್ರಮುಖವಾಗಿ ಪಡೆಯಬಹುದು ಎಂಬುದನ್ನು ನೋಡೋಣ.

Pomegranate seeds

ದಾಳಿಂಬೆ ಬೀಜಗಳು

ಕೆಂಬಣ್ಣದ ದಾಳಿಂಬೆ ಹಣ್ಣಿನ ಬೀಜಗಳನ್ನು ಕವಿಗಳು ಹಲ್ಲುಗಳಿಗೆ ಹೋಲಿಸುತ್ತಾರೆ. ಮುತ್ತಿನಂತ ಹಲ್ಲನ್ನು ಹೊಂದಿದ್ದರೆ ದಾಳಿಂಬೆಯ ಬೀಜದಂತೆ ಮುದ್ದಾಗಿವೆ ಎನ್ನುವುದನ್ನು ನೀವು ನೋಡಿರಬಹುದು. ಈ ದಾಳಿಂಬೆಯ ಕೆಂಬಣ್ಣದ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ, ವಿಟಮಿನ್‌ ಸಿಯೂ ಹೇರಳವಾಗಿವೆ. ಇದು ಕೊಬ್ಬನ್ನು ಕರಗಿಸುವ ಜೊತೆಗೆ ಆಂಟಿ ಏಜಿಂಗ್‌ ಗುಣಗಳನ್ನೂ ಹೊಂದಿದೆ. ಹೀಗಾಗಿ ತೂಕ ಇಳಿಸುವ ಮಂದಿಗೆ ದಾಳಿಂಬೆ ತಿನ್ನುವುದು ಬಹಳ ಒಳ್ಳೆಯದು.

Sunflower seed and flax seed

ಸೂರ್ಯಕಾಂತಿ ಬೀಜ ಹಾಗೂ ಅಗಸೆ ಬೀಜ

ಸೂರ್ಯಕಾಂತಿ ಹೂವಿನ ಬೀಜಗಳ ಸಿಪ್ಪೆ ಸುಲಿದು ಅದರೊಳಗಿನ ಬೀಜವನ್ನು ಸೇವಿಸುವುದರಿಂದ ಸಾಕಷ್ಟು ಲಾಭಗಳಿವೆ. ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್‌ ಬಿ೧, ತಾಮ್ರ, ವಿಟಮಿನ್‌ ಇ, ಆಂಟಿ ಆಕ್ಸಿಡೆಂಟ್‌ಗಳು, ಪ್ರೊಟೀನ್‌ ಹಾಗೂ ನಾರಿನಂಶ ಹೇರಳವಾಗಿವೆ. ಇದು ಮಧುಮೇಹಕ್ಕೆ ಬಹಳ ಒಳ್ಳೆಯದು. ಸೂರ್ಯಕಾಂತಿ ಹಾಗೂ ಅಗಸೆ ಬೀಜಗಳು ಗ್ಲುಕೋಸ್‌ ಮಟ್ಟವನ್ನು ಕೆಳಗಿಳಿಸುವ ಗುಣವನ್ನು ಹೊಂದಿರುವುದರಿಂದ ಇವೆರಡೂ ಕೂಡಾ ಮಧುಮೇಹಕ್ಕೆ ಒಳ್ಳೆಯ ಆಹಾರಗಳು.

Chia Seeds Black Foods

ಚಿಯಾ ಬೀಜಗಳು

ಚಿಯಾ ಬೀಜಗಳು ಆಕಾರದಲ್ಲಿ ಪುಟಾಣಿಯಾದರೂ ಇವುಗಳಲ್ಲಿರುವ ಶಕ್ತಿ ದೊಡ್ಡದು. ಇತ್ತೀಚೆಗಿನ ದಿನಗಳಲ್ಲಿ ಚಿಯಾ ಬೀಜಗಳು ಹೆಚ್ಚು ಪ್ರಸಿದ್ಧಿಗೆ ಬಂದಿದ್ದು, ಸಲಾಡ್‌ಗಳಲ್ಲಿ, ಸ್ಮೂದಿಗಳಲ್ಲಿ ಹಾಗೂ ಡೆಸರ್ಟ್‌ಗಳಲ್ಲಿ ಬಳಕೆಯಾಗುತ್ತಿವೆ. ಕ್ಯಾಲ್ಶಿಯಂ ಹೆಚ್ಚಿರುವ ಚಿಯಾ ಬೀಜಗಳನ್ನು ತಿನ್ನುವುದರಿಂದ ಎಲುಬಿನ ಆರೋಗ್ಯ ವೃದ್ಧಿಯಾಗುತ್ತದೆ. ಎಲುಬು ಗಟ್ಟಿಯಾಗುತ್ತದೆ.

Sweet pumpkin seed

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜಗಳು ಹಸಿರು ಬಣ್ಣದಲ್ಲಿರುವ ಬೀಜಗಳಾಗಿದ್ದು, ಇವುಗಳ ಸೇವನೆಯಿಂದಲೂ ಸಾಕಷ್ಟು ಆರೋಗ್ಯದ ಲಾಭಗಳಿವೆ. ಸಲಾಡ್‌ ಹಾಗೂ ಸಿರಿಯಲ್‌ಗಳ ಜೊತೆಗೆ ಇವನನು ಸೇರಿಸಿ ಬಳಸಲಾಗುತ್ತದೆ. ಕಬ್ಬಿಣಾಂಶ ಅತ್ಯಂತ ಹೆಚ್ಚಿರುವ ಈ ಬೀಜಗಳು ಶಕ್ತಿವರ್ಧಕಗಳು. ನಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ರಕ್ತದಲ್ಲಿ ಹಿಮೋಗ್ಲೋಬಿನ್‌ ಅನ್ನೂ ಇದು ಹೆಚ್ಚಿಸುವಲ್ಲಿ ಪಾತ್ರ ವಹಿಸುತ್ತದೆ. ತೂಕ ಇಳಿಕೆಗೂ ಇದು ಒಳ್ಳೆಯದು.

sesame seeds Sesame Benefits

ಎಳ್ಳು

ಎಳ್ಳಿನ ಬೀಜಗಳೂ ಕೂಡಾ ನೋಡಲು ಚಿಕ್ಕವಾಗಿದ್ದರೂ ತಮ್ಮ ಗುಣದಲ್ಲಿ ಶ್ರೇಷ್ಠತೆಯನ್ನು ಮೆರೆಯುವಂಥವುಗಳು. ಫೈಟೋನ್ಯೂಟ್ರಿಯೆಂಟ್‌ಗಳು, ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್‌ ಹಾಗೂ ನಾರಿನಂಶ ಹೆಚ್ಚಿರುವ ಈ ಬೀಜಗಳಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ ಕೂಡಾ ಹೇರಳವಾಗಿದೆ. ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನೂ ಇದು ಹೆಚ್ಚಿಸುತ್ತದೆ. ಅಮೆರಿಕನ್‌ ಹಾರ್ಟ್‌ ಅಸೋಸಿಯೇಶನ್‌ ವರದಿಯ ಪ್ರಕಾರ, ಎಳ್ಳಿನಲ್ಲಿರುವ ಮೋನೋ ಸ್ಯಾಚುರೇಟೆಡ್‌ ಹಾಗೂ ಪಾಲಿ ಸ್ಯಾಚುರೇಟೆಡ್‌ ಕೊಬ್ಬು ಹಿತಮಿತವಾಗಿ ದೇಹ ಸೇರಿದರೆ, ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಅಷ್ಟೇ ಅಲ್ಲ, ಪಾರ್ಶ್ವವಾಯುವಿನಂಥ ಸಮಸ್ಯೆಗಳನ್ನೂ ದೂರವಿರಿಸುತ್ತದೆ. ಇಂಥ ಅಪಾಯದಿಂದ ನಮ್ಮನ್ನು ದೂರವಿರಿಸುವ ಸಾಮರ್ಥಿವನ್ನು ಹೊಂದಿದೆ ಎಂದು ವರದಿ ಮಾಡಿದೆ.
ಈ ಬೀಜಗಳ ಲಾಭಗಳನ್ನು ನಾವು ಪಡೆಯುವುದಕ್ಕಾಗಿ ನಾವು ಮಾಡಬಹುದಾದ ಬೆಸ್ಟ್‌ ಉಪಾಯಗಳಲ್ಲಿ ಪ್ರಮುಖವಾದುದು, ಸಲಾಡ್‌ಗಳ ಮೇಲೆ ಟಾಪಿಂಗ್‌ನಂತೆ ಹಾಕಿ ಸೇವಿಸುವುದು. ಇಲ್ಲವಾದರೆ, ಸ್ನ್ಯಾಕಿಂಗ್‌ ಸಮಯದಲ್ಲಿ ಸಿಕ್ಕಸಿಕ್ಕ ತಿನಿಸುಗಳನ್ನು ತಿನ್ನುವ ಬದಲು ಇವನ್ನು ಸೇವಿಸುವುದು.

ಇದನ್ನೂ ಓದಿ: Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

Continue Reading

ಆರೋಗ್ಯ

Health Tips: ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಿಕೊಳ್ಳಬೇಕೆ? ಈ ಆಹಾರ ಸೇವಿಸಿ

ಹಿಮೋಗ್ಲೋಬಿನ್ ಕಡಿಮೆಯಾದರೆ ಅದನ್ನು ರಕ್ತಹೀನತೆ ಎನ್ನುತ್ತೇವೆ. ಮೊದಲಿಗೆ ಕೆಲವು ಪೂರಕಗಳನ್ನು ವೈದ್ಯರು ನೀಡಬಹುದು. ಆದರೆ ಇದನ್ನು ಜೀವನವಿಡೀ ಆಹಾರದ ಮೂಲಕವೇ ಸಮತೋಲನದಲ್ಲಿ ಇರಿಸಿಕೊಳ್ಳಬೇಕು. ಯಾವ ಆಹಾರದ ಮೂಲಕ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಗೊತ್ತೇ? ಇಲ್ಲಿದೆ (Health Tips) ಮಾಹಿತಿ.

VISTARANEWS.COM


on

Health Tips
Koo

ಹಿಮೋಗ್ಲೋಬಿನ್‌ ಬಗ್ಗೆ ಎಲ್ಲರೂ ಕೇಳಿರುತ್ತೇವೆ. ಅದರ ಮಟ್ಟ ಕಡಿಮೆಯಾಯಿತೆಂದು ಮಾತ್ರೆ ನುಂಗುವವರನ್ನೂ ಕಂಡಿರುತ್ತೇವೆ. ಆದರೆ ಅದು ಕಡಿಮೆಯಾದರೆ ಸಮಸ್ಯೆಯೇನು ಎಂಬುದು ಗೊತ್ತಿರುವುದಿಲ್ಲ. ಹಿಮೋಗ್ಲೋಬಿನ್‌ ಎಂದರೆ ಕೆಂಪುರಕ್ತ ಕಣಗಳಲ್ಲಿರುವ ಒಂದು ಬಗೆಯ ಪ್ರೊಟೀನ್‌. ಇದರ ಕೆಲಸದ ಬಗ್ಗೆ ಚುಟುಕಾಗಿ ಹೇಳಬೇಕೆಂದರೆ, ದೇಹದಲ್ಲಿ ಆಮ್ಲಜನಕದ ಮೇಲುಸ್ತುವಾರಿ ನೋಡಿಕೊಳ್ಳುವ ವಿಭಾಗ ಇದರದ್ದು. ಈ ವಿಭಾಗದಲ್ಲಿ ಎಡವಟ್ಟಾದರೆ ಉಳಿದೆಲ್ಲ ವಿಭಾಗದಲ್ಲೂ ಏರುಪೇರು ಉಂಟಾಗುತ್ತದೆ. ಹಾಗಾಗಿ ಇದರ ಮಟ್ಟದಲ್ಲಿ ತೀರಾ ಏರುಪೇರು ಆಗುವಂತಿಲ್ಲ. ಹಿಮೋಗ್ಲೋಬಿನ್‌ ಕಡಿಮೆಯಾದರೆ ಅದನ್ನು ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲಾಗುತ್ತದೆ. ಇದನ್ನು ಸರಿತೂಗಿಸುವಂಥ ಆಹಾರಗಳು ಯಾವುವು ಎಂಬುದು (Health Tips) ಗೊತ್ತೇ?

Iron rich foods

ಕಬ್ಬಿಣಯುಕ್ತ ಆಹಾರಗಳು

ಆಹಾರದಲ್ಲಿ ಕಬ್ಬಿಣದಂಶ ಹೆಚ್ಚಿದ್ದರೆ, ರಕ್ತಹೀನತೆಯನ್ನು ನಿವಾರಿಸಲು ನೆರವಾಗುತ್ತದೆ. ಮೀನು, ಕೆಂಪು ಮಾಂಸ, ಚಿಕನ್‌, ಕಾಳುಗಳು, ಬೇಳೇಗಳು, ತೋಫು, ಹಸಿರು ಸೊಪ್ಪು ಮತ್ತು ತರಕಾರಿಗಳು, ಬ್ರೊಕೊಲಿ, ಒಣದ್ರಾಕ್ಷಿ, ಎಪ್ರಿಕಾಟ್‌ನಂಥವು ಆಹಾರದಲ್ಲಿರಲಿ.

Vitamin c

ವಿಟಮಿನ್‌ ಸಿ

ಕಬ್ಬಿಣಯುಕ್ತ ಆಹಾರವನ್ನೇನೋ ತಿನ್ನುತ್ತೀರಿ. ಇದು ಸರಿಯಾಗಿ ಹೀರಲ್ಪಡುವುದಕ್ಕೆ ವಿಟಮಿನ್‌ ಸಿ ಅಂಶ ಅಗತ್ಯ. ಹಾಗಾಗಿ ಸಿಟ್ರಸ್‌ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ನಿಂಬೆಯಂಥವು, ಎಲ್ಲಾ ರೀತಿಯ ಬೆರ್ರಿಗಳು, ಕಿವಿ ಹಣ್ಣು, ಕ್ಯಾಪ್ಸಿಕಂ, ಟೊಮೇಟೊ ಇತ್ಯಾದಿಗಳು ದೈನಂದಿನ ಆಹಾರದಲ್ಲಿ ಬೇಕು.

ಫೋಲೇಟ್‌

ಹಿಮೋಗ್ಲೋಬಿನ್‌ ಉತ್ಪಾದನೆಯಲ್ಲಿ ವಿಟಮಿನ್‌ ಬಿ೯ ಅಥವಾ ಫೋಲೇಟ್‌ ಪ್ರಧಾನ ಕೆಲಸ ಮಾಡುತ್ತದೆ. ಪಾಲಕ್‌ ಸೊಪ್ಪು, ಬ್ರೊಕೊಲಿ, ಅವಕಾಡೊ ಅಥವಾ ಬೆಣ್ಣೆ ಹಣ್ಣು, ಕಿತ್ತಳೆ ಹಣ್ಣಿನಂಥವು ಅಗತ್ಯವಾಗಿ ಬೇಕು.

Beetroot

ಬೀಟ್‌ರೂಟ್‌

ಇದೊಂದು ತರಕಾರಿಯಿಂದ ಹಲವು ರೀತಿಯ ಅನುಕೂಲಗಳು ದೊರೆಯುತ್ತವೆ. ಇದರಲ್ಲಿ ಕಬ್ಬಿಣದಂಶ, ಫಾಲಿಕ್‌ ಆಮ್ಲ ಮತ್ತು ಪೊಟಾಶಿಯಂ ಒಟ್ಟಿಗೇ ದೊರೆಯುತ್ತದೆ. ಇವೆಲ್ಲವೂ ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಇದನ್ನು ಹಸಿಯಾಗಿ, ಬೇಯಿಸಿ… ಹೇಗಾದರೂ ತಿನ್ನಿ, ಅಂತೂ ಸಾಕಷ್ಟು ತಿನ್ನಿ.

Pomegranate

ದಾಳಿಂಬೆ

ಈ ಹಣ್ಣಿನಲ್ಲಿ ಕಬ್ಬಿಣ ಮತ್ತು ವಿಟಮಿನ್‌ ಸಿಗಳೆರಡೂ ಇವೆ. ಈ ಮೂಲಕ ಹಿಮೋಗ್ಲೋಬಿನ್ ಹೆಚ್ಚು ಉತ್ಪಾದನೆ ಆಗುವುದಕ್ಕೆ ನೆರವಾಗುತ್ತದೆ. ದಾಳಿಬೆಯ ಬೀಜಗಳನ್ನು ಮೆಲ್ಲುವುದು ಆಗದಿದ್ದರೆ, ಇದರ ತಾಜಾ ರಸವನ್ನೂ ಕುಡಿಯಬಹುದು.

ನೀರು, ನಿದ್ದೆ

ದಿನಕ್ಕೆ ಎಂಟು ತಾಸು ನಿದ್ದೆ ಮತ್ತು ಎಂಟು ಗ್ಲಾಸ್‌ ನೀರು- ಇದನ್ನು ದಿನದ ಮಂತ್ರವಾಗಿಸಿಕೊಳ್ಳಿ. ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯದಿದ್ದರೆ ಕೆಂಪುರಕ್ತಕಣಗಳ ಉತ್ಪಾದನೆಯಲ್ಲಿ ತೊಡಕಾಗುತ್ತದೆ. ಇದು ಹಿಮೋಗ್ಲೋಬಿನ್‌ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ನೀರಿನ ಕೊರತೆಯಾದರೆ ರಕ್ತದ ಸಾಂದ್ರತೆ ಮತ್ತು ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಈ ಬಗ್ಗೆ ಗಮನ ಬೇಕು.

ಇವು ಬೇಡ

ಕೆಲವು ಆಹಾರಗಳು ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತವೆ. ಉದಾ, ಕಾಫಿ, ಚಹಾದಂಥ ಕೆಫೇನ್‌ಯುಕ್ತ ಪೇಯಗಳು, ಕ್ಯಾಲ್ಶಿಯಂ ಸಾಂದ್ರವಾಗಿರುವ ಆಹಾರಗಳು, ನಾರುಭರಿತ ತಿನಿಸುಗಳನ್ನು ಊಟದ ಸಮಯದಲ್ಲಿ ದೂರ ಮಾಡಿ. ಇದರಿಂದ ಕಬ್ಬಿಣದಂಶ ಚೆನ್ನಾಗಿ ಹೀರಲ್ಪಡುತ್ತದೆ.

ಇದನ್ನೂ ಓದಿ: World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

ದೂರ ಮಾಡಿ

ಆಲ್ಕೋಹಾಲ್‌ ಮತ್ತು ಜಡ ಜೀವನಗಳೆರಡೂ ಹಿಮೋಗ್ಲೋಬಿನ್ನ ಶತ್ರುಗಳು. ಆಲ್ಕೋಹಾಲ್‌ ಸೇವನೆಯಿಂದ ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳುವುದಕ್ಕೆ ಅಡಚಣೆ ಉಂಟಾಗುತ್ತದೆ. ಜಡ ಜೀವನವು ರಕ್ತ ಪರಿಚಲನೆಯ ಶತ್ರು. ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ಕೆಂಪು ರಕ್ತಕಣಗಳ ಉತ್ಪಾದನೆ ಚೆನ್ನಾಗಿ ಆಗಿ, ರಕ್ತದ ಪರಿಚಲನೆಯೂ ಸರಾಗ ಇರುತ್ತದೆ.

Continue Reading

Latest

World Environment Day:ವಿಶ್ವ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಿದ ‘ಕೇಳಚಂದ್ರ ಕಾಫಿ’

World Environment Day ನಾವು ವಾಸಿಸುವ ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಆದರೆ ಈಗ ಎಲ್ಲೆಡೆ ಕಲುಷಿತ ವಾತಾವರಣದಿಂದ ಹೆಸರೇ ಕೇಳರಿಯದ ರೋಗಗಳು, ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿವೆ.ಪರಿಸರ ಸಂರಕ್ಷಣೆಯ ಕುರಿತು ಸಾಕಷ್ಟು ಜನರು ಎಚ್ಚೆತ್ತುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೇಳಚಂದ್ರ ಕಾಫಿ ಸಂಸ್ಥೆಯೂ ಕೈ ಜೋಡಿಸಿದೆ. ತನ್ನ ಎಲ್ಲ ಎಸ್ಟೇಟ್ ​ಗಳಲ್ಲಿ ಪರಿಸರ ಸ್ನೇಹಿ ಉಪಕ್ರಮಗಳನ್ನು ಕೈಗೊಂಡು ಪರಿಸರ ಎಷ್ಟು ಮುಖ್ಯ ಎಂಬ ಅರಿವು ಮೂಡಿಸುತ್ತಿದೆ.

VISTARANEWS.COM


on

World Environment Day
Koo

ಚಿಕ್ಕಮಗಳೂರು: ಜೂನ್ ತಿಂಗಳು ಬಂತೆಂದರೆ ಪರಿಸರ ಸಂರಕ್ಷಣೆಯ ಮಾತು ಎಲ್ಲೆಡೆ ಕೇಳಿ ಬರುತ್ತದೆ. ನಾವಿರುವ ಪರಿಸರ ಮೊದಲಿನ ಹಾಗೇ ಇಲ್ಲ ಎನ್ನುವ ನೋವು, ಕಾಳಜಿ ಎಲ್ಲರ ಮನದಲ್ಲಿಯೂ ಇದೆ. ಪರಿಸರ ಚೆನ್ನಾಗಿ ಇದ್ದರೆ ನಮ್ಮ ಆರೋಗ್ಯ, ಮನಸ್ಸು ಎರಡೂ ಚೆನ್ನಾಗಿರುತ್ತದೆ. ಈ ಕುರಿತು ಸಾಕಷ್ಟು ಸಂಘ ಸಂಸ್ಥೆಗಳು ಪರಿಸರ ಸಂರಕ್ಷಣೆಯ ಚಟುವಟಿಕೆಯಲ್ಲಿ ಕೈ ಜೋಡಿಸಿವೆ. ಕಾಫಿ (coffee) ಉತ್ಪನ್ನಗಳ ಉತ್ಕೃಷ್ಟ ಸಂಸ್ಥೆಯಾಗಿರುವ ಕೇಳಚಂದ್ರ ಕಾಫಿ ಕೂಡ ಇದಕ್ಕೆ ಹೊರತಾಗಿಲ್ಲ! ವಿಶ್ವ ಪರಿಸರ ದಿನಾಚರಣೆಯ (World Environment Day) ಆಚರಣೆಯ ಹಿನ್ನೆಲೆಯಲ್ಲಿ ತನ್ನ ಎಲ್ಲ ಎಸ್ಟೇಟ್ ​ಗಳಲ್ಲಿ ಪರಿಸರ ಸ್ನೇಹಿ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸರದ ಅತ್ಯುನ್ನತ ನಿರ್ವಹಣೆ ಮತ್ತು ಸ್ಥಿರವಾದ ಅಭ್ಯಾಸಗಳ ವಿಚಾರದಲ್ಲಿ ತನ್ನ ಬದ್ಧತೆಯನ್ನು ಸಾರುತ್ತಿದೆ. ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಿಸುವ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅನುಸರಿಸುವ  ಪ್ರಾಮುಖ್ಯತೆಯ ಬಗ್ಗೆ ಎಸ್ಟೇಟ್​ ಸಿಬ್ಬಂದಿ, ಕಾರ್ಮಿಕರು ಮತ್ತು ಯುವ ಪೀಳಿಗೆಗೆ ಶಿಕ್ಷಣ ನೀಡುವ ಉದ್ದೇಶವನ್ನು ಈ ಉಪಕ್ರಮಗಳು ಹೊಂದಿವೆ.

ಕೇಳಚಂದ್ರ ಕಾಫಿ ಜನಪ್ರಿಯ ಪ್ರವಾಸಿ ತಾಣ ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿರುವ ಯೆಲ್ಲೂರ್​ ಖಾನ್​ ಎಸ್ಟೇಟ್ ​ನಲ್ಲಿ ಎಲ್ಲ ಸಿಬ್ಬಂದಿ ಮತ್ತು ಕಾರ್ಮಿಕರಿಗಾಗಿ ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.  ಪರಿಸರ ಸಂರಕ್ಷಣೆ, ಜಲಮೂಲಗಳ ಸಂರಕ್ಷಣೆ, ಮಾಲಿನ್ಯ ತಡೆಗಟ್ಟುವಿಕೆ ಮತ್ತು ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವ ಪ್ರಾಮುಖ್ಯತೆಯ ಬಗ್ಗೆ ಕಾರ್ಮಿಕರೆಲ್ಲರೂ ಅಗತ್ಯ ಮಾಹಿತಿಯನ್ನು ಪಡೆದರು.ಶೈಕ್ಷಣಿಕ ಗೋಷ್ಠಿಯ ನಂತರ ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುವ 3 ಕಿ.ಮೀ ಉದ್ದದ ರಸ್ತೆಯುದ್ದಕ್ಕೂ ವಿಶೇಷ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಈ ಅಭಿಯಾನದಲ್ಲಿ ಪಾಲ್ಗೊಂಡ ತಂಡವು ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ, ಸರಿಯಾದ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರವಾಸಿಗರನ್ನು ಪ್ರೇರೇಪಿಸಿತು.

ಇನ್ನು ಕಮ್ಮರಗೋಡು ಕ್ಲಸ್ಟರ್​ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಾಮುಖ್ಯತೆಯನ್ನು ಅರಿಯುವ ಉದ್ದೇಶದಿಂದ ಬೃಹತ್ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯದಲ್ಲಿ ಶಾಲಾ ಮಕ್ಕಳ ಭಾಗವಹಿಸುವಿಕೆಯೂ ನಿರ್ಣಾಯಕ ಪಾತ್ರ ವಹಿಸಿತು. ನಮ್ಮ ಭೂಮಿಯ ಆರೋಗ್ಯ ಮತ್ತು ಸ್ಥಿರತೆ ಸುಧಾರಿಸುವಲ್ಲಿ ಮರಗಳು ವಹಿಸುವ ಉತ್ತಮ ಪಾತ್ರದ ಬಗ್ಗೆ ಮಕ್ಕಳಿಗೆ ಕಲಿಸಲಾಯಿತು.  

ಇದನ್ನೂ ಓದಿ:Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

ಪರಿಸರ ದಿನಾಚರಣೆ ಅಂಗವಾಗಿ ಆಯೋಜಸಿರುವ ಈ ಕಾರ್ಯಕ್ರಮಗಳು ಪರಿಸರ ಸ್ನೇಹಿ ಅಭ್ಯಾಸಗಳು, ಉತ್ತಮ ಭವಿಷ್ಯ ಮತ್ತು ಹೈಟೆಕ್ ಹಾಗೂ ಸ್ಮಾರ್ಟ್​​ ಕೃಷಿಗೆ ಕೇಳಚಂದ್ರ ಕಾಫಿಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಕಂಪನಿಯ ಈ ರೀತಿಯ ಕಾರ್ಯಕ್ರಮಗಳು 2030 ರ ವೇಳೆಗೆ ಜೀವವೈವಿಧ್ಯತೆಯ ನಷ್ಟವನ್ನು ಸರಿತೂಗಿಸುವ ವಿಶ್ವಸಂಸ್ಥೆಯ ಕರೆಗೆ ಅನುಗುಣವಾಗಿವೆ.  ಭೂಮಿಯ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಪುನರ್​​ ಸ್ಥಾಪನೆ ಮಾಡುವಲ್ಲಿ ಕೇಳಚಂದ್ರ ಕಾಫಿ ಸಂಪೂರ್ಣ ಬದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

Continue Reading
Advertisement
AFG vs NZ
ಕ್ರಿಕೆಟ್19 mins ago

AFG vs NZ: ಅಫಘಾನಿಸ್ತಾನ ವಿರುದ್ಧ ಹೀನಾಯ ಸೋಲು ಕಂಡ ನ್ಯೂಜಿಲ್ಯಾಂಡ್​

Election Results 2024
ಕರ್ನಾಟಕ40 mins ago

Election Results 2024: ಡಿ.ಕೆ. ಸುರೇಶ್ ಸೋಲಿಗೆ ಸಿದ್ದರಾಮಯ್ಯ ಆ್ಯಂಡ್ ಟೀಮ್ ಕಾರಣ: ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ

Toyota Kirloskar Motor Inauguration of Toyota Used Car Store by TKM in New Delhi
ದೇಶ46 mins ago

Toyota Kirloskar Motor: ದೆಹಲಿಯಲ್ಲಿ ಟಿಕೆಎಂನ ʼಟೊಯೊಟಾ ಯೂಸ್ಡ್ ಕಾರ್ʼ ಮಳಿಗೆಗೆ ಚಾಲನೆ

Niveditha Gowda chandan divorce main reason told by advocate
ಸ್ಯಾಂಡಲ್ ವುಡ್48 mins ago

Niveditha Gowda: ಚಂದನ್‌-ನಿವೇದಿತಾ ಡಿವೋರ್ಸ್‌ ಬಗ್ಗೆ ಅಸಲಿ ಸತ್ಯ ಬಯಲು ಮಾಡಿದ ವಕೀಲೆ!

Job Alert
ಉದ್ಯೋಗ51 mins ago

Job Alert: ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

assault case
ಬೆಂಗಳೂರು60 mins ago

Assault Case : ಅರೆ ಬೆತ್ತಲಾಗಿ ಯುವಕನಿಗೆ ನಡು ರಸ್ತೆಯಲ್ಲೆ ಹಿಗ್ಗಾಮುಗ್ಗಾ ಥಳಿತ; ಹಲ್ಲೆಕೋರರು ಅರೆಸ್ಟ್‌

Kumar Bangarappa attack by Shivarajkumar Supporters
ರಾಜಕೀಯ1 hour ago

Kumar Bangarappa: ಗೀತಾ ಸೋತ ಹಿನ್ನೆಲೆಯಲ್ಲಿ ಗೇಲಿ ಮಾಡಿದ್ದ ಕುಮಾರ್ ಬಂಗಾರಪ್ಪ ಮನೆಗೆ ಶಿವಣ್ಣ ​ಅಭಿಮಾನಿಗಳ ಮುತ್ತಿಗೆ

Pakistan
ವಿದೇಶ1 hour ago

Pakistan: ಇಡೀ ಜಗತ್ತೇ ಮೋದಿಗೆ ಅಭಿನಂದಿಸಿದರೂ ಪಾಕಿಸ್ತಾನ ಮಾತ್ರ ಇನ್ನೂ Congratulations ಎಂದಿಲ್ಲ!

Valmiki Corporation Scam
ಪ್ರಮುಖ ಸುದ್ದಿ1 hour ago

Valmiki Corporation Scam: ಸಾಕ್ಷ್ಯ ನಾಶ ಆರೋಪ; ಮೇ 24ರಂದು ನಾನು ಕಚೇರಿಗೆ ಹೋಗಿಯೇ ಇಲ್ಲ ಎಂದ ಸಚಿವ ಶರಣ ಪ್ರಕಾಶ್ ಪಾಟೀಲ್

Gold Rate Today
ಚಿನ್ನದ ದರ2 hours ago

Gold Rate Today: ಆಭರಣ ಖರೀದಿಗೆ ಇದು ಸಕಾಲ; ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ20 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ22 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು7 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌