Air Travel Tips: ವಿಮಾನ ಪ್ರಯಾಣ ಅಸಹನೀಯವೇ? ಹಾಗಾದರೆ ಈ ಆಹಾರಗಳಿಂದ ದೂರವಿರಿ! - Vistara News

ಪ್ರವಾಸ

Air Travel Tips: ವಿಮಾನ ಪ್ರಯಾಣ ಅಸಹನೀಯವೇ? ಹಾಗಾದರೆ ಈ ಆಹಾರಗಳಿಂದ ದೂರವಿರಿ!

ವಿಮಾನ ಪ್ರಯಾಣದ ಸಂದರ್ಭ ಸುಸ್ತು, ತಲೆಸುತ್ತಿನಂತಹ ಅನುಭವಗಳು ಅನುಭವಕ್ಕೆ ಬಾರದಿರಲು ನಾವು ನಮ್ಮ ಆಹಾರಕ್ರಮದ ಬಗ್ಗೆಯೂ ಕೊಂಚ ಗಮನ ಹರಿಸಬೇಕು. ಯಾವೆಲ್ಲ ಆಹಾರಗಳ್ನು ವಿಮಾನ ಪ್ರಯಾಣಕ್ಕೂ ಮೊದಲು ಸೇವಿಸದೆ ಇದ್ದರೆ ಇಂತಹ ಸಮಸ್ಯೆಗಳಿಂದ ದೂರ ಇರಬಹುದು ಎಂಬುದನ್ನು ನೋಡೋಣ.

VISTARANEWS.COM


on

air travel foods
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಮಾನ ಪ್ರಯಾಣ (Air Travel Tips) ಬಹಳಷ್ಟು ಮಂದಿಯ ಜೀವನದಲ್ಲಿ ಸಾಮಾನ್ಯ. ಕೆಲಸದ ನಿಮಿತ್ತವೋ, ಸಮಯದ ಅಭಾವದಿಂದ ಈಗ ವಿಮಾನದಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋಗುವುದು, ಅದೇ ದಿನ ಮೀಟಿಂಗ್‌ ಮುಗಿಸಿ ವಾಪಾಸು ಬರುವುದು, ಮತ್ತೆ ಎಂದಿನಂತೆ ಕೆಲಸ ಮಾಡುವುದು ಎಲ್ಲವೂ ಇಂದಿನ ಒತ್ತಡದ ಜೀವನಶೈಲಿಯಲ್ಲಿ ಸಹಜ. ಹಲವರ ನಿತ್ಯದ ಬದುಕು. ಒಂದು ಗಂಟೆಯ ವಿಮಾನ ಪ್ರಯಾಣವಾದರೂ, ಬಂದ ಮೇಲೆ ಕಾರಿನಲ್ಲಿ ಕಚೇರಿಗೆ ವಾಹನದಟ್ಟಣೆಯಲ್ಲಿ ಚಲಾಯಿಸಿಕೊಂಡು ಹೋಗಿದ್ದಕ್ಕಿಂತ ಹೆಚ್ಚು ಸುಸ್ತಿನ ಅನುಭವವೂ ಇದರಿಂದ ಆಗಬಹುದು.

ಯಾಕೆಂದರೆ ವಿಮಾನ ಪ್ರಯಾಣದಲ್ಲಿ ನಾವು ಒಂದು ಮಟ್ಟದಿಂದ ಎತ್ತರದಲ್ಲಿ ಪ್ರಯಾಣ ಬೆಳೆಸುವುದರಿಂದ ವಾತಾವರಣದಲ್ಲಿ ಗಾಳಿಯ ಒತ್ತಡವೂ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ವಿಮಾನ ಪ್ರಯಾಣದ ಸಂದರ್ಭ ಸುಸ್ತು, ತಲೆಸುತ್ತಿನಂತಹ ಅನುಭವಗಳು ಅನುಭವಕ್ಕೆ ಬಾರದಿರಲು ನಾವು ನಮ್ಮ ಆಹಾರಕ್ರಮದ ಬಗ್ಗೆಯೂ ಕೊಂಚ ಗಮನ ಹರಿಸಬೇಕು. ಯಾವೆಲ್ಲ ಆಹಾರಗಳ್ನು ವಿಮಾನ ಪ್ರಯಾಣಕ್ಕೂ ಮೊದಲು ಸೇವಿಸದೆ ಇದ್ದರೆ ಇಂತಹ ಸಮಸ್ಯೆಗಳಿಂದ ದೂರ ಇರಬಹುದು ಎಂಬುದನ್ನು ನೋಡೋಣ.

Air Travel Tips

1. ಸೇಬು: ಸೇಬು ಹಣ್ಣು ಅಥವಾ ಆಪಲ್‌ ತಿಂದರೇನು ತೊಂದರೆ ಎಂದು ನಮಗೆ ಅನಿಸಬಹುದು. ಹಣ್ಣಿನಷ್ಟು ಒಳ್ಳೆಯ ಆಹಾರ ಇನ್ನೆಲ್ಲಿದೆ ಎಂದೂ ಅನಿಸಬಹುದು. ಆದರೆ, ಸೇಬು ಹಣ್ಣನ್ನು ವಿಮಾನ ಪ್ರಯಾಣಕ್ಕೆ ಮೊದಲು ತಿನ್ನುವುದರಿಂದ ಹೊಟ್ಟೆ ಉಬ್ಬರಿಸಿದಂತಾಗುವುದು, ಎದೆಯುರಿಯಂತಹ ಅನುಭವಗಳೂ ಆಗಬಹುದು. ಹಾಗಾಗಿ ಪ್ರಯಾಣಕ್ಕೆ ಮೊದಲು ಹಣ್ಣು ಸೇವಿಸುತ್ತಿದ್ದರೆ, ಹೊಟ್ಟೆಗೆ ಲಘುವಾಗಿರುವ ಹಣ್ಣುಗಳ ಆಯ್ಕೆ ಮಾಡಿ. ಪಪ್ಪಾಯಿ, ಬಾಳೆಹಣ್ಣು ಇತ್ಯಾದಿಗಳಿಂದ ತೊಂದರೆಯಾಗುವುದಿಲ್ಲ.

2. ಬ್ರೊಕೋಲಿ: ಸೇಬಿನ ಹಾಗೆಯೇ ಬ್ರೊಕೋಲಿ, ಕ್ಯಾಬೇಜ್‌ ಹಾಗೂ ಹೂಕೋಸಿನಂತಹ ತರಕಾರಿಗಳು ಕೂಡಾ, ಹೊಟ್ಟೆಯಲ್ಲಿ ಕೊಂಚ ತಳಮಳ ಉಂಟು ಮಾಡಬಲ್ಲವು. ಕಡಿಮೆ ಕ್ಯಾಲರಿಯ, ತೂಕ ಇಳಿಕೆಗೆ ಹೇಳಿ ಮಾಡಿಸಿದಂತಹ ಈ ತರಕಾರಿಗಳು ಹೊಟ್ಟೆಯಲ್ಲಿ ಗ್ಯಾಸ್‌ ಉತ್ಪತ್ತಿಗೆ ಪ್ರಚೋದನೆ ಮಾಡುವುದರಿಂದ ವಿಮಾನ ಪ್ರಯಾಣದ ಸಂದರ್ಭ ಎದೆಯುರಿ, ಹೊಟ್ಟೆಯುಬ್ಬರದ ಅನುಭವ ನೀಡಬಲ್ಲುದು. ಅಷ್ಟೇ ಅಲ್ಲ, ಸಲಾಡ್‌ಗಳೆಂಬ ಹೆಸರಿನಲ್ಲಿ ಈ ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದಲೂ ಬೇಗನೆ ಜೀರ್ಣವಾಗದೆ ಜೀರ್ಣಕ್ರಿಯೆ ಸಮಸ್ಯೆಗಳು ತಲೆದೋರಬಹುದು.

3. ಫಾಸ್ಟ್‌ ಫುಡ್‌: ಏರ್‌ಪೋರ್ಟ್‌ ಬಂದಾಗ ಹಸಿವಾಗಿ, ವಿಮಾನ ಹತ್ತುವ ಮೊದಲು ಏನಾದರೊಂದು ಹೊಟ್ಟೆಗೆ ಹಾಕಿಕೊಳ್ಳೋಣ ಎಂದುಕೊಂಡು ಫಾಸ್ಟ್‌ಫುಡ್‌ ಮೊರೆ ಹೋಗುವುದು ಅನೇಕರು ಮಾಡುವ ತಪ್ಪು. ಫಾಸ್ಟ್‌ ಫುಡ್‌ಗಳಾದ ಪಿಜ್ಜಾ, ಬರ್ಗರ್‌ ಮತ್ತಿತರ ತಿನಿಸುಗಳಲ್ಲಿ ಹೆಚ್ಚು ಉಪ್ಪಿನಂಶ ಇರುವುದರಿಂದ ವಿಮಾನದಲ್ಲಿ ಹಾರುವ ಸಂದರ್ಭ ಜೀರ್ಣಕ್ರಿಯೆಯ ಸಮಸ್ಯೆಗಳು ತಲೆದೋರಬಹುದು.

ಇದನ್ನೂ ಓದಿ: Travel Tips: ಬೇಸಿಗೆ ರಜೆ ಮುಗಿವ ಮೊದಲು ಮಕ್ಕಳೊಂದಿಗೆ ಇಲ್ಲಿಗಾದರೂ ಹೋಗದಿದ್ದರೆ ಹೇಗೆ!

4. ಕೆಫೀನ್:‌ ವಿಮಾನ ಹತುವ ಮೊದಲು ನಿದ್ದ್‌ ತೂಗಿದಂತಾಗಬಾರದು ಎಂದೋ, ಎನರ್ಜಿಯ ಅಗತ್ಯ ಇದೆ ಎಂದೋ, ಅಥವಾ ಸಮಯ ಇನ್ನೂ ಇದೆ ಹಾಗಾಗಿ ಏನಾದರೊಂದು ಕುಡಿಯಬೇಕು ಎಂಬ ಕಾರಣಕ್ಕೋ ಸುಮ್ಮನೆ ಕಾಫಿಯೋ ಚಹಾವೋ ಕುಡಿಯುವುದು ರೂಢಿ. ಇದರಲ್ಲಿರುವ ಕೆಫೀನ್‌ನಿಂದ ಅಜೀರ್ಣದ ಸಮಸ್ಯೆಯೂ ತಲೆದೋರಬಹುದು.

5. ಬೀಜಗಳು: ಬೇಳೆಕಾಳುಗಳ ಸೇವನೆಯೂ ಹೆಚ್ಚಿನ ಗ್ಯಾಸ್‌ ಉತ್ಪತ್ತಿ ಮಾಡುವುದರಿಂದ ಹೊಟ್ಟೆಯ ಸಮಸ್ಯೆ ಎದುರಿಸುವ ಮಂದಿ ರಾಜ್‌ಮಾ, ಅಲಸಂಡೆ ಬೀಜ, ಅವರೆ ಬೀಜ, ಕಡಲೆಕಾಳು ಇತ್ಯಾದಿಗಳಿಂದ ದೂರವಿರುವುದು ಒಳ್ಳೆಯದು.

ಪ್ರತಿಯೊಬ್ಬರ ದೇಹವೂ ಭಿನ್ನವಾಗಿರುವುದರಿಂದ, ಈ ಸಮಸ್ಯೆ ಎಲ್ಲರಿಗೂ ಆಗಬೇಕೆಂದೇನೂ ಇಲ್ಲ. ಆದರೆ, ಜೀರ್ಣಕ್ರಿಯೆ ಸಮಸ್ಯೆ ಇರುವ ಮಂದಿ, ಮೋಷನ್‌ ಸಿಕ್‌ನೆಸ್‌ ಇರುವವರು ಅಥವಾ ವಿಮಾನ ಪ್ರಯಾಣ ಕಷ್ಟವೆನಿಸುವ ಮಂದಿ ಪ್ರಯಾಣದ ಮುನ್ನ ಆಹಾರದ ವಿಚಾರದಲ್ಲಿ ಕೊಂಚ ಜಾಗರೂಕತೆ ವಹಿಸುವುದು ಉತ್ತಮ.

ಇದನ್ನೂ ಓದಿ: Air Travel Tips: ವಿಮಾನದೊಳಗೆ ಏನೆಲ್ಲ ಮಾಡಬಾರದು ಎಂದು ಗೊತ್ತಿರಲಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?

ವಾರಾಂತ್ಯದ ವಿಹಾರಕ್ಕೆ ಕೊಚ್ಚಿಯಲ್ಲಿ (Kochi Tour) ಯಾವುದೇ ಕೊರತೆ ಇಲ್ಲ. ಮುನ್ನಾರ್‌ನ ಮಂಜಿನ ಬೆಟ್ಟಗಳಿಂದ ಹಿಡಿದು ಅಲೆಪ್ಪಿ ಮತ್ತು ಚೆರೈ ಬೀಚ್‌ನ ಶಾಂತ ಹಿನ್ನೀರು ಮತ್ತು ಮರಳಿನ ತೀರಗಳವರೆಗೆ ಅನೇಕ ರೋಮಾಂಚಕಾರಿ ಸ್ಥಳಗಳು ಇಲ್ಲಿದೆ. ಈ ಪ್ರವಾಸಿ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

By

Kochi Tour
Koo

ಸಮುದ್ರ ತೀರಗಳಿಂದ ಸುತ್ತುವರಿದಿರುವ ಕೇರಳದ (kerala) ಹೃದಯ ಭಾಗವಾದ ಕೊಚ್ಚಿಯು ಅತ್ಯಂತ ಆಕರ್ಷಕ ಪ್ರವಾಸಿ (Kochi Tour) ತಾಣಗಳಿಂದ ದೂರದ ಊರಿನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಹೆಸರುವಾಸಿಯಾಗಿರುವ ಕೊಚ್ಚಿ ಗೇಟ್ ವೇ ಆಗಿರುವ ಹಿನ್ನೀರು (backwaters) ಪ್ರದೇಶಗಳಿಂದ, ಗಿರಿಧಾಮಗಳಿಂದ (hill stations) ನೈಸರ್ಗಿಕ ಸೌಂದರ್ಯವನ್ನು ಮಡಿಲಲ್ಲಿ ತುಂಬಿಕೊಂಡು ನಿಂತಂತಿದೆ.

ಕಣ್ಣಿಗೆ ಸೌಂದರ್ಯ, ಮನಸ್ಸಿಗೆ ಶಾಂತಿ ನೀಡುವ ಪ್ರಶಾಂತವಾದ ಮರಳಿನ ಬಿಳಿ ಕಡಲತೀರಗಳು ಮನೆಯಿಂದ ದೂರವಿದ್ದು, ಕೊಂಚ ರಿಲ್ಯಾಕ್ಸ್ ಮಾಡಿಕೊಳ್ಳಬೇಕು ಎನ್ನುವವರಿಗೆ ಸೂಕ್ತ ತಾಣ ಕೊಚ್ಚಿ. ಇಲ್ಲಿನ ಸುತ್ತಮುತ್ತ ಕೆಲವು ಅತ್ಯುತ್ತಮ ಪ್ರವಾಸಿ ತಾಣಗಳಿವೆ. ವಾರಾಂತ್ಯದ ರಜೆಯನ್ನು ಇಲ್ಲಿ ಕಳೆಯಬಹುದು.


ಮುನ್ನಾರ್ (Munnar)

ಚಹಾ ತೋಟಗಳು, ಮಂಜಿನ ಕಣಿವೆಗಳು ಮತ್ತು ಶಾಂತ ವಾತಾವರಣಕ್ಕೆ ಹೆಸರುವಾಸಿಯಾದ ಮುನ್ನಾರ್ ಸುಂದರವಾದ ಗಿರಿಧಾಮವಾಗಿದ್ದು, ಕೊಚ್ಚಿಯ ಸಮೀಪದಲ್ಲಿದೆ. ಮುನ್ನಾರ್‌ಗೆ ಹೋಗುವ ದಾರಿಯಲ್ಲಿ ದಟ್ಟ ಕಾಡುಗಳು ಮತ್ತು ಹಸಿರು ಪರ್ವತಗಳ ರುದ್ರರಮಣೀಯ ದೃಶ್ಯಗಳನ್ನು ನೀಡುತ್ತದೆ. ಮುನ್ನಾರ್ ತಲುಪಿದ ಅನಂತರ ಟ್ರೆಕ್ಕಿಂಗ್, ಪಕ್ಷಿ ವೀಕ್ಷಣೆಗೆ ಹೋಗಬಹುದು ಅಥವಾ ಶಾಂತಿಯುತ ಪರಿಸರದಲ್ಲಿ ವಿಶ್ರಾಂತಿ ಪಡೆಯಬಹುದು. ಇಲ್ಲಿನ ಟೀ ಮ್ಯೂಸಿಯಂಗೆ ಭೇಟಿ ನೀಡಿದರೆ ಚಹಾ ತಯಾರಿಕೆಯಲ್ಲಿ ಒಳಗೊಂಡಿರುವ ಸಾಂಸ್ಕೃತಿಕ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಬಹುದು.


ಅಲೆಪ್ಪಿ (Alleppey)

‘ಪೂರ್ವದ ವೆನಿಸ್ ಎಂದು ಕರೆಯಲ್ಪಡುವ ಅಲೆಪ್ಪಿ ಹಿನ್ನೀರು, ಪ್ರಶಾಂತವಾದ ಹೌಸ್‌ಬೋಟ್ ವಿಹಾರ ಮತ್ತು ಎಲ್ಲಿ ನೋಡಿದರೂ ಹಸಿರಿನಿಂದ ತುಂಬಿದ ಭತ್ತದ ಗದ್ದೆಗಳ ವ್ಯಾಪಕ ಜಾಲದಿಂದ ಆವರಿಸಲ್ಪಟ್ಟಿದೆ. ಈ ನಿಶ್ಯಬ್ದ ತಾಣವು ಕೊಚ್ಚಿನ್‌ನಿಂದ ಸ್ವಲ್ಪ ದೂರದಲ್ಲಿದೆ. ಪ್ರವಾಸಿಗರು ಹಿನ್ನೀರಿನಲ್ಲಿ ಹೌಸ್‌ಬೋಟ್ ಸವಾರಿಗಳನ್ನು ನಡೆಸಬಹುದು. ಇಲ್ಲಿ ತಂಗುವ ಸಮಯದಲ್ಲಿ ಸುತ್ತಲಿನ ಸುಂದರವಾದ ಭೂದೃಶ್ಯಗಳನ್ನು ವೀಕ್ಷಿಸಬಹುದು. ರಾತ್ರಿಯಲ್ಲಿ ಆಕಾಶದಲ್ಲಿ ನಕ್ಷತ್ರಗಳನ್ನು ನೋಡುತ್ತಾ ದೋಣಿ ವಿಹಾರ ನಡೆಸುವುದು ಅಲೆಪಿಯ ಮ್ಯಾಜಿಕ್ ಅನುಭವವನ್ನು ಕೊಡುತ್ತದೆ.


ಫೋರ್ಟ್ ಕೊಚ್ಚಿ (Fort Kochi)

ವಾರಾಂತ್ಯದ ವಿಹಾರಕ್ಕೆ ಫೋರ್ಟ್ ಕೊಚ್ಚಿಯು ಒಂದು ಸುಂದರ ತಾಣ. ಹಳೆಯ ವಸಾಹತುಶಾಹಿ ಕಟ್ಟಡಗಳಿಂದ ಕೂಡಿದ್ದು, ಕಿರಿದಾದ ಕಲ್ಲುಮಣ್ಣುಗಳಿಂದ ತುಂಬಿದ ಬೀದಿಗಳಲ್ಲಿ ನಡೆದುಕೊಂಡು ಹೋಗುವಾಗ ಈ ಸ್ಥಳದ ಹಿಂದಿನ ವೈಭವದ ದಿನಗಳ ಬಗ್ಗೆ ಚಿತ್ರ ಬರೆದಂತ ಭಾಸವಾಗುವುದು. ಇಲ್ಲಿ ಚೈನೀಸ್ ಫಿಶಿಂಗ್ ನೆಟ್ಸ್, ಸೇಂಟ್ ಫ್ರಾನ್ಸಿಸ್ ಚರ್ಚ್ ಮತ್ತು ಮತ್ತಂಚೇರಿ ಅರಮನೆಗೆ ಭೇಟಿ ನೀಡಿ ರಜಾ ದಿನವನ್ನು ಕಳೆಯಬಹುದು. ಈ ನಗರದ ಪರಂಪರೆಯ ಬಗ್ಗೆ ತಿಳಿದುಕೊಳ್ಳಲು ಕಥಕ್ಕಳಿ ಪ್ರದರ್ಶನವನ್ನು ಮಿಸ್ ಮಾಡದೇ ನೋಡಿ. ಕೇರಳದ ಶಾಸ್ತ್ರೀಯ ನೃತ್ಯ ಪ್ರಕಾರವು ಅದರ ರೋಮಾಂಚಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಬಹಿರಂಗಪಡಿಸುತ್ತದೆ.


ವಾಗಮೋನ್ (Vagamon)

ಕೇರಳದ ಪಶ್ಚಿಮ ಘಟ್ಟಗಳ ಮಡಿಕೆಗಳೊಳಗೆ ಅಡಗಿರುವ ವಾಗಮೋನ್ ಶಾಂತವಾದ, ಸಣ್ಣ ಗಿರಿಧಾಮವಾಗಿದೆ. ಪ್ರವಾಸಿಗರಿಗೆ ರೋಲಿಂಗ್ ಬೆಟ್ಟಗಳು, ಹಸಿರು ಹುಲ್ಲುಗಾವಲುಗಳು ಮತ್ತು ಪೈನ್ ಮರಗಳ ತೋಪುಗಳು ಜಲಪಾತಗಳ ನಡುವೆ ವಿಶ್ರಾಂತಿ ಪಡೆಯಲು ಅತ್ಯುತ್ತಮ ಅವಕಾಶವನ್ನು ನೀಡುತ್ತದೆ. ನಿಸರ್ಗವನ್ನು ಪ್ರೀತಿಸುವವರಿಗೆ ಮತ್ತು ಪೈನ್ ಫಾರೆಸ್ಟ್ ಅಥವಾ ಕುರಿಸುಮಲ ಆಶ್ರಮದಂತಹ ಹಲವಾರು ಗುಪ್ತ ರತ್ನಗಳಿಂದ ಕೂಡಿದ ವಿಸ್ಮಯಕಾರಿಯಾಗಿ ಸುಂದರವಾದ ಭೂದೃಶ್ಯದ ಮೂಲಕ ಟ್ರೆಕ್ಕಿಂಗ್‌ನಂತಹ ಸಾಹಸ ಚಟುವಟಿಕೆಗಳನ್ನು ಇಲ್ಲಿ ನಡೆಸಬಹುದು. ಪ್ಯಾರಾಗ್ಲೈಡಿಂಗ್ ಮತ್ತು ರಾತ್ರಿಯ ಕ್ಯಾಂಪಿಂಗ್ ಗೆ ಸೂಕ್ತ ತಾಣ ಗಳು ಇಲ್ಲಿದೆ.

ಇದನ್ನೂ ಓದಿ: Dwarka Tour: ದ್ವಾರಕೆಗೆ ಹೋದಾಗ ಏನೇನು ನೋಡಬಹುದು?


ಚೆರೈ ಬೀಚ್ (Cherai Beach)

ಕೊಚ್ಚಿ ಬಳಿ ಪರಿಪೂರ್ಣ ವಿಶ್ರಾಂತಿ ಅನುಭವಕ್ಕಾಗಿ, ಬೀಚ್ ವಿಹಾರಕ್ಕಾಗಿ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಚೆರೈ ಬೀಚ್‌ಗೆ ಭೇಟಿ ನೀಡಬಹುದು. ಇದು ಕರಾವಳಿಯ ಉದ್ದಕ್ಕೂ ತೂಗಾಡುತ್ತಿರುವ ತೆಂಗಿನ ಮರಗಳು, ಪ್ರಾಚೀನ ಮರಳು, ಚಿನ್ನದ ಬಣ್ಣದಲ್ಲಿ ಕಂಗೊಳಿಸುವ ಸೂರ್ಯ ಮತ್ತು ನೀಲಿ ಅರೇಬಿಯನ್ ಸಮುದ್ರದಿಂದ ಸುತ್ತುವರೆದಿದೆ. ಸೂರ್ಯನನ್ನು ನೋಡುತ್ತಾ ತೀರದಲ್ಲಿ ಸುತ್ತಾಡಲು ಪರಿಪೂರ್ಣ ವಾತಾವರಣವನ್ನು ಸೃಷ್ಟಿಸುತ್ತದೆ. ಇಲ್ಲಿ ತಾಜಾ ಸಮುದ್ರಾಹಾರ ಸತ್ಕಾರವನ್ನು ಪಡೆಯಬಹುದು

Continue Reading

ಧಾರ್ಮಿಕ

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

ಶ್ರೀ ಶಂಕರರು (Shankara Jayanti 2024) ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡಿದ್ದರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತಿದ್ದರು. ಸಂನ್ಯಾಸಕ್ಕೆ ತಾಯಿಯ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಆಗ ತಾಯಿ ಒಪ್ಪಲೇಬೇಕಾಯಿತು.

VISTARANEWS.COM


on

Shankara Jayanti 2024
Koo

ಶಂಕರಾಚಾರ್ಯರು (Shankara Jayanti 2024) ಜೀವಿಸಿದ್ದು ಕೇವಲ 32 ವರ್ಷ. ಆದರೆ ಅವರು ಸಾಧಿಸಿದ್ದು ಅಪಾರ. ಹಿಂದೂ ಧರ್ಮದ ಏಳಿಗೆಗೆ ಅವರ ಕೊಡುಗೆ ಅಮೂಲ್ಯ. ಶಂಕರರ ಬದುಕಿನ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ.

Adi Shankaracharya Jayanti
  1. ಶ್ರೀ ಶಂಕರರು ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡುಬಿಟ್ಟರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತರು. ಸಾಮಾನ್ಯರಿಗೆ ಒಂದು ವೇದವನ್ನು ಅರ್ಥ ಮಾಡಿಕೊಳ್ಳಲೇ ಹತ್ತಾರು ವರ್ಷಗಳು ಬೇಕು.
  2. ಶಂಕರಾಚಾರ್ಯರು ಜನಿಸಿದ್ದು ಕೇರಳ ಕಾಲಟಿ ಎಂಬ ಪುಟ್ಟ ಗ್ರಾಮದಲ್ಲಿ. ತಂದೆಯನ್ನು ಕಳೆದುಕೊಂಡರು. ತಾಯಿ ಅವರನ್ನು ಬೆಳೆಸಿದರು. ಅವರು ಸಂನ್ಯಾಸ ಸ್ವೀಕರಿಸಲು ಒಂದು ಪುಟ್ಟ ಪವಾಡವನ್ನೇ ಮಾಡಬೇಕಾಯಿತು. ಸಂನ್ಯಾಸಕ್ಕೆ ತಾಯಿ ಆರ್ಯಾಂಬೆಯವರ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಮಗ ಬದುಕುತ್ತಾನಲ್ಲ ಎಂಬ ಭರವಸೆಯೊಂದಿಗೆ ತಾಯಿ ಒಪ್ಪಿದರು.
  3. ಹದಿನಾರು ವರ್ಷ ಪ್ರಾಯ ಆಗುವುದರೊಳಗಾಗಿ ಅವರು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ರಚಿಸಿದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.
  4. ಭಾರತದಾದ್ಯಂತ ‘ದಿಗ್ವಿಜಯ ಯಾತ್ರೆʼ ಕೈಗೊಂಡರು. ವೇದವಿರೋಧಿಗಳನ್ನು ವಾಗ್ವಾದಕ್ಕೆ ಕರೆದರು. ಏಕಾಂಗಿಯಾಗಿ ಚರ್ಚೆ, ವಿಚಾರಮಂಡನೆ, ವಾದಗಳ‌ ಮೂಲಕ ಬ್ರಹ್ಮವಾದಕ್ಕೆ ಎಳೆತಂದರು. ದೇಶದುದ್ದಗಲಕ್ಕೂ ಸಂಚರಿಸಿ, ಅಲ್ಲಿಯ ವಿದ್ವಾಂಸರನ್ನು, ಜನರನ್ನು, ರಾಜರನ್ನು ವೈದಿಕತೆಗೆ ತಂದರು.
  5. ಆರು ಮತಗಳನ್ನು ಖಂಡಿಸಿ ತಮ್ಮ ಮತವನ್ನು ಸ್ಥಾಪಿಸಿದ ಪರಿಣಾಮ ಅವರನ್ನು ‘ಷಣ್ಮತ ಖಂಡನಾಚಾರ್ಯ’ ಮತ್ತು ಷಣ್ಮತ ಪ್ರತಿಷ್ಠಾಪನಾಚಾರ್ಯ’ ಎಂದು ಕರೆಯಲಾಯಿತು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು.
  6. ಧರ್ಮವನ್ನು ಉಳಿಸಿ ಬೆಳೆಸುವ ಉದ್ದೇಶಕ್ಕಾಗಿ ಮಠಗಳ ಪರಿಕಲ್ಪನೆಯನ್ನು ತಂದರು. ಮಠ ಮತ್ತು ಯತಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬ ಆಶಯ ಅವರದಾಗಿತ್ತು. ದೇಶದ ಉದ್ದಗಲಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದದ್ದು ಶೃಂಗೇರಿಯ ಮಠ. ಇತರವು ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರೀನಾಥ, ಕಂಚಿಯ ಕಾಮಕೋಟಿಗಳಲ್ಲಿವೆ.
  7. ಸೂರ್ಯ- ಗಣಪತಿ- ಅಂಬಿಕಾ- ಶಿವ- ವಿಷ್ಣುಗಳನ್ನು ಪೂಜಿಸುವ ಪಂಚಾಯತನ ಪೂಜೆಯನ್ನು ತಂದರು. ಈ ದೇವತೆಗಳನ್ನು ಭಾರತದ ಐದು ಕಡೆಗಳಲ್ಲಿ ಸಿಗುವ ಸ್ಫಟಿಕ, ಶೋಣಾಭದ್ರ, ಸ್ವರ್ಣಮುಖಿ, ಬಾಣಲಿಂಗ, ಸಾಲಿಗ್ರಾಮ ಎಂಬ ಕಲ್ಲಿನ ಮೂಲಕ ಪೂಜಿಸಲಾಗುತ್ತದೆ.
  8. ಮೂವತ್ತೆರಡು ವರ್ಷಗಳಲ್ಲಿ ಹಲವು ಮನುಷ್ಯರು ಸೇರಿ ಹಲವು ಜನ್ಮಗಳಲ್ಲಿ ಮಾಡುವಷ್ಟು ಕೆಲಸವನ್ನು ಮಾಡಿ ಮುಗಿಸಿದರು. ಭಾಷ್ಯಗಳನ್ನು ಹೊರತುಪಡಿಸಿ ನೂರಾರು ಸ್ತೋತ್ರ – ಸಾಹಿತ್ಯಗಳನ್ನು ರಚಿಸಿದರು.
  9. ಮೂರು ಸೂತ್ರಗಳಲ್ಲಿ ಶ್ರೀ ಶಂಕರರ ಉಪದೇಶವನ್ನು ಸೂತ್ರೀಕರಿಸಬಹುದು- “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಮತ್ತು ಜೀವಶ್ಶಿವೋಹಂʼ (ಜೀವನೇ ಶಿವ) ಎಂಬುದು ಅದ್ವೈತ ತತ್ವದ ಮೂಲ ಮಂತ್ರಗಳು. ಇದಲ್ಲದೇ ಪರಮಾತ್ಮ ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.
Continue Reading

ಪ್ರವಾಸ

Dwarka Tour: ದ್ವಾರಕೆಗೆ ಹೋದಾಗ ಏನೇನು ನೋಡಬಹುದು?

ನಿರ್ದಿಷ್ಟ ಯೋಜನೆ ಮತ್ತು ಸ್ಥಳೀಯ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ಕಡಿಮೆ ಬಜೆಟ್‌ನಲ್ಲಿ ಸಂಪೂರ್ಣ ದ್ವಾರಕವನ್ನು ಸುತ್ತಾಡಲು (Dwarka Tour) ಸಾಧ್ಯವಿದೆ. ಪುರಾತನ ದೇವಾಲಯ, ಸುಂದರವಾದ ಕಡಲತೀರಗಳೊಂದಿಗೆ ಅತ್ಯಾಕರ್ಷಕ ತಾಣದಲ್ಲಿ ಸುಂದರವಾದ ಪ್ರವಾಸ ಅನುಭವವನ್ನು ನಮ್ಮದಾಗಿಸಬಹುದು.

VISTARANEWS.COM


on

By

Dwarka Tour
Koo

ದ್ವಾರಕಾ ಹೆಸರು ಕೇಳಿದಾಕ್ಷಣವೇ ಮನಸ್ಸು ಪ್ರಫುಲ್ಲವಾಗುತ್ತದೆ. ಹಿಂದೂಗಳಿಗೆ ಅಯೋಧ್ಯೆ (ayodhya) ರಾಮ ಮಂದಿರದಷ್ಟೇ (ram mandir) ಪವಿತ್ರವಾದ ಮತ್ತೊಂದು ಕ್ಷೇತ್ರ ದ್ವಾರಕಾ (Dwarka Tour). ಭಾರತದ ಪಶ್ಚಿಮ ಕರಾವಳಿಯ ಗುಜರಾತ್ (gujarat) ರಾಜ್ಯದಲ್ಲಿರುವ ದ್ವಾರಕಾ ಆಳವಾದ ಆಧ್ಯಾತ್ಮಿಕ, ಐತಿಹಾಸಿಕ ಮತ್ತು ನೈಸರ್ಗಿಕ ಸೌಂದರ್ಯಗಳನ್ನು ಹೊಂದಿರುವ ಪಟ್ಟಣವಾಗಿದೆ. ಬಜೆಟ್ ಸ್ನೇಹಿ (Budget Friendly) ಪ್ರವಾಸ ಮಾಡುವ ಯೋಚನೆ ಇದ್ದರೆ ದ್ವಾರಕವನ್ನು ಅನ್ವೇಷಿಸಬಹುದು.

ದ್ವಾರಕಾದ ಪ್ರಾಚೀನ ದೇವಾಲಯಗಳು, ಸುಂದರ ಕಡಲತೀರಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತದೆ. ಇದು ದೂರದೂರುಗಳಿಂದ ಪ್ರವಾಸಿಗರನ್ನು ಹಾಗೂ ಯಾತ್ರಿಕರನ್ನು ತನ್ನತ್ತ ಚುಂಬಕದಂತೆ ಸೆಳೆಯುತ್ತದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕೃಷ್ಣನ ನಗರಿಯಲ್ಲಿ ಪ್ರವಾಸಿಗರು ಬಜೆಟ್ ಸ್ನೇಹಿಯಾಗಿ ಸುತ್ತಾಡ ಬಹುದಾದ ಹಲವಾರು ಪ್ರದೇಶಗಳಿವೆ.


ಪ್ರಾಚೀನ ದೇವಾಲಯಗಳು

ದ್ವಾರಕಾವು ಚಾರ್ ಧಾಮ್ ತೀರ್ಥಯಾತ್ರಾ ಸ್ಥಳಗಳಲ್ಲಿ ಮತ್ತು ಶ್ರೀಕೃಷ್ಣನ ಪ್ರಾಚೀನ ಸಾಮ್ರಾಜ್ಯದಲ್ಲಿ ಸ್ಥಾನ ಪಡೆದಿರುವುದರಿಂದ ಅದು ಆಧ್ಯಾತ್ಮಿಕ ನೆಲೆಯಾಗಿದೆ. ಬಜೆಟ್ ಸ್ನೇಹಿ ಪ್ರಯಾಣ ಮಾಡಲು ಶ್ರೀಕೃಷ್ಣ ಸಮರ್ಪಿತ ದ್ವಾರಕಾಧೀಶ ದೇವಾಲಯ ಅಥವಾ ನಾಗೇಶ್ವರ ಜ್ಯೋತಿರ್ಲಿಂಗ ದೇವಾಲಯದಂತಹ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಬಹುದು. ಇದು ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು, ಭಕ್ತರು ಮತ್ತು ಸಂದರ್ಶಕರಿಗೆ ಉಚಿತ ಪ್ರವೇಶವನ್ನು ಕಲ್ಪಿಸುತ್ತದೆ. ಯಾವುದೇ ವೆಚ್ಚವಿಲ್ಲದೆ ಇಲ್ಲಿ ದೈವಿಕ ವಾತಾವರಣವನ್ನು ಅನುಭವಿಸಬಹುದು. ಇದಲ್ಲದೇ ಪವಿತ್ರ ಸ್ಥಳಗಳಾದ ರುಕ್ಮಿಣಿ ದೇವಿ ದೇವಸ್ಥಾನ, ಗೋಮತಿ ಘಾಟ್ ಮತ್ತು ಹಿಂದೂ ಪುರಾಣಗಳಲ್ಲಿ ಗಮನಾರ್ಹವಾದ ಬೆಟ್ ದ್ವಾರಕಾ ದ್ವೀಪಕ್ಕೆ ಭೇಟಿ ನೀಡಬಹುದು. ಇದು ಎಲ್ಲರಿಗೂ ಮುಕ್ತವಾಗಿದೆ.


ರಮಣೀಯ ಕಡಲತೀರಗಳು

ದ್ವಾರಕಾವು ಪ್ರಾಚೀನ ಕಡಲತೀರಗಳು ಮತ್ತು ಕರಾವಳಿ ಪ್ರದೇಶಗಳನ್ನು ಹೊಂದಿದೆ. ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು, ವಿಶ್ರಾಂತಿ ಪಡೆಯಲು ಜೊತೆಗೆ ಅರೇಬಿಯನ್ ಸಮುದ್ರದ ಸ್ಪಷ್ಟ ನೋಟವನ್ನು ಕಾಣಲು, ವಿಹಂಗಮ ಸೂರ್ಯಾಸ್ತ, ಒಂಟೆ ಸವಾರಿ, ಬೀಚ್ ಪಿಕ್ನಿಕ್‌ಗಳನ್ನು ಇಲ್ಲಿ ಆನಂದಿಸಬಹುದು. ಇದರೊಂದಿಗೆ ಬೀಟ್ ದ್ವಾರಕಾ ಬೀಚ್, ಗೋಪಿ ತಲವ್ ಮತ್ತು ಓಖಾ-ಮಧಿ ಬೀಚ್ ನಲ್ಲಿ ಶಾಂತಿಯುತ ಪರಿಸರದಲ್ಲಿ ಈಜು, ಸೂರ್ಯನ ಸ್ನಾನ ಮತ್ತು ಪಕ್ಷಿ ವೀಕ್ಷಣೆಯನ್ನು ನಡೆಸಬಹುದು.

ಸ್ಥಳೀಯ ಸಂಸ್ಕೃತಿ

ವರ್ಷದುದ್ದಕ್ಕೂ ದ್ವಾರಕಾದಲ್ಲಿ ವಿವಿಧ ಸಾಂಸ್ಕೃತಿಕ ಹಬ್ಬಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ. ಇದು ಪ್ರಯಾಣಿಕರಿಗೆ ಸ್ಥಳೀಯ ಸಂಪ್ರದಾಯಗಳು ಮತ್ತು ಪದ್ಧತಿಗಳ ಒಳನೋಟವನ್ನು ತೋರಿಸುತ್ತದೆ. ಪಟ್ಟಣದಲ್ಲಿ ವರ್ಣರಂಜಿತ ಮೆರವಣಿಗೆ, ಸಾಂಸ್ಕೃತಿಕ ಪ್ರದರ್ಶನ ಮತ್ತು ಧಾರ್ಮಿಕ ಆಚರಣೆಗಳನ್ನು ಆನಂದಿಸಬಹುದು. ಜನ್ಮಾಷ್ಟಮಿ, ದೀಪಾವಳಿ ಮತ್ತು ಹೋಳಿ ಹಬ್ಬಗಳು ಇಲ್ಲಿ ಅತ್ಯಂತ ವೈಭವದಿಂದ ನಡೆಯುತ್ತದೆ. ಅಲ್ಲದೆ, ಗರ್ಬಾ ಮತ್ತು ದಾಂಡಿಯಾ ರಾಸ್ ನೃತ್ಯಗಳು, ಸಾಂಪ್ರದಾಯಿಕ ಸಂಗೀತ ಕಛೇರಿಗಳು ಮತ್ತು ಪಟ್ಟಣದ ವಿವಿಧ ಸ್ಥಳಗಳಲ್ಲಿ ನಡೆಯುವ ಜಾನಪದ ಕಲಾ ಪ್ರದರ್ಶನಗಳನ್ನು ವೀಕ್ಷಿಸಲು ತಪ್ಪಿಸಿಕೊಳ್ಳಬೇಡಿ. ಇದು ದ್ವಾರಕೆಯ ಸಂಸ್ಕೃತಿಯ ರೋಮಾಂಚಕ ಅನುಭವವನ್ನು ಕೊಡುತ್ತದೆ.


ಗುಜರಾತಿ ಖಾದ್ಯ

ದ್ವಾರಕಾ ಪ್ರವಾಸವು ಅಲ್ಲಿನ ಗುಜರಾತಿ ಖಾದ್ಯಗಳನ್ನು ಸವಿಯದೇ ಪೂರ್ಣಗೊಳ್ಳುವುದಿಲ್ಲ. ಸ್ಥಳೀಯ ತಿನಿಸುಗಳು ಅಥವಾ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿ ಧೋಕ್ಲಾ, ಖಾಂಡ್ವಿ ಅಥವಾ ಥೇಪ್ಲಾ ಮೊದಲಾದ ಭಕ್ಷ್ಯಗಳನ್ನು ಸವಿಯಬಹುದು. ಇದರೊಂದಿಗೆ ಪಟ್ಟಣದಲ್ಲಿ ಖಿಚು, ಫಫ್ಡಾ, ಜಲೇಬಿ-ಫಫ್ಡಾ ಸೇರಿದಂತೆ ಕೆಲವು ಪ್ರಸಿದ್ಧ ಭಕ್ಷ್ಯಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತದೆ.

ಇದನ್ನೂ ಓದಿ: Summer Tour: ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!

ಕೈಗೆಟುಕುವ ದರದಲ್ಲಿ ವಸತಿ

ದ್ವಾರಕಾದಲ್ಲಿ ಬಜೆಟ್‌ಗೆ ಅನುಗುಣವಾದ ಅತಿಥಿ ಗೃಹಗಳು, ವಸತಿಗೃಹಗಳು ಮತ್ತು ಹೊಟೇಲ್ ಗಳು ಲಭ್ಯವಿದೆ. ಸಮಂಜಸವಾದ ದರದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಸ್ವಚ್ಛ ಕೊಠಡಿಗಳನ್ನು ಒದಗಿಸುವ ಬಜೆಟ್ ಸ್ನೇಹಿ ಹೊಟೇಲ್‌ಗಳಲ್ಲಿ ಉಳಿಯಬಹುದು.

ಇದರೊಂದಿಗೆ ದ್ವಾರಕಾದಲ್ಲಿನ ಹಲವಾರು ಅತಿಥಿಗೃಹಗಳು ಮತ್ತು ಬಜೆಟ್ ಸ್ನೇಹಿ ಹೊಟೇಲ್ ಗಳು ರಿಯಾಯಿತಿ ದರದಲ್ಲಿ ಹತ್ತಿರದ ಆಕರ್ಷಣೆಗಳಿಗೆ ವಸತಿ, ಊಟ ಮತ್ತು ಸಾರಿಗೆಯನ್ನು ಒಳಗೊಂಡಿರುವ ಪ್ಯಾಕೇಜ್ ಡೀಲ್‌ಗಳನ್ನು ಒದಗಿಸುತ್ತದೆ. ಹೆಚ್ಚು ಖರ್ಚು ಮಾಡದೇ ಇದರ ಪ್ರಯೋಜನವನ್ನು ಪಡೆಯಬಹುದು.

Continue Reading

ಪ್ರವಾಸ

Manali Tour: ಭೂಲೋಕದ ಸ್ವರ್ಗ ಮನಾಲಿಗೆ ಪ್ರವಾಸ ಮಾಡಲು ಯಾವ ಸಮಯ ಸೂಕ್ತ?

ಮನಾಲಿಯಲ್ಲಿ ಪ್ರತಿಯೊಂದು ಋತುವು ಒಂದೊಂದು ರೀತಿಯ ಆಕರ್ಷಣೆಯನ್ನು ಹೊಂದಿರುತ್ತದೆ. ವರ್ಷವಿಡೀ ಇಲ್ಲಿ ಸಂಭ್ರಮಿಸಲು ಸಾಕಷ್ಟು ಕಾರಣಗಳೂ ಸಿಗುತ್ತವೆ. ಹಾಗಾದರೆ ನೀವು ಯಾವಾಗ ಮನಾಲಿಗೆ ಪ್ರವಾಸ (Manali Tour) ಹೊರಡಬೇಕು ಎಂದು ಕೊಂಡಿದ್ದೀರಿ? ಮನಾಲಿಗೆ ಹೋಗಲು ಯಾವ ಸಮಯ ಸೂಕ್ತ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Manali Tour
Koo

ನಗರದ ಜಂಜಾಟದಿಂದ ದೂರ ಪ್ರಕೃತಿಯ ಮಡಿಲಲ್ಲಿ ಕುಳಿತು ಕೆಲವು ದಿನ ಕಳೆದು ಬರಬೇಕು ಎನ್ನುವ ಯೋಚನೆ ಬಂದಾಗ ಮನದಲ್ಲಿ ಮನಾಲಿ (Manali Tour), ಹಿಮಾಚಲ ಪ್ರದೇಶದ (himachal pradesh) ನೆನಪಾಗುತ್ತದೆ. ಒಂದೆಡೆ ಬೇಸಿಗೆಯ (summer) ಬಿಸಿಲಿನಿಂದ ಕಂಗೆಟ್ಟು ತಂಪಾದ ಪ್ರದೇಶಗಳಾದ ಮನಾಲಿ, ಹಿಮಾಚಲ ಪ್ರದೇಶಕ್ಕೆ ಹೋಗಿ ಬರಬೇಕು ಎನ್ನುವ ಯೋಜನೆ ಇದ್ದರೆ ಈಗಲೇ ಪ್ಲಾನ್ ಮಾಡಿ. ಯಾಕೆಂದರೆ ಇನ್ನು ಹಿಮಾಚಲ ಪ್ರದೇಶದ ಮನಾಲಿಗೆ ಭೇಟಿ ನೀಡಲು ಇದು ಉತ್ತಮ ಸಮಯವಾಗಿದೆ.

ಹಿಮಾಲಯದಲ್ಲಿ ನೆಲೆಯಾಗಿರುವ ಮನಾಲಿ ಪ್ರವಾಸಿಗರಿಗೆ ಪ್ರಶಾಂತವಾದ ಸ್ವರ್ಗವಾಗಿದೆ. ರೋಮಾಂಚಕ ದೃಶ್ಯವಾಳಿಗಳು ಮತ್ತು ಅತ್ಯಾಕರ್ಷಕ ಸಾಹಸಗಳನ್ನು ಇಲ್ಲಿ ಆನಂದಿಸಬಹುದು. ಜೊತೆಗೆ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತು ಸಾಂಸ್ಕೃತಿಕ ಸಂಭ್ರಮವನ್ನು ಆನಂದಿಸಬಹುದು.

ಮೋಡಿ ಮಾಡುವ ಈ ತಾಣವು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಇಲ್ಲಿನ ಹವಾಮಾನ ಪರಿಸ್ಥಿತಿ ಮತ್ತು ಅಲ್ಲಿ ಲಭ್ಯವಿರುವ ಚಟುವಟಿಕೆಗಳನ್ನು ಪರಿಗಣಿಸಿ ಮನಾಲಿಗೆ ಭೇಟಿ ನೀಡುವುದು ಒಳ್ಳೆಯದು.


ವಸಂತ ಋತು (ಮಾರ್ಚ್‌ನಿಂದ ಜೂನ್)

ಹೂವುಗಳು ಅರಳಲು ಪ್ರಾರಂಭಿಸಿದಾಗ ಮತ್ತು ಎಲ್ಲವೂ ಹಸಿರಿನಿಂದ ಆವೃತವಾದಾಗ ಮನಾಲಿಯಲ್ಲಿ ವಸಂತಕಾಲವಾಗಿದೆ. ಅಲ್ಲಿ ಪ್ರಕೃತಿಯು ದೀರ್ಘ ಚಳಿಗಾಲದ ಅನಂತರ ಮತ್ತೆ ಜೀವ ತುಂಬಿಕೊಂಡಂತೆ ಭಾಸವಾಗುತ್ತದೆ ಮಾರ್ಚ್ ತಿಂಗಳು ವಸಂತಕಾಲದ ಆರಂಭವನ್ನು ಸಂಕೇತಿಸುತ್ತದೆ. ಆಗ ಇಲ್ಲಿ 10 ಡಿಗ್ರಿ ಸೆಲ್ಸಿಯಸ್ ನಿಂದ 25 ಡಿಗ್ರಿ ಸೆಲ್ಸಿಯಸ್ ವರೆಗಿನ ಮಧ್ಯಮ ತಾಪಮಾನವನ್ನು ಹೊಂದಿರುತ್ತದೆ, ಇದರಿಂದಾಗಿ ದಿನದಲ್ಲಿ ಬಿಸಿಲು ಮತ್ತು ಬೆಚ್ಚಗಿದ್ದರೆ ರಾತ್ರಿ ತಂಪಾಗಿರುತ್ತದೆ. ಟ್ರೆಕ್ಕಿಂಗ್, ಪ್ಯಾರಾಗ್ಲೈಡಿಂಗ್ ಮುಂತಾದ ಹೊರಾಂಗಣ ಚಟುವಟಿಕೆಗಳಿಗೆ ಇದು ಸೂಕ್ತ ಸಮಯವಾಗಿದೆ.

ಏಪ್ರಿಲ್- ಮೇ ತಿಂಗಳು ಇಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ಸೇಬು, ಚೆರ್ರಿ ಹೂವುಗಳಿಂದ ಪ್ರಕೃತಿ ಶೃಂಗಾರಗೊಳ್ಳುತ್ತದೆ. ಗುಲಾಬಿ, ಕೆಂಪು, ಬಿಳಿ, ನೇರಳೆ ಮತ್ತು ಗುಲಾಬಿ ಬಣ್ಣಗಳಿಂದ ಹಿಮದಿಂದ ಆವೃತವಾದ ಪರ್ವತಗಳ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳ ರಮಣೀಯ ಸೌಂದರ್ಯ ಚಿತ್ರ ಬಿಡಿಸಿದಂತೆ ಭಾಸವಾಗುತ್ತದೆ.

ಬೇಸಿಗೆ (ಜೂನ್‌ನಿಂದ ಸೆಪ್ಟೆಂಬರ್)

ಬೇಸಿಗೆಯ ಋತುವಿನಲ್ಲಿ ಮನಾಲಿಯು ದಿನದಿಂದ ದಿನಕ್ಕೆ ಬೆಚ್ಚಗಾಗಲು ಪ್ರಾರಂಭಿಸುತ್ತದೆ. ಆದರೂ ರಾತ್ರಿಗಳು ಇಲ್ಲಿ ಆರಾಮದಾಯಕವಾಗಲು ಸಾಕಷ್ಟು ತಂಪಾಗಿರುತ್ತದೆ. ಜೂನ್ ತಿಂಗಳಿನಲ್ಲಿ ಈ ಗಿರಿಧಾಮಕ್ಕೆ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ. ಈ ಮೂರು ತಿಂಗಳು ತಾಪಮಾನ 15 C ಮತ್ತು 30 C ನಡುವೆ ಇರುತ್ತದೆ. ಬಿಯಾಸ್ ನದಿಯ ದಡದಲ್ಲಿ ಸುಂದರವಾದ ದೃಶ್ಯ ವೀಕ್ಷಣೆಯನ್ನು ಮಾಡಬಹುದು.

ಜುಲೈ-ಆಗಸ್ಟ್ ಇಲ್ಲಿ ಮಳೆ ಇರುತ್ತದೆ. ಎಲ್ಲೆಡೆ ವರ್ಣರಂಜಿತ ಹೂವುಗಳಿಂದ ತುಂಬಿದ ಎಲೆಗೊಂಚಲುಗಳಿಂದ ತುಂಬಿದ ಹಸಿರು ಕಣಿವೆಗಳಾಗಿ ಮಾರ್ಪಡಿಸುತ್ತದೆ. ಮಾನ್ಸೂನ್ ಸಮಯದಲ್ಲಿ ಸಾಹಸ ಚಟುವಟಿಕೆಗಳು ಸೀಮಿತವಾಗಿದ್ದರೂ ಜಲಪಾತಗಳು, ಹೂಬಿಡುವ ಕಣಿವೆಗಳು, ಮಂಜಿನಿಂದ ಆವೃತವಾದ ಪರ್ವತಗಳನ್ನು ಕಣ್ತುಂಬಿಕೊಳ್ಳಬಹುದು.


ಶರತ್ಕಾಲ (ಅಕ್ಟೋಬರ್‌ನಿಂದ ನವೆಂಬರ್)

ಸ್ಪಷ್ಟವಾದ ಆಕಾಶ, ಬೆಚ್ಚಗಿನ ದಿನಗಳು ಮತ್ತು ಆಹ್ಲಾದಕರ ರಾತ್ರಿಗಳೊಂದಿಗೆ ಶರತ್ಕಾಲವು ಸುಂದರವಾಗಿರುತ್ತದೆ. ವ್ಯಾಪಕವಾದ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಅಕ್ಟೋಬರ್ ಮಾನ್ಸೂನ್ ನಂತರದ ಅವಧಿಯಾಗಿದ್ದು, ಸುತ್ತಮುತ್ತಲಿನ ಪ್ರಕೃತಿಯು ಕಿತ್ತಳೆ, ಕೆಂಪು, ಹಳದಿ ಮತ್ತು ಗೋಲ್ಡನ್ ಬ್ರೌನ್‌ಗಳ ವರ್ಣಗಳಿಂದ ಅಲಂಕರಿಸಲ್ಪಡುತ್ತದೆ. ಎಲೆಗಳು ತಮ್ಮ ಮೂಲ ಹಸಿರು ಬಣ್ಣವನ್ನು ಕಳೆದುಕೊಂಡು ಚಿನ್ನದ ಬಣ್ಣ ಪಡೆಯುತ್ತದೆ. ದಿನದ ತಾಪಮಾನ 10 C ನಿಂದ 25 C ವರೆಗೆ ಇರುತ್ತದೆ. ಇದರಿಂದಾಗಿ ಟ್ರೆಕ್ಕಿಂಗ್, ಕ್ಯಾಂಪಿಂಗ್, ಮೌಂಟೇನ್ ಬೈಕಿಂಗ್ ಗಳಿಗೆ ಇದು ಸೂಕ್ತ ಸಮಯವಾಗುವುದು.

ನವೆಂಬರ್‌ನಲ್ಲಿ ತಂಪಾದ ವಾತಾವರಣ ಚಾರಣ ಅಥವಾ ಕ್ಯಾಂಪ್‌ಸೈಟ್‌ಗಳಂತಹ ಸಾಕಷ್ಟು ಹೊರಾಂಗಣ ಚಟುವಟಿಕೆಗಳಿಗೆ ಪೂರಕವಾಗಿರುತ್ತದೆ. ಈ ತಿಂಗಳ ಅಂತ್ಯದ ವೇಳೆಗೆ ಶೀತ ಅಲೆಗಳು ಕಾಣಿಸುವುದರಿಂದ ಮುನ್ನೆಚ್ಚರಿಕೆಯಾಗಿ ಸರಿಯಾದ ಬಟ್ಟೆಯನ್ನು ಹೊಂದಿರುವುದು ಅಗತ್ಯವಿರುತ್ತದೆ. ಪ್ರವಾಸಿಗರು ಇಲ್ಲಿ ದೀಪಾವಳಿ ದಸರಾದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಲು ಇದು ಸೂಕ್ತ ಸಮಯ.

ಇದನ್ನೂ ಓದಿ: Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

ಚಳಿಗಾಲ (ಡಿಸೆಂಬರ್‌ನಿಂದ ಫೆಬ್ರವರಿ)

ಹಿಮಪಾತವು ಮನಾಲಿಯ ಸುತ್ತಲಿನ ಬೆಟ್ಟಗಳನ್ನು ಅದರ ಬಿಳಿ ಹೊದಿಕೆಯ ಅಡಿಯಲ್ಲಿ ಆವರಿಸಿದಾಗ ಚಳಿಗಾಲವು ಆಗಮಿಸುತ್ತದೆ, ಈಗ ಇಲ್ಲಿ ಸ್ನೋಬಾಲ್‌ಗಳೊಂದಿಗೆ ಆಟವಾಡಬಹುದು. ಡಿಸೆಂಬರ್ ಚಳಿಗಾಲದ ಆರಂಭವಾಗಿರುತ್ತದೆ. ಇಡೀ ಕಣಿವೆಯ ನೆಲದ ಸುತ್ತಲೂ ಶೂನ್ಯ ತಾಪಮಾನ ಉಂಟಾಗುತ್ತದೆ. ಇದರ ಪರಿಣಾಮ ಇಡೀ ಭೂದೃಶ್ಯವು ಹಿಮದಿಂದ ಆವೃತ್ತವಾಗುವುದು. ಸ್ಕೀಯಿಂಗ್, ಸ್ನೋಬೋರ್ಡಿಂಗ್, ಸ್ನೋಮೊಬೈಲಿಂಗ್, ಮುಂತಾದ ವಿವಿಧ ರೀತಿಯ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಸಾಹಸ ಪ್ರಿಯರು ಈಗ ಇಲ್ಲಿ ಸೇರುತ್ತಾರೆ.

ಮನಾಲಿಯ ಗರಿಷ್ಠ ಚಳಿಗಾಲ ತಿಂಗಳು ಜನವರಿ ಮತ್ತು ಫೆಬ್ರವರಿ. ಈ ಅವಧಿಯಲ್ಲಿ, ತಾಪಮಾನವು -5 C ಮತ್ತು 10 C ನಡುವೆ ಇರಬಹುದು. ಈ ಸಮಯದಲ್ಲಿ ಭಾರೀ ಹಿಮಪಾತ ಉಂಟಾಗುತ್ತದೆ.

Continue Reading
Advertisement
mumbai hoarding collapse
ಪ್ರಮುಖ ಸುದ್ದಿ10 mins ago

Hoarding Collapse: ಹೋರ್ಡಿಂಗ್‌ ಕುಸಿತದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿಕೆ, ಇನ್ನಷ್ಟು ಜನ ಅದರಡಿಯಲ್ಲಿ

Vertigo Problem
ಆರೋಗ್ಯ35 mins ago

Vertigo Problem: ನಿಮಗೆ ಇದ್ದಕ್ಕಿದ್ದಂತೆ ತಲೆ ಸುತ್ತುತ್ತಿದೆಯೆ? ಈ ವಿಷಯ ತಿಳಿದುಕೊಂಡಿರಿ

king dasharatha dhavala dharini
ಅಂಕಣ39 mins ago

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

karnataka weather Forecast
ಮಳೆ1 hour ago

Karnataka weather: ವ್ಯಾಪಕ ಮಳೆಯೊಂದಿಗೆ 60 ಕಿ.ಮೀ ವೇಗದಲ್ಲಿ ಅಪ್ಪಿಳಿಸಲಿದೆ ಗಾಳಿ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Food Tips Kannada
ಆಹಾರ/ಅಡುಗೆ2 hours ago

Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

Narendra Modi
ದೇಶ3 hours ago

Narendra Modi: ಇಂದು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ ಜತೆಗೆ ಮೋದಿ ಕಾರ್ಯಕ್ರಮ ಏನೇನು?

Dina Bhavishya
ಭವಿಷ್ಯ3 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

IPL 2024
ಪ್ರಮುಖ ಸುದ್ದಿ7 hours ago

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

Prajwal Revanna Case
ಕರ್ನಾಟಕ8 hours ago

Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Hoarding
ಸಂಪಾದಕೀಯ8 hours ago

ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ13 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ13 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ13 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ14 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ14 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ20 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 days ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಟ್ರೆಂಡಿಂಗ್‌