ಧವಳ ಧಾರಿಣಿ ಅಂಕಣ: ಕಲ್ಯಾಣ ರಾಜ್ಯ: ಬಹುಜನ ಸುಖಕ್ಕಾಗಿ, ಬಹುಜನ ಹಿತಕ್ಕಾಗಿ - Vistara News

ಅಂಕಣ

ಧವಳ ಧಾರಿಣಿ ಅಂಕಣ: ಕಲ್ಯಾಣ ರಾಜ್ಯ: ಬಹುಜನ ಸುಖಕ್ಕಾಗಿ, ಬಹುಜನ ಹಿತಕ್ಕಾಗಿ

ಭಾರತೀಯ ಪರಂಪರೆಯ ಪ್ರಸಿದ್ಧ ರಾಜರುಗಳೆಲ್ಲ ಅಧಿಕಾರ ಚಲಾಯಿಸುವುದು ಜನಸೇವೆಗಾಗಿ ಎಂದೇ ಭಾವಿಸಿದ್ದರು. ಚುನಾವಣೆ ಮುಗಿದು ಹೊಸ ಸರಕಾರ ಬಂದ ಈ ಹೊತ್ತಿನಲ್ಲಿ ಚುನಾವಣೆಯ ಪ್ರಚಾರದಲ್ಲಿನ ದ್ವೇಷಗಳನ್ನು ಮರೆತು ಬುದ್ಧ ಹೇಳಿದ ಬಹುಜನ ಸುಖಾಯ ಬಹುಜನ ಹಿತಾಯ ಎನ್ನುವ ಕಲ್ಯಾಣ ರಾಜ್ಯದ ಸ್ಥಾಪನೆಯಾಗುವುದು ಮುಖ್ಯ.

VISTARANEWS.COM


on

king dasharatha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜತ್ವವೆನ್ನುವದು ಭೋಗವಲ್ಲ, ಕರ್ತವ್ಯ ನಿಭಾಯಿಸುವಿಕೆಯ ಹೊಣೆಗಾರಿಕೆ

dhavala dharini by Narayana yaji

ಹಿಂದಿನ ಸಂಚಿಕೆಯಲ್ಲಿ ಪ್ರಾಚೀನ ಭಾರತದಲ್ಲಿನ ಗಣರಾಜ್ಯ ಪದ್ಧತಿ ಮತ್ತು ನೇತಾರನ ಗುಣಗಳು ಹೇಗಿರಬೇಕೆನ್ನುವುದನ್ನು ನೋಡಿದ್ದೆವು.

ಅಗ್ನೇ ಪವಸ್ವ ಸ್ವಪಾSಅಸ್ಮೇ ವರ್ಚಃಸುವೀರ್ಯಮ್ I
ದಧದ್ರಯಿಂ ಮಯಿ ಪೋಷಮ್ I
ಉಪಯಾಮಗ್ರಹೀತೋSಸ್ಯಗ್ನಯೇ ತ್ವಾ ವರ್ಚಸSಏಷ ತೇ
ಯೋನಿರಗ್ನಯೇ ತ್ವಾ ವರ್ಚಸೇ I
ಅಗ್ನೇ ವರ್ಚಸ್ವಿನ್
ವರ್ಚಸ್ವಾಸ್ತ್ವಂ ದೇವೇಷ್ವಸಿ ವರ್ಚಸ್ವಾನಹಂ ಮನುಷ್ಯೇಷು ಭೂಯಾಸಮ್ IIಯ. 8-38II

ಭಾವಾರ್ಥ:- ಸಭಾಪತಿಯೇ ಅಗ್ನಿಯಂತೆ ಪರಿಶುದ್ಧನಾಗಿರು. ವೇದಾಧ್ಯಯವನ್ನು ಪ್ರೋತ್ಸಾಹಿಸು. ಧನವನ್ನು ರಕ್ಷಿಸು. ರಾಜ್ಯದ ವ್ಯವಹಾರಕ್ಕಾಗಿ , ವಿಜ್ಞಾನಮಯವಾದ ನ್ಯಾಯವ್ಯವಹಾರಕಾಗಿ ನಿನ್ನನ್ನು ನಾವು ಸ್ವೀಕರಿಸಿದ್ದೇವೆ. ನೀನು ಸದ್ಗುಣ, ತೇಜಸ್ಸನ್ನು ಹೊಂದಿ ನಮ್ಮನ್ನು ರಕ್ಷಿಸಬೇಕು. ಈ ರಾಜ್ಯವು ನಿನಗೆ ಸುಖದಾಯಕವಾದ ವಾಸಗ್ರಹವಾಗಿದೆ. ವಿಜ್ಞಾನಮಯನಾದ ಪರಮೇಶ್ವರನನ್ನು ನೀನು ಅರಿಯಬೇಕೆಂದು ನಿನ್ನನ್ನು ಪ್ರೇರೇಪಿಸುತ್ತೇವೆ. ಸಕಲ ವಿದ್ಯೆಗಳನ್ನು ತಿಳಿದವನಾದ ನೀನು ಶ್ರೇಷ್ಠ ವಿದ್ವಾಂಸನಾಗಿದ್ದೀಯೆ. ಈ ಎಲ್ಲ ಗುಣಗಳು ಪ್ರಜೆಗಳು ಉತ್ತಮ ಕರ್ಮದಲ್ಲಿ ನಿರತವಾಗಿರುವಂತೆ ಪ್ರೇರೇಪಿಸು.

ರಾಜನಾದವನಿಗೆ ವಿಧಿ ಮತ್ತು ನಿಷೇಧವನ್ನು ವಿಧಿಸುವ ಇಂತಹ ಹಲವಾರು ಮಂತ್ರಗಳು ವೇದಗಳಲ್ಲಿ ಸಿಗುತ್ತವೆ. ಹಿಂದೆಯೇ ಹೇಳಿದಂತೆ ರಾಜತ್ವವನ್ನು ಸಭಾಪತಿಯಾದವ ಭೋಗಕ್ಕಾಗಿ ನೋಡದೇ, ಧರ್ಮಮಾರ್ಗದಲ್ಲಿ ಪಜೆಗಳು ನಡೆಯುವಂತೇ ನೋಡಬೇಕಾಗಿದೆ. ಒಂದುವೇಳೆ ರಾಜನಾದವ ತಪ್ಪಿ ಧರ್ಮಭ್ರಷ್ಟನಾದರೆ ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಆಗ ಈಗಿನಂತೆ ನಿಯಮಿತವಾದ ಅವಧಿಗೆ ಪುನರಾಯ್ಕೆಯೋ ಅಥವಾ ಹೊಸ ನಾಯಕನ ಆಯ್ಕೆಯೋ ಇರಲಿಲ್ಲ. ಗ್ರೀಕ್‌ ಮತ್ತು ರೋಮನ್ ಸಾಮ್ರಾಜ್ಯದಲ್ಲಿಯೂ ರಾಜನನ್ನು ಬದಲಾಯಿಸುವ ಹಕ್ಕು ಇತ್ತು. ಎರಡೂ ಕಡೆಯೂ ಹೆಚ್ಚೂಕಡಿಮೆ ಒಂದೇ ರೀತಿಯ ಆಡಳಿತ ವ್ಯವಹಾರಗಳಿದ್ದವು. ಭಾರತದಲ್ಲಿ ವೇದಗಳ ಮೂಲಕ ಆ ಪದ್ಧತಿಯ ಅಧ್ಯಯನಕ್ಕೆ ಅವಕಾಶವಿದೆ. ಸೆಮೆಟಿಕ್ ಮತಗಳ ಪ್ರಭಾವದಿಂದ ಗ್ರೀಸಿನ ರಾಜತ್ವದ ವಿಧಿ ವಿಧಾನಗಳು ಲುಪ್ತವಾಗಿ ಹೋಗಿವೆ. ರಾಜನಾದವನು ಕರ್ತವ್ಯ ಭ್ರಷ್ಟನಾದರೆ ಆತನನ್ನು ಸಭಾಸದರು ಸಹಿಸುತ್ತಿರಲಿಲ್ಲ. ಅವನನ್ನು ಅಧಿಕಾರದಿಂದ ಇಳಿಸುತ್ತಾರೆ ಎನ್ನುವುದಕ್ಕೆ ವೇನ ಎನ್ನುವ ದೊರೆಯ ಚರಿತ್ರೆಯನ್ನು ಗಮನಿಸಬಹುದು.

ವೇನನೆನ್ನುವವನು ದೊರೆಯಾಗಿರುವ ಕಾಲಕ್ಕೆ ಧರ್ಮವನ್ನು ಉಲ್ಲಂಘಿಸಿದ್ದ. ಪ್ರಜಾಪೀಡಕನಾಗಿದ್ದ. ಆತ ಮೃತ್ಯುವಿನ ಮಗಳಾದ ಸುನೀಥೆ ಮತ್ತು ಅಂಗ ಎನ್ನುವವನ ಮಗನಾಗಿದ್ದ, ಸ್ವಭಾವದಲ್ಲಿ ಕಾಮುಕನಾಗಿದ್ದ. ಲೋಭಿಯಾಗಿದ್ದ ಆತ ಪ್ರಜೆಗಳನ್ನು ಹಿಂಸಿಸುವದರಲ್ಲಿಯೇ ಸಂತಸ ಪಡುತ್ತಿದ್ದ. ಅನ್ಯಾಯದ ರೀತಿಯಲ್ಲಿ ತೆರಿಗೆಯನ್ನು ವಿಧಿಸಿದ್ದ. ಯಜ್ಞದ ಕುರಿತು ಆತನಿಗೆ ತಿರಸ್ಕಾರವಿತ್ತು. “ನ ಯಷ್ಟವ್ಯಂ ನ ಹೋತವ್ಯಂ- ನನ್ನ ರಾಜ್ಯದಲ್ಲಿ ಯಾರೇ ಆಗಲಿ ಯಜ್ಞಗಳನ್ನು ಮಾಡಬಾರದು ಹೋಮಗಳನ್ನು ಮಾಡಬಾರದು” ಎಂದು ಶಾಸನವನ್ನು ವಿಧಿಸಿದ್ದ. ಯಜ್ಞಗಳನ್ನು ತನ್ನ ಕುರಿತೇ ಮಾಡತಕ್ಕದ್ದು; ತನ್ನನ್ನೇ ಪ್ರಜೆಗಳು ಆರಾಧಿಸತಕ್ಕದ್ದು ಎಂದು ಆತ ಘೋಷಿಸಿದ. ಮರೀಚಿಮುನಿಯ ನೇತೃತ್ವದಲ್ಲಿ ಆತನಿಗೆ ಬುದ್ಧಿವಾದವನ್ನು ಹೇಳಲು ಹೋದ ಪ್ರಜೆಗಳನ್ನು ಆತ ಧಿಕ್ಕರಿಸುತ್ತಾನೆ. ಆಗ ಋಷಿಗಳು ಮತ್ತು ಇತರ ಪ್ರಜೆಗಳು ಆತನ ವಿರುದ್ಧ ಬಂಡಾಯವೆದ್ದು ಆತನನ್ನು ಸಂಹರಿಸಿಬಿಡುತ್ತಾರೆ. ನಂತರ ಆತನ ದೇಹವನ್ನು ಕಡೆದಾಗ ಪ್ರಥು ಜನಿಸುತ್ತಾನೆ. ಆತ ರಾಜ್ಯದ ಅಧಿಕಾರವನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡುತ್ತಾನೆ ಎನ್ನುವ ವಿಷಯ ಹರಿವಂಶದಲ್ಲಿ ಬರುತ್ತದೆ. ರಾಜ ನಿರಂಕುಶನಾದಾಗ ಆತನ ಮೇಲೆ ಧರ್ಮದಂಡವನ್ನು ಪ್ರಯೋಗಿಸಲು ಋಷಿಮುನಿಗಳು ಹಿಂಜರಿಯುತ್ತಿರಲ್ಲ. ಇದು ರಾಜತ್ವದ ವಿರುದ್ಧ ನಡೆಯುವ ವಿದ್ರೋಹವಲ್ಲ. ವಿದ್ರೋಹದಲ್ಲಿ ನೇತೃತ್ವವನ್ನು ವಹಿಸಿದವರೇ ಮುಂದೆ ರಾಜ್ಯವನ್ನು ಆಳುತ್ತಾರೆ. ಇಲ್ಲಿ ರಾಜ್ಯದ ನೇತೃತ್ವವನ್ನು ವಹಿಸಲು ಅವರು ಯಾರೂ ಮುಂದೆ ಬರದೇ ವೇನನ ಮಗನನ್ನೇ ರಾಜನನ್ನಾಗಿಸಿ ಆತನಿಂದ ಸಮರ್ಥವಾಗಿ ರಾಜ್ಯವಾಳುವಂತೆ ನೋಡಿಕೊಳ್ಳುತ್ತಾರೆ. ಇತಿಹಾಸವನ್ನು ಗಮನಿಸಿದರೆ ನಂದರನ್ನು ಉರುಳಿಸಿ ಚಂದ್ರಗುಪ್ತನನ್ನು ರಾಜನನ್ನಾಗಿ ಮಾಡಿದ ಆಚಾರ್ಯ ಚಾಣಕ್ಯನ ಉದಾಹರಣೆಯಿದೆ.

ರಾಜತ್ವವಿರುವುದು ಹೊಣೆಗಾರಿಕೆಯನ್ನು ನಿಭಾಯಿಸಲು

ಭಾರತೀಯ ಪರಂಪರೆಯ ಪ್ರಸಿದ್ಧ ರಾಜರುಗಳೆಲ್ಲರೂ ಅಧಿಕಾರವನ್ನು ಚಲಾಯಿಸುವುದು ಜನಸೇವೆಗಾಗಿ ಎಂದೇ ಭಾವಿಸುತ್ತಿದ್ದರು. ಬೃಹದಾರಣ್ಯಕ ಉಪನಿಷತ್ತಿನಲ್ಲಿ ರಾಜನ ಹೊಣೆಗಾರಿಕೆಯ ಮಹತ್ವದ ವಿಷವನ್ನು ಪ್ರಸ್ತಾಪಿಸುತ್ತಾ ʼʼರಾಜನಾದವನು ಧರ್ಮವನ್ನು ಸದಾಕಾಲವೂ ಕಾಪಾಡಬೇಕು; ಎಲ್ಲ ಪ್ರಜೆಗಳನ್ನೂ ಸಮಾನ ಭಾವದಿಂದ ನೋಡಬೇಕು. ಬಲಿಷ್ಟರು ದುರ್ಬಲರನ್ನು ಶೋಷಿಸದಂತೆ ನೋಡಬೇಕು” ಎಂದು ಹೇಳಿದೆ. ರಾಜ ತಪ್ಪು ಮಾಡಿದರೆ ಪ್ರಜೆಗಳು ನೇರವಾಗಿ ಆತನನ್ನು ಪ್ರಶ್ನಿಸಬಹುದಾಗಿತ್ತು. ರಾಮಾಯಣದಲ್ಲಿ ಸಗರನ ಕಥೆ ಬರುತ್ತದೆ. ಆತ ಸಮರ್ಥನಾದ ರಾಜನಾಗಿದ್ದ. ಆದರೆ ಆತನ ಮಗ ಅಸಮಂಜಸನೆನ್ನುವವ ಪ್ರಜಾಪೀಡಕನಾಗಿದ್ದ. ಆತ ಅಯೋಧ್ಯೆಯಲ್ಲಿನ ಶಿಶುಗಳನ್ನು ಸರಯೂ ನದಿಯಲ್ಲಿ ಮುಳುಗಿಸಿ ಅವರ ಆಕ್ರಂದನವನ್ನು ನೋಡಿ ಸಂತೋಷಪಡುತ್ತಿದ್ದ. ಆಗ ಪ್ರಜೆಗಳೆಲ್ಲರೂ ಸಗರನ ಬಳಿಬಂದು ಅಸಮಂಜಸನ ಕ್ರೌರ್ಯದ ವಿರುದ್ಧ ದೂರು ಕೊಡುತ್ತಾರೆ. ಸಗರ ತನ್ನ ಮಗ ಎನ್ನುವ ಯಾವ ಮಮಕಾರವನ್ನು ಇಟ್ಟುಕೊಳ್ಳದೇ ಆತನನ್ನು ರಾಜ್ಯದಿಂದ ಗಡಿಪಾರು ಮಾಡಿ ಅರಣ್ಯಕ್ಕೆ ಕಳಿಸುತ್ತಾನೆ. ಆತನ ಮಗ ಅಂಶುಮಂತನನ್ನು ಪಟ್ಟಕ್ಕೆ ಏರಿಸುತ್ತಾನೆ. ಅಂಶುಮಂತ ಧರ್ಮಪರಾಯಣನಾಗಿದ್ದ.

ಭರತನ ಹೆಸರನ್ನು ಎಲ್ಲರೂ ಕೇಳೇ ಇರುತ್ತೇವೆ. ಆತ ತುಂಬಾ ಧರ್ಮಾತ್ಮನಾದ ದೊರೆ. ದುಷ್ಯಂತ ಮತ್ತು ಶಕುಂತಲೆಯರ ಮಗನಾಗಿದ್ದ ಈತನಿಗೆ ಸರ್ವದಮನ ಎನ್ನುವ ಹೆಸರೂ ಇದೆ. ಭರತ ಮಹಾ ತೇಜೋವಂತ ರಾಜನಾಗಿದ್ದವ. ಆತ ಮಹಾ ಪರಾಕ್ರಮಿಯಾಗಿದ್ದ. ಧರ್ಮಮಾರ್ಗದಲ್ಲಿ ಸದಾಕಾಲವೂ ನಡೆಯುತ್ತಿದ್ದ. ಆತನ ವ್ಯಕ್ತಿತ್ವದ ಕಾರಣದಿಂದಲೇ ನಮ್ಮ ದೇಶಕ್ಕೆ ಭರತ ಎನ್ನುವ ಹೆಸರು ಬಂದಿರುವುದು. ಆತನಿಗೆ ಅನೇಕ ಮಕ್ಕಳಿದ್ದರು. ಆದರೆ ಅವರೆಲ್ಲರೂ ನಿಷ್ಪ್ರಯೋಜಕರಾಗಿದ್ದರು. ರಾಜ್ಯದಾಡಳಿತ ನಡೆಸಲು ಸಮರ್ಥರಾಗಿರಲಿಲ್ಲ. ತನ್ನ ನಂತರದಲ್ಲಿ ರಾಜ್ಯವನ್ನು ತನ್ನ ಮಕ್ಕಳೇ ಆಳಬೇಕೆನ್ನುವ ಯಾವ ಮಮಕಾರವನ್ನು ಆತ ಹೊಂದಿರಲಿಲ್ಲ. ಯೋಗ್ಯರು ಮಾತ್ರ ಸಿಂಹಾಸನಕ್ಕೆ ಅರ್ಹರು ಎನ್ನುವುದು ಆತನ ನಿಲುವಾಗಿತ್ತು. ಹಾಗಾಗಿ ಆತ ತನ್ನ ಮಕ್ಕಳನ್ನು ರಾಜ್ಯಕ್ಕೆ ಅನರ್ಹರು ಎಂದು ಘೋಷಿಸಿದ. ಆಗ ದೇವತೆಗಳು ಭರದ್ವಾಜ ಗೋತ್ರದ ವಿತಥನನ್ನು ದತ್ತಕಕ್ಕೆ ತೆಗೆದುಕೊಂಡು ಸಿಂಹಾಸನಾಧಿಪತಿಯನ್ನಾಗಿ ಮಾಡುವಂತೆ ಸೂಚಿಸುತ್ತಾರೆ. ರಾಜನಾದವನಿಗೆ ತನ್ನವೆನ್ನುವ ಮಮಕಾರವಿರಲೇಬಾರದಿತ್ತು.

ವೇದಕಾಲದಲ್ಲಿರುವ ಗಣತಂತ್ರದ ವ್ಯವಸ್ಥೆಯಿಂದ ನಂತರದಲ್ಲಿ ರಾಜ ಪ್ರಭುತ್ವದ ಕಡೆ ಹೊರಳಿದರೂ ಮೂಲತಃ ಉತ್ತಮ ಆಡಳಿತವನ್ನು ನೀಡಬೇಕೆನ್ನುವ ವೇದದ ನಿರ್ವಚನವನ್ನು ಚಾಚೂ ತಪ್ಪದೇ ಪಾಲಿಸಲಾಗುತ್ತಿತ್ತು ಎನ್ನುವುದಕ್ಕೆ ಇನ್ನೂ ಹಲವಾರು ಉದಾಹರಣೆಗಳನ್ನು ಕೊಡಬಹುದು. ಪ್ರಜೆಗಳ ಕರ್ತವ್ಯ ನಿಭಾವಣೆಯಲ್ಲಿ ರಾಜನಾದವ ಅಲಕ್ಷ್ಯ ಮಾಡಲೇ ಕೂಡದು. ಸದಾಕಾಲ ಆತ ತನ್ನ ಕರ್ತವ್ಯದಲ್ಲಿಯೇ ನಿರತನಾಗಿರಬೇಕು. ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ರಾಜನಿಗೆ ಕೇವಲ ಮೂರು ಗಂಟೆಗಳ ಕಾಲ ಮಾತ್ರ ವಿಶ್ರಾಂತಿಗೆ ಅವಕಾಶವನ್ನು ಕೊಟ್ಟಿದ್ದಾನೆ. ಇದನ್ನು ಗಮನಿಸಿದರೆ ರಾಜನ ಕಾರ್ಯಭಾರದ ಗುರುತ್ವ ಮತ್ತು ಶ್ರಮದಾಯಕದ ಅರಿವಾಗುತ್ತದೆ.

ಈ ಕಾಲದಲ್ಲಿ ರಾಜ್ಯದ ನೇತೃತ್ವವೆನ್ನುವುದು ಸಭಾಪತಿ ಎನ್ನುವುದಕ್ಕಿಂತ ಸಿಂಹಾಸನಾಧಿಶ್ವರ ಎನ್ನುವುದು ಹೆಚ್ಚು ಸೂಕ್ತವಾಗುತ್ತದೆ. ರಾಜ ಮತ್ತು ಪ್ರಜೆಗಳಲ್ಲಿ ಅಧಿಕಾರದ ಮತ್ತು ಸ್ಥಾನದ ಅಂತರವಿತ್ತು. ಇಲ್ಲಿ ರಾಜನಾದವನ ಅಧಿಕಾರ ಸ್ಪಷ್ಟವಾಗಿ ಅನುವಂಶೀಯವಾಗಿ ಬದಲಾಗಿರುವುದನ್ನು ಕಾಣುತ್ತೇವೆ. ಹಣ, ಅಂತಸ್ತು, ಅಧಿಕಾರವಿರುವೆಡೆ ನಿರಂಕುಶ ಮನೋಭಾವ ಸಹಜವಾಗಿ ಬಂದುಬಿಡುತ್ತದೆ. ಹಾಗೆ ಆಗಬಾರದು ಎನ್ನುವ ಕಾರಣಕ್ಕೆ ರಾಜನನ್ನು ಸತ್ಯವೆನ್ನುವ ಧರ್ಮದ ಕಟ್ಟಿನಲ್ಲಿ ಬಂಧಿಸಿಡಲಾಯಿತು. ಒಂದು ಅರ್ಥದಲ್ಲಿ ಇವೆಲ್ಲವೂ ಸಂವಿಧಾನವೇ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಧರ್ಮ ಮತ್ತು ಸತ್ಯದ ಕುರಿತು ವಿವರ ಬರುತ್ತದೆ. ಜನಸಮುದಾಯದ ನಾಯಕನಾದವ ತನಗಿಂತ ಬೇರೆ ಯಾರೂ ಇಲ್ಲ, ತಾನೇ ಸರ್ವೋತ್ತಮ ಎಂದು ಭಾವಿಸಿಬಿಡಬಹುದು ಎನ್ನುವ ಕಾರಣಕ್ಕೆ “ತದೇತತ್ ಕ್ಷತ್ರಸ್ಯ ಕ್ಷತ್ರಂ ಯದ್ಧರ್ಮಸ್ತಸ್ಮಾದ್ಧರ್ಮಾತ್ ಪರಂ – ಧರ್ಮವಿದೆಯಲ್ಲ ಅದು ಕ್ಷತ್ರಕ್ಕೂ ಕ್ಷತ್ರವು. ಆದುದರಿಂದ ಧರ್ಮಕ್ಕಿಂತ ಶ್ರೇಷ್ಠವಾದುದು ಇಲ್ಲ” ಎನ್ನುವ ವಿವರವಿದೆ. ಯಾವುದು ಧರ್ಮ ಹಾಗಾದರೆ, “ಯೋ ವೈ ಸಃ ಧರ್ಮಃ ಸತ್ಯ ವೈ ತತ್, ತಸ್ಮಾತ ಸತ್ಯಂ ವದಂತ ಮಾಹುಃ – ಆ ಧರ್ಮವಿದೆಯಲ್ಲ, ಅದು ಸತ್ಯವೇ, ಆದುದರಿಂದ ಸತ್ಯವನ್ನು ಹೇಳುವವನನ್ನು ‘ಧರ್ಮವನ್ನೇ ಹೇಳುತ್ತಾನೆ’ ಎನ್ನುತ್ತಾರೆ”. ಇದು ಕ್ಷತ್ರಿಯತ್ವವನ್ನು ಸತ್ಯವಿಮುಖವಾಗದಂತೆ ಮಾಡುವ ನಿಯಂತ್ರಣವಾಗಿದೆ. ಪ್ರಜೆಗಳನ್ನು ರಕ್ಷಿಸಲು ರಾಜನ ಅಗತ್ಯವಿದೆ. ರಾಜನನ್ನು ಪ್ರಜೆಗಳು ತಮ್ಮ ನಾಯಕನನ್ನಾಗಿ ಆರಿಸುತ್ತಾರೆ. ಆದರೆ ಆತ ಹದ ತಪ್ಪದಂತೆ ನೊಡಲು ʼಅದಂಡೋಸ್ಮಿʼ ಎನ್ನುವಾಗ ʼಧರ್ಮ ದಂಡ್ಯೋಸಿʼʼ ʼನಿನ್ನ ತಲೆಯ ಮೇಲೆ ಧರ್ಮ ದಂಡ ಯಾವತ್ತಿಗೂ ಇರುತ್ತದೆʼ ಎನ್ನುವ ಎಚ್ಚರಿಕೆಯನ್ನು ವೇದೋಪನಿಷತ್ತುಗಳು ನೀಡುತ್ತಲೇ ಬಂದಿವೆ.

ವೇದ ಮತ್ತು ಉಪನಿಷತ್ತಿನ ಕಾಲದ ನಂತರ ಮಹಾಕಾವ್ಯದ ವಿಷಯಕ್ಕೆ ಬಂದಾಗ ರಾಜ್ಯತ್ವವೆನ್ನುವುದು ಅನುವಂಶೀಯತೆಯ ಜೊತೆಗೆ ಪ್ರಭುತ್ವದ ಸ್ವರೂಪವನ್ನೂ ಪಡೆದುಕೊಂಡಿತ್ತು. ಅದರೂ ಮುಂದಿನ ರಾಜನಾಗುವವನನ್ನು ನಿಯುಕ್ತಿ ಮಾಡುವಾಗ ಪ್ರಜೆಗಳ ಅನುಮೋದನೆಯ ಅಗತ್ಯವಿತ್ತು ಎನ್ನುವುದನ್ನು ರಾಮಾಯಣದಲ್ಲಿ ನೊಡಬಹುದು. ಅಯೋಧ್ಯಾಕಾಂಡದಲ್ಲಿ ದಶರಥ “ತನಗೆ ವಯಸ್ಸಾಯಿತು, ಅಧಿಕಾರ ಸಾಕು ಇನ್ನು ರಾಮನಿಗೆ ಯುವರಾಜ ಪಟ್ಟವನ್ನು ಕಟ್ಟುತ್ತೇನೆ” ಎಂದು ಪ್ರಜೆಗಳ ಅನುಮೋದನೆಯನ್ನು ಕೇಳುತ್ತಾನೆ. ಅದಾಗಲೇ ತನ್ನ ಗುಣಗಳಿಂದ ಪ್ರಜಾಜನರ ಮನಸ್ಸನ್ನು ಗೆದ್ದಿದ್ದ ರಾಮನನ್ನು ಪ್ರಜೆಗಳು ಸಂತೋಷದಿಂದಲೇ ಸ್ವೀಕರಿಸುತ್ತಾರೆ. ಕೈಕೇಯಿಯ ಕಾರಣದಿಂದ ರಾಮ ಅರಣ್ಯಕ್ಕೆ ಹೋಗುವಾಗ ಪ್ರಜೆಗಳು ಅರಣ್ಯಕ್ಕೆ ತಾವೂ ಬರುತ್ತೇವೆಂದು ಹೊರಡುತ್ತಾರೆ. ರಾಮನೇ ಅವರನ್ನು ವಂಚಿಸಿ ಅರಣ್ಯಕ್ಕೆ ಹೋಗುವ ಘಟನೆ ರಾಮಾಯಣದಲ್ಲಿ ರೋಚಕವಾಗಿ ಬಂದಿದೆ. ಒಟ್ಟಾರೆಯಾಗಿ ರಾಜತ್ವವೆನ್ನುವುದು ಪ್ರಜೆಗಳ ಒಲವಿನ ಮೇಲೆ ನಿರ್ಧಾರವಾಗುತ್ತಿತ್ತೇ ಹೊರತೂ ತಮ್ಮ ಮನಸ್ಸಿಗೆ ಬಂದಂತೆ ನಿರ್ಧಾರವನ್ನು ಪ್ರಭುತ್ವ ತೆಗೆದುಕೊಳ್ಳುವಂತಿರಲಿಲ್ಲ. ಇಂದಿಗೂ ಶ್ರೇಷ್ಠವಾದ ರಾಜತ್ವಕ್ಕೆ ಉದಾಹರಣೆಯಾಗಿರುವುದು ರಾಮರಾಜ್ಯ. ರಾಮರಾಜ್ಯವೆಂದರೆ ಹೇಗಿತ್ತು ಎನ್ನುವುದಕ್ಕೆ ರಾಮಾಯಣದ ಯುದ್ಧ ಕಾಂಡದ 128ನೆಯ ಸರ್ಗದಲ್ಲಿ ವಿವರವಾದ ವರ್ಣನೆಗಳು ಸಿಗುತ್ತವೆ.

vedic king

ಸರ್ವಂ ಮುದಿತಮೇವಾಸೀತ್ಸರ್ವೋ ಧರ್ಮಪರೋSಭವತ್ I
ರಾಮಮೇವಾನುಪಶ್ಯನ್ತೋ ನಾಭ್ಯಹಿಂಸನ್ಪರಸ್ಪರಮ್ II ರಾ. 128-100 II

ಸಮಸ್ತ ಲೋಕವೂ ಆನಂದಮಯವಾಗಿತ್ತು. ಸಮಸ್ತರೂ ಧರ್ಮಪರಾಯಣರಾಗಿದ್ದರು. ಶ್ರೀರಾಮನನ್ನೇ ಸದಾ ಸಂದರ್ಶಿಸುತ್ತಿದ್ದ ಮತ್ತು ಅವನ ಆದರ್ಶವನ್ನೂ ಅನುಸರಿಸುತ್ತಿದ್ದ ಪ್ರಜೆಗಳಲ್ಲಿ ಎಂದಿಗೂ ಪರಸ್ಪರ ಜಗಳವಾಗುತ್ತಿರಲಿಲ್ಲ. ಒಬ್ಬರು ಮತ್ತೊಬ್ಬರನ್ನು ಹಿಂಸಿಸುತ್ತಿರಲಿಲ್ಲ.

ಇದೊಂದು ಶ್ಲೋಕದ ಮೂಲಕ ರಾಮನ ಆದರ್ಶದ ರಾಜತ್ವವೆನ್ನುವುದು ಹೇಗಿತ್ತು ಎನ್ನುವುದು ಅರ್ಥವಾಗುತ್ತದೆ. ಸಕಲ ಪ್ರಜೆಗಳೂ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದರು. ಪ್ರಜೆಗಳು ರಾಜನ ನಿರ್ಧಾರವನ್ನು ಕಟುವಾಗಿ ಟೀಕಿಸಬಹುದಿತ್ತು ಎನ್ನುವುದನ್ನು ಸೀತಾವಿಯೋಗದಲ್ಲಿ ನೋಡಬಹುದಾಗಿದೆ. ಸೀತೆಯ ಚಾರಿತ್ರ್ಯದ ಕುರಿತು ಮೂಲ ರಾಮಾಯಣದಲ್ಲಿ ಅಗಸ ಹೇಳಿದ ಕಥೆಯಿಲ್ಲ. ರಾಜನ ಗೂಢಚಾರರಿಗೆ ಪ್ರಜೆಗಳು ಕಟ್ಟೆ ಕಟ್ಟೆಯ ಮೇಲೆ, ಮನೆ ಮನೆಗಳಲ್ಲಿ, ಬೀದಿಬೀದಿಗಳಲ್ಲಿ, ರಾವಣನ ಸೆರೆಯಲ್ಲಿರುವ ಸೀತೆಯ ಶೀಲದ ಮೇಲೆ ಸಂಶಯದ ಕುರಿತು ಮಾತಾಡಿಕೊಳ್ಳುತ್ತಿದ್ದರು. ಅದು ರಾಮನ ಕಿವಿಗೆ ತಲುಪುತ್ತದೆ. ಹಾಗಾಗಿ ತಾನು ಪ್ರಜೆಗಳ ಅಭಿಪ್ರಾಯವನ್ನು ಮನ್ನಿಸುವವ ಎನ್ನುವುದನ್ನು ತೋರಿಸಲು ಸೀತೆಯನ್ನು ತ್ಯಜಿಸುವ ನಿರ್ಧಾರಕ್ಕೆ ರಾಮ ಬರುತ್ತಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಪ್ರಾಚೀನ ಭಾರತದ ಗಣತಂತ್ರ ವ್ಯವಸ್ಥೆ ಹೀಗಿತ್ತು!

ಮಹಾಭಾರತದ ಕಾಲಕ್ಕೆ ಬರುವಾಗ ಮಾತ್ರ ಪ್ರಜೆಗಳ ಮಾತಿಗೆ ಬೆಲೆ ಕೊಡುವ ಅಭಿಪ್ರಾಯ ಶಿಥಲವಾಯಿತು. ಇಲ್ಲಿ ರಾಜನಾದವ ಹೇಗೆ ನಡೆಯಬೇಕೆನ್ನುವ ವಿಧಿ ವಿಧಾನಗಳು ಭೀಷ್ಮನಿಂದ ಧರ್ಮರಾಜನಿಗೆ ಉಪದೇಶಿಸಲ್ಪಟ್ಟಿದೆ. ಪಾಂಡವರನ್ನು ಅರಣ್ಯಕ್ಕೆ ಅಟ್ಟುವ ಸಂದರ್ಭದಲ್ಲಿ ಕೆಲವೊಂದಿಷ್ಟು ಪ್ರಜೆಗಳು ಧರ್ಮರಾಜನನ್ನು ಹಿಂಬಾಲಿಸುತ್ತಾರೆ. ಆದರೆ ಆ ಕುರಿತು ಧೃತರಾಷ್ಟ್ರನಾಗಲೀ, ದುರ್ಯೋಧನನಾಗಲೀ ಚಿಂತಿಸುವುದಿಲ್ಲ. ಇಲ್ಲಿ ಪ್ರಭುತ್ವವೆನ್ನುವುದು ಮೇಲಿನಿಂದ ಹೇರಲ್ಪಟ್ಟಿತ್ತು. ಆದರೂ ಶಾಂತಿಪರ್ವದಲ್ಲಿನ ಭೀಷ್ಮರ ಉಪದೇಶದಲ್ಲಿ ನ್ಯಾಯಪರತೆಗೆ ತುಂಬಾ ಮಹತ್ವವನ್ನು ಕೊಟ್ಟಿದೆ. ಮಹತ್ವದ ವಿಷಯವೆಂದರೆ ಇಲ್ಲಿ ಅರ್ಥಶಾಸ್ತ್ರದ ಕುರಿತು ಆಧುನಿಕರೂ ಅಧ್ಯಯನ ಮಾಡುವಂತಹ ವಿಷಯಗಳಿವೆ. ಉತ್ತಮ ಸರಕಾರದ ಆಡಳಿತ ಹೇಗಿರಬೇಕು ಮತ್ತು ಕರಗಳ ಸಂಗ್ರಹದ ವಿಷಯದಲ್ಲಿ ರಾಜನಾದವ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದನ್ನು ವಿವರವಾಗಿ ಹೇಳಿದೆ.

ದಮಯನ್ನಿವ ದಮ್ಯಾನಿ ಶಶ್ವದ್ಭಾರಂ ವಿವರ್ಧಯೇತ್ I
ಮೃದುಪೂರ್ವಂ ಪ್ರಯತ್ನೇನ ಪಾಶಾನಭ್ಯವಹಾರಯೇತ್ IIಶಾಂ.8-88II

ರಾಜನಾದವನು ಕರವನ್ನು ಸ್ವಲ್ಪ ಸ್ವಲ್ಪವೇ ಸಂಗ್ರಹ ಮಾಡಬೇಕು. ಎಳೆಗರುವಿಗೆ ಸ್ವಲ್ಪ ಸ್ವಲ್ಪವೇ ಭಾರವನ್ನು ಹೇರಿ ನಂತರ ಆ ಭಾರವನ್ನು ಹೆಚ್ಚಿಸುವಂತೆ ಕರವನ್ನು ಸಂಗ್ರಹಿಸಬೇಕು. ದುರ್ಬಲರಾದವರಿಂದ ಕರವನ್ನು ಸಂಗ್ರಹಿಸಕೂಡದು. ಹೊಸತಾಗಿ ಪ್ರಾರಂಭಿಸಿದ ಉದ್ಯೋಗದಿಂದ ಕರವನ್ನು ಕೆಲಕಾಲ ಸಂಗ್ರಹಿಸಕೂಡದು. ಹೀಗೆ ಅನೇಕ ವಿವರಗಳಿವೆ. ಇಂದಿನ Tax Holiday ಎನ್ನುವ ಕಲ್ಪನೆಯ ಮೂಲವನ್ನು ಇಲ್ಲಿ ಗುರುತಿಸಬಹುದು. ಇನ್ನು ಮನುಸ್ಮೃತಿಯಲ್ಲಿ ಇವು ಇನ್ನಷ್ಟು ವಿಶದವಾಗಿವೆ.

ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ. ಪ್ರಜಾಪ್ರಭುತ್ವದ ಈ ಬೇರುಗಳು ನಮ್ಮೊಳಗೆ ವೈಜ್ಞಾನಿಕವಾಗಿ ಇವೆ. ಅಂತಿಮವಾಗಿ Good governance ಅಥವಾ ಉತ್ತಮ ಸರಕಾರ ನಮ್ಮ ಸಂವಿಧಾನದ ಉದ್ಧೇಶವೂ ಹೌದು. ಚುನಾವಣೆಯ ಮುಗಿದು ಹೊಸ ಸರಕಾರ ಬಂದ ಈ ಹೊತ್ತಿನಲ್ಲಿ ಚುನಾವಣೆಯ ಪ್ರಚಾರದಲ್ಲಿನ ದ್ವೇಷಗಳನ್ನು ಮರೆತು ಬುದ್ಧ ಹೇಳಿದ ಬಹುಜನ ಸುಖಾಯ ಬಹುಜನ ಹಿತಾಯ ಎನ್ನುವ ಕಲ್ಯಾಣ ಆಜ್ಯದ ಸ್ಥಾಪನೆಯಾಗುವುದು ಬಹು ಮುಖ್ಯ.

ಪಂ. ಜವಹರಲಾಲ್ ನೆಹರೂ ಅವರು ಉತ್ತಮ ಸರಕಾರದ ಕುರಿತು ಅಗಷ್ಟ 14, 1947 ರಂದು Tryst with destiny ಎಂದೇ ಪ್ರಸಿದ್ಧವಾದ ಭಾಷಣದಲ್ಲಿ ಭಾರತೀಯ ನೆಲೆಯಲ್ಲಿ ಉತ್ತಮ ಸರಕಾರವೆಂದರೆ ಹೇಗಿರಬೇಕು ಎನ್ನುವುದರ ದಿಕ್ಸೂಚಿಯನ್ನು ನೀಡಿದ್ದರು. “The Good governance in India context is the ending of poverty and ignorance and disease and inequality of opportunities. Good governance must aim at expansion in social opportunities and removal of poverty. In short, good governance, means securing justice, empowerment, employment and efficient delivery of services”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಬುದ್ಧ ಪೂರ್ಣಿಮೆ: ಶಾಕ್ಯಮುನಿ ಗೌತಮ: ಮಧ್ಯಮಮಾರ್ಗದ ಹರಿಕಾರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

ರಾಜಮಾರ್ಗ ಅಂಕಣ: ಭಗವಂತನು ಆತನನ್ನು ಈಜುವುದಕ್ಕಾಗಿ ಸೃಷ್ಟಿ ಮಾಡಿದ್ದ ಅನ್ನಿಸುತ್ತದೆ. ಆರು ಅಡಿ ನಾಲ್ಕು ಇಂಚು ಎತ್ತರ, ಮೀನಿನ ಹಾಗೆ ಬೆಂಡ್ ಆಗುವ ದೇಹ, ಭಾರೀ ಬಲಿಷ್ಟವಾದ ತೋಳುಗಳು, ನೀರನ್ನು ರಭಸವಾಗಿ ಹಿಂದೆ ತಳ್ಳಿ ಮುಂದೆ ಹೋಗುವ ದೋಣಿ ಆಕಾರದ ದೇಹ ಇದೆಲ್ಲವೂ ಆತನಿಗೆ ದೈವದತ್ತವಾಗಿ ಬಂದಿದ್ದವು.

VISTARANEWS.COM


on

Michel Phelps ರಾಜಮಾರ್ಗ ಅಂಕಣ
Koo

ಜಗತ್ತಿನ ಮಹೋನ್ನತ ಸ್ವಿಮ್ಮರ್ ನೀರಿಗೆ ಇಳಿದರೆ ದಾಖಲೆ ಮತ್ತು ದಾಖಲೆಗಳೇ ನಿರ್ಮಾಣ ಆಗುತ್ತಿದ್ದವು!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಒಲಿಂಪಿಕ್ಸ್ (Olympics) ವೇದಿಕೆಗಳಲ್ಲಿ ಒಂದೋ ಅಥವಾ ಎರಡೋ ಪದಕಗಳನ್ನು (medals) ಗೆಲ್ಲುವ ಕನಸು ಕಂಡವರು, ಅದನ್ನು ಸಾಧನೆ ಮಾಡಿದವರು ಲೆಜೆಂಡ್ ಅಂತ ಅನ್ನಿಸಿಕೊಳ್ಳುತ್ತಾರೆ. ಆದರೆ ಈ ಅಮೇರಿಕನ್ ಈಜುಗಾರ (Swimmer) ಒಟ್ಟು ನಾಲ್ಕು ಒಲಿಂಪಿಕ್ ಕೂಟಗಳಲ್ಲಿ ಭಾಗವಹಿಸಿ ಗೆದ್ದದ್ದು ಬರೋಬ್ಬರಿ 28 ಒಲಿಂಪಿಕ್ ಪದಕಗಳನ್ನು ಅಂದರೆ ನಂಬಲು ಸಾಧ್ಯವೇ ಇಲ್ಲ! ಅದರಲ್ಲಿ ಕೂಡ 23 ಹೊಳೆಯುವ ಚಿನ್ನದ ಪದಕಗಳು! ಆತನು ನೀರಿಗೆ ಇಳಿದರೆ ಸಾಕು ದಾಖಲೆಗಳು ಮತ್ತು ದಾಖಲೆಗಳು ಮಾತ್ರ ನಿರ್ಮಾಣ ಆಗುತ್ತಿದ್ದವು.

ಆತನು ಅಮೇರಿಕಾದ ಮಹೋನ್ನತ ಈಜುಗಾರ ಮೈಕೆಲ್ ಫೆಲ್ಪ್ಸ್ (Michel Phelps).

ಭಗವಂತನು ಆತನನ್ನು ಈಜುವುದಕ್ಕಾಗಿ ಸೃಷ್ಟಿ ಮಾಡಿದ್ದ ಅನ್ನಿಸುತ್ತದೆ. ಆರು ಅಡಿ ನಾಲ್ಕು ಇಂಚು ಎತ್ತರ, ಮೀನಿನ ಹಾಗೆ ಬೆಂಡ್ ಆಗುವ ದೇಹ, ಭಾರೀ ಬಲಿಷ್ಟವಾದ ತೋಳುಗಳು, ನೀರನ್ನು ರಭಸವಾಗಿ ಹಿಂದೆ ತಳ್ಳಿ ಮುಂದೆ ಹೋಗುವ ದೋಣಿ ಆಕಾರದ ದೇಹ ಇದೆಲ್ಲವೂ ಆತನಿಗೆ ದೈವದತ್ತವಾಗಿ ಬಂದಿದ್ದವು. ಸತತವಾಗಿ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಆತ ಭಾಗವಹಿಸಿದ್ದು ಮಾತ್ರವಲ್ಲ ಪ್ರತೀ ಬಾರಿ ನೀರಿಗೆ ಇಳಿದಾಗ ಒಂದಲ್ಲ ಒಂದು ದಾಖಲೆ, ಒಂದಲ್ಲ ಒಂದು ಪದಕ ಗೆಲ್ಲದೆ ಆತ ಮೇಲೆ ಬಂದ ಉದಾಹರಣೆಯೇ ಇಲ್ಲ!

ಬಾಲ್ಟಿಮೋರ್‌ನ ಬುಲ್ಲೆಟ್!

1985ನೇ ಜೂನ್ 30ರಂದು ಅಮೇರಿಕಾದ ಬಾಲ್ಟಿಮೋರ್ ಎಂಬ ಪ್ರಾಂತ್ಯದಲ್ಲಿ ಹುಟ್ಟಿದ ಆತ ತನ್ನ ಒಂಬತ್ತನೇ ವಯಸ್ಸಿಗೆ ಅಪ್ಪ ಮತ್ತು ಅಮ್ಮನ ಪ್ರೀತಿಯಿಂದ ವಂಚಿತವಾದನು. ಅದಕ್ಕೆ ಕಾರಣ ಅವರ ವಿಚ್ಛೇದನ. ಅದರಿಂದಾಗಿ ಆತನಿಗೆ ಮಾನಸಿಕ ನೆಮ್ಮದಿ ಹೊರಟುಹೋಯಿತು. ಆತನಿಗೆ Attention Deficit Hyper active Disorder (ADHD) ಎಂಬ ಮಾನಸಿಕ ಸಮಸ್ಯೆಯು ಬಾಲ್ಯದಿಂದಲೂ ತೊಂದರೆ ಕೊಡುತ್ತಿತ್ತು. ರಾತ್ರಿ ನಿದ್ದೆ ಬಾರದೆ ಆತ ಒದ್ದಾಡುತ್ತಿದ್ದನು. ಈ ಸಮಸ್ಯೆಗಳಿಂದ ಹೊರಬರಲು ಆತ ಆರಿಸಿಕೊಂಡ ಮಾಧ್ಯಮ ಎಂದರೆ ಅದು ಸ್ವಿಮ್ಮಿಂಗ್ ಪೂಲ್! ತನ್ನ ಏಳನೇ ವಯಸ್ಸಿಗೆ ನೀರಿಗೆ ಇಳಿದ ಆತನಿಗೆ ಬಾಬ್ ಬೌಮಾನ್ ಎಂಬ ಕೋಚ್ ಸಿಕ್ಕಿದ ನಂತರ ಆತನ ಬದುಕಿನ ಗತಿಯೇ ಬದಲಾಯಿತು. ಆತ ದಿನದ ಹೆಚ್ಚು ಹೊತ್ತನ್ನು ನೀರಿನಲ್ಲಿಯೇ ಕಳೆಯಲು ತೊಡಗಿದನು.

ಆತನ ಕಣ್ಣ ಮುಂದೆ ಇಬ್ಬರು ಸ್ವಿಮ್ಮಿಂಗ್ ಲೆಜೆಂಡ್ಸ್ ಇದ್ದರು. ಒಬ್ಬರು ಒಂದೇ ಒಲಿಂಪಿಕ್ ಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಗೆದ್ದ ಮಾರ್ಕ್ ಸ್ಪಿಟ್ಜ್ (1972). ಇನ್ನೊಬ್ಬರು ಆಸ್ಟ್ರೇಲಿಯಾದ ಸ್ವಿಮಿಂಗ್ ದೈತ್ಯ ಇಯಾನ್ ತೋರ್ಪ್. ಅವರಿಂದ ಸ್ಫೂರ್ತಿ ಪಡೆದ ಆತ ಮುಂದೆ ಮಾಡಿದ್ದು ಎಲ್ಲವೂ ವಿಶ್ವ ದಾಖಲೆಯ ಸಾಧನೆಗಳೇ ಆಗಿವೆ. ಜನರು ಆತನನ್ನು ಬಾಲ್ಟಿಮೋರದ ಬುಲೆಟ್ ಎಂದು ಪ್ರೀತಿಯಿಂದ ಕರೆದರು.

ಸತತ ನಾಲ್ಕು ಒಲಿಂಪಿಕ್ಸ್ – 28 ಪದಕಗಳು – ಅದರಲ್ಲಿ 23 ಚಿನ್ನದ ಪದಕಗಳು!

2004ರ ಅಥೆನ್ಸ್ ಒಲಿಂಪಿಕ್ಸ್ – ಒಟ್ಟು ಎಂಟು ಪದಕಗಳು.
2008 ಬೀಜಿಂಗ್ ಒಲಿಂಪಿಕ್ಸ್ – ಒಟ್ಟು ಎಂಟು ಚಿನ್ನದ ಪದಕಗಳು.
2012 ಲಂಡನ್ ಒಲಿಂಪಿಕ್ಸ್ – ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿಯ ಪದಕಗಳು.
2016 ರಿಯೋ ಒಲಿಂಪಿಕ್ಸ್ – ಐದು ಚಿನ್ನದ ಪದಕ ಮತ್ತು ಒಂದು ಬೆಳ್ಳಿ.

ಅಂದರೆ ಸತತ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಭಾಗವಹಿಸಿ ಒಟ್ಟು 28 ಪದಕಗಳನ್ನು ಬೇರೆ ಯಾರೂ ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ! ಬಟರ್ ಫ್ಲೈ, ಮೆಡ್ಲಿ, ಫ್ರೀ ಸ್ಟೈಲ್, ಬ್ಯಾಕ್ ಸ್ಟ್ರೋಕ್ಸ್…ಹೀಗೆ ಪ್ರತೀಯೊಂದು ವಿಭಾಗಳಲ್ಲಿಯೂ ಮೈಕೆಲ್ ಒಂದರ ಮೇಲೊಂದು ಪದಕಗಳನ್ನು ಗೆಲ್ಲುತ್ತಾ ಹೋಗಿದ್ದಾನೆ! ಆ 16 ವರ್ಷಗಳ ಅವಧಿಯಲ್ಲಿ ಆತನಿಗೆ ಸ್ಪರ್ಧಿಗಳೇ ಇರಲಿಲ್ಲ ಎನ್ನಬಹುದು!

ಮೈಕೆಲ್ ಎಂಬ ಚಿನ್ನದ ಮೀನಿನ ಜಾಗತಿಕ ದಾಖಲೆಗಳು

೧) ಆತನು ತನ್ನ ಜೀವಮಾನದಲ್ಲಿ ಗೆದ್ದ ಒಟ್ಟು ಅಂತಾರಾಷ್ಟ್ರೀಯ ಪದಕಗಳ ಸಂಖ್ಯೆ ಬೆರಗು ಹುಟ್ಟಿಸುತ್ತದೆ. ಒಟ್ಟು 82 ಪದಕಗಳು. ಅದರಲ್ಲಿ 65 ಚಿನ್ನ, 14 ಬೆಳ್ಳಿ ಮತ್ತು 3 ಕಂಚು!
೨) ಒಟ್ಟು 20 ಗಿನ್ನೆಸ್ ದಾಖಲೆಗಳು ಆತನ ಹೆಸರಿನಲ್ಲಿ ಇವೆ!
೩) ಒಟ್ಟು 39 ವಿಶ್ವದಾಖಲೆಗಳು ಆತನ ಹೆಸರಿನಲ್ಲಿ ಇವೆ. ಅದರಲ್ಲಿ 29 ವೈಯಕ್ತಿಕ ಮತ್ತು 10 ರಿಲೇ ಸ್ಪರ್ಧೆಗಳದ್ದು!
೪) 2004ರಿಂದ 2018ರವರೆಗೆ ನಡೆದ ವಿಶ್ವ ಈಜು ಚಾಂಪಿಯನಶಿಪ್ ಸ್ಪರ್ಧೆಗಳಲ್ಲಿ ಆತ ಪದಕಗಳ ಗೊಂಚಲು ಗೆಲ್ಲದೆ ಹಿಂದೆ ಬಂದ ನಿದರ್ಶನವೇ ಇಲ್ಲ!
೫) ಒಟ್ಟು ಎಂಟು ಬಾರಿ ಅವನಿಗೆ ‘ವರ್ಲ್ಡ್ ಸ್ವಿಮ್ಮರ್ ಆಫ್ ದ ಇಯರ್’ ಪ್ರಶಸ್ತಿಗಳು ದೊರೆತಿವೆ!
೬) ಒಟ್ಟು 11 ಬಾರಿ ‘ಅಮೇರಿಕನ್ ಸ್ವಿಮ್ಮರ್ ಆಫ್ ದ ಇಯರ್’ ಪ್ರಶಸ್ತಿಗಳು ದೊರೆತಿವೆ!
೭) ಒಂದೇ ಒಲಿಂಪಿಕ್ ಕೂಟದಲ್ಲಿ ಆತ ಎಂಟು ಚಿನ್ನದ ಪದಕಗಳನ್ನು (2008 ಬೀಜಿಂಗ್) ಗೆದ್ದ ದಾಖಲೆಯನ್ನು ಮುಂದೆ ಕೂಡ ಯಾರೂ ಮುರಿಯುವ ಸಾಧ್ಯತೆ ಇಲ್ಲವೇ ಇಲ್ಲ!
೮) ಆತನಿಗೆ ಜಾಗತಿಕ ಒಲಿಂಪಿಕ್ ಸಮಿತಿಯು ಜಗತ್ತಿನ ಅತ್ಯುತ್ತಮ ಸ್ವಿಮ್ಮರ್ ಪ್ರಶಸ್ತಿ ನೀಡಿ ಗೌರವಿಸಿದೆ!
೯) 100 ಮೀಟರ್ ಬಟರ್ ಫ್ಲೈ, 200 ಮೀಟರ್ ಬಟರ್ ಫ್ಲೈ, 200 ಮೀಟರ್ ಇಂಡಿವಿಜುವಲ್ ಮೆಡ್ಲಿ, 400 ಮೀಟರ್ ಇಂಡಿವಿಜುವಲ್ ಮೆಡ್ಲಿ ಈ ವಿಭಾಗದಲ್ಲಿ ಆತ ಮಾಡಿದ ಜಾಗತಿಕ ದಾಖಲೆಗಳನ್ನು ಮುಂದೆ ಕೂಡ ಯಾರೂ ಮುರಿಯುವ ಸಾಧ್ಯತೆ ಇಲ್ಲ ಎಂದು ಭಾವಿಸಲಾಗುತ್ತಿದೆ!

ಈ ಎಲ್ಲಾ ಸಾಧನೆಗಳಿಗೆ ಕಾರಣ ಆತನ ಈಜುವ ಪ್ಯಾಶನ್!

ಆತನ ಆತ್ಮಚರಿತ್ರೆಯ ಪುಸ್ತಕವನ್ನು ಒಮ್ಮೆ ತಿರುವಿ ಹಾಕಿದಾಗ ಆತನ ಸ್ವಿಮ್ಮಿಂಗ್ ಪ್ಯಾಶನ್ ಬಗ್ಗೆ ಹಲವು ಉದಾಹರಣೆಗಳು ದೊರೆಯುತ್ತವೆ.

ಒಮ್ಮೆ ಏನಾಯಿತೆಂದರೆ 2001 ಸೆಪ್ಟೆಂಬರ್ 11ರಂದು ಅಮೆರಿಕದ ಟ್ವಿನ್ ಟವರ್ ಮೇಲೆ ಭಯೋತ್ಪಾದಕ ಧಾಳಿ ನಡೆದು ಇಡೀ ಟವರ್ ಕುಸಿದು ಹೋದದ್ದು, ಇಡೀ ಅಮೇರಿಕಾ ನಲುಗಿ ಹೋದದ್ದು ನಮಗೆಲ್ಲ ಗೊತ್ತಿದೆ. ಸರಿಯಾಗಿ ಅದೇ ಹೊತ್ತಿಗೆ ಮೈಕೆಲ್ ಸ್ವಿಮ್ಮಿಂಗ್ ಪೂಲನಲ್ಲಿ ಈಜುತ್ತಾ ತನ್ನ ಕೋಚಗೆ ಕಾಲ್ ಮಾಡಿ ಕೇಳಿದ್ದನಂತೆ- ಸರ್, ಎಲ್ಲಿದ್ದೀರಿ? ನಾನು ಪೂಲಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ದೇನೆ!

ಮೈಕೆಲ್ ಫೆಲ್ಫ್ಸ್ ಇಷ್ಟೊಂದು ವಿಶ್ವ ದಾಖಲೆಗಳನ್ನು ಕ್ರಿಯೇಟ್ ಮಾಡಿದ್ದು ಸುಮ್ಮನೆ ಅಲ್ಲ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕಾರ್ಗಿಲ್, ಇದು‌ ಕೆಚ್ಚಿನ ಕಲಿಗಳ ಸಮರಗಾಥೆ

Continue Reading

ಅಂಕಣ

ರಾಜಮಾರ್ಗ ಅಂಕಣ: ಕಾರ್ಗಿಲ್, ಇದು‌ ಕೆಚ್ಚಿನ ಕಲಿಗಳ ಸಮರಗಾಥೆ

ರಾಜಮಾರ್ಗ ಅಂಕಣ: ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

VISTARANEWS.COM


on

ರಾಜಮಾರ್ಗ ಅಂಕಣ Kargil Vijay Diwas 2024
Koo

ಇಂದು ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಭಾರತವು ಗೆದ್ದ ಅತ್ಯಂತ ಕಠಿಣ ಯುದ್ಧ (Kargil Vijay Diwas) ಅದು! 1999ರಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ ಮಲಿಕ್ ಬರೆದಿರುವ ‘KARGIL – FROM SURPRISE TO VICTORY’ ಓದುತ್ತಾ ಹೋದಂತೆ ನಾನು ಹಲವಾರು ಬಾರಿ ಬೆಚ್ಚಿಬಿದ್ದಿದ್ದೇನೆ! ಯಾಕೆಂದರೆ ಅದು ಭಾರತವು ಎದುರಿಸಿದ ಅತ್ಯಂತ ಕಠಿಣವಾದ ಯುದ್ಧ (India0 Pakistan War) ಮತ್ತು ದೀರ್ಘಕಾಲದ ಯುದ್ಧ. ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

ಯುದ್ಧದ ಹಿನ್ನೆಲೆ – ಮುಷರಫ್ ಕುತಂತ್ರ

ಆಗಷ್ಟೇ ಭಾರತವು ಅಣುಪರೀಕ್ಷೆ ಮಾಡಿ ಜಗತ್ತಿನ ಕಣ್ಣು ಕೋರೈಸುವ ಸಾಧನೆಯನ್ನು ಮಾಡಿತ್ತು. ಪಾಕ್ ಕೂಡ ಅಮೇರಿಕಾದ ನೆರವು ಪಡೆದು ತನ್ನ ಬಳಿ ಅಣುಬಾಂಬು ಇದೆ ಎಂದು ಹೇಳಿಕೊಂಡಿತ್ತು. ಆಗ ಭಾರತದ ಪ್ರಧಾನಿ ಆಗಿದ್ದ ವಾಜಪೇಯಿ (Atal Bihari Vajpayee) ಅವರು ತುಂಬಾ ಮೃದು ನಿಲುವಿನ ನಾಯಕ ಎಂದು ಪಾಕ್ ನಂಬಿ ಕುಳಿತಿತ್ತು. ಪಾಕಿಸ್ಥಾನಕ್ಕೆ ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ (Siachin) ವಶಪಡಿಸಿಕೊಳ್ಳಬೇಕು ಎಂಬ ದುರಾಸೆ. ಅಲ್ಲಿಂದ ಮುಂದೆ ಕಾರ್ಗಿಲ್ ಮತ್ತು ಮುಂದೆ ಇಡೀ ಕಾಶ್ಮೀರವನ್ನು ಕಬಳಿಸಬೇಕು ಎನ್ನುವ ಮಾಸ್ಟರ್ ಪ್ಲಾನ್! ಆಗ ಪಾಕಿಸ್ತಾನದ ಸೇನಾ ನಾಯಕ ಪರ್ವೇಜ್ ಮುಷರಫ್ (Parvez Musharraf) ಹೊಂಚು ಹಾಕಿ ಕುಳಿತ ಕಾಲ ಅದು.

ಅದಕ್ಕೆ ಪೂರಕವಾಗಿ 1998ರ ಜೂನ್ ತಿಂಗಳಿಂದಲೇ ಪಾಕಿಸ್ಥಾನದ 5000ರಷ್ಟು ಸೈನಿಕರು ಲೈನ್ ಆಫ್ ಕಂಟ್ರೋಲ್ ದಾಟಿ ಭಾರತದ 4-10 ಕಿ.ಮೀ. ಒಳಗೆ ಬಂದು ಎತ್ತರದ ಪ್ರದೇಶದಲ್ಲಿ ಜಮಾವಣೆ ಆಗತೊಡಗಿದ್ದರು! ಅವರ ಬಳಿಗೆ ಆಧುನಿಕ ಶಸ್ತ್ರಾಸ್ತ್ರಗಳು ಬಂದು ತಲುಪಿದ್ದವು. ಆದರೆ 1999ರ ಮೇ 18ರವರೆಗೆ ಭಾರತ ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಭಾರತೀಯ ಸೇನಾ ಗೂಢಚಾರ ಸಂಸ್ಥೆಯವರು ಇನ್ನೂ ಸ್ವಲ್ಪ ದಿನ ಮೈಮರೆತಿದ್ದರೆ…! ಆ ಕುರಿಗಾಹಿ ಹುಡುಗರು ಆ ನುಸುಳುಕೋರ ಸೈನಿಕರ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಕೊಡದೇ ಹೋಗಿದ್ದರೆ…! ನಾನು ಬೆಚ್ಚಿ ಬಿದ್ದದ್ದು ಆಗ.

ಭಾರತದ ಸೈನಿಕರ ಬಳಿ ಯುದ್ಧದ ಸಿದ್ಧತೆಗೆ ಸಮಯ ಇರಲಿಲ್ಲ

ಗಡಿಯ ಒಳಗೆ ಅಷ್ಟು ದೊಡ್ಡ ಸಂಖ್ಯೆಯ ಸೈನಿಕರು ನುಸುಳಿಬಂದ ವಿಷಯ ಭಾರತಕ್ಕೆ ಗೊತ್ತಾಯಿತು ಅಂದಾಗ ಮುಷರಫ್ ಅಲರ್ಟ್ ಆದರು. ಅವರು ನಮ್ಮ ಸೈನಿಕರೇ ಅಲ್ಲ, ಯಾವುದೋ ಭಯೋತ್ಪಾದಕ ಸಂಘಟನೆಯವರು ಎಂದು ಬಿಟ್ಟರು ಮುಷರಫ್! ಆದರೆ ಈಗ ಭಾರತದ ಪ್ರಧಾನಿ ವಾಜಪೇಯಿ, ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸೇನಾ ಮುಖ್ಯಸ್ಥರನ್ನು ಕರೆಸಿ ಯುದ್ಧ ಘೋಷಣೆ ಮಾಡಿಬಿಟ್ಟರು. ಆದರೆ ಭಾರತೀಯ ಸೈನ್ಯಕ್ಕೆ ಆ ಯುದ್ಧಕ್ಕೆ ಸಿದ್ಧತೆ ಮಾಡಲು ದೊರೆತದ್ದು 24 ಘಂಟೆ ಮಾತ್ರ! ಆದರೂ 1999ರ ಮೇ 3ರಂದು ಭಾರತ ಯುದ್ಧ ಘೋಷಣೆ ಮಾಡಿ ಆಗಿತ್ತು!

ಆರಂಭದಲ್ಲಿ ಭಾರತಕ್ಕೆ ಹಿನ್ನಡೆ ಆದದ್ದು ನಿಜ. ಆದರೆ ಮೇ 30 ಆಗುವಾಗ ಭಾರತದ 30,000 ಸೈನಿಕರು ಟೈಗರ್ ಹಿಲ್ ಬಳಿ ಬಂದು ಜಮಾವಣೆ ಮಾಡಿ ಆಗಿತ್ತು. ಭಾರತದ ಭೂಸೈನ್ಯ ಮತ್ತು ವಾಯು ಸೈನ್ಯಗಳು ವೀರಾವೇಶದಿಂದ ಹೋರಾಟಕ್ಕೆ ಇಳಿದಿದ್ದವು. ಎರಡೂ ಕಡೆಯ ಸೈನಿಕರು, ಬಾಂಬುಗಳು, ಮದ್ದುಗುಂಡುಗಳು, ಶೆಲ್‌ಗಳು ಸಿಡಿಯುತ್ತ ಕಾರ್ಗಿಲ್ ಯುದ್ಧಭೂಮಿಯು ರಕ್ತದಲ್ಲಿ ಒದ್ದೆಯಾಗುತ್ತಾ ಹೋಯಿತು. ಟೈಗರ್ ಹಿಲ್ ಏರಿ 10 ಪಾಕ್ ಸೈನಿಕರ ಹತ್ಯೆಯನ್ನು ನಮ್ಮ ಸೈನಿಕರು ಮಾಡಿದಾಗ ಭಾರತವು ಯುದ್ಧದಲ್ಲಿ ಸಣ್ಣ ಮೇಲುಗೈ ಸಾಧಿಸಿತು.

ಅಲ್ಲಿಂದ ಮುಂದೆ ಭಾರತದ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸ್ವತಃ ಯುದ್ಧಭೂಮಿಗೆ ಬಂದು ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದ್ದು, ಪ್ರಧಾನಿ ವಾಜಪೇಯಿ ವಾರ್ ರೂಮಿನಲ್ಲಿ ಕುಳಿತು ಸೈನ್ಯಕ್ಕೆ ನಿರ್ದೇಶನವನ್ನು ಕೊಟ್ಟದ್ದು ಭಾರತವನ್ನು ಗೆಲ್ಲಿಸುತ್ತಾ ಹೋದವು. 75 ದಿನಗಳ ಘನಘೋರ ಯುದ್ಧದ ನಂತರ ಭಾರತ ಜುಲೈ 26ರಂದು ದ್ರಾಸ್ ಪರ್ವತದ ತಪ್ಪಲಲ್ಲಿ ಇದ್ದ ಕೊನೆಯ ಪಾಕ್ ಸೈನಿಕನನ್ನೂ ಹೊಸಕಿ ಹಾಕಿದಾಗ ಭಾರತ ವಿಜಯೋತ್ಸವ ಆಚರಣೆ ಮಾಡಿತು. ಕಾರ್ಗಿಲ್ ಮೈದಾನದಲ್ಲಿ ಸೈನಿಕರ ನಡುವೆ ತ್ರಿವರ್ಣಧ್ವಜ ಹಾರಿಸಿದ ಕ್ಷಣವೇ ಕಾರ್ಗಿಲ್ ವಿಜಯ ದಿನ.

Kargil Vijay Diwas 2024
Kargil Vijay Diwas 2024

ಹುತಾತ್ಮರಾದವರು ಭಾರತದ 527 ಸೈನಿಕರು!

ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೈನಿಕರ ಬಲಿದಾನ ಭಾರತಕ್ಕೆ ಒಂದು ದೊಡ್ಡ ವಿಜಯವನ್ನು ತಂದುಕೊಟ್ಟಿತ್ತು. ಅದರಲ್ಲಿ ಕರ್ನಾಟಕದ 21 ಸೈನಿಕರೂ ಇದ್ದರು. ಸಾವಿರಾರು ಯೋಧರು ತೀವ್ರವಾಗಿ ಗಾಯಗೊಂಡರು. ಪಾಕಿಸ್ತಾನವೂ ದೊಡ್ಡ ಸಂಖ್ಯೆಯ ಸೈನಿಕರನ್ನು ಕಳೆದುಕೊಂಡಿತ್ತು.

ನಮ್ಮ ಸೈನಿಕರಾದ ಸಿಯಾಚಿನ್ ಹೀರೋ ನಾಯಬ್ ಸುಬೇದಾರ್ ಬಾಣಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಮೇಜರ್ ಪದ್ಮಪಾಣಿ ಆಚಾರ್ಯ, ಗ್ರೆನೆಡಿಯರ್ ಯೋಗೇಂದರ್ ಸಿಂಘ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನುಜ್ ನಯ್ಯರ್, ಲೆಫ್ಟಿನೆಂಟ್ ಬಲವಾನ್ ಸಿಂಘ್, ರೈಫಲ್ ಮ್ಯಾನ್ ಸಂಜಯ ಕುಮಾರ್, ಕ್ಯಾಪ್ಟನ್ ವಿಜಯವಂತ್ ಥಾಪರ್, ಮೇಜರ್ ಸೋನಂ ವಾಂಗಚುಕ್, ಲೆಫ್ಟಿನೆಂಟ್ ಕರ್ನಲ್ ವೈ.ಕೆ. ಜೋಷಿ ಇವರೆಲ್ಲರೂ ನಿಜವಾದ ಕಾರ್ಗಿಲ್ ಹೀರೋಗಳು. ಅದರಲ್ಲಿ ಹೆಚ್ಚಿನವರು ಹುತಾತ್ಮರಾದವರು. ಅವರಿಗೆಲ್ಲ ವಿವಿಧ ಸೇನಾ ಶೌರ್ಯ ಪ್ರಶಸ್ತಿಗಳನ್ನು ನೀಡಿ ಭಾರತ ಸರಕಾರವು ಗೌರವಿಸಿತು.

ಕಾರ್ಗಿಲ್ ಯುದ್ಧದ ಫಲಶ್ರುತಿ ಏನೆಂದರೆ ಮುಂದೆ ಭಾರತವು ಎಂದಿಗೂ ಪಾಕಿಸ್ತಾನವನ್ನು ನಂಬಲಿಲ್ಲ ಮತ್ತು ಪಾಕಿಸ್ತಾನ ಯಾವತ್ತೂ ಭಾರತದ ಮೇಲೆ ಮತ್ತೆ ದಂಡೆತ್ತಿ ಬರುವ ಸಾಹಸವನ್ನು ಮಾಡಲಿಲ್ಲ!

ಜೈ ಹಿಂದ್.

ಇದನ್ನೂ ಓದಿ: ರಾಜಮಾರ್ಗ ಅಂಕಣ:  ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?

Continue Reading

ಅಂಕಣ

ರಾಜಮಾರ್ಗ ಅಂಕಣ:  ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?

ರಾಜಮಾರ್ಗ ಅಂಕಣ: ಕುಳಕುಂದ ಶಿವರಾವ್ ಅಂದರೆ ಯಾರಿಗೂ ಥಟ್ಟನೆ ಪರಿಚಯ ಆಗಲಾರದು. ಆದರೆ ಕನ್ನಡದ ಶ್ರೇಷ್ಠ ಲೇಖಕ ನಿರಂಜನ ಎಂದರೆ ಎಲ್ಲರಿಗೂ ಪರಿಚಯ ಆಗುತ್ತದೆ. ಈ ವರ್ಷ ಅವರ ಜನ್ಮ ಶತಮಾನೋತ್ಸವ.

VISTARANEWS.COM


on

ರಾಜಮಾರ್ಗ ಅಂಕಣ
Koo

ಈ ವರ್ಷ (2024) ಲೇಖಕ ನಿರಂಜನರ ಜನ್ಮ ಶತಮಾನೋತ್ಸವ

Rajendra-Bhat-Raja-Marga-Main-logo

ಕುಳಕುಂದ ಶಿವರಾವ್ ಅಂದರೆ ಯಾರಿಗೂ ಥಟ್ಟನೆ ಪರಿಚಯ ಆಗಲಾರದು. ಆದರೆ ಕನ್ನಡದ ಶ್ರೇಷ್ಠ ಲೇಖಕ ನಿರಂಜನ (Niranjana) ಎಂದರೆ ಎಲ್ಲರಿಗೂ ಪರಿಚಯ ಆಗುತ್ತದೆ. ಅವರು 71 ವರ್ಷಗಳ ಕಾಲ ಬದುಕಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು. ಕನ್ನಡದ ಮೊದಲ ಮತ್ತು ಜನಪ್ರಿಯ ಅಂಕಣ ಲೇಖಕರು ಅಂದರೆ ಅದು ನಿರಂಜನ! (ರಾಜಮಾರ್ಗ ಅಂಕಣ)

ಬಾಲ್ಯದಿಂದಲೂ ಬರವಣಿಗೆ

1924 ಜೂನ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಳಕುಂದ ಎಂಬ ಗ್ರಾಮದಲ್ಲಿ ಜನಿಸಿದ ಅವರು ಸಣ್ಣ ಪ್ರಾಯದಲ್ಲಿ ಪತ್ರಿಕೆಗಳಿಗೆ ಬರೆಯಲು ತೊಡಗಿದರು. ಮೊದಲು ಕಂಠೀರವ ಪತ್ರಿಕೆ ಅವರಿಗೆ ಬರೆಯಲು ಅವಕಾಶ ಕೊಟ್ಟಿತು. ಮುಂದೆ ಕನ್ನಡದ ಎಲ್ಲ ಪ್ರಸಿದ್ಧ ಪತ್ರಿಕೆಗಳಿಗೆ ಅವರು ಅಂಕಣಗಳನ್ನು ಬರೆಯುತ್ತಾ ಹೋದರು. ರಾಷ್ಟ್ರಬಂಧು ಎಂಬ ಪತ್ರಿಕೆಯ ಪ್ರಮುಖ ಲೇಖಕರಾಗಿ ಅವರು ಸಾವಿರಾರು ಅಂಕಣಗಳನ್ನು ಬರೆದರು. ಅವರ ಅಂಕಣ ಲೇಖನಗಳು ಎಂಟು ಕೃತಿಗಳಾಗಿ ಹೊರಬಂದು ಅವರಿಗೆ ಅಪಾರ ಜನಪ್ರಿಯತೆ ಕೊಟ್ಟವು. ಅವರು ಕನ್ನಡದ ಮೊದಲ ಅಂಕಣಕಾರ ಎಂಬ ದಾಖಲೆಯೂ ನಿರ್ಮಾಣವಾಯಿತು.

ಪ್ರಭಾವಶಾಲಿ ಸಣ್ಣ ಕಥೆಗಳು

ಸಣ್ಣ ಕಥೆಗಳು ಅವರಿಗೆ ಇಷ್ಟವಾದ ಇನ್ನೊಂದು ಪ್ರಕಾರ. ಅವರ 156 ಸಣ್ಣ ಕಥೆಗಳ ಸಂಗ್ರಹವಾದ ‘ಧ್ವನಿ’ ಕನ್ನಡದ ಶ್ರೇಷ್ಠ ಕೃತಿ ಆಗಿದೆ. ಕಾರಂತರ ಸಂಪರ್ಕ, ಲೆನಿನ್ ಬಗ್ಗೆ ಓದು ಅವರನ್ನು ಬೆಳೆಸುತ್ತಾ ಹೋದವು.

ಬಾಪೂಜಿ ಬಾಪು ಅವರ ಅತ್ಯಂತ ಶ್ರೇಷ್ಟವಾದ ಸಣ್ಣ ಕಥೆ. ಗಾಂಧೀಜಿ ಬದುಕಿದ್ದಾಗಲೇ ಅವರು ಸತ್ತಂತೆ ಕಲ್ಪಿಸಿಕೊಂಡು ಬರೆದ ಕಥೆ ಇದು! ರಕ್ತ ಸರೋವರ ಕಾಶ್ಮೀರದ ದಾಲ್ ಸರೋವರದ ಹಿನ್ನೆಲೆಯಲ್ಲಿ ಅರಳಿದ ಅದ್ಭುತವಾದ ಕಥೆ.
ತಿರುಕಣ್ಣನ ಮತದಾನ ರಾಜಕೀಯ ವಿಡಂಬನೆಯ ಕಥೆ. ಅವರ ಸಣ್ಣ ಕಥೆಗಳು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಸಂಸ್ಕೃತಿಯಲ್ಲಿ ಅರಳಿದ ಕಥೆಗಳು. ಕನ್ನಡದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ನಂತರ ಇಷ್ಟೊಂದು ವೈವಿಧ್ಯಮಯವಾದ ಸಣ್ಣ ಕಥೆಗಳನ್ನು ಬರೆದವರು ನಿರಂಜನ ಮಾತ್ರ ಅಂದರೆ ಅದು ಅತಿಶಯೋಕ್ತಿ ಅಲ್ಲ!

ಕಾದಂಬರಿಕಾರರಾಗಿ ನಿರಂಜನರು

ಅವರು ಬರೆದದ್ದು ಒಟ್ಟು 21 ಕಾದಂಬರಿಗಳು. ವರ್ಗ ಸಂಘರ್ಷ ಮತ್ತು ಸಾಮಾಜಿಕ ಸಮಾನತೆ ಅವರ ಹೆಚ್ಚಿನ ಕಾದಂಬರಿಗಳ ಹೂರಣ. 700 ಪುಟಗಳ ಬೃಹತ್ ಕಾದಂಬರಿ ಮೃತ್ಯುಂಜಯ ಅದೊಂದು ಮಾಸ್ಟರಪೀಸ್ ಕಲಾಕೃತಿ. ವಿಮೋಚನೆ, ಬನಶಂಕರಿ, ಅಭಯ, ಚಿರಸ್ಮರಣೆ, ರಂಗಮ್ಮನ ವಟಾರ ಮೊದಲಾದ ಕಾದಂಬರಿಗಳು ಒಮ್ಮೆ ಓದಿದರೆ ಮರೆತುಹೋಗೋದಿಲ್ಲ. ಸುಳ್ಯ ಮತ್ತು ಮಡಿಕೇರಿ ಪ್ರದೇಶದಲ್ಲಿ ಕಲ್ಯಾಣಸ್ವಾಮಿ ಎಂಬಾತ ನಡೆಸಿದ ರಕ್ತಕ್ರಾಂತಿಯ ಹಸಿಹಸಿ ಕಥೆಯನ್ನು ಹೊಂದಿರುವ ಒಂದು ಶ್ರೇಷ್ಟವಾದ ಕಾದಂಬರಿ ಅವರು ಬರೆದಿದ್ದಾರೆ. ನಿರಂಜನರು ಬರೆದ ನಾಟಕಗಳೂ ಜನಪ್ರಿಯವಾಗಿವೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

ನಿರಂಜನ ಅವರ ಸಂಪಾದನಾ ಗ್ರಂಥಗಳು

ಇಂದು ಕನ್ನಡ ನಾಡು ನಿರಂಜನರನ್ನು ನೆನಪಿಟ್ಟುಕೊಳ್ಳಲೇ ಬೇಕಾದ ಮುಖ್ಯ ಕಾರಣ ಎಂದರೆ ಅವರ ಸಂಪಾದನೆಯ ಗ್ರಂಥಗಳು. 25 ಸಂಪುಟಗಳ ವಿಶ್ವ ಕಥಾಕೋಶ, ಜ್ಞಾನಗಂಗೋತ್ರಿ ಹೆಸರಿನ ಎಳೆಯರ ಏಳು ಸಂಪುಟಗಳ ವಿಶ್ವ
ಜ್ಞಾನಕೋಶ, ಪುರೋಗಾಮಿ ಪ್ರಕಾಶನದ ಎಂಟು ಪುಸ್ತಕಗಳು, ಜನತಾ ಸಾಹಿತ್ಯಮಾಲೆಯ 25 ಪುಸ್ತಕಗಳು….ಹೀಗೆ ಲೆಕ್ಕ ಮಾಡುತ್ತಾ ಹೋದರೆ ಸಾವಿರಾರು ಪುಟಗಳ ಅದ್ಭುತ ಜ್ಞಾನಕೋಶಗಳು ಅರಳಿದ್ದು ನಿರಂಜನರ ಸಂಪಾದಕತ್ವದಲ್ಲಿ! ಅವರ ಇಡೀ ಜೀವನವನ್ನು ನಿರಂಜನರು ಅಧ್ಯಯನ ಮತ್ತು ಬರವಣಿಗೆಯಲ್ಲಿಯೇ ಕಳೆದರು.

ಇಡೀ ಕುಟುಂಬವು ಸಾಹಿತ್ಯಕ್ಕೆ ಮೀಸಲು

ನಿರಂಜನರ ಪತ್ನಿ ಅನುಪಮಾ ನಿರಂಜನ ಕನ್ನಡದ ಸ್ಟಾರ್ ಕಾದಂಬರಿಕಾರರು. ಹೆಣ್ಣು ಮಕ್ಕಳಾದ ತೇಜಸ್ವಿನಿ ಮತ್ತು ಸೀಮಂತಿನಿ ಇಬ್ಬರೂ ಕನ್ನಡದ ಪ್ರಭಾವೀ ಲೇಖಕರಾಗಿ ಗುರುತಿಸಿಕೊಂಡವರು. ಹಾಗೆ ನಿರಂಜನರ ಇಡೀ ಕುಟುಂಬವು ಕನ್ನಡದ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿತು.

ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ದೊರೆತವು. 1995ರಲ್ಲಿ ಅವರು ನಮ್ಮನ್ನು ಅಗಲಿದರು. ಕನ್ನಡ ಸಾಹಿತ್ಯಲೋಕವನ್ನು ಚಂದವಾಗಿ ಬೆಳೆಸಿದ ನಿರಂಜನರ ಜನ್ಮ ಶತಮಾನೋತ್ಸವದ ಈ ವರ್ಷ ಕನ್ನಡ ಸಾರಸ್ವತ ಲೋಕ ಒಂದು ಸ್ಮರಣೀಯ ಕಾರ್ಯಕ್ರಮವನ್ನು ಅವರ ನೆನಪಿನಲ್ಲಿ ಮಾಡಬೇಕು ಎನ್ನುವುದು ನಮ್ಮೆಲ್ಲರ ಆಗ್ರಹ ಆಗಬೇಕು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

Continue Reading

ಅಂಕಣ

Guru Purnima 2024: ಗುರು ಎಂದರೆ ವ್ಯಕ್ತಿಯಲ್ಲ, ಅದ್ಭುತವಾದ ಶಕ್ತಿ!

Guru Purnima 2024: ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು, ಗುರುಗೋವಿಂದ ಭಟ್ಟರು-ಸಂತ ಶಿಶುನಾಳ ಶರೀಫ , ರಾಮಕೃಷ್ಣ ಪರಮಹಂಸರು- ಸ್ವಾಮಿ ವಿವೇಕಾನಂದರು, ಬ್ರಹ್ಮಚೈತನ್ಯ ಗೊಂದಾವಲಿಕರ ಮಹಾರಾಜ-ಬ್ರಹ್ಮಾನಂದ ಮಹಾರಾಜ… ಹೀಗೆ ಗುರು-ಶಿಷ್ಯರಿಗೆ ಪರಂಪರೆಗಳ ಐತಿಹ್ಯವಿದೆ.

VISTARANEWS.COM


on

Guru Purnima 2024
Koo

ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ
(ಲೇಖಕರು, ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು ಹಾಗೂ ಜ್ಯೋತಿಷಿಗಳು)

ಆಷಾಢ ಮಾಸ ಶುಕ್ಲ ಪಕ್ಷದಲ್ಲಿ ಬರುವ “ಕಡ್ಲಿಗರ ಹುಣ್ಣಿಮೆ”ಯನ್ನು ನಾವು ಆಚರಿಸ್ಪಡುವ, ಶ್ರೇಷ್ಠವಾದ ಪರ್ವವೆಂದರೆ ಅದು “ಗುರು ಪೂರ್ಣಿಮೆ”.
ಈ ದಿನ ನಾವು ನಂಬಿದ ನಮ್ಮಲ್ಲಿಯ ಅಂಧಕಾರವನ್ನು ತೊಲಗಿಸಿ ಜ್ಞಾನ ಸಾಕ್ಷಾತ್ಕಾರ ಮಾಡಿಸಿದ ನಮ್ಮ ಗುರುಗಳಿಗೆ ವಂದನೆ (Guru Purnima 2024) ಸಲ್ಲಿಸುವ ದಿನ. ಆ ಗುರುವನ್ನು ನೆನೆದು ಅವರ ಮಹತ್ವವನ್ನು ಸಾರುವ ದಿನ. ಗುರುಗಳು ನಮಗೆ ನಮ್ಮ ಜೀವನಕ್ಕೆ ಸರಿಯಾದ ಮಾರ್ಗ ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ ದಿಕ್ಸೂಚಿ,ದಾರಿದೀಪ. ಪರಮಾತ್ಮನ, ಪರಮಾರ್ಥದ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮಜ್ಯೋತಿಯನ್ನು ಜ್ಞಾನವೆಂಬ ತೈಲ ಹಾಕಿ ಬೆಳುಗುವಂತೆ ಮಾಡಿ ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಆಧ್ಯಾತ್ಮದ ಜತೆಗೆ ಲೌಕಿಕ ಪ್ರಪಂಚದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟವ ತನಕ ಸಹಾಯ ಮಾಡುವವನೇ “ ಶ್ರೇಷ್ಠಗುರು”.

ಅಲೆದು ಅಲೆದು ಹುಡಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವುಗಳೆಲ್ಲರೂ ಆ ಗುರುವಿನ ಮುಖಾಂತರವೇ ಪರಮಾತ್ಮನ ಅರಿವು, ಪ್ರಪಂಚದ ಅರಿವು, ಅರಿಯಬೇಕಾಗಿರುವುದರಿಂದ, ನಾವು ಪ್ರತಿ ಆಷಾಢ ಮಾಸದ ಈ ಪೌರ್ಣಿಮೆಯಂದು ಮಾತ್ರ ಗುರುವನ್ನು ಪೂಜಿಸದೆ.. ಅನು ದಿನ, ಅನು ಕ್ಷಣ, ಗುರುವನ್ನು ನಮ್ಮ ಅಂತರಂಗದಲ್ಲೇ ಪ್ರತಿಷ್ಠಾಪಿಸಿ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲ ಎಂದು ಅಂತಹ ಗುರುವಿಗೆ ಶರಣಾದಾಗ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಫಲಪ್ರದವಾಗುತ್ತದೆ.

ಉಪನಿಷತ್ತಿನಲ್ಲಿ ಗುರು

ಉಪನಿಷತ್ತಿನಲ್ಲಿ ಗುರು ಎಂಬುದನ್ನು ಈ ರೀತಿಯಾಗಿ ವಿವರಿಸಿದ್ದಾರೆ. “ಗು” ಎಂದರೆ ಅಂಧಕಾರವೆಂದು “ರು” ಎಂದರೆ ದೂರೀಕರಿಸುವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಯ ಕಡೆಗೆ ನಡೆಸುವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ನಿಜವಾದ ಗುರು ಎಂದು ಅರ್ಥೈಸಬಹುದೇನೋ ಎಂಬ ಅಭಿಪ್ರಾಯ.

ಆದಿಗುರು ಶ್ರೀ ಶಂಕರಭಗವತ್ಪಾದಚಾರ್ಯರು ಗುರು ಮಹಿಮೆ ಕುರಿತು ಹೀಗೆ ಸ್ತೋತ್ರವನ್ನು ಹೇಳಿದ್ದಾರೆ:

ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||

ಗುರುವು ತ್ರೀಮೂರ್ತಿ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ. ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಲ್ಪಟಿದೆ :

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ।
ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ॥
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ।
ಚಕ್ಷುರುನ್ಮೀಲಿತಂ ಯೇನ
ತಸ್ಮೈ ಶ್ರೀ ಗುರವೇ ನಮಃ॥

ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳ್ಗಿಗೆ ಬೇಕಾದ ಸೋಪಾನವನ್ನು ಹತ್ತಿಸುವ ಹಾಗೂ ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.
ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ ಬಂದಿದ್ದಾರೆ..

ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ।
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ॥

ಅಂದರೆ ಗುರುವಿಗಿಂತ ಮೀರಿದ ತತ್ವ, ತಪಸ್ಸು ಯಾವುದೂ ಇಲ್ಲ. ಜ್ಞಾನವೆಂಬ ದಾರಿದೀಪವಾಗಿರುವ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ. ಶಾಶ್ವತವಾದ ಆನಂದವನ್ನು ಪಡೆಯುವುದು ಆ ಸದ್ಗುರುವಿನಿಂದಲೆ ಮಾತ್ರವೇ ಸಾಧ್ಯ ಎಂದು ಶ್ರೀ ಶಂಕರಾಚಾರ್ಯರು ತಮ್ಮ “ಗುರ್ವಷ್ಟಕಮ್” ಎಂಬ ಸ್ತೂತ್ರದಲ್ಲಿ ಹೀಗೆ ಹೇಳಿದ್ದಾರೆ :
ಶರೀರಂ ಸುರೂಪಂ ತಥಾ ವಾ ಕಲತ್ರಂ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ।

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್।।

ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ, ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ ಎಂದು.ಏನೆಲ್ಲ ಸಾಧಿಸಿದ್ದರೂ, ತ್ಯಜಿಸಿದ್ದರೂ,ಗುರುವಿನ ಕರುಣೆಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಯುತ್ತದೆ.ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟಸಾದ್ಯ ಎನ್ನುತ್ತಾ ಗುರುವಿನ ಮಹತ್ವನ್ನು ವಿವರಿಸುತ್ತಾರೆ ಆಚಾರ್ಯರು.

ನಮ್ಮ ಈ ಸನಾತನ ಪರಂಪರೆಯಲ್ಲಿ ಈಗಿರುವ “ಗುರುವಿನ ಗುರುವಿಗೆ ಪರಮಗುರು”ಎಂದೂ, “ಪರಮ ಗುರುವಿನ ಗುರುವನ್ನು ಪರಾಪರ ಗುರು”ಎಂದೂ,”ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು”ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ಯಂದು ಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ. ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರ ವಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನ ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜತೆಗೇ “ಗುರು ಪೂರ್ಣಿಮೆ”ಯಂದು ಪೂಜಿಸುತ್ತೇವೆ. ಲೋಕಗುರು, ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು. ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ. “ಗುರು” ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬ ಚೈತನ್ಯದಾಯಕವಾಗಿರುತ್ತದೆ.

ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ ಸಿದ್ಧ ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ. ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ,ಗುರುಗೋವಿಂದ ಭಟ್ಟರು-ಸಂತ ಶಿಶುನಾಳ ಶರೀಫ , ರಾಮಕೃಷ್ಣ ಪರಮಹಂಸರು- ಸ್ವಾಮಿ ವಿವೇಕಾನಂದರು,ಬ್ರಹ್ಮಚೈತನ್ಯ ಗೊಂದಾವಲಿಕರ ಮಹಾರಾಜ-ಬ್ರಹ್ಮಾನಂದ ಮಹಾರಾಜ… ಇವರೆಲ್ಲ ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.

ಗುರುವಿನ ಬಗೆಗೆ ವರ್ಣಿಸುತ್ತಾ ಹೊರಟರೆ ಅದು ಸಾಗರದಷ್ಟು ಆಳ, ಅಗಲ. ಆಗಸದಷ್ಟು ವಿಶಾಲ, ವಿಸ್ತಾರ. ಗುರು ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಅದ್ಬುತ ಶಕ್ತಿ ಎಂದು ಅರ್ಥೈಸಿ ತಿಳಿದುಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ….

ಇದನ್ನೂ ಓದಿ: Guru Purnima 2024: ಭಾರತದ ಮಹೋನ್ನತ ಕ್ರೀಡಾ ತಾರೆಗಳನ್ನು ಸೃಷ್ಟಿಸಿದ 6 ‘ಗುರು’ಗಳಿವರು

Continue Reading
Advertisement
Joe Root
ಕ್ರೀಡೆ9 mins ago

Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

CT Ravi
ಕರ್ನಾಟಕ13 mins ago

CT Ravi: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸಿ.ಟಿ.ರವಿ; ಇಲ್ಲಿದೆ ಪತ್ರದ ಸಾರಾಂಶ

Aishwarya Rai Bachchan
ಸಿನಿಮಾ14 mins ago

Aishwarya Rai Bachchan: ಐಶ್ವರ್ಯಾ ರೈ ಧರಿಸಿರುವ V ಆಕಾರದ ಈ ವಜ್ರದುಂಗುರದ ವಿಶೇಷತೆ ಗೊತ್ತೆ?

Mukesh Ambani
ವಾಣಿಜ್ಯ41 mins ago

Mukesh Ambani: ಮುಕೇಶ್ ಅಂಬಾನಿಯ ಒಂದು ದಿನದ ಆದಾಯ 163 ಕೋಟಿ ರೂ! ಒಟ್ಟು ಸಂಪತ್ತೆಷ್ಟು?

Minister Dinesh Gundurao drives for the 5th Kannada Sahitya Sammelana in Bengaluru
ಬೆಂಗಳೂರು51 mins ago

Kannada Sahitya Sammelana: ಬೆಂಗಳೂರಿನಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

The woman shows gray hair on her head. Hair with fragments of gray hair, hair roots requiring dyeing
ಆರೋಗ್ಯ52 mins ago

Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

Yadgiri News Kolluru bridge inundation MLA Channareddy Patil tunnuru visit inspection
ಯಾದಗಿರಿ52 mins ago

Yadgiri News: ಕೃಷ್ಣಾ ನದಿ ಪ್ರವಾಹದಿಂದ ಕೊಳ್ಳುರು ಸೇತುವೆ ಮುಳುಗಡೆ; ಶಾಸಕ ಚನ್ನಾರೆಡ್ಡಿ ಪಾಟೀಲ ಭೇಟಿ

Nirmala Sahaya Hasta programme by Okkaliga Yuva Brigade on 28th July and 1st 3rd and 5th August
ಬೆಂಗಳೂರು53 mins ago

Bengaluru News: ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಜು.28ರಂದು ʼನಿರ್ಮಲ ಸಹಾಯ ಹಸ್ತʼ ಕಾರ್ಯಕ್ರಮ

Karnataka weather Forecast
ಮಳೆ55 mins ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

Drowned in water
ಬಳ್ಳಾರಿ1 hour ago

Drowned in water : ಮೀನು ಹಿಡಿಯುವಾಗ ಫಿಟ್ಸ್‌ ಬಂದು ನದಿಗೆ ಬಿದ್ದ ಮೀನುಗಾರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ55 mins ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ6 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ7 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌