Health Tips: ಮೊಳಕೆ ಕಾಳುಗಳನ್ನು ಹೇಗೆ ತಿಂದರೆ ಒಳ್ಳೆಯದು ಗೊತ್ತೇ? - Vistara News

ಆರೋಗ್ಯ

Health Tips: ಮೊಳಕೆ ಕಾಳುಗಳನ್ನು ಹೇಗೆ ತಿಂದರೆ ಒಳ್ಳೆಯದು ಗೊತ್ತೇ?

ಹಸಿಯಾಗಿ ತಿನ್ನಬಹುದೇ ಬೇಯಿಸಿ ತಿನ್ನಬಹುದೇ ಎಂಬ ಸಂದಿಗ್ಧಗಳೂ ಕೂಡಾ ಎಲ್ಲರ ಬಳಿ ಇರುವಂಥದ್ದೇ. ಬನ್ನಿ, ಮೊಳಕೆ ಕಾಳುಗಳನ್ನು ಹೇಗೆ ತಿಂದರೆ ಒಳ್ಳೆಯದು (sprouts benefits) ಎಂಬುದನ್ನು ನೋಡೋಣ.

VISTARANEWS.COM


on

sprouts
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಹಳ ಹಿಂದಿನಿಂದಲೂ ಮೊಳಕೆ ಕಾಳುಗಳು (sprouts) ನಮ್ಮ ಆಹಾರದ ಭಾಗವಾಗಿವೆ. ಇದರಲ್ಲಿರುವ ಹೆಚ್ಚಿನ ಪ್ರೊಟೀನ್‌ ಹಾಗೂ ಇತರ ಪೋಷಕಾಂಶಗಳ ಕಾರಣದಿಂದಾಗಿ ಮೊಳಕೆಕಾಳುಗಳು ಇತ್ತೀಚೆಗಿನ ದಿನಗಳಲ್ಲಿ ಮತ್ತೆ ಬಳಕೆಗೆ ಬರುತ್ತಿವೆ. ಮುಖ್ಯವಾಗಿ ಸಸ್ಯಾಹಾರಿಗಳು ತಮ್ಮ ನಿತ್ಯದ ಪ್ರೊಟೀನ್‌ ಮೂಲಕ್ಕಾಗಿ ಮೊಳಕೆಕಾಳುಗಳ ಮೊರೆ ಹೋಗುತ್ತಿರುವುದು ಹೆಚ್ಚುತ್ತಿದೆ. ಕಡಲೆ, ಹೆಸರು ಸೇರಿದಂತೆ ದ್ವಿದಳ ಧಾನ್ಯಗಳನ್ನು ಮೊಳಕೆ ಬರಿಸುವ ಮೂಲಕ ಹೊಸಜೀವ ಅಂದರೆ ಸಸ್ಯ ಉಗಮವಾಗುವ ಹೊತ್ತಿನಲ್ಲಿ ಅತ್ಯಧಿಕವಾಗಿರುವ ಪ್ರೊಟೀನನ್ನು ಪಡೆಯುವ ಈ ಆಹಾರ ಕ್ರಮದ ಬಗ್ಗೆ ಹಲವು ಚರ್ಚೆಗಳೂ ಇವೆ. ಕೆಲವರು ಇದು ಒಳ್ಳೆಯದಲ್ಲ ಎಂದರೆ ಇನ್ನೂ ಕೆಲವರು, ಮೊಳಕೆ ಕಾಳುಗಳನ್ನು ನಿತ್ಯ ಸೇವಿಸಬೇಕು ಎನ್ನುವವರಿದ್ದಾರೆ. ಹಲವು ಬಾರಿ ಇಂತಹ ಚರ್ಚೆಗಳೇ ಗೊಂದಲಗಳನ್ನು ಹುಟ್ಟಿಸಿ ಏನು ಮಾಡಬೇಕು ಎಂದು ಅರಿವಾಗದೆ ಸಾಮಾನ್ಯರು ಪರದಾಡುವುದುಂಟು. ಅದರಲ್ಲೂ, ಹಸಿಯಾಗಿ ತಿನ್ನಬಹುದೇ ಬೇಯಿಸಿ ತಿನ್ನಬಹುದೇ ಎಂಬ ಸಂದಿಗ್ಧಗಳೂ ಕೂಡಾ ಎಲ್ಲರ ಬಳಿ ಇರುವಂಥದ್ದೇ. ಬನ್ನಿ, ಮೊಳಕೆ ಕಾಳುಗಳನ್ನು ಹೇಗೆ ತಿಂದರೆ ಒಳ್ಳೆಯದು (sprouts benefits) ಎಂಬುದನ್ನು ನೋಡೋಣ.

ಅಂತರ್ಜಾಲವನ್ನು ಜಾಲಾಡಿದಾಗ ಮೊಳಕೆ ಕಾಳುಗಳನ್ನು ಯಾವೆಲ್ಲ ಮಾದರಿಯಲ್ಲಿ ಹೊಟ್ಟೆ ಸೇರಿಸಬಹುದು ಎಂಬುದಕ್ಕೆ ನೂರಾರು ರೆಸಿಪಿಗಳು, ಉದಾಹರಣೆಗಳು ಸಿಗುತ್ತವೆ. ಆದರೆ, ಯಾವುದನ್ನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಸಿಗುವುದಿಲ್ಲ. ಹೀಗಾಗಿ ಬಹುತೇಕರು ಅವರದ್ದೇ ಮಾದರಿಯಲ್ಲಿ ಅವರವರದ್ದೇ ರಿಸಿಪಿಗಳನ್ನು ಪ್ರಯತ್ನಿಸುತ್ತಾ, ಹಸಿಯಾಗಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಇದರಲ್ಲಿರುವ ಪ್ರೊಟೀನ್‌ನ ಬಹುತೇಕ ಲಾಭಗಳನ್ನು ಪಡೆಯಬಹುದು ಎಂಬ ಲೆಕ್ಕಾಚಾರಗಳನ್ನು ಹಾಕುತ್ತಾರೆ. ಆದರೆ, ಕೆಲವು ತಜ್ಞರ ಪ್ರಕಾರ, ಹಸಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಫುಡ್‌ ಪಾಯ್ಸನಿಂಗ್‌ (ವಿಷಾಹಾರ) ಸಮಸ್ಯೆಗಳೂ ಉಂಟಾಗಬಹುದಂತೆ. ಮೊಳಕೆ ಬರುವ ಕ್ರಿಯೆಗೆ ಕೊಂಚ ಬೆಚ್ಚಗಿನ ಹಾಗೂ ವಾತಾವರಣದಲ್ಲಿ ನೀರಿನಂಶ ಇರುವ ಅಗತ್ಯವೂ ಇರುವುದರಿಂದ ಈ ಸಂದರ್ಭ ಬ್ಯಾಕ್ಟೀರಿಯಾಗಳ ಬೆಳವಣಿಗೆಯೂ ಇದರಲ್ಲಿ ಆಗುವ ಸಂಭವ ಹೆಚ್ಚು ಎನ್ನುತ್ತಾರೆ. ಇ ಕೊಲೈ, ಸಾಲ್ಮೊನೆಲ್ಲಾ ಮತ್ತಿತರ ಬ್ಯಾಕ್ಟೀರಿಯಾಗಳೂ ಕೂಡಾ ಮೊಳಕೆ ಕಾಳುಗಳಲ್ಲಿ ಇರುವ ಸಂಭವ ಇದೆ. ಹಾಗಾಗಿ, ಹಸಿಯಾಗಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಇಂಥ ಬ್ಯಾಕ್ಟೀರಿಯಾಗಳು ನಮ್ಮ ಹೊಟ್ಟೆ ಸೇರುವ ಸಂಭವ ಹೆಚ್ಚಿರುವುದರಿಂದ ವಾಂತಿ, ಹೊಟ್ಟೆನೋವು, ಬೇಧಿಯೂ ಉಂಟಾಗಬಹುದು.

ಹಾಗೆ ನೋಡಿದರೆ, ಹಸಿ ಮೊಳಕೆ ಕಾಳುಗಳನ್ನು ನಮ್ಮ ಹೊಟ್ಟೆ ಜೀರ್ಣಿಸಿಕೊಳ್ಳುವುದು ಬಹಳ ನಿಧಾನ. ಜೀರ್ಣಕ್ರಿಯೆ ಸರಿಯಾಗಿಲ್ಲದ ಮಂದಿ, ಅಸಿಡಿಟಿ ಹಾಗೂ ಇತರ ಜೀರ್ಣಕ್ರಿಯೆ ಸಮಸ್ಯೆಗಳನ್ನು ಮೊದಲೇ ಹೊಂದಿರುವ ಮಂದಿ ಈ ಹಸಿ ಮೊಳಕೆ ಕಾಳುಗಳನ್ನು ಸೇವಿಸಿದರೆ ಸಮಸ್ಯೆಗಳುಂಟಾಗಬಹುದು. ಹಾಗಾಗಿ ಇಂಥವರು ಬೇಯಿಸಿ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುವುದಷ್ಟೇ ಅಲ್ಲ, ಬ್ಯಾಕ್ಟೀರಿಯಾಗಳೂ ಹೊಟ್ಟೆ ಸೇರಿ ಹೊಟ್ಟೆ ಕೆಡುವುದು ತಪ್ಪುತ್ತದೆ.

ಹಾಗಾದರೆ, ಬಹಳಷ್ಟು ಮಂದಿ ಈಗ ಯೋಚಿಸಬಹುದು, ಬೇಯಿಸಿ ಮೊಳಕೆ ಕಾಳುಗಳನ್ನು ತಿಂದರೆ ಹಸಿಯಲ್ಲಿರುವ ಹೆಚ್ಚಿನ ಎಲ್ಲ ಪೋಷಕಾಂಶಗಳೂ ನಷ್ಟವಾಗುತ್ತದಲ್ಲ ಎಂದು ಯೋಚಿಸಬಹುದು. ಇದು ನಿಜ ಕೂಡಾ, ಬೇಯಿಸುವಾಗ, ಕೆಲವು ಪೋಷಕಾಂಶಗಳು ನಷ್ಟವಾಗುತ್ತವೆ ನಿಜ. ಆದರೆ, ಹಸಿಯಲ್ಲಿರುವ ಎಲ್ಲ ಪೋಷಕಾಂಶಗಳನ್ನೂ ನಮ್ಮ ದೇಹ ಸರಿಯಾಗಿ ಬಳಸಿಕೊಳ್ಳುವುದಿಲ್ಲ, ಅವು ಕೂಡಾ ದೇಹ ಸೇರಿದ ಮೇಲೆ ನಷ್ಟವಾಗುತ್ತದೆ ಎಂಬುದೂ ಕೂಡಾ ನಿಜವೇ. ಹಾಗಾಗಿ, ಪೋಷಕಾಂಶ ನಷ್ಟವಾಗುತ್ತದೆ ಎಂದು ಚಿಂತಿಸುವವರು, ಮೊಳಕೆ ಕಾಳನ್ನು ಪೂರ್ಣವಾಗಿ ಬೇಯಿಸದಿದ್ದರೂ, ಬಾಣಲೆಯಲ್ಲೊಮ್ಮೆ ಹಾಕಿ ಅರೆ ಬೇಯಿಸದಂತೆ ಮಾಡಿಯೋ ಅಥವಾ ಕೊಂಚ ಬಾಡಿಸಿಕೊಂಡು ತಿನ್ನಬಹುದು. ಆಗ ಇದರಲ್ಲಿರುವ ಬ್ಯಾಕ್ಟೀರಿಯಾಗಳು ಮಾತ್ರ ಸಾಯುತ್ತವೆ, ಹೊಟ್ಟೆ ಕೆಡುವುದು ತಪ್ಪುತ್ತದೆ. ಅಲ್ಲದೆ, ಪೂರ್ತಿ ಬೇಯಿಸುದಕ್ಕಿಂದ ಕಡಿಮೆ ಪ್ರಮಾಣದ ಪೋಷಕಾಂಶ ಇದರಲ್ಲಿ ನಷ್ಟವಾಗುತ್ತದೆ.  ಹಾಗಾಗಿ ಯಾವಾಗಲೂ, ಮೊಳಕೆ ಕಾಳುಗಳನ್ನು ಹಾಗೆಯೇ ಹಸಿಯಾಗಿ ತಿನ್ನುವುದಕ್ಕಿಂತ ಆರೋಗ್ಯ ಕಾಪಾಡಿಕೊಳ್ಳುವ ತಂತ್ರಗಳನ್ನು ನೆನಪಿನಲ್ಲಿಡಿ.

ಇದನ್ನೂ ಓದಿ: Food Tips: ಮೊಳಕೆ ಕಾಳುಗಳನ್ನು ಕೆಡದಂತೆ ಹೆಚ್ಚು ಕಾಲ ಇಡಲು ಇಲ್ಲಿವೆ ಟಿಪ್ಸ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

ಉಪ್ಪನ್ನು ಹಾಗೆಯೇ ತಿನ್ನಲು ಸಾಧ್ಯವಿಲ್ಲವಾದರೂ, ಉಪ್ಪು ಹಾಕದ ಅಡುಗೆಗೆ ರುಚಿಯೇ ಇಲ್ಲ ಎಂಬುದು ಸತ್ಯವೇ. ನಮ್ಮ ನಿತ್ಯ ಜೀವನದಲ್ಲಿ ಉಪ್ಪು ನಿತ್ಯವೂ ಯಾವುದಾದರೊಂದು ಬಗೆಯಲ್ಲಿ ನಾವು ಬಳಸುತ್ತಲೇ ಇರುತ್ತೇವೆ. ಅಡುಗೆಯ ಹೊರತಾಗಿಯೂ ಉಪ್ಪಿನ ಉಪಯೋಗ ಬಹಳ. ಆದರೆ, ಉಪ್ಪಿನ ಬಳಕೆಯ ವಿಚಾರದಲ್ಲೂ ನಮಗೆ ಗೊಂದಲಗಳಾಗುವುದುಂಟು. ಮುಖ್ಯವಾಗಿ ಬಿಳಿಯಾದ ಸಂಸ್ಕರಿಸಿದ ಪುಡಿ ಉಪ್ಪನ್ನು ಸುಲಭವಾಗಿ ಕಡಿಮೆ ದರದಲ್ಲಿ ಸಿಗುವ ಕಾರಣ ತಂದು ಬಳಸುತ್ತೇವೆ ನಿಜವಾದರೂ, ಈ ಸಂಸ್ಕರಿಸಿದ ಪುಡಿ ಉಪ್ಪು ನಿಜವಾಗಿಯೂ ಒಳ್ಳೆಯದೇ ಎಂಬ ಬಗ್ಗೆ ಹಲವು ಸಮಯಗಳಿಂದ ಗೊಂದಲಗಳು (Rock Salt Or Powder Salt) ಇದ್ದೇ ಇವೆ.

VISTARANEWS.COM


on

Rock Salt Or Powder Salt
Koo

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ಹಳೆಯ ಗಾದೆಯಿದೆ. ಉಪ್ಪನ್ನು ಹಾಗೆಯೇ ತಿನ್ನಲು ಸಾಧ್ಯವಿಲ್ಲವಾದರೂ, ಉಪ್ಪು ಹಾಕದ ಅಡುಗೆಗೆ ರುಚಿಯೇ ಇಲ್ಲ ಎಂಬುದು ಸತ್ಯವೇ. ನಮ್ಮ ನಿತ್ಯ ಜೀವನದಲ್ಲಿ ಉಪ್ಪು ನಿತ್ಯವೂ ಯಾವುದಾದರೊಂದು ಬಗೆಯಲ್ಲಿ ನಾವು ಬಳಸುತ್ತಲೇ ಇರುತ್ತೇವೆ. ಅಡುಗೆಯ ಹೊರತಾಗಿಯೂ ಉಪ್ಪಿನ ಉಪಯೋಗ ಬಹಳ. ಆದರೆ, ಉಪ್ಪಿನ ಬಳಕೆಯ ವಿಚಾರದಲ್ಲೂ ನಮಗೆ ಗೊಂದಲಗಳಾಗುವುದುಂಟು. ಮುಖ್ಯವಾಗಿ ಬಿಳಿಯಾದ ಸಂಸ್ಕರಿಸಿದ ಪುಡಿ ಉಪ್ಪನ್ನು ಸುಲಭವಾಗಿ ಕಡಿಮೆ ದರದಲ್ಲಿ ಸಿಗುವ ಕಾರಣ ತಂದು ಬಳಸುತ್ತೇವೆ ನಿಜವಾದರೂ, ಈ ಸಂಸ್ಕರಿಸಿದ ಪುಡಿ ಉಪ್ಪು ನಿಜವಾಗಿಯೂ ಒಳ್ಳೆಯದೇ ಎಂಬ ಬಗ್ಗೆ ಹಲವು ಸಮಯಗಳಿಂದ ಗೊಂದಲಗಳು ಇದ್ದೇ ಇವೆ. ಸೈಂದವ ಲವಣ ಅಥವಾ ಕಲ್ಲುಪ್ಪಿಗೆ ಹೋಲಿಸಿದರೆ ಪುಡಿ ಉಪ್ಪು ಆರೋಗ್ಯಕರವಲ್ಲ ಎಂಬ ವಾದಗಳೂ ಇವೆ. ಬನ್ನಿ, ಈ ಮಾತಿನ ಸತ್ಯಾಸತ್ಯತೆಯ (Rock Salt Or Powder Salt) ಪರಾಮರ್ಶೆ ನಡೆಸೋಣ. ಇಲ್ಲಿ ಎಲ್ಲಕ್ಕಿಂತ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ರಿಪೈನ್ಡ್‌ ಅಥವಾ ಸಂಸ್ಕರಿಸಿ ಬಿಳಿಯಾದ ಪುಡಿ ಉಪ್ಪು ಕೂಡಾ ನೈಸರ್ಗಿಕ ಮೂಲಗಳಿಂದಲೇ ತಯಾರಿಸುವ ಉಪ್ಪು. ಬೇರೆ ಉಪ್ಪುಗಳಿಗೆ ಹೋಲಿಸಿದರೆ, ಇದನ್ನು ಸಮುದ್ರದ ನೀರಿನಿಂದಲೇ ತಯಾರಿಸಿದ್ದರೂ ಇದನ್ನು ಸಂಸ್ಕರಿಸಿ, ಅದರಲ್ಲಿರಲ್ಲಿರುವ ಕೊಳೆಯನ್ನು ಬೇರ್ಪಡಿಸಿ ಅದಕ್ಕೆ ಅಯೋಡಿನ್‌ ಅನ್ನು ಸೇರಿಸಿದ ಮೇಲೆ ಪ್ಯಾಕೆಟ್ಟುಗಳಲ್ಲಿ ಪುಡಿಯಾದ ರೂಪದಲ್ಲಿ ಬಿಡಲಾಗುತ್ತದೆ. ಗಾಯಟೆರ್‌ ಹಾಗೂ ಹೈಪೋಥೈರಾಯ್ಡಿಸಮ್‌ಗಳು ಬರದಂತೆ ಉಪ್ಪಿಗೆ ಅಯೋಡಿನ್‌ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಹಾಗಾಗಿ ನೈಸರ್ಗಿಕ ಮೂಲದಿಂದಲೇ ತಯಾರಾಗುವ ಪುಡಿ ಉಪ್ಪು ಆರೋಗ್ಯಕರವಲ್ಲ ಎಂಬುದು ನಿಜವಲ್ಲ ಎಂಬುದನ್ನು ಮೊದಲು ತಿಳಿಯಬೇಕು. ಕಾರ್ಖಾನೆಗಳಲ್ಲಿ ಉಪ್ಪನ್ನು ಪ್ಯಾಕೆಟ್ಟುಗಳಲ್ಲಿ ತುಂಬಿಸಬೇಕಾದರೆ ಅದಕ್ಕೆ ಕೆಲವು ಆಂಟಿ ಕೇಕಿಂಗ್‌ ಏಜೆಂಟುಗಳನ್ನು ಸೇರಿಸಲಾಗುತ್ತದೆ. ಈ ಆಂಟಿ ಕೇಕಿಂಗ್‌ ಏಜೆಂಟುಗಳು ಉಪ್ಪು ಗಂಟಾಗುವುದನ್ನು ತಡೆದು ಉದುರುದುರಾಗಿ ಇರುವಂತೆ ಮಾಡುತ್ತದೆ.

salt

ಸೋಡಿಯಂ ಇದೆಯೆ?

ಸಂಸ್ಕರಿಸಿದ ಉಪ್ಪಿನಲ್ಲಿಯೂ ಸೋಡಿಯಂ ಇದೆ. ಸೈಂದವ ಲವಣ ಅಥವಾ ಕಲ್ಲುಪ್ಪಿನಲ್ಲೂ ಸೋಡಿಯಂ ಇದೆ. ಹಾಗಾಗಿ ಸೋಡಿಯಂ ಬಗ್ಗೆ ಚಿಂತೆ ಮಾಡುವವರಿಗೆ ಚಿಂತೆಗೆ ಇಲ್ಲಿ ಅವಕಾಶವಿಲ್ಲ. ಎರಡರಲ್ಲೂ ಸೋಡಿಯಂ ಇರುವುದರಿಂದ ಇವೆರಡೂ ಅತಿಯಾದಲ್ಲಿ ಹೈಪರ್‌ಟೆನ್ಶನ್‌ನ ಅಪಾಯ ಇದ್ದೇ ಇದೆ. ಹಾಗಾಗಿ, ಉಪ್ಪು ಯಾವುದೇ ಆದರೂ ಅತಿಯಾಗಬಾರದು. ಕಡಿಮೆಯೇ ತಿನ್ನುವುದು ಒಳ್ಳೆಯದು.
ಹಾಗೆ ನೋಡಿದರೆ, ಪುಡಿ ಉಪ್ಪಿನಲ್ಲಿ ಸಂಸ್ಕರಿಸುವ ಸಂದರ್ಭದಲ್ಲಿ ಬೆರಕೆಯಾದ ಬೇರೆ ಅಂಶಗಳು ಹಾಗೂ ಅದನ್ನು ಪುಡಿಪುಡಿಯಾಗಿ ಯಾವಾಗಲೂ ಇರಿಸಬಲ್ಲ ಆಂಟಿ ಕೇಕಿಂಗ್‌ ಏಜೆಂಟ್‌ಗಳು ಇತ್ಯಾದಿಗಳಿಂದಾಗಿ ಅದರಲ್ಲಿರುವ ಖನಿಜಾಂಶಗಳು ನಷ್ಟವಾಗಿರುತ್ತವೆ. ಕಲ್ಲುಪ್ಪಿನಲ್ಲಿ, ನೈಸರ್ಗಿಕವಾಗಿ ಉಪ್ಪಿನಲ್ಲಿ ಇರಬಹುದಾದ ಎಲ್ಲ ಬಗೆಯ ಖನಿಜಾಂಶಗಳು ಅದರ ನೈಸರ್ಗಿಕ ರೂಪದಲ್ಲಿಯೇ ಇರುವುದರಿಂದ ಆರೋಗ್ಯದ ವಿಚಾರದಲ್ಲಿ ಹೆಚ್ಚು ಒಳ್ಳೆಯದು ಎಂದು ಹೇಳಬಹುದು.

Rock Salt

ಕಲ್ಲುಪ್ಪು ಪರಿಣಾಮಕಾರಿ

ಸಾಮಾನ್ಯ ಉಪ್ಪಿನಲ್ಲಿ ಶೇ.97ರಷ್ಟು ಸೋಡಿಯಂ ಕ್ಲೋರೈಡ್‌ ಇದ್ದು, ಉಳಿದ ಶೇ.3ರಷ್ಟು ವಸ್ತುಗಳು ಸಂಸ್ಕರಣದ ಸಂದರ್ಭದಲ್ಲಿ ಸೇರಿಸಲ್ಪಡುತ್ತದೆ. ಮುಖ್ಯವಾಗಿ ಅಯೋಡಿನ್‌ ಈ ಸಂದರ್ಭ ಸೇರಿಸಲಾಗುತ್ತದೆ. ಆದರೆ ಕಲ್ಲುಪ್ಪಿನಲ್ಲಿ ಅಂದರೆ, ಭೂಮಿಯಡಿಯಿಂದ ದೊರೆಯುವ ಉಪ್ಪಿನಲ್ಲಿ ಶೇ.85ರಷ್ಟು ಸೋಡಿಯಂ ಕ್ಲೋರೈಡ್‌ ಇದ್ದು ಉಳಿದ ಶೇ.15ರಷ್ಟು ಅಂಶ ಕಬ್ಬಿಣಾಂಶ, ತಾಮ್ರ, ಝಿಂಕ್‌, ಅಯೋಡಿನ್‌, ಮ್ಯಾಂಗನೀಸ್‌, ಮೆಗ್ನೀಶಿಯಂ, ಸೆಲೆನಿಯಂ, ಅಯೋಡಿನ್‌ ಇತ್ಯಾದಿಗಳೂ ಇರುತ್ತವೆ. ಇದಕ್ಕೆ ಪ್ರತ್ಯೇಕವಾಗಿ ಅಯೋಡಿನ್‌ ಸೇರಿಸಲಾಗಿರುವುದಿಲ್ಲ. ಆದರೂ, ನೀರನ್ನು ಶುದ್ಧಿಕರಿಸಿ ಕುಡಿಯುವ ಅಭ್ಯಾಸ ಇತ್ತೀಚೆಗೆ ಹೆಚ್ಚಿರುವುದರಿಂದ, ನೀರಿನ ಮೂಲಕ ಖನಿಜಾಂಶಗಳು ಮನುಷ್ಯನ ದೇಹಕ್ಕೆ ಹೋಗುವುದಿಲ್ಲ. ಹೀಗಾಗಿ ಕಲ್ಲುಪ್ಪನ್ನು ಸೇವಿಸುವ ಪ್ರಮಾಣವೂ ಇತ್ತೀಚೆಗೆ ಹೆಚ್ಚಾಗುತ್ತಿದೆ. ಆ ಮೂಲಕ ಖನಿಜಾಂಶಗಳು ದೇಹಕ್ಕೆ ಸೇರುವ ಬಗೆ ಇದು. ಹಾಗಾಗಿ, ಸಾಮಾನ್ಯ ಪುಡಿ ಉಪ್ಪಿನಿಂದ ಕಲ್ಲುಪ್ಪು ಅನೇಕ ಬಗೆಯಲ್ಲಿ ಪರಿಣಾಮಕಾರಿ ಹಾಗೂ ಅರೋಗ್ಯಕರ ಎಂಬುದು ನಿಜ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Continue Reading

ಆರೋಗ್ಯ

Health Benefits Of Jaggery: ಬೆಲ್ಲ ಉಳಿದ ಆಹಾರದಂಥಲ್ಲ; ಇದರ ಲಾಭಗಳು ಏನೇನು ತಿಳಿದುಕೊಂಡಿರಿ

ಅತಿ ಕಡಿಮೆ ಸಂಸ್ಕರಣೆಗೆ ಒಳಗಾಗುವ ಬೆಲ್ಲದಲ್ಲಿ ಅತಿ ಹೆಚ್ಚಿನ ಖನಿಜಗಳು ಕಂಡುಬರುತ್ತವೆ. ಬೆಲ್ಲದ ಸವಿಯನ್ನು ತಿಂದವನೇ ಬಲ್ಲ. ನೈಸರ್ಗಿಕ ಸಿಹಿ ಎಂದೇ ಖ್ಯಾತವಾದ ಈ ಬೆಲ್ಲ ಪೊಂಗಲ್‌, ಪಾಯಸದಂಥ ಸಿಹಿತಿಂಡಿಗಳಿಗೆ ಅಥವಾ ಎಳ್ಳಿನೊಂದಿಗೆ ಹಂಚುವುದಕ್ಕೆ ಮಾತ್ರವೇ ಬಳಸುವುದಲ್ಲ. ಶತಮಾನಗಳಿಂದ ಭಾರತೀಯ ಅಡುಗೆ ಮನೆಗಳಲ್ಲಿ ಖಾದ್ಯಗಳನ್ನು ರುಚಿಗಟ್ಟಿಸುತ್ತಲೇ ಬಂದಿದೆ. ಆಲೆಮನೆಗಳಲ್ಲಿ ಸರಳವಾಗಿ ಕಣ್ಣೆದುರಿಗೇ ತಯಾರಾಗುವ ಬೆಲ್ಲದ ಬಗ್ಗೆ ಸಿಹಿ ಪ್ರಿಯರಿಗೆ ಕೊಂಚ ಹೆಚ್ಚೇ ಮೋಹ. ಈ ಕುರಿತ (Health Benefits Of Jaggery) ವಿವರ ಇಲ್ಲಿದೆ.

VISTARANEWS.COM


on

Health Benefits Of Jaggery
Koo

ಬೆಲ್ಲವನ್ನು ಯಾವುದೇ ರೂಪದಲ್ಲಿ, ಅಂದರೆ ಅಚ್ಚು, ಪುಡಿ, ಜೋನಿ ಮುಂತಾದ ಯಾವುದೇ ರೂಪದಲ್ಲಿ ಸೇವಿಸಿದರೂ ಲಾಭವಿದೆ. ಖಾದ್ಯದ ರುಚಿ ಹೆಚ್ಚುವುದು ಮಾತ್ರವೇ ಅಲ್ಲ, ಆರೋಗ್ಯಕ್ಕೂ ಹಲವಾರು ಪ್ರಯೋಜನಗಳಿವೆ. ಅತಿ ಕಡಿಮೆ ಸಂಸ್ಕರಣೆಗೆ ಒಳಗಾಗುವ ಬೆಲ್ಲದಲ್ಲಿ ಅತಿ ಹೆಚ್ಚಿನ ಖನಿಜಗಳು ಕಂಡುಬರುತ್ತವೆ. ಬೆಲ್ಲದ ಸವಿಯನ್ನು ತಿಂದವನೇ ಬಲ್ಲ. ನೈಸರ್ಗಿಕ ಸಿಹಿ ಎಂದೇ ಖ್ಯಾತವಾದ ಈ ಬೆಲ್ಲ ಪೊಂಗಲ್‌, ಪಾಯಸದಂಥ ಸಿಹಿತಿಂಡಿಗಳಿಗೆ ಅಥವಾ ಎಳ್ಳಿನೊಂದಿಗೆ ಹಂಚುವುದಕ್ಕೆ ಮಾತ್ರವೇ ಬಳಸುವುದಲ್ಲ. ಶತಮಾನಗಳಿಂದ ಭಾರತೀಯ ಅಡುಗೆ ಮನೆಗಳಲ್ಲಿ ಖಾದ್ಯಗಳನ್ನು ರುಚಿಗಟ್ಟಿಸುತ್ತಲೇ ಬಂದಿದೆ. ಒದ್ದೆ ಮಣ್ಣಿನ ಪರಿಮಳದಂಥ ಘಮವನ್ನು ಹೊಂದಿದ ಈ ಸಿಹಿಯ ಮೂಲ ಕಬ್ಬು. ಸಕ್ಕರೆಯಂತೆ ತರಹೇವಾರಿ ಸಂಸ್ಕರಣೆಗಳಿಗೆ ಒಳಗಾಗದೆ, ಆಲೆಮನೆಗಳಲ್ಲಿ ಸರಳವಾಗಿ ಕಣ್ಣೆದುರಿಗೇ ತಯಾರಾಗುವ ಬೆಲ್ಲದ ಬಗ್ಗೆ ಸಿಹಿ ಪ್ರಿಯರಿಗೆ ಕೊಂಚ ಹೆಚ್ಚೇ ಮೋಹ. ಬೆಲ್ಲ ಖಾದ್ಯದ ರುಚಿ ಹೆಚ್ಚುವುದು ಮಾತ್ರವೇ ಅಲ್ಲ, ಆರೋಗ್ಯಕ್ಕೂ ಹಲವಾರು ಪ್ರಯೋಜನಗಳಿವೆ. ಆಯುರ್ವೇದ ಮತ್ತು ಪರಂಪರಾಗತ ಔಷಧಪ್ರಕಾರಗಳಲ್ಲಿ ಬೆಲ್ಲ ಹಲವು ಮದ್ದುಗಳಲ್ಲಿ ಬಳಕೆಯಾಗುತ್ತದೆ. ಅತಿ ಕಡಿಮೆ ಸಂಸ್ಕರಣೆಗೆ ಒಳಗಾಗುವ ಬೆಲ್ಲದ ಸ್ವರೂಪಗಳಲ್ಲಿ ಅತಿ ಹೆಚ್ಚಿನ ಖನಿಜಗಳು ಕಂಡುಬರುತ್ತವೆ. ಕಬ್ಬಿಣ, ಮ್ಯಾಂಗನೀಸ್‌, ಪೊಟಾಶಿಯಂ ಮತ್ತು ಹಲವು ಬಗೆಯ ಬಿ ಜೀವಸತ್ವಗಳು ಬೆಲ್ಲದಲ್ಲಿವೆ. ಇವೆಲ್ಲವೂ ಆರೋಗ್ಯದ (Health Benefits Of Jaggery) ಗುಣಮಟ್ಟವನ್ನು ಸುಧಾರಿಸಬಲ್ಲವು.

jaggery

ಉರಿಯೂತ ಶಮನ

ಸಿಹಿಯನ್ನು ತಿಂದರೆ ಉರಿಯೂತ ಹೆಚ್ಚುವ ಎನ್ನುವುದು ಸತ್ಯ. ಆದರೆ ಶ್ವಾಸನಾಳಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು, ಇದರಿಂದ ಉಂಟಾಗುವ ಅಸ್ತಮಾದಂಥ ಸಮಸ್ಯೆ ಹೆಚ್ಚದಂತೆ ಮಾಡಲು ಇದು ಪ್ರಯೋಜನವಾದೀತು. ಇದರಲ್ಲಿರುವ ಸೆಲೆನಿಯಂ ಮತ್ತು ಕಬ್ಬಿಣದ ಅಂಶಗಳು ರಕ್ತದಲ್ಲಿನ ಹಿಮೊಗ್ಲೋಬಿನ್‌ ಮಟ್ಟವನ್ನು ಸುಧಾರಿಸಿ, ಈ ಮೂಲಕ ಆಮ್ಲಜನಕದ ಪ್ರಮಾಣವನ್ನು ವೃದ್ಧಿಸುತ್ತವೆ

ಸೂಕ್ಷ್ಮ ಸತ್ವಗಳು

ಇದರಲ್ಲಿರುವ ಪೊಟಾಶಿಯಂ ರಕ್ತದೊತ್ತಡ ಶಮನಕ್ಕೆ ನೆರವಾದರೆ, ಮೆಗ್ನೀಶಿಯಂ ಸ್ನಾಯುಗಳಿಗೆ ಬಲ ತುಂಬಬಲ್ಲದು. ಕ್ಯಾಲ್ಸಿಯಂ ಮೂಳೆಗಳನ್ನು ಸದೃಢ ಮಾಡಿದರೆ, ಜಿಂಕ್‌ ಅಂಶವು ಪ್ರತಿರೋಧಕತೆಯನ್ನು ಹೆಚ್ಚಿಸಬಲ್ಲದು. ದೇಹದಿಂದ ಕಶ್ಮಲಗಳನ್ನು ತೆಗೆಯುವ ಮತ್ತು ಮಲಬದ್ಧತೆ ನಿವಾರಿಸುವ ಗುಣವೂ ಬೆಲ್ಲಕ್ಕಿದೆ. ಜೀರ್ಣಾಂಗಗಳನ್ನು ಶುದ್ಧಗೊಳಿಸಿ, ಪಚನಕ್ರಿಯೆಯನ್ನು ಉದ್ದೀಪಿಸುತ್ತದೆ.

Antioxidants in it keep immunity strong Benefits Of Mandakki

ಪ್ರತಿರೋಧಕತೆ ಚುರುಕು

ಬೆಲ್ಲದಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಉರಿಯೂತ ಶಮನಕ್ಕೆ ನೆರವಾಗಬಲ್ಲವು. ಜೊತೆಗೆ ಇದರಲ್ಲಿರುವ ಸತು ಮತ್ತು ಸೆಲೆನಿಯಂ ಅಂಶಗಳು ರೋಗ ನಿರೋಧಕತೆಯನ್ನು ಚುರುಕಾಗಿಸುತ್ತವೆ. ಹಾಗಾಗಿ ಚಳಿಗಾಲದ ಹಬ್ಬ ಸಂಕ್ರಾಂತಿಯಲ್ಲಿ ಎಳ್ಳಿನೊಂದಿಗೆ ಬೆಲ್ಲದ ಬಳಕೆಯೂ ಇರುವುದು ಗಮನಾರ್ಹ.

ರಕ್ತಹೀನತೆಗೆ

ಬೆಲ್ಲದಲ್ಲಿ ಕಬ್ಬಿಣದ ಸತ್ವ ಹೇರಳವಾಗಿ ಇರುವುದರಿಂದ ದೇಹದಲ್ಲಿನ ರಕ್ತಹೀನತೆ ಗುಣಕಾಣಲು ನೆರವಾಗುತ್ತದೆ. ದೇಹದಲ್ಲಿನ ಹಿಮೋಗ್ಲೋಬಿನ್‌ ಮಟ್ಟವನ್ನಿದು ಸುಧಾರಿಸುತ್ತದೆ. ಇದರ ಪಿತ್ತ ಸಮತೋಲನದ ಗುಣಗಳಿಂದಾಗಿ ಆಯುರ್ವೇದದಲ್ಲಿ ಔಷಧವಾಗಿಯೂ ಇದು ಬಳಕೆಯಲ್ಲಿದೆ.

heart attack and Diabetes control

ಸಕ್ಕರೆಯಂಶ ನಿಯಂತ್ರಣ

ಸಿಹಿ ತಿಂದರೆ ಸಕ್ಕರೆಯ ಮಟ್ಟ ಏರುಪೇರಾಗುವುದು ನಿಜ. ಆದರೆ ಸಂಸ್ಕರಿತ ಬಿಳಿ ಸಕ್ಕರೆಯಷ್ಟು ಬೆಲ್ಲ ಹಾಳಲ್ಲ. ಬಿಳಿ ಸಕ್ಕರೆಗಿಂತ ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ. ಹಾಗಾಗಿ ರಕ್ತದಲ್ಲಿನ ಸಕ್ಕರೆಯಂಶವು ದಿಢೀರ್‌ ಏರುಪೇರಾಗುವ ಸಾಧ್ಯತೆ ಸಕ್ಕರೆಗಿಂತ ಬೆಲ್ಲದಲ್ಲಿ ಕಡಿಮೆ. ಹಾಗೆಂದು ಮಧುಮೇಹಿಗಳಾದರೆ ಬೆಲ್ಲವನ್ನೇ ಸೇವಿಸಿದರೂ ಮಿತಿ ಹೇರಿಕೊಳ್ಳುವುದು ಅಗತ್ಯ.

ಶಕ್ತಿ ಹೆಚ್ಚು

ಬಿಸಿಲಿನಲ್ಲಿ ದಣಿದು ಬಂದಿದ್ದೀರಿ ಅಥವಾ ವ್ಯಾಯಾಮದ ನಂತರ ಬೆವರು ಹರಿಸುತ್ತಾ ಕುಳಿತಿದ್ದೀರಿ. ಇಂಥ ಯಾವುದೇ ದಣಿದಂಥ ಸನ್ನಿವೇಶಗಳಲ್ಲೂ ಬೆಲ್ಲದ ನೀರು ಅಥವಾ ಬೆಲ್ಲದ ಪಾನಕದ ಸೇವನೆಯು ದೇಹಕ್ಕೆ ಶಕ್ತಿ ನೀಡಬಲ್ಲದು, ಚೈತನ್ಯ ಹೆಚ್ಚಿಸಬಲ್ಲದು. ಹಳೆಯ ತಲೆಮಾರಿನವರು ತೀವ್ರ ದಣಿದಾಗ ಉಪಯೋಗಿಸುತ್ತಿದ್ದ ʻಎನರ್ಜಿ ಡ್ರಿಂಕ್‌ʼ ಎಂದರೆ ಬೆಲ್ಲದ ಪಾನಕವೇ. ಯಾವುದೇ ಕೃತಕ ಸಿಹಿಗಳಿಲ್ಲದ ಖನಿಜಭರಿತ ನೈಸರ್ಗಿಕ ಸಿಹಿ ಪೇಯ ಯಾವಾಗಲೂ ಕ್ಷೇಮ, ಆರೋಗ್ಯಕರ.

ಇದನ್ನೂ ಓದಿ: Cervical Cancer: ಮಹಿಳೆಯರ ಗರ್ಭಕಂಠದ ಕ್ಯಾನ್ಸರ್‌; ಪುರುಷರಿಗೂ ಇದೆ ಅಪಾಯ!

ಮಹಿಳೆಯರಿಗೆ ಉತ್ತಮ

ಇದರಲ್ಲಿರುವ ಕಬ್ಬಿಣದ ಅಂಶವು ಮುಟ್ಟಿನ ದಿನಗಳ ಹೊಟ್ಟೆನೋವನ್ನು ಶಮನ ಮಾಡುವ ಗುಣ ಹೊಂದಿದೆ. ಜೊತೆಗೆ ಆ ದಿನಗಳಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ನೀಡಿ, ಮೂಡ್‌ ಏರುಪೇರಾಗುವುದನ್ನು ತಡೆಯುತ್ತದೆ. ಜೊತೆಗೆ, ಇದರಲ್ಲಿರುವ ಕ್ಯಾಲ್ಶಿಯಂ, ಫಾಸ್ಫರಸ್‌ ಮತ್ತು ಮೆಗ್ನೀಶಿಯಂ ಅಂಶಗಳು ಮೂಳೆಗಳು ಟೊಳ್ಳಾಗದಂತೆ ತಡೆದು, ಆಸ್ಟಿಯೊಪೊರೊಸಿಸ್‌ ಬಾರದಂತೆ ಕಾಪಾಡುತ್ತವೆ.

Continue Reading

ಕರ್ನಾಟಕ

Fortis Hospital: ನೈಜೀರಿಯನ್ ಯುವತಿಗೆ ಯಶಸ್ವಿ ‘ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ’

Fortis Hospital: ವೈರಲ್‌ ಜ್ವರದ ಬಳಿಕ ಎರಡೂ ಕಿವಿಗಳು ಶ್ರವಣದೋಷಕ್ಕೆ ಒಳಗಾಗಿದ್ದ ನೈಜೀರಿಯಾ ಮೂಲದ 23 ವರ್ಷದ ಯುವತಿಗೆ ಏಕಕಾಲದಲ್ಲೇ “ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ” ಮೂಲಕ ಯುವತಿಗೆ ಎರಡು ಶ್ರವಣ ಸಾಧನಗಳನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಅಳವಡಿಸಿದ್ದಾರೆ.

VISTARANEWS.COM


on

Fortis hospital Doctors Perform Successful Dual Cochlear Implant Surgery on Nigerian Young Woman
Koo

ಬೆಂಗಳೂರು: ವೈರಲ್‌ ಜ್ವರದ ಬಳಿಕ ಎರಡೂ ಕಿವಿಗಳ ಶ್ರವಣದೋಷಕ್ಕೆ ಒಳಗಾಗಿದ್ದ ನೈಜೀರಿಯಾ ಮೂಲದ 23 ವರ್ಷದ ಯುವತಿಗೆ ಏಕಕಾಲದಲ್ಲೇ “ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ” ಮೂಲಕ ಯುವತಿಗೆ ಎರಡು ಶ್ರವಣ ಸಾಧನಗಳನ್ನು ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರು ಯಶಸ್ವಿಯಾಗಿ ಅಳವಡಿಸಿದ್ದಾರೆ.

ಫೋರ್ಟಿಸ್‌ ಆಸ್ಪತ್ರೆಯ ಇಎನ್‌ಟಿ, ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್ ಬೇಸ್ ಸರ್ಜನ್ ಹಿರಿಯ ಸಲಹೆಗಾರ ಡಾ.ಎಚ್.ಕೆ. ಸುಶೀನ್ ದತ್ ಹಾಗೂ ತಜ್ಞರ ಆರೈಕೆಯಲ್ಲಿ ಈ ಸಂಕೀರ್ಣ ಕಾರ್ಯವಿಧಾನವನ್ನು 9 ಗಂಟೆಗಳಲ್ಲಿ ಪೂರ್ಣಗೊಳಿಸಲಾಯಿತು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ

ಈ ಕುರಿತು ಡಾ.ಎಚ್. ಕೆ. ಸುಶೀನ್ ದತ್ ಮಾತನಾಡಿ, 23 ವರ್ಷದ ನೈಜೀರಿಯಾ ಮೂಲದ ಲೀನಾ (ಹೆಸರು ಬದಲಿಸಲಾಗಿದೆ) ಗೆ ಮೂರು ವರ್ಷಗಳ ಹಿಂದೆ ಅತಿಯಾದ ವೈರಲ್‌ ಜ್ವರ ಕಾಣಿಸಿಕೊಂಡಿದೆ, ಈ ಜ್ವರದ ತೀವ್ರತೆಯಿಂದ ಕ್ರಮೇಣ ಅವರು ಮೊದಲು ಬಲಕಿವಿಯ ಕೇಳುವ ಶಕ್ತಿ ಕಳೆದುಕೊಂಡರು, ನಂತರ ಎಡ ಕಿವಿಯು ಶ್ರವಣವೂ ಹೋಯಿತು. ದೊಡ್ಡ ಶಬ್ಧವನ್ನೂ ಸಹ ಅವರು ಕೇಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದರು.

ನಂತರ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಕಿವುಡುತನದ ತೀವ್ರತೆ ಅರಿವಾಯಿತು. ಇವರಿಗೆ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಲು ನಿರ್ಧರಿಸಿದೆವು. ಆದರೆ ಇವರಿಗೆ ಎರಡೂ ಕಿವಿಗಳಿಗೂ ಈ ಸರ್ಜರಿ ಅವಶ್ಯಕತೆ ಇತ್ತು, ಸಾಮಾನ್ಯವಾಗಿ ಈ ಸರ್ಜರಿಯನ್ನು ಒಮ್ಮೆಲೆ ಒಂದು ಕಿವಿಗೆ ಮಾತ್ರ ಮಾಡಲು ಸಾಧ್ಯ. ಆದರೆ, ನಮ್ಮ ತಂಡ ಏಕಕಾಲದಲ್ಲೇ ಎರಡೂ ಕಿವಿಗಳಿಗೂ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಲು ನಿರ್ಧರಿಸಿದೆವು. ಇದಕ್ಕೆ ಸೂಕ್ತ ತಂತ್ರಜ್ಞಾನಗಳ ಬಳಕೆಯಿಂದ 9 ಗಂಟೆಗಳ ನಿರಂತರ ಶಸ್ತ್ರಚಿಕಿತ್ಸೆಯ ಬಳಿಕ ಅವರಿಗೆ ಶ್ರವಣ ಸಾಧನಗಳನ್ನು ಅಳಡಿಸಲಾಗಿದೆ.

ಇದನ್ನೂ ಓದಿ: Pralhad Joshi: ಹೊಸ ಖಾತೆಗಳ ಅಧಿಕಾರ ಸ್ವೀಕರಿಸಿದ ಪ್ರಲ್ಹಾದ್‌ ಜೋಶಿ; ಲಕ್ಷ್ಮಿ ಪೂಜೆಯೊಂದಿಗೆ ಕಾರ್ಯಾರಂಭ

ಶಸ್ತ್ರಚಿಕಿತ್ಸೆಯ 5 ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಅವರು ನೈಜೀರಿಯಾದಲ್ಲಿ ಶ್ರವಣೇಂದ್ರಿಯ ಮೌಖಿಕ ತರಬೇತಿಯನ್ನು ಪಡೆಯುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.

Continue Reading

ಆರೋಗ್ಯ

Health Tips For Monsoon: ಮಳೆಗಾಲಕ್ಕೆ ನಮ್ಮ ಆಹಾರ ಹೇಗಿರಬೇಕು?

ಆಹಾರವೇ ಔಷಧವಾಗಿ ನಮ್ಮನ್ನು ಕಾಯುತ್ತಿದ್ದ ಕಾಲವೊಂದಿತ್ತು. ಈಗಲೂ ಇದೆ. ಆದರೆ ನಮ್ಮ ಆಹಾರವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ. ಮಳೆಗಾಲಕ್ಕೆ ಪೂರಕವಾದಂಥ ಆಹಾರ ಹೇಗಿರಬೇಕು, ಯಾವ ಆಹಾರಗಳು ಹಿತವೆನಿಸುತ್ತವೆ? ನಾವೂ ಮಳೆಯಲ್ಲಿ ನೆನೆಯುವ ಪ್ರಸಂಗಗಳು ಬಂದರೆ, ನಮ್ಮ ರೋಗನಿರೋಧಕ ಶಕ್ತಿಯೂ ದುರ್ಬಲವಾಗಬಹುದು. ಇಂಥ ದಿನಗಳಲ್ಲಿ ನಮ್ಮ ಆಹಾರ ಹೇಗಿರಬೇಕು ಎಂಬೆಲ್ಲ ಉಪಯುಕ್ತ (Health Tips for Monsoon)ಮಾಹಿತಿಗಳು ಇಲ್ಲಿವೆ.

VISTARANEWS.COM


on

Health Tips For Monsoon
Koo

ಮಳೆಗಾಲವೆಂದರೆ ಎಲ್ಲವೂ (Health Tips for Monsoon) ಜೀವ ತಳೆಯುವ ಕಾಲ… ರೋಗಾಣುಗಳೂ ಸಹ! ಬೇಸಿಗೆಯಲ್ಲಿ ರೋಗವೇ ಇರುವುದಿಲ್ಲ ಎಂದಲ್ಲ. ಆದರೆ ಮಳೆಗಾಲದಲ್ಲಿ ಬರುವ ರೋಗಗಳ ಪ್ರಮಾಣ ಸ್ವಲ್ಪ ಹೆಚ್ಚು. ನೀರು, ಆಹಾರ, ಗಾಳಿ, ಸೊಳ್ಳೆ- ಹೀಗೆ ನಾನಾ ಮೂಲಗಳಿಂದ ಮಳೆಗಾಲವು ರೋಗಗಳನ್ನು ಆಹ್ವಾನಿಸುತ್ತದೆ. ಅಷ್ಟು ಸಾಲದೆಂಬಂತೆ ನಾವೂ ಮಳೆಯಲ್ಲಿ ನೆನೆಯುವ ಪ್ರಸಂಗಗಳು ಬಂದರೆ, ನಮ್ಮ ರೋಗನಿರೋಧಕ ಶಕ್ತಿಯೂ ದುರ್ಬಲವಾಗಬಹುದು. ಇಂಥ ದಿನಗಳಲ್ಲಿ ನಮ್ಮ ಆಹಾರ ಹೇಗಿರಬೇಕು?
ಆಹಾರವೇ ಔಷಧವಾಗಿ ನಮ್ಮನ್ನು ಕಾಯುತ್ತಿದ್ದ ಕಾಲವೊಂದಿತ್ತು, ಈಗಲೂ ಇದೆ… ನಮ್ಮ ಆಹಾರವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ. ಇದರಿಂದ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶರೀರವನ್ನು ಸಶಕ್ತವಾಗಿ ಇರಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಮಳೆಗಾಲದಲ್ಲಿ ನಮ್ಮ ಆರೋಗ್ಯವನ್ನೂ ಹಸಿರಾಗಿ ಇರಿಸಿಕೊಳ್ಳಬಹುದು. ಹಾಗಾಗಿ ಮಳೆಗಾಲಕ್ಕೆ ಪೂರಕವಾದಂಥ ಆಹಾರ ಹೇಗಿರಬೇಕು, ಯಾವ ಆಹಾರಗಳು ಹಿತವೆನಿಸುತ್ತವೆ ಎಂಬೆಲ್ಲ ಮಾಹಿತಿಗಳು ಇಲ್ಲಿವೆ.

Summer Fruits

ಹಣ್ಣುಗಳು

ಈ ಋತುವಿನಲ್ಲಿ ದೊರೆಯುವ ಹಣ್ಣುಗಳನ್ನು ಕಡ್ಡಾಯವಾಗಿ ಸೇವಿಸಿ. ಈಗಿನ್ನೂ ಮಾವಿನ ಹಣ್ಣಿನ ಋತು ಮುಗಿದಿಲ್ಲ. ಜೊತೆಗೆ ಹಲಸು, ನೇರಳೆ, ಲಿಚಿ, ದಾಳಿಂಬೆ, ಪೇರ್‌, ಮರಸೇಬು ಮುಂತಾದ ಹಲವು ರೀತಿಯ ಹಣ್ಣುಗಳು ದೊರೆಯುವ ಕಾಲವಿದು. ಇವೆಲ್ಲ ಆಹಾರದ ಭಾಗವಾದರೆ ಒಳ್ಳೆಯದು. ಈ ಹಣ್ಣುಗಳಲ್ಲಿ ವಿಟಮಿನ್‌ ಸಿ, ವಿಟಮಿನ್‌ ಎ, ನಾರು, ಖನಿಜಗಳು ಮತ್ತು ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಯಥೇಚ್ಛವಾಗಿ ದೊರೆಯುತ್ತವೆ.

Fresh Vegetables

ತರಕಾರಿಗಳು

ಈ ದಿನಗಳಲ್ಲಿ ಸೊಪ್ಪು ತರಕಾರಿಗಳು ದೊರೆಯುವುದು ಕಷ್ಟವಾಗಬಹುದು. ಮಳೆನೀರಿಗೆ ಸಿಕ್ಕ ಕಾಯಿಪಲ್ಲೆಗಳು ಉಳಿಯುವುದಕ್ಕಿಂತ ಕೊಳೆಯುವುದೇ ಹೆಚ್ಚು. ಆದಾಗ್ಯೂ, ಹಾಗಲ, ಹೀರೆ, ಸೋರೆ, ಸೌತೆ, ಕುಂಬಳ, ಬೂದುಗುಂಬಳದಂಥ ತರಕಾರಿಗಳು ಈ ದಿನಗಳಿಗೆ ಆಪ್ಯಾಯಮಾನ ಎನಿಸುತ್ತವೆ. ಜೊತೆಗೆ, ಹಸಿ ಅರಿಶಿನ, ಹಸಿ ಶುಂಠಿಯಂಥ ಬೇರುಗಳು ಅಡುಗೆಯಲ್ಲಿ ಬಳಕೆಯಾಗುವುದು ಮುಖ್ಯ. ಇವುಗಳು ಶರೀರದ ರೋಗ ನಿರೋಧಕತೆಯನ್ನು ಉದ್ದೀಪಿಸುತ್ತವೆ. ಜೋಳವನ್ನು ಬೇಯಿಸಿ ಅಥವಾ ಸುಟ್ಟುಕೊಂಡು, ಬಾಯಿ ಸುಟ್ಟುಕೊಳ್ಳುತ್ತಾ ತಿನ್ನುವುದು ಬಹಳ ಮಂದಿಗೆ ಇಷ್ಟವಾಗುವಂಥದ್ದು.

ಕಾಳು-ಬೇಳೆಗಳ ಕಟ್ಟು

ಮಳೆಗಾಲದ ಶೀತ-ಥಂಡಿ-ಒದ್ದೆಯ ದಿನಗಳಿಗೆ ಸರಿಯಾಗಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವುದು ಅಗತ್ಯ. ಹಾಗಾಗಿ ಬೇಳೆ-ಕಾಳುಗಳ ಕಟ್ಟಿನ ಸಾರುಗಳು ಹಿತವೆನಿಸುತ್ತವೆ. ಹುರುಳಿ ಕಟ್ಟು, ತೊಗರಿ ಕಟ್ಟು, ಹೆಸರು ಕಟ್ಟುಗಳನ್ನು ವಿಫುಲವಾಗಿ ಸೇವಿಸಿ. ಇಂತಹ ಕಟ್ಟಿನ ಸಾರುಗಳು ಜೀರ್ಣಕ್ರಿಯೆ ನಿಧಾನವಾಗದಂತೆ ನೋಡಿಕೊಳ್ಳುತ್ತವೆ. ಇದನ್ನು ಊಟಕ್ಕಾದರೂ ಬಳಸಿ, ಸೂಪ್‌ನಂತಾದರೂ ಕುಡಿಯಿರಿ. ಇದರಿಂದ ದೇಹಕ್ಕೆ ಬೇಕಾದ ನೀರಿನಂಶವೂ ದೊರೆಯುತ್ತದೆ. ಇಂಥ ಕಟ್ಟಿನ ಸೂಪ್‌ ಅಥವಾ ಸಾರುಗಳ ಜೊತೆಗೆ ನಿಂಬೆಹಣ್ಣನ್ನು ವಿಫುಲವಾಗಿ ಬಳಸಿ.

Drinking Water Before Meals

ನೀರು

ಇದೀಗ ನೀರು ಬದಲಾಗುವ ಸಮಯ. ಹಾಗಾಗಿ ನೀರನ್ನು ಕುದಿಸಿ ಕುಡಿಯುವುದು ಕ್ಷೇಮ. ಹಾಗಿಲ್ಲದಿದ್ದರೆ ಆರ್‌ಒ ನೀರು ಬಳಸುವುದು ಸಹ ಸುರಕ್ಷಿತ. ಹೊರಗಿನ ಯಾವುದೇ ಆಹಾರಗಳು, ತೆರೆದಿಟ್ಟ ತಿನಿಸುಗಳು ಈ ದಿನಗಳಲ್ಲಿ ಖಂಡಿತ ಕ್ಷೇಮವಲ್ಲ. ಕಾಲರಾ, ಕರುಳುಬೇನೆ, ಟೈಫಾಯ್ಡ್‌ನಂಥ ಸಾಂಕ್ರಾಮಿಕಗಳು ಕಲುಷಿತ ಆಹಾರ-ನೀರಿನ ಮೂಲಕವೇ ಹರಡುವಂಥವು. ಹಸಿ ಆಹಾರವನ್ನು ಎಲ್ಲಿಯೂ ತಿನ್ನಬೇಡಿ. ಆಹಾರವನ್ನು ಚೆನ್ನಾಗಿ ಬೇಯಿಸಿಕೊಂಡೇ ಸೇವಿಸಿ.

Spices

ಮಸಾಲೆಗಳು

ನಮ್ಮ ಅಡುಗೆಮನೆಗಳೇ ಕೆಲವೊಮ್ಮೆ ಕಿರುವೈದ್ಯರಂತೆ ವರ್ತಿಸುತ್ತವೆ. ನಿತ್ಯದ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು, ಜೀರಿಗೆ, ಧನಿಯಾ, ದಾಲ್ಚಿನಿ, ಲವಂಗ, ಅರಿಶಿನ, ಇಂಗು ಮುಂತಾದ ಮಸಾಲೆಗಳು ಇರಲಿ. ಇವೆಲ್ಲ ಹಲವು ರೀತಿಯ ಉತ್ಕರ್ಷಣ ನಿರೋಧಕಗಳನ್ನು ತುಂಬಿಕೊಂಡಂಥವು. ಮಾತ್ರವಲ್ಲ, ಇವುಗಳಲ್ಲಿ ಸೋಂಕು ನಿರೋಧಕ ಗುಣವೂ ಇದ್ದು, ರೋಗಾಣುಗಳೊಂದಿಗೆ ಹೋರಾಡಲು ದೇಹಕ್ಕೆ ಶಕ್ತಿ ನೀಡುತ್ತದೆ.

Some herbal teas can relax the mind and induce sleep Tips For Better Sleep

ಹರ್ಬಲ್‌ ಚಹಾ

ಇಂಥ ಚಹಾಗಳನ್ನು ತುಳಸಿ, ಅಶ್ವಗಂಧ, ಪುದೀನಾ, ನಿಂಬೆ, ಸೋಂಪು, ಏಲಕ್ಕಿ, ಶುಂಠಿ, ದಾಲ್ಚಿನಿ ಮುಂತಾದ ಮೂಲಿಕೆಗಳನ್ನು ಬಳಸಿ ತಯಾರಿಸಿಕೊಳ್ಳಬಹುದು. ಕೆಫೇನ್‌ ಪೇಯಗಳ ಬದಲಿಗೆ ಇಂಥವುಗಳ ಬಿಸಿ ಚಹಾಗಳನ್ನು ಸೇವಿಸಿದರೆ ಶೀತ-ಥಂಡಿಯ ದಿನಗಳಲ್ಲಿ ಚಳಿಯೂ ಮಾಯ, ಆರೋಗ್ಯಕ್ಕೂ ಇಲ್ಲ ಅಪಾಯ.

Continue Reading
Advertisement
Minister Dinesh Gundurao drives 10 days Yogotsava programme in Bengaluru
ಕರ್ನಾಟಕ1 min ago

Bengaluru News: 10 ದಿನಗಳ ‘ಯೋಗೋತ್ಸವ’ಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

Rajiv Taranath
ಪ್ರಮುಖ ಸುದ್ದಿ4 mins ago

Rajeev Taranath : ಮಹೋನ್ನತ ಪ್ರತಿಭೆಯ ರಾಜೀವ್ ತಾರಾನಾಥ್ ಸರೋದ್ ಲೋಕದ ಅದ್ಭುತ!

Actor Darshan Arrested Vijayalakshmi Darshan Unfollow Darshan On Instagram
ಸ್ಯಾಂಡಲ್ ವುಡ್11 mins ago

Actor Darshan Arrested : ದರ್ಶನ್​ನ ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ!

Murder News
ಪ್ರಮುಖ ಸುದ್ದಿ27 mins ago

Murder News : ಖಾಸಗಿ ಕ್ಷಣದ ಫೋಟೋಗಳನ್ನಿಟ್ಟು ಬೆದರಿಕೆ ಹಾಕುತ್ತಿದ್ದವನನ್ನು ಕೊಲೆ ಮಾಡಿದ ವಿವಾಹಿತ ಮಹಿಳೆ

Reasi Terror Attack
ದೇಶ1 hour ago

Reasi Terror Attack: ರಿಯಾಸಿ ಭಯೋತ್ಪಾದಕ ದಾಳಿಯ ಶಂಕಿತನ ರೇಖಾಚಿತ್ರ ಬಿಡುಗಡೆ; ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಘೋಷಣೆ

Actor Darshan Arrested
ಸ್ಯಾಂಡಲ್ ವುಡ್1 hour ago

Actor Darshan Arrested : ಲಾಕಪ್​ನಲ್ಲಿ ಸೊಳ್ಳೆ ಕಡಿತಕ್ಕೆ ಬೆಚ್ಚಿ ರಾತ್ರಿಯೆಲ್ಲ ಎದ್ದು ಕುಳಿತಿದ್ದ ನಟ ದರ್ಶನ್​!

Terrorists Attack
ಪ್ರಮುಖ ಸುದ್ದಿ2 hours ago

Terrorists Attack : ಜಮ್ಮು ಕಾಶ್ಮೀರದಲ್ಲಿ ಸೇನಾ ನೆಲೆ ಮೇಲೆ ಪಾಕಿಸ್ತಾನದ ಉಗ್ರರ ದಾಳಿ

Rock Salt Or Powder Salt
ಆರೋಗ್ಯ3 hours ago

Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

Actor Darshan Arrested
ಪ್ರಮುಖ ಸುದ್ದಿ4 hours ago

Actor Darshan Arrested : ದರ್ಶನ್​ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ; ಚಿಕ್ಕಪೇಟೆ ಬಿರಿಯಾನಿ, ಡೋಲೊ 650 ಮಾತ್ರೆ!

Dina Bhavishya
ಭವಿಷ್ಯ4 hours ago

Dina Bhavishya : ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ; ಪ್ರಭಾವಿ ವ್ಯಕ್ತಿಗಳ ಬೆಂಬಲ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ15 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ17 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ18 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ19 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ21 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌