Best Places to Visit in Coorg : ಕೊಡಗಿನಲ್ಲಿ ಮೈಮರೆಸುವ ಈ ತಾಣಗಳನ್ನು ನೀವು ನೋಡಲೇಬೇಕು… - Vistara News

ಕರ್ನಾಟಕ

Best Places to Visit in Coorg : ಕೊಡಗಿನಲ್ಲಿ ಮೈಮರೆಸುವ ಈ ತಾಣಗಳನ್ನು ನೀವು ನೋಡಲೇಬೇಕು…

ಈ ಮಳೆಗಾಲದಲ್ಲಿ ಮಡಿಕೇರಿ ಕಡೆ ಪ್ರಯಾಣ (Best Places to Visit in Coorg) ಮಾಡೋಣ ಎಂದು ನೀವು ಆಲೋಚನೆ ಮಾಡಿರಬಹುದು. ಅದಕ್ಕೆಂದೇ ಅಲ್ಲಿನ ಪ್ರವಾಸಿ ತಾಣಗಳ ವಿವರವನ್ನು ನಾವಿಲ್ಲಿ ಕೊಟ್ಟಿದ್ದೇವೆ.

VISTARANEWS.COM


on

madikere trip
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಡಗು- ಕರ್ನಾಟಕದ ಅತ್ಯಂತ ಸುಂದರ ಜಿಲ್ಲೆಗಳಲ್ಲಿ ಒಂದು. ಪಶ್ಚಿಮ ಘಟ್ಟದ ಬೆಟ್ಟಗಳ ಸಾಲು, ಅಲ್ಲಲ್ಲಿ ಹರಿವ ಜಲಪಾತಗಳು, ಮಂಜಿನಿಂದ ಆವರಿಸಿಕೊಂಡ ಪರ್ವತಗಳು, ಚಹಾ ಮತ್ತ ಕಾಫಿ ತೋಟಗಳು ಎಲ್ಲವೂ ಸೇರಿಕೊಂಡು ಕೊಡಗನ್ನು ನಿಸರ್ಗ ತಾಯಿಯ ಮಡಿಲಿನಂತೆ ಮಾಡಿವೆ. ಈ ಜಿಲ್ಲೆ ನಿಸರ್ಗ ಪ್ರೇಮಿಗಳಿಗೆ ಸ್ವರ್ಗವೇ ಸರಿ. ಅತ್ಯದ್ಭುತ ಪ್ರವಾಸಿ ತಾಣಗಳನ್ನು ಹೊಂದಿರುವ ಕೊಡಗಿನ ಮಡಿಕೇರಿಯ ಕೆಲವು ಪ್ರವಾಸಿ ತಾಣಗಳ (Madikeri Trip) ಬಗ್ಗೆ ಇಲ್ಲಿದೆ ಉಪಯುಕ್ತ ವಿವರ.

ಅಬ್ಬೆ ಜಲಪಾತ


ಅಬ್ಬೆ ಜಲಪಾತವನ್ನು ಅಬ್ಬಿ ಜಲಪಾತ ಎಂದೂ ಕರೆಯಲಾಗುತ್ತದೆ. ಇದು ಮಡಿಕೇರಿ ಪಟ್ಟಣದಿಂದ ಕೇವಲ 1 ಕಿ.ಮೀ ದೂರದಲ್ಲಿದೆ. ಇದನ್ನು ಕೆಲವು ವರ್ಷಗಳ ಹಿಂದೆ ಜೆಸ್ಸಿ ಫಾಲ್ಸ್‌ ಎಂದೂ ಕರೆಯುತ್ತಿದ್ದರು. ಕಾಫಿ ತೋಟಗಳ ನಡುವೆ ಮೂಡಿರುವ ಈ ಜಲಪಾತ ಅತ್ಯಂತ ಸುಂದರವಾದ ಜಲಪಾತವೆಂದೂ ಕರೆಸಿಕೊಂಡಿದೆ. ಮಳೆಗಾಲದ ಸಮಯದಲ್ಲಿ ಇಲ್ಲಿ ಹೆಚ್ಚಿನ ನೀರಿನ ಹರಿವು ಇರುತ್ತದೆ. ಬೇಸಿಗೆಯ ಸಮಯದಲ್ಲೂ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಇಲ್ಲಿ ತೂಗು ಸೇತುವೆಯೂ ಇದೆ. ಮಳೆಗಾಲದಲ್ಲಿ ಮಳೆ ಕಡಿಮೆ ಇರುವ ಸಮಯ ಮತ್ತು ಚಳಿಗಾಲದ ಸಮಯವು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಚಿಕ್ಲಿಹೊಳೆ ಜಲಾಶಯ


ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಚಿಕ್ಲಿಹೊಳೆ ಜಲಾಶಯವೂ ಒಂದಾಗಿದೆ. ಇದು ಮಡಿಕೇರಿ ಮತ್ತು ಕುಶಾಲನಗರ ಪಟ್ಟಣದ ನಡುವೆ ಇರುವ ನಂಜರಾಯಪಟ್ಟಣಕ್ಕೆ ಸಮೀಪದಲ್ಲಿ ಇದೆ. ಎರಡೂ ನಗರಗಳಿಂದ ಈ ಜಲಾಶಯಕ್ಕೆ 15 ಕಿ.ಮೀ ಅಂತರವಿದೆ. ಇಲ್ಲಿ ದಟ್ಟವಾದ ಅರಣ್ಯದ ಸೌಂದರ್ಯವನ್ನೂ ನೀವು ಸವಿಯಬಹುದು. ಇಲ್ಲಿಂದ ಸೂರ್ಯಾಸ್ತಮಾನದ ವಿಹಂಗಮ ನೋಟವನ್ನೂ ಕಾಣಬಹುದಾಗಿದೆ. ಈ ಜಲಾಶಯದಲ್ಲಿ ಯಾವುದೇ ಅಂಗಡಿಗಳಿಲ್ಲವಾದ್ದರಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವಾಗ ನಿಮಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು ಒಳಿತು. ಇಲ್ಲಿಗೆ ಭೇಟಿ ನೀಡಲು ಜೂನ್‌ನಿಂದ ಮಾರ್ಚ್‌ ತಿಂಗಳವರೆಗೆ ಸೂಕ್ತ ಸಮಯವಾಗಿದೆ.

ದುಬಾರೆ ಆನೆ ಶಿಬಿರ


ದುಬಾರೆ ಆನೆ ಶಿಬಿರ ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿಯ ದಡದಲ್ಲಿಯೇ ಇರುವ ಆನೆ ಶಿಬಿರವಾಗಿದೆ. ಇದು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಮತ್ತು ಜಂಗಲ್‌ ಲಾಡ್ಜ್‌ಗಳು, ರೆಸಾರ್ಟ್‌ಗಳ ಸಹಯೋಗದಲ್ಲಿ ಕೈಗೊಂಡಿರುವ ಯೋಜನೆಗಳಲ್ಲಿ ಒಂದಾಗಿದೆ. ಇಲ್ಲಿ ಈ ಹಿಂದೆ ಮೈಸೂರು ದಸರಾಕ್ಕೆ ಆನೆಗಳಿಗೆ ತರಬೇತಿ ನೀಡಲಾಗುತ್ತಿತ್ತು. ಆದರೆ ಈಗ ಆನೆಗಳನ್ನು ಜಂಗಲ್‌ ರೈಡ್‌ ಮಾಡಲು ಹಾಗೂ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ಆನೆಗಳ ಮೇಲೆ ಸವಾರಿ ಮಾಡುವುದಷ್ಟೇ ಅಲ್ಲದೆ ಅವುಗಳಿಗೆ ಆಹಾರ ನೀಡಬಹುದು. ಹಾಗೆಯೇ ಅವುಗಳ ಜತೆ ಹಲವು ರೀತಿಯ ಮನರಂಜನೆಯ ಚಟುವಟಿಕೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಹಾರಂಗಿ ಅಣೆಕಟ್ಟು


ಕುಶಾಲನಗರದ ಸಮೀಪದ ಹುದ್ಗೂರು ಗ್ರಾಮದಲ್ಲಿ ನೀವು ಹಾರಂಗಿ ಅಣೆಕಟ್ಟನ್ನು ಕಾಣಬಹುದು. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾದ ಮೊದಲನೇ ಅಣೆಕಟ್ಟು ಇದಾಗಿದೆ. ಇದು 47 ಮೀಟರ್‌ ಎತ್ತರ ಮತ್ತು 846 ಮೀಟರ್‌ ಉದ್ದವಿದೆ. ಮಡಿಕೇರಿಯಿಂದ ಸುಮಾರು 36 ಕಿ.ಮೀ ದೂರದಲ್ಲಿರುವ ಈ ಅಣೆಕಟ್ಟಿಗೆ ನೀವು ನಿಮ್ಮ ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳಬಹುದು. ನೀವು ಇಲ್ಲಿ ಏಕಾಂತದ ಸಮಯವನ್ನೂ ಕಳೆಯಬಹುದು. ಇಲ್ಲಿ ವಸತಿಗೆಂದು ಗೆಸ್ಟ್‌ ಹೌಸ್‌ಗಳನ್ನೂ ನಿರ್ಮಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಗೆಸ್ಟ್‌ ಹೌಸ್‌ನಲ್ಲಿ ಬುಕ್ಕಿಂಗ್‌ ಮಾಡಿಕೊಳ್ಳಬಹುದು.

ಹೊನ್ನಮ್ಮನ ಕೆರೆ


ಕೊಡಗಿನಲ್ಲಿ ಪ್ರಸಿದ್ಧವಾಗಿರುವ ಕೆರೆಯೆಂದರೆ ಅದು ಹೊನ್ನಮ್ಮನ ಕೆರೆ. ಪೂರ್ತಿ ಕೊಡಗು ಪ್ರದೇಶದಲ್ಲಿ ಇದೇ ದೊಡ್ಡ ಕೆರೆಯಾಗಿದೆ. ಸೋಮವಾರಪೇಟೆ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಸುಲಿಮಲ್ತೆ ಗ್ರಾಮದ ಸಮೀಪದ ದಡ್ಡಮಲ್ತೆಯಲ್ಲಿ ಈ ಕೆರೆಯಿದೆ. ಹೊನ್ನಮ್ಮ ದೇವಿಗೆ ಸಮರ್ಪಿತವಾದ ದೇವಾಲಯವೂ ಕೆರೆಯ ಸಮೀಪದಲ್ಲೇ ಇದೆ. ‌ಹೊನ್ನಮ್ಮ ದೇವಿ ಜನರ ಯೋಗಕ್ಷೇಮಕ್ಕಾಗಿ ತನ್ನ ಜೀವನವನ್ನು ತ್ಯಾಗ ಮಾಡಿದವಳು ಎಂದು ನಂಬಲಾಗುತ್ತದೆ. ಹಾಗಾಗಿ ಇಲ್ಲಿಗೆ ಪ್ರಕೃತಿ ಪ್ರಿಯರು ಮಾತ್ರವಲ್ಲದೆ ಧಾರ್ಮಿಕ ಪ್ರವಾಸಿಗರೂ ಬರುತ್ತಾರೆ. ಇಲ್ಲಿ ಬೋಟಿಂಗ್‌ ಮಾಡಬಹುದು ಹಾಗೂ ಮೀನುಗಾರಿಕೆಯನ್ನೂ ಮಾಡಬಹುದಾಗಿದೆ.

ಓಂಕಾರೇಶ್ವರ ದೇಗುಲ


ಮಡಿಕೇರಿಯ ಪ್ರಸಿದ್ಧ ಶಿವ ದೇವಾಲಯವೆಂದರೆ ಅದು ಓಂಕಾರೇಶ್ವರ ದೇವಾಲಯ. ಈ ದೇವಸ್ಥಾನವನ್ನು ಲಿಂಗ ರಾಜೇಂದ್ರನು 1820ರಲ್ಲಿ ನಿರ್ಮಿಸಿದ ಎನ್ನಲಾಗುತ್ತದೆ. ಮಡಿಕೇರಿ ನಗರದಿಂದ ಕೇವಲ ಒಂದು ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. ದೇವಾಲಯವು ಇಸ್ಲಾಮಿಕ್‌ ಮತ್ತು ಗೋಥಿಕ್‌ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿ ಕೊಳವಿದೆ. ಸುತ್ತಲೂ ನಾಲ್ಕು ಮಿನಾರ್‌ಗಳು ಮತ್ತು ದೇವಾಲಯದ ಮಧ್ಯದಲ್ಲಿ ಗುಮ್ಮಟವಿದೆ.

ಕೋಟೆಬೆಟ್ಟ


ಕೊಡಗಿನಲ್ಲಿ ಟ್ರೆಕ್ಕಿಂಗ್‌ಗೆ ಪ್ರಸಿದ್ಧವಾಗಿರುವ ತಾಣಗಳಲ್ಲಿ ಒಂದು ಕೋಟೆ ಬೆಟ್ಟ. ಕೊಡಗು ಪ್ರದೇಶದಲ್ಲಿ ತಡಿಯಂಡಮೋಲ್‌ ಮತ್ತು ಬ್ರಹ್ಮಗಿರಿಯ ನಂತರ ಮೂರನೇ ಅತಿ ಎತ್ತರದ ಬೆಟ್ಟ ಇದಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1620 ಮೀಟರ್‌ ಎತ್ತರದಲ್ಲಿದೆ. ಈ ಬೆಟ್ಟವು ಸೋಮವಾರಪೇಟೆ ಮತ್ತು ಮಡಿಕೇರಿಯ ನಡುವೆ ಇರುವ ಮಾದಾಪುರದಲ್ಲಿದೆ. ಬೆಟ್ಟದ ತುದಿಯಲ್ಲಿ ಶಿವನ ದೇವಾಲಯವೊಂದಿದೆ. ಹಟ್ಟಿಹೊಳೆ ಪ್ರದೇಶದಿಂದ ಸುಮಾರು 10 ಕಿ.ಮೀ ಟ್ರೆಕ್ಕಿಂಗ್‌ ಮಾಡಿದರೆ ಈ ಬೆಟ್ಟದ ತುದಿ ತಲುಪಬಹುದು. ಟ್ರೆಕ್ಕಿಂಗ್‌ ಮಾಡುವಾಗ ಹಚ್ಚ ಹಸಿರಿನ ನಿಸರ್ಗವನ್ನು ನೋಡುತ್ತಾ ಸಾಗುವುದರಿಂದ ನಿಮಗೆ ಹೆಚ್ಚಿನ ಆಯಾಸವೂ ಎನಿಸುವುದಿಲ್ಲ. ಇಲ್ಲಿ ಟ್ರೆಕ್ಕಿಂಗ್‌ ಮಾಡುವುದಕ್ಕೆ ಅನುಮತಿಯ ಅವಶ್ಯಕತೆಯಿಲ್ಲ.

ಮಡಿಕೇರಿ ಕೋಟೆ


ಮಡಿಕೇರಿ ಕೋಟೆಯನ್ನು 17ನೇ ಶತಮಾನದ ಕೊನೆಯಲ್ಲಿ ಮುದ್ದುರಾಜರು ನಿರ್ಮಿಸಿದರು. ನಂತರ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಕೋಟೆಯನ್ನು ನವೀಕರಣ ಮಾಡಲಾಯಿತು. ಈ ಕೋಟೆ ಶ್ರೀಮಂತ ಇತಿಹಾಸವನ್ನು ಹೊಂದಿದೆ. ರಾಜರ ಆಳ್ವಿಕೆ ಜತೆ ಬ್ರಿಟಿಷರ ಆಳ್ವಿಕೆಯನ್ನೂ ಕಂಡಿರುವ ಈ ಕಟ್ಟಡವನ್ನು ಇದೀಗ ಜಿಲ್ಲಾಧಿಕಾರಿ ಕಚೇರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಕೋಟೆಯೊಳಗೆ ವೀರಭದ್ರ ದೇವರಿಗೆ ಸಮರ್ಪಿತವಾದ ದೇವಾಲಯವಿತ್ತು. 1855ರಲ್ಲಿ ಬ್ರಿಟಿಷರು ಆ ದೇವಾಲಯವನ್ನು ತೆಗೆದು ಹಾಕಿದರು. ಆ ಜಾಗದಲ್ಲಿ ಚರ್ಚ್‌ ಅನ್ನು ನಿರ್ಮಿಸಿದರು. ಚರ್ಚ್‌ ಗೋಥಿಕ್‌ ಶೈಲಿಯ ವಾಸ್ತುಶಿಲ್ಪ ಹೊಂದಿದೆ. ಈ ಚರ್ಚ್‌ ಸದ್ಯ ರಾಜ್ಯ ಪುರಾತತ್ವ ಇಲಾಖೆಯ ನಿಯಂತ್ರಣದಲ್ಲಿದೆ. ಕೋಟೆಯಲ್ಲಿ ಮಹಾತ್ಮಾ ಗಾಂಧಿ ಸಾರ್ವಜನಿಕ ಗ್ರಂಥಾಲಯ, ಕೋಟೆ ಮಹಾಗಣಪತಿ ದೇವಾಲಯ, ಜಿಲ್ಲಾ ಕಾರಾಗೃಹ ಸೇರಿ ಅನೇಕ ಕಟ್ಟಡಗಳು ಇವೆ.

ಮಲ್ಲಳ್ಳಿ ಜಲಪಾತ


ಪುಷ್ಪಗಿರಿ ಬೆಟ್ಟಗಳ ಶ್ರೇಣಿಯಲ್ಲಿ ನಿಮಗೆ ಮಲ್ಲಳ್ಳಿ ಜಲಪಾತ ಕಾಣಲು ಸಿಗುತ್ತದೆ. ಸೋಮವಾರಪೇಟೆಯ ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಪಾತವಿದೆ. ಇಲ್ಲಿ ಸುಮಾರು 200 ಅಡಿ ಎತ್ತರದಿಂದ ಕುಮಾರಧಾರಾ ನದಿ ಧುಮ್ಮಿಕ್ಕುತ್ತದೆ. ಇದು ಟ್ರೆಕ್ಕಿಂಗ್‌ ತಾಣ ಕೂಡ ಹೌದು. ಈ ಜಲಪಾತವು ಸೋಮವಾರಪೇಟೆಯಿಂದ 25 ಕಿಲೋಮೀಟರ್ ದೂರದಲ್ಲಿದೆ ಮತ್ತು ಕುಶಾಲನಗರದಿಂದ 42 ಕಿಮೀ ದೂರದಲ್ಲಿದೆ. ಮಳೆಗಾಲದಲ್ಲಿ ಜಲಪಾತದಲ್ಲಿ ಹೆಚ್ಚು ನೀರು ಇರುವುದರಿಂದ ಅದು ಹೆಚ್ಚು ಸುಂದರವಾಗಿ ಕಾಣುತ್ತದೆ.

ಮಾಂದಲಪಟ್ಟಿ


ಅಬ್ಬೆ ಜಲಪಾತಕ್ಕೆ ಹೋಗುವ ದಾರಿಯಲ್ಲೇ ಈ ಟ್ರೆಕ್ಕಿಂಗ್‌ ಸ್ಥಳ ನಿಮಗೆ ಸಿಗುತ್ತದೆ. ಮಡಿಕೇರಿಯಿಂದ ಸುಮಾರು 25 ಕಿ.ಮೀ ದೂರದಲ್ಲಿ ಮಾಂದಲಪಟ್ಟಿಯಿದೆ. ಇಲ್ಲಿ ಹೆಚ್ಚಿನ ಪ್ರವಾಸಿಗರೇನು ಇರುವುದಿಲ್ಲವಾದ್ದರಿಂದ ನೀವು ಅರಾಮವಾಗಿ ಟ್ರೆಕ್ಕಿಂಗ್‌ ಮಾಡಬಹುದು. ಇಲ್ಲಿ ಟ್ರೆಕ್ಕಿಂಗ್‌ ಮಾಡುವುದಕ್ಕೂ ಮೊದಲು ಅಧಿಕಾರಿಗಳಿಂದ ಪ್ರವೇಶ ಟಿಕೆಟ್‌ ತೆಗೆದುಕೊಳ್ಳಬೇಕು. ಇಲ್ಲಿಗೆ ಯಾವುದೇ ಬಸ್ಸುಗಳ ಸಂಪರ್ಕ ಇಲ್ಲವಾದ್ದರಿಂದ ನೀವು ಬಾಡಿಗೆ ವಾಹನಗಳನ್ನು ಮಾಡಿಸಿಕೊಂಡು ಮಾಂದಲಪಟ್ಟಿಗೆ ಹೋಗಬಹುದು.

ನಾಲ್ಕನಾಡ್‌ ಅರಮನೆ


ನಾಲ್ಕನಾಡ್‌ ಅರಮನೆಯು ಯುವಕಪಾಡಿ ಹೆಸರಿನ ಹಳ್ಳಿಯ ಸಮೀಪದಲ್ಲಿದೆ. ಇದು ಮಡಿಕೇರಿಯಿಂದ 45 ಕಿ.ಮೀ ದೂರದಲ್ಲಿದೆ. ಇದನ್ನು 1792ರಲ್ಲಿ ಹಾಲೇರಿ ದೊರೆ ದೊಡ್ಡ ವೀರರಾಜೇಂದ್ರ ನಿರ್ಮಿಸಿದರು. ನಂತರ 1796ರಲ್ಲಿ, ದೊಡ್ಡ ವೀರರಾಜೇಂದ್ರ ಇಲ್ಲಿ ಮಹಾದೇವ ಅಮ್ಮಾಜಿಯನ್ನು ವಿವಾಹವಾದರು. ಟಿಪ್ಪು ಸುಲ್ತಾನನ ಸೈನ್ಯದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಈ ಅರಮನೆ ನಿರ್ಮಿಸಲಾಗಿತ್ತು. ಈ ಅರಮನೆಯಿಂದ ಮಡಿಕೇರಿಯವರೆಗೆ ಸುರಂಗ ಮಾರ್ಗವನ್ನೂ ಮಾಡಿಕೊಳ್ಳಲಾಗಿತ್ತು. ಕೊಡಗು ಜಿಲ್ಲೆಯ ಮೇಲೆ ಬ್ರಿಟಿಷರ ಆಕ್ರಮಣದ ಸಮಯದಲ್ಲಿ ಹಾಲೇರಿ ಕುಟುಂಬದ ಕೊನೆಯ ಚಕ್ರವರ್ತಿ ಚಿಕ್ಕವೀರ ರಾಜೇಂದ್ರ ಕೂಡ ಈ ಅರಮನೆಯಲ್ಲಿ ಆಶ್ರಯ ಪಡೆದಿದ್ದರು. ಅರಮನೆಯ ಚಾವಣಿಗಳು ಮತ್ತು ಗೋಡೆಗಳು ಅನೇಕ ಪ್ರಾಚೀನ ವರ್ಣಚಿತ್ರಗಳು ಮತ್ತು ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿವೆ. ಅರಮನೆಯೊಳಗೆ ಕಲ್ಯಾಣ ಮಂಟಪವನ್ನು ಕಾಣಬಹುದಾಗಿದೆ. ಇಲ್ಲಿ ಭವ್ಯವಾದ ದರ್ಬಾರ್ ಕೂಡ ಇದೆ. ಹಾಗೆಯೇ ನೆಲಮಾಳಿಗೆಯಲ್ಲಿ ರಾಜ ಅಡಗುವುದಕ್ಕೆಂದು ಮಾಡಿಕೊಂಡಿದ್ದ ಎರಡು ಕಪ್ಪು ಕೋಣೆಗಳಿವೆ.

ನೆಹರು ಮಂಟಪ


ಪ್ರಕೃತಿ ಪ್ರಿಯರಿಗೆ ಏಕಾಂತವಾಗಿ ಕಾಲ ಕಳೆಯಬೇಕೆಂದರೆ ಅವರು ನೆಹರು ಮಂಟಪಕ್ಕೆ ಭೇಟಿ ನೀಡಬೇಕು. ಮಡಿಕೇರಿ ಆಕಾಶವಾಣಿ ಕೇಂದ್ರ ಹಿಂಭಾಗದಲ್ಲಿರುವ ಬೆಟ್ಟದ ತುದಿಯಲ್ಲಿ ಈ ಸ್ಥಳವಿದೆ. ಇಲ್ಲಿಗೆ ತಲುಪಲು ಪ್ರವಾಸಿಗರು 25-30 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಇಲ್ಲಿಂದ ಸುತ್ತಲೂ ತುಂಬಿಕೊಂಡಿರುವ ಹಸಿರನ್ನು ನೀವು ಕಣ್ತುಂಬಿಸಿಕೊಳ್ಳಬಹುದು.

ಪಾಡಿ ಇಗ್ಗುತಪ್ಪ ದೇಗುಲ


ಈ ದೇವಸ್ಥಾನವು ಕಕ್ಕಬೆ ಪಟ್ಟಣದಲ್ಲಿದೆ. 1810ರಲ್ಲಿ ಲಿಂಗರಾಜೇಂದ್ರರಿಂದ ನಿರ್ಮಿಸಲ್ಪಟ್ಟ. ಇದು ಅತ್ಯಂತ ಪುರಾತನವಾದ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಕೊಡವರಲ್ಲಿ ಅತ್ಯಂತ ಮಹತ್ವದ್ದಾಗಿದೆ. ದೇಗುಲವು ಮಡಿಕೇರಿ ನಗರದಿಂದ ವಿರಾಜಪೇಟೆಯ ಕಡೆಗೆ 45 ಕಿ.ಮೀ ದೂರದಲ್ಲಿದೆ. ಸುಬ್ರಹ್ಮಣ್ಯ ದೇವರ ಇನ್ನೊಂದು ಹೆಸರಾದ ಇಗ್ಗುತಪ್ಪ ದೇವರಿಗೆ ಈ ದೇವಾಲಯ ಸಮರ್ಪಿತವಾಗಿದೆ. ಈ ದೇಗುಲವು ಕೊಡವರ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ವರ್ಷ ಮಾರ್ಚ್‌ ತಿಂಗಳಲ್ಲಿ ಈ ದೇಗುಲದ ಉತ್ಸವವನ್ನು ನಡೆಸಲಾಗುತ್ತದೆ.

ರಾಜಾ ಸೀಟ್‌


ಮಡಿಕೇರಿ ಪಟ್ಟಣದಲ್ಲಿರುವ ರಾಜಾ ಸೀಟ್‌ ಆಗಿನ ಕಾಲದ ಕೂರ್ಗ್‌ ರಾಜರ ನೆಚ್ಚಿನ ಸ್ಥಳವಾಗಿತ್ತು. ಇಲ್ಲಿಂದ ನೋಡಿದರೆ ನಿಮಗೆ ಸುತ್ತಲಿನ ಕಣಿವೆ ಪ್ರದೇಶವು ನಿಮಗೆ ಅತ್ಯದ್ಭುತವಾಗಿ ಕಾಣಿಸುತ್ತದೆ. ಬಿಸಿಲಿನ ಸಮಯದಲ್ಲಿ ಹೋಗದೆ ಬೆಳಗಿನ ಸಮಯದಲ್ಲಿ ಹಾಗೂ ಸಂಜೆಯ ಸಮಯದಲ್ಲಿ ಇಲ್ಲಿಗೆ ಹೋದರೆ ನಿಮಗೆ ತಂಪಾದ ನಿಸರ್ಗ ಕಾಣಸಿಗುತ್ತದೆ. ಉದ್ಯಾನವನದ ಎಡಭಾಗದಲ್ಲಿ, ಮಹಾತ್ಮ ಗಾಂಧಿಯವರ ಅವಶೇಷಗಳನ್ನು ಇರಿಸಲಾಗಿರುವ ಗಾಂಧಿ ಮಂಟಪವಿದೆ. ಉದ್ಯಾನವಾಗಿರುವ ಇಲ್ಲಿ ಮಕ್ಕಳ ಮನೋರಂಜನೆಗೆಂದು ಆಟದ ಸಾಮಾಗ್ರಿಗಳನ್ನೂ ಇರಿಸಲಾಗಿದೆ. ಇಲ್ಲಿ ಆಟಿಕೆ ರೈಲೂ ಇದ್ದು, ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ. ಉದ್ಯಾನ ಪ್ರವೇಶಿಸಲು ಒಬ್ಬರಿಗೆ 5 ರೂ. ಶುಲ್ಕ ವಿಧಿಸಲಾಗುತ್ತದೆ.

ಸುಂಟಿಕೊಪ್ಪ


ಮಡಿಕೇರಿಯಿಂದ 15 ಕಿ.ಮೀ ದೂರದಲ್ಲಿ ನಿಮಗೆ ಸುಂಟಿಕೊಪ್ಪ ಸಿಗುತ್ತದೆ. ಇಲ್ಲಿ ಕಾಫಿ ತೋಟ ಹೆಚ್ಚಾಗಿದ್ದು, ಕಣ್ಣು ತಿರುಗಿಸಿದಲ್ಲೆಲ್ಲ ಹಸಿರೇ ಕಾಣಸಿಗುತ್ತದೆ. ಪ್ರಕೃತಿ ಪ್ರಿಯರಿಗೆ ಇದು ಹೇಳಿ ಮಾಡಿಸಿರುವ ಸ್ಥಳ ಎನ್ನಬಹುದು. ಇಲ್ಲಿ ನೀವು ಅನೇಕ ರೀತಿಯ ವಲಸೆ ಪಕ್ಷಿಗಳು ಮತ್ತು ನಿವಾಸಿ ಪಕ್ಷಿಗಳನ್ನೂ ಕಾಣಬಹುದು. ಹಾಗಾಗಿ ಪಕ್ಷಿ ಪ್ರಿಯರಿಗೂ ಈ ಸ್ಥಳ ಇಷ್ಟವಾಗುತ್ತದೆ. ಇಲ್ಲಿ ಅಯ್ಯಪ್ಪ ದೇವಾಲಯವೂ ಇದ್ದು, ಧಾರ್ಮಿಕ ಪ್ರವಾಸಿಗರಿಗೂ ಇದು ಸೂಕ್ತ ಸ್ಥಳವಾಗಿದೆ. ಇಲ್ಲಿ ಅನೇಕ ಕಾಟೇಜ್‌ಗಳು, ಹೋಮ್‌ ಸ್ಟೇಗಳು, ಹೋಟೆಲ್‌ಗಳು ಇರುವುದರಿಂದ ವಾಸ ಹೂಡುವುದಕ್ಕೂ ಸಮಸ್ಯೆಯಿರುವುದಿಲ್ಲ.

ತಡಿಯಂಡಮೋಲ್ ಟ್ರೆಕ್ಕಿಂಗ್‌


ಟ್ರೆಕ್ಕಿಂಗ್‌ ಪ್ರಿಯರಿಗೆ ಕೊಡಗಿನಾದ್ಯಂತ ಹಲವಾರು ಸ್ಥಳಗಳಿವೆ. ಅವುಗಳಲ್ಲಿ ಒಂದು ತಡಿಯಂಡಮೋಲ್‌ ಟ್ರೆಕ್ಕಿಂಗ್‌ ಸ್ಥಳ. ಈ ಸ್ಥಳ ಸಮುದ್ರ ಮಟ್ಟದಿಂದ 1746 ಮೀಟರ್‌ ಎತ್ತರದಲ್ಲಿದೆ. ಇದು ಕಕ್ಕಬೆ ಪಟ್ಟಣದಿಂದ 8 ಕಿ.ಮೀ ಹಾಗೂ ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ. ಚಳಿಗಾಲದ ಆರಂಭದ ಅವಧಿಯಲ್ಲಿ ಇಲ್ಲಿ ಟ್ರೆಕ್ಕಿಂಗ್‌ ಮಾಡುವುದು ಸೂಕ್ತ. ಇಲ್ಲಿಗೆ ಜೀಪ್‌ನಂತಹ ವಾಹನದಲ್ಲಿ ಮೂರನೇ ಒಂದು ಭಾಗವನ್ನು ಕ್ರಮಿಸಬಹುದು. ಇನ್ನು ಬೆಟ್ಟದ ತುದಿ ತಲುಪುವುದಕ್ಕೆ ಕಡಿದಾದ ದಾದಿಯಲ್ಲಿ ಚಾರಣ ಮಾಡಬೇಕಾಗುತ್ತದೆ. ಚಾರಣದ ಮಧ್ಯೆ ನಾಲ್ಕನಾಡ್‌ ಅರಮನೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬಹುದು. ತಡಿಯಂಡಮೋಲ್‌ನಿಂದ ಪಾಡಿ ಇಗ್ಗುತಪ್ಪ ದೇವಸ್ಥಾನಕ್ಕೂ ಭೇಟಿ ನೀಡಬಹುದು. ಕೊಡವರ ಪ್ರಮುಖ ದೇವಾಲಯಗಳಲ್ಲಿ ಒಂದಾದ ಇದು ಕೆಲವೇ ಕಿಲೋಮೀಟರ್ ದೂರದಲ್ಲಿದೆ.

ತಲಕಾವೇರಿ


ಬ್ರಹ್ಮಗಿರಿ ಬೆಟ್ಟದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ತಲಕಾವೇರಿ. ಇದು ಭಾಗಮಂಡಲದಿಂದ 8 ಕಿ.ಮೀ ಹಾಗೂ ಮಡಿಕೇರಿಯಿಂದ 48 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 1276 ಮೀಟರ್‌ ಎತ್ತರದಲ್ಲಿರುವ ಈ ತಲಕಾವೇರಿಯಲ್ಲಿ ತೀರ್ಥ ಕುಂಡಿಕೆ ಅಥವಾ ಬ್ರಹ್ಮ ಕುಂಡಿಕೆ ಎಂದು ಕರೆಯಲ್ಪಡುವ ನೀರಿನ ಬುಗ್ಗೆ ಇದೆ. ಇದು ಕಾವೇರಿ ನದಿಯ ಮೂಲ ಎಂದು ಹೇಳಲಾಗುತ್ತದೆ. ಈ ಬ್ರಹ್ಮ ಕುಂಡಿಕೆ ಸಮೀಪದಲ್ಲಿಯೇ ದೇಗುಲವಿದೆ. ಅದರಲ್ಲಿ ನೀರಿನ ಪುಷ್ಕರಣಿಯಿದ್ದು, ಅಲ್ಲಿ ಭಕ್ತಾದಿಗಳು ಸ್ನಾನ ಮಾಡಬಹುದು. ಇಲ್ಲಿ ಒಂದು ಶಿವನ ದೇವಾಲಯವಿದ್ದರೆ ಇನ್ನೊಂದು ಗಣೇಶ ದೇಗುಲವಿದೆ. ತಲಕಾವೇರಿಯಿಂದ ಬ್ರಹ್ಮಗಿರಿ ಶಿಖರಕ್ಕೆ ಹೋಗಬಹುದು. ಪುರಾಣಗಳ ಪ್ರಕಾರ ಈ ಗಿರಿಯಲ್ಲಿ ಸಪ್ರ ಮಹರ್ಷಿಗಳು ವಿಶೇಷ ಯಜ್ಞವನ್ನು ಮಾಡಿದರು ಎಂದು ನಂಬಲಾಗುತ್ತದೆ.

ಯೆಮ್ಮೆಮಾಡುವಿನ ದರ್ಗಾ ಶರೀಫ್‌


ಕೊಡಗಿನ ಮುಸ್ಲಿಂ ಧರ್ಮೀಯರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದು ಯೆಮ್ಮೆಮಾಡುವಿನ ದರ್ಗಾ ಶರೀಫ್‌. ಇದು ನಾಪೋಕ್ಲು ಪಟ್ಟಣದ ಬಳಿಯಿದೆ. ಹಜರತ್ ಸೂಫಿ ಶಹೀದ್ ಮತ್ತು ಸಯ್ಯದ್ ಹಸನ್ ಸಕಾಫ್ ಹಲ್ರಮಿರ್ ಅವರ ನೆನಪಿಗಾಗಿ ಈ ಸಮಾಧಿಯನ್ನು ನಿರ್ಮಿಸಲಾಗಿದೆ. ಈ ಇಬ್ಬರೂ ಸೂಫಿ ಸಂತರು ಸುಮಾರು 366 ವರ್ಷಗಳ ಹಿಂದೆ ಪರ್ಷಿಯಾದಿಂದ ಆಗಮಿಸಿದ್ದರು. ಅವರು ಜನರಿಗೆ ಧಾರ್ಮಿಕ ಪ್ರವಚನಗಳನ್ನು ನೀಡಿದರು ಮತ್ತು ಬಡವರ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇಲ್ಲಿ ವಾರ್ಷಿಕ ಹಬ್ಬವನ್ನು 8 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಆಚರಣೆಗೆ ಉರುಸ್‌ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಈ ಕಾರ್ಯಕ್ರಮಕ್ಕೆ ಎರಡರಿಂದ ಮೂರು ಲಕ್ಷ ಜನರು ಆಗಮಿಸುತ್ತಾರೆ.. ಮಹಿಳಾ ಯಾತ್ರಿಗಳಿಗೆ ದರ್ಗಾದೊಳಗೆ ಪ್ರವೇಶವಿಲ್ಲ. ಅವರಿಗೆಂದೇ ಪ್ರತ್ಯೇಕ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ.

ಕರಡಾ ಗ್ರಾಮ


ಕಕ್ಕಬೆ ಪಟ್ಟಣದ ಸಮೀದಲ್ಲಿ ಕರಡಾ ಹೆಸರಿನ ಗ್ರಾಮವಿದೆ. ಇದು ವಿರಾಜಪೇಟೆಯಿಂದ 18 ಕಿ.ಮೀ ಮತ್ತು ಮಡಿಕೇರಿಯಿಂದ ಸರಿಸುಮಾರು 30 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಕೂರ್ಗ್‌ನ ಕೆಲವು ಶ್ರೀಮಂತ ಪೂರ್ವಜರ ಮನೆಗಳನ್ನು ಹೊಂದಿದೆ. ಕೆಲವು ಪೂರ್ವಜರ ಮನೆಗಳು 200-300 ವರ್ಷಗಳಷ್ಟು ಹಳೆಯದಾಗಿದ್ದು, ಪ್ರವಾಸಿಗರಿಗೆ ಇತಿಹಾಸ ಮತ್ತು ಪುರಾತನ ಜೀವನದ ಸ್ಪರ್ಶವನ್ನು ನೀಡುತ್ತವೆ. ಈ ಮನೆಗಳ ಸುತ್ತಲೂ ಕಾಫಿ ತೋಟ ಆವರಿಸಿಕೊಂಡಿರುವುದರಿಂದ ನಿಮಗೆ ಮನಸ್ಸಿಗೆ ಮುದ ಸಿಕ್ಕಂತಾಗುತ್ತದೆ. ಹಲವು ಮನೆಗಳು ಪ್ರವಾಸಿಗರಿಗೆ ಗೆಸ್ಟ್‌ ಹೌಸ್‌ ರೀತಿಯಲ್ಲಿ ವ್ಯವಸ್ಥೆಯನ್ನೂ ಕಲ್ಪಿಸಿಕೊಡುತ್ತಿವೆ. ಹಾಗಾಗಿ ನೀವು ಅಲ್ಲಿ ವಾಸವಿದ್ದು, ಕೊಡಗಿನ ಸೌಂದರ್ಯದ ಜತೆ ಊಟವನ್ನು ಸವಿದು ಬರಬಹುದು.

ಗದ್ದಿಗೆ


ರಾಜ ವೀರರಾಜೇಂದ್ರ, ಲಿಂಗ ರಾಜೇಂದ್ರ ಮತ್ತು ಅವರ ಆಸ್ಥಾನದ ಪುರೋಹಿತರನ್ನು ಸಮಾಧಿ ಮಾಡಿದ ಸ್ಥಳವಿದು. ಇದೇ ಪ್ರದೇಶದಲ್ಲಿ ಅವರ ಕೆಚ್ಚೆದೆಯ ಮತ್ತು ನಿಷ್ಠಾವಂತ ಸೈನಿಕರಿಗೆ ಸೇರಿದ ಎರಡು ಸಣ್ಣ ಸಮಾಧಿಗಳಿವೆ. ಮೂರು ಮುಖ್ಯ ಸಮಾಧಿಗಳು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಸಮಾಧಿಯ ನಾಲ್ಕೂ ತುದಿಗಳಲ್ಲಿ ಗೋಪುರ ಹಾಗೂ ಮಧ್ಯದಲ್ಲಿ ಗುಮ್ಮಟವನ್ನು ನಿರ್ಮಿಸಲಾಗಿದೆ. ಇದು ನೋಡುವುದಕ್ಕೆ ಮುಸ್ಲಿಂ ದರ್ಗಾದಂತೆ ಕಾಣುತ್ತದೆ. ಇದನ್ನು 18ನೇ ಶತಮಾನದಲ್ಲಿ ನಿರ್ಮಿಸಲಾದ ದಾಖಲೆಯಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Murder case : ಮನೆ ಓನರ್ ಕೊಲೆ ಕೇಸ್; ಇದು ಕಳ್ಳಿ ಕೊಲೆಗಾರ್ತಿಯಾದ ಕಥೆ

Murder case : ಚಿನ್ನದ ಸರಕ್ಕಾಗಿ ಮನೆ ಮಾಲಕಿಯನ್ನೇ ಕತ್ತು ಹಿಸುಕಿ ಕೊಂದಿದ್ದ ರೀಲ್ಸ್‌ ಸ್ಟಾರ್‌ ಮೋನಿಕಾ ವಿಚಾರಣೆ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಬೇಕಂತ ಕೊಲೆ ಮಾಡಿಲ್ಲ ಸರ್..‌
ಪ್ರಿಯತಮನಿಗೆ ವಾಹನ ಖರೀದಿಸಿ ಕೊಡಲು ಚಿನ್ನದ ಸರವನ್ನು ಕದಿಯಲು ಹೋಗಿದ್ದೆ. ಆದರೆ ನನಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದಿದ್ದಾಳೆ.

VISTARANEWS.COM


on

By

Murder case in Bengaluru
ರೀಲ್ಸ್‌ ಸ್ಟಾರ್‌ ಮೋನಿಕಾ ಅರೆಸ್ಟ್‌
Koo

ಬೆಂಗಳೂರು: ಕೆಂಗೇರಿಯಲ್ಲಿ ಮನೆ ಓನರ್ ದಿವ್ಯಾಳನ್ನು ಕೊಂದ ಪ್ರಕರಣಕ್ಕೆ (Murder case) ಸಂಬಂಧಿಸಿದಂತೆ ಆರೋಪಿ ಮೋನಿಕಾಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ರೀಲ್ಸ್ ಸ್ಟಾರ್ ಮೋನಿಕಾ ಬಿಕ್ಕಿ ಬಿಕ್ಕಿ ಅತ್ತಿದ್ದು, ಬೇಕಂತ ಕೊಲೆ ಮಾಡಿಲ್ಲ ಸರ್ ಎಂದಿದ್ದಾಳೆ.

ಮಾಡಿಕೊಂಡ ಸಾಲ ತೀರಿಸಲು, ಶೋಕಿ ಜೀವನ ನಡೆಸಲು ಹಾಗೂ ಪ್ರಿಯತಮನ ಜತೆ ಮಜಾ ಉಡಾಯಿಸಲು ಯುವತಿಯೊಬ್ಬಳು ತಾನು ಬಾಡಿಗೆಗೆ ಇದ್ದ ಮನೆಯ ಮಾಲಕಿಯನ್ನೇ ಕೊಲೆ (Woman murder case) ಮಾಡಿದ್ದಳು. ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗೃಹಿಣಿ ಕೊಲೆ (kengeri murder, bangalore crime) ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೇ 10ರಂದು ಕೆಂಗೇರಿ ಠಾಣೆ ವ್ಯಾಪ್ತಿಯ ಕೋನಸಂದ್ರದಲ್ಲಿ ಘಟನೆ ನಡೆದಿತ್ತು. ದಿವ್ಯಾ ಎಂಬುವವರನ್ನು ಮೋನಿಕಾ (24) ಎಂಬಾಕೆ ಹತ್ಯೆ ಮಾಡಿದ್ದಳು.

ಕೊಲೆ ಕೇಸ್‌ನಲ್ಲಿ ಬಂಧಿಯಾಗಿರುವ ಮೋನಿಕಾ, ನನಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಬದಲಿಗೆ ದಿವ್ಯಾ ಹಾಕಿದ್ದ ಚಿನ್ನದ ಸರವನ್ನು ಮಾತ್ರ ಕಸಿದುಕೊಳ್ಳಲು ಹೋಗಿದ್ದೆ ಎಂದಿದ್ದಾಳೆ.

ಕೊಲೆ ಮಾಡುವ ಮೊದಲು ಎರಡ್ಮೂರು ಬಾರಿ ದಿವ್ಯಾ ಮನೇಲಿ ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದಳು. ಆದರೆ ಮೋನಿಕಾ ಪ್ರಯತ್ನ ವಿಫಲವಾಗಿತ್ತು. ಮೋನಿಕಾ ಗ್ರೌಂಡ್ ಪ್ಲೋರ್‌ನಲ್ಲಿ ವಾಸವಿದ್ದಳು. ದಿವ್ಯಾಳ ಮಗುವನ್ನು ನೋಡಿಕೊಳ್ಳುವ ನೆಪದಲ್ಲಿ ಮನೆಯೊಳಗೆ ಗಮನಿಸುತ್ತಿದ್ದಳು.

Murder case in Bengaluru
ಕೊಲೆಯಾದ ದಿವ್ಯಾ ಹಾಗೂ ಆರೋಪಿ ಮೋನಿಕಾ

ದಿವ್ಯಾಳ ಪತಿ ಹಾಗೂ ಅತ್ತೆ-ಮಾವ ಎಲ್ಲರೂ ಕೆಲಸಕ್ಕೆ ಹೋದ ನಂತರ ಮೋನಿಕಾ ಮನೆಗೆ ಬರುತ್ತಿದ್ದಳು. ದಿವ್ಯಾಳನ್ನು ಅಕ್ಕ ಅಕ್ಕ ಅಂತಿದ್ದವಳು, ಮಗು ನಿದ್ರೆಗೆ ಜಾರಿದಾಗ ದಿವ್ಯಾಳ ಕತ್ತು ಹಿಸುಕಿ ಕೊಂದಿದ್ದಳು.

ಇದನ್ನೂ ಓದಿ: Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಪ್ರಿಯತಮನಿಗಾಗಿ ಮಾಡಿದ್ದಳು ಸಾಲ

ಮೋನಿಕಾ ವಿಚಾರಣೆ ವೇಳೆ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ. ಪ್ರಿಯತಮನಿಗಾಗಿ ಮಾಡಿದ್ದ ಸಾಲ ತೀರಿಸಲು ಕಳ್ಳತನಕ್ಕೆ ಇಳಿದಿದ್ದಳು ಆದರೆ ಅದು ವಿಫಲವಾಗಿತ್ತು. ಇತ್ತೀಚೆಗೆ ಕೆಲಸ ಬಿಟ್ಟಿದ್ದ ಮೋನಿಕಾ ಎರಡು ತಿಂಗಳು ಮನೆ ಬಾಡಿಗೆ ಕಟ್ಟಿರಲಿಲ್ಲ. ದಿವ್ಯಾ ಕುಟುಂಬಸ್ಥರು ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಹೊಸ ಮನೆ ಗೃಹಪ್ರವೇಶ ಮಾಡಿದ್ದರು. ಆ ಹೊಸ ಮನೆಗೆ ಬಾಡಿಗೆಗೆ ಮೋನಿಕಾ ಪಡೆದಿದ್ದಳು.

ಕೆಲಸ ಬಿಟ್ಟಿದ್ದರೂ ಪ್ರಿಯತಮ ಟಾಟಾ ಏಸ್ ವಾಹನ ಖರೀದಿಗೆ ಸಾಲ ಮಾಡಿ ಹಣ ಕೊಟ್ಟಿದ್ದಳು. ಆದರೆ ಸಾಲ ಕೊಟ್ಟವರು ಮೋನಿಕಾ ಹಿಂದೆ ಬಿದ್ದಿದ್ದರು. ಇತ್ತ ಸಾಲ ಪಡೆದ ಪ್ರಿಯತಮ ಕೂಡ ಹಣ ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ ದಿವ್ಯಾ ಸ್ನಾನಕ್ಕೆ ಹೋದಾಗ ಮಾಂಗಲ್ಯ ಸರ ಎಗರಿಸೋಣ ಎಂದು ಸ್ಕೆಚ್ ಹಾಕಿದ್ದಳು. ಮಗುವನ್ನು ನೋಡಿಕೊಳ್ಳುವ ನೆಪದಲ್ಲಿ ಹೋಗಿ ಮಾಂಗಲ್ಯ ಸರವನ್ನು ಕಳವು ಮಾಡಲು ಯೋಜಿಸಿದ್ದಳು. ಆದರೆ ದಿವ್ಯಾ ಮೋನಿಕಾ ಮುಂದೆ ಮಾಂಗಲ್ಯ ಸರವನ್ನು ತೆಗೆದಿಡಲಿಲ್ಲ.

ಹೀಗಾಗಿ ಬೇರೆ ದಾರಿ ಕಾಣದೇ ದಿವ್ಯಾಳ ಕತ್ತು ಹಿಸುಕಿ 36 ಗ್ರಾಂ ಚಿನ್ನಾಭರಣದ ಜತೆ ಮೋನಿಕಾ ಎಸ್ಕೇಪ್ ಹಾಕಿದ್ದಳು. ಕದ್ದ ಸರವನ್ನು ಅಡವಿಟ್ಟು ಆರಾಮಾಗಿ ತನಗೇನು ಗೊತ್ತಿಲ್ಲದಂತೆ ವಾಪಸ್ ಬಂದಿದ್ದಳು. ಆದರೆ ಪೊಲೀಸರ ವಿಚಾರಣೆ ವೇಳೆ ನನ್ನ ಮನೆಯಲ್ಲೂ 60 ಸಾವಿರ ಕಳುವಾಗಿದೆ ಎಂದಿದ್ದಳು. ಇತ್ತ ದಿವ್ಯಾ ಕುತ್ತಿಗೆಯಲ್ಲಿದ್ದ ಗಾಯದ ಗುರುತು ಕೊಲೆ ಎನ್ನುವುದು ಸ್ಪಷ್ಟವಾಗಿತ್ತು.

ಘಟನೆ ದಿನ ಇಡೀ ಕಟ್ಟಡದಲ್ಲಿ ದಿವ್ಯಾ ಮತ್ತು ಅವರ ಮಗು ಹಾಗೂ ಮೋನಿಕಾ ಹೊರತಾಗಿ ಯಾರು ಇರಲಿಲ್ಲ. ಅಲ್ಲದೇ ಮೋನಿಕಾ ಕಳೆದ ಎರಡು ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ ಎನ್ನುವ ವಿಚಾರ ಗೊತ್ತಾಗಿತ್ತು. 60 ಸಾವಿರ ಹಣ ಮನೆಯಲ್ಲಿದರೆ ಎರಡು ತಿಂಗಳ ಬಾಡಿಗೆ ಯಾಕೆ ಕಟ್ಟಿಲ್ಲ ಎಂಬ ಸಂಶಯ ಪೊಲೀಸರಿಗೆ ಕಾಡಿತ್ತು.

ಮೃತಳ ಕತ್ತಿನಲ್ಲಿದ್ದ ಚಿನ್ನ ಕಳುವಾಗಿದ್ದರಿಂದ ಪೊಲೀಸರು ಹತ್ತಿರದ ಜ್ಯುವೆಲ್ಲರಿ ಶಾಪ್‌ನಲ್ಲಿ ವಿಚಾರಿಸಿದ್ದಳು. ಈ ವೇಳೆ ಮೋನಿಕಾ ದಿವ್ಯಾಳ ಮಾಂಗಲ್ಯಸರ ಅಡವಿಟ್ಟಿರುವುದು ಪತ್ತೆಯಾಗಿದೆ. ಕೂಡಲೇ ಮೋನಿಕಾಳನ್ನು ವಶಕ್ಕೆ ಪಡೆದಾಗ ಕೊಲೆ ರಹಸ್ಯ ಹೊರಗೆ ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Suspicious Case : ಬೆಂಗಳೂರಿನಲ್ಲಿ ಕಾಲೇಜು ಹುಡುಗಿಯೊಬ್ಬಳು ಅನುಮಾನಾಸ್ಪದ‌ವಾಗಿ ಮೃತಪಟ್ಟಿದ್ದಾಳೆ. ಮನೆಯ ಬಾತ್‌ ರೂಮಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

VISTARANEWS.COM


on

By

Suspicious Case in Bengaluru
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಿನ (Bengaluru News) ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಡುಗಿಯೊಬ್ಬಳು ಅನುಮಾನಾಸ್ಪದ‌ವಾಗಿ (Suspicious Case) ಮೃತಪಟ್ಟಿದ್ದಾಳೆ. ಪ್ರಭುಧ್ಯಾ(21) ಮೃತ ದುರ್ದೈವಿ.

ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಭುದ್ಯಾ, ಮನೆಯ ಮನೆಯ ಬಾತ್‌ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಬುಧವಾರ ಸಂಜೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಭುಧ್ಯಾಳ ಸಾವು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ, ಕೊಲೆಯೋ ಹೀಗೆ ಎಲ್ಲ‌ ಆಯಾಮದಲ್ಲೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯುಡಿಆರ್ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: Road Accident: ಸರಣಿ ಅಪಘಾತ, ಬೈಕ್ ಸವಾರ ಸಾವು; ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

ಪತ್ನಿಗೆ ಹೆದರಿಸಲು ಹೋಗಿ ಉರುಳು ಬಿಗಿದು ಸತ್ತ ಜಿಮ್‌ ಟ್ರೇನರ್; ವಿಡಿಯೋ ಕಾಲ್‌ನಲ್ಲೇ ಆತ್ಮಹತ್ಯೆ

ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ (Video Call) ಮಾಡಿ ಹೆದರಿಸಲು ಹೋದ ಜಿಮ್‌ ಟ್ರೈನರ್‌ (Gym Trainer), ಆಕಸ್ಮಿಕವಾಗಿ ಉರುಳು ಬಿಗಿದುಕೊಂಡು (hanging) ಮೃತಪಟ್ಟಿದ್ದಾನೆ. ಬಿಹಾರ ಮೂಲದ ಅಮಿತ್ ಕುಮಾರ್ (28) ಹೀಗೆ ಆತ್ಮಹತ್ಯೆ (Self Harming) ಮಾಡಿಕೊಂಡ ದುರ್ದೈವಿ.

ಬಾಗಲಗುಂಟೆ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಬಳಿ ನಡೆದ ಘಟನೆಯಿದು. ಜಿಮ್ ಟ್ರೈನರ್ ಅಮಿತ್ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಜಿಮ್‌ ಪಕ್ಕದಲ್ಲೇ ವಾಸವಿದ್ದ ಹಾಸನ ಮೂಲಕ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಪೋಷಕರ ವಿರೋಧದ ನಡುವೆ ಇವರು ವಿವಾಹವಾಗಿದ್ದರು.

ಮದುವೆ ಬಳಿಕ ಅಮಿತ್ ಕುಮಾರ್ ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ್ದಳು. ನರ್ಸಿಂಗ್ ಸೇರಿದ ಬಳಿಕ ಫ್ರೆಂಡ್ಸ್ ಜೊತೆಗೆ ಪದೇ ಪದೆ ಫೋನ್ ಕರೆಯಲ್ಲಿ ಹೊತ್ತು ಕಳೆಯುತ್ತಿದ್ದಳು. ಇದೇ ವಿಚಾರಕ್ಕೆ ಆಗಾಗ್ಗೆ ಪತಿ- ಪತ್ನಿ ನಡುವೆ ಆಗಾಗ ಜಗಳ ಆಗುತ್ತಾ ಇತ್ತು. ಹೀಗಾಗಿ ಗಂಡನಿಂದ ದೂರವಾಗಿ ಪತ್ನಿ ಬೇರೊಂದು ಕಡೆ ವಾಸವಾಗಿದ್ದಳು.

ನಿನ್ನೆ ಸಂಜೆ ಮರಳಿ ಮನೆಗೆ ಬರುವಂತೆ ಅಮಿತ್‌ ಪತ್ನಿಗೆ ಪದೇ ಪದೆ ಕಾಲ್ ಮಾಡಿದ್ದಾನೆ. ಬಳಿಕ ವಿಡಿಯೋ ಕಾಲ್ ಮಾಡಿ, ಮನೆಗೆ ಬಂದಿಲ್ಲ ಅಂದರೆ ನೇಣು ಬಿಗಿದುಕೊಳ್ಳುವುದಾಗಿ ಹೆದರಿಸಲು ಮುಂದಾಗಿದ್ದಾನೆ. ಕತ್ತಿಗೆ ಹಗ್ಗ ಹಾಕಿಕೊಂಡು ವೀಡಿಯೋ ಕಾಲ್‌ನಲ್ಲಿ ಹೆದರಿಸಿದ್ದಾನೆ. ಈ ವೇಳೆ ಮೊಬೈಲ್ ಕೈ ಜಾರಿದ್ದು, ಅದನ್ನು ಹಿಡಿಯಲೆಂದು ಹೋದಾಗ ಅಚಾನಕ್ ಆಗಿ ಉರುಳು ಬಿಗಿದುಕೊಂಡಿದೆ. ಅಮಿತ್‌ ಅಲ್ಲೇ ಮೃತಪಟ್ಟಿದ್ದಾನೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾಗೆ ರವಾನಿಸಲಾಗಿದ್ದು, ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Road Accident: ಸರಣಿ ಅಪಘಾತ, ಬೈಕ್ ಸವಾರ ಸಾವು; ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

ಹುಣಸೂರು ಹಾಗೂ ದಾವಣಗೆರೆಯ ಚನ್ನಗಿರಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ (Road Accident) ಇಬ್ಬರು ಮೃತಪಟ್ಟಿದ್ದಾರೆ. ಚನ್ನಗಿರಿಯಲ್ಲಿ ಸ್ಥಳಿಯರು ರಸ್ತೆ ತಡೆ ನಡೆಸಿದ್ದಾರೆ.

VISTARANEWS.COM


on

hunsur road accident
Koo

ಮೈಸೂರು: ಹುಣಸೂರು ತಾಲೂಕಿನ (Mysore news) ಅರಸು ಕಲ್ಲಳ್ಳಿ ಬಳಿ ನಡೆದ ಸರಣಿ ಅಪಘಾತದಲ್ಲಿ (Road Accident) ಬೈಕ್‌ ಸವಾರರೊಬ್ಬರು (Bike rider) ಸಾವಿಗೀಡಾಗಿದ್ದಾರೆ ಎರಡು ಬಸ್, ಎರಡು ಕಾರುಗಳಿಗೆ ಜಖಂ ಆಗಿದೆ.

ಮೈಸೂರು- ಬಂಟ್ವಾಳ ಹೆದ್ದಾರಿ- 275ರ ಅರಸು ಕಲ್ಲಹಳ್ಳಿ ಗೇಟ್ ಬಳಿಯಲ್ಲಿ ಘಟನೆ ನಡೆದಿದೆ. ಮೈಸೂರು ತಾಲೂಕಿನ ಹೂಟಗಳ್ಳಿಯ ಎಸ್‌ಆರ್‌ಎಸ್ ಕಾಲೋನಿಯ ಲೇಟ್ ಭೈರಪ್ಪ ಪುತ್ರ, ಕೂಲಿ ಕಾರ್ಮಿಕ ಕರಿಯಪ್ಪ (40) ಮೃತರು. ಗ್ರಾಮದ ಹಬ್ಬ ಮುಗಿಸಿ ವಾಪಸ್ ಆಗುವ ವೇಳೆ ನಡೆದ ಅವಘಡದಲ್ಲಿ ಕರಿಯಪ್ಪ ಸ್ಥಳದಲ್ಲೇ ಸಾವಿಗೀಡಾದರು. ಸರಣಿ ಅಪಘಾತದಲ್ಲಿ ಎರಡು ಬಸ್‌ಗಳು ಹಾಗೂ ಎರಡು ಕಾರುಗಳಿಗೆ ಜಖಂ ಆಗಿದ್ದು, ಕೆಲವರಿಗೆ ತರಚಿದ ಗಾಯಗಳಾಗಿವೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿಯಾಗಿ ಪಾದಚಾರಿ ಮೃತ್ಯು, ಸ್ಥಳಿಯರಿಂದ ರಸ್ತೆ ತಡೆ

ದಾವಣಗೆರೆ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ (Car hit) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. (Davanagere news) ಚನ್ನಗಿರಿ ತಾಲೂಕಿನ ಗೆದ್ದಲಹಟ್ಟಿ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ರಾಜೇಶ್ (45) ಮೃತ ದುರ್ದೈವಿ.

davanagere road accident

ದಾವಣಗೆರೆ ಹಾಗೂ ಬೀರೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ರಾಜ್ಯ ಹೆದ್ದಾರಿ ಇದ್ದರೂ ಗ್ರಾಮದಲ್ಲಿ ಸ್ಪೀಡ್ ಬ್ರೇಕರ್ಸ್( ಹಂಪ್ಸ್) ಗಳನ್ನು ಹಾಕದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆಕ್ರೋಶಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಾಣಹಾನಿ ಆಗಿದೆ ಎಂದು ಸಿಟ್ಟಿಗೆದ್ದಿರುವ ಜನರು, ರಸ್ತೆ ತಡೆ ನಡೆಸಿ ಸಾವಿಗೆ ನ್ಯಾಯ ಒದಗಿಸಿ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲೇ ನೂರಾರು ಜನರ ಜಮಾವಣೆಯಾಗಿದ್ದು, ಸ್ಥಳಕ್ಕೆ ಸಂತೆಬೆನ್ನೂರು ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

ಲಾರಿ ಟಯರ್‌ ಸ್ಫೋಟ, ಬೆಂಕಿಗೆ ತುತ್ತು

ವಿಜಯನಗರ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ (divider) ಗುದ್ದಿದ ಲಾರಿ ಪಲ್ಟಿಯಾಗಿ ಬೆಂಕಿಗೆ ತುತ್ತಾಗಿ ಭಸ್ಮವಾಗಿದೆ. (Vijayanagar news) ಕೂಡ್ಲಿಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ (national highway) 50ರ ಕಮಲಾಪೂರ ಕ್ರಾಸ್ ಬಳಿ ಅಪಘಾತ ನಡೆದಿದೆ.

vijayanagara road accident

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಪೇಟೆ ಕಡೆಗೆ ಬರುತ್ತಿದ್ದ ಲಾರಿಯ ಚಕ್ರಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿವೆ. ಸ್ಪೋಟವಾಗಿ ಡಿವೈಡರ್‌ಗೆ ಗುದ್ದಿದ ಪರಿಣಾಮ ಲಾರಿಗೆ ಬೆಂಕಿ ತಗುಲಿದೆ. ಅದೃಷ್ಟವಶಾತ್ ಲಾರಿ ಡ್ರೈವರ್, ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಮಲಾಪುರ ಬಳಿ ಘಟನೆಯಿಂದಾಗಿ ಟ್ರಾಫಿಕ್‌ ಜಾಮ್ ಆಗಿದ್ದು, ಘಟನಾ ಸ್ಥಳಕ್ಕೆ NH ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಕಾನಾಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೆರೆಯಲ್ಲಿ ಲಕ್ಷಕ್ಕೂ ಅಧಿಕ ಮೀನುಗಳ ಮಾರಣಹೋಮ; ವಿಷಪ್ರಾಶನ ಶಂಕೆ

ದಾವಣಗೆರೆ: ಕೆರೆಯಲ್ಲಿ 1 ಲಕ್ಷಕ್ಕೂ ಅಧಿಕ ಮೀನುಗಳ ಮಾರಣ ಹೋಮವಾಗಿರುವ ಘಟನೆ ದಾವಣಗೆರೆ (Davanagere News) ಸಮೀಪದ ಎಲೆಬೇತೂರಿನ ಕೆರೆಯಲ್ಲಿ ನಡೆದಿದೆ. ಅಧಿಕ ಬಿಸಿಲಿನ ತಾಪಕ್ಕೆ ಮೀನುಗಳು ಮೃತಪಟ್ಟಿರಬಹುದಾ ಅಥವಾ ಹಳೇ ವೈಷಮ್ಯದಿಂದ ಯಾರಾದರೂ ಕೆರೆಗೆ ವಿಷ ಬೆರೆಸಿದ್ದರಿಂದ ಮೀನುಗಳು ಸಾವಿಗೀಡಾಗಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ.

ಕೆರೆಯಲ್ಲಿ 1.50 ಲಕ್ಷ ಮೀನುಗಳನ್ನು ಸಾಕಲಾಗಿತ್ತು. ಅದರಲ್ಲಿ 40 ಸಾವಿರ ಮೀನು ಹಿಡಿದು ಮಾರಲಾಗಿತ್ತು. ಇನ್ನುಳಿದ ಸುಮಾರು ಲಕ್ಷಕ್ಕೂ ಅಧಿಕ ಮೀನುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಬರೋಬ್ಬರಿ 5ರಿಂದ 10 ಕೆಜಿ ಇರುವ ಮೀನುಗಳು ಮೃತಪಟ್ಟು, ಕೆರೆಯಲ್ಲಿ ತೇಲುತ್ತಿವೆ. ಸತ್ತ ಮೀನುಗಳನ್ನು ನೋಡಿ ಮೀನು ಸಾಕಾಣಿಕೆದಾರರು ಕಂಗಾಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Murder Case: ಪ್ರಿಯತಮನ ಜೊತೆ ಶೋಕಿಗಾಗಿ ಮನೆ ಮಾಲಕಿಯ ಕೊಲೆ ಮಾಡಿದ ಯುವತಿ ಸೆರೆ

Continue Reading

ಕ್ರೈಂ

Self Harming: ಪತ್ನಿಗೆ ಹೆದರಿಸಲು ಹೋಗಿ ಉರುಳು ಬಿಗಿದು ಸತ್ತ ಜಿಮ್‌ ಟ್ರೇನರ್; ವಿಡಿಯೋ ಕಾಲ್‌ನಲ್ಲೇ ಆತ್ಮಹತ್ಯೆ

Self Harming: ವಿಡಿಯೋ ಕಾಲ್ ಮಾಡಿ, ಮನೆಗೆ ಬಂದಿಲ್ಲ ಅಂದರೆ ನೇಣು ಬಿಗಿದುಕೊಳ್ಳುವುದಾಗಿ ಹೆದರಿಸಲು ಮುಂದಾಗಿದ್ದಾನೆ. ಕತ್ತಿಗೆ ಹಗ್ಗ ಹಾಕಿಕೊಂಡು ವೀಡಿಯೋ ಕಾಲ್‌ನಲ್ಲಿ ಹೆದರಿಸಿದ್ದಾನೆ. ಈ ವೇಳೆ ಮೊಬೈಲ್ ಕೈ ಜಾರಿದ್ದು, ಅದನ್ನು ಹಿಡಿಯಲೆಂದು ಹೋದಾಗ ಅಚಾನಕ್ ಆಗಿ ಉರುಳು ಬಿಗಿದುಕೊಂಡಿದೆ. ಅಮಿತ್‌ ಅಲ್ಲೇ ಮೃತಪಟ್ಟಿದ್ದಾನೆ.

VISTARANEWS.COM


on

self harming gym trainer
Koo

ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ (Video Call) ಮಾಡಿ ಹೆದರಿಸಲು ಹೋದ ಜಿಮ್‌ ಟ್ರೈನರ್‌ (Gym Trainer), ಆಕಸ್ಮಿಕವಾಗಿ ಉರುಳು ಬಿಗಿದುಕೊಂಡು (hanging) ಮೃತಪಟ್ಟಿದ್ದಾನೆ. ಬಿಹಾರ ಮೂಲದ ಅಮಿತ್ ಕುಮಾರ್ (28) ಹೀಗೆ ಆತ್ಮಹತ್ಯೆ (Self Harming) ಮಾಡಿಕೊಂಡ ದುರ್ದೈವಿ.

ಬಾಗಲಗುಂಟೆ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಬಳಿ ನಡೆದ ಘಟನೆಯಿದು. ಜಿಮ್ ಟ್ರೈನರ್ ಅಮಿತ್ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಜಿಮ್‌ ಪಕ್ಕದಲ್ಲೇ ವಾಸವಿದ್ದ ಹಾಸನ ಮೂಲಕ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಪೋಷಕರ ವಿರೋಧದ ನಡುವೆ ಇವರು ವಿವಾಹವಾಗಿದ್ದರು.

ಮದುವೆ ಬಳಿಕ ಅಮಿತ್ ಕುಮಾರ್ ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ್ದಳು. ನರ್ಸಿಂಗ್ ಸೇರಿದ ಬಳಿಕ ಫ್ರೆಂಡ್ಸ್ ಜೊತೆಗೆ ಪದೇ ಪದೆ ಫೋನ್ ಕರೆಯಲ್ಲಿ ಹೊತ್ತು ಕಳೆಯುತ್ತಿದ್ದಳು. ಇದೇ ವಿಚಾರಕ್ಕೆ ಆಗಾಗ್ಗೆ ಪತಿ- ಪತ್ನಿ ನಡುವೆ ಆಗಾಗ ಜಗಳ ಆಗುತ್ತಾ ಇತ್ತು. ಹೀಗಾಗಿ ಗಂಡನಿಂದ ದೂರವಾಗಿ ಪತ್ನಿ ಬೇರೊಂದು ಕಡೆ ವಾಸವಾಗಿದ್ದಳು.

ನಿನ್ನೆ ಸಂಜೆ ಮರಳಿ ಮನೆಗೆ ಬರುವಂತೆ ಅಮಿತ್‌ ಪತ್ನಿಗೆ ಪದೇ ಪದೆ ಕಾಲ್ ಮಾಡಿದ್ದಾನೆ. ಬಳಿಕ ವಿಡಿಯೋ ಕಾಲ್ ಮಾಡಿ, ಮನೆಗೆ ಬಂದಿಲ್ಲ ಅಂದರೆ ನೇಣು ಬಿಗಿದುಕೊಳ್ಳುವುದಾಗಿ ಹೆದರಿಸಲು ಮುಂದಾಗಿದ್ದಾನೆ. ಕತ್ತಿಗೆ ಹಗ್ಗ ಹಾಕಿಕೊಂಡು ವೀಡಿಯೋ ಕಾಲ್‌ನಲ್ಲಿ ಹೆದರಿಸಿದ್ದಾನೆ. ಈ ವೇಳೆ ಮೊಬೈಲ್ ಕೈ ಜಾರಿದ್ದು, ಅದನ್ನು ಹಿಡಿಯಲೆಂದು ಹೋದಾಗ ಅಚಾನಕ್ ಆಗಿ ಉರುಳು ಬಿಗಿದುಕೊಂಡಿದೆ. ಅಮಿತ್‌ ಅಲ್ಲೇ ಮೃತಪಟ್ಟಿದ್ದಾನೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾಗೆ ರವಾನಿಸಲಾಗಿದ್ದು, ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಜಲಿ ಹಂತಕನಿಗೆ ಸ್ನೇಹಿತನೇ ಪ್ರೇರಣೆ? ಅವನೂ ಕೊಲೆ ಆರೋಪಿ!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ತನ್ನ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಅಂಜಲಿ ಎಂಬಾಕೆಯನ್ನು ಇರಿದು ಬರ್ಬರವಾಗಿ ಕೊಲೆ (Anjali Murder Case) ಮಾಡಿದ ಹಂತಕ ಗಿರೀಶ್‌ನ‌ ಸ್ನೇಹಿತ ಕೂಡ ಕೊಲೆ ಆರೋಪಿ (Murder suspect) ಎಂಬುದು ಬಯಲಿಗೆ ಬಂದಿದೆ. ತನ್ನ ಸ್ನೇಹಿತನಿಂದಲೇ ಈತ ಪ್ರೇರಣೆ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಕೊಲೆ ಪ್ರಕರಣ ಒಂದರಲ್ಲಿ ಗಿರೀಶ್‌ನ ಸ್ನೇಹಿತ ಶಶಿ ಆರೆಸ್ಟ್ ಆಗಿದ್ದಾನೆ. ಶಶಿ ಮತ್ತು ಗಿರೀಶ್ ಇಬ್ಬರೂ ಸ್ನೇಹಿತರು.‌ ಎರಡು ದಿನಗಳ ಹಿಂದೆ ಹುಬ್ಬಳ್ಳಿ ತಾಲೂಕಿನ ಹಳ್ಯಾಳದಲ್ಲಿ ಕೊಲೆ ನಡೆದಿದ್ದು, ಸದ್ದಾಂ ಎಂಬ ಯುವಕನ ಕೊಲೆಯಾಗಿತ್ತು. ಕೊಲೆ ಮಾಡಿದ್ದ ಪ್ರಕರಣದಲ್ಲಿ ಶಶಿ ಜೈಲು ಪಾಲಾಗಿದ್ದಾನೆ.

ಶಶಿ ಈ ಕೊಲೆ ಮಾಡಿದ ಬಳಿಕ ಅದೇ ರೀತಿ ಅಂಜಲಿಯನ್ನು ಮುಗಿಸಲು ಗಿರೀಶ್‌ ಪ್ಲ್ಯಾನ್ ಮಾಡಿದ್ದ. ತನ್ನ ಸ್ನೇಹಿತ ಮಾಡಿರುವ ಕೊಲೆಯಿಂದಲೇ ಪ್ರೇರಣೆ ಪಡೆದಿದ್ದ ಎಂದು ತರ್ಕಿಸಲಾಗಿದೆ. ಸ್ನೇಹಿತ ಕೊಲೆ ಮಾಡಿದ ಮೂರು ದಿನಗಳ ಬಳಿಕ ಗಿರೀಶನಿಂದ ಕೊಲೆ ಸಂಭವಿಸಿದೆ. ಇವರಿಬ್ಬರೂ‌ ಕೂಡಾ ಬೈಕ್ ಕಳ್ಳತನದ ಆರೋಪಿಗಳಾಗಿದ್ದಾರೆ.

ಅಂಜಲಿ‌ ಕೊಲೆ‌ ಪ್ರಕರಣದಲ್ಲಿ ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

ಹುಬ್ಬಳ್ಳಿ: ಅಂಜಲಿ‌ ಕೊಲೆ‌ ಪ್ರಕರಣದಲ್ಲಿ (Anjali Murder Case) ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಮಹಿಳಾ ಪೇದೆಯನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.

ಕೊಲೆ ಪ್ರಕರಣಕ್ಕೂ ಮೊದಲೇ ಅಂಜಲಿ ಅಜ್ಜಿ, ಬೆಂಡಿಗೇರಿ ಪೊಲೀಸ್ ಠಾಣೆಗೆ ಬಂದು ಬೆದರಿಕೆ ಇದೆ ಎಂದು ದೂರು ನೀಡಿದ್ದರು. ದೂರು ನೀಡಿದರೂ ಪೊಲೀಸರು ನಿರ್ಲಕ್ಷ್ಯ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ್‌ ಹಾಗೂ ಮಹಿಳಾ ಪೊಲೀಸ್ ಪೇದೆ ರೇಖಾ ಅವರನ್ನು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅಮಾನತು ಮಾಡಿದ್ದಾರೆ.

ಏನಿದು ಘಟನೆ?

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ (Neha Hiremath murder) ಕೊಲೆ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ಕೊಲೆ ಬುಧವಾರ ಮುಂಜಾನೆ ನಡೆದಿತ್ತು. ನಗರದ ವೀರಾಪೂರ ಓಣಿಯ ಮನೆಯಲ್ಲಿ ಮಲಗಿದ್ದಾಗ ಮನೆಗೇ ನುಗ್ಗಿದ್ದ ದುಷ್ಕರ್ಮಿ ಚಾಕುವಿನಿಂದ ಯುವತಿ ಅಂಜಲಿ ಅಂಬಿಗೇರಗೆ (20) ಇರಿದು ಕೊಂದಿದ್ದ.

Anjali Murder Case

ಕೊಲೆ ಮಾಡಿದ ಆರೋಪಿ ಗಿರೀಶ್ ಸಾವಂತ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನ್ನ ಪ್ರೀತಿಯನ್ನು‌ ನಿರಾಕರಿಸಿದ್ದಕ್ಕೆ ಕ್ರುದ್ಧನಾದ ಗಿರೀಶ್‌ ಈ ಕೃತ್ಯ ಎಸಗಿದ್ದ. ಈ ಸೈಕೋ ಪ್ರೇಮಿ, ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ಧಮಕಿ ಹಾಕಿದ್ದ. “ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಹೇಗೆ ಆಗಿದೆ ಹಾಗೆ ಮಾಡ್ತೀನಿ” ಎಂದು ಧಮಕಿ ಹಾಕಿದ್ದ. ಗಿರೀಶ ಬೆದರಿಕೆ ಹಾಕಿರುವುದನ್ನು ಅಂಜಲಿಯ ಅಜ್ಜಿ ಗಂಗಮ್ಮ ಅವರು ಪೊಲೀಸರ ಗಮನಕ್ಕೂ ತಂದಿದ್ದರು. ಆದರೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಕೊಲೆಪಾತಕಿ ಗಿರೀಶ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯ ಯುವತಿ ನೇಹಾ ಹಿರೇಮಠ ಅವರನ್ನು ಪಾಗಲ್‌ ಪ್ರೇಮಿ ಫಯಾಜ್‌ ಕಾಲೇಜ್‌ ಕ್ಯಾಂಪಸ್‌ನಲ್ಲಿಯೇ ಕಳೆದ ತಿಂಗಳು ಕೊಚ್ಚಿ ಕೊಲೆ ಮಾಡಿದ್ದ. ಇದು ಲವ್‌ ಜಿಹಾದ್‌ ಪ್ರಕರಣ ಎಂದು ರಾಜಾದ್ಯಂತ ತೀವ್ರ ಪ್ರತಿಭಟನೆ, ರಾಜಕೀಯ ಕೆಸರೆರಚಾಟಗಳಿಗೆ ಕಾರಣವಾಗಿತ್ತು.

ಇದನ್ನೂ ಓದಿ | B C Mylarappa: ಅಕ್ರಮ ಭೂ ವ್ಯವಹಾರ; ಪ್ರೊ. ಮೈಲಾರಪ್ಪ ಅಮಾನತಿಗೆ ಉನ್ನತ ಶಿಕ್ಷಣ ಇಲಾಖೆ ಸೂಚನೆ

Continue Reading
Advertisement
Murder case in Bengaluru
ಬೆಂಗಳೂರು40 seconds ago

Murder case : ಮನೆ ಓನರ್ ಕೊಲೆ ಕೇಸ್; ಇದು ಕಳ್ಳಿ ಕೊಲೆಗಾರ್ತಿಯಾದ ಕಥೆ

Cannes 2024 Urvashi Rautela pink gown remind Deepika Padukone
ಬಾಲಿವುಡ್13 mins ago

Cannes 2024: ಕಾನ್ ರೆಡ್‌ ಕಾರ್ಪೆಟ್‌ ಮೇಲೆ ಮಿಂಚಿದ ಊರ್ವಶಿ ರೌಟೇಲಾ: ದೀಪಿಕಾ ಸ್ಟೈಲ್ ಕಾಪಿ ಮಾಡಿದ್ರಾ?

Sanju Samson
ಕ್ರೀಡೆ22 mins ago

Sanju Samson: ಸತತ 4 ಸೋಲು; ಬೇಸರ ಹೊರಹಾಕಿದ ನಾಯಕ ಸಂಜು ಸ್ಯಾಮ್ಸನ್

Suspicious Case in Bengaluru
ಬೆಂಗಳೂರು59 mins ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Star Suvarna HuAnthiya UhuuAnthiya new celebrity game show
ಕಿರುತೆರೆ1 hour ago

Star Suvarna: ಕಿರುತೆರೆಗೆ ಬರ್ತಿದೆ ಹೊಸ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’: ಪ್ರಸಾರ ಯಾವಾಗ?

Hepatitis-A
ದೇಶ1 hour ago

Hepatitis-A: ಅಲರ್ಟ್‌..ಅಲರ್ಟ್‌! ಜನರ ನಿದ್ದೆಗೆಡಿಸ್ತಿದೆ ಮತ್ತೊಂದು ಡೆಡ್ಲಿ ವೈರಸ್‌

Anita Goyal
ದೇಶ1 hour ago

Anita Goyal: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಪತ್ನಿ ಅನಿತಾ ಗೋಯಲ್‌ ನಿಧನ

hunsur road accident
ಕ್ರೈಂ1 hour ago

Road Accident: ಸರಣಿ ಅಪಘಾತ, ಬೈಕ್ ಸವಾರ ಸಾವು; ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

A Movie Re-ReleaseActress Chandni relives memories
ಸ್ಯಾಂಡಲ್ ವುಡ್1 hour ago

A Movie Re-Release: ರೀ-ರಿಲೀಸ್ ಆಗ್ತಿದೆ ಉಪ್ಪಿಯ `A’ ಸಿನಿಮಾ : ನೆನಪುಗಳನ್ನು ಮೆಲುಕು ಹಾಕಿದ ನಟಿ ಚಾಂದಿನಿ!

Sunil Chhetri
ಕ್ರೀಡೆ2 hours ago

Sunil Chhetri: 20 ವರ್ಷಗಳ ಫುಟ್ಬಾಲ್ ವೃತ್ತಿಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ ಸುನೀಲ್‌ ಚೆಟ್ರಿ; ಕುವೈತ್ ವಿರುದ್ಧ ಅಂತಿಮ ಪಂದ್ಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌