Best Places to Visit in Coorg : ಕೊಡಗಿನಲ್ಲಿ ಮೈಮರೆಸುವ ಈ ತಾಣಗಳನ್ನು ನೀವು ನೋಡಲೇಬೇಕು… - Vistara News

ಕರ್ನಾಟಕ

Best Places to Visit in Coorg : ಕೊಡಗಿನಲ್ಲಿ ಮೈಮರೆಸುವ ಈ ತಾಣಗಳನ್ನು ನೀವು ನೋಡಲೇಬೇಕು…

ಈ ಮಳೆಗಾಲದಲ್ಲಿ ಮಡಿಕೇರಿ ಕಡೆ ಪ್ರಯಾಣ (Best Places to Visit in Coorg) ಮಾಡೋಣ ಎಂದು ನೀವು ಆಲೋಚನೆ ಮಾಡಿರಬಹುದು. ಅದಕ್ಕೆಂದೇ ಅಲ್ಲಿನ ಪ್ರವಾಸಿ ತಾಣಗಳ ವಿವರವನ್ನು ನಾವಿಲ್ಲಿ ಕೊಟ್ಟಿದ್ದೇವೆ.

VISTARANEWS.COM


on

madikere trip
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಡಗು- ಕರ್ನಾಟಕದ ಅತ್ಯಂತ ಸುಂದರ ಜಿಲ್ಲೆಗಳಲ್ಲಿ ಒಂದು. ಪಶ್ಚಿಮ ಘಟ್ಟದ ಬೆಟ್ಟಗಳ ಸಾಲು, ಅಲ್ಲಲ್ಲಿ ಹರಿವ ಜಲಪಾತಗಳು, ಮಂಜಿನಿಂದ ಆವರಿಸಿಕೊಂಡ ಪರ್ವತಗಳು, ಚಹಾ ಮತ್ತ ಕಾಫಿ ತೋಟಗಳು ಎಲ್ಲವೂ ಸೇರಿಕೊಂಡು ಕೊಡಗನ್ನು ನಿಸರ್ಗ ತಾಯಿಯ ಮಡಿಲಿನಂತೆ ಮಾಡಿವೆ. ಈ ಜಿಲ್ಲೆ ನಿಸರ್ಗ ಪ್ರೇಮಿಗಳಿಗೆ ಸ್ವರ್ಗವೇ ಸರಿ. ಅತ್ಯದ್ಭುತ ಪ್ರವಾಸಿ ತಾಣಗಳನ್ನು ಹೊಂದಿರುವ ಕೊಡಗಿನ ಮಡಿಕೇರಿಯ ಕೆಲವು ಪ್ರವಾಸಿ ತಾಣಗಳ (Madikeri Trip) ಬಗ್ಗೆ ಇಲ್ಲಿದೆ ಉಪಯುಕ್ತ ವಿವರ.

ಅಬ್ಬೆ ಜಲಪಾತ


ಅಬ್ಬೆ ಜಲಪಾತವನ್ನು ಅಬ್ಬಿ ಜಲಪಾತ ಎಂದೂ ಕರೆಯಲಾಗುತ್ತದೆ. ಇದು ಮಡಿಕೇರಿ ಪಟ್ಟಣದಿಂದ ಕೇವಲ 1 ಕಿ.ಮೀ ದೂರದಲ್ಲಿದೆ. ಇದನ್ನು ಕೆಲವು ವರ್ಷಗಳ ಹಿಂದೆ ಜೆಸ್ಸಿ ಫಾಲ್ಸ್‌ ಎಂದೂ ಕರೆಯುತ್ತಿದ್ದರು. ಕಾಫಿ ತೋಟಗಳ ನಡುವೆ ಮೂಡಿರುವ ಈ ಜಲಪಾತ ಅತ್ಯಂತ ಸುಂದರವಾದ ಜಲಪಾತವೆಂದೂ ಕರೆಸಿಕೊಂಡಿದೆ. ಮಳೆಗಾಲದ ಸಮಯದಲ್ಲಿ ಇಲ್ಲಿ ಹೆಚ್ಚಿನ ನೀರಿನ ಹರಿವು ಇರುತ್ತದೆ. ಬೇಸಿಗೆಯ ಸಮಯದಲ್ಲೂ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಇಲ್ಲಿ ತೂಗು ಸೇತುವೆಯೂ ಇದೆ. ಮಳೆಗಾಲದಲ್ಲಿ ಮಳೆ ಕಡಿಮೆ ಇರುವ ಸಮಯ ಮತ್ತು ಚಳಿಗಾಲದ ಸಮಯವು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಚಿಕ್ಲಿಹೊಳೆ ಜಲಾಶಯ


ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಚಿಕ್ಲಿಹೊಳೆ ಜಲಾಶಯವೂ ಒಂದಾಗಿದೆ. ಇದು ಮಡಿಕೇರಿ ಮತ್ತು ಕುಶಾಲನಗರ ಪಟ್ಟಣದ ನಡುವೆ ಇರುವ ನಂಜರಾಯಪಟ್ಟಣಕ್ಕೆ ಸಮೀಪದಲ್ಲಿ ಇದೆ. ಎರಡೂ ನಗರಗಳಿಂದ ಈ ಜಲಾಶಯಕ್ಕೆ 15 ಕಿ.ಮೀ ಅಂತರವಿದೆ. ಇಲ್ಲಿ ದಟ್ಟವಾದ ಅರಣ್ಯದ ಸೌಂದರ್ಯವನ್ನೂ ನೀವು ಸವಿಯಬಹುದು. ಇಲ್ಲಿಂದ ಸೂರ್ಯಾಸ್ತಮಾನದ ವಿಹಂಗಮ ನೋಟವನ್ನೂ ಕಾಣಬಹುದಾಗಿದೆ. ಈ ಜಲಾಶಯದಲ್ಲಿ ಯಾವುದೇ ಅಂಗಡಿಗಳಿಲ್ಲವಾದ್ದರಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವಾಗ ನಿಮಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು ಒಳಿತು. ಇಲ್ಲಿಗೆ ಭೇಟಿ ನೀಡಲು ಜೂನ್‌ನಿಂದ ಮಾರ್ಚ್‌ ತಿಂಗಳವರೆಗೆ ಸೂಕ್ತ ಸಮಯವಾಗಿದೆ.

ದುಬಾರೆ ಆನೆ ಶಿಬಿರ


ದುಬಾರೆ ಆನೆ ಶಿಬಿರ ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿಯ ದಡದಲ್ಲಿಯೇ ಇರುವ ಆನೆ ಶಿಬಿರವಾಗಿದೆ. ಇದು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಮತ್ತು ಜಂಗಲ್‌ ಲಾಡ್ಜ್‌ಗಳು, ರೆಸಾರ್ಟ್‌ಗಳ ಸಹಯೋಗದಲ್ಲಿ ಕೈಗೊಂಡಿರುವ ಯೋಜನೆಗಳಲ್ಲಿ ಒಂದಾಗಿದೆ. ಇಲ್ಲಿ ಈ ಹಿಂದೆ ಮೈಸೂರು ದಸರಾಕ್ಕೆ ಆನೆಗಳಿಗೆ ತರಬೇತಿ ನೀಡಲಾಗುತ್ತಿತ್ತು. ಆದರೆ ಈಗ ಆನೆಗಳನ್ನು ಜಂಗಲ್‌ ರೈಡ್‌ ಮಾಡಲು ಹಾಗೂ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ಆನೆಗಳ ಮೇಲೆ ಸವಾರಿ ಮಾಡುವುದಷ್ಟೇ ಅಲ್ಲದೆ ಅವುಗಳಿಗೆ ಆಹಾರ ನೀಡಬಹುದು. ಹಾಗೆಯೇ ಅವುಗಳ ಜತೆ ಹಲವು ರೀತಿಯ ಮನರಂಜನೆಯ ಚಟುವಟಿಕೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಹಾರಂಗಿ ಅಣೆಕಟ್ಟು


ಕುಶಾಲನಗರದ ಸಮೀಪದ ಹುದ್ಗೂರು ಗ್ರಾಮದಲ್ಲಿ ನೀವು ಹಾರಂಗಿ ಅಣೆಕಟ್ಟನ್ನು ಕಾಣಬಹುದು. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾದ ಮೊದಲನೇ ಅಣೆಕಟ್ಟು ಇದಾಗಿದೆ. ಇದು 47 ಮೀಟರ್‌ ಎತ್ತರ ಮತ್ತು 846 ಮೀಟರ್‌ ಉದ್ದವಿದೆ. ಮಡಿಕೇರಿಯಿಂದ ಸುಮಾರು 36 ಕಿ.ಮೀ ದೂರದಲ್ಲಿರುವ ಈ ಅಣೆಕಟ್ಟಿಗೆ ನೀವು ನಿಮ್ಮ ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳಬಹುದು. ನೀವು ಇಲ್ಲಿ ಏಕಾಂತದ ಸಮಯವನ್ನೂ ಕಳೆಯಬಹುದು. ಇಲ್ಲಿ ವಸತಿಗೆಂದು ಗೆಸ್ಟ್‌ ಹೌಸ್‌ಗಳನ್ನೂ ನಿರ್ಮಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಗೆಸ್ಟ್‌ ಹೌಸ್‌ನಲ್ಲಿ ಬುಕ್ಕಿಂಗ್‌ ಮಾಡಿಕೊಳ್ಳಬಹುದು.

ಹೊನ್ನಮ್ಮನ ಕೆರೆ


ಕೊಡಗಿನಲ್ಲಿ ಪ್ರಸಿದ್ಧವಾಗಿರುವ ಕೆರೆಯೆಂದರೆ ಅದು ಹೊನ್ನಮ್ಮನ ಕೆರೆ. ಪೂರ್ತಿ ಕೊಡಗು ಪ್ರದೇಶದಲ್ಲಿ ಇದೇ ದೊಡ್ಡ ಕೆರೆಯಾಗಿದೆ. ಸೋಮವಾರಪೇಟೆ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಸುಲಿಮಲ್ತೆ ಗ್ರಾಮದ ಸಮೀಪದ ದಡ್ಡಮಲ್ತೆಯಲ್ಲಿ ಈ ಕೆರೆಯಿದೆ. ಹೊನ್ನಮ್ಮ ದೇವಿಗೆ ಸಮರ್ಪಿತವಾದ ದೇವಾಲಯವೂ ಕೆರೆಯ ಸಮೀಪದಲ್ಲೇ ಇದೆ. ‌ಹೊನ್ನಮ್ಮ ದೇವಿ ಜನರ ಯೋಗಕ್ಷೇಮಕ್ಕಾಗಿ ತನ್ನ ಜೀವನವನ್ನು ತ್ಯಾಗ ಮಾಡಿದವಳು ಎಂದು ನಂಬಲಾಗುತ್ತದೆ. ಹಾಗಾಗಿ ಇಲ್ಲಿಗೆ ಪ್ರಕೃತಿ ಪ್ರಿಯರು ಮಾತ್ರವಲ್ಲದೆ ಧಾರ್ಮಿಕ ಪ್ರವಾಸಿಗರೂ ಬರುತ್ತಾರೆ. ಇಲ್ಲಿ ಬೋಟಿಂಗ್‌ ಮಾಡಬಹುದು ಹಾಗೂ ಮೀನುಗಾರಿಕೆಯನ್ನೂ ಮಾಡಬಹುದಾಗಿದೆ.

ಓಂಕಾರೇಶ್ವರ ದೇಗುಲ


ಮಡಿಕೇರಿಯ ಪ್ರಸಿದ್ಧ ಶಿವ ದೇವಾಲಯವೆಂದರೆ ಅದು ಓಂಕಾರೇಶ್ವರ ದೇವಾಲಯ. ಈ ದೇವಸ್ಥಾನವನ್ನು ಲಿಂಗ ರಾಜೇಂದ್ರನು 1820ರಲ್ಲಿ ನಿರ್ಮಿಸಿದ ಎನ್ನಲಾಗುತ್ತದೆ. ಮಡಿಕೇರಿ ನಗರದಿಂದ ಕೇವಲ ಒಂದು ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. ದೇವಾಲಯವು ಇಸ್ಲಾಮಿಕ್‌ ಮತ್ತು ಗೋಥಿಕ್‌ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿ ಕೊಳವಿದೆ. ಸುತ್ತಲೂ ನಾಲ್ಕು ಮಿನಾರ್‌ಗಳು ಮತ್ತು ದೇವಾಲಯದ ಮಧ್ಯದಲ್ಲಿ ಗುಮ್ಮಟವಿದೆ.

ಕೋಟೆಬೆಟ್ಟ


ಕೊಡಗಿನಲ್ಲಿ ಟ್ರೆಕ್ಕಿಂಗ್‌ಗೆ ಪ್ರಸಿದ್ಧವಾಗಿರುವ ತಾಣಗಳಲ್ಲಿ ಒಂದು ಕೋಟೆ ಬೆಟ್ಟ. ಕೊಡಗು ಪ್ರದೇಶದಲ್ಲಿ ತಡಿಯಂಡಮೋಲ್‌ ಮತ್ತು ಬ್ರಹ್ಮಗಿರಿಯ ನಂತರ ಮೂರನೇ ಅತಿ ಎತ್ತರದ ಬೆಟ್ಟ ಇದಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1620 ಮೀಟರ್‌ ಎತ್ತರದಲ್ಲಿದೆ. ಈ ಬೆಟ್ಟವು ಸೋಮವಾರಪೇಟೆ ಮತ್ತು ಮಡಿಕೇರಿಯ ನಡುವೆ ಇರುವ ಮಾದಾಪುರದಲ್ಲಿದೆ. ಬೆಟ್ಟದ ತುದಿಯಲ್ಲಿ ಶಿವನ ದೇವಾಲಯವೊಂದಿದೆ. ಹಟ್ಟಿಹೊಳೆ ಪ್ರದೇಶದಿಂದ ಸುಮಾರು 10 ಕಿ.ಮೀ ಟ್ರೆಕ್ಕಿಂಗ್‌ ಮಾಡಿದರೆ ಈ ಬೆಟ್ಟದ ತುದಿ ತಲುಪಬಹುದು. ಟ್ರೆಕ್ಕಿಂಗ್‌ ಮಾಡುವಾಗ ಹಚ್ಚ ಹಸಿರಿನ ನಿಸರ್ಗವನ್ನು ನೋಡುತ್ತಾ ಸಾಗುವುದರಿಂದ ನಿಮಗೆ ಹೆಚ್ಚಿನ ಆಯಾಸವೂ ಎನಿಸುವುದಿಲ್ಲ. ಇಲ್ಲಿ ಟ್ರೆಕ್ಕಿಂಗ್‌ ಮಾಡುವುದಕ್ಕೆ ಅನುಮತಿಯ ಅವಶ್ಯಕತೆಯಿಲ್ಲ.

ಮಡಿಕೇರಿ ಕೋಟೆ


ಮಡಿಕೇರಿ ಕೋಟೆಯನ್ನು 17ನೇ ಶತಮಾನದ ಕೊನೆಯಲ್ಲಿ ಮುದ್ದುರಾಜರು ನಿರ್ಮಿಸಿದರು. ನಂತರ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಕೋಟೆಯನ್ನು ನವೀಕರಣ ಮಾಡಲಾಯಿತು. ಈ ಕೋಟೆ ಶ್ರೀಮಂತ ಇತಿಹಾಸವನ್ನು ಹೊಂದಿದೆ. ರಾಜರ ಆಳ್ವಿಕೆ ಜತೆ ಬ್ರಿಟಿಷರ ಆಳ್ವಿಕೆಯನ್ನೂ ಕಂಡಿರುವ ಈ ಕಟ್ಟಡವನ್ನು ಇದೀಗ ಜಿಲ್ಲಾಧಿಕಾರಿ ಕಚೇರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಕೋಟೆಯೊಳಗೆ ವೀರಭದ್ರ ದೇವರಿಗೆ ಸಮರ್ಪಿತವಾದ ದೇವಾಲಯವಿತ್ತು. 1855ರಲ್ಲಿ ಬ್ರಿಟಿಷರು ಆ ದೇವಾಲಯವನ್ನು ತೆಗೆದು ಹಾಕಿದರು. ಆ ಜಾಗದಲ್ಲಿ ಚರ್ಚ್‌ ಅನ್ನು ನಿರ್ಮಿಸಿದರು. ಚರ್ಚ್‌ ಗೋಥಿಕ್‌ ಶೈಲಿಯ ವಾಸ್ತುಶಿಲ್ಪ ಹೊಂದಿದೆ. ಈ ಚರ್ಚ್‌ ಸದ್ಯ ರಾಜ್ಯ ಪುರಾತತ್ವ ಇಲಾಖೆಯ ನಿಯಂತ್ರಣದಲ್ಲಿದೆ. ಕೋಟೆಯಲ್ಲಿ ಮಹಾತ್ಮಾ ಗಾಂಧಿ ಸಾರ್ವಜನಿಕ ಗ್ರಂಥಾಲಯ, ಕೋಟೆ ಮಹಾಗಣಪತಿ ದೇವಾಲಯ, ಜಿಲ್ಲಾ ಕಾರಾಗೃಹ ಸೇರಿ ಅನೇಕ ಕಟ್ಟಡಗಳು ಇವೆ.

ಮಲ್ಲಳ್ಳಿ ಜಲಪಾತ


ಪುಷ್ಪಗಿರಿ ಬೆಟ್ಟಗಳ ಶ್ರೇಣಿಯಲ್ಲಿ ನಿಮಗೆ ಮಲ್ಲಳ್ಳಿ ಜಲಪಾತ ಕಾಣಲು ಸಿಗುತ್ತದೆ. ಸೋಮವಾರಪೇಟೆಯ ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಪಾತವಿದೆ. ಇಲ್ಲಿ ಸುಮಾರು 200 ಅಡಿ ಎತ್ತರದಿಂದ ಕುಮಾರಧಾರಾ ನದಿ ಧುಮ್ಮಿಕ್ಕುತ್ತದೆ. ಇದು ಟ್ರೆಕ್ಕಿಂಗ್‌ ತಾಣ ಕೂಡ ಹೌದು. ಈ ಜಲಪಾತವು ಸೋಮವಾರಪೇಟೆಯಿಂದ 25 ಕಿಲೋಮೀಟರ್ ದೂರದಲ್ಲಿದೆ ಮತ್ತು ಕುಶಾಲನಗರದಿಂದ 42 ಕಿಮೀ ದೂರದಲ್ಲಿದೆ. ಮಳೆಗಾಲದಲ್ಲಿ ಜಲಪಾತದಲ್ಲಿ ಹೆಚ್ಚು ನೀರು ಇರುವುದರಿಂದ ಅದು ಹೆಚ್ಚು ಸುಂದರವಾಗಿ ಕಾಣುತ್ತದೆ.

ಮಾಂದಲಪಟ್ಟಿ


ಅಬ್ಬೆ ಜಲಪಾತಕ್ಕೆ ಹೋಗುವ ದಾರಿಯಲ್ಲೇ ಈ ಟ್ರೆಕ್ಕಿಂಗ್‌ ಸ್ಥಳ ನಿಮಗೆ ಸಿಗುತ್ತದೆ. ಮಡಿಕೇರಿಯಿಂದ ಸುಮಾರು 25 ಕಿ.ಮೀ ದೂರದಲ್ಲಿ ಮಾಂದಲಪಟ್ಟಿಯಿದೆ. ಇಲ್ಲಿ ಹೆಚ್ಚಿನ ಪ್ರವಾಸಿಗರೇನು ಇರುವುದಿಲ್ಲವಾದ್ದರಿಂದ ನೀವು ಅರಾಮವಾಗಿ ಟ್ರೆಕ್ಕಿಂಗ್‌ ಮಾಡಬಹುದು. ಇಲ್ಲಿ ಟ್ರೆಕ್ಕಿಂಗ್‌ ಮಾಡುವುದಕ್ಕೂ ಮೊದಲು ಅಧಿಕಾರಿಗಳಿಂದ ಪ್ರವೇಶ ಟಿಕೆಟ್‌ ತೆಗೆದುಕೊಳ್ಳಬೇಕು. ಇಲ್ಲಿಗೆ ಯಾವುದೇ ಬಸ್ಸುಗಳ ಸಂಪರ್ಕ ಇಲ್ಲವಾದ್ದರಿಂದ ನೀವು ಬಾಡಿಗೆ ವಾಹನಗಳನ್ನು ಮಾಡಿಸಿಕೊಂಡು ಮಾಂದಲಪಟ್ಟಿಗೆ ಹೋಗಬಹುದು.

ನಾಲ್ಕನಾಡ್‌ ಅರಮನೆ


ನಾಲ್ಕನಾಡ್‌ ಅರಮನೆಯು ಯುವಕಪಾಡಿ ಹೆಸರಿನ ಹಳ್ಳಿಯ ಸಮೀಪದಲ್ಲಿದೆ. ಇದು ಮಡಿಕೇರಿಯಿಂದ 45 ಕಿ.ಮೀ ದೂರದಲ್ಲಿದೆ. ಇದನ್ನು 1792ರಲ್ಲಿ ಹಾಲೇರಿ ದೊರೆ ದೊಡ್ಡ ವೀರರಾಜೇಂದ್ರ ನಿರ್ಮಿಸಿದರು. ನಂತರ 1796ರಲ್ಲಿ, ದೊಡ್ಡ ವೀರರಾಜೇಂದ್ರ ಇಲ್ಲಿ ಮಹಾದೇವ ಅಮ್ಮಾಜಿಯನ್ನು ವಿವಾಹವಾದರು. ಟಿಪ್ಪು ಸುಲ್ತಾನನ ಸೈನ್ಯದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಈ ಅರಮನೆ ನಿರ್ಮಿಸಲಾಗಿತ್ತು. ಈ ಅರಮನೆಯಿಂದ ಮಡಿಕೇರಿಯವರೆಗೆ ಸುರಂಗ ಮಾರ್ಗವನ್ನೂ ಮಾಡಿಕೊಳ್ಳಲಾಗಿತ್ತು. ಕೊಡಗು ಜಿಲ್ಲೆಯ ಮೇಲೆ ಬ್ರಿಟಿಷರ ಆಕ್ರಮಣದ ಸಮಯದಲ್ಲಿ ಹಾಲೇರಿ ಕುಟುಂಬದ ಕೊನೆಯ ಚಕ್ರವರ್ತಿ ಚಿಕ್ಕವೀರ ರಾಜೇಂದ್ರ ಕೂಡ ಈ ಅರಮನೆಯಲ್ಲಿ ಆಶ್ರಯ ಪಡೆದಿದ್ದರು. ಅರಮನೆಯ ಚಾವಣಿಗಳು ಮತ್ತು ಗೋಡೆಗಳು ಅನೇಕ ಪ್ರಾಚೀನ ವರ್ಣಚಿತ್ರಗಳು ಮತ್ತು ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿವೆ. ಅರಮನೆಯೊಳಗೆ ಕಲ್ಯಾಣ ಮಂಟಪವನ್ನು ಕಾಣಬಹುದಾಗಿದೆ. ಇಲ್ಲಿ ಭವ್ಯವಾದ ದರ್ಬಾರ್ ಕೂಡ ಇದೆ. ಹಾಗೆಯೇ ನೆಲಮಾಳಿಗೆಯಲ್ಲಿ ರಾಜ ಅಡಗುವುದಕ್ಕೆಂದು ಮಾಡಿಕೊಂಡಿದ್ದ ಎರಡು ಕಪ್ಪು ಕೋಣೆಗಳಿವೆ.

ನೆಹರು ಮಂಟಪ


ಪ್ರಕೃತಿ ಪ್ರಿಯರಿಗೆ ಏಕಾಂತವಾಗಿ ಕಾಲ ಕಳೆಯಬೇಕೆಂದರೆ ಅವರು ನೆಹರು ಮಂಟಪಕ್ಕೆ ಭೇಟಿ ನೀಡಬೇಕು. ಮಡಿಕೇರಿ ಆಕಾಶವಾಣಿ ಕೇಂದ್ರ ಹಿಂಭಾಗದಲ್ಲಿರುವ ಬೆಟ್ಟದ ತುದಿಯಲ್ಲಿ ಈ ಸ್ಥಳವಿದೆ. ಇಲ್ಲಿಗೆ ತಲುಪಲು ಪ್ರವಾಸಿಗರು 25-30 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಇಲ್ಲಿಂದ ಸುತ್ತಲೂ ತುಂಬಿಕೊಂಡಿರುವ ಹಸಿರನ್ನು ನೀವು ಕಣ್ತುಂಬಿಸಿಕೊಳ್ಳಬಹುದು.

ಪಾಡಿ ಇಗ್ಗುತಪ್ಪ ದೇಗುಲ


ಈ ದೇವಸ್ಥಾನವು ಕಕ್ಕಬೆ ಪಟ್ಟಣದಲ್ಲಿದೆ. 1810ರಲ್ಲಿ ಲಿಂಗರಾಜೇಂದ್ರರಿಂದ ನಿರ್ಮಿಸಲ್ಪಟ್ಟ. ಇದು ಅತ್ಯಂತ ಪುರಾತನವಾದ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಕೊಡವರಲ್ಲಿ ಅತ್ಯಂತ ಮಹತ್ವದ್ದಾಗಿದೆ. ದೇಗುಲವು ಮಡಿಕೇರಿ ನಗರದಿಂದ ವಿರಾಜಪೇಟೆಯ ಕಡೆಗೆ 45 ಕಿ.ಮೀ ದೂರದಲ್ಲಿದೆ. ಸುಬ್ರಹ್ಮಣ್ಯ ದೇವರ ಇನ್ನೊಂದು ಹೆಸರಾದ ಇಗ್ಗುತಪ್ಪ ದೇವರಿಗೆ ಈ ದೇವಾಲಯ ಸಮರ್ಪಿತವಾಗಿದೆ. ಈ ದೇಗುಲವು ಕೊಡವರ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ವರ್ಷ ಮಾರ್ಚ್‌ ತಿಂಗಳಲ್ಲಿ ಈ ದೇಗುಲದ ಉತ್ಸವವನ್ನು ನಡೆಸಲಾಗುತ್ತದೆ.

ರಾಜಾ ಸೀಟ್‌


ಮಡಿಕೇರಿ ಪಟ್ಟಣದಲ್ಲಿರುವ ರಾಜಾ ಸೀಟ್‌ ಆಗಿನ ಕಾಲದ ಕೂರ್ಗ್‌ ರಾಜರ ನೆಚ್ಚಿನ ಸ್ಥಳವಾಗಿತ್ತು. ಇಲ್ಲಿಂದ ನೋಡಿದರೆ ನಿಮಗೆ ಸುತ್ತಲಿನ ಕಣಿವೆ ಪ್ರದೇಶವು ನಿಮಗೆ ಅತ್ಯದ್ಭುತವಾಗಿ ಕಾಣಿಸುತ್ತದೆ. ಬಿಸಿಲಿನ ಸಮಯದಲ್ಲಿ ಹೋಗದೆ ಬೆಳಗಿನ ಸಮಯದಲ್ಲಿ ಹಾಗೂ ಸಂಜೆಯ ಸಮಯದಲ್ಲಿ ಇಲ್ಲಿಗೆ ಹೋದರೆ ನಿಮಗೆ ತಂಪಾದ ನಿಸರ್ಗ ಕಾಣಸಿಗುತ್ತದೆ. ಉದ್ಯಾನವನದ ಎಡಭಾಗದಲ್ಲಿ, ಮಹಾತ್ಮ ಗಾಂಧಿಯವರ ಅವಶೇಷಗಳನ್ನು ಇರಿಸಲಾಗಿರುವ ಗಾಂಧಿ ಮಂಟಪವಿದೆ. ಉದ್ಯಾನವಾಗಿರುವ ಇಲ್ಲಿ ಮಕ್ಕಳ ಮನೋರಂಜನೆಗೆಂದು ಆಟದ ಸಾಮಾಗ್ರಿಗಳನ್ನೂ ಇರಿಸಲಾಗಿದೆ. ಇಲ್ಲಿ ಆಟಿಕೆ ರೈಲೂ ಇದ್ದು, ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ. ಉದ್ಯಾನ ಪ್ರವೇಶಿಸಲು ಒಬ್ಬರಿಗೆ 5 ರೂ. ಶುಲ್ಕ ವಿಧಿಸಲಾಗುತ್ತದೆ.

ಸುಂಟಿಕೊಪ್ಪ


ಮಡಿಕೇರಿಯಿಂದ 15 ಕಿ.ಮೀ ದೂರದಲ್ಲಿ ನಿಮಗೆ ಸುಂಟಿಕೊಪ್ಪ ಸಿಗುತ್ತದೆ. ಇಲ್ಲಿ ಕಾಫಿ ತೋಟ ಹೆಚ್ಚಾಗಿದ್ದು, ಕಣ್ಣು ತಿರುಗಿಸಿದಲ್ಲೆಲ್ಲ ಹಸಿರೇ ಕಾಣಸಿಗುತ್ತದೆ. ಪ್ರಕೃತಿ ಪ್ರಿಯರಿಗೆ ಇದು ಹೇಳಿ ಮಾಡಿಸಿರುವ ಸ್ಥಳ ಎನ್ನಬಹುದು. ಇಲ್ಲಿ ನೀವು ಅನೇಕ ರೀತಿಯ ವಲಸೆ ಪಕ್ಷಿಗಳು ಮತ್ತು ನಿವಾಸಿ ಪಕ್ಷಿಗಳನ್ನೂ ಕಾಣಬಹುದು. ಹಾಗಾಗಿ ಪಕ್ಷಿ ಪ್ರಿಯರಿಗೂ ಈ ಸ್ಥಳ ಇಷ್ಟವಾಗುತ್ತದೆ. ಇಲ್ಲಿ ಅಯ್ಯಪ್ಪ ದೇವಾಲಯವೂ ಇದ್ದು, ಧಾರ್ಮಿಕ ಪ್ರವಾಸಿಗರಿಗೂ ಇದು ಸೂಕ್ತ ಸ್ಥಳವಾಗಿದೆ. ಇಲ್ಲಿ ಅನೇಕ ಕಾಟೇಜ್‌ಗಳು, ಹೋಮ್‌ ಸ್ಟೇಗಳು, ಹೋಟೆಲ್‌ಗಳು ಇರುವುದರಿಂದ ವಾಸ ಹೂಡುವುದಕ್ಕೂ ಸಮಸ್ಯೆಯಿರುವುದಿಲ್ಲ.

ತಡಿಯಂಡಮೋಲ್ ಟ್ರೆಕ್ಕಿಂಗ್‌


ಟ್ರೆಕ್ಕಿಂಗ್‌ ಪ್ರಿಯರಿಗೆ ಕೊಡಗಿನಾದ್ಯಂತ ಹಲವಾರು ಸ್ಥಳಗಳಿವೆ. ಅವುಗಳಲ್ಲಿ ಒಂದು ತಡಿಯಂಡಮೋಲ್‌ ಟ್ರೆಕ್ಕಿಂಗ್‌ ಸ್ಥಳ. ಈ ಸ್ಥಳ ಸಮುದ್ರ ಮಟ್ಟದಿಂದ 1746 ಮೀಟರ್‌ ಎತ್ತರದಲ್ಲಿದೆ. ಇದು ಕಕ್ಕಬೆ ಪಟ್ಟಣದಿಂದ 8 ಕಿ.ಮೀ ಹಾಗೂ ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ. ಚಳಿಗಾಲದ ಆರಂಭದ ಅವಧಿಯಲ್ಲಿ ಇಲ್ಲಿ ಟ್ರೆಕ್ಕಿಂಗ್‌ ಮಾಡುವುದು ಸೂಕ್ತ. ಇಲ್ಲಿಗೆ ಜೀಪ್‌ನಂತಹ ವಾಹನದಲ್ಲಿ ಮೂರನೇ ಒಂದು ಭಾಗವನ್ನು ಕ್ರಮಿಸಬಹುದು. ಇನ್ನು ಬೆಟ್ಟದ ತುದಿ ತಲುಪುವುದಕ್ಕೆ ಕಡಿದಾದ ದಾದಿಯಲ್ಲಿ ಚಾರಣ ಮಾಡಬೇಕಾಗುತ್ತದೆ. ಚಾರಣದ ಮಧ್ಯೆ ನಾಲ್ಕನಾಡ್‌ ಅರಮನೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬಹುದು. ತಡಿಯಂಡಮೋಲ್‌ನಿಂದ ಪಾಡಿ ಇಗ್ಗುತಪ್ಪ ದೇವಸ್ಥಾನಕ್ಕೂ ಭೇಟಿ ನೀಡಬಹುದು. ಕೊಡವರ ಪ್ರಮುಖ ದೇವಾಲಯಗಳಲ್ಲಿ ಒಂದಾದ ಇದು ಕೆಲವೇ ಕಿಲೋಮೀಟರ್ ದೂರದಲ್ಲಿದೆ.

ತಲಕಾವೇರಿ


ಬ್ರಹ್ಮಗಿರಿ ಬೆಟ್ಟದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ತಲಕಾವೇರಿ. ಇದು ಭಾಗಮಂಡಲದಿಂದ 8 ಕಿ.ಮೀ ಹಾಗೂ ಮಡಿಕೇರಿಯಿಂದ 48 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 1276 ಮೀಟರ್‌ ಎತ್ತರದಲ್ಲಿರುವ ಈ ತಲಕಾವೇರಿಯಲ್ಲಿ ತೀರ್ಥ ಕುಂಡಿಕೆ ಅಥವಾ ಬ್ರಹ್ಮ ಕುಂಡಿಕೆ ಎಂದು ಕರೆಯಲ್ಪಡುವ ನೀರಿನ ಬುಗ್ಗೆ ಇದೆ. ಇದು ಕಾವೇರಿ ನದಿಯ ಮೂಲ ಎಂದು ಹೇಳಲಾಗುತ್ತದೆ. ಈ ಬ್ರಹ್ಮ ಕುಂಡಿಕೆ ಸಮೀಪದಲ್ಲಿಯೇ ದೇಗುಲವಿದೆ. ಅದರಲ್ಲಿ ನೀರಿನ ಪುಷ್ಕರಣಿಯಿದ್ದು, ಅಲ್ಲಿ ಭಕ್ತಾದಿಗಳು ಸ್ನಾನ ಮಾಡಬಹುದು. ಇಲ್ಲಿ ಒಂದು ಶಿವನ ದೇವಾಲಯವಿದ್ದರೆ ಇನ್ನೊಂದು ಗಣೇಶ ದೇಗುಲವಿದೆ. ತಲಕಾವೇರಿಯಿಂದ ಬ್ರಹ್ಮಗಿರಿ ಶಿಖರಕ್ಕೆ ಹೋಗಬಹುದು. ಪುರಾಣಗಳ ಪ್ರಕಾರ ಈ ಗಿರಿಯಲ್ಲಿ ಸಪ್ರ ಮಹರ್ಷಿಗಳು ವಿಶೇಷ ಯಜ್ಞವನ್ನು ಮಾಡಿದರು ಎಂದು ನಂಬಲಾಗುತ್ತದೆ.

ಯೆಮ್ಮೆಮಾಡುವಿನ ದರ್ಗಾ ಶರೀಫ್‌


ಕೊಡಗಿನ ಮುಸ್ಲಿಂ ಧರ್ಮೀಯರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದು ಯೆಮ್ಮೆಮಾಡುವಿನ ದರ್ಗಾ ಶರೀಫ್‌. ಇದು ನಾಪೋಕ್ಲು ಪಟ್ಟಣದ ಬಳಿಯಿದೆ. ಹಜರತ್ ಸೂಫಿ ಶಹೀದ್ ಮತ್ತು ಸಯ್ಯದ್ ಹಸನ್ ಸಕಾಫ್ ಹಲ್ರಮಿರ್ ಅವರ ನೆನಪಿಗಾಗಿ ಈ ಸಮಾಧಿಯನ್ನು ನಿರ್ಮಿಸಲಾಗಿದೆ. ಈ ಇಬ್ಬರೂ ಸೂಫಿ ಸಂತರು ಸುಮಾರು 366 ವರ್ಷಗಳ ಹಿಂದೆ ಪರ್ಷಿಯಾದಿಂದ ಆಗಮಿಸಿದ್ದರು. ಅವರು ಜನರಿಗೆ ಧಾರ್ಮಿಕ ಪ್ರವಚನಗಳನ್ನು ನೀಡಿದರು ಮತ್ತು ಬಡವರ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇಲ್ಲಿ ವಾರ್ಷಿಕ ಹಬ್ಬವನ್ನು 8 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಆಚರಣೆಗೆ ಉರುಸ್‌ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಈ ಕಾರ್ಯಕ್ರಮಕ್ಕೆ ಎರಡರಿಂದ ಮೂರು ಲಕ್ಷ ಜನರು ಆಗಮಿಸುತ್ತಾರೆ.. ಮಹಿಳಾ ಯಾತ್ರಿಗಳಿಗೆ ದರ್ಗಾದೊಳಗೆ ಪ್ರವೇಶವಿಲ್ಲ. ಅವರಿಗೆಂದೇ ಪ್ರತ್ಯೇಕ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ.

ಕರಡಾ ಗ್ರಾಮ


ಕಕ್ಕಬೆ ಪಟ್ಟಣದ ಸಮೀದಲ್ಲಿ ಕರಡಾ ಹೆಸರಿನ ಗ್ರಾಮವಿದೆ. ಇದು ವಿರಾಜಪೇಟೆಯಿಂದ 18 ಕಿ.ಮೀ ಮತ್ತು ಮಡಿಕೇರಿಯಿಂದ ಸರಿಸುಮಾರು 30 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಕೂರ್ಗ್‌ನ ಕೆಲವು ಶ್ರೀಮಂತ ಪೂರ್ವಜರ ಮನೆಗಳನ್ನು ಹೊಂದಿದೆ. ಕೆಲವು ಪೂರ್ವಜರ ಮನೆಗಳು 200-300 ವರ್ಷಗಳಷ್ಟು ಹಳೆಯದಾಗಿದ್ದು, ಪ್ರವಾಸಿಗರಿಗೆ ಇತಿಹಾಸ ಮತ್ತು ಪುರಾತನ ಜೀವನದ ಸ್ಪರ್ಶವನ್ನು ನೀಡುತ್ತವೆ. ಈ ಮನೆಗಳ ಸುತ್ತಲೂ ಕಾಫಿ ತೋಟ ಆವರಿಸಿಕೊಂಡಿರುವುದರಿಂದ ನಿಮಗೆ ಮನಸ್ಸಿಗೆ ಮುದ ಸಿಕ್ಕಂತಾಗುತ್ತದೆ. ಹಲವು ಮನೆಗಳು ಪ್ರವಾಸಿಗರಿಗೆ ಗೆಸ್ಟ್‌ ಹೌಸ್‌ ರೀತಿಯಲ್ಲಿ ವ್ಯವಸ್ಥೆಯನ್ನೂ ಕಲ್ಪಿಸಿಕೊಡುತ್ತಿವೆ. ಹಾಗಾಗಿ ನೀವು ಅಲ್ಲಿ ವಾಸವಿದ್ದು, ಕೊಡಗಿನ ಸೌಂದರ್ಯದ ಜತೆ ಊಟವನ್ನು ಸವಿದು ಬರಬಹುದು.

ಗದ್ದಿಗೆ


ರಾಜ ವೀರರಾಜೇಂದ್ರ, ಲಿಂಗ ರಾಜೇಂದ್ರ ಮತ್ತು ಅವರ ಆಸ್ಥಾನದ ಪುರೋಹಿತರನ್ನು ಸಮಾಧಿ ಮಾಡಿದ ಸ್ಥಳವಿದು. ಇದೇ ಪ್ರದೇಶದಲ್ಲಿ ಅವರ ಕೆಚ್ಚೆದೆಯ ಮತ್ತು ನಿಷ್ಠಾವಂತ ಸೈನಿಕರಿಗೆ ಸೇರಿದ ಎರಡು ಸಣ್ಣ ಸಮಾಧಿಗಳಿವೆ. ಮೂರು ಮುಖ್ಯ ಸಮಾಧಿಗಳು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಸಮಾಧಿಯ ನಾಲ್ಕೂ ತುದಿಗಳಲ್ಲಿ ಗೋಪುರ ಹಾಗೂ ಮಧ್ಯದಲ್ಲಿ ಗುಮ್ಮಟವನ್ನು ನಿರ್ಮಿಸಲಾಗಿದೆ. ಇದು ನೋಡುವುದಕ್ಕೆ ಮುಸ್ಲಿಂ ದರ್ಗಾದಂತೆ ಕಾಣುತ್ತದೆ. ಇದನ್ನು 18ನೇ ಶತಮಾನದಲ್ಲಿ ನಿರ್ಮಿಸಲಾದ ದಾಖಲೆಯಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Honnavar News: ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕು: ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Honnavar News: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶ್ರೀ ಸ್ವರ್ಣವಲ್ಲಿ ರಾಮ ಕ್ಷತ್ರಿಯ ಪರಿಷದ್ ಹಾಗೂ ರಾಮಕ್ಷತ್ರಿಯ ಸಂಘದಿಂದ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಮಠದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

VISTARANEWS.COM


on

Honnavar News
Koo

ಹೊನ್ನಾವರ: ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ದೊರೆತಾಗ, ಆ ಮಗು ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ. ಹಾಗೆಯೇ ಉಪನಯನವನ್ನು ಕೂಡ ಚಿಕ್ಕ ವಯಸ್ಸಿನಲ್ಲಿ ಮಾಡುವುದರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ. ಅದೇ ರೀತಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ, ಸಂಸ್ಕಾರಯುತ ಸಮಾಜ ನಿರ್ಮಾಣದ ಜವಾಬ್ದಾರಿ ಕೂಡ ಪಾಲಕರ ಮೇಲಿದೆ ಎನ್ನುವುದನ್ನು ಅರಿಯಬೇಕಾಗಿದೆ ಎಂದು ಸ್ವರ್ಣವಲ್ಲೀ ಮಠದ ಮಠಾಧೀಶರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಿಳಿಸಿದರು.

ಪಟ್ಟಣದಲ್ಲಿ ಹೊನ್ನಾವರದ ಶ್ರೀ ಸ್ವರ್ಣವಲ್ಲಿ ರಾಮ ಕ್ಷತ್ರಿಯ ಪರಿಷದ್ ಹಾಗೂ ಅಡಕಾರದ ರಾಮಕ್ಷತ್ರಿಯ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವದ್ಗೀತೆ, ರಾಮರಕ್ಷಾ ಸ್ತೋತ್ರ ಮತ್ತು ರಾಮ ತಾರಕ ಮಂತ್ರಗಳ ಪಠಣ ಮಾಡುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ರೂಢಿಸಿದಾಗ ಮಕ್ಕಳಲ್ಲಿ ಆಧ್ಯಾತ್ಮಿಕ ಒಲವು ಮೂಡಲು ಸಾಧ್ಯ. ಈ ಆಧ್ಯಾತ್ಮಿಕ ಒಲವು ಸಂಸ್ಕಾರಯುತ ಮನುಷ್ಯನನ್ನು ನಿರ್ಮಾಣ ಮಾಡುತ್ತದೆ ಎಂದರು. ಇದೇ ವೇಳೆ ಪ್ರತಿವರ್ಷ ದಂಪತಿಗಳ ಶಿಬಿರ, ಯೋಗ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ರಾಮಕ್ಷತ್ರಿಯ ಪರಿಷದ್‌ನ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಮಾತನಾಡಿ, ಸ್ವರ್ಣವಲ್ಲೀ ಮಠಾಧೀಶರ ಮಾರ್ಗದರ್ಶನದಲ್ಲಿ ರಾಮಕ್ಷತ್ರಿಯ ಪರಿಷದ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳ ಮೂಲಕ ಸಂಘಟಿತರಾಗೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಮಕ್ಷತ್ರಿಯ ಸಮಾಜದ 33 ವಟುಗಳಿಗೆ ಸಾಮೂಹಿಕ ಉಪನಯನ ನಡೆಯಿತು. ಪ್ರಾರಂಭದಲ್ಲಿ ಸೀತಾರಾಮ ನಾಯ್ಕ ಹಳದಿಪೂರ ಪ್ರಾರ್ಥಿಸಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಮೋದ ನಾಯ್ಕ ಸ್ವಾಗತಿಸಿದರು. ಅಡಕಾರ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ರಾಮದಾಸ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷದ್‌ನ ಪ್ರಧಾನ ಕಾರ್ಯದರ್ಶಿ ರಾಜೇಶ ಸಾಳೇಹಿತ್ತಲ್ ಐದು ವರ್ಷಗಳ ವರದಿ ವಾಚಿಸಿದರು. ರವಿ ನಾಯ್ಕ ನಿರೂಪಿಸಿದರು. ಮಹೇಶ ನಾಯ್ಕ ವಂದಿಸಿದರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ವೇದಿಕೆಯಲ್ಲಿ ಪರಿಷದ್‌ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಮತ್ತು ಶ್ರೀನಿವಾಸ ನಾಯ್ಕ ಮುಂಬಯಿ ಇವರಿಗೆ ಅಡಕಾರ ಸಂಘದಿಂದ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಸಿಲ್ಕ್ಸ್ ಇದರ ಮಾಲಿಕರಾದ ರತ್ನಾಕರ ನಾಯ್ಕರವರು 33 ವಟುಗಳಿಗೆ ವಿಶೇಷ ಉಡುಗೊರೆಯೊಂದಿಗೆ ಗೌರವಿಸಿದರು.

Continue Reading

ಬೆಂಗಳೂರು

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Sadhguru Jaggi Vasudev: ಕಾಂಬೋಡಿಯಾದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕತೆಯ ಅನ್ವೇಷಣೆಗಾಗಿ ಸದ್ಗುರು ಜಗ್ಗಿ ವಾಸುದೇವ್‌ ಅವರು ತೆರಳಿದ್ದಾರೆ. ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸದ್ಗುರುಗಳ ಮೊದಲ ಪ್ರಯಾಣವಾಗಿದೆ.

VISTARANEWS.COM


on

Sadhguru Jaggi Vasudev
Koo

ಸೀಮ್‌ ರೀಪ್‌(ಕಾಂಬೋಡಿಯಾ): ಮೆದುಳಿನ ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಆಳದ ಅನ್ವೇಷಣೆಗಾಗಿ ಆಧ್ಯಾತ್ಮಿಕ ಗುರು ಹಾಗೂ ಈಶ ಫೌಂಡೇಶನ್‌ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev) ಅವರು ಕಾಂಬೋಡಿಯಾಗೆ ತೆರಳಿದ್ದಾರೆ. ಕಾಂಬೋಡಿಯಾ ಪ್ರವಾಸೋದ್ಯಮ ಸಚಿವ ಎಚ್.ಇ. ಎಸ್ಒಕೆ ಸೋಕೆನ್ ಅವರು ಸೀಮ್ ರೀಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸದ್ಗುರುಗಳನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.

ಗಮನಾರ್ಹ ಆತಿಥ್ಯದ ಜತೆಗೆ ಸಚಿವರು, ಕಾಂಬೋಡಿಯಾದ ಪ್ರಧಾನ ಮಂತ್ರಿಯವರ ವೈಯಕ್ತಿಕ ಪತ್ರವನ್ನು ಸದ್ಗುರುಗಳಿಗೆ ಪ್ರಸ್ತುತಪಡಿಸಿದರು. ಸಚಿವರೊಂದಿಗೆ ಅವರ ಪತ್ನಿ, ಕಾಂಬೋಡಿಯಾದ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದ ಕಾನ್ಸುಲೇಟ್ ಜನರಲ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ತಮ್ಮ ಚಟುವಟಿಕೆಗಳಿಗೆ ಮರಳಿರುವ ಸದ್ಗುರುಗಳ ಮೊದಲ ಪ್ರಯಾಣ. ಅಲ್ಲಿ ಅವರು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯಗಳ ಹಿಂದಿನ ವಿಜ್ಞಾನವನ್ನು ಅನ್ವೇಷಿಸಲಿದ್ದಾರೆ. ಅವರ ಕಾರ್ಯಕ್ರಮವು ಏಪ್ರಿಲ್ 30 ರವರೆಗೆ ಜರುಗಲಿದ್ದು, ಈ ಸಮಯದಲ್ಲಿ ಅಲ್ಲಿನ ಸ್ಥಳೀಯ ಸಂಸ್ಕೃತಿಯಲ್ಲಿ ಮಿಂದೇಳುವುದರ ಜತೆಗೆ, ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿರುವ ಬೇಯಾನ್ ಮತ್ತು ಅಂಕೋರ್ ವಾಟ್ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಯಾವುದೇ ಬೋಧನೆ, ತತ್ವಶಾಸ್ತ್ರ, ಮತಧರ್ಮ ಅಥವಾ ನಂಬಿಕೆಯ ವ್ಯವಸ್ಥೆಗಳಿಗೆ ಒಳಗಾಗದ ಸದ್ಗುರುಗಳು, ತಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪ್ರಯತ್ನಗಳು, ಪರಿಸರ ಕಾರ್ಯಗಳು, ಗ್ರಾಮೀಣ ಶಿಕ್ಷಣ ಮತ್ತು ಇನ್ನೂ ಹೆಚ್ಚಿನವುಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ತಲುಪಿದ್ದಾರೆ. ಪ್ರಪಂಚದಾದ್ಯಂತ ಮೂವತ್ತು ಲಕ್ಷ ಜನರು ಅವರ ಪ್ರಮುಖ ಕಾರ್ಯಕ್ರಮವಾದ ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ. ಆ ಮೂಲಕ ಜನರು ತಮ್ಮ ಜೀವನದ ಗ್ರಹಿಕೆಯಲ್ಲಿ ಹೆಚ್ಚಿನ ಸಮತೋಲನ ಮತ್ತು ಗಮನಾರ್ಹ ಸ್ಪಷ್ಟತೆಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Prerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ!

2023 ರಲ್ಲಿ ಸದ್ಗುರುಗಳ ಸಾಮಾಜಿಕ ಮಾಧ್ಯಮವು 4.37 ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಂಬೋಡಿಯಾದ ಅವರ ಅನ್ವೇಷಣೆಯು, ಆ ದೇಶದ ಬಗೆಗಿನ ಅವರ ಒಳನೋಟಗಳಿಂದ ಪ್ರಯೋಜನ ಪಡೆಯಲು ಜಗತ್ತಿಗೆ ಒಂದು ವಿಶಿಷ್ಟ ಅವಕಾಶವನ್ನು ಒದಗಿಸಲಿದೆ.

Continue Reading

ಕರ್ನಾಟಕ

M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಧರ್ಮ ಪತ್ನಿ ರುದ್ರಾಂಬಾ ನಿಧನ

M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಅವರು
ವಯೋಸಹಜ ಕಾಯಿಲೆಯಿಂದ ಸ್ವಗ್ರಾಮ ಹೂವಿನ ಹಡಗಲಿಯಲ್ಲಿ ನಿಧನರಾಗಿದ್ದಾರೆ.

VISTARANEWS.COM


on

M P Rudramba
Koo

ವಿಜಯನಗರ: ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಧರ್ಮ ಪತ್ನಿ ಎಂ.ಪಿ.ರುದ್ರಾಂಬಾ (M P Rudramba) (83) ಅವರು ವಯೋಸಹಜ ಕಾಯಿಲೆಯಿಂದ ಸ್ವಗ್ರಾಮ ಹೂವಿನ ಹಡಗಲಿಯಲ್ಲಿ ಸೋಮವಾರ ನಿಧನರಾದರು. ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ರುದ್ರಾಂಬಾ ಅವರು ಮೂವರು ಪುತ್ರಿಯರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಪುತ್ರಿಯರಲ್ಲಿ ಲತಾ ಮಲ್ಲಿಕಾರ್ಜುನ ಅವರು ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿಯಾಗಿದ್ದಾರೆ. ಸುಮಾ ಹಾಗೂ ವೀಣಾ ಇನ್ನಿಬ್ಬರು ಪುತ್ರಿಯರು. ಅವರ ಪುತ್ರ, ಹರಪನಹಳ್ಳ ಕ್ಷೇತ್ರದ ಶಾಸಕರಾಗಿದ್ದ ಎಂ.ಪಿ.ರವೀಂದ್ರ ಕೆಲ ವರ್ಷದ ಹಿಂದೆಯೇ ತೀರಿಕೊಂಡಿದ್ದರು. ಎಂ.ಪಿ. ಪ್ರಕಾಶ್‌ ಅವರೂ ದಶಕಗಳ ಹಿಂದೆಯೇ ವಿಧಿವಶರಾಗಿದ್ದರು.

ಸಾಂಸ್ಕೃತಿಕ ಹಾಗೂ ಚಿಂತನ ಶೀಲ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದ ಎಂ.ಪಿ. ಪ್ರಕಾಶ್‌ ಅವರನ್ನು ಮದುವೆಯಾಗಿದ್ದ ರುದ್ರಾಂಬಾ ಅವರು ಕೂಡ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇತ್ತೀಚಿಗೆ ಆರೋಗ್ಯದ ಕಾರಣದಿಂದ ಸಾರ್ವಜನಿಕ ಜೀವನದ ಒಡನಾಟ ಕಡಿಮೆಯಾಗಿತ್ತು.

ಇದನ್ನೂ ಓದಿ | Srinivasa Prasada Passes Away: ಕೊನೇ ಬಾರಿಗೆ ʼCoffee’ ಎಂದು ಬರೆದಿದ್ದ ಶ್ರೀನಿವಾಸ ಪ್ರಸಾದ್;‌ ನಾಳೆ ಅಂತ್ಯಕ್ರಿಯೆ; ಗಣ್ಯರ ಸಂತಾಪ

ಹೂವಿನ ಹಡಗಲಿಯಲ್ಲಿ ಮಂಗಳವಾರ ಸಂಜೆ 4.30 ಕ್ಕೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಯುತ್ತಿದೆ. ದಿ.‌ ಎಂ.ಪಿ. ಪ್ರಕಾಶ್‌ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ.

ಸಿಎಂ ಸಿದ್ದರಾಮಯ್ಯ ಸಂತಾಪ

ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ರುದ್ರಾಂಬಾ ಅವರು ತಮ್ಮ ಪತಿಯ ಆದರ್ಶಗಳನ್ನು ಪಾಲಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನೊಂದ ಜನರ ಬದುಕಿಗೆ ಬೆಳಕಾಗಿದ್ದವರು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

Continue Reading

ಕರ್ನಾಟಕ

Murder Case: ಹೆಂಡ್ತಿ ಬಿಟ್ಟು ಹೋಗುತ್ತಾಳೆಂದು ಕತ್ತು ಸೀಳಿ ಕೊಂದ ಪತಿರಾಯ!

Murder Case: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಇಲಿಯಾಸ್ ನಗರದಲ್ಲಿ ಕೊಲೆ ನಡೆದಿದೆ. ವಿಚ್ಛೇದನ ಪಡೆದು ದೂರವಾಗುತ್ತಾಳೆ ಎಂದು ಪತ್ನಿಯ ಕತ್ತು ಸೀಳಿ ಪತಿ ಕೊಲೆ ಮಾಡಿದ್ದಾನೆ.

VISTARANEWS.COM


on

Murder Case
Koo

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಪತಿ ಕೊಲೆ ಮಾಡಿರುವ ಘಟನೆ (Murder Case) ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಇಲಿಯಾಸ್ ನಗರದಲ್ಲಿ ನಡೆದಿದೆ. ಹೆಂಡ್ತಿ ತನ್ನನ್ನು ಬಿಟ್ಟು ಬೇರೆಯಾಗುತ್ತಾಳೆ ಎಂದು ಬೇಸರದಿಂದ ಪತಿ ಚಾಕು ಇರಿದು ಕೊಲೆ ಮಾಡಿದ್ದಾನೆ.

ಶಿಯಾಪತ್ ಉನ್ನಿಸ ಕೊಲೆಯಾದ ಮಹಿಳೆ. ನೂರುಲ್ಲಾ ಪತ್ನಿಯ ಕೊಲೆ ಮಾಡಿದ ಗಂಡ. ಆರೋಪಿ ನೂರುಲ್ಲಾನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಗಂಡ-ಹೆಂಡತಿ ವಿಚ್ಛೇದನ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಕಳೆದ ಐದು ದಿನಗಳಿಂದ ಹೆಂಡತಿಯಿಂದ ಗಂಡ ದೂರವಿದ್ದ. ಸೋಮವಾರ ಹೆಂಡತಿ ಉನ್ನೀಸಾ ಮನೆ ಖಾಲಿ ಮಾಡುತ್ತಿದ್ದಳು. ಈ ವೇಳೆ ಏಕಾಏಕಿ ಗಂಡ ಬಂದು ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಶ್ಚಿತಾರ್ಥವಾಗಿದ್ದ ಯುವತಿಯ ಶವ ಅನುಮಾನಾಸ್ಪದವಾಗಿ ಪತ್ತೆ

ರಾಯಚೂರು: ತಾಲೂಕಿನ ಯರಮರಸ್ ಬಳಿಯ ದಂಡ್ ಗ್ರಾಮದಲ್ಲಿ ಇತ್ತೀಚೆಗೆ ನಿಶ್ಚಿತಾರ್ಥವಾಗಿದ್ದ ಯುವತಿಯ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಸುನೀತಾ (26) ಎಂಬ ಯುವತಿಯ ಶವ ಬೆಡ್ ರೂಮ್‌ನಲ್ಲಿ ರಕ್ತ ಸಿಕ್ತವಾಗಿ ಪತ್ತೆಯಾಗಿದೆ.

ಮೃತ ಯುವತಿ ದೇಹದ‌ ಮೇಲೆ ಚಾಕುವಿನಿಂದ ಹಲ್ಲೆ ಗುರುತು ಪತ್ತೆಯಾಗಿದ್ದು, ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಕೊಂಡಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಮನೆಯವರ ಮದುವೆ‌ ಪ್ರಸ್ತಾಪಕ್ಕೆ‌ ಯುವತಿ ಮನನೊಂದಿದ್ದಳು. ಜತೆಗೆ ತಾಯಿ‌, ಅಣ್ಣನ ಜತೆ ಮನಸ್ತಾಪ ಇತ್ತು. ಇದೇ ಕಾರಣಕ್ಕೆ ಎಷ್ಟೋ ಬಾರಿ ಯುವತಿ ಮನೆ ಬಿಟ್ಟು ಹೋಗಿದ್ದಳಂತೆ. ಮದುವೆ ಪ್ರಸ್ತಾಪದಿಂದ ಮಾನಸಿಕ‌ ಸ್ಥಿಮಿತ ಕಳೆದುಕೊಂಡಿದ್ದ ಸುನೀತಾ, ಏ.26ರಂದು ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಮತ್ತು ಅಣ್ಣ ಹೇಳಿದ್ದಾರೆ.

ಆದರೆ, ತಂಗಿಯ ಮರಣದ ಬಗ್ಗೆ ಸಂಶಯ ವ್ಯಕ್ತ ಪಡಿಸಿ ಅಕ್ಕ ದೂರು ದಾಖಲು ಮಾಡಿದ್ದಾಳೆ. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

Continue Reading
Advertisement
Pakistan Inflation
ವಿದೇಶ1 hour ago

Pakistan Inflation: ಪಾಕಿಸ್ತಾನ ಮತ್ತಷ್ಟು ದಿವಾಳಿ; ಲೀಟರ್‌ ಪೆಟ್ರೋಲ್‌ಗೆ 290 ರೂ., ಕೆ.ಜಿ ಹಿಟ್ಟಿಗೆ 800 ರೂ.

Honnavar News
ಉತ್ತರ ಕನ್ನಡ2 hours ago

Honnavar News: ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕು: ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Sadhguru Jaggi Vasudev
ಬೆಂಗಳೂರು2 hours ago

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Justin Trudeau
ದೇಶ2 hours ago

Justin Trudeau: ಕೆನಡಾ ಪ್ರಧಾನಿ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ; ಭಾರತ ಸಮನ್ಸ್!

M P Rudramba
ಕರ್ನಾಟಕ2 hours ago

M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಧರ್ಮ ಪತ್ನಿ ರುದ್ರಾಂಬಾ ನಿಧನ

KKR vs DC
ಕ್ರೀಡೆ3 hours ago

KKR vs DC: ಡೆಲ್ಲಿಗೆ ನೀರು ಕುಡಿಸಿದ ಸಾಲ್ಟ್​; ಪಂತ್​ ಪಡೆಯ ಪ್ಲೇ ಆಫ್ ಹಾದಿ ದುರ್ಗಮ

Patanjali
ದೇಶ3 hours ago

Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು, ಬಾಬಾ ರಾಮದೇವ್‌ ವಿರುದ್ಧ ಬಿತ್ತು ಕೇಸ್

Murder Case
ಕರ್ನಾಟಕ3 hours ago

Murder Case: ಹೆಂಡ್ತಿ ಬಿಟ್ಟು ಹೋಗುತ್ತಾಳೆಂದು ಕತ್ತು ಸೀಳಿ ಕೊಂದ ಪತಿರಾಯ!

CM Siddaramaiah inaugurated by prajadhwani lok sabha election campaign meeting at kushtagi
ಕೊಪ್ಪಳ3 hours ago

Lok Sabha Election 2024: ನಾಯಕತ್ವ ಕೊರತೆ ಇರುವುದು ಬಿಜೆಪಿಗೆ ಎಂದ ಸಿದ್ದರಾಮಯ್ಯ

DCM D K Shivakumar Latest statement in Belagavi
ಪ್ರಮುಖ ಸುದ್ದಿ3 hours ago

DK Shivakumar: ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಿಲುವೇನು; ಶಿವಕುಮಾರ್ ಪ್ರಶ್ನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 202413 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202414 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ21 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌