ITR filing : ಇಂದೇ ಗಡುವು ಮುಕ್ತಾಯ, 6 ಕೋಟಿ ರಿಟರ್ನ್ ಸಲ್ಲಿಕೆ, ಇನ್ನೂ ವಿಸ್ತರಣೆಗೆ ಕಾಯುತ್ತಿದ್ದೀರಾ? - Vistara News

ಮನಿ-ಗೈಡ್

ITR filing : ಇಂದೇ ಗಡುವು ಮುಕ್ತಾಯ, 6 ಕೋಟಿ ರಿಟರ್ನ್ ಸಲ್ಲಿಕೆ, ಇನ್ನೂ ವಿಸ್ತರಣೆಗೆ ಕಾಯುತ್ತಿದ್ದೀರಾ?

ITR filing 2022-23ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಇಂದು (2023 ಜುಲೈ 31) ಗಡುವು ಮುಕ್ತಾಯವಾಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

ITR
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: 2022-23ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಇದುವರೆಗೆ 6 ಕೋಟಿ ಮಂದಿ ಐಟಿ ರಿಟರ್ನ್‌ ಸಲ್ಲಿಸಿದ್ದಾರೆ. ನೀವು ಇದರ ಗಡುವು ವಿಸ್ತರಣೆಯಾದೀತು (Income Tax Return Filing Due Date AY 2023-24) ಎಂದು ಭಾವಿಸುತ್ತಿದ್ದೀರಾ? ಆದರೆ ಹಾಗೆ ವಿಳಂಬಿಸುವುದಕ್ಕಿಂತ ಈಗಿನ ಗಡುವಿನ ಒಳಗೆಯೇ ಸಲ್ಲಿಸುವುದು ಸೂಕ್ತ. (ITR Filing on http://www.incometax.gov.in) ಒಂದು ವೇಳೆ ಗಡುವು ವಿಸ್ತರಣೆಯಾಗದಿದ್ದರೆ ಪೆನಾಲ್ಟಿ , ಬಡ್ಡಿ ಮಾತ್ರವಲ್ಲದೆ ಇತರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಆದಾಯ ತೆರಿಗೆ ಇಲಾಖೆ ಇದುವರೆಗೆ ಐಟಿಆರ್‌ ಫೈಲಿಂಗ್‌ ಗಡುವನ್ನು ಮುಂದೂಡುವ ಯಾವುದೇ ಸುಳಿವನ್ನು ನೀಡಿಲ್ಲ. ಆದ್ದರಿಂದ ಗಡುವಿನ ಒಳಗೆಯೇ ಫೈಲಿಂಗ್‌ ಮಾಡುವುದು ಸೂಕ್ತ ಎನ್ನುತ್ತಾರೆ ಲೆಕ್ಕ ಪರಿಶೋಧಕರು. ಐಟಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2022-23ರ ಐಟಿರ್‌ ಸಲ್ಲಿಕೆಯು ಈಗಾಗಲೇ ಹಿಂದಿನ ಸಾಲಿನದ್ದಕ್ಕಿಂತ ಹೆಚ್ಚಾಗಿದ್ದು ದಾಖಲೆ ಸೃಷ್ಟಿಸಿದೆ.

ಐಟಿ ರಿಟರ್ನ್‌ ಸಲ್ಲಿಕೆಯ ವೇಳೆ ಯಾವುದೇ ತಾಂತ್ರಿಕ ಅಡಚಣೆ ಕಂಡು ಬಂದಲ್ಲಿ ಈ ವೆಬ್‌ ವಿಳಾಸಕ್ಕೆ ನಿಮ್ಮ ಪ್ಯಾನ್‌ ಮತ್ತು ಮೊಬೈಲ್‌ ನಂಬರ್‌ ಸಹಿತ ವಿವರಗಳನ್ನು ಸಲ್ಲಿಸಬಹುದು. orm@cpc.incometax.gov.in ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಈ ನಡುವೆ ಕೆಲ ತೆರಿಗೆದಾರರು ಐಟಿ ರಿಟರ್ನ್‌ ಸಲ್ಲಿಕೆಯಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆಗಳನ್ನು ವಿವರಿಸಿದ್ದಾರೆ. ಆನ್‌ಲೈನ್‌ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ದೂರಿದ್ದಾರೆ.

ಜುಲೈ 31ರ ಗಡುವು ತಪ್ಪಿದರೂ ನೀವು ವಿಳಂಬಿತ ರಿಟರ್ನ್‌ (belated return) ಫೈಲಿಂಗ್‌ ಮಾಡಬಹುದು. ವಿಳಂಬಿತ ಐಟಿಆರ್‌ ಅನ್ನು 2023ರ ಡಿಸೆಂಬರ್‌ 31 ರ ತನಕ ಫೈಲಿಂಗ್‌ ಮಾಡಬಹುದು. ಆದಾಯ ತೆರಿಗೆ ಪಾವತಿಸದಿದ್ದರೆ ( non-payment of taxes) ಕಠಿಣ ದಂಡ ಮತ್ತು ಮೂರು ತಿಂಗಳಿನಿಂದ ಎರಡು ವರ್ಷದ ತನಕ ಸೆರೆ ವಾಸಕ್ಕೂ ಕಾರಣವಾಗಬಹುದು. 25,00,000 ರೂ.ಗೂ ಹೆಚ್ಚು ತೆರಿಗೆ ಮೊತ್ತ ತಪ್ಪಿಸಿದ್ದರೆ ಏಳು ವರ್ಷದ ತನಕ ಜೈಲು ಶಿಕ್ಷೆ ಎದುರಿಸಬೇಕಾಗಿ ಬರಬಹುದು.

ಇದನ್ನೂ ಓದಿ: ITR filing due date : ಜುಲೈ 31ರ ಐಟಿ ರಿಟರ್ನ್‌ ಫೈಲಿಂಗ್‌ ಗಡುವು ಮುಂದೂಡಿಕೆ ಆಗಲಿದೆಯೇ?

ಐಟಿಆರ್‌ ಸಲ್ಲಿಕೆಯ ಗಡುವನ್ನು ತಪ್ಪಿದರೆ ನಾನಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪೆನಾಲ್ಟಿಗಳನ್ನು ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 234 ಎಫ್‌ ಅಡಿಯಲ್ಲಿ 5,000 ರೂ. ತನಕ ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. ವಾರ್ಷಿಕ ಆದಾಯವು 5 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ವಿಳಂಬ ಶುಲ್ಕವು 1,000 ರೂ. ಆಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

EPF Withdraw Rule: ಪಿಎಫ್‌ ಮುಂಗಡ ಹಣ ಪಡೆಯುವುದು ಈಗ ಮತ್ತಷ್ಟು ಸುಲಭ; ಹೊಸ ಬದಲಾವಣೆಯ ಸಂಪೂರ್ಣ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಹೊಂದಿರುವ ಸದಸ್ಯರಿಗೆ ಇಲ್ಲಿದೆ ಗುಡ್ ನ್ಯೂಸ್. ಶಿಕ್ಷಣ, ಮದುವೆ ಮತ್ತು ವಸತಿಗಾಗಿ ಪಿಎಫ್ ನಿಂದ ಮುಂಗಡ ಹಣವನ್ನು ಪಡೆಯುವುದು ಈಗ ಸುಲಭವಾಗಿದೆ. ಈ ಬಗ್ಗೆ ನಿಯಮಗಳು (EPF Withdraw Rule) ಏನು ಹೇಳಿವೆ ಗೊತ್ತೇ? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

EPF Withdrawal Rule
Koo

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPF Withdraw Rule) ಶಿಕ್ಷಣ, ಮದುವೆ ಮತ್ತು ವಸತಿಗೆ ಸಂಬಂಧಿಸಿ ಮುಂಗಡ ಕ್ಲೈಮ್‌ಗಳಿಗಾಗಿ (advance claims) ಸ್ವಯಂ-ಮೋಡ್ ಸೆಟಲ್‌ಮೆಂಟ್ (auto-mode settlement ) ಅನ್ನು ಪರಿಚಯಿಸುವುದಾಗಿ ಘೋಷಿಸಿದೆ. ಈ ವ್ಯವಸ್ಥೆಯಲ್ಲಿ ಯಾರದೇ ಹಸ್ತಕ್ಷೇಪವಿಲ್ಲದೆ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಬಹುದು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೇಳಿಕೆಯ ಪ್ರಕಾರ, ಅನಿರುದ್ಧ್ ಪ್ರಸಾದ್ ಎಂಬುವರು 2024ರ ಮೇ 9ರಂದು ಪ್ಯಾರಾ 68J ಅಡಿಯಲ್ಲಿ ಅನಾರೋಗ್ಯಕ್ಕಾಗಿ ಮುಂಗಡವಾಗಿ ಅರ್ಜಿ ಸಲ್ಲಿಸಿದ್ದರು. ಅವರ ಮುಂಗಡ ಕ್ಲೈಮ್ ಅನ್ನು 2024ರ ಮೇ 11 ರಂದು 92,143 ರೂ. ಅನ್ನು ಮೂರು ದಿನಗಳ ಒಳಗೆ ಇತ್ಯರ್ಥಪಡಿಸಲಾಗಿದೆ. ಇಂತಹ ಹಲವು ಮಂದಿ ಇಪಿಎಫ್‌ಒನಲ್ಲಿ ಮುಂಗಡ ಕ್ಲೈಮ್ ಪಾವತಿಯ ಪ್ರಯೋಜನವನ್ನು ಪಡೆದಿದ್ದಾರೆ.

ಇಪಿಎಫ್‌ಒ ಆಟೋ ಮೋಡ್ ಸೆಟಲ್ಮೆಂಟ್

ಅನಾರೋಗ್ಯದ ಕಾರಣಕ್ಕಾಗಿ ಮುಂಗಡ ಕ್ಲೈಮ್ ಮಾಡಲು 2020ರ ಏಪ್ರಿಲ್ ನಲ್ಲಿ ಕ್ಲೈಮ್ ಸೆಟ್ಲ್ ಮೆಂಟ್ ಸ್ವಯಂ ಮೋಡ್ ಅನ್ನು ಪರಿಚಯಿಸಲಾಯಿತು. ಈಗ ಈ ಮಿತಿಯನ್ನು 1 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 2.25 ಕೋಟಿ ಸದಸ್ಯರು ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

2023- 24ರ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ಸುಮಾರು 4.45 ಕೋಟಿ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿದೆ. ಅದರಲ್ಲಿ ಶೇ. 60ಕ್ಕಿಂತ ಹೆಚ್ಚು ಮಂದಿ ಒಟ್ಟು 2.84 ಕೋಟಿ ಕ್ಲೈಮ್‌ಗಳು ಮುಂಗಡ ಕ್ಲೈಮ್‌ಗಳಾಗಿವೆ. ವರ್ಷದಲ್ಲಿ ಇತ್ಯರ್ಥವಾದ ಒಟ್ಟು ಮುಂಗಡ ಕ್ಲೇಮ್‌ಗಳಲ್ಲಿ ಸುಮಾರು 89.52 ಲಕ್ಷ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ.

ಪಿಎಫ್ ಹಿಂಪಡೆಯುವುದು ಹೇಗೆ?

ಇಪಿಎಫ್ ಸದಸ್ಯರು ನಿಯಮ 68J ಅಡಿಯಲ್ಲಿ ವೈದ್ಯಕೀಯ ಕಾಯಿಲೆಗಳಿಗೆ ಇಪಿಎಫ್ ಹಿಂತೆಗೆದುಕೊಳ್ಳುವಿಕೆಗೆ ಅನ್ವಯಿಸಲು ನಿಯಮಗಳನ್ನು ತಿಳಿದಿರಬೇಕು, ನಿಯಮ 68K ಅಡಿಯಲ್ಲಿ ಮದುವೆ ಅಥವಾ ಉನ್ನತ ಶಿಕ್ಷಣ ಮತ್ತು ನಿಯಮ 68B ಅಡಿಯಲ್ಲಿ ವಸತಿ ಸೌಲಭ್ಯಕ್ಕಾಗಿ ಮುಂಗಡವನ್ನು ಪಡೆಯಬಹುದು.

ನಿಯಮ 68 ಜೆ

ಇಪಿಎಫ್ ಸದಸ್ಯರು ಉದ್ಯೋಗದಾತ ಅಥವಾ ವೈದ್ಯರಿಂದ ಸಹಿ ಮಾಡಿದ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ವೈದ್ಯಕೀಯ ಕ್ಲೈಮ್‌ಗಾಗಿ, ಇಪಿಎಫ್ ಯೋಜನೆಗೆ ಎಷ್ಟು ವರ್ಷಗಳವರೆಗೆ ಅನ್ವಯಿಸಲಾಗಿದೆ ಎಂಬ ನಿಯಮವಿಲ್ಲ.

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

ನಿಯಮ 68K

ಮದುವೆ ಅಥವಾ ಉನ್ನತ ಶಿಕ್ಷಣದ ಉದ್ದೇಶಗಳಿಗಾಗಿ ಪಿಎಫ್ ಹಣವನ್ನು ಹಿಂಪಡೆಯಲು ಇಪಿಎಫ್ ಸದಸ್ಯರು ಇಪಿಎಫ್‌ಒನೊಂದಿಗೆ 7 ವರ್ಷಗಳನ್ನು ಪೂರ್ಣಗೊಳಿಸಬೇಕು. ಇಪಿಎಫ್ ಸದಸ್ಯರು ಅದನ್ನು ಆನ್‌ಲೈನ್ ಸ್ವರೂಪದಲ್ಲಿ ಘೋಷಿಸಬೇಕಾಗುತ್ತದೆ. ಆದ್ದರಿಂದ ಅವರು ತಮ್ಮ ಷೇರಿನ ಗರಿಷ್ಠ ಶೇ. 50ರಷ್ಟನ್ನು ಬಡ್ಡಿಯೊಂದಿಗೆ ಹಿಂತೆಗೆದುಕೊಳ್ಳಬಹುದು.

ನಿಯಮ 68B

ಫ್ಲಾಟ್/ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು, ಇಪಿಎಫ್ ಸದಸ್ಯರು ಇಪಿಎಫ್‌ಒನೊಂದಿಗೆ ಐದು ವರ್ಷಗಳನ್ನು ಪೂರ್ಣಗೊಳಿಸಬೇಕು. ಇಪಿಎಫ್‌ಒ ಮನೆಯ ದುರಸ್ತಿ ಮತ್ತು ನವೀಕರಣಕ್ಕಾಗಿ ಮುಂಗಡ ಹಿಂತೆಗೆದುಕೊಳ್ಳುವಿಕೆಯನ್ನು ಸಹ ಅನುಮತಿಸುತ್ತದೆ. ಇದನ್ನು ಎರಡು ಬಾರಿ ಮಾಡಬಹುದು. ಹಿಂಪಡೆಯಬಹುದಾದ ಮೊತ್ತವು ಉದ್ದೇಶವನ್ನು ಅವಲಂಬಿಸಿರುತ್ತದೆ. ಶೇ.90ರವರೆಗೂ ಹಣ ಹಿಂಪಡೆಯಲು ಸಾಧ್ಯ.

Continue Reading

ಮನಿ-ಗೈಡ್

Money Guide: ಪ್ಯಾನ್‌ ಕಾರ್ಡ್‌ ಕಳೆದುಹೋದರೆ ಚಿಂತೆ ಬೇಡ; ಮನೆಯಲ್ಲೇ ಕೂತು ಡುಬ್ಲಿಕೇಟ್‌ ಪಡೆಯುವ ವಿಧಾನ ಇಲ್ಲಿದೆ

Money Guide: ನಮ್ಮ ಆರ್ಥಿಕ ಚಟುವಟಿಕೆಗೆ ಪ್ಯಾನ್‌ ನಂಬರ್‌ ಕಡ್ಡಾಯಗೊಳಿಸಲಾಗಿದೆ. ಅಂದರೆ ಪ್ಯಾನ್‌ ಕಾರ್ಡ್ ಇಲ್ಲದೆ ಇನ್‌ಕಮ್‌ ಟ್ಯಾಕ್ಸ್, ಬ್ಯಾಂಕಿನ ವಹಿವಾಟನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಆಕಸ್ಮಿಕವಾಗಿ ಪ್ಯಾನ್‌ ಕಾರ್ಡ್‌ ಕಳೆದು ಹೋದರೆ ಏನು ಮಾಡಬೇಕು? ಮರಳಿ ಪಡೆಯುವುದು ಹೇಗೆ? ಡುಬ್ಲಿಕೇಟ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲೇ ಹೇಗೆ ಅಪ್ಲೈ ಮಾಡಬಹುದು? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ಕೇಂದ್ರ ಸರ್ಕಾರವು ನಾಗರಿಕರಿಗೆ ಹಲವು ರೀತಿಯ ದಾಖಲೆಗಳನ್ನು ನೀಡಿದೆ. ಇವುಗಳಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪ್ಯಾನ್ ಕಾರ್ಡ್ ಮುಖ್ಯವಾದುದು. ಹಣ ವರ್ಗಾವಣೆಯಿಂದ ಹಿಡಿದು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ದಾಖಲೆಗಳು ಅಗತ್ಯ. ಅದರಲ್ಲೂ ನಮ್ಮ ಆರ್ಥಿಕ ಚಟುವಟಿಕೆಗೆ ಪ್ಯಾನ್‌ ನಂಬರ್‌ (Permanent Account Number) ಕಡ್ಡಾಯಗೊಳಿಸಲಾಗಿದೆ. ಅಂದರೆ ಪ್ಯಾನ್‌ ಕಾರ್ಡ್ ಇಲ್ಲದೆ ಇನ್‌ಕಮ್‌ ಟ್ಯಾಕ್ಸ್, ಬ್ಯಾಂಕಿನ ವಹಿವಾಟನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಆಕಸ್ಮಿಕವಾಗಿ ಪ್ಯಾನ್‌ ಕಾರ್ಡ್‌ ಕಳೆದು ಹೋದರೆ ಏನು ಮಾಡಬೇಕು? ಮರಳಿ ಪಡೆಯುವುದು ಹೇಗೆ? ಡುಬ್ಲಿಕೇಟ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲೇ ಹೇಗೆ ಅಪ್ಲೈ ಮಾಡಬಹುದು? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ಮೊದಲು ಏನು ಮಾಡಬೇಕು?

ನಿಮ್ಮ ಪ್ಯಾನ್‌ ಕಾರ್ಡ್‌ ಕಳೆದುಹೋಗಿದ್ದರೆ ಅಥವಾ ಕಳವಾಗಿದ್ದರೆ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಇದರಿಂದ ಬೇರೆಯವರು ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡದಂತೆ ತಡೆಯಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಪ್ಯಾನ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಹೆಚ್ಚುತ್ತಿರುವುದುರಿಂದ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಬಳಿಕ ನಕಲಿ ಪ್ಯಾನ್‌ ಕಾರ್ಡ್‌ಗೆ ಅಪ್ಲೈ ಮಾಡಬಹುದು. ನಕಲಿ ಪ್ಯಾನ್‌ ಕಾರ್ಡ್‌ನ ಅನುಕೂಲವೆಂದರೆ ನಿಮಗೆ ಹಳೆ ನಂಬರ್ ಸಿಗಲಿದೆ. ಅದು ನಿಮ್ಮ ಕಳೆದು ಹೋದ ಪಾನ್ ಕಾರ್ಡ್‌ನ ನಕಲಿಯಾಗಿರುತ್ತದೆ.

ಆನ್‌ಲೈನ್‌ನಲ್ಲಿ ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಪಡೆಯುವ ರೀತಿ

  • ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಅಪ್ಲಿಕೇಷನ್‌ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.
  • ನಿಮ್ಮ ಪ್ಯಾನ್‌ ನಂಬರ್‌, ಆಧಾರ್‌ ನಂಬರ್‌ ಮತ್ತು ಡೇಟ್‌ ಆಫ್‌ ಬರ್ತ್‌ ಕಾಲಂ ಭರ್ತಿ ಮಾಡಿ.
  • ಗಮನವಿಟ್ಟು ಷರತ್ತುಗಳನ್ನು ಓದಿ ಮನನ ಮಾಡಿಕೊಳ್ಳಿ.
  • ಕ್ಯಾಪ್ಚಾ ಕೋಡ್‌ ಭರ್ತಿ ಮಾಡಿ.
  • Submit ಬಟನ್‌ ಕ್ಲಿಕ್‌ ಮಾಡಿ.
  • ಈಗ ಹೊಸ ಪುಟ ತೆರೆದುಕೊಳ್ಳಲಿದ್ದು, ಅದರಲ್ಲಿ ನಿಮ್ಮ ಪ್ಯಾನ್‌ ಕಾರ್ಡ್‌ನ ವಿವರ ಕಂಡು ಬರುತ್ತದೆ.
  • ಪುಟದ ಕೆಳಗೆ ಕಂಡು ಬರುವ OTP on Email ID, Mobile Number ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
  • Generate OTP ಆಪ್ಶನ್‌ ಕ್ಲಿಕ್‌ ಮಾಡಿ.
  • ಒಟಿಪಿ ನಮೂದಿಸಿ Validate ಬಟನ್‌ ಆಯ್ಕೆ ಮಾಡಿ.

ಆಫ್‌ಲೈನ್‌ನಲ್ಲಿ ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಪಡೆಯುವ ರೀತಿ

  • ಪ್ಯಾನ್ ಸೆಂಟರ್, ಐಟಿ ಪ್ಯಾನ್ ಸೇವಾ ಕೇಂದ್ರಕ್ಕೆ ತೆರಳಿ.
  • ‘Request for New PAN Changes or Correction in PAN Data’ ಅರ್ಜಿ ಪಡೆದು ಭರ್ತಿ ಮಾಡಿ.
  • ಗಮನಿಸಿ ಬ್ಲಾಕ್ ಲೆಟರ್‌ನಲ್ಲಿ, ಕಪ್ಪು ಶಾಹಿಯಲ್ಲಿ, ಆಂಗ್ಲ ಭಾಷೆಯಲ್ಲೇ ಫಾರ್ಮ್ ಭರ್ತಿ ಮಾಡಬೇಕು.
  • ಪ್ಯಾನ್ ಸಂಖ್ಯೆ ನಮೂದಿಸಿ. ಜತೆಗೆ ಇತ್ತೀಚಿನ ಛಾಯಾಚಿತ್ರ, ಸಹಿ ಅಗತ್ಯ.
  • ಬಳಿಕ ಅರ್ಜಿ ಸಲ್ಲಿಸಿ.

ಯಾವೆಲ್ಲ ದಾಖಲೆ ಅಗತ್ಯ?

  • ಐಡಿ ಪುರಾವೆ: ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್
  • ವಯಸ್ಸು ಪುರಾವೆ: ಜನನ ಪ್ರಮಾಣ ಪತ್ರ, ಪಿಂಚಣಿ ಪತ್ರ, ವಿವಾಹ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್
  • ಅಫಿಡವೀತ್ ವಿಳಾಸ ಪುರಾವೆ: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಪಿಂಚಣಿ ಪತ್ರ

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ಮನಿ-ಗೈಡ್

Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

Money Guide: ಟೈಮ್ ಡೆಪಾಸಿಟ್ ಅಥವಾ ಟರ್ಮ್ ಡೆಪಾಸಿಟ್ ಎಂದೂ ಕರೆಯಲ್ಪಡುವ ನಿಶ್ಚಿತ ಠೇವಣಿ ಭಾರತೀಯರ ನೆಚ್ಚಿನ ಹೂಡಿಕೆಯ ಆಯ್ಕೆ ಎನಿಸಿಕೊಂಡಿದೆ. ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇದು ಉತ್ತಮ. ಈ ಯೋಜನೆ ಮುಖಾಂತರ ಹೂಡಿಕೆದಾರರು ತಮ್ಮ ಹೆಚ್ಚುವರಿ ಹಣವನ್ನು ನಿಗದಿತ ಅವಧಿಗೆ ಠೇವಣಿ ಇರಿಸಿಕೊಳ್ಳಬಹುದು. ಫಿಕ್ಸೆಡ್ ಡೆಪಾಸಿಟ್‌ಗೆ ವಿವಿಧ ಬ್ಯಾಂಕ್‌ಗಳು ಎಷ್ಟು ಬಡ್ಡಿದರ ನೀಡುತ್ತವೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಟೈಮ್ ಡೆಪಾಸಿಟ್ ಅಥವಾ ಟರ್ಮ್ ಡೆಪಾಸಿಟ್ ಎಂದೂ ಕರೆಯಲ್ಪಡುವ ನಿಶ್ಚಿತ ಠೇವಣಿ (Fixed Deposit) ಭಾರತೀಯರ ನೆಚ್ಚಿನ ಹೂಡಿಕೆಯ ಆಯ್ಕೆ ಎನಿಸಿಕೊಂಡಿದೆ. ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇದು ಉತ್ತಮ. ಈ ಯೋಜನೆ ಮುಖಾಂತರ ಹೂಡಿಕೆದಾರರು ತಮ್ಮ ಹೆಚ್ಚುವರಿ ಹಣವನ್ನು ನಿಗದಿತ ಅವಧಿಗೆ ಠೇವಣಿ ಇರಿಸಿಕೊಳ್ಳಬಹುದು. ಆಯ್ಕೆ ಮಾಡಿದ ಅವಧಿಗೆ ಸ್ಥಿರ ಬಡ್ಡಿಯನ್ನೂ ಪಡೆಯಬಹುದು ಎನ್ನುವ ಕಾರಣಕ್ಕೆ ಇದು ಅನೇಕರ ಗಮನ ಸೆಳೆಯುತ್ತದೆ. ಹೂಡಿಕೆಯ ಅವಧಿಯನ್ನು ಅವಲಂಬಿಸಿ ವಿವಿಧ ಬ್ಯಾಂಕ್‌ಗಳು ಶೇ. 3ರಿಂದ 7.50 ರವರೆಗೆ ಬಡ್ಡಿದರಗಳನ್ನು ನೀಡುತ್ತವೆ. ಹಿರಿಯ ನಾಗರಿಕರು ಹೆಚ್ಚುವರಿ ಶೇ. 0.5 ಬಡ್ಡಿಯೂ ಲಭ್ಯ. ಇಂದಿನ ಮನಿಗೈಡ್‌ (Money Guide)ನಲ್ಲಿ ಫಿಕ್ಸೆಡ್ ಡೆಪಾಸಿಟ್‌ಗೆ ವಿವಿಧ ಬ್ಯಾಂಕ್‌ಗಳು ಎಷ್ಟು ಬಡ್ಡಿದರ ನೀಡುತ್ತವೆ ಎನ್ನುವುದನ್ನು ಗಮನಿಸೋಣ.

ನಿಶ್ಚಿತ ಠೇವಣಿಯಲ್ಲಿ ಹೂಡಿಕೆಯ ಅವಧಿ ಮತ್ತು ಬಡ್ಡಿದರವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಬಹುದು. ಇದರ ಮೇಲಿನ ಬಡ್ಡಿಯನ್ನು ನಿಯಮಿತ ಮಧ್ಯಂತರಗಳಲ್ಲಿ ಪಡೆಯಬಹುದು ಅಥವಾ ನೀವು ಮುಕ್ತಾಯದ ಸಮಯದಲ್ಲಿ ಅದನ್ನು ಸ್ವೀಕರಿಸುವ ಆಯ್ಕೆಯನ್ನು ಆಯ್ದುಕೊಳ್ಳಬಹುದು. 

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)

ಎಸ್‌ಬಿಐಯ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಶೇ. 3ರಿಂದ 7ರವರೆಗೆ ಬಡ್ಡಿ ಲಭಿಸುತ್ತದೆ. ಜತೆಗೆ ಹಿರಿಯ ನಾಗರಿಕರು ಹೆಚ್ಚುವರಿ 50 ಬೇಸಿಸ್ ಪಾಯಿಂಟ್‌ (ಬಿಪಿಎಸ್) ಪಡೆಯಲಿದ್ದಾರೆ. ನಿರ್ದಿಷ್ಟವಾಗಿ ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಎಫ್‌ಡಿಗೆ ಬ್ಯಾಂಕ್ ಶೇ. 6.80ರಷ್ಟು ಬಡ್ಡಿದರವನ್ನು ಒದಗಿಸುತ್ತದೆ. ಇದಲ್ಲದೆ, ಎರಡರಿಂದ ಮೂರು ವರ್ಷಗಳ ಅವಧಿಗೆ ಬ್ಯಾಂಕ್ ಶೇ. 7ರಷ್ಟು ಬಡ್ಡಿದರವನ್ನು ನೀಡುತ್ತದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)

ಪಿಎನ್‌ಬಿ ಸ್ಥಿರ ಠೇವಣಿಗೆ ಶೇ. 3.50ರಿಂದ 7.50ರವರೆಗೆ ಬಡ್ಡಿದರ ಒದಗಿಸುತ್ತದೆ. ನಿರ್ದಿಷ್ಟವಾಗಿ ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳಿಗೆ ಸಾಮಾನ್ಯ ಹೂಡಿಕೆದಾರರಿಗೆ ಬಡ್ಡಿದರವು ಶೇಕಡಾ 6.75ರಷ್ಟಿದ್ದರೆ, ಹಿರಿಯ ನಾಗರಿಕರು ಶೇ. 7.25ರಷ್ಟು ಪಡೆಯಲಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್ (2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)

ಎಚ್‌ಡಫ್‌ಸಿ ಬ್ಯಾಂಕ್ ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತದೆ. ನಿಯಮಿತ ಹೂಡಿಕೆದಾರರು ಶೇಕಡಾ 6.60ರಷ್ಟು ಬಡ್ಡಿದರವನ್ನು ಪಡೆಯಬಹುದು. ಮಾತ್ರವಲ್ಲ ಹಿರಿಯ ನಾಗರಿಕರು ಅಂತಹ ಠೇವಣಿಗಳ ಮೇಲೆ ಶೇಕಡಾ 7.10ರಷ್ಟು ಬಡ್ಡಿದರ ಹೊಂದಬಹುದು.

ಐಸಿಐಸಿಐ ಬ್ಯಾಂಕ್ (5 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)

ಐಸಿಐಸಿಐ ಬ್ಯಾಂಕ್ ತನ್ನ ಎಫ್‌ಡಿ ಖಾತೆಗಳಿಗೆ ಬಡ್ಡಿದರಗಳನ್ನು ಶೇ. 3ರಿಂದ 7.50ರವರೆಗೆ ನೀಡುತ್ತದೆ. ಮಾತ್ರವಲ್ಲ ಹಿರಿಯ ನಾಗರಿಕರು ಹೆಚ್ಚುವರಿ ಶೇ. 0.5ರಷ್ಟು ಬಡ್ಡಿ ಪಡೆಯಲಿದ್ದಾರೆ. ನಿರ್ದಿಷ್ಟವಾಗಿ ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳಿಗೆ ಸಾಮಾನ್ಯ ಗ್ರಾಹಕರಿಗೆ ಶೇ. 6.70ರಷ್ಟು ಬಡ್ಡಿ ಇದೆ.

ಇದನ್ನೂ ಓದಿ: Money Guide: ಭಾರತದಲ್ಲಿಯೂ ಆರಂಭವಾಯ್ತು ಬಹು ನಿರೀಕ್ಷಿತ ಗೂಗಲ್ ವ್ಯಾಲೆಟ್‌; ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ?

Continue Reading

ಮನಿ-ಗೈಡ್

Money Guide: ಎಫ್‌ಡಿ V/S ಆರ್‌ಡಿ; ಯಾವುದು ಉತ್ತಮ? ಯಾವುದರಲ್ಲಿ ಹೂಡಿಕೆ ಮಾಡಬೇಕು?

Money Guide: ಉಳಿತಾಯವು ಅನಿರೀಕ್ಷಿತ ಆಘಾತ, ಆರ್ಥಿಕ ಸಮಸ್ಯೆಗಳಿಂದ ನಿಮ್ಮನ್ನು ಕುಗ್ಗದಂತೆ ಕಾಪಾಡುತ್ತದೆ. ಹೀಗಾಗಿ ನೀವು ಭವಿಷ್ಯದ ದೃಷ್ಟಿಯಿಂದ ವಿವಿಧ ಯೋಜನೆಗಳಲ್ಲಿ ನಿಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುವತ್ತ ಗಮನ ಹರಿಸಬೇಕು. ಈ ಪೈಕಿ ನಿಶ್ಚಿತ ಠೇವಣಿ ಮತ್ತು ರಿಕರಿಂಗ್‌ ಠೇವಣಿ ಪ್ರಮುಖವಾದುದು. ಹಾಗಾದರೆ ಈ ಎರಡು ಯೋಜನೆಗಳ ವೈಶಿಷ್ಟ್ಯಗಳೇನು ಎನ್ನುವುದನ್ನು ನೋಡೋಣ. ಎಫ್‌ಡಿ ಮತ್ತು ಆರ್‌ಡಿ ಇವೆರಡೂ ಭಾರತದಲ್ಲಿನ ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಗಳು ಎನಿಸಿಕೊಂಡಿವೆ. ವಿಶೇಷವಾಗಿ ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇವು ಉತ್ತಮ ಆಯ್ಕೆ.

VISTARANEWS.COM


on

Money Guide
Koo

ಬೆಂಗಳೂರು: ಇಂದಿನ ಉಳಿತಾಯವೇ ನಾಳೆಯ ಆದಾಯ ಎನ್ನುವ ಮಾತಿದೆ. ಅಂದರೆ ನಾವು ಎಷ್ಟು ಉಳಿತಾಯ ಮಾಡುತ್ತೇವೆಯೋ ಭವಿಷ್ಯದಲ್ಲಿ ಅಷ್ಟು ನೆಮ್ಮದಿ ಇರುತ್ತದೆ ಎನ್ನುವುದು ಇದಕ್ಕೆ ಕಾರಣ. ಇದಕ್ಕಾಗಿಯೇ ಆರ್ಥಿಕ ತಜ್ಞರು ಉಳಿತಾಯದತ್ತ ಗಮನ ಹರಿಸುವಂತೆ ಸಲಹೆ ನೀಡುತ್ತಾರೆ. ಉಳಿತಾಯವು ಅನಿರೀಕ್ಷಿತ ಆಘಾತ, ಆರ್ಥಿಕ ಸಮಸ್ಯೆಗಳಿಂದ ನಿಮ್ಮನ್ನು ಕುಗ್ಗದಂತೆ ಕಾಪಾಡುತ್ತದೆ. ಹೀಗಾಗಿ ನೀವು ಭವಿಷ್ಯದ ದೃಷ್ಟಿಯಿಂದ ವಿವಿಧ ಯೋಜನೆಗಳಲ್ಲಿ ನಿಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುವತ್ತ ಗಮನ ಹರಿಸಬೇಕು. ಈ ಪೈಕಿ ನಿಶ್ಚಿತ ಠೇವಣಿ (Fixed Deposits) ಮತ್ತು ರಿಕರಿಂಗ್‌ ಠೇವಣಿ (Recurring Deposits) ಪ್ರಮುಖವಾದುದು. ಹಾಗಾದರೆ ಈ ಎರಡು ಯೋಜನೆಗಳ ವೈಶಿಷ್ಟ್ಯಗಳೇನು ಎನ್ನುವುದನ್ನು ನೋಡೋಣ (Money Guide).

ಎಫ್‌ಡಿ ಮತ್ತು ಆರ್‌ಡಿ ಇವೆರಡೂ ಭಾರತದಲ್ಲಿನ ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಗಳು ಎನಿಸಿಕೊಂಡಿವೆ. ವಿಶೇಷವಾಗಿ ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇವು ಉತ್ತಮ ಆಯ್ಕೆ. ಇದರಿಂದ ಯಾವುದೇ ಅಪಾಯವಿಲ್ಲದೆ ಸ್ಥಿರ ಆದಾಯವನ್ನು ಗಳಿಸಬಹುದು ಎನ್ನುವ ಕಾರಣಕ್ಕೆ ಇದನ್ನು ಬಹುತೇಕರು ನೆಚ್ಚಿಕೊಂಡಿದ್ದಾರೆ.

ನಿಶ್ಚಿತ ಠೇವಣಿಯಲ್ಲಿ ಹೂಡಿಕೆಯ ಅವಧಿ ಮತ್ತು ಬಡ್ಡಿದರವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಬಹುದು. ಇದರ ಮೇಲಿನ ಬಡ್ಡಿಯನ್ನು ನಿಯಮಿತ ಮಧ್ಯಂತರಗಳಲ್ಲಿ ಪಡೆಯಬಹುದು ಅಥವಾ ನೀವು ಮುಕ್ತಾಯದ ಸಮಯದಲ್ಲಿ ಅದನ್ನು ಸ್ವೀಕರಿಸುವ ಆಯ್ಕೆಯನ್ನು ಆಯ್ದುಕೊಳ್ಳಬಹುದು. 

ರಿಕರಿಂಗ್ ಡೆಪಾಸಿಟ್ ಯೋಜನೆಯಲ್ಲಿ ನೀವು ನಿರ್ದಿಷ್ಟ ಮೊತ್ತಗಳನ್ನು ಠೇವಣಿ ಇಡಬಹುದು. ಇದು 6 ತಿಂಗಳಿಂದ 10 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯಲ್ಲಿರಬಹುದು. ರಿಕರಿಂಗ್ ಡೆಪಾಸಿಟ್‌ನಲ್ಲಿ ನೀವು ಹೂಡಿಕೆ ಮಾಡಬಹುದಾದ ಕನಿಷ್ಠ ಮೊತ್ತವು ಸಾಮಾನ್ಯವಾಗಿ ಕೇವಲ ರೂ. 100 ಅಥವಾ ಅದಕ್ಕೂ ಕಡಿಮೆ ಇರುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ಬಡ್ಡಿಯೊಂದಿಗೆ ಅಸಲನ್ನು ಪಡೆಯಬಹುದು.

ಎಫ್‌ಡಿಯ ವೈಶಿಷ್ಟ್ಯ

  • ಒಟ್ಟು ಮೊತ್ತದ ಹೂಡಿಕೆ: ಎಫ್‌ಡಿಗಳಿಗೆ ಒಂದು ಬಾರಿಯ ದೊಡ್ಡ ಮೊತ್ತದ ಠೇವಣಿ ಅಗತ್ಯ.
  • ಸ್ಥಿರ ಬಡ್ಡಿದರ: ಬಡ್ಡಿದರವನ್ನು ಹೂಡಿಕೆಯ ಸಮಯದಲ್ಲಿ ನಿಗದಿಪಡಿಸಲಾಗುತ್ತದೆ ಮತ್ತು ಅವಧಿಯುದ್ದಕ್ಕೂ ಸ್ಥಿರವಾಗಿರುತ್ತದೆ.
  • ಬಡ್ಡಿ ಪಾವತಿ ಆಯ್ಕೆಗಳು: ನಿಮ್ಮ ಆದ್ಯತೆಯನ್ನು ಅವಲಂಬಿಸಿ ಬಡ್ಡಿಯನ್ನು ಸಂಯೋಜಿಸಬಹುದು ಮತ್ತು ಮರುಹೂಡಿಕೆ ಮಾಡಬಹುದು.
  • ಕಡಿಮೆ ದ್ರವ್ಯತೆ: ಗಮನಿಸಿ ಅವಧಿ ಮುಕ್ತಾಯಗೊಳ್ಳುವ ಮೊದಲು ಎಫ್‌ಡಿಯನ್ನು ಹಿಂಪಡೆಯುವುದು ದಂಡಕ್ಕೆ ಮತ್ತು ಬಡ್ಡಿ ನಷ್ಟಕ್ಕೆ ಕಾರಣವಾಗಬಹುದು.

ಆರ್‌ಡಿಯ ವೈಶಿಷ್ಟ್ಯ

  • ನಿಯಮಿತ ಉಳಿತಾಯ: ಆರ್‌ಡಿ ನಿಮಗೆ ನಿಯಮಿತವಾಗಿ ಸಾಮಾನ್ಯವಾಗಿ ಮಾಸಿಕವಾಗಿ ನಿಗದಿತ ಮೊತ್ತವನ್ನು ಉಳಿಸಲು ಅನುವು ಮಾಡಿಕೊಡುತ್ತದೆ.
  • ಫ್ಲೆಕ್ಸಿಬಲ್ ಡೆಪಾಸಿಟ್ ಮೊತ್ತ: ನೀವು ಪ್ರತಿ ತಿಂಗಳು ಠೇವಣಿ ಮಾಡಬೇಕಾದ ಮೊತ್ತವನ್ನು ಆಯ್ಕೆ ಮಾಡಬಹುದು.
  • ಸ್ಥಿರ ಬಡ್ಡಿದರ: ಎಫ್‌ಡಿಯಂತೆಯೇ ಆರ್‌ಡಿ ಕೂಡ ಇಡೀ ಅವಧಿಗೆ ಸ್ಥಿರ ಬಡ್ಡಿದರವನ್ನು ನೀಡುತ್ತದೆ.
  • ನಿಗದಿತ ಅವಧಿ: ಆರ್‌ಡಿ ನಿಗದಿತ ಅವಧಿಯನ್ನು ಹೊಂದಿರುತ್ತದೆ. ಮೆಚ್ಯೂರಿಟಿ ಮೊತ್ತವನ್ನು ಮೊದಲೇ ನಿರ್ಧರಿಸಲಾಗುತ್ತದೆ.
  • ಹೆಚ್ಚಿನ ದ್ರವ್ಯತೆ: ಎಫ್‌ಡಿಗೆ ಹೋಲಿಸಿದರೆ ಆರ್‌ಡಿ ಉತ್ತಮ ದ್ರವ್ಯತೆಯನ್ನು ನೀಡುತ್ತವೆ. ನೀವು ಸಂಗ್ರಹಿಸಿಟ್ಟ ಮೊತ್ತವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದು ಅಥವಾ ತುರ್ತು ಸಂದರ್ಭಗಳಲ್ಲಿ ಅದರ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು.

ಯಾವುದು ಉತ್ತಮ?

ಮೊದಲೇ ಹೇಳಿದಂತೆ ಎಫ್‌ಡಿ ಮತ್ತು ಆರ್‌ಡಿ ಎರಡೂ ಉತ್ತಮ ಉಳಿತಾಯ ಯೋಜನೆ ಎನಿಸಿಕೊಂಡಿದೆ. ಎಫ್‌ಡಿಯಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತವನ್ನು ಹೊಂದಿರಬೇಕಾಗುತ್ತದೆ. ಆದರೆ ಮಾಸಿಕ ಆದಾಯದಿಂದ ಸಣ್ಣ ಭಾಗವನ್ನು ಹೂಡಿಕೆ ಮಾಡುವವರಿಗೆ ಆರ್‌ಡಿ ಉತ್ತಮ. ಆರ್‌ಡಿ ಮತ್ತು ಎಫ್‌ಡಿ ಎರಡೂ ಕಡಿಮೆ ತೆರಿಗೆ ಸ್ಲ್ಯಾಬ್‌ನಲ್ಲಿರುವ ರಿಸ್ಕ್‌ಗಳನ್ನು ತೆಗೆದುಕೊಳ್ಳದ ಹೂಡಿಕೆದಾರರಿಗೆ ಹೆಚ್ಚು ಸೂಕ್ತವಾಗಿವೆ. ನಿಮಗೆ ಯಾವುದು ಉತ್ತಮ ಎಂಬುದು ನಿಮ್ಮ ಆರ್ಥಿಕ ಗುರಿಗಳು ಮತ್ತು ಆದ್ಯತೆಗಳನ್ನು ಅವಲಂಬಿಸಿರುತ್ತದೆ. ನೀವು ಹೂಡಿಕೆ ಮಾಡಲು ದೊಡ್ಡ ಮೊತ್ತವನ್ನು ಹೊಂದಿದ್ದರೆ ಮತ್ತು ದ್ರವ್ಯತೆ ಅಗತ್ಯವಿಲ್ಲದಿದ್ದರೆ ಎಫ್‌ಡಿ ಸೂಕ್ತವಾಗಬಹುದು. ಮತ್ತೊಂದೆಡೆ ನೀವು ನಿಯಮಿತವಾಗಿ ಉಳಿತಾಯ ಮಾಡಲು ಮತ್ತು ದ್ರವ್ಯತೆಗೆ ಆದ್ಯತೆ ನೀಡಲು ಬಯಸಿದರೆ ಆರ್‌ಡಿ ಉತ್ತಮ ಆಯ್ಕೆಯಾಗಿದೆ. ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನಿರ್ಣಯಿಸುವುದು ಮತ್ತು ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading
Advertisement
EPF Withdrawal Rule
ಮನಿ ಗೈಡ್10 mins ago

EPF Withdraw Rule: ಪಿಎಫ್‌ ಮುಂಗಡ ಹಣ ಪಡೆಯುವುದು ಈಗ ಮತ್ತಷ್ಟು ಸುಲಭ; ಹೊಸ ಬದಲಾವಣೆಯ ಸಂಪೂರ್ಣ ಮಾಹಿತಿ

IND vs AUS Test
ಕ್ರೀಡೆ26 mins ago

IND vs AUS Test: ಈ ಬಾರಿಯ ಬಾರ್ಡರ್– ಗಾವಸ್ಕರ್ ಟೆಸ್ಟ್​ ಸರಣಿಯಲ್ಲಿ ಭಾರತೀಯರಿಗೆ ಸಿಗಲಿದೆ ವಿಶೇಷ ಆಸನ ವ್ಯವಸ್ಥೆ

Karnataka Weather
ಕರ್ನಾಟಕ35 mins ago

Karnataka Weather: ಇಂದು, ನಾಳೆ ಗುಡುಗು, ಮಿಂಚು ಸಹಿತ ಭಾರಿ ಮಳೆ; ಉತ್ತರ ಒಳನಾಡಿನಲ್ಲಿ ಆರೆಂಜ್ ಅಲರ್ಟ್

Amit Shah
ದೇಶ51 mins ago

Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

Prajwal Revanna Case Will SIT team go abroad for arrest Prajwal
ಕ್ರೈಂ56 mins ago

Prajwal Revanna Case: ವಿದೇಶದಿಂದ ಬಾರದ ಪ್ರಜ್ವಲ್‌; ಜರ್ಮನಿಗೆ ಹೋಗುತ್ತಾ ಎಸ್‌ಐಟಿ ಟೀಂ? ಮುಂದಿನ ಆಯ್ಕೆ ಏನು?

Rajkummar Rao
ಸಿನಿಮಾ59 mins ago

Rajkummar Rao: ಮುಂಬಯಿಗೆ ಬಂದು ಶಾರುಕ್‌ ಮನೆ ಮುಂದೆ ದಿನವಿಡೀ ಕಾದಿದ್ದರಂತೆ ನಟ ರಾಜ್‌ಕುಮಾರ್ ರಾವ್‌!

North East Graduate Constituency Election Congress party leaders and workers Meeting in Yadgiri
ರಾಜಕೀಯ1 hour ago

MLC Election: ಪರಿಷತ್ ಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಕಾರ್ಯಕರ್ತರಿಗೆ ದರ್ಶನಾಪುರ ಮನವಿ

T20 World Cup 2024
ಕ್ರೀಡೆ1 hour ago

T20 World Cup 2024: ಭಾರತ ಕೇವಲ ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದೆ; ಕಾರಣ ಏನು?

MLC Election
ಕರ್ನಾಟಕ1 hour ago

MLC Election: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಫೈನಲ್‌; ಬಂಡಾಯವಾಗಿ ಬಿಜೆಪಿ ಅಭ್ಯರ್ಥಿ ನಾಮಪತ್ರ

CAA
EXPLAINER1 hour ago

CAA: ಸಿಎಎ ಅನ್ವಯ 14 ಜನಕ್ಕೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ11 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ14 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ24 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌