Spandana Vijay Raghavendra: ಸ್ಪಂದನಾ ಬಗ್ಗೆ ಅಪ್ರಪಚಾರ ಮಾಡಬೇಡಿ ಎಂದ ಮೇಘನಾ ರಾಜ್‌! - Vistara News

South Cinema

Spandana Vijay Raghavendra: ಸ್ಪಂದನಾ ಬಗ್ಗೆ ಅಪ್ರಪಚಾರ ಮಾಡಬೇಡಿ ಎಂದ ಮೇಘನಾ ರಾಜ್‌!

Spandana Vijay Raghavendra: ಶೋಕಸಾಗರದಲ್ಲಿ ಚಿನ್ನಾರಿಮುತ್ತ ಕುಟುಂಬಕ್ಕೆ ಧೈರ್ಯ ಹೇಳಲು ಸಾರ್ವಜನಿಕರು ಕೂಡ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೀಗ ನಟಿ ಮೇಘನಾ ರಾಜ್‌ ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

VISTARANEWS.COM


on

Vijay Raghavendra meghanaraj
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಪಂದನಾ ವಿಜಯ್‌ ರಾಘವೇಂದ್ರ (Spandana Vijay Raghavendra) ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಚಿತ್ರರಂಗದ ಇನ್ನಷ್ಟು ಗಣ್ಯರು, ಸ್ಪಂದನಾ ಕುಟುಂಬ ಬಳಗದವರು ಹಾಗೂ ಸ್ನೇಹಿತರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಶೋಕ ಸಾಗರದಲ್ಲಿ ಚಿನ್ನಾರಿ ಮುತ್ತ ಕುಟುಂಬಕ್ಕೆ ಧೈರ್ಯ ಹೇಳಲು ಸಾರ್ವಜನಿಕರು ಕೂಡ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೀಗ ನಟಿ ಮೇಘನಾ ರಾಜ್‌ ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಮಾಧ್ಯಮದ ಮುಂದೆ ನಟಿ ಮಾತನಾಡಿ ʻರಾಘು- ಸ್ಪಂದನಾ ನನ್ನ ಫಾಮಿಲಿ ಇದ್ದಂತೆ. ಅವರೂ ನಮ್ಮ ಕುಟುಂಬವೇ. ನನ್ನ ಕುಟುಂಬಕ್ಕೆ ಆಗಿರುವ ನೋವಿದು. ರಾಘು-ಸ್ಪಂದನಾ ನಮಗೆ ಬಹಳ ಆತ್ಮೀಯರಾಗಿದ್ದರು. ಏನು ನಡೆದಿದೆ, ಏನು ಆಗಿದೆ ಎನ್ನುವುದು ಅವರ ಕುಟುಂಬಕ್ಕೆ ತಿಳಿದಿರುತ್ತದೆ. ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ. ಆಕೆಗೆ ಮರ್ಯಾದೆ ಕೊಡಿ. ಸೋಷಿಯಲ್ ಮೀಡಿಯಾದಲ್ಲಿ ಇಲ್ಲದೇ ಇರುವ ಸುದ್ದಿಗಳನ್ನು ಹರಡಬೇಡಿ. ಅವರ ಕುಟುಂಬಕ್ಕೆ ಸ್ಪೆಸ್ ಕೊಡಿ .ರಾಘು- ಸ್ಪಂದನಾ ಅನ್ಯೋನ್ಯವಾಗಿ ಬದುಕುತ್ತಿದ್ದರುʼʼ ಎಂದರು.

ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಧ್ರುವ ಸರ್ಜಾ ಕೂಡ ಆಗಮಿಸಿದ್ದಾರೆ. ನಟಿ ರಕ್ಷಿತಾ, ಪ್ರೇಮ್ ದಂಪತಿ ಆಗಮಿಸಿ ಪ್ರೀತಿಯ ರಾಘುಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ: Spandana Vijay Raghavendra: ಹೋದವರು ಹೊರಟು ಹೋಗ್ತಾರೆ, ಇರೋರ ಕಷ್ಟ ನೋಡಿ! ಎಂದು ರಾಘಣ್ಣ ಭಾವುಕ

ಭಾವುಕರಾದ ಬಿ.ಕೆ ಹರಿಪ್ರಸಾದ್

ಸ್ಪಂದನಾ ಅಂತ್ಯಕ್ರಿಯೆ ಬಗ್ಗೆ ವಿವರ ನೀಡುತ್ತಾ ಬಿ.ಕೆ ಹರಿಪ್ರಸಾದ್ ಭಾವುಕರಾದರು. ʼಸ್ಪಂದನಾ ಅವರ ಪಾರ್ಥಿವ ಶರೀರ 2 ಗಂಟೆ ತನಕ ಇಲ್ಲೇ ಇರುತ್ತದೆ. ಅಂತಿಮ ಯಾತ್ರೆ 2 ಗಂಟೆಗೆ ಆರಂಭ ಮಾಡುತ್ತೇವೆ. ಅವರ ಅಂತ್ಯಕ್ರಿಯೆಯನ್ನು ಹರಿಶ್ಚಂದ್ರ ಘಾಟ್‌ನಲ್ಲಿ 2.30ರಿಂದ 3.30ರ ಒಳಗೆ ಮಾಡುತ್ತೇವೆʼ ಎಂದು ಹರಿಪ್ರಸಾದ್‌ ನುಡಿದರು.

ರಂಗಾಯಣ ರಘು ಈ ಬಗ್ಗೆ ಮಾತನಾಡಿ ʻʻಚಿತ್ರರಂಗದಲ್ಲಿ ಕಣ್ಣೀರು ಜಾಸ್ತಿ ಆಗುತ್ತಿದೆ. ಈ ನೋವಿನ ಮೆರವಣಿಗೆ ಯಾರಿಗೇ ಆಗಲಿ ಹಿಂಸೆಯಾಗುತ್ತದೆ. ರಾಘು ಅಂತೂ ಹಸುಗೂಸು. ಭಗವಂತನಲ್ಲಿ ಸಾಕು ಮಾಡಪ್ಪ ಎಂದು ಕೇಳಬಹುದು. ರಾಜ್‌ ಕುಟುಂಬಕ್ಕೆ ಸಾಕಷ್ಟು ಪರೀಕ್ಷೆ ಬಂದೋಯ್ತುʼʼ ಎಂದು ಭಾವುಕರಾದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Vinay Guruji: ಬೈಕೊಂಡು ವಿನಯ್ ಗುರೂಜಿ ಆಶ್ರಮಕ್ಕೆ ಹೋಗಿದ್ದೆ ಆದರೆ ನನ್ನ ಅಷ್ಟೂ ಜಾತಕ ಬಿಚ್ಚಿಟ್ರು ಎಂದ ಮಾಸ್ಟರ್ ಆನಂದ್ ಸಹೋದರ!

Vinay Guruji: ದೇವರನ್ನು ನಂಬುವುದು ಕಷ್ಟ ಎನ್ನುವ ಸಮಯದಲ್ಲಿ ದೇವ ಮನುಷ್ಯರನ್ನು ಹೇಗೆ ನಂಬಲಿ ಎಂದು ಪದೇ ಪದೇ ಹೇಳುತ್ತಿದ್ದ ಅರುಣ್ ಹರಿಹರನ್‌ ವಿನಯ್ ಗುರೂಜಿ (Vinay Guruji) ಅವರನ್ನು ಭೇಟಿ ಮಾಡಿದ ಕ್ಷಣವನ್ನು ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Vinay Guruji met by master anand brother
Koo

ಬೆಂಗಳೂರು: ಮಾಸ್ಟರ್ ಆನಂದ್ ಸಹೋದರ ಮಾಸ್ಟರ್ ಅರುಣ್ ಹರಿಹರನ್ (Arun Hariharan) ಕೂಡ ನಿರ್ದೇಶಕದಲ್ಲಿ ಬ್ಯುಸಿಯಾಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ಇದೀಗ ‘Huu ಅಂತೀಯಾ…Uhuu ಅಂತೀಯಾ’ ಎಂಬ ಹೊಸ ಬಗೆಯ ವಿನೂತನ ಗೇಮ್ ಶೋ ನಿರೂಪಕ ಕೂಡ ಆಗಿದ್ದಾರೆ. ದೇವರನ್ನು ನಂಬುವುದು ಕಷ್ಟ ಎನ್ನುವ ಸಮಯದಲ್ಲಿ ದೇವ ಮನುಷ್ಯರನ್ನು ಹೇಗೆ ನಂಬಲಿ ಎಂದು ಪದೇ ಪದೇ ಹೇಳುತ್ತಿದ್ದ ಅರುಣ್ ಹರಿಹರನ್‌ ವಿನಯ್ ಗುರೂಜಿ (Vinay Guruji) ಅವರನ್ನು ಭೇಟಿ ಮಾಡಿದ ಕ್ಷಣವನ್ನು ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ.

ಅರುಣ್ ಹರಿಹರನ್ ಮಾತನಾಡಿ ʻʻನಾನು ದೇವರನ್ನ ನಂಬಲ್ಲ. ಇನ್ನೂ ದೇವ ಮಾನವನ್ನು ನಂಬಲು ಹೇಗೆ ಸಾಧ್ಯ? ಆದರೆ ನಮ್ಮ ಅಣ್ಣ ಬಾ ಎಂದು ಹೇಳಿದ ಅಂತ ವಿನಯ್ ಗುರೂಜೀ ಅವರನ್ನು ಭೇಟಿ ಮಾಡಲು ಹೋದೆ. ಅಲ್ಲಿ ಹೋದಾಗ ನಾವು ಹೋಗುತ್ತಿದ್ದಂತೆ ಗೇಟ್‌ ಬಳಿ ನಿಂತಿದ್ದರು ‘ಬನ್ನಿ ಬನ್ನಿ ನಿಮಗಾಗಿ ಕಾಯುತ್ತಿದ್ದೆ’ ಅಂತ ಹೇಳಿದರು. ಆನಂತ್ ಸಂಪೂರ್ಣ ವ್ಯವಸ್ಥೆ ಮಾಡಿದ್ದಾನೆ ಅಂದುಕೊಂಡು ಸುಮ್ಮನಾದೆʼʼಎಂದು ಮಾತು ಮುಂದುವರಿಸಿದರು.

ʻʻಗುರೂಜಿ ಫುಲ್‌ ಶಾರ್ಟ್ಸ್‌ ಹಾಕ್ಕೊಂಡು ಕೂತಿದ್ದಾರೆ. ನಾನು ಮಾಮೂಲಿ ಖಾವಿನೋ ಅಥವಾ ಬಿಳಿ ಬಣ್ಣದ ಉಡುಪನ್ನೋ ಧರಿಸುತ್ತಾರೆ ಅಂದುಕೊಂಡಿದ್ದೆ. ಆದರೆ ನೋಡುವಾಗ ಅವರು ಹಾಗೆ ಕಂಡಿಲ್ಲ. ನಮ್ಮ ಅಣ್ಣ ಕರೆದುಕೊಂಡು ಬಂದ ಮಕ್ಕರ್‌ ಮಾಡಿದ ಎಂದು ಅಂದುಕೊಂಡಿದ್ದೆ. ಇಡೀ ಟೀಂ ನೋಡಿ ನಿಮಗೆ ಕಾಯುತ್ತಿದ್ದೆ ಎಂದರು. ಗುರೂಜಿ ಅವರು ಊಟ ಬಡಿಸುತ್ತಿದ್ದರು. ಬಜ್ಜಿ ಬಡಿಸುವಾಗ ಇದರಷ್ಟೇ ಖಾರ ಇದ್ಯಲ್ಲ ನೀನು? ಎಂದು ಕೇಳಿದ್ದರು. ಎಷ್ಟು ಬೈಕ್ಕೊಂಡೆ ಅಲ್ವಾ? ಎಂದರು ನಾನು ಅಣ್ಣನೇ ನನ್ನ ಬಗ್ಗೆ ಅವರಿಗೆ ಇದೆಲ್ಲ ಹೇಳಿರಬೇಕು ಎಂದು ಅಂದುಕೊಂಡೆ. ನಮ್ಮ ಡಿಒಪಿ ಮೊಬೈಲ್‌ ಒಡೆದಿದ್ದೂ ಹೇಳಿದ್ದರು. ಮನೆ ಕೂಡ ಬೇಗ ಆಗುತ್ತೆ ಎಂದೂ ಹೇಳುತ್ತಾರೆ. ಇಷ್ಟೆಲ್ಲ ಹೇಳಿದಾಗ ಅಣ್ಣನೇ ಎಲ್ಲವೂ ಹೇಳಿರುತ್ತಾರೆ ಅಂದುಕೊಂಡೆʼʼಎಂದರು.

ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?

ʻʻನಾನು ಆಗಷ್ಟೇ ಮದುವೆಯಾಗಿದ್ದೆ. ಆಗ ನನ್ನ ಹಳೆ ಪರಚಿಕೊಂಡ ಗಾಯದ ಬಗ್ಗೆ ಹೇಳಿಬಿಟ್ಟರು. ಹೆಂಗಿದ್ದಾಳೋ ಅವಳು ಅಂದುಬಿಟ್ಟರು. ಕಾಲು ಕೈ ಎಲ್ಲಾ ತಣ್ಣಗಾಯ್ತು. ಅಣ್ಣ ಇಷ್ಟೋಂದು ಹೇಳಿದ್ದಾನ ಯಾವ ಹುಡುಗಿ ಹೆಸರು ಹೇಳಿರಬಹುದು ಅಂತ ಯೋಚನೆ ಮಾಡುತ್ತಿದ್ದೆ. ಮತ್ತೊಂದು ರೌಂಡ್‌ ಬಂದರು ಲಿಸ್ಟ್ ತೆಗೆದು ಯೋಚನೆ ಮಾಡುತ್ತಿದ್ದೀಯಾ ಅಂದ್ರು. ಆ ಕ್ಷಣಕ್ಕೆ ನಾನು ಅವರಿಗೆ ಏನೋ ಪವರ್ ಇದೆ ಎಂದು ಅವರಿಗೆ ಸರೆಂಡರ್ ಆಗಿಬಿಟ್ಟೆ. ತುಂಬಾ ಫ್ರೆಂಡ್ಲಿಯಾಗಿ ಮಾತನಾಡಿಸುತ್ತಾರೆ ಯಾರು ಏನೇ ಕೊಟ್ಟರೂ ನಮಗೆ ಕೊಡುತ್ತಿದ್ದರು’ ಎಂದಿದ್ದಾರೆ ಅರುಣ್.

Continue Reading

ಟಾಲಿವುಡ್

Actor Chiranjeevi: ಸೆಲ್ಫಿ ತೆಗೆದುಕೊಳ್ಳಲು ಬಂದ ಇಂಡಿಗೋ ವಿಮಾನ ಸಿಬ್ಬಂದಿಯನ್ನು ತಳ್ಳಿದ ನಟ ಚಿರಂಜೀವಿ; ನೆಟ್ಟಿಗರಿಂದ ತರಾಟೆ!

Megastar Chiranjeevi: ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ವಿಮಾನ ನಿಲ್ದಾಣದಲ್ಲಿ ಲಿಫ್ಟ್‌ನಿಂದ ಹೊರಬರುತ್ತಾರೆ. ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಚಿರಂಜೀವಿ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕೆಂದು ಬರುತ್ತಾರೆ. ಆಗ ನಟ ಚಿರಂಜೀವಿ ಅವರು ಪೋಸ್‌ ನೀಡದೆ, ಅಭಿಮಾನಿಯನ್ನು ತಳ್ಳಿ ಮುಂದೆ ಹೋಗುತ್ತಾರೆ.

VISTARANEWS.COM


on

Actor Chiranjeevi gets flak for ‘rudely’ pushing IndiGo employee
Koo

ಬೆಂಗಳೂರು: ನಾಗಾರ್ಜುನ ಮತ್ತು ಧನುಷ್ ಬಳಿಕ ವಿಮಾನ ನಿಲ್ದಾಣದಲ್ಲಿ ನಟ ಚಿರಂಜೀವಿ (Actor Chiranjeevi) ಅವರು ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ತಳ್ಳಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಇದೀಗ ನಟನ ಈ ನಡವಳಿಕೆ ಬಗ್ಗೆ ನೆಟ್ಟಿಗರು ಕಮೆಂಟ್‌ ಮೂಲಕ ಕ್ಲಾಸ್‌ ತೆಗೆದುಕೊಂಡಿದ್ದಾರೆ. ವಿಡಿಯೊ ಕೂಡ ಭಾರಿ ವೈರಲ್‌ ಆಗುತ್ತಿದೆ.

ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ವಿಮಾನ ನಿಲ್ದಾಣದಲ್ಲಿ ಲಿಫ್ಟ್‌ನಿಂದ ಹೊರಬರುತ್ತಾರೆ. ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಚಿರಂಜೀವಿ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕೆಂದು ಬರುತ್ತಾರೆ. ಆಗ ನಟ ಚಿರಂಜೀವಿ ಅವರು ಪೋಸ್‌ ನೀಡದೆ, ಅಭಿಮಾನಿಯನ್ನು ತಳ್ಳಿ ಮುಂದೆ ಹೋಗುತ್ತಾರೆ.

ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ” ವಿಮಾನ ನಿಲ್ದಾಣದಲ್ಲಿ ಚಿರಂಜೀವಿ ಅಸಭ್ಯ ವರ್ತನೆ” ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರನ್ನು ನಟನನ್ನು ಸಮರ್ಥಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳನ್ನು ನಿರ್ಲಕ್ಷಿಸಿರುವುದು, ತಳ್ಳಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ನಾಗಾರ್ಜುನ ವಿಚಾರದಲ್ಲಿಯೂ ಇದೇ ಆಯ್ತು. ತಳ್ಳಿದ ವೀಡಿಯೊ ವೈರಲ್ ಆಗಿತ್ತು. ಬಳಿಕ ನಟ ನಾಗಾರ್ಜುನ (Actor Nagarjuna) ಅವರು ತಮ್ಮ ಬಾಡಿಗಾರ್ಡ್‌ ವಿಶೇಷ ಚೇತನ ಅಭಿಮಾನಿಯನ್ನು ತಳ್ಳಿದ ಹಿನ್ನೆಲೆಯಲ್ಲಿ ಸೋಷಿಯಲ್‌ ಮೀಡಿಯಾ ಮೂಲಕ ಕ್ಷಮೆಯಾಚಿಸಿದ್ದರು.

ಚಿರಂಜೀವಿ ಶೀಘ್ರದಲ್ಲೇ ಮಲ್ಲಾಡಿ ವಸಿಷ್ಠ ಅವರ ʻವಿಶ್ವಂಭರʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅಲ್ಲಿ ತ್ರಿಶಾ ಕೃಷ್ಣನ್ ಸಹನಟಿಯಾಗಲಿದ್ದಾರೆ. ಅವರು ಇತ್ತೀಚೆಗೆ ರಾಮ್ ಚರಣ್, ಉಪಾಸನಾ, ಕ್ಲಿನ್ ಕಾರಾ ಮತ್ತು ಸುರೇಖಾ ಅವರೊಂದಿಗೆ ಪ್ಯಾರಿಸ್‌ನಲ್ಲಿ 2024 ರ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ‘ವಿಶ್ವಂಭರ’ ಸಿನಿಮಾಗೆ ತ್ರಿಷಾ ನಾಯಕಿ!

ವಿಶ್ವಂಭರ’ ಸಿನಿಮಾದ ಮೊದಲ ಶೆಡ್ಯೂಲ್ ಇತ್ತೀಚೆಗಷ್ಟೇ ಆರಂಭವಾಗಿದ್ದು, ಶೂಟಿಂಗ್‌ ಭರದಿಂದ ಸಾಗುತ್ತಿದೆ ಎನ್ನಲಾಗಿದೆ.ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ ಜತೆ ತ್ರಿಶಾ ತೆರೆ ಹಂಚಿಕೊಳ್ಳಬೇಕಿತ್ತು. ಆದರೆ, ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಅವರು ಚಿತ್ರದಿಂದ ಹೊರಗುಳಿದರು. ತ್ರಿಶಾ ಅವರು ಚಿರಂಜೀವಿ ಅವರಿಗೆ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. 18 ವರ್ಷಗಳ ನಂತರ ಮೆಗಾಸ್ಟಾರ್ ಅವರೊಂದಿಗೆ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಮಲ್ಲಿಡಿ ವಸಿಷ್ಠ ಅವರು ಬರೆದು ನಿರ್ದೇಶಿಸಿದ ‘ವಿಶ್ವಂಭರ’ ಒಂದು ಸೋಷಿಯೋ-ಫ್ಯಾಂಟಸಿ ಚಿತ್ರವಾಗಿದ್ದು, ಚಿರಂಜೀವಿ ಮುಖ್ಯ ಪಾತ್ರದಲ್ಲಿದ್ದಾರೆ. ವರದಿಗಳ ಪ್ರಕಾರ, ‘ವಿಶ್ವಂಭರ’ ಚಿತ್ರವನ್ನು ಯುವಿ ಕ್ರಿಯೇಷನ್ಸ್‌ 250 ಕೋಟಿ ರೂಪಾಯಿಗೂ ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಿದೆ ಎನ್ನಲಾಗಿದೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆದರೆ, ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಚೋಟಾ ಕೆ ನಾಯ್ಡು ಛಾಯಾಗ್ರಹಣ ಸಿನಿಮಾಕ್ಕಿದೆ.

ಸಿನಿಮಾಗಾಗಿ ಚಿರಂಜೀವಿ ಅವರು ಸಖತ್‌ ವರ್ಕೌಟ್‌ ಮಾಡುತ್ತಿದ್ದಾರೆ. 2023ರಲ್ಲಿ `ಭೋಲಾ ಶಂಕರ’ ಸಿನಿಮಾ ರಿಲೀಸ್‌ ಆಗಿತ್ತು. ಆದರೆ ಸಿನಿಮಾ ಗಳಿಕೆ ಕಂಡಿರಲಿಲ್ಲ. ಇದೀಗ ವಿಶಿಷ್ಟ ಪಾತ್ರದ ಮೂಲಕ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಚಿರಂಜೀವಿ ಅವರನ್ನು ಹೊರತುಪಡಿಸಿ ಉಳಿದ ಪಾತ್ರಗಳಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬುದು ಚಿತ್ರತಂಡ ಮಾಹಿತಿ ಹಂಚಿಕೊಂಡಿಲ್ಲ. ಇದಲ್ಲದೇ ಚಿರಂಜೀವಿ ಅವರು ಬೋಯಪತಿ ಶ್ರೀನು ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲೂ ಚಿರಂಜೀವಿ ನಟಿಸುತ್ತಿದ್ದಾರೆ.

Continue Reading

ಟಾಲಿವುಡ್

Vanitha Vijaykumar: 43 ವರ್ಷದ ನಟಿ ವನಿತಾ ವಿಜಯಕುಮಾರ್ 4ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು?

Vanitha Vijaykumar: ನಟಿ ಈ ಹಿಂದೆ ಮೂರು ಬಾರಿ ಮದುವೆಯಾಗಿದ್ದು, ಮೂರು ಮಕ್ಕಳ ತಾಯಿಯಾಗಿದ್ದಾರೆ. ಈ ಸುದ್ದಿಗೆ ಸಂಬಂಧಿಸಿದಂತೆ ವನಿತಾ ಅವರು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಮದುವೆ ಬಗ್ಗೆ ಪ್ರಶ್ನೆ ಕೇಳಿರುವ ಅಭಿಮಾನಿಯೊಬ್ಬರಿಗೆ, “ಒಂದು ಅನಿರೀಕ್ಷಿತ ತಿರುವಿಗಾಗಿ ಕಾಯಿರಿ” ಎಂದು ವನಿತಾ ಉತ್ತರಿಸಿದ್ದಾರಂತೆ!

VISTARANEWS.COM


on

Vanitha Vijaykumar Set To Tie The Knot Again
Koo

ಬೆಂಗಳೂರು: ವನಿತಾ ವಿಜಯಕುಮಾರ್ (Vanitha Vijaykumar) ತಮಿಳಿನ ಜನಪ್ರಿಯ ಹಿರಿಯ ನಟ ವಿಜಯಕುಮಾರ್ ಅವರ ಪುತ್ರಿ. ಅಷ್ಟೇ ಅಲ್ಲದೇ ಇತ್ತೀಚೆಗೆ ನರೇಶ್‌-ಪವಿತ್ರಾ ಲೋಕೇಶ್‌ ಅಭಿನಯ ಮತ್ತೆ ಮದುವೆ ಸಿನಿಮಾದಲ್ಲಿ ರಮ್ಯಾ ಅವರ ಪಾತ್ರ ನಿಭಾಯಿಸಿರುವ ನಟಿ. ವನಿತಾ ವಿಜಜ್‌ಕುಮಾರ್ ಹಲವು ಸಿನಿಮಾಗಳಿಗೆ ನಾಯಕಿಯಾಗಿಯೂ ಕಾಣಿಸಿಕೊಂಡಿದ್ದರು. ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು.ಆದರೆ ನಟನೆಗಿಂತ ಹೆಚ್ಚು ವಿವಾದಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ ವನಿತಾ ವಿಜಯಕುಮಾರ್ ಅವರು ನಾಲ್ಕನೇ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ನಟಿ ಈ ಹಿಂದೆ ಮೂರು ಬಾರಿ ಮದುವೆಯಾಗಿದ್ದು, ಮೂರು ಮಕ್ಕಳ ತಾಯಿಯಾಗಿದ್ದಾರೆ. ಈ ಸುದ್ದಿಗೆ ಸಂಬಂಧಿಸಿದಂತೆ ವನಿತಾ ಅವರು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಮದುವೆ ಬಗ್ಗೆ ಪ್ರಶ್ನೆ ಕೇಳಿರುವ ಅಭಿಮಾನಿಯೊಬ್ಬರಿಗೆ, “ಒಂದು ಅನಿರೀಕ್ಷಿತ ತಿರುವಿಗಾಗಿ ಕಾಯಿರಿ” ಎಂದು ವನಿತಾ ಉತ್ತರಿಸಿದ್ದಾರಂತೆ!

ಎರಡೂ ಮದುವೆಗಳು ಅಂತ್ಯ!

ಒಮ್ಮೆ ನೃತ್ಯ ನಿರ್ದೇಶಕ ರಾಬರ್ಟ್ ಮಾಸ್ಟರ್ ಜತೆ ಪ್ರೀತಿಯಲ್ಲಿದ್ದರು. ಆದರೆ, ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರೂ ತಮ್ಮ ಸಂಬಂಧವನ್ನು ಜಗಳದಲ್ಲಿಯೇ ಅಂತ್ಯಗೊಳಿಸುತ್ತಾರೆ. ಬಳಿಕ ಪೀಟರ್ ಪೌಲ್‌ ಜತೆ ವಿವಾಹವಾದರೂ, ಅದು ಕೂಡ ಬೇಗನೇ ಕೊನೆ ಆಯ್ತು. ಪೀಟರ್ (vanitha vijayakumar husband peter paul) ಮದುವೆಯನ್ನು ಮೊದಲ ಪತ್ನಿ ತೀವ್ರ ವಿರೋಧಿಸಿದ್ದರು. ವನಿತಾ ಜತೆ ಮದುವೆಯಾಗಿದ್ದೇ ಗೊತ್ತಿಲ್ಲ ಎಂದು ಮೊದಲ ಪತ್ನಿ ಬೀದಿ ರಂಪ ಮಾಡಿದ್ದರು.

ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು

ವನಿತಾ ವಿಜಯಕುಮಾರ್ ತನ್ನ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ತಂದೆ ವಿಜಯಕುಮಾರ್ ಮತ್ತು ಆಕೆಯ ಸಹೋದರ ಅರುಣ್ ವಿಜಯ್ ಈ ನಟನಿಂದ ದೂರವೇ ಉಳಿಸಿದ್ದಾರೆ.

2000ರಲ್ಲಿ, ವನಿತಾ ವಿಜಯ್‌ಕುಮಾರ್ ಅವರು ನಟ ಆಕಾಶ್ ಅವರೊಂದಿಗೆ ಮದುವೆಯಾದರು. ಈ ದಂಪತಿಗೆ ಮಗ ಕೂಡ ಇದ್ದ. ಆದರೆ 2005ರಲ್ಲಿ ವಿಚ್ಛೇದನ ಪಡೆದು ಆಕಾಶ್ ಅವರಿಂದ ದೂರವಾದರು. ನಂತರ 2007ರಲ್ಲಿ ಉದ್ಯಮಿ ಆನಂದ್ ಜಯ್ ರಾಮನ್ ಎಂಬುವವರ ಜೊತೆಗೆ ವನಿತಾ ಎರಡನೇ ಮದುವೆಯಾದರು. ಆದರೆ 2012ರಲ್ಲಿ ಅವರೊಂದಿಗೂ ಹೊಂದಾಣಿಕೆ ಕೊರತೆಯಿಂದ ದಾಂಪತ್ಯಕ್ಕೆ ಕೊನೆ ಹಾಡಿದರು. ಬಳಿಕ 2020ರಲ್ಲಿ ಫೋಟೋಗ್ರಾಫರ್ ಪೀಟರ್ ಪೌಲ್‌ ಮದುವೆಯಾದರು. ಆದರೆ ನಾಲ್ಕೇ ತಿಂಗಳಲ್ಲಿ ಈ ಮದುವೆ ಕೂಡ ಮುರಿದುಬಿತ್ತು.

ತ್ಯಾಗರಾಜನ್ ನಿರ್ದೇಶನದಲ್ಲಿ ತಯಾರಾದ ಅಂದಗನ್ ಎಂಬ ತಮಿಳು ಚಿತ್ರದಲ್ಲಿ ವನಿತಾ ನಟಿಸುತ್ತಿದ್ದಾರೆ. ಇದರಲ್ಲಿ ಪ್ರಶಾಂತ್ ನಾಯಕನಾಗಿ ಸಿಮ್ರಾನ್, ಪ್ರಿಯಾ ಆನಂದ್, ಕಾರ್ತಿಕ್ ಮತ್ತು ಸಮುದ್ರಕನಿ ನಟಿಸಿದ್ದಾರೆ. ಈ ಚಿತ್ರವನ್ನು ಸ್ಟಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಶಾಂತಿ ತ್ಯಾಗರಾಜನ್ ಮತ್ತು ಪ್ರೀತಿ ತ್ಯಾಗರಾಜನ್ ನಿರ್ಮಿಸಿದ್ದಾರೆ.

Continue Reading

ಟಾಲಿವುಡ್

Ram Pothineni: ಗುರುವಿಗೆ ತಿರುಮಂತ್ರ ಹಾಕಿದ ಶಿಷ್ಯ; ನಟನ ಅನ್​ಫಾಲೋ ಮಾಡಿದ ಖ್ಯಾತ ನಟಿ!

Ram Pothineni: ‘ಡಬಲ್ ಇಸ್ಮಾರ್ಟ್” ಮತ್ತು ”ಮಿಸ್ಟರ್ ಬಚ್ಚನ್” ತಂಡದ ನಡುವೆ ಶೀತಲ ಸಮರ ಆರಂಭವಾಗಿದೆ.ಇತ್ತೀಚಿನ ಸಂದರ್ಶನವೊಂದರಲ್ಲಿ, ಬಚ್ಚನ್ ನಿರ್ದೇಶಕ ಹರೀಶ್ ಶಂಕರ್ ಅವರು ಪರಿಸ್ಥಿತಿಯನ್ನು ತಿಳಿಸಿದರು. ಅನಿವಾರ್ಯ ಕಾರಣಗಳಿಂದ ಅದೇ ದಿನಾಂಕದಂದು ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆಯೇ ಹೊರತು ವೈಯಕ್ತಿಕ ದ್ವೇಷದಿಂದಲ್ಲ ಎಂದು ಸ್ಪಷ್ಟಪಡಿಸಿದರು.

VISTARANEWS.COM


on

Ram Pothineni Double iSmart Bachchan Director Breaks Silence On Clash
Koo

ಬೆಂಗಳೂರು: ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ನಟ ರವಿತೇಜ `ಇಟ್ಲು ಶ್ರಾವಣಿ ಸುಬ್ರಮಣ್ಯಂ’ ಮತ್ತು `ಈಡಿಯಟ್’ ನಂತಹ ಹಿಟ್ ಸಿನಿಮಾಗಳನ್ನು (Mr Bachchan Director) ಒಟ್ಟಿಗೆ ನೀಡಿದವರು. ರವಿತೇಜಾ ಅವರ ʻಮಿಸ್ಟರ್ ಬಚ್ಚನ್ʼ ಮತ್ತು ಪುರಿ ಅವರ ನಿರ್ದೇಶನದ ʻಡಬಲ್ ಇಸ್ಮಾರ್ಟ್ʼ (Ram Pothineni) ಆಗಸ್ಟ್ 15 ರಂದು ತೆಲುಗು ಬಾಕ್ಸ್ ಆಫೀಸ್ನಲ್ಲಿ ಘರ್ಷಣೆಗೆ ಸಿದ್ಧವಾಗಿದೆ (Puri Jagannadh’s directorial ). ‘ಡಬಲ್ ಇಸ್ಮಾರ್ಟ್” ಮತ್ತು ”ಮಿಸ್ಟರ್ ಬಚ್ಚನ್” ತಂಡದ ನಡುವೆ ಶೀತಲ ಸಮರ ಆರಂಭವಾಗಿದೆ.

ʻಮಿಸ್ಟರ್ ಬಚ್ಚನ್ʼ ನಿರ್ದೇಶಕ ಹ್ಯಾರಿಸ್ ಶಂಕರ್ ಬೇರೆ ಯಾರು ಅಲ್ಲ, ಬದಲಿಗೆ ಪುರಿ ಜಗನ್ನಾಥ್ ಶಿಷ್ಯ. ಒಂದು ಕಾಲದಲ್ಲಿ ಪುರಿ ಬಳಿ ಕೆಲಸ ಕಲಿತ ಹ್ಯಾರಿಸ್ ಶಂಕರ್ ಈಗ ಗುರುವಿಗೆ ತಿರುಮಂತ್ರ ಹಾಕುತ್ತಿದ್ದಾರೆ. ಕೇವಲ ಹ್ಯಾರಿಸ್ ಶಂಕರ್ ಮಾತ್ರ ಅಲ್ಲ, ʻಮಿಸ್ಟರ್ ಬಚ್ಚನ್ʼ ಚಿತ್ರದ ಮೂಲಕ ರವಿತೇಜಾ ಕೂಡ ಪುರಿ ಜಗನ್ನಾಥ್ ಅವರಿಗೆ ಸೆಡ್ಡು ಹೊಡೆದಿದ್ದಾರೆ. ರವಿತೇಜಾ ಅವರಿಂದ ಪುರಿ ಜಗನ್ನಾಥ್ ಇದನ್ನು ನಿರೀಕ್ಷೆ ಮಾಡಿರಲಿಲ್ಲ.

ʻಡಬಲ್ ಇಸ್ಮಾರ್ಟ್” ಚಿತ್ರಕ್ಕೆ ಚಾರ್ಮಿ ಕೌರ್ ಕೂಡ ಬಂಡವಾಳ ಹೂಡಿದ್ದಾರೆ. ಹೀಗಾಗಿಯೇ ಪುರಿ ಜಗನ್ನಾಥ್ ಜೊತೆ ರವಿತೇಜಾ ಮೇಲೆ ಕೋಪ ಮಾಡಿಕೊಂಡಿರುವ ಚಾರ್ಮಿ,ಸದ್ಯಕ್ಕೆ ”ಮಿಸ್ಟರ್ ಬಚ್ಚನ್” ನಿರ್ದೇಶಕ ಹರೀಶ್ ಶಂಕರ್ ಮತ್ತು ನಾಯಕ ರವಿತೇಜಾ ಇಬ್ಬರನ್ನೂ ಸಾಮಾಜಿಕ ಜಾಲತಾಣದಲ್ಲಿ ಅನ್​ಫಾಲೋ ಮಾಡಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಬಚ್ಚನ್ ನಿರ್ದೇಶಕ ಹರೀಶ್ ಶಂಕರ್ ಅವರು ಪರಿಸ್ಥಿತಿಯನ್ನು ತಿಳಿಸಿದರು. ಅನಿವಾರ್ಯ ಕಾರಣಗಳಿಂದ ಅದೇ ದಿನಾಂಕದಂದು ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆಯೇ ಹೊರತು ವೈಯಕ್ತಿಕ ದ್ವೇಷದಿಂದಲ್ಲ ಎಂದು ಸ್ಪಷ್ಟಪಡಿಸಿದರು.

ಪೂರಿ ಜಗನ್ ಅವರಿಗೂ ನನಗೂ ಭಿನ್ನಾಭಿಪ್ರಾಯವಿಲ್ಲ ಎಂದ ಹರೀಶ್ ಶಂಕರ್

“ಪುರಿ ಜಗನ್ ಅವರು ಲೆಜೆಂಡ್‌ ಮತ್ತು ಅವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕೆಲವು ಆರ್ಥಿಕ ಕಾರಣ, OTT ಸಮಸ್ಯೆಗಳು ಮತ್ತು ಇತರ ಕಾರಣಗಳಿಂದಾಗಿ, ನಾವು ಡಬಲ್ ಇಸ್ಮಾರ್ಟ್‌ನೊಂದಿಗೆ ರಿಲೀಸ್‌ ಮಾಡುತ್ತಿದ್ದೇವೆ. ಪೂರಿ ಜಗನ್‌ಗೂ ನನಗೂ ಭಿನ್ನಾಭಿಪ್ರಾಯವಿಲ್ಲ. ಆದರೂ ಅವರು ನನ್ನನ್ನು ಟ್ವಿಟರ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಅದನ್ನು ವೈಯಕ್ತಿಕವಾಗಿ ನಾನು ತೆಗೆದುಕೊಂಡಿಲ್ಲ. ಪ್ರತಿಯೊಬ್ಬರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆʼʼಎಂದರು. ಆಗಸ್ಟ್ 15 ರಂದು ಸಿನಿಮಾವನ್ನು ಬಿಡುಗಡೆ ಮಾಡುವಂತೆ ಮೈತ್ರಿ ಮೂವಿ ವಿತರಕರ ಮುಖ್ಯಸ್ಥ ಶಶಿ ಕೇಳಿದರು ಅದರಂತೆ ರಿಲೀಸ್‌ ಆಗುತ್ತಿದೆʼʼಎಂದರು.

ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು

”ಡಬಲ್ ಇಸ್ಮಾರ್ಟ್” ಚಿತ್ರಕ್ಕೆ ಒಂದು ಕಾಲದಲ್ಲಿ ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದ ಚಾರ್ಮಿ ಕೌರ್ ಕೂಡ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರವಿತೇಜ ಹೊರತಾಗಿ, ಭಾಗ್ಯಶ್ರೀ ಬೋರ್ಸೆ ಮತ್ತು ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ದೊಡ್ಡ ಅಭಿಮಾನಿಯಾಗಿರುವ ರವಿ ತೇಜ ಅವರು ಫಸ್ಟ್ ಲುಕ್‌ನಲ್ಲಿ ಅಮಿತಾಭ್‌ ಅವರಂತೆ ಪೋಸ್‌ ಕೊಟ್ಟಿದ್ದರು. ಈ ಚಿತ್ರ ಅಜಯ್ ದೇವಗನ್ ಅಭಿನಯದ 2018ರ ಹಿಂದಿ ʻಸ್ಲೀಪರ್ ಹಿಟ್ ರೈಡ್ʼ ನ ರಿಮೇಕ್ ಆಗಿದೆ.

ಡಬಲ್ ಇಸ್ಮಾರ್ಟ್

ಸೌತ್ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್ ಇಸ್ಮಾರ್ಟ್’ ಚಿತ್ರದಲ್ಲೂ ವಿಲನ್ ಆಗಿ ನಟಿಸಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಡಬಲ್ ಇಸ್ಮಾರ್ಟ್ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸ್ಯಾಮ್ ಕೆ. ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಾಹಕರಾಗಿ ದುಡಿದಿದ್ದಾರೆ.

ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿದ್ದಾರೆ. ಆಗಸ್ಟ್-15 ರಂದು ಚಿತ್ರ ಎಲ್ಲೆಡೆ ರಿಲೀಸ್ ಮಾಡಲಾಗುತ್ತಿದೆ. ವಿಶ್ವದಾದ್ಯಂತ ಬರ್ತಿರೋ ಈ ಚಿತ್ರದ ಪ್ರಚಾರ ಕೂಡ ಈಗಾಗಲೇ ಶುರು ಆಗಿದೆ.

2019ರಲ್ಲಿ ‘ಇಸ್ಮಾರ್ಟ್ ಶಂಕರ್’ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರುತ್ತಿದೆ. ಟಾಲಿವುಡ್‌ನಲ್ಲಿ ಈಗಾಗಲೇ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ.

Continue Reading
Advertisement
Indian Navy Recruitment
ಉದ್ಯೋಗ2 mins ago

Indian Navy Recruitment: ಭಾರತೀಯ ನೌಕಾ ಪಡೆಯಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡಲು ಆ. 2 ಕೊನೆಯ ದಿನ

Pooja Khedkar
ದೇಶ7 mins ago

Puja Khedkar: ನಕಲಿ ದಾಖಲೆ ಸೃಷ್ಟಿ; ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ನೇಮಕ ರದ್ದು, ಪರೀಕ್ಷೆಯಿಂದಲೇ ಯುಪಿಎಸ್‌ಸಿ ಬ್ಯಾನ್!

krishna byre gowda
ಪ್ರಮುಖ ಸುದ್ದಿ19 mins ago

Krishna Byre Gowda: ರಾಜ್ಯಪಾಲರ ಅಧಿಕಾರ ದುರುಪಯೋಗಪಡಿಸಿಕೊಂಡರೆ ಕೋರ್ಟ್‌ಗೆ ಹೋಗುತ್ತೇವೆ: ಕೃಷ್ಣಭೈರೇಗೌಡ

Money Guide
ಮನಿ-ಗೈಡ್24 mins ago

Money Guide: PPF v/s NPS Vatsalya ನಿಮ್ಮ ಮಕ್ಕಳಿಗೆ ಯಾವುದು ಉತ್ತಮ ಯೋಜನೆ? ಇಲ್ಲಿದೆ ವಿವರ

Vinay Guruji met by master anand brother
ಸ್ಯಾಂಡಲ್ ವುಡ್26 mins ago

Vinay Guruji: ಬೈಕೊಂಡು ವಿನಯ್ ಗುರೂಜಿ ಆಶ್ರಮಕ್ಕೆ ಹೋಗಿದ್ದೆ ಆದರೆ ನನ್ನ ಅಷ್ಟೂ ಜಾತಕ ಬಿಚ್ಚಿಟ್ರು ಎಂದ ಮಾಸ್ಟರ್ ಆನಂದ್ ಸಹೋದರ!

Anurag Thakur
ದೇಶ31 mins ago

Anurag Thakur: ಅನುರಾಗ್‌ ಠಾಕೂರ್‌ ‘ಜಾತಿ’ ಅಸ್ತ್ರಕ್ಕೆ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಪ್ರತ್ಯಸ್ತ್ರ!

Viral Video
Latest32 mins ago

Viral Video: ಮಹಿಳೆಯ ಎದೆ, ಕುತ್ತಿಗೆಗೆ ಭೀಕರವಾಗಿ ತಿವಿದ ಬೀದಿ ಹಸು; ಮೈ ನಡುಗಿಸುವ ವಿಡಿಯೊ

Paris Olympic
ಕ್ರೀಡೆ33 mins ago

Paris Olympic: ಪ್ರೀ ಕ್ವಾರ್ಟರ್​ಗೆ ಲಗ್ಗೆಯಿಟ್ಟ ಲಕ್ಷ್ಯ ಸೇನ್; ಜೊನಾಥನ್​ ಕ್ರಿಸ್ಟಿಗೆ ಆಘಾತಕಾರಿ ಸೋಲು

Wayanad Landslide
ದೇಶ36 mins ago

Wayanad Landslide: ಭೂಕುಸಿತದ ಬಗ್ಗೆ ಒಂದು ವಾರ ಮೊದಲೇ ನೀಡಲಾಗಿತ್ತಾ ಎಚ್ಚರಿಕೆ? ಕೇಂದ್ರದ ಸೂಚನೆ ನಿರ್ಲಕ್ಷಿಸಿತ್ತಾ ಕೇರಳ ಸರ್ಕಾರ?

DK Shivakumar
ಕರ್ನಾಟಕ41 mins ago

DK Shivakumar: ಪ್ರಧಾನಿ ಮೋದಿ ಭೇಟಿಯಾದ ಡಿಕೆಶಿ; ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಬೇಡಿಕೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ22 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌