Menstrual Cramp Home Remedies: ಋತುಚಕ್ರದ ದಿನಗಳಲ್ಲಿ ಕಾಡುವ ನೋವಿನಿಂದ ಮುಕ್ತಿ ಪಡೆಯಬೇಕೇ? ಇಲ್ಲಿವೆ ಮನೆಮದ್ದು! - Vistara News

ಆರೋಗ್ಯ

Menstrual Cramp Home Remedies: ಋತುಚಕ್ರದ ದಿನಗಳಲ್ಲಿ ಕಾಡುವ ನೋವಿನಿಂದ ಮುಕ್ತಿ ಪಡೆಯಬೇಕೇ? ಇಲ್ಲಿವೆ ಮನೆಮದ್ದು!

ಯಾವೆಲ್ಲ ಮನೆಮದ್ದುಗಳ ಮೂಲಕ (Menstrual Cramp Home Remedies) ಋತುಚಕ್ರದ ಸಂದರ್ಭದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

VISTARANEWS.COM


on

periods
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವೈದ್ಯ ಜಗತ್ತು ಎಷ್ಟೇ ಮುಂದುವರಿದರೂ ಬಹುತೇಕ ಹೆಣ್ಣುಮಕ್ಕಳು ತಮ್ಮ ತಿಂಗಳ ಮುಟ್ಟಿನ ಸಂದರ್ಭ ನೋವು ಅನುಭವಿಸುವುದು (Menstrual Cramp) ಮಾತ್ರ ತಪ್ಪಿಲ್ಲ. ಋತುಚಕ್ರದ ಮೊದಲ ಎರಡರಿಂದ ಮೂರು ದಿನಗಳು ಅಸಾಧ್ಯ, ಸೊಂಟ ನೋವು, ಹೊಟ್ಟೆ ನೋವು ಅನುಭವಿಸುವ ಮಂದಿ ಅನೇಕರು. ಕೆಲವರಿಗೆ ಸಣ್ಣ ಪ್ರಮಾಣದ ನೋವಿದ್ದರೆ, ಇನ್ನೂ ಕೆಲವರಿಗೆ ತಡೆಯಲಸಾಧ್ಯವಾದ ನೋವು. ಹೇಳಿಕೊಳ್ಳಲಾಗದ ಸಂಕಟದಿಂದ ಅನೇಕರು ಹೊಟ್ಟೆ ಹಿಡಿದುಕೊಂಡೇ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಾರೆ. ಪ್ರತೀ ತಿಂಗಳು ಅಳುವವರಿಗೆ ಸಮಾಧಾನ ಮಾಡುವವರಾರು ಹೇಳಿ ಎಂದುಕೊಂಡು ಇದು ಪ್ರಕೃತಿ ನಿಯಮ ಎಂದು ತಮಗೆ ತಾವೇ ಸಮಾಧಾನ ಹೇಳಿಕೊಂಡು ನೋವು ನುಂಗುತ್ತಾರೆ.

ಪುರುಷರಿಗೆ ಈ ನೋವಿನ ಆಳ ಅರ್ಥವಾಗದೆ ಇರಬಹುದು. ಆದರೆ, ಪ್ರತಿ ಐದು ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ ಅತ್ಯಂತ ಹೆಚ್ಚಿನ ನೋವು ಈ ಸಂದರ್ಭದಲ್ಲೇ ಇರುತ್ತದೆ ಹಾಗೂ ಅದು ಅವರ ನಿತ್ಯದ ಕಾಯಕದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂಬುದನ್ನೂ ಸಂಶೋಧನೆಗಳೂ ಕೂಡಾ ಪುಷ್ಟೀಕರಿಸಿವೆ. ಗರ್ಭಕೋಶದ ಸುತ್ತಮುತ್ತಲ ಮಾಂಸಖಂಡಗಳ ಸೆಳೆತ ಕೆಲವರಲ್ಲಿ ಮೊದಲ ದಿನ ಮಾತ್ರ ಇದ್ದರೆ ಇನ್ನೂ ಕೆಲವರಲ್ಲಿ ಎರಡರಿಂದ ಮೂರು ದಿನಗಳವರೆಗೂ ಇರುತ್ತದೆ. ಅಂದರೆ, ಒಳಗೇನೋ ಗರ್ಭಕೋಶಕ್ಕೆ ಸಂಬಂಧಿಸಿದ ತೊಂದರೆ ಇದೆ ಎಂದೇ ಇದರ ಅರ್ಥವಲ್ಲ. ಕೆಲವರಿಗೆ ಇರಬಹುದು, ಇನ್ನೂ ಕೆಲವರಿಗೆ ಇಲ್ಲದೆಯೂ ಇರಬಹುದು. ಹಾಗಾಗಿ ಹಿಂದಿನಿಂದಲೂ ಇಂಥ ನೋವುಗಳಿಗೆ ಮನೆಯಲ್ಲೇ ಹಿರಿಯರು ಹೇಳಿದ ಕೆಲವು ಮನೆಮದ್ದುಗಳನ್ನು ಮಾಡುವ ಮೂಲಕ ನೋವು ಶಮನ ಮಾಡಿಕೊಳ್ಳುವ ಅಥವಾ ಕೆಲವೊಮ್ಮೆ ನೋವು ನಿವಾರಕ ಗುಳಿಗೆಗಳ ಮೂಲಕ ನೋವು ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡುವುದು ಸಾಮಾನ್ಯ. ಹಾಗಾದರೆ ಬನ್ನಿ, ಯಾವೆಲ್ಲ ಮನೆಮದ್ದುಗಳ ಮೂಲಕ (Menstrual Cramp Home Remedies) ಋತುಚಕ್ರದ ಸಂದರ್ಭದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

1. ಎಳ್ಳೆಣ್ಣೆಯಲ್ಲಿ ಅಭ್ಯಂಗ ಮಾಡುವ ಪದ್ಧತಿ ಆಯುರ್ವೇದದಲ್ಲಿದೆ. ಈ ಅಭ್ಯಂಗದಿಂದ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ. ಅಂತಹ ಸಮಸ್ಯೆಗಳ ಪೈಕಿ ಇದೂ ಕೂಡಾ ಒಂದು. ಎಳ್ಳೆಣ್ಣೆಯನ್ನು ಋತುಚಕ್ರದ ದಿನಗಳಲ್ಲಿ ಹೊಟ್ಟೆ ಹಾಗೂ ಕೆಳಹೊಟ್ಟೆಯ ಸುತ್ತ ಹಚ್ಚಿಕೊಂಡು ಮಸಾಜ್‌ ಮಾಡಿಕೊಂಡರೆ ನೋವಿನಿಂದ ಸಾಕಷ್ಟು ಆರಾಮ ದೊರೆಯುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯರು.

2. ಮೆಂತ್ಯ ಕಾಳುಗಳು ತೂಕ ಇಳಿಕೆ, ಪಿತ್ತಕೋಶ, ಕಿಡ್ನಿ, ಚರ್ಮ, ಕೂದಲಿಗೆ ಒಳ್ಳೆಯದು ಎಂಬ ವಿಚಾರ ನಮಗೆ ತಿಳಿದಿದೆ. ಆದರೆ ಇದೇ ಮೆಂತ್ಯಕಾಳು ಋತುಚಕ್ರದ ಸಂದರ್ಭದ ನೋವಿಗೂ ಒಳ್ಳೆಯದೆಂದು ಗೊತ್ತೇ? ಹೌದು. ಋತುಚಕ್ರದ ನೋವಿನ ದಿನಗಳಲ್ಲಿ ಸುಮಾರು 1 ಗಂಟೆಗಳ ಕಾಲ ಮೆಂತ್ಯ ಕಾಳನ್ನು ನೆನೆಸಿಟ್ಟು ಅದನ್ನು ಸೇವಿಸುವುದರಿಂದ ಈ ನೋವನ್ನು ಶಮನ ಮಾಡಿಕೊಳ್ಳಬಹುದು.

3. ಬಿಸಿಯಾದ ದ್ರವಾಹಾರ ಸೇವಿಸುವುದರಿಂದ ಹಾಗೂ ಬಿಸಿಬಿಸಿ ಹಬೆಯಾಡುವ ಸ್ನಾನ ಮಾಡುವುದರಿಂದಲೂ ನೋವಿಗೆ ಕೊಂಚ ಪರಿಹಾರ ಕಾಣಬಹುದು. ಬಿಸಿಬಿಸಿ ಶುಂಠಿ ಕರಿಮೆಣಸಿನ ಚಹಾ, ಪುದಿನ ಚಹಾ, ಗ್ರೀನ್‌ ಚಹಾ, ಜೀರಿಗೆ ಕಷಾಯ ಇತ್ಯಾದಿಗಳನ್ನೂ ಕುಡಿಯುವ ಮೂಲಕ ನೋವು ಕೊಂಚ ಹಗುರಾಗಬಹುದು. ಶುಂಠಿಗೆ ಪ್ರೊಸ್ಟಾಗ್ಲಾಂಡಿನ್‌ನ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆ. ಅಷ್ಟೇ ಅಲ್ಲ, ಶುಂಠಿಯು ಏರುಪೇರಾಗಿರುವ ಋತುಚಕ್ರವನ್ನೂ ಸಮತೋಲನಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಜೀರಿಗೆಯು ರಿಲ್ಯಾಕ್ಸ್‌ ಮಾಡುವ ಗುಣವಿದ್ದು, ಈ ಸಂದರ್ಭದಲ್ಲಿ ಸೊಂಟ ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಆರಾಮ ನೀಡುತ್ತದೆ.

4. ನಿಮ್ಮ ಋತುಚಕ್ರದ ದಿನಕ್ಕೆ ಸುಮಾರು ಒಂದು ವಾರ ಮೊದಲೇ ದಿನವೂ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಮುನ್ನಾದಿನವೇ ನೆನೆಸಿಟ್ಟ ದ್ರಾಕ್ಷಿ ಹಾಗೂ ಕೇಸರಿಯನ್ನು ತಿನ್ನಿ.

5. ನಿಮ್ಮ ನಿತ್ಯದ ಆಹಾರದಲ್ಲಿ ದಿನವೂ ಒಂದು ಮುಷ್ಟಿಯನ್ನಾದರೂ ಮೊಳಕೆ ಕಾಳುಗಳನ್ನು ಬೇಯಿಸಿ ತಿನ್ನಿ.

6. ವಾರದಲ್ಲಿ ಎರಡು ಬಾರಿಯಾದರೂ ಸಿಹಿಗೆಣಸು, ಸುವರ್ಣ ಗಡ್ಡೆ ಇತ್ಯಾದಿ ಗಡ್ಡೆಗೆಣಸುಗಳನ್ನು ಆಹಾರದಲ್ಲಿ ಬಳಸಿ.

7. ನಿತ್ಯವೂ ವ್ಯಾಯಾಮ ಮಾಡಿ. ವಾರಕ್ಕೆ ೧೫೦ ನಿಮಿಷವಾದರೂ ನಡೆಯಿರಿ. ಋತುಚಕ್ರದ ಸಂದರ್ಭವೂ ಸಾಧ್ಯವಾದಲ್ಲಿ ಕೆಲವು ಸರಳ ಆಸನಗಳನ್ನೂ ಮಾಡಬಹುದು. ಉದಾಹರಣೆಗೆ ಬಟರ್‌ಫ್ಲೈ ಪೋಸ್‌.

8. ಕ್ಯಾಲ್ಶಿಯಂ ಮಾತ್ರೆಯನ್ನು ಪ್ರತಿನಿತ್ಯವೂ ರಾತ್ರಿ ಮಲಗುವ ಮುನ್ನ ತಿನ್ನಿ. ತೆಗೆದುಕೊಳ್ಳುವ ಮುನ್ನ ಈ ಬಗ್ಗೆ ವೈದ್ಯರಿಂದ ಸಲಹೆ ಪಡೆಯಿರಿ.

ಇದನ್ನೂ ಓದಿ: Menopause and Bone Loss: ಋತುಸ್ರಾವ ನಿಂತ ಬಳಿಕ ಮೂಳೆ ದುರ್ಬಲವಾಗುವುದು ಈ ಕಾರಣಕ್ಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಹಿಳೆ

French Yoga Teacher: ಹಸಿರು ಸೀರೆ ಧರಿಸಿ ಪದ್ಮಶ್ರೀ ಸ್ವೀಕರಿಸಿದ 101 ವರ್ಷದ ವಿದೇಶಿ ಯೋಗ ಶಿಕ್ಷಕಿ!

ಫ್ರಾನ್ಸ್ ನ 101 ವರ್ಷದ ಯೋಗ ಶಿಕ್ಷಕಿಯೊಬ್ಬರು (French Yoga Teacher) ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪುರಸ್ಕಾರ ಪಡೆದಿದ್ದಾರೆ. ಈ ಕುರಿತು ರಾಷ್ಟ್ರಪತಿ ಭವನದಿಂದ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

VISTARANEWS.COM


on

By

French Yoga Teacher
Koo

ನವದೆಹಲಿ: ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎಂಬುದನ್ನು ಇದೀಗ 101 ವರ್ಷದ ಫ್ರೆಂಚ್ ಯೋಗ ಶಿಕ್ಷಕಿ (French Yoga Teacher) ಸಾಬೀತು ಪಡಿಸಿದ್ದಾರೆ. ವಯಸ್ಸಿನ ಮಿತಿ ನಿಯಮಗಳನ್ನು ಮೀರಿ ಸುಮಾರು ನಾಲ್ಕು ದಶಕಗಳ ಕಾಲ ಯೋಗಕ್ಕೆ ಅವರು ನೀಡಿರುವ ಅಸಾಧಾರಣ ಕೊಡುಗೆಯನ್ನು ಗೌರವಿಸಿ ಶಾರ್ಲೆಟ್ ಚಾಪಿನ್ (Charlotte Chopin) ಅವರಿಗೆ ಭಾರತದ (India) ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ( Padma Shri award) ಅನ್ನು ನೀಡಿ ಗೌರವಿಸಲಾಯಿತು.

ನವದೆಹಲಿಯ (new delhi) ರಾಷ್ಟ್ರಪತಿ ಭವನದಲ್ಲಿ ( Rashtrapati Bhawan) ಗುರುವಾರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಹಸಿರು ಸೀರೆಯನ್ನು ಧರಿಸಿದ ಶಾರ್ಲೆಟ್ ಚಾಪಿನ್ ವೇದಿಕೆಯತ್ತ ನಡೆದು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಯೋಗ ಕ್ಷೇತ್ರದಲ್ಲಿ ಶಾರ್ಲೆಟ್ ಚಾಪಿನ್ ಅವರ ಪ್ರಯತ್ನವನ್ನು ಶ್ಲಾಘಿಸಿ ರಾಷ್ಟ್ರಪತಿಯವರ ಕಚೇರಿಯು ಎಕ್ಸ್ ನಲ್ಲಿ ಟ್ವೀಟ್ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯೋಗ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಶಾರ್ಲೆಟ್ ಚಾಪಿನ್ ಅವರಿಗೆ ಪ್ರದಾನ ಮಾಡಿದರು. ಅವರು ಪ್ರಸಿದ್ಧ ಫ್ರೆಂಚ್ ಯೋಗ ಶಿಕ್ಷಕಿಯಾಗಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯೋಗವನ್ನು ಕಲಿಸುತ್ತಿದ್ದಾರೆ ಮತ್ತು 101ನೇ ವಯಸ್ಸಿನಲ್ಲಿ ಯೋಗ ಶಿಕ್ಷಕರಾಗಿ ಸಕ್ರಿಯರಾಗಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.


ಶಾರ್ಲೆಟ್ ಚಾಪಿನ್ ಯಾರು?

ಚಾಪಿನ್ ಫ್ರಾನ್ಸ್ ಮೂಲದವರಾಗಿದ್ದು, ಪ್ರಸ್ತುತ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ವಯಸ್ಸಿನ ಮಿತಿಯ ಮಾನದಂಡಗಳನ್ನು ಮೀರಿ ಚಾಪಿನ್ ಅವರು 50 ವರ್ಷ ವಯಸ್ಸಿನ ಅನಂತರ ಯೋಗವನ್ನು ಕಲಿತರು. 1982 ರಲ್ಲಿ ಫ್ರಾನ್ಸ್ ನಲ್ಲಿ ಕಲಿಸಲು ಪ್ರಾರಂಭಿಸಿದರು. ಅವರು ದೇಶದಲ್ಲಿ ಯೋಗದ ಅಲೆಯನ್ನು ಸೃಷ್ಟಿಸಿದರು. ಇದು ಪ್ರಸಿದ್ಧ ಫಿಟ್ನೆಸ್ ಅಭ್ಯಾಸವನ್ನು ಮಾಡಿದರು. ಅವರು ಫ್ರೆಂಚ್ ಟಿವಿ ಶೋ, ‘ಫ್ರಾನ್ಸ್ ಗಾಟ್ ಇನ್‌ಕ್ರೆಡಿಬಲ್ ಟ್ಯಾಲೆಂಟ್’ ನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

2023ರ ಜುಲೈನಲ್ಲಿ ಅವರು ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳಲು ಫ್ರೆಂಚ್ ಪ್ರವಾಸದಲ್ಲಿದ್ದಾಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲ ಬಾರಿಗೆ ಪ್ಯಾರಿಸ್‌ನಲ್ಲಿ ಭೇಟಿಯಾದರು. ಯೋಗ ಕ್ಷೇತ್ರದಲ್ಲಿ ಅವರ ಅಸಾಧಾರಣ ಕೆಲಸದಿಂದ ಪ್ರಭಾವಿತರಾದ ಪ್ರಧಾನಿ, ಯೋಗದಲ್ಲಿ ಚಾಪಿನ್ ಅವರ ಆಳವಾದ ನಂಬಿಕೆ ಮತ್ತು ಫ್ರಾನ್ಸ್‌ನಲ್ಲಿ ಯೋಗವನ್ನು ಉತ್ತೇಜಿಸಲು ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.

ಯೋಗವು ಸಂತೋಷವನ್ನು ತರುತ್ತದೆ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಎಂದು ಜುಲೈನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದಾಗ ಚಾಪಿನ್ ಹೇಳಿದ್ದರು.

Continue Reading

ಆರೋಗ್ಯ

Mental Health Awareness Month: ಮಾನಸಿಕ ಆರೋಗ್ಯ ಜಾಗೃತಿ ಮಾಸ; ಮತ್ತೆ ಮಗುವಿನಂತಾಗಲು ಪ್ರಯತ್ನಿಸಿ!

ನಮ್ಮೊಳಗಿನ ಮಗು ಅಥವಾ ಇನ್ನರ್‌ ಚೈಲ್ಡ್‌ (Mental Health Awareness Month) ಎಂದರೇನು? ಅದರೊಂದಿಗೆ ನಂಟು ಬೆಸೆಯಲು ಸಾಧ್ಯವೇ? ಎಂದೋ ಕಳೆದ ಬಾಲ್ಯ ಈಗ ಯಾಕೆ ಬರಬೇಕು… ಮುಂತಾದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ಮೇ ತಿಂಗಳನ್ನು ಮಾನಸಿಕ ಆರೋಗ್ಯ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತದೆ. ಈ ಕುರಿತ ಸಲಹೆಗಳು ಇಲ್ಲಿವೆ.

VISTARANEWS.COM


on

Mental Health Awareness Month
Koo

ಮತ್ತೆ ಮಗುವಿನಂತಾಗಲು (Mental Health Awareness Month) ಸಾಧ್ಯವೇ? ಪ್ರಶ್ನೆಯೇ ಬಾಲಿಶ ಎನಿಸಬಹುದು. ಆದರೆ ನಮ್ಮ ಒಳಗಿನ ಮಗುವಿನೊಂದಿಗೆ ಮತ್ತೆ ನಂಟು ಬೆಸೆಯಲು ಸಾಧ್ಯವಾದರೆ ಮಾನಸಿಕ ಸ್ವಾಸ್ಥ್ಯ ಸಾಧಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದಂತಾಗುತ್ತದೆ ಎನ್ನುವುದು ಸ್ವಾಸ್ಥ್ಯ ತಜ್ಞರ ಮಾತು. ನಮ್ಮೊಳಗಿನ ಮಗು ಅಥವಾ ಇನ್ನರ್‌ ಚೈಲ್ಡ್‌ ಎಂದರೇನು? ಅದರೊಂದಿಗೆ ನಂಟು ಬೆಸೆಯಲು ಸಾಧ್ಯವೇ? ಎಂದೋ ಕಳೆದ ಬಾಲ್ಯ ಈಗ ಯಾಕೆ ಬರಬೇಕು… ಮುಂತಾದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ಮೇ ತಿಂಗಳನ್ನು ಮಾನಸಿಕ ಆರೋಗ್ಯ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತದೆ.

Mental health image. Various emotion and maind.

ಬಾಲ್ಯದ ನಂಟೇಕೆ?

ನಮ್ಮೆಲ್ಲರ ಬಾಲ್ಯದ ಅನುಭವಗಳೇ ನಮ್ಮನ್ನು ಭವಿಷ್ಯದಲ್ಲಿ ರೂಪಿಸುವಂಥವು. ಬಾಲ್ಯ ಸಿಹಿಯಾಗಿದ್ದರೆ ಮುಂದಿನ ಬದುಕಿನಲ್ಲಿ ಆತ್ಮವಿಶ್ವಾಸ ಹೆಚ್ಚಿರುವಂತೆಯೇ, ಕಹಿ ಬಾಲ್ಯಗಳು ಭವಿಷ್ಯವನ್ನು ದಿಕ್ಕೆಡಿಸಬಹುದು ಎಂಬುದೂ ನಿಜ. ಹಾಗಾಗಿ ಎಳೆತನದ ದಿನಗಳೊಂದಿಗೆ ಮತ್ತೆ ನಂಟು ಬೆಸೆಯುವ ಅಗತ್ಯವನ್ನು ಮಾನಸಿಕ ಸ್ವಾಸ್ಥ್ಯದ ತಜ್ಞರು ಪುನರುಚ್ಚರಿಸುತ್ತಾರೆ. ಒಳ್ಳೆಯ ಅನುಭವಗಳು ಮರುಕಳಿಸಿದರೆ ಬದುಕಿನ ಸೊಗಸು ಮತ್ತೆ ಬಂದಂತೆ. ಒಂದೊಮ್ಮೆ ಅನುಭವಗಳು ಕಹಿಯಾಗಿದ್ದರೆ, ಆ ನೆನಪುಗಳನ್ನು ತೊಡೆಯುವುದು ಸಹ ʻಹೀಲಿಂಗ್‌ʼ ಎನ್ನುವ ಪ್ರಕ್ರಿಯೆಯ ಭಾಗ. ಅದಲ್ಲದೆ ಇನ್ನೇನು ಪ್ರಯೋಜನ?

Woman Meditating in the Workplace Sitting in Front of a Laptop Practicing Stress Relief Exercises Diabetes Control

ಒತ್ತಡ ನಿವಾರಣೆ

ಇಂದಿನ ಪ್ರೆಷರ್‌ ಕುಕ್ಕರ್‌ನಂಥ ಬದುಕಿನಲ್ಲಿ ಬೇಡದ್ದನ್ನೇ ತಲೆಯಲ್ಲಿ ತುಂಬಿಸಿಕೊಳ್ಳುವುದು, ಬದುಕಿನ ಹೊರೆಯನ್ನು ಹೆಚ್ಚಿಸುತ್ತದೆ. ಇದರಿಂದ ಒತ್ತಡದ ಹಾರ್ಮೋನುಗಳಾದ ಕಾರ್ಟಿಸೋಲ್‌ಗಳ ಸ್ರವಿಸುವಿಕೆ ಹೆಚ್ಚುತ್ತದೆ. ಈ ಕಾರ್ಟಿಸೋಲ್‌ ಪ್ರಮಾಣವನ್ನು ಕಡಿಮೆ ಮಾಡದಿದ್ದರೆ, ಅದರ ಅಡ್ಡ ಪರಿಣಾಮಗಳು ಹಲವು ರೀತಿಯಲ್ಲಿ ಕಂಡುಬರುತ್ತದೆ. ಬದಲಿಗೆ, ಮನಸ್ಸನ್ನು ಉಲ್ಲಸಿತವಾಗಿ ಇರಿಸಲು ಯತ್ನಿಸುವುದರಿಂದ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿದೆ.,ಕೆಲವೊಮ್ಮೆ ಉದ್ಯೋಗದ ಒತ್ತಡಗಳು ಮುಂದೆ ಯೋಚಿಸಲೇ ಆಗದಷ್ಟು ತಲೆಯನ್ನು ಖಾಲಿ ಮಾಡಿಬಿಡುತ್ತವೆ. ಇಂಥ ಸಂದರ್ಭದಲ್ಲಿ ಮನಸ್ಸಿಗೆ ಮುದ ನೀಡುವ ವಿಷಯಗಳ ಬಗ್ಗೆ ಯೋಚಿಸುವುದು ಮತ್ತು ಎಳೆತನದ ಹುಡುಗಾಟಿಕೆಗಳೊಂದಿಗೆ ಬೆಸೆಯುವುದು, ಹೊಸ ಆಲೋಚನೆಗಳಿಗೆ ದಾರಿ ಮಾಡುತ್ತವೆ. ಮಕ್ಕಳು ಎಂದಿಗೂ ಬದುಕುವುದು ವರ್ತಮಾನದಲ್ಲಿ. ನಿನ್ನೆಯದ್ದು ಅವುಗಳಿಗೆ ನೆನಪಿರುವುದಿಲ್ಲ, ನಾಳೆಯದ್ದು ಗೊತ್ತಿರುವುದಿಲ್ಲ. ಹಾಗಾಗಿ ತಾವಿದ್ದಂತೆಯೇ ತಮ್ಮನ್ನು ಖುಷಿಯಿಂದ ಒಪ್ಪಿಕೊಂಡೂ ಬಿಡುತ್ತವೆ ಆ ಮಕ್ಕಳು. ತಾನು ಅವರಂತೆ ಇಲ್ಲ, ಇವರಲ್ಲಿ ಇರುವಂಥದ್ದು ತನಗಿಲ್ಲ ಎಂದೆಲ್ಲ ಕೊರಗುವುದಿಲ್ಲ. ಇದನ್ನೇ ಮರಳಿ ಕಲಿಯಬೇಕು ನಾವು.

ಇದಕ್ಕಾಗಿ ಏನು ಮಾಡಬೇಕು?

ಹ್ಯಾಪಿ ಹಾರ್ಮೋನುಗಳು ಬಿಡುಗಡೆಯಾಗುವ ದಾರಿಗಳನ್ನು ಹುಡುಕಿ. ಎಳೆತನದ ಆಟಗಳನ್ನು ನೆನಪಿಸಿಕೊಳ್ಳಿ. ಚನ್ನೆಮಣೆ, ಚೌಕಾಬಾರ ಆಡಿ ಗೊತ್ತಿದ್ದರೆ ಸರಿ. ಅದಿಲ್ಲದಿದ್ದರೆ ಮನೆಯ ಮಕ್ಕಳೊಂದಿಗೆ ಕಣ್ಣಾಮುಚ್ಚಾಲೆ, ಅದಲುಬದಲು ಮುಂತಾದ ಹುಡುಗಾಟದ ಆಟಗಳು ಮನಸ್ಸಿನ ಉಲ್ಲಾಸ ಹೆಚ್ಚಿಸಬಲ್ಲವು. ಸಾಧ್ಯವಾದಷ್ಟು ಹೊತ್ತು ಹಿಂದಿನ-ಮುಂದಿನ ಕ್ಷಣಗಳನ್ನು ಮರೆತು ಬದುಕಲು ಪ್ರಯತ್ನಿಸಿ. ಇದರಿಂದ ಒತ್ತಡ ಕಡಿಮೆ ಮಾಡಲು ನಿಶ್ಚಿತವಾಗಿ ಸಾಧ್ಯವಿದೆ.

ಕಲಿಯಿರಿ

ಎಂದೋ ಏನೋ ಕಲಿಯುವ ಆಸೆ ಮನದಲ್ಲಿ ಇನ್ನೂ ಸುಪ್ತವಾಗಿ ಕುಳಿತಿದೆಯೇ? ಗಿಟಾರ್‌, ಡ್ರಮ್‌, ಪೇಟಿಂಗ್‌ ಅಥವಾ ಏನಾದರೂ ಸರಿ, ಕಲಿಯಬೇಕೆಂಬ ಬಯಕೆ ಇದ್ದರೆ ಅದಕ್ಕೆ ವಯಸ್ಸಿನ ಹಂಗನ್ನು ಅಂಟಿಸಬೇಡಿ. ಆವತ್ತು ಆಗದಿದ್ದರೇನು, ಇವತ್ತಾದರೂ ಸಾಧ್ಯವಾಗುತ್ತಿದೆ ಎಂಬ ಬಗ್ಗೆ ಖುಷಿ, ಹೆಮ್ಮೆ- ಎರಡೂ ಇರಲಿ.

Mental health issues concept.

ನಿಸರ್ಗದ ಸಾಂಗತ್ಯ

ಅದಕ್ಕಾಗಿ ಹಿಮಾಲಯಕ್ಕೇ ಚಾರಣ ಹೋಗಬೇಕೆಂದಿಲ್ಲ. ಯಾವುದಾದರೂ ಬೀಚಿನ ಮರಳಿನಲ್ಲಿ ಮನೆ ಕಟ್ಟುವುದು, ಬೀಚ್‌ನಲ್ಲಿ ಚೆಂಡು ಆಡುವುದು, ರಾತ್ರಿ ಮಹಡಿ ಮೇಲೆ ಮಲಗಿ ನಕ್ಷತ್ರ ಎಣಿಸುವುದು, ಪಾಟಿನಲ್ಲಿ ಒಂದಿಷ್ಟು ಬೀಜ ಬಿತ್ತಿ ದಿನಾ ಅದು ಮೊಳೆಯುವುದನ್ನು ಗಮನಿಸುವುದು- ಇಂಥ ಸರಳ ಚಟುವಟಿಕೆಗಳು ಮನಸ್ಸನ್ನು ಆರೋಗ್ಯಪೂರ್ಣವಾಗಿ ಇರಿಸುತ್ತವೆ.
ನೆನಪಿಡಿ, ಈ ಯಾವುವೂ ನಮ್ಮ ಗುರಿಯಲ್ಲ, ಗುರಿ ತಲುಪುವ ದಾರಿ. ನಮ್ಮ ಗುರಿ ಮನಸ್ಸಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವುದು, ಈ ಮೂಲಕ ಬದುಕಿನ ಸ್ವಾಸ್ಥ್ಯವನ್ನು ವೃದ್ಧಿಸಿಕೊಳ್ಳುವುದು. ಇದು ಜಾಗೃತಿ ಮಾಸದಲ್ಲಿ ಮಾತ್ರವಲ್ಲ, ಜೀವನದುದ್ದಕ್ಕೂ ನಡೆಸಿಕೊಂಡು ಬರಬೇಕಾದ ಪ್ರಕ್ರಿಯೆ.

Continue Reading

ವಿದೇಶ

Pig Kidney: ಹಂದಿಯ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು

Pig Kidney: ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ ಕಸಿ ಪಡೆದ ಮೊದಲ ವ್ಯಕ್ತಿ, ಇಂಗ್ಲೆಂಡ್‌ನ ವೇಮೌತ್‌ನ ನಿವಾಸಿ 62 ವರ್ಷದ ರಿಕ್ ಸ್ಲೇಮನ್ ಶಸ್ತ್ರ ಚಿಕಿತ್ಸೆ ನಡೆದ ಸುಮಾರು ಎರಡು ತಿಂಗಳ ನಂತರ ನಿಧನ ಹೊಂದಿದ್ದಾರೆ. ಆದರೆ ಅವರ ನಿಧನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಿಡ್ನಿ ಕಸಿಯ ಪರಿಣಾಮದಿಂದ ಅವರು ನಿಧನ ಹೊಂದಿದ್ದಾರೆ ಎಂಬುದಕ್ಕೆ ನಮಗೆ ಯಾವುದೇ ಸೂಚನೆ ಸಿಕ್ಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

VISTARANEWS.COM


on

Pig Kidney
Koo

ಬೋಸ್ಟನ್: ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ (Pig Kidney) ಕಸಿ ಪಡೆದ ಮೊದಲ ವ್ಯಕ್ತಿ, ಇಂಗ್ಲೆಂಡ್‌ನ ವೇಮೌತ್‌ನ ನಿವಾಸಿ 62 ವರ್ಷದ ರಿಕ್ ಸ್ಲೇಮನ್ (Rick Slayman) ಶಸ್ತ್ರ ಚಿಕಿತ್ಸೆ ನಡೆದ ಸುಮಾರು ಎರಡು ತಿಂಗಳ ನಂತರ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ರಿಕ್ ಸ್ಲೇಮನ್ ಅವರಿಗೆ ಹಂದಿಯ ಮೂತ್ರಪಿಂಡ ಕಸಿ ಮಾಡಲಾಗಿತ್ತು. ʼʼಹಂದಿ ಮೂತ್ರಪಿಂಡವು ಕನಿಷ್ಠ ಎರಡು ವರ್ಷಗಳವರೆಗೆ ಕಾರ್ಯ ನಿರ್ವಹಿಸುತ್ತದೆ ಎಂದು ನಂಬಿದ್ದೆವು. ಆದರೆ ರಿಕ್ ಸ್ಲೇಮನ್ ಅವರ ಹಠಾತ್‌ ನಿಧನ ಆಘಾತ ತಂದಿದೆʼʼ ಎಂದು ವೈದ್ಯರು ತಿಳಿಸಿದ್ದಾರೆ.

“ರಿಕ್ ಸ್ಲೇಮನ್ ಅವರ ಹಠಾತ್ ನಿಧನದಿಂದ ತೀವ್ರ ದುಃಖವಾಗಿದೆ. ಕಿಡ್ನಿ ಕಸಿಯ ಪರಿಣಾಮದಿಂದ ಅವರು ನಿಧನ ಹೊಂದಿದ್ದಾರೆ ಎಂಬುದಕ್ಕೆ ನಮಗೆ ಯಾವುದೇ ಸೂಚನೆ ಸಿಕ್ಕಿಲ್ಲ. ಸ್ಲೇಮನ್ ಅವರನ್ನು ವಿಶ್ವಾದ್ಯಂತದ ಕಿಡ್ನಿ ಸಮಸ್ಯೆ ಇರುವವರ ಭರವಸೆ ಎಂದೇ ಪರಿಗಣಿಸಲಾಗುತ್ತದೆ. ಸ್ಲೇಮನ್ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತಿದ್ದೇವೆʼʼ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಸ್ಲೇಮನ್ ಅವರಿಗೆ ಮಾರ್ಚ್ 16ರಂದು ಶಸ್ತ್ರಚಿಕಿತ್ಸೆ ನಡೆಸಿ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಟೈಪ್ 2 ಮಧುಮೇಹಿಯಾಗಿದ್ದ ಅವರು ಈ ಹಿಂದೆ 2018ರಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಆದಾಗ್ಯೂ ಐದು ವರ್ಷಗಳ ನಂತರ ಕಸಿ ಮಾಡಿಸಿಕೊಂಡಿದ್ದ ಮೂತ್ರಪಿಂಡ ವಿಫಲವಾಗಲು ಪ್ರಾರಂಭಿಸಿತು ಮತ್ತು ಅಂದಿನಿಂದ ಅವರು ಡಯಾಲಿಸಿಸ್‌ನಲ್ಲಿದ್ದರು.

ಕೊನೆಗೆ ಅವರು ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಳ್ಳಲು ಒಪ್ಪಿಗೆ ನೀಡಿದ್ದರು. ಈ ವೇಳೆ ಅವರು ಇದು ತಾನು ಎದುರಿಸುವಂತಹ ಸಮಸ್ಯೆ ಇರುವವರಿಗೆ ಭರವಸೆಯ ಬೆಳಕನ್ನು ಒದಗಿಸಲಿದೆ ಎಂದು ಹೇಳಿದ್ದರು. ಅದರಂತೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ವೈದ್ಯರ ಪ್ರಯೋಗ ಯಶಸ್ವಿಯಾಗಿತ್ತು. ಆ ಮೂಲಕ ರಿಕ್ ಸ್ಲೇಮನ್ ಹಂದಿ ಮೂತ್ರಪಿಂಡ ಕಸಿ ಸ್ವೀಕರಿಸಿದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ಬಳಿಕ ಮನೆಗೆ ತೆರಳಿದ್ದರು. ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ. ಮನೆಯಲ್ಲಿ ಚಿಕಿತ್ಸೆ ಮುಂದುವರಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು. ʼʼಸ್ಲೇಮನ್‌ಗೆ ಕಸಿ ಮಾಡಲಾದ ಹಂದಿಯ ಮೂತ್ರಪಿಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಕ್ತದಲ್ಲಿನ ತ್ಯಾಜ್ಯವನ್ನು ತೆಗೆದು ಹಾಕುತ್ತಿದ್ದು, ಮೂತ್ರವನ್ನು ಉತ್ಪಾದಿಸುತ್ತದೆ. ದೇಹದ ದ್ರವಗಳನ್ನು ಸಮತೋಲನಗೊಳಿಸುತ್ತದೆʼʼ ಎಂದು ಅಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಇದರಿಂದ ಮುಂಬರುವ ದಿನಗಳಲ್ಲಿ ಮಾನವನ ಮೇಲೆ ಪ್ರಾಣಿಗಳ ಅಂಗಾಂಗ ಕಸಿಯ ಪ್ರಯೋಗದ ಹೊಸ ಯುಗವೊಂದು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದೇ ವಿಶ್ಲೇಷಿಸಲಾಗಿತ್ತು.

ಈ ಹಿಂದೆ ಹಂದಿಯ ಹೃದಯವನ್ನು ಕಸಿ ಮಾಡಿದ ಕೆಲವೇ ವಾರಗಳಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಈ ಪ್ರಯೋಗ ಭರವಸೆ ಮೂಡಿತ್ತು.

ಇದನ್ನೂ ಓದಿ: Pig kidney: ಮನುಷ್ಯನಿಗೆ ಹಂದಿಯ ಕಿಡ್ನಿ ಅಳವಡಿಕೆ ಸಕ್ಸೆಸ್! ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

Continue Reading

ಆರೋಗ್ಯ

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

ಭಾರತೀಯರಿಗಾಗಿಯೇ ವಿಶೇಷವಾಗಿ ಈ ಆಹಾರ ಮಾರ್ಗದರ್ಶನಗಳನ್ನು ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಬಿಡುಗಡೆ ಮಾಡಿದೆ. ಐಎಂಆರ್‌ಸಿ ಅಡಿಯಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ನೇಮಿಸಲಾದ ತಜ್ಞರ ಸಮಿತಿ ಈ ಶಿಫಾರಸಿ ಜೀವನಶೈಲಿಯ ರೋಗಗಳನ್ನು ದೂರ ಇರಿಸಲು ಅಗತ್ಯವಾದ ಸೂಚನೆಗಳನ್ನು 13 ವರ್ಷಗಳ ನಂತರ ಬಿಡುಗಡೆ ಮಾಡಿದೆ. ಯಾವುದೇ ಉತ್ಪನ್ನವನ್ನು ಖರೀದಿಸುವಾಗ ಅದರ ಲೇಬಲ್‌ ಮೇಲೆ ನಮೂದಿಸಿರುವ ಮಾಹಿತಿಯನ್ನು ಪರಿಶೀಲಿಸಿ (Protein Supplements) ಎಂದು ಗ್ರಾಹಕರಿಗೆ ತಿಳಿಸಿದೆ.

VISTARANEWS.COM


on

Protein Supplements
Koo

ದೇಹದ ಸ್ನಾಯುಗಳನ್ನು ಹೆಚ್ಚಿಸುವ ಉದ್ದೇಶದಿಂದ ದೀರ್ಘಕಾಲ ತೆಗೆದುಕೊಳ್ಳುವ ಎಲ್ಲ ಪೂರಕಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಎಂಆರ್‌ಸಿ) ಎಚ್ಚರಿಸಿದೆ. ಬದಲಿಗೆ, ಸಮತೋಲಿತ ಆಹಾರದ ಮೂಲಕವೇ ಸತ್ವಗಳನ್ನು ದೇಹಕ್ಕೆ ಒದಗಿಸುವುದಕ್ಕೆ ಶಿಫಾರಸು ಮಾಡಿದೆ. ಪ್ರೊಟೀನ್‌ ಮತ್ತು ವಿಟಮಿನ್‌ಗಳ (Protein Supplements) ಪೂರಕಗಳನ್ನು ಸೇವಿಸುವ ಬಗ್ಗೆ ಕೆಲವು ಮಾರ್ಗದರ್ಶಿಸೂತ್ರಗಳನ್ನು ಈ ಸಂಸ್ಥೆ ಬಿಡುಗಡೆ ಮಾಡಿದ್ದು, ಉಪ್ಪು, ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳ ಸೇವನೆಗೆ ಕಡಿವಾಣ ಹಾಕುವ ಅಗತ್ಯವನ್ನು ಒತ್ತಿಹೇಳಿದೆ. ಭಾರತೀಯರಿಗಾಗಿಯೇ ವಿಶೇಷವಾಗಿ ಈ ಮಾರ್ಗದರ್ಶನಗಳನ್ನು, ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಬಿಡುಗಡೆ ಮಾಡಿದೆ. ಐಎಂಆರ್‌ಸಿ ಅಡಿಯಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ನೇಮಿಸಲಾದ ತಜ್ಞರ ಸಮಿತಿ ಈ ಶಿಫಾರಸಿ ಜೀವನಶೈಲಿಯ ರೋಗಗಳನ್ನು ದೂರ ಇರಿಸಲು ಅಗತ್ಯವಾದ ಸೂಚನೆಗಳನ್ನು 13 ವರ್ಷಗಳ ನಂತರ ಇದಾಗಿದೆ. ಯಾವುದೇ ಉತ್ಪನ್ನವನ್ನು ಖರೀದಿಸುವಾಗ ಅದರ ಲೇಬಲ್‌ ಮೇಲೆ ನಮೂದಿಸಿರುವ ಮಾಹಿತಿಯನ್ನು ಪರಿಶೀಲಿಸಿ ಎಂದು ಗ್ರಾಹಕರಿಗೆ ತಿಳಿಸಿದೆ.

Protein Supplements

ಪೂರಕಗಳೇಕೆ ಬೇಡ?

ದೀರ್ಘ ಕಾಲದವರೆಗೆ ಪ್ರೊಟೀನ್‌ ಪೂರಕಗಳನ್ನು ಸೇವಿಸುವುದರಿಂದ ಕಿಡ್ನಿ ತೊಂದರೆಗಳು ಕಾಡಬಹುದು; ಮೂಳೆಗಳಲ್ಲಿನ ಖನಿಜಾಂಶ ಕ್ಷೀಣಿಸಬಹುದು. ಹಾಗಾಗಿ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಆಹಾರದ ಮೂಲಕವೇ ತೆಗೆದುಕೊಳ್ಳುವುದು ಸುರಕ್ಷಿತವಾದ ಮಾರ್ಗ ಎಂದು ಸಂಸ್ಥೆ ಹೇಳಿದೆ. ಪ್ರೊಟೀನ್‌ ಪೂರಕಗಳನ್ನು ಮೊಟ್ಟೆ, ಹಾಲು, ಸೋಯ, ಬಟಾಣಿ ಮುಂತಾದ ವಸ್ತುಗಳಿಂದ ಮಾಡಲಾಗುತ್ತದೆ. ಆದರೆ ಕೆಲವು ಉತ್ಪನ್ನಗಳಲ್ಲಿ ರುಚಿ ಹೆಚ್ಚಿಸುವ ಉದ್ದೇಶದಿಂದ ಸಕ್ಕರೆ ಅಥವಾ ಯಾವುದಾದರೂ ಕೃತಕ ವಸ್ತುಗಳನ್ನು ಸೇರಿಸಲಾಗುತ್ತದೆ. ಇಂಥವುಗಳನ್ನು ದೀರ್ಘಕಾಲದವರೆಗೆ ಸೇವಿಸುವುದು ಆರೋಗ್ಯಕ್ಕೆ ಸೂಕ್ತವಲ್ಲ. ಶೇ. ೫೬ಕ್ಕೂ ಹೆಚ್ಚಿನ ಭಾರತೀಯರಿಗೆ ಹೆಚ್ಚಿನ ಸಾರಿ ಅನಾರೋಗ್ಯಗಳು ಕಾಡುವುದು ಅಸಮರ್ಪಕ ಆಹಾರ ಪದ್ಧತಿಯಿಂದ. ಹಾಗಾಗಿ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವುದು ರೋಗಮುಕ್ತವಾಗುವಲ್ಲಿ ಮಹತ್ವದ್ದು ಎಂದು ಹೇಳಿದೆ.

Protein Supplements

ಆಹಾರ ಹೇಗಿರಬೇಕು?

ಸಮತೋಲಿತ ಆಹಾರ ಪದ್ಧತಿಯೆಂದರೆ ಹೇಗಿರಬೇಕು? ಆಹಾರದಲ್ಲಿ ಯಾವುದು ಎಷ್ಟು ಇದ್ದರೆ ಸರಿ ಅಥವಾ ತಪ್ಪು? ಸಂಸ್ಥೆಯ ಪ್ರಕಾರ, ದಿನದ ಒಟ್ಟು ಕ್ಯಾಲರಿಗಳಲ್ಲಿ ಶೇ ೫. ರಷ್ಟು ಮಾತ್ರವೇ ಸಕ್ಕರೆಯ ಕ್ಯಾಲರಿಯಿಂದ ಬರಬಹುದು. ಉಳಿದಂತೆ ಧಾನ್ಯ ಮತ್ತು ಸಿರಿಧಾನ್ಯಗಳಿಂದ ದೊರೆಯುವ ಶಕ್ತಿಯು ಶೇ. 45ನ್ನು ಮೀರುವಂತಿಲ್ಲ. ಕಾಳುಗಳು, ಮಾಂಸ ಮುಂತಾದವುಗಳ ಕ್ಯಾಲರಿ ಶೇ. 15 ಇದ್ದರೆ ಸಾಕಾಗುತ್ತದೆ. ಉಳಿದ ಶಕ್ತಿಗಳೆಲ್ಲ ಕಾಯಿ-ಬೀಜಗಳು, ತರಕಾರಿ-ಹಣ್ಣುಗಳು ಮತ್ತು ಡೇರಿ ಉತ್ಪನ್ನಗಳಿಂದ ಬರಬೇಕು. ಈ ಎಲ್ಲಾ ಕ್ಯಾಲರಿಗಳಲ್ಲೂ ಶೇ. 30ಕ್ಕಿಂತ ಕಡಿಮೆ ಶಕ್ತಿ ಕೊಬ್ಬಿನಿಂದ ಬಂದರೆ ಸಾಕಾಗುತ್ತದೆ. ಆದರೆ ಮಾಂಸ ಮತ್ತು ಕಾಳುಗಳ ಬೆಲೆ ದುಬಾರಿ ಎನ್ನುವ ಕಾರಣಕ್ಕಾಗಿ ಧಾನ್ಯಗಳನ್ನು ಭಾರತೀಯರು ಮಿತಿಮೀರಿ ಬಳಸುತ್ತಿದ್ದಾರೆ. ಇದು ಅತಿಯಾದ ಪಿಷ್ಟದ ಸೇವನೆಗೆ ಕಾರಣವಾಗುತ್ತಿದೆ. ಹಾಗಾಗಿ ಅಗತ್ಯ ಅಮೈನೊ ಆಮ್ಲಗಳು ಮತ್ತು ಕೊಬ್ಬಿನಾಮ್ಲಗಳು ಸರಿಯಾಗಿ ದೊರೆಯದಿದ್ದರೆ, ಸತ್ವಗಳ ಕೊರತೆ ಉಂಟಾಗುತ್ತದೆ. ಮಾತ್ರವಲ್ಲ, ರಕ್ತದೊತ್ತಡ ಮತ್ತು ಟೈಪ್‌ 2 ಮಧುಮೇಹಕ್ಕೂ ಕಾರಣವಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.
ಅವಧಿಗೆ ಮುನ್ನವೇ, ಅಂದರೆ ಪೂರ್ಣಾಯಸ್ಸು ಬದುಕದೆಯೇ ಸಾವನ್ನಪ್ಪುವವರ ಸಂಖ್ಯೆ ಇದರಿಂದ ಹೆಚ್ಚಾಗುತ್ತಿದೆ. ತಪ್ಪಾದ ಆಹಾರ ಪದ್ಧತಿ ಮತ್ತು ಅದರಿಂದ ಬರುತ್ತಿರುವ ಜೀವನಶೈಲಿಯ ರೋಗಗಳನ್ನು ಸರಿಪಡಿಸಿಕೊಳ್ಳುವುದರಿಂದ ಇಂಥ ಸಾವನ್ನು ತಡೆಯಬಹುದು. ಇದಕ್ಕಾಗಿ ಪೋಷಕಾಂಶಗಳು ಸಮತೋಲನೆಯಲ್ಲಿ ದೊರೆಯುವಂತೆ ಆಹಾರ ಸೇವಿಸಬೇಕು. ವ್ಯಾಯಾಮವೆಂಬುದು ಬದುಕಿನ ಭಾಗ ಆಗಿರಬೇಕು. ಸಂಸ್ಕರಿತ ಆಹಾರಗಳು ಹಾಗೂ ಅದರಿಂದ ಬರುವ ಉಪ್ಪು ಮತ್ತು ಸಕ್ಕರೆಯಂಶಗಳನ್ನು ನಿಯಂತ್ರಿಸಬೇಕು. ಆಗ ಮಾತ್ರ ಸತ್ವಗಳ ಕೊರತೆ ಮತ್ತು ಬೊಜ್ಜಿನಂಥ ತೊಂದರೆಗಳಿಂದ ದೂರವಾಗುವುದಕ್ಕೆ ಸಾಧ್ಯ.

ಇದನ್ನೂ ಓದಿ: Vitamin Side Effects: ವಿಟಮಿನ್‌ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?

ಪ್ರೊಟೀನ್‌ ಮೂಲಗಳೇನು?

ಪ್ರೊಟೀನ್‌ ಪೂರಕಗಳು ಬೇಡವೆಂದರೆ, ಅಗತ್ಯ ಪ್ರಮಾಣದ ಸತ್ವ ಯಾವುದರಿಂದ ಬರಬೇಕು? ಎಂಥಾ ಆಹಾರವನ್ನು ಸೇವಿಸಬೇಕು? ಲೀನ್‌ ಮೀಟ್‌ ಅಥವಾ ಕಡಿಮೆ ಕೊಬ್ಬಿನ ಮಾಂಸಗಳು, ಮೀನುಗಳು, ಮೊಟ್ಟೆ, ಡೇರಿ ಉತ್ಪನ್ನಗಳು, ಕಾಳುಗಳು ಮತ್ತು ಕಾಯಿ-ಬೀಜಗಳಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್‌ ನೈಸರ್ಗಿಕವಾಗಿ ದೊರೆಯುತ್ತದೆ.

Continue Reading
Advertisement
Prajwal Revanna Case
ಕರ್ನಾಟಕ3 hours ago

Prajwal Revanna Case: ಅಶ್ಲೀಲ ವಿಡಿಯೊ ಕೇಸ್; ಚೇತನ್, ಲಿಖಿತ್‌ಗೆ 14 ದಿನ ನ್ಯಾಯಾಂಗ ಬಂಧನ‌

IPL 2024
ಪ್ರಮುಖ ಸುದ್ದಿ3 hours ago

IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

Chetan Chandra
ಕರ್ನಾಟಕ3 hours ago

Chetan Chandra: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ; ರಕ್ತ ಬರುವಂತೆ ಥಳಿತ

Virat kohli
Latest4 hours ago

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Sunil Narine
ಪ್ರಮುಖ ಸುದ್ದಿ4 hours ago

Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

vijay Rao herur
ಸಿನಿಮಾ4 hours ago

Vijay Rao Herur: ‘ವಿಜಯದಾಸರು’ ಚಿತ್ರದ ಸಹ ನಟ ವಿಜಯ್‌ ರಾವ್ ಹೇರೂರು ವಿಧಿವಶ

Virat Kohli
ಪ್ರಮುಖ ಸುದ್ದಿ4 hours ago

Virat kohli: ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ; ವಿಡಿಯೊ ನೋಡಿ

Ravindra Jadeja
ಕ್ರೀಡೆ4 hours ago

Ravindra Jadeja : ವಿಕೆಟ್​ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್​; ಇಲ್ಲಿದೆ ವಿಡಿಯೊ

Rain News
ಕರ್ನಾಟಕ4 hours ago

Rain News: ಬಾಗಲಕೋಟೆಯಲ್ಲಿ ಸಿಡಿಲಿಗೆ ಬಾಲಕ ಬಲಿ; ಬೆಳಗಾವಿಯ ಮನೆಗಳಿಗೆ ನುಗ್ಗಿದ ಮಳೆ ನೀರು

IPL 2024
ಪ್ರಮುಖ ಸುದ್ದಿ5 hours ago

IPL 2024 : ಅತಿಯಾಗಿ ಸಂಭ್ರಮಿಸುತ್ತಿದ್ದ ಡೆಲ್ಲಿ ಬೌಲರ್​ ರಸಿಕ್ ಸಲಾಮ್​ನನ್ನು ತಳ್ಳಿದ ರಜತ್​ ಪಾಟೀದಾರ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case I was never kidnapped and son has made a false complaint Video of victim goes viral
ಕ್ರೈಂ8 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ8 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ9 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ12 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ14 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ21 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ3 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ3 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

ಟ್ರೆಂಡಿಂಗ್‌