World Heart Day: ಈ ಸಂಗತಿಗಳನ್ನು ಪಾಲಿಸಿದರೆ ಹೃದಯಾಘಾತದ ರಿಸ್ಕೇ ಇಲ್ಲ! - Vistara News

ಆರೋಗ್ಯ

World Heart Day: ಈ ಸಂಗತಿಗಳನ್ನು ಪಾಲಿಸಿದರೆ ಹೃದಯಾಘಾತದ ರಿಸ್ಕೇ ಇಲ್ಲ!

ಸಣ್ಣ ಮಕ್ಕಳೂ ಹೃದಯಾಘಾತಕ್ಕೆ (World Heart Day) ತುತ್ತಾಗುತ್ತಿರುವ ಇಂದಿನ ದಿನಗಳಲ್ಲಿ, ನೀರ ಮೇಲಣ ಗುಳ್ಳೆ ಎಂಬಂತಾಗಿದೆಯಲ್ಲ ಬದುಕು. ಯಾಕೆ ಹೀಗೆ ಎಂದು ಕೇಳಿದರೆ, ಅನುವಂಶೀಯತೆಯಿಂದ ಹಿಡಿದು ಜೀವನಶೈಲಿಯವರೆಗೆ ಹಲವಾರು ಕಾರಣಗಳು ದೊರೆಯಬಹುದು. ಈ ಎಲ್ಲ ಅಡಚಣೆಗಳ ನಡುವೆ ಹೃದಯವನ್ನು (heart) ಸುಭದ್ರವಾಗಿ ಇರಿಸಿಕೊಳ್ಳುವುದು ಹೇಗೆ? ಈ ಲೇಖನ ಓದಿ.

VISTARANEWS.COM


on

World Heart Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎದೆ ಗುಂಡಿಗೆಯ ಬಗ್ಗೆ ನಾನಾ ಕಲ್ಪನೆಗಳಿವೆ. ಗಟ್ಟಿ ಗುಂಡಿಗೆ, ಕುದಿಯುವ ಗುಂಡಿಗೆ, ಕಲ್ಲಿನಂಥ ಗುಂಡಿಗೆ… ಹೀಗೆಲ್ಲ. ಆದರೆ ಆರೋಗ್ಯಪೂರ್ಣ ಗುಂಡಿಗೆ ಎಂಬ ಬಗ್ಗೆ ನಾವೆಷ್ಟು ಗಮನ ನೀಡುತ್ತೇವೆ? ಸಣ್ಣ ಮಕ್ಕಳೂ ಹೃದಯಾಘಾತಕ್ಕೆ ತುತ್ತಾಗುತ್ತಿರುವ ಇಂದಿನ ದಿನಗಳಲ್ಲಿ, ನೀರ ಮೇಲಣ ಗುಳ್ಳೆ ಎಂಬಂತಾಗಿದೆಯಲ್ಲ ಬದುಕು. ಯಾಕೆ ಹೀಗೆ ಎಂದು ಕೇಳಿದರೆ, ಅನುವಂಶೀಯತೆಯಿಂದ ಹಿಡಿದು ಜೀವನಶೈಲಿಯವರೆಗೆ ಹಲವಾರು ಕಾರಣಗಳು ದೊರೆಯಬಹುದು. ಈ ಎಲ್ಲಾ ಅಡಚಣೆಗಳ ನಡುವೆ ಹೃದಯವನ್ನು ಸುಭದ್ರವಾಗಿ ಇರಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಜಾಗೃತಿ ಮೂಡಿಸಲೆಂದೇ ಇಂದು, ಸೆಪ್ಟೆಂಬರ್‌ 29ನೇ ದಿನವನ್ನು, ವಿಶ್ವ ಹೃದಯ ದಿನವನ್ನಾಗಿ (world heart day) ಗುರುತಿಸಲಾಗಿದೆ.

World Health Day 2023

ಹೃದಯದ ಆರೋಗ್ಯ ಕಾಪಾಡಿಕೊಳ್ಳುವಂಥ ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಕಷ್ಟವೇನಲ್ಲ. ಹೃದಯದ ತೊಂದರೆಗಳು ಬೆನ್ನುಬಿದ್ದ ಮೇಲೆ, ಬದುಕಿಡೀ ಔಷಧಿ ನುಂಗುವುದಕ್ಕಿಂತ ಆರೋಗ್ಯಪೂರ್ಣ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಮೇಲಲ್ಲವೇ? ಬದುಕಿಗೆ ಮತ್ತು ಹೃದಯಕ್ಕೆ (world heart day) ಪೂರಕವಾದಂಥ ಒಂದಿಷ್ಟು ಸರಳ ಬದಲಾವಣೆಗಳು ಇಲ್ಲಿವೆ-

Helthy foods

ಆಹಾರವೇ ಪ್ರಧಾನ

ʻಗಟ್ಟ್‌ ಈಸ್‌ ದ ಬಟ್ಟ್‌ ಎವೆರಿ ಪ್ರಾಬ್ಲಂʼ (ಹೊಟ್ಟೆಯೇ ಸರ್ವ ರೋಗಕ್ಕೂ ಮೂಲ) ಎಂಬ ಮಾತಿದೆ. ನಾವೇನು ತಿನ್ನುತ್ತೇವೆ, ಎಷ್ಟು ಮತ್ತು ಹೇಗೆ ತಿನ್ನುತ್ತೇವೆ ಎಂಬುದು ನಮ್ಮ ದೇಹ-ಮನಸ್ಸುಗಳ ಆರೋಗ್ಯವನ್ನು ನಿರ್ಧರಿಸುತ್ತದೆ ಎಂಬುದು ಈ ಮಾತಿನ ತಾತ್ಪರ್ಯ. ಸುಲಭಕ್ಕೆ ಕೈಗೆಟುಕುವ, ನಾಲಿಗೆ ಬಯಸುವ, ತಯಾರಿಸುವ ಗೋಜಿಲ್ಲದ ಎಲ್ಲಾ ಆಹಾರಗಳೂ ಆರೋಗ್ಯಕ್ಕೆ ಒಳ್ಳೆಯದು ಎನ್ನಲು ಸಾಧ್ಯವಿಲ್ಲ. ಹಾಗಾಗಿ ಫಾಸ್ಟ್‌ಫುಡ್‌, ಸಂಸ್ಕರಿತ ಆಹಾರಗಳು, ಉಪ್ಪು-ಸಕ್ಕರೆ-ಕೊಬ್ಬಿನಿಂದ ತುಂಬಿರುವ ತಿನಿಸುಗಳನ್ನು ದೂರ ಮಾಡಿ. ತಾಜಾ ಹಣ್ಣುಗಳು, ತರಕಾರಿಗಳು, ಇಡೀ ಧಾನ್ಯಗಳು, ಒಮೇಗಾ 3 ಕೊಬ್ಬಿನಾಮ್ಲವಿರುವ ಆಹಾರಗಳು, ವಿಟಮಿನ್‌ ಡಿ- ಇವೆಲ್ಲಾ ಹೃದಯದ ಆರೋಗ್ಯಕ್ಕೆ ಅಗತ್ಯ.

woman doing yoga fitness exercise

ವ್ಯಾಯಾಮ

ದೇವರ ಮುಡಿಗೆ ಹೂವು ತಪ್ಪಿದರೂ ನಿತ್ಯದ ವ್ಯಾಯಾಮ ತಪ್ಪಬಾರದು! ಹೆಚ್ಚೇನಲ್ಲ, ಪ್ರತಿದಿನ 30 ನಿಮಿಷಗಳ ವ್ಯಾಯಾಮವೂ ಹೃದಯವನ್ನು ಆರೋಗ್ಯಪೂರ್ಣವಾಗಿ ಇರಿಸುತ್ತದೆ; ತೂಕ ಕಡಿಮೆ ಮಾಡಿ, ಬಿ.ಪಿ, ಕೊಲೆಸ್ಟ್ರಾಲ್‌ನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ನಡಿಗೆ, ಓಡುವುದು, ಯೋಗ, ಪಿಲಾಟೆ, ಝುಂಬಾ, ಸೈಕಲ್‌ ಹೊಡೆಯುವುದು, ಈಜು, ನೃತ್ಯ, ಬ್ಯಾಡ್ಮಿಂಟನ್‌, ಸ್ಕ್ವಾಷ್‌ ನಂಥ ಯಾವುದಾದರೂ ಒಳಾಂಗಣ ಆಟಗಳು- ಇಂಥ ಯಾವುದೂ ಆದೀತು. ದುಬಾರಿ ಸದಸ್ಯತ್ವ ಕೊಟ್ಟು ಅತ್ಯಾಧುನಿಕ ಜಿಮ್‌ನಲ್ಲೇ ಬೆವರು ಹರಿಸಬೇಕೆಂದಿಲ್ಲ. ಯಾವ ದೈಹಿಕ ಚಟುವಟಿಕೆ ನಿಮಗೆ ಪ್ರಿಯವೋ ಅದನ್ನೇ ಮಾಡಿ, ಆದರೆ ನಿಯಮಿತವಾಗಿ ಮಾಡಿ.

Man Drinking Alcohol and Smoking Cigarette

ಚಟಗಳಿದ್ದರೆ ಕಷ್ಟ!

ಉಳಿದಂತೆ ಎಲ್ಲಾ ಒಳ್ಳೆಯ ಅಭ್ಯಾಸಗಳಿದ್ದು, ಮದ್ಯ, ಸಿಗರೇಟ್‌ನಂಥ ಚಟಗಳಿವೆಯೇ? ಸರ್ವ ಬಣ್ಣ ಮಸಿ ನುಂಗಿದಂತೆ! ಅಲ್ಪ ಪ್ರಮಾಣದ ಅಲ್ಕೋಹಾಲನ್ನೂ ನಿಯಮಿತವಾಗಿ ಹೀರುತ್ತಿದ್ದರೆ ಹೃದಯ ಪತರಗುಟ್ಟುತ್ತದೆ ಎನ್ನುತ್ತವೆ ಅ‍ಧ್ಯಯನಗಳು. ಇನ್ನು ಸಿಗರೇಟ್‌ ಅಂತೂ ಸಜೀವವಾಗಿಯೇ ವ್ಯಕ್ತಿಯನ್ನು ಸುಡುತ್ತಾ ಹೋಗುತ್ತದೆ. ಹಾಗಾಗಿ ಇವುಗಳನ್ನು ಬಿಡದಿದ್ದರೆ ಖಂಡಿತಕ್ಕೂ ಉಳಿಗಾಲವಿಲ್ಲ.

Young Woman Sleeping Soundly

ನಿದ್ದೆ ಮುಖ್ಯ

ಪ್ರತಿದಿನ 7-8 ತಾಸು ಗಾಢವಾದ ನಿದ್ದೆ ಇರಲೇಬೇಕು. ಅನಿಯಮಿತವಾದ ನಿದ್ದೆ, ಅಪೂರ್ಣವಾದ ನಿದ್ದೆಯಿಂದ ಹೃದಯದ ಮೇಲೆ ಅಳಿಸಲಾಗದಂಥ ಬರೆ ಬೀಳುತ್ತದೆ. ಒತ್ತಡ ನಿಯಂತ್ರಣ ಮಾಡುವಲ್ಲಿ, ದಿನಕ್ಕೆಂಟು ತಾಸು ನಿದ್ದೆ ಮಾಡುವುದು ಗಮನಾರ್ಹ ಪರಿಣಾಮ ಬೀರುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಅನುಕೂಲ. ರಕ್ತದ ಏರೊತ್ತಡ ಇಲ್ಲದಿದ್ದರೆ ಹೃದಯಾಘಾತ, ಮೆದುಳಿನ ಪಾರ್ಶ್ವವಾಯುವಿನಂಥ ಜೀವಘಾತಕ ಸಮಸ್ಯೆಗಳನ್ನು ದೂರ ಮಾಡಬಹುದು

Stressed at Work

ಒತ್ತಡ ನಿವಾರಣೆ

ದೇಹ ಮತ್ತು ಮನಸ್ಸಿನ ಮೇಲಿನ ಒತ್ತಡ ಜೀವನದಲ್ಲಿ ನರಕ ಸೃಷ್ಟಿ ಮಾಡಬಲ್ಲದು ಎಂದು ಅತಿಶಯವಲ್ಲ. ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ನಶಿಸುತ್ತದೆ. ದೇಹದಲ್ಲಿ ಉರಿಯೂತ ಹೆಚ್ಚಿ ಬೇಡದ ರೋಗಗಳ ಆತಿಥ್ಯ ವಹಿಸಿಕೊಳ್ಳಬೇಕಾಗುತ್ತದೆ. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ, ಯೋಗ, ಧ್ಯಾನ, ಪ್ರಾಣಾಯಾಮದಂಥ ತಂತ್ರಗಳು ಒತ್ತಡ ನಿವಾರಣೆಯಲ್ಲಿ ಅದ್ಭುತ ಪರಿಣಾಮ ನೀಡಬಲ್ಲವು. ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಅವಶ್ಯಕ

Doctor Reassuring and Supporting Young Woman While Talking to Her about Her Health Issues

ಆರೋಗ್ಯ ತಪಾಸಣೆ

ನಲವತ್ತು ವರ್ಷಗಳ ನಂತರ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುವುದು ಒಳ್ಳೆಯದು. ಕುಟುಂಬದಲ್ಲಿ ಹೃದ್ರೋಗಗಳ ಚರಿತ್ರೆಯಿದ್ದರೆ ಇದು ಅಗತ್ಯ. ಮಳೆಯಲ್ಲಿ ನೆನೆದ ಮೇಲೆ ಛತ್ರಿ ಹಿಡಿಯುವುದಕ್ಕಿಂತ, ಮೊದಲೇ ಕೊಡೆ ಬಿಚ್ಚುವುದು ಜಾಣತನವಲ್ಲವೇ? ನಿಯಮಿತವಾಗಿ ಔಷಧಗಳನ್ನು ಸೇವಿಸುವುದಕ್ಕೆ ವೈದ್ಯರು ಸೂಚಿಸಿದರೆ, ಅದನ್ನು ಪಾಲಿಸಿ. ಎದೆ ಗುಂಡಿಗೆ ಕ್ಷೇಮವಾಗಿರಲಿ.

ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Dengue Scare: ಬೆಂಗಳೂರಿನಲ್ಲಿ ತೀವ್ರವಾಗಿ ಹರಡುತ್ತಿರುವ ಡೆಂಗ್ಯೂ; ನೂರಾರು ಮಂದಿ ಆಸ್ಪತ್ರೆಗೆ ದಾಖಲು

ಬೆಂಗಳೂರಿನಲ್ಲಿ ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ಡೆಂಗ್ಯೂ (Dengue Scare) ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ಡೆಂಗ್ಯೂ ಪೀಡಿತರ ಸಂಖ್ಯೆ 7,000 ದಾಟಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳು, ವೃದ್ಧರಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈಗಾಗಲೇ ಬೆಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಡಲು ವಿಫಲರಾದ ಆಸ್ತಿ ಮಾಲೀಕರ ವಿರುದ್ಧ 500 ರೂಪಾಯಿ ದಂಡ ವಿಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

VISTARANEWS.COM


on

By

Dengue Scare
Koo

ಬೆಂಗಳೂರು: ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು (Dengue Scare) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ (silicon city) ಬೆಂಗಳೂರಿನಲ್ಲಿ (bengaluru) ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಲಾಗುತ್ತಿದೆ. ಅನೇಕರು ಸೊಳ್ಳೆ ಬ್ಯಾಟ್‌ಗಳನ್ನು (Mosquito Bats) ಖರೀದಿಸುತ್ತಿದ್ದು, ಮನೆ ಸುತ್ತಮುತ್ತ ಸೊಳ್ಳೆಗಳು ಬರದಂತೆ ಮುನ್ನೆಚ್ಚರಿಕೆ ವಹಿಸುತ್ತಿರುವುದು ಕಂಡು ಬರುತ್ತಿದೆ. ಈ ನಡುವೆ, ಡೆಂಗ್ಯೂ ಪೀಡಿತರಾಗಿ ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಡೆಂಗ್ಯೂವಿನಿಂದಾಗಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸಿಲಿಕಾನ್ ಸಿಟಿಯು ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳನ್ನು ದಾಖಲಿಸಿದೆ. ರಾಜ್ಯಾದ್ಯಂತ ಒಟ್ಟು ಸಂಖ್ಯೆ 7,000 ದಾಟಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳು, ವೃದ್ಧರಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಮನೆಯಲ್ಲಿ ಹೆಚ್ಚುವರಿ ಸೊಳ್ಳೆ ಬ್ಯಾಟ್‌ಗಳನ್ನು ಖರೀದಿಸುವ ಅವಶ್ಯಕತೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು.

ಗಿಡಗಳಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಬಾವಲಿಗಳು ಹೆಚ್ಚುತ್ತಿದೆ. ಜೂನ್‌ನಲ್ಲಿ ಭಾರೀ ಮಳೆಯು ಸೊಳ್ಳೆಗಳಿಗೆ ಸೂಕ್ತವಾದ ಸಂತಾನೋತ್ಪತ್ತಿಯ ಸ್ಥಳವನ್ನು ಸೃಷ್ಟಿಸಿದ ಅನಂತರ ಬಾವಲಿಗಳೂ ಹೆಚ್ಚಾಗಿವೆ.


ಬೆಂಗಳೂರಿನಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮಗಳು

ಈಗಾಗಲೇ ಬೆಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಡಲು ವಿಫಲರಾದ ಆಸ್ತಿ ಮಾಲೀಕರ ವಿರುದ್ಧ 500 ರೂಪಾಯಿ ದಂಡ ವಿಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದ ಸಭೆಯಲ್ಲಿ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹರಡುವ ಡೆಂಗ್ಯೂ ನಿಯಂತ್ರಣದ ಬಗ್ಗೆ ಗಮನಹರಿಸಿ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ತಮ್ಮ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳದ ಆಸ್ತಿ ಮಾಲೀಕರಿಗೆ ಗರಿಷ್ಠ 50೦ ರೂಪಾಯಿ ದಂಡ ವಿಧಿಸುವಂತೆ ಆರೋಗ್ಯ ಸಚಿವರು ಸೂಚಿಸಿದ್ದಾರೆ.

ಇದನ್ನೂ ಓದಿ: Bomb Threat: ಬಾಯ್‌ ಫ್ರೆಂಡ್‌ ಬಿಟ್ಟು ಹೋಗ್ತಾನೆ ಎಂದು ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ!

ಇದಲ್ಲದೆ, ಬೆಂಗಳೂರಿನಲ್ಲಿ ಡೆಂಗ್ಯೂ ಹರಡುವುದನ್ನು ತಡೆಯಲು ಲಾರ್ವಾ ಪರೀಕ್ಷೆ ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಬಿಎಂಪಿಯಿಂದ ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ದಟ್ಟ ಜನಸಂಖ್ಯೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸುಮಾರು 25 ಲಕ್ಷ ನಗರ ಬಡವರನ್ನು ಸಮೀಕ್ಷೆಗಾಗಿ ಎಲ್ಲಾ ಬಿಬಿಎಂಪಿ ವಲಯಗಳಲ್ಲಿ ಗುರುತಿಸಲಾಗಿದೆ. ಅಲ್ಲಿ ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತರು, ಎಎನ್‌ಎಂಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸ್ವಯಂಸೇವಕರು ಇರಲಿದ್ದಾರೆ. ತಲಾ 1,000 ಮನೆಗಳನ್ನು ಒಳಗೊಂಡ ಬ್ಲಾಕ್ ರಚಿಸಲು ನಿರ್ದೇಶನ ನೀಡಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಕನಿಷ್ಠ 12-14 ಲಕ್ಷ ಮನೆಗಳನ್ನು ಆವರಿಸುವ ಗುರಿ ಹೊಂದಲಾಗಿದೆ.

Continue Reading

ಆರೋಗ್ಯ

Foods For Hormone Balance: ಮಹಿಳೆಯರೇ, ಹಾರ್ಮೋನಿನ ಸಮತೋಲನಕ್ಕಾಗಿ ಈ ಆಹಾರಗಳನ್ನು ಮರೆಯದೇ ಸೇವಿಸಿ

Foods for Hormone Balance: ಮಹಿಳೆಯ ಶಕ್ತಿ, ಲೈಂಗಿಕ ಆರೋಗ್ಯ, ಸಂತಾನೋತ್ಪತ್ತಿ ಕ್ರಿಯೆ, ಮೂಡು, ತೂಕ, ಮಾಸಿಕ ಚಕ್ರವೂ ಸೇರಿದಂತೆ ಪ್ರತಿಯೊಂದು ಆಕೆಯ ಹಾರ್ಮೋನಿನ ಆರೋಗ್ಯದ ಮೇಲೆ ನಿರ್ಧರಿತವಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಮಹಿಳೆಯನ್ನು ಬಾಧಿಸುವ ಸಮಸ್ಯೆಯೇ ಇದು. ಮನೆಯವರ ಕಷ್ಟಸುಖಗಳು, ಹೊರಗೆ ದುಡಿದು ಬಂದು ಮನೆಯನ್ನು ಸಂಭಾಳಿಸುವ ಆಧುನಿಕ ಮಹಿಳೆ ಬಹಳಷ್ಟು ಸಾರಿ ತನ್ನ ಆರೋಗ್ಯದ ನಿರ್ಲಕ್ಷ್ಯ ಮಾಡುತ್ತಾಳೆ. ಪರಿಣಾಮವಾಗಿ ಇಂತಹ ಸಮಸ್ಯೆಗಳು ಆಕೆಯನ್ನು ಬೆಂಬಿಡದೆ ಕಾಡುತ್ತವೆ. ಹಾಗಾದರೆ ಸರಿಯಾದ ಆಹಾರಕ್ರಮ ಪಾಲಿಸುವುದು ಹೇಗೆ?

VISTARANEWS.COM


on

Foods For Hormone Balance
Koo

ಮಹಿಳೆಯರ ಆರೋಗ್ಯದಲ್ಲಿ ಹಾರ್ಮೋನಿನ (Foods for Hormone Balance) ಆರೋಗ್ಯಕ್ಕೆ ಬಹಳ ಮುಖ್ಯವಾದ ಸ್ಥಾನವಿದೆ. ಆಕೆಯ ಹಾರ್ಮೋನುಗಳು ಸಮತೋಲನದಲ್ಲಿದ್ದರೆ ಆಕೆ ಆರೋಗ್ಯವಾಗಿದ್ದಾಳೆ ಎಂದರ್ಥ. ಆಕೆಯ ಶಕ್ತಿ, ಲೈಂಗಿಕ ಆರೋಗ್ಯ, ಸಂತಾನೋತ್ಪತ್ತಿ ಕ್ರಿಯೆ, ಮೂಡು, ತೂಕ, ಮಾಸಿಕ ಚಕ್ರವೂ ಸೇರಿದಂತೆ ಪ್ರತಿಯೊಂದು ಆಕೆಯ ಹಾರ್ಮೋನಿನ ಆರೋಗ್ಯದ ಮೇಲೆ ನಿರ್ಧರಿತವಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಮಹಿಳೆಯನ್ನು ಬಾಧಿಸುವ ಸಮಸ್ಯೆಯೇ ಇದು. ಮನೆಯವರ ಕಷ್ಟಸುಖಗಳು, ಹೊರಗೆ ದುಡಿದು ಬಂದು ಮನೆಯನ್ನು ಸಂಭಾಳಿಸುವ ಆಧುನಿಕ ಮಹಿಳೆ ಬಹಳಷ್ಟು ಸಾರಿ ತನ್ನ ಆರೋಗ್ಯದ ನಿರ್ಲಕ್ಷ್ಯ ಮಾಡುತ್ತಾಳೆ. ಪರಿಣಾಮವಾಗಿ ಇಂತಹ ಸಮಸ್ಯೆಗಳು ಆಕೆಯನ್ನು ಬೆಂಬಿಡದೆ ಕಾಡುತ್ತವೆ. ಆಹಾರಕ್ರಮದಲ್ಲಿ ಕೊಂಚ ವ್ಯತ್ಯಾಸ, ಆರೋಗ್ಯಕರ ಜೀವನ ಪದ್ಧತಿ ಹಾಗೂ ಸ್ವಂತ ಕಾಳಜಿ, ಮಾಡಿದರೆ, ಈ ಸಮಸ್ಯೆಗಳು ಬರದಂತೆ ತಡೆಯಬಹುದು. ಮೆನೋಪಾಸ್‌ ಎಂಬ ಸಂದಿಗ್ಧದ ಹೊತ್ತಿನಲ್ಲಿ ಆಕೆ ಆರೋಗ್ಯಕರವಾಗಿ ಮತ್ತಷ್ಟು ಆತ್ಮವಿಶ್ವಾಸದಿಂದ ಮುನ್ನಡೆಯಬಹುದು. ಬನ್ನಿ, ಹಾರ್ಮೋನಿನ ಸಮಸ್ಯೆ ಎದುರಿಸುವ ಪ್ರತಿ ಮಹಿಳೆಯೂ ಯಾವೆಲ್ಲ ಸೂಪರ್‌ಫುಡ್‌ಗಳನ್ನು ತನ್ನ ನಿತ್ಯದ ಆಹಾರಕ್ರಮದಲ್ಲಿ ಸೇರಿಸಿಕೊಂಡು ಲಾಭ ಪಡೆಯಬಹುದು ಎಂಬುದನ್ನು ನೋಡೋಣ.

Flax Seeds with Pottery

ಅಗಸೆ ಬೀಜ

ಅಗಸೆ ಬೀಜ ಅಥವಾ ಫ್ಲ್ಯಾಕ್‌ಸೀಡ್‌ನಲ್ಲಿ ಲಿಗ್ನನ್‌ ಹೇರಳವಾಗಿದ್ದು, ಇವು ಫೈಟೀ ಎಸ್ಟ್ರೋಜೆನ್‌ಗಳಾಗಿದ್ದು ಇವು ಇಸ್ಟ್ರೋಜೆನ್‌ ಮಟ್ಟದ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ಗಳೂ ಹೇರಳವಾಗಿದ್ದು, ಹಾರ್ಮೋನಿನ ಆರೋಗ್ಖಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶವಾಗಿದೆ. ಹಾಗಾಗಿ ಅಗಸೆ ಬೀಜವನ್ನು ಪುಡಿ ಮಾಡಿ ಅಥವಾ ಕ್ರಶ್‌ ಮಾಡಿ, ಬಳಕೆ ಮಾಡುವ ಮೂಲಕ ಲಾಭ ಪಡೆಯಬಹುದು.

Fatty Fish Joint Pain Relief Foods

ಸಾಲ್ಮನ್‌

ಸಾಲ್ಮನ್‌ನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ ಹೇರಳವಾಗಿದ್ದು, ದೇಹದ ಉರಿಯೂತವನ್ನು ಕಡಿಮೆ ಮಾಡುವ ಅತ್ಯಂತ ಅಗತ್ಯವಾದ ಹಾರ್ಮೋನಿನ ಉತ್ಪಾದನೆಗೆ ಪ್ರಚೋದಿಸುತ್ತದೆ. ದೇಹದ ಜೀವಕೋಶಗಳ ಪದರಗಳ ಆರೋಗ್ಯಕ್ಕೂ ಈ ಪೋಷಕಾಂಶ ಬೇಕು. ಯಾಕೆಂದರೆ, ತಿಂದ ಆಹಾರದ ಪೋಷಕಾಂಶಗಳು ಜೀವಕೋಶಗಳಿಗೆ ತಲುಪಬೇಕಿದ್ದರೆ ಅವುಗಳ ಪದರದ ಮೂಲಕ ಪ್ರವೇಶ ಸಲಭವಾಗಬೇಕು. ಈ ಎಲ್ಲ ಕಾರಣಗಳಿಗೆ ಒಮೆಗಾ 3 ಫ್ಯಾಟಿ ಆಸಿಡ್‌ ಬಹಳ ಮುಖ್ಯ. ಅದು ಸಾಲ್ಮನ್‌ನಲ್ಲಿದೆ.

Avocado Anti Ageing Fruits Avocados contain healthy monounsaturated fats and vitamin E, which are beneficial for skin health and preventing oxidative damage.

ಬೆಣ್ಣೆಹಣ್ಣು

ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯಕರ ಕೊಬ್ಬಿದೆ. ಪೊಟಾಶಿಯಂ, ನಾರಿನಂಶ, ಮೆಗ್ನೀಶಿಯಂ ಸೇರಿದಂತೆ ಎಲ್ಲ ಪೋಷಕಾಂಶಗಳೂ ಇದರಲ್ಲಿ ಇರುವುದರಿಂದ ಹಾರ್ಮೋನಿನ ಆರೋಗ್ಯಕ್ಕೆ ಇದು ಒಳ್ಳೆಯದು.

Green leafy vegetables like celery and spinach are high in sodium and cause blood clots Foods To Avoid For Blood Pressure

ಹಸಿರು ಸೊಪ್ಪು ತರಕಾರಿ

ಮಹಿಳೆಯರು ಹಸಿರು ಸೊಪ್ಪು ತರಕಾರಿಗಳ ಸೇವನೆ ಹೆಚ್ಚು ಮಾಡಬೇಕು. ಇದರಲ್ಲಿ ಮೆಗ್ನೀಶಿಯಂ ಅಧಿಕವಾಗಿರುತ್ತವೆ. ಮೆಗ್ನೀಶಿಯಂ ಕಾರ್ಟಿಸಾಲ್‌ ಮಟ್ಟವನ್ನು ಸಮತೋಲಗೊಳಿಸಲು ನೆರವಾಗುತ್ತದೆ. ಹಾಗೆಯೇ ಇವುಗಳಲ್ಲಿರುವ ವಿಟಮಿನ್‌ ಬಿ6, ಪ್ರೊಜೆಸ್ಟೆರಾನ್‌ ಉತ್ಪಾದನೆಯನ್ನೂ ಪ್ರೋತ್ಸಾಹಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಿ, ಹಾರ್ಮೋನಿನ ಮಟ್ಟವನ್ನು ಸಮತೋಲನಗೊಳಿಸಲು ಇಂತಹ ಆಹಾರ ಮಹಿಳೆಗೆ ಮುಖ್ಯ.

Sweet potatoes have the ability to control diabetes and prevent cancer

ಸಿಹಿಗೆಣಸು

ಸಿಹಿ ಗೆಣಸಿನಲ್ಲಿ ಹೆಚ್ಚು ಬೀಟಾ ಕೆರಟಿನ್‌ ಇದ್ದು ಇದು ಹಾರ್ಮೋನಿನ ಉತ್ಪಾದನೆಗೆ ಬಹಳ ಒಳ್ಳೆಯದು. ಇದರಲ್ಲಿ ನಾರಿನಂಶವೂ ಹೇರಳವಾಗಿದೆ. ದೇಹದ ರಕ್ತದ ಮಟ್ಟವನ್ನು ಸಮತೋಲನಗೊಳಿಸಲೂ ಇದು ನೆರವಾಗುತ್ತದೆ.

Raw Turmeric with Powder Cutout

ಅರಿಶಿನ

ಕರ್ಕ್ಯುಮಿನ್‌ ಎಂಬ ಆಂಟಿ ಇನ್‌ಫ್ಲಮೇಟರಿ ಅಂಶಗಳನ್ನು ಹೊಂದಿರುವ ಅರಿಶಿನ ಮಹಿಳೆಯ ಹಾರ್ಮೋನಿನ ಸಮತೋಲನಕ್ಕೂ ಬಹಳ ಮುಖ್ಯ. ಪಿತ್ತಕೋಶದ ಆರೋಗ್ಯಕ್ಕೆ, ಹಾರ್ಮೋನ್‌ ಡಿಟಾಕ್ಸಿಫಿಕೇಶನ್‌ಗೆ ಇದು ಒಳ್ಳೆಯದು.

Dry Seeds

ಒಣಬೀಜಗಳು

ಬಾದಾಮಿ, ವಾಲ್ನಟ್‌, ಚಿಯಾ ಬೀಜಗಳು, ಕುಂಬಳಕಾಯಿ ಬೀಜಗಳು ಸೇರಿದಂತೆ ಒಣ ಬೀಜಗಳಲ್ಲಿ ಫ್ಯಾಟಿ ಆಸಿಡ್‌ಗಳು, ವಿಟಮಿನ್‌ಗಳು, ಪ್ರೊಟೀನ್‌ ಹಾಗೂ ಖನಿಜಾಂಶಗಳು ಹೇರಳವಾಗಿರುತ್ತವೆ. ಇವು ಮಹಿಳೆಯ ಸಂಪೂರ್ಣ ಆರೋಗ್ಯಕ್ಕೆ ಅತ್ಯಂತ ಮುಖ್ಯ.

homemade curd in a clay pot Stomach Bloating Relief

ಮೊಸರು

ಪ್ರೊಬಯಾಟಿಕ್‌ ಗುಣಗಳಿರುವ ಆಹಾರಗಳೂ ಮಹಿಳೆಗೆ ಮುಖ್ಯ. ಮೊಸರಿನಲ್ಲಿ ಈ ಗುಣವಿದ್ದು ಇದು ಹಾರ್ಮೋನಿನ ಆರೋಗ್ಯಕ್ಕೆ ಬಹಳ ಮುಖ್ಯ. ಮಹಿಳೆಗೆ ವಯಸ್ಸಾದಂತೆ ಕ್ಯಾಲ್ಶಿಯಂ ಅಗತ್ಯ ಹೆಚ್ಚು. ಈ ಕ್ಯಾಲ್ಶಿಯಂ ಇದರಲ್ಲಿ ದೊರೆಯುವ ಕಾರಣ, ಮೊಸರು ಸೇರಿದಂತೆ ಕ್ಯಾಲ್ಶಿಯಂ ಹೆಚ್ಚಿರುವ ಆಹಾರಗಳನ್ನು ಆಕೆ ನಿತ್ಯಾಹಾರದಲ್ಲಿ ಬಳಸಬೇಕು.

ಇದನ್ನೂ ಓದಿ: Saffron For Baby: ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆಯೇ?

Continue Reading

ಕಲಬುರಗಿ

Kalaburagi News : ಆಕ್ಸಿಜನ್ ಸೋರಿಕೆ! ತಾಲೂಕು ಆಸ್ಪತ್ರೆಯಿಂದ ಹೊರಗೆ ಓಡಿದ ರೋಗಿಗಳು

Kalaburagi News : ತಾಲೂಕು ಆಸ್ಪತ್ರೆ ಆವರಣದಲ್ಲಿದ್ದ ಘಟಕದಿಂದ ಆಕ್ಸಿಜನ್‌ ಸೋರಿಕೆ ಆಗಿತ್ತು. ಈ ವಿಷಯ ತಿಳಿದ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳು ಹೊರಗೆ ಓಡಿ ಬಂದಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳ, ಪೊಲೀಸರು ದೌಡಾಯಿಸಿದ್ದರು.

VISTARANEWS.COM


on

By

kalaburagi news
Koo

ಕಲಬುರಗಿ: ಕಲಬುರಗಿ ಜಿಲ್ಲೆಯ (Kalaburagi News) ಚಿಂಚೊಳ್ಳಿ‌ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ (Oxygen leakage) ಆಗಿದೆ ಎಂಬ ಸುದ್ದಿ ಕೇಳಿ ರೋಗಿಗಳು ಶಾಕ್‌ ಆಗಿದ್ದರು. ಆಸ್ಪತ್ರೆ ಹಿಂಭಾಗದಲ್ಲಿದ್ದ ಆಕ್ಸಿಜನ್ ಘಟಕದಿಂದ ಸೋರಿಕೆಯಾಗಿ ಅರ್ಧ ಕಿಮೀ ವ್ಯಾಪ್ತಿವರೆಗೂ ವಾಸನೆ ಮೂಗಿಗೆ ಬಡಿದಿತ್ತು.

ನೋಡನೋಡುತ್ತಿದ್ದ ಒಬ್ಬರಿಂದ ಒಬ್ಬರಿಗೆ ಆಕ್ಸಿಜನ್‌ ಸೋರಿಕೆ ಸುದ್ದಿ ಹರಿದಾಡಿದೆ. ಬಳಿಕ ಆಸ್ಪತ್ರೆಯೊಳಗೆ ಇದ್ದ ಸಿಬ್ಬಂದಿ, ರೋಗಿಗಳು ಭಯಭೀತರಾಗಿ ಹೊರಗೆ ಓಡಿ ಬಂದು ಆವರಣದೊಳಗೆ ಬಂದು ಕುಳಿತುಕೊಳ್ಳುವಂತಾಯಿತು. ಇತ್ತ ಆಕ್ಸಿಜನ್‌ ಟ್ಯಾಂಕ್‌ ಸ್ಫೋಟಗೊಂಡಿದೆ ಎಂಬ ಸುದ್ದಿಯಿಂದಾಗಿ ವೈದ್ಯರು ಮತ್ತು ಸಿಬ್ಬಂದಿ ತಗ್ಗಿದ ವಸತಿಗೃಹಗಳನ್ನು ಖಾಲಿ ಮಾಡಿದ್ದವು.

kalaburagi News

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಚಿಂಚೊಳ್ಳಿ ಪೊಲೀಸರು ದೌಡಾಯಿಸಿದ್ದರು. ಪರಿಶೀಲನೆ ನಡೆಸಿದಾಗ ಆಕ್ಸಿಜನ್‌ ಟ್ಯಾಂಕ್ ತುಂಬಿದ್ದರಿಂದ ಅದರ ಒತ್ತಡವನ್ನು ಹೊರಹಾಕಿದೆ ಎಂದು ಗೊತ್ತಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಲಬುರಗಿ ಡಿ.ಎಚ್.ಓ ಡಾ.ರತಿಕಾಂತ್ ಸ್ವಾಮಿ, ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂಬುದು ಸುಳ್ಳು ಸುದ್ದಿ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಆಕ್ಸಿಜನ್‌ ಟ್ಯಾಂಕ್ ತುಂಬಿದ ನಂತರ ಅದರ ಒತ್ತಡವನ್ನು ಗ್ಯಾಸ್ ರೂಪದಲ್ಲಿ ಹೊರಹಾಕುವ ಸಾಮಾನ್ಯ ಪ್ರಕ್ರಿಯೆ ಆಗಿದೆ. ಆಸ್ಪತ್ರೆಯಲ್ಲಿನ 6 ಕೆ.ಎಲ್. ಸಾಮರ್ಥ್ಯದ ಟ್ಯಾಂಕಿಗೆ ಆಮ್ಲಜನಕ ಭರ್ತಿ ಮಾಡಿದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಎ, ಬಿ, ಸಿ ಎಂಬ ಸುರಕ್ಷತೆಯ ವಾಲ್‌ಗಳ ಮುಖೇನ ಹಂತ ಹಂತವಾಗಿ ಗ್ಯಾಸ್ ಲೀಕ್ ಮಾಡುತ್ತದೆ. ಹೀಗಾಗಿ ಸಾರ್ವಜನಿಕರು ಯಾರು ಆತಂಕ ಪಡಬೇಕಾಗಿಲ್ಲಾ ಎಂದರು.

ಇದನ್ನೂ ಓದಿ: Leopard attack : ರಾಯಚೂರಿನಲ್ಲಿ ಮೂವರ ಮೇಲೆ ದಾಳಿ ಮಾಡಿ ಕಾಲ್ಕಿತ್ತ ಚಿರತೆ!

ಐದು ಅಂತಸ್ತಿನ ಕಟ್ಟಡ ಧರಾಶಾಹಿ- ಏಳು ಜನ ದಾರುಣ ಸಾವು

ಅಹ್ಮದಾಬಾದ್‌: ಗೇಮಿಂಗ್‌ ಜೋನ್‌(Gaming zone)ನಲ್ಲಿ ಭಾರೀ ಬೆಂಕಿ ಅವಘಡ(Fire Accident)ದ ಬಳಿಕ ಗುಜರಾತ್‌(Gujarat)ನಲ್ಲಿ ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಐದು ಅಂತಸ್ತಿನ ಕಟ್ಟಡ(Building Collapse) ಧರಾಶಾಹಿಯಾಗಿದ್ದು, ಏಳು ಜನ ಧಾರುಣವಾಗಿ ಮೃತಪಟ್ಟಿದ್ದಾರೆ. ಸೂರತ್‌ನಲ್ಲಿ ಈ ಘಟನೆ ನಡೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಅವಶೇಷದಡಿಯಲ್ಲಿ ಹಲವು ಜನ ಸಿಲುಕಿರುವ ಸಾಧ್ಯತೆ ಇದೆ.

ಘಟನೆ ಬಗ್ಗೆ ಸೂರತ್‌ನ ಅಗ್ನಿಶಾಮಕ ಅಧಿಕಾರಿ ಬಸಂತ್‌ ಪರೀಕ್‌ ಮಾಹಿತಿ ನೀಡಿದ್ದು, ಶನಿವಾರ ರಾತ್ರಿ ಈ ದುರಂತ ಸಂಭವಿಸಿದೆ. ರಾತ್ರಿಯಿಡೀ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಏಳು ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಕನಿಷ್ಠ ಆರರಿಂದ ಏಳು ಜನರು ಇನ್ನೂ ಅವಶೇಷಗಳಲ್ಲಿ ಸಿಕ್ಕಿಬಿದ್ದಿರುವ ಭಯವಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ನಡೆಸುತ್ತಿವೆ ಎಂದು ಹೇಳಿದ್ದಾರೆ.

ಸುಮಾರು ಐದು ಫ್ಲಾಟ್‌ಗಳಿಗಳನ್ನು ಹೊಂದಿರುವ ಈ ಕಟ್ಟಡವನ್ನು 2016-17ರಲ್ಲಿ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಈ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದಾಗ, ಒಳಗೆ ಸಿಲುಕಿರುವವರ ಧ್ವನಿಯನ್ನು ನಾವು ಕೇಳಿದ್ದೇವೆ. ನಾವು ಮಹಿಳೆಯನ್ನು ಜೀವಂತವಾಗಿ ಅವಶೇಷಗಳಿಂದ ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದೇವೆ. ಸುಮಾರು ಐದು ಜನರು ಇನ್ನೂ ಒಳಗೆ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಜರಾತ್‌ನ ರಾಜ್‌ಕೋಟ್‌ (Rajkot) ನಗರದಲ್ಲಿರುವ ಗೇಮಿಂಗ್‌ ಜೋನ್‌ (Gaming Zone) ಒಂದರಲ್ಲಿ ಮೇ 25ರಂದು ಸಂಜೆ ಭೀಕರ ಅಗ್ನಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. 9 ಮಕ್ಕಳು, ಮಹಿಳೆಯರು ಸೇರಿ 32 ಮಂದಿ ಮೃತಪಟ್ಟಿರುವ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿತ್ತು.

ಗೇಮಿಂಗ್‌ ಜೋನ್‌ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್‌ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್‌ಪಿ ಗೇಮಿಂಗ್‌ ಜೋನ್‌ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿ ದುರಂತ ಸಂಭವಿಸಿದ ಕಾರಣ 32 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ. ಗೇಮಿಂಗ್‌ ಜೋನ್‌ನಲ್ಲಿ ಅಗ್ನಿ ದುರಂತ ಸಂಭವಿಸಲು ನಿಖರ ಕಾರಣ ತಿಳಿದುಬಂದಿಲ್ಲ.

ರಾಜ್‌ಕೋಟ್‌ ಅಗ್ನಿ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಘೋಷಿಸಿದ್ದಾರೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನೂ ಘೋಷಣೆ ಮಾಡಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನೂ (SIT) ರಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Health Food Tips: ಈ ಕೆಲವು ಆಹಾರಗಳ ಸೇವನೆಯಿಂದ ಬಾಯಾರಿ, ಗಂಟಲೊಣಗಿ ನೀರು ಬೇಕೆನಿಸುತ್ತದೆ!

Health Food Tips: ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಗಾದೆಯೇ ಇದೆ. ಕೆಟ್ಟ ಕೆಲಸ ಮಾಡಿದವನು ಅದರ ಫಲ ಅನುಭವಿಸಲೇ ಬೇಕು ಎಂಬುದು ಇದರ ಒಳಾರ್ಥವಾದರೂ, ಉಪ್ಪಿನಂಶ ದೇಹಕ್ಕೆ ಹೆಚ್ಚು ಹೋದರೆ, ಸಹಜವಾಗಿಯೇ ನೀರು ಕುಡಿಯಲೇಬೇಕಾಗುತ್ತದೆ ಎಂಬುದು ಶಬ್ದಾರ್ಥವೂ ಹೌದು. ಇದು ನಿಜ ಕೂಡಾ. ಬನ್ನಿ, ಯಾವೆಲ್ಲ ಆಹಾರಗಳು ನಿಮ್ಮ ದೇಹದ ನೀರಿನಂಶವನ್ನು ಕ್ಷಣಮಾತ್ರದಲ್ಲಿ ಬಸಿದುಬಿಡುತ್ತದೆ ಎಂಬುದನ್ನು ನೋಡೋಣ ಬನ್ನಿ.

VISTARANEWS.COM


on

Health Food Tips
Koo

ಕೆಲವು ಆಹಾರಗಳೇ ಹಾಗೆ (Health Food Tips). ತಿಂದು ಸ್ವಲ್ಪ ಹೊತ್ತಿನಲ್ಲಿ ಬಾಯಾರುತ್ತದೆ. ಗಂಟಲು ಒಣಗುತ್ತದೆ. ದೇಹದ ನೀರೆಲ್ಲ ಬಸಿದು ಹೋದಂಥ ಅನುಭವ. ಮತ್ತೆ ಮತ್ತೆ ನೀರು ಕುಡಿಯಬೇಕೆನಿಸುತ್ತದೆ. ಎಷ್ಟು ನೀರು ಕುಡಿದರೂ, ಹೊಟ್ಟೆಯಲ್ಲಿ ನೀರು ಸದ್ದು ಮಾಡುವಷ್ಟರವರೆಗೆ ನೀರು ತುಂಬಿಸಿಕೊಂಡರೂ ಯಾಕೋ ತೃಪ್ತಿಯಿಲ್ಲದ ಅನುಭವ. ಪದೇ ಪದೇ ಗಂಟಲೊಣಗುವುದು, ಬಾತ್‌ರೂಂಗೆ ಹೋಗಬೇಕೆನಿಸುವುದು ಇತ್ಯಾದಿ ಸಾಮಾನ್ಯ. ಬೇಸಗೆಯಲ್ಲಂತೂ ಈ ಸಮಸ್ಯೆ ಹೇಳತೀರದು. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಗಾದೆಯೇ ಇದೆ. ಕೆಟ್ಟ ಕೆಲಸ ಮಾಡಿದವನು ಅದರ ಫಲ ಅನುಭವಿಸಲೇ ಬೇಕು ಎಂಬುದು ಇದರ ಒಳಾರ್ಥವಾದರೂ, ಉಪ್ಪಿನಂಶ ದೇಹಕ್ಕೆ ಹೆಚ್ಚು ಹೋದರೆ, ಸಹಜವಾಗಿಯೇ ನೀರು ಕುಡಿಯಲೇಬೇಕಾಗುತ್ತದೆ ಎಂಬುದು ಶಬ್ದಾರ್ಥವೂ ಹೌದು. ಇದು ನಿಜ ಕೂಡಾ. ಬನ್ನಿ, ಯಾವೆಲ್ಲ ಆಹಾರಗಳು ನಿಮ್ಮ ದೇಹದ ನೀರಿನಂಶವನ್ನು ಕ್ಷಣಮಾತ್ರದಲ್ಲಿ ಬಸಿದುಬಿಡುತ್ತದೆ ಎಂಬುದನ್ನು ನೋಡೋಣ ಬನ್ನಿ.

Salt is predominant in processed foods Keep this away Foods To Avoid For Blood Pressure

ಅತಿಯಾಗಿ ಸಂಸ್ಕರಿಸಿದ ಆಹಾರಗಳು

ಅತಿಯಾಗಿ ಸಂಸ್ಕರಿಸಿದ ಆಹಾರಗಳಾದ ಆಲೂಗಡ್ಡೆ ಚಿಪ್ಸ್‌, ಫ್ರೋಜನ್‌ ಪ್ಯಾಕೇಜ್ಡ್‌ ಆಹಾರಗಳು, ನಿಮ್ಮಿಷ್ಟದ ಕ್ಯಾಂಡಿ ಬಾರ್‌ ಇತ್ಯಾದಿಗಳಿಂದ ದೇಹದಲ್ಲಿ ನಿರ್ಜಲೀಕರಣದ ಸ್ಥಿತಿ ಅಂದರೆ ಡಿಹೈಡ್ರೇಶನ್‌ ಉಂಟಾಗುತ್ತದೆ. ಬಾಯಿ ಬಹುಬೇಗನೆ ಒಣಗಿದಂತಾಗುತ್ತದೆ. ನೀರು ಬೇಕೆನಿಸುತದೆ. ಈ ಆಹಾರಗಳಲ್ಲಿ ಸೋಡಿಯಂ ಹಾಗೂ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ದೇಹಕ್ಕೆ ಈ ಸ್ಥಿತಿ ಬರುತ್ತದೆ.

Kerala Inji Curry Ginger Pickle Most Famous Indian Pickles And Their Origin Place

ಉಪ್ಪಿನಕಾಯಿ

ಉಪ್ಪಿನಕಾಯಿ ಇದ್ದರೆ ಊಟ ರುಚಿ ಹೌದು. ಆದರೆ, ಉಪ್ಪಿನಕಾಯಿಯಲ್ಲಿ ಉಪ್ಪು ಹೆಚ್ಚಿರುವುದರಿಂದ ಬಾಯಾರುವುದು ಹೆಚ್ಚು. ಈಗೆಲ್ಲ ಉಪ್ಪು ಕಡಿಮೆ ಇರುವ ಥರಥರದ ಉಪ್ಪಿನಕಾಯಿಗಳನ್ನೂ ಮಾಡಬಹುದಾದ್ದರಿಂದ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಉಪ್ಪಿನಕಾಯಿ ತಿನ್ನುವ ಆಸೆಯ ಮಂದಿ ತಮ್ಮ ಆಸೆಗೆ ಎಳ್ಳುನೀರು ಬಿಡಬೇಕಾಗಿಲ್ಲ.

Soy sauce

ಸೋಯಾ ಸಾಸ್‌

ಯಾವುದೇ ಚೈನೀಸ್‌ ಅಡುಗೆ ಮಾಡುವುದಿದ್ದರೂ ಸೋಯಾ ಸಾಸ್‌ ಬಹುಮುಖ್ಯವಾದ ಪದಾರ್ಥ. ಆದರೆ ಇದರಲ್ಲೂ ಅಧಿಕ ಸೋಡಿಯಂ ಹಾಗೂ ಬ್ರಿಮ್‌ ಇರುವುದರಿಂದ ಇದು ಡಿಹೈಡ್ರೇಶನ್‌ಗೆ ದೂಡುತ್ತದೆ. ಇದರಲ್ಲೂ ಈಗ ಮಾರುಕಟ್ಟೆಯಲ್ಲಿ ಕಡಿಮೆ ಸೋಡಿಯಂ ಇರುವ ವೆರೈಟಿಗಳು ಲಭ್ಯವಿವೆ. ಹಾಗಾಗಿ ಅಂಥವುಗಳ ಆಯ್ಕೆಯನ್ನೂ ಮಾಡಬಹುದು.

Heavy or Rich Desserts Healthy Foods That Are Harmful To Consume At Night

ಸಿಹಿತಿನಿಸುಗಳು/ಡೆಸರ್ಟ್‌ಗಳು

ಸಿಹಿತಿನಿಸಿನಲ್ಲಿ ಹಾಗೂ ಯಾವುದೇ ಡೆಸರ್ಟ್‌ ವಿಚಾರಕ್ಕೆ ಬಂದರೆ ಅದರಲ್ಲಿ ಸಕ್ಕರೆಯಂಶ ಹೆಚ್ಚೇ. ಕೃತಕ ಸಿಹಿಗಳು ಇಂದು ಎಲ್ಲದರಲ್ಲೂ ಇರುವುದರಿಂದ ಕೇಕ್, ಕುಕ್ಕೀಸ್‌, ಐಸ್‌ಕ್ರೀಂ ಸೇರಿದಂತೆ ಯಾವುದೇ ಡೆಸರ್ಟ್‌ ತಿಂದರೆ ನೀವು ನೀರು ಹೆಚ್ಚು ಕುಡಿಯಲೇಬೇಕು. ಗಂಟಲೊಣಗಿ, ಬಾಯಾರುವುದು ನಿಶ್ಚಿತ. ಅದಕ್ಕೇ, ಮದುವೆ ಮನೆ, ಪಾರ್ಟಿ, ಸಮಾರಂಭಗಳ ಊಟ ಉಂಡು ಬಂದ ಮೇಲೆ ಹೆಚ್ಚು ಸುಸ್ತೂ, ಬಾಯಾರಿಕೆಯೂ ಆಗುತ್ತದೆ.

Beetroot

ಬೀಟ್‌ರೂಟ್‌

ತರಕಾರಿಗಳ ವಿಚಾರಕ್ಕೆ ಬಂದರೆ ಬೀಟ್‌ರೂಟ್‌ ಡಿಹೈಡ್ರೇಶನ್‌ಗೆ ದೂಡುವ ತರಕಾರಿ. ಬೀಟ್‌ರೂಟಿನಲ್ಲಿ ಪೊಟಾಶಿಯಂ ಹೇರಳವಾಗಿದೆ. ಹೀಗಾಗಿ ಇದು ದೇಹದಿಂದ ನೀರಿನಂಶವನ್ನು ಹೊರಕ್ಕೆ ದೂಡುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿಯೇ ಬೀಟ್‌ರೂಟ್‌ ಜ್ಯೂಸ್‌ ಕುಡಿದರೆ ಹೆಚ್ಚು ಬಾತ್‌ರೂಂಗೆ ಹೋಗಬೇಕೆನಿಸುತ್ತದೆ.
ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತಾ ಇದೆ. ಇಷ್ಟದ ತಿನಿಸನ್ನು ಈ ಕಾರಣಕ್ಕೆ ಬಿಡಬೇಕಾಗಿಲ್ಲ. ಆದರೆ, ಅತಿಯಾಗಿ ತಿನ್ನದಿರಿ. ಇಂತಹ ಆಹಾರ ಹಿತಮಿತವಾಗಿರಲಿ. ಈ ಸಂದರ್ಭ ಹಣ್ಣು ಹಂಪಲು, ತರಕಾರಿಗಳೂ ಜೊತೆಯಲ್ಲೇ ಹೊಟ್ಟೆ ಸೇರಲಿ. ಇವನ್ನು ತಿಂದ ಮೇಲೆ ಬಾಯಾರಿದರೆ, ಕಾಫಿ, ಚಹಾದಂತಹ ಕೆಫಿನ್‌ಯುಕ್ತ ಪದಾರ್ಥಗಳ ಮೊರೆ ಹೋಗದಿರಿ. ಆದಷ್ಟೂ ನೀರನ್ನೇ ಕುಡಿಯಿರಿ. ಆರೋಗ್ಯಕರ ಆಹಾರ ಸೇವನೆ ನಿಮ್ಮ ಮಂತ್ರವಾಗಲಿ.

ಇದನ್ನೂ ಓದಿ: Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Continue Reading
Advertisement
School Principal
ದೇಶ3 hours ago

School Principal: ಶಾಲೆಯಲ್ಲೇ ಮಹಿಳಾ ಟೀಚರ್‌ ಜತೆ ಪ್ರಿನ್ಸಿಪಾಲ್‌ ರೊಮ್ಯಾನ್ಸ್;‌ ವೈರಲ್‌ ಫೋಟೊ ಇಲ್ಲಿದೆ

WCPL 2024
ಪ್ರಮುಖ ಸುದ್ದಿ4 hours ago

WCPL 2024 : ಸಿಪಿಎಲ್​​ನ ಟ್ರಿನ್​ಬ್ಯಾಗೊ ರೈಡರ್ಸ್​ ತಂಡಕ್ಕೆ ಜೆಮಿಮಾ, ಶಿಖಾ ಸೇರ್ಪಡೆ

KRS Inflow
ದೇಶ4 hours ago

KRS Inflow: ಕೆಆರ್‌ಎಸ್‌ಗೆ ದಾಖಲೆಯ 11 ಸಾವಿರ ಕ್ಯುಸೆಕ್‌ ನೀರು ಒಳಹರಿವು; ಸೋಮವಾರದಿಂದ ನಾಲೆಗಳಿಗೆ ನೀರು

Abhishek Sharma
ಕ್ರೀಡೆ4 hours ago

Abhishek Sharma : 47 ಎಸೆತಕ್ಕೆ ಶತಕ ಬಾರಿಸಿ ಹಲವಾರು ದಾಖಲೆ ಮುರಿದಿ ಅಭಿಷೇಕ್​ ಶರ್ಮಾ

Dengue Scare
ಕರ್ನಾಟಕ5 hours ago

Dengue Scare: ಸರ್ಕಾರದಿಂದಲೇ ಉಚಿತವಾಗಿ ಡೆಂಗ್ಯೂ ಪರೀಕ್ಷೆ ಮಾಡಿಸಲಿ; ಆರ್.‌ ಅಶೋಕ್‌ ಆಗ್ರಹ

World Biryani Day:
ಪ್ರಮುಖ ಸುದ್ದಿ5 hours ago

World Biryani Day : ಕೋಲ್ಕತಾ, ಹೈದರಾಬಾದ್ ಬಿರಿಯಾನಿ ತಿಂದಿರಬಹುದು; ಇವುಗಳ ಹಿನ್ನೆಲೆ ಗೊತ್ತಾ?

Accident
Latest5 hours ago

Accident: ಟೆರೇಸ್ ಮೇಲೆ ನಿಂತು ಜಗಳ ನೋಡುತ್ತಿದ್ದ ಮಹಿಳೆಗೇ ಬಿತ್ತು ಗುಂಡೇಟು!

Puri Jagannath Rath Yatra
ಪ್ರಮುಖ ಸುದ್ದಿ6 hours ago

Puri Jagannath Rath Yatra: ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಒಬ್ಬನ ಸಾವು, 400 ಭಕ್ತರಿಗೆ ಗಾಯ!

NIA Arrest
ದೇಶ6 hours ago

NIA Arrest: ಹಿಜ್ಬುಲ್‌, LeT ಉಗ್ರ ಸಂಘಟನೆಗಳ ಜೊತೆ ನಂಟು; ಪ್ರಮುಖ ಆರೋಪಿ ಅರೆಸ್ಟ್‌

Elephant attack car in Kodagu‌ four people escape
ಕೊಡಗು6 hours ago

Elephant attack :ಕಾರಿನ ಮೇಲೆ ಕಾಡಾನೆ ದಾಳಿ; ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ8 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ10 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ11 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ21 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ1 day ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌