ಐಸಿಸ್‌ ಉಗ್ರರ ಪರವಾಗಿ ಕೆಲಸ; ಅಲಿಗಢ ಮುಸ್ಲಿಂ ವಿವಿಯ 6 ವಿದ್ಯಾರ್ಥಿಗಳ ಬಂಧನ! - Vistara News

ದೇಶ

ಐಸಿಸ್‌ ಉಗ್ರರ ಪರವಾಗಿ ಕೆಲಸ; ಅಲಿಗಢ ಮುಸ್ಲಿಂ ವಿವಿಯ 6 ವಿದ್ಯಾರ್ಥಿಗಳ ಬಂಧನ!

ಐಸಿಸ್‌ ಉಗ್ರ ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಆರು ವಿದ್ಯಾರ್ಥಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

VISTARANEWS.COM


on

ISIS Terrorist
ಸಾಂದರ್ಭಿಕ ಚಿತ್ರ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ: ದೇಶದ ಶಿಕ್ಷಣ ಸಂಸ್ಥೆಗಳು ಇತ್ತೀಚೆಗೆ ಗಲಭೆ, ಗಲಾಟೆ, ಹಿಂಸಾಚಾರ, ದೇಶವಿರೋಧಿ ಘೋಷಣೆಗಳಿಗಾಗಿ ಸುದ್ದಿಯಾಗುತ್ತಿವೆ. ಸಂಶೋಧನೆ, ಸೃಜನಶೀಲತೆ, ಅಂಕ ಸಾಧನೆಗಾಗಿ ಸುದ್ದಿಯಾಗದೆ, ನಕಾರಾತ್ಮಕ ಅಂಶಗಳಿಗಾಗಿ ಸುದ್ದಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಐಸಿಸ್‌ ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶದಲ್ಲಿರುವ (Uttar Pradesh) ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (Aligarh Muslim University) ಆರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಐಸಿಸ್‌ ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಹಲವೆಡೆ ರಾಜ್ಯದ ಭಯೋತ್ಪಾದನೆ ನಿಗ್ರಹ ದಳದ (Anti-Terror Squad) ಅಧಿಕಾರಿಗಳು ದಾಳಿ ನಡೆಸಿ ಆರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ಆರೋಪಿಗಳನ್ನು ರಕೀಬ್‌ ಇನಾಮ್‌, ನಾವೆದ್‌ ಸಿದ್ದಿಕಿ, ಮೊಹಮ್ಮದ್‌ ನೊಮಾನ್‌ ಹಾಗೂ ಮೊಹಮ್ಮದ್‌ ನಾಜಿಮ್‌ ಎಂಬುದಾಗಿ ಗುರುತಿಸಲಾಗಿದೆ.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ

ದೇಶಾದ್ಯಂತ ದಾಳಿಗೆ ಸಂಚು

ದೇಶದ ಹಲವೆಡೆ ಪ್ರಮುಖ ಉಗ್ರ ದಾಳಿ ನಡೆಸುವುದು ಈ ಆರು ವಿದ್ಯಾರ್ಥಿಗಳ ಸಂಚಾಗಿತ್ತು ಎಂದು ಭಯೋತ್ಪಾದನೆ ನಿಗ್ರಹ ದಳದ ಮೂಲಗಳಿಂದ ತಿಳಿದುಬಂದಿದೆ. ಆರೂ ವಿದ್ಯಾರ್ಥಿಗಳು ಐಸಿಸ್‌ ಉಗ್ರ ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿದ್ದರು. ಇವರು ಹಲವು ಸಭೆಗಳನ್ನು ನಡೆಸುವ ಮೂಲಕ ದೇಶದ ಹಲವೆಡೆ ದಾಳಿ ನಡೆಸುವ ಸಂಚು ರೂಪಿಸಿದ್ದರು. ಇದರ ಕುರಿತು ನಿಖರ ಮಾಹಿತಿ ಮೇರೆಗೆ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: Fraud Case : ನಕಲಿ RAW ಅಧಿಕಾರಿ ಅರೆಸ್ಟ್‌; ಆ ವಿದ್ಯಾರ್ಥಿಯಲ್ಲಿತ್ತು ಹಲವು ಐಡಿ ಕಾರ್ಡ್‌, ಪೊಲೀಸ್‌ ಯುನಿಫಾರ್ಮ್‌!

ವಿದ್ಯಾರ್ಥಿಗಳ ಒಕ್ಕೂಟದ ಸಭೆಯಲ್ಲೇ ಪಿತೂರಿ

ಅಲಿಗಢ ಮುಸ್ಲಿಂ ವಿದ್ಯಾರ್ಥಿಗಳ ಒಕ್ಕೂಟದ ಸಭೆಯಲ್ಲಿಯೇ ದಾಳಿ ಕುರಿತು ಸಂಚು ರೂಪಿಸುವುದು ಸೇರಿ ಹಲವು ಪಿತೂರಿ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳ ಒಕ್ಕೂಟದ ಸಭೆಯಲ್ಲಿಯೇ ದಾಳಿಗೆ ಸಂಚು ರೂಪಿಸುವುದು, ಐಸಿಸ್‌ ಪರವಾಗಿ ಕೆಲಸ ಮಾಡಲು ಯುವಕರನ್ನು ನೇಮಿಸಿಕೊಳ್ಳುವುದು ಸೇರಿ ಹಲವು ಪಿತೂರಿಗಳನ್ನು ನಡೆಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಹಾಗೆಯೇ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳ ಕಣ್ಣೂ ಇದೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಪದಕ ಗೆದ್ದ ಕಾರ್ಕಳದ ಬೋಳ ಅಕ್ಷತಾ ಪೂಜಾರಿ

ರಾಜಮಾರ್ಗ ಅಂಕಣ: ಕಾರ್ಕಳ ತಾಲೂಕಿನ ಬೋಳ ಎಂಬ ಪುಟ್ಟ ಗ್ರಾಮದಿಂದ ಲಂಡನ್, ಅಮೆರಿಕ, ಆಫ್ರಿಕ, ದುಬಾಯಿ, ಕಝಾಕಿಸ್ತಾನ್ ತಲುಪಿದ ಬೋಳ ಅಕ್ಷತಾ ಪೂಜಾರಿಯ ಹೋರಾಟ ಮತ್ತು ಸಾಹಸಗಳು ಸಾವಿರಾರು ಗ್ರಾಮೀಣ ಸಾಧಕರಿಗೆ ಸ್ಫೂರ್ತಿ ಆಗಬಲ್ಲದು. ಸರಕಾರ ಆಕೆಯನ್ನು ದೊಡ್ಡದಾಗಿ ಗುರುತಿಸಬೇಕು.

VISTARANEWS.COM


on

ರಾಜಮಾರ್ಗ ಅಂಕಣ bola akshta pujari
Koo

ಪವರ್ ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ವಿಭಾಗದಲ್ಲಿ ಮತ್ತೆ ಆಕೆಯಿಂದ ವಿಶ್ವವಿಕ್ರಮ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಶನಿವಾರ ದಕ್ಷಿಣ ಆಫ್ರಿಕಾದ ಫೊಚೇಫಸ್ಟಮ್ ನಗರದಲ್ಲಿ ನಡೆದ ಏಷಿಯಾ ಪೆಸಿಫಿಕ್ ಆಫ್ರಿಕನ್ (ಅಂದರೆ ಎರಡು ಖಂಡಗಳ ಮಟ್ಟದ) ಪವರ್ ಲಿಫ್ಟಿಂಗ್ (power lifting) ಮತ್ತು ಬೆಂಚ್ ಪ್ರೆಸ್ (bench press) ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಬೋಳ ಅಕ್ಷತಾ ಪೂಜಾರಿ (Bola Akshata Pujrai ಈ ಬಾರಿಯೂ ಚಿನ್ನದ ಪದಕ (gold medal) ಗೆದ್ದಿದ್ದಾರೆ! ಆಕೆ ನನ್ನೂರು ಕಾರ್ಕಳ ತಾಲೂಕಿನ ಬೋಳ ಎಂಬ ಪುಟ್ಟ ಗ್ರಾಮದವರು ಅನ್ನೋದು ನಮಗೆಲ್ಲ ಹೆಮ್ಮೆ. ನಾನು ಬಾಲ್ಯದಿಂದಲೂ ಆಕೆಯ ಬೆಳವಣಿಗೆಯನ್ನು ಗಮನಿಸಿದ್ದೇನೆ ಅನ್ನುವುದು ನನಗೆ ಅಭಿಮಾನ.

ಈ ಬಾರಿ ಆಕೆ ಸ್ಪರ್ಧೆ ಮಾಡಿದ್ದು 52 ಕೆಜಿ ದೇಹತೂಕದ ಸೀನಿಯರ್ ವಿಭಾಗದಲ್ಲಿ. ಅಲ್ಲಿ ಸ್ಪರ್ಧೆ ತುಂಬಾ ಕಠಿಣ ಆಗಿದ್ದು 18 ಮಂದಿ ವಿದೇಶದ ಸ್ಪರ್ಧಿಗಳು ಇದ್ದರು! ಅಲ್ಲಿ ಅಕ್ಷತಾ ಪೂಜಾರಿ ಚಿನ್ನದ ಪದಕ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ್ದಾರೆ ಅಂದರೆ ಅದು ಎಷ್ಟೊಂದು ದೊಡ್ಡ ಸಾಧನೆ!

ಆಕೆ ವಿಶ್ವಮಟ್ಟದ ಪದಕ ಗೆದ್ದಿರುವುದು ಇದೇ ಮೊದಲಲ್ಲ!

ಆಕೆಯ ಯಶೋಗಾಥೆಯು ಆರಂಭ ಆದದ್ದು 2011ರಲ್ಲಿ. ಅಂದು ಆಕೆ ಲಂಡನ್ ಕಾಮನ್ ವೆಲ್ತ್ ಕೂಟದಲ್ಲಿ ಭಾಗವಹಿಸಿ 8 ಚಿನ್ನದ ಪದಕ ಪಡೆದಿದ್ದರು! ಅದರ ಮುಂದಿನ ವರ್ಷ (2012) ಮತ್ತೆ ಏಷಿಯನ್ ಕೂಟದಲ್ಲಿ ಗೋಲ್ಡ್! ಮತ್ತೆ 2014ರಲ್ಲಿ ವರ್ಲ್ಡ್ ಚಾಂಪಿಯನಶಿಪನಲ್ಲಿ ಗೋಲ್ಡ್! 2018ರಲ್ಲಿ ಏಷಿಯನ್ ದುಬಾಯಿ ಕೂಟದ ಗೋಲ್ಡ್! 2022ರಲ್ಲಿ ಕಝಾಕ್ ಸ್ಥಾನ ಕೂಟದಲ್ಲಿ ಸಿಲ್ವರ್ ಮೆಡಲ್! ಮತ್ತು ಈ ಬಾರಿ ಸೌಥ್ ಆಫ್ರಿಕಾ ಕೂಟದಲ್ಲಿ ಗೋಲ್ಡ್ ಮೆಡಲ್!

ಒಬ್ಬಳು ಹಳ್ಳಿಯ ಸಾಮಾನ್ಯ ಕೃಷಿಕ ಕುಟುಂಬದಿಂದ ಬಂದ ಓರ್ವ ಸೀದಾಸಾದಾ ಹುಡುಗಿ ಇಷ್ಟೊಂದು ವಿದೇಶದ ಕೂಟಗಳಿಗೆ ಹೋಗಿ ಭಾರತವನ್ನು ಪ್ರತಿನಿಧಿಸುವುದೇ ದೊಡ್ಡ ಅಚ್ಚರಿ ಆಗಿರುವಾಗ ಈಕೆ ಹೋದಲ್ಲೆಲ್ಲ ಪದಕಗಳ ಗೊಂಚಲನ್ನು ಗೆದ್ದು ತರುತ್ತಿರುವುದು ನಿಜಕ್ಕೂ ವಿಸ್ಮಯವೇ ಸರಿ. ಅದರ ಜೊತೆಗೆ ಕಳೆದ 14 ವರ್ಷಗಳಲ್ಲಿ ಆಕೆ ಭಾರತದಲ್ಲಿ ಬೇರೆ ಬೇರೆ ನಗರಗಳಲ್ಲಿ ನಡೆದ ಪವರ್ ಲಿಫ್ಟಿಂಗ್ ಕೂಟಗಳಲ್ಲಿ ಭಾಗವಹಿಸಿ ಹೋದಲ್ಲೆಲ್ಲ ಪದಕಗಳನ್ನು ಗೆದ್ದಿದ್ದಾರೆ! ಆಕೆಯ ಬೋಳದ ಮನೆಯ ಶೋಕೇಸಿನಲ್ಲಿ ಮಿಂಚುತ್ತಿರುವ ಹೊಳೆಯುವ ಪದಕಗಳು ಯಾರಿಗಾದರೂ ಸ್ಫೂರ್ತಿಯ ಚಿಲುಮೆ ಆಗುವುದು ಖಂಡಿತ!

ಅಕ್ಷತಾ ಬಾಲ್ಯದಿಂದಲೂ ಗಟ್ಟಿಗಿತ್ತಿ!

ಅಕ್ಷತಾ ಬೋಳ ಗ್ರಾಮದ ಕೃಷಿ ಸಂಸ್ಕೃತಿಯ ಕೆಳಮಧ್ಯಮ ಕುಟುಂಬದಿಂದ ಬಂದವರು. ಅವರ ಮನೆಯಲ್ಲಿ ಯಾರೂ ಹೆಚ್ಚು ಓದಿದವರು ಇರಲಿಲ್ಲ. ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಆಕೆ 6-7 ಕಿಮೀ ದೂರದ ಬೆಳ್ಮಣ್ ಜ್ಯೂ. ಕಾಲೇಜಿಗೆ ಬೆಳಿಗ್ಗೆ ಮತ್ತು ಸಂಜೆ ನಡೆದುಕೊಂಡು ಬರುತ್ತಿದ್ದರು! ಹಸಿವು ಆಕೆಗೆ ಅಭ್ಯಾಸ ಆಗಿತ್ತು. ಕ್ರೀಡೆಯಲ್ಲಿ ಅತೀವ ಆಸಕ್ತಿ ಆಕೆಗೆ ಹೇಗೆ ಬಂತು ಎನ್ನುವುದು ಆಕೆಗೇ ಗೊತ್ತಿಲ್ಲ. ಮುಂದೆ ಪದವಿಯ ಶಿಕ್ಷಣಕ್ಕಾಗಿ ನಿಟ್ಟೆ ವಿದ್ಯಾಸಂಸ್ಥೆಯನ್ನು ಸೇರಿದ್ದು ಆಕೆಯ ಬದುಕಿನಲ್ಲಿ ಮಹತ್ವದ ತಿರುವು ಆಯಿತು. ಅಲ್ಲಿ ಆಕೆಗೆ ಪವರ್ ಲಿಫ್ಟಿಂಗ್ ಆರಿಸಿಕೊಳ್ಳಲು ಸಲಹೆ ದೊರೆಯಿತು ಮತ್ತು ಒಳ್ಳೆಯ ಕೋಚ್ ದೊರಕಿದರು. ಅಲ್ಲಿ ಅಕ್ಷತಾ ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ 4 ಘಂಟೆ ಜಿಮ್ ನಲ್ಲಿ ಬೆವರು ಬಸಿಯುತ್ತಿದ್ದರು. ಸಾಧನೆಯ ಹಸಿವು ಕಿಡಿ ಆಗಿದ್ದು ನಿಟ್ಟೆಯಲ್ಲೇ ಎಂದು ಹೇಳಬಹುದು. ʼಪವರ್ ಲಿಫ್ಟಿಂಗ್ ಇಂಡಿಯಾ’ ಎಂಬ ರಾಷ್ಟ್ರಮಟ್ಟದ ಸಂಸ್ಥೆಯು ಆಕೆಗೆ ಇಷ್ಟೊಂದು ಅವಕಾಶಗಳನ್ನು ಮಾಡಿಕೊಟ್ಟಿತು ಮತ್ತು ಇದೇ ವಿಭಾಗದಲ್ಲಿ ಮಿಂಚುತ್ತಿದ್ದ ವಿಜಯ್ ಕಾಂಚನ್ ಎಂಬ ಸಾಧಕರು ಆಕೆಗೆ ಗುರುವಾಗಿ ಸಿಕ್ಕರು.

ಮನೆಯಂಗಳದಲ್ಲಿ ಬಾವಿಯನ್ನು ಕೊರೆದರು

ಅಕ್ಷತಾ ಸಾಧನೆಯ ಹಾದಿಯು ಸುಲಭದ್ದು ಆಗಿರಲಿಲ್ಲ. ತನಗಾದ ಕಿರುಕುಳ, ಅಪಮಾನ, ನೋವು ಎಲ್ಲವೂ ಆಕೆಯನ್ನು ಗಟ್ಟಿ ಮಾಡಿತು ಎಂದು ನನ್ನ ಭಾವನೆ. ತನ್ನದೇ ಮನೆಯಂಗಳದಲ್ಲಿ ಆಕೆ ತನ್ನ ಕುಟುಂಬದ ಸದಸ್ಯರ ಜೊತೆ ಸೇರಿಕೊಂಡು ಒಂದು ಆಳವಾದ ಬಾವಿ ಕೊರೆದದ್ದು ಬಹಳ ದೊಡ್ಡ ಸುದ್ದಿ ಆಗಿತ್ತು. ಕೊರೋನಾ ಸಮಯದಲ್ಲಿ ಕೂಡ ಆಕೆ ತನ್ನ ತರಬೇತಿಯನ್ನು ನಿಲ್ಲಿಸಲಿಲ್ಲ ಅನ್ನುವುದು ನಿಜಕ್ಕೂ ಗ್ರೇಟ್!

ನನಗೆ ಅದಕ್ಕಿಂತ ಕಠಿಣ ಅನ್ನಿಸಿದ್ದು ಆಕೆ ಉದ್ಯೋಗ ಪಡೆಯಲು ಮಾಡಿದ ಸ್ವಾಭಿಮಾನಿ ಹೋರಾಟ. ತನ್ನ ಚಿನ್ನದ ಪದಕಗಳನ್ನು ಆಕೆ ತೆಗೆದುಕೊಂಡು ಕಚೇರಿಯಿಂದ ಕಚೇರಿಗೆ ಅಲೆಯುವ ದೃಶ್ಯ ನನಗೆ ಭಾರೀ ನೋವು ಕೊಡುತ್ತಿತ್ತು. ಆಗ ನಿಟ್ಟೆಯ ಒಂದು ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ (ಈಗ ಮಾಜಿ) ಬಂದಿದ್ದಾಗ ನಾನು ಆಕೆಯನ್ನು ಕರೆದುಕೊಂಡು ಫೈಲ್ ಮುಂದಿಟ್ಟು ಸರಕಾರಿ ನೌಕರಿ ನೀಡಲು ವಿನಂತಿ ಮಾಡಿದ್ದೆ. ಆಗ ಆ ಸಿಎಂ ನಿರುತ್ಸಾಹ ತೋರಿಸಿ ‘ಏನಮ್ಮಾ, ಪವರ್ ಲಿಫ್ಟಿಂಗಿಗೆ ಮಾನ್ಯತೆ ಇದೆಯಾ? ಅದು ಒಲಿಂಪಿಕ್ಸ್ ಕೂಟದಲ್ಲಿ ಬರ್ತದಾ?’ ಎಂದೆಲ್ಲ ಕೇಳಿದ್ದರು.

ಈ ಪ್ರಶ್ನೆಯನ್ನು ಅಕ್ಷತಾ ಹಲವು ಬಾರಿ ಎದುರಿಸಿದ್ದಾರೆ. ಆದರೆ ಲಂಡನ್ ಕಾಮನ್ ವೆಲ್ತ್ ಕೂಟದಲ್ಲಿ ಆಕೆ 8 ಪದಕಗಳನ್ನು ಗೆದ್ದದ್ದು, ವರ್ಲ್ಡ್ ಚಾಂಪಿಯನಶಿಪ್ ಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದದ್ದು ಭಾರತವನ್ನು ಪ್ರತಿನಿಧಿಸಿ ಎನ್ನುವುದನ್ನು ಎಲ್ಲರೂ ಮರೆಯುತ್ತಾರೆ! ಇದು ನಿಜವಾಗಿಯೂ ಕ್ರೀಡಾಲೋಕದ ದುರಂತ ಅಲ್ಲವೇ?

ಇದಕ್ಕಿಂತ ದೊಡ್ಡ ದುರಂತ ಎಂದರೆ…

ಆಕೆ ಪ್ರತೀ ಬಾರಿ ವಿದೇಶದ ಲಿಫ್ಟಿಂಗ್ ಕೂಟಗಳಿಗೆ ಹಾಜರಾಗುವಾಗ ‘ಪವರ್ ಲಿಫ್ಟಿಂಗ್ ಇಂಡಿಯಾ’ ಸಂಸ್ಥೆಯು ಅನುಮತಿ ಮತ್ತು ಮಾರ್ಗದರ್ಶನ ಮಾಡುತ್ತದೆ. ಆದರೆ ಆಕೆಯ ಪ್ರಯಾಣದ ಮತ್ತು ಇತರ ಖರ್ಚುಗಳಿಗೆ ಸರಕಾರದ ಅನುದಾನ ಇಲ್ಲ, ನೀವೇ ಹೊಂದಿಸಿಕೊಳ್ಳಬೇಕು ಎನ್ನುವ ಪತ್ರ ಬರೆಯುತ್ತದೆ. ಆಗೆಲ್ಲ ಅಕ್ಷತಾ ನೆರವಿಗೆ ಬರುವುದು ಆಕೆಯ ಅಭಿಮಾನಿಗಳು, ಗೆಳೆಯರು ಮತ್ತು ಒಂದಿಷ್ಟು ಕ್ರೀಡಾಭಿಮಾಮಾನಿ ಸಂಘಟನೆಗಳು ಅಂದರೆ ನೀವು ನಂಬಲೇಬೇಕು. ಸ್ವಾಭಿಮಾನಿ ಅಕ್ಷತಾ ಅವರಿಗೆ ಇದು ತುಂಬಾ ನೋವು ಕೊಡುವ ಸಂಗತಿ. ಈ ಬಾರಿ ಕೂಡ ಆಕೆ ತನ್ನ ಆಫ್ರಿಕಾ ಪ್ರಯಾಣಕ್ಕೆ ಒಂದು ಲಕ್ಷ ಮೂವತ್ತು ಸಾವಿರ ದುಡ್ಡು ಹೊಂದಿಸಬೇಕಾಯಿತು! ಇದನ್ನೆಲ್ಲ ಗಮನಿಸಿದಾಗ ಆಕೆಯ ಕ್ರೀಡಾ ಸಾಧನೆ ನಮಗೆ ಇನ್ನಷ್ಟು ಹೊಳೆದು ಕಾಣುತ್ತದೆ. ಸರಕಾರದ ಕ್ರೀಡಾ ಇಲಾಖೆ, ಕ್ರೀಡಾಭಿಮಾನಿ ಸಂಘಟನೆಗಳು, ಜನಪ್ರತಿನಿಧಿಗಳು ಅಕ್ಷತಾ ಅವರಂತಹ ಕ್ರೀಡಾ ಸಾಧಕರ ನೆರವಿಗೆ ನಿಲ್ಲದೆ ಹೋದರೆ ನೂರಾರು ಕ್ರೀಡಾ ಪ್ರತಿಭೆಗಳು ನಲುಗಿ ಹೋಗುವ ಅಪಾಯ ಇದೆ. ಅಂದಹಾಗೆ ಅಕ್ಷತಾಗೆ ಆಫ್ರಿಕಾದಲ್ಲಿ ಬೆಸ್ಟ್ ಲಿಫ್ಟರ್ ಆಫ್ ದ ಟೂರ್ನಿ ಪ್ರಶಸ್ತಿ ಕೂಡ ದೊರೆತಿದೆ.

ಭರತವಾಕ್ಯ

ಏನಿದ್ದರೂ ಕಾರ್ಕಳ ತಾಲೂಕಿನ ಬೋಳ ಎಂಬ ಪುಟ್ಟ ಗ್ರಾಮದಿಂದ ಲಂಡನ್, ಅಮೆರಿಕ, ಆಫ್ರಿಕ, ದುಬಾಯಿ, ಕಝಾಕಿಸ್ತಾನ್ ತಲುಪಿದ ಆಕೆಯ ಹೋರಾಟ ಮತ್ತು ಸಾಹಸಗಳು ಸಾವಿರಾರು ಗ್ರಾಮೀಣ ಸಾಧಕರಿಗೆ ಸ್ಫೂರ್ತಿ ಆಗಬಲ್ಲದು. ಸರಕಾರ ಆಕೆಯನ್ನು ದೊಡ್ಡದಾಗಿ ಗುರುತಿಸಬೇಕು. ಆಕೆಯ ಬದುಕಿನ ಕಥೆಯು ಹೈಸ್ಕೂಲಿನ ಕನ್ನಡ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆಯಬೇಕು. ಏನಂತೀರಿ?

ಅಭಿನಂದನೆಗಳು ಅಕ್ಷತಾ. ಯು ಮೇಡ್ ಅಸ್ ಪ್ರೌಡ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಪರಾಕ್ರಮಕ್ಕೆ ಒಲಿದ ಶೌರ್ಯ ಚಕ್ರ

Continue Reading

ದೇಶ

School Principal: ಶಾಲೆಯಲ್ಲೇ ಮಹಿಳಾ ಟೀಚರ್‌ ಜತೆ ಪ್ರಿನ್ಸಿಪಾಲ್‌ ರೊಮ್ಯಾನ್ಸ್;‌ ವೈರಲ್‌ ಫೋಟೊ ಇಲ್ಲಿದೆ

School Principal: ಜೌನ್‌ಪುರದಲ್ಲಿರುವ ಶಾಲೆಯೊಂದರಲ್ಲಿ ಪ್ರಾಂಶುಪಾಲ ಹಾಗೂ ಮಹಿಳಾ ಟೀಚರ್‌ ತಬ್ಬಿಕೊಂಡು, ಮುದ್ದಾಡಿರುವ ಫೋಟೊ ವೈರಲ್‌ ಆಗಿದೆ. ಶಾಲೆಯ ಗೋಡೆಯ ಮೇಲೆ ಭಗತ್‌ ಸಿಂಗ್‌, ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಅಭಿನಂದನ್‌ ವರ್ಧಮಾನ್‌ ಅವರ ಫೋಟೊಗಳನ್ನು ನೇತುಹಾಕಲಾಗಿದೆ. ಆ ಗೋಡೆಯ ಕೆಳಗೆ ಇವರಿಬ್ಬರೂ ರೊಮ್ಯಾನ್ಸ್‌ ಮಾಡಿದ್ದಾರೆ.

VISTARANEWS.COM


on

School Principal
Koo

ಲಖನೌ: “ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ” ಎಂದು ಶಾಲೆಯ ಗೋಡೆ ಮೇಲೆ ಬರೆದಿರಲಾಗುತ್ತದೆ. ಜ್ಞಾನದೇಗುಲದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುವ ಜತೆಗೆ ಶಿಕ್ಷಕರ ಜೀವನವೂ ಸುಂದರವಾಗುತ್ತದೆ. ಇಂತಹ ಜ್ಞಾನ ದೇಗುಲದಲ್ಲಿ ಶಿಕ್ಷಕರಾದವರು (Teachers) ಮಕ್ಕಳಿಗೆ ಬೋಧನೆ ಮಾಡುವ ಜತೆಗೆ ಮೌಲ್ಯಗಳನ್ನು ತುಂಬಬೇಕು. ಆದರೆ, ಇತ್ತೀಚೆಗೆ ಜ್ಞಾನ ದೇಗುಲಗಳಲ್ಲಿಯೇ ಶಿಕ್ಷಕರು ಅಪದ್ಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಪ್ರಾಂಶುಪಾಲ (School Principal) ಹಾಗೂ ಮಹಿಳಾ ಟೀಚರ್‌ ರೊಮ್ಯಾನ್ಸ್‌ ಮಾಡಿದ ಫೋಟೊ ಈಗ ವೈರಲ್‌ ಆಗಿದೆ.

ಹೌದು, ಜೌನ್‌ಪುರದಲ್ಲಿರುವ ಶಾಲೆಯೊಂದರಲ್ಲಿ ಪ್ರಾಂಶುಪಾಲ ಹಾಗೂ ಮಹಿಳಾ ಟೀಚರ್‌ ತಬ್ಬಿಕೊಂಡು, ಮುದ್ದಾಡಿರುವ ಫೋಟೊ ವೈರಲ್‌ ಆಗಿದೆ. ಶಾಲೆಯ ಗೋಡೆಯ ಮೇಲೆ ಭಗತ್‌ ಸಿಂಗ್‌, ಮಹಾರಾಣಾ ಪ್ರತಾಪ್‌, ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಅಭಿನಂದನ್‌ ವರ್ಧಮಾನ್‌ ಅವರ ಫೋಟೊಗಳನ್ನು ನೇತುಹಾಕಲಾಗಿದೆ. ಆ ಗೋಡೆಯ ಕೆಳಗೆ ಇವರಿಬ್ಬರೂ ರೊಮ್ಯಾನ್ಸ್‌ ಮಾಡಿದ್ದಾರೆ. ಖಾಸಗಿ ಶಾಲೆಯಲ್ಲಿ ಇಂತಹದ್ದೊಂದು ಅನಾಚಾರದ ಕೃತ್ಯ ನಡೆದಿದೆ. ಫೋಟೊಗಳನ್ನು ನೋಡಿದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ (ಜುಲೈ 7) ವಿಡಿಯೊ ವೈರಲ್‌ ಆಗಿದೆ. ಶಿಕ್ಷಕರ ಕುಲಕ್ಕೆ ಇವರು ಅವಮಾನ ಇದ್ದಹಾಗೆ. ಇಂತಹ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇವರನ್ನು ಅಮಾನತುಗೊಳಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಪ್ರಾಂಶುಪಾಲ ಹಾಗೂ ಮಹಿಳಾ ಟೀಚರ್‌ ತುಂಬ ದಿನಗಳಿಂದ ಸಂಬಂಧ ಹೊಂದಿದ್ದಾರೆ. ಆದರೆ, ಇವರು ಶಾಲೆಯಲ್ಲಿಯೇ ರೊಮ್ಯಾನ್ಸ್‌ ಮಾಡಿರುವುದು ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಇದು ಕಾನ್ವೆಂಟ್‌ ಶಾಲೆ ಎಂದು ತಿಳಿದುಬಂದಿದೆ.

ಕೋಲಾರ ಜಿಲ್ಲೆಯ ಕೆಜಿಎಫ್‌ನ ರಾಮಸಾಗರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರ ಜತೆ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡು, ಅದನ್ನು ಹಂಚಿ ಬ್ಲ್ಯಾಕ್‌ಮೇಲ್‌ ಎಸಗಿದ ಆರೋಪ ಎದುರಿಸುತ್ತಿರುವ ಬಿಲ್‌ ಕಲೆಕ್ಟರ್‌ ಅರ್ಜುನ್‌ ಹರಿಕೃಷ್ಣ ಎಂಬಾತನನ್ನು ಕೆಲ ದಿನಗಳ ಹಿಂದೆ ಬೇತಮಂಗಲ ಪೊಲೀಸರು ಬಂಧಿಸಿದ್ದರು.

ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ವಿರುದ್ಧ ಲೈಂಗಿಕ ಕಿರುಕುಳ (Physical Abuse), ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಗೆ ಮುಜುಗರ, ಖಾಸಗಿ ಕ್ಷಣಗಳ ಫೋಟೋ ಹಂಚಿಕೆ ಹಾಗೂ ಬೆದರಿಕೆ (threat) ಒಡ್ಡಿದ ಕುರಿತು ಕೋಲಾರ ಜಿಲ್ಲೆ ಬೇತಮಂಗಲ ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ. ಗ್ರಾಮ ಪಂಚಾಯಿತಿಯ ಕಚೇರಿಯ ಮೊದಲ ಮಹಡಿಯ ಕೊಠಡಿಯಲ್ಲಿ ಸಿಸಿಟಿವಿ ಸಂಪರ್ಕ ಕಡಿತಗೊಳಿಸಿದ ಆರೋಪಿಯು ತಮ್ಮ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಸಂತ್ರಸ್ತೆ ನೀಡಿದ ದೂರಿನ ಮೇಲೆ ಅರ್ಜುನ್ ವಿಚಾರಣೆ ನಡೆಸಿದ ಬೇತಮಂಗಲ ಪೊಲೀಸರು ನಂತರ ಆತನನ್ನು ಬಂಧಿದ್ದರು.

ಇದನ್ನೂ ಓದಿ: ಪಿಎಂ ಆವಾಸ್‌ ಯೋಜನೆಯ 40 ಸಾವಿರ ರೂ. ಪಡೆದು 11 ಸ್ತ್ರೀಯರು ಗೆಳೆಯರೊಂದಿಗೆ ಪರಾರಿ; ಕಂಗಾಲಾದ ಪತಿಯರು!

Continue Reading

ದೇಶ

KRS Inflow: ಕೆಆರ್‌ಎಸ್‌ಗೆ ದಾಖಲೆಯ 11 ಸಾವಿರ ಕ್ಯುಸೆಕ್‌ ನೀರು ಒಳಹರಿವು; ಸೋಮವಾರದಿಂದ ನಾಲೆಗಳಿಗೆ ನೀರು

KRS Inflow: ಕರ್ನಾಟಕದ ಹಲವು ಅಣೆಕಟ್ಟೆಗಳಲ್ಲಿಯೂ ಉತ್ತಮ ಒಳಹರಿವು ಇದೆ. ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಡ್ಯಾಮ್‌ಗೆ 59,306 ಕ್ಯುಸೆಕ್‌, ವಿಜಯನಗರ ಜಿಲ್ಲೆಯ ತುಂಗಭದ್ರಾ ಅಣೆಕಟ್ಟೆಗೆ 50,715 ಕ್ಯುಸೆಕ್‌ ನೀರು ಒಳಹರಿವು ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗರಿಷ್ಠ ಪ್ರಮಾಣದ ನೀರು ಹರಿದುಬರುತ್ತಿದೆ. ಕಬಿನಿ, ಹಾರಂಗಿ ಹಾಗೂ ಹೇಮಾವತಿ ಅಣೆಕಟ್ಟೆಗಳಲ್ಲಿ ಕೂಡ ಉತ್ತಮವಾಗಿ ನೀರು ಸಂಗ್ರಹವಾಗಿದೆ.

VISTARANEWS.COM


on

KRS Inflow
Koo

ಬೆಂಗಳೂರು: ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾದ, ಬೆಂಗಳೂರಿಗೂ ಕುಡಿಯುವ ನೀರು ಪೂರೈಸುವ, ತಮಿಳುನಾಡಿನ ರೈತರಿಗೂ ಆಶ್ರಯದಾತವಾಗಿರುವ ಕೃಷ್ಣರಾಜಸಾಗರ ಅಣೆಕಟ್ಟೆಗೆ (KRS Dam) ದಾಖಲೆ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು (KRS Inflow), ರಾಜ್ಯದಲ್ಲಿ ಹಳದಿ ಅಲರ್ಟ್‌ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಇದರಿಂದಾಗಿ ಕೆಆರ್‌ಎಸ್‌ಗೆ ಭಾನುವಾರ (ಜುಲೈ 7) ದಾಖಲೆಯ 11,027 ಕ್ಯುಸೆಕ್‌ ನೀರು ಹರಿದುಬರುತ್ತಿದೆ.

ಮಳೆಯ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಡ್ಯಾಮ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಜುಲೈ 7ರ ಬೆಳಗ್ಗೆಯ ವರದಿ ಪ್ರಕಾರ 31.09 ಟಿಎಂಸಿ ನೀರು ಸಂಗ್ರಹವಾಗಿತ್ತು. 2023ರ ಜುಲೈ 7ರಂದು 24.23 ಟಿಎಂಸಿ ನೀರು ಸಂಗ್ರಹವಾಗಿತ್ತು. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ಕೆಆರ್‌ಎಸ್‌ಗೆ ಇನ್ನಷ್ಟು ನೀರು ಹರಿದುಬರಲಿದೆ ಎಂದು ಹೇಳಲಾಗುತ್ತಿದೆ.

Cauvery Dispute

ಕರ್ನಾಟಕದ ಹಲವು ಅಣೆಕಟ್ಟೆಗಳಲ್ಲಿಯೂ ಉತ್ತಮ ಒಳಹರಿವು ಇದೆ. ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಡ್ಯಾಮ್‌ಗೆ 59,306 ಕ್ಯುಸೆಕ್‌, ವಿಜಯನಗರ ಜಿಲ್ಲೆಯ ತುಂಗಭದ್ರಾ ಅಣೆಕಟ್ಟೆಗೆ 50,715 ಕ್ಯುಸೆಕ್‌ ನೀರು ಒಳಹರಿವು ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗರಿಷ್ಠ ಪ್ರಮಾಣದ ನೀರು ಹರಿದುಬರುತ್ತಿದೆ. ಕಬಿನಿ, ಹಾರಂಗಿ ಹಾಗೂ ಹೇಮಾವತಿ ಅಣೆಕಟ್ಟೆಗಳಲ್ಲಿ ಕೂಡ ಉತ್ತಮವಾಗಿ ನೀರು ಸಂಗ್ರಹವಾಗಿದೆ. ಕೃಷಿ ಸಚಿವರೂ ಆಗಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬೆಂಗಳೂರಿನಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ್ದು, ಜುಲೈ 8ರಿಂದ ನಾಲೆಗಳಿಗೆ ನೀರು ಬಿಡಲು ತೀರ್ಮಾನಿಸಿದ್ದಾರೆ.

ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಶಾಲೆ-ಕಾಲೇಜುಗಳಿಗೆ ಸೋಮವಾರ (ಜುಲೈ 8) ರಜೆ ಘೋಷಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಅವರು ರಜೆ ಆದೇಶ ಹೊರಡಿಸಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ. ಇನ್ನೂ ಘಟ್ಟದ ಮೇಲಿನ ತಾಲೂಕುಗಳ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಇಲ್ಲ.

ಇದನ್ನೂ ಓದಿ: Student Death : ಕೇರಳದಿಂದ ಪ್ರವಾಸ ಬಂದಿದ್ದ ವಿದ್ಯಾರ್ಥಿನಿ ಕೆಆರ್‌ಎಸ್‌ನಲ್ಲಿ ಮೃತ್ಯು

Continue Reading

Latest

Accident: ಟೆರೇಸ್ ಮೇಲೆ ನಿಂತು ಜಗಳ ನೋಡುತ್ತಿದ್ದ ಮಹಿಳೆಗೇ ಬಿತ್ತು ಗುಂಡೇಟು!

ಉತ್ತರ ದೆಹಲಿಯಲ್ಲಿ 17 ಲಕ್ಷ ರೂಪಾಯಿಗಾಗಿ ಇಬ್ಬರ ನಡುವೆ ನಡೆದ ವಾದವು ಜಗಳಕ್ಕೆ ತಿರುಗಿತ್ತು. ಈ ನಡುವೆ ಒಬ್ಬ ವ್ಯಕ್ತಿ ಪಿಸ್ತೂಲ್ ಎಳೆದು ಮತ್ತೊಬ್ಬ ವ್ಯಕ್ತಿಯತ್ತ ಗುಂಡು ಹಾರಿಸಿದ್ದಾನೆ. ಆದರೆ, ಬುಲೆಟ್ ಗುರಿ ತಪ್ಪಿ (Accident) ಟೆರೇಸ್‌ನಿಂದ ಜಗಳವನ್ನು ಗಮನಿಸುತ್ತಿದ್ದ 48 ವರ್ಷದ ಮಹಿಳೆಗೆ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

VISTARANEWS.COM


on

By

Accident
Koo

ನವದೆಹಲಿ: ಟೆರೇಸ್‌ನಲ್ಲಿ ನಿಂತು ಹೊಡೆದಾಟವನ್ನು ನೋಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ (Accident) ಗುಂಡು (shot) ತಾಗಿರುವ ಘಟನೆ ಉತ್ತರ ದೆಹಲಿಯ (north delhi) ದಯಾಲ್‌ಪುರದಲ್ಲಿ ನಡೆದಿದೆ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಗುಂಡು ಹಾರಿಸಿದಾಗ ಅದು ತಪ್ಪಿ ಟೆರೇಸ್ ಮೇಲೆ ನಿಂತು ಇವರ ಜಗಳ ನೋಡುತ್ತಿದ್ದ ಮಹಿಳೆಗೆ ತಗುಲಿದೆ ಎನ್ನಲಾಗಿದೆ.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಈಶಾನ್ಯ ದೆಹಲಿಯ ದಯಾಲ್‌ಪುರ್‌ನಲ್ಲಿ ಜುಲೈ 2ರಂದು ಶನಿವಾರ ಇಬ್ಬರ ನಡುವೆ ಜಗಳವಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, 17 ಲಕ್ಷ ರೂಪಾಯಿಗಾಗಿ ಇವರ ನಡುವೆ ನಡೆದ ವಾದವು ಜಗಳಕ್ಕೆ ತಿರುಗಿತ್ತು. ಈ ನಡುವೆ ಒಬ್ಬ ವ್ಯಕ್ತಿ ಪಿಸ್ತೂಲ್ ಎಳೆದು ಮತ್ತೊಬ್ಬ ವ್ಯಕ್ತಿಯತ್ತ ಗುಂಡು ಹಾರಿಸಿದ್ದಾನೆ. ಆದರೆ, ಬುಲೆಟ್ ತಪ್ಪಿ ಟೆರೇಸ್‌ನಿಂದ ಜಗಳವನ್ನು ಗಮನಿಸುತ್ತಿದ್ದ 48 ವರ್ಷದ ಮಹಿಳೆಗೆ ಹೊಡೆದಿದೆ.

ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳೆಯನ್ನು ಆಕೆಯ ಕುಟುಂಬದವರು ಜಿಟಿಬಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆರೋಪಿಗಳ ಪೈಕಿ ಬಬ್ಲು ಎಂಬಾತನಿಗೆ 17 ಲಕ್ಷ ರೂ.ಗಳನ್ನು ಸಾಲವಾಗಿ ನೀಡಿದ್ದಾಗಿ ದೂರುದಾರ ಹಾಶಿಮ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆತ ಬಬ್ಲುವನ್ನು ವಿಚಾರಿಸಲು ಹೋದಾಗ ವಾದವು ವಿಕೋಪಕ್ಕೆ ತಿರುಗಿದೆ. ಬಬ್ಲು ತನ್ನ ಸಹಚರರಾದ ಕಮರುಲ್, ಸುಹಾಲೆ ಮತ್ತು ಸಮ್ರುನ್‌ನೊಂದಿಗೆ ಬಂದಿದ್ದು, ಹಾಶಿಮ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ನಡುವೆ ಕಮರುಲ್ ಎಂಬಾತ ಹಾಶಿಮ್‌ ಮೇಲೆ ಗುಂಡು ಹಾರಿಸಿದ ಎನ್ನಲಾಗಿದೆ. ಆದರೆ ಇದು ಗುರಿ ತಪ್ಪಿ ಮಹಿಳೆಗೆ ಹೊಡೆದಿದೆ. ಗುಂಡಿನ ದಾಳಿಯ ಅನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: Self Harming : ನಿದ್ದೆ ಇಲ್ಲದೇ ಒದ್ದಾಟ; ಬೇವಿನ ಮರಕ್ಕೆ ನೇಣು ಬಿಗಿದುಕೊಂಡ ಆಟೋ ಚಾಲಕ

ಪೊಲೀಸರು ದೆಹಲಿಯ ಬ್ರಿಜ್‌ಪುರಿ ನಿವಾಸಿಗಳಾದ ಬಬ್ಲು (38) ಮತ್ತು ಕಮರುಲ್ (26) ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಪಿಸ್ತೂಲ್, ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುದ್ಧಿ ಹೇಳಿದ್ದಕ್ಕೆ ಶಿಕ್ಷಕನನ್ನೇ ಕೊಂದ ವಿದ್ಯಾರ್ಥಿ

ವಿದ್ಯೆ ಕಲಿಸಿದ ಗುರುವನ್ನೇ ವಿದ್ಯಾರ್ಥಿಯೊಬ್ಬ ಇರಿದು ಕೊಂದಿ ಘಟನೆ ಅಸ್ಸಾಂನ ಶಿವಸಾಗರ್ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ. 11 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನನ್ನು ತರಗತಿಯಲ್ಲಿ ಇರಿದು ಕೊಂದಿದ್ದಾನೆ. ಕಳಪೆ ಸಾಧನೆಗಾಗಿ ಬೈದಿದ್ದಕ್ಕಾಗಿ ರಸಾಯನಶಾಸ್ತ್ರ ಶಿಕ್ಷಕ ರಾಜೇಶ್ ಬರುವಾ ಬೆಜವಾಡ (55) ಮೇಲೆ ಹಲ್ಲೆ ನಡೆಸಿ ಕೊಂದ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಜವಾಡ ಅವರು ರಸಾಯನಶಾಸ್ತ್ರವನ್ನು ಕಲಿಸುತ್ತಿದ್ದರು. ಜೊತೆಗೆ ಖಾಸಗಿ ಒಡೆತನದ ಶಾಲೆಯಲ್ಲಿ ನಿರ್ವಹಣಾ ಜವಾಬ್ದಾರಿಗಳನ್ನು ಸಹ ಹೊಂದಿದ್ದರು. ರಸಾಯನಶಾಸ್ತ್ರದಲ್ಲಿನ ಕಲಿಕೆಯ ಬಗ್ಗೆ ಶಿಕ್ಷಕರು ವಿದ್ಯಾರ್ಥಿಯನ್ನು ಗದರಿಸಿದ್ದರು. ಅಲ್ಲದೇ ಪೋಷಕರ ಸಭೆಗಾಗಿ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ಹೇಳಿದ್ದರು ಎನ್ನಲಾಗಿದೆ.

ದಿನದ ನಂತರ ವಿದ್ಯಾರ್ಥಿ ಕ್ಯಾಶುಯಲ್ ಬಟ್ಟೆಗಳಲ್ಲಿ ತರಗತಿಗೆ ಬಂದಿದ್ದ. ಶಿಕ್ಷಕರು ಅವನನ್ನು ಹೊರಹೋಗುವಂತೆ ಕೇಳಿದರು. ಇದ್ದಕ್ಕಿದ್ದಂತೆ ವಿದ್ಯಾರ್ಥಿ ಬೆಜವಾಡ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಪದೇ ಪದೇ ಇರಿದಿದ್ದಾನೆ.
ಇನ್ನು ಘಟನೆ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ಕೋಚಿಂಗ್‌ ಸೆಂಟರ್‌ನಲ್ಲಿ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಬಂದು ನೋಡಿದಾಗ ತರಗತಿಯಲ್ಲಿ ರಕ್ತದ ಮಡುವಿನಲ್ಲಿ ಶಿಕ್ಷಕ ಬಿದ್ದಿದ್ದರು. ಅಲ್ಲೇ ಚಾಕು ಕೂಡ ಇತ್ತು.

ಶಿಕ್ಷಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿಲಾಯಿತಾದರೂ ಆತ ಸಾವನ್ನಪ್ಪಿರುವುದನ್ನು ವೈದ್ಯರು ಖಚಿತಪಡಿಸಿದರು. ಇನ್ನು ವಿದ್ಯಾರ್ಥಿಯನ್ನು ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಇತರ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ ಶಿಕ್ಷಕ ವಿದ್ಯಾರ್ಥಿಗೆ ಈ ಹಿಂದೆ ಬೈದಿದ್ದರು ಎಂಬುದು ಬಯಲಾಗಿದೆ ಎಂದು ಹೇಳಿದ್ದಾರೆ.

Continue Reading
Advertisement
Abhishek Sharma
ಪ್ರಮುಖ ಸುದ್ದಿ59 seconds ago

Abhishek Sharma : ಅಭಿಷೇಕ್ ಶರ್ಮಾ ದಾಖಲೆಯ ಶತಕ ಬಾರಿಸಿದ್ದು ಶುಭ್​​ಮನ್ ಗಿಲ್​ ಬ್ಯಾಟ್​ನಲ್ಲಿ!

Ghee benefits
ಲೈಫ್‌ಸ್ಟೈಲ್26 mins ago

How to spot fake ghee: ನಾವು ಖರೀದಿಸಿದ ತುಪ್ಪ ಶುದ್ಧವೋ ಕಲಬೆರಕೆಯೋ ಪರೀಕ್ಷಿಸುವುದು ಹೇಗೆ?

ರಾಜಮಾರ್ಗ ಅಂಕಣ bola akshta pujari
ಅಂಕಣ27 mins ago

ರಾಜಮಾರ್ಗ ಅಂಕಣ: ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಪದಕ ಗೆದ್ದ ಕಾರ್ಕಳದ ಬೋಳ ಅಕ್ಷತಾ ಪೂಜಾರಿ

karnataka weather Forecast
ಮಳೆ56 mins ago

Karnataka Weather : ಬೆಂಗಳೂರಲ್ಲಿ ಗುಡುಗು ಸಹಿತ ಮಳೆ; ಕರಾವಳಿ, ಮಲೆನಾಡಿನಲ್ಲಿ ವರುಣಾರ್ಭಟ ಮುಂದುವರಿಕೆ

Vastu Tips
ಧಾರ್ಮಿಕ1 hour ago

Vastu Tips: ಮನೆಯಲ್ಲಿ ನೆಮ್ಮದಿ ನೆಲೆಸಬೇಕೆ? ಹಾಗಿದ್ದರೆ ಅಡುಗೆ ಒಲೆಯ ದಿಕ್ಕು ಸರಿಯಾಗಿರಲಿ!

dina Bhavishya
ಭವಿಷ್ಯ2 hours ago

Dina Bhavishya : ಇತರರ ವಿರುದ್ಧ ದ್ವೇಷ ಕಾರುತ್ತಾ ಹೋದರೆ ಹೆಚ್ಚಾಗುತ್ತೆ ಈ ರಾಶಿಯವರ ಮಾನಸಿಕ ಒತ್ತಡ

School Principal
ದೇಶ7 hours ago

School Principal: ಶಾಲೆಯಲ್ಲೇ ಮಹಿಳಾ ಟೀಚರ್‌ ಜತೆ ಪ್ರಿನ್ಸಿಪಾಲ್‌ ರೊಮ್ಯಾನ್ಸ್;‌ ವೈರಲ್‌ ಫೋಟೊ ಇಲ್ಲಿದೆ

WCPL 2024
ಪ್ರಮುಖ ಸುದ್ದಿ8 hours ago

WCPL 2024 : ಸಿಪಿಎಲ್​​ನ ಟ್ರಿನ್​ಬ್ಯಾಗೊ ರೈಡರ್ಸ್​ ತಂಡಕ್ಕೆ ಜೆಮಿಮಾ, ಶಿಖಾ ಸೇರ್ಪಡೆ

KRS Inflow
ದೇಶ8 hours ago

KRS Inflow: ಕೆಆರ್‌ಎಸ್‌ಗೆ ದಾಖಲೆಯ 11 ಸಾವಿರ ಕ್ಯುಸೆಕ್‌ ನೀರು ಒಳಹರಿವು; ಸೋಮವಾರದಿಂದ ನಾಲೆಗಳಿಗೆ ನೀರು

Abhishek Sharma
ಕ್ರೀಡೆ8 hours ago

Abhishek Sharma : 47 ಎಸೆತಕ್ಕೆ ಶತಕ ಬಾರಿಸಿ ಹಲವಾರು ದಾಖಲೆ ಮುರಿದಿ ಅಭಿಷೇಕ್​ ಶರ್ಮಾ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ11 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ14 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ15 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌