Global Warming: 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಜಾಗತಿಕ ತಾಪಮಾನ; ಇದೆಷ್ಟು ಅಪಾಯ? - Vistara News

ಪರಿಸರ

Global Warming: 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಜಾಗತಿಕ ತಾಪಮಾನ; ಇದೆಷ್ಟು ಅಪಾಯ?

Global Warming: ಹಸಿರುಮನೆ ಅನಿಲಗಳ ಹೊರ ಸೂಸುವಿಕೆ ಪ್ರಮಾಣ ಹೆಚ್ಚಾಗಿದ್ದು, ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ವೃದ್ಧಿಸಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

VISTARANEWS.COM


on

globle warming
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ (Global Warming) ಹೆಚ್ಚಾಗುತ್ತಿರುವುದು ಕಳವಳ ಮೂಡಿಸುತ್ತಿದೆ. ಈ ಮಧ್ಯೆ ಹಸಿರುಮನೆ ಅನಿಲ ಹೊರಸೂಸುವಿಕೆಯು (Global greenhouse gas emissions) 2022ರಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದರಿಂದ ಈ ವರ್ಷದ 86 ದಿನಗಳು ಈಗಾಗಲೇ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನದ ಮಿತಿಯನ್ನು ಮೀರಿದೆ ಎಂದು ವಿಶ್ವಸಂಸ್ಥೆಯ (UN) ಹೊಸ ವರದಿ ತಿಳಿಸಿದೆ.

ಈ ಶತಮಾನದ ಅಂತ್ಯದ ವೇಳೆಗೆ ಜಗತ್ತಿನ ತಾಪಮಾನ ಕನಿಷ್ಠ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. 2022ರಲ್ಲಿ ಜಾಗತಿಕವಾಗಿ 57.4 ಶತಕೋಟಿ ಟನ್ ಕಾರ್ಬನ್‌ ಡೈ ಆಕ್ಸೈಡ್ ಹೊರಸೂಸಲಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 1.2ರಷ್ಟು ಹೆಚ್ಚಾಗಿದೆ ಮತ್ತು 2019ರಲ್ಲಿ ಕಂಡು ಬಂದ ಹಿಂದಿನ ದಾಖಲೆ ಪ್ರಮಾಣಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ ಎಂದು ವರ್ಷಾಂತ್ಯದ ಹವಾಮಾನ ಬದಲಾವಣೆ ಸಮ್ಮೇಳನಕ್ಕೆ ಮುಂಚಿತವಾಗಿ ಯುಎನ್ ಎನ್ವಿರಾನ್‌ಮೆಂಟ್‌ ಪ್ರೋಗ್ರಾಂ(UN Environment Programme-UNEP)ನ ವಾರ್ಷಿಕ ಪ್ರಕಟಣೆಯಾದ ಎಮಿಷನ್ ಗ್ಯಾಪ್ ರಿಪೋರ್ಟ್ ತಿಳಿಸಿದೆ.

ಕೋವಿಡ್‌ ಕಾಲಘಟ್ಟದಲ್ಲಿ ನಿಯಂತ್ರಣ

ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್‌ ಮಹಾಮಾರಿ ವಾತಾವರಣಕ್ಕೆ ಒಂದಷ್ಟು ನೆಮ್ಮದಿಯನ್ನು ಕಲ್ಪಿಸಿತ್ತು. ಅಂದರೆ 2020ರಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದ ಪರಿಣಾಮ ವಿಷಾನಿಲ ಹೊರಸೂಸುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ 2021ರಲ್ಲಿ ಮತ್ತೆ ಚಟುವಟಿಕೆಗಳಿಗೆ ಮತ್ತೆ ವೇಗ ದೊರೆತ ಪರಿಣಾಮ ಅನಿಲ ಹೊರಸೂಸುವಿಕೆಯು ಬಹುತೇಕ 2019ರ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

ಟಾಪ್‌ 3 ದೇಶಗಳು

ಚೀನಾ ಮತ್ತು ಅಮೆರಿಕ ಅನಿಲ ಹೊರಸೂಸುವಿಕೆಯಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತವೆ. 2022ರಲ್ಲಿಯೂ ಈ ದೇಶಗಳು ಅತ್ಯಧಿಕ ಪ್ರಮಾಣದಲ್ಲಿ ಹಸಿರುಮನೆ ಅನಿಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡಿವೆ. ಹಾಗೆಯೇ ಮೂರನೇ ಅತಿದೊಡ್ಡ ಅನಿಲ ಹೊರಸೂಸುವ ರಾಷ್ಟ್ರವಾಗಿ ಭಾರತ ಇದೆ. ಯುರೋಪಿಯನ್ ಯೂನಿಯನ್, ರಷ್ಯಾ ಮತ್ತು ಬ್ರೆಜಿಲ್ ಅನಿಲ ಹೊರಸೂಸುವಿಕೆಯ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

2030ರ ವೇಳೆಗೆ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ನಿಯಂತ್ರಿಸಲು ಹಸಿರುಮನೆ ಅನಿಲ ಹೊರಸೂಸುವಿಕೆ ಶೇ. 42ರಷ್ಟು ಕಡಿಮೆಯಾಗಬೇಕು ಎಂದು ವಿಶ್ವಸಂಸ್ಥೆ ತಿಳಿಸಿದೆ. 2024ರಿಂದ ಜಾಗತಿಕವಾಗಿ ಅನಿಲ ಹೊರಸೂಸುವಿಕೆ ಪ್ರಮಾಣವು ಪ್ರತಿವರ್ಷ ಕನಿಷ್ಠ 8.7 ಪ್ರತಿಶತದಷ್ಟು ಕಡಿಮೆಯಾಗಬೇಕಾಗುತ್ತದೆ. ಕೋವಿಡ್ 19ರ ಕಾರಣದಿಂದ 2019 ಮತ್ತು 2020ರ ನಡುವೆ ಹಸಿರುಮನೆ ಅನಿಲ ಪ್ರಮಾಣ 4.7 ಪ್ರತಿಶತದಷ್ಟು ಕುಸಿದಿತ್ತು.

2023ರ ವರ್ಷವು 2016ರ ಹಿಂದಿನ ದಾಖಲೆಯನ್ನು ಹಿಂದಿಕ್ಕಿ ಹಿಂದೆಂದಿಗಿಂತಲೂ ಹೆಚ್ಚು ಬಿಸಿಯಾದ ವರ್ಷವಾಗಿ ಹೊರಹೊಮ್ಮಲು ಸಜ್ಜಾಗಿದೆ. ಈ ವರ್ಷದ ಬಹುತೇಕ ಪ್ರತಿ ತಿಂಗಳು ಒಂದಲ್ಲ ಒಂದು ತಾಪಮಾನದ ದಾಖಲೆಯನ್ನು ನಿರ್ಮಿಸಿದೆ. ಸೆಪ್ಟೆಂಬರ್ ಅತ್ಯಂತ ಬಿಸಿಯಾದ ತಿಂಗಳಾಗಿ ಹೊರಹೊಮ್ಮಿದೆ. ಈ ವರ್ಷ 86 ದಿನಗಳ ದೈನಂದಿನ ಸರಾಸರಿ ತಾಪಮಾನವು ಕೈಗಾರಿಕಾ ಪೂರ್ವದ ಸರಾಸರಿಗಿಂತ 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚೇ ದಾಖಲಾಗಿರುವುದು ಕಳವಳಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Hottest Year: 1.25 ಲಕ್ಷ ವರ್ಷಗಳಲ್ಲೇ 2023 ಅತಿ ಬಿಸಿಯಾದ ವರ್ಷ, ಕಾರಣ ಏನು?

2015ರ ಪ್ಯಾರಿಸ್ ಒಪ್ಪಂದವು ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಪ್ರಸ್ತುತ ನೀತಿಗಳು ಸರಿಸುಮಾರು 2.4 ಡಿಗ್ರಿ ಸೆಲ್ಸಿಯಸ್ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ಅಂದಾಜಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪರಿಸರ

Forest Man Of India: ಇವರೇ ನೋಡಿ ಭಾರತದ ಫಾರೆಸ್ಟ್‌ ಮ್ಯಾನ್‌; ಏಕಾಂಗಿಯಾಗಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ ಸಾಹಸಿ

Forest Man Of India: ಏಕಾಂಗಿಯಾಗಿ ಹೆಕ್ಟರ್‌ಗಟ್ಟಲೆ ಪ್ರದೇಶಗಳಲ್ಲಿ ಕಾಡು ಬೆಳೆಸಿ ʼಫಾರೆಸ್ಟ್‌ ಮ್ಯಾನ್‌ ಆಫ್‌ ಇಂಡಿಯಾʼ ಎಂದು ಜನಪ್ರಿಯರಾಗಿರುವ ಜಾದವ್‌ ಮೊಲಾಯ್ ಪಾಯೆಂಗ್‌ ಅವರ ಮಹಾತ್ಕಾರ್ಯ ಎಲ್ಲರಿಗೂ ಸ್ಫೂರ್ತಿ ಎನಿಸಿಕೊಂಡಿದೆ. ಈ ಬಗ್ಗೆ ವಿವರ ಇಲ್ಲಿದೆ.

VISTARANEWS.COM


on

The Forest Man Of India
Koo

ಬೆಂಗಳೂರು: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ದೇಶದಲ್ಲಿ ಗರಿಷ್ಠ 56 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶ ದಾಖಲಾಗಿದೆ. ಬಿಸಿ ಗಾಳಿಯಿಂದ ಅನೇಕ ಮಂದಿ ತತ್ತರಿಸಿ ಹೋಗಿದ್ದಾರೆ. ಪ್ರಾಣಿ-ಪಕ್ಷಿಗಳ ಸ್ಥಿತಿಯಂತೂ ಇನ್ನೂ ಗಂಭೀರ. ವ್ಯಾಪಕ ಪ್ರಮಾಣದಲ್ಲಿ ಕಾಡುಗಳ ನಾಶವೇ ಈ ರೀತಿ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲು ನೇರ ಕಾರಣ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ. ಈ ಮಧ್ಯೆ ಏಕಾಂಗಿಯಾಗಿ ಹೆಕ್ಟರ್‌ಗಟ್ಟಲೆ ಪ್ರದೇಶಗಳಲ್ಲಿ ಕಾಡು ಬೆಳೆಸಿ ʼಫಾರೆಸ್ಟ್‌ ಮ್ಯಾನ್‌ ಆಫ್‌ ಇಂಡಿಯಾʼ (Forest Man Of India) ಎಂದು ಜನಪ್ರಿಯರಾಗಿರುವ ಜಾದವ್‌ ಮೊಲಾಯ್ ಪಾಯೆಂಗ್‌ (Jadav Payeng) ಅವರ ಮಹಾತ್ಕಾರ್ಯ ಎಲ್ಲಿಲ್ಲದ ಪ್ರಾಧಾನ್ಯತೆ ಪಡೆದುಕೊಂಡಿದೆ. ಇವರೊಬ್ಬರೇ ಬರೋಬ್ಬರಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ್ದಾರೆ. ಅವರ ಸ್ಫೂರ್ತಿದಾಯಕ ಕಥೆ ಇಲ್ಲಿದೆ.

ಗೋಲ್ಬಾಲ್ಫಾರೆಸ್ಟ್ ವಾಚ್ ಪ್ರಕಾರ, 2010ರಲ್ಲಿ ಭಾರತವು 31.3 ಮಿಲಿಯನ್ ಹೆಕ್ಟೇರ್ ನೈಸರ್ಗಿಕ ಅರಣ್ಯ ಹೊಂದಿತ್ತು. ಅಂದರೆ ಭೂಪ್ರದೇಶದ ಶೇ. 11ರಷ್ಟು ಪ್ರದೇಶವನ್ನು ಹಸಿರು ವ್ಯಾಪಿಸಿತ್ತು. ಸುಮಾರು 11 ವರ್ಷಗಳಲ್ಲಿ ಈ ಚಿತ್ರಣವೇ ಬದಲಾಯ್ತು. ಅಂದರೆ 2021ರಲ್ಲಿ 127 ಸಾವಿರ ಹೆಕ್ಟರ್‌ಗಳಷ್ಟು ಅರಣ್ಯ ನಾಶವಾಯ್ತು. ಮರಗಳ ಮಾರಣ ಹೋಮದ ಜತೆಗೆ ಪರಿಸರ ವ್ಯವಸ್ಥೆಯೇ ಏರುಪೇರಾಗಿದೆ.

ಜಾದವ್‌ ಪಾಯೆಂಗ್‌ ಎನ್ನುವ ಭರವಸೆಯ ಬೆಳಕು

ಗಿಡ ನೆಡಬೇಕು, ಕಾಡು ಬೆಳೆಸಬೇಕು ಎನ್ನುವ ಕನಸು ಜಾಧವ್‌ ಅವರಲ್ಲಿ ಹದಿಹರೆಯದಲ್ಲೇ ಮೊಳೆತಿತ್ತು. ಕಣ್ಣೆದುರೇ ಬೆಳದ ಕಾಡುಗಳು ನಾಶವಾಗುತ್ತಿರುವುದು ನೋಡಿ ಜಾದವ್‌ ಪಾಯೆಂಗ್‌ ಒಳಗೊಳಗೇ ನಲುಗುತ್ತಿದ್ದರು. ಇದನ್ನು ಹೇಗಾದರೂ ಮಾಡಿ ತಡೆಯಬೇಕು, ತಾನು ಕಾಡು ಬೆಳೆಸಬೇಕು ಎನ್ನುವ ಛಲ ಅವರಲ್ಲಿ ಮೊಳೆಯತೊಡಗಿತು. ಹೀಗೆ ಅಸ್ಸಾಂನ ಮಜುಲಿಯಲ್ಲಿ ಜನಿಸಿದ ಜಾಧವ್‌ ಮುಂದೆ ʼಫಾರೆಸ್ಟ್‌ ಮ್ಯಾನ್‌ ಆಫ್‌ ಇಂಡಿಯಾʼ ಎಂದು ಕರೆಸಿಕೊಂಡರು.
ಮಜುಲಿ ಎನ್ನುವುದು ಬ್ರಹ್ಮಪುತ್ರ ನದಿಯಿಂದ ರೂಪುಗೊಂಡ ಒಂದು ದ್ವೀಪ. ಇಲ್ಲಿ ಮಿಶಿಂಗ್‌ ಆದಿವಾಸಿ ಕುಟುಂಬ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದೆ.

ತಿರುವು ನೀಡಿದ ಘಟನೆ

1959ರಲ್ಲಿ ಜನಿಸಿದ್ದ ಜಾದವ್ ಸಾಮಾನ್ಯರಂತೆ ತಮ್ಮಷ್ಟಕ್ಕೆ ತಾವು ಜೀವನ ಸಾಗಿಸುತ್ತಿದ್ದರು. ಆದರೆ 1979ರಲ್ಲಿ ನಡೆದ ಘಟನೆ ಅವರ ಜೀವನವನ್ನೇ ಬದಲಾಯಿಸಿ ಬಿಟ್ಟಿತು. ಸಾಮಾನ್ಯ ವ್ಯಕ್ತಿಯನ್ನು ಅಸಮಾನ್ಯ ವ್ಯಕ್ತಿಯನ್ನಾಗಿಸಿತು. ಅಂದು ಜಾದವ್‌ ತಮ್ಮ ಮನೆಯ ಸುತ್ತ ಮರಳಿನ ನೆಲದ ಮೇಲೆ ಸತ್ತು ಬಿದ್ದಿರುವ ಅನೇಕ ಹಾವುಗಳನ್ನು ನೋಡಿದರು. ಉಷ್ಣತೆ ತಾಳಲಾರದೆ ಹಾವುಗಳು ಸತ್ತು ಬಿದ್ದಿದ್ದವು. ಈಗ ಹಾವಿನ ಪರಿಸ್ಥಿತಿ ಇದಾದರೆ ಮುಂದೊಂದು ದಿನ ಮನುಷ್ಯರಾದ ನಾವೂ ಶಾಖ ತಾಳಲಾರದೆ ಇದೇ ರೀತಿ ಸತ್ತು ಬೀಳಬಹುದು ಎನ್ನುವ ಆಲೋಚನೆ 20ರ ಹರೆಯ ಜಾದವ್‌ನ ಮನಸ್ಸಿನಲ್ಲಿ ಬೇರೂರಿತು. ಇದಕ್ಕೇನು ಪರಿಹಾರ ಎಂದು ಚಿಂತಿಸತೊಡಗಿದರು. ಆಗ ಹಿರಿಯರು ಉಷ್ಣಾಂಶದಿಂದ ಪಾರಾಗಲು ಗಿಡ ನೆಡಬೇಕು ಎನ್ನುವ ಸಲಹೆ ನೀಡಿದರು. ಹೀಗೆ ಜಾದವ್‌ ತಮ್ಮ ದ್ವೀಪದ ಖಾಲಿ ಸ್ಥಳಗಳಲ್ಲಿ ಬಿದಿರು ನೆಡಲು ಆರಂಭಿಸಿದರು. ‌

ಇದೇ ವೇಳೆ ಅಸ್ಸಾಂ ಸರ್ಕಾರ ಮಣ್ಣಿನ ಸವಕಳಿ ತಡೆಯಲು ಮತ್ತು ಪ್ರವಾಹವನ್ನು ನಿಯಂತ್ರಿಸಲು ದ್ವೀಪದಲ್ಲಿ ಗಿಡ ನೆಡುವ ಯೋಜನೆಯನ್ನು ಪ್ರಾರಂಭಿಸಿತು. ಜಾದವ್‌ ಈ ಯೋಜನೆ ಭಾಗವಾದರು. ಆ ಮೂಲಕ ಬೋಳು ಪ್ರದೇಶದಲ್ಲಿ ಹಸಿರು ಮೂಡಿಸುವ ಕಾರ್ಯಕ್ಕೆ ಮುಂದಾದರು. ಹೀಗೆ ಆರಂಭವಾದ ಜಾದವ್‌ ಅವರ ಮಿಷನ್‌ ಸುಮಾರು 40 ವರ್ಷಗಳ ಕಾಲ ಮುಂದುವರಿಯಿತು. ಇದೀಗ ಅವರು ಬೆಳೆಸಿದ ಸುಮಾರು 1,390 ಎಕ್ರೆ ಕಾಡಿಗೆ ಮೋಲಾಸ್‌ ಫಾರೆಸ್ಟ್‌ (Mola’s forest) ಎಂದು ಹೆಸರಿಡಲಾಗಿದೆ.

ವಿವಿಧ ತಳಿಗಳ ಗಿಡ

ಜಾದವ್‌ ವಿವಿಧ ರೀತಿಯ ಗಿಡಗಳನ್ನು ನೆಟ್ಟಿದ್ದಾರೆ. ವಾಲ್ಕೋಲ್, ಅರ್ಜುನ್, ಎಜರ್, ಗೋಲ್ಡ್ ಮೊಹರ್, ಕೊರೊಯಿ, ಬಿದಿರು ಸೇರಿದಂತೆ ನಾನಾ ತಳಿಯ ಗಿಡಗಳನ್ನು ನೆಟ್ಟು ದಟ್ಟ ಅರಣ್ಯ ಸೃಷ್ಟಿಸಿದ್ದಾರೆ. ಜತೆಗೆ ಈ ಕಾಡು ಅನೇಕ ವನ್ಯ ಜೀವಿಗಳ ಆವಾಸ ಸ್ಥಾನವಾಗಿಯೂ ಬದಲಾಗಿದೆ. ಹುಲಿ, ಖಡ್ಗ ಮೃಗ, ಜಿಂಕೆ, ಹಂದಿ, ಮೊಲ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳ ತವರೂರು ಎನಿಸಿಕೊಂಡಿದೆ. ಆನೆಗಳ ಗುಂಪುಗಳೂ ಕೂಡ ಆಗಾಗ ಈ ಕಾಡಿಗೆ ಭೇಟಿ ನೀಡುತ್ತವೆ.

ಎಲೆ ಮರೆಯ ಕಾಯಿ

ಜಾದವ್‌ ಇಷ್ಟೆಲ್ಲ ಸಾಧನೆ ಮಾಡಿದ್ದರೂ ಹೊರ ಜಗತ್ತಿಗೆ ಪರಿಚಿತನಾಗಿರಲಿಲ್ಲ. ಎಲೆಮರೆಯ ಕಾಯಿಯಂತೆ ತಮ್ಮ ಪಾಡಿಗೆ ತಾವಿದ್ದರು. 2009ರಲ್ಲಿ ವೈಲ್ಡ್‌ಲೈಫ್‌ ರಿಪೋರ್ಟರ್‌ ಜಾದವ್‌ ಸಾಧನೆ ಬಗ್ಗೆ ಬರೆದಿದ್ದರು. ಇದು ವೈರಲ್‌ ಆಗಿ ಜಗತ್ತು ಜಾದವ್‌ ಅವರ ಮಹತ್ಕಾರ್ಯವನ್ನು ಗುರುತಿಸತೊಡಗಿತು. 2012ರಲ್ಲಿ ಇವರಿಗೆ ʼಫಾರೆಸ್ಟ್‌ ಮ್ಯಾನ್‌ ಆಫ್‌ ಇಂಡಿಯಾʼ ಎನ್ನುವ ಬಿರುದು ನೀಡಲಾಯಿತು. ಈಗಲೂ ಅವರು ಅರಣ್ಯದ ಜತೆ ಜತೆಗೆ ವಾಸಿಸುತ್ತ ಗಿಡ ನೆಡುವ ಕಾಯಕವನ್ನು ಮುಂದುವರಿಸಿದ್ದಾರೆ.

ಪದ್ಮಶ್ರೀ ಗೌರವ

ಜಾದವ್‌ ಅವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ಕೇಂದ್ರ ಸರ್ಕಾರ 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತು. ಜತೆಗೆ ವಿವಿಧ ವಿಶ್ವ ವಿದ್ಯಾನಿಲಯಗಳು ಗೌರವ ಡಾಕ್ಟರೇಟ್‌ ಪ್ರದಾನ ಮಾಡಿವೆ. ಮೆಕ್ಸಿಕೋ ಕೂಡ ಅವರ ಸೇವೆಯನ್ನು ಗುರುತಿಸಿ ಮಾರ್ಗದರ್ಶನ ನೀಡಲು ತಮ್ಮ ದೇಶಕ್ಕೆ ಕರೆಸಿಕೊಂಡಿದೆ. ಜಾದವ್‌ ಅವರ ಸಾಧನೆ ಬಗ್ಗೆ 2012ರಲ್ಲಿ ʼದಿ ಮೊಲಾಯಿ ಫಾರೆಸ್ಟ್‌ʼ (The Molai Forest) ಎನ್ನುವ ಡಾಕ್ಯುಮೆಂಟ್ರಿ ತಯಾರಾಗಿದೆ.

ಈ ವಿಶ್ವ ಪರಿಸರ ದಿನದಂದು ಜಾದವ್‌ ಅವರ ನಡೆಯಿಂದ ಸ್ಫೂರ್ತಿಗೊಂಡು ಕೆಲವರಾದರೂ ಗಿಡ ನೆಡಲು ಮುಂದೆ ಬಂದರೆ ಅದೇ ನಾವು ಅವರಿಗೆ ನೀಡಬಹುದಾದ ದೊಡ್ಡ ಕೊಡುಗೆ ಎಂದು ಪ್ರಕೃತಿ ಪ್ರಿಯರು ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ: Success Story: ರಾಧಾಮಣಿ ಅಮ್ಮಂಗೆ ವಯಸ್ಸು ಕೇವಲ ನಂಬರ್‌ ಅಷ್ಟೇ; 73 ವರ್ಷದ ಇವರ ಬಳಿ ಇದೆ ಬರೋಬ್ಬರಿ 11 ವಾಹನಗಳ ಲೈಸನ್ಸ್‌

Continue Reading

ವಿಜ್ಞಾನ

Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

ಪವಾಡಗಳ ಬಗ್ಗೆ ನಾವು ಸಾಕಷ್ಟು ಬಾರಿ ಕೇಳಿರುತ್ತೇವೆ. ಇಲ್ಲಿ ನಡೆದಿರುವ ಪವಾಡ ಮಾತ್ರ ನಂಬಲು ಅಸಾಧ್ಯವಾಗಿರುವುದು. ಇದನ್ನು ಕೇಳಿ ಎಲ್ಲರೂ ಇದು ಖಂಡಿತಾ ಸಾಧ್ಯವಿಲ್ಲ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಇದು ನಿಜವಾಗಿಯೂ ನಡೆದಿದೆ. ತಲೆಯನ್ನೇ ಕಳೆದುಕೊಂಡ ಕೋಳಿ (Headless Chicken) 18 ತಿಂಗಳ ಕಾಲ ಬದುಕಿದೆ. ಇದು ಈಗ ವಿಜ್ಞಾನಕ್ಕೂ ಸವಾಲಾಗಿ ಕಾಣುತ್ತಿದೆ.

VISTARANEWS.COM


on

By

Headless Chicken
Koo

ಪವಾಡಗಳು (Miracle) ಜೀವನದ (life) ಭಾಗವಾಗಿದೆ. ವಿಜ್ಞಾನದ (science) ಪ್ರಶ್ನೆಗೂ ನಿಲುಕದ ಕೆಲವೊಂದು ಸಂಗತಿಗಳು ಘಟಿಸುತ್ತವೆ. ಯಾರ ಬಳಿಯೂ ಉತ್ತರವಿರುವುದಿಲ್ಲ. ಈ ವಿಷಯಗಳನ್ನು ಅಲೌಕಿಕ (supernatural) ವಿದ್ಯಮಾನದ ಭಾಗವೆಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ಈ ಕೋಳಿಯೂ (Headless Chicken) ಒಂದು. ಇದು ಊಹೆಗೂ ನಿಲುಕದಂತಿದೆ. ನಂಬಲು ಕಷ್ಟ ಮತ್ತು ಆಶ್ಚರ್ಯಕರವಾಗಿದೆ.

ಇದೀಗ ಒಂದು ಪವಾಡ ಪ್ರಕರಣವೊಂದು ವರದಿಯಾಗಿದೆ. ಇದರಲ್ಲಿ ‘ಮೈಕ್’ ಎಂಬ ಕೋಳಿ (Miracle Mike) ತನ್ನ ಉಳಿದ 18 ತಿಂಗಳ ಸುದೀರ್ಘ ಜೀವನವನ್ನು ತಲೆಯಿಲ್ಲದೇ ಕಳೆದಿದೆ.

1945 ರ ಸೆಪ್ಟೆಂಬರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನ (United States) ಕೊಲೊರಾಡೋದ (Colorado) ಫ್ರೂಟಾದಲ್ಲಿ ವಾಸಿಸುತ್ತಿದ್ದ ಓಲ್ಸೆನ್ ಕುಟುಂಬವು ಸಂಜೆಯ ಊಟಕ್ಕಾಗಿ ಚಿಕನ್ ತಯಾರಿಸಲು ಯೋಚನೆ ಮಾಡುತ್ತಿತ್ತು. ಅದಕ್ಕಾಗಿ ರೈತ ಲಾಯ್ಡ್ ಓಲ್ಸೆನ್ ಮನೆಗೆ ತಾಜಾ ಮಾಂಸವನ್ನು ತರಲು ಹೊಲಕ್ಕೆ ಹೋಗುತ್ತಾನೆ.

ಅಲ್ಲಿ ಆತ ‘ಮೈಕ್’ ಎಂದು ಗುರುತಿಸಲ್ಪಟ್ಟ ಐದೂವರೆ ತಿಂಗಳ ಗಂಡು ವಯಾಂಡೊಟ್ಟೆ ಕೋಳಿಯನ್ನು ಎತ್ತಿಕೊಂಡು ತರುತ್ತಾನೆ. ಅದನ್ನು ಎಷ್ಟೇ ಕೊಲ್ಲಲು ಪ್ರಯತ್ನಿಸಿದರೂ ಆತನಿಗೆ ಅದು ಸಾಧ್ಯವಾಗಲಿಲ್ಲ. ತಲೆಯನ್ನೇ ಕತ್ತರಿಸಿದರೂ ಅದು ಉಸಿರು ಚೆಲ್ಲಲಿಲ್ಲ. ಅದೊಂದು ಅಭೂತಪೂರ್ವ ಘಟನೆಯಾಗಿದ್ದು, ವಿಶ್ವವೇ ಬೆರಗಾಗುವಂತೆ ಮಾಡಿತು.


18 ತಿಂಗಳು ಹೇಗೆ ಬದುಕಿತು?

ಲಾಯ್ಡ್ ಕೋಳಿಯ ಶಿರಚ್ಛೇದ ಮಾಡಿದ. ಕತ್ತಿಯ ಏಟು ಅದರ ತಲೆಯ ಹೆಚ್ಚಿನ ಭಾಗಗಳನ್ನು ಕತ್ತರಿಸಿದರೂ ಅದು ಕುತ್ತಿಗೆ ಮತ್ತು ಗಂಟಲಿಗೆ ಸಂಬಂಧಿಸಿದ ಕಂಠನಾಳವನ್ನು ಸೀಳುವಲ್ಲಿ ವಿಫಲವಾಯಿತು. ಹೀಗಾಗಿ ಅದು ಬದುಕುಳಿಯಿತು. ಒಂದು ಕಿವಿ ಮತ್ತು ಮೆದುಳಿನ ಹೆಚ್ಚಿನ ಕಾಂಡವು ಹಾನಿಗೊಳಗಾದರೂ ಅದು ಸಾಯಲಿಲ್ಲ. ರಕ್ತ ವೇಗವಾಗಿ ಹೆಪ್ಪುಗಟ್ಟಿದ್ದರಿಂದ ಅತಿಯಾದ ರಕ್ತದ ನಷ್ಟವಾಗಲಿಲ್ಲ.

ಬಳಿಕ ಲಾಯ್ಡ್ ಮೈಕ್‌ ಗೆ ಹೊಸ ಜೀವನ ನೀಡಲು ಮುಂದಾದ. ಕೋಳಿಯನ್ನು ಮನೆಗೆ ತಂದು ಸಂಪೂರ್ಣ ಆರೈಕೆ ಮಾಡಲು ನಿರ್ಧರಿಸಿದರು.

ಲಾಯ್ಡ್ ಅದಕ್ಕೆ ಹಾಲು ಮತ್ತು ನೀರಿನ ಮಿಶ್ರಣವನ್ನು ಒಳಗೊಂಡಿರುವ ಆಹಾರವನ್ನು ತಯಾರಿಸಿದ. ಐಡ್ರಾಪರ್ ಮೂಲಕ ಅದಕ್ಕೆ ಆಹಾರವನ್ನು ನೀಡಿದ. ಕೆಲವು ಹುಳು ಮತ್ತು ಜೋಳವನ್ನು ನೀಡಿದನು.

ಮೈಕ್ ಗಳಿಸಿದ ಖ್ಯಾತಿ

ಈ ಘಟನೆಯು ಜಗತ್ತಿಗೇ ಸುದ್ದಿಯಾಗುವಷ್ಟು ವಿಸ್ಮಯಕಾರಿಯಾಗಿತ್ತು. ಮೈಕ್ ಭಾರೀ ಜನಮನಗೆದ್ದಿತು ಮತ್ತು ಸಂಶೋಧನೆಯ ವಿಷಯವಾಯಿತು.

ಹಲವಾರು ನಿಯತಕಾಲಿಕೆಗಳಿಗೆ ಇದನ್ನು ವರದಿ ಮಾಡಿತ್ತು. ಅನೇಕ ಪತ್ರಿಕೆಗಳಿಗೆ ಇದು ಮುಖಪುಟದ ವಿಷಯವಾಯಿತು. ಮೈಕ್ ಅನ್ನು 25 ಸೆಂಟ್ಸ್ ವೆಚ್ಚದಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಯಿತು.

“ಮೈಕ್ ದಿ ಹೆಡ್‌ಲೆಸ್ ಚಿಕನ್ ಡೇ” ಅನ್ನು 1999 ರಿಂದ ಕೊಲೊರಾಡೋದ ಫ್ರೂಟಾದಲ್ಲಿ ಪ್ರತಿ ಮೇ ತಿಂಗಳ ಮೂರನೇ ವಾರಾಂತ್ಯದಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ: Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

ಮೈಕ್ ನಿಂದ ಕೋಳಿ ಮಾಲೀಕ ತಿಂಗಳಿಗೆ ಸುಮಾರು 45,000 ಡಾಲರ್ ಆದಾಯ ಗಳಿಸಿದ. ಈ ಅದ್ಭುತ ಕೋಳಿ ಮೌಲ್ಯ ಆಗ 10,000 ಡಾಲರ್ ಆಗಿತ್ತು.

ಸಾವು ಹೇಗಾಯಿತು?

1947ರ ಮಾರ್ಚ್ ನಲ್ಲಿ ಜೋಳದ ತುಂಡು ಮೈಕ್ ನ ಗಂಟಲಲ್ಲಿ ಸಿಲುಕಿದ ನಂತರ ಅದು ಸಾವನ್ನಪ್ಪಿತು. ಪ್ರವಾಸದಿಂದ ಹಿಂದಿರುಗುವಾಗ ಲಾಯ್ಡ್ ಶುಚಿಗೊಳಿಸುವ ಸಿರಿಂಜ್‌ಗಳನ್ನು ಬಿಟ್ಟು ಬಂದಿದ್ದರಿಂದ ಮೈಕ್ ನನ್ನು ಬದುಕಿಸಲು ವಿಫಲರಾದರು.

Continue Reading

ಪರಿಸರ

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ (wildlife sanctuaries) ಅನುಭವಗಳನ್ನು ನೀಡುತ್ತವೆ

VISTARANEWS.COM


on

Wildlife Sanctuaries
Koo

ಮಳೆಗಾಲ ಮತ್ತು ಕಾಡು! ಪ್ರಕೃತಿ ಪ್ರಿಯರ ಅತ್ಯಂತ ಇಷ್ಟದ ಕಾಂಬಿನೇಷನ್‌ ಇದು. ಮಳೆಗಾಲದಲ್ಲೊಮ್ಮೆ ಕಾಡಿಗೆ ಕರೆದರೆ ಯಾವ ಪ್ರಕೃತಿಪ್ರೇಮಿ ಬೇಡ ಅನ್ನಲಾರ ಹೇಳಿ? ವನ್ಯಜೀವಿ ಪ್ರಿಯರ, ಪ್ರಕೃತಿಪ್ರಿಯರ ಈ ಆಸೆಗೆ ತಣ್ಣೀರೆರಚುವಂತೆ ಮಳೆಗಾಲ ಬಂದ ತಕ್ಷಣ ರಾಷ್ಟ್ರೀಯ ಉದ್ಯಾನ/ವನ್ಯಜೀವಿಧಾಮಗಳೆಲ್ಲ ಬಾಗಿಲು ಮುಚ್ಚುತ್ತವೆ. ಕಾಡಿನ ಮದ್ಯದಲ್ಲಿ ಸಫಾರಿ ಹೋಗಲು, ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ ಅನುಭವಗಳನ್ನು ನೀಡುತ್ತವೆ. ಬನ್ನಿ, ಯಾವೆಲ್ಲ ರಾಷ್ಟ್ರೀಯ ಉದ್ಯಾನಗಳನ್ನು ಮಳೆಗಾಲಕ್ಕೆ ಸ್ವಲ್ಪವೇ ಮುನ್ನ ನೀವು ನೋಡುವುದೇ ಒಂದು ಅನುಭವ (wildlife sanctuaries) ಎಂಬುದನ್ನು ತಿಳಿಯೋಣ ಬನ್ನಿ.

Jim Corbett National Park, Uttarakhand

ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ, ಉತ್ತರಾಖಂಡ

ಉತ್ತರಾಖಂಡದ ಬಹು ಪ್ರಸಿದ್ಧ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಹಳೆಯ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳನ್ನು ಕಾಣಲು ಇದು ಪ್ರಶಸ್ತ ಜಾಗ. ಜೂನ್‌ ಮದ್ಯದಲ್ಲಿ ಇದು ಮುಚ್ಚಿದರೆ ಮತ್ತೆ ತೆರೆಯುವುದು ಅಕ್ಟೋಬರ್‌ನಲ್ಲಿಯೇ. ಆದರೆ, ಜೂನ್‌ ಆರಂಭದಲ್ಲಿ ಈ ಕಾಡು ನೋಡುವುದು ಬಲು ಸೊಗಸು.

Ranthambore National Park, Rajasthan

ರಣಥಂಬೋರ್‌ ರಾಷ್ಟ್ರೀಯ ಉದ್ಯಾನ, ರಾಜಸ್ಥಾನ

ಭಾರತದ ದೊಡ್ಡ ರಾಷ್ಟ್ರೀಯ ಉದ್ಯಾನಗಳ ಪೈಕಿ ಇದೂ ಒಂದು. ಹುಲಿಗಳನ್ನು ನೋಡಬೇಕೆಂದು ಬಯಸುವ ಪ್ರತಿ ವನ್ಯಜೀವಿ ಪ್ರೇಮಿ ಹಾಗೂ ವನ್ಯಜೀವಿ ಛಾಯಾಗ್ರಾಹಕರು ಈ ರಾಷ್ಟ್ರೀಯ ಉದ್ಯಾನಕ್ಕೆ ಬೇಟಿ ಕೊಡಲು ಬಯಸುವುದು ಸಾಮಾನ್ಯ. ಇದು ಜೂನ್‌ 30ರ ವೇಳೆಗೆ ಮುಚ್ಚುವ ಕಾರಣ ಅದಕ್ಕೂ ಮೊದಲು ಬೇಟಿ ಕೊಟ್ಟರೆ ಅಪರೂಪದ ಅನುಭವಗಳು ನಿಮ್ಮದಾಗಬಹುದು.

Bandhavgarh National Park, Madhya Pradesh

ಬಾಂಧವಗಢ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಹುಲಿಯನ್ನು ನೋಡಲು ಬಯಸುವ ಪ್ರತಿಯೊಬ್ಬ ವನ್ಯಜೀವಿ ಪ್ರಿಯರಿಗೂ ತಿಳಿದ ವನ್ಯಜೀವಿಧಾಮ ಇದು. ಇಲ್ಲಿ ಹುಲಿ ದರ್ಶನದ ಸಾಧ್ಯತೆ ಹೆಚ್ಚು. ಈಗಷ್ಟೇ ಮಳೆಬಿದ್ದ ಕಾಡು ಹಸಿರಾಗಿ ಕಂಗೊಳಿಸುವ ಸಂದರ್ಭ ಮಧ್ಯದಲ್ಲಿ ಆಕಳಿಸುತ್ತಾ ಕುಳಿತ ಹುಲಿಯನ್ನೊಮ್ಮೆ ಕಲ್ಪಿಸಿ ನೋಡಿ. ರೋಮಾಂಚಿತಗೊಳ್ಳುವುದಿಲ್ಲವೇ ಹೇಳಿ! ಜುಲೈನಿಂದ ಅಕ್ಟೋಬರ್‌ವರೆಗೆ ಈದು ಮುಚ್ಚಿರುವ ಕಾರಣ ಜೂನ್‌ನಲ್ಲಿ ಭೇಟಿಕೊಡಲು ಸುಸಮಯ.

Kanha National Park, Madhya Pradesh

ಕನ್ಹಾ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಇದೂ ಕೂಡಾ ಹುಲಿಗಳಿಗೆ ಬಲುಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನ. ಮಳೆಗಾಲ ಆರಂಭವಾದ ತಕ್ಷಣ ಕಾಣಲು ಇದು ಬಲು ಚಂದ. ಜೂನ್‌ 30ರಿಂದ ಅಕ್ಟೋಬರ್‌ 15ರವರೆಗೆ ಇದು ಮುಚ್ಚಿರುತ್ತದೆ.

Pench National Park, Madhya Pradesh and Maharashtra

ಪೆಂಚ್‌ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ

ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಈ ರಾಷ್ಟ್ರೀಯ ಉದ್ಯಾನ ಅತ್ಯಂತ ಸುಂದರವಾದ ಕಾಡುಗಳಲ್ಲಿ ಒಂದು. ರುಡ್ಯಾರ್ಡ್‌ ಕಿಪ್ಲಿಂಗ್‌ ಅವರ ದಿ ಜಂಗಲ್‌ ಬುಕ್‌ ಇದೇ ಕಾಡಿನಿಂದ ಸ್ಪೂರ್ತಿಗೊಂಡು ರಚಿತವಾದ ಕತೆ. ಹೆಚ್ಚು ಹುಲಿಗಳಿರುವ ಈ ಕಾಡು ಜೂನ್‌ 16ರಿಂದ ಸೆಪ್ಟೆಂಬರ್‌ವರೆಗೆ ಪ್ರವಾಸಿಗರಿಗೆ ಮುಚ್ಚಿರುತ್ತದೆ.

Nagarhole National Park, Karnataka

ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಕರ್ನಾಟಕ

ನಮ್ಮ ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಸುಂದರವಾದ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳ ಜೊತೆಗೆ ಆನೆ, ಚಿರತೆ, ಜಿಂಕೆ, ಕಾಡಮ್ಮೆಗಳೂ ಸೇರಿದಂತೆ ಅನೇಕ ಪ್ರಾಣಿಗಳ ಸಂತಿತಿ ಇಲ್ಲಿ ವಿಪುಲವಾಗಿದೆ. ಮಳೆ ಈಗಷ್ಟೇ ಬರಲು ಆರಂಭವಾಗುವ ಸಂದರ್ಭ ಇದು ರಮ್ಯವಾಗಿ ಕಾಣುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇದು ಮುಚ್ಚಿರುತ್ತದೆ. ಅಕ್ಟೋಬರ್‌ ತಿಂಗಳಲ್ಲೂ ಇದು ಅದ್ಭುತವಾಗಿ ಕಾಣುತ್ತದೆ.

Continue Reading

ಮೈಸೂರು

Mysore News: ಮೈಸೂರಿನಲ್ಲಿ ಪಾಲಿಕೆಯಿಂದ ನಿಷೇಧಿತ ಪ್ಲಾಸ್ಟಿಕ್‌ ವಶ; 1.61 ಲಕ್ಷ ರೂ. ದಂಡ

Mysore News: ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ನಾನಾ ಕಡೆ ದಾಳಿ ನಡೆಸಿ ಅಪಾರ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ. ಪಾಲಿಕೆಯ ಆಯುಕ್ತರ ನೇತೃತ್ವದಲ್ಲಿ ನಗರದ 9 ವಲಯ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಿ, ಸುಮಾರು 1515 ಕೆಜಿ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 1.61 ಲಕ್ಷ ರೂ. ದಂಡ ವಸೂಲಿ ಮಾಡಿದೆ.

VISTARANEWS.COM


on

banned plastic seized by corporation in Mysore
Koo

ಮೈಸೂರು: ನಗರದ ನಾನಾ ಕಡೆ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ, ಅಪಾರ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಂಡು ದಂಡ (Mysore News) ವಿಧಿಸಿದ್ದಾರೆ.

ಪಾಲಿಕೆಯ ಆಯುಕ್ತರ ನೇತೃತ್ವದಲ್ಲಿ ನಗರದ 9 ವಲಯ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಿ, ಸುಮಾರು 1515 ಕೆಜಿ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 1.61 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: RCB vs CSK: ವಾಹನ ಸವಾರರೇ ಗಮನಿಸಿ, ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

ಸೂಕ್ತ ಮಾಹಿತಿಯ ಮೇರೆಗೆ ಆಯಕ್ತರ ಆದೇಶದಂತೆ ನಗರದ ಧನ್ವಂತ್ರಿ ರಸ್ತೆಯಲ್ಲಿರುವ, ಮಲ್ಲೇಶ್‌ ಎಂಬುವವರಿಗೆ ಸೇರಿದ ಧನ್ವಂತ್ರಿ ಎಂಟರ್‌ಪ್ರೈಸಸ್‌ ಗೋದಾಮಿಗೆ ವಲಯ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆಸಿ, ಗೋದಾಮಿನಲ್ಲಿ ಸಂಗ್ರಹಿಸಿದ್ದ ನಿಷೇಧಿತ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡು 25 ಸಾವಿರ ರೂ ದಂಡ ವಿಧಿಸಿದ್ದಾರೆ.

ನಿಗದಿತ ಸ್ಥಳದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಿ

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ, ದುರಸ್ತಿ ಮತ್ತು ತೆರವುಗೊಳಿಸುವಿಕೆಯಿಂದ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯವನ್ನು ಅನೇಕ ಕಡೆ ಸಾರ್ವಜನಿಕರು ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಹಾಕುತ್ತಿರುವುದನ್ನು ನಿಯಂತ್ರಿಸಲು ಪಾಲಿಕೆಯು ಮೈಸೂರು ನಗರದ ಹೊರವಲಯದಲ್ಲಿನ ಸಿ.ಎ.05, ಹಂಚ್ಯಾ-ಸಾತಗಳ್ಳಿ `ಎ’ ವಲಯದಲ್ಲಿ ಖಾಲಿ ಪ್ರದೇಶವನ್ನು ಕಟ್ಟಡ ತ್ಯಾಜ್ಯದ ವಿಲೇವಾರಿಗೆಂದು ಗುರುತಿಸಿದೆ.

ಇದನ್ನೂ ಓದಿ: Bal Jeevan Bima: ಮಕ್ಕಳ ಹೆಸರಲ್ಲಿ ನಿತ್ಯ 6 ರೂ.ನಂತೆ ಕಟ್ಟಿದರೆ 1 ಲಕ್ಷ ರೂ. ವಿಮೆಯ ರಕ್ಷಣೆ

ಮುಂದಿನ ದಿನಗಳಲ್ಲಿ ಸಾರ್ವಜನಿಕರು ಹಾಗೂ ಖಾಸಗಿ ವ್ಯಕ್ತಿಗಳು ನಗರ ಪಾಲಿಕೆಯಿಂದ ನಿಗದಿಗೊಳಿಸಿರುವ ಸ್ಥಳದಲ್ಲೇ ಕಡ್ಡಾಯವಾಗಿ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಲಾಗಿದೆ. ಒಂದು ವೇಳೆ ನಗರ ಪ್ರದೇಶದ ಇತರೆ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಕಂಡುಬoದಲ್ಲಿ ಸಂಬoಧಪಟ್ಟ ಕಟ್ಟಡದ ಮಾಲೀಕರಿಗೆ ಮತ್ತು ವಾಹನದ ಮಾಲೀಕರಿಗೆ ಭಾರೀ ಮೊತ್ತದ ದಂಡ ವಿಧಿಸುವುದಲ್ಲದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Continue Reading
Advertisement
shatru bhairavi yaga
ಪ್ರಮುಖ ಸುದ್ದಿ18 mins ago

Shatru Bhairavi Yaga: ಶತ್ರು ಭೈರವಿ ಯಾಗ ನಡೆದಿಲ್ಲ, ಪ್ರಾಣಿಬಲಿಯೂ ಇಲ್ಲ: ಕೇರಳ ಸರಕಾರದಿಂದಲೇ ತನಿಖೆ, ಸ್ಪಷ್ಟನೆ

Bigg Boss OTT 3 Anil Kapoor Replaces Salman Khan As Host
ಒಟಿಟಿ23 mins ago

Bigg Boss OTT 3: ಶುರುವಾಗಲಿದೆ ಬಿಗ್​ ಬಾಸ್​ ಒಟಿಟಿ 3: ನಿರೂಪಣೆಗೆ ಸಲ್ಮಾನ್​ ಖಾನ್​ ಬದಲು ಅನಿಲ್​ ಕಪೂರ್!

Lok Sabha Election
Lok Sabha Election 202429 mins ago

Lok Sabha Election: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದಿರುವ 6 ಅಭ್ಯರ್ಥಿಗಳ ಸಾಮರ್ಥ್ಯ ಎಷ್ಟಿದೆ?

IND vs PAK
ಕ್ರೀಡೆ35 mins ago

IND vs PAK T20 World Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ ಗೆಲುವು ಖಚಿತ ಎಂದ ಪಾಕ್​ ಆಟಗಾರ

Lok Sabha Election 2024 Mithun Chakraborty casting his vote
ಬಾಲಿವುಡ್45 mins ago

Lok Sabha Election 2024: ಕೊನೇ ಹಂತದ ಮತದಾನ; ವೋಟ್‌ ಮಾಡಿದ ನಟ ಮಿಥುನ್ ಚಕ್ರವರ್ತಿ

IND vs BAN
ಕ್ರೀಡೆ1 hour ago

IND vs BAN: ಇಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ; ಕೊಹ್ಲಿ ಆಡುವುದು ಅನುಮಾನ

Exit Poll
Lok Sabha Election 20241 hour ago

Exit Poll: ಇಂದು ಸಂಜೆ 6.30ಕ್ಕೆ ಎಕ್ಸಿಟ್ ಪೋಲ್ ರಿಸಲ್ಟ್; ಮತಗಟ್ಟೆ ಸಮೀಕ್ಷೆ ಹೇಗೆ ನಡೆಸುತ್ತಾರೆ?

Kannada Cinema In OTT bad manners 02 Kannada Movie
ಸ್ಯಾಂಡಲ್ ವುಡ್2 hours ago

Kannada Cinema In OTT: ಒಟಿಟಿಗೆ ಲಗ್ಗೆ ಇಟ್ಟ ʼಬ್ಯಾಡ್‌ ಮ್ಯಾನರ್ಸ್‌ʼ, ‘O2’; ಸ್ಟ್ರೀಮಿಂಗ್ ಎಲ್ಲಿ?

hum do humare barah
ಕರ್ನಾಟಕ2 hours ago

Hum Do Humare Barah: ʼಹಮ್ ದೋ, ಹಮಾರೇ ಬಾರಹ್ʼ ಚಿತ್ರ ಬಿಡುಗಡೆಗೆ ಮುಸ್ಲಿಮರ ವಿರೋಧ: “ಪೆನ್‌ಡ್ರೈವ್‌ ಕೇಸ್‌ ಮೇಲೆ ಮಾಡಿ” ಎಂದು ಗರಂ!

Neeraj Chopra
ಕ್ರೀಡೆ2 hours ago

Neeraj Chopra: 2 ತಿಂಗಳು ವಿದೇಶದಲ್ಲಿ ಕಠಿಣ ತರಬೇತಿ ಪಡೆಯಲಿದ್ದಾರೆ ನೀರಜ್ ಚೋಪ್ರಾ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌