How To Keep Vegetables Fresh: ಸೊಪ್ಪು-ತರಕಾರಿಗಳು ತಾಜಾ ಇರುವಂತೆ ಕಾಪಾಡುವುದು ಹೇಗೆ? - Vistara News

ಆರೋಗ್ಯ

How To Keep Vegetables Fresh: ಸೊಪ್ಪು-ತರಕಾರಿಗಳು ತಾಜಾ ಇರುವಂತೆ ಕಾಪಾಡುವುದು ಹೇಗೆ?

ಹಸಿರು ಸೊಪ್ಪು, ತರಕಾರಿಗಳು ನಮ್ಮ ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದವು ಎಂಬುದು ಸರಿಯಷ್ಟೆ. ಆದರೆ ಸೊಪ್ಪು-ತರಕಾರಿಗಳ ರಕ್ಷಣೆಯೇ (How To Keep Vegetables Fresh) ಕೆಲವೊಮ್ಮೆ ಸವಾಲಾಗಿ ಬಿಡುತ್ತದೆ.

VISTARANEWS.COM


on

garden vegetables
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸೊಪ್ಪು-ತರಕಾರಿಗಳನ್ನು (How To Keep Vegetables Fresh) ಬಳಸುವಾಗ ಫ್ರಿಜ್‌ನಿಂದ ತೆರೆದು ನೋಡಿದರೆ ಅರ್ಧ ಕೊಳೆತು ಇಲ್ಲವೇ ಒಣಗಿ ಅಥವಾ ಬಾಡಿರುತ್ತದೆ. ತರಕಾರಿಗಳಂತೂ ಕೆಲವೊಮ್ಮೆ ರಬ್ಬರಿನಂಥ ಸ್ಥಿತಿಸ್ಥಾಪಕ ಗುಣವನ್ನು ಗಳಿಸಿಕೊಂಡಿದ್ದರೆ, ಸೊಪ್ಪುಗಳು ಹಸಿರಿನಿಂದ ಕಡು ಹಳದಿ ಬಣ್ಣಕ್ಕೆ ತಿರುಗಿರುತ್ತವೆ. ಅದಿಲ್ಲದಿದ್ದರೆ ಕೊಳೆತು ಮುದ್ದೆಯಾಗಿರುತ್ತವೆ. ಗುಣಮಟ್ಟದ ತರಕಾರಿಯನ್ನು ತಂದರೂ ಅವು ಬಳಸುವಾಗ ತಾಜಾ ಮತ್ತು ಪೌಷ್ಟಿಕವಾಗಿ ಇಲ್ಲದಿದ್ದರೆ ಹೇಗೆ?

Selection of leafy green vegetables in wicker basket.

ಹಸಿರು ಸೊಪ್ಪು, ತರಕಾರಿಗಳು ನಮ್ಮ ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದವು ಎಂಬುದು ಸರಿಯಷ್ಟೆ. ಆದರೆ ಸೊಪ್ಪು-ತರಕಾರಿಗಳ ರಕ್ಷಣೆಯೇ ಕೆಲವೊಮ್ಮೆ ಸವಾಲಾಗಿ ಬಿಡುತ್ತದೆ. ಇವತ್ತಿಗೆ ಬೇಕಾದ್ದನ್ನು ಇವತ್ತು ತಂದುಕೊಳ್ಳುವುದು ಸಾಧ್ಯವಿಲ್ಲದ ಮಾತು. ಒಮ್ಮೆ ಮಾರುಕಟ್ಟೆಯಿಂದ ತರುವಾಗ ಒಂದು ವಾರಕ್ಕಾಗುವಷ್ಟಾದರೂ ತರಬೇಕು. ತಂದಿದ್ದನ್ನು ಫ್ರಿಜ್‌ನಲ್ಲಿ ಇರಿಸಿಕೊಳ್ಳಬೇಕು. ಅದನ್ನು ಬಳಸುವಾಗ ತೆರೆದು ನೋಡಿದರೆ ಅರ್ಧ ಕೊಳೆತು ಇಲ್ಲವೇ ಒಣಗಿ ಅಥವಾ ಬಾಡಿರುತ್ತದೆ. ತರಕಾರಿಗಳಂತೂ ಕೆಲವೊಮ್ಮೆ ರಬ್ಬರಿನಂಥ ಸ್ಥಿತಿಸ್ಥಾಪಕ ಗುಣವನ್ನು ಗಳಿಸಿಕೊಂಡಿದ್ದರೆ, ಸೊಪ್ಪುಗಳು ಹಸಿರಿನಿಂದ ಕಡು ಹಳದಿ ಬಣ್ಣಕ್ಕೆ ತಿರುಗಿರುತ್ತವೆ. ಅದಿಲ್ಲದಿದ್ದರೆ ಕೊಳೆತು ಮುದ್ದೆಯಾಗಿರುತ್ತವೆ. ಗುಣಮಟ್ಟದ ತರಕಾರಿಯನ್ನು ತಂದರೂ ಅವು ಬಳಸುವಾಗ ತಾಜಾ ಮತ್ತು ಪೌಷ್ಟಿಕವಾಗಿ ಇಲ್ಲದಿದ್ದರೆ ಹೇಗೆ?

ಅವುಗಳನ್ನು ತಾಜಾ ಆಗಿ ಇರಿಸಿಕೊಳ್ಳುವುದು ಕಷ್ಟವಾದರೂ ಅಸಾಧ್ಯವಂತೂ ಖಂಡಿತ ಅಲ್ಲ. ಕೆಲವು ಕ್ರಮಗಳನ್ನು ಪಾಲಿಸುವುದರಿಂದ ಈ ಋತುಮಾನದ ಹಸಿ ಕಾಳುಗಳು, ಸೊಪ್ಪು, ತರಕಾರಿಗಳನ್ನು ಫ್ರಿಜ್‌ನಲ್ಲಿ ವಾರಗಟ್ಟಲೆ ತಾಜಾ, ರುಚಿಕರ ಮತ್ತು ಪೌಷ್ಟಿಕವಾಗಿಯೇ ಇರಿಸಿಕೊಳ್ಳಬಹುದು. ಬೇಕಾದಾಗೆಲ್ಲ ತೆಗೆದು ಉಪಯೋಗಿಸಿಕೊಳ್ಳಬಹುದು. ಹಾಗಾದರೆ ಏನು ಮಾಡಬೇಕು?

Washing Fruits and Vegetables

ಸ್ವಚ್ಛ ಮಾಡುವ ಕ್ರಮ

ಪೇಟೆಯಿಂದ ತರುವ ತರಕಾರಿಗಳನ್ನು ತೊಳೆದು ಸ್ವಚ್ಛ ಮಾಡಿ ಉಪಯೋಗಿಸುವುದನ್ನು ಎಲ್ಲರೂ ಮಾಡುತ್ತೇವೆ. ತೊಳೆಯದೇ ಫ್ರಿಜ್‌ನಲ್ಲಿಟ್ಟು ಬೇಕಾದಾಗ ತೊಳೆದು ಉಪಯೋಗಿಸುವುದೇ ಅಥವಾ ತೊಳೆದು ಫ್ರಿಜ್‌ನಲ್ಲಿ ಶೇಖರಿಸಿಡುವುದೇ ಎಂಬ ಗೊಂದಲ ಹಲವರದ್ದು. ಆದಷ್ಟೂ ಮಣ್ಣೆಲ್ಲ ತೊಳೆದು ಸ್ವಚ್ಛ ಮಾಡಿ ಶೇಖರಿಸುವುದು ಸೂಕ್ತ. ಆದರೆ ಇಲ್ಲೊಂದು ಸಮಸ್ಯೆಯಿದೆ. ತೊಳೆದರೆ ಬೇಗ ಕೊಳೆಯುತ್ತದೆ ಎಂಬುದು ಹಲವರ ಅನುಭವ. ಹಾಗಾಗಿ, ತೊಳೆದ ಮೇಲೆ ನೀರು ಆರಿಸುವುದು ಮುಖ್ಯ. ಪೇಪರ್‌ ಟವೆಲ್‌ನಿಂದ (ಅದನ್ನು ಬಳಸುವವರಾದರೆ) ಒತ್ತಿ ನೀರು ತೆಗೆದು ಮನೆಯೊಳಗೇ ನರಳಿನಲ್ಲಿ ಆರಹಾಕಿ. ಅದಿಲ್ಲದಿದ್ದರೆ ನೇರವಾಗಿ ಸ್ವಚ್ಛ ಹತ್ತಿಯ ಬಟ್ಟೆಯ ಮೇಲೆ ತಂಪಾದ ಜಾಗದಲ್ಲಿ ಸೊಪ್ಪು, ತರಕಾರಿಗಳನ್ನು ಹರವಿಡಿ. ಒಂದೆರಡು ತಾಸುಗಳಲ್ಲಿ ಅಥವಾ ಅವುಗಳಲ್ಲಿರುವ ನೀರು ಸಂಪೂರ್ಣ ಆರಿದ ಮೇಲೆ ಶೇಖರಿಸಿ ಇಟ್ಟುಕೊಳ್ಳಬಹುದು.

ಶೇಖರಿಸುವುದು ಹೇಗೆ?

ಶೇಖರಿಸಿದ ಚೀಲಗಳಲ್ಲಿ ತೇವಾಂಶ ಒಳಗೇ ಉಳಿದರೆ ಒಳಗಿರುವ ವಸ್ತುಗಳು ಹಾಳಾಗುತ್ತವೆ. ಹಾಗಾಗಿ ಯಾವುದೇ ಚೀಲಗಳಲ್ಲಿ ಅವುಗಳನ್ನು ಶೇಖರಿಸಿದರೂ, ತೇವ ಆವಿಯಾಗುವುದಕ್ಕೆ ರಂಧ್ರಗಳಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಜಿಪ್‌ಲಾಕ್‌ ಉಪಯೋಗಿಸುತಿದ್ದರೆ, ಅವುಗಳ ಬಾಯನ್ನು ಸಂಪೂರ್ಣ ಸೀಲ್‌ ಮಾಡದೆ ಸ್ವಲ್ಪವೇ ತೆರೆದಿರಿಸಿ. ಅದಿಲ್ಲದಿದ್ದರೆ ಮಾಮೂಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳಿಗೇ ಸಣ್ಣ ರಂಧ್ರಗಳನ್ನು ಮಾಡಿ ಶೇಖರಿಸಿಡಬಹುದು. ಅಂತೂ ಸೊಪ್ಪು-ತರಕಾರಿಗಳಲ್ಲಿ ನೀರು, ತೇವಾಂಶ ಸಿಲುಕದಂತೆ ಜಾಗ್ರತೆ ಮಾಡಿ.

Leafy vegetables against green background

ಸೊಪ್ಪುಗಳು

ಇಷ್ಟೆಲ್ಲಾ ಮಾಡಿದರೂ ಸೊಪ್ಪುಗಳು ಹಾಳಾಗುತ್ತಿವೆಯೇ? ಫ್ರಿಜ್‌ನ ಕ್ರಿಸ್ಪರ್‌ ಹೊರತಾಗಿ ಬೇರೆಲ್ಲೂ ಸೊಪ್ಪುಗಳನ್ನು ಇರಿಸಬೇಡಿ. ಹೆಚ್ಚಿನ ತೇವಾಂಶವನ್ನು ನಿಭಾಯಿಸುವಂತೆ ಫ್ರಿಜ್‌ನ ಈ ಭಾಗವನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಮೆಂತೆ, ಪಾಲಕ್‌, ಲೆಟೂಸ್‌, ಸಬ್ಬಸಿಗೆಯಂಥ ಸೊಪ್ಪುಗಳನ್ನು ಕಾಪಾಡಿಕೊಳ್ಳಲು ಸೂಕ್ತವಾದ ಸ್ಥಳವಿದು.

ಸುತ್ತಿಡಿ

ಹೂಕೋಸು, ಎಲೆಕೋಸು, ಬ್ರೊಕೊಲಿಯಂಥ ತರಕಾರಿಗಳನ್ನು ಪೇಪರ್‌ ಟವೆಲ್‌ನಲ್ಲಿ ಸುತ್ತಿಡಿ. ಇದರಿಂದ ತೇವವನ್ನು ಇನ್ನಷ್ಟು ಹೀರಿ, ಹಸಿಹಸಿಯಾಗಿ ಇರದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಸುತ್ತಿದ ಸರಕಾರಿಗಳನ್ನು ರಂಧ್ರವುಳ್ಳು ಬ್ಯಾಗ್‌ಗಳಲ್ಲಿ ಇರಿಸಿ. ಇದರಿಂದ ವಾರಗಟ್ಟಲೆ ಇವುಗಳನ್ನು ತಾಜಾ ಆಗಿ ಕಾಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಇಷ್ಟೇ ಅಲ್ಲ

ಕೊತ್ತಂಬರಿ, ಪುದೀನಾ, ಬೆಸಿಲ್‌ನಂಥ ಪರಿಮಳದ ಸೊಪ್ಪುಗಳನ್ನು ಉಳಿದೆಲ್ಲ ಸೊಪ್ಪುಗಳಂತೆ ಕಾದುಕೊಳ್ಳುವುದು ಕಷ್ಟ. ಹಾಗಾಗಿ ಪುಟ್ಟ ಜಾರ್‌ನಲ್ಲಿ ನೀರಿರಿಸಿ, ಅದರಲ್ಲಿ ಈ ಸೊಪ್ಪಿನ ಕಂತೆಗಳನ್ನು ಬೇರು ಮುಳುಗುವಂತೆ ಇರಿಸಿ ತಂಪಾದ ಜಾಗದಲ್ಲಿಡಿ. ನಾಲ್ಕಾರು ದಿನಗಳವರೆಗೆ ಇವು ತಾಜಾ ಆಗಿಯೇ ಇರುತ್ತವೆ. ಇದಕ್ಕೆ ಅಳ್ಳಕವಾದ ಪ್ಲಾಸ್ಟಿಕ್‌ ಮುಚ್ಚಿ, ಹಾಗೆಯೇ ಫ್ರಿಜ್‌ನಲ್ಲಿ ಇರಿಸಲೂಬಹುದು.

Fresh Vegetables

ತರಕಾರಿಗಳು

ಹಣ್ಣು ಮತ್ತು ತರಕಾರಿಗಳನ್ನು ಎಂದಿಗೂ ಒಂದೇ ಬ್ಯಾಗ್‌ನಲ್ಲಿ ಇರಿಸಬೇಡಿ. ಹಣ್ಣುಗಳಿಂದ ಸಾಮಾನ್ಯವಾಗಿ ಇಥಿಲೀನ್‌ ಅನಿಲ ಬಿಡುಗಡೆಯಾಗುತ್ತದೆ. ಇದು ಪಕ್ವವಾಗುವುದನ್ನು ಹೆಚ್ಚಿಸುತ್ತದೆ. ಇದರಿಂದ ತರಕಾರಿಗಳು ಬೇಗ ಹಾಳಾಗುತ್ತವೆ. ಹಾಗಾಗಿ ಹಣ್ಣು ಮತ್ತು ತರಕಾರಿಗಳನ್ನು ಫ್ರಿಜ್‌ನಲ್ಲಿ ಪ್ರತ್ಯೇಕವಾಗಿಯೇ ಶೇಖರಿಸಿಡಿ.

ತಾಪಮಾನ

ಫ್ರಿಜ್‌ನ ತಾಪಮಾನ 1ರಿಂದ 4 ಡಿ. ಸೆ. ಒಳಗೇ ಇರುವಂತೆ ನೋಡಿಕೊಳ್ಳಿ. ಇದರಿಂದ ವಸ್ತುಗಳು ದೀರ್ಘಕಾಲ ಕೆಡದಂತೆ ಕಾಪಾಡಿಕೊಳ್ಳಬಹುದು. ಶೇಖರಿಸಿಟ್ಟು ಮರೆತುಬಿಟ್ಟರೆ ಅದೂ ಕಷ್ಟವೆ. ಇರುವ ವಸ್ತುಗಳ ಸ್ಥಿತಿಗತಿಯನ್ನು ಆಗಾಗ ವಿಚಾರಿಸಿಕೊಳ್ಳಿ. ಇದರಿಂದ ಒಂದೊಮ್ಮೆ ಯಾವುದಾದರೂ ಹಾಳಾಗಿದ್ದರೆ, ಅದನ್ನು ಬಿಸಾಡಿ ಉಳಿದವುಗಳೂ ಹಾಳಾಗದಂತೆ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Bone Health In Winter: ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Betel Leaves Health Benefits: ರಾತ್ರಿ ಊಟದ ಬಳಿಕ ವೀಳ್ಯದೆಲೆ ಸೇವನೆ ಆರೋಗ್ಯಕ್ಕೆ ಉತ್ತಮ

ನಮ್ಮ ಹಿರಿಯರು ಊಟದ ಬಳಿಕ ವೀಳ್ಯದೆಲೆ, ಅಡಿಕೆ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದರು. ಆದರೆ ಇದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಎನ್ನುವುದನ್ನು ಆಯುರ್ವೇದ ಹೇಳುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಬಹುಮಾನ್ಯತೆ ಪಡೆದಿರುವ ವೀಳ್ಯದೆಯನ್ನು (Betel Leaves Health Benefits) ರಾತ್ರಿ ಊಟದ ಬಳಿಕ ಸೇವಿಸುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ.

VISTARANEWS.COM


on

By

Betel leaves health benefits
Koo

ಭಾರತೀಯ ಸಂಸ್ಕೃತಿಯಲ್ಲಿ (Indian culture) ವೀಳ್ಯದೆಲೆಗೆ (betel leaves) ಬಹುಮಾನ್ಯತೆ ನೀಡಲಾಗುತ್ತದೆ. ಪ್ರತಿಯೊಂದು ಶಾಸ್ತ್ರ, ಸಂಪ್ರದಾಯಗಳಲ್ಲಿ ವೀಳ್ಯದೆಲೆ ಅಡಿಕೆಯನ್ನು ನೀಡಿ ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ. ಆಯುರ್ವೇದದಲ್ಲೂ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ರಾತ್ರಿ ಭೋಜನದ (dinner) ಬಳಿಕ ವೀಳ್ಯದೆಲೆ (Betel Leaves Health Benefits) ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.

ಊಟದ ಬಳಿಕ ವೀಳ್ಯದೆಲೆ, ಅಡಿಕೆ ಜಗಿಯುವ ನಮ್ಮ ಹಿರಿಯರ ಅಭ್ಯಾಸವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದಾಗಿ ಆಯುರ್ವೇದದಲ್ಲಿ ಹೇಳಲಾಗಿದೆ. ಆದರೆ ಈಗ ಇದು ಕಡಿಮೆಯಾಗಿ ವಿವಿಧ ಮಸಾಲೆಗಳನ್ನು ಸೇರಿಸಿ ತಯಾರಿಸುವ ಪಾನ್ ಹೆಚ್ಚು ಜನಪ್ರಿಯತೆ ಪಡೆದಿದೆ.

ವೀಳ್ಯದೆಲೆಗಳು ಆರೋಗ್ಯಕರ ಜೀರ್ಣಕಾರಿ ವ್ಯವಸ್ಥೆಯನ್ನು ಉತ್ತೇಜಿಸುವುದು, ಬಾಯಿಯ ನೈರ್ಮಲ್ಯ, ಕರುಳಿನ ಆರೋಗ್ಯವನ್ನೂ ಕಾಪಾಡುತ್ತದೆ. ರಾತ್ರಿ ಊಟದ ಬಳಿಕ ವೀಳ್ಯದೆಲೆಗಳನ್ನು ಸೇವಿಸುವುದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.


ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಜೀರ್ಣಕಾರಿ ಸಮಸ್ಯೆಗಳಿಂದ ಬಳಲುವವರು ಉತ್ತಮ ಜೀರ್ಣಕ್ರಿಯೆಗಾಗಿ ರಾತ್ರಿಯ ಆಹಾರದ ಬಳಿಕ ಒಂದು ವೀಳ್ಯದೆಲೆಯನ್ನು ಜಗಿಯುವ ಅಭ್ಯಾಸ ಒಳ್ಳೆಯದು. ಇದರಲ್ಲಿರುವ ರಸ ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಉತ್ತೇಜನ ಸಿಗುತ್ತದೆ. ಹೊಟ್ಟೆ ಉಬ್ಬರ, ಅಸಿಡಿಟಿ ತೊಂದರೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಬಾಯಿಯ ಅರೋಗ್ಯ ಕಾಪಾಡುತ್ತದೆ

ವೀಳ್ಯದೆಲೆಗಳು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣವನ್ನು ಹೊಂದಿದೆ. ಇದು ಬಾಯಿಯ ಸೋಂಕುಗಳನ್ನು ಎದುರಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

ಬಾಯಿ ಸ್ವಚ್ಛತೆ

ಆಯುರ್ವೇದದ ಪ್ರಕಾರ ಭೋಜನದ ಬಳಿಕ ವೀಳ್ಯದೆಲೆ ಜಗಿಯುವುದು ಬಾಯಿಯ ದುರ್ಗಂಧವನ್ನು ಹೋಗಲಾಡಿಸುತ್ತದೆ. ಹಲ್ಲಿನಲ್ಲಿ ಕುಳಿಗಳಾಗುವುದು, ಒಸಡು ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಒತ್ತಡ, ಆತಂಕ ನಿವಾರಣೆ

ಒತ್ತಡ, ಆತಂಕದ ಸಮಸ್ಯೆ ಇದ್ದಾರೆ ರಾತ್ರಿ ಊಟದ ಬಳಿಕ ವೀಳ್ಯದೆಲೆ ಸೇವನೆ ಒಳ್ಳೆಯದು. ಆಯುರ್ವೇದದ ಪ್ರಕಾರ ವೀಳ್ಯದೆಲೆಗಳು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುವ ಪರಿಣಾಮಗಳನ್ನು ಬೀರುವ ಕೆಲವು ಸಂಯುಕ್ತಗಳನ್ನು ಹೊಂದಿದೆ. ಇದು ನರಮಂಡಲಕ್ಕೆ ವಿಶ್ರಾಂತಿಯನ್ನು ನೀಡಿ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.


ದೇಹದಿಂದ ವಿಷವನ್ನು ಹೊರಹಾಕುತ್ತದೆ

ಆಯುರ್ವೇದದಲ್ಲಿ ವೀಳ್ಯದೆಲೆಗಳು ವಿಷ ಹೊರತೆಗೆಯುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ರಾತ್ರಿಯಲ್ಲಿ ವೀಳ್ಯದೆಲೆ ಸೇವನೆ ನೈಸರ್ಗಿಕವಾಗಿ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಉಸಿರಾಟ ಸಮಸ್ಯೆ ನಿವಾರಿಸುತ್ತದೆ

ವೀಳ್ಯದೆಲೆಗಳು ಉಸಿರಾಟ ತೊಂದರೆಯನ್ನು ನಿವಾರಿಸುತ್ತದೆ. ಉಸಿರಾಟದ ತೊಂದರೆ ಉಂಟು ಮಾಡುವ ಗುಣಲಕ್ಷಣಗಳನ್ನು ಸಂಪೂರ್ಣವಾಗಿ ತೊಡೆದು ಹಾಕುತ್ತದೆ.

ಕೆಮ್ಮು ನಿವಾರಣೆ

ಕೆಮ್ಮಿಗೆ ವೀಳ್ಯದೆಲೆ ಅತ್ಯತ್ತಮ ಔಷಧ. ವೀಳ್ಯದೆಲೆಗಳು ಗಂಟಲು ಮತ್ತು ಉಸಿರಾಟದ ಹಾದಿಯಲ್ಲಿರುವ ತೊಂದರೆಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ: Junk Food Side Effects: ಗೇಮಿಂಗ್‌ ದಾಸರಾದ ಮಕ್ಕಳು ಜಂಕ್‌ ಫುಡ್‌ ವ್ಯಸನಿಗಳಾಗುವ ಸಂಭವ ಹೆಚ್ಚು!

ಆರೋಗ್ಯಕರ ಚಯಾಪಚಯಕ್ಕೆ ಉತ್ತೇಜನ

ದೇಹದ ತೂಕ ಮತ್ತು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಚಯಾಪಚಯವು ನಿರ್ಣಾಯಕವಾಗಿದೆ. ವೀಳ್ಯದೆಲೆಯೂ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾತ್ರಿ ಊಟದ ಬಳಿಕ ವೀಳ್ಯದೆಲೆಗಳನ್ನು ಸೇವಿಸುವುದು ಚಯಾಪಚಯವನ್ನು ಹೆಚ್ಚಿಸುತ್ತದೆ. ಆಯುರ್ವೇದದ ಪ್ರಕಾರ ಉತ್ತಮ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಶಕ್ತಿಯ ಉತ್ಪಾದನೆಗೆ ಇದು ಸಹಾಯ ಮಾಡುತ್ತದೆ.

ಮೂರು ದೋಷ ನಿವಾರಣೆ

ಆಯುರ್ವೇದದ ಪ್ರಕಾರ ಮೂರು ದೋಷಗಳಾದ ವಾತಾ, ಪಿತ್ತ ಮತ್ತು ಕಫದಲ್ಲಿನ ಅಸಮತೋಲನವು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿರುತ್ತದೆ. ರಾತ್ರಿಯಲ್ಲಿ ವೀಳ್ಯದೆಲೆ ಸೇವಿಸುವುದು ಈ ಮೂರು ಪ್ರಮುಖ ದೋಷಗಳನ್ನು ಸಮತೋಲನಗೊಳಿಸಲು ಮತ್ತು ದೇಹದೊಳಗೆ ಸಾಮರಸ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

Continue Reading

ಆರೋಗ್ಯ

International Yoga Day 2024: ಧ್ಯಾನ ಎಂದರೇನು? ಇದರಿಂದ ಏನೇನು ಪ್ರಯೋಜನ?

ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ 2024 ಒತ್ತಡ ನಿವಾರಣೆಗೆ ವ್ಯಾಪಕವಾಗಿ ವಿಶ್ವದೆಲ್ಲೆಡೆ ಚಿಕಿತ್ಸೆಯ ರೂಪದಲ್ಲಿ ಬಳಕೆಯಾಗುತ್ತಿರುವ ಕ್ರಮವೆಂದರೆ ಧ್ಯಾನ. ಕಣ್ಣು ಮುಚ್ಚಿ ಒಳ ಹೋಗುವ ಈ ಕ್ರಿಯೆಗೆ ಹೊರಗಿನಿಂದ ವಿಮುಖರಾಗುವುದು ಅಗತ್ಯವೇ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ- ಇತ್ಯಾದಿ ಪ್ರಶ್ನೆಗಳಿಗೆ ಸಮಾಧಾನವನ್ನು ಶೋಧಿಸುವ ಪ್ರಯತ್ನವಿದು. ಧ್ಯಾನವೆಂದರೆ ಆಳವಾದ ವಿಶ್ರಾಂತಿ ಮತ್ತು ಜಾಗೃತ ಸ್ಥಿತಿ- ಈ ಎರಡನ್ನೂ ಒಂದೇ ಸಮಯಕ್ಕೆ ಏಕತ್ರಗೊಳಿಸಿದ ಸ್ಥಿತಿ! ಈ ಕುರಿತ (International Yoga Day) ವಿವರ ಇಲ್ಲಿದೆ.

VISTARANEWS.COM


on

International Yoga Day 2024
Koo

ಧ್ಯಾನ ಎನ್ನುತ್ತಿದ್ದಂತೆ ನಾನಾ (International Yoga Day) ಬಗೆಯ ಚಿತ್ರಗಳು ಮನಸ್ಸಿಗೆ ಬರುತ್ತವೆ. ಯಾರೋ ತಪಸ್ಸು ಮಾಡುವುದು, ಗಡ್ಡ ಬಿಟ್ಟುಕೊಂಡು ವೃಕ್ಷಾಸನದಲ್ಲಿ ನಿಂತಿರುವುದು, ಚಿನ್ಮುದ್ರೆ ಹಿಡಿದು ಕಣ್ಣು ಮುಚ್ಚಿ ಕೂತವರು… ಅವರವರ ಭಾವಕ್ಕೆ ತಕ್ಕಂತೆ ಭಿತ್ತಿಗಳು ಮೂಡುತ್ತವೆ. ಧ್ಯಾನ ಅಥವಾ ಮೆಡಿಟೇಶನ್‌ ಮಾಡುವುದೆಂದರೆ ಕಣ್ಣು ಮುಚ್ಚಿಕೊಂಡು, ಒಳ ಮನದಲ್ಲಿ ಲೋಕದ ವ್ಯವಹಾರವನ್ನೆಲ್ಲ ಚಿಂತಿಸುವುದು ಹೆಚ್ಚಿನವರ ಕ್ರಮ! ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ ಒತ್ತಡ ನಿವಾರಣೆಗೆ ವ್ಯಾಪಕವಾಗಿ ವಿಶ್ವದೆಲ್ಲೆಡೆ ಚಿಕಿತ್ಸೆಯ ರೂಪದಲ್ಲಿ ಬಳಕೆಯಾಗುತ್ತಿರುವ ಕ್ರಮವಿದು. ಕಣ್ಣು ಮುಚ್ಚಿ ಒಳ ಹೋಗುವ ಈ ಕ್ರಿಯೆಗೆ ಹೊರಗಿನಿಂದ ವಿಮುಖರಾಗುವುದು ಅಗತ್ಯವೇ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ- ಇತ್ಯಾದಿ ಪ್ರಶ್ನೆಗಳಿಗೆ ಸಮಾಧಾನವನ್ನು ಶೋಧಿಸುವ ಪ್ರಯತ್ನವಿದು.

Why Yoga Day is celebrated internationally,
International Yoga Day

ಧ್ಯಾನವೆಂದರೆ ಏನು?

ಹಾಗೆಂದರೆ ಆಳವಾದ ವಿಶ್ರಾಂತಿ ಮತ್ತು ಜಾಗೃತ ಸ್ಥಿತಿ- ಈ ಎರಡನ್ನೂ ಒಂದೇ ಸಮಯಕ್ಕೆ ಏಕತ್ರಗೊಳಿಸಿದ ಸ್ಥಿತಿ! ಇದು ಋಷಿ-ಮುನಿಗಳಿಗೆ ಮಾತ್ರವೇ ಹೊಂದುವಂಥದ್ದು ಎಂಬ ತೀರ್ಮಾನಕ್ಕೆ ಈಗಲೇ ಬರಬೇಡಿ. ಸರಳವಾಗಿ ಹೇಳುವುದಾದರೆ, ಕುದಿಯುತ್ತಿರುವ ಮೈ-ಮನಗಳನ್ನು ಶಾಂತಗೊಳಿಸಿ, ನಮ್ಮೊಳಗಿನ ಉಲ್ಲಾಸವನ್ನು ಎಚ್ಚರಿಸುವ ಕ್ರಿಯೆಯಿದು. ಏನನ್ನೂ ಮಾಡದೆ, ಅಂದರೆ ಮೆದುಳಿಗೂ ಕೆಲಸ ನೀಡದೆ, ಎಲ್ಲವನ್ನೂ ಬಿಟ್ಟು ಆಳವಾದ ವಿಶ್ರಾಂತಿಗೆ ಜಾರುವುದು, ಆದರೆ ನಿದ್ದೆ ಮಾಡದೆ ಜಾಗೃತ ಅವಸ್ಥೆಯಲ್ಲೇ ಇರುವುದು ಈ ಕ್ರಮದ ಮುಖ್ಯವಾದ ಅಂಗ. ದೇಹಕ್ಕೆ ಆಹಾರ ನೀಡಿದಂತೆ ಮನಸ್ಸಿಗೂ ಗ್ರಾಸ ಬೇಡವೇ?

ಏಕೆ ಮಾಡಬೇಕು?

ಬದುಕಿನ ಇನ್ನೊಂದು ಹೆಸರೇ ಒತ್ತಡ ಎನ್ನುವಂತಿರುವಾಗ, ಈ ಚಕ್ರವ್ಯೂಹದಿಂದ ಹೊರಬರುವುದು ಹೇಗೆ? ಹೊರಗಿನ ಗದ್ದಲದಲ್ಲಿ ಆಂತರ್ಯದ ದನಿಯನ್ನು ಕೇಳುವುದು ಹೇಗೆ? ನೂರೆಂಟು ಗೋಜಲುಗಳ ನಡುವೆ ನಮಗೆ ಬೇಕಾದ್ದಕ್ಕೆ ಗಮನ ಕೊಡುವುದು ಸಾಧ್ಯವೇ? ಯಶಸ್ಸಿನ ಹಿಂದೆ ಓಡುವಾಗ ನಮ್ಮ ಕೈಗೆ ದೊರೆಯುತ್ತಿರುವುದೇನು ಎಂಬ ಗಮನವಾದರೂ ಇದೆಯೇ ನಮಗೆ? ಹಾಳಾಗುತ್ತಿರುವ ಆರೋಗ್ಯವನ್ನು ಮಾತ್ರೆಗಳು ಮಾತ್ರವೇ ಸರಿ ಮಾಡಿಯಾವೇ? ಇವಕ್ಕೆಲ್ಲ ಉತ್ತರ ಹುಡುಕಬೇಕೆಂದರೆ ಮೊದಲು ಮನಸ್ಸು ಶಾಂತವಾಗಬೇಕು. ಉದ್ರಿಕ್ತ ಮನದಿಂದ ಉತ್ತರ ಹುಡುಕಲು ಸಾಧ್ಯವಿಲ್ಲ. ಮೊದಲು ಮನಸ್ಸಿಗೆ ಸಮಾಧಾನ ದೊರೆತ ಮೇಲಷ್ಟೇ ಪ್ರಶ್ನೆಗಳಿಗೆ ಸಮಾಧಾನ ದೊರೆಯುವುದಕ್ಕೆ ಸಾಧ್ಯ. ಈಗ ನೀವೆ ಹೇಳಿ, ಧ್ಯಾನವನ್ನು ಏಕೆ ಮಾಡಬೇಕು?

ಇದನ್ನೂ ಓದಿ: Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

ಲಾಭಗಳೇನು?

  • ಎಲ್ಲಕ್ಕಿಂತ ಮೊದಲು ನಮಗೆ ಅರಿವಿಗೆ ಬರುವ ಪ್ರಯೋಜನವೆಂದರೆ ಶರೀರದ ಚೈತನ್ಯ ಹೆಚ್ಚುವುದು. ನಮ್ಮ ಆಲೋಚನೆ, ಕ್ರಿಯೆ ಮತ್ತು ಉಸಿರಾಟಕ್ಕೂ ನಮ್ಮಲ್ಲಿ ಪ್ರವಹಿಸುವ ಚೈತನ್ಯಕ್ಕೂ ಗಾಢವಾದ ನಂಟಿದೆ. ಈ ಚೈತನ್ಯವೇ ನಮ್ಮಲ್ಲಿ ಧನಾತ್ಮಕ ಆಲೋಚನೆಗಳನ್ನು ಉಂಟು ಮಾಡುವುದು.
  • ಎರಡನೆಯ ಪ್ರಯೋಜನವೆಂದರೆ ನಮ್ಮ ಆರೋಗ್ಯದಲ್ಲಿನ ಸುಧಾರಣೆ. ಅಂದರೆ ರಕ್ತದೊತ್ತಡ, ಮಧುಮೇಹ, ಹೃದಯದ ತೊಂದರೆಗಳು, ಜೀರ್ಣಾಂಗದ ಸಮಸ್ಯೆಗಳು, ಚರ್ಮದ ತೊಂದರೆಗಳು ಮುಂತಾದ ಹಲವಾರು ಸಮಸ್ಯೆಗಳಿಗೆ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವುದು ಪ್ರಬಲ ಔಷಧಿಯಾಗಿ ಕೆಲಸ ಮಾಡುತ್ತದೆ.
  • ಮೂರನೆಯದಾಗಿ, ದೇಹ ಮತ್ತು ಮನಸ್ಸುಗಳ ವಿಕಾರಗಳನ್ನು ಮಟ್ಟ ಹಾಕಲು ಇದು ಅಗತ್ಯ. ಬೇಡದ ಆಲೋಚನೆಗಳನ್ನು ತಡೆಯುತ್ತಿದ್ದಂತೆ ನಿದ್ದೆ ಸುಲಲಿತವಾಗಿ ಬರುತ್ತದೆ. ನಿದ್ರಾಹೀನತೆಯಿಂದ ದಾಂಗುಡಿ ಇಡುವ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ದೂರ ಇರಿಸಬಹುದು.
  • ಇವೆಲ್ಲ ಕಣ್ಣಮುಂದೆ ಕಾಣುವಂಥ ಪ್ರಯೋಜನಗಳು. ಅದಲ್ಲದೆ, ಮಾನಸಿಕ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಳ, ವಿವೇಕ ಜಾಗ್ರತೆಯಾಗುವುದು, ಯೋಚನೆಯಲ್ಲಿ ಸ್ಪಷ್ಟತೆ, ಗೊಂದಲ ದೂರವಾಗುವುದು, ಒತ್ತಡ ನಿವಾರಣೆ, ಸಂವಹನದಲ್ಲಿ ಸ್ಪಷ್ಟತೆ, ಹೊಸ ಆಲೋಚನೆಗಳು ಹುಟ್ಟುವುದು, ಕಲಿಯುವಲ್ಲಿನ ಚುರುಕುತನ, ಆತ್ಮವಿಶ್ವಾಸ ವೃದ್ಧಿ, ನಿರುಮ್ಮಳತೆ- ಇವೆಲ್ಲ ನಮ್ಮ ಮಾನಸಿಕ ಸ್ಥಿತಿ ಸುಧಾರಿಸಿದ್ದರಿಂದ ಆಗುವ ನೇರ ಪ್ರಯೋಜನಗಳು. ಧ್ಯಾನಸ್ಥರಾಗಿ ಕೂರುವುದಕ್ಕೆ ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕೆ?
Continue Reading

ಆರೋಗ್ಯ

Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

ಅಸ್ತಮಾವನ್ನು ಹೆಚ್ಚು ಮಾಡುವ ಅಲರ್ಜಿಕ್‌ ವಸ್ತುಗಳಿಂದ ದೂರ ಇರುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಇದರಿಂದಲೇ ಅಸ್ತಮಾ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಂಟು ಮಾಡಬಹುದು. ಯಾವೆಲ್ಲಾ ವಸ್ತುಗಳಿಂದ ಅಸ್ತಮಾ ರೋಗಿಗಳು ದೂರವಿರಬೇಕು? ಈ ಕುರಿತ ಉಪಯುಕ್ತ (Allergic Asthma) ಮಾಹಿತಿ ಇಲ್ಲಿದೆ.

VISTARANEWS.COM


on

Allergic Asthma
Koo

ಡಾ. ಸಚಿನ್ ಡಿ, ಸಲಹೆಗಾರ – ಇಂಟರ್ವೆನ್ಷನಲ್ ಪಲ್ಮನಾಲಜಿ ಕ್ರಿಟಿಕಲ್ ಕೇರ್ & ಸ್ಲೀಪ್ ಮೆಡಿಸಿನ್, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್

ಕೆಲವರನ್ನು ಬಿಟ್ಟೂ ಬಿಡದೆ ಕಾಡುವ ಕಾಯಿಲೆಗಳ ಪೈಕಿ ಈ ಅಸ್ತಮಾ ಕೂಡ ಒಂದು. ಅಸ್ತಮಾವನ್ನು ಹೆಚ್ಚು ಮಾಡುವ ಅಲರ್ಜಿಕ್‌ ವಸ್ತುಗಳಿಂದ ದೂರ ಇರುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಇದರಿಂದಲೇ ಅಸ್ತಮಾ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಂಟು ಮಾಡಬಹುದು. ಯಾವೆಲ್ಲಾ ವಸ್ತುಗಳಿಂದ ಅಸ್ತಮಾ ರೋಗಿಗಳು ದೂರವಿರಬೇಕು ಎಂಬುದರ ಬಗ್ಗೆ (Allergic Asthma) ಇಲ್ಲಿದೆ ಮಾಹಿತಿ.

Perfumes

ಸುಗಂಧ ದ್ರವ್ಯಗಳು

ಸಾಕಷ್ಟು ಜನರಿಗೆ ಪರ್ಫ್ಯೂಮ್‌ ಅಥವಾ ಸುಗಂಧ ದ್ರವ್ಯ ಹಾಕದೇ ಹೊರ ಹೋಗುವುದಿಲ್ಲ. ಆದರೆ, ಇದು ಅಸ್ತಮಾ ಇರುವವರಿಗೆ ಇನ್ನಷ್ಟು ಅಲರ್ಜಿ ಹೆಚ್ಚಿಸುವ ಸಾಧ್ಯತೆ ಇದೆ. ಪರ್ಫ್ಯೂಮ್‌, ಸುಗಂಧಭರಿತ ಲೋಷನ್‌ಗಳು ಮತ್ತು ಏರ್ ಫ್ರೆಶ್‌ನರ್‌ಗಳು ಕೆಲವು ವ್ಯಕ್ತಿಗಳಿಗೆ ಆಸ್ತಮಾ ರೋಗಲಕ್ಷಣಗಳನ್ನು ಪ್ರಚೋದಿಸಬಹುದು. ಈ ಕೃತಕ ಸುಗಂಧ ದ್ರವ್ಯಗಳು ಒಲಟೈಲ್‌ ಆರ್ಗಾನಿಕ್‌ ಕಾಂಪೋನೆಂಟ್ಸ್‌ (VOCs)ಗಳನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಶ್ವಾಸನಾಳವು ಕೆರಳಿ, ಕೆಮ್ಮು, ಉಬ್ಬಸ ಅಥವಾ ಉಸಿರಾಟದ ತೊಂದರೆ ಉಂಟು ಮಾಡಲಿದೆ.

ಗುಡುಗು ಸಹಿತ ಗಾಳಿಯಿಂದ ದೂರವಿರಿ

ಹೆಚ್ಚಿನ ಜನರು ಗುಡುಗು ಸಹಿತ ತಂಪಾದ ಗಾಳಿಯನ್ನು ಆನಂದಿಸಲು ಇಷ್ಟಪಡುತ್ತಾರೆ. ಆದರೆ ಇದು ಅಸ್ತಮಾ ರೋಗಿಗಳಿಗೆ ಸಮಸ್ಯೆ ಉಂಟು ಮಾಡಬಹುದು. ಚಂಡಮಾರುತದ ಸಮಯದಲ್ಲಿ ಹವಾಮಾನದಲ್ಲಿನ ಬದಲಾವಣೆಗಳು ವಾತಾವರಣದಲ್ಲಿನ ಸಣ್ಣ ಹಾಗೂ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ. ಜೊತೆಗೆ, ಗಾಳಿಯಲ್ಲಿನ ತೇವಾಂಶವು ಅಸ್ತಮಾ ಉಲ್ಬಣವನ್ನು ಪ್ರಚೋದಿಸಲಿದೆ. ಹೀಗಾಗಿ ಅಸ್ತಮಾ ರೋಗಿಗಳು ಈ ಗಾಳಿಗೆ ಒಡ್ಡಿಕೊಳ್ಳುವುದು ಒಳ್ಳೆಯದಲ್ಲ.

Outdoor Exercise

ವ್ಯಾಯಾಮದಲ್ಲೂ ಇರಲಿ ಮಿತಿ

ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಅತ್ಯಗತ್ಯ, ಆದರೆ ಆಸ್ತಮಾ ಹೊಂದಿರುವವರಿಗೆ ಕೆಲವು ವ್ಯಾಯಾಮಗಳು ಸಹ ಉಬ್ಬಸ ಬರುವಂತೆ ಮಾಡಬಹುದು ಎಚ್ಚರ. ಅಸ್ತಮಾ ರೋಗಿಗಳಿಗೆ ಅತಿಯಾಗಿ ಓಡುವುದು, ತೀವ್ರ ದೈಹಿಕ ಚಟುವಟಿಕೆಗಳು, ದೂಳು ಭರದ ಜಾಗದಲ್ಲಿ ದೈಹಿಕ ಚಟುವಟಿಕೆ ನಡೆಸುವುದು, ಉಸಿರುಗಟ್ಟಿಸುವ ವ್ಯಾಯಾಮಗಳು ನಿಶಿದ್ಧ. ಏಕೆಂದರೆ, ಈ ಎಲ್ಲಾ ದೈಹಿಕ ಚಟುವಟಿಕೆಗಳು ಉಸಿರಾಟದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ದೈಹಿಕ ಚಟುವಟಿಕೆ ಅವಶ್ಯಕತೆ ಇದ್ದಲ್ಲಿ ಮೊದಲು ಇನ್ಹೇಲರ್‌ ಬಳಸುವುದು ಉತ್ತಮ. ಇದಲ್ಲದೆ, ಸಾಮಾನ್ಯ ವ್ಯಾಯಾಮ, ದೈಹಿಕ ಚಟುವಟಿಕೆ ಮಾಡಬಹುದು.

ಭಾವನಾತ್ಮಕ ಒತ್ತಡಕ್ಕೆ ಒಳಗಾಗದಿರಿ

ಆಸ್ತಮಾ ಕೇವಲ ದೈಹಿಕ ಸ್ಥಿತಿಯಲ್ಲದೆ, ಭಾವನಾತ್ಮಕ ಒತ್ತಡಕ್ಕೂ ಸಂಬಂಧ ಹೊಂದಿದೆ. ಅತಿಯಾದ ಸಂಕಟ, ಮಾನಸಿಕವಾಗಿ ನೋವು ಅನುಭವಿಸುವುದು, ಕೆಲವು ವಿಚಾರಗಳ ಬಗ್ಗೆ ಆಳವಾಗಿ ಯೋಚಿಸುವುದರಿಂದಲೂ ಸಹ ಹೈಪರ್ವೆನ್ಟಿಲೇಷನ್‌ಗೆ ಕಾರಣವಾಗಬಹುದು, ಇದರಿಂದ ಅಸ್ತಮಾ ರೋಗವು ಇನ್ನಷ್ಟು ಹದಗೆಡಬಹುದು.

Preservative food

ಪ್ರಿಜರ್‌ವೇಟಿವ್‌ ಆಹಾರ ಬಳಕೆ ಉತ್ತಮವಲ್ಲ

ಇನ್ನು, ಆಹಾರವನ್ನು ದೀರ್ಘಕಾಲ ಸುರಕ್ಷಿತವಾಗಿ ಇಡುವ ಪ್ರಿಜರ್‌ವೇಟಿವ್‌ ಬಳಸಿರುವ ಆಹಾರ ಸೇವನೆಯೂ ಕೂಡ ಅಸ್ತಮಾ ರೋಗವನ್ನು ಕೆರಳಿಸಬಹುದು ಎನ್ನಲಾಗಿದೆ.
ಇನ್ನು, ಸಂಸ್ಕರಿತ ಆಹಾರಗಳು ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯಗಳಲ್ಲಿ ಸಾಮಾನ್ಯವಾಗಿ ಸಂರಕ್ಷಕಗಳಾಗಿ ಬಳಸಲಾಗುವ ಸಲ್ಫೈಟ್‌ಗಳು ಉಬ್ಬಸ ಮತ್ತು ಉಸಿರಾಟದ ತೊಂದರೆಯಂತಹ ಆಸ್ತಮಾ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಹೀಗಾಗಿ ಆಸ್ತಮಾ ಹೊಂದಿರುವ ವ್ಯಕ್ತಿಗಳು ಆಹಾರದ ಲೇಬಲ್‌ಗಳನ್ನು ಓದುವುದು ಮತ್ತು ಸಲ್ಫೈಟ್-ಒಳಗೊಂಡಿರುವ ಉತ್ಪನ್ನಗಳನ್ನು ತಪ್ಪಿಸುವುದು ಒಳ್ಳೆಯದು

ಇದನ್ನೂ ಓದಿ: Leg Cramps At Night: ರಾತ್ರಿ ಮಲಗಿದಾಗ ಕಾಡುವ ಕಾಲುನೋವಿಗೆ ಇದೆ ಪರಿಹಾರ!

ಕೆಲಸಗಳ ಆಯ್ಕೆಯಲ್ಲಿ ಇರಲಿ ಎಚ್ಚರ

ಇನ್ನು, ಕೆಲವರು ಅಸ್ತಮಾ ಹೊಂದಿರುವವರು ತಾವು ಮಾಡುವ ಕೆಲಸಗಳ ಬಗ್ಗೆಯೂ ಜಾಗೃತಿ ವಹಿಸುವುದು ಉತ್ತಮ. ಸಾಕುಪ್ರಾಣಿಗಳನ್ನು ಪೋಷಿಸುವ ಕೆಲಸ, ಕೃಷಿ, ಧೂಳು ಪ್ರದೂಷಣೆಗೆ ಒಡ್ಡುವ ಕೆಲಸಗಳು, ಹೊಗೆಯುಕ್ತ, ಹೆಚ್ಚು ಸುಂಗಂಧಭರಿತ ನಿರ್ಮಾಣದ ಕೆಲಸ ಸೇರಿದಂತೆ ನಿಮ್ಮ ಅಸ್ತಮಾವನ್ನು ಹೆಚ್ಚಿಸುವ ಕೆಲಸಗಳಿಂದ ದೂರವಿರಿ. ಕೆಲಸ ಜೀವನ ನಡೆಸಲು ಮುಖ್ಯವೆ ಆದರೂ, ಆರೋಗ್ಯ ದುಡಿಮೆಗಿಂತಲೂ ಮುಖ್ಯ ಎಂಬುದನ್ನು ಮರೆಯುವಂತಿಲ್ಲ.

Continue Reading

ಕರ್ನಾಟಕ

World Blood Donors Day: ವಿಶ್ವ ರಕ್ತದಾನಿಗಳ ದಿನ; ಜಾಗೃತಿ ಜಾಥಾಕ್ಕೆ ದಿನೇಶ್ ಗುಂಡೂರಾವ್‌ ಚಾಲನೆ

World Blood Donors Day: ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ‌ ಶುಕ್ರವಾರ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ರಕ್ತದಾನದ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

VISTARANEWS.COM


on

World Blood Donor Day Awareness Jatha in Bengaluru
Koo

ಬೆಂಗಳೂರು: ರಕ್ತದಾನ ಮಾಡುವ ಮೂಲಕ ಒಬ್ಬರ ಜೀವ ಉಳಿಸಬಹುದು. ರಕ್ತದಾನದಿಂದ (World Blood Donors Day) ಹಲವರ ಜೀವನದಲ್ಲಿ ಬದಲಾವಣೆ ತರಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ‌ ಶುಕ್ರವಾರ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ರಕ್ತದಾನದ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ, ಮಾತನಾಡಿದ ಸಚಿವರು, ದೇಶದಲ್ಲಿ ರಕ್ತಕ್ಕಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರಕ್ತದಾನಕ್ಕೆ ನಾವೆಲ್ಲರು ಮುಂದಾಗಬೇಕಿದೆ. ಹೆಚ್ಚು ರಕ್ತದಾನದ ಅಗತ್ಯತೆ ಇದೆ ಎಂದು ಹೇಳಿದರು.

ರಕ್ತದಾನದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವತ್ತ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಸ್ಟೇಟ್ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಅವರು ಹಮ್ಮಿಕೊಂಡಿದ್ದ ಈ ರೀತಿಯ ಜಾಥಾ ಕಾರ್ಯಕ್ರಮಗಳು ಉತ್ತಮವಾದವು ಎಂದು ತಿಳಿಸಿದರು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ.15ರಂದು ʼನಾರಿ ಸಮ್ಮಾನ್‌ʼ ಪ್ರಶಸ್ತಿ ಪ್ರದಾನ

ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 14ರಂದು ಜಗತ್ತಿನಾದ್ಯಂತ 2004ರಿಂದ ಆಚರಿಸಿಕೊಂಡು ಬರಲಾಗಿತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶ್ವರಕ್ತದಾನಿಗಳ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ಜಾಥಾ ಮೂಲಕ ಆಚರಿಸಿ, ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. ರಕ್ತವನ್ನು ಸಕಾಲದಲ್ಲಿ ಪೂರೈಕೆ ಮಾಡುವ ಮುಖಾಂತರ ಜೀವಗಳನ್ನು ಉಳಿಸಬಹುದು.‌ ಈ ನಿಟ್ಟಿನಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಗೌರವಿಸಿ ಇತರರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಹಾಗೂ ಕೆಎಸ್‌ಎಪಿಎಸ್‌ ಸಂಸ್ಥೆಯಿಂದ ಜಾಥಾ ಹಮ್ಮಿಕೊಳ್ಳಲಾಗಿತ್ತು.‌

“20 ವರ್ಷಗಳ ರಕ್ತದಾನದ ಸಂಭ್ರಮಾಚರಣೆ ಸಂದರ್ಭದಲ್ಲಿ ಧನ್ಯವಾದ ರಕ್ತದಾನಿಗಳೆ “Your Gift of Life is Priceless” ಎಂಬ ಘೋಷವಾಖ್ಯದೊಂದಿಗೆ ಈ ಬಾರಿಯ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತು.

ಇದನ್ನೂ ಓದಿ: Tata Motors: ಪಂಚ್. ಇವಿ, ನೆಕ್ಸಾನ್.ಇವಿಗೆ ಭಾರತ್-ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್

ಜಾಥಾದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸ್ವಯಂ ಸೇವಕರು ರಕ್ತದಾನ ಮಾಡುವ ಕುರಿತು ಪ್ರತಿಜ್ಞೆ ಸ್ವೀಕರಿದರು.

Continue Reading
Advertisement
Actor Darshan
ಕರ್ನಾಟಕ6 mins ago

Actor Darshan: ದರ್ಶನ್‌ ಗ್ಯಾಂಗ್‌ಗೆ ಮತ್ತೆ 5 ದಿನ ಪೊಲೀಸ್‌ ಕಸ್ಟಡಿ; ಜಡ್ಜ್‌ ಮುಂದೆ ಪವಿತ್ರಾ ಗೌಡ ಕಣ್ಣೀರು!

Kendra Sahitya Akademi Award
ಪ್ರಮುಖ ಸುದ್ದಿ14 mins ago

Kendra Sahitya Akademi Award: ಇಬ್ಬರು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಯಾರಿವರು?

New Fashion
ಫ್ಯಾಷನ್43 mins ago

New Fashion: ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ನಲ್ಲಿ ಟ್ರೆಂಡಿಯಾದ ಜಿಪ್ಪರ್‌ ಸ್ಟೈಲ್‌

Trent Boult
ಕ್ರೀಡೆ1 hour ago

Trent Boult: ಕೊನೆಯ ಟಿ20 ವಿಶ್ವಕಪ್​ ಆಡಲು ಸಿದ್ಧರಾದ ಟ್ರೆಂಟ್​ ಬೌಲ್ಟ್

Actor Darshan pavithra gowda relationship secrete
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್‌ ಬಲೆಗೆ ಪವಿತ್ರಾ ಗೌಡ ಬಿದ್ದಿದ್ದು ಹೇಗೆ? ಇವರು ಹೀರೋಯಿನ್‌ ಆಗಿದ್ದು ಯಾವಾಗ?

Job Alert
ಉದ್ಯೋಗ1 hour ago

Job Alert: ಗುಡ್‌ನ್ಯೂಸ್‌: ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ 627 ಹುದ್ದೆ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Suresh Gopi
ದೇಶ1 hour ago

Suresh Gopi: ಇಂದಿರಾ ಗಾಂಧಿ ಭಾರತದ ಮಾತೆ ಎಂದ ಬಿಜೆಪಿ ಸಂಸದ ಸುರೇಶ್‌ ಗೋಪಿ

anekla news
ಬೆಂಗಳೂರು ಗ್ರಾಮಾಂತರ1 hour ago

Anekal News : ಯುವತಿ ಕೈ ಬಲಿ ಪಡೆದ ಅಕ್ರಮ ಡ್ರೈ ಕ್ಲೀನಿಂಗ್ ಕಾರ್ಖಾನೆ; ಚಿಕಿತ್ಸೆ ಕೊಡಿಸದೆ ಮಾಲೀಕ ಎಸ್ಕೇಪ್‌

Viral Video
Latest1 hour ago

Viral Video: ಜೀವಂತ ಹಾವನ್ನೇ ತರಕಾರಿಯಂತೆ ಕಚ್ಚಿ ತಿಂದ ಬೆಡಗಿ! ಈ ವಿಡಿಯೊ ನೋಡುವ ಮುನ್ನ ಯೋಚಿಸಿ!

Anganwadi workers and supervisors will get the new mobile in uttara Kannada district
ಉತ್ತರ ಕನ್ನಡ2 hours ago

Uttara Kannada News: ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ಮೊಬೈಲ್ ಕೊಡುಗೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ4 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ24 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ1 day ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌