Vastu Tips: ವಾಸ್ತು ಪ್ರಕಾರ ಮಕ್ಕಳ ರೂಮ್‌ ವಿನ್ಯಾಸಗೊಳಿಸುವುದು ಹೇಗೆ? ಇಲ್ಲಿದೆ ಟಿಪ್ಸ್‌ - Vistara News

ಲೈಫ್‌ಸ್ಟೈಲ್

Vastu Tips: ವಾಸ್ತು ಪ್ರಕಾರ ಮಕ್ಕಳ ರೂಮ್‌ ವಿನ್ಯಾಸಗೊಳಿಸುವುದು ಹೇಗೆ? ಇಲ್ಲಿದೆ ಟಿಪ್ಸ್‌

Vastu Tips: ವಾಸ್ತು ಪ್ರಕಾರ ಮಕ್ಕಳ ರೂಮ್‌ ಅನ್ನು ವಿನ್ಯಾಸಗೊಳಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ.

VISTARANEWS.COM


on

kids room
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮನೆಯಲ್ಲಿ ಇತರ ಎಲ್ಲ ರೂಮ್‌ಗಳಿಗಿಂತ ಮಕ್ಕಳ ಕೋಣೆ (Kids Room) ವಿಶೇಷವಾಗಿರಬೇಕು. ಇದು ಅವರಿಗೆ ಪಾಸಿಟಿವ್‌ ಎನರ್ಜಿ ಒದಗಿಸುವಂತಿರಬೇಕು. ಜತೆಗೆ ಅಧ್ಯಯನ ನಡೆಸಲು ಅನುಕೂಲವಾಗುವಂತಿರಬೇಕು. ಹೀಗಾಗಿ ವಾಸ್ತು ಶಾಸ್ತ್ರ ಮಕ್ಕಳ ರೂಮ್‌ ವಿಚಾರದಲ್ಲಿ ಕೆಲವೊಂದು ವಿಶೇಷ ಸೂಚನೆ ನೀಡಿದೆ. ರೂಮ್‌ ಹೀಗೆಯೇ ಇರಬೇಕು ಎಂದು ಹೇಳಿದೆ. ಈ ಕುರಿತಾದ ವಿವರ ಇಲ್ಲಿದೆ (Vastu Tips).

ದಿಕ್ಕು

ವಾಸ್ತು ಶಾಸ್ತ್ರದಲ್ಲಿ ದಿಕ್ಕು ಕೂಡ ಪ್ರಧಾನ ಪಾತ್ರ ವಹಿಸುತ್ತದೆ. ಮಕ್ಕಳ ರೂಮ್‌ ಇದಕ್ಕೆ ಹೊರತಾಗಿಲ್ಲ. ಮಕ್ಕಳ ಕೋಣೆ ಪೂರ್ವ, ಈಶಾನ್ಯ ಅಥವಾ ಉತ್ತರಕ್ಕೆ ಮುಖ ಮಾಡುವಂತಿದ್ದರೆ ಉತ್ತಮ. ಅದರಲ್ಲೂ ಪೂರ್ವ ದಿಕ್ಕಿನತ್ತ ಆದ್ಯತೆ ನೀಡುವುದನ್ನು ಮರೆಯಬೇಡಿ. ಯಾಕೆಂದರೆ ಈ ಕಡೆಗೆ ರೂಮ್‌ ಇದ್ದರೆ ಉದಯಿಸುತ್ತಿರುವ ಸೂರ್ಯನಿಗೆ ಮುಖ ಮಾಡಿದಂತಾಗುತ್ತದೆ. ಸೂರ್ಯನನ್ನು ಸಕಾರಾತ್ಮಕ ಶಕ್ತಿಯ ಶಕ್ತಿಕೇಂದ್ರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಸೂರ್ಯನ ಮೊದಲ ಕಿರಣ ಮಕ್ಕಳು ಬೇಗನೆ ಎದ್ದೇಳುವಂತೆ ಪ್ರೋತ್ಸಾಹಿಸುವುದಲ್ಲದೆ ಕೋಣೆಯಲ್ಲಿ ಸಕಾರಾತ್ಮಕತೆಯನ್ನು ತುಂಬುತ್ತದೆ. ಮಕ್ಕಳ ಕೋಣೆಯು ತೆರೆದ ಸ್ಥಳದಲ್ಲಿರುವುದು ಉತ್ತಮ. ಸೂರ್ಯನ ಬೆಳಕು ನೇರ ಕೋಣೆಯ ಒಳಗೆ ಬರುವಂತಿರಬೇಕು.

ಬೆಳಕು

ಮೊದಲೇ ಹೇಳಿದಂತೆ ಮಕ್ಕಳ ಕೋಣೆಗೆ ಸಾಕಷ್ಟು ಪ್ರಮಾಣದಲ್ಲಿ ನೈಸರ್ಗಿಕ ಬೆಳಕು ಬರುವಂತಿರಬೇಕು. ಇದು ವಾಸ್ತು ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಸೂರ್ಯನ ಬೆಳಕು ಕೀಟಾಣುಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ ಮತ್ತು ವಿಷವನ್ನು ಹೊರಹಾಕುತ್ತದೆ. ಆದಾಗ್ಯೂ ನೈಸರ್ಗಿಕ ಬೆಳಕು ಹೇರಳವಾಗಿ ಲಭ್ಯವಿಲ್ಲದಿದ್ದರೆ ಕೃತಕ ಮೂಲಗಳನ್ನು ಬಳಸಿಕೊಂಡು ನಿಮ್ಮ ಮಗುವಿನ ಕೋಣೆ ಚೆನ್ನಾಗಿ ಬೆಳಗುತ್ತಿದೆ ಎಂದು ಖಚಿತಪಡಿಸಿಕೊಳ್ಳುವುದನ್ನು ಮರೆಯಬೇಡಿ. ಅಧ್ಯಯನ ಮಾಡುವಾಗ ಮಗುವಿನ ನೆರಳು ಪುಸ್ತಕದ ಮೇಲೆ ಬೀಳದ ರೀತಿಯಲ್ಲಿ ಬೆಳಕಿನ ವ್ಯವಸ್ಥೆ ಮಾಡಿ.

ಪೀಠೋಪಕರಣ

ಮಕ್ಕಳ ಕೋಣೆಯಲ್ಲಿನ ಪೀಠೋಪಕರಣಗಳ ವಿಚಾರದಲ್ಲಿಯೂ ಕೆಲವೊಂದು ಸೂಚನೆ ಪಾಲಿಸುವುದು ಮುಖ್ಯ. ಉದಾಹರಣೆಗೆ ಹಾಸಿಗೆಯನ್ನು ಬಾತ್‌ರೂಮ್‌ನ ಬಾಗಿಲಿನ ನೇರವಾಗಿ ಇಡಬಾರದು. ಸ್ಟಡಿ ಟೇಬಲ್‌ ಎತ್ತರದ ಕಪಾಟುಗಳನ್ನು ಹೊಂದಿರಬಾರದು. ಪ್ರತ್ಯೇಕ ಪುಸ್ತಕದ ಶೆಲ್ಫ್ ಹೊಂದಿರುವುದು ಅಥವಾ ಮುಚ್ಚಿದ ಪುಸ್ತಕದ ಶೆಲ್ಫ್ ಹೊಂದಿರುವುದು ಉತ್ತಮ. ಇದರಿಂದ ಮಕ್ಕಳ ಮೇಲೆ ಒತ್ತಡ ಬೀರುವುದಿಲ್ಲ. ಅಲ್ಲದೆ ಹೈ-ಬ್ಯಾಕ್ ಚೇರ್‌ ಇದ್ದರೆ ಉತ್ತಮ. ಸಕಾರಾತ್ಮಕ ಶಕ್ತಿಯನ್ನು ಉತ್ಪಾದಿಸಲು ಮೇಜಿನ ಎತ್ತರವು ಮಗುವಿನ ಎತ್ತರಕ್ಕೆ ಅನುಗುಣವಾಗಬೇಕು.

ಗೋಡೆಗಳ ಬಣ್ಣ

ಬಣ್ಣಗಳು ನಮ್ಮ ಮನಸ್ಥಿತಿಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಅವು ಖಂಡಿತವಾಗಿಯೂ ತಮ್ಮದೇ ಆದ ಶಕ್ತಿಯನ್ನು ಹೊಂದಿವೆ. ನಿಮ್ಮ ಮಗುವಿನ ಕೋಣೆಗೆ ಹಸಿರು ಬಣ್ಣ ಉತ್ತಮ. ಯಾಕೆಂದರೆ ಅದು ಪ್ರಕೃತಿಯ ಅನುಗ್ರಹದ ಬಣ್ಣ. ಇದು ಬೆಳವಣಿಗೆ ಮತ್ತು ಸಮೃದ್ಧಿಯ ಸಂಕೇತವೂ ಹೌದು. ಇದಲ್ಲದೆ ಹಸಿರು ನೋಡುವುದು ಕಣ್ಣುಗಳ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ. ಹೈಪರ್ ಆಕ್ಟಿವ್ ಮಕ್ಕಳಿಗೆ ನೀಲಿ ಬಣ್ಣವನ್ನು ಶಿಫಾರಸು ಮಾಡಲಾಗಿದೆ. ಈ ಬಣ್ಣದ ಅಂತರ್ಗತ ಶಾಂತಿಯು ಮಕ್ಕಳನ್ನು ಶಾಂತಗೊಳಿಸಲು ಮತ್ತು ಕೆಟ್ಟ ಪ್ರಚೋದನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಂಪು, ಕಿತ್ತಳೆ, ನೇರಳೆ ಮುಂತಾದ ಬಣ್ಣ ಮಕ್ಕಳ ಕೋಣೆಗೆ ಸೂಕ್ತವಲ್ಲ.

ಆಕಾರ

ಬಣ್ಣ, ಬೆಳಕು, ಪೀಠೋಪಕರಣಗಳ ಜತೆಗೆ ಮಕ್ಕಳ ಕೋಣೆಯ ಆಕಾರದತ್ತಲೂ ಗಮನ ಹರಿಸುವುದು ಅಗತ್ಯ. ಈ ರೂಮ್‌ ಪ್ರಕೃತಿಯ ನಾಲ್ಕು ದಿಕ್ಕುಗಳು ಮತ್ತು ಅಂಶಗಳನ್ನು ಪ್ರತಿನಿಧಿಸಲು ಚೌಕಾಕಾರ ಅಥವಾ ಆಯತದ ಆಕಾರದಲ್ಲಿರಬೇಕು. ಕೋಣೆಯಲ್ಲಿ ಶಕ್ತಿಯ ಹರಿವನ್ನು ಮತ್ತಷ್ಟು ಸುಗಮಗೊಳಿಸಲು ಪೀಠೋಪಕರಣಗಳ ನಡುವೆ ಅಂತರ ಕಾಪಾಡಿಕೊಳ್ಳಬೇಕು. ಕೋಣೆಯಲ್ಲಿ ಸಕಾರಾತ್ಮಕ ಶಕ್ತಿಯ ಚಲನೆಗೆ ಅಡ್ಡಿಯಾಗುವ ಯಾವುದೇ ಚೂಪಾದ ಅಂಚಿನ ಪೀಠೋಪಕರಣ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಖಾಲಿ ಸ್ಥಳಗಳು ಮತ್ತು ಮರದ ಪೀಠೋಪಕರಣಗಳು ಹೊಂದುವುದು ಕೂಡ ಮುಖ್ಯ.

ಸರಸ್ವತಿ ವಿಗ್ರಹವಿರಲಿ

ವಾಸ್ತು ನಿಯಮಗಳ ಪ್ರಕಾರ ಕೆಲವು ವಸ್ತುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜ್ಞಾನ ಮತ್ತು ಕಲೆಗಳ ದೇವತೆಯಾದ ಸರಸ್ವತಿಯ ವಿಗ್ರಹವು ಅಂತಹ ಅಂಶಗಳ ಪೈಕಿ ಪ್ರಮುಖವಾದುದು. ಏಕಾಗ್ರತೆಯನ್ನು ಸುಧಾರಿಸಲು ವಿಗ್ರಹವನ್ನು ಓದಿನ ಮೇಜಿನ ಮೇಲೆ ಇರಿಸಬೇಕು ಮತ್ತು ಸರಸ್ವತಿ ವಿಗ್ರಹದ ಪಾದಗಳಲ್ಲಿ ದೀಪವನ್ನು ಬೆಳಗಿಸಬೇಕು. ಪ್ರಶಸ್ತಿಗಳು, ಪ್ರಮಾಣಪತ್ರಗಳು, ಟ್ರೋಫಿಗಳು ಮುಂತಾದ ಮಕ್ಕಳ ಸಾಧನೆಗಳನ್ನು ಅವರ ಕೋಣೆಯಲ್ಲಿ ಜೋಡಿಸಿಡಿ. ಇದು ಮಕ್ಕಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಗಿಡಗಳು ಬೆಳವಣಿಗೆ ಮತ್ತು ಪುನರುಜ್ಜೀವನವನ್ನು ಪ್ರತಿನಿಧಿಸುವುದರಿಂದ ಒಳಾಂಗಣ ಸಸ್ಯಗಳನ್ನು ಅಧ್ಯಯನ ಮೇಜಿನ ಮೇಲೆ ಇರಿಸುವುದು ಕೂಡ ಸೂಕ್ತ.

ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ನಿಮ್ಮ ಅಡುಗೆ ಕೋಣೆ ಹೀಗಿರಲಿ…

ಇವನ್ನು ಮಾಡಲೇಬೇಡಿ

ಹಳೆಯ ಪುಸ್ತಕಗಳು, ಖಾಲಿ ಪ್ಯಾಕೆಟ್, ಪೆನ್ಸಿಲ್‌ನ ಅವಶೇಷ ಮತ್ತು ಖಾಲಿ ಪೆನ್ನುಗಳಂತಹ ಕಸವನ್ನು ಆಗಾಗ ಎಸೆಯುತ್ತಿರಬೇಕು. ಮಕ್ಕಳ ಆಟಿಕೆಗಳನ್ನು ಸರಿಯಾದ ಸ್ಥಳಗಳಲ್ಲಿ ಇಡಬೇಕು. ಮುರಿದ ಹಳೆಯ ಆಟಿಕೆಗಳನ್ನು ರಾಶಿ ಹಾಕುವ ಬದಲು ಅವುಗಳನ್ನು ಎಸೆಯುವುದು ಸೂಕ್ತ. ಮಕ್ಕಳ ರೂಮ್‌ನಲ್ಲಿ ಗ್ಯಾಜೆಟ್ ಇಡದಿರುವುದು ಉತ್ತಮ. ಕಂಪ್ಯೂಟರ್ ಅನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಟಿವಿಯನ್ನು ಯಾವ ಕಾರಣಕ್ಕೂ ಮಕ್ಕಳ ಕೋಣೆಯಲ್ಲಿ ಇಡಬೇಡಿ. ಅಲ್ಲದೆ ಮಕ್ಕಳು ತಮ್ಮ ಹಾಸಿಗೆಯ ಮೇಲೆ ಕುಳಿತು ತಿಂಡಿ ಸೇವಿಸದಂತೆ, ಊಟ ಮಾಡದಂತೆ ನೋಡಿಕೊಳ್ಳಿ. ಹಾಸಿಗೆ ಮೇಲೆ ಕುಳಿತು ಆಹಾರ ಸೇವಿಸುವುದು ದುಃಸ್ವಪ್ನಗಳಿಗೆ ಕಾರಣವಾಗಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

ICMR Guidelines: ಕಬ್ಬಿನ ಹಾಲು ಕುಡಿದರೆ ಆರೋಗ್ಯಕ್ಕೆ ಹಾನಿಯೆ? ICMR ಅಭಿಪ್ರಾಯ ಹೀಗಿದೆ

ಭಾರತದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚಿನವರು ಆರೋಗ್ಯಕರವೆಂದು ಕಬ್ಬಿನ ರಸವನ್ನು ಸೇವಿಸುತ್ತಾರೆ. ಆದರೆ ಇದರಲ್ಲಿ ಹೆಚ್ಚಿನ ಸಕ್ಕರೆಯಂಶ ಇರುತ್ತದೆ. ಐಸಿಎಂಆರ್ ಮಾರ್ಗಸೂಚಿ (ICMR Guidelines) ಪ್ರಕಾರ ಬೇಸಗೆಯಲ್ಲಿ ಕಬ್ಬಿಣ ರಸದ ಸೇವನೆಯನ್ನುಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು.

VISTARANEWS.COM


on

By

ICMR Guidelines
Koo

ಕೆಲವೆಡೆ ಮಳೆ (rain) ಸುರಿದರೂ ಇನ್ನು ಕೆಲವೆಡೆ ಬಿಸಿಲಿನ (summer) ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ಬೇಸಿಗೆಯ ಶಾಖದಿಂದ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಅನೇಕರು ಕಬ್ಬಿನ ರಸ (sugercane juice), ಹಣ್ಣಿನ ರಸ (fruit juice) ಮತ್ತು ಕೋಲ್ಡ್ ಕಾಫಿಗಳಂತಹ (cold coffee) ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR Guidelines) ಜನಪ್ರಿಯ ಬಾಯಾರಿಕೆ ತಣಿಸುವ ಈ ಪಾನೀಯಗಳ ಅತಿಯಾದ ಸೇವನೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಭಾರತದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚಿನವರು ಆರೋಗ್ಯಕರವೆಂದು ಕಬ್ಬಿನ ರಸವನ್ನು ಸೇವಿಸುತ್ತಾರೆ. ಆದರೆ ಇದರಲ್ಲಿ ಹೆಚ್ಚಿನ ಸಕ್ಕರೆಯಂಶ ಇರುತ್ತದೆ. ಆದ್ದರಿಂದ ಇದರ ಸೇವನೆಯನ್ನು ಕಡಿಮೆ ಮಾಡಬೇಕು ಎನ್ನುತ್ತದೆ ಐಸಿಎಂಆರ್. ತಂಪು ಪಾನೀಯಗಳು ನೀರು ಅಥವಾ ತಾಜಾ ಹಣ್ಣುಗಳಿಗೆ ಪರ್ಯಾಯವಲ್ಲ. ಹೀಗಾಗಿ ಆದಷ್ಟು ತಂಪು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಬೇಕು. ಬದಲಿಗೆ ಮಜ್ಜಿಗೆ, ಸಕ್ಕರೆ ಸೇರಿಸದೆ ನಿಂಬೆ ನೀರು, ಸಂಪೂರ್ಣ ಹಣ್ಣಿನ ರಸ ಮತ್ತು ತೆಂಗಿನ ನೀರು ಸೇವನೆ ಒಳ್ಳೆಯದು ಎಂದು ಹೇಳಿದೆ.

ಕಬ್ಬಿನ ರಸ ಅಪಾಯಕಾರಿ ಏಕೆ?

ಆಹಾರ ತಜ್ಞರ ಪ್ರಕಾರ ಕಬ್ಬಿನ ರಸದಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಸಮೃದ್ಧವಾಗಿದೆ. ಇದು ವಿಶೇಷವಾಗಿ ಬಿಸಿ ವಾತಾವರಣದಲ್ಲಿ ಹಲವಾರು ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ ಎನ್ನುತ್ತಾರೆ.
ನಿರ್ಜಲೀಕರಣ

ಹೆಚ್ಚಿನ ಸಕ್ಕರೆ ಸೇವನೆಯು ದೇಹದಲ್ಲಿ ಹೆಚ್ಚಿನ ನೀರಿನ ನಷ್ಟಕ್ಕೆ ಕಾರಣವಾಗಬಹುದು. ಸಕ್ಕರೆಯು ಚಯಾಪಚಯಗೊಳಿಸಲು ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ದೇಹವು ಈಗಾಗಲೇ ಬೆವರಿನ ಮೂಲಕ ಗಮನಾರ್ಹವಾದ ನೀರನ್ನು ಕಳೆದುಕೊಂಡಾಗ ಬೇಸಿಗೆಯಲ್ಲಿ ಇದು ವಿಶೇಷವಾಗಿ ಸಮಸ್ಯಾತ್ಮಕವಾಗಿದೆ.

ಮಧುಮೇಹ

ಕಬ್ಬಿನ ರಸದಿಂದ ದೇಹ ಸಕ್ಕರೆಯನ್ನು ತ್ವರಿತವಾಗಿ ಹೀರಿಕೊಳ್ಳುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಏರುಪೇರಾಗುವುದು. ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಇದು ಹೆಚ್ಚಿಸುತ್ತದೆ.

ತೂಕ ಹೆಚ್ಚಳ

ಸಕ್ಕರೆ ಪಾನೀಯಗಳಿಂದ ಹೆಚ್ಚಿನ ಕ್ಯಾಲೋರಿಗಳು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ.

ಹಣ್ಣು ಮತ್ತು ಹಣ್ಣಿನ ರಸ ಯಾವುದು ಒಳ್ಳೆಯದು?

ಹಣ್ಣುಗಳು ಪೌಷ್ಟಿಕಾಂಶದ ಫೈಬರ್ ಅನ್ನು ಹೊಂದಿರುತ್ತವೆ. ಇದು ಜ್ಯೂಸ್ ಮಾಡುವಾಗ ಹೊರಹಾಕಲ್ಪಡುತ್ತದೆ. ಫೈಬರ್ ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ಕೊಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಸಂಪೂರ್ಣ ಹಣ್ಣುಗಳನ್ನು ಅಗಿಯುವುದರಿಂದ ಲಾಲಾರಸದ ಉತ್ಪಾದನೆ ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಆದರೆ ಸಕ್ಕರೆ ಹೀರಿಕೊಳ್ಳುವಿಕೆಯ ವೇಗವನ್ನು ನಿಯಂತ್ರಿಸುತ್ತದೆ.

ನೀರು ಮತ್ತು ತಂಪು ಪಾನೀಯ

ಹಲವು ಬಾರಿ ನೀರಿಗೆ ಬದಲಾಗಿ ತಂಪು ಪಾನೀಯಗಳನ್ನು ಸೇವಿಸುತ್ತೇವೆ. ಇದು ಆರೋಗ್ಯಕರವಲ್ಲ ಎನ್ನುತ್ತಾರೆ ಆಹಾರ ತಜ್ಞರು. ತಂಪು ಪಾನೀಯಗಳು ಹೆಚ್ಚಿನ ಪ್ರಮಾಣದ ಸಕ್ಕರೆಗಳನ್ನು ಹೊಂದಿರುತ್ತವೆ. ಇದು ಹೆಚ್ಚಿನ ಕ್ಯಾಲೋರಿ ಸೇವನೆ ಮತ್ತು ಸಂಭಾವ್ಯ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅನೇಕ ತಂಪು ಪಾನೀಯಗಳು ಕೃತಕ ಸುವಾಸನೆ, ಬಣ್ಣ ಮತ್ತು ಸಂರಕ್ಷಕಗಳನ್ನು ಒಳಗೊಂಡಿರುತ್ತವೆ. ಇದು ಕಾಲಾನಂತರದಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ. ತಂಪು ಪಾನೀಯಗಳಲ್ಲಿನ ಕೆಫೀನ್ ಮತ್ತು ಆಮ್ಲೀಯ ಅಂಶವು ಮೂತ್ರವರ್ಧಕ ಪರಿಣಾಮವನ್ನು ಹೊಂದಿರುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಭಾರತದಂತಹ ಬಿಸಿ ವಾತಾವರಣದಲ್ಲಿ ಇದು ವಿಶೇಷವಾಗಿ ಅಪಾಯಕಾರಿ.

ಬೇಸಿಗೆಯಲ್ಲಿ ಚಹಾ, ಕಾಫಿ

ಪ್ರತಿದಿನ ಎಷ್ಟು ಕಾಫಿ ಮತ್ತು ಚಹಾವನ್ನು ಸೇವಿಸುತ್ತೀರಿ ಎಂಬುದರ ಬಗ್ಗೆ ಗಮನವಿರಲಿ. ಬರಿ ಹೊಟ್ಟೆಗೆ ಚಹಾ, ಕಾಫಿ ಸೇವನೆಯನ್ನು ತಪ್ಪಿಸಿ. ಕುಡಿಯಲೇ ಬೇಕು ಅನಿಸಿದರೆ ಉಪಹಾರ ಮತ್ತು ಮಧ್ಯಾಹ್ನ ಊಟದ ಮಧ್ಯದ ಸಮಯಕ್ಕೆ ಮುಂದೂಡಿ. ಇಲ್ಲವಾದರೆ ದಾಲ್ಚಿನ್ನಿ, ಅರಿಶಿನದಂತಹ ಗಿಡಮೂಲಿಕೆಗಳನ್ನು ಮತ್ತು ಕ್ಯಾಮೊಮೈಲ್, ಮಲ್ಲಿಗೆ, ದಾಸವಾಳದ ಚಹಾದಂತಹ ಹೂವುಗಳನ್ನು ಕುಡಿಯಬಹುದು.

ದೇಹದ ಸಮಸ್ಯೆ ಆಲಿಸಿ

ಬೇಸಿಗೆಯಲ್ಲಿ ನಡುಗುವಿಕೆ, ಆತಂಕ ಅಥವಾ ನಿದ್ರೆಯ ಸಮಸ್ಯೆಗಳನ್ನು ಅನುಭವಿಸಿದರೆ ಆದಷ್ಟು ವಿಶ್ರಾಂತಿ ಪಡೆಯಿರಿ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ.

ನಿರ್ಜಲೀಕರಣವಾಗದಂತೆ ತಡೆಯುವುದು ಹೇಗೆ?

ಬೇಸಿಗೆಯಲ್ಲಿ ಆರೋಗ್ಯವಾಗಿರಲು ದೇಹವನ್ನು ಹೈಡ್ರೀಕರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಪ್ರತಿದಿನ ಕನಿಷ್ಠ 8- 10 ಗ್ಲಾಸ್ ನೀರನ್ನು ಕುಡಿಯಿರಿ. ದೇಹದಲ್ಲಿ ಬೆವರಿನ ಮೂಲಕ ಕಳೆದುಹೋಗುವ ಲವಣ ಮತ್ತು ಖನಿಜಗಳನ್ನು ಪುನಃ ತುಂಬಿಸಲು ಮನೆಯಲ್ಲಿ ಅಥವಾ ವಾಣಿಜ್ಯಿಕವಾಗಿ ಲಭ್ಯವಿರುವ ಎಲೆಕ್ಟ್ರೋಲೈಟ್ ಪರಿಹಾರಗಳನ್ನು ಬಳಸಿ.

ಇದನ್ನೂ ಓದಿ: Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸಲು ಆಹಾರದಲ್ಲಿ ಕಲ್ಲಂಗಡಿ, ಸೌತೆಕಾಯಿ ಮತ್ತು ಕಿತ್ತಳೆಯಂತಹ ನೀರು-ಭರಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಆಲ್ಕೋಹಾಲ್ ಮತ್ತು ಸಕ್ಕರೆ ಪಾನೀಯಗಳು ನಿರ್ಜಲೀಕರಣದ ಅಪಾಯವನ್ನು ಹೆಚ್ಚಿಸಬಹುದು. ಇದನ್ನು ಮಿತವಾಗಿ ಸೇವಿಸಿ ಅಥವಾ ಸಂಪೂರ್ಣವಾಗಿ ತಪ್ಪಿಸಬೇಕು.

Continue Reading

ಆರೋಗ್ಯ

Sweating And Body Odor: ಅತಿಯಾಗಿ ಬೆವರುತ್ತಿದ್ದೀರಾ? ಈ ಆಹಾರಗಳು ನಿಮ್ಮ ಬೆವರ ದುರ್ಗಂಧಕ್ಕೆ ಮುಖ್ಯ ಕಾರಣ!

ಬೇಸಿಗೆಯಲ್ಲಿ (Sweating and body odor) ಕೆಲವರಿಗೆ ಬೆನ್ನಿನ ಹಿಂಭಾಗ, ಕುತ್ತಿಗೆ, ಪಾದಗಳು, ಕೈಗಳು ಹೀಗೆ ದೇಹದ ಎಲ್ಲೆಡೆ ಬಹುಬೇಗನೆ ಬೆವರುತ್ತದೆ. ಹೊರಗೆ ಹಿತವಾಗಿ ಬೀಸುವ ತಂಗಾಳಿಗೂ ನಿಮ್ಮ ಬೆವರಿಗೂ ಯಾವುದೇ ಸಂಬಂಧವಿಲ್ಲ ಅನಿಸಬಹುದು. ಅಥವಾ, ಹಿತವಾದ ತಂಗಾಳಿಯಲ್ಲಿ ನಿಮ್ಮ ಬೆವರ ಗಂಧ ಹತ್ತಿರ ಕೂತವರಿಗೆ ಕಿರಿಕಿರಿಯುಂಟು ಮಾಡಬಹುದು. ಯಾಕಿಷ್ಟು ಬೆವರು ಎಂಬ ಸಂಗತಿ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಬಹುದು. ಕೆಟ್ಟ ವಾಸನೆಯ ಬೆವರು ಹಲವು ಸಂದರ್ಭಗಳಲ್ಲಿ ಮುಜುಗರವನ್ನೂ ತರಬಹುದು. ಆದರೆ, ನೀವು ಮನಸ್ಸು ಮಾಡಿದರೆ ಹೀಗೆ ಬೆವರುವುದನ್ನು ಕಡಿಮೆ ಮಾಡಬಹುದು.

VISTARANEWS.COM


on

Sweating And Body Odor
Koo

ಬೇಸಿಗೆಯೇ ಇರಲಿ (Sweating and body odor), ಮಳೆಯೇ ಇರಲಿ, ಎಲ್ಲೋ ಹೋಗಲು ನೀವು ಹೊರಟು ಮನೆ ದಾಟಿ ಹೊರಗೆ ಬಂದ ತಕ್ಷಣ ನೀವು ಬೆವರಲು ಆರಂಭಿಸುತ್ತೀರಿ. ಬಹುಬೇಗನೆ ನೀವು ಹಾಕಿಕೊಂಡ ಅಂಗಿಯ ಕಂಕುಳು ಒದ್ದೆಯಾಗುತ್ತದೆ. ಇನ್ನೂ ಕೆಲವರಿಗೆ ಬೆನ್ನಿನ ಹಿಂಭಾಗ, ಕುತ್ತಿಗೆ, ಪಾದಗಳು, ಕೈಗಳು ಹೀಗೆ ದೇಹದ ಎಲ್ಲೆಡೆ ಬಹುಬೇಗನೆ ಬೆವರುತ್ತದೆ. ಹೊರಗೆ ಹಿತವಾಗಿ ಬೀಸುವ ತಂಗಾಳಿಗೂ ನಿಮ್ಮ ಬೆವರಿಗೂ ಯಾವುದೇ ಸಂಬಂಧವಿಲ್ಲ ಅನಿಸಬಹುದು. ಅಥವಾ, ಹಿತವಾದ ತಂಗಾಳಿಯಲ್ಲಿ ನಿಮ್ಮ ಬೆವರ ಗಂಧ ಹತ್ತಿರ ಕೂತವರಿಗೆ ಕಿರಿಕಿರಿಯುಂಟು ಮಾಡಬಹುದು. ಯಾಕಿಷ್ಟು ಬೆವರು ಎಂಬ ಸಂಗತಿ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಬಹುದು. ಕೆಟ್ಟ ವಾಸನೆಯ ಬೆವರು ಹಲವು ಸಂದರ್ಭಗಳಲ್ಲಿ ಮುಜುಗರವನ್ನೂ ತರಬಹುದು. ಆದರೆ, ನೀವು ಮನಸ್ಸು ಮಾಡಿದರೆ ಹೀಗೆ ಬೆವರುವುದನ್ನು ಕಡಿಮೆ ಮಾಡಬಹುದು. ಯಾಕೆಂದರೆ ನಿಮ್ಮ ಬೆವರು ನಿಮ್ಮ ಕೈಯಲ್ಲೇ ಇದೆ. ಹೇಗೆ ಅಂತೀರಾ? ನೀವು ಅತಿಯಾಗಿ ಬೆವರುವುದಕ್ಕೂ ನೀವು ತಿನ್ನುವ ಆಹಾರಕ್ಕೂ ಗಳಸ್ಯ ಕಂಠಸ್ಯ ಸಂಬಂಧವಿದೆ. ಬನ್ನಿ ಯಾವೆಲ್ಲ ಆಹಾರಗಳನ್ನು ಕಡಿಮೆ ಮಾಡುವ ಮೂಲಕ ಬೆವರನ್ನೂ ಕಡಿಮೆ ಮಾಡಬಹುದು ಎಂಬುದನ್ನು ನೋಡೋಣ.

Dependence and Withdrawal Coffee Side Effects

ಕಾಫಿ

ಬಹಳಷ್ಟು ಮಂದಿಗೆ ಬೆಳಬೆಳಗ್ಗೇ ಕಾಫಿ ಬೇಕು. ದಿನ ಆರಂಭವಾಗುವುದೇ ಕಾಫಿಯ ಜೊತೆಗೆ. ಆಗಾಗ ಅರ್ಧ ಕಪ್‌ ಕಾಫಿ ಹೊಟ್ಟೆ ಸೇರಬೇಕು. ಕಾಫಿ ಅಂತಲ್ಲ, ಕೆಫೀನ್‌ನ ಪೇಯಗಳನ್ನು ಜಾಸ್ತಿ ಕುಡಿಯುವ ಮಂದಿಗೆ ಜಾಸ್ತಿ ಬೆವರುತ್ತದೆ. ಹಾಗಾಗಿ ನೀವು ಕೆಫಿನ್‌ಯುಕ್ತ ಪೇಯಗಳನ್ನು ಹೆಚ್ಚು ಕುಡಿಯುವ ಅಭ್ಯಾಸವಿದ್ದರೆ, ನೀವು ಜಾಸ್ತಿ ಬೆವರುತ್ತೀರಾದರೆ, ನಿಮ್ಮ ಹತ್ತಿರದವರು ನಿಮಗೊಂದು ಹಗ್‌ ಕೊಡಲು ಹಿಂದೆ ಮುಂದೆ ನೋಡುತ್ತಾರೆಂದರೆ ಖಂಡಿತವಾಗಿ ನೀವು ನಿಮ್‌ ಕಾಫಿಪ್ರಿಯತೆಗೆ ಕಡಿವಾಣ ಹಾಕಲೇಬೇಕು.

spicy food

ಮಸಾಲೆಯುಕ್ತ ಆಹಾರ

ನೀವು ಬೇಕಾದರೆ ಗಮನಿಸಿ. ಬಿಸಿಬಿಸಿ ಮಸಾಲೆಯುಕ್ತ ಕರಿಯೊಂದಕ್ಕೆ ಚಪಾತಿಯೊಂದರ ಜೊತೆ ಅದ್ದಿ ಬಾಯಿಗಿಡುವಷ್ಟರಲ್ಲಿ ನಿಮ್ಮ ಹಣೆಯ ಮೇಲೆ ಬೆವರ ಸಾಲುಗಳು ಮುತ್ತಿನಂತೆ ಶೇಖರವಾಗುವುದನ್ನು ನೀವು ಗಮನಿಸಿರಬಹುದು. ಅದರಲ್ಲೊಂದಿಷ್ಟು ಹಸಿ ಮೆಣಸಿದ್ದರೆ ಕತೆ ಮುಗಿದಂತೆಯೇ. ನಿಮ್ಮ ಬೆವರಹನಿ ಸಾಲುಗಳು ಕರಗಿ ನೀರಾಗಿ ಹಣೆಯಿಂದ ಇಳಿದೀತು. ಹಾಗಾಗಿ, ಅತಿಯಾಗಿ ಬೆವರುವುದರಿಂದ ದೂರವಿರಬೇಕಾದರೆ, ಮಸಾಲೆಯುಕ್ತ ಪದಾರ್ಥಗಳಿಂದಲೂ ದೂರವಿರಿ.

Selection of Colorful Sweets

ಸಿಹಿತಿಂಡಿಗಳು

ಯಾವುದಾದರೂ ಸಮಾರಂಭಕ್ಕೆ ಹೋಗಿ ಅಲ್ಲಿ ಭರ್ಜರಿ ಭೋಜನ ಮಾಡಿದ ಕೂಡಲೇ ಬೆವರಿಳಿಯಲು ಶುರುವಾಗುತ್ತದೆ. ಅಲ್ಲಿ ನೀವು ಭರ್ಜರಿಯಾಗಿ ಹೊಟ್ಟೆಗಿಳಿಸಿದ ಸಿಹಿತಿಂಡಿಗಳು, ಪರಮಾನ್ನ ಭಕ್ಷ್ಯಗಳು ಇತ್ಯಾದಿಗಳ ಪರಿಣಾಮ ಅದು. ಸಿಹಿತಿಂಡಿ ಅತಿಯಾಗಿ ತಿನ್ನುತ್ತಿದ್ದರೆ ನೀವು ಬೆವರುವುದೂ ಹೆಚ್ಚು.

Avoid cigarettes alcohol for Bone Health

ಆಲ್ಕೋಹಾಲ್

ಅತಿಯಾದ ಆಲ್ಕೋಹಾಲ್‌ ಸೇವನೆ ನಿಮ್ಮ ದೇಹದ ಉಷ್ಣತೆಯನ್ನು ಏರಿಸುವ ಮೂಲಕ ಬೆವರಿಳಿಸುತ್ತದೆ. ಎಲ್ಲೋ ಅಪರೂಪಕ್ಕೊಮ್ಮೆ ಗೆಳೆಯರ ಜೊತೆ, ಅಥವಾ ಒಂದು ಖುಷಿಯ ಸನ್ನಿವೇಶಕ್ಕೆ ಇವೆಲ್ಲ ಇದ್ದರೂ, ನಿತ್ಯವೂ ಅಥವಾ ಆಗಾಗ ಇದು ಚಟವಾಗಿಬಿಟ್ಟರೆ ಇದು ಕೇವಲ ಬೆವರಷ್ಟೇ ಅಲ್ಲ, ಆನೇಕ ಆರೋಗ್ಯದ ಸಮಸ್ಯೆಗಳನ್ನೂ ತಂದೊಡ್ಡುತ್ತದೆ ಎಂಬ ಸತ್ಯ ಯಾರಿಗೂ ತಿಳಿಯದ್ದೇನಲ್ಲ. ಹಾಗಾಗಿ ಆಲ್ಕೋಹಾಲ್‌ ಹಿತಮಿತವಾಗಿರಲಿ.

Soda

ಸೋಡಾ

ಬೇಸಿಗೆಯ ಬಿಸಿಲಲ್ಲಿ ಬೆವರಿಳಿಸಿ ನಡೆವಾಗ, ನಿಂಬೆಹಣ್ಣಿನ ಸೋಡಾ ಯಾರಿಗೆ ತಾನೇ ಇಷ್ಟವಾಗದು ಹೇಳಿ. ಆದರೆ, ಬಿಸಿಲಲ್ಲಿ ತಂಪು ತಂಪು ನಿಂಬೆಹಣ್ಣಿನ ಸೋಡಾ, ದೇಹವನ್ನು ತಂಪು ಮಾಡೀತು ಅಂದುಕೊಂಡರೆ ಅದು ತಪ್ಪಾದೀತು. ಸೋಡಾ ಹಾಗೂ ಅದರಲ್ಲಿ ಸೇರಿರುವ ರಾಶಿ ಸಕ್ಕರೆ ದೇಹವನ್ನು ಪ್ರವೇಶಿಸಿದ ಕೂಡಲೇ ಬೆವರಿಳಿಯುವುದು ಇನ್ನೂ ಹೆಚ್ಚುತ್ತದೆ!

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Continue Reading

ಲೈಫ್‌ಸ್ಟೈಲ್

Ways To Stay Young: ಸಮುದ್ರದಾಳದಲ್ಲಿ ದಿನ ಕಳೆದರೆ ಇಳಿ ವಯಸ್ಸಲ್ಲೂ ಯೌವನ ಮರಳಿ ಬರುತ್ತದೆ!

93 ದಿನಗಳ ಕಾಲ ಸಮುದ್ರದಾಳದಲ್ಲಿ ವಾಸಿಸಿದ್ದರಿಂದ ನೌಕಾಪಡೆ ನಿವೃತ್ತ ಅಧಿಕಾರಿ ವಯಸ್ಸಿನಲ್ಲಿ ಸುಮಾರು ಹತ್ತು ವರ್ಷಗಳಷ್ಟು ಹಿಂದೆ ಹೋಗಿದ್ದಾರಂತೆ. ಅಂದರೆ, ಹತ್ತು ವರ್ಷಗಳಷ್ಟು ಹಿಂದಿನ ದೈಹಿಕ ಆರೋಗ್ಯ ಇವರಿಗೆ ಮರುಕಳಿಸಿದ್ದು, ಇದರಿಂದ ಸಾಗರದಾಳದಲ್ಲಿ ವಾಸಿಸುವ ಮೂಲಕ ಯೌವನವನ್ನು ಮರಳಿ ಪಡೆಯಬಹುದು ಎಂದು ಇವರು (Ways To Stay Young) ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.

VISTARANEWS.COM


on

Ways To Stay Young
Koo

56 ವರ್ಷದ ನಿವೃತ್ತ ನೌಕಾದಳದ ಅಧಿಕಾರಿ ಜೋಸೆಫ್‌ ಡಿಟೂರಿ ಇತ್ತೀಚೆಗೆ 93 ದಿನಗಳ ಕಾಲ ಅಟ್ಲಾಂಟಿಕ್‌ ಸಮುದ್ರದಾಳದಲ್ಲಿ ವಾಸಿಸುವ ಮೂಲಕ ಜಗತ್ತನ್ನು ನಿಬ್ಬೆರಗಾಗಿಸಿದ್ದಾರೆ. ಅಷ್ಟೇ ಅಲ್ಲ, ಸಾಗರದಾಳದಲ್ಲಿ ಜೀವಿಸುವುದರಿಂದ ತಮ್ಮ ವಯಸ್ಸನ್ನೂ ಕಡಿಮೆಗೊಳಿಸಿರುವುದು ಇಲ್ಲಿ ಅಚ್ಚರಿಯ ವಿಷಯ.
ಹೌದು. ಒತ್ತಡದ ಪಾಡ್‌ ಒಂದರೊಳಗೆ 93 ದಿನಗಳ ಕಾಲ ಸಮುದ್ರದಾಳದಲ್ಲಿ ವಾಸಿಸಿದ್ದರಿಂದ ಸುಮಾರು ಹತ್ತು ವರ್ಷಗಳಷ್ಟು ವಯಸ್ಸಿನಲ್ಲಿ ಇವರು ಹಿಂದೆ ಹೋಗಿದ್ದಾರಂತೆ. ಅಂದರೆ, ಹತ್ತು ವರ್ಷಗಳಷ್ಟು ಹಿಂದಿನ ದೈಹಿಕ ಆರೋಗ್ಯ ಇವರಿಗೆ ಮರುಕಳಿಸಿದ್ದು, ಇದರಿಂದ ಸಾಗರದಾಳದಲ್ಲಿ ವಾಸಿಸುವ ಮೂಲಕ ಯೌವನವನ್ನು ಮರಳಿ ಪಡೆಯಬಹುದು ಎಂದು (Ways To Stay Young) ಇವರು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.

man spends 93 days under atlantic sea becomes 10 years younger

ದಾಖಲೆ ಅಷ್ಟೇ ಅಲ್ಲ

ಸಮುದ್ರದಾಳದಲ್ಲಿ 93 ದಿನಗಳ ಕಾಲ ಜೀವಿಸುವ ಮೂಲಕ ದಾಖಲೆ ಬರೆಯುವುದಷ್ಟೇ ಅಲ್ಲ, ಮಾನಸಿಕವಾಗಿ, ದೈಹಿಕವಾಗಿ, ಮತ್ತಷ್ಟು ಆರೋಗ್ಯವಂತರಾಗಿ, ಉಲ್ಲಾಸದಾಯಕ ವ್ಯಕ್ತಿಯಾಗಿ ಹೊರ ಜಗತ್ತಿಗೆ ಮರಳಿದ್ದಾರೆ. ಒತ್ತಡದ ಪಾಡ್‌ ಒಂದರಲ್ಲಿ ಸಮುದ್ರದಾಳದಲ್ಲಿ ಜೀವಿಸಿದ ಕಾರಣ, ಮನುಷ್ಯನ ದೇಹದ ಮೇಲೆ ಇದು ಬೀರುವ ಪರಿಣಾಮ ಇತ್ಯಾದಿಗಳನ್ನು ಡಿಟೂರಿ ಅವರು ಜಗತ್ತಿಗೆ ಸಾಬೀತುಪಡಿಸಿ ತೋರಿಸಿದ್ದಾರೆ. ಹೊರ ಬಂದ ಮೇಲೆ ಅವರ ಮೇಲೆ ನಡೆದ ಸಾಕಷ್ಟು ವೈದ್ಯಕೀಯ ಪರೀಕ್ಷೆಗಳು, ಈತ ಸಾಬೀತುಪಡಿಸಿದ ವಿಚಾರಗಳನ್ನು ಅಧಿಕೃತಗೊಳಿಸಿದ್ದು, ಮಾನಸಿಕ ಹಾಗೂ ದೈಹಿಕ ಆರೋಗ್ಯದ ವಿಚಾರದಲ್ಲಿ 93 ದಿನಗಳಲ್ಲಿ ಡಿಟೂರಿ ಅವರು 10 ವರ್ಷಗಳಷ್ಟು ಯೌವನವನ್ನು ಮರಳಿ ಪಡೆದಿದ್ದಾರೆ ಎಂದು ದೃಢಪಡಿಸಿವೆ. ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಡಿಟೂರಿ ಅವರ ಸ್ಟೆಮ್‌ ಸೆಲ್‌ (ಕಾಂಡ ಕೋಶ)ಗಳು ಗಣನೀಯವಾಗಿ ಏರಿದ್ದು, ಕೊಲೆಸ್ಟೆರಾಲ್‌ ಮಟ್ಟವು 72 ಪಾಯಿಂಟ್‌ಗಳಷ್ಟು ಕೆಳಗಿಳಿದಿವೆ. ದೇಹದಲ್ಲಿದ್ದ ಇತರ ಯುರಿಯೂತದ ಲಕ್ಷಣಗಳೂ ಕಡಿಮೆಯಾಗಿವೆ. ನಿದ್ದೆಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆಯಾಗಿದ್ದು, ಮುಖ್ಯವಾಗಿ ರಾತ್ರಿಯ ಗಾಢ ನಿದ್ದೆಯ ಗುಣಮಟ್ಟ ಶೇ.೬೦ರಷ್ಟು ಏರಿಕೆಯಾಗಿದೆ. ಸಾಮಾನ್ಯವಾಗಿ ಪ್ರತಿ ವ್ಯಕ್ತಿಯ ವರ್ಣತಂತುಗಳು ವಯಸ್ಸಾದ ಹಾಗೆ ಚಿಕ್ಕದಾಗುತ್ತಾ ಬರುವುದರಿಂದ, ಇಲ್ಲಿ, ಡಿಟೂರಿ ಅವರ ವರ್ಣತಂತು ಶೇ.೨೦ರಷ್ಟು ಉದ್ದವಾಗಿದ್ದು, ಇದು ಯೌವನವನ್ನು 10 ವರ್ಷಗಳಷ್ಟು ಮರಳಿಸಿದೆ ಎಂದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂದಿದೆ.

ಆರೋಗ್ಯ ಸುಧಾರಣೆ

ಡಿಟೂರಿ ಅವರ ಮಿದುಳಿನ ಆರೋಗ್ಯ ಕೂಡಾ ಸಾಕಷ್ಟು ಸುಧಾರಿಸಿದ್ದು, ಅವರು ಮತತೆ ಲವಲವಿಕೆಯಿಂದ ಜೀವನೋತ್ಸಾಹದಿಂದ ಮರಳಿ ಬಂದಿರುವುದು ವಿಶೇಷ. ಸಮುದ್ರದಾಳದಲ್ಲಿ ಹೈಪರ್‌ಬಾರಿಕ್‌ ಚೇಂಬರ್‌ ಒಳಗೆ ಅವರು 93 ದಿನಗಳ ಕಾಲ ಉಳಿದುಕೊಂಡಿದ್ದು, ಇದು ಅವರ ಒಟ್ಟಾರೆ ಆರೋಗ್ಯಕ್ಕೆ ಭಾರೀ ಸಕಾರಾತ್ಮಕ ಪರಿಣಾಮ ಬೀರಿದೆ. ಡಿಟೂರಿ ಅವರೇ ಹೇಳುವಂತೆ, 100 ಚದರ ಅಡಿಯ ಚೇಂಬರ್‌ ಒಳಗೆ ಸಮುದ್ರದಾಳದಲ್ಲಿ ಜೀವಿಸುವ ಸಂದರ್ಭದಲ್ಲಿ ವಾರಕ್ಕೆ ಐದು ದಿನಗಳ ಕಾಲ ಪ್ರತಿ ನಿತ್ಯವೂ ಒಂದು ಗಂಟೆಗಳ ಕಾಲ ವ್ಯಾಯಾಮ ಇತ್ಯಾದಿಗಳನ್ನು ಅವರು ಮಾಡಿದ್ದಾರೆ. ದೈಹಿಕ, ಮಾನಸಿಕ ಆರೋಗ್ಯ ಸದೃಢವಾಗಿರಲು ಹೊರಗೆ ನೆಲದ ಮೇಲಿದ್ದಾಗ ಮಾಡುವ ವ್ಯಾಯಾಮಗಳನ್ನು ಮಾಡಿದ್ದಾರೆ. ಈ ಶಿಸ್ತನ್ನು ಪಾಲಿಸಿದ್ದೂ ಕೂಡಾ ಈ ಆರೋಗ್ಯ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ICMR Guidelines: ಶಿಶು ಆಹಾರ ಹೇಗಿರಬೇಕು? ಐಸಿಎಂಆರ್‌ ಮಾರ್ಗಸೂಚಿ ಹೀಗಿದೆ

ಸಕಾರಾತ್ಮಕ ಪರಿಣಾಮ

ಜನರು ಪ್ರವಾಸಕ್ಕಾಗಿ ಆಗಾಗ ಹೊರಗೆ ತಿರುಗಾಡಿ ಬರುವ ಬದಲು ಹೀಗೆ ಎರಡು ವಾರಗಳ ಕಾಲ ಸಮುದ್ರದಾಳದಲ್ಲಿ ಕಳೆಯಬಹುದು. ಇದು ದೇಹಾರೋಗ್ಯಕ್ಕೆ, ಮಾನಸಿಕ ಆರೋಗ್ಯಕ್ಕೆ ಕೊಡುವ ಸಕಾರಾತ್ಮಕ ಪರಿಣಾಮವನ್ನು ಅನುಭವಿಸಿ ನೋಡಬಹುದು ಎಂದು ಅವರು ಹೇಳಿದ್ದಾರೆ. ಡಿಟೂರಿ ಅವರು ಈ ಹಿಂದೆಯೂ 2023ರಲ್ಲಿ ಸಮುದ್ರದಾಳದಲ್ಲಿ 74 ದಿನಗಳ ಕಾಲ ಕಳೆದಿದ್ದರು. ಇದೇ ಮೊದಲ ಬಾರಿಗೆ ಸಮುದ್ರದಾಳದಲ್ಲಿ 93 ದಿನಗಳನ್ನು ಕಳೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ಹಿಂದೆಯೂ 100 ದಿನಗಳ ಕಾಲ ಸಮುದ್ರದಡಿಯಲ್ಲಿ 30 ಅಡಿ ಆಳದಲ್ಲಿ ಸ್ಟೀಲ್‌ ಹಾಗೂ ಗ್ಲಾಸ್‌ನಿಂದ ಮಾಡಿದ ಹೊಟೇಲ್‌ ಒಂದರಲ್ಲಿ ಇರುವ ಮೂಲಕವೂ ದಾಖಲೆ ಬರೆದಿದ್ದರು.

Continue Reading

ಆರೋಗ್ಯ

Tattoo Care: ಟ್ಯಾಟೂ ಪ್ರಿಯರೇ ಹುಷಾರ್‌! ಎಚ್‌ಐವಿ, ಕ್ಯಾನ್ಸರ್‌ಗೂ ಇದು ಕಾರಣ ಆಗಬಹುದು!

ನೀವು ಟ್ಯಾಟೂ (Tattoo Care) ಪ್ರಿಯರೇ? ಶರೀರದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಯೋಚನೆಯಲ್ಲಿದ್ದೀರೇ? ಹಾಗಾದರೆ ನೀವು ಓದಲೇಬೇಕಾದ ಮಾಹಿತಿ ಈ ಲೇಖನದಲ್ಲಿದೆ. ಟ್ಯಾಟೂ ಶಾಯಿಯ ದುಷ್ಪರಿಣಾಮದ ಬಗ್ಗೆ ವೈದ್ಯಲೋಕ ಎಚ್ಚರಿಕೆಯ ಮಾತನ್ನು ಹೇಳಿದೆ. ಆರೋಗ್ಯ ತಜ್ಞರ ಪ್ರಕಾರ ಟ್ಯಾಟೂ ಹಾಕಿಸಿಕೊಳ್ಳುವಾಗ ಹೆಚ್ಚಿನ ಎಚ್ಚರಿಕೆ ವಹಿಸದಿದ್ದರೆ, ಗಂಭೀರವಾದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.

VISTARANEWS.COM


on

Tattoo Care
Koo

ಇತ್ತೀಚಿನ ವರ್ಷಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್‌ (Tattoo Care) ಜೋರಾಗಿದೆ. ಅವರಿಷ್ಟದ ಯಾರೋ ತಾರೆಯರನ್ನು ಅಥವಾ ಕ್ರೀಡಾಳುಗಳನ್ನು ನೋಡಿ ಟ್ಯಾಟೂ ಹಾಕಿಸಿಕೊಳ್ಳುವವರು ಲೆಕ್ಕವಿಲ್ಲದಷ್ಟು ಮಂದಿ. ಬರೀ ಕಪ್ಪು ಬಣ್ಣದ್ದು, ಬಣ್ಣ ಬಣ್ಣದ್ದು, ಹೆಸರುಗಳು, ಯಾರದ್ದೋ ಮುಖಗಳು, ಹೂ-ಬಳ್ಳಿಯ ಚಿತ್ರಗಳು, ಅರ್ಥವಿಲ್ಲದ ಆಕೃತಿಗಳು- ಹೀಗೆ ಏನೇನೋ ನಮೂನೆಗಳನ್ನು ಇದರಲ್ಲಿ ಕಾಣಬಹುದು. ಇದೆಲ್ಲ ಸರಿ. ಆದರೆ ಆರೋಗ್ಯ ತಜ್ಞರ ಪ್ರಕಾರ ಟ್ಯಾಟೂ ಹಾಕಿಸಿಕೊಳ್ಳುವಾಗ ಹೆಚ್ಚಿನ ಎಚ್ಚರಿಕೆ ವಹಿಸದಿದ್ದರೆ, ಗಂಭೀರವಾದ ಆರೋಗ್ಯ ಸಮಸ್ಯೆಗಳು ಗಂಟಿಕ್ಕಿಕೊಳ್ಳಬಹುದು.

Close up of the tattoo machine

ಏನು ಸಮಸ್ಯೆ?

ಟ್ಯಾಟೂ ಹಾಕಿಸಿಕೊಳ್ಳುವುದರಲ್ಲಿ ಏನಿದೆ ಸಮಸ್ಯೆ? ಜಗತ್ತಿನಲ್ಲಿ ಲಕ್ಷಗಟ್ಟಲೆ ಜನ ಹಾಕಿಸಿಕೊಂಡಿದ್ದಾರಲ್ಲ, ಹಾಕಿಸಿಕೊಳ್ಳುತ್ತಲೂ ಇದ್ದಾರಲ್ಲ ಎಂಬ ಕುತೂಹಲ ಇರಬಹುದು. ವೈದ್ಯರ ಪ್ರಕಾರ, ಹೆಪಟೈಟಿಸ್‌ ಬಿ, ಸಿ, ಎಚ್‌ಐವಿ ಹಾಗೂ ಹಲವು ರೀತಿಯ ಕ್ಯಾನ್ಸರ್‌ಗಳು ಬರಬಹುದು. ಈ ಬಗ್ಗೆ ಸ್ವೀಡನ್‌ನಲ್ಲಿ ನಡೆಸಲಾದ ಅಧ್ಯಯನವೊಂದರಲ್ಲಿ, ಟ್ಯಾಟೂ ಹಾಕಿಸಿಕೊಂಡಿದ್ದ ೧೧,೯೦೫ ಜನರಿಂದ ಮಾಹಿತಿ ಕಲೆಹಾಕಲಾಗಿತ್ತು. ಇದರಲ್ಲಿ ಟ್ಯಾಟೂ ಹಾಕಿಸಿಕೊಂಡ ಬಹಳಷ್ಟು ಜನರಲ್ಲಿ ಲಿಂಫೋಮ ಸಾಧ್ಯತೆಗಳು ಕಂಡುಬಂದಿದ್ದವು.

ಹೀಗೇಕೆ?

ಟ್ಯಾಟೂ ಹಾಕುವುದಕ್ಕೆ ಬಳಸಲಾಗುವ ಶಾಯಿಯಲ್ಲಿ ಪಾಲಿಸೈಕ್ಲಿಕ್‌ ಅರೋಮ್ಯಾಟಿಕ್‌ ಹೈಡ್ರೋಕಾರ್ಬನ್‌ (ಪಿಎಎಚ್‌) ಎಂಬ ಕ್ಯಾನ್ಸರ್‌ಕಾರಕ ಇರುವಂಥ ಎಲ್ಲ ಸಾಧ್ಯತೆಗಳಿವೆ. ಎಲ್ಲ ಶಾಯಿಗಳೂ ಇದನ್ನು ಹೊಂದಿರುತ್ತವೆ ಎಂದಲ್ಲ, ಆದರೆ ಇದನ್ನು ಹೊಂದಿರುವಂಥ ಶಾಯಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಪಿಎಎಚ್‌ ಅಂಶ ದೇಹದೊಳಗೆ ಹೋದಾಕ್ಷಣ, ಶರೀರದ ಪ್ರತಿರೋಧಕ ಶಕ್ತಿ ಜಾಗೃತಗೊಳ್ಳುತ್ತದೆ. ಈ ಅಂಶದ ಬಹುಭಾಗ ಚರ್ಮದಿಂದ ಬೇರೆಯಾಗಿ, ಶರೀರವನ್ನು ಪ್ರವೇಶಿಸಿ, ದೇಹದ ಲಿಂಫ್‌ ನೋಡ್‌ಗಳಲ್ಲಿ ಜಮೆಯಾಗುತ್ತವೆ. ಇದರಿಂದಲೇ ಲಿಂಫೋಮದಂಥ ರೋಗಗಳು ತಲೆದೋರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

Tattoo bottle and needle

ತಪ್ಪು ಮಾಹಿತಿ

ಟ್ಯಾಟೂ ಶಾಯಿಗಳ ಬಾಟಲಿಯ ಮೇಲೆ ನೀಡಿರುವ ಮಾಹಿತಿಗೂ, ಆ ಶಾಯಿಯಲ್ಲಿ ಇರುವಂಥ ಅಂಶಗಳಿಗೂ ಎಷ್ಟೋ ಬಾರಿ ತಾಳೆಯೇ ಬೀಳುವುದಿಲ್ಲ ಎಂಬ ಅಂಶವನ್ನು ಇತ್ತೀಚೆಗೆ ಆಸ್ಟ್ರೇಲಿಯದಲ್ಲಿ ನಡೆಸಲಾದ ಅಧ್ಯಯನ ಬಯಲು ಮಾಡಿತ್ತು. ಪರೀಕ್ಷೆಗೆ ಒಳಪಡಿಸಲಾದ ಶೇ 20ಕ್ಕಿಂತ ಹೆಚ್ಚಿನ ಶಾಯಿಗಳಲ್ಲಿ ಪಿಎಎಚ್‌ ಅಂಶಗಳು ಕಂಡಿದ್ದವು. ಮಾತ್ರವಲ್ಲ, ಪಾದರಸ, ಬ್ಯಾರಿಯಂನಂಥ ಭಾರೀ ಖನಿಜಗಳು ಸಹ ಇದರಲ್ಲಿ ಇದ್ದವು ಎಂದು ಅಧ್ಯಯನದ ವಿವರಗಳನ್ನು ನೀಡುತ್ತಾ ತಜ್ಞರು ತಿಳಿಸುತ್ತಾರೆ. ಈ ರಾಸಾಯನಿಕಗಳು ಕೆಲವೊಮ್ಮೆ ಚರ್ಮದ ತೊಂದರೆಗಳಿಂದ ಹಿಡಿದು ಚರ್ಮದ ಕ್ಯಾನ್ಸರ್‌, ಯಕೃತ್‌ ಕ್ಯಾನ್ಸರ್‌, ಮೂತ್ರಪಿಂಡದ ಕ್ಯಾನ್ಸರ್‌ ಮತ್ತು ರಕ್ತದ ಕ್ಯಾನ್ಸರ್‌ಗೂ ಕಾರಣವಾಗಬಹುದು. ಇದಲ್ಲದೆ, ಟ್ಯಾಟೂ ಹಾಕುವುದಕ್ಕೆ ಬಳಸುವ ಸೂಜಿಗಳ ವಿಚಾರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದರೆ, ಎಚ್‌ಐವಿ, ಹೆಪಟೈಟಿಸ್‌ ಬಿ, ಸಿ ಯಂಥ ರೋಗಗಳು ಅಂಟಬಹುದು.

ಇದನ್ನೂ ಓದಿ: Quitting Smoking: ಈ ಆಹಾರ ಸೇವಿಸುವ ಮೂಲಕ ಸಿಗರೇಟು, ಗುಟ್ಕಾ ಚಟದಿಂದ ದೂರ ಆಗಬಹುದು!

ಭಾರತದಲ್ಲಿಲ್ಲ

ಟ್ಯಾಟೂ ಶಾಯಿಗಳಲ್ಲಿ ಬಳಸಬಹುದಾದ ರಾಸಾಯನಿಕಗಳ ಬಗ್ಗೆ ಭಾರತದಲ್ಲಂತೂ ಸ್ಪಷ್ಟ ನಿರ್ದೇಶನಗಳಿಲ್ಲ. ಶಾಯಿ ಬಾಟಲಿಯ ಮೇಲೆ ನಮೂದಿಸಿದ ಅಂಶಗಳೇ ಒಳಗೂ ಇವೆಯೇ ಎಂಬುದನ್ನೂ ಯಾರೂ ಪರಿಶೀಲಿಸುವುದಿಲ್ಲ. ಟ್ಯಾಟೂ ಹಾಕುವ ಸ್ಥಳಗಳು ಮತ್ತು ಹಾಕುವವರ ಬಗ್ಗೆ ನಿಗಾ ಇಡುವಂಥ ವ್ಯವಸ್ಥೆ ಇಲ್ಲ. ಅಲ್ಲಿ ಪಾಲನೆಯಾಗುವ ಸ್ವಚ್ಛತೆ ಮತ್ತು ಇತರ ಕ್ರಮಗಳು ಸರಿಯಿಲ್ಲದಿದ್ದರೆ, ಶಿಸ್ತುಕ್ರಮ ಜರುಗಿಸುವಂಥ ವ್ಯವಸ್ಥೆಯೂ ಇಲ್ಲ. ಈ ಎಲ್ಲ ವಿಷಯಗಳ ಕುರಿತಾಗಿ ಯಾವುದೇ ನೀತಿ-ನಿಯಮಾವಳಿಗಳು ರಚನೆಗೊಂಡಿಲ್ಲ. ಹಾಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸುವುದು ಅಗತ್ಯ.

Continue Reading
Advertisement
Udupi-Chikmagalur Lok Sabha constituency
ದೇಶ9 mins ago

Udupi-Chikmagalur Lok Sabha constituency: ಬದಲಾವಣೆ ನಡುವೆ ಯಾರಿಗೆ ಮಣೆ ಹಾಕಲಿದ್ದಾರೆ ಉಡುಪಿ ಕ್ಷೇತ್ರದ ಮತದಾರರು?

Vasishta Simha Lovely Kannada Film Trailer Event
ಸ್ಯಾಂಡಲ್ ವುಡ್14 mins ago

Vasishta Simha: ಟ್ರೈಲರ್‌ ಲಾಂಚ್ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ವಸಿಷ್ಠ ಸಿಂಹ!

Heat wave
ದೇಶ14 mins ago

Heat Wave: ಒಡಿಶಾದಲ್ಲಿ ಬಿಸಿಗಾಳಿ ಶಾಖಕ್ಕೆ ಒಂದೇ ದಿನ 45 ಜನ ಬಲಿ

Food Poisoning
ಮೈಸೂರು16 mins ago

Food Poisoning : ಮೈಸೂರಲ್ಲಿ ಗೃಹ ಪ್ರವೇಶದ ಊಟ ತಿಂದ ವೃದ್ಧೆ ಸಾವು; 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Gold Rate Today
ಚಿನ್ನದ ದರ25 mins ago

Gold Rate Today: ಚಿನ್ನದ ಬೆಲೆ ಮತ್ತೂ ಇಳಿಕೆ; ಇಂದಿನ ಧಾರಣೆಯನ್ನು ಇಲ್ಲಿ ಗಮನಿಸಿ

karnataka Rain
ಮಳೆ36 mins ago

Karnataka Rain : ಸಿಡಿಲಿಗೆ ಆಕಳು ಬಲಿ; ಹಲವೆಡೆ ಮಳೆ ಅವಾಂತರಕ್ಕೆ ಜನರು ತತ್ತರ

Team India
ಪ್ರಮುಖ ಸುದ್ದಿ45 mins ago

Team India : ಈ ಕೆಲಸ ಇಷ್ಟವಿದೆ; ಟೀಮ್ ಇಂಡಿಯಾ ಕೋಚ್​ ಹುದ್ದೆಯ ಬಗ್ಗೆ ಮೊದಲ ಹೇಳಿಕೆ ನೀಡಿದ ಗೌತಮ್ ಗಂಭೀರ್​

Priyanka Chopra The Bluff team Malti enjoys
ಬಾಲಿವುಡ್53 mins ago

Priyanka Chopra: ಆಸ್ಟ್ರೇಲಿಯಾದ ಬೀಚ್‌ನಲ್ಲಿ ಅಮ್ಮನ ಸಿನಿ ತಂಡದ ಜತೆ ಎಂಜಾಯ್ ಮಾಡಿದ ಮಾಲತಿ ಮೇರಿ ಚೋಪ್ರಾ!

George Fernandes ರಾಜಮಾರ್ಗ ಅಂಕಣ
ಅಂಕಣ54 mins ago

ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

gold rate today
ಕರ್ನಾಟಕ1 hour ago

Gold Rate Today: ಚಿನ್ನ ಕೊಳ್ಳಲು ಇದೇ ಸೂಕ್ತ ಸಮಯ; ಮತ್ತೆ ಬಂಗಾರದ ದರ ಇಳಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌