Raja Marga Column : ರಾಮ ಮಂದಿರ ಹೋರಾಟದ ಪ್ರಾತಃಸ್ಮರಣೀಯ ಹೆಸರು ಪೇಜಾವರ ಶ್ರೀ! - Vistara News

ಅಂಕಣ

Raja Marga Column : ರಾಮ ಮಂದಿರ ಹೋರಾಟದ ಪ್ರಾತಃಸ್ಮರಣೀಯ ಹೆಸರು ಪೇಜಾವರ ಶ್ರೀ!

Raja Marga Column : ರಾಮ ಮಂದಿರ ಹೋರಾಟದ ವಿಚಾರದಲ್ಲಿ ಮುಂಜಾನೆ ಎದ್ದು ಸ್ಮರಿಸಬೇಕಾದ ಹೆಸರು ಪೇಜಾವರ ಸ್ವಾಮೀಜಿ. ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸಿ ಹೋರಾಟಕ್ಕೆ ಅಣಿಮಾಡಿದ ಶಕ್ತಿ ಅವರದ್ದು. ಮಂದಿರದ ಲೋಕಾರ್ಪಣೆಯ ಹೊತ್ತಿನಲ್ಲಿ ಅವರು ಖಂಡಿತವಾಗಿಯೂ ಅಯೋಧ್ಯೆಯಲ್ಲಿ ಇರುತ್ತಾರೆ. ಹೇಗೆ?

VISTARANEWS.COM


on

Pejavara Shri Ayodhya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA Rajendra Bhat

ಶತಮಾನದ ಪರಿವ್ರಾಜಕ ಸಂತ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯನ್ನು (Shri Vishweshatheertha swameeji Pejavar Matt) ಅಯೋಧ್ಯೆಯ ರಾಮ ಜನ್ಮಭೂಮಿ ಹೋರಾಟ ಸಮಿತಿ (Rama Janmabhumi) ಮತ್ತು ಹಿಂದೂಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಅವರು ರಾಮ ಜನ್ಮಭೂಮಿ ಹೋರಾಟಕ್ಕೆ ನೀಡಿದ ದಿಟ್ಟ ನಾಯಕತ್ವ ಮತ್ತು ಮಾರ್ಗದರ್ಶನ. ವಿಶ್ವಹಿಂದೂ ಪರಿಷದ್ 1984ರಲ್ಲಿ ಅಯೋಧ್ಯೆಯ ವಿಷಯವನ್ನು ಎತ್ತಿಕೊಂಡು ‘ಮಂದಿರವಲ್ಲೇ ಕಟ್ಟುವೆವು’ (Mandiravalle Kattuvevu) ಎಂದು ಕರೆ ನೀಡಿತ್ತು. ಆಗ ಸರಯೂ ನದಿಯ ನೀರಿನಲ್ಲಿ ಮುಳುಗಿ 10,000 ಹಿಂದೂ ಕಾರ್ಯಕರ್ತರು ಆ ಸಂಕಲ್ಪವನ್ನು ತೆಗೆದುಕೊಂಡಾಗ ಮುಂದೆ ನಿಂತು ಮಾರ್ಗದರ್ಶನ ಮಾಡಿದವರು ಇದೇ ಸ್ವಾಮೀಜಿ. ಅಯೋಧ್ಯೆ ರಾಮಜನ್ಮಭೂಮಿ ಹೋರಾಟದಲ್ಲಿ ಅದೊಂದು ಮಹತ್ವದ ಹೆಜ್ಜೆ ಆಗಿತ್ತು. ಏಕೆಂದರೆ ರಾಮಮಂದಿರದ ಸ್ಥಾಪನೆಗೆ ಅಂದು ದೇಶದಲ್ಲಿ ಯಾವುದೇ ಪೂರಕ ವಾತಾವರಣ ಇರಲಿಲ್ಲ. ನ್ಯಾಯಾಂಗದ ತೀರ್ಪು ಕ್ಷಿಪ್ರವಾಗಿ ಬರುವ ಸೂಚನೆಯೇ ಇರಲಿಲ್ಲ. (Raja Marga Column)

ಸಂತರ ‘ಧರ್ಮ ಸಂಸದ್ ‘ ದಿಟ್ಟ ನಿರ್ಧಾರ

ಮುಂದೆ ದೆಹಲಿಯ ವಿಜ್ಞಾನ ಭವನದಲ್ಲಿ ಶ್ರೇಷ್ಠ ಸಂತರ ಮತ್ತು ಸ್ವಾಮೀಜಿಗಳ ‘ಧರ್ಮ ಸಂಸದ್’ ನಡೆದಾಗ ಅಯೋಧ್ಯೆಯ ರಾಮ ಮಂದಿರದ ಪರವಾಗಿ ಗಟ್ಟಿಯಾಗಿ ಮಾತನಾಡಿದವರು ಇದೇ ಸ್ವಾಮೀಜಿಗಳು. ಉಡುಪಿಯಲ್ಲಿ ಕೂಡ ಅವರ ನೇತೃತ್ವದಲ್ಲಿ ‘ಧರ್ಮ ಸಂಸದ್’ ನಡೆದು ಅದು ಅತ್ಯಂತ ಯಶಸ್ವೀ ಆಯಿತು. ‘ಅಯೋಧ್ಯೆಯಲ್ಲಿ ಇಲ್ಲವಾದರೆ ಬೇರೆಲ್ಲೂ ರಾಮಮಂದಿರ ಬೇಡ’ ಅಂದವರು ಪೇಜಾವರ ಶ್ರೀಗಳು.

Pejavara Shri Ayodhya
Pejavara Shri Ayodhya with PM Narendra Modi

ರಾಮನಿಗೆ ಇಡೀ ಭಾರತವನ್ನು ಬೆಸೆಯುವ ಶಕ್ತಿ ಇದೆ

ಚಿಕ್ಕಂದಿನಿಂದ ರಾಮನ ಕತೆಯನ್ನು ಕೇಳಿ ಬೆಳೆದ ಭಾರತೀಯರಿಗೆ ರಾಮ ಒಬ್ಬ ಆದರ್ಶ ಪುರುಷ. ಒಂದೊಮ್ಮೆ ಕೃಷ್ಣನ ಬಗ್ಗೆ ಒಡಕು ಸ್ವರ ಬಂದರೂ ಭಾರತೀಯರು ಸಹಿಸಿಯಾರು. ಆದರೆ ರಾಮನ ಬಗ್ಗೆ ಒಂದು ಕೆಟ್ಟ ಮಾತು ಭಾರತೀಯರು ಸಹಿಸಿಕೊಂಡ ಉದಾಹರಣೆ ಇಲ್ಲ. ಅಯೋಧ್ಯೆಯಿಂದ ಹೊರಟ ರಾಮ ಲಂಕೆಗೆ ಹೋದ ದಾರಿ, ಅವನು ಭೇಟಿಯಾದ ಸ್ಥಳಗಳು, ಅವನು ಕಟ್ಟಿದ ರಾಮಸೇತು ಎಲ್ಲವೂ ರಾಮನ ಬದುಕಿಗೆ ಐತಿಹಾಸಿಕ ಆಧಾರಗಳನ್ನು ಕೊಡುತ್ತವೆ. ಅವೆಲ್ಲವೂ ರಾಮನ ಕಾಲಮಾನಕ್ಕೆ ಮ್ಯಾಚ್ ಆಗುತ್ತವೆ. ರಾಮಸೇತು ನಿರ್ಮಾಣವಾಗಿ ಇಷ್ಟು ವರ್ಷ ಆದರೂ ಅದಿನ್ನೂ ಇದೆ. ಅದರ ಕಾರ್ಬನ್ ಡೇಟಿಂಗ್ ಪರೀಕ್ಷೆ ವಿಜ್ಞಾನಿಗಳು ನಡೆಸಿದಾಗ ಅದು ಕೂಡ ರಾಮಾಯಣದ ಕಾಲಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ ಅಂದಾಗ ರಾಮ ಕಾಲ್ಪನಿಕ ವ್ಯಕ್ತಿ ಹೇಗಾಗುತ್ತಾನೆ?

ಇದರ ಆಧಾರದ ಮೇಲೆ ಭಾರತದ ಸಂತರು ದೇಶದಾದ್ಯಂತ ಹಿಂದೂ ಸಮಾವೇಶಗಳನ್ನು ನಡೆಸುತ್ತಾರೆ. ಅಲ್ಲೆಲ್ಲ ಪೇಜಾವರ ಸ್ವಾಮೀಜಿಗಳು ಸಂತರ ಪ್ರತಿನಿಧಿಯಾಗಿ ಭಾಗವಹಿಸುತ್ತಾರೆ. ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾರೆ.

Pejavara Shri Ayodhya
Pejavara Shri Ayodhya with PM Narendra Modi

ಸಂತರ ಒಮ್ಮತದ ಧ್ವನಿ ಅದು ಪೇಜಾವರ, ಅದು ರಾಮ ಮಂದಿರ

ಇಡೀ ಸಂತ ಮಂಡಳಿಯ ಒಗ್ಗಟ್ಟು ಕಾಪಾಡಿಕೊಳ್ಳಲು ಸಾಧ್ಯವಾದದ್ದು ಪೇಜಾವರ ಶ್ರೀಗಳಿಂದ. ವಿವಿಧ ಜಾತಿಗಳಲ್ಲಿ ಹರಡಿ ಹೋಗಿದ್ದ ಸ್ವಾಮೀಜಿಗಳನ್ನು ಅವರು ಕರೆದು ಮಾತಾಡಿ ಒಂದು ವೇದಿಕೆಗೆ ತರುತ್ತಾರೆ. ದಲಿತ ಸ್ವಾಮೀಜಿ ಎಂದು ತಮ್ಮನ್ನು ತಾವು ಕರೆಸಿಕೊಂಡವರನ್ನು ಕೂಡ ಅವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಸಭೆಗಳನ್ನು ಮಾಡುತ್ತಾರೆ. ಈ ಮಹಾ ಉದ್ದೇಶಕ್ಕಾಗಿ ಅವರು ದೇಶದಾದ್ಯಂತ ಸಂಚಾರ ಮಾಡಿದರು. ಪಾದಯಾತ್ರೆಗಳನ್ನು ಮಾಡಿದರು. ದಲಿತರ ಮನೆಗಳಿಗೆ ಭೇಟಿ ಕೊಟ್ಟರು. ಜನಜಾಗೃತಿ ಮೂಡಿಸಿದರು. ರಾಮನ ಹೆಸರಿನಲ್ಲಿ ಇಡೀ ಹಿಂದೂ ಸಮಾಜವನ್ನು ಬೆಸೆಯುವಲ್ಲಿ ಪೇಜಾವರ ಸ್ವಾಮೀಜಿಯವರ ಪಾತ್ರವನ್ನು ನಾವು ಮರೆಯಲು ಸಾಧ್ಯವೇ ಇಲ್ಲ.

1992ರ ಡಿಸೆಂಬರ್ 6 ಸ್ವಾಮೀಜಿ ಅಲ್ಲಿಯೇ ಇದ್ದರು

ಮುಂದೆ 1992 ಡಿಸೆಂಬರ್ ಆರರಂದು ಅಯೋಧ್ಯೆಯಲ್ಲಿ ಸಾಮೂಹಿಕ ಕರಸೇವೆಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದಾಗ ಸೇರಿದವರು ಲಕ್ಷಾಂತರ ಕರಸೇವಕರು. ರಥಯಾತ್ರೆಯಲ್ಲಿ ಆಡ್ವಾಣಿ, ಉಮಾಭಾರತಿ, ಫೈಜಾಬಾದ್ ಸಂಸದರಾದ ವಿನಯ್ ಕತಿಯಾರ್, ಸಾಧ್ವಿ ಋತಂಬರಾ ಅಲ್ಲಿದ್ದರು. ಪೇಜಾವರ ಸ್ವಾಮೀಜಿಯವರ ನೇತೃತ್ವದಲ್ಲಿ ಕೇಸರಿ ಸೇನೆ ಅಲ್ಲಿಗೆ ತಲುಪಿತ್ತು. ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿ ಅವರು ತಡೆ ಬೇಲಿಯನ್ನು ದಾಟಿ ವಿವಾದಿತ ಕಟ್ಟಡದ ಕಡೆಗೆ ಧಾವಿಸಿದಾಗ ಅದನ್ನು ತಡೆಯುವ ಎಲ್ಲ ಪ್ರಯತ್ನವನ್ನೂ ಆಡ್ವಾಣಿ, ಪೇಜಾವರ ಶ್ರೀಗಳು ಮಾಡಿದ್ದರು. ಆದರೆ ಕೆಲವೇ ಘಂಟೆಯಲ್ಲಿ ವಿವಾದಿತ ಕಟ್ಟಡವು ಧರಾಶಾಯಿ ಆಗಿತ್ತು. ಆಕಾಶದ ಎತ್ತರಕ್ಕೆ ಧೂಳಿನ ಮೋಡಗಳು ಎದ್ದಿದ್ದವು. ಪೇಜಾವರ ಶ್ರೀಗಳ ಆರ್ದ್ರ ಧ್ವನಿಯು ಸೇರಿದ ಲಕ್ಷಾಂತರ ಕಾರ್ಯಕರ್ತರ ‘ಜೈ ಶ್ರೀರಾಮ’ ಘೋಷದ ನಡುವೆ ಯಾರಿಗೂ ಕೇಳಿಸಲೇ ಇಲ್ಲ.

Pejavara Shri Ayodhya with PM Narendra Modi
Pejavara Shri Ayodhya with PM Narendra Modi

ಆ ಕ್ಷಣಕ್ಕೆ ಪೇಜಾವರ ಶ್ರೀಗಳಿಗೆ ಕರ್ತವ್ಯ ಪ್ರಜ್ಞೆ ಜಾಗೃತ ಆಗಿತ್ತು!

ಆ ಕ್ಷಣಕ್ಕೆ ಉರುಳಿ ಬಿದ್ದ ಕಟ್ಟಡದ ಕಡೆಗೆ ಪೇಜಾವರ ಶ್ರೀಗಳು ಬಿಟ್ಟ ಬಾಣದಂತೆ ಧಾವಿಸಿದ್ದರು. ಅವರನ್ನು ತಡೆಯಲು ಯಾರಿಗೂ ಸಾಧ್ಯವೇ ಆಗಲಿಲ್ಲ. ಅವರು ಹೋಗಿ ಹುಡುಕಿದ್ದು ಕಟ್ಟಡದ ಒಳಗಿದ್ದ ರಾಮ ಲಲ್ಲಾನ ಮೂರ್ತಿಯನ್ನು!

ಉರುಳಿ ಬಿದ್ದ ಇಟ್ಟಿಗೆಗಳ ನಡುವೆ ರಾಮ ಲಲ್ಲಾನ ಮೂರ್ತಿ ದೊರೆತ ಕೂಡಲೇ ಸ್ವಾಮೀಜಿ ಅದನ್ನು ಬಾಚಿ ತಬ್ಬಿಕೊಂಡರು. ಅವರ ಕಣ್ಣಿಂದ ಆನಂದ ಬಾಷ್ಪ ಸುರಿಯಲು ಆರಂಭವಾಗಿತ್ತು. ಅವರು, ಅವರ ಶಿಷ್ಯರು ಗಟ್ಟಿಯಾಗಿ ರಾಮ ರಕ್ಷಾ ಸ್ತೋತ್ರವನ್ನು ಪಠಿಸಲು ಆರಂಭ ಮಾಡಿದ್ದರು. ಕಳೆದು ಹೋಗಿದ್ದ ತುಂಬಾ ಅಮೂಲ್ಯವಾದ ಒಂದು
ಕೊಪ್ಪರಿಗೆಯನ್ನು ಮತ್ತೆ ಪಡೆದ ಖುಷಿ ಅವರ ಕಣ್ಣಲ್ಲಿ ತುಂಬಿತ್ತು.

ಮರುದಿನ ಬೆಳಿಗ್ಗೆ ಒಂದು ಒಳ್ಳೆಯ ಮುಹೂರ್ತದಲ್ಲಿ ಅದೇ ಕಟ್ಟಡದ ಒಂದು ಪಾರ್ಶ್ವದಲ್ಲಿ ಒಂದು ತಾತ್ಕಾಲಿಕ ಗುಡಿಯನ್ನು ಕಟ್ಟಿ ಅಲ್ಲಿ ರಾಮ ಲಲ್ಲಾನ ಮೂರ್ತಿಯನ್ನು ಸ್ಥಾಪನೆ ಮಾಡುವವರೆಗೂ ಅವರು ನಿದ್ದೆಯನ್ನೇ ಮಾಡಿರಲಿಲ್ಲ. ಒಂದು ತೊಟ್ಟು ನೀರೂ ಕುಡಿದಿರಲಿಲ್ಲ.

ಇದನ್ನೂ ಓದಿ : Raja Marga Column : ಭವ್ಯ ರಾಮ ಮಂದಿರದ ಅದ್ಭುತ ವಿನ್ಯಾಸಗಾರ ಚಂದ್ರಕಾಂತ ಸೋಮಪುರ

ಮುಂದೆ ಎಲ್ಲವೂ ಅವರ ಸಂಕಲ್ಪದಂತೆ ನಡೆದಿವೆ!

ಅಂತಹ ಪೇಜಾವರ ಶ್ರೀಗಳು 2019 ಡಿಸೆಂಬರ್ 29ರಂದು ನಮ್ಮನ್ನು ಆಗಲಿದರು. ಮುಂದೆ ನಡೆದ ಎಲ್ಲ ಘಟನೆಗಳು ಅವರ ಸಂಕಲ್ಪದಂತೆ ನಡೆದಿವೆ ಅನ್ನುವುದು ಭರತವಾಕ್ಯ. ಅಸಾಮಾನ್ಯ ತಪಶ್ಯಕ್ತಿ ಹೊಂದಿದ್ದ ಪೇಜಾವರ ಸ್ವಾಮೀಜಿಗಳು ಜನವರಿ 22ರಂದು ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠೆ ಆಗುವಾಗ ಅಯೋಧ್ಯೆಯಲ್ಲಿ ಖಂಡಿತವಾಗಿ ಇರುತ್ತಾರೆ, ಆತ್ಮ ಶರೀರಿಯಾಗಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ:  ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?

ರಾಜಮಾರ್ಗ ಅಂಕಣ: ಕುಳಕುಂದ ಶಿವರಾವ್ ಅಂದರೆ ಯಾರಿಗೂ ಥಟ್ಟನೆ ಪರಿಚಯ ಆಗಲಾರದು. ಆದರೆ ಕನ್ನಡದ ಶ್ರೇಷ್ಠ ಲೇಖಕ ನಿರಂಜನ ಎಂದರೆ ಎಲ್ಲರಿಗೂ ಪರಿಚಯ ಆಗುತ್ತದೆ. ಈ ವರ್ಷ ಅವರ ಜನ್ಮ ಶತಮಾನೋತ್ಸವ.

VISTARANEWS.COM


on

ರಾಜಮಾರ್ಗ ಅಂಕಣ
Koo

ಈ ವರ್ಷ (2024) ಲೇಖಕ ನಿರಂಜನರ ಜನ್ಮ ಶತಮಾನೋತ್ಸವ

Rajendra-Bhat-Raja-Marga-Main-logo

ಕುಳಕುಂದ ಶಿವರಾವ್ ಅಂದರೆ ಯಾರಿಗೂ ಥಟ್ಟನೆ ಪರಿಚಯ ಆಗಲಾರದು. ಆದರೆ ಕನ್ನಡದ ಶ್ರೇಷ್ಠ ಲೇಖಕ ನಿರಂಜನ (Niranjana) ಎಂದರೆ ಎಲ್ಲರಿಗೂ ಪರಿಚಯ ಆಗುತ್ತದೆ. ಅವರು 71 ವರ್ಷಗಳ ಕಾಲ ಬದುಕಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು. ಕನ್ನಡದ ಮೊದಲ ಮತ್ತು ಜನಪ್ರಿಯ ಅಂಕಣ ಲೇಖಕರು ಅಂದರೆ ಅದು ನಿರಂಜನ! (ರಾಜಮಾರ್ಗ ಅಂಕಣ)

ಬಾಲ್ಯದಿಂದಲೂ ಬರವಣಿಗೆ

1924 ಜೂನ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಳಕುಂದ ಎಂಬ ಗ್ರಾಮದಲ್ಲಿ ಜನಿಸಿದ ಅವರು ಸಣ್ಣ ಪ್ರಾಯದಲ್ಲಿ ಪತ್ರಿಕೆಗಳಿಗೆ ಬರೆಯಲು ತೊಡಗಿದರು. ಮೊದಲು ಕಂಠೀರವ ಪತ್ರಿಕೆ ಅವರಿಗೆ ಬರೆಯಲು ಅವಕಾಶ ಕೊಟ್ಟಿತು. ಮುಂದೆ ಕನ್ನಡದ ಎಲ್ಲ ಪ್ರಸಿದ್ಧ ಪತ್ರಿಕೆಗಳಿಗೆ ಅವರು ಅಂಕಣಗಳನ್ನು ಬರೆಯುತ್ತಾ ಹೋದರು. ರಾಷ್ಟ್ರಬಂಧು ಎಂಬ ಪತ್ರಿಕೆಯ ಪ್ರಮುಖ ಲೇಖಕರಾಗಿ ಅವರು ಸಾವಿರಾರು ಅಂಕಣಗಳನ್ನು ಬರೆದರು. ಅವರ ಅಂಕಣ ಲೇಖನಗಳು ಎಂಟು ಕೃತಿಗಳಾಗಿ ಹೊರಬಂದು ಅವರಿಗೆ ಅಪಾರ ಜನಪ್ರಿಯತೆ ಕೊಟ್ಟವು. ಅವರು ಕನ್ನಡದ ಮೊದಲ ಅಂಕಣಕಾರ ಎಂಬ ದಾಖಲೆಯೂ ನಿರ್ಮಾಣವಾಯಿತು.

ಪ್ರಭಾವಶಾಲಿ ಸಣ್ಣ ಕಥೆಗಳು

ಸಣ್ಣ ಕಥೆಗಳು ಅವರಿಗೆ ಇಷ್ಟವಾದ ಇನ್ನೊಂದು ಪ್ರಕಾರ. ಅವರ 156 ಸಣ್ಣ ಕಥೆಗಳ ಸಂಗ್ರಹವಾದ ‘ಧ್ವನಿ’ ಕನ್ನಡದ ಶ್ರೇಷ್ಠ ಕೃತಿ ಆಗಿದೆ. ಕಾರಂತರ ಸಂಪರ್ಕ, ಲೆನಿನ್ ಬಗ್ಗೆ ಓದು ಅವರನ್ನು ಬೆಳೆಸುತ್ತಾ ಹೋದವು.

ಬಾಪೂಜಿ ಬಾಪು ಅವರ ಅತ್ಯಂತ ಶ್ರೇಷ್ಟವಾದ ಸಣ್ಣ ಕಥೆ. ಗಾಂಧೀಜಿ ಬದುಕಿದ್ದಾಗಲೇ ಅವರು ಸತ್ತಂತೆ ಕಲ್ಪಿಸಿಕೊಂಡು ಬರೆದ ಕಥೆ ಇದು! ರಕ್ತ ಸರೋವರ ಕಾಶ್ಮೀರದ ದಾಲ್ ಸರೋವರದ ಹಿನ್ನೆಲೆಯಲ್ಲಿ ಅರಳಿದ ಅದ್ಭುತವಾದ ಕಥೆ.
ತಿರುಕಣ್ಣನ ಮತದಾನ ರಾಜಕೀಯ ವಿಡಂಬನೆಯ ಕಥೆ. ಅವರ ಸಣ್ಣ ಕಥೆಗಳು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಸಂಸ್ಕೃತಿಯಲ್ಲಿ ಅರಳಿದ ಕಥೆಗಳು. ಕನ್ನಡದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ನಂತರ ಇಷ್ಟೊಂದು ವೈವಿಧ್ಯಮಯವಾದ ಸಣ್ಣ ಕಥೆಗಳನ್ನು ಬರೆದವರು ನಿರಂಜನ ಮಾತ್ರ ಅಂದರೆ ಅದು ಅತಿಶಯೋಕ್ತಿ ಅಲ್ಲ!

ಕಾದಂಬರಿಕಾರರಾಗಿ ನಿರಂಜನರು

ಅವರು ಬರೆದದ್ದು ಒಟ್ಟು 21 ಕಾದಂಬರಿಗಳು. ವರ್ಗ ಸಂಘರ್ಷ ಮತ್ತು ಸಾಮಾಜಿಕ ಸಮಾನತೆ ಅವರ ಹೆಚ್ಚಿನ ಕಾದಂಬರಿಗಳ ಹೂರಣ. 700 ಪುಟಗಳ ಬೃಹತ್ ಕಾದಂಬರಿ ಮೃತ್ಯುಂಜಯ ಅದೊಂದು ಮಾಸ್ಟರಪೀಸ್ ಕಲಾಕೃತಿ. ವಿಮೋಚನೆ, ಬನಶಂಕರಿ, ಅಭಯ, ಚಿರಸ್ಮರಣೆ, ರಂಗಮ್ಮನ ವಟಾರ ಮೊದಲಾದ ಕಾದಂಬರಿಗಳು ಒಮ್ಮೆ ಓದಿದರೆ ಮರೆತುಹೋಗೋದಿಲ್ಲ. ಸುಳ್ಯ ಮತ್ತು ಮಡಿಕೇರಿ ಪ್ರದೇಶದಲ್ಲಿ ಕಲ್ಯಾಣಸ್ವಾಮಿ ಎಂಬಾತ ನಡೆಸಿದ ರಕ್ತಕ್ರಾಂತಿಯ ಹಸಿಹಸಿ ಕಥೆಯನ್ನು ಹೊಂದಿರುವ ಒಂದು ಶ್ರೇಷ್ಟವಾದ ಕಾದಂಬರಿ ಅವರು ಬರೆದಿದ್ದಾರೆ. ನಿರಂಜನರು ಬರೆದ ನಾಟಕಗಳೂ ಜನಪ್ರಿಯವಾಗಿವೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

ನಿರಂಜನ ಅವರ ಸಂಪಾದನಾ ಗ್ರಂಥಗಳು

ಇಂದು ಕನ್ನಡ ನಾಡು ನಿರಂಜನರನ್ನು ನೆನಪಿಟ್ಟುಕೊಳ್ಳಲೇ ಬೇಕಾದ ಮುಖ್ಯ ಕಾರಣ ಎಂದರೆ ಅವರ ಸಂಪಾದನೆಯ ಗ್ರಂಥಗಳು. 25 ಸಂಪುಟಗಳ ವಿಶ್ವ ಕಥಾಕೋಶ, ಜ್ಞಾನಗಂಗೋತ್ರಿ ಹೆಸರಿನ ಎಳೆಯರ ಏಳು ಸಂಪುಟಗಳ ವಿಶ್ವ
ಜ್ಞಾನಕೋಶ, ಪುರೋಗಾಮಿ ಪ್ರಕಾಶನದ ಎಂಟು ಪುಸ್ತಕಗಳು, ಜನತಾ ಸಾಹಿತ್ಯಮಾಲೆಯ 25 ಪುಸ್ತಕಗಳು….ಹೀಗೆ ಲೆಕ್ಕ ಮಾಡುತ್ತಾ ಹೋದರೆ ಸಾವಿರಾರು ಪುಟಗಳ ಅದ್ಭುತ ಜ್ಞಾನಕೋಶಗಳು ಅರಳಿದ್ದು ನಿರಂಜನರ ಸಂಪಾದಕತ್ವದಲ್ಲಿ! ಅವರ ಇಡೀ ಜೀವನವನ್ನು ನಿರಂಜನರು ಅಧ್ಯಯನ ಮತ್ತು ಬರವಣಿಗೆಯಲ್ಲಿಯೇ ಕಳೆದರು.

ಇಡೀ ಕುಟುಂಬವು ಸಾಹಿತ್ಯಕ್ಕೆ ಮೀಸಲು

ನಿರಂಜನರ ಪತ್ನಿ ಅನುಪಮಾ ನಿರಂಜನ ಕನ್ನಡದ ಸ್ಟಾರ್ ಕಾದಂಬರಿಕಾರರು. ಹೆಣ್ಣು ಮಕ್ಕಳಾದ ತೇಜಸ್ವಿನಿ ಮತ್ತು ಸೀಮಂತಿನಿ ಇಬ್ಬರೂ ಕನ್ನಡದ ಪ್ರಭಾವೀ ಲೇಖಕರಾಗಿ ಗುರುತಿಸಿಕೊಂಡವರು. ಹಾಗೆ ನಿರಂಜನರ ಇಡೀ ಕುಟುಂಬವು ಕನ್ನಡದ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿತು.

ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ದೊರೆತವು. 1995ರಲ್ಲಿ ಅವರು ನಮ್ಮನ್ನು ಅಗಲಿದರು. ಕನ್ನಡ ಸಾಹಿತ್ಯಲೋಕವನ್ನು ಚಂದವಾಗಿ ಬೆಳೆಸಿದ ನಿರಂಜನರ ಜನ್ಮ ಶತಮಾನೋತ್ಸವದ ಈ ವರ್ಷ ಕನ್ನಡ ಸಾರಸ್ವತ ಲೋಕ ಒಂದು ಸ್ಮರಣೀಯ ಕಾರ್ಯಕ್ರಮವನ್ನು ಅವರ ನೆನಪಿನಲ್ಲಿ ಮಾಡಬೇಕು ಎನ್ನುವುದು ನಮ್ಮೆಲ್ಲರ ಆಗ್ರಹ ಆಗಬೇಕು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

Continue Reading

ಅಂಕಣ

Guru Purnima 2024: ಗುರು ಎಂದರೆ ವ್ಯಕ್ತಿಯಲ್ಲ, ಅದ್ಭುತವಾದ ಶಕ್ತಿ!

Guru Purnima 2024: ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು, ಗುರುಗೋವಿಂದ ಭಟ್ಟರು-ಸಂತ ಶಿಶುನಾಳ ಶರೀಫ , ರಾಮಕೃಷ್ಣ ಪರಮಹಂಸರು- ಸ್ವಾಮಿ ವಿವೇಕಾನಂದರು, ಬ್ರಹ್ಮಚೈತನ್ಯ ಗೊಂದಾವಲಿಕರ ಮಹಾರಾಜ-ಬ್ರಹ್ಮಾನಂದ ಮಹಾರಾಜ… ಹೀಗೆ ಗುರು-ಶಿಷ್ಯರಿಗೆ ಪರಂಪರೆಗಳ ಐತಿಹ್ಯವಿದೆ.

VISTARANEWS.COM


on

Guru Purnima 2024
Koo

ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ
(ಲೇಖಕರು, ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು ಹಾಗೂ ಜ್ಯೋತಿಷಿಗಳು)

ಆಷಾಢ ಮಾಸ ಶುಕ್ಲ ಪಕ್ಷದಲ್ಲಿ ಬರುವ “ಕಡ್ಲಿಗರ ಹುಣ್ಣಿಮೆ”ಯನ್ನು ನಾವು ಆಚರಿಸ್ಪಡುವ, ಶ್ರೇಷ್ಠವಾದ ಪರ್ವವೆಂದರೆ ಅದು “ಗುರು ಪೂರ್ಣಿಮೆ”.
ಈ ದಿನ ನಾವು ನಂಬಿದ ನಮ್ಮಲ್ಲಿಯ ಅಂಧಕಾರವನ್ನು ತೊಲಗಿಸಿ ಜ್ಞಾನ ಸಾಕ್ಷಾತ್ಕಾರ ಮಾಡಿಸಿದ ನಮ್ಮ ಗುರುಗಳಿಗೆ ವಂದನೆ (Guru Purnima 2024) ಸಲ್ಲಿಸುವ ದಿನ. ಆ ಗುರುವನ್ನು ನೆನೆದು ಅವರ ಮಹತ್ವವನ್ನು ಸಾರುವ ದಿನ. ಗುರುಗಳು ನಮಗೆ ನಮ್ಮ ಜೀವನಕ್ಕೆ ಸರಿಯಾದ ಮಾರ್ಗ ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ ದಿಕ್ಸೂಚಿ,ದಾರಿದೀಪ. ಪರಮಾತ್ಮನ, ಪರಮಾರ್ಥದ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮಜ್ಯೋತಿಯನ್ನು ಜ್ಞಾನವೆಂಬ ತೈಲ ಹಾಕಿ ಬೆಳುಗುವಂತೆ ಮಾಡಿ ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಆಧ್ಯಾತ್ಮದ ಜತೆಗೆ ಲೌಕಿಕ ಪ್ರಪಂಚದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟವ ತನಕ ಸಹಾಯ ಮಾಡುವವನೇ “ ಶ್ರೇಷ್ಠಗುರು”.

ಅಲೆದು ಅಲೆದು ಹುಡಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವುಗಳೆಲ್ಲರೂ ಆ ಗುರುವಿನ ಮುಖಾಂತರವೇ ಪರಮಾತ್ಮನ ಅರಿವು, ಪ್ರಪಂಚದ ಅರಿವು, ಅರಿಯಬೇಕಾಗಿರುವುದರಿಂದ, ನಾವು ಪ್ರತಿ ಆಷಾಢ ಮಾಸದ ಈ ಪೌರ್ಣಿಮೆಯಂದು ಮಾತ್ರ ಗುರುವನ್ನು ಪೂಜಿಸದೆ.. ಅನು ದಿನ, ಅನು ಕ್ಷಣ, ಗುರುವನ್ನು ನಮ್ಮ ಅಂತರಂಗದಲ್ಲೇ ಪ್ರತಿಷ್ಠಾಪಿಸಿ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲ ಎಂದು ಅಂತಹ ಗುರುವಿಗೆ ಶರಣಾದಾಗ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಫಲಪ್ರದವಾಗುತ್ತದೆ.

ಉಪನಿಷತ್ತಿನಲ್ಲಿ ಗುರು

ಉಪನಿಷತ್ತಿನಲ್ಲಿ ಗುರು ಎಂಬುದನ್ನು ಈ ರೀತಿಯಾಗಿ ವಿವರಿಸಿದ್ದಾರೆ. “ಗು” ಎಂದರೆ ಅಂಧಕಾರವೆಂದು “ರು” ಎಂದರೆ ದೂರೀಕರಿಸುವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಯ ಕಡೆಗೆ ನಡೆಸುವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ನಿಜವಾದ ಗುರು ಎಂದು ಅರ್ಥೈಸಬಹುದೇನೋ ಎಂಬ ಅಭಿಪ್ರಾಯ.

ಆದಿಗುರು ಶ್ರೀ ಶಂಕರಭಗವತ್ಪಾದಚಾರ್ಯರು ಗುರು ಮಹಿಮೆ ಕುರಿತು ಹೀಗೆ ಸ್ತೋತ್ರವನ್ನು ಹೇಳಿದ್ದಾರೆ:

ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||

ಗುರುವು ತ್ರೀಮೂರ್ತಿ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ. ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಲ್ಪಟಿದೆ :

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ।
ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ॥
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ।
ಚಕ್ಷುರುನ್ಮೀಲಿತಂ ಯೇನ
ತಸ್ಮೈ ಶ್ರೀ ಗುರವೇ ನಮಃ॥

ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳ್ಗಿಗೆ ಬೇಕಾದ ಸೋಪಾನವನ್ನು ಹತ್ತಿಸುವ ಹಾಗೂ ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.
ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ ಬಂದಿದ್ದಾರೆ..

ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ।
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ॥

ಅಂದರೆ ಗುರುವಿಗಿಂತ ಮೀರಿದ ತತ್ವ, ತಪಸ್ಸು ಯಾವುದೂ ಇಲ್ಲ. ಜ್ಞಾನವೆಂಬ ದಾರಿದೀಪವಾಗಿರುವ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ. ಶಾಶ್ವತವಾದ ಆನಂದವನ್ನು ಪಡೆಯುವುದು ಆ ಸದ್ಗುರುವಿನಿಂದಲೆ ಮಾತ್ರವೇ ಸಾಧ್ಯ ಎಂದು ಶ್ರೀ ಶಂಕರಾಚಾರ್ಯರು ತಮ್ಮ “ಗುರ್ವಷ್ಟಕಮ್” ಎಂಬ ಸ್ತೂತ್ರದಲ್ಲಿ ಹೀಗೆ ಹೇಳಿದ್ದಾರೆ :
ಶರೀರಂ ಸುರೂಪಂ ತಥಾ ವಾ ಕಲತ್ರಂ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ।

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್।।

ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ, ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ ಎಂದು.ಏನೆಲ್ಲ ಸಾಧಿಸಿದ್ದರೂ, ತ್ಯಜಿಸಿದ್ದರೂ,ಗುರುವಿನ ಕರುಣೆಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಯುತ್ತದೆ.ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟಸಾದ್ಯ ಎನ್ನುತ್ತಾ ಗುರುವಿನ ಮಹತ್ವನ್ನು ವಿವರಿಸುತ್ತಾರೆ ಆಚಾರ್ಯರು.

ನಮ್ಮ ಈ ಸನಾತನ ಪರಂಪರೆಯಲ್ಲಿ ಈಗಿರುವ “ಗುರುವಿನ ಗುರುವಿಗೆ ಪರಮಗುರು”ಎಂದೂ, “ಪರಮ ಗುರುವಿನ ಗುರುವನ್ನು ಪರಾಪರ ಗುರು”ಎಂದೂ,”ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು”ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ಯಂದು ಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ. ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರ ವಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನ ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜತೆಗೇ “ಗುರು ಪೂರ್ಣಿಮೆ”ಯಂದು ಪೂಜಿಸುತ್ತೇವೆ. ಲೋಕಗುರು, ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು. ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ. “ಗುರು” ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬ ಚೈತನ್ಯದಾಯಕವಾಗಿರುತ್ತದೆ.

ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ ಸಿದ್ಧ ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ. ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ,ಗುರುಗೋವಿಂದ ಭಟ್ಟರು-ಸಂತ ಶಿಶುನಾಳ ಶರೀಫ , ರಾಮಕೃಷ್ಣ ಪರಮಹಂಸರು- ಸ್ವಾಮಿ ವಿವೇಕಾನಂದರು,ಬ್ರಹ್ಮಚೈತನ್ಯ ಗೊಂದಾವಲಿಕರ ಮಹಾರಾಜ-ಬ್ರಹ್ಮಾನಂದ ಮಹಾರಾಜ… ಇವರೆಲ್ಲ ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.

ಗುರುವಿನ ಬಗೆಗೆ ವರ್ಣಿಸುತ್ತಾ ಹೊರಟರೆ ಅದು ಸಾಗರದಷ್ಟು ಆಳ, ಅಗಲ. ಆಗಸದಷ್ಟು ವಿಶಾಲ, ವಿಸ್ತಾರ. ಗುರು ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಅದ್ಬುತ ಶಕ್ತಿ ಎಂದು ಅರ್ಥೈಸಿ ತಿಳಿದುಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ….

ಇದನ್ನೂ ಓದಿ: Guru Purnima 2024: ಭಾರತದ ಮಹೋನ್ನತ ಕ್ರೀಡಾ ತಾರೆಗಳನ್ನು ಸೃಷ್ಟಿಸಿದ 6 ‘ಗುರು’ಗಳಿವರು

Continue Reading

ಕ್ರೀಡೆ

ರಾಜಮಾರ್ಗ ಅಂಕಣ: ರಾಹುಲ್ ದ್ರಾವಿಡ್ ಎಂಬ ಮಹಾಗುರುವಿಗೆ ಸಲಾಂ; ಭಾರತರತ್ನ ನೀಡಲು ಇದು ಸಕಾಲ

ರಾಜಮಾರ್ಗ ಅಂಕಣ: ಏಕದಿನದ ವಿಶ್ವಕಪನಲ್ಲಿ ಈ ಬಾರಿ ಭಾರತ ಫೈನಲ್ ತನಕ ಹೋದದ್ದು, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೂಟದಲ್ಲಿ ಕೂಡ ಫೈನಲ್ ತನಕ ಸಾಗಿ ಬಂದದ್ದು ದ್ರಾವಿಡ್ ಅವರ ಕೋಚಿಂಗ್ ಬಲದಿಂದ ಎನ್ನುವುದು ನೂರಕ್ಕೆ ನೂರು ನಿಜ.

VISTARANEWS.COM


on

ರಾಜಮಾರ್ಗ ಅಂಕಣ
Koo
Rajendra-Bhat-Raja-Marga-Main-logo

ಭಾರತೀಯ ಕ್ರಿಕೆಟ್ ಇತಿಹಾಸವನ್ನು ಎಲ್ಲಿಂದ ಬರೆಯಲು ಆರಂಭ ಮಾಡಿದರೂ ರಾಹುಲ್ ದ್ರಾವಿಡ್(Rahul Dravid) ಹೆಸರು ಉಲ್ಲೇಖ ಮಾಡದೆ ಅದು ಮುಗಿದುಹೋಗುವುದೇ ಇಲ್ಲ! ಒಬ್ಬ ಜಂಟಲ್ ಮ್ಯಾನ್ ಕ್ರಿಕೆಟರ್ ಆಗಿ, ಕ್ಯಾಪ್ಟನ್ ಆಗಿ, ಕೋಚ್ ಆಗಿ ಭಾರತೀಯ ಕ್ರಿಕೆಟನ್ನು ಶ್ರೀಮಂತಗೊಳಿಸಿದ ಅವರಿಗೆ ಭಾರತರತ್ನ ಪ್ರಶಸ್ತಿ(bharatha ratna award) ನೀಡಲು ಇದು ಸಕಾಲ ಎಂದು ನನಗೆ ಅನ್ನಿಸುತ್ತದೆ.

ಸ್ಮರಣೀಯ ಇನಿಂಗ್ಸ್​ಗಳು

ದ್ರಾವಿಡ್ ಎಂದಿಗೂ ದಾಖಲೆಗಾಗಿ ಅಡಿದ್ದಿಲ್ಲ. ಅದು ಅವರ ಸ್ವಭಾವ ಕೂಡ ಅಲ್ಲ. ಪರಿಸ್ಥಿತಿಗೆ ಹೊಂದಿಕೊಂಡು ಬ್ಯಾಟ್ ಬೀಸುವ ಆತ ಟೀಮ್ ಇಂಡಿಯಾ ಬಿಕ್ಕಟ್ಟಿನಲ್ಲಿ ಇದ್ದಾಗ ತಡೆಗೋಡೆ ಆಗಿ ನಿಂತಿರುವ ನೂರಾರು ಉದಾಹರಣೆಗಳು ದೊರೆಯುತ್ತವೆ.


1). 2003ರಲ್ಲಿ ಅಡಿಲೇಡ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸಗಳಲ್ಲಿ ತಾಳ್ಮೆಯ ಪರ್ವತವಾಗಿ ನಿಂತು ಆಡಿದ ದ್ರಾವಿಡ್ ಒಟ್ಟು 305 ರನ್ ಪೇರಿಸಿದ್ದರು. ಅದಕ್ಕಿಂತ ಹೆಚ್ಚಾಗಿ ಅವರು ಕ್ರೀಸ್ ಆಕ್ರಮಿಸಿಕೊಂಡು ನಿಂತದ್ದು 835 ನಿಮಿಷ! 20 ವರ್ಷಗಳ ನಂತರ ಅಡಿಲೇಡ್ ಮೈದಾನದಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯವನ್ನು ದ್ರಾವಿಡ್ ಕಾರಣಕ್ಕೆ ಗೆದ್ದಿತ್ತು. ಆಗ ಭಾರತದ ಕ್ಯಾಪ್ಟನ್ ಆಗಿದ್ದ ಸೌರವ್ ಗಂಗೂಲಿ ಹೇಳಿದ ಮಾತು – ಅವನು ದೇವರಂತೆ ಆಡಿದ ಎಂದು!

2). 2001ರ ಕೊಲ್ಕತ್ತಾ ಟೆಸ್ಟ್ ಪಂದ್ಯ ನೆನಪು ಮಾಡಿಕೊಳ್ಳಿ. ಫಾಲೋ ಆನ್ ಪಡೆದ ನಂತರ ಯಾವುದೇ ತಂಡವು ಪಂದ್ಯವನ್ನು ಗೆದ್ದ ಕೇವಲ ಮೂರನೇ ಉದಾಹರಣೆ ಅದು! ಒಂದು ಕಡೆಯಿಂದ ವಿವಿಎಸ್ ಲಕ್ಷ್ಮಣ್, ಇನ್ನೊಂದೆಡೆಯಲ್ಲಿ ಇದೇ ದ್ರಾವಿಡ್ ಐದನೇ ವಿಕೆಟಿಗೆ 376ರನ್ ಜೊತೆಯಾಟ ನೀಡಿದ್ದು, ಆಸೀಸ್ ಆಕ್ರಮಣಕಾರಿ ಬೌಲಿಂಗ್ ಎದುರಿಸಿ ಬಂಡೆಯಂತೆ ನಿಂತದ್ದು, ಕೊನೆಗೆ ಆ ಟೆಸ್ಟ್ ಪಂದ್ಯ ಭಾರತ ಗೆದ್ದದ್ದು ಭಾರತೀಯರಿಗೆ ಮರೆತು ಹೋಗಲು ಸಾಧ್ಯವೇ ಇಲ್ಲ!


3). 2004ರ ಪಾಕ್ ಪ್ರವಾಸ ನೆನಪು ಮಾಡಿಕೊಳ್ಳಿ. ರಾವಲ್ಪಿಂಡಿ ಟೆಸ್ಟ್ ಪಂದ್ಯದಲ್ಲಿ ದ್ರಾವಿಡ್ ಒಟ್ಟು 12 ಗಂಟೆ, 20 ನಿಮಿಷ ಲಂಗರು ಹಾಕಿ ಬೆವರು ಬಸಿದರು. 270 ರನ್ನುಗಳ ಆ ವಿರೋಚಿತ ಇನ್ನಿಂಗ್ಸ್ ಭಾರತಕ್ಕೆ ಪಾಕ್ ವಿರುದ್ಧ ಟೆಸ್ಟ್ ಸರಣಿಯನ್ನು ಗೆಲ್ಲಿಸಿಕೊಟ್ಟಿತು! ಶೋಯೆಬ್ ಅಕ್ತರ್ ಬೌನ್ಸರಗಳನ್ನು ಅವರು ಅಷ್ಟೇ ತಾಳ್ಮೆಯಿಂದ ಉತ್ತರಿಸಿದ್ದು ನಮಗೆ ಮರೆತು ಹೋಗುವುದಿಲ್ಲ.


4). 2011ರ ಇಂಗ್ಲೆಂಡ್ ಪ್ರವಾಸದ ಹೀರೋ ಅಂದರೆ ಅದು ದ್ರಾವಿಡ್! ಮೂರು ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕ ಸೇರಿ 446ರನ್ ಪೇರಿಸಿದ್ದು ಅದು ಮಿರಾಕಲ್! ಓವಲ್ ಟೆಸ್ಟ್ ಪಂದ್ಯದಲ್ಲಿ ಅವರು ಇನ್ನಿಂಗ್ಸ್ ಆರಂಭ ಮಾಡಿ ಕೊನೆಯವರೆಗೂ ನಿಂತು ಔಟ್ ಆಗದೆ ಹಿಂದೆ ಬಂದ ಇನ್ನಿಂಗ್ಸ್ ನೆನಪು ಮಾಡಿ.

ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಬದುಕಿನಲ್ಲಿ ಇಂತಹ ನೂರಾರು ಇನ್ನಿಂಗ್ಸ್ ದೊರೆಯುತ್ತವೆ. ಆಗೆಲ್ಲ ನನಗೆ ಅವರು ಮಂಜುಗಡ್ಡೆಯ ಪರ್ವತವಾಗಿ ಕಂಡುಬರುತ್ತಾರೆ.

ಇದನ್ನೂ ಓದಿ ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

ಹಾಗೆಂದು ದ್ರಾವಿಡ್ ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತ ಎಂದು ನಾವು ಬ್ರಾಂಡ್ ಮಾಡುವ ಅಗತ್ಯ ಇಲ್ಲ. ವಿಶ್ವದಾಖಲೆಯ ಎರಡು ಮಹೋನ್ನತ ODI ಪಂದ್ಯಗಳಲ್ಲಿ ಜೊತೆಯಾಟ ನಿಭಾಯಿಸಿ ಭಾರತವನ್ನು ಗೆಲ್ಲಿಸಿದ್ದು ಇದೇ ದ್ರಾವಿಡ್ ಅಲ್ಲವೇ!


ದ್ರಾವಿಡ್ ಒಬ್ಬ ಮಹಾಗುರು ಆಗಿ…

2018ರಲ್ಲಿ ಭಾರತದ ಅಂಡರ್ 19 ಟೀಮನ್ನು ವಿಶ್ವಕಪ್ ಗೆಲ್ಲುವಂತೆ ಮಾಡಿದ್ದು ಇದೇ ದ್ರಾವಿಡ್. ಯಾವುದೇ ಕ್ರಿಕೆಟ್ ಆಟಗಾರನ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ತಿದ್ದಿ ತೀಡಿ ಬೆಳಕಿಗೆ ತರುವ ಕೆಲಸದಲ್ಲಿ ಅವರಿಗೆ ಅವರೇ ಸಾಟಿ. ಸಂಜು ಸ್ಯಾಮ್ಸನ್ ಎಂಬ ಹೋರಾಟಗಾರ ರೂಪುಗೊಂಡಿದ್ದು ದ್ರಾವಿಡ್ ಗರಡಿಯಲ್ಲಿ. ಅಂಡರ್ 19 ವಿಶ್ವಕಪ್ ಗೆದ್ದಾಗ ಅವರಿಗೆ ಬಿಸಿಸಿಐ 50 ಲಕ್ಷ ನಗದು ಬಹುಮಾನ ಪ್ರಕಟಿಸಿತ್ತು. ಆಗ ತನ್ನ ಸಹಾಯಕ ಸಿಬ್ಬಂದಿಗೆ ಕೊಟ್ಟಷ್ಟೇ ತನಗೆ ಸಾಕು, 20 ಲಕ್ಷ ಮಾತ್ರ ಕೊಡಿ ಎಂದು ದ್ರಾವಿಡ್ ಉದಾರತೆ ಮೆರೆದಿದ್ದರು!

ಈ ಬಾರಿ ಕೂಡ ಭಾರತ 2024ರ ವಿಶ್ವಕಪ್ ಗೆಲ್ಲುವಲ್ಲಿ ಅವರ ಕೋಚಿಂಗ್ ಪಾತ್ರವೇ ಮುಖ್ಯ ಎಂದು ಎಲ್ಲರಿಗೂ ಗೊತ್ತಿದೆ. ಹೆಚ್ಚು ಎಕ್ಸಪರಿಮೆಂಟ್ ಮಾಡಲು ಹೋಗದೆ ಇರುವ ಆಟಗಾರರ ಮೇಲೆಯೇ ವಿಶ್ವಾಸ ಇಟ್ಟು ಧೈರ್ಯ ತುಂಬುವ ಕೆಲಸ ದ್ರಾವಿಡ್ ಮಾಡಿದ್ದರು. ಬಿಸಿಸಿಐ ಅವರಿಗೆ 5 ಕೋಟಿ ನಗದು ಬಹುಮಾನ ಕೊಟ್ಟದ್ದನ್ನು ನಿರಾಕರಿಸಿ ತನ್ನ ಸಹಾಯಕರಿಗೆ ಕೊಟ್ಟ ಎರಡೂವರೆ ಕೋಟಿ ಸಾಕು ಎಂದು ಮತ್ತೆ ದುಡ್ಡು ಹಿಂದಿರುಗಿಸಿದ್ದಾರೆ!


ಒಂದೆರಡು ವರ್ಷಗಳ ಹಿಂದೆ ಬೆಂಗಳೂರು ವಿವಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದಾಗ ಅದನ್ನು ನಯವಾಗಿ ನಿರಾಕರಿಸಿದವರು ಇದೇ ದ್ರಾವಿಡ್! ಅದಕ್ಕೆ ಅವರು ಕೊಟ್ಟ ಕಾರಣವೂ ಅದ್ಭುತವಾಗಿ ಇತ್ತು. ‘ ಈ ಡಾಕ್ಟರೇಟ್ ಪದವಿ ಪಡೆಯಲು ನನ್ನ ಹೆಂಡತಿ ಏಳು ವರ್ಷಗಳ ಕಾಲ ಓದಿ ಸಂಶೋಧನೆ ಮಾಡಿದ್ದಾರೆ. ನಾನು ಯಾವ ಸಂಶೋಧನೆಯೂ ಮಾಡಿಲ್ಲ. ಮತ್ತೆ ಯಾಕೆ ನನಗೆ ಗೌರವ ಡಾಕ್ಟರೇಟ್?’

ಏಕದಿನದ ವಿಶ್ವಕಪನಲ್ಲಿ ಈ ಬಾರಿ ಭಾರತ ಫೈನಲ್ ತನಕ ಹೋದದ್ದು, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೂಟದಲ್ಲಿ ಕೂಡ ಫೈನಲ್ ತನಕ ಸಾಗಿ ಬಂದದ್ದು ದ್ರಾವಿಡ್ ಅವರ ಕೋಚಿಂಗ್ ಬಲದಿಂದ ಎನ್ನುವುದು ನೂರಕ್ಕೆ ನೂರು ನಿಜ.


ಇದೀಗ ಭಾರತೀಯ ಕ್ರಿಕೆಟ್ ತಂಡದ ಕೋಚಿಂಗ್ ಹುದ್ದೆಯಿಂದ ಅವರು ಕೆಳಗೆ ಇಳಿದಿದ್ದಾರೆ. ಭಾರತವನ್ನು ಕಿಕೆಟ್ ಜಗತ್ತಿನಲ್ಲಿ ಹೊಳೆಯುವಂತೆ ಮಾಡಿದ್ದಾರೆ. 20 ವರ್ಷ ಭಾರತಕ್ಕಾಗಿ ಆಡಿದ್ದಾರೆ. ಅಂತಹ ಮಹಾಗುರು ಭಾರತರತ್ನ ಪ್ರಶಸ್ತಿಗೆ ಅತ್ಯಂತ ಅರ್ಹರಿದ್ದಾರೆ. ಕನಿಷ್ಠ ಪಕ್ಷ ಕರ್ನಾಟಕ ಸರಕಾರ ಅವರನ್ನು ದೊಡ್ಡದಾಗಿ ಸನ್ಮಾನಿಸುವ ಅಗತ್ಯ ಕೂಡ ಇದೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

ರಾಜಮಾರ್ಗ ಅಂಕಣ: ಜಗತ್ತು ಅವನನ್ನು ‘ವೀಲ್ ಚೇರ್ ಮೇಲಿನ ಕೋಲ್ಮಿಂಚು’ ಎಂದೇ ಕರೆಯುತ್ತದೆ. ಆತನು ಇಂಗ್ಲೆಂಡ್ ದೇಶದವನು. 2015ರಿಂದ ವೀಲ್ ಚೇರ್ ಮೇಲೆ ಕುಳಿತು ಟೆನ್ನಿಸ್ ಆಡುವ ಆತನ ಆಟಕ್ಕೆ ಆತನೇ ಸಾಟಿ. ಕೋರ್ಟ್ ಇಡೀ ಜಿಂಕೆಯಂತೆ ಓಡಾಡುವ, ಅಷ್ಟೇ ವೇಗವಾಗಿ ರಾಕೆಟ್ ಬೀಸುವ ಆಲ್ಫಿ ಸೋತ ಉದಾಹರಣೆಯೇ ನಮಗೆ ಸಿಗುವುದಿಲ್ಲ.

VISTARANEWS.COM


on

ರಾಜಮಾರ್ಗ ಅಂಕಣ alphe hevett
Koo

ಆತ ಗೆದ್ದಿರುವುದು ಬರೋಬ್ಬರಿ 30 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಗ್ರಾನ್‌ಸ್ಲಾಂ ಟೆನ್ನಿಸ್ ಕೂಟಗಳಲ್ಲಿ ವಿಂಬಲ್ಡನ್ನಿಗೆ ಅದರದ್ದೇ ಆದ ಘನತೆಯು ಇದೆ. ಜಗತ್ತಿನ ಮಹಾ ಟೆನ್ನಿಸ್ ದೈತ್ಯರು ಸೆಣಸುವ ಮಹತ್ವದ ಕೂಟ ಅದು. ಆ ಟೆನಿಸ್ ಕೂಟದ ಸೆಂಟರ್ ಕೋರ್ಟಿನಲ್ಲಿ ನಡೆಯುವ ಪ್ರತೀ ಪಂದ್ಯವೂ ರೋಚಕವೇ ಹೌದು. ಅದೇ ಹೊತ್ತಿಗೆ ಬೇರೆ ಬೇರೆ ಸಮಾನಾಂತರ ಕೋರ್ಟುಗಳಲ್ಲಿ, ಬೇರೆ ಬೇರೆ ಹೊತ್ತಲ್ಲಿ ನಡೆಯುವ ಇನ್ನೂ ಹಲವು ಸ್ಪರ್ಧೆಗಳು ಅಷ್ಟಾಗಿ ಪ್ರಚಾರ ಪಡೆಯುವುದಿಲ್ಲ. ಮಾಧ್ಯಮಗಳೂ ಆ ಕಡೆಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ಅಲ್ಲಿನ ಸ್ಪರ್ಧೆಯು ಜೋರಾಗಿಯೇ ಇರುತ್ತದೆ. ಅವುಗಳಲ್ಲಿ ಒಂದು ವಿಭಾಗವೆಂದರೆ ವೀಲ್ ಚೇರ್ ಟೆನ್ನಿಸ್ ಕೂಟ! ಜಗತ್ತಿನ ಮೂಲೆ ಮೂಲೆಯಿಂದ ಬರುವ ನೂರಾರು ವೀಲ್ ಚೇರ್ ಟೆನ್ನಿಸ್ ಆಟಗಾರರು ಅಲ್ಲಿ ಪ್ರಶಸ್ತಿಗಾಗಿ ಗುದ್ದಾಡುತ್ತಾರೆ!

ಈ ಬಾರಿ ವಿಂಬಲ್ಡನ್ ಕೂಟದ ವೀಲ್ ಚೇರ್ ವಿಭಾಗದ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದಿರುವುದು ಇದೇ ಆಲ್ಫಿ ಹೆವೆಟ್ಟ್ (ALFI HEVETT).

ಆಲ್ಫಿ ಹೆವೆಟ್ಟ್ – ಈಗ ವಿಶ್ವದ ನಂಬರ್ 1 ಆಟಗಾರ!

ಜಗತ್ತು ಅವನನ್ನು ‘ವೀಲ್ ಚೇರ್ ಮೇಲಿನ ಕೋಲ್ಮಿಂಚು’ ಎಂದೇ ಕರೆಯುತ್ತದೆ. ಆತನು ಇಂಗ್ಲೆಂಡ್ ದೇಶದವನು. 2015ರಿಂದ ವೀಲ್ ಚೇರ್ ಮೇಲೆ ಕುಳಿತು ಟೆನ್ನಿಸ್ ಆಡುವ ಆತನ ಆಟಕ್ಕೆ ಆತನೇ ಸಾಟಿ. ಕೋರ್ಟ್ ಇಡೀ ಜಿಂಕೆಯಂತೆ ಓಡಾಡುವ, ಅಷ್ಟೇ ವೇಗವಾಗಿ ರಾಕೆಟ್ ಬೀಸುವ ಆಲ್ಫಿ ಸೋತ ಉದಾಹರಣೆಯೇ ನಮಗೆ ಸಿಗುವುದಿಲ್ಲ. ಇಂದು ಅವನು ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ವಿಭಾಗಗಳಲ್ಲಿ ವಿಶ್ವದ ನಂಬರ್ 1 ಆಟಗಾರ ಎಂದರೆ ನಾವು, ನೀವು ನಂಬಲೇ ಬೇಕು. ಕಾಲುಗಳಲ್ಲಿ ಇಲ್ಲದ ತ್ರಾಣವನ್ನು ಆತನು ತನ್ನ ಅಗಲವಾದ ಭುಜಗಳಲ್ಲಿ ಬಸಿದು ರಾಕೆಟ್ ಬೀಸುವ ಆತನ ದೈತ್ಯ ಶಕ್ತಿಗೆ ನೀವು ಖಂಡಿತವಾಗಿ ಬೆರಗಾಗುತ್ತೀರಿ!

ಬಾಲ್ಯದಲ್ಲಿ ಕಾಡಿದ ವಿಚಿತ್ರ ಹೆಸರಿನ ಕಾಯಿಲೆ

1997ರ ಡಿಸೆಂಬರ್ ತಿಂಗಳಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿದ ಆಲ್ಫಿ ಆಗ ಆರೋಗ್ಯಪೂರ್ಣವಾಗಿ ಇದ್ದವನು. ಮುಂದೆ ಆರು ವರ್ಷ ಪ್ರಾಯದಲ್ಲಿ Congential Heart defect ಎಂಬ ವಿಚಿತ್ರ ಕಾಯಿಲೆಯು ಆತನ ಉತ್ಸಾಹವನ್ನು ಖಾಲಿ ಮಾಡಿತು. ಆರು ತಿಂಗಳ ನಂತರ ಸರ್ಜರಿ ಕೂಡ ನಡೆಯಿತು. ಪರಿಣಾಮವಾಗಿ ಆತನ ಎರಡೂ ಕಾಲುಗಳ ಶಕ್ತಿ ಉಡುಗಿ ಹೋಗಿ ಆತನು ವೀಲ್ ಚೇರ್ ಮೇಲೆ ಓಡಾಡಬೇಕಾಯಿತು. ಆರಂಭದಲ್ಲಿ ಆಲ್ಫಿ ಸ್ವಲ್ಪ ಮಟ್ಟದಲ್ಲಿ ವಿಚಲಿತರಾದನು. ಆದರೆ ಅದಮ್ಯವಾದ ಜೀವನೋತ್ಸಾಹ ಅವನನ್ನು ಟೆನ್ನಿಸ್ ಕೋರ್ಟಿಗೆ ಎಳೆದು ತಂದಿತು. ವೀಲ್ ಚೇರ್ ಮೇಲೆ ಇಡೀ ಕೋರ್ಟ್ ಓಡಾಡುತ್ತಾ ರಾಕೆಟ್ ಬೀಸುವುದು ಸುಲಭ ಅಲ್ಲ. ಅದಕ್ಕೆ ತುಂಬಾ ಏಕಾಗ್ರತೆ, ದೇಹದ ಬ್ಯಾಲೆನ್ಸ್, ರಟ್ಟೆಗಳ ತ್ರಾಣ, ಆತ್ಮವಿಶ್ವಾಸ ಎಲ್ಲವೂ ಬೇಕು. ಸತತವಾದ ಪರಿಶ್ರಮದಿಂದ ಆಲ್ಫಿ ಈ ಎಲ್ಲ ಸವಾಲುಗಳನ್ನು ಗೆಲ್ಲುತ್ತಾ ಹೋದರು.

ಗೆದ್ದದ್ದು 30 ಗ್ರಾನ್‌ಸ್ಲಾಮ್ ಟ್ರೋಫಿಗಳನ್ನು!

2015ರಿಂದ ಇಂದಿನವರೆಗೂ ತಾನು ಆಡಿದ ಪ್ರತೀಯೊಂದು ಗ್ರಾನಸ್ಲಾಮ್ ಕೂಟಗಳಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ 30 ವಿಶ್ವಮಟ್ಟದ ಪ್ರಶಸ್ತಿಗಳನ್ನು ಆತ ಗೆದ್ದಿದ್ದಾನೆ ಎಂದರೆ ನೀವು ಮೂಗಿನ ಮೇಲೆ ಬೆರಳು ಇಡುತ್ತೀರಿ! ಅದರಲ್ಲಿ 9 ಸಿಂಗಲ್ಸ್ ಪ್ರಶಸ್ತಿಗಳು. 21 ಡಬಲ್ಸ್ ಪ್ರಶಸ್ತಿಗಳು!

ಮೂರು ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ, ಒಂದು ಬಾರಿ ಆಸ್ಟ್ರೇಲಿಯನ್ ಒಪನ್, ಒಂದು ಬಾರಿ ವಿಂಬಲ್ಡನ್, ನಾಲ್ಕು ಬಾರಿ ಯು ಎಸ್ ಓಪನ್, ಮೂರು ಬಾರಿ ಮಾಸ್ಟರ್ಸ್ ಓಪನ್ ಸಿಂಗಲ್ಸ್ ಪ್ರಶಸ್ತಿ ಆತನು ಗೆದ್ದಾಗಿದೆ.

ಡಬಲ್ಸ್ ಸ್ಪರ್ಧೆಯಲ್ಲಿ ಆತನಿಗೆ ಆತನೇ ಉಪಮೆ!

ಡಬಲ್ಸನಲ್ಲಿ ಐದು ಬಾರಿ ಆಸ್ಟ್ರೇಲಿಯನ್ ಓಪನ್, ಐದು ಬಾರಿ ಫ್ರೆಂಚ್ ಓಪನ್, ಆರು ಬಾರಿ ವಿಂಬಲ್ಡನ್, ಐದು ಬಾರಿ ಯು. ಎಸ್. ಓಪನ್ ಪ್ರಶಸ್ತಿಗಳನ್ನು ಆಲ್ಫಿ ಗೆದ್ದಿರುವುದು ಬಹಳ ದೊಡ್ಡ ಸಾಧನೆ. ಜಗತ್ತಿನ ಬೇರೆ ಯಾವ ಟೆನ್ನಿಸ್ ಆಟಗಾರ ಕೂಡ ಇಷ್ಟೊಂದು ಪ್ರಶಸ್ತಿಗಳ ಗೊಂಚಲು ಗೆದ್ದಿರುವ ನಿದರ್ಶನ ಇಲ್ಲ! ಪಾರಾ ಒಲಿಂಪಿಕ್ ಕೂಟದಲ್ಲಿ ಕೂಡ ಆತ ಬೆಳ್ಳಿಯ ಪದಕ ಗೆದ್ದಿದ್ದಾನೆ.

2024ರ ವಿಂಬಲ್ಡನ್ ಕೂಟದಲ್ಲಿ ಆತನು ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದಿರುವುದು ಕೂಡ ದಾಖಲೆಯೇ ಆಗಿದೆ. ಆತನ ಸರ್ವ್, ವಾಲಿ, ಏಸ್, ಮಿಂಚಿನ ಚಲನೆ ಮತ್ತು ಹಿಂಗೈ ಹೊಡೆತಗಳು ತುಂಬಾ ಬಲಿಷ್ಟವಾಗಿವೆ.

ಆರು ವರ್ಷದ ಪ್ರಾಯದಿಂದ ವೀಲ್ ಚೇರ್ ಮೇಲೆ ಅವಲಂಬಿತವಾಗಿರುವ ಆಲ್ಫಿ ಹೆವೆಟ್ಟ್ ನಾರ್ವಿಚ್ ನಗರದ ಸಿಟಿ ಕಾಲೇಜಿನಿಂದ ಪದವಿ ಕೂಡ ಪಡೆದಿದ್ದಾರೆ. 1.67 ಮೀಟರ್ ಎತ್ತರದ, ಇನ್ನೂ 27 ವರ್ಷ ಪ್ರಾಯದ ಆಲ್ಫಿ ರಟ್ಟೆಯಲ್ಲಿ ತ್ರಾಣ ಇರುವಷ್ಟು ವರ್ಷ ಟೆನ್ನಿಸ್ ಆಡುತ್ತೇನೆ ಎಂದು ಹೇಳಿದ್ದಾರೆ!

ಆತನ ದಾಖಲೆಗಳ ಎತ್ತರ ಎಲ್ಲಿಗೆ ತಲುಪುವುದೋ ಯಾರಿಗೆ ಗೊತ್ತು?

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

Continue Reading
Advertisement
Mock demonstration by SDRF team on flood protection in Honnali
ದಾವಣಗೆರೆ6 mins ago

Davanagere News: ಹೊನ್ನಾಳಿಯಲ್ಲಿ ನೆರೆಹಾವಳಿ ರಕ್ಷಣೆ ಬಗ್ಗೆ ಎಸ್‌ಡಿಆರ್‌ಎಫ್ ತಂಡದಿಂದ ಅಣಕು ಪ್ರದರ್ಶನ

DK Shivakumar
ಕರ್ನಾಟಕ6 mins ago

DK Shivakumar: ನೀತಿಯೇ ಇಲ್ಲದಿರುವಾಗ, ನೀತಿ ಆಯೋಗದ ಸಭೆಗೆ ಹೋಗಬೇಕೆ: ಡಿ.ಕೆ. ಶಿವಕುಮಾರ್

Greater Bengaluru Governance Bill 2024
ಬೆಂಗಳೂರು11 mins ago

Greater Bengaluru Governance Bill 2024: ಗ್ರೇಟರ್ ಬೆಂಗಳೂರಿನಲ್ಲಿ ಯಾವ್ಯಾವ ಏರಿಯಾಗಳು ಸೇರಬಹುದು? ಇದರ ಉದ್ದೇಶ ಏನು?

Cat kidnaping Case
ಕರ್ನಾಟಕ21 mins ago

Cat Kidnaping Case: ಬೆಕ್ಕು ಅಪಹರಣ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

Bitcoin Scam
ಕರ್ನಾಟಕ26 mins ago

Bitcoin Scam: ಬಿಟ್‌‌ ಕಾಯಿನ್ ಹಗರಣ; ಆರೋಪಿಗಳಾದ ಶ್ರೀಕಿ, ಖಂಡೇಲ್ ವಾಲಾ ಜೈಲಿನಿಂದ ಬಿಡುಗಡೆ

No Makeup For Kids
ಲೈಫ್‌ಸ್ಟೈಲ್33 mins ago

No Makeup For Kids: ನಿಮ್ಮ ಮಕ್ಕಳ ಮೇಕಪ್‌ ಕ್ರೇಜ್‌ಗೆ NO ಹೇಳಿ!

Union Budget 2024
ದೇಶ56 mins ago

Union Budget 2024: ಬಜೆಟ್‌ನಲ್ಲಿ ಕಸ್ಟಮ್ಸ್‌ ಸುಂಕ ಇಳಿಕೆ; ಚಿನ್ನದ ಮೇಲಿನ ಹೂಡಿಕೆಗೆ ಇದು ಸಕಾಲವೇ? ತಜ್ಞರು ಹೇಳೋದಿಷ್ಟು

Salman Khan
ಸಿನಿಮಾ1 hour ago

Salman Khan: “ನನ್ನನ್ನು ಕೊಲ್ಲಲು ಬಿಷ್ಣೋಯಿ ಗ್ಯಾಂಗ್‌ ಯತ್ನಿಸುತ್ತಿದೆ”-ಗುಂಡಿನ ದಾಳಿ ಬಗ್ಗೆ ಸಲ್ಮಾನ್‌ ಖಾನ್‌ ಹೇಳಿಕೆ ದಾಖಲು

Viral Video
Latest2 hours ago

Viral Video: ದೆಹಲಿ ಬೀದಿಯಲ್ಲಿ ಈ ಹುಡುಗಿಯ ಪರೋಟಾ ತಿನ್ನಲು ಕ್ಯೂ! ವಿಡಿಯೊ ನೋಡಿ

Sandalwood Star Fashion
ಫ್ಯಾಷನ್2 hours ago

Sandalwood Star Fashion: ಮಾನ್ಸೂನ್‌ನಲ್ಲಿ ಮಾಲಾಶ್ರೀ ಮಗಳ ಗ್ಲಾಮರಸ್‌ ಫ್ಯಾಷನ್‌!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ14 hours ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ1 day ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ1 day ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ1 day ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌