Not Having Children: ಮಕ್ಕಳಾಗುತ್ತಿಲ್ಲವೇ?; ಹಾಗಾದರೆ, ಇವಿಷ್ಟು ಸಾಮಾನ್ಯ ಅಂಶಗಳು ಗೊತ್ತಿರಲಿ! - Vistara News

ಆರೋಗ್ಯ

Not Having Children: ಮಕ್ಕಳಾಗುತ್ತಿಲ್ಲವೇ?; ಹಾಗಾದರೆ, ಇವಿಷ್ಟು ಸಾಮಾನ್ಯ ಅಂಶಗಳು ಗೊತ್ತಿರಲಿ!

ಮದುವೆಯಾದ ಆರಂಭದ ವರ್ಷಗಳಲ್ಲಿ, ಈಗಿನ್ನೂ ಮಗು ಬೇಡ, ಇಬ್ಬರೂ ವರ್ಕಿಂಗ್‌, ಮಕ್ಕಳಾದರೆ, ವೃತ್ತಿ ಜೀವನಕ್ಕೆ ಹಾಗೂ ವೈಯಕ್ತಿಕ ಜೀವನಕ್ಕೆ ತೊಡಕಾಗುತ್ತದೆ ಎಂದುಕೊಳ್ಳುವ ಜೋಡಿಗಳು, ಮೂರ್ನಾಲ್ಕು ವರ್ಷ ಕಳೆಯುತ್ತಲೇ ಯಾಕೆ ಮಕ್ಕಳಾಗುತ್ತಿಲ್ಲ (Not having children) ಎಂಬ ತಲೆಬಿಸಿಯಲ್ಲೂ ಒದ್ದಾಡುತ್ತಾರೆ. ಏನಿದಕ್ಕೆ ಕಾರಣ?

VISTARANEWS.COM


on

Not Having Children
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮದುವೆಯಾಗಿದೆ, ಆದರೆ ಮಕ್ಕಳಾಗುತ್ತಿಲ್ಲ. ಇದು ಕೆಲವರ ಸಮಸ್ಯೆ. ಇತ್ತೀಚಿಗಿನ ದಿನಗಳಲ್ಲಿ ಹೆಚ್ಚು. ಮದುವೆಯಾದ ಆರಂಭದ ವರ್ಷಗಳಲ್ಲಿ, ಈಗಿನ್ನೂ ಮಗು ಬೇಡ, ಇಬ್ಬರೂ ವರ್ಕಿಂಗ್‌, ಮಕ್ಕಳಾದರೆ, ವೃತ್ತಿ ಜೀವನಕ್ಕೆ ಹಾಗೂ ವೈಯಕ್ತಿಕ ಜೀವನಕ್ಕೆ ತೊಡಕಾಗುತ್ತದೆ ಎಂದುಕೊಳ್ಳುವ ಜೋಡಿಗಳು, ಮೂರ್ನಾಲ್ಕು ವರ್ಷ ಕಳೆಯುತ್ತಲೇ ಯಾಕೆ ಮಕ್ಕಳಾಗುತ್ತಿಲ್ಲ ಎಂಬ ತಲೆಬಿಸಿಯಲ್ಲೂ ಒದ್ದಾಡುತ್ತಾರೆ. ʻಯಾಕಿನ್ನೂ ಗುಡ್‌ನ್ಯೂಸ್‌ ಕೊಡುತ್ತಿಲ್ಲ?ʼ ಎಂದು ಆಗಾಗ ನೆಂಟರಿಷ್ಟರೂ, ಹಿರಿಯರೂ, ಸ್ನೇಹಿತ ವರ್ಗವೂ ಕೇಳಿ ಕೇಳಿ ಅದರ ಒತ್ತಡವೂ ಮೊದಲೇ ಹೆಚ್ಚಾಗುತ್ತದೆ. ಹೀಗಾದಾಗ, ಮಗುವೇ ಬೇಡ ಎಂದುಕೊಂಡವರೂ ಕೂಡ, ಒಂದು ಮಗು ಮಾಡಿಕೊಳ್ಳೋಣ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಆದರೆ, ಎಷ್ಟೇ ಪ್ರಯತ್ನಿಸಿದರೂ ಮಕ್ಕಳಾಗುತ್ತಿಲ್ಲ (Not having children) ಎಂಬುದು ಅವರ ಕೊರಗು.

Businessman stressed out at work

ಒತ್ತಡ ಜೀವನ

ಇಬ್ಬರದೂ ಒತ್ತಡದ ವೃತ್ತಿಜೀವನ, ನಿತ್ಯವೂ ಕಂಪ್ಯೂಟರ್‌ ಪರದೆ ಮುಂದೆ ಕೆಲಸ, ಸುಸ್ತು, ಹೊತ್ತಲ್ಲದ ಹೊತ್ತಿನಲ್ಲಿ ಕೆಲಸ ಮಾಡಬೇಕಾಗುವುದು ಇತ್ಯಾದಿ ಆಧುನಿಕ ಜೀವನ ಶೈಲಿಯೂ ಒಂದು ಕಡೆಯಲ್ಲಿ ಕಾರಣವಿದ್ದರೆ, ಇನ್ನೂ ಇತರ ಕಾರಣಗಳೂ ಇರಬಹುದು. ಪುರುಷನಾಗಲೀ, ಮಹಿಳೆಯಾಗಲೀ ಕೇವಲ ಒಂದೇ ಕಾರಣದಿಂದ ಮಕ್ಕಳಾಗುತ್ತಿಲ್ಲ ಎಂಬ ಸಮಸ್ಯೆ ಉಂಟಾಗುವುದಿಲ್ಲ. ಇದಕ್ಕೆ ಹಲವು ಆಂತರಿಕ ಅಥವಾ ಹೊರಗಿನ ಜಗತ್ತಿನ ಕಾರಣಗಳೂ ಇರುತ್ತವೆ. ಹೀಗಾದಾಗ ಮೊದಲು ಗಮನ ಹರಿಸಬೇಕಾದದ್ದು ಯಾವುದಕ್ಕೆ? ಕೇವಲ ಮಾತ್ರೆ ಗುಳಿಗೆಗಳಿಂದ ಎಲ್ಲವೂ ಸರಿಹೋದೀತೇ? ಯಾವೆಲ್ಲ ಸಣ್ಣ ಸಣ್ಣ ಕ್ರಮಗಳ ಬದಲಾವಣೆಯಿಂದ ಮಕ್ಕಳಾಗುವ ಸಾಧ್ಯತೆಯನ್ನು ಹೆಚ್ಚು ಮಾಡಬಹುದು ನೋಡೋಣ.

Period Problems

ಋತುಚಕ್ರ ಗಮನಿಸಿ

ವೈದ್ಯರೇ ಮೊದಲು ಸಲಹೆ ಕೊಡುವಂತೆ, ಪ್ರತಿಯೊಬ್ಬ ಹೆಣ್ಣೂ ಮೊದಲು ಗಮನಿಸಬೇಕಾದ್ದು ತನ್ನ ಋತುಚಕ್ರವನ್ನು. ಋತುಚಕ್ರ ಸರಿಯಾಗಿದೆಯೇ ಎಂಬುದು ಇಲ್ಲಿ ಬಹಳ ಮುಖ್ಯವಾಗುತ್ತದೆ. 28 ದಿನಗಳ ಮಾಸಿಕ ಋತುಚಕ್ರ ನಿಮ್ಮದಾಗಿದ್ದರೆ, 14ನೇ ದಿನ ಅತ್ಯಂತ ಫಲಪ್ರದವಾದ ದಿನ. ಈ ಸಮಯದಲ್ಲಿ ಲೈಂಗಿಕ ಸಂಪರ್ಕ ನಡೆಸಿದರೆ ಮಕ್ಕಳಾಗುವ ಸಾಧ್ಯತೆ ಅತ್ಯಂತ ಹೆಚ್ಚು. ಹಾಗಾಗಿ, ಮಕ್ಕಳಾಗಬೇಕಿದ್ದರೆ ಮೊದಲು ನಿಮ್ಮ ಋತುಚಕ್ರವನ್ನು ಗಮನಿಸಿ. ಇದರಲ್ಲಿ ಏರುಪೇರಿದ್ದರೆ, ಅಥವಾ ಸರಿಯಾಗಿಲ್ಲ ಅನಿಸಿದರೆ ವೈದ್ಯರನ್ನು ಸಂಪರ್ಕಿಸಿ.

woman eating

ಆಹಾರವೂ ಮುಖ್ಯ

ಸಂತಾನ ಸಾಧ್ಯತೆಯನ್ನು ಹೆಚ್ಚಿಸುವ ಆಹಾರವನ್ನು ತಿನ್ನಿ. ಹೌದು. ನಿಮಗೆ ಮಕ್ಕಳಾಗಬೇಕಿದ್ದರೆ, ಉತ್ತಮ ಆಹಾರಕ್ರಮವನ್ನು ಪಾಲಿಸಿ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಣಬೀಜಗಳು, ತಾಜಾ ಹಣ್ಣುಗಳು, ಹಸಿರು ಸೊಪ್ಪು ತರಕಾರಿಗಳು, ಒಳ್ಳೆಯ ಕೊಬ್ಬು ಹೀಗೆ ಎಲ್ಲ ಬಗೆಯ ಪೋಷಕಾಂಶಗಳೂ ಇರುವ ಸಂಪೂರ್ಣ ಆಹಾರವನ್ನು ತಿನ್ನಿ. ಮುಖ್ಯವಾಗಿ, ಫೋಲಿಕ್‌ ಆಸಿಡ್‌, ಝಿಂಕ್‌, ವಿಟಮಿನ್‌ ಇ ಇರುವ ಆಹಾರಗಳನ್ನು ಸೇವಿಸಿ. ಧಾನ್ಯಗಳು, ಬೇಳೆಕಾಳುಗಳು, ಒಣಬೀಜಗಳು ಇತ್ಯಾದಿಗಳನ್ನು ನಿತ್ಯವೂ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ನಿಮಗೆ ಪಿಸಿಒಡಿ ಸಮಸ್ಯೆ ಇದ್ದರೆ, ನೀವು ತೆಗೆದುಕೊಳ್ಳುವ ಕಾರ್ಬೋಹೈಡ್ರೇಟ್‌ ಮಟ್ಟದ ಮೇಲೆ ನಿಗಾ ಇರಲಿ. ಜಂಕ್‌ನಿಂದ ದೂರವಿರಿ.

ಜೀವನಶೈಲಿಯ ಪಾತ್ರವೂ ಇದೆ

ಮುಖ್ಯವಾಗಿ ಜೀವನಕ್ರಮದಲ್ಲಿ ಬದಲಾವಣೆ ಅತ್ಯಂತ ಅಗತ್ಯ. ರಾತ್ರಿ ನಿಗದಿತ ಸಮಯಕ್ಕೆ ನಿದ್ದೆ, ಬೆಳಗ್ಗೆ ನಿಗದಿತ ಸಮಯಕ್ಕೆ ಏಳುವುದನ್ನು ಅಭ್ಯಾಸ ಮಾಡಿ. ರಾತ್ರಿ ಹೆಚ್ಚು ಹೊತ್ತು ಗ್ಯಾಜೆಟ್‌ ಬಳಸುವುದು, ನೈಟ್‌ ಶಿಪ್ಟ್‌ನಲ್ಲಿ ಕೆಲಸ ಮಾಡುವುದು ಇತ್ಯಾದಿ ಒಳ್ಳೆಯದಲ್ಲ. ನಿಯಮಿತ ಯೋಗ ಅಥವಾ ಯಾವುದೇ ವ್ಯಾಯಾಮ, ನಡಿಗೆ ಮತ್ತಿತರ ಮಾದರಿಯಲ್ಲಿ ದೇಹವನ್ನು ಚುರುಕಾಗಿ ಇಟ್ಟುಕೊಳ್ಳುವುದು ಅತ್ಯಂತ ಅಗತ್ಯ. ಹಾಗಂತ ಅತಿಯಾದ ವ್ಯಾಯಾಮವೂ ಒಳ್ಳೆಯದಲ್ಲ.

Young Woman Drinking Alcohol and Smoking Cigarette at Home Diabetes Control

ದುರಭ್ಯಾಸ ಬಿಡಿ

ಮಧ್ಯಪಾನ, ಧೂಮಪಾನ ಅಥವಾ ಇನ್ನಾವುದೇ ಕೆಟ್ಟ ಅನಾರೋಗ್ಯಕರ ಚಟಗಳಿದ್ದರೆ ಬಿಟ್ಟುಬಿಡಿ. ಇದು ಕೇವಲ ಮಹಿಳೆಯರಿಗೆ ಮಾತ್ರವಲ್ಲ. ಇಬ್ಬರಿಗೂ ಸಂಬಂಧಿಸಿದ್ದು.
೫. ಒತ್ತಡವಾಗದಂತೆ ನೋಡಿಕೊಳ್ಳಿ. ಮನಸ್ಸನ್ನು ಶಾಂತವಾಗಿರುವಂತೆ ನೋಡಿಕೊಳ್ಳಿ. ನಿಮಗೆ ಖುಷಿ ಕೊಡುವ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಕೆಲಸದ ಒತ್ತಡ, ಕುಟುಂಬದ ಒತ್ತಡ ಇತ್ಯಾದಿಗಳಿಂದ ಆದಷ್ಟೂ ದೂರವಿರಿ. ಮಕ್ಕಳಾಗುತ್ತಿಲ್ಲ ಎಂಬ ಒತ್ತಡವನ್ನೂ ಮಾಡಿಕೊಳ್ಳಬೇಡಿ. ಇದು ಹಾರ್ಮೋನನ್ನು ಏರುಪೇರಾಗಿಸುವ ಕಾರಣದಿಂದ ಮಕ್ಕಳಾಗಲು ಕಷ್ಟವಾಗುತ್ತದೆ.

ಇದನ್ನೂ ಓದಿ: Diet To Prevent Period Cramps: ಮುಟ್ಟಿನ ದಿನಗಳ ಹೊಟ್ಟೆ ನೋವಿಗೆ ಹೀಗಿದೆ ಪರಿಹಾರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Period Pain Relief Food: ಪೀರಿಯಡ್‌ನ ನೋವು ನಿವಾರಣೆಗೆ ಈ ಆಹಾರಗಳು ಸೂಕ್ತ

ಋತುಚಕ್ರದ ಸಂದರ್ಭದಲ್ಲಿ ಕೈಕಾಲುಗಳಲ್ಲಿ ಸೆಳೆತ, ನೋವು, ಮೈಗ್ರೇನ್‌, ತಲೆಸುತ್ತು, ವಾಂತಿ, ಹೊಟ್ಟೆನೋವು ಇತ್ಯಾದಿಗಳು ಸಾಮಾನ್ಯ. ಕೆಲವು ನಿತ್ಯಜೀವನದ ಹಾಗೂ ಆಹಾರದ ಬದಲಾವಣೆಗಳು ಇಂಥ ಸಮಸ್ಯೆಯನ್ನು ಹತೋಟಿಗೆ ತರುತ್ತವೆ. ನೀವು ಕೆಲಸ ಮಾಡುವ ಮಹಿಳೆಯರಾದರೆ, ಈ ಸಂದರ್ಭ ನಿಮ್ಮಲ್ಲಿ ಹಲವರು ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಒದ್ದಾಡುತ್ತಾರೆ. ಈ ಸಂದರ್ಭ ನಮ್ಮ ಅರೋಗ್ಯವನ್ನು ಕಾಪಾಡುವ ಇಂತಹ ನೋವಿನಿಂದ ಆರಾಮ ನೀಡುವ ಕೆಲವು ಆಹಾರಗಳನ್ನು (Period Pain Relief Food) ಸೇವಿಸುವ ಮೂಲಕ ಸಮಸ್ಯೆಯನ್ನು ಕೊಂಚ ಹತೋಟಿಯಲ್ಲಿಡಬಹುದು.

VISTARANEWS.COM


on

Period Pain Relief Food
Koo

ಹಲವು ಮಂದಿಗೆ ಪೀರಿಯಡ್‌ ಅಥವಾ ಋತುಚಕ್ರದ ಸಂದರ್ಭ ಕೈಕಾಲುಗಳಲ್ಲಿ ಸೆಳೆತ, ನೋವು, ಮೈಗ್ರೇನ್‌, ತಲೆಸುತ್ತು, ವಾಂತಿ, ಹೊಟ್ಟೆನೋವು ಇತ್ಯಾದಿಗಳು ಸಾಮಾನ್ಯ. ಕೆಲವು ನಿತ್ಯಜೀವನದ ಹಾಗೂ ಆಹಾರದ ಬದಲಾವಣೆಗಳು ಇಂಥ ಸಮಸ್ಯೆಯನ್ನು ಹತೋಟಿಗೆ ತರುತ್ತವೆ. ನೀವು ಕೆಲಸ ಮಾಡುವ ಮಹಿಳೆಯರಾದರೆ, ಈ ಸಂದರ್ಭ ನಿಮ್ಮಲ್ಲಿ ಹಲವರು ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಒದ್ದಾಡುತ್ತಾರೆ. ಈ ಸಂದರ್ಭ ನಮ್ಮ ಅರೋಗ್ಯವನ್ನು ಕಾಪಾಡುವ ಇಂತಹ ನೋವಿನಿಂದ ಆರಾಮ ನೀಡುವ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಸಮಸ್ಯೆಯನ್ನು ಕೊಂಚ ಹತೋಟಿಯಲ್ಲಿಡಬಹುದು ಎಂಬುದನ್ನು ನೆನಪಿಡಿ. ನೈಸರ್ಗಿಕವಾದ ಉಪಾಯಗಳು ಎಂದಿಗೂ ವ್ಯತಿರಿಕ್ತ ಸಮಸ್ಯೆಗಳನ್ನು ಆಹ್ವಾನಿಸದು. ಬನ್ನಿ, ಯಾವೆಲ್ಲ ಆಹಾರಗಳು (Period Pain Relief Food) ಪೀರಿಯಡ್‌ ನೋವಿನಿಂದ, ಕೆಟ್ಟ ಮೂಡ್‌ನಿಂದ ನಿಮ್ಮನ್ನು ಬಚಾವು ಮಾಡುತ್ತವೆ ಎಂಬುದನ್ನು ನೋಡೋಣ.

raisins

ಒಣದ್ರಾಕ್ಷಿ ಸೇವಿಸಿ

ನಿಮ್ಮ ಋತುಚಕ್ರಕ್ಕೆ ಇನ್ನೊಂದು ವಾರವಿದೆ ಎನ್ನುವಾಗಲೇ, ಪ್ರತಿದಿನ ಬೆಳಗ್ಗೆ ನೆನೆಸಿದ ಒಣದ್ರಾಕ್ಷಿಯೊಂದಿಗೆ ಕೇಸರಿಯನ್ನು ಸೇವಿಸಲು ಆರಂಭಿಸಿ. ನಿಮ್ಮ ಪೀರಿಯಡ್‌ ಮುಗಿಯುವವರೆಗೂ ಇದನ್ನು ತಿನ್ನಿ.

fresh Sprouted matki in bowl , Sprouted moth

ಮೊಳಕೆ ಕಾಳು ಸೇವಿಸಿ

ನಿತ್ಯವೂ ಮೊಳಕೆ ಕಾಳುಗಳನ್ನು ಒಂದು ಹೊತ್ತು ತಿನ್ನಲು ಅಭ್ಯಾಸ ಮಾಡಿ. ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿದ್ದರೆ ಹಸಿಯಾಗಿ ತಿನ್ನಬಹುದು. ಇಲ್ಲವಾದರೆ, ಕೊಂಚ ಬೇಯಿಸಿ ಮೊಳಕೆ ಕಾಳುಗಳನ್ನು ತಿನ್ನಿ. ಊಟದ ಜೊತೆಗೆ ಒಂದು ಭಾಗ ಮೊಳಕೆ ಕಾಳು ಇರಲಿ.

Tuber yam

ಗಡ್ಡೆಗೆಣಸುಗಳು ಸೂಕ್ತ

ಗಡ್ಡೆಗೆಣಸುಗಳನ್ನು ನಿತ್ಯಾಹಾರದಲ್ಲಿ ಸೇರಿಸಿ. ಒಂದೇ ಬಗೆಯ ತರಕಾರಿಗಳನ್ನು ತಿನ್ನುವುದರ ಬದಲಾಗಿ ಬಗೆಬಗೆಯ ತರಕಾರಿಗಳನ್ನು ನಿತ್ಯವೂ ತಿನ್ನಿ. ಸಿಹಿಗೆಣಸು, ಸುವರ್ಣಗೆಡ್ಡೆ, ಕೆಸುವಿನ ಗೆಡ್ಡೆ ಇತ್ಯಾದಿಗಳು ಅತ್ಯಂತ ಒಳ್ಳೆಯದು. ಆಗಾಗ ಇವು ನಿಮ್ಮ ಹೊಟ್ಟೆಗೆ ಸೇರುವಂತೆ ನೋಡಿಕೊಳ್ಳಿ.

ಕ್ಯಾಲ್ಶಿಯಂ ಮಾತ್ರೆ

ರಾತ್ರಿ ಮಲಗುವ ಮುನ್ನ ಕ್ಯಾಲ್ಶಿಯಂ ಮಾತ್ರೆಯನ್ನು ಸೇವಿಸಿ. ಪೀರಿಯಡ್‌ ಸಮಸ್ಯೆಯಿರುವ ಮಂದಿಗೆ ಕ್ಯಾಲ್ಶಿಯಂ ಬೇಕು. ಇದರ ಸಂಬಂಧವಾಘಿ ನಿಮ್ಮ ವೈದ್ಯರಲ್ಲೊಮ್ಮೆ ಸಲಹೆ ಪಡೆದುಕೊಂಡು ಮುಂದುವರಿಯಿರಿ. ಕ್ಯಾಲ್ಶಿಯಂ ಅಧಿಕವಾಗಿರುವ ಆಹಾರವನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

It is rich in good fats Ghee Benefits

ತುಪ್ಪ ಸೇವಿಸಿ

ಪ್ರತಿ ದಿನ ಮಧ್ಯಾಹ್ನದೂಟದ ಸಂದರ್ಭ ಒಂದು ಚಮಚ ತುಪ್ಪವನ್ನು ಹಾಕಿ ಕಲಸಿಕೊಂಡು ಉಣ್ಣುವ ಅಭ್ಯಾಸ ಮಾಡಿಕೊಳ್ಳಿ. ಮಧ್ಯಾಹ್ನದೂಟ ಸಾಧ್ಯವಾಗದಿದ್ದರೆ, ಯಾವುದಾದರೊಂದು ಹೊತ್ತಿನಲ್ಲಿ ನಿತ್ಯವೂ ಒಂದು ಚಮಚ ತುಪ್ಪ ತಿನ್ನಿ. ತೂಕ ಹೆಚ್ಚಾಗುವ ಭಯ ಬೇಡ. ಒಂದು ಚಮಚ ತುಪ್ಪದಿಂದ ನಿಮ್ಮ ತೂಕ ಹೆಚ್ಚಾಗದು. ಬದಲಾಗಿ ಆರೋಗ್ಯ ವೃದ್ಧಿಸುತ್ತದೆ. ಪೀರಿಯಡ್‌ನ ಸಂದರ್ಭ ಆಗುವ ನೋವಿನಿಂದ ಆರಾಮವೂ ಸಿಗುತ್ತದೆ. ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳೂ, ಒಳ್ಳೆಯ ಕೊಬ್ಬೂ ಇದರಲ್ಲಿರುವುದರಿಂದ ತುಪ್ಪವನ್ನು ನಿಮ್ಮ ನಿತ್ಯಾಹಾರದಿಂದ ಯಾವತ್ತೂ ದೂರವಿರಿಸಬೇಡಿ. ಆದರೆ, ಅತಿಯಾಗದಿರಲಿ.

Spicy foods Foods To Avoid Eating With Tea

ಮಸಾಲೆಯುಕ್ತ ಆಹಾರ ಬೇಡ

ಪೀರಿಯಡ್‌ ಸಂದರ್ಭ ಹೆಚ್ಚು ಮಸಾಲೆಯುಕ್ತ ಆಹಾರಗಳ ಮೊರೆ ಹೋಗಬೇಡಿ. ದೇಹಕ್ಕೆ ಆದಷ್ಟೂ ಸರಳವಾದ ಪೋಷಕಾಂಶಯುಕ್ತ ಆಹಾರ ದೊರಕಲಿ. ಮೊಸರನ್ನದಂತಹ ಆಹಾರವಾದರೆ ಉತ್ತಮ. ಮೊಸರನ್ನು ಮಾಡುವಾಗ ಒಂದಿಷ್ಟು ಮೊಳಕೆ ಕಾಳುಗಳು, ಸೌತೆಕಾಯಿ, ಈರುಳ್ಳಿ, ಶುಂಠಿ, ದಾಳಿಂಬೆ ಇತ್ಯಾದಿಗಳನ್ನು ಸೇರಿಸಿ. ಒಗ್ಗರಣೆ ಹಾಕಿ. ರುಚಿಯಷ್ಟೇ ಅಲ್ಲ, ದೇಹ ತಂಪಾಗಿಯೂ ಇರುತ್ತದೆ. ಪೀರಿಯಡ್‌ ನೋವು ಹೆಚ್ಚಾಗಿ ಬಾಧಿಸುವುದಿಲ್ಲ. ಜೊತೆಗೆ ಯಾವ ಬಗೆಯ ಕೆಟ್ಟ ಪರಿಣಾಮವನ್ನೂ ಇದು ಉಂಟುಮಾಡದು.

ಇದನ್ನೂ ಓದಿ: Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

ಬೀಜಗಳು ಸೂಕ್ತ

ಪೀರಿಯಡ್‌ ಸಮಯದಲ್ಲಿ ನೋವು ಆರಂಭವಾದರೆ, ನೀವು ಒಂದಿಷ್ಟು ಬೀಜಗಳನ್ನು ಟ್ರೈ ಮಾಡಬಹುದು. ಆಫೀಸಿಗೆ ಹಗುವಾಗ ಅಥವಾ ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಜೊತೆ ಒಂದು ಡಬ್ಬದಲ್ಲಿ ಒಂದಿಷ್ಟು ನೆಲಗಡಲೆ ಅಥವಾ ಗೋಡಂಬಿ ಇಟ್ಟುಕೊಳ್ಳಿ, ಸ್ನ್ಯಾಕ್‌ ಟೈಮ್‌ ಅಥವಾ ಊಟದ ಮಧ್ಯದ ಬ್ರೇಕ್‌ನಲ್ಲಿ, ಹಸಿವಾದಾಗ ಇವನ್ನು ತಿನ್ನಿ. ಇದರ ಜೊತೆಗೆ ಒಂದು ತುಂಡು ಬೆಲ್ಲವನ್ನೂ ತಿನ್ನಿ. ಇದು ನಿಮ್ಮ ಕೆಟ್ಟ ಮೂಡನ್ನೂ ಸರಿ ಮಾಡುತ್ತವೆ. ಸಿಹಿ ತಿನ್ನಬೇಕೆಂಬ ಆಸೆಯನ್ನೂ ಹತ್ತಿಕ್ಕುತ್ತದೆ.

ಖಿಚಡಿ ಅಥವಾ ರಾಗಿ

ಮೊಸರನ್ನ ಬಿಟ್ಟರೆ ಖಿಚಡಿ ಅಥವಾ ರಾಗಿಯೂ ಒಳ್ಳೆಯೂ ಒಳ್ಳೆಯದು. ರಾಗಿ ದೋಸೆ, ರಾಗಿ ರೊಟ್ಟಿ, ಹೆಸರು ಬೇಳೆ ದೋಸೆ ಇತ್ಯಾದಿಗಳನ್ನು ಮಾಡಬಹುದು. ಖಿಚಡಿಯನ್ನೂ ಮಾಡಿಕೊಂಡು ತಿನ್ನಬಹುದು.

Continue Reading

ಆರೋಗ್ಯ

Betel Leaves Health Benefits: ರಾತ್ರಿ ಊಟದ ಬಳಿಕ ವೀಳ್ಯದೆಲೆ ಸೇವನೆ ಆರೋಗ್ಯಕ್ಕೆ ಉತ್ತಮ

ನಮ್ಮ ಹಿರಿಯರು ಊಟದ ಬಳಿಕ ವೀಳ್ಯದೆಲೆ, ಅಡಿಕೆ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದರು. ಆದರೆ ಇದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಎನ್ನುವುದನ್ನು ಆಯುರ್ವೇದ ಹೇಳುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಬಹುಮಾನ್ಯತೆ ಪಡೆದಿರುವ ವೀಳ್ಯದೆಯನ್ನು (Betel Leaves Health Benefits) ರಾತ್ರಿ ಊಟದ ಬಳಿಕ ಸೇವಿಸುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ.

VISTARANEWS.COM


on

By

Betel leaves health benefits
Koo

ಭಾರತೀಯ ಸಂಸ್ಕೃತಿಯಲ್ಲಿ (Indian culture) ವೀಳ್ಯದೆಲೆಗೆ (betel leaves) ಬಹುಮಾನ್ಯತೆ ನೀಡಲಾಗುತ್ತದೆ. ಪ್ರತಿಯೊಂದು ಶಾಸ್ತ್ರ, ಸಂಪ್ರದಾಯಗಳಲ್ಲಿ ವೀಳ್ಯದೆಲೆ ಅಡಿಕೆಯನ್ನು ನೀಡಿ ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ. ಆಯುರ್ವೇದದಲ್ಲೂ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ರಾತ್ರಿ ಭೋಜನದ (dinner) ಬಳಿಕ ವೀಳ್ಯದೆಲೆ (Betel Leaves Health Benefits) ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.

ಊಟದ ಬಳಿಕ ವೀಳ್ಯದೆಲೆ, ಅಡಿಕೆ ಜಗಿಯುವ ನಮ್ಮ ಹಿರಿಯರ ಅಭ್ಯಾಸವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದಾಗಿ ಆಯುರ್ವೇದದಲ್ಲಿ ಹೇಳಲಾಗಿದೆ. ಆದರೆ ಈಗ ಇದು ಕಡಿಮೆಯಾಗಿ ವಿವಿಧ ಮಸಾಲೆಗಳನ್ನು ಸೇರಿಸಿ ತಯಾರಿಸುವ ಪಾನ್ ಹೆಚ್ಚು ಜನಪ್ರಿಯತೆ ಪಡೆದಿದೆ.

ವೀಳ್ಯದೆಲೆಗಳು ಆರೋಗ್ಯಕರ ಜೀರ್ಣಕಾರಿ ವ್ಯವಸ್ಥೆಯನ್ನು ಉತ್ತೇಜಿಸುವುದು, ಬಾಯಿಯ ನೈರ್ಮಲ್ಯ, ಕರುಳಿನ ಆರೋಗ್ಯವನ್ನೂ ಕಾಪಾಡುತ್ತದೆ. ರಾತ್ರಿ ಊಟದ ಬಳಿಕ ವೀಳ್ಯದೆಲೆಗಳನ್ನು ಸೇವಿಸುವುದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.


ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಜೀರ್ಣಕಾರಿ ಸಮಸ್ಯೆಗಳಿಂದ ಬಳಲುವವರು ಉತ್ತಮ ಜೀರ್ಣಕ್ರಿಯೆಗಾಗಿ ರಾತ್ರಿಯ ಆಹಾರದ ಬಳಿಕ ಒಂದು ವೀಳ್ಯದೆಲೆಯನ್ನು ಜಗಿಯುವ ಅಭ್ಯಾಸ ಒಳ್ಳೆಯದು. ಇದರಲ್ಲಿರುವ ರಸ ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಉತ್ತೇಜನ ಸಿಗುತ್ತದೆ. ಹೊಟ್ಟೆ ಉಬ್ಬರ, ಅಸಿಡಿಟಿ ತೊಂದರೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಬಾಯಿಯ ಅರೋಗ್ಯ ಕಾಪಾಡುತ್ತದೆ

ವೀಳ್ಯದೆಲೆಗಳು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣವನ್ನು ಹೊಂದಿದೆ. ಇದು ಬಾಯಿಯ ಸೋಂಕುಗಳನ್ನು ಎದುರಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

ಬಾಯಿ ಸ್ವಚ್ಛತೆ

ಆಯುರ್ವೇದದ ಪ್ರಕಾರ ಭೋಜನದ ಬಳಿಕ ವೀಳ್ಯದೆಲೆ ಜಗಿಯುವುದು ಬಾಯಿಯ ದುರ್ಗಂಧವನ್ನು ಹೋಗಲಾಡಿಸುತ್ತದೆ. ಹಲ್ಲಿನಲ್ಲಿ ಕುಳಿಗಳಾಗುವುದು, ಒಸಡು ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಒತ್ತಡ, ಆತಂಕ ನಿವಾರಣೆ

ಒತ್ತಡ, ಆತಂಕದ ಸಮಸ್ಯೆ ಇದ್ದಾರೆ ರಾತ್ರಿ ಊಟದ ಬಳಿಕ ವೀಳ್ಯದೆಲೆ ಸೇವನೆ ಒಳ್ಳೆಯದು. ಆಯುರ್ವೇದದ ಪ್ರಕಾರ ವೀಳ್ಯದೆಲೆಗಳು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುವ ಪರಿಣಾಮಗಳನ್ನು ಬೀರುವ ಕೆಲವು ಸಂಯುಕ್ತಗಳನ್ನು ಹೊಂದಿದೆ. ಇದು ನರಮಂಡಲಕ್ಕೆ ವಿಶ್ರಾಂತಿಯನ್ನು ನೀಡಿ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.


ದೇಹದಿಂದ ವಿಷವನ್ನು ಹೊರಹಾಕುತ್ತದೆ

ಆಯುರ್ವೇದದಲ್ಲಿ ವೀಳ್ಯದೆಲೆಗಳು ವಿಷ ಹೊರತೆಗೆಯುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ರಾತ್ರಿಯಲ್ಲಿ ವೀಳ್ಯದೆಲೆ ಸೇವನೆ ನೈಸರ್ಗಿಕವಾಗಿ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಉಸಿರಾಟ ಸಮಸ್ಯೆ ನಿವಾರಿಸುತ್ತದೆ

ವೀಳ್ಯದೆಲೆಗಳು ಉಸಿರಾಟ ತೊಂದರೆಯನ್ನು ನಿವಾರಿಸುತ್ತದೆ. ಉಸಿರಾಟದ ತೊಂದರೆ ಉಂಟು ಮಾಡುವ ಗುಣಲಕ್ಷಣಗಳನ್ನು ಸಂಪೂರ್ಣವಾಗಿ ತೊಡೆದು ಹಾಕುತ್ತದೆ.

ಕೆಮ್ಮು ನಿವಾರಣೆ

ಕೆಮ್ಮಿಗೆ ವೀಳ್ಯದೆಲೆ ಅತ್ಯತ್ತಮ ಔಷಧ. ವೀಳ್ಯದೆಲೆಗಳು ಗಂಟಲು ಮತ್ತು ಉಸಿರಾಟದ ಹಾದಿಯಲ್ಲಿರುವ ತೊಂದರೆಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ: Junk Food Side Effects: ಗೇಮಿಂಗ್‌ ದಾಸರಾದ ಮಕ್ಕಳು ಜಂಕ್‌ ಫುಡ್‌ ವ್ಯಸನಿಗಳಾಗುವ ಸಂಭವ ಹೆಚ್ಚು!

ಆರೋಗ್ಯಕರ ಚಯಾಪಚಯಕ್ಕೆ ಉತ್ತೇಜನ

ದೇಹದ ತೂಕ ಮತ್ತು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಚಯಾಪಚಯವು ನಿರ್ಣಾಯಕವಾಗಿದೆ. ವೀಳ್ಯದೆಲೆಯೂ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾತ್ರಿ ಊಟದ ಬಳಿಕ ವೀಳ್ಯದೆಲೆಗಳನ್ನು ಸೇವಿಸುವುದು ಚಯಾಪಚಯವನ್ನು ಹೆಚ್ಚಿಸುತ್ತದೆ. ಆಯುರ್ವೇದದ ಪ್ರಕಾರ ಉತ್ತಮ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಶಕ್ತಿಯ ಉತ್ಪಾದನೆಗೆ ಇದು ಸಹಾಯ ಮಾಡುತ್ತದೆ.

ಮೂರು ದೋಷ ನಿವಾರಣೆ

ಆಯುರ್ವೇದದ ಪ್ರಕಾರ ಮೂರು ದೋಷಗಳಾದ ವಾತಾ, ಪಿತ್ತ ಮತ್ತು ಕಫದಲ್ಲಿನ ಅಸಮತೋಲನವು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿರುತ್ತದೆ. ರಾತ್ರಿಯಲ್ಲಿ ವೀಳ್ಯದೆಲೆ ಸೇವಿಸುವುದು ಈ ಮೂರು ಪ್ರಮುಖ ದೋಷಗಳನ್ನು ಸಮತೋಲನಗೊಳಿಸಲು ಮತ್ತು ದೇಹದೊಳಗೆ ಸಾಮರಸ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

Continue Reading

ಆರೋಗ್ಯ

International Yoga Day 2024: ಧ್ಯಾನ ಎಂದರೇನು? ಇದರಿಂದ ಏನೇನು ಪ್ರಯೋಜನ?

ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ 2024 ಒತ್ತಡ ನಿವಾರಣೆಗೆ ವ್ಯಾಪಕವಾಗಿ ವಿಶ್ವದೆಲ್ಲೆಡೆ ಚಿಕಿತ್ಸೆಯ ರೂಪದಲ್ಲಿ ಬಳಕೆಯಾಗುತ್ತಿರುವ ಕ್ರಮವೆಂದರೆ ಧ್ಯಾನ. ಕಣ್ಣು ಮುಚ್ಚಿ ಒಳ ಹೋಗುವ ಈ ಕ್ರಿಯೆಗೆ ಹೊರಗಿನಿಂದ ವಿಮುಖರಾಗುವುದು ಅಗತ್ಯವೇ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ- ಇತ್ಯಾದಿ ಪ್ರಶ್ನೆಗಳಿಗೆ ಸಮಾಧಾನವನ್ನು ಶೋಧಿಸುವ ಪ್ರಯತ್ನವಿದು. ಧ್ಯಾನವೆಂದರೆ ಆಳವಾದ ವಿಶ್ರಾಂತಿ ಮತ್ತು ಜಾಗೃತ ಸ್ಥಿತಿ- ಈ ಎರಡನ್ನೂ ಒಂದೇ ಸಮಯಕ್ಕೆ ಏಕತ್ರಗೊಳಿಸಿದ ಸ್ಥಿತಿ! ಈ ಕುರಿತ (International Yoga Day) ವಿವರ ಇಲ್ಲಿದೆ.

VISTARANEWS.COM


on

International Yoga Day 2024
Koo

ಧ್ಯಾನ ಎನ್ನುತ್ತಿದ್ದಂತೆ ನಾನಾ (International Yoga Day) ಬಗೆಯ ಚಿತ್ರಗಳು ಮನಸ್ಸಿಗೆ ಬರುತ್ತವೆ. ಯಾರೋ ತಪಸ್ಸು ಮಾಡುವುದು, ಗಡ್ಡ ಬಿಟ್ಟುಕೊಂಡು ವೃಕ್ಷಾಸನದಲ್ಲಿ ನಿಂತಿರುವುದು, ಚಿನ್ಮುದ್ರೆ ಹಿಡಿದು ಕಣ್ಣು ಮುಚ್ಚಿ ಕೂತವರು… ಅವರವರ ಭಾವಕ್ಕೆ ತಕ್ಕಂತೆ ಭಿತ್ತಿಗಳು ಮೂಡುತ್ತವೆ. ಧ್ಯಾನ ಅಥವಾ ಮೆಡಿಟೇಶನ್‌ ಮಾಡುವುದೆಂದರೆ ಕಣ್ಣು ಮುಚ್ಚಿಕೊಂಡು, ಒಳ ಮನದಲ್ಲಿ ಲೋಕದ ವ್ಯವಹಾರವನ್ನೆಲ್ಲ ಚಿಂತಿಸುವುದು ಹೆಚ್ಚಿನವರ ಕ್ರಮ! ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ ಒತ್ತಡ ನಿವಾರಣೆಗೆ ವ್ಯಾಪಕವಾಗಿ ವಿಶ್ವದೆಲ್ಲೆಡೆ ಚಿಕಿತ್ಸೆಯ ರೂಪದಲ್ಲಿ ಬಳಕೆಯಾಗುತ್ತಿರುವ ಕ್ರಮವಿದು. ಕಣ್ಣು ಮುಚ್ಚಿ ಒಳ ಹೋಗುವ ಈ ಕ್ರಿಯೆಗೆ ಹೊರಗಿನಿಂದ ವಿಮುಖರಾಗುವುದು ಅಗತ್ಯವೇ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ- ಇತ್ಯಾದಿ ಪ್ರಶ್ನೆಗಳಿಗೆ ಸಮಾಧಾನವನ್ನು ಶೋಧಿಸುವ ಪ್ರಯತ್ನವಿದು.

Why Yoga Day is celebrated internationally,
International Yoga Day

ಧ್ಯಾನವೆಂದರೆ ಏನು?

ಹಾಗೆಂದರೆ ಆಳವಾದ ವಿಶ್ರಾಂತಿ ಮತ್ತು ಜಾಗೃತ ಸ್ಥಿತಿ- ಈ ಎರಡನ್ನೂ ಒಂದೇ ಸಮಯಕ್ಕೆ ಏಕತ್ರಗೊಳಿಸಿದ ಸ್ಥಿತಿ! ಇದು ಋಷಿ-ಮುನಿಗಳಿಗೆ ಮಾತ್ರವೇ ಹೊಂದುವಂಥದ್ದು ಎಂಬ ತೀರ್ಮಾನಕ್ಕೆ ಈಗಲೇ ಬರಬೇಡಿ. ಸರಳವಾಗಿ ಹೇಳುವುದಾದರೆ, ಕುದಿಯುತ್ತಿರುವ ಮೈ-ಮನಗಳನ್ನು ಶಾಂತಗೊಳಿಸಿ, ನಮ್ಮೊಳಗಿನ ಉಲ್ಲಾಸವನ್ನು ಎಚ್ಚರಿಸುವ ಕ್ರಿಯೆಯಿದು. ಏನನ್ನೂ ಮಾಡದೆ, ಅಂದರೆ ಮೆದುಳಿಗೂ ಕೆಲಸ ನೀಡದೆ, ಎಲ್ಲವನ್ನೂ ಬಿಟ್ಟು ಆಳವಾದ ವಿಶ್ರಾಂತಿಗೆ ಜಾರುವುದು, ಆದರೆ ನಿದ್ದೆ ಮಾಡದೆ ಜಾಗೃತ ಅವಸ್ಥೆಯಲ್ಲೇ ಇರುವುದು ಈ ಕ್ರಮದ ಮುಖ್ಯವಾದ ಅಂಗ. ದೇಹಕ್ಕೆ ಆಹಾರ ನೀಡಿದಂತೆ ಮನಸ್ಸಿಗೂ ಗ್ರಾಸ ಬೇಡವೇ?

ಏಕೆ ಮಾಡಬೇಕು?

ಬದುಕಿನ ಇನ್ನೊಂದು ಹೆಸರೇ ಒತ್ತಡ ಎನ್ನುವಂತಿರುವಾಗ, ಈ ಚಕ್ರವ್ಯೂಹದಿಂದ ಹೊರಬರುವುದು ಹೇಗೆ? ಹೊರಗಿನ ಗದ್ದಲದಲ್ಲಿ ಆಂತರ್ಯದ ದನಿಯನ್ನು ಕೇಳುವುದು ಹೇಗೆ? ನೂರೆಂಟು ಗೋಜಲುಗಳ ನಡುವೆ ನಮಗೆ ಬೇಕಾದ್ದಕ್ಕೆ ಗಮನ ಕೊಡುವುದು ಸಾಧ್ಯವೇ? ಯಶಸ್ಸಿನ ಹಿಂದೆ ಓಡುವಾಗ ನಮ್ಮ ಕೈಗೆ ದೊರೆಯುತ್ತಿರುವುದೇನು ಎಂಬ ಗಮನವಾದರೂ ಇದೆಯೇ ನಮಗೆ? ಹಾಳಾಗುತ್ತಿರುವ ಆರೋಗ್ಯವನ್ನು ಮಾತ್ರೆಗಳು ಮಾತ್ರವೇ ಸರಿ ಮಾಡಿಯಾವೇ? ಇವಕ್ಕೆಲ್ಲ ಉತ್ತರ ಹುಡುಕಬೇಕೆಂದರೆ ಮೊದಲು ಮನಸ್ಸು ಶಾಂತವಾಗಬೇಕು. ಉದ್ರಿಕ್ತ ಮನದಿಂದ ಉತ್ತರ ಹುಡುಕಲು ಸಾಧ್ಯವಿಲ್ಲ. ಮೊದಲು ಮನಸ್ಸಿಗೆ ಸಮಾಧಾನ ದೊರೆತ ಮೇಲಷ್ಟೇ ಪ್ರಶ್ನೆಗಳಿಗೆ ಸಮಾಧಾನ ದೊರೆಯುವುದಕ್ಕೆ ಸಾಧ್ಯ. ಈಗ ನೀವೆ ಹೇಳಿ, ಧ್ಯಾನವನ್ನು ಏಕೆ ಮಾಡಬೇಕು?

ಇದನ್ನೂ ಓದಿ: Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

ಲಾಭಗಳೇನು?

  • ಎಲ್ಲಕ್ಕಿಂತ ಮೊದಲು ನಮಗೆ ಅರಿವಿಗೆ ಬರುವ ಪ್ರಯೋಜನವೆಂದರೆ ಶರೀರದ ಚೈತನ್ಯ ಹೆಚ್ಚುವುದು. ನಮ್ಮ ಆಲೋಚನೆ, ಕ್ರಿಯೆ ಮತ್ತು ಉಸಿರಾಟಕ್ಕೂ ನಮ್ಮಲ್ಲಿ ಪ್ರವಹಿಸುವ ಚೈತನ್ಯಕ್ಕೂ ಗಾಢವಾದ ನಂಟಿದೆ. ಈ ಚೈತನ್ಯವೇ ನಮ್ಮಲ್ಲಿ ಧನಾತ್ಮಕ ಆಲೋಚನೆಗಳನ್ನು ಉಂಟು ಮಾಡುವುದು.
  • ಎರಡನೆಯ ಪ್ರಯೋಜನವೆಂದರೆ ನಮ್ಮ ಆರೋಗ್ಯದಲ್ಲಿನ ಸುಧಾರಣೆ. ಅಂದರೆ ರಕ್ತದೊತ್ತಡ, ಮಧುಮೇಹ, ಹೃದಯದ ತೊಂದರೆಗಳು, ಜೀರ್ಣಾಂಗದ ಸಮಸ್ಯೆಗಳು, ಚರ್ಮದ ತೊಂದರೆಗಳು ಮುಂತಾದ ಹಲವಾರು ಸಮಸ್ಯೆಗಳಿಗೆ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವುದು ಪ್ರಬಲ ಔಷಧಿಯಾಗಿ ಕೆಲಸ ಮಾಡುತ್ತದೆ.
  • ಮೂರನೆಯದಾಗಿ, ದೇಹ ಮತ್ತು ಮನಸ್ಸುಗಳ ವಿಕಾರಗಳನ್ನು ಮಟ್ಟ ಹಾಕಲು ಇದು ಅಗತ್ಯ. ಬೇಡದ ಆಲೋಚನೆಗಳನ್ನು ತಡೆಯುತ್ತಿದ್ದಂತೆ ನಿದ್ದೆ ಸುಲಲಿತವಾಗಿ ಬರುತ್ತದೆ. ನಿದ್ರಾಹೀನತೆಯಿಂದ ದಾಂಗುಡಿ ಇಡುವ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ದೂರ ಇರಿಸಬಹುದು.
  • ಇವೆಲ್ಲ ಕಣ್ಣಮುಂದೆ ಕಾಣುವಂಥ ಪ್ರಯೋಜನಗಳು. ಅದಲ್ಲದೆ, ಮಾನಸಿಕ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಳ, ವಿವೇಕ ಜಾಗ್ರತೆಯಾಗುವುದು, ಯೋಚನೆಯಲ್ಲಿ ಸ್ಪಷ್ಟತೆ, ಗೊಂದಲ ದೂರವಾಗುವುದು, ಒತ್ತಡ ನಿವಾರಣೆ, ಸಂವಹನದಲ್ಲಿ ಸ್ಪಷ್ಟತೆ, ಹೊಸ ಆಲೋಚನೆಗಳು ಹುಟ್ಟುವುದು, ಕಲಿಯುವಲ್ಲಿನ ಚುರುಕುತನ, ಆತ್ಮವಿಶ್ವಾಸ ವೃದ್ಧಿ, ನಿರುಮ್ಮಳತೆ- ಇವೆಲ್ಲ ನಮ್ಮ ಮಾನಸಿಕ ಸ್ಥಿತಿ ಸುಧಾರಿಸಿದ್ದರಿಂದ ಆಗುವ ನೇರ ಪ್ರಯೋಜನಗಳು. ಧ್ಯಾನಸ್ಥರಾಗಿ ಕೂರುವುದಕ್ಕೆ ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕೆ?
Continue Reading

ಆರೋಗ್ಯ

Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

ಅಸ್ತಮಾವನ್ನು ಹೆಚ್ಚು ಮಾಡುವ ಅಲರ್ಜಿಕ್‌ ವಸ್ತುಗಳಿಂದ ದೂರ ಇರುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಇದರಿಂದಲೇ ಅಸ್ತಮಾ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಂಟು ಮಾಡಬಹುದು. ಯಾವೆಲ್ಲಾ ವಸ್ತುಗಳಿಂದ ಅಸ್ತಮಾ ರೋಗಿಗಳು ದೂರವಿರಬೇಕು? ಈ ಕುರಿತ ಉಪಯುಕ್ತ (Allergic Asthma) ಮಾಹಿತಿ ಇಲ್ಲಿದೆ.

VISTARANEWS.COM


on

Allergic Asthma
Koo

ಡಾ. ಸಚಿನ್ ಡಿ, ಸಲಹೆಗಾರ – ಇಂಟರ್ವೆನ್ಷನಲ್ ಪಲ್ಮನಾಲಜಿ ಕ್ರಿಟಿಕಲ್ ಕೇರ್ & ಸ್ಲೀಪ್ ಮೆಡಿಸಿನ್, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್

ಕೆಲವರನ್ನು ಬಿಟ್ಟೂ ಬಿಡದೆ ಕಾಡುವ ಕಾಯಿಲೆಗಳ ಪೈಕಿ ಈ ಅಸ್ತಮಾ ಕೂಡ ಒಂದು. ಅಸ್ತಮಾವನ್ನು ಹೆಚ್ಚು ಮಾಡುವ ಅಲರ್ಜಿಕ್‌ ವಸ್ತುಗಳಿಂದ ದೂರ ಇರುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಇದರಿಂದಲೇ ಅಸ್ತಮಾ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಂಟು ಮಾಡಬಹುದು. ಯಾವೆಲ್ಲಾ ವಸ್ತುಗಳಿಂದ ಅಸ್ತಮಾ ರೋಗಿಗಳು ದೂರವಿರಬೇಕು ಎಂಬುದರ ಬಗ್ಗೆ (Allergic Asthma) ಇಲ್ಲಿದೆ ಮಾಹಿತಿ.

Perfumes

ಸುಗಂಧ ದ್ರವ್ಯಗಳು

ಸಾಕಷ್ಟು ಜನರಿಗೆ ಪರ್ಫ್ಯೂಮ್‌ ಅಥವಾ ಸುಗಂಧ ದ್ರವ್ಯ ಹಾಕದೇ ಹೊರ ಹೋಗುವುದಿಲ್ಲ. ಆದರೆ, ಇದು ಅಸ್ತಮಾ ಇರುವವರಿಗೆ ಇನ್ನಷ್ಟು ಅಲರ್ಜಿ ಹೆಚ್ಚಿಸುವ ಸಾಧ್ಯತೆ ಇದೆ. ಪರ್ಫ್ಯೂಮ್‌, ಸುಗಂಧಭರಿತ ಲೋಷನ್‌ಗಳು ಮತ್ತು ಏರ್ ಫ್ರೆಶ್‌ನರ್‌ಗಳು ಕೆಲವು ವ್ಯಕ್ತಿಗಳಿಗೆ ಆಸ್ತಮಾ ರೋಗಲಕ್ಷಣಗಳನ್ನು ಪ್ರಚೋದಿಸಬಹುದು. ಈ ಕೃತಕ ಸುಗಂಧ ದ್ರವ್ಯಗಳು ಒಲಟೈಲ್‌ ಆರ್ಗಾನಿಕ್‌ ಕಾಂಪೋನೆಂಟ್ಸ್‌ (VOCs)ಗಳನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಶ್ವಾಸನಾಳವು ಕೆರಳಿ, ಕೆಮ್ಮು, ಉಬ್ಬಸ ಅಥವಾ ಉಸಿರಾಟದ ತೊಂದರೆ ಉಂಟು ಮಾಡಲಿದೆ.

ಗುಡುಗು ಸಹಿತ ಗಾಳಿಯಿಂದ ದೂರವಿರಿ

ಹೆಚ್ಚಿನ ಜನರು ಗುಡುಗು ಸಹಿತ ತಂಪಾದ ಗಾಳಿಯನ್ನು ಆನಂದಿಸಲು ಇಷ್ಟಪಡುತ್ತಾರೆ. ಆದರೆ ಇದು ಅಸ್ತಮಾ ರೋಗಿಗಳಿಗೆ ಸಮಸ್ಯೆ ಉಂಟು ಮಾಡಬಹುದು. ಚಂಡಮಾರುತದ ಸಮಯದಲ್ಲಿ ಹವಾಮಾನದಲ್ಲಿನ ಬದಲಾವಣೆಗಳು ವಾತಾವರಣದಲ್ಲಿನ ಸಣ್ಣ ಹಾಗೂ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ. ಜೊತೆಗೆ, ಗಾಳಿಯಲ್ಲಿನ ತೇವಾಂಶವು ಅಸ್ತಮಾ ಉಲ್ಬಣವನ್ನು ಪ್ರಚೋದಿಸಲಿದೆ. ಹೀಗಾಗಿ ಅಸ್ತಮಾ ರೋಗಿಗಳು ಈ ಗಾಳಿಗೆ ಒಡ್ಡಿಕೊಳ್ಳುವುದು ಒಳ್ಳೆಯದಲ್ಲ.

Outdoor Exercise

ವ್ಯಾಯಾಮದಲ್ಲೂ ಇರಲಿ ಮಿತಿ

ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಅತ್ಯಗತ್ಯ, ಆದರೆ ಆಸ್ತಮಾ ಹೊಂದಿರುವವರಿಗೆ ಕೆಲವು ವ್ಯಾಯಾಮಗಳು ಸಹ ಉಬ್ಬಸ ಬರುವಂತೆ ಮಾಡಬಹುದು ಎಚ್ಚರ. ಅಸ್ತಮಾ ರೋಗಿಗಳಿಗೆ ಅತಿಯಾಗಿ ಓಡುವುದು, ತೀವ್ರ ದೈಹಿಕ ಚಟುವಟಿಕೆಗಳು, ದೂಳು ಭರದ ಜಾಗದಲ್ಲಿ ದೈಹಿಕ ಚಟುವಟಿಕೆ ನಡೆಸುವುದು, ಉಸಿರುಗಟ್ಟಿಸುವ ವ್ಯಾಯಾಮಗಳು ನಿಶಿದ್ಧ. ಏಕೆಂದರೆ, ಈ ಎಲ್ಲಾ ದೈಹಿಕ ಚಟುವಟಿಕೆಗಳು ಉಸಿರಾಟದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ದೈಹಿಕ ಚಟುವಟಿಕೆ ಅವಶ್ಯಕತೆ ಇದ್ದಲ್ಲಿ ಮೊದಲು ಇನ್ಹೇಲರ್‌ ಬಳಸುವುದು ಉತ್ತಮ. ಇದಲ್ಲದೆ, ಸಾಮಾನ್ಯ ವ್ಯಾಯಾಮ, ದೈಹಿಕ ಚಟುವಟಿಕೆ ಮಾಡಬಹುದು.

ಭಾವನಾತ್ಮಕ ಒತ್ತಡಕ್ಕೆ ಒಳಗಾಗದಿರಿ

ಆಸ್ತಮಾ ಕೇವಲ ದೈಹಿಕ ಸ್ಥಿತಿಯಲ್ಲದೆ, ಭಾವನಾತ್ಮಕ ಒತ್ತಡಕ್ಕೂ ಸಂಬಂಧ ಹೊಂದಿದೆ. ಅತಿಯಾದ ಸಂಕಟ, ಮಾನಸಿಕವಾಗಿ ನೋವು ಅನುಭವಿಸುವುದು, ಕೆಲವು ವಿಚಾರಗಳ ಬಗ್ಗೆ ಆಳವಾಗಿ ಯೋಚಿಸುವುದರಿಂದಲೂ ಸಹ ಹೈಪರ್ವೆನ್ಟಿಲೇಷನ್‌ಗೆ ಕಾರಣವಾಗಬಹುದು, ಇದರಿಂದ ಅಸ್ತಮಾ ರೋಗವು ಇನ್ನಷ್ಟು ಹದಗೆಡಬಹುದು.

Preservative food

ಪ್ರಿಜರ್‌ವೇಟಿವ್‌ ಆಹಾರ ಬಳಕೆ ಉತ್ತಮವಲ್ಲ

ಇನ್ನು, ಆಹಾರವನ್ನು ದೀರ್ಘಕಾಲ ಸುರಕ್ಷಿತವಾಗಿ ಇಡುವ ಪ್ರಿಜರ್‌ವೇಟಿವ್‌ ಬಳಸಿರುವ ಆಹಾರ ಸೇವನೆಯೂ ಕೂಡ ಅಸ್ತಮಾ ರೋಗವನ್ನು ಕೆರಳಿಸಬಹುದು ಎನ್ನಲಾಗಿದೆ.
ಇನ್ನು, ಸಂಸ್ಕರಿತ ಆಹಾರಗಳು ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯಗಳಲ್ಲಿ ಸಾಮಾನ್ಯವಾಗಿ ಸಂರಕ್ಷಕಗಳಾಗಿ ಬಳಸಲಾಗುವ ಸಲ್ಫೈಟ್‌ಗಳು ಉಬ್ಬಸ ಮತ್ತು ಉಸಿರಾಟದ ತೊಂದರೆಯಂತಹ ಆಸ್ತಮಾ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಹೀಗಾಗಿ ಆಸ್ತಮಾ ಹೊಂದಿರುವ ವ್ಯಕ್ತಿಗಳು ಆಹಾರದ ಲೇಬಲ್‌ಗಳನ್ನು ಓದುವುದು ಮತ್ತು ಸಲ್ಫೈಟ್-ಒಳಗೊಂಡಿರುವ ಉತ್ಪನ್ನಗಳನ್ನು ತಪ್ಪಿಸುವುದು ಒಳ್ಳೆಯದು

ಇದನ್ನೂ ಓದಿ: Leg Cramps At Night: ರಾತ್ರಿ ಮಲಗಿದಾಗ ಕಾಡುವ ಕಾಲುನೋವಿಗೆ ಇದೆ ಪರಿಹಾರ!

ಕೆಲಸಗಳ ಆಯ್ಕೆಯಲ್ಲಿ ಇರಲಿ ಎಚ್ಚರ

ಇನ್ನು, ಕೆಲವರು ಅಸ್ತಮಾ ಹೊಂದಿರುವವರು ತಾವು ಮಾಡುವ ಕೆಲಸಗಳ ಬಗ್ಗೆಯೂ ಜಾಗೃತಿ ವಹಿಸುವುದು ಉತ್ತಮ. ಸಾಕುಪ್ರಾಣಿಗಳನ್ನು ಪೋಷಿಸುವ ಕೆಲಸ, ಕೃಷಿ, ಧೂಳು ಪ್ರದೂಷಣೆಗೆ ಒಡ್ಡುವ ಕೆಲಸಗಳು, ಹೊಗೆಯುಕ್ತ, ಹೆಚ್ಚು ಸುಂಗಂಧಭರಿತ ನಿರ್ಮಾಣದ ಕೆಲಸ ಸೇರಿದಂತೆ ನಿಮ್ಮ ಅಸ್ತಮಾವನ್ನು ಹೆಚ್ಚಿಸುವ ಕೆಲಸಗಳಿಂದ ದೂರವಿರಿ. ಕೆಲಸ ಜೀವನ ನಡೆಸಲು ಮುಖ್ಯವೆ ಆದರೂ, ಆರೋಗ್ಯ ದುಡಿಮೆಗಿಂತಲೂ ಮುಖ್ಯ ಎಂಬುದನ್ನು ಮರೆಯುವಂತಿಲ್ಲ.

Continue Reading
Advertisement
HD Kumaraswamy
ಕರ್ನಾಟಕ11 mins ago

HD Kumaraswamy: ಚನ್ನಪಟ್ಟಣ ಜನರನ್ನು ಯಾರೂ ಭಯಪಡಿಸಲು ಆಗಲ್ಲ; ಡಿಕೆ ಬ್ರದರ್ಸ್‌ ವಿರುದ್ಧ ಎಚ್‌ಡಿಕೆ ವಾಗ್ದಾಳಿ

Father's Day Fashion
ಫ್ಯಾಷನ್14 mins ago

Father’s Day Fashion: ಅಪ್ಪಂದಿರ ದಿನಕ್ಕೂ ಉಂಟು ಫ್ಯಾಷನ್‌ ಸ್ಟೇಟ್‌ಮೆಂಟ್ಸ್!

Kendra Sahitya Akademi Award
ಪ್ರಮುಖ ಸುದ್ದಿ33 mins ago

ಕರ್ನಾಟಕದ ಶ್ರುತಿ ಬಿ.ಆರ್, ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗರಿ

Period Pain Relief Food
ಆರೋಗ್ಯ41 mins ago

Period Pain Relief Food: ಪೀರಿಯಡ್‌ನ ನೋವು ನಿವಾರಣೆಗೆ ಈ ಆಹಾರಗಳು ಸೂಕ್ತ

karnataka Weather Forecast
ಮಳೆ49 mins ago

Karnataka Weather : ದಕ್ಷಿಣ ಒಳನಾಡು, ಮಲೆನಾಡಲ್ಲಿ ತಗ್ಗಿದ ಮಳೆ; ಕರಾವಳಿಯಲ್ಲಿ ಮುಂದುವರಿಯಲಿದೆ ಅಬ್ಬರ

Actor Darshan
ಕರ್ನಾಟಕ57 mins ago

Actor Darshan: ದರ್ಶನ್‌ ಗ್ಯಾಂಗ್‌ಗೆ ಮತ್ತೆ 5 ದಿನ ಪೊಲೀಸ್‌ ಕಸ್ಟಡಿ; ಜಡ್ಜ್‌ ಮುಂದೆ ಪವಿತ್ರಾ ಗೌಡ ಕಣ್ಣೀರು!

Kendra Sahitya Akademi Award
ಪ್ರಮುಖ ಸುದ್ದಿ1 hour ago

Kendra Sahitya Akademi Award: ಇಬ್ಬರು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಯಾರಿವರು?

New Fashion
ಫ್ಯಾಷನ್2 hours ago

New Fashion: ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ನಲ್ಲಿ ಟ್ರೆಂಡಿಯಾದ ಜಿಪ್ಪರ್‌ ಸ್ಟೈಲ್‌

Trent Boult
ಕ್ರೀಡೆ2 hours ago

Trent Boult: ಕೊನೆಯ ಟಿ20 ವಿಶ್ವಕಪ್​ ಆಡಲು ಸಿದ್ಧರಾದ ಟ್ರೆಂಟ್​ ಬೌಲ್ಟ್

Actor Darshan pavithra gowda relationship secrete
ಸ್ಯಾಂಡಲ್ ವುಡ್2 hours ago

Actor Darshan: ದರ್ಶನ್‌ ಬಲೆಗೆ ಪವಿತ್ರಾ ಗೌಡ ಬಿದ್ದಿದ್ದು ಹೇಗೆ? ಇವರು ಹೀರೋಯಿನ್‌ ಆಗಿದ್ದು ಯಾವಾಗ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ5 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 day ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ1 day ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌