ವಿಸ್ತಾರ Money Guide| ITR- 1ರಿಂದ ITR- 7 ತನಕ ಏಳು ಬಗೆ, ಯಾರಿಗೆ ಯಾವುದು? - Vistara News

ಮನಿ-ಗೈಡ್

ವಿಸ್ತಾರ Money Guide| ITR- 1ರಿಂದ ITR- 7 ತನಕ ಏಳು ಬಗೆ, ಯಾರಿಗೆ ಯಾವುದು?

VISTARANEWS.COM


on

ITR
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

೨೦೨೧-೨೨ರ ಸಾಲಿನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ( Filing Income tax return) ಕೊನೆಯ ದಿನಾಂಕ ಜುಲೈ ೩೧ ಆಗಿದೆ. ಐಟಿಆರ್‌ ಅರ್ಜಿಗಳಲ್ಲಿ ಹಲವು ವಿಧಗಳಿವೆ. ಬೇರೆ ಬೇರೆ ಆದಾಯ ಮೂಲಗಳನ್ನು ಹೊಂದಿರುವವರಿಗೆ ಐಟಿ ರಿಟರ್ನ್‌ ಅರ್ಜಿಯೂ (Form) ಭಿನ್ನವಾಗಿರುತ್ತದೆ. ಹೀಗಾಗಿ ಅರ್ಜಿಯನ್ನು ಆಯ್ಕೆ ಮಾಡುವ ಸಂದರ್ಭ ಗೊಂದಲಕ್ಕೀಡಾಗದಿರಿ.

ITR ೧ ಅಥವಾ ಸಹಜ್: ಐಟಿಆರ್‌- ೧ ಅಥವಾ ಸಹಜ್‌ ಅರ್ಜಿಯು ವೇತನದಾರರಿಗೆ ( salaried individuals) ಅನ್ವಯಿಸುತ್ತದೆ. ೨೦೨೧-೨೨ರಲ್ಲಿ ವಾರ್ಷಿಕ ಒಟ್ಟು ಆದಾಯ ೫೦ ಲಕ್ಷ ರೂ. ತನಕ ಆದಾಯ ಗಳಿಸಿರುವ ವೇತನದಾರರಿಗೆ ಇದು ಅನ್ವಯ. ವೇತನದಲ್ಲಿ ಪಿಂಚಣಿಯೂ ಸೇರುತ್ತದೆ. ಬ್ಯಾಂಕ್‌ ಠೇವಣಿಗಳಿಂದ ಅಥವಾ ಮನೆಯ ಆಸ್ತಿಯಿಂದ ಬರುವ ಆದಾಯ ಇದ್ದರೆ ಐಟಿಆರ್-‌೧ನಲ್ಲಿ ಉಲ್ಲೇಖಿಸಬಹುದು.

ಯಾರು ಐಟಿಆರ್‌- ೧ ಅಥವಾ ಸಹಜ್‌ ಅರ್ಜಿಯನ್ನು ಬಳಸಬಾರದು?

  • ಅನಿವಾಸಿಯರು, ಮೂಲತಃ ಇಲ್ಲಿನ ನಿವಾಸಿಗಳಲ್ಲದವರು.
  • ಒಟ್ಟು ವಾರ್ಷಿಕ ಆದಾಯ ೫೦ ಲಕ್ಷ ರೂ.ಗಿಂತ ಹೆಚ್ಚು ಇರುವವರು
  • ಕಂಪನಿಯ ನಿರ್ದೇಶಕರು
  • ನೋಂದಾಯಿತವಲ್ಲದ ಈಕ್ವಿಟಿ ಷೇರುಗಳನ್ನು ಹೊಂದುರುವವರು.
  • ಒಂದಕ್ಕಿಂತ ಹೆಚ್ಚು ಮನೆಯ ಆಸ್ತಿ, ಕ್ಯಾಪಿಟಲ್‌ ಗೇನ್ಸ್‌, ಬಿಸಿನೆಸ್‌ ಅಥವಾ ಪ್ರೊಫೆಷನ್‌ನಿಂದ ಗಳಿಸಿದ ಆಧಾಯ, ಲಾಟರಿಯಲ್ಲಿ ಗೆದ್ದ ಆದಾಯ ಇರುವವರು.
  • ಭಾರತದಿಂದ ಹೊರಗೆ ಆಸ್ತಿಪಾಸ್ತಿ ಇರುವವರು.

ITR – ೨

cash

ಈ ಅರ್ಜಿಯನ್ನು ೨೦೨೧-೨೨ರಲ್ಲಿ ವಾರ್ಷಿಕ ೫೦ ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವ ವೇತನದಾರರು ಬಳಸಬೇಕು. ಕ್ಯಾಪಿಟಲ್‌ ಗೇನ್ಸ್‌ (ಅಲ್ಪಾವಧಿ ಮತ್ತು ದೀರ್ಘಾವಧಿ) ಆದಾಯ ಹೊಂದಿರುವವರೂ ಈ ಅರ್ಜಿ ಬಳಸಬೇಕು. ಒಂದಕ್ಕಿಂತ ಹೆಚ್ಚು ಮನೆಯ ಆಸ್ತಿಯಿಂದ ಆದಾಯ ಗಳಿಸಿದವರೂ ಈ ಅರ್ಜಿ ಉಪಯೋಗಿಸಬೇಕು. ಬಡ್ಡಿ, ಕೌಟುಂಬಿಕ ಪಿಂಚಣಿ (Family pensioņ) ಡಿವಿಡೆಂಡ್‌, ಲಾಟರಿಯಿಂದ ಗೆದ್ದ ಹಣ ಇದ್ದರೆ ಐಟಿಆರ್-‌೨ ಬಳಸಬೇಕು. ನೋಂದಾಯಿತವಲ್ಲದ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿರುವವರು, ಕಂಪನಿಯ ನಿರ್ದೇಶಕರು, ಭಾರತದ ಹೊರಗಿನ ಮೂಲಗಳಿಂದ ಆದಾಯ ಇರುವವರು ಕೂಡ ಇದೇ ಅರ್ಜಿ ಬಳಸಬೇಕು. ಬಿಸಿನೆಸ್‌ ಮೂಲಕ ಅಥವಾ ಇತರ ಪ್ರೊಫೆಷನ್‌ಗಳ ಮೂಲಕ ಆದಾಯ ಇರುವವರು ಐಟಿಆರ್‌ ೨ ಬಳಸಬಾರದು.

ITR- 3: ಬಿಸಿನೆಸ್‌ ಅಥವಾ ಯಾವುದಾದರೂ ವೃತ್ತಿ ಅಥವಾ ಪ್ರೊಫೆಷನ್‌ ಮೂಲಕ (ವೇತನದಾರ ಅಲ್ಲ) ಆದಾಯ ಹೊಂದಿದವರು ಐಟಿಆರ್-‌೩ ಬಳಸಬೇಕು. ಆದರೆ ಕಂಪನಿಗಳನ್ನು ನಡೆಸುವ ಮೂಲಕ ಆದಾಯ ಪಡೆಯುವವವರಿಗೆ ಈ ಅರ್ಜಿ ಆಗುವುದಿಲ್ಲ.

ITR- ೪ ಅಥವಾ ಸುಗಮ್: ಕಂಪನಿ ಅಥವಾ ಬಿಸಿನೆಸ್‌ನಲ್ಲಿ ಲಿಮಿಟೆಡ್‌ ಲಾಯಬಿಲಿಟಿ ಪಾರ್ಟ್ನರ್‌ಶಿಪ್‌ ‌(LLP) ಮತ್ತು ಪಾರ್ಟ್ನರ್‌ಶಿಪ್ ಎಂಬ ಎರಡು ವಿಧಗಳಿವೆ. ಎಲ್‌ಎಲ್‌ಪಿ ಅಲ್ಲದ ಕಂಪನಿ ಅಥವಾ ಸಂಸ್ಥೆಗಳು ಐಟಿಆರ್‌ ೪ ಅರ್ಜಿ ಬಳಸಬೇಕು. ಎರಡನೆಯದಾಗಿ ಅಂದಾಜು ಆದಾಯ ಯೋಜನೆ ( Presumptive income scheme) ಮೂಲಕ ತೆರಿಗೆ ಲೆಕ್ಕಾಚಾರ ಆಯ್ಕೆ ಬಯಸುವವರಿಗೆ ಸುಗಮ್‌ ಅರ್ಜಿ ಅಗತ್ಯ. ಕಾನೂನು, ವೈದ್ಯಕೀಯ, ಎಂಜಿನಿಯರಿಂಗ್‌ ಅಥವಾ ಆರ್ಕಿಟೆಕ್ಟ್‌, ಅಕೌಂಟೆನ್ಸಿ, ಟೆಕ್ನಿಕಲ್‌ ಕನ್ಸಲ್ಟೆನ್ಸಿ, ಒಳಾಂಗಣ ವಿನ್ಯಾಸ ವಲಯದಲ್ಲಿ ಆದಾಯ ಗಳಿಸುವವರು ಸುಗಮ್‌ ಅರ್ಜಿ ಬಳಸಬೇಕು.

ITR- 5 ಮತ್ತು ITR- ೬: ಈ ಎರಡೂ ಫಾರ್ಮ್‌ಗಳು ವೈಯಕ್ತಿಕ ತೆರಿಗೆದಾರರಿಗೆ ಇರುವಂಥದ್ದಲ್ಲ. ಐಟಿಆರ್‌ ೫ ‌ಅರ್ಜಿಯು ಪಾರ್ಟ್ನರ್‌ಶಿಪ್‌ ಕಂಪನಿಗಳು, ಬಿಸಿನೆಸ್‌ ಟ್ರಸ್ಟ್‌, ಇನ್ವೆಸ್ಟ್‌ಮೆಂಟ್‌ ಫಂಡ್ ಕಂಪನಿಗಳಿಗೆ ಅನ್ವಯ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ ೧೧ ಹೊರತುಪಡಿಸಿದಂತೆ ನೋಂದಣಿಯಾಗಿರುವ ಕಂಪನಿಗಳಿಗೆ ಐಟಿಆರ್‌ ೬ ಅನ್ವಯಿಸುತ್ತದೆ. ವೈಯಕ್ತಿಕ ತೆರಿಗೆದಾರರು ಈ ಎರಡೂ ಫಾರ್ಮ್‌ಗಳನ್ನು ಬಳಸಬಾರದು.

ಐಟಿಆರ್‌- ೭: ಚಾರಿಟೆಬಲ್‌ ಸಂಸ್ಥೆಗಳು, ಧಾರ್ಮಿಕ ಟ್ರಸ್ಟ್‌, ರಿಸರ್ಚ್‌ ಅಸೋಸಿಯೇಶನ್‌, ನ್ಯೂಸ್‌ ಏಜೆನ್ಸಿ ಅಥವಾ ಕಾಯಿದೆಯಡಿಯಲ್ಲಿ ನಮೂದಿಸಿರುವ ಸಂಸ್ಥೆಗಳಿಗೆ ಐಟಿಆರ್‌- ೭ ಫಾರ್ಮ್‌ ಅನ್ವಯವಾಗುತ್ತದೆ.

ಆದಾಯ ತೆರಿಗೆ ಬರದಿದ್ದರೂ, ಐಟಿಆರ್‌ ಸಲ್ಲಿಸುವುದರಿಂದ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿ ಅಮೂಲ್ಯ ದಾಖಲೆ ಆಗುವುದರಿಂದ ಐಟಿ ರಿಟರ್ನ್‌ ಸಲ್ಲಿಸುವುದು ಉತ್ತಮ. ನೀವು ವೇತನದಾರರಾಗಿದ್ದು, ಗೃಹ ಸಾಲ ಖರೀದಿಯ ಸಂದರ್ಭದಲ್ಲೂ ಕಳೆದ ಮೂರು ವರ್ಷಗಳ ಐಟಿಆರ್‌ ರಿಟರ್ನ್‌ ದಾಖಲೆಯ ಅವಶ್ಯಕತೆ ಬರುತ್ತದೆ. ಗೊಂದಲವಿದ್ದರೆ ಆರ್ಥಿಕ ತಜ್ಞರ ಸಲಹೆ ಪಡೆಯಬೇಕು ಎನ್ನುತ್ತಾರೆ ಬೆಂಗಳೂರು ಮೂಲದ ಹಣಕಾಸು ಸಲಹೆಗಾರ ದತ್ತಾತ್ರೇಯ ಬಿ.ಕೆ ಅವರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಐಟಿಆರ್ ಇನ್ನೂ ಸಲ್ಲಿಸಿಲ್ಲವೇ? ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈ ಟಿಪ್ಸ್‌ ಫಾಲೋ ಮಾಡಿ

Money Guide: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಕೆಲವೇ ದಿನ ಬಾಕಿ ಉಳಿದಿದೆ. ಜುಲೈ 31 ದಂಡ ರಹಿತವಾಗಿ ಐಟಿಆರ್ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈಗಲೇ ಫೈಲ್‌ ಮಾಡಿ. ಐಟಿಆರ್ ಫೈಲ್ ಮಾಡುವಾಗ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಎಲ್ಲ ತೆರಿಗೆದಾರರೇ ಗಮನಿಸಿ. ಆದಾಯ ತೆರಿಗೆ ರಿಟರ್ನ್ (Income Tax Returns) ಫೈಲ್ ಮಾಡಲು ಕೆಲವೇ ದಿನ ಬಾಕಿ ಉಳಿದಿದೆ. ಜುಲೈ 31 ದಂಡ ರಹಿತವಾಗಿ ಐಟಿಆರ್ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಈಗಾಗಲೇ 5 ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಸಲಾಗಿದೆ. ತೆರಿಗೆ ಪಾವತಿದಾರರು ಯಾವುದೇ ಗಡುವು ವಿಸ್ತರಣೆಗಾಗಿ ಕಾಯಬೇಡಿ ಮತ್ತು ಈಗಲೇ ಐಟಿಆರ್ ಸಲ್ಲಿಸಿ ಎನ್ನುವುದು ತಜ್ಞರ ಸಲಹೆ. ಐಟಿಆರ್ ಫೈಲ್ ಮಾಡುವಾಗ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ಮಾಹಿತಿ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

“ಈ ಹಣಕಾಸು ವರ್ಷದ ಐಟಿಆರ್ ಸಲ್ಲಿಸದೆ ಇರುವವರು ಕೊನೆಯ ಕ್ಷಣದ ಗೊಂದಲವನ್ನು ತಪ್ಪಿಸಲು ಆದಷ್ಟು ಬೇಗ ಫೈಲ್‌ ಮಾಡಿʼʼ ಎಂದು ಆದಾಯ ತೆರಿಗೆ ಇಲಾಖೆ ತನ್ನ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ. ಕಳೆದ ವರ್ಷದ ಜುಲೈ 27ಕ್ಕೆ ಹೋಲಿಸಿದರೆ ಈ ವರ್ಷ ಅತಿ ಹೆಚ್ಚು ಫೈಲಿಂಗ್‌ ಆಗಿದೆ. ಜುಲೈ 26ರವರೆಗೆ 5 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದೂ ಹೇಳಿದೆ.

ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ

ಗಡುವು ಮುಗಿಯುವ ದಿನ ಸಮೀಪಿಸುತ್ತಿರುವುದರಿಂದ ತೆರಿಗೆದಾರರು ಐಟಿಆರ್ ಸಲ್ಲಿಸಲು ಪ್ರಾರಂಭಿಸುವ ಮೊದಲು ತಮ್ಮ ದಾಖಲೆಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು. ಅಗತ್ಯವಿರುವ ದಾಖಲೆಗಳೆಂದರೆ: ನಿಮ್ಮ ಕಂಪನಿಯಿಂದ ದೊರೆಯುವ ಫಾರ್ಮ್ 16, ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳ ಬಡ್ಡಿ ಪ್ರಮಾಣ ಪತ್ರಗಳು, ಟಿಡಿಎಸ್ ಪ್ರಮಾಣ ಪತ್ರಗಳು, ತೆರಿಗೆ ಕ್ರೆಡಿಟ್ ವಿವರಗಳಿಗಾಗಿ ಫಾರ್ಮ್ 26 ಎಎಸ್, ಟ್ಯಾಕ್ಸ್‌ ಡಿಡಕ್ಷನ್‌ಗಾಗಿ ತೆರಿಗೆ ಸೆಕ್ಷನ್‌ 80 ಸಿ, 80 ಡಿ ಇತ್ಯಾದಿಯಲ್ಲಿನ ಹೂಡಿಕೆಯ ಪುರಾವೆ.

ಫಾರ್ಮ್ 26 ಎಎಸ್‌ (Form 26AS) ಪರಿಶೀಲಿಸಿ

ಫಾರ್ಮ್ 26 ಎಎಸ್‌ನಲ್ಲಿನ ವಿವರಗಳು ನಿಮ್ಮ ಐಟಿಆರ್ ಫಾರ್ಮ್‌ನಲ್ಲಿರುವ ವಿವರಗಳೊಂದಿಗೆ ಹೊಂದಿಕೆಯಾಗುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಫಾರ್ಮ್ 26 ಎಎಸ್‌ ಕಡಿತಗೊಳಿಸಿದ ತೆರಿಗೆ, ಸಂಗ್ರಹಿಸಿದ ತೆರಿಗೆ ಮತ್ತು ಹಣಕಾಸು ವರ್ಷದಲ್ಲಿ ಪಾವತಿಸಿದ ಯಾವುದೇ ಮುಂಗಡ ತೆರಿಗೆಯ ವಿವರಗಳನ್ನು ಒದಗಿಸುತ್ತದೆ.

ಸೂಕ್ತ ಐಟಿಆರ್ ಫಾರ್ಮ್‌ ಆಯ್ಕೆ ಮಾಡಿ

ಸರಿಯಾದ ಐಟಿಆರ್ ಫಾರ್ಮ್ ಅನ್ನು ಆಯ್ಕೆ ಮಾಡುವುದು ಕೂಡ ಮುಖ್ಯ. ಉದಾಹರಣೆಗೆ ವಾರ್ಷಿಕ ಆದಾಯ 50 ಲಕ್ಷ ರೂ. ವರೆಗಿನ ಸಂಬಳ ಪಡೆಯುವ ವ್ಯಕ್ತಿಗಳು ರಿಟರ್ನ್ಸ್ ಸಲ್ಲಿಸಲು ಐಟಿಆರ್ ಫಾರ್ಮ್ 1 ಅನ್ನು ಬಳಸುತ್ತಾರೆ. 50 ಲಕ್ಷ ರೂ. ವರೆಗಿನ ಆದಾಯವು ಸಂಬಳ, ಪಿಂಚಣಿ, ಒಂದು ಮನೆಯ ಆಸ್ತಿಯಿಂದ ಆದಾಯ ಮತ್ತು ಇತರ ಮೂಲಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 5,000 ರೂ. ವರೆಗಿನ ಕೃಷಿ ಆದಾಯವೂ ಸೇರಿದೆ. ಗಮನಿಸಿ ತಪ್ಪು ಫಾರ್ಮ್ ಅನ್ನು ಬಳಸುವುದು ನಿಮ್ಮ ಐಟಿಆರ್ ತಿರಸ್ಕಾರಕ್ಕೆ ಕಾರಣವಾಗಬಹುದು.

ನಿಮ್ಮೆಲ್ಲ ಆದಾಯ ಮೂಲಗಳನ್ನು ಬಹಿರಂಗಪಡಿಸಿ

ಸಂಬಳ, ಬಡ್ಡಿ, ಬಾಡಿಗೆ ಆದಾಯ, ಬಂಡವಾಳ ಲಾಭಗಳು ಮತ್ತು ಇತರ ಯಾವುದೇ ಮೂಲಗಳು ಸೇರಿದಂತೆ ನಿಮ್ಮ ಎಲ್ಲ ಆದಾಯದ ಮೂಲಗಳನ್ನು ಬಹಿರಂಗಪಡಿಸಿ. ಬಹಿರಂಗಪಡಿಸದಿದ್ದರೆ ದಂಡ ಬೀಳುವ ಸಾಧ್ಯತೆ ಇದೆ.

ವಿನಾಯಿತಿಗಳು

ಆದಾಯ ತೆರಿಗೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಬರುವ ಎಲ್ಲ ಅರ್ಹ ಕಡಿತಗಳನ್ನು ಕ್ಲೈಮ್ ಮಾಡುವುದನ್ನು ಮರೆಯಬೇಡಿ. ಇದರಿಂದ ಗರಿಷ್ಠ ತೆರಿಗೆ ಉಳಿತಾಯ ಮಾಡಬಹುದು. ಲಭ್ಯವಿರುವ ಕಡಿತಗಳೆಂದರೆ:

ಸೆಕ್ಷನ್ 80 ಸಿ: ಪಿಪಿಎಫ್, ಎನ್ಎಸ್‌ಸಿ, ಇಎಲ್ಎಸ್ಎಸ್ ಇತ್ಯಾದಿಗಳಲ್ಲಿನ ಹೂಡಿಕೆ.
ಸೆಕ್ಷನ್ 80 ಡಿ: ಆರೋಗ್ಯ ವಿಮಾ ಪ್ರೀಮಿಯಂ.
ಸೆಕ್ಷನ್ 24 (ಬಿ): ಗೃಹ ಸಾಲದ ಮೇಲಿನ ಬಡ್ಡಿ- ಇವಕ್ಕೆ ಸಂಬಂಧಿಸಿ ದಾಖಲೆಗಳನ್ನು ಹೊಂದಿಸಿ.

ವಿನಾಯಿತಿ ಆದಾಯವನ್ನು ವರದಿ ಮಾಡಿ

    ಕೃಷಿ ಆದಾಯದಂತಹ ವಿನಾಯಿತಿ ಆದಾಯವನ್ನು ಐಟಿಆರ್‌ನಲ್ಲಿ ವರದಿ ಮಾಡಿ. ತೆರಿಗೆಗೆ ಒಳಪಡದಿದ್ದರೂ ಅದನ್ನು ನಮೂದಿಸಿಬೇಕು. ಇದು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ಭವಿಷ್ಯದಲ್ಲಿ ಕಂಡುಬರಬಹುದಾದ ತೊಡಕುಗಳನ್ನು ತಪ್ಪಿಸುತ್ತದೆ.

    ನಿಮ್ಮ ಬ್ಯಾಂಕ್ ಖಾತೆ ಸಮರ್ಪಕವಾಗಿರಲಿ

    ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಪಾಸ್‌ಬುಕ್‌ಗಳು ಎಲ್ಲ ವಹಿವಾಟು (Transactions)ಗಳನ್ನು ನಿಖರವಾಗಿ ಪ್ರತಿಬಿಂಬಿಸುತ್ತವೆ ಎಂದು ಖಚಿತಪಡಿಸಿಕೊಳ್ಳಿ. ಎಲ್ಲ ತೆರಿಗೆ ಕಡಿತಗಳು ಮತ್ತು ಪಾವತಿಗಳನ್ನು ಲೆಕ್ಕ ಹಾಕಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅವುಗಳನ್ನು ಫಾರ್ಮ್ 26 ಎಎಸ್‌ನೊಂದಿಗೆ ಕ್ರಾಸ್ ಚೆಕ್ ಮಾಡಿ.

    ಈ ಸಾಮಾನ್ಯ ತಪ್ಪುಗಳನ್ನು ಮಾಡಬೇಡಿ

    ತಪ್ಪಾದ ವೈಯಕ್ತಿಕ ಮಾಹಿತಿಯನ್ನು ನಮೂದಿಸುವುದು, ಬ್ಯಾಂಕ್ ಖಾತೆ ವಿವರಗಳಲ್ಲಿ ದೋಷಗಳು, ಆದಾಯವನ್ನು ತಪ್ಪಾಗಿ ವರದಿ ಮಾಡುವುದು ಅಥವಾ ಕೈಬಿಡುವುದು, ಒಟ್ಟು ಆದಾಯ ಮತ್ತು ತೆರಿಗೆ ಹೊಣೆಗಾರಿಕೆಯ ತಪ್ಪು ಲೆಕ್ಕಾಚಾರದಂತಹ ಸಾಮಾನ್ಯ ದೋಷಗಳ ಬಗ್ಗೆ ಜಾಗರೂಕರಾಗಿರಬೇಕು. ಭರ್ತಿ ಮಾಡಿದ ಬಳಿಕ ಮರುಪರಿಶೀಲಿಸಿ. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಧಾರ್ ಒಟಿಪಿ, ನೆಟ್ ಬ್ಯಾಂಕಿಂಗ್ ಅಥವಾ ಲಭ್ಯವಿರುವ ಇತರ ವಿಧಾನಗಳ ಮೂಲಕ ಇ-ಪರಿಶೀಲನೆ ಆಯ್ಕೆಯನ್ನು ಬಳಸಿ.

    ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?

    ತಜ್ಞರ ನೆರವು ಪಡೆದುಕೊಳ್ಳಿ

    ಐಟಿಆರ್ ಫೈಲಿಂಗ್ ಪ್ರಕ್ರಿಯೆಯ ವೇಳೆ ಯಾವುದೇ ಅನುಮಾನ, ಗೊಂದಲ ಮೂಡಿದರೆ ತಜ್ಞರ ನೆರವು ಪಡೆದುಕೊಳ್ಳಿ.

    ಕೊನೆಯ ಕ್ಷಣದವರೆಗೂ ಕಾಯಬೇಡಿ

    ಗಡುವು ವಿಸ್ತರಿಸುವ ನಿರೀಕ್ಷೆಗಳಿದ್ದರೂ ಅದಕ್ಕಾಗಿ ಕಾಯುವುದು ಸೂಕ್ತವಲ್ಲ. ಆದಾಯ ತೆರಿಗೆ ಇಲಾಖೆ ಅನೇಕ ಮಾಧ್ಯಮಗಳ ಮೂಲಕ ತೆರಿಗೆದಾರರಿಗೆ ಸಾಧ್ಯವಾದಷ್ಟು ಬೇಗ ರಿಟರ್ನ್ ಸಲ್ಲಿಸುವಂತೆ ನೆನಪಿಸುತ್ತದೆ. ಇದರಿಂದ ಕೊನೆಯ ಕ್ಷಣದ ಗೊಂದಲ ನಿವಾರಿಸಬಹುದು ಎನ್ನುವುದೇ ಇದಕ್ಕೆ ಮುಖ್ಯ ಕಾರಣ.

    Continue Reading

    ಮನಿ-ಗೈಡ್

    Tax Saving Tips: 10 ಲಕ್ಷ ರೂ. ಆದಾಯ ಇದ್ದರೂ ತೆರಿಗೆಯಿಂದ ಪಾರಾಗಲು ಸಾಧ್ಯ! ಇಲ್ಲಿದೆ ಸರಳ ಲೆಕ್ಕಾಚಾರ!

    Tax Saving Tips: ಕೇಂದ್ರ ಬಜೆಟ್‌ನಲ್ಲಿ ಈ ಬಾರಿ 7.75 ಲಕ್ಷ ರೂ.ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಆದರೆ ವಾರ್ಷಿಕ ಆದಾಯ 10 ಲಕ್ಷ ರೂ.ಗಳಿದ್ದರೂ ಆದಾಯ ತೆರಿಗೆಯಿಂದ (Money Guide) ಮುಕ್ತರಾಗಿ ಇರಬಹುದು. ಇದು ಹೇಗೆ ಎನ್ನುವ ಲೆಕ್ಕಾಚಾರ ಇಲ್ಲಿದೆ.

    VISTARANEWS.COM


    on

    By

    Tax Saving Tips
    Koo

    ಕೇಂದ್ರ ಬಜೆಟ್‌ನಲ್ಲಿ (Union Budget 2024) ಈ ಬಾರಿ (Tax Saving Tips) ಹಣಕಾಸು (Money Guide) ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಹೊಸ ತೆರಿಗೆ ಪದ್ಧತಿಯಡಿ (New Tax Regime) ಬಹುದೊಡ್ಡ ತೆರಿಗೆ ವಿನಾಯಿತಿಯನ್ನು ನೀಡಿದ್ದಾರೆ. ಪ್ರಮಾಣಿತ ತೆರಿಗೆ ಕಡಿತವನ್ನು (standard tax deduction) 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸಿದ್ದಾರೆ. ಹೀಗಾಗಿ ಸಾಮಾನ್ಯ ಭಾರತೀಯ ನಾಗರಿಕರು 7.75 ಲಕ್ಷ ರೂ.ವರೆಗಿನ ಆದಾಯವನ್ನು (Money Guide) ತೆರಿಗೆ (tax free) ಮುಕ್ತಗೊಳಿಸಬಹುದು.

    ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯ 3.0ರ ಮೊದಲ ಬಜೆಟ್‌ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಜನರಿಗೆ ಬಹುದೊಡ್ಡ ಪ್ರಯೋಜನವನ್ನು ನೀಡಲಾಗಿದೆ. ಇದರಲ್ಲಿ ಹೊಸ ತೆರಿಗೆ ಪದ್ಧತಿಯಡಿ ದೊಡ್ಡ ರಿಯಾಯಿತಿ ನೀಡಿದ್ದು, ಪ್ರಮಾಣಿತ ಆದಾಯ ತೆರಿಗೆ ಕಡಿತವನ್ನು 50,000 ರೂ. ನಿಂದ 75,000 ರೂ.ಗೆ ಹೆಚ್ಚಿಸಲಾಗಿದೆ.

    ಇದರೊಂದಿಗೆ ತೆರಿಗೆ ಸ್ಲ್ಯಾಬ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. 7.75 ಲಕ್ಷ ರೂ. ಆದಾಯವು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಈಗ ಸಂಪೂರ್ಣ ತೆರಿಗೆ ಮುಕ್ತವಾಗಿದೆ. ಆದರೆ ಯಾರೊಬ್ಬರ ವಾರ್ಷಿಕ ಆದಾಯ 10 ಲಕ್ಷ ರೂ.ಗಳಿದ್ದರೆ ಅವರೂ ಆದಾಯ ತೆರಿಗೆಯಿಂದ ಮುಕ್ತರಾಗಿ ಇರಬಹುದು. ಇದಕ್ಕಾಗಿ ಕೆಲವು ಲೆಕ್ಕಾಚಾರಗಳನ್ನು ಇಲ್ಲಿ ನೀಡಲಾಗಿದೆ.

    Money Guide
    Money Guide


    ತೆರಿಗೆ ಉಳಿಸುವುದು ಹೇಗೆ?

    1. 10 ಲಕ್ಷ ರೂ.ವರೆಗಿನ ಆದಾಯದ ಮೇಲೆ ಆದಾಯ ತೆರಿಗೆ ಪ್ರಯೋಜನಗಳನ್ನು ಪಡೆಯಲು ತೆರಿಗೆ ರಿಟರ್ನ್ ಸಲ್ಲಿಕೆ ಮಾದರಿಯನ್ನು ಹಳೆಯ ತೆರಿಗೆ ಪದ್ಧತಿಗೆ ಬದಲಾಯಿಸಬೇಕಾಗುತ್ತದೆ. ಇದರಲ್ಲಿ ಅನೇಕ ರೀತಿಯ ಕಡಿತಗಳನ್ನು ಕ್ಲೈಮ್ ಮಾಡಬಹುದು ಮತ್ತು ಅನೇಕ ರೀತಿಯ ಆದಾಯದ ಮೇಲೆ ತೆರಿಗೆಯನ್ನು ಉಳಿಸಬಹುದು.

    2. ಹಳೆಯ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಂಡರೆ 50,000 ರೂ. ವರೆಗೆ ಪ್ರಮಾಣಿತ ಕಡಿತವನ್ನು ಪಡೆಯಬಹುದು. ಅಂದರೆ 50,000 ರೂ. ವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ಇದು ಒಟ್ಟು ಆದಾಯದಿಂದ ಮುಂಚಿತವಾಗಿ ಕಡಿತಗೊಳಿಸಲಾಗುವ ಮೊತ್ತವಾಗಿದೆ. ಅಂದರೆ 10 ಲಕ್ಷ ರೂಪಾಯಿ ಗಳಿಸುವ ವ್ಯಕ್ತಿಯ ತೆರಿಗೆಯ ಆದಾಯವು 9.50 ಲಕ್ಷ ರೂಪಾಯಿ ಆಗುತ್ತದೆ.

    3. ಇನ್ನು 80ಸಿಯ ಲಾಭವನ್ನು ನೀಡುವ ಪಿಪಿಎಫ್, ಇಪಿಎಫ್ ಮತ್ತು ಎನ್ ಎಸ್ ಸಿಯಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ 1.5 ಲಕ್ಷ ರೂ.ವರೆಗೆ ತೆರಿಗೆ ಉಳಿಸಬಹುದು. ಇದರಿಂದ 9.50 ಲಕ್ಷದಿಂದ 1.50 ಲಕ್ಷ ರೂ. ಕಡಿತಗೊಳಿಸಿದರೆ ತೆರಿಗೆಯ ಆದಾಯವು 8 ಲಕ್ಷ ರೂ.ಗಳಾಗುತ್ತದೆ.

    4. ಅಲ್ಲದೇ ಎನ್ ಪಿ ಎಸ್ ನಲ್ಲಿ ವಾರ್ಷಿಕವಾಗಿ 50,000 ರೂ.ವರೆಗೆ ಹೂಡಿಕೆ ಮಾಡಿದರೆ ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ 50,000 ರೂ. ಹೆಚ್ಚುವರಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ 8 ಲಕ್ಷದಿಂದ 50 ಸಾವಿರವನ್ನು ಕಳೆದರೆ ತೆರಿಗೆಯ ಆದಾಯವು 7.50 ಲಕ್ಷ ರೂಪಾಯಿಗಳಾಗುತ್ತದೆ.

    5. ಗೃಹ ಸಾಲ ಪಡೆದವರು ಆದಾಯ ತೆರಿಗೆಯ ಸೆಕ್ಷನ್ 24ಬಿ ಅಡಿಯಲ್ಲಿ 2 ಲಕ್ಷ ರೂಪಾಯಿಗಳವರೆಗೆ ಬಡ್ಡಿಯನ್ನು ಉಳಿಸಬಹುದು. ಈಗ 7.50 ಲಕ್ಷದಿಂದ 2 ಲಕ್ಷ ರೂಪಾಯಿ ಕಳೆದರೆ 5.50 ಲಕ್ಷ ರೂಪಾಯಿ ಉಳಿಯುತ್ತದೆ.

    6. ವೈದ್ಯಕೀಯ ವಿಮೆಗಳನ್ನು ತೆಗೆದುಕೊಂಡಿದ್ದರೆ ಆದಾಯ ತೆರಿಗೆಯ ಸೆಕ್ಷನ್ 80ಡಿ ಅಡಿಯಲ್ಲಿ 25 ಸಾವಿರ ರೂಪಾಯಿಗಳವರೆಗೆ ತೆರಿಗೆ ಉಳಿಸಬಹುದು. ಜೊತೆಗೆ ಹೆಂಡತಿ, ಮಕ್ಕಳ ಹೆಸರಿನಲ್ಲಿ ಆರೋಗ್ಯ ವಿಮೆಯಲ್ಲಿದ್ದರೆ 50,000 ರೂಪಾಯಿಗಳವರೆಗೆ ಹೆಚ್ಚುವರಿ ವಿನಾಯಿತಿ ಪಡೆಯಬಹುದು. ಇದರಿಂದ 5.50 ಲಕ್ಷ ರೂಪಾಯಿಗಳಿಂದ 75,000 ರೂಪಾಯಿಗಳನ್ನು ಹೆಚ್ಚು ಕಳೆದರೆ ಆದಾಯವು 4.75 ಲಕ್ಷ ರೂಪಾಯಿಗಳಾಗಿರುತ್ತದೆ.

    ಇದನ್ನೂ ಓದಿ: Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

    ಹಳೆಯ ತೆರಿಗೆ ಪದ್ಧತಿಯಲ್ಲಿ 5 ಲಕ್ಷ ರೂಪಾಯಿವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲದಿರುವುದರಿಂದ ಈ ಸಂದರ್ಭದಲ್ಲಿ 10 ಲಕ್ಷ ರೂ. ಆದಾಯವಿದ್ದವರಿಗೂ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಈ ರೀತಿಯಾಗಿ 10 ಲಕ್ಷ ರೂ. ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಬಹುದು.

    Continue Reading

    ಮನಿ-ಗೈಡ್

    Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

    ಮುದ್ರಾ ಸಾಲದ (Mudra loan) ಮಿತಿಗಳನ್ನು ಹೆಚ್ಚಿಸಿರುವುದರಿಂದ ಅನೇಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ಮುಖ್ಯವಾಗಿ ಸಣ್ಣ ಉದ್ಯಮಿಗಳು ಮತ್ತು ಉದ್ಯಮಿಗಳು ಇದರ ಲಾಭ ಪಡೆಯಲಿದ್ದಾರೆ. ಹೆಚ್ಚಿನ ಸಾಲದ ಮಿತಿಯೊಂದಿಗೆ ಇದಕ್ಕೆ ಕೆಲವು ಷರತ್ತುಗಳನ್ನು ಸಹ ಪರಿಚಯಿಸಲಾಗಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

    VISTARANEWS.COM


    on

    By

    Mudra loan
    Koo

    ಕೇಂದ್ರ ಬಜೆಟ್‌ನಲ್ಲಿ (Union Budget 2024) ಈ ಬಾರಿ ಹಲವಾರು ವಿಷಯಗಳ ಬಗ್ಗೆ ಕಾಳಜಿ ವಹಿಸಲಾಗಿದೆ. ಮೋದಿ ಸರ್ಕಾರದ (Modi government) ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಸಂಸತ್ತಿನಲ್ಲಿ ಮಂಡಿಸಿ ಹಲವು ಜನಪರ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ವೇಳೆ ಅವರು ಮುದ್ರಾ ಸಾಲದ (Mudra loan) ಕುರಿತು ಮಾತನಾಡಿದ್ದು, ಅದರ ಮಿತಿಗಳನ್ನು ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ.

    ಮುದ್ರಾ ಸಾಲದ ಮಿತಿಗಳನ್ನು ಹೆಚ್ಚಿಸಿರುವುದರಿಂದ ಅನೇಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ಮುಖ್ಯವಾಗಿ ಸಣ್ಣ ಉದ್ಯಮಿಗಳು ಮತ್ತು ಉದ್ಯಮಿಗಳು ಇದರ ಲಾಭ ಪಡೆಯಲಿದ್ದಾರೆ. ಹೆಚ್ಚಿನ ಸಾಲದ ಮಿತಿಯೊಂದಿಗೆ ಇದಕ್ಕೆ ಕೆಲವು ಷರತ್ತುಗಳನ್ನು ಸಹ ಪರಿಚಯಿಸಲಾಗಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.
    ಮುದ್ರಾ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದು ಉದ್ಯಮಿಯಾಗಲು ಬಯಸುವವರಿಗೆ ವರದಾನವಾಗಿದೆ.

    ಷರತ್ತುಗಳು ಏನು?

    ಹೆಚ್ಚಿದ ಸಾಲದ ಮಿತಿಗೆ ಅರ್ಹತೆ ಪಡೆಯಲು ಸಾಲಗಾರರು ಈ ಹಿಂದೆ ಮುದ್ರಾ ಸಾಲವನ್ನು ತೆಗೆದುಕೊಂಡು ಪೂರ್ಣವಾಗಿ ಮರುಪಾವತಿಸಿರಬೇಕು. ಹಾಗಿದ್ದರೆ ಮಾತ್ರ ಹೊಸ ಪ್ರಯೋಜನಗಳನ್ನು ಪಡೆಯಬಹುದು.

    ಮುದ್ರಾ ಸಾಲ ವಿಭಾಗಗಳು

    ಮುದ್ರಾ ಸಾಲಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ʼಶಿಶುʼ ವಿಭಾಗದಲ್ಲಿ 50,000 ರೂ.ವರೆಗೆ ಸಾಲ, ʼಕಿಶೋರʼ ವಿಭಾಗದಲ್ಲಿ 50,000 ರೂ.ನಿಂದ 5 ಲಕ್ಷ ರೂ. ವರೆಗೆ ಸಾಲ, ʼತರುಣ್ʼ ವಿಭಾಗದಲ್ಲಿ 5 ಲಕ್ಷದಿಂದ 10 ಲಕ್ಷ ರೂ.ವರೆಗಿನ ಸಾಲಗಳು.

    ಪರಿಣಾಮ ಮತ್ತು ವ್ಯಾಪ್ತಿ ಏನು?

    ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ 47 ಕೋಟಿಗೂ ಹೆಚ್ಚು ಸಣ್ಣ ಮತ್ತು ದೊಡ್ಡ ಉದ್ಯಮಗಳಿಗೆ 27.75 ಲಕ್ಷ ಕೋಟಿ ರೂ.ಗಳ ಸಾಲವನ್ನು ವಿತರಿಸಲಾಗಿದೆ. ಗಮನಾರ್ಹ ಸಂಗತಿ ಎಂದರೆ ಮಂಜೂರಾದ ಒಟ್ಟು 44.46 ಕೋಟಿ ಸಾಲದಲ್ಲಿ ಶೇ.69ರಷ್ಟು ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ.

    Mudra loan
    Mudra loan


    ಹಿಂದುಳಿದ ವರ್ಗದವರಿಗೆ ಬೆಂಬಲ

    2015ರ ಏಪ್ರಿಲ್ 8ರಂದು ಪ್ರಾರಂಭವಾದ ಮುದ್ರಾ ಯೋಜನೆಯು 2016ರಲ್ಲಿ ಪ್ರಾರಂಭವಾದ ಎಸ್‌ಯುಪಿಐ ಯೋಜನೆಯೊಂದಿಗೆ ವಿಶೇಷವಾಗಿ ಮಹಿಳೆಯರು ಮತ್ತು ಎಸ್ ಸಿ/ ಎಸ್‌ಟಿ ಸಮುದಾಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಗಳು ಹೊಸ ಉದ್ಯಮಗಳ ಸ್ಥಾಪನೆಯನ್ನು ಬೆಂಬಲಿಸುತ್ತವೆ ಮತ್ತು ಮಹಿಳೆಯರ ಆರ್ಥಿಕ ಉನ್ನತಿಗೆ ಪ್ರೋತ್ಸಾಹ ನೀಡುತ್ತದೆ.

    ಇದನ್ನೂ ಓದಿ: Union Budget 2024: ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ₹7,559 ಕೋಟಿ ಅನುದಾನ; ಕಳೆದ ವರ್ಷಕ್ಕಿಂತ ಕಡಿಮೆ

    ಉದ್ಯಮಶೀಲತೆಗೆ ಉತ್ತೇಜನ

    ʼಮುದ್ರಾʼ ಯೋಜನೆ ಮತ್ತು ಎಸ್‌ಯುಪಿಐ ಯೋಜನೆಗಳು ಅಗತ್ಯ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ವ್ಯಾಪಾರ ಅವಕಾಶಗಳನ್ನು ಮುಂದುವರಿಸಲು ಅನನುಕೂಲಕರ ಪರಿಸ್ಥಿತಿ ಎದುರಿಸುತ್ತಿರುವವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಬ್ಯಾಂಕ್‌ಗಳ ಸ್ಥಳೀಯ ಶಾಖೆಗೆ ಹೋಗಿ ಮುದ್ರಾ ಸಾಲ ಯೋಜನೆಯ ಮಾಹಿತಿ ಪಡೆಯಬಹುದು.

    Continue Reading

    ಮನಿ-ಗೈಡ್

    NPS Vatsalya Scheme: ಏನಿದು ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆ? ನಮ್ಮ ಮಕ್ಕಳಿಗೆ ಇದರಿಂದೇನು ಪ್ರಯೋಜನ?

    ಇನ್ನು ಮುಂದೆ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಗುವಿನ ಹೆಸರಿನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯ (NPS Vatsalya Scheme) ಖಾತೆಯನ್ನು ತೆರೆಯಬಹುದು ಎಂದು ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಎನ್‌ಪಿಎಸ್ ವಾತ್ಸಲ್ಯ ಯೋಜನೆ ಎಂದರೆ ಏನು, ಇದಕ್ಕೆ ಯಾರು ಅರ್ಹರು, ಯಾರು ಅರ್ಜಿ ಸಲ್ಲಿಸಬಹುದು ಮತ್ತು ಮೆಚ್ಯೂರಿಟಿಯನ್ನು ಪಡೆದ ಅನಂತರ ಖಾತೆ ಏನಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

    VISTARANEWS.COM


    on

    By

    NPS Vatsalya Yojana
    Koo

    ಮಕ್ಕಳಿಗಾಗಿ ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು (NPS Vatsalya scheme) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (finance minister Nirmala Sitharaman) ಅವರು 2024ರ ಕೇಂದ್ರ ಬಜೆಟ್‌ನಲ್ಲಿ (Union Budget 2024) ಘೋಷಿಸಿದ್ದಾರೆ. ರಾಷ್ಟ್ರೀಯ ಪಿಂಚಣಿ ಯೋಜನೆಯು (National Pension Scheme) ನಿವೃತ್ತಿ ಯೋಜನೆಯಾಗಿದ್ದು, ಇದರಲ್ಲಿ 18ನೇ ವಯಸ್ಸಿನಿಂದಲೇ ಹೂಡಿಕೆಯನ್ನು ಪ್ರಾರಂಭಿಸಿ 70ನೇ ವಯಸ್ಸಿನವರೆಗೆ ಹೂಡಿಕೆಯನ್ನು ಮಾಡಬಹುದು.

    ಇದೀಗ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ವಾತ್ಸಲ್ಯವನ್ನು ಘೋಷಿಸಲಾಗಿದೆ. ಎನ್‌ಪಿಎಸ್-ವಾತ್ಸಲ್ಯ ಯೋಜನೆಯನ್ನು ಅಪ್ರಾಪ್ತ ವಯಸ್ಕ ಮಕ್ಕಳಿಗೆ ಪೋಷಕರು ಮಾಡಬಹುದಾದ ಉಳಿತಾಯ ಯೋಜನೆಯಾಗಿದೆ. ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಮ್ಯಾಕ್ಸ್ ಲೈಫ್ ಪಿಂಚಣಿ ನಿಧಿ ನಿರ್ವಹಣೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಣಭೀರ್ ಸಿಂಗ್ ಧರಿವಾಲ್, ನಿವೃತ್ತಿ ಉಳಿತಾಯ ಮತ್ತು ದೀರ್ಘಾವಧಿಯ ಆರ್ಥಿಕ ಭದ್ರತೆಯನ್ನು ಉತ್ತೇಜಿಸುವಲ್ಲಿ ಕೇಂದ್ರ ಬಜೆಟ್‌ನ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ವಾತ್ಸಲ್ಯವು ಶ್ಲಾಘನೀಯ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

    ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಗುವಿನ ಎನ್‌ಪಿಎಸ್ ಖಾತೆಯನ್ನು ಪ್ರಾರಂಭಿಸಲು ಅವಕಾಶ ನೀಡುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಜವಾಬ್ದಾರಿಯುತ ಹಣಕಾಸು ನಿರ್ವಹಣೆಗೆ ಅಡಿಪಾಯವನ್ನು ಹೊಂದಿಸಿದಂತಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಈ ಖಾತೆಗಳು ನಿಯಮಿತ ಎನ್ ಪಿ ಎಸ್ ಯೋಜನೆಗಳಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಮಕ್ಕಳ ಪ್ರೌಢಾವಸ್ಥೆಯಲ್ಲಿ ಉಳಿತಾಯ ಅಭ್ಯಾಸಗಳ ಸುಗಮವಾಗಿ ಮುಂದುವರಿಯುತ್ತದೆ.

    ಎನ್‌ಪಿಎಸ್ ವಾತ್ಸಲ್ಯ ಯೋಜನೆಗೆ ಯಾರು ಅರ್ಹರು, ಯಾರು ಅರ್ಜಿ ಸಲ್ಲಿಸಬಹುದು ಮತ್ತು ಮೆಚ್ಯೂರಿಟಿಯನ್ನು ಪಡೆದ ಅನಂತರ ಖಾತೆಗೆ ಏನಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

    NPS Vatsalya Yojana
    NPS Vatsalya Yojana


    ಎನ್ ಪಿ ಎಸ್ ಎಂದರೇನು?

    ಎನ್‌ಪಿಎಸ್ ನಿವೃತ್ತಿ ಯೋಜನೆಯಾಗಿದ್ದು, ಆರ್ಥಿಕ ವರ್ಷದಲ್ಲಿ ಒಮ್ಮೆಯಾದರೂ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು.

    ಎನ್ ಪಿ ಎಸ್ ಅನ್ನು ಮಾರುಕಟ್ಟೆಗೆ ಲಿಂಕ್ ಮಾಡಲಾಗಿದ್ದು, ಇದರಲ್ಲಿ ನಿಧಿ ಯೋಜನೆ ಮತ್ತು ಈಕ್ವಿಟಿ ಮಾನ್ಯತೆಯ ಶೇಕಡಾವಾರು ಪ್ರಮಾಣವನ್ನು ಆಯ್ಕೆ ಮಾಡಬಹುದು.

    ನಿಧಿಯಲ್ಲಿ ಹೂಡಿಕೆಯಾಗಿರುವ ಮೊತ್ತದ ಕಾರ್ಯಕ್ಷಮತೆಯ ಆಧಾರದ ಮೇಲೆ ಎನ್ ಪಿ ಎಸ್ ಖಾತೆದಾರರು ನಿವೃತ್ತಿಯ ಸಮಯದಲ್ಲಿ ಒಂದು ದೊಡ್ಡ ಮೊತ್ತವನ್ನು ಪಡೆಯುತ್ತಾರೆ ಮತ್ತು ಮಾಸಿಕ ಪಿಂಚಣಿಗಾಗಿ ವರ್ಷಾಶನವನ್ನು ಖರೀದಿಸುವ ಆಯ್ಕೆ ಇದರಲ್ಲಿದೆ.

    60 ವರ್ಷಗಳ ನಿವೃತ್ತಿ ವಯಸ್ಸಿನಲ್ಲಿ ನಿವೃತ್ತಿ ಮೊತ್ತದ ಗರಿಷ್ಠ ಶೇ. 60ರಷ್ಟನ್ನು ಹಿಂತೆಗೆದುಕೊಳ್ಳುವ ಇನ್ನೊಂದು ಆಯ್ಕೆ ಇದರಲ್ಲಿದೆ. ಇದರಲ್ಲಿ ಉಳಿದ ಶೇ. 40ರಷ್ಟನ್ನು ವರ್ಷಾಶನವಾಗಿ ಖರೀದಿ ಮಾಡಬಹುದು. ಈ ರೀತಿಯ ನಿವೃತ್ತಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.

    ಎನ್‌ಪಿಎಸ್ ವಾತ್ಸಲ್ಯ ಯೋಜನೆ ಎನ್‌ಪಿಎಸ್‌ಗಿಂತ ಏಕೆ ಭಿನ್ನ?

    ಎನ್ ಪಿ ಎಸ್‌ನಲ್ಲಿ 18 ವರ್ಷ ವಯಸ್ಸಿನಲ್ಲೇ ಖಾತೆಯನ್ನು ತೆರೆಯಬಹುದು. ಎನ್ ಪಿ ಎಸ್ ವಾತ್ಸಲ್ಯದಲ್ಲಿ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಖಾತೆಯನ್ನು ತೆರೆಯಬಹುದು. ಇದರಲ್ಲಿ ಅಪ್ರಾಪ್ತರ ಕನಿಷ್ಠ ವಯಸ್ಸನ್ನು ಹಣಕಾಸು ಸಚಿವರು ತಿಳಿಸಿಲ್ಲ.

    NPS Vatsalya Yojana
    NPS Vatsalya Yojana


    ಮುಕ್ತಾಯದ ಅನಂತರ ಖಾತೆ ಏನಾಗುತ್ತದೆ?

    ಅಪ್ರಾಪ್ತ ವಯಸ್ಸಿನವರು ಪ್ರಾಪ್ತ ವಯಸ್ಸಿಗೆ ಬಂದಾಗ ಅವರ ಖಾತೆ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಿಂದ ಸಾಮಾನ್ಯ ಎನ್‌ಪಿಎಸ್ ಖಾತೆಯಾಗಿ ಪರಿವರ್ತಿಸಬಹುದು ಎಂದಿದ್ದಾರೆ ಹಣಕಾಸು ಸಚಿವರು.

    ಇದನ್ನೂ ಓದಿ: Ayushamn Card: 5 ಲಕ್ಷದವರೆಗೆ ಉಚಿತ ಚಿಕಿತ್ಸೆ; ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?

    ಎನ್ ಪಿ ಎಸ್ ಪ್ರಯೋಜನವೇನು?

    ಎನ್‌ಪಿಎಸ್ ಯೋಜನೆಯಡಿ ಖಾತೆದಾರರು ನಿರ್ದಿಷ್ಟ ಮೊತ್ತದ ಬಡ್ಡಿಯನ್ನು ಪಡೆಯುತ್ತಾರೆ. ಪೂರ್ಣ ಎನ್ ಪಿ ಎಸ್ ಖಾತೆಯಾಗಿ ಪರಿವರ್ತನೆಯಾದ ಬಳಿಕ ಖಾತೆದಾರನು 60ರ ನಿವೃತ್ತಿ ವಯಸ್ಸನ್ನು ತಲುಪಿದ ಮೇಲೆ ಖಾತೆಯಲ್ಲಿರುವ ಸಂಗ್ರಹ ಮೊತ್ತದೊಂದಿಗೆ ಬಡ್ಡಿ ಸೇರಿ ಗಣನೀಯ ಮೊತ್ತವನ್ನು ಪಡೆಯಬಹುದು.

    Continue Reading
    Advertisement
    Delhi Floods
    ಪ್ರಮುಖ ಸುದ್ದಿ2 hours ago

    Delhi Floods: ದೆಹಲಿಯಲ್ಲಿ ಭಾರಿ ಮಳೆ; ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವು!

    Paris Olympics 2024
    ಕ್ರೀಡೆ2 hours ago

    Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

    Pervez Musharraf
    ದೇಶ2 hours ago

    Pervez Musharraf: ಭಾರತ ವಿರೋಧಿ ಪರ್ವೇಜ್‌ ಮುಷರ‍್ರಫ್‌ಗೆ ಕೇರಳ ಬ್ಯಾಂಕ್‌ ಗೌರವ; ಭುಗಿಲೆದ್ದ ವಿವಾದ

    Paris Olympics 2024
    ಪ್ರಮುಖ ಸುದ್ದಿ2 hours ago

    Paris Olympics 2024 : ಷಟ್ಲರ್​ಗಳ ಪರಾಕ್ರಮ ಆರಂಭ; ಸಿಂಗಲ್ಸ್​ನಲ್ಲಿ ಲಕ್ಷ್ಯ ಸೇನ್​, ಡಬಲ್ಸ್​ನಲ್ಲಿ ಸಾತ್ವಿಕ್​- ಚಿರಾಗ್ ಜೋಡಿಗೆ ಗೆಲುವು

    Paris Olympics 2024
    ಪ್ರಮುಖ ಸುದ್ದಿ2 hours ago

    Paris Olympics 2024 : ಭಾರತ ಹಾಕಿ ತಂಡದ ಶುಭಾರಂಭ; ನ್ಯೂಜಿಲ್ಯಾಂಡ್ ವಿರುದ್ಧ 3-2 ಗೋಲ್​ಗಳ ಗೆಲುವು

    Tihar Jail
    ದೇಶ3 hours ago

    Tihar Jail: ತಿಹಾರ ಜೈಲಿನ 125 ಕೈದಿಗಳಿಗೆ ಎಚ್‌ಐವಿ ಪಾಸಿಟಿವ್‌; ಇವರು ‘ಬೇಲಿ’ ಹಾರಿದ್ದು ಎಲ್ಲಿ?

    IND vs SL
    ಪ್ರಮುಖ ಸುದ್ದಿ3 hours ago

    IND vs SL : ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ 43 ರನ್​ ಭರ್ಜರಿ ಜಯ

    Rishabh Pant
    ಪ್ರಮುಖ ಸುದ್ದಿ3 hours ago

    Rishabh Pant : ಧೋನಿಯಂತೆ ಭರ್ಜರಿ ಹೆಲಿಕಾಪ್ಟರ್​ ಶಾಟ್​​ ಮೂಲಕ ಸಿಕ್ಸರ್ ಬಾರಿಸಿದ ರಿಷಭ್ ಪಂತ್​

    Puneeth Kerehalli
    ಕರ್ನಾಟಕ3 hours ago

    Puneeth Kerehalli: ಪುನೀತ್‌ ಕೆರೆಹಳ್ಳಿಗೆ ನ್ಯಾಯಾಂಗ ಬಂಧನ; 14 ದಿನ ಪರಪ್ಪನ ಅಗ್ರಹಾರವೇ ಗತಿ!

    Mumbai Girl
    ದೇಶ4 hours ago

    ಬಾರೆ ಸಖಿ ಎಂದು 20 ವರ್ಷದ ಯುವತಿಯನ್ನು ಕರೆದುಕೊಂಡು ಹೋದ, ಕೊಂದು ಪೊದೆಯಲ್ಲಿ ಬಿಸಾಡಿದ; ಕೃತ್ಯಕ್ಕೆ ಕಾರಣವೇನು?

    Sharmitha Gowda in bikini
    ಕಿರುತೆರೆ10 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ10 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ9 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ8 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ10 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ10 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ9 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ7 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ8 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ11 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    Karnataka weather Forecast
    ಮಳೆ7 hours ago

    Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

    ramanagara news
    ರಾಮನಗರ12 hours ago

    Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

    karnataka rain
    ಮಳೆ13 hours ago

    Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

    Ankola landslide
    ಉತ್ತರ ಕನ್ನಡ1 day ago

    Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

    karnataka rain
    ಮಳೆ1 day ago

    Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

    Karnataka Rain
    ಮಳೆ1 day ago

    Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

    Karnataka rain
    ಮಳೆ1 day ago

    Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

    karnataka Rain
    ಮಳೆ2 days ago

    Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

    Actor Darshan
    ಸ್ಯಾಂಡಲ್ ವುಡ್3 days ago

    Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

    Actor Darshan
    ಸಿನಿಮಾ3 days ago

    Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

    ಟ್ರೆಂಡಿಂಗ್‌