Cricket Coach : ಟೀಮ್​ ಬಸ್​ನಲ್ಲಿ ಎಣ್ಣೆ ಹೊಡೆದ ಮಹಿಳೆಯರ ಕ್ರಿಕೆಟ್ ತಂಡದ ಕೋಚ್ ಸಸ್ಪೆಂಡ್​! - Vistara News

ಕ್ರೀಡೆ

Cricket Coach : ಟೀಮ್​ ಬಸ್​ನಲ್ಲಿ ಎಣ್ಣೆ ಹೊಡೆದ ಮಹಿಳೆಯರ ಕ್ರಿಕೆಟ್ ತಂಡದ ಕೋಚ್ ಸಸ್ಪೆಂಡ್​!

Cricket Coach : ವಿದ್ಯುತ್​ ಜಯಸಿಂಹ ಅವರು ಬಸ್​ನಲ್ಲಿಯೇ ಮದ್ಯಪಾನ ಮಾಡುತ್ತಿರುವ ವಿಡಿಯೊ ಸಮೇತ ದೂರು ದಾಖಲಾಗಿತ್ತು.

VISTARANEWS.COM


on

Cricket Coach
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್: ಟೀಮ್​ ಬಸ್​​ನಲ್ಲಿಯೇ ಮದ್ಯಪಾನ ಮಾಡಿದ ಹೈದರಾಬಾದ್​ ಹಿರಿಯ ಮಹಿಳಾ ತಂಡದ ಮುಖ್ಯ ಕೋಚ್ (Cricket Coach ) ವಿದ್ಯುತ್ ಜೈಸಿಂಹ ಅವರನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ ಜೈಸಿಂಹ ಅವರು ತಂಡದ ಬಸ್​ನಲ್ಲಿ ಮದ್ಯವನ್ನು ಸಾಗಿಸಿದ್ದಲ್ಲದೆ, ಸೇವಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಅಲ್ಲಿದೆ, ಆಟಗಾರ್ತಿಯರ ಜತೆ ಅನುಚಿತ ವರ್ತನೆ ತೋರಿದ್ದರು. ವಿಡಿಯೊ ವೈರಲ್​ ಆದ ಬಳಿಕ ಅವರನ್ನು ಅಮಾನತು ಮಾಡಲಾಗಿದೆ.

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​​ನ ಮೋಹನ್ ರಾವ್ ತಕ್ಷಣ ಮಧ್ಯಪ್ರವೇಶಿಸಿ, ಮುಂದಿನ ಸೂಚನೆ ಬರುವವರೆಗೆ ದೇಶದಲ್ಲಿ ಹಾಗೂ ಇನ್ನಿತರ ಎಲ್ಲ ಕಡೆ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಿಂದ ದೂರವಿರಲು ಜೈಸಿಂಹ ಅವರಿಗೆ ಸೂಚನೆ ನೀಡಿದ್ದಾರೆ. ಮುಂಬರುವ ವಾರಗಳಲ್ಲಿ ಹೈದರಾಬಾದ್ ಮಂಡಳಿಯು ಸಮಗ್ರ ತನಿಖೆಯನ್ನು ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ವಿದ್ಯುತ್ ಜೈಸಿಂಹ ಅವರು ತಂಡದ ಸಮ್ಮುಖದಲ್ಲಿ ಮದ್ಯ ಸೇವಿಸಿದ್ದಲ್ಲದೆ, ಆಟಗಾರರೊಂದಿಗೆ ಅನುಚಿತ ವರ್ತನೆಯನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿಲಾಗಿದೆ. ಈ ಬಗ್ಗೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​ಗೆ ಅನಾಮಧೇಯ ಇಮೇಲ್ ಬಂದಿತ್ತು. ಬಳಿಕ ಕ್ರಮ ಕೈಗೊಳ್ಳಲಾಗಿದೆ. ಹೈದರಾಬಾದ್ ಹಿರಿಯ ಮಹಿಳಾ ತಂಡದ ಕ್ರಿಕೆಟಿಗರ ಪೋಷಕರು ಜೈಸಿಂಹ ಅವರ ದುರ್ನಡತೆಯ ನಿದರ್ಶನಗಳನ್ನು ವಿವರಿಸಿ ಪತ್ರ ಬರೆದಿದ್ದಾರೆ. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಚಾರ ಪ್ರಸಾರವಾಗಲು ಪ್ರಾರಂಭಿಸಿದ ನಂತರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸಂಘ ಹೇಳಿದೆ. ‘

ಘಟನೆ ಹೈದರಾಬಾದ್ ರಾಜ್ಯ ಅಸೋಸಿಯೇಷನ್​ ವರ್ಚಸ್ಸಿಗೆ ಕಳಂಕ ತಂದಿದೆ. ವಿದ್ಯುತ್ ಜೈಸಿಂಹ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ಶಾಶ್ವತವಾಗಿ ವಜಾಗೊಳಿಸಬೇಕು. ಈ ಪ್ರಕರಣವನ್ನು ಪಕ್ಷಪಾತವಿಲ್ಲದೆ ಮತ್ತು ಪಾರದರ್ಶಕ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.

ಇದು ಗಂಭೀರ ಕಾಳಜಿಯ ವಿಷಯ

ಹೈದರಾಬಾದ್ ಅಸೋಸಿಯೇಷನ್ ಅಧ್ಯಕ್ಷ ಜಗ್ ಮೋಹನ್ ರಾವ್ ಅವರು ಬರೆದಿರುವ ಪತ್ರದಲ್ಲಿ, ವಿದ್ಯುತ್ ಜೈಸಿಂಹ ಅವರು ತಂಡದ ಬಸ್ ಒಳಗೆ ಮದ್ಯ ಸೇವಿಸುತ್ತಿರುವುದನ್ನು ಕಾಣಬಹುದು. ತಂಡದ ಭಯಭೀತ ಆಟಗಾರರೊಬ್ಬರು ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : WPL 2024 : ಡೆಲ್ಲಿ ತಂಡದ ನೂತನ ಜೆರ್ಸಿ ಬಿಡುಗಡೆ, ಡಿಪಿ ವರ್ಲ್ಡ್​ ಟೈಟಲ್ ಪಾರ್ಟ್​​ನರ್​​

ಹೈದರಾಬಾದ್ ರಾಜ್ಯ ತಂಡದೊಂದಿಗೆ ಇರುವಾಗ ನೀವು ತಂಡದ ಬಸ್​ನಲ್ಲಿ ಮದ್ಯವನ್ನು ಸಾಗಿಸುವ ಮತ್ತು ಸೇವಿಸುವ ವೀಡಿಯೊಗಳೊಂದಿಗೆ ಎಚ್​ಸಿಎಗೆ ಅನಾಮಧೇಯ ಇಮೇಲ್ ಬಂದಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಇದಲ್ಲದೆ, ವೀಡಿಯೊಗಳನ್ನು ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ಪ್ರಸಾರ ಮಾಡಲಾಗಿದೆ.

ಇದು ಕಾಳಜಿಯ ವಿಷಯವಾಗಿದೆ .ಈ ವಿಷಯದಲ್ಲಿ ಸಮಗ್ರ ತನಿಖೆ ನಡೆಸುವಂತೆ ನಾನು ಕೇಳಿದ್ದೇನೆ ಮತ್ತು ತನಿಖೆಯ ಫಲಿತಾಂಶದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು. ತನಿಖೆ ನಡೆಯುತ್ತಿರುವಾಗ ಎಚ್ಸಿಎ ಪರವಾಗಿ ಯಾವುದೇ ಕ್ರಿಕೆಟ್ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳದಂತೆ ನಾನು ನಿಮಗೆ ನಿರ್ದೇಶನ ನೀಡುತ್ತಿದ್ದೇನೆ ಎಂದು ಜಗ್ ಮೋಹನ್ ರಾವ್ ಸೂಚನೆ ನೀಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Ashwini Ponnappa: ‘ಇದು ನನ್ನ ಕೊನೆಯ ಒಲಿಂಪಿಕ್ಸ್​’; ನಿವೃತ್ತಿ ಘೋಷಿಸಿದ ಶಟ್ಲರ್​ ಅಶ್ವಿನಿ ಪೊನ್ನಪ್ಪ

Ashwini Ponnappa: ಮಂಗಳವಾರ ನಡೆದಿದ್ದ ‘ಸಿ’ ಗುಂಪಿನ ಪಂದ್ಯದಲ್ಲಿ ಅಶ್ವಿನಿ ಹಾಗೂ ತನಿಶಾ ಜೋಡಿಯು ಆಸ್ಟ್ರೇಲಿಯಾದ ಸೆತ್ಯಾನಾ ಮಾಪಸಾ ಹಾಗೂ ಏಂಜೆಲಾ ಯು ಜೋಡಿ ವಿರುದ್ಧ 15-21, 10-21 ನೇರ ಸೇಟ್‌ನಲ್ಲಿ ಸೋಲು ಕಂಡು 2024ರ ಒಲಿಂಪಿಕ್ಸ್‌ನಿಂದ ಈ ಜೋಡಿ ಹೊರಬಿದ್ದಿತು.

VISTARANEWS.COM


on

Ashwini Ponnappa
Koo

ಪ್ಯಾರಿಸ್: ಕನ್ನಡತಿ, ಭಾರತದ ಹಿರಿಯ ಬ್ಯಾಡ್ಮಿಂಟನ್(Indian Badminton Star Ashwini Ponnappa) ಆಟಗಾರ್ತಿ ಅಶ್ವಿನಿ ಪೊನ್ನಪ್ಪ(Ashwini Ponnappa) ಅವರು ಒಲಿಂಪಿಕ್ಸ್​ಗೆ ವಿದಾಯ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಪೊನ್ನಪ್ಪ, ‘ಇದು ನನ್ನ ಕೊನೆಯ ಒಲಿಂಪಿಕ್ಸ್‌’ ಎಂದು ಹೇಳಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಅವರೊಂದಿಗೆ ಡಬಲ್ಸ್‌ನಲ್ಲಿ ಮೂರು ಸತತ ಸೋಲು ಅನುಭವಿಸಿ ಪರಾಭವಗೊಂಡ ಬೆನ್ನಲ್ಲೇ ಅವರು ತಮ್ಮ ನಿವೃತ್ತಿ(Ashwini Ponnappa Announces Retirement) ಪ್ರಕಟಿಸಿದ್ದಾರೆ.

ಮಂಗಳವಾರ ನಡೆದಿದ್ದ ‘ಸಿ’ ಗುಂಪಿನ ಪಂದ್ಯದಲ್ಲಿ ಅಶ್ವಿನಿ ಹಾಗೂ ತನಿಶಾ ಜೋಡಿಯು ಆಸ್ಟ್ರೇಲಿಯಾದ ಸೆತ್ಯಾನಾ ಮಾಪಸಾ ಹಾಗೂ ಏಂಜೆಲಾ ಯು ಜೋಡಿ ವಿರುದ್ಧ 15-21, 10-21 ನೇರ ಸೇಟ್‌ನಲ್ಲಿ ಸೋಲು ಕಂಡು 2024ರ ಒಲಿಂಪಿಕ್ಸ್‌ನಿಂದ ಈ ಜೋಡಿ ಹೊರಬಿದ್ದಿತು. ಈ ಸೋಲಿನ ಬಳಿಕ 34 ವರ್ಷದ ಅಶ್ವಿನಿ ಪೊನ್ನಪ್ಪ 2028ರಲ್ಲಿ ಲಾಸ್‌ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

‘ಇದು ನನ್ನ ಕೊನೆಯ ಒಲಿಂಪಿಕ್ಸ್‌. ಆದರೆ ತನಿಷಾ ಅವರ ಕ್ರೀಡೆಯ ಹಾದಿ ಇನ್ನೂ ಸುದೀರ್ಘವಿದೆ. ಈ ಬಾರಿಯ ಸೋಲು ನನ್ನ ಮನಸ್ಸು ಹಾಗೂ ಭಾವನೆಗಳ ಮೇಲೆ ಭಾರೀ ಆಘಾತ ಉಂಟು ಮಾಡಿದೆ. ಇಂಥ ಪರಿಸ್ಥಿತಿಯನ್ನು ಮತ್ತೆ ಎದುರಿಸಲಾರೆ. ಅದು ಸುಲಭವೂ ಅಲ್ಲ. ಕಿರಿಯ ವಯಸ್ಸಿನವರಾದರೆ ಇವೆಲ್ಲವನ್ನೂ ಸಹಿಸಿಕೊಳ್ಳಬಹುದು. ಸಾಕಷ್ಟು ವರ್ಷಗಳ ಕಾಲ ದೇಶಕ್ಕಾಗಿ ಆಡಿದ ಖುಷಿ ಇದೆ. ಇನ್ನು ಸಾಗುವುದು ಕಷ್ಟ’ ಎಂದು ಹೇಳುವ ಮೂಲಕ ಅವರು ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು. ಒಲಿಂಪಿಕ್ಸ್​ ಹೊರತುಪಡಿಸಿ ಉಳಿದ ಟೂರ್ನಿಯಲ್ಲಿ ಆಟ ಮುಂದುವರಿಸುವಾಗಿ ಹೇಳಿದ್ದಾರೆ.

ಇದನ್ನೂ ಓದಿ Paris Olympics Boxing: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌

ಅಶ್ವಿನಿ ಅವರು 2001ರಲ್ಲಿ ಮೊದಲ ರಾಷ್ಟ್ರೀಯ ಪದಕ ಜಯಿಸಿದ್ದರು. 2017ರವರೆಗೂ ಜ್ವಾಲಾ ಗುಟ್ಟ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಹಲವು ಇತಿಹಾಸಗಳನ್ನು ನಿರ್ಮಿಸಿತ್ತು. 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚು, 2014 ಹಾಗೂ 2016ರಲ್ಲಿ ಉಬರ್ ಕಪ್ ಹಾಗೂ 2014ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಪದಕ ಪಡೆದಿದ್ದರು. ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಈ ಜೋಡಿ ಮೊದಲ 20ರಲ್ಲಿ ಸ್ಥಾನ ಪಡೆದಿತ್ತು. 2012 ಹಾಗೂ 2016ರಲ್ಲೂ ಈ ಜೋಡಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿತ್ತು. ಜ್ವಾಲಾ ಗುಟ್ಟ ನಿವೃತ್ತಿ ಬಳಿಕ ತನಿಶಾ ಜತೆಗೂಡಿ ಆಡುತ್ತಿದ್ದರು.

Continue Reading

ಕ್ರೀಡೆ

Paris Olympics Boxing: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌

Paris Olympics Boxing: ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಲವ್ಲೀನಾ ಅವರು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ.

VISTARANEWS.COM


on

Paris Olympics Boxing
Koo

ಪ್ಯಾರಿಸ್​: ವಿಶ್ವ ಚಾಂಪಿಯನ್‌, ಟೋಕಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌(Lovlina Borgohain) ಅವರು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ(Paris Olympics Boxing) ಪದಕ ಗೆಲ್ಲುವ ವಿಶ್ವಾಸದಲ್ಲಿದೆ. ಇಂದು(ಬುಧವಾರ) ನಡೆದ 75 ಕೆ.ಜಿ. ವಿಭಾಗದ 16ರ ಸುತ್ತಿನ ಬಾಕ್ಸಿಂಗ್​ ಹೋರಾಟದಲ್ಲಿ ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್‌ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಏಕಮುಖವಾಗಿ ಸಾಗಿದ ಈ ಹೋರಾಟದಲ್ಲಿ ಭಾರತೀಯ ಬಾಕ್ಸರ್​ ಮುಂದೆ ನಾರ್ವೆಯ ಪ್ರತಿಸ್ಪರ್ಧಿ ಸಂಪೂರ್ಣ ಶರಣಾದರು. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಲವ್ಲೀನಾ ಅವರು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ. ಕಳೆದ ಏಷ್ಯನ್ ಗೇಮ್ಸ್ ಮಹಿಳೆಯರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಲಿ ವಿರುದ್ಧ ಲವ್ಲೀನಾ ಸೋಲು ಕಂಡಿದ್ದರು. ಕ್ವಾರ್ಟರ್​ ಫೈನಲ್​ ಪಂದ್ಯ ಆಗಸ್ಟ್ 4 ರಂದು ನಡೆಯಲಿದೆ. ಇಲ್ಲಿ ಗೆದ್ದರೆ ಪದಕವೊಂದು ಖಾತ್ರಿಯಾಗಲಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಲವ್ಲಿನಾ 69 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.

ಇದನ್ನೂ ಓದಿ Paris Olympics: ಫೈನಲ್​ ಪ್ರವೇಶಿಸಿದ ಸ್ವಪ್ನಿಲ್‌ ಕುಸಾಲೆ; 16ರ ಸುತ್ತಿಗೇರಿದ ಸಿಂಧು

ಶೂಟಿಂಗ್​ನಲ್ಲಿ ಮತ್ತೊಂದು ಪದಕ ನಿರೀಕ್ಷೆ; ಸ್ವಪ್ನಿಲ್‌ ಕುಸಾಲೆ ಫೈನಲ್​ ಪ್ರವೇಶ

ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್(Paris Olympics)​ ಕ್ರೀಡಾ ಕೂಟದಲ್ಲಿ ಈಗಾಗಲೇ ಶೂಟಿಂಗ್​ನಲ್ಲಿ 2 ಪದಕ ಗೆದ್ದಿರುವ ಭಾರತಕ್ಕೆ ಇದೇ ವಿಭಾಗದಲ್ಲಿ ಮತ್ತೊಂದು ಪದಕ ಒಲಿಯುವ ನಿರೀಕ್ಷೆಯಿದೆ. ಬುಧವಾರ ನಡೆದ ಪುರುಷರ 50 ಮೀ. ರೈಫ‌ಲ್‌ 3 ಪೊಸಿಶನ್‌ ಅರ್ಹತಾ ಸುತ್ತಿನಲ್ಲಿ ಭಾರತದ ಸ್ವಪ್ನಿಲ್‌ ಕುಸಾಲೆ(Swapnil Kusale) 590 ಅಂಕಗಳೊಂದಿಗೆ 7 ನೇ ಸ್ಥಾನ ಪಡೆಯುವ ಮೂಲಕ ಫೈನಲ್​ ಪ್ರವೇಶಿಸಿದ್ದಾರೆ. ಇನ್ನೊಂದೆಡೆ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ, ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ ಸಿಂಧು(PV Sindhu) ಕೂಡ ಗೆಲುವು ಸಾಧಿಸಿ 16ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಇಂದು(ಬುಧವಾರ) ನಡೆದ ಪುರುಷರ 50 ಮೀ. ರೈಫಲ್ 3 ಪೊಸಿಶನ್‌ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಸ್ವಪ್ನಿಲ್‌ ಕುಸಾಲೆ ಫೈನಲ್​ ಸುತ್ತಿಗೆ ಪ್ರವೇಶ ಪಡೆದರೆ, ಮತೋರ್ವ ಭಾರತೀಯ ಶೂಟರ್​ ಐಶ್ವರಿ ಪ್ರತಾಪ್ ಅವರು 589 ಸ್ಕೋರ್‌ನೊಂದಿಗೆ 11 ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದರು. ಅಗ್ರ 8 ಸ್ಥಾನ ಗಳಿಸಿದ ಶೂಟರ್​ಗಳಿಗೆ ನೇರವಾಗಿ ಫೈನಲ್​ ಪ್ರವೇಶ ಲಭಿಸುತ್ತದೆ. ಆದರೆ ಈ ಸ್ಥಾನ ಪಡೆಯುವಲ್ಲಿ ವಿಫಲರಾದ ಕಾರಣ ಅವರ ಒಲಿಂಪಿಕ್ಸ್​ ಸ್ಪರ್ಧೆ ಕೊನೆಗೊಂಡಿತು.

ಪ್ರೀ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಶ್ರೀಜಾ ಅಕುಲಾ

ಭಾರತದ ಅಗ್ರ ಶ್ರೇಯಾಂಕದ ಟೇಬಲ್‌ ಟೆನಿಸ್‌ ಆಟಗಾರ್ತಿ ಶ್ರೀಜಾ ಅಕುಲಾ(Sreeja Akula) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympic) 16 ರ ರೌಂಡ್‌ಗೆ ಪ್ರವೇಶಿಸಿದ್ದಾರೆ. ಇಂದು(ಬುಧವಾರ) ನಡೆದ ಮಹಿಳೆಯರ ಸಿಂಗಲ್ಸ್‌ 32ರ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಝೆಂಗ್ ಜಿಯಾನ್ ಅವರನ್ನು 4-2 ಅಂತರದಿಂದ ಸೋಲಿಸಿದರು. ವಿಶೇಷ ಎಂದರೆ ಶ್ರೀಜಾ ಅಕುಲಾ ತಮ್ಮ 26ನೇ ಹುಟ್ಟು ಹಬ್ಬದ ದಿನವೇ ಈ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ವಿಶ್ವ ನಂ. 1 ಮತ್ತು ಅಗ್ರ ಶ್ರೇಯಾಂಕದ ಚೀನಾದ ಪ್ಯಾಡ್ಲರ್ ಸನ್ ಯಿಂಗ್ಶಾ(Sun Yingsha) ಅವರ ಸವಾಲು ಎದುರಿಸಲಿದ್ದಾರೆ.

Continue Reading

ಕ್ರೀಡೆ

Paris Olympic: ಹುಟ್ಟು ಹಬ್ಬದ ದಿನವೇ ಗೆಲುವು ಸಾಧಿಸಿ ಪ್ರೀ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಶ್ರೀಜಾ ಅಕುಲಾ

Paris Olympics: ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಈ ಪಂದ್ಯದಲ್ಲಿ ಶ್ರೀಜಾ ಅಕುಲಾ ಸಿಂಗಾಪುರದ ಜಿಯಾನ್ ಝೆಂಗ್ ಅವರನ್ನು 9-11, 12-10, 11-4, 11-5, 10-12, 12-10 ಅಂಕಗಳಿಂದ ಸೋಲಿಸಿದರು. 26 ವರ್ಷದ ಅಕುಲಾ ಈಗ ಒಲಿಂಪಿಕ್ಸ್‌ನಲ್ಲಿ ಟೇಬಲ್ ಟೆನಿಸ್ ಪ್ರಿ-ಕ್ವಾರ್ಟರ್‌ಗೆ ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಮಣಿಕಾ ಬಾತ್ರಾ ಕೂಡ ಪ್ರಿ-ಕ್ವಾರ್ಟರ್‌ ಪ್ರವೇಶಿಸಿದ್ದರು.

VISTARANEWS.COM


on

Paris Olympics
Koo

ಪ್ಯಾರಿಸ್​: ಭಾರತದ ಅಗ್ರ ಶ್ರೇಯಾಂಕದ ಟೇಬಲ್‌ ಟೆನಿಸ್‌ ಆಟಗಾರ್ತಿ ಶ್ರೀಜಾ ಅಕುಲಾ(Sreeja Akula) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympic) 16 ರ ರೌಂಡ್‌ಗೆ ಪ್ರವೇಶಿಸಿದ್ದಾರೆ. ಇಂದು(ಬುಧವಾರ) ನಡೆದ ಮಹಿಳೆಯರ ಸಿಂಗಲ್ಸ್‌ 32ರ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಝೆಂಗ್ ಜಿಯಾನ್ ಅವರನ್ನು 4-2 ಅಂತರದಿಂದ ಸೋಲಿಸಿದರು. ವಿಶೇಷ ಎಂದರೆ ಶ್ರೀಜಾ ಅಕುಲಾ ತಮ್ಮ 26ನೇ ಹುಟ್ಟು ಹಬ್ಬದ ದಿನವೇ ಈ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ವಿಶ್ವ ನಂ. 1 ಮತ್ತು ಅಗ್ರ ಶ್ರೇಯಾಂಕದ ಚೀನಾದ ಪ್ಯಾಡ್ಲರ್ ಸನ್ ಯಿಂಗ್ಶಾ(Sun Yingsha) ಅವರ ಸವಾಲು ಎದುರಿಸಲಿದ್ದಾರೆ.

ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಈ ಪಂದ್ಯದಲ್ಲಿ ಶ್ರೀಜಾ ಅಕುಲಾ ಸಿಂಗಾಪುರದ ಜಿಯಾನ್ ಝೆಂಗ್ ಅವರನ್ನು 9-11, 12-10, 11-4, 11-5, 10-12, 12-10 ಅಂಕಗಳಿಂದ ಸೋಲಿಸಿದರು. 26 ವರ್ಷದ ಅಕುಲಾ ಈಗ ಒಲಿಂಪಿಕ್ಸ್‌ನಲ್ಲಿ ಟೇಬಲ್ ಟೆನಿಸ್ ಪ್ರಿ-ಕ್ವಾರ್ಟರ್‌ಗೆ ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಮಣಿಕಾ ಬಾತ್ರಾ ಕೂಡ ಪ್ರಿ-ಕ್ವಾರ್ಟರ್‌ ಪ್ರವೇಶಿಸಿದ್ದರು.

ಸೋಲಿನ ಬಳಿಕ ಕಮ್​ಬ್ಯಾಕ್​


ಮೊದಲ ಸೆಟ್‌ನಲ್ಲಿ ಶ್ರೀಜಾ ಸೋಲು ಕಂಡರು. ಆದರೆ, ದ್ವಿತೀಯ ಸೆಟ್​ನಲ್ಲಿ ತೀವ್ರ ಪೈಪೋಟಿ ನಡೆಸಿ ಗೆಲುವಿನ ಕಮ್​ಬ್ಯಾಕ್​ ಮಾಡುವ ಮೂಲಕ 1-1 ಸಮಬಲ ಸಾಧಿಸಿದರು. ಗೆಲುವಿನ ಅಂತರ 12-10. ಮೂರನೇ ಸೆಟ್​ನಲ್ಲಿ ಮತ್ತು ನಾಲ್ಕನೇ ಸೆಟ್​ನಲ್ಲಿ ಅತ್ಯಂತ ಜೋಶ್​ನಿಂದ ಆಡಿದ ಶ್ರೀಜಾ ಬರ್ಜರಿ ಗೆಲುವು ಸಾಧಿಸಿ ಭಾರೀ ಮುನ್ನಡೆ ಸಾಧಿಸಿದರು. 5ನೇ ಸೆಟ್​ನಲ್ಲಿ ತೀವ್ರ ಹೋರಾಟ ನಡೆಸಿದರೂ ಸ್ವಲ್ಪ ಸಮಸ್ಯೆ ಎದುರಿಸಿ ಸಣ್ಣ ಅಂತರದಿಂದ ಮತ್ತೆ ಸೋಲು ಕಂಡರು. ಅಂತಿಮ ಹಾಗೂ ನಿರ್ಣಾಯಕ ಸೆಟ್​ನಲ್ಲಿ ಕಠಿಣ ಪೈಪೋಟಿ ಎದುರಾದರೂ ಕೂಡ ಇದನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿ ಗೆಲುವಿನ ನಗೆ ಬೀರಿದರು. ಗೆಲುವಿನ ಅಂತರ 9-11, 12-10, 11-4, 11-5, 10-12, 12-10.

ಇದನ್ನೂ ಓದಿ Paris Olympics: ಫೈನಲ್​ ಪ್ರವೇಶಿಸಿದ ಸ್ವಪ್ನಿಲ್‌ ಕುಸಾಲೆ; 16ರ ಸುತ್ತಿಗೇರಿದ ಸಿಂಧು

ಪ್ರೀ ಕ್ವಾರ್ಟರ್​ಗೆ ಲಗ್ಗೆಯಿಟ್ಟ ಲಕ್ಷ್ಯ ಸೇನ್-ಸಿಂಧು


ಪುರುಷರ ಮತ್ತು ಸಿಂಗಲ್ಸ್​ ವಿಭಾಗದ ಬ್ಯಾಡ್ಮಿಂಟನ್​ ಸ್ಪರ್ಧೆಯಲ್ಲಿ ಲಕ್ಷ್ಯ ಸೇನ್(Lakshya Sen) ಮತ್ತು ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ, ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ ಸಿಂಧು(PV Sindhu) ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್​ ಫೈನಲ್​ಗೆ ಪ್ರವೇಶ ಪಡೆದರು.

ಸಿಂಧು ಅವರು 73ನೇ ಶ್ರೇಯಾಂಕದ ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ವಿರುದ್ಧ 21-5, 21-10 ಸುಲಭ ಜಯ ಸಾಧಿಸಿ 16ರ(ಪ್ರೀ ಕ್ವಾರ್ಟರ್​) ಸುತ್ತಿಗೇರಿದರು. ಸಿಂಧು ಅವರ ಬಲಿಷ್ಠ ಹೊಡೆತಗಳ ಮುಂದೆ ಕ್ರಿಸ್ಟಿನ್ ಕುಬಾ ಸಂಪೂರ್ಣ ಮಂಕಾದರು. ಮೊದಲ ಗೇಮ್​ನಲ್ಲಿ ಕೇವಲ 5 ಅಂಕಕ್ಕೆ ಸೀಮಿತರಾದರು. ಈ ಪಂದ್ಯ ಕೇವಲ 34 ನಿಮಿಷಗಳಲ್ಲಿ ಅಂತ್ಯ ಕಂಡಿತ್ತು.

ಪುರುಷರ ಸಿಂಗಲ್ಸ್​ ವಿಭಾಗದ ಅಂತಿಮ ಪಂದ್ಯದಲ್ಲಿ ವಿಶ್ವ ನಂ.3 ಇಂಡೋನೇಷ್ಯಾದ ಜೊನಾಥನ್​ ಕ್ರಿಸ್ಟಿ(Jonatan Christie) ವಿರುದ್ಧ ​21-18, 21-12 ನೇರ ಗೇಮ್​ಗಳಿಂದ ಗೆದ್ದು ಪ್ರೀ ಕ್ವಾರ್ಟರ್​ ಫೈನಲ್​ ಹಂತಕ್ಕೆ ಪ್ರವೇಶಿಸಿದ್ದಾರೆ. ಇದೇ ವೇಳೆ ಲಕ್ಷ್ಯ ಸೇನ್​ 8 ವರ್ಷಗಳ ನಂತರ ಒಲಿಂಪಿಕ್ಸ್ ನಾಕೌಟ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

22 ವರ್ಷದ ಲಕ್ಷ್ಯ ಸೇನ್ ಮೊದಲ ಗೇಮ್​ನಲ್ಲಿ 2-8 ಅಂಕಗಳ ಹಿನ್ನಡೆ ಸಾಧಿಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ತೀವ್ರ ಹೋರಾಟ ನಡೆಸಿ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 21-18 ಅಂಕಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡರು. ದ್ವಿತೀಯ ಗೇಮ್​ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಸೇನ್​ ಎದುರಾಳಿಗೆ ಚೇರಿಸಿಕೊಳ್ಳಲು ಕೂಡ ಸಮಯ ನೀಡಲಿಲ್ಲ. ಸತತವಾಗಿ ಅಂಕ ಗಳಿಸುತ್ತಲೇ ಸಾಗಿ ಮೇಲುಗೈ ಸಾಧಿಸಿ ನೇರ ಗೇಮ್​ಗಳ ಅಂತರದಿಂದ ಪಂದ್ಯವನ್ನು ಗೆದ್ದು ಬೀಗಿದರು. ಹಾಲಿ ಆಲ್-ಇಂಗ್ಲೆಂಡ್ ಚಾಂಪಿಯನ್ ಕ್ರಿಸ್ಟಿ ಆಘಾತಕಾರಿ ಸೋಲುಂಡರು.

Continue Reading

ಕ್ರೀಡೆ

Paris Olympic: ಪ್ರೀ ಕ್ವಾರ್ಟರ್​ಗೆ ಲಗ್ಗೆಯಿಟ್ಟ ಲಕ್ಷ್ಯ ಸೇನ್; ಜೊನಾಥನ್​ ಕ್ರಿಸ್ಟಿಗೆ ಆಘಾತಕಾರಿ ಸೋಲು

Paris Olympic: ಲಕ್ಷ್ಯ ಸೇನ್ ಅವರು ನಾಕೌಟ್​ ಹಂತಕ್ಕೇರುವ ಮೂಲಕ 2016ರ ರಿಯೊ ಗೇಮ್ಸ್‌ನ ಕಿಡಂಬಿ ಶ್ರೀಕಾಂತ್ ಬಳಿಕ ಒಲಿಂಪಿಕ್ಸ್‌ನಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಸಿಂಗಲ್ಸ್ ಶಟ್ಲರ್​ ಎನಿಸಿಕೊಂಡರು.

VISTARANEWS.COM


on

Paris Olympic
Koo

ಪ್ಯಾರಿಸ್​: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympic) ಲಕ್ಷ್ಯ ಸೇನ್(Lakshya Sen) ಅವರ ಗೆಲುವಿನ ಓಟ ಮುಂದುವರಿದಿದೆ. ಬುಧವಾರ ನಡೆದ ‘ಎಲ್’​ ಗುಂಪಿನ ಪುರುಷರ ಸಿಂಗಲ್ಸ್​ ವಿಭಾಗದ ಅಂತಿಮ ಪಂದ್ಯದಲ್ಲಿ ವಿಶ್ವ ನಂ.3 ಇಂಡೋನೇಷ್ಯಾದ ಜೊನಾಥನ್​ ಕ್ರಿಸ್ಟಿ(Jonatan Christie) ವಿರುದ್ಧ ​21-18, 21-12 ನೇರ ಗೇಮ್​ಗಳಿಂದ ಗೆದ್ದು ಪ್ರೀ ಕ್ವಾರ್ಟರ್​ ಫೈನಲ್​ ಹಂತಕ್ಕೆ ಪ್ರವೇಶಿಸಿದ್ದಾರೆ. ಇದೇ ವೇಳೆ ಲಕ್ಷ್ಯ ಸೇನ್​ 8 ವರ್ಷಗಳ ನಂತರ ಒಲಿಂಪಿಕ್ಸ್ ನಾಕೌಟ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

22 ವರ್ಷದ ಲಕ್ಷ್ಯ ಸೇನ್ ಮೊದಲ ಗೇಮ್​ನಲ್ಲಿ 2-8 ಅಂಕಗಳ ಹಿನ್ನಡೆ ಸಾಧಿಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ತೀವ್ರ ಹೋರಾಟ ನಡೆಸಿ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 21-18 ಅಂಕಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡರು. ದ್ವಿತೀಯ ಗೇಮ್​ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಸೇನ್​ ಎದುರಾಳಿಗೆ ಚೇರಿಸಿಕೊಳ್ಳಲು ಕೂಡ ಸಮಯ ನೀಡಲಿಲ್ಲ. ಸತತವಾಗಿ ಅಂಕ ಗಳಿಸುತ್ತಲೇ ಸಾಗಿ ಮೇಲುಗೈ ಸಾಧಿಸಿ ನೇರ ಗೇಮ್​ಗಳ ಅಂತರದಿಂದ ಪಂದ್ಯವನ್ನು ಗೆದ್ದು ಬೀಗಿದರು. ಹಾಲಿ ಆಲ್-ಇಂಗ್ಲೆಂಡ್ ಚಾಂಪಿಯನ್ ಕ್ರಿಸ್ಟಿ ಆಘಾತಕಾರಿ ಸೋಲುಂಡರು.

ಇದನ್ನೂ ಓದಿ Paris Olympics: ಫೈನಲ್​ ಪ್ರವೇಶಿಸಿದ ಸ್ವಪ್ನಿಲ್‌ ಕುಸಾಲೆ; 16ರ ಸುತ್ತಿಗೇರಿದ ಸಿಂಧು

8 ವರ್ಷದ ಬಳಿಕ ನಾಕೌಟ್ ಪ್ರವೇಶ


ಲಕ್ಷ್ಯ ಸೇನ್ ಅವರು ನಾಕೌಟ್​ ಹಂತಕ್ಕೇರುವ ಮೂಲಕ 2016ರ ರಿಯೊ ಗೇಮ್ಸ್‌ನ ಕಿಡಂಬಿ ಶ್ರೀಕಾಂತ್ ಬಳಿಕ ಒಲಿಂಪಿಕ್ಸ್‌ನಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಸಿಂಗಲ್ಸ್ ಶಟ್ಲರ್​ ಎನಿಸಿಕೊಂಡರು. ಟೋಕಿಯೊದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಏಕೈಕ ಸ್ಪರ್ಧಿಯಾಗಿದ್ದ ಸಾಯಿ ಪ್ರಣೀತ್ ಗುಂಪು ಹಂತದಲ್ಲೇ ಸೋಲು ಕಂಡು ನಿರ್ಗಮಿಸಿದ್ದರು.

ಕ್ರಿಸ್ಟಿ ವಿರುದ್ಧ ಸೇನ್​ ಇದುವರೆಗೆ ಆಡಿದ್ದ 5 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿದ್ದರು. ಒಂದು ಪಂದ್ಯ ಮಾತ್ರ ಗೆದ್ದಿದ್ದರು. ಈ ವರ್ಷದ ಆರಂಭದಲ್ಲಿ ನಡೆದಿದ್ದ ಆಲ್ ಇಂಗ್ಲೆಂಡ್ ಓಪನ್‌ನ ಸೆಮಿಫೈನಲ್ ಸೇರಿದಂತೆ ಇಂಡೋನೇಷ್ಯಾದ ಎರಡು ಕೂಟಗಳಲ್ಲಿಯೂ ಲಕ್ಷ್ಯ ಕ್ರಿಸ್ಟಿ ವಿರುದ್ಧ ಸೋಲು ಕಂಡಿದ್ದರು. ಈ ಎಲ್ಲ ಸೋಲಿನ ಸೇಡನ್ನು ಇದೀಗ ಪ್ರತಿಷ್ಠಿತ ಒಲಿಂಪಿಕ್ಸ್​ ಟೂರ್ನಿಯಲ್ಲಿ ಸೇನ್​ ತೀರಿಸಿಕೊಂಡಿದ್ದಾರೆ. ಜತೆಗೆ ಭಾರತಕ್ಕೆ ಪದಕ ಭರವಸೆಯನ್ನು ಮೂಡಿಸಿದ್ದಾರೆ.

ಸಿಂಧುಗೆ ಭರ್ಜರಿ ಗೆಲುವು


ಇದಕ್ಕೂ ಮುನ್ನ ನಡೆದಿದ್ದ ಮಹಿಳಾ ಬ್ಯಾಡ್ಮಿಂಟನ್​ ಸಿಂಗಲ್ಸ್​ ವಿಭಾಗದ ‘ಎಂ’ ಗುಂಪಿನ ಪಂದ್ಯದಲ್ಲಿ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ, ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ ಸಿಂಧು(PV Sindhu) ಕೂಡ ಗೆಲುವು ಸಾಧಿಸಿ 16ನೇ ಸುತ್ತಿಗೆ ಪ್ರವೇಶ ಪಡೆದಿದ್ದರು.

73ನೇ ಶ್ರೇಯಾಂಕದ ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ವಿರುದ್ಧ 21-5, 21-10 ಸುಲಭ ಜಯ ಸಾಧಿಸಿ 16ರ(ಪ್ರೀ ಕ್ವಾರ್ಟರ್​) ಸುತ್ತಿಗೇರಿದ್ದಾರೆ. ಸಿಂಧು ಅವರ ಬಲಿಷ್ಠ ಹೊಡೆತಗಳ ಮುಂದೆ ಕ್ರಿಸ್ಟಿನ್ ಕುಬಾ ಸಂಪೂರ್ಣ ಮಂಕಾದರು. ಮೊದಲ ಗೇಮ್​ನಲ್ಲಿ ಕೇವಲ 5 ಅಂಕಕ್ಕೆ ಸೀಮಿತರಾದರು. ಈ ಪಂದ್ಯ ಕೇವಲ 34 ನಿಮಿಷಗಳಲ್ಲಿ ಅಂತ್ಯ ಕಂಡಿತ್ತು.

Continue Reading
Advertisement
Gunfire On School
Latest33 seconds ago

Gunfire On School: ಶಾಲೆಯೊಳಗೆ ಗನ್‌ ತಂದು 10 ವರ್ಷದ ಹುಡುಗನಿಗೆ ಗುಂಡು ಹಾರಿಸಿದ 5 ವರ್ಷದ ಬಾಲಕ!

Ibbani Thabbida Ileyali movie Helu Gelati song released
ಕರ್ನಾಟಕ19 mins ago

Kannada New Movie: ರೆಟ್ರೋ ಸ್ಟೈಲ್‌ನಲ್ಲಿ ಮೂಡಿಬಂದ ʼಹೇಳು ಗೆಳತಿʼ; ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾ

Ashwini Ponnappa
ಕ್ರೀಡೆ30 mins ago

Ashwini Ponnappa: ‘ಇದು ನನ್ನ ಕೊನೆಯ ಒಲಿಂಪಿಕ್ಸ್​’; ನಿವೃತ್ತಿ ಘೋಷಿಸಿದ ಶಟ್ಲರ್​ ಅಶ್ವಿನಿ ಪೊನ್ನಪ್ಪ

Ismail Haniyeh
ವಿದೇಶ51 mins ago

Ismail Haniyeh: ಒಸಾಮಾ ರೀತಿಯೇ ಹಮಾಸ್‌ನ ಇಸ್ಮಾಯಿಲ್‌ ಹನಿಯೇಹ್‌ನನ್ನು ಕೊಂದ ಇಸ್ರೇಲ್;‌ ಆಪರೇಷನ್‌ನ ಡಿಟೇಲ್ಸ್‌ ಇಲ್ಲಿದೆ

Mahesh Bhatt said his mother was worried after he gave daughters Muslim names
ಬಾಲಿವುಡ್1 hour ago

Alia Bhatt: ಪುತ್ರಿಯರಿಗೆ ಮುಸ್ಲಿಂ ಹೆಸರುಗಳನ್ನು ಇಟ್ಟಾಗ ನನ್ನ ತಾಯಿಗೆ ಚಿಂತೆಯಾಗಿತ್ತು ಎಂದ ಆಲಿಯಾ ಭಟ್‌ ತಂದೆ!

Jagdeep Dhankhar
ದೇಶ1 hour ago

Parliament Session: RSS ಬಗ್ಗೆ ದೋಷಾರೋಪಣೆ ಸಲ್ಲದು; ಜಗದೀಪ್ ಧನ್‌ಕರ್ ಹೇಳಿಕೆ- ಪ್ರತಿಪಕ್ಷಗಳು ವಾಕ್‌ಔಟ್‌!

Paris Olympics Boxing
ಕ್ರೀಡೆ1 hour ago

Paris Olympics Boxing: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌

Muda Scam
ಕರ್ನಾಟಕ1 hour ago

Muda Scam: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ; ಲೋಕಾಯುಕ್ತಕ್ಕೆ ಪ್ರಮುಖ ದಾಖಲೆ ಸಲ್ಲಿಕೆ

Paris Olympics
ಕ್ರೀಡೆ2 hours ago

Paris Olympic: ಹುಟ್ಟು ಹಬ್ಬದ ದಿನವೇ ಗೆಲುವು ಸಾಧಿಸಿ ಪ್ರೀ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಶ್ರೀಜಾ ಅಕುಲಾ

Indian Navy Recruitment
ಉದ್ಯೋಗ2 hours ago

Indian Navy Recruitment: ಭಾರತೀಯ ನೌಕಾ ಪಡೆಯಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡಲು ಆ. 2 ಕೊನೆಯ ದಿನ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌