No Water Supply: ಫೆ.27, 28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ - Vistara News

ಬೆಂಗಳೂರು

No Water Supply: ಫೆ.27, 28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ

No Water Supply: ಬೆಂಗಳೂರಿನ ವಿವಿಧೆಡೆ ಫೆ.27ರ ಬೆಳಗ್ಗೆ 6 ರಿಂದ ಫೆ.28ರ ಬೆಳಗ್ಗೆ 6ಗಂಟೆವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

VISTARANEWS.COM


on

No water supply
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆ ಆರಂಭದಲ್ಲೇ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆ ಇದೆ. ಈಗಾಗಲೇ ಹಲವೆಡೆ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಇದೀಗ ಫೆ.27ರ ಬೆಳಗ್ಗೆ 6 ರಿಂದ ಫೆ.28ರ ಬೆಳಗ್ಗೆ 6ಗಂಟೆವರೆಗೆ ನಗರದ ಬಹುತೇಕ ಕಡೆ ನೀರು (No Water Supply) ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಈ ಬಗ್ಗೆ ಬೆಂಗಳೂರು ಜಲಮಂಡಳಿ (BWSSB) ಮಾಹಿತಿ ನೀಡಿದ್ದು, ತುರ್ತು ನಿರ್ವಹಣಾ ಕಾಮಗಾರಿಗಳು ಮತ್ತು ಯು.ಎಫ್.ಡಬ್ಲ್ಯೂ ಬಲ್ಕ್ ಪ್ಲೋ ಮೀಟರ್‌ಗಳ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳುವ ಸಲುವಾಗಿ ಫೆ.27ರ ಬೆಳಗ್ಗೆ 6ರಿಂದ ಫೆ.28 ಬೆಳಗ್ಗೆ 6 ಗಂಟೆಯವರೆಗೂ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ನಗರದ ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ತಿಳಿಸಿದೆ.

ಬಿ.ಎಚ್.ಇ.ಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ & ಬಡಾವಣೆ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್.ಜಿ.ಇ.ಎಫ್ ಲೇಔಟ್, ಪಾರ್ಟ್ ಆಫ್ ಐ.ಟಿ.ಐ ಲೇಔಟ್, 1ನೇ ಮತ್ತು 2ನೇ ಹಂತ ರೈಲ್ವೆ ಲೇಔಟ್, ಆರ್.ಹೆಚ್.ಬಿ.ಸಿ.ಎಸ್ ಲೇಔಟ್ 1ನೇ & 2ನೇ ಸ್ಟೇಜ್, ಭೈರವೇಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಣ ಪಾಳ್ಯ, ಡಿ ಗ್ರೂಪ್ ಲೇಔಟ್, ಕೆಬ್ರೇಹಳ್ಳ, ಚಂದನ ಲೇಔಟ್, ಚಂದ್ರಶೇಖರ ಲೇಔಟ್, ಜಿಯೋಲೊಜಿ ಲೇಔಟ್, ನರಸಪುರ, ಕಂದಾಯ ಲೇಔಟ್, ಮುಳಕಟ್ಟಮ್ಮ ಲೇಔಟ್, ಪಾರ್ಟ್ ಆಫ್ ಪಾಪರೆಡ್ಡಿ ಪಾಳ್ಯ, ಬಿ.ಇ.ಎಲ್ 1ನೇ & 2ನೇ ಹಂತ, ಬಿಲೇಕಲ್ಲು, ಬ್ಯಾಡರಹಳ್ಳಿ. ಉಪಕಾರ್ ಲೇಔಟ್, ಆರ್.ಆರ್.ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಲ್ಲಾಳ ವಿಲೇಜ್, ಸೊನ್ನೇನಹಳ್ಳಿ ಟೆಲಿಕಾಂ ಲೇಔಟ್, ವಿನಾಯಕ ಲೇಔಟ್, ಉಲ್ಲಾಳ, ಬಾಲಾಜಿ ಲೇಔಟ್, ಸರ್.ಎಂ. ವಿಶ್ವೇಶರಯ್ಯ ಲೇಔಟ್ 1ನೇ ಬ್ಲಾಕ್ ರಿಂದ 9ನೇ ಬ್ಲಾಕ್, ಮುನೇಶ್ವರನಗರ, ಪ್ರಕೃತಿನಗರ, ಹೆಚ್.ಎಂ.ಟಿ ಲೇಔಟ್, ನಿಸರ್ಗ ಲೇಔಟ್, ಇನ್‌ಕಮ್ ಟ್ಯಾಕ್ಸ್ ಲೇಔಟ್.

ಇದನ್ನೂ ಓದಿ | Karnataka Weather : ಇನ್ನೆರಡು ದಿನ ಬಿಸಿಲು ರಣ ರಣ; ಜನ ಹೈರಾಣ!

ರಾಮಯ್ಯ ಲೇಔಟ್, ಗಂಗಮ್ಮ ಬಡಾವಣೆ, ಶೆಟ್ಟಿಹಳ್ಳಿ ವಾಡ್-12, ಮಲ್ಲಸಂದ್ರ ವಾರ್ಡ್-13. ಬಗಳಗುಂಟೆ ವಾರ್ಡ್-14. ದಾಸರಹಳ್ಳಿ ವಾರ್ಡ್-15, ಜಾಲಹಳ್ಳಿ ವಾರ್ಡ್-16, ಹೆಚ್.ಎಂ.ಟಿ ವಾರ್ಡ್-38, ಚೊಕ್ಕಸಂದ್ರ ವಾರ್ಡ್-39, ಪೀಣ್ಯ ಇಂಡಸ್ಟ್ರೀಯಲ್ ಏರಿಯಾ ವಾರ್ಡ್-41, ಲಕ್ಷಮ್ಮದೇವಿ ನಗರ ವಾರ್ಡ್-42, ಲಗ್ಗೆರೆ ವಾರ್ಡ್-69, ರಾಜಗೋಪಾಲನಗರ ವಾರ್ಡ್-70, ಹೆಗ್ಗನಹಳ್ಳಿ ವಾರ್ಡ್- 71, ಕೋಟ್ಟಿಗೆಪಾಳ್ಯ ವಾರ್ಡ್-73, ಹೇರೋಹಳ್ಳಿ ವಾರ್ಡ್-72, ಐಡಿಯಲ್ ಹೋಮ್ 1ನೇ ಮತ್ತು 2ನೇ ಫೇಸ್, ಬಿ.ಹೆಚ್.ಇ.ಎಲ್ ಲೇಔಟ್, ಕೆಂಚನಹಳ್ಳಿ, ಜವರೆಗೌಡ ನಗರ, ಹಲಗೆವಡೇರಹಳ್ಳಿ, ಎಲ್.ಐ.ಸಿ ಲೇಔಟ್, ನಾಗಪ್ಪ ಲೇಔಟ್, ಕಾನ್‌ಕಾರ್ಡ್ ಲೇಔಟ್, ಕೃಷ್ಣಪ್ಪ ಗಾರ್ಡನ್, ಸ್ಟ್ರೀಟ್ ಹೋಮ್ಸ್, ಬಿ.ಹೆಚ್.ಇ.ಎಲ್ ಲೇಔಟ್‌.

ನಂದಾದೀಪ ಲೇಔಟ್, ಶಂಕರಪ್ಪ ಲೇಔಟ್, ಪಟ್ಟಣ್ಣಗೆರೆ, ಮೈಲಸಂದ್ರ ವಿಲೇಜ್, ಭೂಮಿಕಾ ಲೇಔಟ್, ಯುನಿರ್ವರ್ ಸಿಟಿ ಲೇಔಟ್ 4ನೇ & 5ನೇ ಸೈಜ್, ಬಿ.ಇ.ಎಂ.ಎಲ್ 10ನೇ ಸ್ಟೇಜ್, ಮಣಿಪಾಲ 5ನೇ ಸ್ಟೇಜ್, ಭುವನೇಶ್ವರಿನಗರ 1ನೇ & 2ನೇ ಸೈಜ್, ಕೆಂಗೇರಿ ಉಪನಗರ, ಕೆಂಗೇರಿ, ನಾಗದೇವನಹಳ್ಳಿ, ವಿದ್ಯಾಪೀಠ ರೋಡ್ 1 ರಿಂದ 13ನೇ ಕ್ರಾಸ್, ಜಾನಭಾರತಿ 1 ರಿಂದ 4ನೇ ಬ್ಲಾಕ್, ಕೆ.ಸಿ.ಹೆಚ್.ಎಸ್. ಲೇಔಟ್, ಆರ್.ಆರ್ ಲೇಔಟ್, ಜಗಜ್ಯೋತಿ ಲೇಔಟ್, ಮರಿಯಪ್ಪನಪಾಳ್ಯ, ದುಬಾಸಿ ಪಾಳ್ಯ, ಬೃಂದಾವನ್ ಲೇಔಟ್, ಸ್ವಾತಿ ಲೇಔಟ್, ಕೆ.ಪಿ.ಎಸ್.ಸಿ ಲೇಔಟ್, ಕೆಂಪಮ್ಮ ಲೇಔಟ್, ದೊಡ್ಡ ಗೊಲ್ಲರಹಟ್ಟಿ, ಚಿಕ್ಕಗೊಲ್ಲರಹಟ್ಟಿ, ಮೇಗಲು ಬೀದಿ, ಬಿ.ಡಿ.ಎ ಎನ್‌ವ್, ಮೈಸೂರು ರೋಡ್, ಶಿರರ್ಕೆ, ಶಿವಣ್ಣ ಲೇಔಟ್, ಬಿ.ಎಚ್.ಇ.ಎಲ್ ಎಲ್ ಶೇಪ್, ಜಯಣ್ಣ, ಲೇಔಟ್, ಮಾರಪ್ಪ ಲೇಔಟ್, ರಾಜ್‌ಘರ್ ಭವನ, ಎಂ.ಸಿ. ಲೇಔಟ್, ಸುಬ್ಬಣ್ಣ ಗಾರ್ಡನ್, ಮಾರೇನಹಳ್ಳಿ, ಬಿನ್ನಿ ಲೇಔಟ್,ಆರ್.ಪಿ.ಸಿ ಲೇಔಟ್, ನಾಗರಭಾವಿ, ಮಾನಸನಗರ, ಹೊಯ್ಸಳನಗರ, ಸುವರ್ಣ ಲೇಔಟ್, ಮೆಟ್ರೋ ಲೇಔಟ್, ನಾಯಂಡಹಳ್ಳಿ ರಂಗನಾಥ ಕಾಲೋನಿ, ರೋಷನ್ ನಗರ, ಬಿ.ಸಿ.ಸಿ ಲೇಔಟ್, ತಿಗಳರ ತೋಟ, ವಿನಾಯಕ ಲೇಔಟ್, ವಿದ್ಯಾಗಿರಿ ಲೇಔಟ್, ರಂಗನಾಥಪುರ, ಮಾರುತಿನಗರ, ಕಾವೇರಿನಗರ, ಸಂಪಿಗೆನಗರ, ಕಾಮಾಕ್ಷಿಪಾಳ್ಯ, ಪಟ್ಟಿಗಾರಪಾಳ್ಯ ಪ್ರಶಾಂತನಗರ, ತಿಮ್ಮನಹಳ್ಳಿ, ಗೋವಿಂದರಾಜನಗರ.

ಕೆ.ಎಚ್.ಬಿ ಕಾಲೋನಿ, ಎಂ.ಆರ್.ಸಿ.ಆರ್ ಲೇಔಟ್, ಪೇಟೆ ಚನ್ನಪ್ಪ ಇಂಡ್ಲಿಯಲ್, ಸರಸ್ವತಿನಗರ, ಶಿವಾನಂದನಗರ, ಅನುಭವನಗರ, ಕೆನರಾ ಬ್ಯಾಂಕ್ ಕಾಲೋನಿ, ದಾಸರಹಳ್ಳಿ, ಜಿ.ಕೆ.ಡಬ್ಲೂಕಿಕ್ ಲೇಔಟ್, ಬಸವೇಶ್ವರ ಲೇಔಟ್. ನಂಜರಸಪ್ಪ ಲೇಔಟ್, ಮೂಡಲಪಾಳ್ಯ, ಮಧುರನಗರ, ಇನ್‌ಕಮ್ ಟ್ಯಾಕ್ಸ್ ಲೇಔಟ್, ಪಿ.ಎಫ್ ಲೇಔಟ್, ಸಿ.ಎಚ್.ಬಿ.ಸಿ.ಎಸ್. ಲೇಔಟ್, ಕನಕನಗರ, ಭೈರವೇಶ್ವರನಗರ, ಕೊಕೋನಟ್ ಗಾರ್ಡನ್, ಆದರ್ಶನಗರ, ಕಲ್ಯಾಣನಗರ, ಸಂಜೀವಿನಿನಗರ, ಬಿ.ಡಿ.ಎ ಲೇಔಟ್, ಶಕ್ತಿ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ, ಮುನೇಶ್ವರನಗರ, ಶ್ರೀನಿವಾಸ ನಗರ, ಹುಚ್ಚಪ್ಪ ಲೇಔಟ್, ಅಮರಜ್ಯೋತಿನಗರ, ಭಕ್ತಿಲಿಂಗೇಶ್ವರನಗರ, ಮುನಿಕೃಷ್ಣಪ್ಪ ಲೇಔಟ್, ಕಾವೇರಿ ಲೇಔಟ್, ಪಂಚಶೀಲನಗರ, ಜಗಜ್ಯೋತಿನಗರ, ಕೆಂಪಣ್ಣನ ತೋಟ, ಶಂಕರನಗರ, ಕೊಡಿಗೆಹಳ್ಳಿ, ಟಾಟಾನಗರ, ಅಶ್ವಿ ಲೇಔಟ್, ಸಂಜೀವಿನಿನಗರ, ದೇವಿನಗರ, ಬ್ಯಾಟರಾಯನಪುರ, ಯಶೋಧನಗರ, ಅಮೃತನಗರ, ಅಮೃತಹಳ್ಳಿ, ಜಕ್ಕೂರು, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಜಿ.ಕೆ.ವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯಲಹಂಕ ನ್ಯೂಟೌನ್, ವಿದ್ಯಾರಣ್ಯಪುರ, ಸಿಂಗಾಪುರ, ಎಂ.ಎಸ್.ಪಾಳ್ಯ, ರಾಮಚಂದ್ರಪುರ, ಡಿಫೆನ್ಸ್ ಲೇಔಟ್, ಎ.ಎಂ.ಎಸ್ ಲೇಔಟ್, ಭುವನೇಶ್ವರಿನಗರ, ಮಾನ್ಯತಾ ರೆಸಿಡೆನ್ಸಿ, ಮರಿಯಣ್ಣ ಪಾಳ್ಯ, ನಂದನ ರೆಸಿಡೆನ್ಸಿ, ಮಾರುತಿನಗರ, ವಲ್ಲಭನಗರ, ಶಾರದಾನಗರ, ಯಶವಂತಪುರ(ಪಾರ್ಟ್), ಮುತ್ಯಾಲನಗರ, ಜೆ.ಪಿ.ಪಾರ್ಕ್, ಎಸ್.ಬಿ.ಎಂ. ಕಾಲೋನಿ, ಬಿ.ಇ.ಎಲ್ ರಸ್ತೆ (ಪಾರ್ಟ್), ಡಾರ್ರ ಕಾಲೋನಿ (ಪಾರ್ಟ್), ಚಾಮುಂಡಿನಗರ, ಭುವನೇಶ್ವರಿನಗರ, ಈಜಿಪುರ, ಎಚ್.ಎ.ಎಲ್ 2ನೇ ಮತ್ತು 3ನೇ ಹಂತ, ಇಂದಿರನಗರ, ಜೀವನ್ ಭೀಮನಗರ, ನ್ಯೂ ತಿಪ್ಪಸಂದ್ರ, ಗೀತಾಂಜಲಿ ಲೇಔಟ್, 515 ಕಾಲೋನಿ, ಕಗ್ಗದಾಸಪುರ, ನಾಗವಾರ ಪಾಳ್ಯ, ಸದುಗುಂಟೆಪಾಳ್ಯ. ಸದಾನಂದ ನಗರ, ನ್ಯೂ ಬೈಯ್ಯಪ್ಪನಹಳ್ಳಿ, ಜಿ.ಎಮ್. ಪಾಳ್ಯ, ಮಲ್ಲೇಶ್ ಪಾಳ್ಯ, ಮಾರುತಿ ನಗರ, ಇಂದಿರಾನಗರ 1ನೇ ಹಂತ, ಮಿಚಿಲ್ ಪಾಳ್ಯ, ಕೃಷ್ಣನಯ್ಯನ ಪಾಳ್ಯ, ಕೊನೇನ ಅಗ್ರಹಾರ, ಬಿಡಿಎ ಲೇಔಟ್, ಶಿವಲಿಂಗಯ್ಯ ಕಾಲೋನಿ, ಕೆಪಿಡಬ್ಲ್ಯೂ ಕ್ಯಾಟ್ರಸ್, ಕೋಡಿಹಳ್ಳಿ, ವರ್‌ಸೊವ ಲೇಔಟ್, ಬೈರಸಂದ್ರ, ಕೃಷ್ಣಪ್ಪ ಗಾರ್ಡನ್‌.

ಮಾರತ್ತಹಳ್ಳಿ ಯಮಲೂರು, ಕೆಂಪಾಪುರ, ಮುರಗೇಶ ಪಾಳ್ಯ, ಎನ್.ಆರ್, ಕಾಲೋನಿ, ಎನ್.ಎ.ಎಲ್, ಶ್ರೀ ರಾಮ್ ನಗರಿ ಸ್ವಮ್, ಡಿಫೆನ್ಸ್ ಎಂ ಎ ಪಿ ಕ್ಯಾರ್ರ ವಾಯು ವಿಹಾರ್, ಹರಲೂರು, ಅಂಬಲಿಪುರ, ಕಸವನಹಳ್ಳಿ. ಕೈಕೊಂಡನಹಳ್ಳಿ, ದೊಡ್ಡ ಕಣ್ಣಹಳ್ಳಿ, ಜುನ್ನಸಂದ್ರ ವಿಲೇಜ್, ಲೈಫ್ ಸ್ಟೈಲ್ ಲೇಔಟ್, ಸಿಲ್ಟರ್ ಓಕ್ ಲೇಔಟ್, ಲೇಕ್ ಡಿವೂ ರೆಸಿಡೆನ್ಸಿ ಲೇಔಟ್, ಕ್ರಿಸ್ಟಲ್ ಗೇಟ್, ಲೇಔಟ್, ಓರ್ಟ್ಸ್ ಕೋರ್ಟ್ ಲೇಔಟ್, ಈಸ್ಟ್ & ವೆಸ್ಟ್, ರಿಲಯನ್ಸ್ ಲೇಔಟ್, ಶುಭ ಎನ್‌ಕೆಕಿಞವ್ ಲೇಔಟ್, ಕೆ.ಪಿ.ಸಿ ಲೇಔಟ್, ಮುದಲಿಯರ್ ಲೇಔಟ್, ಜಲಶ್ರೀ ಲೇಔಟ್. ಹೆಚ್ ಬಿಆರ್. ಲೇಔಟ್, ಹೆಚ್‌ಆರ್‌ಬಿಆರ್ ಲೇಔಟ್, ಕಲ್ಯಾಣ ನಗರ, ರಾಮಯ್ಯ ಲೇಔಟ್, ಗೋವಿಂದ ಪುರ, ನಾಗವಾರ, ಹೆಣ್ಣೂರು, ಕಮ್ಮನಹಳ್ಳಿ, ಕಾಚರಕನ ಹಳ್ಳಿ. ಆಯಿಲ್ ಮಿಲ್, ಕೆಎಸ್‌ಎಫ್‌ಸಿ ಲೇಔಟ್, ಗುರುಮೂರ್ತಿ ರೆಡ್, ಸೈಟ್ ಪಾಳ್ಯ, ಪಟೇಲ್ ರಾಮಯ್ಯ ಲೇಔಟ್, ಪಟೇಲ್ ನಂಜುಂಡಪ್ಪ ಲೇಔಟ್, ಕುರಿನಾರಯಣಪ್ಪ ಲೇಔಟ್, ಸದಾಶಿವ ಟೆಂಪಲ್ ರೋಡ್, ಕನಕದಾಸ ಲೇಔಟ್, ಸತ್ಯಮೂರ್ತಿ ರೋಡ್, ಓಎಂಬಿಆರ್ ಲೇಔಟ್, ಚಿಕ್ಕಬಾಣಸವಾಡಿ, ಕಸ್ತೂರಿನಗರ, ಬಾಣಸವಾಡಿ, ಬಾಲಾಜಿ ಲೇಔಟ್, ಗ್ರೀನ್ ಪಾರ್ಕ್ ಲೇಔಟ್, ಬಿ ಚನ್ನಸಂದ್ರ, ಜೆ.ಪಿ.ನಗರ 8ನೇ ಫೇಸ್, 1ನೇ ಬ್ಲಾಕ್ & 2ನ್ ಬ್ಲಾಕ್, ಶರತಿ ನಗರ, ಸುರಭಿ ನಗರ ಪಶ್ಚಿಮ, ಬಿ.ಜಿ.ಎಸ್ ಲೆಔಟ್, ಜಂಬೂನಗರ, ಹರೀನಗರ, ಶ್ರೀನಿಧಿ ಲೇಔಟ್, ಕೃಷ್ಣ, ನಗರ, ಎಸ್.ಬಿ.ಎಂ ಕಾಲೋನಿ, ಅನ್ನಪೂರ್ಣೇಶ್ವರಿ ಲೇಔಟ್, ಪೈ ಲೇಔಟ್, ಪುಶ್ನ ಫಾರ್ಮ್, ಓಲ್ಲ ಬ್ಯಾಂಕ್ ಕಾಲೋನಿ, ನ್ಯೂ ಬ್ಯಾಂಕ್ ಕಾಲೋನಿ, ಪಿ.ಎನ್.ಬಿ ನಗರ, ಡಾಕೃಕ್ಸ್ ಕಾಲೋನಿ, ಜೈ ಕುಮಾರ್ ಲೇಔಟ್, ಸೌಧಮಿನಿ ಲೇಔಟ್, ಅಂಜಾನಾದಿ ಲೇಔಟ್, ಕೋಕೊನಟ್ ಗಾರ್ಡನ್, ಬಿ.ಡಿ.ಎ. ಜೆ.ಪಿ. ನಗರ 4ನೇ ಫೇಸ್, 1 ರಿಂದ 7ನೇ ಬ್ಲಾಕ್, ಅಂಜಾನಪುರ 1ರಿಂದ 5ನೇ ಜಿ ಬ್ಲಾಕ್, ಬಿಲೇಕಹಳ್ಳಿ ವಿಲೇಜ್, ಸಾರ್ವಭೌಮ ನಗರ, ಅರಕೆರೆ ವಿಲೇಜ್, ಬಿ.ಟಿ.ಎಸ್ ಲೇಔಟ್, ಡಾಕ್ರ ಲೇಔಟ್, ನಾಟಪ್ಪ ಲೇಔಟ್, ಬಿ.ಡಿ.ಎ ಲೇಔಟ್ 2ನೇ ಬ್ಲಾಕ್, ನ್ಯಾಯನಪ್ಪನಹಳ್ಳಿ ವಿಲೇಜ್, ಬಂಡೆ ಪಾಳ್ಯ, ಸುಗುಮ ಲೇಔಟ್, ವಿನಾಯಕ ನಗರ, ಶ್ರೀ ಎನ್‌ಕೆ ಕಿಕೆವ್, ಆರ್ ಆರ್ ಲೇಔಟ್, ಸರಸ್ವತಿಪುರಂ, ವೈಶ್ಯ ಬ್ಯಾಂಕ್ ಕಾಲೋನಿ, ಶಾಂತಿನಿಕೇತನ ಲೇಔಟ್‌.

ಹುಳಿಮಾವು ವಿಲೇಜ್, ಬಿ.ಡಿ.ಎ ಲೇಔಟ್ 6ನೇ ಹಂತ, 1ನೇ ಬ್ಲಾಕ್, ಕೆಂಪಮ್ಮ ಲೇಔಟ್, ರಾಘವೇಂದ್ರ ಲೇಔಟ್, ಅವನಿಶೃಂಗೇರಿ ನಗರ, ಮುನೇಶ್ವರ ಲೇಔಟ್, ಕೃಷ್ಣ ಲೇಔಟ್, ಮುತ್ತುರಾಯ ಸ್ವಾಮಿ ಲೇಔಟ್, ಜನತಾ ಕಾಲೋನಿ, ಪೋಸ್ಟ್ ಆಫೀಸ್ ರೋಡ್, ಸಮರ್ಥ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ವಿಜಯ ಶ್ರೀ ಲೇಔಟ್, ತಿಮ್ಮಪ್ಪರೆಡ್ಡಿ ಲೇಔಟ್, ವೆಂಕಟೆಶ್ವರ ಲೇಔಟ್, ಜಂಬುಸವಾರಿ ದಿಣ್ಣೆ, ಕೊತನೂರು ದಿಣ್ಣೆ. ಹೊಂಗಸAದ್ರ, ಶಾಂತಿ ನಗರ, ಮುನಿಯಪ್ಪ ಲೇಔಟ್, ಬೇಗೂರು ರೋಡ್, ಎ.ಪಿ.ಆರ್ ಚೌಟರಿ ರೋಡ್, ವಿನಾಯಕ ಲೇಔಟ್, ವಿದ್ಯಾ ಜ್ಯೋತಿ ರೋಡ್, ನ್ಯೂ ಮೈಕೋ ಲೇಔಟ್, ಓಂ ಶಕ್ತಿ ಲೇಔಟ್, ಗುರುಮೂರ್ತಿ ರೋಡ್, ಭಗತ್ ಸಿಂಗ್ ರೋಡ್, ವಾಜಪೇಯಿ ಲೇಔಟ್, ರಾಮಯ್ಯ ಲೇಔಟ್, ನರಸಿಂಹ ರೆಡ್ಡಿ ಲೇಔಟ್, ಬಾಲಾಜಿ ಲೇಔಟ್, ಕಾವೇರಿ ನಗರ, ಶ್ರೀನಿವಾಸ ಚೌಟರಿ ರೋಡ್, ಎಸ್ ಆರ್ ನಾಯ್ತು ಲೇಔಟ್, ಎಂ.ಎಸ್.ಆರ್ ಲೇಔಟ್, ಶ್ರೀನಿವಾಸ ಲೇಔಟ್, ಪ್ರಗತಿ ಲೇಔಟ್, ರಮೇಶ ರೆಡ್ಡಿ ಲೇಔಟ್, ಅಂಬೇಡ್ಕರ್ ಕಾಲೋನಿ, ಮುನೇಶ್ವರ ಲೇಔಟ್, ಕೇರಳ ಲೇಔಟ್, ಸಿಲ್ಕ್ ಬೋರ್ಡ್ ಕಾಲೋನಿ, ಆದರ್ಶ ಲೇಔಟ್, ವಿವೇಕಾನಂದ ನಗರ, ಮಂಗಮ್ಮನ ಪಾಳ್ಯ (ಪಾರ್ಟ್), ಗಾರ್ವೆಭಾವಿ ಪಾಳ್ಯ, ಲಕ್ಷ್ಮಿಲೇಔಟ್, ಮುನಿರೆಡ್ಡಿ ಲೇಔಟ್, ಅಭಯ್ ರೆಡ್ಡಿ ಲೇಔಟ್, ಗೌರಮ್ಮ ಲೇಔಟ್, ಶ್ರೀ ರಾಮ್ ನಗರ, ಚಿಕ್ಕಬಿದ್ದಪ್ಪ ಲೇಔಟ್, ಚಿಕ್ಕಬೇಗೂರು ಗೇಟ್, ಕುಡ್ಲು ಗೇಟ್, ರೋಜ ಸಿಲ್ಕ್ ಸ್ ರೋಡ್, ಸಿಂಗಸAದ್ರ (ಪಾರ್ಟ್). ಮಣಿಪಾಲ್ ಕಂಟ್ರಿ ರೋಡ್, ಎ.ಇ.ಸಿ.ಎಸ್.ಬಿ ಬ್ಲಾಕ್, ವೆಲ್ಲಿಂಗ್‌ಟನ್ ಪ್ಯಾರಡೈಸ್ ಲೇಔಟ್, ಕೃಷ್ಣ ರೆಡ್ಡಿ ಲೇಔಟ್, ಗ್ರೀನ್ ಗಾರ್ಡನ್ ಲೇಔಟ್, ಬೊಮ್ಮನಹಳ್ಳಿ, ವಿರಾಟ್ ನಗರ, ರೂಪೇನ ಅಗ್ರಹಾರ, ಎನ್.ಜಿ.ಆರ್ ಲೇಔಟ್, ಗುಲ್ಬರ್ಗ ಕಾಲೋನಿ, ಎಸ್.ಎಲ್.ವಿ ಲೇಔಟ್, ಚಿಕ್ಕತಾಯಪ್ಪ ರೆಡ್ಡಿ ಲೇಔಟ್, ಅಂಬೇಡ್ಕರ್ ಕಾಲೋನಿ, ಬೋವಿ ಕಾಲೋನಿ, ಭಾನು ನರ್ಸಿಂಗ್ ಹೋಮ್ ರೆಡ್, ಬೇಗೂರು ರೋಡ್, ಮುನೇಶ್ವರ ಲೇಔಟ್, ಕಾವೇರಿ ನಗರ, ಎನ್.ಆರ್. ಲೇಔಟ್, ಡುಯೊ-ಹೈಟ್ಸ್ ಲೇಔಟ್, ರಾಯಲ್ ಮೆರಿಡಿಯನ್ ಲೇಔಟ್, ರಾಯಲ್ ಶೆಲ್ಟರ್ ಲೇಔಟ್, ದೇವರಚಿಕ್ಕನಹಳ್ಳಿ, ಸಾಗರ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ಕೃಷ್ಣ, ಲೇಔಟ್, ಶಾಮಣ್ಯ, ರೆಡ್ಡಿ ಲೇಔಟ್, ನಾಡಮ್ಮ ಲೇಔಟ್, ಮಂಜುನಾಥ ಲೇಔಟ್, ಮತ್ತು ಪೊಡು ವಿಲೇಜ್ ಮುಂತಾದವುಗಳಲ್ಲಿ ನೀರು ಇರುವುದಿಲ್ಲ.

ಸೋಮಸುಂದರಪಾಳ್ಯ,ಮುನೇಶ್ವರ ಲೇಔಟ್ ಕುಡು ರೋಡ್, ಹೊಸಪಾಳ್ಯ, ಎಂ.ಜಿ.ಪಾಳ್ಯ, ಮದೀನ ನಗರ, ಬಂಡೆಪಾಳ್ಯ, ಸಿ.ಕೆ. ನಗರ, ಹೊಸ ರೋಡ್, ಎ.ಇ.ಸಿ. ಎಸ್ ಎ,ಬಿ,ಸಿ,ಡಿ,ಇ ಲೇಔಟ್, ತಿಪ್ಪರೆಡ್ಡಿ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ವೈಕುಂಟಮ್ ಲೇಔಟ್, ಲಕ್ಷ್ಮೀನಾರಾಯಣಪುರ, ಹನುಮಂತ ಲೇಔಟ್, ಫ್ರೆಂಡ್ಸ್ ಲೇಔಟ್ 7ನೇ, 8ನೇ ಮತ್ತು 9ನೇ ಕ್ರಾಸ್, ಚಿನ್ನಪ್ಪನ ಹಳ್ಳಿ, ವಿನಾಯಕ ಲೇಔಟ್, ಬಿ.ನಾರಾಯಣ ರೆಡ್ಡಿ ಲೇಔಟ್, ದೊಡ್ಡನೇಕುಂದಿ ಎಕ್ಸ್ ಟೆನ್ಸನ್ ಸಿಗಂಸAದ್ರ, ಚಿನ್ನಪ್ಪನಹಳ್ಳಿ 1ನೇ ಕ್ರಾಸ್ ಯಿಂದ 6ನೇ ‘ಸಿ’ ಕ್ರಾಸ್, ಮಾರುತಿ ನಗರ, ಇರಪ್ಪ ರೆಡ್ಡಿ ಲೇಔಟ್, ಕೊಂದAಡರಾಮ ರೆಡ್ಡಿ ಲೇಔಟ್, ಹೇಮಂತ ನಗರ, ಆರ್.ಜೆ ಗಾರ್ಡನ್, ಕುಂದಲಹಳ್ಳಿ ಕಾಲೋನಿ, ಕುಂದಲಹಳ್ಳಿ ವಿಲೇಜ್, ಅಶ್ವತ್ ನಗರ, ಹೂಡಿ-ಬಸವಣ್ಣನಗರ ರೋಡ್, ನಾಗಪ್ಪ ಲೇಔಟ್, ತಿಮ್ಮರೆಡ್ಡಿ ಇಂಡಸ್ಟ್ರೀಯಲ್ ಲೇಔಟ್, ತಿಮ್ಮರೆಡ್ಡಿ ಲೇಔಟ್,, ಸತ್ಯ ಸಾಯಿ ಲೇಔಟ್, ಎಸ್.ವಿ ಲೇಔಟ್, ಪುಟ್ಟಣ್ಣ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ಬಸವಣ್ಣ, ನಗರ. ಮಾರುತಿ ಲೇಔಟ್, ಸುಂದರಮ್ ರೆಡ್ಡಿ ಲೇಔಟ್, ಗಣೇಶ್ ರೆಡ್ಡಿ ಲೇಔಟ್, ಸೀತಾ ರಾಮ್ ಪಾಳ್ಯ, ಮಹೇಶ್ವರಿ ನಗರ, ಪಂಚಾಯತಿ ಲೇಔಟ್, ಅಂಬೇಡ್ಕರ್ ನಗರ, ರಾಮಕ್ಕ ಲೇಔಟ್, ಚರ್ಚ್ ರೋಡ್, ಚಿಕ್ಕಣ್ಣ ಲೇಔಟ್, ವಿ.ಎಸ್.ಟಿ ಲೇಔಟ್, ಆರ್.ಎಚ್.ಬಿ ಕಾಲೋನಿ, ರಾಮಾಂಜನೇಯ ಲೇಔಟ್, ಕನಕ ಲೇಔಟ್ ಮುತ್ತೂರಪ್ಪ ಲೇಔಟ್, ಶೆಟ್ಟಿ ಲೇಔಟ್, ಪಾಪರೆಡ್ಡಿ ಲೇಔಟ್, ಮೂರು ದೇವಸ್ಥಾನದ ರೋಡ್, ನಾಗಪ್ಪ ಲೇಔಟ್, ಗರುಡಚಾರ್ ಪಾಳ್ಯ ತೋಟ, ಕನೆಗಲು, ಮಣಿ ಲೇಔಟ್, ಕಾವೇರಿ ನಗರ 1ನೇ ಮೇನ್, ಪಿಳ್ಳ ರೆಡ್ಡಿ ರೋಡ್ ಯಿಂದ ನ್ಯೂ ಮಶನ್ ರೋಡ್ 2ನೇ ಕ್ರಾಸ್, ಸೊಸೈಟಿ ರೋಡ್, ವಿನಾಯಕ ಲೇಔಟ್ 1ನೇ ಕ್ರಾಸ್, ಮರಿಯಮ್ಮ ಟೆಂಪಲ್ 2ನೇ & 3ನೇ ಕ್ರಾಸ್, ಅಯ್ಯಪ್ಪ ಟೆಂಪಲ್ 5 ರೋಡ್. ಮುತ್ತು ಮಾರಿಯಮ್ಮ ಟೆಂಪಲ್, ವಿನಾಯಕ ಲೇಔಟ್, 4ನೇ ಕ್ರಾಸ್, ಮಸೀದಿ ರೋಡ್, ಚೌಡೇಶ್ವರಿ ಟೆಂಪಲ್-2 ರೋಡ್ಸ್, ಓಲ್ಡ್ ಮಶನ್ ರೋಡ್, ಉರ್ದ್ ಸ್ಕೂಲ್-3 ರೋಡ್, ಓಂ ಶಕ್ತಿ ಲೇಔಟ್, ಕೃಷ್ಣ ಟೆಂಪಲ್ ರೋಡ್, ಮುನೇಶ್ವರ ಟೆಂಪಲ್ ರೋಡ್, ಅಕ್ಕಮ್ಮ ರೋಡ್, ಮುನಿಯಪ್ಪ ರೋಡ್, ಎರ್‌ಟೇಲ್ ಆಫೀಸ್ ರೋಡ್, ಯಲ್ಲಪ್ಪ ಆಫೀಸ್ ರೋಡ್, ಪೆಂಡಲ್ ರೋಡ್, ಶನಿ ಮಹಾತ್ಮ ರೋಡ್, ವೆಂಕಟ ಹೌಸ್ ಯಿಂದ ಅಕ್ಕಮ್ಮ ರೋಡ್, ಪಾಮ್ ಆಯಿಲ್, ಓಂ ಶಕ್ತಿ ರೋಡ್ 2 ರೋಡ್, ಪಟ್ಟಣದೂರು ಅಗ್ರಹಾರ, ವೈಟ್‌ಫಿಲ್ಸ್, ಎಲ್.ಎನ್.ಟೆಂಪಲ್ ರೋಡ್, (1ನೇ 2ನೇ,3ನೇ ಕ್ರಾಸ್, 4ನೇ ಕ್ರಾಸ್,5ನೇ, 6ನೇ ಕ್ರಾಸ್, 7ನೇ ಎ ಅಡ್ಡ ರಸ್ತೆ), ಪಾಪರೆಡ್ಡಿ ಲೇಔಟ್, ಸ್ವಮ್ ಏರಿಯ, ವಸಂತ ಲೇಔಟ್, ವಾಗ್‌ದೇವಿ ಸೂಲ್ ರೋಡ್-1 ರಿಂದ 5ನೇ ಕ್ರಾಸ್. ಲಕ್ಷ್ಮೀ ಲೇಔಟ್ 2ನೇ ಕ್ರಾಸ್ ಯಿಂದ 5ನೇ ಕ್ರಾಸ್, ಭುವನೇಶ್ವರಿ ಲೇಔಟ್ (12 ನೇ ಯಿಂದ 14 ನೇ ಕ್ರಾಸ್) ಮುನೇಶ್ವರ ಲೇಔಟ್ ನೀರು ಪೂರೈಕೆ ಸ್ಥಗಿತವಾಗಿರುತ್ತದೆ.

ಸಪ್ತಗಿರಿ ಲೇಔಟ್ ಬಿ. ಮೇನ್ ರೋಡ್ & 1ನೇ ಫೆಸ್, ಸಪ್ತಗಿರಿ ಲೇಔಟ್ 2ನೇ ಫೇಸ್, ರಾಜಶ್ರೀ ಲೇಔಟ್(6,7,ಮತ್ತು 8 ನೇ ಕ್ರಾಸ್ 6ನೇ ಎ ಮತ್ತು 7ನೇ ಎ ಕ್ರಾಸ್) ಭುವನೇಶ್ವರಿ ಲೇಔಟ್(1ನೇ ಯಿಂದ 7ನೇ ಕ್ರಾಸ್), ರಾಜಶ್ರೀ ಲೇಔಟ್ ಮತ್ತು ಲಕ್ಷ್ಮೀ ಲೇಔಟ್ (6ನೇ ಕ್ರಾಸ್ ಯಿಂದ 12ನೇ ಕ್ರಾಸ್) ಸಪ್ತಗಿರಿ ಲೇಔಟ್ ಎ1 ಬ್ಲಾಕ್ ಮತ್ತು ಎ2 ಬ್ಲಾಕ್, ಮುನೇಕೊಳಲ ಸರ್ಕಲ್ ಮೇನ್ ರೋಡ್ ಬಸ್ ಸ್ಟಾಂಡ್ 1ನೇ ಮತ್ತು 2ನೇ ಕ್ರಾಸ್, ಮಂಜುನಾಥ ಲೇಔಟ್(3,4,5,6,7,8,8ಎ, 8ನೇ ಬಿ ಅಡ್ಡ ಕ್ರಾಸ್), ವೆಂಕಟೇಶ್ವರ ಲೇಔಟ್ (1ನೇ ಯಿಂದ 8ನೇ ಕ್ರಾಸ್) ಇಸ್ರೋ ಲೇಔಟ್(1ರಿಂದ 3ನೇ ಕ್ರಾಸ್), ಕೆನರ ಲೇಔಟ್(1ನೇ ಕ್ರಾಸ್, 2ನೇ ಕ್ರಾಸ್ ಮೇನ್ ರೋಡ್), ಎ.ಕೆ ಕಾಲೋನಿ, ಮಂಜುನಾಥ್ ಲೇಔಟ್(1 ರಿಂದ 3ನೇ ಕ್ರಾಸ್,4ನೇ ಕ್ರಾಸ್. 4ನೇ ಮೇನ್, 4ನೇ ಎ, 10ನೇ ಎ ಕ್ರಾಸ್. 11 ನೇ ಕ್ರಾಸ್, 12ನೇ ಕ್ರಾಸ್,13, 14 ಮೇನ್ ರೋಡ್), ಸಾಯಿ ಬಾಬಾ ಲೇಔಟ್ (1ನೇ ಯಿಂದ 3ನೇ ಕ್ರಾಸ್, 1ನೇ ಎ ಕ್ರಾಸ್. 2ನೇ ಎ ಕ್ರಾಸ್, 4 ನೇ ಯಿಂದ 11ನೇ ಕ್ರಾಸ್ 4ನೇ ಎ ಕ್ರಾಸ್, 2ನೇ ಪೆಸ್), ಗ್ರೀನ್ ಗಾರ್ಡನ್ ಲೇಔಟ್ ಮೇನ್ ರೋಡ್, ಗ್ರೀನ್ ಗಾರ್ಡನ್ ಲೇಔಟ್, ರಾಘವೇಂದ್ರ ಲೇಔಟ್, ವಿಕ್ಟರಿಯನ್ ಮೆಡ್ ಹೌಸ್, ಗುಲ್ನೋಹರ್ ಎನ್ ಕೈವ್ ರೋಡ್, ಸಿಲ್ವರ್ ಸ್ಪಿಂಗ್ ಲೇಔಟ್ ಮೇನ್ ರೋಡ್, ಪಿ.ಆರ್ ಲೇಔಟ್-3ನೇ ಎ ಕ್ರಾಸ್, 1,2ನೇ 3ನೇ ಬಿ ಕ್ರಾಸ್, ಅಯ್ಯಪ್ಪ ಲೇಔಟ್,-5ನೇ ಕ್ರಾಸ್,4ನೇ ಕ್ರಾಸ್, 3ನೇ ಕ್ರಾಸ್, 2ನೇ ಕ್ರಾಸ್, 1ನೇ ಕ್ರಾಸ್, ಸಿ.ಕೆ.ಬಿ ಲೇಔಟ್, ಎಂಎಸ್‌ಆರ್ ಲೇಔಟ್-1ನೇ ಕ್ರಾಸ್, ಬಲ್ಕ್ ಕನ್‌ಮ್‌ಷನ್-ಇಂಡಿಕ್ಯುಬ್, ಸಿ.ಇ.ಎಸ್.ಎಸ್.ಎನ್.ಎ, ನ್ಯೂ ಆರಿಜೊನ್, ಪ್ರೆಸ್ಟೀಜ್ ಸನ್‌ಸೈಡ್, ಬಲ್ಕ್ ಕನ್‌ಸಮ್‌ಷನ್-ಐಲೈಪ್ಸ್, ಆರ್.ಎಂ.ಝಡ್, ಆದರ್ಶ್, ಇನ್‌ಟೆಲ್, ಗ್ಲೋಬಾಲ್ ಟೆಕ್‌ಪಾರ್ಕ್, ವೀರಪ್ಪ ರೆಡ್ಡಿ ಲೇಔಟ್, ರೈನ್ ಬೋ ಲೇಔಟ್, ವಿನಾಯಕ ಲೇಔಟ್, ಮಂಜುನಾಥ್ ಲೇಔಟ್, ಪಾಪಯ್ಯ ಗಾರ್ಡನ್. ಸೊಕಮ್ಮ ಲೇಔಟ್, ಪಟ್ಟಿ ಲೇಔಟ್, ಲಿಲ್ಲಿ ಲೇನ್ ಲೇಔಟ್, ಮಾರುತಿ ಲೇಔಟ್, ಶಾಂತಿನಿಕೇತನ ಲೇಔಟ್, ಗಾಯತ್ರಿ ಲೇಔಟ್, ಬೈರಪ್ಪ ಲೇಔಟ್, ಬ್ರೂಕ್ ಬಂಡ್, ವಿನಾಯಕ ಲೇಔಟ್, ಸಾಯಿ ಲೇಔಟ್ ಇನರ್ ಸರ್ಕಲ್ ಮತ್ತು ಔಟರ್ ಸರ್ಕಲ್, ಡಾಟ್ಸ್ ಲೇಔಟ್ ನಲ್ಲಿ ನೀರು ಇರುವುದಿಲ್ಲ.

ಇದನ್ನೂ ಓದಿ | Land Registration : ಇನ್ನು ಮನೆಯಿಂದಲೇ ರಿಜಿಸ್ಟ್ರೇಷನ್‌ ಅವಕಾಶ, ನೋಂದಣಿ ಕಚೇರಿಗೆ ಹೋಗಬೇಕಾಗಿಯೇ ಇಲ್ಲ

ಪ್ರಶಾಂತ್ ಲೇಔಟ್, ಇಸಿಸಿ ರೋಡ್, ಬೃಂದವನ ಲೇಔಟ್ ಮತ್ತು ವಿನಾಯಕ ಲೇಔಟ್, ಮೈತ್ರೀ ಲೇಔಟ್, ಪಟಲಮ್ಮ ಲೇಔಟ್, ಮುನೇಶ್ವರ ನಗರ 1ನೇ ಕ್ರಾಸ್ ಯಿಂದ 5ನೇ ಕ್ರಾಸ್, ಅಯ್ಯಪ್ಪ ನಗರ, 1ನೇ ಬ್ಲಾಕ್ ರಿಂದ 4ನೇ ಬ್ಲಾಕ್ ಮತ್ತು ಕ್ರಾಸ್ ರೋಡ್ ಹೂಡಿ ವಿಲೇಜ್ 1ನೇ ಕ್ರಾಸ್, ಯಿಂದ 5ನೇ ಕ್ರಾಸ್, ತಿಗಳರ ಪಾಳ್ಯ (5ನೇ ಕ್ರಾಸ್ ಯಿಂದ 10ನೇ ಕ್ರಾಸ್), ಅಂಬೇಡ್ಕರ್ ಗುಟ್ಟ, ಅನುಗ್ರಹ ಲೇಔಟ್, ತಿಗಳರಪಾಳ್ಯ ಮತ್ತು ಸುತ್ತಮುತ್ತಲಿನ ರೋಡ್‌ಗಳು, ಶಾಂತಿ ನಗರ, ಹೊಸಪಾಳ್ಯ, ಓಂ ಶಕ್ತಿ ಲೇಔಟ್, ಇ ನಾರಾಯಣಪುರ, ಉದಯ ನಗರ, ಅಂದ್ರ ಕಾಲೋನಿ, ವಿ.ಎಸ್.ಆರ್ ಲೇಔಟ್, ಇಂದಿರಾಗಾAಧಿ ಸ್ಟ್ರೀಟ್, ಎವರ್ ಗ್ರೀನ್ ಸ್ಟ್ರೀಟ್, ಟ್ಯಾಗೂರ ಸ್ಟ್ರೀಟ್, ಸುಭಾಷ್ ಸ್ಟ್ರೀಟ್, ಶಕ್ತಿ ನಗರ, ಜ್ಯೋತಿ ನಗರ, ದರ್ಗಾಮನ್ ಹಾಲ್, ಸಾಕಮ್ಮ ಲೇಔಟ್, ವಿಜಾನ ನಗರ ಸರ್ವೀಸ್ ಸ್ಟೇಷನ್, ಅಕ್ಷಯ ನಗರ, ಎಂ.ಇ.ಜಿ ಲೇಔಟ್, ಗಿಡ್ಡಮ್ಮ ಲೇಔಟ್, ಪೈ ಲೇಔಟ್, ನಾಗಪ್ಪ ರೆಡ್ಡಿ ಲೇಔಟ್, ಅಯ್ಯ ರೆಡ್ಡಿ ಲೇಔಟ್, ನಾಗರಾಜಪ್ಪ ಲೇಔಟ್, ಕೊಡಪ್ಪ ರೆಡ್ಡಿ ಲೇಔಟ್, ರಮೇಸ್ ನಗರ, ವೀರಭದ್ರ ನಗರ, ಶಿವಶಕ್ತಿ ಲೇಔಟ್, ಜಗದೀಶ್ ನಗರ ಸರ್ವೀಸ್ ಸ್ಟೇಷನ್ ಕೆಳಗಡೆ, ನಲ್ಲೂರು ಪುರಂ, ರಮೇಶ ನಗರ, ರೆಡ್ಡಿ ಪಾಳ್ಯ, ವಿಭೂತಿ ಪುರ, ಅಣ್ಣಸಂದ್ರ ಪಾಳ್ಯ, ಎಲ್.ಬಿ.ಎಸ್ ನಗರ, ದೊಡ್ಡಾನಕುಂದಿ, ಮರತ್ ಹಳ್ಳಿ ಸರ್ವೀಸ್ ಸ್ಟೇಷನ್, ನಿಸರ್ಗ ಲೇಔಟ್, ಪ್ರಗತಿ ಲೇಔಟ್, ವಾಸ ಲೇಔಟ್, ಮಂಜುನಾಥ ನಗರ, ಗುರುರಾಜನಗರ, ಬಾಲಾಜಿ ಲೇಔಟ್.ಸಂಜಯ್ ನಗರ, ರಾಮಾಂಜನೇಯ ಲೇಔಟ್, ಶಾನ್ ಬೋಗ ಲೇಔಟ್, ಪಾರ್ಟ್ ಆಫ್ 5ನೇ, 6ನೇ, 8ನೇ ಎನ್.ಜಿ.ವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ; ಪೊಲೀಸ್‌ ಕಸ್ಟಡಿ ಅಂತ್ಯ

Prajwal Revanna Case: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ವಿಡಿಯೊ ವೈರಲ್‌ ಮಾಡಿದವರ ಕುರಿತು ಸಾಕ್ಷ್ಯ ಬಿಡುಗಡೆ ಮಾಡುತ್ತೇನೆ ಎನ್ನುತ್ತಿದ್ದ ವಕೀಲ ದೇವರಾಜೇಗೌಡ ಅವರನ್ನು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧನ ಮಾಡಲಾಗಿತ್ತು. ಈ ಸಂಬಂಧ ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಜೆಎಂಎಫ್‌ಸಿ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಹೀಗಾಗಿ ಗುರುವಾರವೂ ಒಂದು ದಿನ ಅವಧಿ ವಿಸ್ತರಣೆ ಮಾಡಿ ಕೋರ್ಟ್‌ ಆದೇಶಿಸಿತ್ತು. ಅಲ್ಲದೆ, ಶುಕ್ರವಾರ (ಮೇ 17) ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಚಿಸಿತ್ತು. ಇಂದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.

VISTARANEWS.COM


on

Prajwal Revanna Case Lawyer Devarajegowda sent to judicial custody End of police custody
Koo

ಹಾಸನ: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ (physical Abuse) ಕೇಸ್‌ ಆರೋಪಿ ವಕೀಲ ದೇವರಾಜೇಗೌಡ (Devarajegowda) ಅವರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಗುರುವಾರವೂ ಒಂದು ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಶುಕ್ರವಾರ ಕೋರ್ಟ್‌ ಮುಂದೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಂಗ ಬಂಧನವಿರಿಸಿ ಆದೇಶಿಸಲಾಗಿದೆ. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ (Prajwal Revanna Case) ಸಾಕ್ಷಿ ಬಿಡುಗಡೆ ಮುಂದಾಗಿದ್ದ ದೇವರಾಜೇಗೌಡ ಅವರೀಗ ಇದಕ್ಕೆ ಸಂಬಂಧಪಟ್ಟಂತೆ ಬೇರೆ ಕೇಸ್‌ನಲ್ಲಿ ಲಾಕ್‌ ಆದಂತೆ ಆಗಿದೆ.

ಒಟ್ಟು ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ದೇವರಾಜೇಗೌಡ ಅವರು ಈಗ ಮತ್ತೆ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ. ದೇವರಾಜೇಗೌಡ ಪರ ವಕೀಲರು ಇಂದು ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ (Prajwal Revanna Case) ವಿಡಿಯೊ ವೈರಲ್‌ (video viral) ಮಾಡಿದವರ ಕುರಿತು ಸಾಕ್ಷ್ಯ ಬಿಡುಗಡೆ ಮಾಡುತ್ತೇನೆ ಎನ್ನುತ್ತಿದ್ದ ವಕೀಲ ದೇವರಾಜೇಗೌಡ ಅವರನ್ನು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧನ ಮಾಡಲಾಗಿತ್ತು. ಈ ಸಂಬಂಧ ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಜೆಎಂಎಫ್‌ಸಿ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಹೀಗಾಗಿ ಗುರುವಾರವೂ ಒಂದು ದಿನ ಅವಧಿ ವಿಸ್ತರಣೆ ಮಾಡಿ ಕೋರ್ಟ್‌ ಆದೇಶಿಸಿತ್ತು. ಅಲ್ಲದೆ, ಶುಕ್ರವಾರ (ಮೇ 17) ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಚಿಸಿತ್ತು. ಇಂದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.

ದೇವರಾಜೇಗೌಡ ಮೇ 11ರಂದು ಬಂಧನಕ್ಕೆ ಒಳಗಾಗಿದ್ದರು. ಇವರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪಗಳನ್ನು ಹೊರಿಸಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಹೊಳೆನರಸೀಪುರ, ಹಾಸನ ಸೇರಿ ಇತರ ಅಗತ್ಯ ಸ್ಥಳಗಳಿಗೆ ಕರೆದೊಯ್ದು ವಿಚಾರಣೆಯನ್ನು ಕೈಗೊಂಡಿದ್ದರು.

ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ದೇವರಾಜೇಗೌಡ

ವಕೀಲ ದೇವರಾಜೇಗೌಡ ಬಂಧನವಾಗಿರುವುದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: HD Revanna: ಬಸವನಗುಡಿ ನಿವಾಸದಿಂದ ದೂರವೇ ಉಳಿದ ಎಚ್‌ ಡಿ ರೇವಣ್ಣ; ಜ್ಯೋತಿಷಿಗಳ ಕಟ್ಟೆಚ್ಚರ?

ಪತಿಯು ಮಾಲೀಕತ್ವದ ಸೈಟ್ ವಿಚಾರವಾಗಿ ದೇವರಾಜೇಗೌಡ ಅವರನ್ನು ಮಹಿಳೆಯೊಬ್ಬರು ಭೇಟಿಯಾಗಿದ್ದರು. ಆ ಪರಿಚಯವನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ದೇವರಾಜೇಗೌಡ ವಿರುದ್ಧ ಕೇಳಿ ಬಂದಿದೆ.

Continue Reading

ಬೆಂಗಳೂರು

Road Accident : ಮೈಸೂರು- ಬೆಂಗಳೂರಲ್ಲಿ ಮೂವರ ಪ್ರಾಣ ಕಸಿದ ಮೂರು ಪ್ರತ್ಯೇಕ ಅಪಘಾತ

Road Accident : ಬೆಂಗಳೂರು-ಮೈಸೂರಲ್ಲಿ ಪ್ರತ್ಯೇಕ ಕಡೆಗಳಲ್ಲಿ ನಡೆದ ಅಪಘಾತದಲ್ಲಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಯುವಕನೊರ್ವ ಬೈಕ್‌ ಅಪಘಾತದಲ್ಲಿ ಮೃತಪಟ್ಟರೆ, ಮೈಸೂರಲ್ಲಿ ಎರಡು ಅಪಘಾತದಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.

VISTARANEWS.COM


on

By

road Accident in Bengaluru mysore
Koo

ಮೈಸೂರು/ಬೆಂಗಳೂರು: ಮೈಸೂರಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ಅಪಘಾತ (Road Accident) ನಡೆದಿದ್ದು, ಇಬ್ಬರು ಮೃತಪಟ್ಟರೆ, ಬೆಂಗಳೂರಲ್ಲಿ ಬರ್ತ್‌ ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಯುವಕ ಸ್ವಯಂ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

ಬೈಕ್‌ಗಳ ನಡುವೆ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿಯಲ್ಲಿ ಅಪಘಾತ ನಡೆದಿದೆ.

ಹುಣಸೂರು ತಾಲೂಕಿನ ಮರೂರುಕಾವಲ್ ಗ್ರಾಮದ ನಿವಾಸಿ ಸಾಗರ್ (35) ಮೃತ ದುರ್ದೈವಿ. ಹಿಂಬದಿ ಕುಳಿತಿದ್ದ ಅರಸು ಕಲ್ಲಹಳ್ಳಿ ಗ್ರಾಮದ ಹರೀಶ್ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಹರೀಶ್‌ನನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮತ್ತೊಂದು ವಾಹನದ ಸವಾರ ಕೆಸ್ತೂರು ಕೊಪ್ಪಲು ಗ್ರಾಮದ ನಿವಾಸಿ ಕೆಂಡಗಣ್ಣ ಅವರು ತೀವ್ರ ಗಾಯವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಣಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಕಾರು-ಸ್ಕೂಟರ್‌ ಅಪಘಾತ; ಮಹಿಳೆ ಸಾವು

ಕಾರು- ಸ್ಕೂಟರ್ ನಡುವೆ ಭೀಕ ಅಪಘಾತ ಸಂಭವಿಸಿದ್ದು, ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಹೆಬ್ಬಾಳು ಬಡಾವಣೆ ನಿವಾಸಿ ರಾಧಾ (34) ಮೃತ ದುರ್ದೈವಿ.

ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Student Death : ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ; ಕಾಲೇಜು ಕಿರುಕುಳಕ್ಕೆ ಬೇಸತ್ತಳೇ?

ಹೆಲ್ಮೆಟ್‌ರಹಿತ ಸವಾರಿಗೆ ಯುವಕ ಬಲಿ

ಬೆಂಗಳೂರಿನ ನಾಗವಾರ ಕಡೆಯಿಂದ ಮೂಡಲಪಾಳ್ಯ ಕಡೆಗೆ ಬೈಕ್‌ನಲ್ಲಿ ಬರುವಾಗ ಯುವಕನೊರ್ವ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ವರುಣ್‌ ಮೃತ ದುರ್ದೈವಿ.

ಮೂಲತಃ ಕೋಲಾರದ ವರುಣ್ ಬೆಂಗಳೂರು ಪೀಣ್ಯ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ಏಷಿಯನ್ ಪೈಂಟ್ಸ್‌ನಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದ. ಗುರುವಾರ ರಾತ್ರಿ ಸ್ನೇಹಿತನ ಬರ್ತ್ ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ವರುಣ್ ಬಳಿಕ ಹಾಸ್ಟೆಲ್‌ಗೆ ತೆರಳಿ ಸ್ನೇಹಿತರ ಭೇಟಿಯಾಗಿ ಬರುತ್ತಿದ್ದ. ಈ ವೇಳೆ ಮಾಳಗಾಳ ಬಳಿ ಸೆಲ್ಫ್‌ ಆ್ಯಕ್ಸಿಡೆಂಟ್‌ ಆಗಿದೆ. ಹೆಲ್ಮೆಟ್ ಧರಿಸದೇ ಇದ್ದಿದ್ದರಿಂದ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವರುಣ್‌ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ತಂದೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ವರುಣ್‌ ತಮ್ಮ ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದು, ಇಡೀ ಕುಟುಂಬಕ್ಕೆ ವರುಣ್‌ ಆಧಾರವಾಗಿದ್ದ. ತಾಯಿಯ ಆಸ್ಪತ್ರೆ ಖರ್ಚಿಗೂ ಈತನೇ ಆಧಾರವಾಗಿದ್ದ. ವರುಣ್‌ ಸಾವು ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

CM Siddaramaiah: ಸಿದ್ದರಾಮಯ್ಯ ಸರ್ಕಾರಕ್ಕೆ 1 ವರ್ಷ; ಚಾರ್ಜ್‌ಶೀಟ್‌ ರೆಡಿ ಮಾಡಿದ ಬಿಜೆಪಿ; ಕೌಂಟರ್‌ಗೆ ಕಾಂಗ್ರೆಸ್‌ ತಯಾರಿ

CM Siddaramaiah: ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಮುಗಿ ಬೀಳುತ್ತಿರುವ ಬಿಜೆಪಿಗರು ಕಾನೂನು ಸುವ್ಯವಸ್ಥೆ ಬಗ್ಗೆಯೂ ಟೀಕೆ ಮಾಡುತ್ತಿದ್ದಾರೆ. ಇನ್ನು ಒಂದು ವರ್ಷ ಸರ್ಕಾರ ಏನೆಲ್ಲ ವೈಫಲ್ಯಗಳನ್ನು ಮಾಡಿದೆ ಎಂಬ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು, ಇದು ಸರ್ಕಾರದ ಸಾಧನೆ ಎಂದು ನೆಗೆಟಿವ್‌ ರೋಲ್‌ನಲ್ಲಿ ಬಿಂಬಿಸಲು ಮುಂದಾಗಿದೆ. ಬಿಜೆಪಿಯ “ಫೆಲ್ಯೂರ್ ಸರ್ಕಾರ” ಅಸ್ತ್ರಕ್ಕೆ ಪ್ರತಿಯಾಗಿ ಸಾಧನಾ ಸಮಾವೇಶ ಮಾಡಿ ಚೆಕ್‌ಮೇಟ್‌ ಕೊಡಲು ಕಾಂಗ್ರೆಸ್ ಪ್ಲ್ಯಾನ್‌ ಮಾಡಿಕೊಂಡಿದೆ.

VISTARANEWS.COM


on

1 year of CM Siddaramaiah government BJP prepares chargesheet and Congress gears up for counter
Koo

ಬೆಂಗಳೂರು: ದೇಶಾದ್ಯಂತ ಲೋಕಸಭಾ ಚುನಾವಣೆ (Lok Sabha Election 2024) ಕಾವು ಜೋರಾಗಿಯೇ ಇದೆ. ಈ ನಡುವೆ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ (Karnataka Congress Government) ಒಂದು ವರ್ಷ ಪೂರ್ಣವಾಗುತ್ತಿದೆ. ಮೇ 20ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್ ರೆಡಿ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೆ ಕೌಂಟರ್‌ ಕೊಡಲು ಸಿಎಂ ಮತ್ತವರ ಮಂತ್ರಿ ಮಂಡಲದ ಸದಸ್ಯರು ಪ್ಲ್ಯಾನ್‌ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಮುಗಿ ಬೀಳುತ್ತಿರುವ ಬಿಜೆಪಿಗರು ಕಾನೂನು ಸುವ್ಯವಸ್ಥೆ ಬಗ್ಗೆಯೂ ಟೀಕೆ ಮಾಡುತ್ತಿದ್ದಾರೆ. ಇನ್ನು ಒಂದು ವರ್ಷ ಸರ್ಕಾರ ಏನೆಲ್ಲ ವೈಫಲ್ಯಗಳನ್ನು ಮಾಡಿದೆ ಎಂಬ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು, ಇದು ಸರ್ಕಾರದ ಸಾಧನೆ ಎಂದು ನೆಗೆಟಿವ್‌ ರೋಲ್‌ನಲ್ಲಿ ಬಿಂಬಿಸಲು ಮುಂದಾಗಿದೆ.

ರಾಜ್ಯದಲ್ಲಿ ಎಂದೂ ಕಂಡರಿಯದ ಭೀಕರ ಬರಗಾಲ ಬಂದಿದೆ. ಆದರೆ, ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ರೈತರಿಗೆ ಪರಿಹಾರವನ್ನು ನೀಡಿಲ್ಲ. ರೈತರ ಬದುಕು ದುಸ್ತರವಾಗಿದೆ. ಕೇಂದ್ರ ಸರ್ಕಾರ ನೀಡಿದ ಬರ ಪರಿಹಾರದ ಹಣವೂ ರೈತರಿಗೆ ತಲುಪುತ್ತಿಲ್ಲ. ಅದನ್ನು ಬ್ಯಾಂಕ್‌ಗಳು ಸಾಲಕ್ಕೆ ಬಳಸಿಕೊಳ್ಳುತ್ತಿವೆ. ಇನ್ನು ಸರ್ಕಾರವು ಒಂದು ವರ್ಷದಲ್ಲಿ ಹೊಸ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನೂ ಮಾಡಿಲ್ಲ.

ಇಷ್ಟಲ್ಲದೆ ಶಾಸಕರ ಪರಿಸ್ಥಿತಿ ಇನ್ನೂ ಕಷ್ಟಕರವಾಗಿದೆ. ಶಾಸಕರಿಗೆ ಅನುದಾನ ಕೊಡಲು ಹಣವಿಲ್ಲ. ರಾಜ್ಯದಲ್ಲಿ ಸರಣಿ ಕೊಲೆ, ಅತ್ಯಾಚಾರಗಳಾದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಅನುದಾನ ಕೊಡುತ್ತೇವೆ, ಕೊಡುತ್ತೇವೆ ಎಂದೇ ದಿನ ದೂಡುತ್ತಿದೆ ಎಂದು ಸ್ವಪಕ್ಷೀಯ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಜನರ ಮುಂದಿಡಲು ಬಿಜೆಪಿ ಮುಂದಾಗಿದೆ.

ಬುಕ್‌ ರಿಲೀಸ್‌ಗೆ ಬಿಜೆಪಿ ಸಿದ್ಧತೆ

ರಾಜ್ಯ ಸರ್ಕಾರದ ಮೇಲೆ ಮಾಡಲಾಗುವ ಎಲ್ಲ ಆರೋಪಗಳ ಪಟ್ಟಿಯನ್ನು ಒಂದು ಪುಸ್ತಕ ರೂಪದಲ್ಲಿ ತರಲು ಬಿಜೆಪಿ ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಇದನ್ನು ದೊಡ್ಡ ಮಟ್ಟದಲ್ಲಿ ಅಭಿಯಾನವನ್ನಾಗಿ ಕೈಗೊಳ್ಳಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸರ್ಕಾರದ ವಿರುದ್ಧ ಇದೇ ಇವರಿಗೆ ಪ್ರಮುಖ ಅಸ್ತ್ರವಾಗಿರಲಿದೆ.

ಕೌಂಟರ್‌ ಕೊಡಲು ಸಿದ್ದು ಪ್ಲ್ಯಾನ್‌ ಏನು?

ಇತ್ತ ಒಂದು ವರ್ಷ ಪೂರೈಸಿರುವ ಸಿದ್ದರಾಮಯ್ಯ ಸರ್ಕಾರದಿಂದ ಸಾಧನಾ ಸಮಾವೇಶ ಮಾಡಲು ಪ್ಲ್ಯಾನ್‌ ಮಾಡಲಾಗಿದೆ. ಈಗ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ಫಲಿತಾಂಶದವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಜೂನ್ ಎರಡನೇ ವಾರದಲ್ಲಿ ಸಾಧನಾ ಸಮಾವೇಶ ಮಾಡಲು ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.

ಇದನ್ನೂ ಓದಿ: DK Shivakumar: ಉತ್ತರ ಪ್ರದೇಶದಲ್ಲಿ ಡಿಕೆಶಿ; ಅಮೇಥಿ, ರಾಯ್‌ ಬರೇಲಿಯಲ್ಲಿ ಮಾಡ್ತಾರಾ ಕಮಾಲ್?

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಅಧಿಕ ಸ್ಥಾನ ಬಂದರೆ ಎರಡನ್ನೂ ಒಟ್ಟಿಗೆ ಸೇರಿ ಸಮಾವೇಶ ಮಾಡುವಂತೆ ಸಿಎಂ ಆಪ್ತರು ಸಲಹೆ ನೀಡಿದ್ದಾರೆನ್ನಲಾಗಿದೆ. ಈ ಸಮಾವೇಶ ಮಾಡುವ ಮೂಲಕ ಗ್ಯಾರಂಟಿ ಸರ್ಕಾರದ ಯಶಸ್ವಿ ನಾಗಾಲೋಟ ಮುಂದುವರಿಯುತ್ತದೆ ಎಂಬ ಸಂದೇಶವನ್ನು ರವಾನೆ ಮಾಡಲು ಚಿಂತನೆ ನಡೆಸಲಾಗಿದೆ. ಒಟ್ಟಾರೆಯಾಗಿ ಬಿಜೆಪಿಯ “ಫೆಲ್ಯೂರ್ ಸರ್ಕಾರ” ಅಸ್ತ್ರಕ್ಕೆ ಪ್ರತಿಯಾಗಿ ಸಾಧನಾ ಸಮಾವೇಶ ಮಾಡಿ ಚೆಕ್‌ಮೇಟ್‌ ಕೊಡಲು ಕಾಂಗ್ರೆಸ್ ಪ್ಲ್ಯಾನ್‌ ಮಾಡಿಕೊಂಡಿದೆ.

Continue Reading

ಚಿನ್ನದ ದರ

Gold Rate Today: ಇಳಿಯಿತು ಚಿನ್ನದ ಬೆಲೆ; ಬಂಗಾರದ ಗ್ರಾಹಕರಿಗೆ ತುಸು ನಿಟ್ಟುಸಿರು; ದರ ಹೀಗಿದೆ

Gold Rate Today: ಬಂಗಾರದ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನ ಇಂದಿನ ಚಿನ್ನದ ಹಾಗೂ ಬೆಳ್ಳಿಯ ದರಗಳು ಇಲ್ಲಿವೆ.

VISTARANEWS.COM


on

gold rate today adah
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಕ್ರಮವಾಗಿ ₹25 ಹಾಗೂ ₹27 ಇಳಿಕೆಯಾಗಿವೆ. ನಿನ್ನೆ ಚಿನ್ನದ ಬೆಲೆ ಗ್ರಾಂಗೆ 70 ರೂಪಾಯಿಗಳಷ್ಟು ಏರಿಕೆಯಾಗಿತ್ತು. ಅಕ್ಷಯ ತದಿಗೆಯಂದು ಭಾರೀ ಬೆಲೆ ಏರಿಕೆ ಆಗಿತ್ತು.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,760ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹54,080 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹67,600 ಮತ್ತು ₹6,76,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,375 ಆಗಿದ್ದರೆ, ಎಂಟು ಗ್ರಾಂ ಬೆಲೆ ₹59,000 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹73,750 ಮತ್ತು ₹7,37,500 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹88.50, ಎಂಟು ಗ್ರಾಂ ₹708 ಮತ್ತು 10 ಗ್ರಾಂ ₹885ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,850 ಮತ್ತು 1 ಕಿಲೋಗ್ರಾಂಗೆ ₹88,500 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ67,75073,900
ಮುಂಬಯಿ67,600 73,750
ಬೆಂಗಳೂರು67,600 73,750
ಚೆನ್ನೈ67,70073,850

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Gold Rate Today: ಬಂಗಾರದ ಬೆಲೆ ಇನ್ನೂ ಇಳಿಕೆ; ಇಂದಿನ ಮಾರುಕಟ್ಟೆ ದರಗಳನ್ನು ಇಲ್ಲಿ ಗಮನಿಸಿಕೊಳ್ಳಿ

Continue Reading
Advertisement
Prajwal Revanna Case Lawyer Devarajegowda sent to judicial custody End of police custody
ಕ್ರೈಂ12 mins ago

Prajwal Revanna Case: ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ; ಪೊಲೀಸ್‌ ಕಸ್ಟಡಿ ಅಂತ್ಯ

RCB vs CSK
ಕ್ರೀಡೆ25 mins ago

RCB vs CSK: ನಾಳಿನ ಪಂದ್ಯಕ್ಕೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ಆರ್​ಸಿಬಿ ಆಟಗಾರರು; ವಿಡಿಯೊ ವೈರಲ್​

Kannada New Movie The judgement Trailer Out Kannada
ಸ್ಯಾಂಡಲ್ ವುಡ್27 mins ago

Kannada New Movie: ಕುತೂಹಲ ಮೂಡಿಸಿದೆ ರವಿಚಂದ್ರನ್ ಅಭಿನಯದ ‘ದ ಜಡ್ಜ್ ಮೆಂಟ್’ ಟ್ರೈಲರ್‌!

Crime News
ದೇಶ30 mins ago

ಶಾಲೆ ಸಮೀಪದ ಚರಂಡಿಯಲ್ಲಿ 4 ವರ್ಷದ ಮಗುವಿನ ಮೃತದೇಹ ಪತ್ತೆ; ಭುಗಿಲೆದ್ದ ಹಿಂಸಾಚಾರ

Bal Jeevan Bima
ಮನಿ ಗೈಡ್46 mins ago

Bal Jeevan Bima: ಮಕ್ಕಳ ಹೆಸರಲ್ಲಿ ನಿತ್ಯ 6 ರೂ.ನಂತೆ ಕಟ್ಟಿದರೆ 1 ಲಕ್ಷ ರೂ. ವಿಮೆಯ ರಕ್ಷಣೆ

road Accident in Bengaluru mysore
ಬೆಂಗಳೂರು47 mins ago

Road Accident : ಮೈಸೂರು- ಬೆಂಗಳೂರಲ್ಲಿ ಮೂವರ ಪ್ರಾಣ ಕಸಿದ ಮೂರು ಪ್ರತ್ಯೇಕ ಅಪಘಾತ

Swati Maliwal
ದೇಶ47 mins ago

Swati Maliwal: “ಪೀರಿಯೆಡ್ಸ್‌ ಆಗಿದೆ.. ಪ್ಲೀಸ್‌ ಬಿಟ್ಟು ಬಿಡು ಅಂದ್ರೂ ಕೇಳಲಿಲ್ಲ”-ಆಘಾತಕಾರಿ ಸಂಗತಿ ಬಿಚ್ಚಿಟ್ಟ ಸ್ವಾತಿ ಮಲಿವಾಲ್‌

Viral Video
ವೈರಲ್ ನ್ಯೂಸ್1 hour ago

Viral Video: ಅಳುತ್ತಾ ವಿದಾಯ ಹೇಳಿದ್ದೇಕೆ ಪಾಕಿಸ್ತಾನದ ಅತ್ಯಂತ ಕಿರಿಯ ಯೂಟ್ಯೂಬರ್?

1 year of CM Siddaramaiah government BJP prepares chargesheet and Congress gears up for counter
ರಾಜಕೀಯ1 hour ago

CM Siddaramaiah: ಸಿದ್ದರಾಮಯ್ಯ ಸರ್ಕಾರಕ್ಕೆ 1 ವರ್ಷ; ಚಾರ್ಜ್‌ಶೀಟ್‌ ರೆಡಿ ಮಾಡಿದ ಬಿಜೆಪಿ; ಕೌಂಟರ್‌ಗೆ ಕಾಂಗ್ರೆಸ್‌ ತಯಾರಿ

RCB vs CSK
ಕ್ರೀಡೆ1 hour ago

RCB vs CSK: ಆರ್​ಸಿಬಿ-ಚೆನ್ನೈ ಪಂದ್ಯಕ್ಕೆ ಮಳೆ ನಿಯಮ ಹೇಗಿದೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ8 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ9 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ22 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌