No Water Supply: ಫೆ.27, 28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ - Vistara News

ಬೆಂಗಳೂರು

No Water Supply: ಫೆ.27, 28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ

No Water Supply: ಬೆಂಗಳೂರಿನ ವಿವಿಧೆಡೆ ಫೆ.27ರ ಬೆಳಗ್ಗೆ 6 ರಿಂದ ಫೆ.28ರ ಬೆಳಗ್ಗೆ 6ಗಂಟೆವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

VISTARANEWS.COM


on

No water supply
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆ ಆರಂಭದಲ್ಲೇ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆ ಇದೆ. ಈಗಾಗಲೇ ಹಲವೆಡೆ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಇದೀಗ ಫೆ.27ರ ಬೆಳಗ್ಗೆ 6 ರಿಂದ ಫೆ.28ರ ಬೆಳಗ್ಗೆ 6ಗಂಟೆವರೆಗೆ ನಗರದ ಬಹುತೇಕ ಕಡೆ ನೀರು (No Water Supply) ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಈ ಬಗ್ಗೆ ಬೆಂಗಳೂರು ಜಲಮಂಡಳಿ (BWSSB) ಮಾಹಿತಿ ನೀಡಿದ್ದು, ತುರ್ತು ನಿರ್ವಹಣಾ ಕಾಮಗಾರಿಗಳು ಮತ್ತು ಯು.ಎಫ್.ಡಬ್ಲ್ಯೂ ಬಲ್ಕ್ ಪ್ಲೋ ಮೀಟರ್‌ಗಳ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳುವ ಸಲುವಾಗಿ ಫೆ.27ರ ಬೆಳಗ್ಗೆ 6ರಿಂದ ಫೆ.28 ಬೆಳಗ್ಗೆ 6 ಗಂಟೆಯವರೆಗೂ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ನಗರದ ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ತಿಳಿಸಿದೆ.

ಬಿ.ಎಚ್.ಇ.ಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ & ಬಡಾವಣೆ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್.ಜಿ.ಇ.ಎಫ್ ಲೇಔಟ್, ಪಾರ್ಟ್ ಆಫ್ ಐ.ಟಿ.ಐ ಲೇಔಟ್, 1ನೇ ಮತ್ತು 2ನೇ ಹಂತ ರೈಲ್ವೆ ಲೇಔಟ್, ಆರ್.ಹೆಚ್.ಬಿ.ಸಿ.ಎಸ್ ಲೇಔಟ್ 1ನೇ & 2ನೇ ಸ್ಟೇಜ್, ಭೈರವೇಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಣ ಪಾಳ್ಯ, ಡಿ ಗ್ರೂಪ್ ಲೇಔಟ್, ಕೆಬ್ರೇಹಳ್ಳ, ಚಂದನ ಲೇಔಟ್, ಚಂದ್ರಶೇಖರ ಲೇಔಟ್, ಜಿಯೋಲೊಜಿ ಲೇಔಟ್, ನರಸಪುರ, ಕಂದಾಯ ಲೇಔಟ್, ಮುಳಕಟ್ಟಮ್ಮ ಲೇಔಟ್, ಪಾರ್ಟ್ ಆಫ್ ಪಾಪರೆಡ್ಡಿ ಪಾಳ್ಯ, ಬಿ.ಇ.ಎಲ್ 1ನೇ & 2ನೇ ಹಂತ, ಬಿಲೇಕಲ್ಲು, ಬ್ಯಾಡರಹಳ್ಳಿ. ಉಪಕಾರ್ ಲೇಔಟ್, ಆರ್.ಆರ್.ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಲ್ಲಾಳ ವಿಲೇಜ್, ಸೊನ್ನೇನಹಳ್ಳಿ ಟೆಲಿಕಾಂ ಲೇಔಟ್, ವಿನಾಯಕ ಲೇಔಟ್, ಉಲ್ಲಾಳ, ಬಾಲಾಜಿ ಲೇಔಟ್, ಸರ್.ಎಂ. ವಿಶ್ವೇಶರಯ್ಯ ಲೇಔಟ್ 1ನೇ ಬ್ಲಾಕ್ ರಿಂದ 9ನೇ ಬ್ಲಾಕ್, ಮುನೇಶ್ವರನಗರ, ಪ್ರಕೃತಿನಗರ, ಹೆಚ್.ಎಂ.ಟಿ ಲೇಔಟ್, ನಿಸರ್ಗ ಲೇಔಟ್, ಇನ್‌ಕಮ್ ಟ್ಯಾಕ್ಸ್ ಲೇಔಟ್.

ಇದನ್ನೂ ಓದಿ | Karnataka Weather : ಇನ್ನೆರಡು ದಿನ ಬಿಸಿಲು ರಣ ರಣ; ಜನ ಹೈರಾಣ!

ರಾಮಯ್ಯ ಲೇಔಟ್, ಗಂಗಮ್ಮ ಬಡಾವಣೆ, ಶೆಟ್ಟಿಹಳ್ಳಿ ವಾಡ್-12, ಮಲ್ಲಸಂದ್ರ ವಾರ್ಡ್-13. ಬಗಳಗುಂಟೆ ವಾರ್ಡ್-14. ದಾಸರಹಳ್ಳಿ ವಾರ್ಡ್-15, ಜಾಲಹಳ್ಳಿ ವಾರ್ಡ್-16, ಹೆಚ್.ಎಂ.ಟಿ ವಾರ್ಡ್-38, ಚೊಕ್ಕಸಂದ್ರ ವಾರ್ಡ್-39, ಪೀಣ್ಯ ಇಂಡಸ್ಟ್ರೀಯಲ್ ಏರಿಯಾ ವಾರ್ಡ್-41, ಲಕ್ಷಮ್ಮದೇವಿ ನಗರ ವಾರ್ಡ್-42, ಲಗ್ಗೆರೆ ವಾರ್ಡ್-69, ರಾಜಗೋಪಾಲನಗರ ವಾರ್ಡ್-70, ಹೆಗ್ಗನಹಳ್ಳಿ ವಾರ್ಡ್- 71, ಕೋಟ್ಟಿಗೆಪಾಳ್ಯ ವಾರ್ಡ್-73, ಹೇರೋಹಳ್ಳಿ ವಾರ್ಡ್-72, ಐಡಿಯಲ್ ಹೋಮ್ 1ನೇ ಮತ್ತು 2ನೇ ಫೇಸ್, ಬಿ.ಹೆಚ್.ಇ.ಎಲ್ ಲೇಔಟ್, ಕೆಂಚನಹಳ್ಳಿ, ಜವರೆಗೌಡ ನಗರ, ಹಲಗೆವಡೇರಹಳ್ಳಿ, ಎಲ್.ಐ.ಸಿ ಲೇಔಟ್, ನಾಗಪ್ಪ ಲೇಔಟ್, ಕಾನ್‌ಕಾರ್ಡ್ ಲೇಔಟ್, ಕೃಷ್ಣಪ್ಪ ಗಾರ್ಡನ್, ಸ್ಟ್ರೀಟ್ ಹೋಮ್ಸ್, ಬಿ.ಹೆಚ್.ಇ.ಎಲ್ ಲೇಔಟ್‌.

ನಂದಾದೀಪ ಲೇಔಟ್, ಶಂಕರಪ್ಪ ಲೇಔಟ್, ಪಟ್ಟಣ್ಣಗೆರೆ, ಮೈಲಸಂದ್ರ ವಿಲೇಜ್, ಭೂಮಿಕಾ ಲೇಔಟ್, ಯುನಿರ್ವರ್ ಸಿಟಿ ಲೇಔಟ್ 4ನೇ & 5ನೇ ಸೈಜ್, ಬಿ.ಇ.ಎಂ.ಎಲ್ 10ನೇ ಸ್ಟೇಜ್, ಮಣಿಪಾಲ 5ನೇ ಸ್ಟೇಜ್, ಭುವನೇಶ್ವರಿನಗರ 1ನೇ & 2ನೇ ಸೈಜ್, ಕೆಂಗೇರಿ ಉಪನಗರ, ಕೆಂಗೇರಿ, ನಾಗದೇವನಹಳ್ಳಿ, ವಿದ್ಯಾಪೀಠ ರೋಡ್ 1 ರಿಂದ 13ನೇ ಕ್ರಾಸ್, ಜಾನಭಾರತಿ 1 ರಿಂದ 4ನೇ ಬ್ಲಾಕ್, ಕೆ.ಸಿ.ಹೆಚ್.ಎಸ್. ಲೇಔಟ್, ಆರ್.ಆರ್ ಲೇಔಟ್, ಜಗಜ್ಯೋತಿ ಲೇಔಟ್, ಮರಿಯಪ್ಪನಪಾಳ್ಯ, ದುಬಾಸಿ ಪಾಳ್ಯ, ಬೃಂದಾವನ್ ಲೇಔಟ್, ಸ್ವಾತಿ ಲೇಔಟ್, ಕೆ.ಪಿ.ಎಸ್.ಸಿ ಲೇಔಟ್, ಕೆಂಪಮ್ಮ ಲೇಔಟ್, ದೊಡ್ಡ ಗೊಲ್ಲರಹಟ್ಟಿ, ಚಿಕ್ಕಗೊಲ್ಲರಹಟ್ಟಿ, ಮೇಗಲು ಬೀದಿ, ಬಿ.ಡಿ.ಎ ಎನ್‌ವ್, ಮೈಸೂರು ರೋಡ್, ಶಿರರ್ಕೆ, ಶಿವಣ್ಣ ಲೇಔಟ್, ಬಿ.ಎಚ್.ಇ.ಎಲ್ ಎಲ್ ಶೇಪ್, ಜಯಣ್ಣ, ಲೇಔಟ್, ಮಾರಪ್ಪ ಲೇಔಟ್, ರಾಜ್‌ಘರ್ ಭವನ, ಎಂ.ಸಿ. ಲೇಔಟ್, ಸುಬ್ಬಣ್ಣ ಗಾರ್ಡನ್, ಮಾರೇನಹಳ್ಳಿ, ಬಿನ್ನಿ ಲೇಔಟ್,ಆರ್.ಪಿ.ಸಿ ಲೇಔಟ್, ನಾಗರಭಾವಿ, ಮಾನಸನಗರ, ಹೊಯ್ಸಳನಗರ, ಸುವರ್ಣ ಲೇಔಟ್, ಮೆಟ್ರೋ ಲೇಔಟ್, ನಾಯಂಡಹಳ್ಳಿ ರಂಗನಾಥ ಕಾಲೋನಿ, ರೋಷನ್ ನಗರ, ಬಿ.ಸಿ.ಸಿ ಲೇಔಟ್, ತಿಗಳರ ತೋಟ, ವಿನಾಯಕ ಲೇಔಟ್, ವಿದ್ಯಾಗಿರಿ ಲೇಔಟ್, ರಂಗನಾಥಪುರ, ಮಾರುತಿನಗರ, ಕಾವೇರಿನಗರ, ಸಂಪಿಗೆನಗರ, ಕಾಮಾಕ್ಷಿಪಾಳ್ಯ, ಪಟ್ಟಿಗಾರಪಾಳ್ಯ ಪ್ರಶಾಂತನಗರ, ತಿಮ್ಮನಹಳ್ಳಿ, ಗೋವಿಂದರಾಜನಗರ.

ಕೆ.ಎಚ್.ಬಿ ಕಾಲೋನಿ, ಎಂ.ಆರ್.ಸಿ.ಆರ್ ಲೇಔಟ್, ಪೇಟೆ ಚನ್ನಪ್ಪ ಇಂಡ್ಲಿಯಲ್, ಸರಸ್ವತಿನಗರ, ಶಿವಾನಂದನಗರ, ಅನುಭವನಗರ, ಕೆನರಾ ಬ್ಯಾಂಕ್ ಕಾಲೋನಿ, ದಾಸರಹಳ್ಳಿ, ಜಿ.ಕೆ.ಡಬ್ಲೂಕಿಕ್ ಲೇಔಟ್, ಬಸವೇಶ್ವರ ಲೇಔಟ್. ನಂಜರಸಪ್ಪ ಲೇಔಟ್, ಮೂಡಲಪಾಳ್ಯ, ಮಧುರನಗರ, ಇನ್‌ಕಮ್ ಟ್ಯಾಕ್ಸ್ ಲೇಔಟ್, ಪಿ.ಎಫ್ ಲೇಔಟ್, ಸಿ.ಎಚ್.ಬಿ.ಸಿ.ಎಸ್. ಲೇಔಟ್, ಕನಕನಗರ, ಭೈರವೇಶ್ವರನಗರ, ಕೊಕೋನಟ್ ಗಾರ್ಡನ್, ಆದರ್ಶನಗರ, ಕಲ್ಯಾಣನಗರ, ಸಂಜೀವಿನಿನಗರ, ಬಿ.ಡಿ.ಎ ಲೇಔಟ್, ಶಕ್ತಿ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ, ಮುನೇಶ್ವರನಗರ, ಶ್ರೀನಿವಾಸ ನಗರ, ಹುಚ್ಚಪ್ಪ ಲೇಔಟ್, ಅಮರಜ್ಯೋತಿನಗರ, ಭಕ್ತಿಲಿಂಗೇಶ್ವರನಗರ, ಮುನಿಕೃಷ್ಣಪ್ಪ ಲೇಔಟ್, ಕಾವೇರಿ ಲೇಔಟ್, ಪಂಚಶೀಲನಗರ, ಜಗಜ್ಯೋತಿನಗರ, ಕೆಂಪಣ್ಣನ ತೋಟ, ಶಂಕರನಗರ, ಕೊಡಿಗೆಹಳ್ಳಿ, ಟಾಟಾನಗರ, ಅಶ್ವಿ ಲೇಔಟ್, ಸಂಜೀವಿನಿನಗರ, ದೇವಿನಗರ, ಬ್ಯಾಟರಾಯನಪುರ, ಯಶೋಧನಗರ, ಅಮೃತನಗರ, ಅಮೃತಹಳ್ಳಿ, ಜಕ್ಕೂರು, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಜಿ.ಕೆ.ವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯಲಹಂಕ ನ್ಯೂಟೌನ್, ವಿದ್ಯಾರಣ್ಯಪುರ, ಸಿಂಗಾಪುರ, ಎಂ.ಎಸ್.ಪಾಳ್ಯ, ರಾಮಚಂದ್ರಪುರ, ಡಿಫೆನ್ಸ್ ಲೇಔಟ್, ಎ.ಎಂ.ಎಸ್ ಲೇಔಟ್, ಭುವನೇಶ್ವರಿನಗರ, ಮಾನ್ಯತಾ ರೆಸಿಡೆನ್ಸಿ, ಮರಿಯಣ್ಣ ಪಾಳ್ಯ, ನಂದನ ರೆಸಿಡೆನ್ಸಿ, ಮಾರುತಿನಗರ, ವಲ್ಲಭನಗರ, ಶಾರದಾನಗರ, ಯಶವಂತಪುರ(ಪಾರ್ಟ್), ಮುತ್ಯಾಲನಗರ, ಜೆ.ಪಿ.ಪಾರ್ಕ್, ಎಸ್.ಬಿ.ಎಂ. ಕಾಲೋನಿ, ಬಿ.ಇ.ಎಲ್ ರಸ್ತೆ (ಪಾರ್ಟ್), ಡಾರ್ರ ಕಾಲೋನಿ (ಪಾರ್ಟ್), ಚಾಮುಂಡಿನಗರ, ಭುವನೇಶ್ವರಿನಗರ, ಈಜಿಪುರ, ಎಚ್.ಎ.ಎಲ್ 2ನೇ ಮತ್ತು 3ನೇ ಹಂತ, ಇಂದಿರನಗರ, ಜೀವನ್ ಭೀಮನಗರ, ನ್ಯೂ ತಿಪ್ಪಸಂದ್ರ, ಗೀತಾಂಜಲಿ ಲೇಔಟ್, 515 ಕಾಲೋನಿ, ಕಗ್ಗದಾಸಪುರ, ನಾಗವಾರ ಪಾಳ್ಯ, ಸದುಗುಂಟೆಪಾಳ್ಯ. ಸದಾನಂದ ನಗರ, ನ್ಯೂ ಬೈಯ್ಯಪ್ಪನಹಳ್ಳಿ, ಜಿ.ಎಮ್. ಪಾಳ್ಯ, ಮಲ್ಲೇಶ್ ಪಾಳ್ಯ, ಮಾರುತಿ ನಗರ, ಇಂದಿರಾನಗರ 1ನೇ ಹಂತ, ಮಿಚಿಲ್ ಪಾಳ್ಯ, ಕೃಷ್ಣನಯ್ಯನ ಪಾಳ್ಯ, ಕೊನೇನ ಅಗ್ರಹಾರ, ಬಿಡಿಎ ಲೇಔಟ್, ಶಿವಲಿಂಗಯ್ಯ ಕಾಲೋನಿ, ಕೆಪಿಡಬ್ಲ್ಯೂ ಕ್ಯಾಟ್ರಸ್, ಕೋಡಿಹಳ್ಳಿ, ವರ್‌ಸೊವ ಲೇಔಟ್, ಬೈರಸಂದ್ರ, ಕೃಷ್ಣಪ್ಪ ಗಾರ್ಡನ್‌.

ಮಾರತ್ತಹಳ್ಳಿ ಯಮಲೂರು, ಕೆಂಪಾಪುರ, ಮುರಗೇಶ ಪಾಳ್ಯ, ಎನ್.ಆರ್, ಕಾಲೋನಿ, ಎನ್.ಎ.ಎಲ್, ಶ್ರೀ ರಾಮ್ ನಗರಿ ಸ್ವಮ್, ಡಿಫೆನ್ಸ್ ಎಂ ಎ ಪಿ ಕ್ಯಾರ್ರ ವಾಯು ವಿಹಾರ್, ಹರಲೂರು, ಅಂಬಲಿಪುರ, ಕಸವನಹಳ್ಳಿ. ಕೈಕೊಂಡನಹಳ್ಳಿ, ದೊಡ್ಡ ಕಣ್ಣಹಳ್ಳಿ, ಜುನ್ನಸಂದ್ರ ವಿಲೇಜ್, ಲೈಫ್ ಸ್ಟೈಲ್ ಲೇಔಟ್, ಸಿಲ್ಟರ್ ಓಕ್ ಲೇಔಟ್, ಲೇಕ್ ಡಿವೂ ರೆಸಿಡೆನ್ಸಿ ಲೇಔಟ್, ಕ್ರಿಸ್ಟಲ್ ಗೇಟ್, ಲೇಔಟ್, ಓರ್ಟ್ಸ್ ಕೋರ್ಟ್ ಲೇಔಟ್, ಈಸ್ಟ್ & ವೆಸ್ಟ್, ರಿಲಯನ್ಸ್ ಲೇಔಟ್, ಶುಭ ಎನ್‌ಕೆಕಿಞವ್ ಲೇಔಟ್, ಕೆ.ಪಿ.ಸಿ ಲೇಔಟ್, ಮುದಲಿಯರ್ ಲೇಔಟ್, ಜಲಶ್ರೀ ಲೇಔಟ್. ಹೆಚ್ ಬಿಆರ್. ಲೇಔಟ್, ಹೆಚ್‌ಆರ್‌ಬಿಆರ್ ಲೇಔಟ್, ಕಲ್ಯಾಣ ನಗರ, ರಾಮಯ್ಯ ಲೇಔಟ್, ಗೋವಿಂದ ಪುರ, ನಾಗವಾರ, ಹೆಣ್ಣೂರು, ಕಮ್ಮನಹಳ್ಳಿ, ಕಾಚರಕನ ಹಳ್ಳಿ. ಆಯಿಲ್ ಮಿಲ್, ಕೆಎಸ್‌ಎಫ್‌ಸಿ ಲೇಔಟ್, ಗುರುಮೂರ್ತಿ ರೆಡ್, ಸೈಟ್ ಪಾಳ್ಯ, ಪಟೇಲ್ ರಾಮಯ್ಯ ಲೇಔಟ್, ಪಟೇಲ್ ನಂಜುಂಡಪ್ಪ ಲೇಔಟ್, ಕುರಿನಾರಯಣಪ್ಪ ಲೇಔಟ್, ಸದಾಶಿವ ಟೆಂಪಲ್ ರೋಡ್, ಕನಕದಾಸ ಲೇಔಟ್, ಸತ್ಯಮೂರ್ತಿ ರೋಡ್, ಓಎಂಬಿಆರ್ ಲೇಔಟ್, ಚಿಕ್ಕಬಾಣಸವಾಡಿ, ಕಸ್ತೂರಿನಗರ, ಬಾಣಸವಾಡಿ, ಬಾಲಾಜಿ ಲೇಔಟ್, ಗ್ರೀನ್ ಪಾರ್ಕ್ ಲೇಔಟ್, ಬಿ ಚನ್ನಸಂದ್ರ, ಜೆ.ಪಿ.ನಗರ 8ನೇ ಫೇಸ್, 1ನೇ ಬ್ಲಾಕ್ & 2ನ್ ಬ್ಲಾಕ್, ಶರತಿ ನಗರ, ಸುರಭಿ ನಗರ ಪಶ್ಚಿಮ, ಬಿ.ಜಿ.ಎಸ್ ಲೆಔಟ್, ಜಂಬೂನಗರ, ಹರೀನಗರ, ಶ್ರೀನಿಧಿ ಲೇಔಟ್, ಕೃಷ್ಣ, ನಗರ, ಎಸ್.ಬಿ.ಎಂ ಕಾಲೋನಿ, ಅನ್ನಪೂರ್ಣೇಶ್ವರಿ ಲೇಔಟ್, ಪೈ ಲೇಔಟ್, ಪುಶ್ನ ಫಾರ್ಮ್, ಓಲ್ಲ ಬ್ಯಾಂಕ್ ಕಾಲೋನಿ, ನ್ಯೂ ಬ್ಯಾಂಕ್ ಕಾಲೋನಿ, ಪಿ.ಎನ್.ಬಿ ನಗರ, ಡಾಕೃಕ್ಸ್ ಕಾಲೋನಿ, ಜೈ ಕುಮಾರ್ ಲೇಔಟ್, ಸೌಧಮಿನಿ ಲೇಔಟ್, ಅಂಜಾನಾದಿ ಲೇಔಟ್, ಕೋಕೊನಟ್ ಗಾರ್ಡನ್, ಬಿ.ಡಿ.ಎ. ಜೆ.ಪಿ. ನಗರ 4ನೇ ಫೇಸ್, 1 ರಿಂದ 7ನೇ ಬ್ಲಾಕ್, ಅಂಜಾನಪುರ 1ರಿಂದ 5ನೇ ಜಿ ಬ್ಲಾಕ್, ಬಿಲೇಕಹಳ್ಳಿ ವಿಲೇಜ್, ಸಾರ್ವಭೌಮ ನಗರ, ಅರಕೆರೆ ವಿಲೇಜ್, ಬಿ.ಟಿ.ಎಸ್ ಲೇಔಟ್, ಡಾಕ್ರ ಲೇಔಟ್, ನಾಟಪ್ಪ ಲೇಔಟ್, ಬಿ.ಡಿ.ಎ ಲೇಔಟ್ 2ನೇ ಬ್ಲಾಕ್, ನ್ಯಾಯನಪ್ಪನಹಳ್ಳಿ ವಿಲೇಜ್, ಬಂಡೆ ಪಾಳ್ಯ, ಸುಗುಮ ಲೇಔಟ್, ವಿನಾಯಕ ನಗರ, ಶ್ರೀ ಎನ್‌ಕೆ ಕಿಕೆವ್, ಆರ್ ಆರ್ ಲೇಔಟ್, ಸರಸ್ವತಿಪುರಂ, ವೈಶ್ಯ ಬ್ಯಾಂಕ್ ಕಾಲೋನಿ, ಶಾಂತಿನಿಕೇತನ ಲೇಔಟ್‌.

ಹುಳಿಮಾವು ವಿಲೇಜ್, ಬಿ.ಡಿ.ಎ ಲೇಔಟ್ 6ನೇ ಹಂತ, 1ನೇ ಬ್ಲಾಕ್, ಕೆಂಪಮ್ಮ ಲೇಔಟ್, ರಾಘವೇಂದ್ರ ಲೇಔಟ್, ಅವನಿಶೃಂಗೇರಿ ನಗರ, ಮುನೇಶ್ವರ ಲೇಔಟ್, ಕೃಷ್ಣ ಲೇಔಟ್, ಮುತ್ತುರಾಯ ಸ್ವಾಮಿ ಲೇಔಟ್, ಜನತಾ ಕಾಲೋನಿ, ಪೋಸ್ಟ್ ಆಫೀಸ್ ರೋಡ್, ಸಮರ್ಥ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ವಿಜಯ ಶ್ರೀ ಲೇಔಟ್, ತಿಮ್ಮಪ್ಪರೆಡ್ಡಿ ಲೇಔಟ್, ವೆಂಕಟೆಶ್ವರ ಲೇಔಟ್, ಜಂಬುಸವಾರಿ ದಿಣ್ಣೆ, ಕೊತನೂರು ದಿಣ್ಣೆ. ಹೊಂಗಸAದ್ರ, ಶಾಂತಿ ನಗರ, ಮುನಿಯಪ್ಪ ಲೇಔಟ್, ಬೇಗೂರು ರೋಡ್, ಎ.ಪಿ.ಆರ್ ಚೌಟರಿ ರೋಡ್, ವಿನಾಯಕ ಲೇಔಟ್, ವಿದ್ಯಾ ಜ್ಯೋತಿ ರೋಡ್, ನ್ಯೂ ಮೈಕೋ ಲೇಔಟ್, ಓಂ ಶಕ್ತಿ ಲೇಔಟ್, ಗುರುಮೂರ್ತಿ ರೋಡ್, ಭಗತ್ ಸಿಂಗ್ ರೋಡ್, ವಾಜಪೇಯಿ ಲೇಔಟ್, ರಾಮಯ್ಯ ಲೇಔಟ್, ನರಸಿಂಹ ರೆಡ್ಡಿ ಲೇಔಟ್, ಬಾಲಾಜಿ ಲೇಔಟ್, ಕಾವೇರಿ ನಗರ, ಶ್ರೀನಿವಾಸ ಚೌಟರಿ ರೋಡ್, ಎಸ್ ಆರ್ ನಾಯ್ತು ಲೇಔಟ್, ಎಂ.ಎಸ್.ಆರ್ ಲೇಔಟ್, ಶ್ರೀನಿವಾಸ ಲೇಔಟ್, ಪ್ರಗತಿ ಲೇಔಟ್, ರಮೇಶ ರೆಡ್ಡಿ ಲೇಔಟ್, ಅಂಬೇಡ್ಕರ್ ಕಾಲೋನಿ, ಮುನೇಶ್ವರ ಲೇಔಟ್, ಕೇರಳ ಲೇಔಟ್, ಸಿಲ್ಕ್ ಬೋರ್ಡ್ ಕಾಲೋನಿ, ಆದರ್ಶ ಲೇಔಟ್, ವಿವೇಕಾನಂದ ನಗರ, ಮಂಗಮ್ಮನ ಪಾಳ್ಯ (ಪಾರ್ಟ್), ಗಾರ್ವೆಭಾವಿ ಪಾಳ್ಯ, ಲಕ್ಷ್ಮಿಲೇಔಟ್, ಮುನಿರೆಡ್ಡಿ ಲೇಔಟ್, ಅಭಯ್ ರೆಡ್ಡಿ ಲೇಔಟ್, ಗೌರಮ್ಮ ಲೇಔಟ್, ಶ್ರೀ ರಾಮ್ ನಗರ, ಚಿಕ್ಕಬಿದ್ದಪ್ಪ ಲೇಔಟ್, ಚಿಕ್ಕಬೇಗೂರು ಗೇಟ್, ಕುಡ್ಲು ಗೇಟ್, ರೋಜ ಸಿಲ್ಕ್ ಸ್ ರೋಡ್, ಸಿಂಗಸAದ್ರ (ಪಾರ್ಟ್). ಮಣಿಪಾಲ್ ಕಂಟ್ರಿ ರೋಡ್, ಎ.ಇ.ಸಿ.ಎಸ್.ಬಿ ಬ್ಲಾಕ್, ವೆಲ್ಲಿಂಗ್‌ಟನ್ ಪ್ಯಾರಡೈಸ್ ಲೇಔಟ್, ಕೃಷ್ಣ ರೆಡ್ಡಿ ಲೇಔಟ್, ಗ್ರೀನ್ ಗಾರ್ಡನ್ ಲೇಔಟ್, ಬೊಮ್ಮನಹಳ್ಳಿ, ವಿರಾಟ್ ನಗರ, ರೂಪೇನ ಅಗ್ರಹಾರ, ಎನ್.ಜಿ.ಆರ್ ಲೇಔಟ್, ಗುಲ್ಬರ್ಗ ಕಾಲೋನಿ, ಎಸ್.ಎಲ್.ವಿ ಲೇಔಟ್, ಚಿಕ್ಕತಾಯಪ್ಪ ರೆಡ್ಡಿ ಲೇಔಟ್, ಅಂಬೇಡ್ಕರ್ ಕಾಲೋನಿ, ಬೋವಿ ಕಾಲೋನಿ, ಭಾನು ನರ್ಸಿಂಗ್ ಹೋಮ್ ರೆಡ್, ಬೇಗೂರು ರೋಡ್, ಮುನೇಶ್ವರ ಲೇಔಟ್, ಕಾವೇರಿ ನಗರ, ಎನ್.ಆರ್. ಲೇಔಟ್, ಡುಯೊ-ಹೈಟ್ಸ್ ಲೇಔಟ್, ರಾಯಲ್ ಮೆರಿಡಿಯನ್ ಲೇಔಟ್, ರಾಯಲ್ ಶೆಲ್ಟರ್ ಲೇಔಟ್, ದೇವರಚಿಕ್ಕನಹಳ್ಳಿ, ಸಾಗರ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ಕೃಷ್ಣ, ಲೇಔಟ್, ಶಾಮಣ್ಯ, ರೆಡ್ಡಿ ಲೇಔಟ್, ನಾಡಮ್ಮ ಲೇಔಟ್, ಮಂಜುನಾಥ ಲೇಔಟ್, ಮತ್ತು ಪೊಡು ವಿಲೇಜ್ ಮುಂತಾದವುಗಳಲ್ಲಿ ನೀರು ಇರುವುದಿಲ್ಲ.

ಸೋಮಸುಂದರಪಾಳ್ಯ,ಮುನೇಶ್ವರ ಲೇಔಟ್ ಕುಡು ರೋಡ್, ಹೊಸಪಾಳ್ಯ, ಎಂ.ಜಿ.ಪಾಳ್ಯ, ಮದೀನ ನಗರ, ಬಂಡೆಪಾಳ್ಯ, ಸಿ.ಕೆ. ನಗರ, ಹೊಸ ರೋಡ್, ಎ.ಇ.ಸಿ. ಎಸ್ ಎ,ಬಿ,ಸಿ,ಡಿ,ಇ ಲೇಔಟ್, ತಿಪ್ಪರೆಡ್ಡಿ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ವೈಕುಂಟಮ್ ಲೇಔಟ್, ಲಕ್ಷ್ಮೀನಾರಾಯಣಪುರ, ಹನುಮಂತ ಲೇಔಟ್, ಫ್ರೆಂಡ್ಸ್ ಲೇಔಟ್ 7ನೇ, 8ನೇ ಮತ್ತು 9ನೇ ಕ್ರಾಸ್, ಚಿನ್ನಪ್ಪನ ಹಳ್ಳಿ, ವಿನಾಯಕ ಲೇಔಟ್, ಬಿ.ನಾರಾಯಣ ರೆಡ್ಡಿ ಲೇಔಟ್, ದೊಡ್ಡನೇಕುಂದಿ ಎಕ್ಸ್ ಟೆನ್ಸನ್ ಸಿಗಂಸAದ್ರ, ಚಿನ್ನಪ್ಪನಹಳ್ಳಿ 1ನೇ ಕ್ರಾಸ್ ಯಿಂದ 6ನೇ ‘ಸಿ’ ಕ್ರಾಸ್, ಮಾರುತಿ ನಗರ, ಇರಪ್ಪ ರೆಡ್ಡಿ ಲೇಔಟ್, ಕೊಂದAಡರಾಮ ರೆಡ್ಡಿ ಲೇಔಟ್, ಹೇಮಂತ ನಗರ, ಆರ್.ಜೆ ಗಾರ್ಡನ್, ಕುಂದಲಹಳ್ಳಿ ಕಾಲೋನಿ, ಕುಂದಲಹಳ್ಳಿ ವಿಲೇಜ್, ಅಶ್ವತ್ ನಗರ, ಹೂಡಿ-ಬಸವಣ್ಣನಗರ ರೋಡ್, ನಾಗಪ್ಪ ಲೇಔಟ್, ತಿಮ್ಮರೆಡ್ಡಿ ಇಂಡಸ್ಟ್ರೀಯಲ್ ಲೇಔಟ್, ತಿಮ್ಮರೆಡ್ಡಿ ಲೇಔಟ್,, ಸತ್ಯ ಸಾಯಿ ಲೇಔಟ್, ಎಸ್.ವಿ ಲೇಔಟ್, ಪುಟ್ಟಣ್ಣ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ಬಸವಣ್ಣ, ನಗರ. ಮಾರುತಿ ಲೇಔಟ್, ಸುಂದರಮ್ ರೆಡ್ಡಿ ಲೇಔಟ್, ಗಣೇಶ್ ರೆಡ್ಡಿ ಲೇಔಟ್, ಸೀತಾ ರಾಮ್ ಪಾಳ್ಯ, ಮಹೇಶ್ವರಿ ನಗರ, ಪಂಚಾಯತಿ ಲೇಔಟ್, ಅಂಬೇಡ್ಕರ್ ನಗರ, ರಾಮಕ್ಕ ಲೇಔಟ್, ಚರ್ಚ್ ರೋಡ್, ಚಿಕ್ಕಣ್ಣ ಲೇಔಟ್, ವಿ.ಎಸ್.ಟಿ ಲೇಔಟ್, ಆರ್.ಎಚ್.ಬಿ ಕಾಲೋನಿ, ರಾಮಾಂಜನೇಯ ಲೇಔಟ್, ಕನಕ ಲೇಔಟ್ ಮುತ್ತೂರಪ್ಪ ಲೇಔಟ್, ಶೆಟ್ಟಿ ಲೇಔಟ್, ಪಾಪರೆಡ್ಡಿ ಲೇಔಟ್, ಮೂರು ದೇವಸ್ಥಾನದ ರೋಡ್, ನಾಗಪ್ಪ ಲೇಔಟ್, ಗರುಡಚಾರ್ ಪಾಳ್ಯ ತೋಟ, ಕನೆಗಲು, ಮಣಿ ಲೇಔಟ್, ಕಾವೇರಿ ನಗರ 1ನೇ ಮೇನ್, ಪಿಳ್ಳ ರೆಡ್ಡಿ ರೋಡ್ ಯಿಂದ ನ್ಯೂ ಮಶನ್ ರೋಡ್ 2ನೇ ಕ್ರಾಸ್, ಸೊಸೈಟಿ ರೋಡ್, ವಿನಾಯಕ ಲೇಔಟ್ 1ನೇ ಕ್ರಾಸ್, ಮರಿಯಮ್ಮ ಟೆಂಪಲ್ 2ನೇ & 3ನೇ ಕ್ರಾಸ್, ಅಯ್ಯಪ್ಪ ಟೆಂಪಲ್ 5 ರೋಡ್. ಮುತ್ತು ಮಾರಿಯಮ್ಮ ಟೆಂಪಲ್, ವಿನಾಯಕ ಲೇಔಟ್, 4ನೇ ಕ್ರಾಸ್, ಮಸೀದಿ ರೋಡ್, ಚೌಡೇಶ್ವರಿ ಟೆಂಪಲ್-2 ರೋಡ್ಸ್, ಓಲ್ಡ್ ಮಶನ್ ರೋಡ್, ಉರ್ದ್ ಸ್ಕೂಲ್-3 ರೋಡ್, ಓಂ ಶಕ್ತಿ ಲೇಔಟ್, ಕೃಷ್ಣ ಟೆಂಪಲ್ ರೋಡ್, ಮುನೇಶ್ವರ ಟೆಂಪಲ್ ರೋಡ್, ಅಕ್ಕಮ್ಮ ರೋಡ್, ಮುನಿಯಪ್ಪ ರೋಡ್, ಎರ್‌ಟೇಲ್ ಆಫೀಸ್ ರೋಡ್, ಯಲ್ಲಪ್ಪ ಆಫೀಸ್ ರೋಡ್, ಪೆಂಡಲ್ ರೋಡ್, ಶನಿ ಮಹಾತ್ಮ ರೋಡ್, ವೆಂಕಟ ಹೌಸ್ ಯಿಂದ ಅಕ್ಕಮ್ಮ ರೋಡ್, ಪಾಮ್ ಆಯಿಲ್, ಓಂ ಶಕ್ತಿ ರೋಡ್ 2 ರೋಡ್, ಪಟ್ಟಣದೂರು ಅಗ್ರಹಾರ, ವೈಟ್‌ಫಿಲ್ಸ್, ಎಲ್.ಎನ್.ಟೆಂಪಲ್ ರೋಡ್, (1ನೇ 2ನೇ,3ನೇ ಕ್ರಾಸ್, 4ನೇ ಕ್ರಾಸ್,5ನೇ, 6ನೇ ಕ್ರಾಸ್, 7ನೇ ಎ ಅಡ್ಡ ರಸ್ತೆ), ಪಾಪರೆಡ್ಡಿ ಲೇಔಟ್, ಸ್ವಮ್ ಏರಿಯ, ವಸಂತ ಲೇಔಟ್, ವಾಗ್‌ದೇವಿ ಸೂಲ್ ರೋಡ್-1 ರಿಂದ 5ನೇ ಕ್ರಾಸ್. ಲಕ್ಷ್ಮೀ ಲೇಔಟ್ 2ನೇ ಕ್ರಾಸ್ ಯಿಂದ 5ನೇ ಕ್ರಾಸ್, ಭುವನೇಶ್ವರಿ ಲೇಔಟ್ (12 ನೇ ಯಿಂದ 14 ನೇ ಕ್ರಾಸ್) ಮುನೇಶ್ವರ ಲೇಔಟ್ ನೀರು ಪೂರೈಕೆ ಸ್ಥಗಿತವಾಗಿರುತ್ತದೆ.

ಸಪ್ತಗಿರಿ ಲೇಔಟ್ ಬಿ. ಮೇನ್ ರೋಡ್ & 1ನೇ ಫೆಸ್, ಸಪ್ತಗಿರಿ ಲೇಔಟ್ 2ನೇ ಫೇಸ್, ರಾಜಶ್ರೀ ಲೇಔಟ್(6,7,ಮತ್ತು 8 ನೇ ಕ್ರಾಸ್ 6ನೇ ಎ ಮತ್ತು 7ನೇ ಎ ಕ್ರಾಸ್) ಭುವನೇಶ್ವರಿ ಲೇಔಟ್(1ನೇ ಯಿಂದ 7ನೇ ಕ್ರಾಸ್), ರಾಜಶ್ರೀ ಲೇಔಟ್ ಮತ್ತು ಲಕ್ಷ್ಮೀ ಲೇಔಟ್ (6ನೇ ಕ್ರಾಸ್ ಯಿಂದ 12ನೇ ಕ್ರಾಸ್) ಸಪ್ತಗಿರಿ ಲೇಔಟ್ ಎ1 ಬ್ಲಾಕ್ ಮತ್ತು ಎ2 ಬ್ಲಾಕ್, ಮುನೇಕೊಳಲ ಸರ್ಕಲ್ ಮೇನ್ ರೋಡ್ ಬಸ್ ಸ್ಟಾಂಡ್ 1ನೇ ಮತ್ತು 2ನೇ ಕ್ರಾಸ್, ಮಂಜುನಾಥ ಲೇಔಟ್(3,4,5,6,7,8,8ಎ, 8ನೇ ಬಿ ಅಡ್ಡ ಕ್ರಾಸ್), ವೆಂಕಟೇಶ್ವರ ಲೇಔಟ್ (1ನೇ ಯಿಂದ 8ನೇ ಕ್ರಾಸ್) ಇಸ್ರೋ ಲೇಔಟ್(1ರಿಂದ 3ನೇ ಕ್ರಾಸ್), ಕೆನರ ಲೇಔಟ್(1ನೇ ಕ್ರಾಸ್, 2ನೇ ಕ್ರಾಸ್ ಮೇನ್ ರೋಡ್), ಎ.ಕೆ ಕಾಲೋನಿ, ಮಂಜುನಾಥ್ ಲೇಔಟ್(1 ರಿಂದ 3ನೇ ಕ್ರಾಸ್,4ನೇ ಕ್ರಾಸ್. 4ನೇ ಮೇನ್, 4ನೇ ಎ, 10ನೇ ಎ ಕ್ರಾಸ್. 11 ನೇ ಕ್ರಾಸ್, 12ನೇ ಕ್ರಾಸ್,13, 14 ಮೇನ್ ರೋಡ್), ಸಾಯಿ ಬಾಬಾ ಲೇಔಟ್ (1ನೇ ಯಿಂದ 3ನೇ ಕ್ರಾಸ್, 1ನೇ ಎ ಕ್ರಾಸ್. 2ನೇ ಎ ಕ್ರಾಸ್, 4 ನೇ ಯಿಂದ 11ನೇ ಕ್ರಾಸ್ 4ನೇ ಎ ಕ್ರಾಸ್, 2ನೇ ಪೆಸ್), ಗ್ರೀನ್ ಗಾರ್ಡನ್ ಲೇಔಟ್ ಮೇನ್ ರೋಡ್, ಗ್ರೀನ್ ಗಾರ್ಡನ್ ಲೇಔಟ್, ರಾಘವೇಂದ್ರ ಲೇಔಟ್, ವಿಕ್ಟರಿಯನ್ ಮೆಡ್ ಹೌಸ್, ಗುಲ್ನೋಹರ್ ಎನ್ ಕೈವ್ ರೋಡ್, ಸಿಲ್ವರ್ ಸ್ಪಿಂಗ್ ಲೇಔಟ್ ಮೇನ್ ರೋಡ್, ಪಿ.ಆರ್ ಲೇಔಟ್-3ನೇ ಎ ಕ್ರಾಸ್, 1,2ನೇ 3ನೇ ಬಿ ಕ್ರಾಸ್, ಅಯ್ಯಪ್ಪ ಲೇಔಟ್,-5ನೇ ಕ್ರಾಸ್,4ನೇ ಕ್ರಾಸ್, 3ನೇ ಕ್ರಾಸ್, 2ನೇ ಕ್ರಾಸ್, 1ನೇ ಕ್ರಾಸ್, ಸಿ.ಕೆ.ಬಿ ಲೇಔಟ್, ಎಂಎಸ್‌ಆರ್ ಲೇಔಟ್-1ನೇ ಕ್ರಾಸ್, ಬಲ್ಕ್ ಕನ್‌ಮ್‌ಷನ್-ಇಂಡಿಕ್ಯುಬ್, ಸಿ.ಇ.ಎಸ್.ಎಸ್.ಎನ್.ಎ, ನ್ಯೂ ಆರಿಜೊನ್, ಪ್ರೆಸ್ಟೀಜ್ ಸನ್‌ಸೈಡ್, ಬಲ್ಕ್ ಕನ್‌ಸಮ್‌ಷನ್-ಐಲೈಪ್ಸ್, ಆರ್.ಎಂ.ಝಡ್, ಆದರ್ಶ್, ಇನ್‌ಟೆಲ್, ಗ್ಲೋಬಾಲ್ ಟೆಕ್‌ಪಾರ್ಕ್, ವೀರಪ್ಪ ರೆಡ್ಡಿ ಲೇಔಟ್, ರೈನ್ ಬೋ ಲೇಔಟ್, ವಿನಾಯಕ ಲೇಔಟ್, ಮಂಜುನಾಥ್ ಲೇಔಟ್, ಪಾಪಯ್ಯ ಗಾರ್ಡನ್. ಸೊಕಮ್ಮ ಲೇಔಟ್, ಪಟ್ಟಿ ಲೇಔಟ್, ಲಿಲ್ಲಿ ಲೇನ್ ಲೇಔಟ್, ಮಾರುತಿ ಲೇಔಟ್, ಶಾಂತಿನಿಕೇತನ ಲೇಔಟ್, ಗಾಯತ್ರಿ ಲೇಔಟ್, ಬೈರಪ್ಪ ಲೇಔಟ್, ಬ್ರೂಕ್ ಬಂಡ್, ವಿನಾಯಕ ಲೇಔಟ್, ಸಾಯಿ ಲೇಔಟ್ ಇನರ್ ಸರ್ಕಲ್ ಮತ್ತು ಔಟರ್ ಸರ್ಕಲ್, ಡಾಟ್ಸ್ ಲೇಔಟ್ ನಲ್ಲಿ ನೀರು ಇರುವುದಿಲ್ಲ.

ಇದನ್ನೂ ಓದಿ | Land Registration : ಇನ್ನು ಮನೆಯಿಂದಲೇ ರಿಜಿಸ್ಟ್ರೇಷನ್‌ ಅವಕಾಶ, ನೋಂದಣಿ ಕಚೇರಿಗೆ ಹೋಗಬೇಕಾಗಿಯೇ ಇಲ್ಲ

ಪ್ರಶಾಂತ್ ಲೇಔಟ್, ಇಸಿಸಿ ರೋಡ್, ಬೃಂದವನ ಲೇಔಟ್ ಮತ್ತು ವಿನಾಯಕ ಲೇಔಟ್, ಮೈತ್ರೀ ಲೇಔಟ್, ಪಟಲಮ್ಮ ಲೇಔಟ್, ಮುನೇಶ್ವರ ನಗರ 1ನೇ ಕ್ರಾಸ್ ಯಿಂದ 5ನೇ ಕ್ರಾಸ್, ಅಯ್ಯಪ್ಪ ನಗರ, 1ನೇ ಬ್ಲಾಕ್ ರಿಂದ 4ನೇ ಬ್ಲಾಕ್ ಮತ್ತು ಕ್ರಾಸ್ ರೋಡ್ ಹೂಡಿ ವಿಲೇಜ್ 1ನೇ ಕ್ರಾಸ್, ಯಿಂದ 5ನೇ ಕ್ರಾಸ್, ತಿಗಳರ ಪಾಳ್ಯ (5ನೇ ಕ್ರಾಸ್ ಯಿಂದ 10ನೇ ಕ್ರಾಸ್), ಅಂಬೇಡ್ಕರ್ ಗುಟ್ಟ, ಅನುಗ್ರಹ ಲೇಔಟ್, ತಿಗಳರಪಾಳ್ಯ ಮತ್ತು ಸುತ್ತಮುತ್ತಲಿನ ರೋಡ್‌ಗಳು, ಶಾಂತಿ ನಗರ, ಹೊಸಪಾಳ್ಯ, ಓಂ ಶಕ್ತಿ ಲೇಔಟ್, ಇ ನಾರಾಯಣಪುರ, ಉದಯ ನಗರ, ಅಂದ್ರ ಕಾಲೋನಿ, ವಿ.ಎಸ್.ಆರ್ ಲೇಔಟ್, ಇಂದಿರಾಗಾAಧಿ ಸ್ಟ್ರೀಟ್, ಎವರ್ ಗ್ರೀನ್ ಸ್ಟ್ರೀಟ್, ಟ್ಯಾಗೂರ ಸ್ಟ್ರೀಟ್, ಸುಭಾಷ್ ಸ್ಟ್ರೀಟ್, ಶಕ್ತಿ ನಗರ, ಜ್ಯೋತಿ ನಗರ, ದರ್ಗಾಮನ್ ಹಾಲ್, ಸಾಕಮ್ಮ ಲೇಔಟ್, ವಿಜಾನ ನಗರ ಸರ್ವೀಸ್ ಸ್ಟೇಷನ್, ಅಕ್ಷಯ ನಗರ, ಎಂ.ಇ.ಜಿ ಲೇಔಟ್, ಗಿಡ್ಡಮ್ಮ ಲೇಔಟ್, ಪೈ ಲೇಔಟ್, ನಾಗಪ್ಪ ರೆಡ್ಡಿ ಲೇಔಟ್, ಅಯ್ಯ ರೆಡ್ಡಿ ಲೇಔಟ್, ನಾಗರಾಜಪ್ಪ ಲೇಔಟ್, ಕೊಡಪ್ಪ ರೆಡ್ಡಿ ಲೇಔಟ್, ರಮೇಸ್ ನಗರ, ವೀರಭದ್ರ ನಗರ, ಶಿವಶಕ್ತಿ ಲೇಔಟ್, ಜಗದೀಶ್ ನಗರ ಸರ್ವೀಸ್ ಸ್ಟೇಷನ್ ಕೆಳಗಡೆ, ನಲ್ಲೂರು ಪುರಂ, ರಮೇಶ ನಗರ, ರೆಡ್ಡಿ ಪಾಳ್ಯ, ವಿಭೂತಿ ಪುರ, ಅಣ್ಣಸಂದ್ರ ಪಾಳ್ಯ, ಎಲ್.ಬಿ.ಎಸ್ ನಗರ, ದೊಡ್ಡಾನಕುಂದಿ, ಮರತ್ ಹಳ್ಳಿ ಸರ್ವೀಸ್ ಸ್ಟೇಷನ್, ನಿಸರ್ಗ ಲೇಔಟ್, ಪ್ರಗತಿ ಲೇಔಟ್, ವಾಸ ಲೇಔಟ್, ಮಂಜುನಾಥ ನಗರ, ಗುರುರಾಜನಗರ, ಬಾಲಾಜಿ ಲೇಔಟ್.ಸಂಜಯ್ ನಗರ, ರಾಮಾಂಜನೇಯ ಲೇಔಟ್, ಶಾನ್ ಬೋಗ ಲೇಔಟ್, ಪಾರ್ಟ್ ಆಫ್ 5ನೇ, 6ನೇ, 8ನೇ ಎನ್.ಜಿ.ವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Karnataka Rain News: ಎಡಕುಮೇರಿಯಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ, ಬೆಂಗಳೂರು- ಮಂಗಳೂರು ರೈಲ್ವೆ ಸಂಚಾರ ಬಂದ್‌

Karnataka Rain News: ಕಿಲೋಮೀಟರ್ ನಂಬರ್ 63ರಲ್ಲಿ ರೈಲ್ವೆ ಹಳಿಯ ಮೇಲೆ‌ ನಿನ್ನೆ ರಾತ್ರಿ ಮಣ್ಣು ಕುಸಿತವಾಗಿತ್ತು. ಇದರಿಂದಾಗಿ ಬೆಂಗಳೂರು- ಹಾಸನ- ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಇಲಾಖೆ ಬಂದ್ ಮಾಡಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲು ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ.

VISTARANEWS.COM


on

shiradi ghat train karnataka rian news
Koo

ಹಾಸನ: ಹಾಸನ ಜಿಲ್ಲೆಯ (Hassan news) ಮಲೆನಾಡು ‌ಭಾಗದಲ್ಲಿ ಮಳೆಯ ಆರ್ಭಟ (Karnataka Rain News) ಮುಂದುವರಿದಿದ್ದು, ಶಿರಾಡಿ ಘಾಟಿಯ (Shiradi Ghat) ರೈಲ್ವೆ ಹಳಿಯ (Railway Track) ಮೇಲೆ ಮಣ್ಣು ಕುಸಿತ (landslide) ಆಗಿದೆ. ಸಕಲೇಶಪುರ (Sakaleshpur) ತಾಲ್ಲೂಕಿನ ಕಡಗರವಳ್ಳಿ-ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದ್ದು, ಈ ಮಾರ್ಗದ ಎಲ್ಲಾ ರೈಲುಗಳ‌ ಸಂಚಾರ ಬಂದ್ (Trains cancelled) ಮಾಡಲಾಗಿದೆ. ಜೊತೆಗೆ ಶಾಂತಿಗ್ರಾಮ ಬಳಿ ಚಲಿಸುತ್ತಿರುವ ರೈಲಿನ ಮೇಲೆಯೇ ಮಣ್ಣು ಕುಸಿತ ಸಂಭವಿಸಿದ್ದು, ಅದೃಷ್ಟವಶಾತ್‌ ಭಾರಿ ಅಪಾಯ ತಪ್ಪಿದೆ.

ಕಿಲೋಮೀಟರ್ ನಂಬರ್ 63ರಲ್ಲಿ ರೈಲ್ವೆ ಹಳಿಯ ಮೇಲೆ‌ ನಿನ್ನೆ ರಾತ್ರಿ ಮಣ್ಣು ಕುಸಿತವಾಗಿತ್ತು. ಇದರಿಂದಾಗಿ ಬೆಂಗಳೂರು- ಹಾಸನ- ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಇಲಾಖೆ ಬಂದ್ ಮಾಡಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲು ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ.

ನಿನ್ನೆ ಸಂಜೆಯಿಂದ ಹಳಿ ದುರಸ್ತಿ ಹಾಗು ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ ಸಂಜೆಯಿಂದಲೇ ಬೆಂಗಳೂರು ಮಂಗಳೂರು ನಡುವಿನ ಎಲ್ಲಾ ಪ್ರಯಾಣಿಕ ಹಾಗು ಗೂಡ್ಸ್ ರೈಲು ಸಂಚಾರ ರದ್ದುಪಡಿಸಲಾಗಿದ್ದು, ರೈಲ್ವೆ ಇಲಾಖೆ ನಿನ್ನೆ ರೈಲಿನಲ್ಲಿ ಸಿಲುಕಿದ್ದವರಿಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಿದೆ. ಅಪಾರ ಪ್ರಮಾಣದ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

ಶಿರಾಡಿಘಾಟ್ ಬಳಿಕ ಶಾಂತಿಗ್ರಾಮ ಬಳಿಯೂ ರೈಲ್ವೆ ಟ್ರ್ಯಾಕ್ ಮೇಲೆ ಗುಡ್ಡ ಕುಸಿದಿದೆ. ಗೂಡ್ಸ್ ರೈಲು ಚಲಿಸುವಾಗಲೇ ಗುಡ್ಡ ಕುಸಿತವಾಗಿದ್ದು, ರೈಲಿನ ಬೋಗಿ ಹಳಿ ತಪ್ಪಿದೆ. ಇಂದು ಮುಂಜಾನೆ 5.45ರ ಸುಮಾರಿಗೆ ಹಳಿ ಮೇಲೆ ಮಣ್ಣು ಕುಸಿದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಮಣ್ಣು ತೆರವುಗೊಳಿಸಿದ ಸಿಬ್ಬಂದಿ ರೈಲು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ಹಾಸನ- ಬೆಂಗಳೂರು, ಬೆಂಗಳೂರು- ಹಾಸನ ರೈಲುಗಳ ಸಂಚಾರದ ಸಮಯ ಬದಲಾವಣೆ ಮಾಡಲಾಗಿದೆ. ಮಣ್ಣು ತೆರವು ಬಳಿಕ ಹಾಸನ ಬೆಂಗಳೂರು ಮಾರ್ಗದ ರೈಲುಗಳ ಸಂಚಾರ ಪುನಾರಂಭವಾಗಲಿದೆ.

ಸಕಲೇಶಪುರ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಭಾರಿ ಮಳೆಗೆ ರಸ್ತೆ ಜಲಾವೃತಗೊಂಡು ಜನ, ವಾಹನಗಳು ಪರದಾಡಿದ್ದಾರೆ. ಸಕಲೇಶಪುರ ತಾಲೂಕಿನ‌ ಹಾನುಬಾಳು ಹೋಬಳಿಯ ಹಾನುಬಾಳು- ವೆಂಕಟಹಳ್ಳಿ- ರಾಗಿಗುಂಡಿ- ಅಗ್ನಿ ರಸ್ತೆ ಸಂಪರ್ಕ ಕಡಿತವಾಗಿದೆ. ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಇಲ್ಲದೆ ಗ್ರಾಮಸ್ಥರು ಪರದಾಡಿದರು. ಇಲ್ಲಿಗೆ ಸೇತುವೆ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಹಿಂದಿನಿಂದಲೂ ಆಗ್ರಹಿಸುತ್ತಿದ್ದಾರೆ.

ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ (ಘಟ್ಟ ಪ್ರದೇಶಗಳು) ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗವು 40-50 ಕಿಮೀ ತಲುಪುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿಯ ವೇಗವು 40-50ಕಿ.ಮೀ ತಲುಪುವ ಸಾಧ್ಯತೆಯಿದೆ. ಹಗುರದಿಂದ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗಾಳಿಯ ವೇಗದೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Uttara Kannada Landslide: ಶಿರೂರು ಗುಡ್ಡಕುಸಿತ; ಅರ್ಜುನ್‌ ಶೋಧಕ್ಕೆ ಸಿಎಂ ಸಿದ್ದರಾಮಯ್ಯಗೆ ಪಿಣರಾಯಿ ಮೊರೆ

Continue Reading

ಬೆಂಗಳೂರು

UGCET 2024 : ಯುಜಿಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ; ಆಪ್ಶನ್ ಎಂಟ್ರಿ ಮಾಡಲು ಕೆಲವೇ ದಿನಗಳು ಬಾಕಿ!

UGCET 2024 ; ಮೊದಲೇ ಸುತ್ತಿನ ಸೀಟು ಹಂಚಿಕೆ ಚಟುವಟಿಕೆ ಶುರುವಾಗಿದ್ದು, ಯುಜಿಸಿಇಟಿ- 2024ರ ಆಪ್ಶನ್ ಎಂಟ್ರಿ ಮಾಡಲು 7 ದಿನಗಳ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಆಪ್ಶನ್ ಎಂಟ್ರಿ ಮಾಡಲು ಇನ್ನೂ ಎರಡು ದಿನಗಳು ಮಾತ್ರ ಬಾಕಿ ಇದೆ.

VISTARANEWS.COM


on

By

UGCET 2024 seat allotment process begins Only a few days left for the option to enter
Koo

ಬೆಂಗಳೂರು: ಯುಜಿಸಿಇಟಿ-24ರ (UGCET 2024) ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಪಶು ವೈದ್ಯಕೀಯ ಇತ್ಯಾದಿ ಕೋರ್ಸುಗಳ ಪ್ರವೇಶಕ್ಕೆ ಆಪ್ಶನ್ (ಆಯ್ಕೆ) ಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಏಳು ದಿನ ಅವಕಾಶ ನೀಡಿತ್ತು. ಅದರಲ್ಲಿ ಐದು ದಿನಗಳು ಈಗಾಗಲೇ ಮುಗಿದಿದ್ದು, ಆಪ್ಶನ್ ಎಂಟ್ರಿ ಮಾಡಲು ಇನ್ನೂ ಎರಡು ದಿನಗಳು ಮಾತ್ರ ಬಾಕಿ ಇದೆ.

ಎಂಜಿನಿಯರಿಂಗ್ ಹಾಗೂ ಇತರೆ ಕೋರ್ಸುಗಳಿಗೆ ಆಪ್ಶನ್ (ಆಯ್ಕೆ) ಗಳನ್ನು ದಾಖಲಿಸಲು ಜುಲೈ 23ರಿಂದ ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಅಭ್ಯರ್ಥಿಗಳು ಎಚ್ಚರಿಕೆಯಿಂದ ತಮ್ಮ ಇಚ್ಛೆಗಳನ್ನು ದಾಖಲಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದರು.

ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಿ ಇಚ್ಚೆ / ಆಯ್ಕೆಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿತ್ತು. ಆಪ್ಶನ್‌ಗಳನ್ನು ದಾಖಲಿಸುವ ಬಗ್ಗೆ, ಸೀಟು ಹಂಚಿಕೆಯ ವಿವಿಧ ಹಂತಗಳ ಕುರಿತು ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಯುಜಿಸಿಇಟಿ-24ರ ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬಹುದಾಗಿದೆ.

ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಲಿಂಕ್ ನೀಡಲಾಗಿದ್ದು, ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಆಯ್ಕೆ/ಇಚ್ಛೆಗಳ ದಾಖಲೆಗೆ ನಿಗದಿಪಡಿಸಿದ ಕೊನೆ ದಿನದ ನಂತರ ಮೂರು ದಿನಗಳ ಬಳಿಕ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು. ಅದರ ನಂತರ ಮೂರು ದಿನ ಆಯ್ಕೆಗಳನ್ನು ಬದಲಿಸಿಕೊಳ್ಳಲು ಅವಕಾಶ‌ ನೀಡಲಾಗುತ್ತದೆ. ಮೂರು ದಿನಗಳ ಬಳಿಕ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ.

ಚಟುವಟಿಕೆಗಳ ವಿವರ ಹೀಗಿದೆ
-ಜು.23ರಿಂದಲೇ Option Entry ಪೋರ್ಟಲ್‌ ತೆರೆಯಲಾಗಿದೆ. ಅಭ್ಯರ್ಥಿಗಳು ಆದ್ಯತಾ ಕ್ರಮದಲ್ಲಿ ಇಚ್ಛೆ/ಆಯ್ಕೆಗಳನ್ನು ದಾಖಲಿಸಬಹುದು. ಆಯ್ಕೆಗಳನ್ನು ದಾಖಲಿಸಲು 7 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಇಂದಿಗೆ ಐದು ದಿನಗಳು ಮುಗಿದಿದ್ದು, ಇನ್ನೆರಡು ದಿನಗಳು ಮಾತ್ರ ಬಾಕಿ ಇವೆ.

-ಇಚ್ಛೆ/ಆಯ್ಕೆಗಳನ್ನು ದಾಖಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದ 3 ದಿನಗಳ ನಂತರ ಅಣುಕು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು.

-ಅಣುಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆಯ ನಂತರ ಇಚ್ಛೆ-ಆಯ್ಕೆಗಳನ್ನು ಸೇರಿಸಲು/ಅಳಿಸಲು/ಬದಲಾಯಿಸಲು/ಮಾರ್ಪಡಿಸಲು 3 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

ಈ ಮೇಲಿನ ಪ್ರಕ್ರಿಯೆ ಮುಕ್ತಾಯವಾದ 3 ದಿನಗಳ ನಂತರ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು.

ವೈದ್ಯಕೀಯ ಕೋರ್ಸುಗಳು:

ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು / ಅಧಿಸೂಚನೆಗಳ ಅನ್ವಯ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ. ಅದರಂತೆ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಆಪ್ಶನ್‌ಗಳನ್ನು ಸೇರಿಸುವ ಬಗ್ಗೆ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಆನ್‌ಲೈನ್‌ ವೆರಿಫಿಕೇಶನ್‌

ಯುಜಿಸಿಇಟಿ-2024ಕ್ಕೆ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿಯಲ್ಲಿ ನಮೂದಿಸಿದ ಮಾಹಿತಿಯನ್ನು ಆಯಾ ಇಲಾಖೆಯ ವೆಬ್‌ಸರ್ವೀಸ್‌ ಮೂಲಕ ಪರಿಶೀಲನೆ ಮಾಡಿ, ಪ್ರಾಧಿಕಾರದ ವೆಬ್‌ಸೈಟ್‌ನ ಲಿಂಕ್‌ನಲ್ಲಿ ಪರಿಶೀಲಿಸಿಕೊಳ್ಳಲು ಜು.29ರಂದು ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು. ಜತೆಗೆ ಅರ್ಜಿಯಲ್ಲಿನ ವಿವರಗಳು ತಪ್ಪಾಗಿದ್ದಲ್ಲಿ ಸರಿಪಡಿಸಿಕೊಳ್ಳಲು ಅಂತಿಮ ಅವಕಾಶ ನೀಡಿ ಆಫ್‌ಲೈನ್‌ ದಾಖಲೆಗಳ ಪರಿಶೀಲನೆಗೆ ಕಳೆದ ಜು.4ರಿಂದ 6ವರೆಗೆ ಅವಕಾಶ ನೀಡಲಾಗಿತ್ತು. ಬಳಿಕ ಜು.18ರಂದು ವೆರಿಫಿಕೇಶನ್‌ ಸ್ಲಿಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಿಂಕ್‌ ನೀಡಲಾಗಿತ್ತು. ಇದನ್ನೂ ಅಭ್ಯರ್ಥಿಗಳು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆ; ಜೂಡೊಪಟು ತಾತ್ಕಾಲಿಕ ಅಮಾನತು

ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಇಂದೇ ಕೊನೆ ದಿನ

ಡಿಸಿಇಟಿ-2024 ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಅಛಿ ಆಯ್ಕೆಗೆ, ಚಲನ್ ಡೌನ್‌ಲೋಡ್, ಶುಲ್ಕ ಪಾವತಿ ಮತ್ತು ಕಾಲೇಜಿನಲ್ಲಿ ಪ್ರವೇಶ ಪಡೆಯಲು ದಿನಾಂಕವನ್ನು ವಿಸ್ತರಿಸಲಾಗಿತ್ತು. ಜತೆಗೆ ದಿನಾಂಕಗಳನ್ನು ಮತ್ತೊಮ್ಮೆ ವಿಸ್ತರಿಸಲಾಗುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿತ್ತು.

ಅದರಂತೆ ಅಛಿ ಗಳನ್ನು ಆಯ್ಕೆ ಮಾಡಲು ನಿನ್ನೆ 26ರ ಮಧ್ಯಾಹ್ನ 1ರ ವರೆಗೆ ಹಾಗೂ ಚಲನ್ ಡೌನ್‌ಲೋಡ್ ಮಾಡಿಕೊಳ್ಳಲು 2 ರವರೆಗೆ, ಶುಲ್ಕ ಪಾವತಿ ಮಾಡಲು ಸಂಜೆ 4 ರ ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಈಗ ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ದಿನ ಅಂದರೆ 27ರ ಮಧ್ಯಾಹ್ನ 1ರ ವರೆಗೆ ಅಛಿ-1 ಆಯ್ಕೆ ಮಾಡಿ, ಶುಲ್ಕ ಪಾವತಿಸಿ ಮತ್ತು ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಂಜೆ 4.30 ರವರೆಗೆ ಅವಕಾಶವಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Illicit Relationship: ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

Illicit Relationship: ಸಿರವಾರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಜ್ ಮಹಮ್ಮದ್ ಎಂಬಾತನ ಮೇಲೆ ಆತನ ಪತ್ನಿಯಿಂದ ಕೇಸು ಬಿದ್ದಿದೆ. ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಮಹಿಳಾ ಪೇದೆ ಆಗಿರುವ ಪ್ಯಾರಿ ಬೇಗಂ ಎಂಬಾಕೆ ಈತನ ಪತ್ನಿ ಹಾಗೂ ದೂರು ಸಲ್ಲಿಸಿದವರು.

VISTARANEWS.COM


on

illicit relationship raichur siravara
ದೂರು ನೀಡಿದ ಪ್ಯಾರಿ ಬೇಗಂ, ಆರೋಪಿಗಳಾದ ರಾಜ್‌ ಮೊಹಮ್ಮದ್‌, ಸರಳಾ
Koo

ರಾಯಚೂರು: ವಿಚ್ಛೇದಿತ ನರ್ಸ್‌ ಒಬ್ಬಾಕೆಯೊಂದಿಗೆ ಲವ್ವಿ ಡವ್ವಿ (Illicit Relationship) ಹೊಂದಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ (Police constable) ಒಬ್ಬಾತನಿಗೆ ಆತನ ಪತ್ನಿ ಕಾನೂನು ಅಸ್ತ್ರದ ಮೂಲಕ ಪಾಠ ಕಲಿಸಲು ಮುಂದಾಗಿದ್ದಾರೆ. ಘಟನೆ ರಾಯಚೂರಿನ ದೇವದುರ್ಗದಲ್ಲಿ ನಡೆದಿದೆ.

ಸಿರವಾರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಜ್ ಮಹಮ್ಮದ್ ಎಂಬಾತನ ಮೇಲೆ ಆತನ ಪತ್ನಿಯಿಂದ ಕೇಸು ಬಿದ್ದಿದೆ. ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಮಹಿಳಾ ಪೇದೆ ಆಗಿರುವ ಪ್ಯಾರಿ ಬೇಗಂ ಎಂಬಾಕೆ ಈತನ ಪತ್ನಿ ಹಾಗೂ ದೂರು ಸಲ್ಲಿಸಿದವರು. ರಾಜ್ ಮಹಮ್ಮದ್ ಮತ್ತು ಪ್ಯಾರಿ‌ ಬೇಗಂ ಪ್ರೀತಿಸಿ ಮದುವೆಯಾದವರು. ಆದರೆ ಇತ್ತೀಚೆಗೆ ರಾಜ್‌ ಮಹಮ್ಮದ್‌ ಇನ್ನೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ.

ಕವಿತಾ ಆಸ್ಪತ್ರೆ ನರ್ಸ್ ಸರಳ ಎಂಬಾಕೆಯ ಜೊತೆ ಸುಮಾರು 4-5 ವರ್ಷಗಳಿಂದ ವಿವಾಹೇತರ ಸಂಬಂಧ ನಡೆಸಿದ್ದ. ಇವರಿಬ್ಬರನ್ನೂ ಮನೆಯೊಂದರಲ್ಲಿ ರೆಡ್ ಹ್ಯಾಂಡ್ ಆಗಿ ಪ್ಯಾರಿ ಬೇಗಂ ಹಿಡಿದಿದ್ದರು. ಬಳಿಕ ಪೊಲೀಸರಿಗೆ ಒಪ್ಪಿಸಿ ಪತಿ ವಿರುದ್ಧವೇ ಎಸ್ಪಿಗೆ ದೂರು ನೀಡಿದ್ದಾರೆ. ಎಸ್‌ಪಿಯನ್ನು ಭೇಟಿ ಮಾಡಿ, ‌ಬಳಿಕ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಜ್ ಮಹಮ್ಮದ್, ರಿಜಿಯಾ ಬೇಗಂ, ಮೈಬೂಬ್ ಮತ್ತು ಸ್ಟಾಫ್ ನರ್ಸ್ ಸರಳ ವಿರುದ್ಧ ರಾಯಚೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗರ್ಭಪಾತ, ವರದಕ್ಷಿಣೆ ಕಿರುಕುಳ (Dowry harassment), ಕೊಲೆ ಯತ್ನ (Murder attempt) ಸೇರಿದಂತೆ ಹಲವು ಆರೋಪಗಳನ್ನು ಗಂಡನ ವಿರುದ್ಧ ಪ್ಯಾರಿ ಬೇಗಂ ನೀಡಿದ್ದಾರೆ.

ವಿದ್ಯಾರ್ಥಿಗಳ ಬಾರ್‌ ನೈಟ್‌ ಆಯೋಜಿಸಿದ್ದ ಬಾರ್‌ ಮಾಲೀಕನ ಮೇಲೆ ಕ್ರಮ

ಮಂಗಳೂರು: ವಿದ್ಯಾರ್ಥಿಗಳು ಕುಡಿದು ಕುಣಿದ ಕುಪ್ಪಳಿಸಲು ಬಾರ್‌ ನೈಟ್‌ (Students Night) ಕಾರ್ಯಕ್ರಮ ಆಯೋಜಿಸಿದ್ದ ಬಾರ್‌ ಮಾಲೀಕರ ಕಾರ್ಯಕ್ರಮವನ್ನು ಪೊಲೀಸರು (Mangalore police) ಬಂದ್‌ ಮಾಡಿಸಿದ್ದಾರೆ. ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ʼಸ್ಟೂಡೆಂಟ್ಸ್ ವೆಡ್‌ನೆಸ್‌ಡೇ ನೈಟ್ʼ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಮುಕ್ತ ಆಹ್ವಾನವನ್ನು ನಗರದ ದೇರೆಬೈಲ್ ಕೊಂಚಾಡಿಯಲ್ಲಿರುವ ಲಿಕ್ಕರ್‌ ಲಾಂಜ್‌ ಎಂಬ ಬಾರ್‌ ನೀಡಿತ್ತು. ಈ ಬಾರ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಕಾರ್ಯಕ್ರಮವನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಅಬಕಾರಿ ಇಲಾಖೆ ಲಿಕ್ಕರ್ ಲಾಂಜ್ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಸಂಜೆ 7 ಗಂಟೆಯಿಂದ ಮಧ್ಯರಾತ್ರಿ ವರೆಗೆ ಮದ್ಯ ಸಹಿತ ಪಾರ್ಟಿ ಕಾರ್ಯಕ್ರಮವನ್ನು ಆಯೋಜಿಸಲು ಸಮಯ ನಿಗದಿಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಹಾರ, ಮದ್ಯ, ಮ್ಯೂಸಿಕ್, ಮನೋರಂಜನಾ ಕಾರ್ಯಕ್ರಮಗಳಿರುವುದಾಗಿ ಪ್ರಚಾರ ಮಾಡಲಾಗಿತ್ತು. ಇಷ್ಟು ಮಾತ್ರವಲ್ಲದೆ ವಿದ್ಯಾರ್ಥಿಗಳು ಸ್ಕೂಲ್ ಐಡಿ (ಗುರುತು ಕಾರ್ಡ್) ತೋರಿಸಿದರೆ ಬಿಲ್‌ನಲ್ಲಿ ಶೇ.15ರಷ್ಟು ಕಡಿತದ ಆಫರ್ ನೀಡಲಾಗಿತ್ತು. ಈ ಇವೆಂಟ್‌ಗೆ ವಿದ್ಯಾರ್ಥಿನಿಯರು ಬಂದರೆ ಅವರಿಗೆ ಫ್ರೀ ಶೂಟರ್ಸ್ ಸ್ಪೆಷಲ್ ಆಫರ್ ನೀಡುವ ಭರವಸೆಯನ್ನು ನೀಡಲಾಗಿತ್ತು.

ಕೊಂಚಾಡಿಯ ಬಾರ್‌ನಲ್ಲಿ ಆಯೋಜಿಸಿದ ಈ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾವೂರು ಪೊಲೀಸರು ಕಾರ್ಯಕ್ರಮವನ್ನೇ ರದ್ದುಮಾಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಬಾರ್‌ನ ಮಾಲೀಕರಿಗೆ ಕಾವೂರು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ಮಾತ್ರವಲ್ಲದೆ ಜಿಲ್ಲಾ ನ್ಯಾಯಾಲಯದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್(ಎಪಿಪಿ)ಗೆ ಪತ್ರ ಬರೆದು ಈ ಘಟನೆಗೆ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬಹುದೆಂದು ಪೊಲೀಸ್‌ ಮೂಲಗಳು ಸಲಹೆ ಕೇಳಿದ್ದಾರೆಂದು ತಿಳಿದು ಬಂದಿದೆ. ವಿದ್ಯಾರ್ಥಿಗಳನ್ನು ಬಾರ್‌ಗೆ ಆಹ್ವಾನಿಸಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಾಕಿದ್ದಕ್ಕಾಗಿ ಅಬಕಾರಿ ಇಲಾಖೆ ಈಗಾಗಲೇ 7 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೆ ಬಾರ್ ವಿರುದ್ಧ ಎಫ್ಐಆರ್ ದಾಖಲಿಸಿದೆ.

ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಜಿಲ್ಲಾ ನ್ಯಾಯಾಲಯದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಪತ್ರ ಬರೆದಿದ್ದು, ಈ ಘಟನೆಗೆ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬಹುದೆಂದು ಮಾಹಿತಿ ಕೇಳಿದ್ದೇವೆ. ಅವರ ಉತ್ತರ ಬಂದ ಕೂಡಲೇ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?

Continue Reading

ಕ್ರೈಂ

Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

Murder in PG: ಮೊನ್ನೆಯೇ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಪೊಲೀಸರು, ಅಲ್ಲಿನ ಭೋಪಾಲ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿ, ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆತಂದಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

VISTARANEWS.COM


on

Murder in PG Case
Koo

ಬೆಂಗಳೂರು: ರಾಜಧಾನಿಯ ಕೋರಮಂಗಲ ಪಿಜಿಯೊಂದರಲ್ಲಿ (Murder in PG) ಕೃತಿ ಕುಮಾರಿ ಎಂಬ ಯುವತಿಯನ್ನು ಹತ್ಯೆ (Krithi Kumari Murder) ಮಾಡಿದ ಪಾತಕಿ ಅಭಿಷೇಕ್‌ನನ್ನು ಬಂಧಿಸಲಾಗಿದೆ. ಬೆಂಗಳೂರು ಪೊಲೀಸರು (Bangalore police) ಮಧ್ಯಪ್ರದೇಶಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಮೊನ್ನೆಯೇ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಪೊಲೀಸರು, ಅಲ್ಲಿನ ಭೋಪಾಲ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿ, ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆತಂದಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸಿಸಿಟಿವಿ ಫೂಟೇಜ್‌ಗಳು, ಪ್ರತ್ಯಕ್ಷದರ್ಶಿಗಳು ಹಾಗೂ ಆರೋಪಿಯ ಪ್ರೇಯಸಿಯ ಹೇಳಿಕೆಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.

ಏನಿದು ಪ್ರಕರಣ?

ರಾಜಧಾನಿಯ ಕೋರಮಂಗಲದ ಪಿಜಿಯಲ್ಲಿ ಕೊಲೆಯಾಗಿ (Murder in PG) ಹೋದ ಕೃತಿ ಕುಮಾರಿ ಮರ್ಡರ್ (Krithi Kumari Murder) ಪ್ರಕರಣದಲ್ಲಿ ಪಾತಕಿಯ ಬರ್ಬರತೆಯ ಬಗ್ಗೆ ಬೆಚ್ಚಿ ಬೀಳಿಸುವ ಇನ್ನಷ್ಟು ವಿವರಗಳು ಹೊರಬಿದ್ದಿವೆ. ಕೊಲೆಯಾಗಿ ಹೋದವಳು ಈತನ ಪ್ರೇಯಸಿಯ (lover) ಗೆಳತಿಯಾಗಿದ್ದು, ಈ ದುಷ್ಟನ ಕೈಯಿಂದ ಗೆಳತಿಯನ್ನು ಬಿಡಿಸುವ ಯತ್ನದಲ್ಲಿ ತಾನೇ ಮರ್ಡರ್‌ (Murder Case) ಆಗಿದ್ದಾಳೆ.

ಆರೋಪಿ ಅಭಿಷೇಕ್‌ ತಾನು ಪ್ರೀತಿಸಿದವಳನ್ನು ಗೃಹ ಬಂಧನದಲ್ಲಿಟ್ಟಿದ್ದ. ಆಕೆಯನ್ನು ಕಾಪಾಡಿದ ಆಕೆಯ ಗೆಳತಿಯೇ ಜೀವ ಕಳೆದುಕೊಂಡಿದ್ದಾಳೆ. ಅಭಿಷೇಕ್‌ ಯುವತಿಯೊಬ್ಬಳೊಂದಿಗೆ ಪ್ರೀತಿಯಲ್ಲಿದ್ದ. ತನ್ನ ಪ್ರೇಯಸಿಯನ್ನು ಬಲವಂತವಾಗಿ ಬಾಡಿಗೆ ರೂಮ್‌ನಲ್ಲಿ ಇರಿಸಿಕೊಂಡಿದ್ದ. ಕೊಲೆಗೂ ಮೂರು ದಿನದ ಹಿಂದೆ ಬಾಡಿಗೆ ರೂಮ್ ಮಾಡಿ, ಆಕೆಯನ್ನು ಕರೆದೊಯ್ದು ಬಲವಂತವಾಗಿ ರೂಮ್‌ನಲ್ಲಿಟ್ಟುಕೊಂಡಿದ್ದ.

ಆದರೆ ಪ್ರೇಯಸಿ ರೂಮ್‌ನಲ್ಲಿ ಇರಲಾಗದೆ ಒದ್ದಾಡಿದ್ದಳು. ರೂಮ್‌ಮೇಟ್ ಪಿಜಿಗೆ ಬರಲಿಲ್ಲ ಏಕೆಂದು ವಿಚಾರಿಸಿದಾಗ ಕೃತಿ ಕುಮಾರಿ, ಆರೋಪಿ ಆಕೆಯನ್ನು ಕೂಡಿ ಹಾಕಿದ್ದರ ಮಾಹಿತಿಯನ್ನು ಪಡೆದುಕೊಂಡಿದ್ದಳು. ನಂತರ ಸಮಯ ನೋಡಿ ಗೆಳತಿಯನ್ನು ರೂಮ್‌ನಿಂದ ಕರೆತರಲು ಪ್ಲ್ಯಾನ್ ಮಾಡಿದ್ದು, ತನ್ನ ಸ್ನೇಹಿತರೊಂದಿಗೆ ತೆರಳಿ ಗೆಳತಿಯನ್ನು ಪಿಜಿಗೆ ಕರೆತಂದಿದ್ದಳು. ಕೊಲೆ‌ ನಡೆದ ಹಿಂದಿನ ದಿನ ಗೃಹಬಂಧನದಲ್ಲಿದ್ದ ಗೆಳತಿಯನ್ನು ಕೃತಿ ಪಾರುಮಾಡಿದ್ದಳು. ಈಕೆಯ ಈ ಮಾನವೀಯ ನಡತೆಯೇ ಆಕೆಯ ಜೀವ ತೆಗೆದಿದೆ.

ಈ ವಿಚಾರ ಗೊತ್ತಾಗಿದ್ದೇ ತಡ ಕೃತಿ ಮೇಲೆ ಆರೋಪಿ ಅಭಿಷೇಕ್‌ ತೀವ್ರವಾಗಿ ಕೋಪಗೊಂಡಿದ್ದ. ತನ್ನ ಪ್ರೇಯಸಿಯನ್ನು ಕರೆದುಕೊಂಡು ಹೋಗಿದ್ದಕ್ಕೆ ಕೋಪಗೊಂಡು ಮಂಗಳವಾರ ರಾತ್ರಿ‌ 11.10ರ ಸುಮಾರಿಗೆ ಏಕಾಏಕಿ ಪಿಜಿಗೆ ಹೋಗಿದ್ದ. ಒಳ ಹೋದವನೇ ಸೀದಾ ಕೃತಿ ಕುಮಾರಿಗೆ ಚಾಕುವಿನಿಂದ ಯದ್ವಾತದ್ವಾ ಇರಿದು ಎಸ್ಕೇಪ್ ಆಗಿದ್ದಾನೆ.

ಘಟನೆ ನಡೆದದ್ದು ಹೀಗೆ

ಜು.23ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ಆರೋಪಿ ಅಭಿಷೇಕ್ ಕೃತಿ ಕುಮಾರಿಯನ್ನು ಎರಡೇ ನಿಮಿಷದಲ್ಲಿ ಕೊಲೆಮಾಡಿ ಪರಾರಿಯಾಗಿದ್ದಾನೆ. ಕತ್ತು, ಎದೆ, ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದಿದ್ದಾನೆ. ಕತ್ತನ್ನು ಕೋಳಿ ಕತ್ತಿನಂತೆ ಕೊಯಿದಿದ್ದಾನೆ. ಮೊದಲು ಪಿಜಿ ರೂಮಿನ ಬಾಗಿಲು ಬಡಿದ ಕೊಲೆಗಾರ, ಆಕೆ ಬಾಗಿಲು ತೆರೆದ ಕೂಡಲೇ ಒಳಹೋಗಿದ್ದಾನೆ. ನಂತರ ಕೆಲವು ಸೆಕೆಂಡ್‌ನಲ್ಲಿ ಆಕೆ ಆತನಿಂದ ಪಾರಾಗಲು ಹೊರಗೋಡಿ ಬಂದಿದ್ದು, ಆಕೆಯನ್ನು ಕಾರಿಡಾರ್‌ನಲ್ಲೇ ತಡೆದ ಪಾತಕಿ ಮನಬಂದಂತೆ ಇರಿದಿದ್ದಾನೆ.

ಪ್ರಾಣ ಉಳಿಸಿಕೊಳ್ಳಲು ಕೃತಿ ಕುಮಾರಿ ಒದ್ದಾಡಿದ್ದಾಳೆ. ರಕ್ತದ ಮಡುವಿನಲ್ಲಿದ್ದ ಕೃತಿ ಕುಮಾರಿ ಆರ್ತನಾದ ಮಾಡಿದರೂ ಪಿಜಿಯಲ್ಲಿದ್ದ ಮೂವರು ಯುವತಿಯರು ಮಾತ್ರ ಹತ್ತಿರ ಬಂದಿಲ್ಲ. ಮಾನವೀಯತೆಯನ್ನೇ ಮರೆತಂತೆ ವರ್ತಿಸಿದ ಇವರು ಕೃತಿ ಕುಮಾರಿಯ ಹತ್ತಿರ ಕೂಡ ಹೋಗಿಲ್ಲ. ಕೈಯಲ್ಲಿದ್ದ ಮೊಬೈಲ್ ಫೋನ್‌ ನೋಡ್ತಾ ಆಚೆ ಹೋಗಿದ್ದಾರೆ. ಈ ಎಲ್ಲಾ ದೃಶ್ಯಗಳು ಪಿಜಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Continue Reading
Advertisement
shiradi ghat train karnataka rian news
ಪ್ರಮುಖ ಸುದ್ದಿ5 mins ago

Karnataka Rain News: ಎಡಕುಮೇರಿಯಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ, ಬೆಂಗಳೂರು- ಮಂಗಳೂರು ರೈಲ್ವೆ ಸಂಚಾರ ಬಂದ್‌

UGCET 2024 seat allotment process begins Only a few days left for the option to enter
ಬೆಂಗಳೂರು10 mins ago

UGCET 2024 : ಯುಜಿಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ; ಆಪ್ಶನ್ ಎಂಟ್ರಿ ಮಾಡಲು ಕೆಲವೇ ದಿನಗಳು ಬಾಕಿ!

Actor Darshan Lata Jaiprakash says that since Darshan is a devotee of God,
ಸಿನಿಮಾ24 mins ago

Actor Darshan: ದರ್ಶನ್ ದೈವ ಭಕ್ತ, ಜೈಲಿಗೆ ಸೇರಿದ್ದಾಗಿನಿಂದ ವಿಜಯಲಕ್ಷ್ಮಿ ಅತ್ತಿಗೆ ಹೋರಾಟ ಜಾಸ್ತಿ ಆಗಿದೆ ಎಂದ ಲತಾ ಜೈಪ್ರಕಾಶ್!

Paris Olympics
ಕ್ರೀಡೆ28 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆ; ಜೂಡೊಪಟು ತಾತ್ಕಾಲಿಕ ಅಮಾನತು

illicit relationship raichur siravara
ಕ್ರೈಂ38 mins ago

Illicit Relationship: ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

Gold Rate Today
ಚಿನ್ನದ ದರ38 mins ago

Gold Rate Today: ಬಜೆಟ್‌ ಬಳಿಕ ಇದೇ ಮೊದಲ ಬಾರಿ ಏರಿಕೆ ಕಂಡ ಚಿನ್ನದ ದರ; ಇಂದು ಇಷ್ಟು ದುಬಾರಿ

Actor Darshan Astrologer Chanda Pandey Said Facing Problems Because Of His vig
ಕ್ರೈಂ58 mins ago

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Encounter in Kupwara
ದೇಶ1 hour ago

Encounter in Kupwara: ಕುಪ್ವಾರಾದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೈನಿಕರಿಗೆ ಗಾಯ; ಓರ್ವ ಉಗ್ರ ಹತ

Champions Trophy 2025
ಕ್ರೀಡೆ1 hour ago

Champions Trophy 2025: ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ; ಟೀಮ್ ಇಂಡಿಯಾಗೆ ಪಾಕ್​ ಆಟಗಾರನ ಮನವಿ

Murder in PG Case
ಕ್ರೈಂ2 hours ago

Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ17 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ18 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ19 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ20 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌