Stress Relieving Foods: ಈ ಆಹಾರಗಳು ನಿಮ್ಮ ಮೇಲಿನ ಒತ್ತಡ ತಗ್ಗಿಸುತ್ತವೆ! - Vistara News

ಆರೋಗ್ಯ

Stress Relieving Foods: ಈ ಆಹಾರಗಳು ನಿಮ್ಮ ಮೇಲಿನ ಒತ್ತಡ ತಗ್ಗಿಸುತ್ತವೆ!

ಒತ್ತಡ ಕಡಿಮೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲೇ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದ್ದೀರಾ? ಹಾಗಾದರೆ ಒತ್ತಡ ಶಮನಕ್ಕೆ ನೆರವಾಗುವಂಥ ಆಹಾರಗಳ (stress relieving foods) ಪಟ್ಟಿಯೇ ಇಲ್ಲಿದೆ. ಇವುಗಳನ್ನು ಸೇವಿಸಿ, ಬದುಕಿನ ಗುಣಮಟ್ಟ ಸುಧಾರಿಸಿಕೊಳ್ಳಿ.

VISTARANEWS.COM


on

Stressed at Work
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಣ್ಣಿಗೆ ಕಾಣುವಂಥ ರೋಗಗಳಿಗೆ ಮದ್ದರೆಯಬಹುದು. ಆದರೆ ಕಾಣದೆಯೆ ಕಾಡುವಂಥ ಸಮಸ್ಯೆಗಳಿಗೆ ಔಷಧ ಮಾಡುವುದು ಕಷ್ಟ. ಮಾನಸಿಕ ಒತ್ತಡ ಮತ್ತು ಚಿಂತೆಯಂಥವು ಕಾಣದೆಯೇ ಆರೋಗ್ಯವನ್ನು ಹದಗೆಡಿಸುತ್ತವೆ. ಇವುಗಳಿಂದಲೇ ಇನ್ನಷ್ಟು ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಹಾಗೆಂದು ಮನಸ್ಸಿನ ರೋಗಗಳಿಗೆಂದು ದೇಹಕ್ಕೆ ಮದ್ದು ಮಾಡಬಹುದೇ? ಹೌದೆನ್ನುತ್ತಾರೆ ಆಹಾರ ಮತ್ತು ಜೀವನಶೈಲಿಯ ತಜ್ಞರು. ಏನು ಮಾಡುವುದರ ಅಥವಾ ಮಾಡದಿರುವುದರ ಮೂಲಕ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು, ದೈಹಿಕವಾಗಿ ಆರೋಗ್ಯದಿಂದ ಇರಬಹುದು? ಮೊದಲಿಗೆ, ನಿದ್ದೆ. ನಿದ್ದೆಗೆಟ್ಟರೆ ಬುದ್ಧಿಗೆಟ್ಟಂತೆ ಎನ್ನುತ್ತದೆ ಹಳೆಯ ಗಾದೆ. ದಿನಕ್ಕೆ ಎಂಟು ತಾಸುಗಳ ನಿಯಮಿತ ನಿದ್ದೆ ಬದುಕಿನ ಗುಣಮಟ್ಟದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಲ್ಲದು. ಶಿಸ್ತುಬದ್ಧ ವ್ಯಾಯಾಮ ನಿತ್ಯದ ಅಗತ್ಯಗಳಲ್ಲಿ ಒಂದು. ಅದರಲ್ಲೂ ಯೋಗ, ಪ್ರಾಣಾಯಾಮದಂಥ ಉಸಿರಾಟದ ವ್ಯಾಯಾಮಗಳು ಒತ್ತಡ ನಿವಾರಣೆ ಮಾಡುವಲ್ಲಿ ಮಾಯಾ ಮದ್ದಿನಂತೆಯೇ ಕೆಲಸ ಮಾಡುತ್ತವೆ. ಸಿಗರೇಟ್‌, ಆಲ್ಕೊಹಾಲ್‌ ದೂರ ಮಾಡಿದರೆ ಇನ್ನಷ್ಟು ಒತ್ತಡಗಳು ತಾನಾಗಿಯೇ ದೂರಾಗುತ್ತವೆ. ಆದರೆ ಇವೆಲ್ಲ ಹೇಳಿದಷ್ಟು ಸುಲಭವಲ್ಲ. ಇದರೊಂದಿಗೆ ನೆರವಾಗುವುದಕ್ಕೆ ಕೆಲವು ಆಹಾರಗಳು (stress relieving foods) ನಮ್ಮೊಂದಿಗಿವೆ.

Avocado slices

ಬೆಣ್ಣೆ ಹಣ್ಣು

ಅವಕಾಡೊದಲ್ಲಿರುವ ಒಮೇಗಾ 3 ಕೊಬ್ಬಿನಾಮ್ಲ ಮತ್ತು ವಿಟಮಿನ್‌ ಸಿ ನಮಗೆ ಬಹಳಷ್ಟು ರೀತಿಯಲ್ಲಿ ಸಹಾಯ ಮಾಡಬಲ್ಲದು. ಜೊತೆಗೆ ಇದರಲ್ಲಿರುವ ವಿಟಮಿನ್‌ ಬಿ ಅಂಶವು ಒತ್ತಡ ಮತ್ತು ಚಿಂತೆಯನ್ನು ದೂರ ಮಾಡುವಂಥ ಗುಣವನ್ನು ಹೊಂದಿದೆ.

Fruits and Berries Foods Consumed By Lord Rama During His 14 Year Exile

ಬೆರ್ರಿಗಳು

ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾದ ಬೆರ್ರಿಗಳು, ಅದರಲ್ಲೂ ಮುಖ್ಯವಾಗಿ ಬ್ಲೂಬೆರಿ ಹಣ್ಣು, ಒತ್ತಡ ನಿವಾರಣೆ ಮಾಡುವಲ್ಲಿ ಅತ್ತ್ಯುತ್ತಮ ಕೆಲಸವನ್ನು ಮಾಡುತ್ತವೆ. ಒತ್ತಡದಿಂದ ದೇಹದ ಕೋಶಗಳ ಮಟ್ಟದಲ್ಲಿ ಆಗುವಂಥ ಹಾನಿಯನ್ನು ಇವು ಕಡಿಮೆ ಮಾಡುತ್ತವೆ. ಯಾವುದೇ ರೀತಿಯ ಉತ್ಕರ್ಷಣ ನಿರೋಧಕಗಳು ದೇಹ ಮತ್ತು ಮನಸ್ಸಿನ ಒತ್ತಡ ಕಡಿಮೆ ಮಾಡಬಲ್ಲವು.

ಕ್ಯಾಲ್ಶಿಯಂ ಅಹಾರಗಳು

ಸಾಮಾನ್ಯವಾಗಿ ಡೇರಿ ಉತ್ಪನ್ನಗಳು ನಮ್ಮ ಮುಖ್ಯವಾದ ಕ್ಯಾಲ್ಶಿಯಂ ಮೂಲಗಳು. ಇದಲ್ಲದೆ ಪಾಲಕ್‌ ಸೊಪ್ಪು, ಬ್ರೊಕೊಲಿಯಂಥವು ನಮ್ಮ ಮೂಡ್‌ ಸುಧಾರಣೆಗೆ ನೆರವಾಗುತ್ತವೆ. ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಆಹಾರ ಸೇವಿಸುವ ಮಕ್ಕಳು, ಕಡಿಮೆ ಕ್ಯಾಲ್ಶಿಯಂ ಆಹಾರ ಸೇವಿಸುವ ಮಕ್ಕಳಿಗಿಂತ ಒತ್ತಡರಹಿತರಾಗಿರುತ್ತಾರೆ ಎನ್ನುತ್ತವೆ ಅಧ್ಯಯನಗಳು.

the egg

ಮೊಟ್ಟೆ

ಮೊಟ್ಟೆಯಲ್ಲಿರುವ ವಿಟಮಿನ್‌ ಡಿ ಮತ್ತು ಟ್ರಿಪ್ಟೊಫ್ಯಾನ್‌ ಅಂಶಗಳು ದೇಹದಲ್ಲಿ ಹ್ಯಾಪಿ ಹಾರ್ಮೋನುಗಳ ಬಿಡುಗಡೆಗೆ ಚೋದನೆಯನ್ನು ನೀಡುವುದಾಗಿ ಹೇಳುತ್ತವೆ ಅಧ್ಯಯನಗಳು. ಯಾವುದೇ ರೀತಿಯಲ್ಲಿ ವಿಟಮಿನ್‌ ಡಿ ದೇಹಕ್ಕೆ ದೊರೆಯುವುದರಿಂದ ಒತ್ತಡ ನಿವಾರಣೆಗೆ ನೆರವಾಗುತ್ತದೆ. ಖಿನ್ನತೆ ನಿವಾರಣೆಗೆ ಬೆಳಕಿನ ಚಿಕಿತ್ಸೆ ವ್ಯಾಪಕವಾಗಿ ಬಳಕೆಯಲ್ಲಿದೆ.

Dry seeds

ಬೀಜಗಳು

ಮೆಗ್ನೀಶಿಯಂ ಮತ್ತು ಸತುವಿನ ಕೊರತೆಯು ಮಾನಸಿಕ ಒತ್ತಡವನ್ನು ಹೆಚ್ಚಿಸಬಲ್ಲದು. ಈ ಕೊರತೆಯನ್ನು ಸುಲಭವಾಗಿ ನೀಗಿಸುವುದು ಬೀಜಗಳು. ಗೋಡಂಬಿಯಲ್ಲಿ ಅಧಿಕ ಪ್ರಮಾಣದಲ್ಲಿ ಜಿಂಕ್‌ ಅಂಶವಿದೆ. ಚಿಯಾ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಶಿಯಂ ಅಂಶವಿದೆ. ಹಾಗಾಗಿ ಹಲವು ರೀತಿಯ ಬೀಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ್ದೆನಿಸುತ್ತದೆ.

ಫೋಲೇಟ್‌

ಹಸಿರು ಸೊಪ್ಪು ಮತ್ತು ತರಕಾರಿಗಳಲ್ಲಿ ಫೋಲೇಟ್‌ ಅಂಶ ಧಾರಾಳವಾಗಿರುತ್ತದೆ. ಮೆದುಳಿನ ಸಂವಾಹಕಗಳು ಸರಿಯಾಗಿ ಕೆಲಸ ಮಾಡುವಲ್ಲಿ ಫೋಲೇಟ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ಮೂಡ್‌ ಸುಧಾರಿಸಿ, ಮೆದುಳಿನ ಕ್ಷಮತೆ ಹೆಚ್ಚಿಸುವಲ್ಲಿ ಫೋಲೇಟ್‌ ಮತ್ತು ಫಾಲಿಕ್‌ ಆಮ್ಲಗಳು ಹೆಚ್ಚಿರುವ ಆಹಾರಗಳು ಅಗತ್ಯ.

ಇದನ್ನೂ ಓದಿ: Health Tips For Kidney: ಕಿಡ್ನಿಯ ಆರೋಗ್ಯಕ್ಕೆ ಯಾವೆಲ್ಲ ಆಹಾರಗಳು ಒಳ್ಳೆಯದು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Amla For Your Hair: ತಲೆಗೂದಲ ಆರೈಕೆಯಲ್ಲಿ ನೆಲ್ಲಿಕಾಯಿಯ ಬಳಕೆ ಹೇಗೆ?

Amla For Your Hair: ತಲೆಗೂದಲ ಬೆಳವಣಿಗೆಗೆ ನೆಲ್ಲಿಕಾಯಿ ಎಣ್ಣೆ ಪರಾಂಪರಾಗತ ಔಷಧಿಯಲ್ಲಿ ಪ್ರಸಿದ್ಧವಾದುದು. ತಲೆಗೆ ಹಾಕುವುದು ಮಾತ್ರವಲ್ಲ, ಇದನ್ನು ಹೊಟ್ಟೆಗೆ ಹಾಕಿದರೂ ಕೂದಲುಗಳಿಗೆ ಲಾಭವಿದೆ. ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ನೆಲ್ಲಿಕಾಯಿಯ ಇನ್ನಷ್ಟು ಉಪಯೋಗಗಳ ಬಗ್ಗೆ, ಹೇರ್‌ಮಾಸ್ಕ್‌ ಮಾಡುವ ಬಗ್ಗೆಯೂ ಇಲ್ಲಿವೆ ವಿವರ.

VISTARANEWS.COM


on

Hair Care Habits
Koo

ಆಯುರ್ವೇದದಲ್ಲಿ ಶತಶತಮಾನಗಳಿಂದ ಬಳಕೆಯಲ್ಲಿರುವ ನೆಲ್ಲಿಕಾಯಿ ಅಥವಾ ಆಮಲಕಿ ತನ್ನ ವಿಶೇಷ ಸತ್ವಗಳಿಂದ ಈಗ ವಿಶ್ವದೆಲ್ಲೆಡೆ ಹೆಸರಾಗಿದೆ. ವಿಟಮಿನ್‌-ಸಿಯಂಥ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಇದು, ದೃಷ್ಟಿಗೆ, ಕೂದಲಿಗೆ, ಚರ್ಮಕ್ಕೆ ಉಪಯುಕ್ತ ಸತ್ವಗಳನ್ನು ಹೊಂದಿದೆ. ಮಧುಮೇಹ ನಿಯಂತ್ರಣಕ್ಕೆ ಮತ್ತು ತೂಕ ಇಳಿಕೆಗೆ ಅನುಕೂಲಕರವಾಗಿದೆ. ಜೊತೆಗೆ, ಹಲವು ರೀತಿಯ ಜೀವಸತ್ವಗಳು, ಖನಿಜಗಳು, ಫೈಟೊಕೆಮಿಕಲ್‌ಗಳು ಇಡೀ ದೇಹಕ್ಕೆ ಬೇಕಾದಂಥ ಸತ್ವಗಳನ್ನು ಒದಗಿಸಬಲ್ಲವು. ಹೀಗೆ ಬಹೂಪಯೋಗಿ ಎನಿಸಿರುವ ನೆಲ್ಲಿಕಾಯಿಯಿಂದ ಆಗುವಂಥ ಅನುಕೂಲಗಳನ್ನು ಒಮ್ಮೆ ಗಮನಿಸೋಣ. ಜೊತೆಗೆ ಹಲವು ಬಗೆಯ ಹೇರ್‌ಮಾಸ್ಕ್‌ಗಳನ್ನು ಮಾಡುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ. ನಳನಳಿಸುವ (Amla For Your Hair) ಕೂದಲು ನಿಮ್ಮದಾಗಲಿ.

Skin Health Cucumber Benefits

ಚರ್ಮಕ್ಕೆ ಕಾಂತಿ

ಇದರಲ್ಲಿರುವ ವಿಟಮಿನ್‌ ಸಿ ಅಂಶವು ಕೊಲಾಜಿನ್‌ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ಚರ್ಮದಲ್ಲಿ ಸುಕ್ಕು ಬರುವುದು ಕಡಿಮೆಯಾಗಿ, ತಾರುಣ್ಯಭರಿತ ತ್ವಚೆಯನ್ನು ಹೊಂದಬಹುದು. ಜೊತೆಗೆ, ಚರ್ಮದ ಹೊಳಪು ಹೆಚ್ಚಿಸಿ, ತ್ವಚೆಯನ್ನು ಬಿಗಿ ಮಾಡಿ, ಕಪ್ಪುಕಲೆಗಳನ್ನು ತೆಗೆಯುತ್ತದೆ. ಹಾಗಾಗಿ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಈ ಮೂಲಕ ನೆರವಾಗುತ್ತದೆ.

Image Of Egg Benefits For Hair

ಕೂದಲು ಸೊಂಪು

ತಲೆಗೂದಲ ಬೆಳವಣಿಗೆಗೆ ನೆಲ್ಲಿಕಾಯಿ ಎಣ್ಣೆ ಪರಾಂಪರಾಗತ ಔಷಧಿಯಲ್ಲಿ ಪ್ರಸಿದ್ಧವಾದುದು. ತಲೆಗೆ ಹಾಕುವುದು ಮಾತ್ರವಲ್ಲ, ಇದನ್ನು ಹೊಟ್ಟೆಗೆ ಹಾಕಿದರೂ ಕೂದಲುಗಳಿಗೆ ಲಾಭವಿದೆ. ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕೂದಲೆಳೆಗಳ ಬುಡವನ್ನು ಸದೃಢ ಮಾಡಿ, ಕೂದಲು ತುಂಡಾಗದಂತೆ ಅಥವಾ ಉದುರದಂತೆ ತಡೆಯುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಗೂ ಪೋಷಣೆ ನೀಡುತ್ತದೆ.

ಪ್ರತಿರೋಧಕ ಶಕ್ತಿ ಹೆಚ್ಚಳ

ವಿಟಮಿನ್‌ ಸಿ ಜೀವಸತ್ವ ನೆಲ್ಲಿಕಾಯಿಯಲ್ಲಿ ಅತ್ಯಧಿಕವಾಗಿದೆ. ದೇಹದ ಮೇಲೆ ದಾಳಿ ಮಾಡುವ ರೋಗಾಣುಗಳು ಮತ್ತು ಸೋಂಕುಗಳನ್ನು ತಡೆಯುವುದಕ್ಕೆ ವಿಟಮಿನ್‌ ಸಿ ದೊರೆಯಬೇಕಾದ್ದು ಅಗತ್ಯ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಜ್ವರದಂಥ ತೊಂದರೆಗಳನ್ನು ದೂರ ಮಾಡಬಹುದು.

Antioxidants in it keep immunity strong Benefits Of Mandakki

ಉತ್ಕರ್ಷಣ ನಿರೋಧಕಗಳು

ಹಲವು ರೀತಿಯ ಫ್ಲೆವನಾಯ್ಡ್‌ಗಳು, ಪಾಲಿಫೆನಾಲ್‌ಗಳು ನೆಲ್ಲಿಕಾಯಿಯಲ್ಲಿ ವಿಫುಲವಾಗಿವೆ. ಇವು ದೇಹದಲ್ಲಿ ಉರಿಯೂತ ಶಮನ ಮಾಡುವುದಕ್ಕೆ ಸಹಕಾರಿ. ಜೊತೆಗೆ, ಬೀಡಾಡಿಗಳಂತೆ ಅಲೆದುಕೊಂಡಿರುವ ಮುಕ್ತ ಕಣಗಳನ್ನು ನಿರ್ಬಂಧಿಸಲು ಇವು ಅಗತ್ಯ. ಇದರಿಂದ ಮಧುಮೇಹ, ಹೃದಯ ಸಮಸ್ಯೆಗಳು, ಕ್ಯಾನ್ಸರ್‌ನಂಥ ರೋಗಗಳ ಭೀತಿ ದೂರವಾಗುತ್ತದೆ.

Improves digestion Peach Benefits

ಜೀರ್ಣಾಂಗಗಳು ಚುರುಕು

ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸಲು ನೆಲ್ಲಿಕಾಯಿ ಪ್ರಚೋದನೆ ನೀಡುತ್ತದೆ. ಇದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ. ಆಹಾರ ಸುಲಲಿತವಾಗಿ ಪಚನವಾಗುತ್ತವೆ ಎಂಬುದಷ್ಟೇ ಅಲ್ಲ, ಸತ್ವಗಳನ್ನೂ ಚೆನ್ನಾಗಿ ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗುತ್ತದೆ. ಲಘುವಾದ ವಿರೇಚನದ ಗುಣವನ್ನೂ ಆಮಲಕಿ ಹೊಂದಿದೆ. ಹಾಗಾಗಿ ಮಲಬದ್ಧತೆಯನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.

May support eye health Peach Benefits

ದೃಷ್ಟಿ ಉತ್ತಮ

ನೆಲ್ಲಿಕಾಯಲ್ಲಿರುವ ವಿಟಮಿನ್‌ ಎ ಅಂಶವು ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದಂಥ ಪೋಷಕ ಸತ್ವ. ಜೊತೆಗೆ, ಕೆರೊಟಿನಾಯ್ಡ್‌ಗಳಂಥ ಉತ್ಕರ್ಷಣ ನಿರೋಧಕಗಳು ದೃಷ್ಟಿ ಮಂದವಾಗದಂತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಯಸ್ಸಾದಂತೆ ಕಾಡುವ ಕ್ಯಾಟರಾಕ್ಟ್‌ ನಂಥ ಸಮಸ್ಯೆಗಳು ಬಾರದಂತೆ ಮುಂದೂಡುತ್ತವೆ.

ನೆಲ್ಲಿಕಾಯಿ ಎಣ್ಣೆ:

ಅಗಲವಾದ ಬಾಯಿಯ ಪಾತ್ರೆಯಲ್ಲಿ ಒಂದು ಕಪ್‌ ನೆಲ್ಲಿಕಾಯಿ ಪುಡಿಯನ್ನು ಎರಡು ಕಪ್‌ ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರ ಮಾಡಿ. ಇದನ್ನು ಮಂದವಾದ ಉರಿಯಲ್ಲಿ ಕುದಿಯುವುದಕ್ಕೆ ಬಿಡಿ. ಸುಮಾರು ೧೦-೧೫ ನಿಮಿಷಗಳ ನಂತರ ತಿಳಿಯಾದ ಹಸಿರು ಬಣ್ಣದ ಎಣ್ಣೆ ಸಿದ್ಧವಾಗುತ್ತದೆ. ಇದನ್ನು ಸೋಸಿ, ಗಾಜಿನ ಬಾಟಲಿಗೆ ತುಂಬಿಟ್ಟುಕೊಳ್ಳಿ. ಈ ನೆಲ್ಲಿಕಾಯಿ ಎಣ್ಣೆಯನ್ನು ನಿಯಮಿತವಾಗಿ ತಲೆಕೂದಲಿಗೆ ಉಪಯೋಗಿಸುವುದರಿಂದ ಆರೋಗ್ಯಕರ ಕೇಶರಾಶಿಯನ್ನು ಹೊಂದಲು ಸಾಧ್ಯ.

ಇದನ್ನೂ ಓದಿ: Home Remedies for Skin: ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಹೇರ್‌ ಮಾಸ್ಕ್‌

ನಾಲ್ಕು ಚಮಚ ನೆಲ್ಲಿಕಾಯಿ ಪುಡಿಯನ್ನು ಅಷ್ಟೇ ಪ್ರಮಾಣದ ಮೊಸರಿನೊಂದಿಗೆ ಸೇರಿಸಿ ಪೇಸ್ಟ್‌ ಮಾಡಿ. ಇದನ್ನು ತಲೆಗೂದಲು ಬುಡದಿಂದ ತುದಿಯವರೆಗೆ ಲೇಪಿಸಿ. ಅರ್ಧ ತಾಸಿನ ನಂತರ ಉಗುರು ಬಿಸಿ ನೀರಿನಿಂದ ತಲೆಸ್ನಾನ ಮಾಡಿ. ಹಾಗೆಯೇ, ಸಮ ಪ್ರಮಾಣದಲ್ಲಿ ನೆಲ್ಲಿಕಾಯಿ ಪುಡಿ, ಮದರಂಗಿ ಪುಡಿ ಮತ್ತು ಮೊಸರನ್ನು ಮಿಶ್ರ ಮಾಡಿ ಪೇಸ್ಟ್‌ ಮಾಡಿ. ಇದನ್ನು ತಲೆಯ ರೋಮರೋಮಗಳಿಗೆ ಹಚ್ಚಿ, ಅರ್ಧ ತಾಸಿನ ನಂತರ ಉಗುರು ಬಿಸಿಯಾದ ನೀರಿನಿಂದ ತಲೆಸ್ನಾನ ಮಾಡಿ. ಇನ್ನೊಂದು ಉತ್ತಮ ಹೇರ್‌ ಮಾಸ್ಕ್‌ ಎಂದರೆ- ೪ ಚಮಚ ನೆಲ್ಲಿಕಾಯಿ ಪುಡಿಗೆ ಕಾಲು ಕಪ್‌ ತೆಂಗಿನಕಾಯಿ ಹಾಲು ಸೇರಿಸಿ, ಹದವಾಗಿ ಪೇಸ್ಟ್‌ ತಯಾರಿಸಿ. ಇದನ್ನು ತಲೆಗೆಲ್ಲ ಆಮೂಲಾಗ್ರವಾಗಿ ಲೇಪಿಸಿ ಒಂದು ತಾಸು ಹಾಗೆಯೇ ಬಿಡಿ. ನಂತರ ಹದ ಉಷ್ಣತೆಯ ನೀರಿನಿಂದ ತೊಳೆಯಿರಿ.

Continue Reading

ಆರೋಗ್ಯ

Home Remedies for Skin: ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

Home Remedies for Skin: ದೇಹಕ್ಕೆ ದೊರೆಯಬೇಕಾದ ಸತ್ವಗಳು ದೊರೆತಾಗ ಮಾತ್ರವೇ ಆರೋಗ್ಯಯುತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಅದರಲ್ಲೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಂಥ ಆಹಾರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ಕೆಲವು ಫೇಸ್‌ಪ್ಯಾಕ್‌ ಅಥವಾ ಫೇಸ್‌ ಮಾಸ್ಕ್‌ಗಳು ಸಹ ಒಳ್ಳೆಯ ಫಲಿತಾಂಶ ನೀಡಬಲ್ಲವು. ಅಂಥ ಕೆಲವನ್ನು ಇಲ್ಲಿ ವಿವರಿಸಲಾಗಿದೆ.

VISTARANEWS.COM


on

Monsoon Skincare
Koo

ಪ್ರಾಯವನ್ನು ಮುಚ್ಚಿಡುವುದಕ್ಕೆ ಸಾಧ್ಯವೇ ಎಂಬ ಬಗ್ಗೆ ಮಾನವನ ಶೋಧ ಕೊನೆಯರಿಯದ್ದು. ನಮ್ಮ ಆಹಾರ, ಜೀವನಶೈಲಿ, ವಂಶವಾಹಿಗಳೆಲ್ಲ ಸೇರಿ ನಮ್ಮ ಚರ್ಮದ ನಯ, ಹೊಳಪು, ಸುಕ್ಕು ಮುಂತಾದ ಬಹಳಷ್ಟನ್ನು ನಿರ್ಧರಿಸುತ್ತವೆ, ಎಂಬಲ್ಲಿಗೆ ನಮಗೆ ವಯಸ್ಸಾದಂತೆ ಕಾಣುವುದು ಅಥವಾ ಕಾಣದಿರುವುದನ್ನೂ ನಿರ್ಧರಿಸುತ್ತವೆ ಎಂದಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ದೇಹಕ್ಕೆ ದೊರೆಯಬೇಕಾದ ಸತ್ವಗಳು ದೊರೆತಾಗ ಮಾತ್ರವೇ ಆರೋಗ್ಯಯುತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಅದರಲ್ಲೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಂಥ ಆಹಾರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ಕೆಲವು ಫೇಸ್‌ಪ್ಯಾಕ್‌ ಅಥವಾ ಫೇಸ್‌ ಮಾಸ್ಕ್‌ಗಳು ಸಹ ಒಳ್ಳೆಯ ಫಲಿತಾಂಶ ನೀಡಬಲ್ಲವು. ಅಂಥ ಕೆಲವನ್ನು (Home Remedies for Skin) ಇಲ್ಲಿ ವಿವರಿಸಲಾಗಿದೆ.

beautiful asian young woman eating healthy food Sleep Tips

ಆಹಾರ

ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಆಹಾರಗಳ ಸೇವನೆ ಅತಿಮುಖ್ಯ. ಇವುಗಳು ದೇಹದಲ್ಲಿ ಕೊಲಾಜಿನ್‌ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ಚರ್ಮ ಸುಕ್ಕಾಗುವುದನ್ನು ತಡೆಯುವುದು ಮಾತ್ರವಲ್ಲ, ಕೀಲುಗಳು ಸವೆಯದಂತೆಯೂ ಕಾಪಾಡಿಕೊಳ್ಳಬಹುದು. ಒಮೇಗಾ ೩ ಕೊಬ್ಬಿನಾಮ್ಲ ಹೆಚ್ಚಿರುವ ಆಹಾರಗಳು, ವಿಟಮಿನ್‌ ಸಿ ಅಧಿಕವಿರುವ ಹಣ್ಣು ತರಕಾರಿಗಳು, ವಿಟಮಿನ್‌ ಇ ಹೇರಳವಾಗಿರುವ ಕಾಯಿ-ಬೀಜಗಳು- ಇವೆಲ್ಲವೂ ದಿನವೂ ನಮ್ಮ ಆಹಾರದ ಭಾಗವಾಗಿರಬೇಕು.

Aloe Vera Herbs For Hair Growth Aloe vera contains enzymes that can promote healthy hair growth by removing dead skin cells from the scalp and promoting hair follicle health.

ಲೋಳೆಸರ

ಅಲೋವೇರಾ ಎಂದೇ ಕರೆಸಿಕೊಳ್ಳುವ ಇದನ್ನು ಯಾವುದೇ ಫೇಸ್‌ ಮಾಸ್ಕ್‌ಗೆ ಬಳಸುವ ಬದಲು, ಇದನ್ನೇ ಪ್ರತ್ಯೇಕವಾಗಿ ಮುಖಕ್ಕೆ ಲೇಪಿಸಬಹುದು. ಇದರಲ್ಲಿರುವ ಮ್ಯಾಲಿಕ್‌ ಆಮ್ಲವು ಚರ್ಮದ ಮೇಲೆ ಅತ್ಯಂತ ಪೂರಕ ಪರಿಣಾಮವನ್ನು ಬೀರುತ್ತದೆ. ಚರ್ಮವನ್ನು ಬಿಗಿಗೊಳಿಸಿ, ಸುಕ್ಕುಗಳನ್ನು ನಿವಾರಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಇದನ್ನು ಲೇಪಿಸಿ ಸುಮಾರು ೨೦ ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಮೊಟ್ಟೆ, ಜೇನುತುಪ್ಪದ ಮಾಸ್ಕ್‌

ಮೊಟ್ಟೆಯ ಬಿಳಿಯ ಭಾಗ ಇದಕ್ಕೆ ಸೂಕ್ತವಾದದ್ದು. ಇದರಲ್ಲಿರುವ ಅಲ್ಬುಮಿನ್‌ ಅಂಶವು ಚರ್ಮದಲ್ಲಿ ಕೊಲಾಜಿನ್‌ ಹೆಚ್ಚಳಕ್ಕೆ ನೆರವಾಗುತ್ತದೆ. ಜೊತೆಗೆ ಜೇನುತುಪ್ಪವು ಚರ್ಮದ ನೈಸರ್ಗಿಕ ತೇವಾಂಶ ನಾಶವಾಗದಂತೆ ನೋಡಿಕೊಳ್ಳುತ್ತದೆ. ಮೊಟ್ಟೆಯ ಬಿಳಿ ಭಾಗ ಮತ್ತು ಜೇನುತುಪ್ಪದ ಮಿಶ್ರಣವನ್ನು ಮುಖಕ್ಕೆಲ್ಲ ಲೇಪಿಸಿ ಕನಿಷ್ಟ ೨೦ ನಿಮಿಷಗಳಾದರೂ ಬಿಡಿ. ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆದರಾಯ್ತು.

Extra virgin olive oil Foods For Healthy Joints And Muscles

ಆಲಿವ್‌ ಎಣ್ಣೆ

ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಆಲಿವ್‌ ಎಣ್ಣೆಯಲ್ಲಿ ವಿಟಮಿನ್‌ ಎ ಮತ್ತು ಇ ಅಂಶಗಳು ಹೇರಳವಾಗಿವೆ. ಇವು ಚರ್ಮದ ಆರೋಗ್ಯ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ರಾತ್ರಿ ಮಲಗುವ ಮುನ್ನ, ಆಲಿವ್‌ ಎಣ್ಣೆಯ ಕೆಲವು ಹನಿಗಳನ್ನು ಅಂಗೈಗೆ ಹಾಕಿಕೊಂಡು ಅದನ್ನು ಮುಖಕ್ಕೆಲ್ಲ ಲೇಪಿಸಿ. ಲಘುವಾಗಿ ವೃತ್ತಾಕಾರವಾಗಿ ಮುಖವನ್ನೆಲ್ಲ ಮಸಾಜ್‌ ಮಾಡುತ್ತಾ ಬನ್ನಿ. ಇದನ್ನು ರಾತ್ರಿಡೀ ಹಾಗೆಯೇ ಇರಿಸಿಕೊಂಡು ಮಲಗುವುದು ಸೂಕ್ತ. ಇದರಿಂದ ಚರ್ಮದ ಆರೈಕೆಗೆ ಅನುಕೂಲವಾಗುತ್ತದೆ.

Image Of Cucumber Benefits

ಸೌತೇಕಾಯಿ

ಈ ತರಕಾರಿಯಲ್ಲಿರುವ ನೀರಿನಂಶ ಮತ್ತು ಸಿಲಿಕಾಗಳು ಚರ್ಮದ ಬಿಗಿಯನ್ನು ಹೆಚ್ಚಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತವೆ. ಜೊತೆಗೆ ಚರ್ಮದ ಕಾಂತಿಯನ್ನು ಸಹ ಹೆಚ್ಚಿಸುತ್ತವೆ. ತಾಜಾ ಸೌತೇಕಾಯಿ ತುರಿಯನ್ನು ಮುಖದ ಮೇಲೆಲ್ಲ ಲೇಪಿಸಿ, ಅರ್ಧ ತಾಸು ಬಿಡಿ. ನಂತರ ತಂಪಾದ ನೀರಿನಲ್ಲಿ ಮುಖ ತೊಳೆಯುವುದರಿಂದ, ಇಡೀ ಮುಖದ ಚರ್ಮವೆಲ್ಲ ತಾಜಾ ಆಗುತ್ತದೆ.

ಇದನ್ನೂ ಓದಿ: Breastfeeding diet: ಹಾಲುಣಿಸುವ ಅಮ್ಮಂದಿರ ಆಹಾರ ಹೇಗಿರಬೇಕು?

ಅವಕಾಡೊ

ಬೆಣ್ಣೆ ಹಣ್ಣು ಚರ್ಮದ ಆರೈಕೆಯಲ್ಲಿ ಮಾತ್ರವೇ ಅಲ್ಲ, ಇಡೀ ಶರೀರಕ್ಕೆ ಬೇಕಾದ ಆರೈಕೆಯನ್ನೂ ಒದಗಿಸುವಷ್ಟು ಪೌಷ್ಟಿಕಾಂಶಗಳನ್ನು ಹೊಂದಿದೆ. ಚರ್ಮಕ್ಕೆ ಬೇಕಾದ ಕೊಲಾಜಿನ್‌ ಉತ್ಪಾದನೆಗೆ ಅಗತ್ಯವಾದ ಸತ್ವಗಳನ್ನು ಇದು ನೀಡುತ್ತದೆ. ಆರೋಗ್ಯಕರವಾದ ಕೊಬ್ಬಿನಂಶ, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಇದು ಚರ್ಮಕ್ಕೆ ಒದಗಿಸುತ್ತದೆ. ಚೆನ್ನಾಗಿ ಹಣ್ಣಾದ ಅವಕಾಡೊವನ್ನು ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿ. ಅರ್ಧ ತಾಸಿನ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.

Continue Reading

ಆರೋಗ್ಯ

Hair Combing: ಕೂದಲು ಬಾಚುವ ಅಭ್ಯಾಸವಿಲ್ಲವೇ? ಹಾಗಾದರೆ ಇದನ್ನೊಮ್ಮೆ ಓದಿ!

Hair Combing: ಈಗಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟರೆ, ಉಳಿದವರಲ್ಲಿ ಎಷ್ಟು ಮಂದಿ ತಲೆ ಬಾಚುತ್ತಾರೆ ಎಂಬುದು ಚರ್ಚಾಸ್ಪದ ವಿಷಯ. ಕಾರಣ, ಒಂದೋ ಬಾಚುವಷ್ಟು ಕೂದಲು ಉಳಿದಿರುವುದಿಲ್ಲ ಅಥವಾ ಬಾಚದೆ ಕೆದಿರಿಕೊಂಡಿರುವುದು ʻಕೂಲ್‌ʼ ಎನಿಸುತ್ತದೆ ಇಲ್ಲವೇ ತಲೆ ಬಾಚುವುದಕ್ಕೆಲ್ಲ ವ್ಯವಧಾನವೇ ಇರುವುದಿಲ್ಲ. ಆದರೆ ತಲೆಯನ್ನು ಚೆನ್ನಾಗಿ ಬಾಚುವುದರಿಂದ ಆರೋಗ್ಯಕ್ಕೆ ಲಾಭಗಳಿವೆ ಎನ್ನುತ್ತವೆ ಅಧ್ಯಯನಗಳು. ಏನು ಲಾಭವಿದೆ? ಈ ಲೇಖನ ಓದಿ.

VISTARANEWS.COM


on

Hair Combing
Koo

ನಮ್ಮ ಅಜ್ಜಿಯರ ಕಾಲದ ಹೆರಳು ಹಾಕುವ ಕ್ರಮವನ್ನೊಮ್ಮೆ ನೆನಪಿಸಿಕೊಳ್ಳಿ. ತಲೆಯ ಚರ್ಮಕ್ಕೆ, ಬೈತಲೆಗೆಲ್ಲ ಸರಿಯಾಗಿ ಎಣ್ಣೆ ಹಚ್ಚಿ, ತಲೆಯನ್ನು ಚೆನ್ನಾಗಿ ಬಾಚಿ (Hair Combing), ಕೂದಲಿನ ಸಿಕ್ಕು ಬಿಡಿಸಿ ನಂತರ ಹೆರಳು ಹಾಕುತ್ತಿದ್ದರು. ಹೀಗೆ ಜಡೆ ಹಾಕಿದರೆ ಮಾರನೇ ದಿನ ಆ ಹೊತ್ತಿನವರೆಗೆ ಹೆರಳು ಬಿಚ್ಚುತ್ತಿರಲಿಲ್ಲ, ಭದ್ರವಾಗಿ ಹಾಗೆಯೇ ಕುಳಿತಿರುತ್ತಿತ್ತು. ಈಗಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟರೆ, ಉಳಿದವರಲ್ಲಿ ಎಷ್ಟು ಮಂದಿ ತಲೆ ಬಾಚುತ್ತಾರೆ ಎಂಬುದು ಚರ್ಚಾಸ್ಪದ ವಿಷಯ. ಕಾರಣ, ಒಂದೋ ಬಾಚುವಷ್ಟು ಕೂದಲು ಉಳಿದಿರುವುದಿಲ್ಲ ಅಥವಾ ಬಾಚದೆ ಕೆದಿರಿಕೊಂಡಿರುವುದು ʻಕೂಲ್‌ʼ ಎನಿಸುತ್ತದೆ ಇಲ್ಲವೇ ತಲೆ ಬಾಚುವುದಕ್ಕೆಲ್ಲ ವ್ಯವಧಾನವೇ ಇರುವುದಿಲ್ಲ. ಆದರೆ ತಲೆಯನ್ನು ಚೆನ್ನಾಗಿ ಬಾಚುವುದರಿಂದ ಆರೋಗ್ಯಕ್ಕೆ ಲಾಭಗಳಿವೆ ಎನ್ನುತ್ತವೆ ಅಧ್ಯಯನಗಳು. ಏನು ಲಾಭವಿದೆ? ತಲೆ ಬಾಚುವುದೆಂದರೆ ಕೂಲಿನ ಸಿಕ್ಕು ಬಿಡಿಸಿ, ಕೇಶಗಳನ್ನು ವ್ಯವಸ್ಥಿತಗೊಳಿಸುವುದು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅಂಶ. ಆದರೆ ಅದಷ್ಟೇ ಅಲ್ಲ, ತಲೆಯ ಚರ್ಮದ ಮತ್ತು ಕೂದಲುಗಳ ಬುಡದ ಆರೋಗ್ಯವನ್ನು ಕಾಪಾಡುವಲ್ಲಿನ ಅಗತ್ಯ ಕೆಲಸವಿದು. ತಲೆಯ ಚರ್ಮದಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ತೈಲದ ಅಂಶವು ಕೂದಲಿನ ಸಹಜ ಕಂಡೀಶನರ್‌ ರೀತಿಯಲ್ಲಿ ವರ್ತಿಸುತ್ತದೆ. ಹಾಗಾಗಿ ದಿನವೂ ಅದನ್ನು ಕೂದಲಿನ ಎಲ್ಲೆಡೆ ಹರಡುವುದು ಮುಖ್ಯ. ಅದನ್ನು ಒಂದೆಡೆ ಹಾಗೆಯೇ ಉಳಿಯಲು ಬಿಟ್ಟರೆ ತಲೆಯ ಸೋಂಕಿಗೆ ಕಾರಣವಾಗಬಹುದು. ಹಾಗಾಗಿ ತಲೆಯನ್ನು ಸಾದ್ಯಂತವಾಗಿ ಬಾಚುವುದು ಅಗತ್ಯ. ಇನ್ನೊಂದು ಮುಖ್ಯವಾದ ಲಾಭವೆಂದರೆ ತಲೆಯ ಭಾಗಕ್ಕೆ ಹೆಚ್ಚುವ ರಕ್ತ ಸಂಚಾರ. ಇದರಿಂದ ತಲೆಯ ಚರ್ಮಕ್ಕೆ ಮತ್ತು ಕೂದಲಿನ ಬುಡಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಸರಬರಾಜಾಗುತ್ತದೆ. ಜೊತೆಗೆ, ಸತ್ವಗಳೂ ಹೆಚ್ಚಾಗಿ ದೊರೆಯುತ್ತವೆ. ಇದಲ್ಲದೆ, ಕೂದಲಿನ ಬುಡವನ್ನು ಬಾಚುವುದರಿಂದ ಮೃತಕೋಶಗಳನ್ನು ತೆಗೆದುಹಾಕಿ, ಹೊಸ ಕೊಶಗಳು ಬರುವುದಕ್ಕೆ ನೆರವಾಗುತ್ತದೆ. ಇದರಿಂದ ತಲೆಹೊಟ್ಟಿನ ಬಾಧೆಯನ್ನೂ ನಿಯಂತ್ರಣಕ್ಕೆ ತರಬಹುದು.

Hair Comb

ಎಷ್ಟು ಬಾರಿ?

ಕೂದಲು ಬಾಚುವುದು ಅಗತ್ಯ ಎನ್ನುವುದು ಸರಿ. ಎಷ್ಟು ದಿನಕ್ಕೊಮ್ಮೆ ಅಥವಾ ದಿನಕ್ಕೆಷ್ಟು ಬಾರಿ ಕೂದಲು ಬಾಚಬೇಕು? ನೆನಪಾದಾಗೆಲ್ಲ ಬಾಚಣಿಕೆಗೆ ಕೈಯಿಕ್ಕಬೇಕೆ? ಇದಕ್ಕೊಂದು ಶಿಸ್ತು ಮಾಡಿಕೊಳ್ಳುವುದೇ… ಹೇಗೆ? ದಿನಕ್ಕೆ ಎರಡು ಬಾರಿ ಬಾಚುವುದು ಸಾಕಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಬೆಳಗಿನ ಹೊತ್ತು ಮತ್ತು ರಾತ್ರಿ ಮಲಗುವ ಮುನ್ನ ತಲೆಯನ್ನೆಲ್ಲ ಕೂಲಂಕಷವಾಗಿ ಬಾಚುವುದು ಒಳ್ಳೆಯ ಅಭ್ಯಾಸ. ಕೂದಲು ಮಿತಿಮೀರಿ ಗುಂಗುರಾಗಿದ್ದರೆ ಬಾಚುವಾಗ ಎಚ್ಚರಿಕೆ ಬೇಕಾಗುತ್ತದೆ. ಹಾಗೆಯೇ ಒದ್ದೆ ಕೂದಲನ್ನು ಎಂದಿಗೂ ಬಾಚಬೇಡಿ. ಕೂದಲು ಒದ್ದೆ ಇದ್ದಾಗ ಬೇಗನೇ ತುಂಡಾಗುತ್ತದೆ. ಹೆಚ್ಚಿನ ಸಾರಿ ಬುಡದಿಂದಲೇ ಕಿತ್ತು ಬರುತ್ತದೆ.
ತಲೆಯಲ್ಲಿ ತೀರಾ ಎಣ್ಣೆಯ ಚರ್ಮವಿದ್ದರೆ, ಹೆಚ್ಚು ಸಾರಿ ಬಾಚಿದಷ್ಟಕ್ಕೂ ಚರ್ಮದಲ್ಲಿರುವ ಎಣ್ಣೆಯಂಶವನ್ನು ಎಲ್ಲೆಡೆ ಹರಡಬಹುದು. ಇದರಿಂದ ಒಂದೆಡೆ ಜಿಡ್ಡು ಜಮೆಯಾಗಿ, ಚರ್ಮದ ಆರೋಗ್ಯ ಹಾಳಾಗುವುದನ್ನು ತಪ್ಪಿಸಬಹುದು. ತಲೆ ಚರ್ಮದ ನೈಸರ್ಗಿಕ ತೈಲ ಅಥವಾ ಸೇಬಂ ಕೂದಲಿನ ಬುಡಕ್ಕೆ ಅಂಟಿಕೊಂಡಿದ್ದರೆ ಹಲವು ರೀತಿಯಲ್ಲಿ ತೊಂದರೆಗಳು ಬರಬಹುದು. ತಲೆ ಚರ್ಮದ ಉಸಿರಾಟಕ್ಕೆ ತಡೆಯಾಗುವಂತೆ, ಸೂಕ್ಷ್ಮ ರಂಧ್ರಗಳು ಮುಚ್ಚಿಹೋಗಬಹುದು. ಇದರಿಂದ ಕೂದಲಿನ ಬೆಳವಣಿಗೆ ನಿಂತು ಹೋಗಿ, ತಲೆಗೂದಲು ತೆಳ್ಳಗಾಗಬಹುದು.

ಇದನ್ನೂ ಓದಿ: Health Tips: ನೋವು ನಿವಾರಿಸುವ ಅಪಾಯರಹಿತ ನೈಸರ್ಗಿಕ ಮೂಲಿಕೆಗಳಿವು!

ಬಾಚಣಿಕೆ ಹೇಗಿರಬೇಕು?

ಇದೂ ಒಂದು ಪ್ರಶ್ನೆಯೇ ಎಂದು ನಗಬೇಡಿ. ಕೂದಲಿನ ಸಿಕ್ಕು ಬಿಡಿಸುವ ಉದ್ದೇಶವಿದ್ದರೆ ಅಗಲವಾದ ಹಲ್ಲುಗಳಿರುವ ಬಾಚಣಿಕೆಯ ಬಳಕೆ ಸರಿ. ತಲೆಯ ಚರ್ಮದಲ್ಲಿರುವ ತೈಲದಂಶವನ್ನು ಎಲ್ಲೆಡೆ ಸಮನಾಗಿ ಹರಡುವ ಉದ್ದೇಶವಿದ್ದರೆ ಒತ್ತೊತ್ತಾಗಿ ಹಲ್ಲುಗಳಿರುವ ಬಾಚಣಿಕೆ ಬೇಕಾಗುತ್ತದೆ. ಚೂಪಾದ ಮೊನೆಗಳಿರುವ ಪ್ಲಾಸ್ಟಿಕ್‌ ಬಾಚಣಿಕೆಗಳಿಗಿಂತ ಮೊಂಡಾದ ತುದಿಗಳಿರುವ ಮರದ ಬಾಚಣಿಕೆಗಳು ಒಳ್ಳೆಯವು. ಆದರೀಗ ನಾನಾ ರೀತಿಯ ಹೇರ್‌ಬ್ರಷ್‌ಗಳು ಲಭ್ಯವಿದ್ದು, ಹೆಚ್ಚಿನವುಗಳ ತುದಿ ಪರಚುವಂತೆ ಇರುವುದಿಲ್ಲ. ರಕ್ತ ಸಂಚಾರಕ್ಕೂ ಅನುಕೂಲ ಮಾಡುವಂತೆ ಇರುತ್ತವೆ.

Continue Reading

ಆರೋಗ್ಯ

Purity Check of Ghee: ತುಪ್ಪ ಶುದ್ಧವಾಗಿಯೇ ಎಂಬುದನ್ನು ಮನೆಯಲ್ಲೇ ಪರೀಕ್ಷಿಸುವುದು ಹೇಗೆ?

Purity Check of Ghee: ಶುದ್ಧ ತುಪ್ಪವು ಮೇಲ್ನೋಟಕ್ಕೆ ತನ್ನ ಘಮ, ಬಣ್ಣ ಮತ್ತು ರುಚಿಯಲ್ಲಿ ಎಲ್ಲಕ್ಕಿಂತ ಭಿನ್ನವೇ ಆಗಿರುತ್ತದೆ. ಯಾವುದೇ ಗಾಢ ಬಣ್ಣವಿಲ್ಲದೆ, ಕಟುವಾಗ ಘಮವಿಲ್ಲದೆ, ಅಂಟಾದ ರುಚಿಯಿಲ್ಲದ ತುಪ್ಪವನ್ನು ಶುದ್ಧವೆಂದು ನಂಬಬಹುದು. ಆದರೆ ತುಪ್ಪದಲ್ಲಿ ಏನೇನೋ ಜಿಡ್ಡು ಅಥವಾ ಪಿಷ್ಟಗಳು ಸೇರಿಲ್ಲವೆಂದು ನಂಬುವುದು ಹೇಗೆ?

VISTARANEWS.COM


on

Ghee benefits
Koo

ಶುದ್ಧ ಆಹಾರವನ್ನೇ ಸೇವಿಸಬೇಕೆಂಬುದು ಎಲ್ಲರ ಆಸೆ. ಆದರೆ ʻಶುದ್ಧʼ ಎಂಬ ಹಣೆಪಟ್ಟಿಯನ್ನು ಹೊತ್ತು ಬರುವುದರಲ್ಲಿ ಅರ್ಧಕ್ಕರ್ಧ ಕಲಬೆರಕೆಯ ಆಹಾರಗಳೇ. ಉದಾ, ತುಪ್ಪದ ಬಗ್ಗೆಯೇ ಹೇಳುವುದಾದರೆ, ಹಾಲಿನಿಂದ ತುಪ್ಪದವರೆಗಿನ ಪ್ರಕ್ರಿಯೆಯನ್ನು ಮನೆಯಲ್ಲೇ ನೀವೇ ಮಾಡಿಕೊಂಡರೆ ತುಪ್ಪ ಅಶುದ್ಧ ಎನ್ನುವ ರಗಳೆಯಿಲ್ಲ. ಇನ್ನು ಹಾಲಿನ ಗುಣಮಟ್ಟವೇ ಸರಿಯಿಲ್ಲದಿದ್ದರೆ, ಹಸು ಸಾಕಬೇಕಷ್ಟೇ! ಹಾಗಲ್ಲದೆ, ಅಂಗಡಿಯಿಂದ ಖರೀದಿಸಿ ತರುವ ತುಪ್ಪವೇ (Purity Check of Ghee) ಆಗಿದ್ದರೆ, ಅದರ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳುವುದು ಹೇಗೆ? ತುಪ್ಪದಲ್ಲಿ ಏನೇನೋ ಜಿಡ್ಡು ಅಥವಾ ಪಿಷ್ಟಗಳು ಸೇರಿಲ್ಲವೆಂದು ನಂಬುವುದು ಹೇಗೆ? ಶುದ್ಧ ತುಪ್ಪವು ಮೇಲ್ನೋಟಕ್ಕೆ ತನ್ನ ಘಮ, ಬಣ್ಣ ಮತ್ತು ರುಚಿಯಲ್ಲಿ ಎಲ್ಲಕ್ಕಿಂತ ಭಿನ್ನವೇ ಆಗಿರುತ್ತದೆ. ಯಾವುದೇ ಗಾಢ ಬಣ್ಣವಿಲ್ಲದೆ, ಕಟುವಾಗ ಘಮವಿಲ್ಲದೆ, ಅಂಟಾದ ರುಚಿಯಿಲ್ಲದ ತುಪ್ಪವನ್ನು ಶುದ್ಧವೆಂದು ನಂಬಬಹುದು. ಆದರೆ ಈಗ ಕಲಬೆರಕೆ ವ್ಯವಹಾರಸ್ಥರು ಎಷ್ಟು ಚತುರರೆಂದರೆ, ಅನುಭವಿಗಳನ್ನೂ ಯಾಮಾರಿಸಿ ಬಿಡುತ್ತಾರೆ. ಇನ್ನು ಗುಣಮಟ್ಟ ಖಾತ್ರಿಯಲ್ಲಿ ಅನುಭವ ಇಲ್ಲದವರ ಪಾಡೇನು? ತುಪ್ಪದ ಗುಣಮಟ್ಟದ ಖಾತ್ರಿಗಾಗಿ ಕೆಲವು ಸರಳ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ. ಇವೆಲ್ಲವೂ ನೂರಕ್ಕೆ ನೂರರಷ್ಟು ಫಲಿತಾಂಶ ನೀಡುತ್ತವೆ ಎಂದಲ್ಲ, ಆದರೆ ಕಲಬೆರಕೆ ಪತ್ತೆ ಮಾಡುವಲ್ಲಿ ಸಹಾಯವನ್ನಂತೂ ಖಂಡಿತ ಮಾಡುತ್ತವೆ.

It is rich in good fats Ghee Benefits

ಫ್ರೀಜಿಂಗ್‌ ಪರೀಕ್ಷೆ

ಅಂಗಡಿಯಿಂದ ತಂದ ಬಾಟಲಿ ಅಥವಾ ಪ್ಯಾಕ್‌ನಿಂದ ಕೊಂಚ ತೆಳುವಾದ ತುಪ್ಪವನ್ನು ತೆಗೆದು ಗಾಜಿನ ಸಣ್ಣ ಪಾತ್ರೆಗೆ ಹಾಕಿ. ಇದನ್ನು ಕೆಲ ಸಮಯ ಫ್ರಿಜ್‌ನಲ್ಲಿಡಿ. ನಾಲ್ಕಾರು ತಾಸಿನಲ್ಲಿ ಈ ತುಪ್ಪ ಸಂಪೂರ್ಣ ಗಟ್ಟಿಯಾಗುತ್ತದೆ. ಇದು ಹೀಗೆ ಗಟ್ಟಿಯಾಗುವಾಗ ಸಂಪೂರ್ಣ ಒಂದೇ ತೆರನಾಗಿ, ಸಮನಾಗಿ ಗಟ್ಟಿಯಾಗಬೇಕು. ಮೇಲ್ಮೈ ಸಮತಟ್ಟಾಗಿ ಇಲ್ಲದಿದ್ದರೆ, ನಡುವೆ ಎಲ್ಲಾದರೂ ಪದರಗಳು ಬಿಟ್ಟಿದ್ದರೆ ಗಾಜಿನ ಪಾತ್ರೆಯನ್ನು ಸುತ್ತಲೂ ಪರಿಶೀಲಿಸಿದಾಗ ಗೋಚರಿಸುತ್ತದೆ. ಕೊಬ್ಬರಿ, ಸೋಯಾ ಅಥವಾ ಸೂರ್ಯಕಾಂತಿ ಎಣ್ಣೆಗಳನ್ನು ಮಿಶ್ರ ಮಾಡಿದ್ದರ ಪರಿಣಾಮ ಇದಾಗಿರಬಹುದು.

ಬಿಸಿ ಪರೀಕ್ಷೆ

ಸಣ್ಣ ಪ್ಯಾನ್‌ನಲ್ಲಿ ಒಂದು ದೊಡ್ಡ ಚಮಚ ತುಪ್ಪವನ್ನು ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ತುಪ್ಪ ಶುದ್ಧವೇ ಆಗಿದ್ದರೆ ಒಂದೆರಡು ಕ್ಷಣಗಳಲ್ಲಿ ಅದು ಕರಗಿ, ನೀರಿನಂಥ ತಿಳಿಯಾದ ದ್ರವ ಮಾತ್ರವೇ ಕಾಣುತ್ತದೆ. ಒಂದೊಮ್ಮೆ ಬೇರೇನಾದರೂ ಅದಕ್ಕೆ ಸೇರಿದ್ದರೆ ಕರಗುವುದು ನಿಧಾನವಾಗಬಹುದು ಅಥವಾ ಕರಗಿದ ನಂತರ ಶೇಷವೇನಾದರೂ ಕಾಣಬಹುದು ಅಲ್ಲಿ.

Rich in antioxidants ghee is anti-inflammatory Ghee Benefits

ಅಯೋಡಿನ್‌ ಪರೀಕ್ಷೆ

ಒಂದು ದೊಡ್ಡ ಚಮಚ ತೆಳುವಾದ ತುಪ್ಪಕ್ಕೆ ಕೆಲವು ಹನಿ ಅಯೋಡಿನ್‌ ದ್ರಾವಣವನ್ನು ಸೇರಿಸಿ ಕಲಕಿ. ಈ ಮಿಶ್ರಣ ನಿಧಾನಕ್ಕೆ ನೀಲಿ ಬಣ್ಣಕ್ಕೆ ತಿರುಗಿದರೆ, ಆ ತುಪ್ಪದಲ್ಲಿ ಯಾವುದೋ ಪಿಷ್ಟದಂಥ ವಸ್ತುವನ್ನು ಮಿಶ್ರ ಮಾಡಲಾಗಿದೆ ಎಂಬುದು ಸ್ಪಷ್ಟ. ಮಿಶ್ರಣದಲ್ಲಿ ಯಾವುದೇ ಬಣ್ಣದ ಬದಲಾವಣೆ ಕಾಣದಿದ್ದರೆ ಸ್ಟಾರ್ಚ್‌ ಮಿಶ್ರಣ ಇಲ್ಲ, ಆದರೆ ಬೇರಾವುದೇ ಜಿಡ್ಡು ಇದ್ದರೆ ಅದು ತಿಳಿಯುವುದಿಲ್ಲ ಈ ಪರೀಕ್ಷೆಯಲ್ಲಿ.

ನೀರಿನ ಪರೀಕ್ಷೆ

ಒಂದು ಗಾಜಿನ ಗ್ಲಾಸ್‌ನಲ್ಲಿ ಮುಕ್ಕಾಲರಷ್ಟು ಶುದ್ಧ ನೀರನ್ನು ಇರಿಸಿಕೊಳ್ಳಿ. ಇದಕ್ಕೆ ಒಂದು ಸಣ್ಣ ಚಮಚ ತುಪ್ಪ ಹಾಕಿ. ಶುದ್ಧ ತುಪ್ಪ ನೀರಿನ ಮೇಲೆ ತೇಲುತ್ತಿರುತ್ತದೆ. ತುಪ್ಪ ಮಂದವಾಗಿಲ್ಲದೆ ತೆಳುವಾಗಿದ್ದರೂ ಅದು ನೀರಿನ ಮೇಲೆಯೇ ಇರಬೇಕು. ಹಾಗಲ್ಲದೆ, ನೀರಿನೊಂದಿಗೆ ಬೆರೆಯಿತು ಅಥವಾ ಅಡಿಯಲ್ಲಿ ಹೋಗಿ ಕುಳಿತಿತು ಎಂದಾದರೆ, ಅದಕ್ಕೇನೋ ಬೇರೆ ವಸ್ತುವನ್ನು ಮಿಶ್ರ ಮಾಡಲಾಗಿದೆ.

ಇದನ್ನೂ ಓದಿ: Health Tips: ನೋವು ನಿವಾರಿಸುವ ಅಪಾಯರಹಿತ ನೈಸರ್ಗಿಕ ಮೂಲಿಕೆಗಳಿವು!

ಪೇಪರ್‌ ಪರೀಕ್ಷೆ

ಸಾಮಾನ್ಯವಾದ ಖಾಲಿ ಪೇಪರ್‌ ಮೇಲೆ ಒಂದೆರಡು ಹನಿ ತುಪ್ಪ ಹಾಕಿ. ಹತ್ತಾರು ನಿಮಿಷಗಳ ಕಾಲ ಹಾಗೆಯೇ ಬಿಡಿ ಅದನ್ನು, ಅಲ್ಲಾಡಿಸಲೂಬೇಡಿ. ಶುದ್ಧ ತುಪ್ಪ ಮೊದಲಿಗೆ ಕಾಗದಕ್ಕೆ ಹೀರಿಕೊಂಡು ಕೇವಲ ಜಿಡ್ಡಿನ ಗುರುತನ್ನು ಉಳಿಸುತ್ತದೆ. ಕ್ರಮೇಣ ಅದೂ ಮಾಯವಾಗಿ, ಪೇಪರ್‌ಗೆ ಹಾಕಿದ್ದ ತುಪ್ಪದ ಗುರುತು ಗೋಚರಿಸುವುದಿಲ್ಲ. ಕಲಬೆರಕೆ ತುಪ್ಪವಾದರೆ ಜಿಡ್ಡಿನ ಕಲೆ ಹಾಗೆಯೇ ಉಳಿಯುತ್ತದೆ. ಅದಕ್ಕೆ ಬೇರೆ ಬಣ್ಣವೂ ಬರಬಹುದು. ಮಾತ್ರವಲ್ಲ, ತುಪ್ಪದ ಗುರುತು ಸಂಪೂರ್ಣ ಮಾಯವಾಗದೆ ಅಂಟಾಗಿ ಕಾಣುತ್ತದೆ.

Continue Reading
Advertisement
UPSC
ಪ್ರಮುಖ ಸುದ್ದಿ6 mins ago

CET/NEET: ಮೊದಲ ಬಾರಿಗೆ ಆನ್ ಲೈನ್ ಪಾವತಿ ಜಾರಿ, ಒಳ್ಳೆಯ ಪ್ರತಿಕ್ರಿಯೆ

TA Saravana elected as new chairman of government assurances committee
ಕರ್ನಾಟಕ43 mins ago

TA Sharavana : ಸರ್ಕಾರಿ ಭರವಸೆಗಳ ಸಮಿತಿಯ ನೂತನ ಅಧ್ಯಕ್ಷರಾಗಿ ಟಿ.ಎ ಶರವಣ ಆಯ್ಕೆ

Hair Care Habits
ಆರೋಗ್ಯ49 mins ago

Amla For Your Hair: ತಲೆಗೂದಲ ಆರೈಕೆಯಲ್ಲಿ ನೆಲ್ಲಿಕಾಯಿಯ ಬಳಕೆ ಹೇಗೆ?

Sakhi Mahila Sangathan celebrates Raksha Sutra Diwas
ಬೆಂಗಳೂರು55 mins ago

Bengaluru News : ರಕ್ಷಾ ಸೂತ್ರ ದಿನ ಆಚರಿಸಿದ ಸಖಿ ಮಹಿಳಾ ಸಂಘಟನೆ

Sonal Monteiro
ಸಿನಿಮಾ1 hour ago

Sonal Monteiro: ಚರ್ಚ್ ವೆಡ್ಡಿಂಗ್‌ಗೂ ಮುನ್ನ ಸೋನಲ್ ಮನೆಯಲ್ಲಿ Roce Celebration

karnataka weather Forecast
ಮಳೆ1 hour ago

Karnataka Weather : ಕಲಬುರಗಿಯಲ್ಲಿ ಮಳೆ ಅಬ್ಬರ; ರಾಯಚೂರಿನಲ್ಲಿ ಕೊಚ್ಚಿ ಹೋದ ಸೇತುವೆ

Renuka Swamy murder case Pavithra Gowdas bail plea rejected
ಸ್ಯಾಂಡಲ್ ವುಡ್2 hours ago

Pavitra Gowda : ರೇಣುಕಾ ಸ್ವಾಮಿ ಕೊಲೆ ಕೇಸ್‌; ಪವಿತ್ರಾಗೌಡ ಸಲ್ಲಿಸಿದ ಜಾಮೀನು ಅರ್ಜಿ ವಜಾ

D.K. Shivakumar
ಬೆಂಗಳೂರು3 hours ago

D.K. Shivakumar: ರಾಜ್ಯಪಾಲರ ಕಚೇರಿ ರಾಜಕೀಯ ಪಕ್ಷದ ಕಚೇರಿ ಆಗಬಾರದು: ಡಿಸಿಎಂ ಡಿ.ಕೆ. ಶಿವಕುಮಾರ್

Monsoon Skincare
ಆರೋಗ್ಯ3 hours ago

Home Remedies for Skin: ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

ahoratri dharani until the guilts are punished says Opposition party Leader R Ashok
ಪ್ರಮುಖ ಸುದ್ದಿ3 hours ago

R. Ashoka: ರಾಜಭವನ ಬಿಜೆಪಿ ಕಚೇರಿಯಾದರೆ, ವಿಧಾನಸೌಧ ಕಾಂಗ್ರೆಸ್ ಕಚೇರಿ- ಆರ್ ಅಶೋಕ್ ಕಿಡಿ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್6 hours ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 days ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 week ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌