Rajya Sabha Election: ರಾಜ್ಯಸಭೆ ಪ್ರವೇಶಿಸಿದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ! ಯಾರು ಈ ಭಾಂಡಗೆ? - Vistara News

ರಾಜಕೀಯ

Rajya Sabha Election: ರಾಜ್ಯಸಭೆ ಪ್ರವೇಶಿಸಿದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ! ಯಾರು ಈ ಭಾಂಡಗೆ?

Rajya Sabha Election: ಬಿಜೆಪಿಯ ನಾರಾಯಣಸಾ ಬಾಂಡಗೆ ಅವರು ಒಟ್ಟು 47 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಮೂಲಕ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತ ರಾಜ್ಯಸಭೆಯನ್ನು ಪ್ರವೇಶ ಮಾಡಿದಂತೆ ಆಗಿದೆ.

VISTARANEWS.COM


on

Rajya Sabha election Ordinary worker enters Rajya Sabha from BJP Who is Narayanasa bhandage
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬಿದ್ದಿದ್ದು, ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಜಯಗಳಿಸಿದ್ದಾರೆ. ಬಿಜೆಪಿಯ ನಾರಾಯಣಸಾ ಬಾಂಡಗೆ ಅವರು ಒಟ್ಟು 47 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತ ರಾಜ್ಯಸಭೆಯನ್ನು ಪ್ರವೇಶ ಮಾಡಿದಂತೆ ಆಗಿದೆ.

ಈ ಬಾರಿಯ ರಾಜ್ಯಸಭಾ ಚುನಾವಣೆ ಸಂಬಂಧ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೆರಡು ಕಡೆ ಸ್ಪರ್ಧಿಸಿ ಸೋಲುಕಂಡಿದ್ದ ಬಿಜೆಪಿಯ ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವರು ಲಾಬಿ ನಡೆಸಿದ್ದರು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಹೈಕಮಾಂಡ್‌ ನಾರಾಯಣಸಾ ಬಾಂಡಗೆ ಅವರಿಗೆ ಮಣೆ ಹಾಕಿತ್ತು. ಈಗ ಅವರು ನಿರಾಯಾಸವಾಗಿ ಗೆದ್ದಿದ್ದು, ರಾಜ್ಯಸಭೆಯನ್ನು ಪ್ರವೇಶ ಮಾಡಿದ್ದಾರೆ.

ಯಾರು ಈ ನಾರಾಯಣಸಾ ಕೃಷ್ಣಸಾ ಭಾಂಡಗೆ?

ನಾರಾಯಣಸಾ ಕೃಷ್ಣಸಾ ಭಾಂಡಗೆ ಅವರು ಮೂಲತಃ ಉತ್ತರ ಕರ್ನಾಟಕದ ಬಾಗಲಕೋಟೆಯವರಾಗಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್ ಸೇರ್ಪಡೆಯಾಗಿದ್ದು, 40 ವರ್ಷಗಳಿಂದ ಆರ್‌ಎಸ್‌ಎಸ್‌ನಲ್ಲಿದ್ದಾರೆ. ಬಾಗಲಕೋಟೆಯಲ್ಲಿ ಆರಂಭದ ಎಬಿವಿಪಿಯಲ್ಲಿ ಸದಸ್ಯರಾಗಿ ಕೆಲಸ ಮಾಡಿದ್ದರು. ಈ ಹಿಂದೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ನಾರಾಯಣ ಭಾಂಡಗೆ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದ ಎಸ್‌ಎಸ್‌ಕೆ ಸಮಾಜದ ಮುಖಂಡರೂ ಆಗಿರುವ ಇವರು ಬಿಜೆಪಿಯ ಒಬಿಸಿ ಘಟಕದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಒಂದು ಬಾರಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ರಾಜ್ಯ ಕಾರ್ಯದರ್ಶಿಯಾಗಿಯೂ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದಾರೆ. 6 ಬಾರಿ ರಾಜ್ಯದ ಚುನಾವಣೆಗೆ ಕೆಲಸಗಳಿಗೆ ನಿಯೋಜನೆ ಹೊಂದಿದ್ದರು. ಪಶ್ಚಿಮ ಬಂಗಾಳ, ಗೋವಾ, ತೆಲಂಗಾಣ , ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಚುನಾವಣಾ ಕಾರ್ಯಕ್ಕೆ ಬಿಜೆಪಿಯಿಂದ ನಿಯೋಜನೆ ಹೊಂದಿದ್ದರು. 1990 ದಶಕದಲ್ಲಿ ಅಯೋಧ್ಯೆ ಮತ್ತು ಈದ್ಗಾ ಮೈದಾನ ಹೋರಾಟದಲ್ಲಿ ಇವರು ಭಾಗವಹಿಸಿದ್ದರು.

ಜನಸಂಘದಿಂದ ಬಂದವರು

ನಾರಾಯಣಸಾ ಭಾಂಡಗೆ 1973ರಲ್ಲಿ ಜನಸಂಘ ಸೇರಿದ್ದರು. ಆಗಿನ ಪ್ರಧಾನಿ ಇಂದಿರಾ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಕ್ಕೆ 18 ದಿನ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿ ಬಂದಿದ್ದರು. ಕಾಶ್ಮೀರದಲ್ಲಿ ನಡೆದಿದ್ದ ತಿರಂಗಾ ಯಾತ್ರೆಯಲ್ಲೂ ಇವರು ಭಾಗಿಯಾಗಿದ್ದರು.

ಇದನ್ನೂ ಓದಿ: Rajya Sabha Election: ರಾಜ್ಯಸಭೆಯಲ್ಲಿ 3 ಸೀಟು ಗೆದ್ದು ಬೀಗಿದ ಕಾಂಗ್ರೆಸ್‌; 1 ಸ್ಥಾನ ಬಿಜೆಪಿಗೆ; ಮೈತ್ರಿಗೆ ಮುಖಭಂಗ!

ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿದೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನೂತನ ರಾಜ್ಯಸಭಾ ಸದಸ್ಯ ನಾರಾಯಣ ಸಾ ಬಾಂಡಗೆ, ಸಾಮಾನ್ಯ ಕಾರ್ಯಕರ್ತನಾದ ನನಗೆ ರಾಜ್ಯಸಭೆಗೆ ಅವಕಾಶ ಮಾಡಿಕೊಟ್ಟರು. ನಮ್ಮ‌ ಎಲ್ಲ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಅವಕಾಶ ನೀಡಿದ್ದಾರೆ. ತತ್ವ ಸಿದ್ಧಾಂತವನ್ನು ಗುರುತಿಸಿ ಅವಕಾಶ ನೀಡಿದ್ದಾರೆ ಎಂದು ಹೇಳಿದರು.

Narayanasa bhandage family celebration
Narayanasa bhandage family celebration

ಭಾಂಡಗೆ ಮನೆಯಲ್ಲಿ ಸಂಭ್ರಮ

ಬಾಗಲಕೋಟೆಯ ಲಕ್ಷ್ಮೀನಗರದಲ್ಲಿ ಇರುವ ನಾರಾಯಣಸಾ ಭಾಂಡಗೆ ನಿವಾಸದಲ್ಲಿ ಸಂಭ್ರಮ ಮನೆಮಾಡಿತ್ತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸಿಹಿ ಹಂಚಿ ಸಂಭ್ರಮಿಸಿದ ಕುಟುಂಬದವರು, ಬಂಧು ಮಿತ್ರರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

TA Sharavana : ಸರ್ಕಾರಿ ಭರವಸೆಗಳ ಸಮಿತಿಯ ನೂತನ ಅಧ್ಯಕ್ಷರಾಗಿ ಟಿ.ಎ ಶರವಣ ಆಯ್ಕೆ

TA Sharavana : ಸರ್ಕಾರಿ ಭರವಸೆಗಳ ಸಮಿತಿಯ ನೂತನ ಅಧ್ಯಕ್ಷರಾಗಿ ಟಿ.ಎ ಶರವಣ ಆಯ್ಕೆಯಾಗಿದ್ದಾರೆ. ಸರ್ಕಾರಿ ಭರವಸೆಗಳ ಸಮಿತಿಯು ಒಟ್ಟು 9 ಮಂದಿ ಸದಸ್ಯರನ್ನೊಳಗೊಂಡಿದೆ

VISTARANEWS.COM


on

By

TA Saravana elected as new chairman of government assurances committee
Koo

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಶಾಸಕ ಟಿ. ಎ. ಶರವಣ (TA Sharavana) ಅವರು ಸರ್ಕಾರಿ ಭರವಸೆಗಳ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 194(4) ರ ಮೇರೆಗೆ ಸಭಾಪತಿ ನೇಮಕ ಮಾಡಿದ್ದಾರೆ. ವಿಧಾನ ಪರಿಷತ್ ಶಾಸಕರು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾದ ಟಿ. ಎ. ಶರವಣ ಅವರನ್ನು ಕರ್ನಾಟಕ ವಿಧಾನ ಪರಿಷತ್‌ನ ಸರ್ಕಾರಿ ಭರವಸೆಗಳ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಸರ್ಕಾರಿ ಭರವಸೆಗಳ ಸಮಿತಿಯು ಒಟ್ಟು 9 ಮಂದಿ ಸದಸ್ಯರನ್ನೊಳಗೊಂಡಿದೆ. ಪ್ರಕಾಶ್‌ ಕೆ ರಾಥೋಡ್‌, ಶರವಣ ಟಿ.ಎ, ನಿರಾಣಿ ಹಣಮಂತ್‌ ರುದ್ರಪ್ಪ, ಯು.ಬಿ. ವೆಂಕಟೇಶ್‌, ಪ್ರತಾಫ್‌ ಸಿಂಹ ನಾಯಕ್‌ ಕೆ, ಡಿ.ಎಸ್‌ ಅರುಣ್‌ ಹಾಗೂ ಕೆ.ಎಸ್‌ ನವೀನ್‌, ಮಂಜುನಾಥ್‌ ಭಂಡಾರಿ, ತಿಪ್ಪಣ್ಣಪ್ಪ ಕಮಕನೂರ ಅವರು ಸದಸ್ಯರಾಗಿದ್ದಾರೆ.

ಇದನ್ನೂ ಓದಿ: D.K. Shivakumar: ರಾಜ್ಯಪಾಲರ ಕಚೇರಿ ರಾಜಕೀಯ ಪಕ್ಷದ ಕಚೇರಿ ಆಗಬಾರದು: ಡಿಸಿಎಂ ಡಿ.ಕೆ. ಶಿವಕುಮಾರ್

Continue Reading

ರಾಜಕೀಯ

CM Siddaramaiah: ಸಿಎಂ ವಿರುದ್ಧದ ಪ್ರಾಸಿಕ್ಯೂಷನ್;​ ವಾದ ಆಲಿಸಿ ಸೆ.2ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

CM Siddaramaiah: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಸಂಬಂಧ ವಾದ ಆಲಿಸಿದ ಹೈಕೋರ್ಟ್‌ ಸೆ.2ಕ್ಕೆ ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿದೆ. ಜತೆಗೆ ರಾಜ್ಯಪಾಲರ ತೀರ್ಮಾನ ಸರಿಯೋ -ತಪ್ಪೋ ಅನ್ನೋದು ತೀರ್ಮಾನ ಮಾಡಬೇಕಿದೆ. ಅಲ್ಲಿಯವರೆಗೂ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ಅಸಾಧ್ಯ ಎಂದು ಕೋರ್ಟ್‌ ತಿಳಿಸಿದೆ.

VISTARANEWS.COM


on

By

Prosecution against CM Hc adjourns hearing to September 2
Koo

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಸಂಬಂಧ ವಾದ ಆಲಿಸಿದ ಹೈಕೋರ್ಟ್‌ ಸೆ.2ಕ್ಕೆ ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿದೆ. ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯು ವಾದ ಮಂಡನೆ ಬಳಿಕ ಶನಿವಾರ (ಆ.31) ಮಧ್ಯಾಹ್ನ 2:30ಕ್ಕೆ ಮುಂದೂಡಿಕೆಯಾಗಿತ್ತು. ಶನಿವಾರ ಬೆಳಗ್ಗೆ 10:30ಕ್ಕೆ ಶುರುವಾಗಿದ್ದ ವಿಚಾರಣೆಯಲ್ಲಿ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರಿಂದ ವಿವೇಚನೆ ಬಳಸಿಯೇ ಅನುಮತಿ ನೀಡಲಾಗಿದೆ ಎಂದು ವಕೀಲ ತುಷಾರ ಮೆಹ್ತಾ ವಾದ ಮಂಡಿಸಿದ್ದರು. ಬಳಿಕ ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ವಾದ ಆರಂಭಿಸಿ, ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಬೇಕಿದ್ದು ಮನವಿ ಮಾಡಿದರು. ಮಣೀಂದರ್ ಸಿಂಗ್ ಮುಂದಿನ ವಾದ ಸೋಮವಾರ ಮಂಡಿಸುವುದಾಗಿ ಮನವಿ ಮಾಡಿದಾಗ, ವಿಚಾರಣೆಯನ್ನೂ ಶನಿವಾರ ಮಧ್ಯಾಹ್ನ 2.30 ಕ್ಕೆ ಮುಂದೂಡಿತು. ಮಧ್ಯಾಹ್ನದ ನಂತರ ಪ್ರತಿವಾದಿ ಪ್ರದೀಪ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದ್ದರು.

ಸಿಎಂ ಪಾತ್ರ ಏನು ಎಂದು ಪ್ರಶ್ನಿಸಿದ‌ ಜಡ್ಜ್

ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು ಬಹಳ ಜನ ವಾದ ಮಂಡನೆ ಮಾಡಿದ್ದೀರಿ. ಆದರೆ ಇದರಲ್ಲಿ ಸಿಎಂ ಪಾತ್ರ ಏನು ಎಂದು ಯಾರು ಹೇಳಿಲ್ಲ. ಸಿಎಂ ಪಾತ್ರದ ಬಗ್ಗೆ ನೀವು ಉತ್ತರಿಸುತ್ತೀರಾ ಎಂದು ದೂರುದಾರರ ಪರ ವಕೀಲರಿಗೆ ಪ್ರಶ್ನೆ ಮಾಡಿದರು. ಈ ವೇಳೆ ಎಜಿ ಶಶಿಕಿರಣ್ ಶೆಟ್ಟಿ ಮಧ್ಯಪ್ರವೇಶಿಸಿ, ಇವರು ಸಿಎಂ ವಿರುದ್ಧ ಆರೋಪಿಸುವುದಕ್ಕೆ ಏನು ಇಲ್ಲ.. ಹೀಗಾಗಿ ಸಿಎಂ ವಿರುದ್ಧ ಆರೋಪಗಳಿಲ್ಲವೆಂದು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿಗಳ ಪಾತ್ರ, ಕ್ಯಾಬಿನೆಟ್ ನಿರ್ಣಯದ ಬಗ್ಗೆ ವಾದ ಮಂಡಿಸುತ್ತೇನೆ. ಕೆಲ ಸಂದರ್ಭಗಳಲ್ಲಿ ಕ್ಯಾಬಿನೆಟ್ ರಾಜ್ಯಪಾಲರಿಗೆ ಸಲಹೆ ನೀಡುವ ಅರ್ಹತೆ ಕಳೆದುಕೊಳ್ಳುತ್ತದೆ. ಆರ್.ಎಸ್.ನಾಯಕ್ ಪ್ರಕರಣ ಉಲ್ಲೇಖಿಸಿ ಪ್ರಭುಲಿಂಗ್ ನಾವದಗಿ ವಾದ ಶುರು ಮಾಡಿದರು. ಸಿಎಂ ಸಿದ್ದರಾಮಯ್ಯರನ್ನು ರಕ್ಷಣೆ ಮಾಡುವ ಸಲುವಾಗಿಯೇ ಕ್ಯಾಬಿನೆಟ್‌ ನಿರ್ಣಯವನ್ನು ಮಾಡಲಾಗಿದೆ. ಇಂತಹ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸುವ ಅಗತ್ಯವಿಲ್ಲ.

ಮುಖ್ಯಮಂತ್ರಿಗಳ ವಿರುದ್ಧ ಆರೋಪ ಬಂದಾಗ ಅದರ ವಿರುದ್ಧ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರ ರಾಜ್ಯಪಾಲರಿಗಿದೆ. ಕ್ಯಾಬಿನೆಟ್ ನಿರ್ಣಯ ವಿರುದ್ಧ ರಾಜ್ಯಪಾಲರು ಕ್ರಮ ಜರಗಿಸಿದ್ದಾರೆ ಅನ್ನೋದು ಸರಿಯಲ್ಲ . ಸಿಎಂ ವಿರುದ್ಧ ಬಂದ ದೂರಿಗೆ ಕ್ರಮ ಕೈಗೊಳ್ಳುವ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವ ಅಧಿಕಾರ ಸರ್ಕಾರಕ್ಕಿದೆ. ಸಿಎಂ ಪ್ರಾಸಿಕ್ಯೂಷನ್ ವಿಚಾರದಲ್ಲಿ ಕ್ಯಾಬಿನೆಟ್ ನಿರ್ಧಾರ ಸಮಂಜಸವಲ್ಲಎಂದು ಸುಪ್ರೀಂಕೋರ್ಟ್‌ನ ಎ.ಕೆ.ಕ್ರೈಪಾಕ್ ಕೇಸ್ ಉಲ್ಲೇಖಿಸಿದರು. ಸಂವಿಧಾನದ 163 ಅಡಿಯಲ್ಲಿ ಸಿಎಂ ಕೂಡಾ ಕ್ಯಾಬಿನೆಟ್‌ನ ಭಾಗವಾಗಿದ್ದಾರೆ. ಹೀಗಾಗಿ ಸಿಎಂ ಹೊರತಾದ ಕ್ಯಾಬಿನೆಟ್ ಇರಲು ಸಾಧ್ಯವಿಲ್ಲ. ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸಬೇಕಿಲ್ಲ.

2018ರಲ್ಲಿ ಪಿಸಿ ಆಕ್ಟ್ ಸೆ.17 ಎ ಮತ್ತು 19 ತಿದ್ದುಪಡಿ ಮಾಡಲಾಗಿದೆ. ಆದರೆ ಸೆ.17 ಎ ನಲ್ಲಿ ಆರೋಪಿಗೆ ನೋಟಿಸ್ ನೀಡಲು ಅವಕಾಶವಿಲ್ಲ. ಸೆ.19 ಅಡಿಯಲ್ಲಿ ನೋಟಿಸ್ ನೀಡಲು ಅವಕಾಶವಿದೆ. ಆರೋಪಿಗೆ ನೋಟಿಸ್ ನೀಡಿ ತನಿಖೆಗೆ ಅವಕಾಶ ನೀಡಬಾರದು. ನೋಟಿಸ್ ನೀಡಿದರೆ ತನಿಖೆಯೇ ಪೂರ್ವಾಗ್ರಹಕ್ಕೊಳಗಾಗಲಿದೆ. 17 ಎ ಹಂತದಲ್ಲಿ ರಾಜ್ಯಪಾಲರ ಕ್ರಮ ಪ್ರಶ್ನಿಸಲು ಆರೋಪಿಗೆ ಅವಕಾಶವಿಲ್ಲ. ಎಫ್‌ಐಆರ್ ದಾಖಲಾದ ಬಳಿಕವಷ್ಟೇ ಆರೋಪಿಗೆ ಅದನ್ನು ಪ್ರಶ್ನಿಸುವ ಹಕ್ಕು ಬರಲಿದೆ. ಮುಡಾ ಅಕ್ರಮದ ಕುರಿತು ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧರಿಸಿ ತನಿಖೆಗಾಗಿ ಏಕಸದಸ್ಯ ಆಯೋಗ ರಚನೆಗೆ ಸೂಚಿಸಿದ್ದಾರೆ. ಅದರಲ್ಲಿ ಇದರಲ್ಲಿ ಸಿಎಂ ಮೇಲೆ ಆರೋಪ ಬಂದಿದೆ, ಹೀಗಾಗಿ ಅವರು ರಚಿಸಿರುವ ಕಮಿಟಿಯಿಂದ ತನಿಖೆ ಆಗಬಾರದು.

ಕಾನೂನಿನ ಪ್ರಕಾರವೇ ಈ ಕೇಸ್‌ ತನಿಖೆ ಆಗಬೇಕು . ನಿವೇಶನಗಳ ಹಂಚಿಕೆ ಬಗ್ಗೆ ಅನುಮಾನ ಸರ್ಕಾರಕ್ಕೂ ಇದೆ ತನಿಖಾ ತಂಡದ ಕಾರ್ಯವ್ಯಾಪ್ತಿಯಲ್ಲಿ ನಿಯಮ 6,7,8ರ ಬಗ್ಗೆ ಆಕ್ಷೇಪಣೆಗಳಿವೆ. ಮೇಲ್ನೋಟಕ್ಕೆ ಅಕ್ರಮವನ್ನು ಪರಿಗಣಿಸಲಾಗಿದೆ ಎನ್ನುವ ಅಂಶ ಸರ್ಕಾರದ ಆದೇಶಗಳಲ್ಲಿ ಇರುವ ಬಗ್ಗೆ ನಾವದಗಿ ನ್ಯಾಯಾಲಯದ ಗಮನ ಸೆಳೆದರು. ಇದನ್ನು ಸ್ಕ್ಯಾಮ್ ಅಂತ ಹೇಳಲ್ಲ ಆದರೆ ಕಾನೂನು ಮೀರಿ ನಡೆದಿರುವುದು ತನಿಖೆ ಆಗಬೇಕು ಎಂದು ಪ್ರತಿವಾದಿಸಿದರು.

ಎಸ್ ಆರ್ ಬೊಮ್ಮಯಿ ಕೇಸ್ ಪ್ರಸ್ತಾಪ ಮಾಡಿದ ಪ್ರಭುಲಿಂಗ ನಾವದಗಿ, ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ರಾಜ್ಯಪಾಲರ ಅಧಿಕಾರ ಚಲಾಯಿಸಲು ಕ್ಯಾಬಿನೆಟ್ ಸಲಹೆ ಅವಶ್ಯಕತೆ ಇಲ್ಲ ಎಂದು ಉಲ್ಲೇಖಿಸಿದರು. ಟಾಡಾ ಪ್ರಕರಣದಲ್ಲೂ ಕೇಸ್ ಹಾಕುವ ಮುನ್ನ ಪೂರ್ವಾನುಮತಿ ಬೇಕಿತ್ತು. ಆದರೆ ಮೌಖಿಕ ಅನುಮತಿಯೂ ಸಾಕೆಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಹಲವು ಪ್ರಕರಣಗಳಲ್ಲಿ ಅನುಮತಿ ಪರವಾದ ತೀರ್ಪುಗಳಿವೆ. ಬಿ.ಎಸ್.ಯಡಿಯೂರಪ್ಪ ಅವರ ಕೇಸ್‌ ಅನ್ನು ಪರಿಗಣಿಸಲು ಸಾಧ್ಯವಿಲ್ಲ. ಎಸ್ಒಪಿ ಪಾಲನೆ ಮಾಡಬೇಕಿರುವುದು ಕೇವಲ ಸಿಬಿಐ ಕೇಸ್‌ನಲ್ಲಿ ಮಾತ್ರ. ಹೀಗಾಗಿ ಆ ತೀರ್ಪನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಸಚಿವ ಸಂಪುಟ ನೀಡಿದ್ದ ಸೂಚನೆಯನ್ನು ರಾಜ್ಯಪಾಲರು ಉಲ್ಲೇಖಿಸಿರಲಿಲ್ಲ. ಹೀಗಾಗಿ ವಿಭಾಗೀಯ ಪೀಠ ಅದನ್ನು ರಾಜ್ಯಪಾಲರ ಮರುಪರಿಶೀಲನೆಗೆ ಸೂಚಿಸಿತ್ತು ಎಂದು ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು.

17-a ಭ್ರಷ್ಟಾಚಾರ ತಡೆ ಕಾಯಿದೆ ಬಗ್ಗೆ ಮಾಹಿತಿ ನೀಡುತ್ತಾ ಇದರಲ್ಲಿ ಸಿಎಂ ಪಾತ್ರದ ಬಗ್ಗೆ ಮನವರಿಕೆ ಮಾಡಿದ್ದರು. ಆಗ 17-A ಹೇಳೋದು ಯಾವುದಾದರೂ ಹಣ ಪಡೆದಿದ್ದರಾ ಅಥವಾ ಕೊಟ್ರಾ, ಶಿಫಾರಸು ಮಾಡಿದ್ರಾ ಅನ್ನೋ ಬಗ್ಗೆ ಎಂದು ಜಡ್ಜ್ ಪ್ರಶ್ನೆ ಮಾಡಿದಾಗ ಶಿಫಾರಸು ಮಾಡಬೇಕು ಅಂತ ಇಲ್ಲ. ಮೌಖಿಕ ಸೂಚನೆ ಕೊಟ್ಟರು ಸಾಕು ಅದು 17-a ಕೆಳಗಡೆ ಬರುತ್ತದೆ. ಇವರು ಅಧಿಕಾರ ಬಳಸಿ ಕೆಲಸ ಮಾಡಿಸಿರಬಹುದು. ಸಾರ್ವಜನಿಕ ಸೇವಕ ಮೌಖಿಕವಾಗಿ ಶಿಫಾರಸ್ಸು ಮಾಡಿದ್ದರೂ ತನಿಖೆಗೊಳಪಡುತ್ತಾರೆ. ಪಿಸಿ ಆಕ್ಟ್ ಅಡಿ ತನಿಖೆಗೆ ಒಳಪಡಿಸಬಹುದು. ಎಫ್ಐಆರ್ ದಾಖಲಾದ ಬಳಿಕವೂ ಸಿಎಂಗೆ ಎಫ್‌ಐಆರ್ ಪ್ರಶ್ನಿಸಲು ಅವಕಾಶ ದೊರೆಯುತ್ತದೆ. ಹೀಗಾಗಿ ರಾಜ್ಯಪಾಲರ ಆದೇಶ ರದ್ದುಪಡಿಸದಂತೆ ಮನವಿ ಮಾಡಿ ಎಂದು ವಾದ ಮುಕ್ತಾಯಗೊಳಿಸಿದರು. ಇದೇ ವೇಳೆ ನನ್ನ ವಾದವೂ ಸಹ ತುಷಾರ ಮೆಹ್ತಾ ವಾದವೇ .. ಹೀಗಾಗಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ತಿರಸ್ಕರಿಸಿ ಕೆಳ ನ್ಯಾಯಾಲಯ ತೀರ್ಪು ಕೊಡಲು ಅವಕಾಶ ಕೊಡಿ ಎಂದು ಪ್ರದೀಪ್‌ ಮನವಿ ಮಾಡಿದರು.‌

ಇದನ್ನೂ ಓದಿ: CM Siddaramaiah : ಮುಡಾ ಕೇಸ್‌; ಹೈಕೋರ್ಟ್‌ನಲ್ಲಿ ಸಿಎಂ ಭವಿಷ್ಯ ನಿರ್ಧಾರ! ಹೇಗಿತ್ತು ರಾಜ್ಯಪಾಲರ ಪರ ತುಷಾರ್ ಮೆಹ್ತಾ ವಾದ

ಠಾಣೆಯಲ್ಲಿ ದೂರು ದಾಖಲಿಸಲು ಹಿಂದೇಟು

ಪ್ರಭುಲಿಂಗ ನಾವದಗಿ ಬಳಿಕ ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡನೆ ಶುರು ಮಾಡಿದರು.
ನಾನು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇನೆ, ಬಳಿಕ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೇನೆ
ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದೇನೆ ಎಂದರು. ಈ ಕೇಸ್‌ನಲ್ಲಿ ಮೊದಲಿಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲು ಮಾಡದ ಹಿನ್ನೆಲೆ ರಾಜ್ಯಪಾಲರ ಅನುಮತಿ ಕೇಳಲಾಯಿತು. ಡಾ.ಅಶೋಕ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. 17 ಎ ಅಡಿ ಖಾಸಗಿ ದೂರುದಾರರು ಅನುಮತಿ ಪಡೆಯಬಹುದು. ಹೀಗಾಗಿ ರಾಜ್ಯಪಾಲರ ಅನುಮತಿ ಪಡೆದು ದೂರು ದಾಖಲಿಸಲಾಗಿದೆ ಎಂದರು.

ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಲ್ಯಾಂಡ್ ಕನ್ವರ್ಷನ್ ಅಕ್ರಮಗಳ ಬಗ್ಗೆ ಉಲ್ಲೇಖಿಸಿ ವಾದ ಮುಂದುವರಿಸಿದ ಅವರು, ಮೂಡಾ ಮೂರನೇ ಹಂತದಲ್ಲಿ ವಶಪಡಿಸಿಕೊಂಡ ಭೂಮಿಯೇ ಇಲ್ಲ. ದೇವನೂರು ಬಡವಾಣೆ ಮಾಡಿದ ಸ್ಥಳದಲ್ಲಿ ಕೆಸರೆ ಗ್ರಾಮದ ಆಸ್ತಿಯನ್ನು ತೋರಿಸಿದ್ದಾರೆ. ಇಲ್ಲಿ ನಡೆದಿರುವ ಕೃಷಿ ಭೂಮಿಯ ಭೂ ಪರಿವರ್ತನೆಯೂ ಅಕ್ರಮವಾಗಿರುತ್ತದೆ.

ಕೆಸರೆ ಗ್ರಾಮದ ಜಮೀನಿನ ಬಗ್ಗೆ ವಿವರಣೆ ನೀಡಿದ ರಂಗನಾಥ ರೆಡ್ಡಿ ಸಿದ್ದರಾಮಯ್ಯ ಪಾತ್ರದ ಬಗ್ಗೆ ಮಾಹಿತಿ ನೀಡಿದರು. 2005 ಕನ್ವರ್ಸನ್‌ ನಿವೇಶನ ಹಂಚಿಕೆ ಬಳಿಕ ಮಲ್ಲಿಕಾರ್ಜುನ ಸ್ವಾಮಿಗೆ ಮಾರಿದ್ದಾರೆ. ಇಲ್ಲದೆ ಇರುವ ಜಮೀನನ್ನು ಗಿಫ್ಟ್ ಡೀಡ್ ಮಾಡಿದ್ದಾರೆ, ಜಮೀನು ಇಲ್ಲದ ಮೇಲೆ ಗಿಫ್ಟ್ ಡೀಡ್ ಹೇಗೆ ವ್ಯಾಲ್ಯೂಡ್ ಆಗುತ್ತೆ ಎಂದರು. ಆಗ ನ್ಯಾಯಮೂರ್ತಿಗಳು ಲ್ಯಾಂಡ್ ಡಿನೋಟಿಫೈ ಮಾಡಿದ ಮೇಲೆ ಆ ಜಮೀನು ಮೂಲ ಮಾಲೀಕನಿಗೆ ಹೋಗಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು. ಆಗ ರಂಗನಾಥ್‌ರೆಡ್ಡಿ ಆ ಜಮೀನು ಅವರಿಗೆ ಹೋಗಿಲ್ಲ. ಎಲ್ಲದರಲ್ಲೂ ಮೈಲಾರಯ್ಯ ಹೆಸರು ಮಾತ್ರ ಬಂದಿದೆ. ಅಲ್ಲಿ ಜಮೀನೇ ಇಲ್ಲದೇ ಇಷ್ಟು ವ್ಯವಹಾರ ಮಾಡಿದ್ದಾರೆ ಎಂದು ಲಿಖಿತ ವಾದ ಮಂಡಿಸಿದ್ದರು.

ಮುಡಾ ಹೆಸರಿಗೆ ಕಂದಾಯ ದಾಖಲೆಗಳಿವೆ. 2004 ರವರೆಗೆ ಹಲವು ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ.
ಕೆಸರೆ ಗ್ರಾಮ ದೇವನೂರು ಬಡಾವಣೆಯಾಗಿ ಬದಲಾದ ನಂತರ ಮಾರಾಟ ಮಾಡಲಾಗಿದೆ. ಕೃಷಿ ಜಮೀನೆಂದು ದೇವರಾಜು ಎಂಬುವರಿಂದ ಕ್ರಯ ಮಾಡಲಾಗಿದೆ . ಕೆಸರೆ ಗ್ರಾಮದ 464 ಸರ್ವೆ ನಂಬರಿನ ಖುಷ್ಕಿ ಜಮೀನೆಂದು ಉಲ್ಲೇಖಸಿದ್ದಾರೆ. ಅಷ್ಟರಲ್ಲಾಗಲೇ ದೇವನೂರು ಬಡಾವಣೆಯಾಗಿ ನಿವೇಶನ ಹಂಚಲಾಗಿತ್ತು. 2004ರಲ್ಲಿ ಸಿಎಂ ಮೈದುನ ಮಲ್ಲಿಕಾರ್ಜುನಸ್ವಾಮಿ ಎಂಬುವರು ಖರೀದಿ ಮಾಡಿದ್ದರು. ಅಸ್ತಿತ್ವವೇ ಇಲ್ಲದ ಕೃಷಿ ಭೂಮಿಗೆ 15 ಜುಲೈ 2005 ರಂದು ತಹಸೀಲ್ದಾರ್, ಡಿಸಿ ಸ್ಥಳ ಪರಿಶೀಲನೆ ಮಾಡಿ ಭೂಪರಿವರ್ತನೆ ಮಾಡಲಾಗಿದೆ. ಕೃಷಿಯೇತರ ವಾಸದ ಉದ್ದೇಶಕ್ಕೆ ಪರಿವರ್ತನೆ ಮಾಡಲಾಗಿದೆ. ಆಗಿನ ಜಿಲ್ಲಾಧಿಕಾರಿ ಕುಮಾರ್ ನಾಯಕ್ ಭೂಪರಿವರ್ತನೆ ವರದಿ ನೀಡಿದ್ದಾರೆ.

ಮೊದಲಿಗೆ 60-40 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಲು ನಗರಾಭಿವೃದ್ಧಿ ಇಲಾಖೆಯಿಂದ ನಿರ್ಧಾರ ಮಾಡಿತ್ತು. ನಂತರ 50- 50 ಅನುಪಾತದಲ್ಲಿ ನಿವೇಶನಗಳ ಹಂಚಿಕೆ ಮಾಡಿದೆ. ಸುಮಾರು 20 ನಿವೇಶನಗಳನ್ನು ಹಂಚಿಕೆ‌ ಮಾಡಿದ್ದಾರೆ. ಅರ್ಜಿದಾರನ ಪತ್ನಿ ಮಾಲೀಕರಲ್ಲದ ಮೇಲೆ ಯಾವ ರೀತಿ ನಿವೇಶನ ಪಡೆದರು. ಅಧಿಕಾರ ಬಳಸಿದ್ದಾರೆ ಅನ್ನೋದು ಬಿಟ್ರೆ ಬೇರೆ ಯಾವ ದಾಖಲೆಗಳು ಇಲ್ಲ ಎಂದು ರಂಗನಾಥ್‌ ವಾದಿಸಿದ್ದರು. ಈ ವೇಳೆ ಮುಡಾ ಕೃಷಿ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡಿದೆ. ಬೇಕಿದ್ದರೆ ದಾನಪತ್ರವನ್ನು ಪ್ರಶ್ನಿಸಲಿ ಎಂದು ಸಿಎಂ ಪರ ವಕೀಲರು ಉತ್ತರಿಸಿದರು . ದಾನಪತ್ರ ಇಬ್ಬರು ವ್ಯಕ್ತಿಗಳ ನಡುವಿನ ಹಸ್ತಾಂತರ ಹೇಗೆ ಪ್ರಶ್ನಿಸುತ್ತಾರೆ ನ್ಯಾಯಮೂರ್ತಿಗಳು ಮರುಪ್ರಶ್ನೆ ಹಾಕಿದರು.

ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯಗೆ ಮುಡಾ ಪರೀಕ್ಷೆ! ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ದೂರದಾರರಿಂದ ಒತ್ತಾಯ

ಸಿಎಂ ಮಗನ ಮೇಲೆ ಯಾಕಿಲ್ಲ ಕೇಸ್‌

ಜತೆಗೆ ಡಿನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಲ್ಯಾಂಡ್ ಕನ್ವರ್ಷನ್ ಆದಾಗಲೂ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. 50- 50 ಹಂಚಿಕೆ ಕೇಳಿದಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಈ ಬೆಳವಣಿಗೆ ನಡೆದಾಗಲೆಲ್ಲಾ ಸಿದ್ದರಾಮಯ್ಯ ಡಿಸಿಎಂ ಅಥವಾ ಸಿಎಂ ಆಗಿದ್ದರು ಎಂಬುವುದು ನಿಮ್ಮ ಆರೋಪವೇ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ರಂಗನಾಥ್‌ ರೆಡ್ಡಿ ಮುಖ್ಯಮಂತ್ರಿಗಳು ತಮ್ಮ ಅಧಿಕಾರ ಬಳಸಿ ಇದೆಲ್ಲಾ ಮಾಡಿದ್ದಾರೆ. ಕೆಸರೆ ಗ್ರಾಮ 20 ವರ್ಷಗಳ ಹಿಂದೆ ಡಿಲಿಟ್ ಮಾಡಿದ್ದಾರೆ. ಬಳಿಕ‌ ದೇವನೂರು ಬಡಾವಣೆ ಆಗಿದೆ. 2021ರಲ್ಲಿ ಸಿಎಂ ಪುತ್ರ ಯತೀಂದ್ರ ಮುಡಾ ಸದಸ್ಯರಾಗಿದ್ದರು. ಪರಿಹಾರದ ನಿವೇಶನಗಳನ್ನು ನೀಡುವ ಕುರಿತಾದ ನಿರ್ಣಯಗಳನ್ನು ಕೈಗೊಳ್ಳುವ ಸಭೆಗಳಲ್ಲಿಯೂ ಯತೀಂದ್ರ ಇದ್ದರು. ಇದರ ಹಿಂದೆ ಅವರಿದ್ದಾರೆ ಎಂದಾಗ, ನ್ಯಾಯಮೂರ್ತಿಗಳು ಮತ್ತೆ ಸಿಎಂ ಬಿಟ್ಟು ಮಗನ ಮೇಲೆ ಯಾಕೆ ಕೇಸ್ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಅಸ್ತಿತ್ವದಲ್ಲಿಯೇ ಇಲ್ಲದ ಭೂಮಿಗೆ ಮುಡಾದಲ್ಲಿ ದಾಖಲೆಗಳಿವೆ. ಭೂಮಿಗೆ ಪರಿಹಾರವಾಗಿ ಮುಖ್ಯಮಂತ್ರಿಯವರ ಪತ್ನಿಗೆ 14 ನಿವೇಶನಗಳನ್ನು ನೀಡಲಾಗಿದೆ. ಮುಖ್ಯಮಂತ್ರಿಯವರ ಕಚೇರಿಯ ಪಾತ್ರ ವಿವಿಧ ಹಂತಗಳಲ್ಲಿ ಇದೆ ಎಂದು ವಾದಿಸಿದರು.

ರಂಗನಾಥರೆಡ್ಡಿಗೆ ರಾಜ್ಯಪಾಲರು ಒಂದುವರೆ ಗಂಟೆ ಸಮಯ ಕೊಟ್ರಾ

25.10.2021 ರಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಗೆ ಮನವಿ ಮಾಡಲಾಗಿದೆ. ಸಿಎಂ ಪುತ್ರ ಇದ್ದ ಮುಡಾ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ನಂತರ ಸಿಎಂ ಪತ್ನಿಗೆ 25.11.21 ರಲ್ಲಿ ಹಕ್ಕು ಬಿಡುಗಡೆ ಮಾಡಿದ್ದಾರೆ. ನಂತರ ಸಿಎಂ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥರೆಡ್ಡಿ ವಾದ ಮಂಡಿಸಿದ್ದರು. ಮುಂದುವರಿದು, ರಾಜ್ಯಪಾಲರು ನನ್ನನ್ನು ಕರೆದು ಒಂದುವರೆ ಗಂಟೆ ಮಾಹಿತಿ ಪಡೆದಿದ್ದಾರೆ. ನಾನು ಕೊಟ್ಟ ದಾಖಲೆ ಪರಿಶೀಲನೆಗೆ ಕರೆದಿದ್ದರು. ಕ್ಲಾರಿಫಿಕೇಷನ್ ಸಹ ತೆಗೆದುಕೊಂಡರು ಎಂದು ರಂಗನಾಥ್‌ರೆಡ್ಡಿ ಹೇಳಿದರು. ಈ ವೇಳೆ ಆಶ್ಚರ್ಯದೊಂದಿಗೆ ನ್ಯಾಯಮೂರ್ತಿಗಳು ರಾಜ್ಯಪಾಲರು ನಿಮಗೆ ಒಂದುವರೆ ಗಂಟೆ ಸಮಯ ಕೊಟ್ರಾ ಎಂದು ಕೇಳಿದರು.

ಒಳಸಂಚು ನಡೆಸಿದ್ದಾಗಿ ಆರೋಪ

ಜಮೀನಿನ ಎಲ್ಲ ಪ್ರಕ್ರಿಯೆಗಳು ಆಗುವಾಗ ಅರ್ಜಿದಾರರು ಅಧಿಕಾರದಲ್ಲಿದ್ದರು. ಉನ್ನತ ಹುದ್ದೆ ಅಲಂಕರಿಸಿದ್ದಾಗ ಅವರು ಪ್ರಭಾವ ಬೀರಿ ಈ ಕೆಲಸ ಆಗಿದೆ . 1998ರಿಂದ 2024 ವರೆಗೂ ಆಗಿರುವ ಬೆಳವಣಿಗೆಗಳಲ್ಲಿ ಇವರು ಹಿಂದೆ ಇದ್ದಾರೆ. ಒಳಸಂಚು ನಡೆಸಿ ಪಡೆದಿದ್ದಾರೆ ಎಂದು ರಂಗನಾಥ್‌ ರೆಡ್ಡಿ ವಾದಿಸಿದರು. ಯಾವುದೇ ಜಮೀನು ಕಳೆದುಕೊಳ್ಳದೇ ಸಿಎಂ ಪತ್ನಿ ಪರಿಹಾರ ಪಡೆದಿದ್ದಾರೆ ಎಂದು ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದಮಂಡನೆ ಅಂತ್ಯಗೊಳ್ಳಿಸಿದರು. ಕೊನೆಯಲ್ಲಿ ರಂಗನಾಥ ರೆಡ್ಡಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಎರಡು ಪ್ರಕರಣ ಬಾಕಿ ಇದೆ ಎಂದಾಗ, ನನ್ನ ಮುಂದೆ ಪ್ರಕರಣ ವಿಚಾರಣೆ ನಡೆಯುತ್ತಿದೆ. ಇಲ್ಲಿ ಇತ್ಯಾರ್ಥವಾಗದೇ ಬೇರೆ ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮನವಿ ತಿರಸ್ಕರಿಸಿದರು.

ತಾತ್ಕಾಲಿಕ ತಡೆಯಾಜ್ಞೆ ತೆಗೆಯುವಂತೆ ವಕೀಲ ರಂಗನಾಥ್‌ರೆಡ್ಡಿ ಮನವಿ ಮಾಡಿದಾಗ ನಾನು ಇಲ್ಲಿ ವಿಚಾರಣೆ ಮಾಡಬೇಕಾದರೆ ಹೇಗೆ ಕೆಳ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಆಗುತ್ತೆ. ಇಂತಹ ಸಬ್ ಮಿಷನ್ ಮಾಡಬೇಡಿ, ಅರ್ಜಿ ಇತ್ಯರ್ಥ ಮಾಡಬೇಕಿರುವುದು ಹೈಕೋರ್ಟ್.. ರಾಜ್ಯಪಾಲರ ತೀರ್ಮಾನ ಸರಿಯೋ -ತಪ್ಪೋ ಅನ್ನೋದು ತೀರ್ಮಾನ ಮಾಡಬೇಕಿದೆ. ಹೀಗಾಗಿ ಅಲ್ಲಿಯವರೆಗೂ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ಅಸಾಧ್ಯ ಎಂದು ಸೆ.2 ಸೋಮವಾರ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

CM Siddaramaiah: ಸಿದ್ದರಾಮಯ್ಯಗೆ ಮುಡಾ ಪರೀಕ್ಷೆ! ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ದೂರದಾರರಿಂದ ಒತ್ತಾಯ

CM Siddaramaiah: 2004 ರಲ್ಲಿ 3.24 ಲಕ್ಷ ರೂ. ಇದ್ದ ಜಮೀನಿನ ಮೌಲ್ಯ ಈಗ 55 ಕೋಟಿ ರೂ. ಇದೆ. ಹೀಗಾಗಿ ಅಕ್ರಮವೆಸಗಲು ಸಂಚು ನಡೆದಿದೆ. ಜನರ ಹಣವನ್ನು ಜನಸೇವಕನೇ ಲೂಟಿ‌ ಮಾಡುವ ಸಂಚು ನಡೆದಿದೆ ಎಂದು ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ವಾದ ಮಂಡಿಸಿದರು.

VISTARANEWS.COM


on

By

CM Siddaramaiah MUDA case Complainants demand probe by independent agency instead of govt
Koo

ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ (High Court) ಶನಿವಾರ (ಆ.31) ಸುದೀರ್ಘವಾಗಿ ಮುಂದುವರಿದಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿತು. ಮೊದಲಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಲಾ ಪಾಯಿಂಟ್‌ಗಳನ್ನು ಹಾಕಿ ತಮ್ಮ ವಾದ ಮಂಡಿಸಿದ್ದರು.

ಬಳಿಕ ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ವಾದ ಆರಂಭಿಸಿ, ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಬೇಕಿದ್ದು ಮನವಿ ಮಾಡಿದರು. 1992 ಲ್ಯಾಂಡ್ ಅಕ್ವಿಜೇಷನ್ ಪ್ರಕ್ರಿಯೆ ಶುರುವಾಗಿದೆ. ಅಂತಿಮ ನೋಟಿಫಿಕೇಷನ್ 1997ರಲ್ಲಿ ಮುಗಿದಿದೆ. ಲ್ಯಾಂಡ್ ಅಕ್ವಿಜೇಷನ್, ಪರಿಹಾರದ ಹಣ, ನಂತರದ‌ ಬೆಳವಣಿಗೆಗಳನ್ನು ಉಲ್ಲೇಖಿಸಿ ಮಣೀಂದರ್ ಸಿಂಗ್ ವಾದ ಶುರು ಮಾಡಿದರು. ಆಕ್ಷೇಪಾರ್ಹವಾದ 3.16 ಎಕರೆ ಭೂಮಿ ವರ್ಗಾವಣೆಯ ಕುರಿತು ವಿವರಣೆ ನೀಡಿದರು. 1997ರಲ್ಲಿ ಅಂತಿಮ ನೋಟಿಫಿಕೇಷನ್ ಆಗಿದ್ದು ವಶಕ್ಕೆ ಪಡೆಯಲಾಗಿದೆ.

1998ರಲ್ಲಿ ಈ ಭೂಮಿ ಮುಡಾ ವಶದಲ್ಲಿ ಇತ್ತು. ಇದು ರೆವಿನ್ಯೂ ರೆಕಾರ್ಡ್‌ನಲ್ಲಿ ಎಂಟ್ರಿ ಆಗಿದೆ. ಎಲ್ಲ ಪ್ರಕ್ರಿಯೆಗಳು ಕಾನೂನು ಬಾಹಿರವಾಗಿದೆ. ಇದೆಲ್ಲಾ ತನಿಖೆಯಿಂದ ಹೊರಬರಬೇಕಿದೆ. 2001-02 ರಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಲಾಗಿದೆ. ಸೈಟ್‌ಗಳನ್ನು ಮಾರಾಟ ಮಾಡಲಾಗಿದೆ. ಸ್ವಾಧೀನವಾದ ಜಮೀನಿನಲ್ಲಿ 2001, 2004 ನಡುವೆ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕ್ಯಾಬಿನೆಟ್ ನೋಟ್‌ನಲ್ಲಿ ರಿಟ್ ಅರ್ಜಿ ಎಂದು ಉಲ್ಲೇಖಿಸಲಾಗಿದೆ. ಸಿಎಂ ಪತ್ನಿಗೆ 14 ನಿವೇಶನ ಹಂಚಲು ಬೇರೆ ಕೇಸ್ ಗಳ ಹೈಕೋರ್ಟ್ ಆದೇಶ ಉಲ್ಲೇಖಿಸಿದ್ದಾರೆ. ಆದರೆ ರಿಟ್ ಅರ್ಜಿಗಳ ಸಂಪೂರ್ಣ ವಿವರಗಳೇ ಇದರಲ್ಲಿ ಇಲ್ಲ.

1998ರಲ್ಲಿ ಭೂಮಿ ಸ್ವಾಧೀನ ಬಳಿಕ ಮುಡಾ ಮಾಲೀಕತ್ವದಲ್ಲಿತ್ತು. ಭೂಸ್ವಾಧೀನವನ್ನು ಯಾರೂ ಪ್ರಶ್ನಿಸಿ ಕೋರ್ಟ್‌ಗೆ ಹೋಗಿಲ್ಲ. ಪರಿಹಾರವನ್ನೂ ನಿಗದಿಪಡಿಸಿ ಆದೇಶ ಮಾಡಲಾಗಿತ್ತು. ಇದಾದ ಮೇಲಿನ ಡಿನೋಟಿಫಿಕೇಷನ್ ಭೂಮಿ ಕಬಳಿಸಲು ಮಾಡಿದ ವಂಚನೆ ಯಾಗಿತ್ತು. ಆಗ ಆ ಜಮೀನಿನ ಮೌಲ್ಯ ಕೇವಲ 3 ಲಕ್ಷ 24 ಸಾವಿರ ಮೌಲ್ಯವಾಗಿತ್ತು ಎಂದು ಮಣೀಂದರ್ ಸಿಂಗ್ ವಾದಿಸಿದರು. ನಮ್ಮ ವಾದ ಈ ಮುಡಾ ಹಗರಣದ ಕುರಿತು ತನಿಖೆ ನಡೆಸಬೇಕು ಎಂಬುದಕಷ್ಟೇ. ಪ್ರಕರಣದ ಪ್ರೈಮಾಫಸಿಯನ್ನು ಪರಿಗಣಿಸಿ ತನಿಖೆಗೆ ಅವಕಾಶ ಕೊಡುವಂತೆ ಮನವಿ ಮಾಡಿದರು.

ರೆವಿನ್ಯು ಭೂಮಿ ಹೇಗಾಯಿತು?

ಈ ವೇಳೆ ಲಿಖಿತ ವಾದವನ್ನು ಮಂಡಿಸುತ್ತಿದ್ದೀರಾ ಎಂದು ಮಣೀಂದರ್ ಸಿಂಗ್‌ಗೆ ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು. ಅಭಿವೃದ್ಧಿಪಡಿಸಿದ ಭೂಮಿ, ರೆವಿನ್ಯು ಭೂಮಿ ಹೇಗಾಯಿತು?ಎಂದು ಜಡ್ಜ್‌ ಪ್ರಶ್ನಿಸಿದಾಗ, ಅದು ಮ್ಯಾಜಿಕ್.. ಹೇಗೆ ಆಯಿತು ಎಂಬುದು ತನಿಖೆಯಿಂದ ತಿಳಿಯಬೇಕು ಎಂದು ಮಣೀಂದರ್ ಸಿಂಗ್ ಉತ್ತರಿಸಿದರು. ಭೂಮಿಯ ಪ್ರಾಥಮಿಕ ಅಧಿಸೂಚನೆಯಾಗದೆ ಕೇಸ್‌ನ ತೀರ್ಪನ್ನು ಈ ಕೇಸ್‌ಗೆ ಬಳಸಲಾಗಿದೆ. ಸ್ವಾಧೀನವೇ ಆಗದೇ ಜಮೀನು ಬಳಸಿಕೊಳ್ಳುವುದಕ್ಕೂ, ಪ್ರಕ್ರಿಯೆ ಪಾಲಿಸಿ ಸ್ವಾಧೀನಕ್ಕೂ ವ್ಯತ್ಯಾಸವಿದೆ. ಅಲ್ಲಿ ಬಳಸಿದ ಮಾನದಂಡವನ್ನು ಈ ಕೇಸ್‌ಗೆ ಬಳಸಿಕೊಳ್ಳಲಾಗಿದೆ ಎಂದು ಮಣೀಂದರ್ ಸಿಂಗ್ ವಾದಿಸಿದ್ದರು.

ತನಿಖಾಧಿಕಾರಿ ಸಮರ್ಥವಾಗಿದ್ದರೆ ಕಂಡುಹಿಡಿಯಬಹುದು. ಕ್ಯಾಬಿನೆಟ್ ಇಂತಹ ಕೃತ್ಯಕ್ಕೆ ಸಮರ್ಥನೆ ನೀಡುತ್ತಿದೆ.
ತನಿಖೆ ನಡೆಯದಿದ್ದರೆ ಇದು ದೊಡ್ಡ ದುರಂತವಾಗಲಿದೆ. 2004 ರಲ್ಲಿ 3.24 ಲಕ್ಷ ರೂ. ಇದ್ದ ಜಮೀನಿನ ಮೌಲ್ಯ ಈಗ 55 ಕೋಟಿ ರೂ. ಇದೆ. ಹೀಗಾಗಿ ಅಕ್ರಮವೆಸಗಲು ಸಂಚು ನಡೆದಿದೆ. ಜನರ ಹಣವನ್ನು ಜನಸೇವಕನೇ ಲೂಟಿ‌ ಮಾಡುವ ಸಂಚು ನಡೆದಿದೆ ಎಂದು ಕಟುವಾಗಿ ವಾದ ಮಂಡಿಸಿದರು.

ಮುಲಾಯಂ ಸಿಂಗ್ ಪ್ರಕರಣದ ತೀರ್ಪು ಸೇರಿದಂತೆ ಹಲವು ತೀರ್ಪುಗಳ ಉಲ್ಲೇಖಿಸಿದ ಮಣೀಂದರ್ ಸಿಂಗ್ ವಾದ ಮಂಡನೆ ಮುಂದುವರಿಸಿದರು. ಸರ್ಕಾರ ಈಗಾಗಲೇ ಈ ಕೇಸ್ ಸಂಬಂಧ ಒಂದು ನಿಲುವು ತೆಗೆದುಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರದ ಅಡಿಯ ತನಿಖಾಧಿಕಾರಿಯಿಂದ ಈ ಕೇಸ್ ತನಿಖೆ ನಡೆಸುವುದು ಸಾಧ್ಯವೇ? ಸ್ವತಂತ್ರ ತನಿಖೆ ನಡೆಯಬೇಕಾದಷ್ಟು ಅಂಶಗಳು ಈ ಕೇಸಿನಲ್ಲಿವೆ. ಜನಸಾಮಾನ್ಯರೂ ಕೂಡಾ ಭೂಸ್ವಾಧೀನದಿಂದ ಬಿಡಿಸಿಕೊಳ್ಳಲು ಪರದಾಡುತ್ತಾರೆ. ಶಾಲೆ ಇದ್ದರೂ ಭೂಸ್ವಾಧೀನದಿಂದ ಬಿಡುಗಡೆ ಮಾಡುವುದಿಲ್ಲ. ಆದರೆ ಈ ಕೇಸಿನಲ್ಲಿ ಮೂಡಾ ಬಡಾವಣೆ ಅಭಿವೃದ್ದಿಯಾಗಿದ್ದರೂ ಸ್ವಾಧೀನದಿಂದ ಕೈಬಿಟ್ಟಿದ್ದಾರೆ. ಒಂದು ಬಾರಿ ಭೂಸ್ವಾಧೀನ ಅಂತಿಮಗೊಂಡಾಗ ಬದಲಿ ಜಮೀನಿಗೆ ಅವಕಾಶವಿಲ್ಲ. ಪರಿಹಾರದ ಹಣಕ್ಕೆ 9 ಪರ್ಸೆಂಟ್ ಬಡ್ಡಿ ಪಡೆಯಲು ಮಾತ್ರ ಅವಕಾಶವಿದೆ ಎಂದು ಇಂದೋರ್ ಡೆವಲಪ್ಮೆಂಟ್ ಕೇಸ್ ಉಲ್ಲೇಖಿಸಿ ಮಣೀಂದರ್ ಸಿಂಗ್ ಮಾತಿಗಿಳಿದರು.

ಬಳಿಕ ಮಣೀಂದರ್ ಸಿಂಗ್ ಮುಂದಿನ ವಾದ ಸೋಮವಾರ ಮಂಡಿಸುವುದಾಗಿ ಮನವಿ ಮಾಡಿದರು. ಹೀಗಾಗಿ ಮುಂದಿನ ವಿಚಾರಣೆಯನ್ನೂ ಹೈಕೋರ್ಟ್ ಮಧ್ಯಾಹ್ನ 2.30 ಕ್ಕೆ ಮುಂದೂಡಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

CM Siddaramaiah : ಮುಡಾ ಕೇಸ್‌; ಹೈಕೋರ್ಟ್‌ನಲ್ಲಿ ಸಿಎಂ ಭವಿಷ್ಯ ನಿರ್ಧಾರ! ಹೇಗಿತ್ತು ರಾಜ್ಯಪಾಲರ ಪರ ತುಷಾರ್ ಮೆಹ್ತಾ ವಾದ

CM Siddaramaiah :ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶನಿವಾರ ನಡೆದಿದೆ. ಆಗಸ್ಟ್ 29ರಂದು ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದರು. ಆ.31ರಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.

VISTARANEWS.COM


on

By

CM Siddaramaiah
Koo

ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ (High Court) ಶನಿವಾರ (ಆ.31) ಮುಂದುವರಿಯಿತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿತು. ರಾಜ್ಯಪಾಲರ ಪರ ಸುಮಾರು 10:30ಕ್ಕೆ ಶುರುವಾದ ತುಷಾರ್‌ ಮೆಹ್ತಾ ವಾದ ಸುದೀರ್ಘ ಎರಡ್ಮೂರು ಗಂಟೆಗಳ ಕಾಲ ನಡೆಯಿತು.

ಆಗಸ್ಟ್ 29ರಂದು ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆ 17 ಎ ಬಗ್ಗೆ ವಾದಿಸಿ, ಪೊಲೀಸ್ ಅಧಿಕಾರಿ ಅನುಮತಿ ಪಡೆಯದೇ ತನಿಖೆ ಮಾಡುವಂತಿಲ್ಲ. ಸಾರ್ವಜನಿಕ ಸೇವಕನ ಶಿಫಾರಸು, ನಿರ್ಧಾರಗಳ ಕುರಿತಾದ ತನಿಖೆ ಇರಬೇಕು. ಈ ಎರಡೂ ಅಂಶಗಳನ್ನು ರಾಜ್ಯಪಾಲರು ಪಾಲಿಸಿಲ್ಲ. 17 ಎ ಮಾನದಂಡ ಪಾಲನೆಯಾಗದಿದ್ದರೂ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅರ್ಜಿದಾರ ಅಬ್ರಾಹಂ 17 ಎ ಅಡಿ ಪೂರ್ವಾನುಮತಿ ಬೇಕಿಲ್ಲವೆಂದು ಹೇಳಿದ್ದಾರೆ. ಇವೆಲ್ಲ ಕೇವಲ ಪ್ರಕ್ರಿಯೆಗಳಷ್ಟೇ ಎಂದಿದ್ದಾರೆ. ಹೀಗಾಗಿ ರಾಜ್ಯಪಾಲರು ಹಾಗೂ ಅಬ್ರಹಾಂಗೆ ದಂಡ ವಿಧಿಸಿ ದೂರು ವಜಾಗೊಳಿಸಬೇಕು.

ರಾಜ್ಯಪಾಲರ ಮುಂದೆ ಒಂದು, ಕೋರ್ಟ್ ಮುಂದೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರ ಅನುಮತಿ ನೀಡಿಲ್ಲವೆಂದು ಕೋರ್ಟ್ ಭಾವಿಸಬೇಕು ಎಂದಿದ್ದರು. ಸ್ನೇಹಮಯಿ ಕೃಷ್ಣ, ರಾಜ್ಯಪಾಲರಿಗೆ ದೂರು ನೀಡಿದ ಬಗ್ಗೆ ರಾಜ್ಯಪಾಲರು ಉಲ್ಲೇಖಿಸಿಲ್ಲ. ತರಾತುರಿಯಲ್ಲಿ ವಿವೇಚನೆ ಬಳಸದೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. 10-15 ವರ್ಷ ಹಳೆಯ ಘಟನೆಗಳಿಗೆ ಈಗಿನ ಕಾನೂನು ಅನ್ವಯಿಸಲಾಗುತ್ತಿದೆ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಹೆಚ್ ಡಿ ಕುಮಾರಸ್ವಾಮಿ ಇವರುಗಳ ಆರೋಪಪಟ್ಟಿ ಸಿದ್ದವಾಗಿದ್ದರೂ ರಾಜ್ಯಪಾಲರು ಅನುಮತಿ ನೀಡುತ್ತಿಲ್ಲ‌. ರಾಜ್ಯಪಾಲರು ಕ್ಯಾಬಿನೆಟ್ ಸಲಹೆಯನ್ನೂ ಪಾಲಿಸಿಲ್ಲ, ರಾಜ್ಯಪಾಲರೂ ಸಹಜ ನ್ಯಾಯದ ಪ್ರಕ್ರಿಯೆ ಪಾಲಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಸಿಂಘ್ವಿ ವಾದ ಮಾಡಿದ್ದರು.

ನೋಟಿಫಿಕೇಷನ್‌ಗಾಗಿ ಸಿದ್ದರಾಮಯ್ಯ ಯಾವುದೇ ಪ್ರತಿಫಲ ಪಡೆದಿಲ್ಲ. ಜಮೀನಿಗೆ ಬದಲಿಯಾಗಿ ನಿವೇಶನ ಪಡೆದಿದ್ದಾರೆ. ಇದನ್ನು ದೊಡ್ಡ ಹಗರಣದಂತೆ ಬಿಂಬಿಸಲಾಗುತ್ತಿದೆ. ಯಾವ ಆಧಾರದ ಮೇಲೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ ತಿಳಿಯುತ್ತಿಲ್ಲ ಎಂದು ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದರು. ಇತ್ತ ಶನಿವಾರ ವಾದ ಮಂಡಿಸುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದ್ದರು. ಹೀಗಾಗಿ ಹೈಕೋರ್ಟ್ ಶನಿವಾರ ಬೆಳಗ್ಗೆ 10.30 ಕ್ಕೆ ವಿಚಾರಣೆ ಮುಂದೂಡಿತ್ತು.

ಶನಿವಾರ ನಡೆದ ವಿಚಾರಣೆಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರೆ, ಸ್ನೇಹಮಯಿ‌ಕೃಷ್ಣ ಪರ ಮಾಜಿ ಎಎಸ್‌ಜಿ ಮಣೀಂದರ್ ಸಿಂಗ್ ವಾದ ಮಂಡಿಸಿದ್ದರು. ಅಬ್ರಾಹಂ ಪರ ವಕೀಲ ಪ್ರಭುಲಿಂಗ ನಾವದಗಿ ಆಗಮಿಸಿದ್ದರು. ಸಿಎಂ ಸಿದ್ದರಾಮಯ್ಯರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಜರಿದ್ದರು. ಇನ್ನು ವಾದ-ಪ್ರತಿವಾದವನ್ನು ಆಲಿಸಲೆಂದು ಕೋರ್ಟ್ ಹಾಲ್‌ನಲ್ಲಿ ವಕೀಲರು ಕಿಕ್ಕಿರಿದು ಜಮಾಯಿಸಿದ್ದರು.

ಹೈ ವೋಲ್ಟೇಜ್‌ ಲೀಗಲ್‌ ಫೈಟ್‌ ಹೇಗಿತ್ತು?

ಮೊದಲಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲು ಮುಂದಾದರು. ಈ ವೇಳೆ ಹಿರಿಯ ವಕೀಲ ಫ್ರೊ ರವಿವರ್ಮ ಕುಮಾರ್ ಮೆಹ್ತಾ ಅವರಿಗೂ ಮುನ್ನ ವಾದಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್‌ ಮೆಹ್ತಾ ನನ್ನ ವಾದ ಆರು ಕಂಪಾರ್ಟ್‌ಮೆಂಟ್‌ಗಳಲ್ಲಿವೆ. ಮೊದಲನೆಯದಾಗಿ 17A ಹಾಗೂ 19 ನಡುವೆ ವ್ಯತ್ಯಾಸ ಇದೆ ಎಂಬುದನ್ನು ವಾದ ಮಾಡುತ್ತೇನೆ. ನ್ಯಾಯಮೂರ್ತಿಗಳಿಗೆ ಈ ಕೇಸಿನ ಎಲ್ಲಾ ಅಂಶಗಳೂ ತಿಳಿದಿವೆ. ನಾನು ರಾಜ್ಯಪಾಲರ ಪರ ನನ್ನ ವಾದ ಮಂಡಿಸುತ್ತಿದ್ದೇನೆ ಎಂದರು. ಆಗ ರವಿ ವರ್ಮ ಕುಮಾರ್ ಮಧ್ಯಪ್ರವೇಶಿಸಿ ರಾಜ್ಯಪಾಲರ ಆದೇಶದ ಒಂದು ಪ್ಯಾರಾ ಓದಲು ಮನವಿ ಮಾಡಿದರು.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಅಡಿಯಲ್ಲಿ ಅನುಮತಿ ನೀಡಲಾಗಿದೆ. ಆರೋಪಿತ ಘಟನೆ ನಡೆದಾಗ ಭಾರತೀಯ ನ್ಯಾಯ ಸಂಹಿತೆ ಜಾರಿಯಲ್ಲಿರಲಿಲ್ಲ. ಹೀಗಾಗಿ ರಾಜ್ಯಪಾಲರ ಅನುಮತಿಯೇ ಕಾನೂನುಬಾಹಿರವೆಂದು ವಾದ ಮಾಡಿದರು. ಐಪಿಸಿ ಅಡಿ ಅನುಮತಿ ನೀಡುತ್ತೇನೆಂದು ಹೇಳಬಹುದಿತ್ತು. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿಲ್ಲವೆಂಬುದಕ್ಕೆ ಇದು ಸಾಕ್ಷಿ ಎಂದು ರವಿವರ್ಮ ಕುಮಾರ್‌ ಚಾಟಿ ಬೀಸಿದರು. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಅವರ ಸಹೋದರನ ವಿರುದ್ಧ ಆರೋಪವಿದೆ. ಪತ್ನಿ ಹಾಗೂ ಮೈದುನನ ಲೋಪಗಳಿಗೆ ಸಿಎಂ ಜವಾಬ್ದಾರಿಯಾಗುತ್ತಾರೆಯೇ? ಎಂದು ಸಿಎಂ ಪರ ಹಿರಿಯ ವಕೀಲ ರವಿವರ್ಮಕುಮಾರ್ ವಾದ ಮಂಡಿಸಿದರು.

ಬಳಿಕ ವಾದ ಆರಂಭಿಸಿದ ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ಅಬ್ರಹಾಂ ಪ್ರಕರಣದಲ್ಲಿ ನೋಟಿಸ್‌ ನೀಡಲಾಗಿದೆ. ಸ್ನೇಹಮಯಿ ಕೃಷ್ಣ, ಪ್ರದೀಪ್‌ ಕುಮಾರ್‌ ಪ್ರಕರಣದಲ್ಲಿ ನೋಟಿಸ್‌ ನೀಡಿಲ್ಲ ಎಂದಿದ್ದಾರೆ. ರಾಜ್ಯಪಾಲರು ಕಾನೂನಿನ ಪ್ರಕಾರ ನೋಟಿಸ್‌ ನೀಡುವ ಅಗತ್ಯವೇ ಇಲ್ಲ,. ಪಿಸಿ ಕಾಯಿದೆ ಸೆಕ್ಷನ್‌ 17ಎ ಅಥವಾ 19 ಸಂದರ್ಭದಲ್ಲೂ ನೋಟಿಸ್‌ ನೀಡಬೇಕಿಲ್ಲ. ಯಾವ ಸೆಕ್ಷನ್‌ ಅಡಿ ಆರೋಪ ಪಟ್ಟಿ ಸಲ್ಲಿಸಬೇಕು ಎಂಬುದು ತನಿಖಾಧಿಕಾರಿಗೆ ಬಿಟ್ಟ ವಿಚಾರವಾಗಿದೆ. ಹೀಗಾಗಿ ಇಲ್ಲಿ ಬಿಎನ್‌ಎಸ್‌/ಐಪಿಸಿ ಉಲ್ಲೇಖಿಸಲಾಗಿದೆ ಎಂಬ ವಿಚಾರ ಬರುವುದಿಲ್ಲ.

ಕಳೆದ 26 ಜುಲೈನಲ್ಲಿ ನೊಟೀಸ್ ನೀಡಲಾಗಿದೆ. ದೂರುದಾರರಿಗೆ ಆರೋಪಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ ಎಂದು ವಾದಿಸಿದ್ದಾರೆ. ಮೂರನೇ ದೂರುದಾರಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದಾರೆ. ಉಳಿದ ಇಬ್ಬರು ದೂರುದಾರರಿಗೆ ಸಂಬಂಧಿಸಿದಂತೆ ಉಲ್ಲೇಖಿಸಿಲ್ಲ ಎಂದು ವಾದಿಸಿದ್ದಾರೆ. ಸಿಎಂ ಯಾವುದೇ ಶಿಫಾರಸ್ಸು ಮಾಡಿಲ್ಲ ಎಂದಿದ್ದಾರೆ. ಹೀಗಿರುವಾಗ ಪಿಸಿ ಕಾಯಿದೆ ಸೆಕ್ಷನ್‌ 17ಎ ಅಗತ್ಯವೇ ಇಲ್ಲ. ಹೀಗಿರುವಾಗ ನಮ್ಮ ವಾದ ಏತಕ್ಕಾಗಿ? ರಾಜ್ಯಪಾಲರ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಲ್ಲದೇ ಅರ್ಜಿದಾರರಿಗೂ ಕೊಡುತ್ತೇನೆ. ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ವಿವೇಚನೆ ಬಳಸಲಾಗಿದೆ ಎಂಬುದನ್ನು ಎಲ್ಲರು ತಿಳಿಯಬೇಕು ಮೆಹ್ತಾ ವಾದವನ್ನು ಮುಂದುವರಿಸಿದರು.

ಸೆ.19 ಅಡಿಯಲ್ಲಿಯೂ ನ್ಯಾಚುಲರ್ ಜಸ್ಟೀಸ್ ಬೇಕಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ. ತನಿಖಾ ಹಂತದಲ್ಲಿ ತನಿಖಾಧಿಕಾರಿ ಎಲ್ಲದರ ಪರಿಶೀಲನೆ ಮಾಡಬೇಕು. ರಾಜ್ಯಪಾಲರು ತನಿಖೆಗೆ ಮೊದಲೇ ಎಲ್ಲವನ್ನೂ ಹೇಳಬೇಕಿಲ್ಲ. ಸಿಎಂ ಪತ್ನಿಯ ಮೇಲಿನ ಕ್ರಿಮಿನಲ್ ಹೊಣೆಗಾರಿಕೆ ಪತಿ ಮೇಲೆ ವರ್ಗಾಯಿಸಬಾರದು. ಹೀಗೆಂದು ಸಿಎಂ ಪರ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ವಾದ ಮಾಡಿದ್ದಾರೆ. ಅವರ ಮಾತನ್ನು ಒಪ್ಪಿದರೆ 17ಎ ಅಡಿಯ ಅನುಮತಿಯೇ ಬೇಕಿಲ್ಲ ಎಂದು ಹೈಕೋರ್ಟ್‌ಗೆ ಲಿಖಿತ ಹೇಳಿಕೆಯನ್ನು ತುಷಾರ್ ಮೆಹ್ತಾ ಸಲ್ಲಿಸಿದ್ದರು. ರಾಜ್ಯಪಾಲರ ಕಡತವನ್ನು ತಮ್ಮ ಮಾಹಿತಿಗೆ ಸಲ್ಲಿಸುತ್ತಿದ್ದೇನೆ. ಇದರಲ್ಲಿ ಮುಚ್ಚಿಡುವಂತದ್ದೇನೂ ಇಲ್ಲ. 26 ಜುಲೈರಂದು ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದರು. ಜುಲೈ 27 ರಂದು ಸಿಎಂ ಮುಖ್ಯಕಾರ್ಯದರ್ಶಿಗೆ ಸೂಚಿಸಿದರು. ಅಡ್ವೊಕೆಟ್ ಜನರಲ್ ಅಭಿಪ್ರಾಯ ಪಡೆದು ಕ್ಯಾಬಿನೆಟ್ ಮುಂದಿಡುವಂತೆ ಸಿಎಂ ಸೂಚಿಸಿದ್ದರು ಎಂದು ಮೆಹ್ತಾ ವಾದಿಸಿದರು.

ಬಳಿಕ ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ಸಾಂವಿಧಾನಿಕ ಪೀಠಗಳು‌ ನೀಡಿರುವ ತೀರ್ಪುಗಳನ್ನು ಓದಿ ಮೆಹ್ತಾ ವಾದ ಮಂಡಿಸಿದ್ದರು. ರಾಜ್ಯಪಾಲರ ಕಡತ ಗಮನಿಸಿದರೆ ವಿವೇಚನೆ ಬಳಸಿರುವುದು ತಿಳಿಯುತ್ತದೆ. ರಾಜ್ಯಪಾಲರು ಎಲ್ಲವನ್ನು ಸಮಗ್ರವಾಗಿ ವಿವರಣೆ ನೀಡಿದ್ದಾರೆ. ಆಗಸ್ಟ್ 14ರಂದು ಎಲ್ಲಾ ಕಡತಗಳನ್ನು ಓದಿ ನೋಟ್ಸ್ ಮಾಡಿದ್ದಾರೆ. ಕ್ಯಾಬಿನೆಟ್ ಸಲಹೆಯನ್ನು ಪರಿಗಣಿಸಿ ವಿವರವಾದ ಪಟ್ಟಿ ತಯಾರಿಸಿದ್ದಾರೆ. ದೂರಿನ ವಿವರ, ಕ್ಯಾಬಿನೆಟ್ ಸಲಹೆ, ತಮ್ಮ ಅಭಿಪ್ರಾಯ ಎಲ್ಲವನ್ನೂ ದಾಖಲಿಸಿದ್ದಾರೆ. ರಾಜ್ಯಪಾಲರು ಎಲ್ಲವನ್ನೂ ಪರಿಶೀಲಿಸಿ ಅಂತಿಮವಾಗಿ ಆದೇಶಿಸಿದ್ದಾರೆ. ರಾಜ್ಯಪಾಲರು ಎಲ್ಲವನ್ನೂ ಅಂತಿಮವಾಗಿ ನಿರ್ಧರಿಸಬೇಕಿಲ್ಲ. ಈ ಕೇಸ್ ಕಾಗ್ನಿಜೆನ್ಸಿ ಅಪರಾಧವೋ ಅಲ್ಲವೋ ತೀರ್ಮಾನಿಸಬೇಕಿಲ್ಲ ಎಂದು ಶ್ರೀರೂಪಾ ಪ್ರಕರಣವನ್ನು ಉಲ್ಲೇಖಿಸಿ ತುಷಾರ್ ಮೆಹ್ತಾ ವಾದ ಮಾಡಿದರು. ಯಾವುದೇ ಆಡಳಿತಾತ್ಮಕ ಆದೇಶ ವಿವೇಚನೆ ಬಳಸಲೇಬೇಕು. ಇದಕ್ಕೆ ಯಾವುದೇ ತೀರ್ಪುಗಳ ಸಮರ್ಥನೆಯೇ ಬೇಕಿಲ್ಲ. ಎಷ್ಟರ ಮಟ್ಟಿನ ವಿವೇಚನೆ ಬಳಸಬೇಕೆಂಬುದು ಆ ಪ್ರಕರಣ ಆಧರಿಸುತ್ತದೆ. 2013ರ ಲಲಿತ ಕುಮಾರಿ vsಉತ್ತರ ಪ್ರದೇಶ ಸರ್ಕಾರದ ಸುಪ್ರೀಂ ಕೋರ್ಟ್‌ನ ರಾಜೇಶ್ ಅಗರ್ ವಾಲ್ ತೀರ್ಪು ಅನ್ನು ಉಲ್ಲೇಖಿಸಿದರು.

ಸಿಆರ್‌ಪಿಸಿ 154 ರಲ್ಲಿ ಹೇಗೆ ಎಫ್‌ಐಆರ್ ದಾಖಲು ಮಾಡಲಾಗುತ್ತದೆ. ಭ್ರಷ್ಟಾಚಾರ ತಡೆ ಕಾಯ್ದೆ 17 ಎ ಅಡಿಯ ವ್ಯಾಪ್ತಿ ಪರಿಗಣಿಸಬೇಕು. ಪೊಲೀಸ್ ಅಧಿಕಾರಿ ತನಿಖೆಗೂ ಮೊದಲು ಅನುಮತಿ ಪಡೆಯಬೇಕು. ಲಲಿತಾಕುಮಾರ್ ಪ್ರಕರಣದ ತೀರ್ಪನ್ನು ಹೈಕೋರ್ಟ್ ಪರಿಗಣಿಸಬೇಕು. ಯಾವುದೇ ಮಾಹಿತಿ ಸಂಜ್ಞೇಯವಾಗಿದ್ದರೆ ಸಾಕು ಎಫ್ಐಆರ್ ದಾಖಲಿಸಬೇಕು. ತಹಸೀಲ್ದಾರ್ ಆಗಿರಲಿ ರಾಜ್ಯಪಾಲರಾಗಲೀ ಕರ್ತವ್ಯ ಪಾಲಿಸಬೇಕು. ಕಾಗ್ನಿಜೆಬಲ್ ಅಪರಾಧದ ಮಾಹಿತಿ ನೀಡಿದರೆ ಎಫ್‌ಐಆರ್ ದಾಖಲಿಸಬೇಕು. ರಾಜ್ಯಪಾಲರು ವಿವರವಾದ ಸಾಕ್ಷ್ಯ ವಿಚಾರಣೆ ನಡೆಸುವಂತಿಲ್ಲ. ಸೆಕ್ಷನ್ 19 ಅಡಿಯೂ ರಾಜ್ಯಪಾಲರು ಅನುಮತಿ ನೀಡುತ್ತಿಲ್ಲ. 17 ಎ ಅಡಿಯಷ್ಟೇ ಅನುಮತಿ ನೀಡುತ್ತಿದ್ದಾರೆ. ಇದು ಇನ್ವೆಸ್ಟಿಗೇಷನ್‌ಗೆ ಮಾತ್ರ ನೀಡಿರುವ ಅನುಮತಿ ಎಂದಷ್ಟೇ ಪರಿಗಣಿಸಬೇಕು. 17ಎ ಎಲ್ಲ ಪಬ್ಲಿಕ್ ಸರ್ವೆಂಟ್‌ಗೆ ಅನ್ವಯವಾಗುತ್ತದೆ. ಇದು ಲಲಿತಾ ಕುಮಾರಿ ಕೇಸ್‌ ಹಾಗೂ ಅಶೋಕ್ ಪ್ರಕರಣದಲ್ಲೂ ಇದನ್ನೂ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ಇನ್ನು 17ಎ ಅಡಿಯಲ್ಲಿ ಪೂರ್ವಾನುಮತಿ ಪಡೆಯುವ ಮುನ್ನ ನೊಟೀಸ್ ನೀಡಲು ಕೆಲ ಕಾರಣಗಳಿರುತ್ತದೆ. ನೋಟಿಸ್ ನೀಡಿದರೆ ಸಾಕ್ಷಿಗಳ ನಾಶವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸಿಆರ್‌ಪಿಸಿ 154 ಹಾಗೂ 17aನಲ್ಲಿ ಶೋಕಾಸ್ ನೊಟೀಸ್ ವಿಷಯ ಆಗಲ್ಲ. ಮೇಲ್ನೋಟಕ್ಕೆ ಅಪರಾಧವಾಗಬಹುದೇ ಇಲ್ಲವೇ ಎಂದಷ್ಟೇ ನೋಡಬೇಕು. 17 ಎ ಅಡಿ ಅನುಮತಿ ನೀಡುವ ಮುನ್ನ ಇಷ್ಟನ್ನ ನೋಡಬೇಕು ಎಂದು ಮೆಹ್ತಾ ವಾದಿಸಿದರು. ಈ ಮಧ್ಯೆ ಪ್ರವೇಶಿಸಿದ ನ್ಯಾಯಮೂರ್ತಿಗಳು 17 ಎ ಅಡಿ ನ್ಯಾಚುರಲ್ ಜಸ್ಟೀಸ್ ಪಾಲಿಸಬೇಕಾದರೆ ಎಫ್‌ಐಆರ್ ದಾಖಲಿಸುವ ಮುನ್ನವೂ ಆರೋಪಿಯ ಹೇಳಿಕೆ ದಾಖಲಿಸಬೇಕೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಮೆಹ್ತಾ 17ಎ ಮೊದಲು ಪ್ರಾಥಮಿಕ ತನಿಖೆಯೂ ಬೇಕಿಲ್ಲವೆಂಬುದೇ ನನ್ನ ವಾದ. ಎಲ್ಲದರ ವಿಚಾರಣೆ ನಡೆಸಿದರೆ ಸಾಕ್ಷ್ಯನಾಶವಾಗಬಹುದು. ಪೊಲೀಸರ ತನಿಖೆ ಮೇಲೆಯೂ ಇದರ ಪರಿಣಾಮವಾಗಬಹುದು ಎಂದು ರಾಜ್ಯಪಾಲರು ಬರೆಸಿರುವ ಆದೇಶವನ್ನು ಓದಿ ಹೇಳಿದರು. ನಾನು ಟಿ.ಜೆ.ಅಬ್ರಹಾಂರ ದಾಖಲೆಗಳನ್ನು ಗಮನಿಸಿದ್ದೇನೆ. ದೂರುದಾರರ ವಾದವನ್ನೂ ಖುದ್ದಾಗಿ ಆಲಿಸಿದ್ದೇನೆ. ಇದರ ಸಂಬಂಧ ಶೋಕಾಸ್ ನೋಟಿಸ್ ಅನ್ನು ಸಿಎಂಗೆ ನೀಡಿದ್ದಾರೆ. ಅದಾದ ನಂತರ 91 ಪುಟಗಳ ಕ್ಯಾಬಿನೆಟ್ ನಿರ್ಧಾರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಇತಿಹಾಸದಲ್ಲಿಯೇ ಇಷ್ಟು ಪುಟಗಳ ಕ್ಯಾಬಿನೆಟ್ ನಿರ್ಧಾರವನ್ನು ಯಾರೂ ತೆಗೆದುಕೊಂಡಿಲ್ಲ. ಇದರಲ್ಲಿ ಇನ್ನೂ ಒಂದು ಆಸಕ್ತಿಕರ ಅಂಶವಿದೆ.

ಅಬ್ರಹಾಂ ಮತ್ತು ಸರ್ಕಾರದ ದಾಖಲೆಗಳನ್ನು ರಾಜ್ಯಪಾಲರು ಗಮನಿಸಿದ್ದಾರೆ. ಕ್ಯಾಬಿನೆಟ್ ನಿರ್ಣಯ ಸೇರಿ ಎಲ್ಲ ದಾಖಲೆಗಳನ್ನೂ ತಮ್ಮ ಮುಂದಿಡಲು ಸೂಚಿಸಿದ್ದಾರೆ. ಮೂರು ಕಲಂಗಳನ್ನು ರಚಿಸಿದ್ದಾರೆ. ಟಿ.ಜೆ. ಅಬ್ರಹಾಂ ದೂರು, ಕ್ಯಾಬಿನೆಟ್ ಉತ್ತರ, ಸಿಎಂ ಉತ್ತರ ಎಲ್ಲವನ್ನೂ ಪರಾಮರ್ಶೆ ಮಾಡಿದ್ದಾರೆ. ರಾಜ್ಯಪಾಲರು ಫೈಲ್ ನೋಡಿದ್ದೇನೆ ಎಂದು ಬರೆದಿದ್ದಾರೆ. ರಾಜ್ಯಪಾಲರ ಒರಿಜಿನಲ್ ಫೈಲ್‌ ಅನ್ನು ತುಷಾರ್ ಮೆಹ್ತಾ ಕೋರ್ಟ್‌ಗೆ ಸಲ್ಲಿಸಿ, ಬಳಿಕ ಪ್ರತಿಗಳನ್ನು ಸಿಎಂ ಪರ ವಕೀಲರಿಗೆ ನೀಡಿದರು. ಸದ್ಯಕ್ಕೆ ಕಡತವನ್ನು ನನ್ನ ಬಳಿಯೇ ಇಟ್ಟುಕೊಳ್ಳಬಹುದೇ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಕೇಳಿದಾಗ ದಯವಿಟ್ಟು ಇದರ ಪ್ರತಿಗಳನ್ನು ಬೇರೆ ಯಾರಿಗೂ ನೀಡದಂತೆ ಸಿಎಂ ಪರ ವಕೀಲರಿಗೆ ಹಾಗೂ ಹೈಕೋರ್ಟ್‌ಗೆ ತುಷಾರ್ ಮೆಹ್ತಾ ಮನವಿ ಮಾಡಿದರು.

ಪ್ರತಿ ಹಂತದಲ್ಲೂ ರಾಜ್ಯಪಾಲರ ನೋಟ್‌ ಸಿದ್ಧ

ಪ್ರತಿ ಹಂತದಲ್ಲೂ ರಾಜ್ಯಪಾಲರು ನೋಟ್ ಸಿದ್ಧಪಡಿಸಿದ್ದಾರೆ. ಅದಾದ ನಂತರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಸಚಿವ ಸಂಪುಟದ ಮಂತ್ರಿಗಳನ್ನು ಸಿಎಂ ಆಯ್ಕೆ ಮಾಡುತ್ತಾರೆ. ಹೀಗಾಗಿ ತಮ್ಮನ್ನು ಆಯ್ಕೆ ಮಾಡಿದ ಸಿಎಂ ವಿರುದ್ಧ ಕ್ಯಾಬಿನೆಟ್ ನಿರ್ಣಯ ಸಾಧ್ಯವಿಲ್ಲ. ಆದ್ದರಿಂದ ಇಂತಹ ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಒಪ್ಪಬೇಕಿಲ್ಲ ಎಂದು ಮೆಹ್ತಾ ವಾದ ಮಂಡಿಸಿದರು.

ಕ್ಯಾಬಿನೆಟ್ ಸೂಚನೆಯನ್ನೂ ಏಕೆ ಪಾಲಿಸಿಲ್ಲವೆಂಬುದನ್ನೂ ರಾಜ್ಯಪಾಲರು ಹೇಳಿದ್ದಾರೆ. ಮುಡಾ ಆರೋಪಗಳ ಬಗ್ಗೆಯೂ ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ. 40 -60 ಹಾಗೂ 50 -50 ಗೆ ನಿಯಮ ಬದಲಾಯಿಸಲಾಗಿದೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಮುಡಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಬಹಳ ಪ್ರತಿಷ್ಟಿತ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ. ಇಷ್ಟೆಲ್ಲಾ ಅಂಶಗಳಿದ್ದರೂ ಕ್ಯಾಬಿನೆಟ್ ತಾರತಮ್ಯಪೂರಿತ ನಿರ್ಣಯ ಕೈಗೊಂಡಿದೆ. ಹೀಗಾಗಿ ಸೂಚನೆ ಪಾಲಿಸದೇ ಸ್ವಂತ ವಿವೇಚನೆ ಬಳಸುತ್ತಿದ್ದೇನೆ ಎಂದು ರಾಜ್ಯಪಾಲರು ಸ್ಪಷ್ಟವಾಗಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಎಂ.ಪಿ.ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕೇಸ್‌ನ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದ್ದಾರೆ. ಅಧಿಕಾರದಲ್ಲಿರುವವರು ಕಾನೂನು ಉಲ್ಲಂಘಿಸಿ ಆರಾಮವಾಗಿರುತ್ತಾರೆ ಎಂದು ಮೆಹ್ತಾ ವಾದಿಸಿದರು.

ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ 17 ಎ ಅಡಿ ಅನುಮತಿಯಿಲ್ಲದೇ ಪೊಲೀಸರು ತನಿಖೆ ನಡೆಸುವಂತಿಲ್ಲವೆಂದಿದೆ. ಆದರೆ ಪೊಲೀಸರೇ ಅನುಮತಿ ಪಡೆಯಬೇಕೆಂದು ಉಲ್ಲೇಖವಾಗಿಲ್ಲ. ಯಾರು ಬೇಕಾದರೂ ಸಕ್ಷಮ ಪ್ರಾಧಿಕಾರಿಯ ಅನುಮತಿ ಪಡೆಯಬಹುದು. ಇದನ್ನೇ ನಾನು ನನ್ನ ಹಿಂದಿನ ತೀರ್ಪಿನಲ್ಲಿ ಹೇಳಿದ್ದೇನೆ ಎಂದರು.

ಮುಖ್ಯ ಕಾರ್ಯದರ್ಶಿ ವಾಸ್ತವಿಕ ಅಂಶಗಳನ್ನು ಪರಿಶೀಲಿಸಿ, ಅಡ್ವೊಕೇಟ್‌ ಜನರಲ್‌ ಕಚೇರಿಗೆ ಕಳುಹಿಸಿದ್ದಾರೆ. ನಂತರ ಕ್ಯಾಬಿನೆಟ್‌ಗೆ ಕಳುಹಿಸಿದ್ದಾರೆ. ಅಡ್ವೊಕೇಟ್‌ ಜನರಲ್‌ ಅವರ ದಾಖಲೆಯನ್ನು ಕ್ಯಾಬಿನೆಟ್ ಕಾಪಿ ಮಾಡಿದೆ. ಸಚಿವ ಸಂಪುಟದ ಸಲಹೆ , 90 ಪುಟಗಳು ಹಾಗೂ ಅಡ್ವೋಕೇಟ್ ಜನರಲ್ ಸಲಹೆ ಹಾಗೂ ಸಿಎಂ ಉತ್ತರವನ್ನು ಕಾಮ, ಫುಲ್ ಸ್ಟಾಫ್ ಸಮೇತ ಎಲ್ಲವನ್ನು ಕಾಫಿ ಫೇಸ್ಟ್ ಮಾಡಿ ಕಳಿಸಿದ್ದಾರೆ.

ಮುಡಾ ಕೇಸ್‌ನಲ್ಲಿ ಹಲವು ನಿಯಮ ಉಲ್ಲಂಘನೆ ಆಗಿವೆ. ಮುಡಾದಲ್ಲಿ ಸಿಎಂ ಪುತ್ರ ಸಹ ಇದ್ದಾರೆ . ಇದು ದಲಿತರೊಬ್ಬರಿಗೆ ಸೇರಿದ ಜಮೀನಾಗಿದ್ದು, ಬಳಿಕ ಇದನ್ನು ಸಿಎಂ ಸಂಬಂಧಿಕರು ಖರೀದಿ ಮಾಡಿ, ಸಿಎಂ ಪತ್ನಿಗೆ ಗಿಫ್ಟ್ ಕೊಡುತ್ತಾರೆ. ಸಿಎಂ ಮಗ ಮುಡಾ ಕಮಿಟಿಯಲ್ಲಿಇರುತ್ತಾರೆ. ಇದು ಹೊರ ಬಂದ ಬಳಿಕ ಕಮಿಟಿ ರಚನೆ ಮಾಡಿ, ಈ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ಜತೆಗೆ ಸುದೀರ್ಘ ವಿವರಣೆಯನ್ನು ಕೊಟ್ಟಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡುವ ಅಧಿಕಾರ ಇದೆ. ಆದರೆ ಸಿಎಂ ಈಗಲೂ ಖಾಸಗಿ ವ್ಯಕ್ತಿ ಪ್ರಾಸಿಕ್ಯೂಷನ್‌ಗೆ ಕೇಳುವ ಅಧಿಕಾರ ಇಲ್ಲ ಅಂತಿದ್ದಾರೆ ಎಂದು ಮೆಹ್ತಾ ಲಾ ಪಾಯಿಂಟ್‌ ಹಾಕಿದ್ದರು. ಕ್ಯಾಬಿನೆಟ್‌ನಲ್ಲಿ ಮಾಡಿದ ನಿರ್ಣಯ ನಾನ್ ಅಪ್ಲಿಕೇಶನ್ ಮೈಂಡ್ ಮಾಡಿದ್ದಾರೆ . ಅಡ್ವೋಕೇಟ್ ಜನರಲ್ ಸಿಎಸ್ ಅವರನ್ನು ಪರಿಗಣಿಸಿಲ್ಲ. ಬಳಿಕ ಸಿಎಂ ವೈಯುಕ್ತಿಕವಾಗಿ ಉತ್ತರ ಕೊಡುವಾಗ ಕಾಪಿ ಪೇಸ್ಟ್ ಮಾಡಿದ್ದಾರೆ. ಇದನ್ನು ಕ್ಯಾಬಿನೆಟ್ ಒಳಗೆ ಅಪ್ಲಿಕೇಶನ್ ಮೈಂಡ್ ಇಲ್ಲ ಅನ್ನೋದು ಸ್ಪಷ್ಟವಾಗುತ್ತೆ ಎಂದು ಮೆಹ್ತಾ ವಾದಿಸಿದರು.

ನಂಬೋದರಿ ಪ್ರಕರಣ ಪ್ರಸ್ತಾಪ ಮಾಡಿದ ಮೆಹ್ತಾ ಇದರಲ್ಲೂ ಎಫ್ಐಆರ್ ಹಾಗೂ ಚಾರ್ಜ್ ಶೀಟ್‌ಗೂ ಮೊದಲು ಪ್ರಾಸಿಕ್ಯೂಷನ್ ಕೊಡಬಹುದು ಎಂದಿದ್ದಾರೆ. ಮಹಿಂದರ್ ಸಿಂಗ್ ಗಿಲ್ ಕೇಸ್‌ನಲ್ಲಿ ಇದನ್ನೇ ಹೇಳಿದ್ದಾರೆ. ಎಲ್ಲ ಕಾರಣಗಳನ್ನು ಹೇಳಿಯೇ ಪ್ರಾಸಿಕ್ಯೂಷನ್ ಕೊಡಬೇಕು ಅಂತೇನಿಲ್ಲ. 6 ಪುಟಗಳ ಉತ್ತರ ಬರೆದಿದ್ದೇನೆ, ಅಪ್ಲಿಕೇಶನ್ ಮೈಂಡ್ ಇಟ್ಕೊಂಡು ಮಾಡಿರುವ ನಿರ್ಧಾರ ಇದು. ಆದರೆ ಅಪ್ಲಿಕೇಶನ್ ಮೈಂಡ್ ಉಪಯೋಗಿಸಿಲ್ಲ ಅನ್ನೋದು ತಪ್ಪು. ಇದು ನೇರವಾಗಿ ಕಾರ್ಯಾಂಗದ ಕೆಲಸವಾಗಿದೆ. ಆಡಳಿತಾತ್ಮಕ ನಿರ್ಧಾರ ಹೀಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೊಟ್ಟಿರುವುದು. ಸಹಜ ಕಾನೂನಿಗೆ ಅವಕಾಶ ಕೊಟ್ಟೆ ನಿರ್ಧಾರ ಮಾಡಿದ್ದೇವೆ ಎಂದು ಮೆಹ್ತಾ ವಾದಿಸಿದರು.

ಮೂವರು ಅರ್ಜಿ ಕೊಟ್ಟಿರುವುದು ನಿಜ. ಒಬ್ಬರು ಮೈಸೂರು, ಮತ್ತಿಬ್ಬರು ಬೆಂಗಳೂರು ಇರಬಹುದು. ಆದರೆ ಜಮೀನು ಹಾಗೂ ಆರೋಪಿ ಒಂದೇ, ಹೀಗಾಗಿ ನಾನೇಕೆ ಮೂರು ಅರ್ಜಿಗಳ ಮೇಲೆ ಶೋಕಾಸ್ ನೋಟೀಸ್ ಕೊಡಬೇಕು. ಒಂದೇ ರೀತಿಯ ದಾಖಲೆ ಇದ್ದಾಗ ಮೂವರ ಅರ್ಜಿ ಮೇಲೆ ಶೋಕಾಸ್ ಕೊಡುವ ಅಗತ್ಯವಿಲ್ಲ. ಮೂರು ಅರ್ಜಿಗಳನ್ನು ಒಂದೇ ಎಂದು ಪರಿಗಣಿಸಿ ತೀರ್ಮಾನ ಮಾಡಿದ್ದಾರೆ. ಹೋಲಿಕೆಯನ್ನು ಗಮನಿಸಿ ರಾಜ್ಯಪಾಲರು ಪೂರ್ವಾನುಮತಿ ನೀಡಿದ್ದಾರೆ. ಹೀಗಾಗಿ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್‌ ಕುಮಾರ್‌ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಬೇಕಿಲ್ಲ.

ಅನುಮತಿ ನೀಡುವ ಮುನ್ನ ಆರೋಪಿಯ ಹೇಳಿಕೆ ದಾಖಲಿಸಬೇಕಿಲ್ಲ ಎಂದು ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳನ್ನು ತುಷಾರ್ ಮೆಹ್ತಾ ಉಲ್ಲೇಖಿಸಿದರು. ರಾಜೇಶ್ ಅಗರ್ ವಾಲ್ ಕೇಸ್ , ಆರ್‌ಬಿಐಗೆ ವಂಚನೆ ಪ್ರಕರಣ ಪ್ರಸ್ತಾಪಿಸಿದರು. ಆಡಳಿತಾತ್ಮಕ ನಿರ್ಧಾರಕ್ಕೆ ಯಾವುದೇ ವಿಚಾರಣೆ ಅವಶ್ಯಕತೆ ಇಲ್ಲ. ತನಿಖೆ ಅವಶ್ಯವಿದೆಯೇ ಇಲ್ಲವೇ ಎಂಬುದನ್ನಷ್ಟೇ 17ಎ ಅಡಿ ತೀರ್ಮಾನಿಸಬೇಕು. ಎಲ್ಲವನ್ನೂ ಈ ಹಂತದಲ್ಲಿಯೇ ವಿವರಿಸಿದರೆ ಸಾಕ್ಷ್ಯ ನಾಶವಾಗಬಹುದು ಎಂದು ಮೆಹ್ತಾ ಸುಬ್ರಹ್ಮಣ್ಯಸ್ವಾಮಿ ತೀರ್ಪು ಉಲ್ಲೇಖಿಸಿದರು.

ಸಂಪುಟ ಸಭೆ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕ್ಯಾಬಿನೆಟ್ ನಡೆದಿದೆ. ಅದು ಸಿಎಂ ಸಿದ್ದರಾಮಯ್ಯ ಅವರೇ ಸಂಪುಟ ಸಭೆ ನಡೆಸಲು ನಾಮನಿರ್ದೇಶನ ಮಾಡಿದ್ದಾರೆ. ಆ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಬೇಕಿಲ್ಲ. ಏಕೆಂದರೆ ಅಲ್ಲಿ ಪಕ್ಷಪಾತದ ನಿಲುವು ಇರುತ್ತದೆ. ಶಂಶೇರ್ ಸಿಂಗ್ ಹಾಗೂ ಎಂ .ಪಿ.ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕೇಸ್ ಉಲ್ಲೇಖಿಸಿ ರಾಜ್ಯಪಾಲರು ಕೆಲ ಅಪರೂಪದ ಸಂದರ್ಭದಲ್ಲಿ ಸ್ವತಂತ್ರ ವಿವೇಚನೆ ಬಳಸಬಹುದು.

ರಾಜ್ಯಪಾಲರು ಸಾಂವಿಧಾನಿಕ ಹುದ್ದೆ ನಿರ್ವಹಣೆಯಲ್ಲಿದ್ದಾರೆ. ಅವರನ್ನು ಫ್ರೆಂಡ್ಲಿ ಗವರ್ನರ್ ಎಂದು ಉಲ್ಲೇಖಿಸುತ್ತಾರೆ. ನಾನು ಸಿಎಂ ಅವರನ್ನು ಗೌರವಾನ್ವಿತ ಸಿಎಂ ಎಂದೇ ಕರೆಯುತ್ತಿದ್ದೇನೆ. ಹೀಗಾಗಿ ವಾದ ಮಂಡನೆ ಮಾಡುವಾಗ ನಮ್ಮ ಪದ ಬಳಕೆ ಸರಿಯಿರಬೇಕೆಂದು ಸಿಂಘ್ವಿ ವಾದ ಮಂಡನೆ ಮಾಡುವಾಗ ಅಬ್ರಹಾಂ ಹಾಗೂ ರಾಜ್ಯಪಾಲರ ಬಗ್ಗೆ ಮಾತನಾಡಿದಕ್ಕೆ ಮೆಹ್ತಾ ಕೌಂಟರ್ ಕೊಟ್ಟರು. ನಾನು ಸಾಂವಿಧಾನಿಕ ಕ್ರಿಯೆಗಳನ್ನು ಮಾತ್ರ ನಿರ್ವಹಿಸಿದ್ದೇನೆ. ನಾನು 17a ಅನುಮತಿ ನೀಡಿದ್ದೇನೆ. ಫಲಾನುಭವಿ ಮಾತ್ರ ಅಪರಾಧಿಯಾಗುತ್ತಾನೆ. ತನಿಖೆಯಾಗಲಿ ಬಿಡಿ ಯಾಕೆ ಚಿಂತಿಸುತ್ತೀರಿ. ಮೂಡಾದಲ್ಲಿ ಭಾರಿ ಪ್ರಮಾಣದ ಹಗರಣ ನಡೆದಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಮ್ಮ ವಾದ ಮುಕ್ತಾಯ ಗೊಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Dina Bhavishya
ಭವಿಷ್ಯ36 seconds ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

Rishab Shetty And NTR
ಸಿನಿಮಾ8 hours ago

Rishab Shetty And NTR: ತಾಯಿ ಜತೆಗೆ ಉಡುಪಿ ಶ್ರೀಕೃಷ್ಣನಿಗೆ ನಮಿಸಿದ ತೆಲುಗು ನಟ ಜ್ಯೂ.ಎನ್‌ಟಿಆರ್‌; ಜತೆಯಾದ ಡಿವೈನ್‌ ಸ್ಟಾರ್‌ ರಿಷಬ್‌

UPSC
ಪ್ರಮುಖ ಸುದ್ದಿ9 hours ago

CET/NEET: ಮೊದಲ ಬಾರಿಗೆ ಆನ್ ಲೈನ್ ಪಾವತಿ ಜಾರಿ, ಒಳ್ಳೆಯ ಪ್ರತಿಕ್ರಿಯೆ

TA Saravana elected as new chairman of government assurances committee
ಕರ್ನಾಟಕ9 hours ago

TA Sharavana : ಸರ್ಕಾರಿ ಭರವಸೆಗಳ ಸಮಿತಿಯ ನೂತನ ಅಧ್ಯಕ್ಷರಾಗಿ ಟಿ.ಎ ಶರವಣ ಆಯ್ಕೆ

Hair Care Habits
ಆರೋಗ್ಯ9 hours ago

Amla For Your Hair: ತಲೆಗೂದಲ ಆರೈಕೆಯಲ್ಲಿ ನೆಲ್ಲಿಕಾಯಿಯ ಬಳಕೆ ಹೇಗೆ?

Sakhi Mahila Sangathan celebrates Raksha Sutra Diwas
ಬೆಂಗಳೂರು9 hours ago

Bengaluru News : ರಕ್ಷಾ ಸೂತ್ರ ದಿನ ಆಚರಿಸಿದ ಸಖಿ ಮಹಿಳಾ ಸಂಘಟನೆ

Sonal Monteiro
ಸಿನಿಮಾ10 hours ago

Sonal Monteiro: ಚರ್ಚ್ ವೆಡ್ಡಿಂಗ್‌ಗೂ ಮುನ್ನ ಸೋನಲ್ ಮನೆಯಲ್ಲಿ Roce Celebration

karnataka weather Forecast
ಮಳೆ10 hours ago

Karnataka Weather : ಕಲಬುರಗಿಯಲ್ಲಿ ಮಳೆ ಅಬ್ಬರ; ರಾಯಚೂರಿನಲ್ಲಿ ಕೊಚ್ಚಿ ಹೋದ ಸೇತುವೆ

Renuka Swamy murder case Pavithra Gowdas bail plea rejected
ಸ್ಯಾಂಡಲ್ ವುಡ್11 hours ago

Pavitra Gowda : ರೇಣುಕಾ ಸ್ವಾಮಿ ಕೊಲೆ ಕೇಸ್‌; ಪವಿತ್ರಾಗೌಡ ಸಲ್ಲಿಸಿದ ಜಾಮೀನು ಅರ್ಜಿ ವಜಾ

D.K. Shivakumar
ಬೆಂಗಳೂರು11 hours ago

D.K. Shivakumar: ರಾಜ್ಯಪಾಲರ ಕಚೇರಿ ರಾಜಕೀಯ ಪಕ್ಷದ ಕಚೇರಿ ಆಗಬಾರದು: ಡಿಸಿಎಂ ಡಿ.ಕೆ. ಶಿವಕುಮಾರ್

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್14 hours ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 days ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 week ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌