ಮಾದರಿ ಪರಿಸರ ಸ್ನೇಹಿ ಬಡಾವಣೆಯತ್ತ ಹೆಜ್ಜೆಯಿಟ್ಟ ಅನಂತ ನಗರ: ವಿಜಯೇಂದ್ರ ಪ್ರಭು - Vistara News

ಬೆಂಗಳೂರು

ಮಾದರಿ ಪರಿಸರ ಸ್ನೇಹಿ ಬಡಾವಣೆಯತ್ತ ಹೆಜ್ಜೆಯಿಟ್ಟ ಅನಂತ ನಗರ: ವಿಜಯೇಂದ್ರ ಪ್ರಭು

ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಅನಂತ ನಗರದಲ್ಲಿ ನಡೆದ ಹಸಿರು ಮನೆ ಸಂಪರ್ಕ ಅಭಿಯಾನದ ಸಮಾರೋಪ ‘ಹರಿತ್ ಮಿಲನ್’ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯೇಂದ್ರ ಪ್ರಭು ಮಾತನಾಡಿದ್ದಾರೆ.

VISTARANEWS.COM


on

Anant Nagar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಮಾಜದ ಸುಸ್ಥಿರ ಅಭಿವೃದ್ಧಿಗೆ ಪರಿಸರ ಪೋಷಣೆ ಅತ್ಯಂತ ಅವಶ್ಯಕ. ನಮ್ಮ ದಿನ ನಿತ್ಯದ ಜೀವನದಲ್ಲಿ ಪರಿಸರ ಸ್ನೇಹಿ ಅಂಶಗಳನ್ನು ಅಳವಡಿಸಿಕೊಂಡು ಪರಿಸರಕ್ಕೆ ಪೂರಕವಾಗಿ ಬದುಕಬಹುದು. ನಮ್ಮ ಅನಂತ ನಗರ ಬಡಾವಣೆಯ ಪರಿಸರ ಸ್ನೇಹಿ ಅಂಶಗಳ ಬಗ್ಗೆ ಮನೆ ಸಂಪರ್ಕ ಮಾಡಿ ಮೌಲ್ಯ ಮಾಪನ ಮಾಡಿರುವುದು ಸಂತಸದ ವಿಷಯ ಎಂದು ಸಾಮಾಜಿಕ ಕಾರ್ಯಕರ್ತ ವಿಜಯೇಂದ್ರ ಪ್ರಭು ಹೇಳಿದರು.

ಎಲೆಕ್ಟ್ರಾನಿಕ್ ಸಿಟಿ ಸಮೀಪದ ಅನಂತ ನಗರದ ವಿದ್ಯಾನಿಕೇತನ ಶಾಲೆಯಲ್ಲಿ ಯೂತ್ ಫಾರ್ ಸೇವಾ, ಪರ್ಯಾವರಣ ಸಂರಕ್ಷಣಾ ಗತಿವಿಧಿ ಮತ್ತು ಐಎಫ್‌ಐಎಮ್ ಕಾಲೇಜಿನ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ ‘ಹಸಿರು ಮನೆ ಸಂಪರ್ಕ ಅಭಿಯಾನದ ಸಮಾರೋಪ ‘ಹರಿತ್ ಮಿಲನ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪರ್ಯಾವರಣ ಸಂರಕ್ಷಣಾ ಗತಿವಿಧಿಯ ಹಸಿರು ಮನೆ ಪರಿಕಲ್ಪನೆ ಅಂಶಗಳಾದ ಜಲ ಸಂರಕ್ಷಣೆ, ಸಸ್ಯಗಳ ಸಂರಕ್ಷಣೆ ಸಂವರ್ಧನೆ, ತ್ಯಾಜ್ಯ ನಿರ್ವಹಣೆ, ಇಂಧನ ಸಂರಕ್ಷಣೆ, ಜೀವ ವೈವಿಧ್ಯತೆಯ ಸಂರಕ್ಷಣೆ ವಿಷಯಗಳ ಬಗ್ಗೆ ಐಎಫ್‌ಐಎಮ್ ಕಾಲೇಜಿನ ವಿದ್ಯಾರ್ಥಿಗಳು 150ಕ್ಕೂ ಅಧಿಕ ಮನೆ ಸಂಪರ್ಕ ಮಾಡಿ ಇಲ್ಲಿನ ಪರಿಸರ ಸ್ನೇಹಿ ಅಂಶಗಳ ಮೌಲ್ಯಾಂಕ ಸಂಗ್ರಹಿಸಿ ಅನಂತ ನಗರ ಒಂದು ಮಾದರಿ ಬಡಾವಣೆಯಾಗಲು ಪ್ರೇರೆಪಿಸುತ್ತಿರುವುದು ನಮಗೆ ಸಂತಸ ಉಂಟುಮಾಡಿದೆ ಎಂದು ಹೇಳಿದರು.

ಇದನ್ನೂ ಓದಿ | Raja Marga Column : ಬದುಕಿನ ಅಗ್ನಿ ಪರೀಕ್ಷೆಗಳೇ ನಮ್ಮನ್ನು ಸ್ಟ್ರಾಂಗ್‌ ಮಾಡೋ ಶಕ್ತಿಗಳು

ಪರ್ಯಾವರಣ ಸಂರಕ್ಷಣಾ ಗತಿವಿಧಿ ಚಂದಾಪುರ ಭಾಗ ಸಂಯೋಜಕರಾದ ಕೇಶವ ಮಾತನಾಡಿ, ಈ ಬಡಾವಣೆಯ ವಿದ್ಯಾನಿಕೇತನ ಶಾಲಾ ಮಕ್ಕಳಿಗೆ ಹಸಿರು ಮನೆ ಪರಿಕಲ್ಪನೆ ಜಾಗೃತಿ ಮೂಡಿಸಿ ಹಸಿರು ಶ್ರಮದಾನ, ಸ್ವಚ್ಛತಾ ಕಾರ್ಯ ಮಾಡಿದ್ದೇವೆ. ನಮ್ಮ ಪ್ರಾಂತ ಸಂಯೋಜಕರಾದ ವೆಂಕಟೇಶ ಸಂಗನಾಳ ಅವರು ಐಎಫ್‌ಐಎಮ್ ವಿದ್ಯಾರ್ಥಿಗಳಿಗೆ ಮನೆ ಸಂಪರ್ಕದ ತರಬೇತಿ ಮಾಡಿದ್ದಾರೆ. ಜತೆಗೆ ಬಡಾವಣೆ ಜನರ ಜೊತೆ ಮುಕ್ತ ಸಂವಾದ ಮಾಡಿ ಹಸಿರು ಸಂಪರ್ಕ ಅಭಿಯಾನ ಯಶಸ್ವಿ ಮಾಡಿದ್ದಾರೆ. ಇದೊಂದು ಪರಿಸರ ಸ್ನೇಹಿ ಬಡಾವಣೆ ಎಂದು ಹೇಳಲು ಸಂತಸವಾಗುತ್ತಿದೆ ಎಂದು ಹೇಳಿದರು. ಸಂತೋಷ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Art Exhibition : ಜುಲೈ 10ರವರೆಗೆ ಬೆಂಗಳೂರಿನಲ್ಲಿ ಯೂಸುಫ್, ಶಿಬು ಅರಕ್ಕಲ್ ಚಿತ್ರಗಳ ಪ್ರದರ್ಶನ

ಯೂಸುಫ್ ಅರಕ್ಕಲ್ ಮತ್ತು ಅವರ ಮಗ ಶಿಬು Art Exhibition: ಅವರು ಗಂಗಾ ಸರಣಿಯಲ್ಲಿ ಹಲವಾರು ಅಪರೂಪದ ಚಿತ್ರಕಲೆಗಳು ಹಾಗೂ ಛಾಯಾಚಿತ್ರಗಳ ಸಂಗ್ರಹವನ್ನು ಹೊಂದಿದ್ದಾರೆ. ಭಾರತದ ಜನಸಮುದಾಯದ ಆಧ್ಯಾತ್ಮಿಕ ಮೂಲವಾಗಿರುವ ಗಂಗಾನದಿಯ ಉದ್ದಕ್ಕೂ ಸಂಚರಿಸಿರುವ ಅವರು ಅಲ್ಲಿನ ತಾತ್ವಿಕ ಅನ್ವೇಷಣೆಗಳು ಮತ್ತು ವೈಯಕ್ತಿಕ ಸತ್ಯಗಳನ್ನು ತಮ್ಮ ಫೋಟೊಗ್ರಫಿಗಳು ಹಾಗೂ ಚಿತ್ರಕಲೆಗಳ ಮೂಲಕ ಸಂಗ್ರಹಿಸಿದ್ದಾರೆ.

VISTARANEWS.COM


on

Art exhibition
Koo

ಬೆಂಗಳೂರು: ಖ್ಯಾತ ಚಿತ್ರಕಲಾವಿದ ಯೂಸುಫ್​ ಆರಕ್ಕಲ್​ ಚಿತ್ರ ಕಲಾಕೃತಿಗಳು ಹಾಗೂ ಅವರ ಪುತ್ರ ಶಿಬು ಆರಕ್ಕಲ್ ಅವರ ವಿಶೇಷ ಛಾಯಾಚಿತ್ರಗಳ ಸರಣಿಯ ಪ್ರದರ್ಶನವನ್ನು (Art Exhibition) ಸಂದೀಪ್ -ಗೀತಾಂಜಲಿ ಮೈನಿ ಫೌಂಡಶನ್ ಆಯೋಜಿಸಿದೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ 7ನೇ ಅಡ್ಡರಸ್ತೆಯಲ್ಲಿರುವ ಫೌಂಡೇಶನ್ ಆವರಣದ ಮೆಜ್ಜಾನೈನ್ ಲೆವೆಲ್​ನ 38 ಮೈನಿ ಸದನ್ ನಲ್ಲಿ ಕಲಾಕೃತಿಗಳು ಹಾಗೂ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೂನ್​ 5ರಂದು ಆರಂಭಗೊಂಡಿರುವ ಈ ಪ್ರದರ್ಶನ ಜುಲೈ 10, 2024ರವರೆಗೆ ನಡೆಯಲಿದೆ.

ಯೂಸುಫ್ ಅರಕ್ಕಲ್ ಮತ್ತು ಅವರ ಮಗ ಶಿಬು ಅವರು ಗಂಗಾ ಸರಣಿಯಲ್ಲಿ ಹಲವಾರು ಅಪರೂಪದ ಚಿತ್ರಕಲೆಗಳು ಹಾಗೂ ಛಾಯಾಚಿತ್ರಗಳ ಸಂಗ್ರಹವನ್ನು ಹೊಂದಿದ್ದಾರೆ. ಭಾರತದ ಜನಸಮುದಾಯದ ಆಧ್ಯಾತ್ಮಿಕ ಮೂಲವಾಗಿರುವ ಗಂಗಾನದಿಯ ಉದ್ದಕ್ಕೂ ಸಂಚರಿಸಿರುವ ಅವರು ಅಲ್ಲಿನ ತಾತ್ವಿಕ ಅನ್ವೇಷಣೆಗಳು ಮತ್ತು ವೈಯಕ್ತಿಕ ಸತ್ಯಗಳನ್ನು ತಮ್ಮ ಫೋಟೊಗ್ರಫಿಗಳು ಹಾಗೂ ಚಿತ್ರಕಲೆಗಳ ಮೂಲಕ ಸಂಗ್ರಹಿಸಿದ್ದಾರೆ. ತಾವು ಸ್ವತಃ ಗಂಗಾ ನದಿಯ ಕುರಿತು ಅಕರ್ಷಿತರಾಗುವ ಜತೆಗೆ ನದಿಗಾಗಿಯೇ ಜೀವನ ಸಮರ್ಪಿಸಿದವರ ಬದುಕನ್ನೂ ಚಿತ್ರಿಸಿದ್ದಾರೆ. ಪ್ರಮುಖವಾಗಿ ನದಿಯಲ್ಲಿ ದೋಣಿ ಹಾಯಿಸುವ ಮಲ್ಲಾ ಎಂಬ ಅಂಬಿಗರ ಜೀವಕ್ಕೆ ಕಲಾತ್ಮಕ ಸ್ಪರ್ಶ ನೀಡಿದ್ದಾರೆ.ಈ ಚಿತ್ರಗಳು ಹಾಗೂ ಕಲಾಕೃತಿಗಳು ಗಂಗಾ ಸರಣಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಮಲ್ಲಾ ಎಂದು ಕರೆಯಲ್ಪಡುವ ಗಂಗಾನದಿಯ ಅಂಬಿಗರು, ಈ ಕಲಾ ಪ್ರದರ್ಶನದ ನಿರೂಪಣೆಯ ಅವಿಭಾಜ್ಯ ಭಾಗವಾಗಿದ್ದಾರೆ, ಇದನ್ನು ಶಿಬು ಅರಕ್ಕಲ್ ತನ್ನ ಕ್ಯಾಮೆರಾ ಲೆನ್ಸ್​ ಮೂಲಕ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ನೂರಾರು ವರ್ಷಗಳಿಂದ ಈ ಸಮುದಾಯವು ತಮ್ಮ ಕಾಯಕವನ್ನು ಪರಂಪರಾಗತವಾಗಿ ವರ್ಗಾಯಿಸಿಕೊಂಡು ಬಂದಿದ್ದಾರೆ. ತಂದೆಯಿದ ಮಗನಿಗೆ ಈ ಕಾಯಕವು ಸಾಗಿದೆ. ಪವಿತ್ರ ನದಿಯುದ್ದಕ್ಕೂ ಜನರನ್ನು ಒಂದು ದಡದಿಂದ ಮತ್ತೊಂಡು ದಡಕ್ಕೆ ಸಾಗಿಸಲು ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಈ ಜನರು ತಮ್ಮ ದೋಣಿಗಳಿಗೆ ಬಹುತೇಕ ಸಖ್ಯ ಹೊಂದಿರುತ್ತಾರೆ ಮತ್ತು ಮರದ ದೋಣಿಗಳ ನಡುವೆಯೇ ತಮ್ಮ ಜೀವನವನ್ನು ಕಳೆಯುತ್ತಾರೆ, ತಮ್ಮೆಲ್ಲ ಲೌಕಿಕ ಅಗತ್ಯಗಳನ್ನು ದೋಣಿಯಲ್ಲಿಯೇ ನಿರ್ವಹಿಸುತ್ತಾರೆ. ಈ ನಿಗೂಢ ನದಿಯ ನಿಜವಾದ ಉಸ್ತುವಾರಿ ತಾವು ಎಂದು ಹೆಮ್ಮೆಪಡುತ್ತಾರೆ. ಮಲ್ಲಾ ಪುರುಷರು ತಮ್ಮ ಕುಟುಂಬಗಳಿಂದ ಪ್ರತ್ಯೇಕಗೊಂಡಿರುತ್ತಾರೆ ಮತ್ತು ತಾವು ಸೇವೆ ಸಲ್ಲಿಸುವ ನದಿಯೊಂದಿಗೆ ಬಲವಾದ ಬಾಂಧವ್ಯ ಹೊಂದಿರುತ್ತಾರೆ. ಎಷ್ಟೆಂದರೇ ಅವರ ಹುಟ್ಟು ದೋಣಿಯಲ್ಲಿ ಮತ್ತು ಅಲ್ಲೇ ಅವರು ಕೊನೆಯುಸಿರೆಳೆಯುತ್ತಾರೆ.

ಇದನ್ನೂ ಓದಿ : Kannada New Movie: ಹೊಸ ಸಿನಿಮಾಗೆ ಕಥೆ ಬರೆಯಿರಿ: 1 ಲಕ್ಷ ರೂ. ಬಹುಮಾನ ಗೆಲ್ಲಿರಿ!

‘ಮಲ್ಲಾ’ ಶೀರ್ಷಿಕೆಯ ಛಾಯಾಚಿತ್ರ ಕಲಾಕೃತಿಗಳ ಸರಣಿಯು ಈ ದೋಣಿಯವರು ಗಂಗಾ ನದಿಯೊಂದಿ ಗೆ ಹೊಂದಿರುವ ನಂಟಿನಿಂದ ಸ್ಫೂರ್ತಿ ಪಡೆದಿದೆ. ಈ ಸರಣಿಯು ಅವರ ಜೀವನದ ಕಟು ವಾಸ್ತವ ಮತ್ತು ಅವರ ಜೀವನದ ತಿಳುವಳಿಕೆಗೆ ಕನ್ನಡಿಯಾಗಿದೆ. ಇದು ಎಂದಿಗೂ ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗದ ಸಂಗತಿಗಳನ್ನು ವ್ಯಾಖ್ಯಾನಿಸಲು ಪ್ರಯತ್ನಿಸುವುದಿಲ್ಲ. ಆದರೆ ಅವರ ಸ್ವಯಂ ಅನುಭವಗಳ ರಚನೆಯಾಗಿದೆ. ಈ ಸರಣಿಯ ಮೂಲಕ ಋಷಿಮುನಿಗಳು ಮತ್ತು ಪ್ರಾಚೀನ ನಂಬಿಕೆಯನ್ನೇ ಹೋಲುವ ಭೂಮಿ ಮತ್ತು ನೀರಿನೊಂದಿಗೆ ಈ ಸಮುದಾಯ ಹೊಂದಿರುವ ಆಳ ಸಂಬಂಧವನ್ನು ಸೆರೆಹಿಡಿಯಲಾಗಿದೆ.

ತಮ್ಮ ಪುತ್ರನ ಛಾಯಾಚಿತ್ರಗಳ ಜೊತೆಗೆ ಯೂಸುಫ್ ಅರಕ್ಕಲ್ ಅವರ ಅಪರೂಪದ ಕ್ಯಾನ್ವಾಸ್ ರಚನೆಗಳೂ ಪ್ರದರ್ಶನಗೊಳ್ಳಲಿವೆ. ಇದು ಅವರಿಬ್ಬರ ಕಲಾತ್ಮಕ ಪರಂಪರೆಯ ಸಂಯೋಗವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಮಾನವನ ಸ್ಥಿತಿಯನ್ನು ಪರಿಶೀಲಿಸುವ ಉತ್ಸಾಹದ ಮತ್ತು ವಿನ್ಯಾಸದ ವರ್ಣಚಿತ್ರಗಳಿಗೆ ಹೆಸರುವಾಸಿಯಾದ ಯೂಸುಫ್ ಅರಕ್ಕಲ್, ತಮ್ಮ ಮಗನ ಮನಸ್ಸಿನಲ್ಲಿ ಸೃಜನಶೀಲತೆಯನ್ನು ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು . ಛಾಯಾಗ್ರಹಣ ವಾಸ್ತವ ಮತ್ತು ಅಮೂರ್ತ ಕಲ್ಪನೆಯ ಶಿಬು ಅರಕ್ಕಲ್ ಅವರ ತೊಡಗಿಸಿಕೊಳ್ಳುವಿಕೆಯು ಅವರ ತಂದೆಯ ಅಭಿವ್ಯಕ್ತಿ ಕೃತಿಗೆ ಸಂಪೂರ್ಣ ವಿರುದ್ಧವಾಗಿದೆ, ಆದರೂ ಅವರ ಕಾವ್ಯಾತ್ಮಕ ಚಿತ್ರಣದಲ್ಲಿ ಹೋಲಿಕೆ ಇದೆ. .
ಯೂಸುಫ್ ಅರಕ್ಕಲ್ ಅವರ ಪ್ರಭಾವ ಮತ್ತು ಶಿಬು ಅರಕ್ಕಲ್ ಅವರ ಸ್ವಂತ ಕಲಾತ್ಮಕ ವಿಕಸನವನ್ನು ಪ್ರತಿಬಿಂಬಿಸುವುದಕ್ಕಾಗಿ ‘ಗಂಗಾ’ದಂತಹ ಪ್ರದರ್ಶನ ಆಯೋಜಿಸಲಾಗಿದೆ.

ಕಲಾವಿದರ ಕುರಿತು
ಯೂಸುಫ್ ಅರಕ್ಕಲ್ (1945-2016) ಒಬ್ಬ ಭಾರತೀಯ ಪ್ರಖ್ಯಾತ ಕಲಾವಿದ, ಅಭಿವ್ಯಕ್ತಿವಾದದ ಚಳವಳಿಗೆ ನೀಡಿದ ಅಮೋಘ ಕೊಡುಗೆಗಳಿಗಾಗಿಯೇ ಸ್ಮರಣೀಯರು. ಅವರ ಪ್ರೇರಣಾದಾಯ ಮತ್ತು ಶಕ್ತಿಯುತ ಕಲಾಕೃತಿಗಳು ಮಾನವ ಭಾವನೆಗಳ ಆಳವನ್ನು ಬಿಂಬಿಸುತ್ತದೆ. ಮಾನವ ಸ್ಥಿತಿಯ ಸಂಕೀರ್ಣತೆಗಳನ್ನು ತೀವ್ರತೆಯೊಂದಿಗೆ ಚಿತ್ರಿಸಿದ ಕಲಾವಿದರಾಗಿದ್ದಾರೆ.

ಶಿಬು ಅರಕ್ಕಲ್ ಪ್ರಪಂಚದಾದ್ಯಂತದ ಶ್ರೇಷ್ಠ ವಾಸ್ತುಶಿಲ್ಪದೊಂದಿಗೆ ವ್ಯವಹರಿಸುವಾಗ ಶಕ್ತಿಯಿಂದ ಬಲಕ್ಕೆ ಹೋಗಿದ್ದಾರೆ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಗಮನಕ್ಕೆ ಬಾರದ ಸಣ್ಣ ವಿಷಯಗಳಿಗೆ ಹೋಗಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ಬಹಳ ವಿಭಿನ್ನ ಮತ್ತು ಮೂಲ ಶೈಲಿಯನ್ನು ರಚಿಸಿದ್ದಾರೆ. ದಾರಿಯುದ್ದಕ್ಕೂ ತಮ್ಮ ಕಲೆಗೆ ನಿಷ್ಠರಾಗಿದ್ದ ಅವರು ಹಲವಾರು ನಿಷ್ಠಾವಂತ ಸಂಗ್ರಾಹಕರನ್ನು ಗಳಿಸಿದ್ದಲ್ಲದೆ, ಭಾರತ ಮತ್ತು ವಿದೇಶಗಳಲ್ಲಿ ಮನ್ನಣೆಯನ್ನೂ ಗಳಿಸಿದ್ದಾರೆ. ರೊಮೇನಿಯಾದ ಅರಾದ್ ಬಿನಾಲೆ 2005 ಮತ್ತು ಇಟಲಿಯ ‘ವೆಂಟಿಪೆರ್ಟ್ರೆಂಟಾ ’04’ನಲ್ಲಿ 2007 ರಲ್ಲಿ ಲಂಡನ್ನ ರಾಯಲ್ ಕಾಲೇಜ್ ಆಫ್ ಆರ್ಟ್ ಮತ್ತು 2004 ರಲ್ಲಿ ಲಕ್ನೋದ ನ್ಯಾಷನಲ್ ಎಕ್ಸಿಬಿಷನ್ ಆಫ್ ಆರ್ಟ್ನಲ್ಲಿ ಪ್ರದರ್ಶನ ನೀಡಿದ್ದಾರೆ.

Continue Reading

ಪ್ರಮುಖ ಸುದ್ದಿ

Prajwal Revanna Case: ಮಧ್ಯಂತರ ಜಾಮೀನು ಬೆನ್ನಲ್ಲೇ ಭವಾನಿ ರೇವಣ್ಣ‌ ಪ್ರತ್ಯಕ್ಷ; ಎಸ್ಐಟಿ ವಿಚಾರಣೆಗೆ ಹಾಜರು!

Prajwal Revanna Case: ಸಿಐಡಿಯಲ್ಲಿರುವ ಎಸ್ಐಟಿ ಕಚೇರಿಗೆ ವಕೀಲರ ಜತೆ ಭವಾನಿ ರೇವಣ್ಣ‌ ಆಗಮಿಸಿದ್ದಾರೆ. ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌ಗೆ ಸಂಬಂಧಿಸಿ ಕೆ.ಆರ್‌.ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣದಲ್ಲಿ ವಿಚಾರಣೆಗಾಗಿ ಭವಾನಿ ರೇವಣ್ಣ ಆಗಮಿಸಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ (Bhavani Revanna) ಅವರು ಕೆ.ಆರ್‌.ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣದಲ್ಲಿ ವಿಚಾರಣೆಗಾಗಿ ಎಚ್ಐಟಿ ಕಚೇರಿಗೆ ಹಾಜರಾಗಿದ್ದಾರೆ. ಪ್ರಕರಣದಲ್ಲಿ (Prajwal Revanna Case) ಬಂಧನ ಭೀತಿಯಲ್ಲಿದ್ದ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್‌ ಒಂದು ವಾರದ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ ಬೆನ್ನಲ್ಲೇ ಎಸ್‌ಐಟಿ ವಿಚಾರಣೆಗೆ ಭವಾನಿ ಹಾಜರಾಗಿರುವುದು ಕಂಡುಬಂದಿದೆ.

ಸಿಐಡಿಯಲ್ಲಿರುವ ಎಸ್ಐಟಿ ಕಚೇರಿಗೆ ವಕೀಲರ ಜತೆ ಭವಾನಿ ರೇವಣ್ಣ‌ ಆಗಮಿಸಿದ್ದಾರೆ. ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ್ದ ಹೈಕೋರ್ಟ್, ಇಂದು ಮಧ್ಯಾಹ್ನ 1 ಗಂಟೆಯೊಳಗೆ ಎಸ್‌ಐಟಿ (SIT) ಮುಂದೆ ಹಾಜರಾಗಬೇಕು ಎಂದು ಸೂಚನೆ ನೀಡಿತ್ತು. ಹೀಗಾಗಿ ಭವಾನಿ ರೇವಣ್ಣ ಪ್ರತ್ಯಕ್ಷವಾಗಿದ್ದಾರೆ.

ಒಂದು ವಾರ ಮಧ್ಯಂತರ ಜಾಮೀನು

ಕೆ.ಆರ್. ನಗರ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ಬೇಕಾಗಿದ್ದು, ತನಿಖೆಗೆ ಸಹಕರಿಸಿದೆ ತಲೆ ಮರೆಸಿಕೊಂಡಿರುವ ಭವಾನಿ ಅವರಿಗೆ ಮುಂದಿನ ಶುಕ್ರವಾರದವರೆಗೆ ಮಧ್ಯಂತರ ಜಾಮೀನು ನೀಡಿ ಕೋರ್ಟ್‌ ಆದೇಶ ನೀಡಿತ್ತು. ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ತನಿಖೆಗೆ ಹಾಜರಾಗಬೇಕು. ಒಂದು ಗಂಟೆಯಿಂದ ಐದು ಗಂಟೆಯವರೆಗೆ ತನಿಖೆ ನಡೆಸಬಹುದು. ಐದು ಗಂಟೆಯ ನಂತರ ಅವರನ್ನು ಎಸ್‌ಐಟಿ ಕಚೇರಿಯಲ್ಲಿ ಇಟ್ಟುಕೊಳ್ಳಬಾರದು ಎಂದು ಕೋರ್ಟ್‌ ಸೂಚನೆ ನೀಡಿತ್ತು.

ಭವಾನಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು 11 ಕಾರಣಗಳಿವೆ ಎಂದು ಭವಾನಿ ಪರ ಹಿರಿಯ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿದರು. ಈ ವಾದಗಳನ್ನು ಕೋರ್ಟ್‌ ಮಾನ್ಯ ಮಾಡಿತು. ಆದರೆ ಕಳೆದೆರಡು ಸಲದ ನೋಟೀಸ್‌ಗೆ ಭವಾನಿ ಹಾಜರಾಗದಿದ್ದುದಕ್ಕೆ ಬಂಧನ ವಾರೆಂಟ್‌ ಜಾರಿ ಮಾಡಲಾಗಿದೆ. ಸದ್ಯ ಆ ಆದೇಶವನ್ನು ಅಮಾನತಿನಲ್ಲಿ ಇಡಲಾಗಿದೆ. ಮುಂದಿನ ಶುಕ್ರವಾರದವರೆಗೂ ಮಧ್ಯಂತರ ಜಾಮೀನು ನೀಡಲಾಗಿದ್ದು, ಮುಂದಿನ ಶುಕ್ರವಾರಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಭವಾನಿ ಅವರಿಗೆ ಕೋರ್ಟ್‌ ಕೆಲವು ಸೂಚನೆಗಳನ್ನು ನೀಡಿದೆ. ಅದರಂತೆ ಅವರು ನಡೆದುಕೊಳ್ಳಬೇಕಿದೆ. ಅವುಗಳು ಹೀಗಿವೆ:
1) ಭವಾನಿ ಅವರು ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗಬೇಕು.
2) ವಿಚಾರಣೆಯ ನಂತರ ಐದು ಗಂಟೆಯ ಬಳಿಕ ಅವರನ್ನು ಇಟ್ಟುಕೊಳ್ಳಬಾರದು.
3) ಕೆ.ಆರ್‌ ನಗರ ತಾಲ್ಲೂಕು ಮತ್ತು ಹಾಸನಕ್ಕೆ ಭವಾನಿ ಪ್ರವೇಶಿಸಬಾರದು.
4) ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು.

ಇದನ್ನೂ ಓದಿ: Prajwal Revanna Case: ಭವಾನಿ ರೇವಣ್ಣ ವಿರುದ್ಧ ಬಂಧನ ವಾರಂಟ್‌ ಹೊರಡಿಸಿದ ಕೋರ್ಟ್

ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಭವಾನಿಯನ್ನು ವಶಕ್ಕೆ ಪಡೆಯಲು ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಆದರೆ, ತಾವು ಹೊಳೆನರಸೀಪುರದ ಮನೆಯಲ್ಲಿ ಸಿಗುವುದಾಗಿ ಭವಾನಿ ತಿಳಿಸಿದ್ದರು. ಇದಕ್ಕಾಗಿ ಎಸ್‌ಐಟಿ ಟೀಮ್‌ ಅಲ್ಲಿಗೆ ತೆರಳಿದಾಗ, ಭವಾನಿ ಅಲ್ಲಿರದೆ ಕಣ್ಮರೆಯಾಗಿದ್ದರು. ಹೀಗಾಗಿ ಭವಾನಿ ಬಂಧನಕ್ಕಾಗಿ ಆರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಹಾಸನ ಈ ಮೂರು ಜಿಲ್ಲೆಗಳಲ್ಲಿ ಭವಾನಿ ರೇವಣ್ಣಗಾಗಿ ಮುಖ್ಯವಾಗಿ ಹುಡುಕಾಟ ನಡೆಸಲಾಗಿತ್ತು. ಈ ಮೂರು ಜಿಲ್ಲೆಗಳಲ್ಲಿ ಮೂರು ಪೊಲೀಸ್ ತಂಡಗಳು ಬೀಡುಬಿಟ್ಟಿವೆ. ನಾಲ್ಕನೇ ಟೆಕ್ನಿಕಲ್ ತಂಡದಿಂದಲೂ ಭವಾನಿ ರೇವಣ್ಣ ಬಗ್ಗೆ ಟ್ರ್ಯಾಕಿಂಗ್ ನಡೆದಿತ್ತು. ಅವರ ಮೊಬೈಲ್ ಲೊಕೇಶನ್‌ ಟವರ್ ಡಂಪ್, ಸಿಡಿಆರ್ ಪರಿಶೀಲನೆ ನಡೆಸಲಾಗಿತ್ತು. ಇದೀಗ ಮಧ್ಯಂತ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಅವರೇ ವಿಚಾರಣೆಗೆ ಆಗಮಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Bhavani Revanna: ಭವಾನಿ ರೇವಣ್ಣಗೆ ಒಂದು ವಾರ ಮಧ್ಯಂತರ ಜಾಮೀನು, ಇಂದು 1 ಗಂಟೆಗೆ ವಿಚಾರಣೆಗೆ ಬರಲೇಬೇಕು!

Bhavani Revanna: ಕಳೆದೆರಡು ಸಲದ ನೋಟೀಸ್‌ಗೆ ಭವಾನಿ ಹಾಜರಾಗದಿದ್ದುದಕ್ಕೆ ಬಂಧನ ವಾರೆಂಟ್‌ ಜಾರಿ ಮಾಡಲಾಗಿದೆ. ಸದ್ಯ ಆ ಆದೇಶವನ್ನು ಅಮಾನತಿನಲ್ಲಿ ಇಡಲಾಗಿದೆ. ಮುಂದಿನ ಶುಕ್ರವಾರದವರೆಗೂ ಮಧ್ಯಂತರ ಜಾಮೀನು ನೀಡಲಾಗಿದ್ದು, ಮುಂದಿನ ಶುಕ್ರವಾರಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

VISTARANEWS.COM


on

bhavani revanna Prajwal Revanna Case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಸಂತ್ರಸ್ತೆಯ ಕಿಡ್ನಾಪ್‌ ಪ್ರಕರಣದಲ್ಲಿ (Kidnap Case) ಆರೋಪಿಯಾಗಿರುವ, ಸದ್ಯಕ್ಕೆ ತಲೆ ಮರೆಸಿಕೊಂಡಿರುವ ಭವಾನಿ ರೇವಣ್ಣ (Bhavani Revanna) ಅವರಿಗೆ ಕೋರ್ಟ್‌ ಮಧ್ಯಂತರ ಜಾಮೀನು (Interim Bail) ನೀಡಿದೆ. ಇದರಿಂದ ಭವಾನಿ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಇದರಲ್ಲಿ ಇಂದು ಟ್ವಿಸ್ಟ್‌ ಇದೆ. ಅದೇನೆಂದರೆ, ಇಂದು ಮಧ್ಯಾಹ್ನ 1 ಗಂಟೆಗೆ ಅವರು ಎಸ್‌ಐಟಿ (SIT) ಮುಂದೆ ಹಾಜರಾಗಬೇಕಿದೆ.

ಕೆ.ಆರ್. ನಗರ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ಬೇಕಾಗಿದ್ದು, ತನಿಖೆಗೆ ಸಹಕರಿಸಿದೆ ತಲೆ ಮರೆಸಿಕೊಂಡಿರುವ ಭವಾನಿ ಅವರಿಗೆ ಮುಂದಿನ ಶುಕ್ರವಾರದವರೆಗೆ ಮಧ್ಯಂತರ ಜಾಮೀನು ನೀಡಿ ಕೋರ್ಟ್‌ ಆದೇಶ ನೀಡಿದೆ. ಆದರೆ ಇಂದು ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ತನಿಖೆಗೆ ಹಾಜರಾಗಬೇಕು ಎಂದಿದೆ. ಒಂದು ಗಂಟೆಯಿಂದ ಐದು ಗಂಟೆಯವರೆಗೆ ತನಿಖೆ ನಡೆಸಬಹುದು. ಐದು ಗಂಟೆಯ ನಂತರ ಅವರನ್ನು ಎಸ್‌ಐಟಿ ಕಚೇರಿಯಲ್ಲಿ ಇಟ್ಟುಕೊಳ್ಳಬಾರದು ಎಂದು ಕೋರ್ಟ್‌ ಸೂಚನೆ ನೀಡಿದೆ.

ಭವಾನಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು 11 ಕಾರಣಗಳಿವೆ ಎಂದು ಭವಾನಿ ಪರ ಹಿರಿಯ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿದರು. ಈ ವಾದಗಳನ್ನು ಕೋರ್ಟ್‌ ಮಾನ್ಯ ಮಾಡಿತು. ಆದರೆ ಕಳೆದೆರಡು ಸಲದ ನೋಟೀಸ್‌ಗೆ ಭವಾನಿ ಹಾಜರಾಗದಿದ್ದುದಕ್ಕೆ ಬಂಧನ ವಾರೆಂಟ್‌ ಜಾರಿ ಮಾಡಲಾಗಿದೆ. ಸದ್ಯ ಆ ಆದೇಶವನ್ನು ಅಮಾನತಿನಲ್ಲಿ ಇಡಲಾಗಿದೆ. ಮುಂದಿನ ಶುಕ್ರವಾರದವರೆಗೂ ಮಧ್ಯಂತರ ಜಾಮೀನು ನೀಡಲಾಗಿದ್ದು, ಮುಂದಿನ ಶುಕ್ರವಾರಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಭವಾನಿ ಅವರಿಗೆ ಕೋರ್ಟ್‌ ಕೆಲವು ಸೂಚನೆಗಳನ್ನು ನೀಡಿದೆ. ಅದರಂತೆ ಅವರು ನಡೆದುಕೊಳ್ಳಬೇಕಿದೆ. ಅವುಗಳು ಹೀಗಿವೆ:
1) ಭವಾನಿ ಅವರು ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗಬೇಕು.
2) ವಿಚಾರಣೆಯ ನಂತರ ಐದು ಗಂಟೆಯ ಬಳಿಕ ಅವರನ್ನು ಇಟ್ಟುಕೊಳ್ಳಬಾರದು.
3) ಕೆ.ಆರ್‌ ನಗರ ತಾಲ್ಲೂಕು ಮತ್ತು ಹಾಸನಕ್ಕೆ ಭವಾನಿ ಪ್ರವೇಶಿಸಬಾರದು.
4) ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು.

ಇದೀಗ ಕುತೂಹಲದ ಅಂಶವೆಂದರೆ ಇಂದು 1 ಗಂಟೆಗೆ ಅವರು ಎಸ್‌ಐಟಿ ಮುಂದೆ ಹಾಜರಾಗ್ತಾರಾ ಎಂಬುದು. ಬೆಂಗಳೂರಿನಲ್ಲೇ ಇದ್ದರೆ ಅವರು ಎಸ್‌ಐಟಿ ಮುಂದೆ ಹಾಜರಾಗಬಹುದು. ಆದರೆ ಬೆಂಗಳೂರಿನಿಂದ ದೂರ ಎಲ್ಲಾದರೂ ಅಥವಾ ಹೊರರಾಜ್ಯದಲ್ಲಿ ಇದ್ದರೆ ಒಂದು ಗಂಟೆ ವೇಳೆಗೆ ಆಗಮಿಸುವುದು ಕಷ್ಟವಾಗಲಿದೆ. ಅಷ್ಟು ಹೊತ್ತಿಗೆ ಬರದಿದ್ದರೆ ಅದೇ ಕಾರಣ ನೀಡಿ ಅವರನ್ನು ಎಸ್‌ಐಟಿ ಬಂಧಿಸಬಹುದಾಗಿದೆ.

ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಭವಾನಿಯನ್ನು ವಶಕ್ಕೆ ಪಡೆಯಲು ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಆದರೆ, ತಾವು ಹೊಳೆನರಸೀಪುರದ ಮನೆಯಲ್ಲಿ ಸಿಗುವುದಾಗಿ ಭವಾನಿ ತಿಳಿಸಿದ್ದರು. ಇದಕ್ಕಾಗಿ ಎಸ್‌ಐಟಿ ಟೀಮ್‌ ಅಲ್ಲಿಗೆ ತೆರಳಿದಾಗ, ಭವಾನಿ ಅಲ್ಲಿರದೆ ಕಣ್ಮರೆಯಾಗಿದ್ದರು. ಹೀಗಾಗಿ ಭವಾನಿ ಬಂಧನಕ್ಕಾಗಿ ಆರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಹಾಸನ ಈ ಮೂರು ಜಿಲ್ಲೆಗಳಲ್ಲಿ ಭವಾನಿ ರೇವಣ್ಣಗಾಗಿ ಮುಖ್ಯವಾಗಿ ಹುಡುಕಾಟ ನಡೆಸಲಾಗಿತ್ತು. ಈ ಮೂರು ಜಿಲ್ಲೆಗಳಲ್ಲಿ ಮೂರು ಪೊಲೀಸ್ ತಂಡಗಳು ಬೀಡುಬಿಟ್ಟಿವೆ. ನಾಲ್ಕನೇ ಟೆಕ್ನಿಕಲ್ ತಂಡದಿಂದಲೂ ಭವಾನಿ ರೇವಣ್ಣ ಬಗ್ಗೆ ಟ್ರ್ಯಾಕಿಂಗ್ ನಡೆದಿತ್ತು. ಅವರ ಮೊಬೈಲ್ ಲೊಕೇಶನ್‌ ಟವರ್ ಡಂಪ್, ಸಿಡಿಆರ್ ಪರಿಶೀಲನೆ ನಡೆಸಲಾಗಿತ್ತು.

ಇದನ್ನೂ ಓದಿ: Prajwal Revanna Case: ಭವಾನಿ ರೇವಣ್ಣ ವಿರುದ್ಧ ಬಂಧನ ವಾರಂಟ್‌ ಹೊರಡಿಸಿದ ಕೋರ್ಟ್

Continue Reading

ಕರ್ನಾಟಕ

Uttarakhand Trekking Tragedy: ಚಾರಣಿಗರ ಮೃತದೇಹಗಳು ಬೆಂಗಳೂರಿಗೆ, ಸಾವಿನ ಕಣಿವೆಯಿಂದ ಹಿಂದಿರುಗಿದವರ ನಿಟ್ಟುಸಿರು

VISTARANEWS.COM


on

uttarakhand trekking tragedy 2
Koo

ಬೆಂಗಳೂರು: ಉತ್ತರಾಖಂಡದ (Uttarakhand) ಸಹಸ್ತ್ರತಾಲ್‌ ಶಿಖರದ (Sahstra Tal Summit) ಬಳಿ ಹಿಮಬಿರುಗಾಳಿಗೆ (Blizzard) ಸಿಕ್ಕಿ ಮೃತಪಟ್ಟ (Trekking Tragedy) 9 ಮಂದಿ ಕರ್ನಾಟಕದ ಚಾರಣಿಗರ (Trekkers) ಮೃತದೇಹಗಳು ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kemepegowda internationa Airport) ಮೂಲಕ ಬೆಂಗಳೂರನ್ನು ತಲುಪಲಿವೆ. ಬದುಕುಳಿದ 13 ಇಂದು ಮುಂಜಾನೆ ಹಿಂದಿರುಗಿದರು.

ಉತ್ತರಾಖಂಡದ ಡೆಹ್ರಾಡೂನ್‌ನಿಂದ ದೇವನಹಳ್ಳಿಯ ಏರ್ಪೋರ್ಟ್‌ಗೆ ರಾತ್ರಿ 8:45ಕ್ಕೆ ಆಗಮಿಸಿದ 6E6136 ಇಂಡಿಗೋ ವಿಮಾನದಲ್ಲಿ 13 ಮಂದಿ ಚಾರಣಿಗರು ಬಂದಿಳಿದರು. ಕಾತರ ಹಾಗೂ ಆತಂಕಗಳಿಂದ ಅವರನ್ನು ಕಾಯುತ್ತಿದ್ದ ಸಂಬಂಧಿಕರು, ಸ್ನೇಹಿತರನ್ನು ಕೂಡಿಕೊಂಡರು. ತಮ್ಮ ಸಹಚಾರಣಿಗರನ್ನು ಕಣ್ಣ ಮುಂದೆಯೇ ಕಳೆದುಕೊಂಡ ದುರ್ಘಟನೆ ಹಾಗೂ ದುರ್ಭರ ಪರಿಸ್ಥಿತಿಯಲ್ಲಿ ಬದುಕುಳಿದ ಶಾಕ್‌ಗೆ ಒಳಗಾಗಿದ್ದ ಚಾರಣಿಗರು ಮೌನವಾಗಿ ಮನೆಗೆ ತೆರಳಿದ್ದು, ಯಾವುದೇ ಹೇಳಿಕೆ ನೀಡಲಿಲ್ಲ.

ಬೆಳಗ್ಗೆ 8:30ರ ಹೊತ್ತಿಗೆ ದೆಹಲಿಯಿಂದ ಬಂದು ಟರ್ಮಿನಲ್ 1ಕ್ಕೆ ತಲುಪಿದ ಇಂಡಿಗೋ 6E 6612 ವಿಮಾನದಲ್ಲಿ ಮೂವರ ಮೃತದೇಹಗಳು ಬಂದಿಳಿದಿವೆ. ಪದ್ಮಿನಿ ಹೆಗ್ಡೆ, ವೆಂಕಟೇಶ್ ಪ್ರಸಾದ್, ಆಶಾ ಸುಧಾಕರ್ ಮೃತದೇಹಗಳು ಮೊದಲ ವಿಮಾನದಲ್ಲಿ ಬಂದಿವೆ.

ಏರ್‌ಪೋರ್ಟ್ ಕಾರ್ಗೋ ಬಳಿ ಈ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ ನೀಡಿದ್ದು, “ಈಗಾಗಲೇ ಮೂರು ಮೃತ ದೇಹಗಳು ಬಂದಿವೆ. ಅವುಗಳಿಗೆ ಗೌರವ ನೀಡಿ ಕುಟುಂಬಸ್ತರಿಗೆ ಹಸ್ತಾಂತರಿಸಲಾಗಿದೆ. ಮೃತ ದೇಹಗಳು ಬೆಂಗಳೂರಿಗೆ ತಲುಪಲು ಆಂಬ್ಯುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗಿದೆ. 1 ಗಂಟೆಯ ಒಳಗೆ ಎಲ್ಲಾ ಮೃತ ದೇಹಗಳು ಬರಲಿವೆ. ಮೃತದೇಹಗಳನ್ನು ಗೌರವಯುತವಾಗಿ ಕುಟುಂಬಸ್ತರಿಗೆ ಹಸ್ತಾಂತರಿಸಲಾಗುವುದು” ಎಂದು ತಿಳಿಸಿದ್ದಾರೆ.

ಮರಳಿ ಬೆಂಗಳೂರಿಗೆ ಬಂದವರು:

ಸೌಮ್ಯಾ ಕನಲೆ- 36 ವರ್ಷ
ವಿನಯ್ ಎಂಕೆ, 49 ವರ್ಷ
ಶಿವಜ್ಯೋತಿ- 46 ವರ್ಷ
ಸುಧಾಕರ್‌, 64 ವರ್ಷ
ಸ್ಮೃತಿ, 41 ವರ್ಷ
ಶೀನಾ ಲಕ್ಷ್ಮಿ, 48 ವರ್ಷ
ಮಧುಕಿರಣ್ ರೆಡ್ಡಿ- 52 ವರ್ಷ
ಜಯಪ್ರಕಾಶ್- 61 ವರ್ಷ
ಭರತ್- 53 ವರ್ಷ
ಅನಿಲ್ ಭಟ್ಟ್- 52 ವರ್ಷ
ವಿವೇಕ್ ಶ್ರೀಧರ್- 42 ವರ್ಷ
ರಿತಿಕ್ ಜಿಂದಾಲ್
ನವೀನ್ ಎ.

ಮೃತ ಚಾರಣಿಗರ ವಿವರಗಳು:

1) ಪದ್ಮಿನಿ ಹೆಗಡೆ
2) ವೆಂಕಟೇಶ್ ಪ್ರಸಾದ್
3) ಆಶಾ ಸುಧಾಕರ್
4) ಪದ್ಮನಾಭ್ ಕುಂದಾಪುರ ಕೃಷ್ಣಮೂರ್ತಿ
5) ಸಿಂಧು ವಾಕೆಕಲಂ
6) ಸುಜಾತ ಮುಂಗುರವಾಡಿ
7) ವಿನಾಯಕ್ ಮುಂಗುರವಾಡಿ
8) ಚಿತ್ರ ಪಾರ್ಟನಿಟ್
9) ಅನಿತಾ ರಂಗಪ್ಪ

ಇದನ್ನೂ ಓದಿ: Trekking Tragedy: ಉತ್ತರಾಖಂಡ ಚಾರಣ ದುರಂತದಲ್ಲಿ ಪಾರಾದ 13 ಚಾರಣಿಗರು ಬೆಂಗಳೂರಿಗೆ ವಾಪಸ್

Continue Reading
Advertisement
NDA Meeting
Lok Sabha Election 202411 mins ago

NDA Meeting: ಮತ್ತೊಮ್ಮೆ ಮೋದಿ ಸರ್ಕಾರ; ಜೂ. 9ರಂದು ಪ್ರಮಾಣ ವಚನ ಸ್ವೀಕಾರ

Chetan Ahimsa says that Upendra is not intelligent he is delusional
ಸ್ಯಾಂಡಲ್ ವುಡ್11 mins ago

Chetan Ahimsa: ಉಪೇಂದ್ರ ಬುದ್ಧಿವಂತನಲ್ಲ, ಅವರಿಗೆ ಭ್ರಮೆ; ನಟ ಚೇತನ್ ಗೇಲಿ

Art exhibition
ಬೆಂಗಳೂರು20 mins ago

Art Exhibition : ಜುಲೈ 10ರವರೆಗೆ ಬೆಂಗಳೂರಿನಲ್ಲಿ ಯೂಸುಫ್, ಶಿಬು ಅರಕ್ಕಲ್ ಚಿತ್ರಗಳ ಪ್ರದರ್ಶನ

Prajwal Revanna Case
ಪ್ರಮುಖ ಸುದ್ದಿ22 mins ago

Prajwal Revanna Case: ಮಧ್ಯಂತರ ಜಾಮೀನು ಬೆನ್ನಲ್ಲೇ ಭವಾನಿ ರೇವಣ್ಣ‌ ಪ್ರತ್ಯಕ್ಷ; ಎಸ್ಐಟಿ ವಿಚಾರಣೆಗೆ ಹಾಜರು!

Gold Rate Today
ಚಿನ್ನದ ದರ22 mins ago

Gold Rate Today: ಸತತ ಎರಡನೇ ದಿನವೂ ದುಬಾರಿಯಾದ ಚಿನ್ನ; ಇಂದಿನ ದರದ ಮಾಹಿತಿ ಇಲ್ಲಿದೆ

Assault Case
ಚಿತ್ರದುರ್ಗ43 mins ago

Assault Case : ಚಿಪ್ಸ್ ಕೊಡಿಸುವ ನೆಪದಲ್ಲಿ ಮಗುವಿನ ಕತ್ತು ಕೊಯ್ದ ಕಿರಾತಕ

Posani Krishna Murali End of Career In Tollywood
ಟಾಲಿವುಡ್1 hour ago

Posani Krishna Murali: ಟಾಲಿವುಡ್‌ನಲ್ಲಿ ಪೋಸಾನಿ ಕೃಷ್ಣ ಮುರಳಿ ವೃತ್ತಿಜೀವನ ಅಂತ್ಯ?

Electric shock in vijayanagara
ವಿಜಯನಗರ1 hour ago

Electric shock : ಶಾಲೆಗೆ ಹೋದವಳು ಮಸಣ ಸೇರಿದಳು; ಕರೆಂಟ್‌ ಶಾಕ್‌ಗೆ ಒದ್ದಾಡಿ ಪ್ರಾಣಬಿಟ್ಟಳು

bhavani revanna Prajwal Revanna Case
ಪ್ರಮುಖ ಸುದ್ದಿ1 hour ago

Bhavani Revanna: ಭವಾನಿ ರೇವಣ್ಣಗೆ ಒಂದು ವಾರ ಮಧ್ಯಂತರ ಜಾಮೀನು, ಇಂದು 1 ಗಂಟೆಗೆ ವಿಚಾರಣೆಗೆ ಬರಲೇಬೇಕು!

Mysuru Tragedy
ಮೈಸೂರು2 hours ago

Mysuru Tragedy : ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ತರಲು ಮರವೇರಿ ದಾರುಣ ಅಂತ್ಯ ಕಂಡ ಮಗ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 weeks ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌