Rohit Sharma: 'ಪಂತ್​ ಆಟ ನೋಡಬೇಕಿತ್ತು': ಇಂಗ್ಲೆಂಡ್ ಆಟಗಾರನಿಗೆ ವಾರ್ನಿಂಗ್​ ಕೊಟ್ಟ ರೋಹಿತ್​ - Vistara News

ಕ್ರಿಕೆಟ್

Rohit Sharma: ‘ಪಂತ್​ ಆಟ ನೋಡಬೇಕಿತ್ತು’: ಇಂಗ್ಲೆಂಡ್ ಆಟಗಾರನಿಗೆ ವಾರ್ನಿಂಗ್​ ಕೊಟ್ಟ ರೋಹಿತ್​

ಡಕೆಟ್​​ ಬಹುಶಃ ರಿಷಭ್​ ಪಂತ್(Rishabh Pant)​ ಆಟ ನೋಡಿಲ್ಲ ಎನಿಸುತ್ತೆ. ನಮ್ಮ ಟೀಮ್​​ನಲ್ಲಿ ಪಂತ್​ ಎಂಬ ಒಬ್ಬ ಆಟಗಾರನಿದ್ದ, ಅವನ ಆಟವನ್ನು ಡಕೆಟ್​ ನೋಡಬೇಕಿತ್ತು’ ಎಂದು ಹೇಳುವ ಮೂಲಕ ದರ್ಪದ ಮಾತುಗಳನ್ನಾಡಿದ ಬೆನ್​ ಡಕ್ಕೆಟ್​ಗೆ ರೋಹಿತ್​ ತಿರುಗೇಟು ನೀಡಿದ್ದಾರೆ.

VISTARANEWS.COM


on

rohit sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಧರ್ಮಶಾಲಾ: ಟೆಸ್ಟ್ ಕ್ರಿಕೆಟ್​ನಲ್ಲಿ ಆಕ್ರಮಣಕಾರಿಯಾಗಿ ಆಡುವ ಬಾಜ್​ ಬಾಲ್(Bazball) ಮಾದರಿಯನ್ನು ನೀಡಿ ಯಶಸ್ವಿ ಜೈಸ್ವಾಲ್(Yashasvi Jaiswal)​ ಬ್ಯಾಟಿಂಗ್​ ಕಲಿತರು ಎಂದು ಹೇಳಿದ್ದ ಇಂಗ್ಲೆಂಡ್​​ ತಂಡದ ಬ್ಯಾಟರ್​ ಬೆನ್​ ಡಕ್ಕೆಟ್(Ben Duckett)​ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ(Rohit Sharma) ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ಇಂಗ್ಲೆಂಡ್​ ವಿರುದ್ಧ ನಾಳೆ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಟೆಸ್ಟ್​ ಪಂದ್ಯದ ಭಾಗವಾಗಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್​, ‘ನನಗೆ ಈಗಲೂ ಬಾಜ್​ ಬಾಲ್​ ಕ್ರಿಕೆಟ್​ ಎಂದರೆ ಏನು ಎಂದು ಗೊತ್ತಿಲ್ಲ. ಆ ರೀತಿ ಆಕ್ರಮಣಕಾರಿ ಆಟ ಆಡುವವರನ್ನು ಕೂಡ ನಾನು ನೋಡಿಲ್ಲ. ನೈಜ ಟೆಸ್ಟ್​ ಆಡುವುದು ಮಾತ್ರ ನನಗೆ ತಿಳಿದಿದೆ. ಡಕೆಟ್​​ ಬಹುಶಃ ರಿಷಭ್​ ಪಂತ್(Rishabh Pant)​ ಆಟ ನೋಡಿಲ್ಲ ಎನಿಸುತ್ತೆ. ನಮ್ಮ ಟೀಮ್​​ನಲ್ಲಿ ಪಂತ್​ ಎಂಬ ಒಬ್ಬ ಆಟಗಾರನಿದ್ದ, ಅವನ ಆಟವನ್ನು ಡಕೆಟ್​ ನೋಡಬೇಕಿತ್ತು’ ಎಂದು ಹೇಳುವ ಮೂಲಕ ದರ್ಪದ ಮಾತುಗಳನ್ನಾಡಿದ ಬೆನ್​ ಡಕ್ಕೆಟ್​ಗೆ ತಿವಿದಿದ್ದಾರೆ.

ರೋಹಿತ್​ ಅವರು ಪಂತ್​ ಅವರನ್ನು ಉದಾಹರಣೆ ನೀಡಲೂ ಕೂಡ ಒಂದು ಕಾರಣವಿದೆ. ಪಂತ್​ ಯಾವುದೇ ಮಾದರಿಯ ಆಟದಲ್ಲಿಯೂ ಆಕ್ರಮಣಕಾರಿ ಬ್ಯಾಟಿಂಗ್​ಗೆ ಹೆಸರುವಾಸಿ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕವೇ ವಿದೇಶದಲ್ಲಿ ನಡೆದ ಹಲವು ಟೆಸ್ಟ್​ ಪಂದ್ಯಗಳಲ್ಲಿ ಭಾರತವನ್ನು ಗೆಲ್ಲಿಸಿದ ಕೀರ್ತಿ ಹೊಂದಿದ್ದಾರೆ. ಹೀಗಾಗಿ ಬಾಜ್​ ಬಾಲ್​ಗಿಂತಲೂ ಪಂತ್ ಅಪಾಯಕಾರಿ ಎಂದು ಹೇಳುವ ಮೂಲಕ ಬಾಜ್​ ಬಾಲ್ ಕುರಿತು ಜಂಬ ಕೊಚ್ಚಿಕೊಂಡ ಡಕೆಟ್​ಗೆ ರೋಹಿತ್​ ಮುಟ್ಟಿ ನೋಡುವ ಹಾಗೆ ಟಾಂಗ್​ ಕೊಟ್ಟಿದ್ದಾರೆ.

ಸರಣಿಯ ಬಗ್ಗೆ ಮಾತನಾಡಿದ ರೋಹಿತ್​, ‘ಪೈಪೋಟಿಯಿಂದ ಕೂಡಿದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯು ನನ್ನನ್ನು ಉತ್ತಮ ನಾಯಕನನ್ನಾಗಿ ರೂಪಿಸಿದೆ’ ಎಂದು ಅಭಿಪ್ರಾಯಪಟ್ಟರು. ‘ನಾಯಕನಾಗಿ ಇದು ನನ್ನ ಪಾಲಿಗೆ ಮಹತ್ವದ ಸರಣಿಯಾಗಿತ್ತು. ಏಕೆಂದರೆ ಅನುಭವಿ ಆಟಗಾರರು ಹೆಚ್ಚಾಗಿ ತಂಡದಲ್ಲಿ ಇರಲಿಲ್ಲ. ವಿಭಿನ್ನ ಸವಾಲುಗಳು ಎದುರಾಗಿತ್ತು. ಸಾಕಷ್ಟು ವಿಚಾರಗಳನ್ನು ಈ ಸರಣಿಯಿಂದ ಕಲಿತಿದ್ದೇನೆ’ ಎಂದರು.

‘ಒಬ್ಬ ನಾಯಕನಾಗಿ, ಆಟಗಾರರನ್ನು ಬಳಸಿಕೊಳ್ಳುವುದು ಹೇಗೆ ಮತ್ತು ಅದರಲ್ಲೂ ಒತ್ತಡದ ಸಂದರ್ಭಗಳು ಎದುರಾದಾಗ, ಪರಿಸ್ಥಿತಿಗೆ ತಕ್ಕಂತೆ ಪ್ರತಿಕ್ರಿಯಿಸುವುದು ಹೇಗೆ ಎಂಬುದನ್ನು ಕಲಿತಿದ್ದೇನೆ. ಈ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದಕ್ಕೆ ಸಂತಸವಿದೆ’ ಎಂದರು. ಭಾರತ ತಂಡವನ್ನು 15 ಪಂದ್ಯಗಳಲ್ಲಿ ಮುನ್ನಡೆಸಿರುವ ರೋಹಿತ್‌, 9 ಗೆಲುವು ತಂದುಕೊಟ್ಟಿದ್ದಾರೆ. 4 ಪಂದ್ಯಗಳಲ್ಲಿ ಸೋಲು ಎದುರಾಗಿದ್ದು, ಇನ್ನೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಸಚಿನ್​, ಧೋನಿ, ರೋಹಿತ್​; ಒಂದೇ ಜಾಹೀರಾತಿನಲ್ಲಿ ಮೂರು ಪೀಳಿಗೆಯ ನಾಯಕರು; ಇಲ್ಲಿದೆ ವಿಡಿಯೊ

IPL 2024 : ಜಾಹೀರಾತಿನಲ್ಲಿ ತನ್ನ ಮರೆಗುಳಿತನಕ್ಕೆ ಹೆಸರುವಾಸಿಯಾದ ರೋಹಿತ್ ತನ್ನ ಫೋನ್ ಅನ್ನು ತಂಡದ ಬಸ್​ನಲ್ಲಿ ಬಿಟ್ಟು ಹೋಗುವ ಹಾಸ್ಯಮಯವಾಗಿ ಸಂದರ್ಭವನ್ನು ತೋರಿಸಲಾಗಿದೆ. ಇದು ಮ್ಯೂಚುವಲ್​​ಫಂಡ್​ಸಹಿಹೈ ಎಂಬ ಪೋರ್ಟಲ್​ ಕುರಿತಾದ ಜಾಹೀರಾಗಿದೆ. ಸಚಿನ್ ತೆಂಡೂಲ್ಕರ್ ಮತ್ತು ಧೋನಿ ಮೂಲಕ ಇದನ್ನು ಹೆಚ್ಚು ರಸವತ್ತಾಗಿ ತೋರಿಸಲಾಗಿದೆ.

VISTARANEWS.COM


on

IPL 2024
Koo

ಬೆಂಗಳೂರು: ತಾವು ಆರಾಧಿಸುವ ಕ್ರಿಕೆಟಿಗರನ್ನು ಸಮಯ ಸಿಕ್ಕಾಗೆಲ್ಲ ನೋಡುವುದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅತ್ಯಂತ ಸಂತೋಷದ ಸುದ್ದಿ. ಆದರೆ ಮೂರು ಪ್ರಖ್ಯಾತ ಕ್ರಿಕೆಟಿಗರನ್ನು ಒಂದೇ ವೇದಿಕೆಯಲ್ಲಿ ನೋಡುವುದರಲ್ಲಿ ಸಿಗುವ ಆನಂದ ಇನ್ನೆಲ್ಲೂ ಸಿಗುವುದಿಲ್ಲ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸಮಯದಲ್ಲಿ ಪ್ರಸಾರವಾದ ಮ್ಯೂಚುವಲ್ ಫಂಡ್​ ಒಂದರ ಜಾಹೀರಾತು ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾಕೆಂದರೆ ಈ ಜಾಹೀರಾತಿನಲ್ಲಿ, ಮೂರು ತಲೆಮಾರಿನ ಭಾರತೀಯ ಕ್ರಿಕೆಟ್ ನಾಯಕರಾದ ಸಚಿನ್ ತೆಂಡೂಲ್ಕರ್, ಎಂ. ಎಸ್. ಧೋನಿ ಮತ್ತು ರೋಹಿತ್ ಶರ್ಮಾ ಒಟ್ಟಿಗೆ ಸೇರಿ ಕಾಣಿಸಿಕೊಂಡಿದ್ದಾರೆ. ಇದು ಸಂಚಲನ ಮೂಡಿಸಿದೆ.

ಜಾಹೀರಾತಿನಲ್ಲಿ ತನ್ನ ಮರೆಗುಳಿತನಕ್ಕೆ ಹೆಸರುವಾಸಿಯಾದ ರೋಹಿತ್ ತನ್ನ ಫೋನ್ ಅನ್ನು ತಂಡದ ಬಸ್​ನಲ್ಲಿ ಬಿಟ್ಟು ಹೋಗುವ ಹಾಸ್ಯಮಯವಾಗಿ ಸಂದರ್ಭವನ್ನು ತೋರಿಸಲಾಗಿದೆ. ಇದು ಮ್ಯೂಚುವಲ್​​ಫಂಡ್​ಸಹಿಹೈ ಎಂಬ ಪೋರ್ಟಲ್​ ಕುರಿತಾದ ಜಾಹೀರಾಗಿದೆ. ಸಚಿನ್ ತೆಂಡೂಲ್ಕರ್ ಮತ್ತು ಧೋನಿ ಮೂಲಕ ಇದನ್ನು ಹೆಚ್ಚು ರಸವತ್ತಾಗಿ ತೋರಿಸಲಾಗಿದೆ.

ಭಾರತದ ಮಾಜಿ ಆಟಗಾರರಾದ ಸಚಿನ್ ಮತ್ತು ಎಂ. ಎಸ್. ಧೋನಿ, ನಿವೃತ್ತಿ ನಂತರದ ಹೂಡಿಕೆ ಯೋಜನೆಯ ಬಗ್ಗೆ ರೋಹಿತ್​ಗೆ ಸಲಹೆ ನೀಡಲು ಮುಂದುವರಿಯುತ್ತಾರೆ. ಆದರೆ, ರೋಹಿತ್​ ಅದಾಗಲೇ ತಾವು ಹೂಡಿಕೆ ಮಾಡುತ್ತಿರುವಾಗಿ ಹೇಳುವ ಮೂಲಕ ಜಾಹೀರಾತು ಮುಂದುವರಿಯುತ್ತದೆ.

ಭಾರತದ ಮಾಜಿ ನಾಯಕ ಎಂ. ಎಸ್. ಧೋನಿ ಮತ್ತು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಮ್ಯೂಚುವಲ್ ಫಂಡ್​ಗಳನ್ನು ಉತ್ತೇಜಿಸುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಸುದೀರ್ಘ ಇತಿಹಾಸ ಹೊಂದಿದ್ದಾರೆ. ಆದರೆ, ಈ ಹೊಸ ಜಾಹೀರಾತಿನಲ್ಲಿ ರೋಹಿತ್ ಶರ್ಮಾ ಅವರನ್ನೂ ಸೇರಿಸಿಕೊಳ್ಳಲಾಗಿದೆ.

ಜಾಹೀರಾತಿನಲ್ಲಿ ಹಾಸ್ಯಮಯ ಅಂಶಗಳಿವೆ ಇದು ರೋಹಿತ್ ಅ ಮರೆತುಹೋಗುವ ಅಭ್ಯಾಸವನ್ನು ಎತ್ತಿ ತೋರಿಸುತ್ತದೆ. ಮೂವರು ಕ್ರಿಕೆಟ್ ಐಕಾನ್​ಗಳು ಲಘೂ ಹಾಸ್ಯದಲ್ಲಿ ತೊಡಗಿಕೊಂಡಿರುದು ಕಾಣುತ್ತದೆ. ಈ ಪ್ರಸಿದ್ಧ ಆಟಗಾರರು ಒಂದೇ ತೆರೆಯ ಮೇಲೆ ಕಾಣಿಸಿಕೊಳ್ಳುವುದು ವೀಕ್ಷಕರಿಗೆ ಒಂದು ಅದ್ಭುತ ಹಳಹಳಿಕೆಯಾಗಿರುತ್ತದೆ.

ಐಪಿಎಲ್ 2024 ನಂತರ ರೋಹಿತ್ ಶರ್ಮಾ ಭವಿಷ್ಯವೇನು?

2024 ರ ಐಪಿಎಲ್ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ತೋರಿದ್ದರು. ಅವರು ಪಂದ್ಯಾವಳಿಯನ್ನು ಆಕ್ರಮಣಕಾರಿ ವಿಧಾನದೊಂದಿಗೆ ಪ್ರಾರಂಭಿಸಿದರು. ಆದರೆ ಅಂತಿಮ ಹಂತಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಹೆಣಗಾಡಿದರು. ಇದರ ಹೊರತಾಗಿಯೂ, ಅವರು ತವರು ನೆಲದಲ್ಲಿ ಸಿಎಸ್​​ಕೆ ವಿರುದ್ಧ ಶತಕ ಗಳಿಸುವಲ್ಲಿ ಯಶಸ್ವಿಯಾದರು. ಎಲ್ಎಸ್​ಜಿ ವಿರುದ್ಧ ಬಲವಾದ ಪ್ರದರ್ಶನದೊಂದಿಗೆ ಋತುವನ್ನು ಮುಗಿಸಿದರು. ಒಟ್ಟಾರೆಯಾಗಿ, ಶರ್ಮಾ 14 ಪಂದ್ಯಗಳಲ್ಲಿ 150 ರ ಸ್ಟ್ರೈಕ್ ರೇಟ್ ನೊಂದಿಗೆ 417 ರನ್ ಗಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ನಿರಾಶಾದಾಯಕ ಋತು ಹೊಂದಿದ್ದು, 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಜೂನ್ 1 ರಿಂದ ಯುಎಸ್ಎಯಲ್ಲಿ ಪ್ರಾರಂಭವಾಗುವ ಟಿ 20 ವಿಶ್ವಕಪ್ 2024 ರಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

Continue Reading

ಪ್ರಮುಖ ಸುದ್ದಿ

IPL 2024 : ಮಾಜಿ ನಾಯಕ ಶೇನ್​ ವಾರ್ನ್​ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್​

IPL 2024 : ಸಂಜು ಸ್ಯಾಮ್ಸನ್​ ಸ್ಪಿನ್ ಮಾಂತ್ರಿಕ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ರಾಜಸ್ಥಾನ್ ತಂಡದ ಇತರ ಮಾಜಿ ನಾಯಕರುಗಳಾದ ರಾಹುಲ್ ದ್ರಾವಿಡ್ (18 ಗೆಲುವುಗಳು), ಶೇನ್ ವ್ಯಾಟ್ಸನ್ (8 ಗೆಲುವುಗಳು), ಅಜಿಂಕ್ಯ ರಹಾನೆ (9 ಗೆಲುವುಗಳು) ಮತ್ತು ಸ್ಟೀವ್ ಸ್ಮಿತ್ (15 ಗೆಲುವು) ಅವರಂತಹ ಆಟಗಾರರನ್ನು ಪರಿಗಣಿಸಿದಾಗ ಈ ಸಾಧನೆಯ ಮಹತ್ವದ್ದಾಗಿದೆ.

VISTARANEWS.COM


on

IPL 2024
Koo

ಅಹಮದಾಬಾದ್​​: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್​ನ ರಾಜಸ್ಥಾನ್​ ರಾಯಲ್ಸ್​​ ಫ್ರ್ಯಾಂಚೈಸಿ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದುಕೊಂಡಿದ್ದಾರೆ. ಅವರು ಮಾಜಿ ನಾಯಕ ಹಾಗೂ ವಿಶ್ವ ಪ್ರಸಿದ್ಧ ಸ್ಪಿನ್ನರ್​ ದಿ. ಶೇನ್ ವಾರ್ನ್ ಅವರ ಸಾಧನೆಯೊಂದನ್ನು ಸರಿಗಟ್ಟಿದ್ದಾರೆ. ಬುಧವಾರ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024 ಎಲಿಮಿನೇಟರ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದ ಬಳಿಕ ಸಂಜು ಈ ಸಾಧನೆಗೆ ಪಾತ್ರರಾಗಿದ್ದಾರೆ.

ಈ ಗೆಲುವಿನೊಂದಿಗೆ ನಾಯಕನಾಗಿ ಸಂಜು ಸ್ಯಾಮ್ಸನ್ ಅವರ ಒಟ್ಟು ಗೆಲುವು 31 ಪಂದ್ಯಗಳಿಗೆ ತಲುಪಿತು. ಇದು 2008 ರಲ್ಲಿ ತಂಡವನ್ನು ಉದ್ಘಾಟನಾ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದ ಸ್ಪಿನ್ ಮಾಂತ್ರಿಕ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ರಾಜಸ್ಥಾನ್ ತಂಡದ ಇತರ ಮಾಜಿ ನಾಯಕರುಗಳಾದ ರಾಹುಲ್ ದ್ರಾವಿಡ್ (18 ಗೆಲುವುಗಳು), ಶೇನ್ ವ್ಯಾಟ್ಸನ್ (8 ಗೆಲುವುಗಳು), ಅಜಿಂಕ್ಯ ರಹಾನೆ (9 ಗೆಲುವುಗಳು) ಮತ್ತು ಸ್ಟೀವ್ ಸ್ಮಿತ್ (15 ಗೆಲುವು) ಅವರಂತಹ ಆಟಗಾರರನ್ನು ಪರಿಗಣಿಸಿದಾಗ ಈ ಸಾಧನೆಯ ಮಹತ್ವದ್ದಾಗಿದೆ.

ಇದನ್ನೂ ಓದಿ: IPL 2024 : ಮುಂದಿನ ವರ್ಷವೂ ಧೋನಿ ಐಪಿಎಲ್​ ಆಡ್ತಾರೆ; ಸಿಎಸ್​ಕೆ ಸಿಇಒ ಸ್ಪಷ್ಟನೆ

ಈ ನಾಯಕರಲ್ಲಿ ಪ್ರತಿಯೊಬ್ಬರೂ ಫ್ರ್ಯಾಂಚೈಸಿ ಕ್ರಿಕೆಟ್​ನಲ್ಲಿ ವಿಶಿಷ್ಟವಾದ ಹೆಗ್ಗುರುತು ಸ್ಥಾಪಿಸಿದ್ದರು. ಆದರೆ ಉದ್ಘಾಟನಾ ಋತುವಿನಲ್ಲಿ ಶೇನ್ ವಾರ್ನ್ ಅವರ ಬಲವಾದ ನಾಯಕತ್ವವು ಉನ್ನತ ಮಾನದಂಡ ಸ್ಥಾಪಿಸಿದೆ. ಈಗ, 2021ರಲ್ಲಿ ಸ್ಮಿತ್ ಅವರಿಂದ ನಾಯಕತ್ವದ ಅಧಿಕಾರ ವಹಿಸಿಕೊಂಡ ಬಳಿಕ ಸ್ಯಾಮ್ಸನ್ ತನ್ನನ್ನು ತಾನು ಯೋಗ್ಯ ಉತ್ತರಾಧಿಕಾರಿಯೆಂದು ಸಾಬೀತುಪಡಿಸಿಕೊಳ್ಳುತ್ತಿದ್ದಾರೆ.

ಆರ್​ಸಿಬಿ ವಿರುದ್ಧದ ರೋಚಕ ಪಂದ್ಯ

ಎಲಿಮಿನೇಟರ್​ ಆಟದ ವಿಚಾರಕ್ಕೆ ಬಂದರೆ ಎರಡೂ ಕಡೆಯವರ ನಡುವಿನ ಘರ್ಷಣೆ ಒಂದು ಅದ್ಭುತ ಪ್ರದರ್ಶನವಾಗಿತ್ತು. ಋತುವನ್ನು ಅಬ್ಬರದಿಂದ ಪ್ರಾರಂಭಿಸಿದ ರಾಜಸ್ಥಾನ ರಾಯಲ್ಸ್ ಕೊನೆಯಲ್ಲಿ ಸತತ ನಾಲ್ಕು ಸೋಲು ಕಂಡಿತು. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಏಳು ಬೀಳುಗಳ ನಡುವೆ ಪ್ಲೇಆಫ್​ಗೇರಿದ್ದು ಆರ್​ಸಿಬಿ ಪಾಲಿಗೆ ಅಚ್ಚರಿಯ ವಿಚಾರ. ಅಂತೆಯೇ ಎರಡೂ ತಂಡಗಳು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವು.

ಅನುಕ್ರಮವಾಗಿ ಎರಡು ಮತ್ತು ಮೂರು ವಿಕೆಟ್​ಗಳನ್ನು ಪಡೆದ ರವಿಚಂದ್ರನ್ ಅಶ್ವಿನ್ ಮತ್ತು ಅವೇಶ್ ಖಾನ್ ನೇತೃತ್ವದ ರಾಜಸ್ಥಾನದ ಬೌಲಿಂಗ್ ಘಟಕವು ಆರ್​ಸಿಬಿಯನ್ನು 172 ರನ್​ಗಳಿಗೆ ನಿಯಂತ್ರಿಸಿತು. ರನ್​ ಚೇಸಿಂಗ್ ಕೆಲವೊಂದು ಕ್ಷಣದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದರೂ ಇನ್ನೂ ಒಂದು ಓವರ್​ ಬಾಕಿ ಇರುವಂತೆಯೇ ಆರ್​ಆರ್​ ಗುರಿ ತಲುಪಿತ್ತು.

ಮೇ 24 ರಂದು ಚೆಪಾಕ್​ನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಖಾಮುಖಿಯಾಗಲಿದೆ ರಾಜಸ್ಥಾನ್​. ಹೀಗಾಗಿ ಸಂಜು ಪಡೆಗೆ ಇನ್ನು ಫೈನಲ್​ಗೇರಲು ಒಂದು ಹೆಜ್ಜೆ ಬಾಕಿಯಿದೆ. ಸಂಜು ನೇತೃತ್ವದ ತಂಡದ ಪ್ರಶಸ್ತಿಗಾಗಿ ಕಾಯುತ್ತಿದೆ.

Continue Reading

ಕ್ರೀಡೆ

IPL 2024 : ಮುಂದಿನ ವರ್ಷವೂ ಧೋನಿ ಐಪಿಎಲ್​ ಆಡ್ತಾರೆ; ಸಿಎಸ್​ಕೆ ಸಿಇಒ ಸ್ಪಷ್ಟನೆ

IPL 2024: ಐದು ಬಾರಿಯ ಚಾಂಪಿಯನ್‌ ತಂಡ 2024ರ ಆವೃತ್ತಿಯ ಗುಂಪು ಹಂತದಿಂದ ಹೊರಕ್ಕೆ ಹೋಗಿತ್ತು. ಹೀಗಾಗಿ ಧೋನಿ ಮುಂದಿನ ಋತುವಿಗೆ ಮರಳುತ್ತಾರೆಯೇ ಎಂಬುದರ ಕುರಿತು ಯಾವುದೇ ಸ್ಪಷ್ಟನೆ ಇಲ್ಲ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಮುಂದೆ ಬಂದು ಧೋನಿ ಮರಳುವ ಭರವಸೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಬ್ಯಾಟರ್ ಎಂಎಸ್ ಧೋನಿ ಹಲವು ವರ್ಷಗಳಿಂದ ಫ್ರಾಂಚೈಸಿಗೆ ಬಲಿಷ್ಠ ಆಸ್ತಿಯಾಗಿದ್ದಾರೆ. ಐದು ಐಪಿಎಲ್ ಪ್ರಶಸ್ತಿಗಳಿಗೆ ತಂಡವನ್ನು ಮುನ್ನಡೆಸಿದ ಧೋನಿ ಕ್ರಿಕೆಟ್​ ಕ್ಷೇತ್ರದ ದಂತಕತೆ ಎನಿಸಿಕೊಂಡಿದ್ದಾರೆ. ಅವರು ಸಿಎಸ್‌ಕೆ ಅಭಿಮಾನಿಗಳಿಗೆ ದೇವರಂತಹ ವ್ಯಕ್ತಿ. 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುವುದನ್ನು ಮುಂದುವರಿಸಿದ್ದಾರೆ. 2024ರ ಐಪಿಎಲ್​ನಲ್ಲಿಯೂ (IPL 2024) ಅವರು ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಗಳಿಸಿದ್ದಾರೆ.

ತಂಡವು 2023ರಲ್ಲಿ ಐಪಿಎಲ್ ಗೆದ್ದ ನಂತರ, ಎಂಎಸ್ ಧೋನಿ ಆ ಋತುವಿನಲ್ಲಿ ಅಭಿಮಾನಿಗಳು ತೋರಿದ ಪ್ರೀತಿಗೆ ಪ್ರತಿಯಾಗಿ ಮತ್ತೊಂದು ಋತುವಿನಲ್ಲಿ ಆಡುವ ಭರವಸೆ ನೀಡಿದ್ದರು. ಹೀಗಾಗಿ ಐಪಿಎಲ್​ 2024 ರ ಆವೃತ್ತಿಯಲ್ಲಿ ಆಡಿದ್ದರು. ಆದಾಗ್ಯೂ ಧೋನಿಯ ಕ್ರಿಕೆಟ್​ ಅಧ್ಯಾಯದ ಕೊನೆ ಎಲ್ಲಿ ಎಂದು ಯಾರಿಗೂ ಗೊತ್ತಿಲ್ಲ. ಈ ಬಾರಿಯೂ ಅವರು ವಿದಾಯ ಘೋಷಿಸಿಲ್ಲ.

ಐದು ಬಾರಿಯ ಚಾಂಪಿಯನ್‌ ತಂಡ 2024ರ ಆವೃತ್ತಿಯ ಗುಂಪು ಹಂತದಿಂದ ಹೊರಕ್ಕೆ ಹೋಗಿತ್ತು. ಹೀಗಾಗಿ ಧೋನಿ ಮುಂದಿನ ಋತುವಿಗೆ ಮರಳುತ್ತಾರೆಯೇ ಎಂಬುದರ ಕುರಿತು ಯಾವುದೇ ಸ್ಪಷ್ಟನೆ ಇಲ್ಲ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಮುಂದೆ ಬಂದು ಧೋನಿ ಮರಳುವ ಭರವಸೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

“ಧೋನಿಯ ಬಗ್ಗೆ ನನಗೆ ಗೊತ್ತಿಲ್ಲ. ಇದು ಅವರು ಮಾತ್ರ ಉತ್ತರಿಸಬಹುದಾದ ಪ್ರಶ್ನೆ, ನಮ್ಮ ಬದ್ಧತೆ ಏನೆಂದರೆ ಅವರು ತೆಗೆದುಕೊಂಡ ನಿರ್ಧಾರಗಳನ್ನು ನಾವು ಯಾವಾಗಲೂ ಗೌರವಿಸುವುದು. ಅದನ್ನು ನಾವು ಅವರಿಗೆ ಬಿಟ್ಟಿದ್ದೇವೆ. ನಿಮಗೆಲ್ಲ ತಿಳಿದಿರುವಂತೆ, ಅವರು ಯಾವಾಗಲೂ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ನಿರ್ಧರಿಸಿದಂತೆ ನಾವು ನಮ್ಮ ಕೆಲಸ ಮಾಡುತ್ತೇವೆ. ಆದಾಗ್ಯೂ ಮುಂದಿನ ವರ್ಷ ಅವರು ಸಿಎಸ್‌ಕೆಗೆ ಲಭ್ಯವಾಗುತ್ತಾರೆ ಎಂದೇ ನಾವು ಭಾವಿಸುತ್ತೇವೆ ” ಎಂದು ಕಾಶಿ ವಿಶ್ವನಾಥನ್ ಸಿಎಸ್​ಕೆ ಯ ಯೂಟ್ಯೂಬ್ ಚಾನೆಲ್‌ ಮೂಲಕ ಹೇಳಿದ್ದಾರೆ.

ಸ್ಟೀಫನ್ ಫ್ಲೆಮಿಂಗ್ ಬಗ್ಗೆ ಹೆಚ್ಚು ಚರ್ಚಿಸಿಲ್ಲ.

ಭಾರತೀಯ ಪುರುಷರ ಹಿರಿಯ ತಂಡದ ಮುಖ್ಯ ತರಬೇತುದಾರರಾಗಿ ಸಿಎಸ್​ಕೆ ಕೋಚ್​ ಸ್ಟೀಫನ್ ಫ್ಲೆಮಿಂಗ್ ಹೋಗುತ್ತಾರೆ ಎಂಬುದರ ಬಗ್ಗೆಯೂ ಕಾಶಿ ವಿಶ್ವನಾಥನ್ ಅವರು ಮಾತನಾಡಿದರು. ಸಿಎಸ್ಕೆ ತಂಡದ ಮುಖ್ಯ ಕೋಚ್ ಹುದ್ದೆಗೆ ಸ್ಟೀಫನ್ ಫ್ಲೆಮಿಂಗ್ ಬದ್ಧರಾಗಿದ್ದಾರೆ. ಭಾರತದ ಮುಖ್ಯ ತರಬೇತುದಾರನ ಹುದ್ದೆಯನ್ನು ವಹಿಸಿಕೊಳ್ಳುವುದು ಫ್ಲೆಮಿಂಗ್​ ಅವರಿಗೆ ಇಷ್ಟವಾಗುವುದಿಲ್ಲ ಎಂದು ವಿಶ್ವನಾಥನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Virat Kohli : ಕೊಹ್ಲಿಯ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​
“ನಾನು ತಮಾಷೆಯಾಗಿ ಸ್ಟೀಫನ್ ಅವರನ್ನು ಕೇಳಿದ್ದೆ. ‘ನೀವು ಭಾರತೀಯ ಕೋಚಿಂಗ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೀರಾ? ಸ್ಟೀಫನ್ ಸುಮ್ಮನೆ ನಕ್ಕರು ಮತ್ತು ಹೇಳಿದ್ದರು. ‘ನೀವು ನನ್ನನ್ನು ಬಯಸುತ್ತೀರಾ? ಎಂದು. ಅವರಿಗೆ ಆ ಹುದ್ದೆ ಆಗುವುದಿಲ್ಲ ಎಂದು ನನಗೆ ತಿಳಿದಿದೆ ಏಕೆಂದರೆ ಅವರು ವರ್ಷದಲ್ಲಿ ಒಂಬತ್ತು-ಹತ್ತು ತಿಂಗಳು [ತರಬೇತಿಯಲ್ಲಿ] ತೊಡಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅದು ನನ್ನ ಭಾವನೆ. ನಾನು ಅವರ ಬಗ್ಗೆ ಹೆಚ್ಚು ಚರ್ಚಿಸಿಲ್ಲ “ಎಂದು ವಿಶ್ವನಾಥನ್ ಹೇಳಿದರು.

Continue Reading

ಕ್ರೀಡೆ

Virat Kohli : ಕೊಹ್ಲಿಗೆ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​

Virat Kohli: ವಿರಾಟ್ ಕೊಹ್ಲಿ ಬ್ಯಾಟಿಂಗ್ ಸಾಮರ್ಥ್ಯವನ್ನು ಮಾತ್ರ ಮ್ಯಾಥ್ಯೂ ಹೇಡನ್ ಹೊಗಳಲಿಲ್ಲ. ಅವರ ಫೀಲ್ಡಿಂಗ್​ ಕರಾಮತ್ತನ್ನು ಕೂಡ ಮೆಚ್ಚಿದ್ದಾರೆ. ಮೈದಾನದಲ್ಲಿ ಚಿಗರೆಯಂತೆ ಓಡಿ ಫೀಲ್ಡಿಂಗ್ ಮಾಡುವ ಅವರಿಂದಾಗಿ ವಿಕೆಟ್​ಗಳು ಲಭಿಸಿವೆ ಎಂಬುದಾಗಿ ಹೇಡನ್​ ಹೇಳಿದ್ದಾರೆ. ಅವರ ಅತ್ಯುತ್ತಮ ಪ್ರಯತ್ನದಿಂದಾಗಿಯೇ ಆರ್​ಸಿಬಿ ತಂಡ ಪ್ಲೇಆಫ್​ ಹಂತಕ್ಕೆ ಏರಲು ಸಾಧ್ಯವಾಯಿತು. ಹೀಗಾಗಿ ಕೊಹ್ಲಿಗೆ ನಿಜವಾದ ಗೌರವ ಸಲ್ಲಬೇಕು ಎಂದು ಮಾಜಿ ಆರಂಭಿಕ ಬ್ಯಾಟರ್ ನುಡಿದಿದ್ದಾರೆ.

VISTARANEWS.COM


on

Virat Kohli
Koo

ಬೆಂಗಳೂರು: ಮೇ 22 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024 ರ ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಲ್ಕು ವಿಕೆಟ್‌ಗಳ ಸೋಲನ್ನು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಮತ್ತು ವೀಕ್ಷಕ ವಿವರಣೆಗಾರ ಮ್ಯಾಥ್ಯೂ ಹೇಡನ್ ಬೇಸರದ ವಿಷಯ ಎಂದು ವಿಶ್ಲೇಷಿಸಿದ್ದಾರೆ. ಇದೇ ವೇಳೆ ಅವರು ವಿರಾಟ್​ ಕೊಹ್ಲಿಗೆ ನಿಜವಾದ ಗೌರವ ಸಲ್ಲಿಸಬೇಕು. ತಂಡದ ಸೋಲಿಗೆ ಅವರನ್ನು ಹೊಣೆಗಾರನನ್ನಾಗಿ ಮಾಡಬಾರದು ಒತ್ತಿ ಹೇಳಿದರು. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರು ಪಂದ್ಯದುದ್ದಕ್ಕೂ ಕೊಹ್ಲಿಯ ಸಮರ್ಪಣೆ ಮತ್ತು ಪ್ರಭಾವಶಾಲಿ ಆಟವನ್ನು ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ಸಾಮರ್ಥ್ಯವನ್ನು ಮಾತ್ರ ಮ್ಯಾಥ್ಯೂ ಹೇಡನ್ ಹೊಗಳಲಿಲ್ಲ. ಅವರ ಫೀಲ್ಡಿಂಗ್​ ಕರಾಮತ್ತನ್ನು ಕೂಡ ಮೆಚ್ಚಿದ್ದಾರೆ. ಮೈದಾನದಲ್ಲಿ ಚಿಗರೆಯಂತೆ ಓಡಿ ಫೀಲ್ಡಿಂಗ್ ಮಾಡುವ ಅವರಿಂದಾಗಿ ವಿಕೆಟ್​ಗಳು ಲಭಿಸಿವೆ ಎಂಬುದಾಗಿ ಹೇಡನ್​ ಹೇಳಿದ್ದಾರೆ. ಅವರ ಅತ್ಯುತ್ತಮ ಪ್ರಯತ್ನದಿಂದಾಗಿಯೇ ಆರ್​ಸಿಬಿ ತಂಡ ಪ್ಲೇಆಫ್​ ಹಂತಕ್ಕೆ ಏರಲು ಸಾಧ್ಯವಾಯಿತು. ಹೀಗಾಗಿ ಕೊಹ್ಲಿಗೆ ನಿಜವಾದ ಗೌರವ ಸಲ್ಲಬೇಕು ಎಂದು ಮಾಜಿ ಆರಂಭಿಕ ಬ್ಯಾಟರ್ ನುಡಿದಿದ್ದಾರೆ.

ಆರ್‌ಆರ್ ವಿರುದ್ಧ 24 ಎಸೆತಗಳಲ್ಲಿ 33 ರನ್ ಬಾರಿಸಿದ ಕೊಹ್ಲಿ ಅದ್ಭುತ ಮೈಲಿಗಲ್ಲನ್ನು ಸಾಧಿಸಿದ್ದರು. ಐಪಿಎಲ್‌ನಲ್ಲಿ 8000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೇಡನ್ ಇದನ್ನು ಅಸಾಮಾನ್ಯ ಸಾಧನೆ ಎಂದು ಕರೆದಿದ್ದಾರೆ. ಭಾರತೀಯ ಬ್ಯಾಟಿಂಗ್ ಮಾಸ್ಟರ್ ಅವರು ಎಂದು ಹೇಳಿದ್ದಾರೆ

ಇದಲ್ಲದೆ, ಐಪಿಎಲ್ 2024 ರಲ್ಲಿ ಆರ್​​ಬಿಗಾಗಿ ಕೊಹ್ಲಿ ತೋರಿದ ಸ್ಪರ್ಧಾತ್ಮಕ ಮನೋಭಾವ ಸ್ಥಿರ ಪ್ರದರ್ಶನವನ್ನು ಹೇಡನ್ ಶ್ಲಾಘಿಸಿದರು. ಬಲಗೈ ಬ್ಯಾಟರ್​ ಈ ಋತುವಿನಲ್ಲಿ ರನ್‌ಗಾಗಿ ಹಸಿದ ರೀತಿಯಲ್ಲಿ ತೋರುತ್ತಿದ್ದರು. ಮೈದಾದನದಲ್ಲಿ ಅವರ ಉಪಸ್ಥಿತಿಯು ಪರಿಣಾಮ ಬೀರಿತ್ತು. ಬೆಂಗಳೂರು ತಂಡ ಪ್ಲೇಆಫ್‌ ಪ್ರವೇಶಿಸುವಲ್ಲಿ ಅವರ ಪಾತ್ರ ಮುಖ್ಯ ಎಂದು ಹೇಳಿದರು.

ಆರ್‌ಆರ್‌ಗೆ ಆರ್‌ಸಿಬಿ ಸೋಲಿಗೂ ವಿರಾಟ್ ಕೊಹ್ಲಿಗೂ ಯಾವುದೇ ಸಂಬಂಧವಿಲ್ಲ: ಮ್ಯಾಥ್ಯೂ ಹೇಡನ್

ಮ್ಯಾಥ್ಯೂ ಹೇಡನ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೀಗೆ ಹೇಳಿದ್ಧಾರೆ. “ಈ ಸೋಲಿಗೆ ಕೊಹ್ಲಿಯೊಂದಿಗೆ ಯಾವುದೇ ಸಂಬಂಧವಿಲ್ಲ. ನಮಗೆ ತಿಳಿದಿದೆ, ಅವರು ತನ್ನ ಸಂಪೂರ್ಣ ಹೃದಯ ಮತ್ತು ಆತ್ಮವನ್ನು ತಂಡಕ್ಕಾಗಿ ಕೊಟ್ಟಿದ್ದಾರೆ. ಅವರ ಫೀಲ್ಡಿಂಗ್ ಪ್ರಯತ್ನದ ಬಗ್ಗೆ ನೀವು ಯೋಚಿಸಿದಾಗ ಇನ್ನು ವಿಶೇಷ ಎನಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

ವಿರಾಟ್ ಕೊಹ್ಲಿ ಈ ಋತುವಿನಲ್ಲಿ ಬ್ಯಾಟ್‌ನೊಂದಿಗೆ ಅದ್ಭುತವಾಗಿದ್ದರು. 15 ಪಂದ್ಯಗಳಲ್ಲಿ 154 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಕೊಹ್ಲಿ ಆಗಾಗ್ಗೆ ಆರ್​ಸಿಬಿ ತಂಡವನ್ನು ಅನ್ನು ಏಕಾಂಗಿಯಾಗಿ ಗೆಲ್ಲಿಸಿದ್ದರು. 2024 ರಲ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೊಹ್ಲಿ ಶೀಘ್ರದಲ್ಲೇ T20 ವಿಶ್ವಕಪ್ 2024 ಗಾಗಿ ಭಾರತೀಯ ತಂಡದೊಂದಿಗೆ ಯುಎಸ್​ಎ ಮತ್ತು ವೆಸ್ಟ್​ ಇಂಡೀಸ್​​ಗೆ ತೆರಳಲಿದ್ದಾರೆ. ಅವರು ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಅಭಿಯಾನ ಪ್ರಾರಂಭಿಸಲಿದ್ದಾರೆ. ಆರ್​ಸಿಬಿ ಓಪನರ್ ಐಪಿಎಲ್ 2024 ರಲ್ಲಿ ಉತ್ತಮ ಫಾರ್ಮ್​ ತೋರಿದ ಕಾರಣ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕ ಆಟಗಾರನಾಗಿ ಆಡುವ ಸಾಧ್ಯತೆಯಿದೆ.

Continue Reading
Advertisement
Udupi Tour
ಪ್ರವಾಸ40 seconds ago

Udupi Tour: ಉಡುಪಿಗೆ ಹೋದಾಗ ನೀವು ನೋಡಲೇಬೇಕಾದ 10 ಸ್ಥಳಗಳಿವು

Agee hunnime Thousands of devotees have darshan of Shri Renukamba Devi of Chandragutti
ಶಿವಮೊಗ್ಗ5 mins ago

Shivamogga News: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

an inscription of Hulagi Katte built during the Vijayanagara kings was discovered
ಕೊಪ್ಪಳ6 mins ago

Koppala News: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹುಲಗಿ ಕಟ್ಟೆಯ ಶಾಸನ ಪತ್ತೆ

CM Siddaramaiah inaugurated the website of the inter caste marriage registration website in Mysore
ಕರ್ನಾಟಕ8 mins ago

Mysore News: ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು, ಆದರೆ ಆ ಹುಡುಗಿ ಒಪ್ಪಲಿಲ್ಲ ಎಂದ ಸಿದ್ದರಾಮಯ್ಯ

COMEDK UGET 2024 Result Declared Tomorrow Afternoon How to view and download
ಶಿಕ್ಷಣ11 mins ago

COMEDK UGET 2024: ನಾಳೆ ಮಧ್ಯಾಹ್ನ ಕಾಮೆಡ್‌ – ಕೆ ಫಲಿತಾಂಶ ಪ್ರಕಟ; ವೀಕ್ಷಣೆ, ಡೌನ್‌ಲೋಡ್‌ ಮಾಡಿಕೊಳ್ಳೋದು ಹೇಗೆ?

IPL 2024
ಪ್ರಮುಖ ಸುದ್ದಿ42 mins ago

IPL 2024 : ಸಚಿನ್​, ಧೋನಿ, ರೋಹಿತ್​; ಒಂದೇ ಜಾಹೀರಾತಿನಲ್ಲಿ ಮೂರು ಪೀಳಿಗೆಯ ನಾಯಕರು; ಇಲ್ಲಿದೆ ವಿಡಿಯೊ

Share Market
ದೇಶ52 mins ago

Share Market: ಸೆನ್ಸೆಕ್ಸ್‌ ನೆಗೆತ, ನಿಫ್ಟಿ ಜಿಗಿತ; ಮೋದಿ ಭವಿಷ್ಯ ನಿಜವಾಗುತ್ತಾ? ಇಂದಿನ ಏರಿಕೆಗೆ ಕಾರಣಗಳು ಗೊತ್ತಾ?

IPL 2024
ಪ್ರಮುಖ ಸುದ್ದಿ1 hour ago

IPL 2024 : ಮಾಜಿ ನಾಯಕ ಶೇನ್​ ವಾರ್ನ್​ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್​

IPL 2024
ಕ್ರೀಡೆ2 hours ago

IPL 2024 : ಮುಂದಿನ ವರ್ಷವೂ ಧೋನಿ ಐಪಿಎಲ್​ ಆಡ್ತಾರೆ; ಸಿಎಸ್​ಕೆ ಸಿಇಒ ಸ್ಪಷ್ಟನೆ

Golden Star Ganesh Krishnam Pranaya Sakhi movie first song release on May 25 in Mysore
ಸಿನಿಮಾ2 hours ago

Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ17 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌