Rahul Dravid : ದ್ರಾವಿಡ್​ ಮಾಡಿದ ಡ್ರೆಸಿಂಗ್ ರೂಮ್​ ಭಾಷಣ ವೈರಲ್​ ; ಇಲ್ಲಿದೆ ವಿಡಿಯೊ - Vistara News

ಕ್ರೀಡೆ

Rahul Dravid : ದ್ರಾವಿಡ್​ ಮಾಡಿದ ಡ್ರೆಸಿಂಗ್ ರೂಮ್​ ಭಾಷಣ ವೈರಲ್​ ; ಇಲ್ಲಿದೆ ವಿಡಿಯೊ

Rahul Dravid : ಆಟಗಾರರು ಪರಸ್ಪರ ನೆರವು ನೀಡುವುದರಿಂದ ಮಾತ್ರ ತಂಡದ ಯಶಸ್ಸು ಸಾಧ್ಯ ಎಂದು ದ್ರಾವಿಡ್ ಹೇಳಿದ್ದಾರೆ.

VISTARANEWS.COM


on

Rahul Dravid
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರೋಹಿತ್ ಶರ್ಮಾ ಪಡೆ ಇಂಗ್ಲೆಂಡ್ ವಿರುದ್ಧ (Ind vs Eng) ಇನ್ನಿಂಗ್ಸ್ ಮತ್ತು 64 ರನ್​ಗಳ ಗೆಲುವು ದಾಖಲಿಸಿದ ನಂತರ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಡ್ರೆಸ್ಸಿಂಗ್ ರೂಮ್​ನಲ್ಲಿ ಎಲ್ಲಾ ಆಟಗಾರರಿಗೆ ಪ್ರೇರಣಾದಾಯ ಭಾಷಣ ಮಾಡಿದರು. ಆಟಗಾರರು ಮಾಡಿದ ಪ್ರಯತ್ನಗಳ ಬಗ್ಗೆ ಹೆಮ್ಮೆಯಿದೆ ಎಂದು ದ್ರಾವಿಡ್ ಹೇಳಿದ್ದಾರೆ. ಅವರ ಭಾಷಣದ ವಿಡಿಯೊ ಇದೀಗ ವೈರಲ್ ಆಗಿದೆ.

ಇದು ಏರಿಳಿತಗಳಿಂದ ತುಂಬಿದ ಸರಣಿಯಾಗಿತ್ತು. ಚೊಚ್ಚಲ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ರಾಹುಲ್ ದ್ರಾವಿಡ್ ಪ್ರತಿಯೊಬ್ಬ ಆಟಗಾರನ ಪ್ರಯತ್ನಗಳನ್ನು ಸಂಪೂರ್ಣವಾಗಿ ಶ್ಲಾಘಿಸಿದರು. 4-1 ಸರಣಿ ಗೆಲುವಿಗೆ ಪ್ರತಿಯೊಬ್ಬರ ಕೊಡುಗೆಯೂ ಇದೆ ಎಂದು ಹೇಳಿದರು.

3 ತಿಂಗಳ ಸುದೀರ್ಘ ಸರಣಿಗಾಗಿ 51 ವರ್ಷದ ಮಾಜಿ ಆಟಗಾರ ತಂಡದ ಸಹಾಯಕ ಸಿಬ್ಬಂದಿಯನ್ನು ಅಭಿನಂದಿದರು. ಭಾರತವು ಹಿರಿಯ ಬ್ಯಾಟರ್​ಗಳಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಶಮಿ ಅವರ ಅನುಪಸ್ಥಿತಿಯಲ್ಲಿತ್ತು. ಆದರೂ ಯುವ ಆಟಗಾರರು ಕೆಚ್ಚೆದೆಯಿಂದ ಆಡಿ ಪಂದ್ಯವನ್ನು ಗೆಲ್ಲಿಸಿದ್ದರು.

“ಮೊದಲನೆಯದಾಗಿ,ನಿಮ್ಮೆಲ್ಲರಿಗೂ, ತಂಡಕ್ಕೆ, ಆಟಗಾರರಿಗೆ ಮತ್ತು ಸಹಾಯಕ ಸಿಬ್ಬಂದಿಗೆ ದೊಡ್ಡ ಅಭಿನಂದನೆಗಳು. ಸರಣಿಯಲ್ಲಿ ನಾವು ನಿಜವಾಗಿಯೂ ಸವಾಲನ್ನು ಎದುರಿಸಿದ್ದೇವೆ. ಆದಾಗ್ಯೂ ಪುಟಿದೇಳಲು ಪುನರಾಗಮನ ಮಾಡಲು ಒಂದು ಮಾರ್ಗ ಕಂಡುಕೊಂಡೆವು. ಇದು ನಮ್ಮಲ್ಲಿರುವ ಕೌಶಲಗಳನ್ನು ಎತ್ತಿ ತೋರಿಸುತ್ತದೆ ಎಂದ ಹೇಳಿದರು.

ಪರಸ್ಪರ ಸಹಾಯ ಮಾಡುವಂತೆ ಸಲಹೆ

ರಾಹುಲ್ ದ್ರಾವಿಡ್ ತಮ್ಮ ಭಾಷಣದಲ್ಲಿ ಹೇಳಿದ ಅತ್ಯುತ್ತಮ ವಿಷಯವೆಂದರೆ ಯಾವಾಗಲೂ ಒಟ್ಟಿಗೆ ಉಳಿಯುವ ಮತ್ತು ಪರಸ್ಪರ ಸಹಕಾರ ನೀಡುವ ಬಗ್ಗೆ. ತಂಡದ ಪ್ರತಿಯೊಬ್ಬರೂ ಪರಸ್ಪರ ಸಹಾಯ ಮಾಡಬೇಕು ಮತ್ತು ಪರಸ್ಪರರ ಯಶಸ್ಸಿಗೆ ಕೊಡುಗೆ ನೀಡಬೇಕು ಎಂದು ದ್ರಾವಿಡ್ ಸಲಹೆ ನೀಡಿದರು.

ದ್ರಾವಿಡ್ ಎಲ್ಲಾ ಆಟಗಾರರಿಗೆ ಯಾವಾಗಲೂ ನಿಸ್ವಾರ್ಥವಾಗಿರಲು ಮತ್ತು ತಂಡದ ಸಹ ಆಟಗಾರನಿಗೆ ಏನಾದರೂ ಸಹಾಯ ಮಾಡಲು ಸಿದ್ಧರಿರಬೇಕು ಎಂದು ಹೇಳಿದರು. ಹೀಗೆ ಮಾಡುವುದರಿಂದ, ಪ್ರತಿಯೊಬ್ಬರೂ ಯಶಸ್ಸಿನ ಹಾದಿಯಲ್ಲಿರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ : IPL 2024: ಅತಿ ಹೆಚ್ಚು ಐಪಿಎಲ್​ ಶತಕ ಬಾರಿಸಿದ ದಾಂಡಿಗರಿವರು!

“ನಿಮ್ಮಲ್ಲಿ ಬಹಳಷ್ಟು ಯುವ ಆಟಗಾರರಿಗೆ, ಈ ತಂಡಕ್ಕೆ ಬರಲು ಯಶಸ್ವಿಯಾಗಲು ಪರಸ್ಪರರ ಅಗತ್ಯವಿದೆ. ನೀವು ಬ್ಯಾಟರ್​​ ಆಗಿರಲಿ ಅಥವಾ ಬೌಲರ್ ಆಗಿರಲಿ, ನಿಮ್ಮ ಯಶಸ್ಸು ಇತರರ ಯಶಸ್ಸಿನೊಂದಿಗೆ ಸಂಬಂಧ ಹೊಂದಿದೆ. ನೀವೆಲ್ಲರೂ ಪರಸ್ಪರರ ಯಶಸ್ಸಿನಲ್ಲಿ ನೆರವು ಕೊಡಬೇಕು ಎಂದು ಹೇಳಿದರು.

ಟೆಸ್ಟ್ ಕ್ರಿಕೆಟ್ ಕಠಿಣ

ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್​​ನ ಕಠಿಣ ಸಂದರ್ಭದ ಬಗ್ಗೆಯೂ ಹೇಳಿದ್ದಾರೆ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಷ್ಟ. ಆದರೆ ನೀವು ದೀರ್ಘ ಸರಣಿಯನ್ನು ಗೆದ್ದಾಗ ಮುಂದಿನ ಹಂತದ ತೃಪ್ತಿ ಇರುತ್ತದೆ. 1-0 ಅಂತರದಲ್ಲಿ ಸೋತು 4-1 ಅಂತರದಲ್ಲಿ ಗೆದ್ದಾಗ ಖುಷಿಯಾಗುತ್ತದೆ ಎಂದು ಹೇಳಿದರು.

“ಟೆಸ್ಟ್ ಕ್ರಿಕೆಟ್ ಕೆಲವೊಮ್ಮೆ ಕಠಿಣವಾಗಿರುತ್ತದೆ. ನಿಮ್ಮ ಕೌಶಲ್ಯಗಳ ವಿಷಯದಲ್ಲಿ ಕಷ್ಟ, ನೀವು ಭಾವಿಸಿದಂತೆ ದೈಹಿಕವಾಗಿ ಕಷ್ಟ, ಮಾನಸಿಕವಾಗಿ ಕಷ್ಟ. ಆದರೆ ಅದರ ಕೊನೆಯಲ್ಲಿ ಹೆಚ್ಚಿನ ತೃಪ್ತಿ ಸಿಗುತ್ತದೆ ಎಂದು ಹೇಳಿದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಡ್ರೆಸಿಂಗ್ ಕೋಣೆಯಲ್ಲಿ ಕಾಣಿಸಿಕೊಂಡರು ಮತ್ತು ಸರಣಿಯಲ್ಲಿ ನೀಡಿದ ಕೊಡುಗೆಗಳಿಗಾಗಿ ಆಟಗಾರರಿಗೆ ಧನ್ಯವಾದ ಅರ್ಪಿಸಿದರು.

” ನಮ್ಮ ಕಾರ್ಯವನ್ನು ಒಟ್ಟಿಗೆ ಮಾಡಿದ್ದಕ್ಕಾಗಿ ನಾನು ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ಆದರೆ ನಾವೆಲ್ಲರೂ ಒಂದೇ ಆಲೋಚನಾ ಪ್ರಕ್ರಿಯೆಯಲ್ಲಿ ತೊಡಗದಿದ್ದರೆ ಗೆಲುವು ಸಾಧ್ಯವಾಗುತ್ತಿರಲಿಲ್ಲ. ಅದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ”ಎಂದು ರೋಹಿತ್ ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Gautam Gambhir : ಕೊಹ್ಲಿ ಜತೆಗಿನ ಜಗಳವಲ್ಲ, ಇನ್ನೊಂದು ವಿಚಾರದ ಬಗ್ಗೆ ಗಂಭೀರ್​ಗೆ ಸಿಕ್ಕಾಪಟ್ಟೆ ಪಶ್ಚಾತಾಪವಿದೆ

Gautam Gambhir: ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಅವರ ಯಶಸ್ಸಿನ ಮಧ್ಯೆ ಕೆಕೆಆರ್ ಮಾಜಿ ನಾಯಕ ಮತ್ತು ಪ್ರಸ್ತುತ ಮಾರ್ಗದರ್ಶಕ ಗೌತಮ್ ಗಂಭೀರ್ ಅವರು ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ವಿಷಾದಿಸಿದ್ದಾರೆ. ಕೆಕೆಆರ್​ನಲ್ಲಿ ತಂಡದಲ್ಲಿ ಇದ್ದ ಸಮಯದಲ್ಲಿ ಯಾದವ್ ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಗುರುತಿಸದಿರುವುದಕ್ಕೆ ಗಂಭೀರ್ ವಿಷಾದ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Gautam Gambhir
Koo

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರ ಕ್ರಿಕೆಟ್ ಪ್ರಯಾಣವು ಅಭಿವೃದ್ಧಿ ಹೊಂದಿರುವುದು ಮುಂಬೈ ಇಂಡಿಯನ್ಸ್ ತಂಡದಲ್ಲಿ. ಅವರ ಲಭ್ಯತೆ ಆತಂಡದ ಮೌಲ್ಯವನ್ನು ಎತ್ತಿ ತೋರಿಸುತ್ತದೆ. ಆದರೆ ಅವರು ಆರಂಭದಲ್ಲಿ ಅಡಿದ್ದು ಮುಂಬಯಿ ಪರ ಅಲ್ಲ. ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದವರು ಅವರು. ಬಳಿಕ ಅವರು ಮುಂಬೈ ತಂಡ ಸೇರಿಕೊಂಡು ಮಿಂಚಿದರು. ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಪರ ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಸೂರ್ಯಕುಮಾರ್ ಅವರ ಗಮನಾರ್ಹ ಪ್ರದರ್ಶನವು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚಲು ಅವಕಾಶ ನೀಡಿತು. ಅವರ ಬಗ್ಗೆ ಗೌತಮ್​ ಗಂಭೀರ್​ (Gautam Gambhir) ವಿಶೇಷ ಮಾತುಗಳನ್ನು ಆಡಿದ್ದಾರೆ.

ಸ್ಟೈಲಿಶ್ ಬ್ಯಾಟ್ಸ್ಮನ್ ಅವರ ಪ್ರಯಾಣವು 2018 ರಲ್ಲಿ ಎರಡನೇ ಬಾರಿಗೆ ಎಂಐಗೆ ಸೇರಿದಾಗ ಗಮನಾರ್ಹ ತಿರುವು ಪಡೆದುಕೊಂಡಿತು. 2012 ರಲ್ಲಿ ಅದೇ ಫ್ರಾಂಚೈಸಿಯೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. 2014ರಿಂದ 2017ರ ವರೆಗೆ ನಾಲ್ಕು ಆವೃತ್ತಿಗಳಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದ ಸೂರ್ಯ 54 ಪಂದ್ಯಗಳಲ್ಲಿ 608 ರನ್ ಗಳಿಸಿದ್ದರು.

ಗೌತಮ್ ಗಂಭೀರ್ ಬೇಸವರೇನು

ಲಾಭದಾಯಕ ಟಿ 20 ಲೀಗ್​​ನಲ್ಲಿ ಕೆಕೆಆರ್ ಪರ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅವರು ಕೆಲವು ರನ್​​ಗಳನ್ನು ಗಳಿಸಿದ್ದರು. ಆದರೆ ಸೂರ್ಯಕುಮಾರ್ ಅವರ ನಿಜವಾದ ಸಾಮರ್ಥ್ಯವನ್ನು ಮುಂಬೈ ಇಂಡಿಯನ್ಸ್​​ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಬಯಲಾಯಿತು. ಆಧುನಿಕ ಯುಗದ ಅತ್ಯಂತ ಅಪಾಯಕಾರಿ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.

ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಅವರ ಯಶಸ್ಸಿನ ಮಧ್ಯೆ ಕೆಕೆಆರ್ ಮಾಜಿ ನಾಯಕ ಮತ್ತು ಪ್ರಸ್ತುತ ಮಾರ್ಗದರ್ಶಕ ಗೌತಮ್ ಗಂಭೀರ್ ಅವರು ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ವಿಷಾದಿಸಿದ್ದಾರೆ. ಕೆಕೆಆರ್​ನಲ್ಲಿ ತಂಡದಲ್ಲಿ ಇದ್ದ ಸಮಯದಲ್ಲಿ ಯಾದವ್ ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಗುರುತಿಸದಿರುವುದಕ್ಕೆ ಗಂಭೀರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಕೆಕೆಆರ್ ಮಾಜಿ ನಾಯಕ ಸೂರ್ಯ ಅವರ ನಿಜವಾದ ಸಾಮರ್ಥ್ಯ ಮತ್ತು ಆದರ್ಶ ಬ್ಯಾಟಿಂಗ್ ಸ್ಥಾನವನ್ನು ಗುರುತಿಸಲು ವಿಫಲರಾಗಿದ್ದಾರೆ ಎಂದು ಒಪ್ಪಿಕೊಂಡರು. ಇದು ಕೆಕೆಆರ್​ ಜತೆಗಿನ ಅವರ ನಾಯಕತ್ವದ ಅವಧಿಯಿಂದ ಅತಿದೊಡ್ಡ ತಪ್ಪು ಎಂದು ಹೇಳಿದರು. ಕೆಕೆಆರ್ ತಂಡವು ಸೂರ್ಯಕುಮಾರ್ ಅವರನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಎಂದಿಗೂ ಸಾಧ್ಯವಾಗಲಿಲ್ಲ ಎಂದು ಗಂಭೀರ್ ಒತ್ತಿ ಹೇಳಿದರು.

ಗೌತಮ್ ಗಂಭೀರ್ ಅತ್ಯುತ್ತಮ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಅದನ್ನು ಜಗತ್ತಿಗೆ ತೋರಿಸುವುದು ನಾಯಕನ ಪಾತ್ರವಾಗಿತ್ತು. ನನ್ನ ಏಳು ವರ್ಷಗಳ ನಾಯಕತ್ವದಲ್ಲಿ ನನ್ನಲ್ಲಿರುವ ಒಂದು ವಿಷಾದವೆಂದರೆ ನಾನು ಮತ್ತು ತಂಡವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ: IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

ಸೂರ್ಯ 3 ನೇ ಕ್ರಮಾಂಕದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತಿದ್ದರು, ಆದರೆ 7 ನೇ ಕ್ರಮಾಂಕದಲ್ಲಿ ಅಷ್ಟೇ ಉತ್ತಮವಾಗಿದ್ದರು. ನೀವು ಅವರನ್ನು 6 ಅಥವಾ 7 ನೇ ಕ್ರಮಾಂಕದಲ್ಲಿ ಆಡಿಸಬಹುದು ಅಥವಾ ಬೆಂಚ್ ಕಾಯಿಸಬಹುದು. ಯಾವಾಗಲೂ ನಗುತ್ತಿದ್ದರು ಮತ್ತು ತಂಡಕ್ಕಾಗಿ ಪ್ರದರ್ಶನ ನೀಡಲು ಯಾವಾಗಲೂ ಸಿದ್ಧರಾಗಿದ್ದರು ಎಂದು ಹೇಳಿದರು.

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಕೆಕೆಆರ್ ರೆಡ್-ಹಾಟ್ ಫಾರ್ಮ್​ನಲ್ಲಿದ್ದಾರೆ. ಗಂಭೀರ್ ಅವರ ಮಾರ್ಗದರ್ಶನವು ಎರಡು ಬಾರಿಯ ಚಾಂಪಿಯನ್ಸ್​​ನಲ್ಲಿ ಅದ್ಭುತಗಳನ್ನು ಮಾಡುತ್ತಿದೆ, ಈ ಋತುವಿನಲ್ಲಿ ಪ್ಲೇಆಫ್​​ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. 13 ಪಂದ್ಯಗಳಿಂದ 18 ಅಂಕ ಗಳಿಸಿರುವ ಕೆಕೆಆರ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.. ಕೆಕೆಆರ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 13 ರಂದು ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಆಡಲಿದೆ.

Continue Reading

ಪ್ರಮುಖ ಸುದ್ದಿ

IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್​ಗೆ ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 187 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ 19.1 ಓವರ್​ಗಳಲ್ಲಿ 140 ರನ್​ಗೆ ಆಲ್​ಔಟ್ ಆಯಿತು. ಡೆಲ್ಲಿ ತಂಡಕ್ಕೆ ಇದು 13 ಪಂದ್ಯಗಳಲ್ಲಿ 7ನೇ ಸೋಲಾಗಿದೆ.

VISTARANEWS.COM


on

IPL 2024
Koo

ಬೆಂಗಳೂರು: ಸಂಘಟಿತ ಹೋರಾಟ ನೀಡಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Banglore) ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ದ 47 ರನ್​ಗಳ ಗೆಲುವು ದಾಖಲಿಸಿದೆ. ಇದು ಆರ್​ಸಿಬಿಗೆ ಹಾಲಿ ಆವೃತ್ತಿಯಲ್ಲಿ ದೊರಕಿದ ಸತತ ಐದನೇ ಹಾಗೂ ಒಟ್ಟು 6ನೇ ಗೆಲುವಾಗಿದೆ. ಈ ಮೂಲಕ ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಫಾಫ್​ ಡು ಪ್ಲೆಸಿಸ್ ಬಳಗ ಪ್ಲೇಆಫ್ ಹಂತಕ್ಕೆ ಏರಬೇಕಾದರೆ ಇನ್ನೊಂದು ಕಡ್ಡಾಯ ಗೆಲುವು ಹಾಗೂ ಇನ್ನೊಂದಿಷ್ಟು ಉಳಿದ ತಂಡಗಳ ಪಂದ್ಯಗಳ ಲೆಕ್ಕಾಚಾರ ಅಗತ್ಯವಿದೆ. ಆದರೆ ಆರ್​ಸಿಬಿ ತಂಡ ಕಳೆದ ಕೆಲವು ಪಂದ್ಯಗಳಲ್ಲಿ ಆಡುತ್ತಿರುವ ರೀತಿ ಮಾತ್ರ ಅಭಿಮಾನಿಗಳಿಗೆ ಸಂತಸ ಉಂಟು ಮಾಡಿದೆ. ಅದೇ ರೀತಿ ಆಟಗಾರರಿಗೆ ಅತಿ ಹೆಚ್ಚು ಉತ್ಸಾಹವನ್ನು ನೀಡಿದೆ. ಅಂತೆಯೇ ತವರಿನ ಮೈದಾನದಲ್ಲಿ ಗೆದ್ದಿರುವುದು ಗೆದ್ದಿರುವುದು ಇಡೀ ಆರ್​ಸಿಬಿ ಪಾಳೆಯದ ಖುಷಿ ಹೆಚ್ಚಿಸಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್​ಗೆ ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 187 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ 19.1 ಓವರ್​ಗಳಲ್ಲಿ 140 ರನ್​ಗೆ ಆಲ್​ಔಟ್ ಆಯಿತು. ಡೆಲ್ಲಿ ತಂಡಕ್ಕೆ ಇದು 13 ಪಂದ್ಯಗಳಲ್ಲಿ 7ನೇ ಸೋಲಾಗಿದೆ.

ಇದನ್ನೂ ಓದಿ: Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

ಮೊದಲು ಬ್ಯಾಟ್ ಮಾಡಿದ ಆರ್​​ಸಿಬಿಗೆ ಉತ್ತಮ ಆರಂಭ ದೊರೆಯಲಿಲ್ಲ. ಫಾಫ್​​ ಡು ಪ್ಲೆಸಿಸ್ ಮತ್ತೆ 6 ರನ್​ಗೆ ಔಟಾದರು. ಅದೇ ರೀತಿ ಉತ್ತಮ ರೀತಿಯಲ್ಲಿ ಬ್ಯಾಟ್​ ಮಾಡುತ್ತಿದ್ದ ವಿರಾಟ್ ಕೊಹ್ಲಿ 27 ರನ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ರಜತ್​ ಪಾಟೀದಾರ್​ ಮತ್ತೊಂದು ಅದ್ಭುತ ಪ್ರದರ್ಶನ ನೀಡಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ಅವರು 32 ಎಸೆತಕ್ಕೆ 52 ರನ್​ ಬಾರಿಸಿದರು. ಅವರಿಗೆ ವಿಕ್​ ಜ್ಯಾಕ್ಸ್ ಉತ್ತಮ ಜತೆಯಾಟ ನೀಡಿ 29 ಎಸೆತಕ್ಕೆ 41 ರನ್ ಬಾರಿಸಿ 100 ರನ್ ಗಡಿ ದಾಟಲು ಸಹಾಯ ಮಾಡಿದರು. ಇವರಿಬ್ಬರು ಔಟಾದ ಬಳಿಕ ಆರ್​ಸಿಬಿ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಕ್ಯಾಮೆರೂನ್ ಗ್ರೀನ್​ 32 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಮಹಿಪಾಲ್​ ಲಾಮ್ರೋರ್​ 13 ರನ್ ಬಾರಿಸಿದರು.

ಡೆಲ್ಲಿಯ ಕುಸಿತ

ಅರ್​ಸಿಬಿ ತಂಡ ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿತು. ಜತೆಗೆ ಅದೃಷ್ಟವೂ ಆರ್​ಸಿಬಿಯ ಪರವಾಗಿತ್ತು. ಡೇವಿಡ್​ ವಾರ್ನರ್​ 1 ರನ್​ ಗೆ ಔಟಾರೆ ಜೇಕ್​ ಫ್ರೇಸರ್ ಮೆಗ್​ಕುರ್ಕ್​ 21 ರನ್ ಬಾರಿಸಿದ ಹೊರತಾಗಿಯೂ ದುರದೃಷ್ಟದ ರನ್​ಔಟ್​ಗೆ ಒಳಗಾಯಿತು. ಶಾಯ್​ ಹೋಪ್​ 29 ರನ್ ಗೆ ಔಟಾದರೆ ಅಭಿಷೇಕ್​ ಪೊರೆಲ್​ 1ರನ್​ ಗೆ ಸೀಮಿತಗೊಂಡರು. ವಿಕೆಟ್​ಗಳು ಉರುಳುತ್ತಿರುವ ನಡುವೆಯೂ ಹಂಗಾಮಿ ನಾಯಕ ಅಕ್ಷರ್​ ಪಟೇಲ್​ 39 ಎಸೆತಕ್ಕೆ 57 ರನ್ ಬಾರಿಸಿದರು. ಅವರು ಇನಿಂಗ್ಸ್ ಆರ್​ಸಿಬಿಗೆ ಭಯ ಉಂಟು ಮಾಡಿದರೂ ಒತ್ತಡದ ನಡುವೆ ಅವರು ಔಟಾದರು.

ಆರ್​ಸಿಬಿ ಪರ ಯಶ್​ ದಯಾಳ್​ 20 ರನ್​ಗೆ 3 ವಿಕೆಟ್​ ಪಡೆದರೆ ಲಾಕಿ ಫರ್ಗ್ಯೂಸನ್​ 23 ರನ್​ ಗೆ 2 ವಿಕೆಟ್​ ಪಡೆದರು.

Continue Reading

Latest

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Virar kohli: ಮೊಹಮ್ಮದ್ ಸಿರಾಜ್ ಅವರ ಸ್ವಿಂಗ್ ಯಾರ್ಕರ್ ಆಡಲು ಪೊರೆಲ್ ತಮ್ಮ ಬ್ಯಾಟ್ ಅನ್ನು ಅಡ್ಡವಿಟ್ಟರು. ಆರ್​ಸಿಬಿ ಕ್ರಿಕೆಟಿಗರಿಗೆ ಚೆಂಡು ಸ್ಟಂಪ್​​ಗಳ ಮುಂದೆ ಅವರ ಪ್ಯಾಡ್​ಗಳಿಗೆ ಹೊಡೆದಿದೆ ಎಂದು ಮನವರಿಕೆಯಾಯಿತು. ಅವರು ಡಿಆರ್​ಎಸ್​ ಪರಿಶೀಲನೆಗೆ ಮುಂದಾದರು. ಮೂರನೇ ಅಂಪೈರ್ ಚೆಂಡು ಅವರ ಬ್ಯಾಟ್​ಗೆ ತಾಗಿದೆ ಎಂದು ನಿರ್ಧರಿಸಿದರು. ಡೆಲ್ಲಿ ಪರವಾಗಿ ತೀರ್ಪು ನೀಡಿದರು. ಹೀಗಾಗಿ ಕೊಹ್ಲಿ ಕೆರಳಿದರು.

VISTARANEWS.COM


on

Virat kohli
Koo

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2024 ರ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕೋಪಗೊಂಡ ಪ್ರಸಂಗ ನಡೆಯಿತು. ವಿವಾದಾತ್ಮಕ ಅಂಪೈರ್ ನಿರ್ಧಾರದ ಬಗ್ಗೆ ಆನ್ ಫೀಲ್ಡ್ ಅಂಪೈರ್ ಜೊತೆ ಅವರು ತೀವ್ರ ವಾಗ್ವಾದ ನಡೆಸಿದರು. ಅಭಿಷೇಕ್ ಪೊರೆಲ್ ಅವರಿಗೆ ನೀಡಲಾದ ಎಲ್​ಬಿಡಬ್ಲ್ಯು ನಿರ್ಧಾರದ ವಿರುದ್ಧ ಕೊಹ್ಲಿ ಸಿಡಿದೆದ್ದರು. ಡಿಸಿ ರನ್ ಚೇಸ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಈ ಘಟನೆ ನಡೆದಿದೆ.

ಮೊಹಮ್ಮದ್ ಸಿರಾಜ್ ಅವರ ಸ್ವಿಂಗ್ ಯಾರ್ಕರ್ ಆಡಲು ಪೊರೆಲ್ ತಮ್ಮ ಬ್ಯಾಟ್ ಅನ್ನು ಅಡ್ಡವಿಟ್ಟರು. ಆರ್​ಸಿಬಿ ಕ್ರಿಕೆಟಿಗರಿಗೆ ಚೆಂಡು ಸ್ಟಂಪ್​​ಗಳ ಮುಂದೆ ಅವರ ಪ್ಯಾಡ್​ಗಳಿಗೆ ಹೊಡೆದಿದೆ ಎಂದು ಮನವರಿಕೆಯಾಯಿತು. ಅವರು ಡಿಆರ್​ಎಸ್​ ಪರಿಶೀಲನೆಗೆ ಮುಂದಾದರು. ಮೂರನೇ ಅಂಪೈರ್ ಚೆಂಡು ಅವರ ಬ್ಯಾಟ್​ಗೆ ತಾಗಿದೆ ಎಂದು ನಿರ್ಧರಿಸಿದರು. ಡೆಲ್ಲಿ ಪರವಾಗಿ ತೀರ್ಪು ನೀಡಿದರು. ಹೀಗಾಗಿ ಕೊಹ್ಲಿ ಕೆರಳಿದರು. ಅವರು ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜತೆ ಸೇರಿ ಅಂಪೈರ್ ಜತೆ ಜಗಳಕ್ಕೆ ನಿಂತರು. ವಿಷಯದ ಬಗ್ಗೆ ಅಂಪೈರ್​ಗಳ ಜತೆ ಸುದೀರ್ಘ ಚರ್ಚೆ ನಡೆಸಿದರು.

ಇದನ್ನೂ ಓದಿ: Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದಲ್ಲಿ (IPL 2024) ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಇಶಾಂತ್ ಶರ್ಮಾ (Ishant Sharma) ನಡುವೆ ಗೆಳೆತನದ ಜಟಾಪಟಿ ನಡೆಯಿತು. ಈ ವಿಡಿಯೊ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು. ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಬೌಲಿಂಗ್​ನಲ್ಲಿ ಅಬ್ಬರಿಸಿದ ಕೊಹ್ಲಿ ಆರ್​ಸಿಬಿಗೆ ನೆರವಾಗಲು ಮುಂದಾದರು. ಆದರೆ ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮನ್ ಅನ್ನು ಔಟ್ ಮಾಡುವಲ್ಲಿ ಇಶಾನ್​ ಯಶಸ್ವಿಯಾದರು. ಆರ್​​ಸಿಬಿ ಇನ್ನಿಂಗ್ಸ್​​ನ ನಿದಕ ಓವರ್​ನಲ್ಲಿಯೇ ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಎಸೆತಕ್ಕೆ ಹೊಡೆಯುವ ಮೂಲಕ ಮಿಂಚಿದ್ದರು.

ಭಾರತದ ಮಾಜಿ ನಾಯಕ ಇನ್ನಿಂಗ್ಸ್​ನ ಎರಡನೇ ಮತ್ತು ನಾಲ್ಕನೇ ಎಸೆತವನ್ನು ಎಸೆಯಲು ಬಂದಾಗ ವೇಗಿ ಇಶಾಂತ್ ವಿರುದ್ಧ ಆಕ್ರಮಣ ಮಾಡಲು ನಿರ್ಧರಿಸಿದರು. ಓವರ್​ನ ಮೊದಲ ಎಸೆತದಲ್ಲಿ, ಕೊಹ್ಲಿ ಎಸೆತ ಬ್ಯಾಟ್​ನ ಅಂಚಿಗೆ ತಾಗಿತು. ಅದೃಷ್ಟವಶಾತ್ ಅದು ವಿಕೆಟ್ ಕೀಪರ್​ಗಿಂತ ದೂರ ಹೋಯಿತು. ಕೊಹ್ಲಿಗೆ ನಾಲ್ಕು ರನ್​ಗಳು ಸಿಕ್ಕವು. ಈ ವೇಳೆ ಇಬ್ಬರೂ ಆಟಗಾರರು ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು.


ಎರಡನೇ ಎಸೆತದಲ್ಲಿ ಕೊಹ್ಲಿ ಇಶಾಂತ್ ಶರ್ಮಾಗೆ ಸಿಕ್ಸರ್ ಬಾರಿಸಿದರು. ಬಲಗೈ ವೇಗಿ ನಂತರದ ಎಸೆತವನ್ನು ಹಾಗೆಯೇ ಬಿಟ್ಟರು.ಆದರೆ, ಓವರ್​ನ ನಾಲ್ಕನೇ ಎಸೆತದಲ್ಲಿ ಕೊಹ್ಲಿಯನ್ನು ಇಶಾಂತ್​​ ಔಟ್ ಮಾಡಿದರು. ಕೊಹ್ಲಿ ಡ್ರೈವ್ ಗೆ ಹೋದರು ಆದರೆ ಅಂತಿಮವಾಗಿ ಬ್ಯಾಟ್​ಗೆ ತಾಗಿದ ಚೆಂಡು ವಿಕೆಟ್ ಕೀಪರ್ ಹಿಡಿದರು.

Continue Reading

ಪ್ರಮುಖ ಸುದ್ದಿ

Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

Sunil Narine: ಪವರ್​​ಪ್ಲೇನಲ್ಲಿ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರ ವಿಕೆಟ್ ಪಡೆದ ನಂತರ, ಸ್ಪಿನ್ನರ್ ಐಪಿಎಲ್ ಇತಿಹಾಸದಲ್ಲಿ 400 ರನ್ ಮತ್ತು 15 ವಿಕೆಟ್ ಪಡೆದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸಕ್ತ ಋತುವಿನಲ್ಲಿ ನರೈನ್ 461 ರನ್ ಮತ್ತು 15 ವಿಕೆಟ್ ಪಡೆದಿದ್ದಾರೆ.

VISTARANEWS.COM


on

Sunil Narine
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ (IPL 2024) ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಲ್​ರೌಂಡರ್​ ಸುನಿಲ್ ನರೈನ್ (Sunil Narine) ಶೇನ್ ವ್ಯಾಟ್ಸನ್ ಮತ್ತು ಜಾಕ್ ಕಾಲಿಸ್ ನಂತರ ಒಂದೇ ಋತುವಿನಲ್ಲಿ 400 ರನ್ ಮತ್ತು 15 ವಿಕೆಟ್ ಪಡೆದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈಡನ್ ಗಾರ್ಡನ್ಸ್​ ಸ್ಟೇಡಿಯಮ್​ನಲ್ಲಿ ಶನಿವಾರ ನಡೆದ ಐಪಿಎಲ್ 2024 ರ ಮುಖಾಮುಖಿಯಲ್ಲಿ ಕೆಕೆಆರ್ ಸ್ಪಿನ್ನರ್​​​ಗಳು ಅದ್ಭುತ ಪ್ರಯತ್ನ ನಡೆಸಿದರು ಈ ವೇಳೆ ಸುನೀಲ್​ ನರೈನ್ ಅಮೋಘ ಸಾಧನೆ ಮಾಡಿದರು.

ಮುಂಬೈ ಇಂಡಿಯನ್ಸ್ 158 ರನ್​​ಗಳ ರನ್ ಚೇಸ್ ಮಾಡಲು ಮುಂದಾದಾಗ ನರೈನ್ ಸೇರದಂತೆ ಸ್ಪಿನ್ನರ್​ಗಳು ಹಳಿ ತಪ್ಪಿಸಿದರು. ಅವರನ್ನು 16 ಓವರ್ಗಳಲ್ಲಿ 139/8 ಕ್ಕೆ ಸೀಮಿತಗೊಳಿಸಿದರು. ಮತ್ತು ಎರಡು ಬಾರಿಯ ಚಾಂಪಿಯನ್ಸ್ ಕೆಕೆಆರ್​ ಪ್ಲೇಆಫ್ ತಲುಪಿದ ಮೊದಲ ತಂಡವಾಯಿತು.

ಈ ಮೊದಲು ಮಳೆಯಿಂದ ಪಂದ್ಯವನ್ನು 16 ಓವರ್​ಗಳ ಪಂದ್ಯವನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. ಐಪಿಎಲ್ 2024 ರ 60 ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ವಿರುದ್ಧ ನರೈನ್ ತಮ್ಮ ಮೂರು ಓವರ್​ಗಳಲ್ಲಿ ಒಂದು ವಿಕೆಟ್ ಪಡೆದರು. ಪವರ್​​ಪ್ಲೇನಲ್ಲಿ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರ ವಿಕೆಟ್ ಪಡೆದ ನಂತರ, ಸ್ಪಿನ್ನರ್ ಐಪಿಎಲ್ ಇತಿಹಾಸದಲ್ಲಿ 400 ರನ್ ಮತ್ತು 15 ವಿಕೆಟ್ ಪಡೆದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸಕ್ತ ಋತುವಿನಲ್ಲಿ ನರೈನ್ 461 ರನ್ ಮತ್ತು 15 ವಿಕೆಟ್ ಪಡೆದಿದ್ದಾರೆ.

ಐಪಿಎಲ್ 2008ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ವಾಟ್ಸನ್ (472 ರನ್, 17 ವಿಕೆಟ್) ಹಾಗೂ 2012ರ ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಕಾಲಿಸ್ (409 ರನ್, 15 ವಿಕೆಟ್) ಈ ಸಾಧನೆ ಮಾಡಿದ್ದಾರೆ.

IPL 2024 : ಕೆಕೆಆರ್ ತಂಡದ ಇನ್ನೊಬ್ಬ ಆಟಗಾರನಿಗೆ ದಂಡ ವಿಧಿಸಿದ ಬಿಸಿಸಿಐ

ಇಲ್ಲಿನ ಈಡನ್ ಗಾರ್ಡನ್ಸ್​ನಲ್ಲಿ ಮೇ 11 ರಂದು ನಡೆದ ಐಪಿಎಲ್ 2024 ರ 60 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 18 ರನ್​ಗಳ ಗೆಲುವು ಸಾಧಿಸಿದ ಸಂದರ್ಭದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟ್ಸ್ಮನ್ ರಮಣ್​ದೀಪ್​ ಸಿಂಗ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.20 ರ ಪ್ರಕಾರ ರಮಣ್​​ದೀಪ್​ ಲೆವೆಲ್ 1 ಅಪರಾಧವನ್ನು ಮಾಡಿದ್ದಾರೆ ಎಂದು ಸಾಬೀತಾಗಿದೆ. ಈ ಅಪರಾಧಕ್ಕಾಗಿ ಕೆಕೆಆರ್ ಬ್ಯಾಟರ್​ಗೆ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿದೆ.

27 ವರ್ಷದ ಆಟಗಾರ ಅಪರಾಧ ಒಪ್ಪಿಕೊಂಡಿದ್ದಾರೆ. ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಮ್ಯಾಚ್ ರೆಫರಿ ತೆಗೆದುಕೊಂಡ ನಿರ್ಧಾರಗಳನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ.

Continue Reading
Advertisement
Gautam Gambhir
ಪ್ರಮುಖ ಸುದ್ದಿ9 mins ago

Gautam Gambhir : ಕೊಹ್ಲಿ ಜತೆಗಿನ ಜಗಳವಲ್ಲ, ಇನ್ನೊಂದು ವಿಚಾರದ ಬಗ್ಗೆ ಗಂಭೀರ್​ಗೆ ಸಿಕ್ಕಾಪಟ್ಟೆ ಪಶ್ಚಾತಾಪವಿದೆ

Karnataka Politics Operation Kamala is not possible says CM Siddaramaiah
ರಾಜಕೀಯ30 mins ago

Karnataka Politics: ಆಪರೇಶನ್ ಕಮಲ ಆಗೋಕೆ ಸಾಧ್ಯಾನೇ ಇಲ್ಲ; ಇದು ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

Ujjaini Sri Marulasiddeshwara Rathotsava
ವಿಜಯನಗರ32 mins ago

Vijayanagara News: ವಿಜೃಂಭಣೆಯಿಂದ ನಡೆದ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ

Swati Maliwal
ದೇಶ32 mins ago

Swati Maliwal: ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲೇ ಆಪ್‌ ಸಂಸದೆ ಸ್ವಾತಿ ಮೇಲೆ ಹಲ್ಲೆ!

Madhavi Latha
ದೇಶ52 mins ago

Madhavi Latha: ಮತಗಟ್ಟೆಯಲ್ಲಿ ಮುಸ್ಲಿಂ ಮಹಿಳೆಯರ ಬುರ್ಖಾ ತೆಗೆಸಿ ಐಡಿ ಕಾರ್ಡ್‌ ಚೆಕ್‌ ಮಾಡಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ!

pm Narendra Modi
ಪ್ರಮುಖ ಸುದ್ದಿ1 hour ago

PM Narendra Modi: “ಪಾಕ್‌ ಬಳೆ ತೊಡದಿದ್ದರೆ ನಾವು ತೊಡಿಸುತ್ತೇವೆ….” ಪಿಎಂ ಮೋದಿ ಗುಡುಗು

karnataka politics eknath shinde
ಪ್ರಮುಖ ಸುದ್ದಿ2 hours ago

Karnataka Politics: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ? ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಹತ್ವದ ಸುಳಿವು!

Vijayapura news Drowned in water
ವಿಜಯಪುರ2 hours ago

Vijayapura News: ನಾಪತ್ತೆಯಾಗಿದ್ದ ಮೂವರು ಮಕ್ಕಳು ಚರಂಡಿ ಶುದ್ಧೀಕರಣ ಕೇಂದ್ರಕ್ಕೆ ಬಿದ್ದು ಸಾವು

Road Accident between Bolero and bike Couple dies on the spot
ಕಲಬುರಗಿ2 hours ago

Road Accident: ಬೊಲೇರೋ – ಬೈಕ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಆಳಂದದ ದಂಪತಿ ಸಾವು

Arvind Kejriwal
ದೇಶ2 hours ago

Arvind Kejriwal: ಕೇಜ್ರಿವಾಲ್‌ಗೆ ಮತ್ತೊಂದು ರಿಲೀಫ್‌; ಸಿಎಂ ಸ್ಥಾನ ವಜಾಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ10 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ11 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ22 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ22 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ23 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

ಟ್ರೆಂಡಿಂಗ್‌