Sourav Ganguly : ಹಾರ್ದಿಕ್ ಪಾಂಡ್ಯಗೆ ಗೌರವ ಕೊಡುವಂತೆ ಸೌರವ್​ ಗಂಗೂಲಿ ತಾಕೀತು! - Vistara News

ಪ್ರಮುಖ ಸುದ್ದಿ

Sourav Ganguly : ಹಾರ್ದಿಕ್ ಪಾಂಡ್ಯಗೆ ಗೌರವ ಕೊಡುವಂತೆ ಸೌರವ್​ ಗಂಗೂಲಿ ತಾಕೀತು!

Sourav Ganguly: ಹೊಸ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ಮುಂಬೈ ಇಂಡಿಯನ್ಸ್ ಐಪಿಎಲ್ 2024 ರ ಆರಂಭಿಕ ಹಂತಗಳಲ್ಲಿ ಹೆಣಗಾಡಿದೆ. ಮೊದಲ ಮೂರು ಪಂದ್ಯಗಳನ್ನು ಬಿಟ್ಟುಕೊಟ್ಟಿದೆ. ಮುಂಬೈನಲ್ಲಿ ನಡೆಯಲಿರುವ ರಿಷಭ್ ಪಂತ್ ನೇತೃತ್ವದ ತಂಡದ ವಿರುದ್ಧದ ಪಂದ್ಯದಲ್ಲಿ ಮುಂಬೈ ಹೆಚ್ಚು ಸ್ನೇಹಪರ ಪ್ರೇಕ್ಷಕರನ್ನು ನೋಡುವ ನಿರೀಕ್ಷೆಯಲ್ಲಿದೆ.

VISTARANEWS.COM


on

Sourav Ganguly
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಏಪ್ರಿಲ್ 6, 2024 ರಂದು ದೆಹಲಿ ಮತ್ತು ಮುಂಬೈ ತಂಡಗಳ ನಡುವೆ ಐಪಿಎಲ್ (IPL 2024) ಪಂದ್ಯ ನಡೆಯಲಿದೆ. ಅದಕ್ಕೆ ಮುಂಚಿತವಾಗಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ (Sourav Ganguly) ಮುಂಬೈ ತಂಡದ ಹೊಸ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ದೂಷಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಅವರಿಗೆ ಗೌರವ ಕೊಡಿ ಎಂಬುದಾಗಿ ತಾಕೀತು ಮಾಡಿದ್ದಾರೆ. ಕ್ರಿಕೆಟ್​ ಅಭಿಮಾನಿಗಳು ಹಾರ್ದಿಕ್ ಅವರನ್ನು ಮುಂಬೈನ ದೀರ್ಘಕಾಲದ ನಾಯಕ ರೋಹಿತ್ ಶರ್ಮಾಗೆ ಹೋಲಿಸಬಾರದು ಎಂದು ಭಾರತದ ಮಾಜಿ ನಾಯಕ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಶರ್ಮಾ ಬದಲಿಗೆ ನಾಯಕನಾಗಿ ನೇಮಕಗೊಂಡಿದ್ದಕ್ಕಾಗಿ ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಂದ ತೀವ್ರ ಟೀಕೆ ಮತ್ತು ಹಿನ್ನಡೆಯನ್ನು ಎದುರಿಸುತ್ತಿದ್ದಾರೆ. ಅಂತೆಯೇ ಮುಂಬಯಿ ತಂಡವೂ ಸತತವಾಗಿ ಮೂರು ಪಂದ್ಯಗಳಲ್ಲಿ ಸೋತಿದೆ.

ಹೊಸ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ಮುಂಬೈ ಇಂಡಿಯನ್ಸ್ ಐಪಿಎಲ್ 2024 ರ ಆರಂಭಿಕ ಹಂತಗಳಲ್ಲಿ ಹೆಣಗಾಡಿದೆ. ಮೊದಲ ಮೂರು ಪಂದ್ಯಗಳನ್ನು ಬಿಟ್ಟುಕೊಟ್ಟಿದೆ. ಮುಂಬೈನಲ್ಲಿ ನಡೆಯಲಿರುವ ರಿಷಭ್ ಪಂತ್ ನೇತೃತ್ವದ ತಂಡದ ವಿರುದ್ಧದ ಪಂದ್ಯದಲ್ಲಿ ಮುಂಬೈ ಹೆಚ್ಚು ಸ್ನೇಹಪರ ಪ್ರೇಕ್ಷಕರನ್ನು ನೋಡುವ ನಿರೀಕ್ಷೆಯಲ್ಲಿದೆ.

ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಸೌರವ್ ಗಂಗೂಲಿ, ಹಾರ್ದಿಕ್ ಬಗ್ಗೆ ಗೌರವಯುತ ವರ್ತನೆಯನ್ನು ಒತ್ತಾಯಿಸಿದರು.

ಇದನ್ನೂ ಓದಿ: Pakistan Cricket Team : ಪಾಕಿಸ್ತಾನ ಕ್ರಿಕೆಟ್​ ಆಟಗಾರರಿಗೆ ರೈಫಲ್​ ತರಬೇತಿ; ಇದೆಲ್ಲ ಬೇಕಿತ್ತಾ ಎಂದ ಅಭಿಮಾನಿಗಳು

ಏಕಾಂಗಿ ಮಾಡಬೇಡಿ

ಹಾರ್ದಿಕ್ ಪಾಂಡ್ಯ ಅವರನ್ನು ಏಕಾಂಗಿಯಾಗಿಸುವುದು ಅನ್ಯಾಯವಾಗಿದೆ. ಅಭಿಮಾನಿಗಳು ಅವರನ್ನು ದೂಷಿಸುವುದನ್ನು ತಪ್ಪಿಸಬೇಕು. ರೋಹಿತ್ ಶರ್ಮಾ ಅವರ ಪ್ರದರ್ಶನವು ಅನುಕರಣೀಯವಾಗಿದ್ದರೂ, ಹಾರ್ದಿಕ್ ಅವರನ್ನು ನಾಯಕನನ್ನಾಗಿ ನೇಮಿಸುವುದು ಫ್ರಾಂಚೈಸಿಯ ನಿರ್ಧಾರವಾಗಿದೆ. ನಾಯಕನಾಗಿರುವುದು ಅವರ ನಿರ್ಧಾರವಲ್ಲ ಎಂದು ಅವರು ಹೇಳಿದರು.

ಮತ್ತೊಂದೆಡೆ, ಡೆಲ್ಲಿ ಐಪಿಎಲ್ 2024 ರಲ್ಲಿ ಹೆಣಗಾಡುತ್ತಿದೆ, ಈ ಋತುವಿನಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ನಾಯಕ ರಿಷಭ್ ಪಂತ್ ಫಾರ್ಮ್​ಗೆ ಮರಳಿದ್ದರೂ, ಡೆಲ್ಲಿ ಕ್ಯಾಪಿಟಲ್ಸ್ಗೆ ಸಂಭ್ರಮಿಸಲು ಏನೂ ಕಾರಣಗಳು ಇಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Car Care Tips : ಕಾಸು ಉಳಿಸಿ ಎಂಜಿನ್ ಬೆಳಗಿಸಿ, ಕಾರಿನ ಎಂಜಿನ್ ನೀವೇ ​ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್​​​

Car Care Tips: ಕಾರಿನ ಎಂಜಿನ್ ಕ್ಲೀನಿಂಗ್ ಸವಾಲಿನಿಂದ ಕೂಡಿರುವುದಕ್ಕೆ ಅದರ ಮೇಲೆ ಅಂಟಿರುವ ಗ್ರೀಸ್ ಹಾಗೂ ಇನ್ನಿತರ ವಸ್ತುಗಳ ಹಾಗೂ ಜಟಿಲ ಪ್ರದೇಶವೇ ಕಾರಣ. ಅನೇಕರು ಈ ಕಾರ್ಯವನ್ನು ವೃತ್ತಿಪರರಿಗೆ ವಹಿಸುತ್ತಾರೆ. ಆದರೆ ಹಣವನ್ನು ಉಳಿಸಬೇಕಾದರೆ ನೀವೇ ಅದನ್ನು ತೊಳೆಯಬಹುದು. ಪ್ರತಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ಎಂಜಿನ್ ಸ್ವಚ್ಛಗೊಳಿಸುವುದರಿಂದ ಅದು ತುಕ್ಕು ಸೇರಿದಂತೆ ನಾನಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

VISTARANEWS.COM


on

car care tips
Koo

ಬೆಂಗಳೂರು: ತಮ್ಮ ಕಾರುಗಳನ್ನು ಆಗಾಗ ತೊಳೆಯುವ ಮಂದಿ ಅದರ ಎಂಜಿನ್ (Car Engine) ಸ್ವಚ್ಛತೆ ಬಗ್ಗೆ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಎಂಜಿನ್ ಎಲ್ಲರಿಗೂ ಕಾಣುವುದಿಲ್ಲ ಎಂಬುದು ಮೊದಲ ಕಾರಣವಾದರೆ ಕ್ಲೀನ್ ಮಾಡಲು ಕಷ್ಟ ಎಂಬುದು ಎರಡನೇ ಸಂಗತಿ. ಆದರೆ, ಗ್ರೀಸ್​, ಆಯಿಲ್​ಗಳ ಸಣ್ಣ ಪ್ರಮಾಣದ ಸೋರಿಕೆ ಹಾಗೂ ಇನ್ನಿತ್ಯಾದಿ ಕಾರಣಕ್ಕೆ ಎಂಜಿನ್ ಮೇಲೆ ಹೆಚ್ಚು ಕೊಳೆ ಇರುತ್ತದೆ. ಅಂಕಿಅಂಶಗಳ ಪ್ರಕಾರ, 60% ಕ್ಕೂ ಹೆಚ್ಚು ಕಾರು ಮಾಲೀಕರಿಗೆ ಎಂಜಿನ್ ಸ್ವಚ್ಛ ಮಾಡುವುದೇ ಸವಾಲು. ಅದಕ್ಕಾಗಿ ವರ್ಷಕ್ಕೊಮ್ಮೆ ಸರ್ವಿಸ್​ಗೆ ಬಿಡುವಾಗ ಮಾತ್ರ ಎಂಜಿನ್ ಸ್ವಚ್ಛ ಮಾಡುತ್ತಾರೆ. ಹಾಗೆ ಮಾಡುವುದು ಸೂಕ್ತ ಮಾರ್ಗವಲ್ಲ. ಅದಕ್ಕಾಗಿ ಎಂಜಿನ್ ಶುಚಿ ಮಾಡುವಂಥ ಕೆಲವೊಂದು ಉಪಾಯಗಳನ್ನು ಈ ಕೆಳಗೆ (Car Care Tips) ನೀಡಲಾಗಿದೆ. ಅದನ್ನು ಪಾಲಿಸಿದರೆ ನಿಮ್ಮ ಕಾರಿನ ಎಂಜಿನ್ ಸದಾ ಬೆಳಗುತ್ತಿರುತ್ತದೆ.

ಕಾರ್ ಎಂಜಿನ್ ಅನ್ನು ಸ್ವಚ್ಛಗೊಳಿಸುವುದು ಹೇಗೆ

ಕಾರಿನ ಎಂಜಿನ್ ಕ್ಲೀನಿಂಗ್ ಸವಾಲಿನಿಂದ ಕೂಡಿರುವುದಕ್ಕೆ ಅದರ ಮೇಲೆ ಅಂಟಿರುವ ಗ್ರೀಸ್ ಹಾಗೂ ಇನ್ನಿತರ ವಸ್ತುಗಳ ಹಾಗೂ ಜಟಿಲ ಪ್ರದೇಶವೇ ಕಾರಣ. ಅನೇಕರು ಈ ಕಾರ್ಯವನ್ನು ವೃತ್ತಿಪರರಿಗೆ ವಹಿಸುತ್ತಾರೆ. ಆದರೆ ಹಣವನ್ನು ಉಳಿಸಬೇಕಾದರೆ ನೀವೇ ಅದನ್ನು ತೊಳೆಯಬಹುದು. ಪ್ರತಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ಎಂಜಿನ್ ಸ್ವಚ್ಛಗೊಳಿಸುವುದರಿಂದ ಅದು ತುಕ್ಕು ಸೇರಿದಂತೆ ನಾನಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಎಂಜಿನ್ ತೊಳೆಯಲು ಹೊರಡುವ ಮೊದಲು ಅಗತ್ಯ ವಸ್ತುಗಳು ಮತ್ತು ಪರಿಕರಗಳನ್ನು ತರಬೇಕು. ಮುಖ್ಯ ಉತ್ಪನ್ನಗಳಲ್ಲಿ ಒಂದು ಡಿಗ್ರೀಸರ್. ಇವುಗಳು ಎಂಜಿನ್ ಮೇಲೆ ಕುಳಿತಿರುವ ಗ್ರೀಸ್​ನಂಥ ಜಿಡ್ಡಿನಂಶವನ್ನು ಬೇಗ ಕರಗಿಸುತ್ತದೆ. ಇಂಥ ಕೆಮಿಕಲ್​ಗಲು ಹೊಂದಿರುವ ಘಾಟು ವಾಸನೆಯಿಂದಾಗಿ ಅವುಗಳನ್ನು ಹೊರಾಂಗಣದಲ್ಲಿ ಬಳಸಬೇಕು. ಲಿಕ್ವಿಡ್​ ಮಾದರಿಯ ಡಿಗ್ರೀಸರ್​ಗಳನ್ನು ಬಳಸಲು ಅನುಕೂಲ ಮಾಡಬಹುದು.

ಇನ್ನೇನು ಬೇಕು?

ಸ್ವಚ್ಛಗೊಳಿಸುವ ದಿನ ಮಳೆ ಅಥವಾ ಹೆಚ್ಚು ಚಳಿ ಇಲ್ಲದಿದ್ದರೆ ಉತ್ತಮ. ಇದರಿಂದ ಎಂಜಿನ್ ಮತ್ತು ಅದರ ಘಟಕಗಳು ತೊಳೆದ ಸ್ವಲ್ಪ ಹೊತ್ತಿನಲ್ಲಿಯೇ ಒಣಗುತ್ತವೆ. ಇನ್ನು ಎಂಜಿನ್ ಆಫ್​ ಮಾಡಿದ ಬಳಿಕ ಸಾಕಷ್ಟು ಹೊತ್ತು ಕಾಯುವುದು ಉತ್ತಮ. ತೊಳೆಯುವ ಸಂದರ್ಭದಲ್ಲಿ ಉಂಟಾಗಬಹುದಾದ ಸುಟ್ಟ ಗಾಯಗಳನ್ನು ತಪ್ಪಿಸಬಹುದು.

ಮೊದಲಿಗೆ ಎಂಜಿನ್ ಕಂಪಾರ್ಟ್​ಮೆಂಟ್​ ಅನ್ನು ಓಪನ್ ಮಾಡಬೇಕು. ಮೇಲೆ ನಿಂತಿರುವ ಎಲೆಗಳು ಮತ್ತು ಕಡ್ಡಿಗಳನ್ನು ನಿಧಾನವಾಗಿ ತೆಗೆಯಬೇಕು. ವ್ಯಾಕ್ಯೂಮ್ ಕ್ಲೀನರ್ ಅಥವಾ ಏರ್ ಕಂಪ್ರೆಸರ್ ಅನ್ನು ಅದಕ್ಕಾಗಿ ಬಳಸಬಹುದು. ಈ ವೇಳೆ ಬ್ಯಾಟರಿ, ಇಗ್ನಿಷನ್ ಕೇಬಲ್ ಗಳು ಮತ್ತು ಎಂಜಿನ್ ಕಂಟ್ರೋಲ್ ಯುನಿಟ್ ನಂತಹ ಎಲ್ಲಾ ಎಲೆಕ್ಟ್ರಾನಿಕ್ ಘಟಕಗಳನ್ನು ಸೀಲ್​ ಮಾಡಿರಬೇಕು. ಇದಕ್ಕೆ ನೀರು ಬೀಳದಂತೆ ನೋಡಿಕೊಳ್ಳಬೇಕು. ಏರ್ ಫಿಲ್ಟರ್​ಗಳನ್ನು ತೆಗೆದುಬಿಡಿ. ಸರಿಯಾದ ಟೂಲ್ಸ್​ ಇದ್ದರೆ ಬ್ಯಾಟರಿ ಸಂಪರ್ಕವನ್ನೂ ತಪ್ಪಿಸಿ. ಇದರಿಂದ ಶಾರ್ಟ್​ ಸರ್ಕೀಟ್​ನಂಥ ಸಂಭಾವ್ಯ ಅವಘಡಗಳನ್ನು ತಪ್ಪಿಸಬಹುದು.

ಡಿಗ್ರೀಸರ್ ನ ಹಾಕಿ

ಎಂಜಿನ್​ ಮೇಲ್ಮೈ ಕೊಳೆಯನ್ನು ತೆಗೆಯಲು ಒತ್ತಡದೊಂದಿಗೆ ನೀರು ಹಾಯಿಸಿ. ಮಾರುಕಟ್ಟೆಯಲ್ಲಿ ಬಗೆಬಗೆಯ ಕಂಪ್ರೆಸರ್​​ಗಳಿವೆ. ಎಂಜಿನ್ ಗೆ ಡಿಗ್ರೀಸರ್ ಹಚ್ಚಿ, ವಿಶೇಷವಾಗಿ ಕವರ್ ಗಳು ಮತ್ತು ಪೈಪ್ ಗಳಂತಹ ಭಾರಿ ಕೊಳೆಯಿರುವ ಜಾಗಗಳಿಗೆ ಪರಿಣಾಮಕಾರಿಯಾಗಿ ಹಚ್ಚಿ. ಸ್ವಚ್ಛಗೊಳಿಸಲು ಸಿಂಥೆಟಿಕ್ ಬ್ರಿಸ್ಟಲ್ ಬ್ರಷ್ ಬಳಸಿ. ಅಗತ್ಯವಿದ್ದರೆ, ಡಿಗ್ರೀಸರ್ ಅಪ್ಲಿಕೇಶನ್ ಮತ್ತೆ ಮತ್ತೆ ಹಾಕಿ.

ಡಿಗ್ರೀಸರ್ ಅನ್ನು ತೆಗೆದುಹಾಕಲು ಎಂಜಿನ್ ಅನ್ನು ಮತ್ತೆ ನೀರಿನಿಂದ ತೊಳೆಯಿರಿ. ಹಾನಿಯನ್ನು ತಪ್ಪಿಸಲು ಎಲ್ಲ ಗ್ರೀಸರ್​ಗಳನ್ನು ಚೆನ್ನಾಗಿ ತೊಳೆಯಿರು.

ಒಣಗಿಸಿ

ಎಂಜಿನ್ ಮೇಲೆ ನೀರಿನ ಕಲೆಗಳು ನಿಲ್ಲುವುದನ್ನು ತಪ್ಪಿಸಲು ಚೆನ್ನಾಗಿ ಒಣಗಿಸಿ. ನೀವು ಅದನ್ನು ಗಾಳಿಯಲ್ಲಿ ಒಣಗಲು ಬಿಡಬಹುದು ಅಥವಾ ಸ್ವಚ್ಛವಾದ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಉಜ್ಜಬಹುದು. ಮೂಲೆಗಳನ್ನು ಮತ್ತು ತಲುಪಲು ಕಷ್ಟಕರವಾದ ಪ್ರದೇಶಗಳನ್ನು ಒಣಗಿಸಲು ಬಟ್ಟೆ ಬಳಸಿ. ಸಂಪೂರ್ಣವಾಗಿ ಒಣಗಿದ ನಂತರ, ಪ್ಲಾಸ್ಟಿಕ್ ಕವರ್​ ತೆಗೆದು ಎಲ್ಲಾ ವಿದ್ಯುತ್ ಸಂಪರ್ಕಗಳನ್ನು ಮರುಸಂಪರ್ಕಿಸಿ.

ಎಂಜಿನ್ ತೊಳೆಯುವುದರಿಂದ ಆಗುವ ಪ್ರಯೋಜಗಳು

ಎಂಜಿನ್​ ಮೇಲೆ ಕೊಳೆ ಕಡಿಯಿದ್ದಾಗ ಅದಕ್ಕೆ ಚೆನ್ನಾಗಿ ಗಾಳಿ ಬಡಿಯುತ್ತದೆ. ಅದರಿಂದ ಕಾರಿನ ಎಂಜಿನ್ ಅತಿಯಾಗಿ ಬಿಸಿಯಾಗುವ ಸಾಧ್ಯತೆ ಕಡಿಮೆ. ಎಂಜಿನ್ ನಿರ್ವಹಣೆ ಸುಲಭವಾಗುತ್ತದೆ. ಸೋರಿಕೆಗಳು, ಬಿರುಕುಗಳು ಮತ್ತು ಇತರ ಹಾನಿಯು ಚೆನ್ನಾಗಿ ಕಾಣಿಸುತ್ತದೆ. ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಎಂಜಿನ್ ಭಾಗಗಳು ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು.

ಇದನ್ನೂ ಓದಿ: Shilpa Shetty : 3.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​​ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ; ವಿಡಿಯೊ ನೋಡಿ

ಡಿಗ್ರೀಸರ್​ಗಳು ಯಾವುದೆಲ್ಲ?

ಆರ್ಗಾನಿಕ್​ ಡಿಗ್ರೀಸರ್​ಗಳು ಮಾರುಕಟ್ಟೆಯಲ್ಲಿವೆ. ಈ ಡಿಗ್ರೀಸರ್ ಗಳು ಕಡಿಮೆ ಬೆಲೆಗೆ ದೊರೆಯುತ್ತವೆ. ಡಾಂಬರು ಕಲೆಗಳು, ಯಂತ್ರ ತೈಲ, ಮ್ಯಾಸ್ಟಿಕ್, ನೈಸರ್ಗಿಕ ರಬ್ಬರ್ ಮತ್ತು ಸಿಲಿಕಾನ್ ಅನ್ನು ಇದರಿಂದ ತೆಗೆಯಬಹುದು. ಇದು ಬೆಂಕಿ ಅಪಾಯಕಾರಿ, ಆದ್ದರಿಂದ ಅವುಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯ.

ಎರಡನೆಯದದ್ದು ಲಿಕ್ವಿಡ್​ ಆಧಾರಿತ ಡಿಗ್ರೀಸರ್. ಇದು ಅತ್ಯುತ್ತಮ ಆಂಟಿ-ಸ್ಟ್ಯಾಟಿಕ್ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ತುಕ್ಕು ಸೇರಿದಂತೆ ಕಠಿಣ ಕಲೆಗಳನ್ನು ತೆಗೆದುಹಾಕಬಹುದು. ಅವು ಸುರಕ್ಷಿತ ಮತ್ತು ನಿರುಪದ್ರವಿ. ಪ್ಲಾಸ್ಟಿಕ್ ಮೇಲ್ಮೈಗೂ ಹಾಕಬಹುದು. ಫೆರಸ್ ಮತ್ತು ಕಬ್ಬಿಣೇತರ ಲೋಹಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತವೆ.
ಮೂರನೇ ಮಾದರಿಯ ಸಾವಯವ ದ್ರಾವಕಗಳ ಎಮಲ್ಷನ್​ಗಳು ಅತ್ಯುತ್ತಮ ನುಗ್ಗುವ ಸಾಮರ್ಥ್ಯ ಹೊಂದಿವೆ. ತೈಲ ಕಣಗಳೊಂದಿಗೆ ಮೇಲ್ಮೈ ಮರು-ಮಾಲಿನ್ಯ ತಡೆಯುತ್ತವೆ. ಮಸಿ ಮತ್ತು ಆಕ್ಸೈಡ್​ ಫಿಲ್ಮ್ ಗಳನ್ನು ತೆಗೆದುಹಾಕುವಲ್ಲಿ ಅವು ಅತ್ಯುತ್ತಮವಾಗಿವೆ.

ಡಿಗ್ರೀಸರ್ ಗಳನ್ನು ಬಳಸುವ ಮುನ್ನ

ಮೊದಲಿಗೆ ಬಾಟಲಿಗಳಲ್ಲಿ ಬರೆದಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ. ತಯಾರಕರ ಶಿಫಾರಸುಗಳನ್ನು ಅನುಸರಿಸಿ. ಉತ್ಪನ್ನವು ನೀವು ತೊಳೆಯುವ ಎಂಜಿನ್​ಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, ಟ್ರೈಕ್ಲೋರೋಫ್ಲೋರೋಮೀಥೇನ್ ಆಧಾರಿತ ಡಿಗ್ರೀಸರ್ ಗಳು ಅಲ್ಯೂಮಿನಿಯಂ ವಸ್ತುಗಳಿಗೆ ಬಿದ್ದಾಗ ಸ್ಫೋಟವಾಗುತ್ತದೆ.

ದ್ರಾವಣ ಆಧಾರಿತ ಡಿಗ್ರೀಸರ್ ಗಳನ್ನು ಬಳಸುವಾಗ, ಬಟ್ಟೆ, ಸುರಕ್ಷತಾ ಕನ್ನಡಕಗಳು ಮತ್ತು ಉಸಿರಾಟದ ಸಾಧನವನ್ನು ಧರಿಸಿ. ಗಾಳಿಯಾಡುವ ಪ್ರದೇಶದಲ್ಲಿ ಕೆಲಸ ಮಾಡಿ. ಬೆಂಕಿಯ ಸಮೀಪ ತೆಗೆದುಕೊಂಡು ಹೋಗಬೇಡಿ. ಡಿಗ್ರೀಸರ್ ಅನ್ನು ಸಮಾನವಾಗಿ ಹಾಕಲು ಸ್ಪ್ರೇಯರ್ ಅಥವಾ ಲಿಂಟ್-ಫ್ರೀ ಬಟ್ಟೆಯನ್ನು ಬಳಸಿ.
ರಾಸಾಯನಿಕ ಉತ್ಪನ್ನವನ್ನು ಸಂಪೂರ್ಣವಾಗಿ ಒಣಗಲು ಬಿಡಬೇಡಿ.

ಶುಚಿಗೊಳಿಸುವ ಗುಣಮಟ್ಟ ನಿಯಂತ್ರಣ

ಆಟೋಮೋಟಿವ್ ತಜ್ಞರ ಪ್ರಕಾರ, ಡಿಗ್ರೀಸರ್ ಗಳ ಸಮಪರ್ಕ ಬಳಕೆ ಮತ್ತು ನಿಯಮಿತ ಎಂಜಿನ್ ಕ್ಲೀನಿಂಗ್ ಕಾರಿನ ಜೀವಿತಾವಧಿಯನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ. ಅದರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಡಿಗ್ರೀಸರ್ ಗಳನ್ನು ಆಯ್ಕೆ ಮಾಡಲು ಮತ್ತು ಬಳಸಲು ಮತ್ತು ನಿಯಮಿತ ಎಂಜಿನ್ ಕ್ಲೀನಿಂಗ್ ಗಾಗಿ ಶಿಫಾರಸುಗಳನ್ನು ಅನುಸರಿಸಬೇಕು.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು

T20 World Cup 2024: ರೋಹಿತ್ ಶರ್ಮ ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ. ಇದುವರೆಗೆ 35 ಸಿಕ್ಸರ್​ ಬಾರಿಸಿದ್ದಾರೆ

VISTARANEWS.COM


on

T20 World Cup 2024
Koo

ಬೆಂಗಳೂರು: 2007ರಲ್ಲಿ ಆರಂಭಗೊಂಡ ಟಿ20 ವಿಶ್ವ ಕಪ್ (T20 World Cup 2024) ​ನಿಂದ 2022ರ ವಿಶ್ವ ಕಪ್​ವರೆಗೆ ನಡೆದ ಟಿ20 ವಿಶ್ವ ಕಪ್​ನಲ್ಲಿ ಭಾರತ ಕ್ರಿಕೆಟ್​ ತಂಡದ ಆಟಗಾರರು ಎಷ್ಟು ಸಿಕ್ಸರ್​ ಸಾಧನೆ ಮಾಡಿದ್ದಾರೆ ಎನ್ನುವ ಸ್ವಾರಸ್ಯಕರ ಸಂಗತಿ ಇಂತಿದೆ.

ರೋಹಿತ್​ ಶರ್ಮ


ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಉದ್ಘಾಟನ ಆವೃತ್ತಿಯ ವಿಶ್ವಕಪ್​ನಿಂದ ಆಡಿ ಇದುವರೆಗೆ 35 ಸಿಕ್ಸರ್​ ಬಾರಿಸಿದ್ದಾರೆ. ಇದೀಗ 2024 ರ ವಿಶ್ವ ಕಪ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್​ ತಮ್ಮ ಸಿಕ್ಸರ್​ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದ್ದಾರೆ. 2007-2022ರ ವಿಶ್ವಕಪ್​ ಆವೃತ್ತಿಯಲ್ಲಿ ರೋಹಿತ್​ ಒಟ್ಟು 39 ಪಂದ್ಯಗಳನ್ನು ಆಡಿದ್ದಾರೆ.


ಯುವರಾಜ್ ಸಿಂಗ್


ಭಾರತ ಕ್ರಿಕೆಟ್​ ಕಂಡ ಅತ್ಯಂತ ಶ್ರೇಷ್ಠ ಆಲ್​ರೌಂಡರ್, ಮಾಜಿ ಆಟಗಾರ, 2007 ವಿಶ್ವಕಪ್​ ಟೂರ್ನಿಯಲ್ಲಿ ಸ್ಟುವರ್ಟ್​ ಬ್ರಾಡ್​ ಓವರ್​ಗೆ ಸತತವಾಗಿ 6 ಸಿಕ್ಸರ್​ ಬಾರಿಸಿದ ಯುವರಾಜ್​ ಸಿಂಗ್ ಈ ಸಾಲಿನಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ಯುವಿ ಒಟ್ಟು 31 ವಿಶ್ವ ಕಪ್​ ಪಂದ್ಯಗಳನ್ನು ಆಡಿದ್ದು 33 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಭಾರತ 2007 ಮತ್ತು 2011 ರ ವಿಶ್ವ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ ಎನ್ನುವ ಕೀರ್ತಿಯೂ ಇವರದ್ದಾಗಿದೆ.


ವಿರಾಟ್​ ಕೊಹ್ಲಿ


ಕಳೆದ 2 ವರ್ಷಗಳ ಬಳಿಕ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ, ಈ ಆವೃತ್ತಿ ಐಪಿಎಲ್​ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ಕಿಂಗ್ ಖ್ಯಾತಿಯ​ ವಿರಾಟ್​ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. 2012ರಿಂದ ಟಿ20 ವಿಶ್ವಕಪ್​ ಆಡುತ್ತಿರುವ ಕೊಹ್ಲಿ ಇದುವರೆಗೆ 27 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 28 ಸಿಕ್ಸರ್​ ಬಾರಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಕೇವಲ 4 ಸಿಕ್ಸರ್​ ಬಾರಿಸಿದರೆ ಯುವರಾಜ್​ ಸಿಂಗ್​ ದಾಖಲೆ ಮುರಿಯಲಿದ್ದಾರೆ.

ಇದನ್ನೂ ಓದಿ T20 World Cup 2024: ಮಿನಿ ವಿಶ್ವಕಪ್​ ಸಮರದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ದಾಂಡಿಗರಿವರು!


ಎಂ.ಎಸ್​ ಧೋನಿ


ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಈ ಯಾದಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಧೋನಿ 2007ರಿಂದ 2016ರ ತನಕ 33 ಪಂದ್ಯಗಳನ್ನಾಡಿ ಒಟ್ಟು 16 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಆದರೆ ಧೋನಿ ಚೊಚ್ಚಲ ಟಿ20 ವಿಶ್ವಕಪ್​ನಲ್ಲಿಯೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ ಖ್ಯಾತಿ ಹೊಂದಿದ್ದಾರೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳಿವು


ಕೆ.ಎಲ್​ ರಾಹುಲ್​


ಕನ್ನಡಿಗ ಕೆ.ಎಲ್​ ರಾಹುಲ್​ ಅವರು ಇದುವರೆಗೆ 11 ಟಿ20 ವಿಶ್ವಕಪ್​ ಆಡಿದ್ದು 15 ಸಿಕ್ಸರ್​ ಬಾರಿಸಿದ್ದಾರೆ. ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಅವರಿಗೆ 5ನೇ ಸ್ಥಾನ. ವಿಪರ್ಯಾಸವೆಂದರೆ ಈ ಬಾರಿ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.

Continue Reading

ಪ್ರಮುಖ ಸುದ್ದಿ

ವಾಲ್ಮೀಕಿ ನಿಗಮ ಅಧೀಕ್ಷಕ ಆತ್ಮಹತ್ಯೆ ಪ್ರಕರಣ: ಮೂವರ ಮೇಲೆ ಎಫ್‌ಐಆರ್; ಡೆತ್‌ ನೋಟ್‌ನಲ್ಲಿರುವ ಸಚಿವ ಯಾರು?

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಅವರು ಆರು ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದರು. ನಿಯಮಬಾಹಿರವಾಗಿ 85 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ, ಅದನ್ನು ಪ್ರಶ್ನಿಸಿದ್ದಕ್ಕೆ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅದರಲ್ಲಿ ಆರೋಪಿಸಿದ್ದರು. ಡೆತ್ ನೋಟ್‌ನಲ್ಲಿ, ʼಸಚಿವರ ಮೌಖಿಕ ಆದೇಶ ಮೇಲೆ ಹಣ ವರ್ಗಾವಣೆʼ ವಿಚಾರ ಪ್ರಸ್ತಾಪವಿದೆ.

VISTARANEWS.COM


on

self harming chandrashekar ವಾಲ್ಮೀಕಿ
Koo

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ (Self Harming) ಪ್ರಕರಣದಲ್ಲಿ ಮೂರು ಜನ ಅಧಿಕಾರಿಗಳ (Officers) ವಿರುದ್ಧ ಪ್ರಕರಣ (FIR) ದಾಖಲಿಸಲಾಗಿದೆ. ಚಂದ್ರಶೇಖರ್‌ ಬರೆದಿಟ್ಟಿರುವ ಡೆತ್‌ ನೋಟ್‌ನಲ್ಲಿ (Death note) ಒಬ್ಬರು ಸಚಿವರ (minister) ಉಲ್ಲೇಖ ಕಂಡುಬಂದಿದೆ.

ಶಿವಮೊಗ್ಗ (Shivamogga news) ನಗರದ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್, ಬ್ಯಾಂಕ್ ಅಧಿಕಾರಿ ಸುಚಿಸ್ಥನಾ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಿಗಮದಲ್ಲಿ ನಿಯಮಬಾಹಿರವಾಗಿ 85 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವನ್ನು ಡೆತ್ ನೋಟ್‌ನಲ್ಲಿ ನೌಕರ ಮಾಡಿದ್ದಾರೆ.

ಚಂದ್ರಶೇಖರ್‌ ಅವರು ಆರು ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದರು. ನಿಯಮಬಾಹಿರವಾಗಿ 85 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ, ಅದನ್ನು ಪ್ರಶ್ನಿಸಿದ್ದಕ್ಕೆ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅದರಲ್ಲಿ ಆರೋಪಿಸಿದ್ದರು. ಡೆತ್ ನೋಟ್‌ನಲ್ಲಿ, ʼಸಚಿವರ ಮೌಖಿಕ ಆದೇಶ ಮೇಲೆ ಹಣ ವರ್ಗಾವಣೆʼ ವಿಚಾರ ಪ್ರಸ್ತಾಪವಿದೆ. ಸಚಿವರ ಹೆಸರು ಬರೆಯದೇ ಮೌಖಿಕ ಆದೇಶ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದು, ಈ ಸಚಿವರು ಯಾರು ಎಂಬ ಪ್ರಶ್ನೆ ಹಾಗೇ ಉಳಿದಿದೆ.

85 ಕೋಟಿ ರೂ. ಹಣ ವರ್ಗಾವಣೆ ವಿಚಾರದಲ್ಲಿ ಚಂದ್ರಶೇಖರ್‌ ಭಯಗೊಂಡಿದ್ದರು ಎಂದು ಗೊತ್ತಾಗಿದೆ. ಹಣ ಯಾರ ಅಕೌಂಟ್‌ಗೆ ಕಳಿಸಿದ್ದಾರೆ ಎಂದು ತಿಳಿಯದೇ ಆತಂಕಗೊಂಡಿದ್ದರು. ಬ್ಯಾಂಕ್ ಅಧಿಕಾರಿಗೆ ಈ ಬಗ್ಗೆ ಮಾಹಿತಿ ಕೇಳಿದರೂ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲ. 85 ಕೋಟಿ ವರ್ಗಾವಣೆ ಆಗಿದ್ದು ಎಲ್ಲಿಗೆ ಎಂಬುದನ್ನು ಬ್ಯಾಂಕ್‌ ಅಧಿಕಾರಿ ತಿಳಿಸಬೇಕಿದೆ. ಮೌಖಿಕ ಆದೇಶ ನೀಡಿದ ಸಚಿವರು ಯಾರು ಎಂಬುದನ್ನು ಚಂದ್ರಶೇಖರ್‌ ಅವರ ಮೇಲಧಿಕಾರಿಗಳು ತಿಳಿಸಬೇಕಿದೆ.

ಕಣ್ಣೀರಿಟ್ಟ ಚಂದ್ರಶೇಖರ್ ಪತ್ನಿ

“ನನ್ನ ಗಂಡನ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕು. ನಾನು ಎರಡು ಮಕ್ಕಳನ್ನು ಇಟ್ಟುಕೊಂಡು ಹೇಗೆ ಬದುಕೋದು ಸರ್” ಎಂದು ಗಂಡನನ್ನು ನೆನೆದು ಚಂದ್ರಶೇಖರ್ ಪತ್ನಿ ಕವಿತಾ ಕಣ್ಣೀರಿಟ್ಟಿದ್ದಾರೆ. ʼʼನನ್ನ ಗಂಡನ ಸಾವಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಬೇಕು. ಮೂವರು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರು ಒಂದು ರೂಪಾಯಿ ಲಂಚ ಪಡೆದಿಲ್ಲ. ನಾನು ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡ್ತಾ ಇದ್ದೀನಿ” ಎಂದು ಶಿವಮೊಗ್ಗದಲ್ಲಿ ಚಂದ್ರಶೇಖರ್ ಪತ್ನಿ ಕವಿತಾ ಹೇಳಿಕೆ ನೀಡಿದ್ದಾರೆ.

“ಸಚಿವರನ್ನು ವಜಾ ಮಾಡಿ”

“ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ. ನಾನು ಹೇಡಿಯಲ್ಲ ಎಂದು ಸಹ ಅವರು ಬರೆದಿದ್ದಾರೆ. ಸೂಪರಿಂಟೆಂಡೆಂಟ್ ಪರಿಸ್ಥಿತಿ ಹೀಗಾದರೆ ಸಾಮಾನ್ಯ ಅಧಿಕಾರಿಗಳ ಪರಿಸ್ಥಿತಿ ಏನು? ಕೋಟ್ಯಾಂತರ ರೂಪಾಯಿ ಹಣ ಸಚಿವರ ಮೌಖಿಕ ಆದೇಶದ ಮೂಲಕ ಹಣ ವರ್ಗಾವಣೆ ಆಗಿದೆ. ಸರ್ಕಾರದ ಅಧಿಕಾರಿಗಳಿಗೆ ಈ ಪರಿಸ್ಥಿತಿ ಬರುತ್ತೆ ಅಂದರೆ ನಾವು ಯಾವ ವಾತಾವರಣದಲ್ಲಿದ್ದೇವೆ? ಇಡೀ ಪ್ರಕರಣ ನೋಡಿದರೆ ಏನೂ ನಡೆದೇ ಇಲ್ಲ ಎಂಬಂತೆ ಸರ್ಕಾರ ಇದೆ. ಕುಟುಂಬಗಳು ಅನಾಥವಾಗುತ್ತಿವೆ” ಎಂದು ಶಿವಮೊಗ್ಗದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಟೀಕಿಸಿದ್ದಾರೆ.

ಸಿಎಂ ಕೂಡಲೇ ತಮ್ಮ ವಾಲ್ಮೀಕಿ ನಿಗಮದ ಮಂತ್ರಿಯನ್ನು ವಜಾಗೊಳಿಸಬೇಕು. ಈ ಘಟನೆಗಳನ್ನು ರಾಜ್ಯದ ಜನ ಗಮನಿಸುತ್ತಾರೆ. ಕೂಡಲೇ ಸಂಬಂಧ ಪಟ್ಟ ಮಂತ್ರಿಯ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದ ಉಸ್ತುವಾರಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಸರ್ಕಾರಿ ನೌಕರನ ಸಾವಿಗೆ ಕಾರಣರಾದವರ ಹೆಸರನ್ನು ಸಹ ಎಫ್ಐಆರ್‌ನಲ್ಲಿ ಸೇರಿಸಬೇಕು. ಅಧಿಕಾರಿಗಳು ಹೆದರಿಕೊಂಡು ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ಆತ್ಮಹತ್ಯೆ ಆಗಿ ಎರಡು ದಿನ ಆದರೂ ಸರ್ಕಾರ ಸುಮ್ಮನಿರುವುದನ್ನು ನೋಡಿ ಅನುಮಾನ ಬರುತ್ತಿದೆ” ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: Self Harming: ಮೇಲಧಿಕಾರಿಗಳ ಕಿರುಕುಳ, ಹಗರಣದ ಕರಿನೆರಳು: ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಟೆಂಡೆಂಟ್ ಆತ್ಮಹತ್ಯೆ

Continue Reading

ಬೆಂಗಳೂರು

Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

Traffic Violation : ಟ್ರಾಫಿಕ್‌ ಇರುವ ಪ್ರಮುಖ ರಸ್ತೆಗಳಲ್ಲಿ ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ಏನಾದರೂ ವಾಹನ ನಿಂತುಬಿಟ್ಟರೆ ಬೆಂಗಳೂರು ಸಂಚಾರಿ ಪೊಲೀಸರು ಚಾಲಕನ ಮೇಲೆ ಕೇಸ್ ದಾಖಲಿಸಲಿದ್ದಾರೆ. ಜತೆಗೆ ಮಕ್ಕಳ ಅಪಾಯಕಾರಿ ವ್ಹೀಲಿಂಗ್‌ ಶೋಕಿಗೆ ಪೋಷಕರ ತಲೆದಂಡವಾಗಲಿದೆ.

VISTARANEWS.COM


on

By

Traffic Violation Case filed against driver if petrol runs out and vehicle stops on road
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಲ್ಲಿ ಟ್ರಾಫಿಕ್‌ ಸಮಸ್ಯೆಯನ್ನು ತಪ್ಪಿಸಲು ಸಂಚಾರಿ ಪೊಲೀಸರ (Traffic Violation) ಸರ್ಕಸ್ ಮುಂದುವರಿದಿದೆ. ಸದ್ಯ ಗಾಡಿ ಓಡಿಸುವಾಗ ಪೆಟ್ರೋಲ್‌ ಇಲ್ಲದೆ ರಸ್ತೆ ಮಧ್ಯೆ ಏನಾದರೂ ನಿಂತರೆ ಕೇಸ್‌ ಬೀಳುವುದು ಗ್ಯಾರಂಟಿ.. ಹೌದು ಅತಿ ಹೆಚ್ಚು ಟ್ರಾಫಿಕ್‌ ಇರುವ ರಸ್ತೆಗಳಲ್ಲಿ ಏನಾದರೂ ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ, ಚಾಲಕನ ಮೇಲೆ ಕೇಸ್ ಹಾಕಲಾಗುತ್ತದೆ.

ಸೆಕ್ಷನ್ 283ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲು ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಪೆಟ್ರೋಲ್‌ ಖಾಲಿಯಾಗಿ ಗಾಡಿಗಳು ನಿಂತು ಹೋದರೆ, ಇದರಿಂದ ಇನ್ನಷ್ಟು ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಹೀಗಾಗಿ ಟ್ರಾಫಿಕ್‌ ಸಮಸ್ಯೆಯನ್ನು ಸೃಷ್ಟಿಸಿದ ಗಾಡಿ ಚಾಲಕನ ಮೇಲೆ ಕೇಸ್ ದಾಖಲು ಮಾಡಲು ಮುಂದಾಗಿದ್ದಾರೆ.

ಪ್ರಮುಖವಾಗಿ ಹೆಬ್ಬಾಳ, ಏರ್‌ಪೋಟ್‌ ರೋಡ್, ಗೋರಗುಂಟೆ ಪಾಳ್ಯ ರೋಡ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೇಟ್ರೋಲ್ ಇಲ್ಲದೆ ನಿಂತು ಹೋದಲ್ಲಿ ಪ್ರಕರಣ ದಾಖಲಿಸಿವುದಾಗಿ, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: School Reopen: ನಾಳೆಯಿಂದ ಶಾಲೆ ಮರು ಆರಂಭ; ಮೊದಲ ದಿನವೇ ಮಕ್ಕಳಿಗೆ ಸಿಹಿ ಸುದ್ದಿ

ಮಕ್ಕಳ ವ್ಹೀಲಿಂಗ್‌ ಶೋಕಿಗೆ ಪೋಷಕರಿಗೆ ದಂಡ

ವ್ಹೀಲಿಂಗ್‌ ಶೋಕಿಗೆ (Bike Wheeling) ಪೋಷಕರು ಶಿಕ್ಷೆ ಅನುಭವಿಸಬೇಕಾಗುತ್ತದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹೊರವಲಯದಲ್ಲಿ ಬೈಕ್ ವ್ಹೀಲಿಂಗ್ (Wheeling Stunt) ಮಿತಿ ಮೀರಿದೆ. ಮೀಸೆ ಚಿಗುರದ ಯುವಕರ ಹುಚ್ಚಾಟಕ್ಕೆ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದು ಮಾತ್ರವಲ್ಲ, ಅದೆಷ್ಟೋ ಅಮಾಯಕರು ಪ್ರಾಣಬಿಟ್ಟಿದ್ದಾರೆ.

ನಗರದಲ್ಲಿ ಪುಂಡರ ವ್ಹೀಲಿಂಗ್ ಶೋಕಿ ಇನ್ನೂ ನಿಲ್ಲುತ್ತಲೇ ಇಲ್ಲ. ಮುಖ್ಯ ರಸ್ತೆಯಲ್ಲೇ ಯುವಕರು ವ್ಹೀಲಿಂಗ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದು ಹೆಚ್ಚಾಗಿದೆ. ವ್ಹೀಲಿಂಗ್‌ ಮಾಡುವ ಸವಾರರ ವಿರುದ್ಧ ಪೊಲೀಸರು ಅದೆಷ್ಟೇ ಕಾರ್ಯಾಚರಣೆ ನಡೆಸಿದರೂ, ಪುಂಡರು ಡೋಂಟ್‌ ಕೇರ್‌ ಅಂತಿದ್ದರು.

ಬೈಕ್ ಜತೆ ಸರ್ಕಸ್ ಮಾಡುತ್ತಾ, ಜನಸಂದಣಿಯಿರುವ ರಸ್ತೆಯಲ್ಲೇ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಟಾರ್ಚರ್ ಕೊಡುತ್ತಿದ್ದರು. ವ್ಹೀಲಿಂಗ್ ಮಾಡುತ್ತಿರುವ ಪುಂಡರ ಹಾವಳಿಗೆ ಸಾರ್ವಜನಿಕರು ಭಯಭೀತರಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ವ್ಹೀಲಿಂಗ್‌ ಪುಂಡಾಟ ಮಾಡುತ್ತಿದ್ದವರಿಗೆ ಸಂಚಾರಿ ಪೊಲೀಸರು ಶಾಕ್ ಕೊಟ್ಟಿದ್ದಾರೆ.

ವ್ಹೀಲಿಂಗ್‌ಗೆ ಬ್ರೇಕ್‌ ಹಾಕಲು ಹೊಸ ಮಾರ್ಗವನ್ನು ಕಂಡು ಕೊಂಡಿರುವ ಸಂಚಾರಿ ಪೊಲೀಸರು, ವ್ಹೀಲಿಂಗ್‌ ಕೇಸ್‌ನಲ್ಲಿ ಅಪ್ರಾಪ್ತರು ಕಂಡು ಬಂದರೆ ಪೋಷಕರ ಮೇಲೆ ಕೇಸ್ ದಾಖಲಾಗುತ್ತದೆ. ಜೆಜೆ ಆಕ್ಟ್ ಅಡಿಯಲ್ಲಿ ಪೋಷಕರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಬೆಂಗಳೂರು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Love Case
ವಿಜಯಪುರ1 min ago

Love Case : ಪ್ರೀತಿಸಿದವಳೇ ಬೇಕೆಂದ ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ರಾ ಯುವತಿ ಕುಟುಂಬಸ್ಥರು!

Bengaluru Traffic
ಬೆಂಗಳೂರು3 mins ago

Bengaluru Traffic: ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಹೊಸ ತಂತ್ರಜ್ಞಾನ; ಸಂಚಾರ ಇಲಾಖೆಯ ಪ್ಲಾನ್

car care tips
ಆಟೋಮೊಬೈಲ್21 mins ago

Car Care Tips : ಕಾಸು ಉಳಿಸಿ ಎಂಜಿನ್ ಬೆಳಗಿಸಿ, ಕಾರಿನ ಎಂಜಿನ್ ನೀವೇ ​ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್​​​

Viral Video
ವೈರಲ್ ನ್ಯೂಸ್43 mins ago

Viral Video: ದಿಗಂಬರ ಜೈನ ಮುನಿಗಳಿಗೆ ಈ ಪಾಪಿ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case
ಕರ್ನಾಟಕ45 mins ago

Prajwal Revanna Case: ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

assault case
ದಕ್ಷಿಣ ಕನ್ನಡ54 mins ago

Assault Case : ರೊಚ್ಚಿಗೆದ್ದ ಸ್ಥಳೀಯರು; ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ

T20 World Cup 2024
ಕ್ರೀಡೆ1 hour ago

T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

namaz in road mangalore
ದಕ್ಷಿಣ ಕನ್ನಡ1 hour ago

Namaz: ಸಾರ್ವಜನಿಕ ನಮಾಜ್‌ ನಿಲ್ಲಿಸದಿದ್ದರೆ ಹನುಮಾನ್‌ ಚಾಲೀಸಾ ಪಠನ: ವಿಹಿಂಪ ಎಚ್ಚರಿಕೆ

Veer Savarkar
ದೇಶ1 hour ago

Veer Savarkar: ಸ್ವಾತಂತ್ರ್ಯ ಯೋಧ ವೀರ್ ಸಾವರ್ಕರ್ ಜೀವನದ ಕುತೂಹಲಕರ ಸಂಗತಿಗಳಿವು

Drain pipe collapse
ದೇಶ1 hour ago

Drain Pipe collapse: 700 ಮೀಟರ್‌ ಉದ್ದದ ಕಬ್ಬಿಣದ ಪೈಪ್ ಕುಸಿತ; ವಾಹನಗಳು ಸಂಪೂರ್ಣ ಜಖಂ; ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ23 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌