Pragya Misra: ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಿಸಿದ ಒಪನ್ ಎಐ - Vistara News

ತಂತ್ರಜ್ಞಾನ

Pragya Misra: ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಿಸಿದ ಒಪನ್ ಎಐ

Pragya Misra: ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಿಸಿದ ಒಪನ್ ಎಇ
ಸಾರ್ವಜನಿಕ ನೀತಿ ವ್ಯವಹಾರಗಳು ಮತ್ತು ಪಾಲುದಾರಿಕೆಗಳನ್ನು ನೋಡಿಕೊಳ್ಳಲು ಎಂಬವರನ್ನು ಒಪನ್ ಎಐ ನೇಮಕ ಮಾಡಿಕೊಂಡಿದೆ. ಒಪನ್ ಎಐ ನ ಭಾರತದ ಮೊದಲ ಉದ್ಯೋಗಿಯಾಗಿರುವ ಇವರು ಯಾರು ಗೊತ್ತೇ ?

VISTARANEWS.COM


on

Pragya Misra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಾಟ್ ಜಿಪಿಟಿ (ChatGPT ) ಮಾರ್ಕರ್ ಒಪನ್ ಎಐ (OpenAI) ಭಾರತದಲ್ಲಿ (india) ತನ್ನ ಮೊದಲ ಉದ್ಯೋಗಿಯನ್ನು (first employee) ನೇಮಕ ಮಾಡಿದೆ. ಸಾರ್ವಜನಿಕ ನೀತಿ ವ್ಯವಹಾರ ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು 39 ವರ್ಷದ ಪ್ರಗ್ಯಾ ಮಿಶ್ರಾ (Pragya Misra) ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಕೃತಕ ಬುದ್ಧಿಮತ್ತೆ (AI) ನಿಯಮಾವಳಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಈ ಸಂದರ್ಭದಲ್ಲಿ ಹೊಸ ಸರ್ಕಾರ ರಚನೆಯ ಸಿದ್ಧತೆಯಲ್ಲಿರುವಾಗ ಈ ಬೆಳವಣಿಗೆ ನಡೆದಿದೆ.ಮೈಕ್ರೋಸಾಫ್ಟ್ ಕಾರ್ಪ್ ಬೆಂಬಲಿತ ಕಂಪೆನಿಯು ಭಾರತದಲ್ಲಿ ಸಾರ್ವಜನಿಕ ನೀತಿ ವ್ಯವಹಾರಗಳು ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು ಪ್ರಗ್ಯಾ ಮಿಶ್ರಾ ಅವರನ್ನು ನೇಮಿಸಿಕೊಂಡಿದೆ. ಈ ತಿಂಗಳ ಅಂತ್ಯದಿಂದ ಮಿಶ್ರಾ ಅವರು OpenAI ನಲ್ಲಿ ಕೆಲಸ ಪ್ರಾರಂಭಿಸಲಿದ್ದಾರೆ.

ಇದನ್ನೂ ಓದಿ: ಜಗದ ಜನರ ಕೈಗಳಲ್ಲಿ ಮಿನುಗುವ ಮೊಬೈಲ್ ಫೋನುಗಳಲ್ಲೀಗ ಮೇಕ್ ಇನ್ ಇಂಡಿಯಾದ್ದೇ ಮೊಹರು!

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವನ್ನು ನಿಯಂತ್ರಿಸಲು ವಿಶ್ವದಾದ್ಯಂತ ಸರ್ಕಾರಗಳು ಪ್ರಯತ್ನಿಸುತ್ತಿದೆ. ಇದಕ್ಕೆ ಅನುಕೂಲಕರವಾಗಿ ನಿಯಮಗಳನ್ನು ರೂಪಿಸಲು AI ಕಂಪೆನಿಯು ಈ ನೇಮಕಾತಿಯನ್ನು ನಡೆಸಿದೆ. OpenAI ನ ಮೊದಲ ಭಾರತೀಯ ಉದ್ಯೋಗಿ ಪ್ರಗ್ಯಾ ಮಿಶ್ರಾ ಅವರ ಕುರಿತಾದ ಕಿರು ಮಾಹಿತಿ ಇಲ್ಲಿದೆ.

ಪ್ರಗ್ಯಾ ಮಿಶ್ರಾ ಅವರ ಪಾತ್ರ?

OpenAI ಯು ಸರ್ಕಾರಿ ಸಂಬಂಧಗಳ ಮುಖ್ಯಸ್ಥರನ್ನಾಗಿ ಪ್ರಗ್ಯಾ ಮಿಶ್ರಾ ಅವರನ್ನು ನೇಮಿಸಿದೆ. ಈ ಮೂಲಕ ಕಂಪೆನಿಗೆ ಮೊದಲ ಭಾರತೀಯರ ನೇಮಕವಾಗಿದೆ. ಕಂಪೆನಿಯು ಈ ನೇಮಕಾತಿಯ ಬಗ್ಗೆ ಇನ್ನೂ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಬ್ಲೂಮ್‌ಬರ್ಗ್ ತಿಳಿಸಿದ್ದು, ಭಾರತದಲ್ಲಿ ಸಾರ್ವಜನಿಕ ನೀತಿ ವ್ಯವಹಾರಗಳು ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು ಪ್ರಜ್ಞಾ ಮಿಶ್ರಾ ಅವರನ್ನು ನೇಮಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಯಾರು ಪ್ರಗ್ಯಾ ಮಿಶ್ರಾ ?

2021ರ ಜುಲೈ ನಿಂದ ಪ್ರಗ್ಯಾ ಮಿಶ್ರಾ ಅವರು ಟ್ರೂಕಾಲರ್‌ಗಾಗಿ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿ ಅವರು ಸರ್ಕಾರಿ ಸಚಿವಾಲಯಗಳು, ಪ್ರಮುಖ ಪಾಲುದಾರರು, ಹೂಡಿಕೆದಾರರು ಮತ್ತು ಮಾಧ್ಯಮ ಪಾಲುದಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಕೆಲಸ ಮಾಡಿದ್ದಾರೆ. ಮೂರು ವರ್ಷಗಳ ಮೊದಲು ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ನೊಂದಿಗೆ ಕೆಲಸ ಮಾಡಿರುವ ಅವರು 2018 ರಲ್ಲಿ ತಪ್ಪು ಮಾಹಿತಿಯ ವಿರುದ್ಧ WhatsApp ಅಭಿಯಾನವನ್ನು ಮುನ್ನಡೆಸಿದರು. ಅನ್ ಸ್ಟಾರ್ ಆಂಡ್ ಯಂಗ್ ಮತ್ತು ನವದೆಹಲಿಯ ರಾಯಲ್ ಡ್ಯಾನಿಶ್ ರಾಯಭಾರ ಕಚೇರಿಯಲ್ಲೂ ಕೆಲಸ ಮಾಡಿದ ಅನುಭವ ಅವರಿಗಿದೆ.

ಶಿಕ್ಷಣ

ಪ್ರಗ್ಯಾ ಮಿಶ್ರಾ ಅವರು 2012ರಲ್ಲಿ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಇನ್ಸ್ ಟಿಟ್ಯೂಟ್ ನಿಂದ ತಮ್ಮ ಎಂಬಿಎ ಪದವಿ ಪಡೆದರು ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವೀಧರರಾಗಿದ್ದಾರೆ. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‌ನಿಂದ ಬಾರ್ಗೇನಿಂಗ್ ಮತ್ತು ನೆಗೋಷಿಯೇಷನ್ಸ್‌ನಲ್ಲಿ ಡಿಪ್ಲೊಮಾವನ್ನೂ ಹೊಂದಿದ್ದಾರೆ.

ಗಾಲ್ಫ್ ಆಟಗಾರರು

ಪ್ರಗ್ಯಾ ಮಿಶ್ರಾ ಅವರು 1998 ಮತ್ತು 2007 ರ ನಡುವೆ ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಗಾಲ್ಫ್ ಆಟಗಾರರಾಗಿದ್ದಾರೆ. ಅವರು ಹಾರ್ಟ್‌ಫುಲ್‌ನೆಸ್ ಧ್ಯಾನ ತರಬೇತುದಾರರಾಗಿದ್ದು, ಪ್ರಗ್ಯಾನ್ ಪಾಡ್‌ಕ್ಯಾಸ್ಟ್ ನಿಂದ ಅದನ್ನು ಆಯೋಜಿಸುತ್ತಾರೆ.

ಯಾಕೆ ಈ ನೇಮಕ ?

1.4 ಶತಕೋಟಿ ಜನರು ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ ಭಾರತದಲ್ಲಿ ಗಮನಾರ್ಹ ಬೆಳವಣಿಗೆಯ ಅವಕಾಶವಿದೆ. ವಿಶ್ವಾದ್ಯಂತ ಸರ್ಕಾರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವನ್ನು ಹೇಗೆ ನಿಯಂತ್ರಿಸಬೇಕೆಂದು ಪರಿಗಣಿಸುತ್ತಿರುವಾಗ ಅನುಕೂಲಕರವಾದ ನಿಯಮಗಳನ್ನು ರೂಪಿಸಲು AI ಕಂಪೆನಿಯ ಪ್ರಯತ್ನಗಳನ್ನು ಈ ನೇಮಕಾತಿಯು ಎತ್ತಿ ತೋರಿಸಿದೆ. ಹೀಗಾಗಿ ಪ್ರಗ್ಯಾ ಮಿಶ್ರಾ ಅವರಿಗೆ ಇದೊಂದು ಸಾಕಷ್ಟು ಸವಾಲಿನ ಕೆಲಸವಾಗಿರಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಸ್ಮಾರ್ಟ್‌ ಫೋನಿನ ಸ್ಮಾರ್ಟ್ ಬಳಕೆಗೆ 12 ಸೂತ್ರಗಳು

ಸೈಬರ್‌ ಸೇಫ್ಟಿ ಅಂಕಣ: ಮೊಬೈಲನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಸೈಬರ್ ಜಗತ್ತಿನಲ್ಲಿ ಮಾಲ್‌ವೇರ್, ಫಿಶರ್ ಗಳು, ಅಶ್ಲೀಲ ವೆಬ್‌ಸೈಟ್‌ಗಳು, ಡೇಟಾ ಕಳ್ಳತನ, ಗುರುತಿನ ಕಳ್ಳತನ ಅಥವಾ ಹ್ಯಾಕಿಂಗ್ ಪ್ರಯತ್ನಗಳು, ಮೋಸದ ಯೋಜನೆಗಳು ಮತ್ತಿತರ ವಂಚನೆಗಳಿಗೀಡಾಗುವ ಸಾಧ್ಯತೆಗಳಿವೆ. ಸರಿಯಾದ ಮಾಹಿತಿ ತಿಳಿದುಕೊಂಡು ನಮ್ಮ ದೈನಂದಿನ ಅವಶ್ಯಕತೆಗೆ ಪೂರಕವಾಗಿ, ಜಾಗರೂಕರಾಗಿ ಮೊಬೈಲ್ ಬಳಸುವುದರಿಂದ ಸೈಬರ್ ಅಪರಾಧಗಳಿಗೆ ಬಲಿಯಾಗೋದು ತಪ್ಪುತ್ತದೆ.

VISTARANEWS.COM


on

ಸೈಬರ್‌ ಸೇಫ್ಟಿ cyber safety rules
Koo
cyber-safty-logo

ಸೈಬರ್‌ ಸೇಫ್ಟಿ ಅಂಕಣ: ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಒಟ್ಟು 1.12 ಬಿಲಿಯನ್‌ ಮೊಬೈಲ್‌ ಸಂಪರ್ಕಗಳು (mobile connections) ಸಕ್ರಿಯವಾಗಿವೆಯಂತೆ. ಅದರಲ್ಲಿ ಶೇಕಡ 68.4ರಷ್ಟು ಅಂದರೆ 974.69 ಮಿಲಿಯನ್‌ ಸ್ಮಾರ್ಟ್‌ ಫೋನ್‌ (Smartphone) ಬಳಕೆದಾರರು. ಇಷ್ಟೆಲ್ಲಾ ಜನರು ದಿನ ನಿತ್ಯ ತಮ್ಮ ಬಹುತೇಕ ಸಮಯವನ್ನು ಇದರೊಂದಿಗೆ ಕಳೆಯುತ್ತಾರೆ. ಡಿಜಿಟೈಸೇಶನ್‌ (digitisation) ಆದ ಮೇಲಂತೂ ಎಲ್ಲಿ ಹೊಗುವುದಾದರೂ ಮೊಬೈಲ್‌ ಕೈಯಲ್ಲಿರಲೇ ಬೇಕು. ಜೇಬಿನಲ್ಲಿ ಪರ್ಸ್ ಇರುತ್ತೋ ಇಲ್ವೊ, ಮೊಬೈಲ್‌ ಅಂತೂ ಬೇಕೇ ಬೇಕು. ದೂರವಾಣಿಯ ಬದಲಿಗೆ ಸಂಪರ್ಕ ಸಾಧನವಾಗಿ ಬಂದ ಮೊಬೈಲ್‌ ಇಂದು ನಮ್ಮ ಜೀವನದಿಂದ ಬಹಳಷ್ಟು ವಸ್ತುಗಳನ್ನು ನುಂಗಿ ನಮ್ಮ ಕೈಯಲ್ಲಿ ಬೇರೂರಿದೆ. ಸೆಲ್ಯುಲಾರ್ ಫೋನ್ ಅಥವಾ ಸೆಲ್‌ ಫೋನ್‌ ಎಂದು ಮಾರುಕಟ್ಟೆಗೆ ಬಂದು ತನ್ನ ಬಳಕೆದಾರರನ್ನೇ ತನ್ನ ಸೆಲ್‌ನಲ್ಲಿ ಬಂಧಿಸಿದೆ.

ಸ್ಮಾರ್ಟ್ ಫೋನ್‌ಗಳನ್ನೇನೋ ಬಳಸುತ್ತಿದ್ದೇವೆ. ಆದರೆ ನಾವೆಷ್ಟು ಸ್ಮಾರ್ಟ್‌ ಆಗಿದ್ದೇವೆ?

ಇಂದು ಇಂಟರ್ನೆಟ್ (ಅಂತರ್ಜಾಲ), ಕಂಪ್ಯೂಟರ್ (ಗಣಕ ಯಂತ್ರ), ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ಸ್ಮಾರ್ಟ್ ಸಾಧನಗಳಲ್ಲಿ ನಾವು ಪ್ರತಿದಿನ ಎಷ್ಟು ಸಮಯವನ್ನು ಕಳೆಯುತ್ತೇವೆ ಎಂದು ಯೋಚಿಸಿದ್ದೀರಾ? ಅಂಗೈಯಲ್ಲೇ ಅಂತರ್ಜಾಲ, ಅರಿವಿದೆಯೇ ಅಪಾಯ?

ನಾವು ಇಂಟರ್ನೆಟ್ ಸಂವಹನ ಮಾಧ್ಯಮಗಳಾದ Google, ಇಮೇಲ್‌ಗಳು, ವಾಟ್ಸಪ್ (WhatsApp), ಫೇಸ್ಬುಕ್ (Facebook), ಇನ್ಸಟಗ್ರಾಮ್ (Instagram), ಯೂ ಟ್ಯೂಬ್ (YouTube), ಟ್ವಿಟ್ಟರ್ (Twitter) ಇತ್ಯಾದಿಗಳನ್ನು ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿ ಮಾಡಿದ್ದೇವೆ. ಇದೆಲ್ಲವೂ ನಮಗೆ ಸ್ಮಾರ್ಟ್‌ಫೋನಿನಲ್ಲೇ ಲಭ್ಯ. ಜೊತೆಗೆ ವಿಧ ವಿಧವಾದ ಆಟಗಳು, ಆಕರ್ಷಿಸುವ ವಿಡಿಯೋಗಳು ನಮ್ಮ ಗಮನವನ್ನು ಯಾವಾಗಲೂ ತಮ್ಮತ್ತ ಸೆಳೆಯುತ್ತಿರುತ್ತದೆ. ಆನ್ಲೈನ್ ತರಗತಿಗಳಿಗೆ, ಮತ್ತು ಶೈಕ್ಷಣಿಕ ವಿಚಾರಗಳಿಗೆ, ಕಲಿಕೆಗೆ ಕೊಂಡ ಮೊಬೈಲ್ ದುರ್ಬಳಕೆ ಆಗಬಹುದು. ಈ ಸಂದರ್ಭದಲ್ಲಿ, ಸೈಬರ್ ಜಗತ್ತಿನ ಬಗ್ಗೆ, ಮತ್ತು ಅಲ್ಲಿ ಸುರಕ್ಷಿತವಾಗಿರಲು ಹೇಗಿರಬೇಕು ಅಥವಾ ಏನು ಮಾಡಬಾರದು ಎಂದು ತಿಳಿದಿರುವುದಿಲ್ಲ. ಜೊತೆಗೆ, ನಮ್ಮಲ್ಲಿ ಹೆಚ್ಚಿನವರಿಗೆ ಸೈಬರ್ ಸುರಕ್ಷತೆ ಮತ್ತು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಭದ್ರತಾ ಅಗತ್ಯಗಳ ಬಗ್ಗೆ ತಿಳಿದಿಲ್ಲ.

ಇಂಟರ್ನೆಟ್ ಒಂದು ಜಾಗತಿಕ ನೆಟ್ವರ್ಕ್. ಜಗದೆಲ್ಲಾ ಮಾಹಿತಿಗಳ ಆಗರ. ನಿಮ್ಮ ಮೆಸೇಜ್, ನೀವು ಓದುವ ವಿಷಯಗಳು, ವಾಟ್ಸಪ್, ಫೇಸ್ಬುಕ್, ಗೂಗಲ್ ಮುಂತಾದ ಆಪ್ಗಳು ಕೆಲಸಮಾಡಲು ಇಂಟರ್ನೆಟ್ ಸೌಲಭ್ಯ ಅತ್ಯವಶ್ಯಕ. ಇಂಟರ್ನೆಟ್‌ ಮುಖಾಂತರ ಹಂಚಿಕೊಳ್ಳಲಾದ ಯಾವುದೇ ಮಾಹಿತಿ ಅಥವಾ ವೈಯಕ್ತಿಕ ವಿವರಗಳು ಆನ್‌ಲೈನ್‌ನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ ಆನ್ಲೈನ್ ಗೆ ಅಪ್ ಲೋಡ್ ಆದ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸುವುದು ತುಂಬಾ ಕಷ್ಟ. ಮತ್ತು ನೀವು ನೋಡಿದ ಪ್ರತಿಯೊಂದು ವೆಬ್ ಸೈಟ್, ವಿಡಿಯೋ, ನೋಡಿದ ಯಾವುದೇ ತರಹದ ಮಾಹಿತಿ ನಿಮ್ಮ ಆನ್ಲೈನ್ ವರ್ತನೆಯನ್ನು ಯಾರಿಗಾದರೂ ತಿಳಿಸುತ್ತದೆ. ಇದನ್ನು ‘ಡಿಜಿಟಲ್ ಫುಟ್ ಪ್ರಿಂಟ್’ ಎನ್ನುತ್ತಾರೆ. ಈ ಫುಟ್ ಪ್ರಿಂಟನ್ನು ಅಳಿಸುವುದು ಅಸಾಧ್ಯ. ಅದು ನಿಮ್ಮ ಬಗ್ಗೆ ನಿಮ್ಮ ಸ್ನೇಹಿತರು, ಸಂಬಂಧಿಗಳ ಬಗ್ಗೆ, ನಿಮ್ಮ ಇಷ್ಟ ಮತ್ತು ಆಧ್ಯತೆಗಳ ಬಗ್ಗೆ ತಿಳಿಯುವ ಆಸಕ್ತರಿಗೆ ಸುಲಭವಾಗಿ ತಿಳಿಸುತ್ತದೆ.

ಮೊಬೈಲನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಸೈಬರ್ ಜಗತ್ತಿನಲ್ಲಿ ಮಾಲ್‌ವೇರ್, ಫಿಶರ್ ಗಳು, ಅಶ್ಲೀಲ ವೆಬ್‌ಸೈಟ್‌ಗಳು, ಡೇಟಾ ಕಳ್ಳತನ, ಗುರುತಿನ ಕಳ್ಳತನ ಅಥವಾ ಹ್ಯಾಕಿಂಗ್ ಪ್ರಯತ್ನಗಳು, ಮೋಸದ ಯೋಜನೆಗಳು ಮತ್ತಿತರ ವಂಚನೆಗಳಿಗೀಡಾಗುವ ಸಾಧ್ಯತೆಗಳಿವೆ. ಸರಿಯಾದ ಮಾಹಿತಿ ತಿಳಿದುಕೊಂಡು ನಮ್ಮ ದೈನಂದಿನ ಅವಶ್ಯಕತೆಗೆ ಪೂರಕವಾಗಿ, ಜಾಗರೂಕರಾಗಿ ಮೊಬೈಲ್ ಬಳಸುವುದರಿಂದ ಸೈಬರ್ ಅಪರಾಧಗಳಿಗೆ ಬಲಿಯಾಗೋದು ತಪ್ಪುತ್ತದೆ.

ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಜಾಗರೂಕತೆಯಿಂದಿದ್ದರೆ ನೀವು ಸೈಬರ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

ಸುರಕ್ಷಿತವಾಗಿ ಮೊಬೈಲ್ ಬಳಸಲು ಹನ್ನೆರಡು ಸೂತ್ರಗಳು:

1) ಪಿನ್‌ಗಳು ಮತ್ತು ಪಾಸ್‌ವರ್ಡ್‌ಗಳನ್ನು ಅಳವಡಿಸಿಕೊಳ್ಳಿ. ನಿಮ್ಮ ಫೋನ್‌ಗೆ ಅನಧಿಕೃತ ಪ್ರವೇಶವನ್ನು ತಡೆಯಲು, ನಿಮ್ಮ ಫೋನ್ ಕಳೆದುಹೋದರೆ ಅಥವಾ ಕಳುವಾದಾಗ ರಕ್ಷಣೆಯ ಮೊದಲ ಸಾಲಿನಂತೆ (first line of defence) ನಿಮ್ಮ ಫೋನ್‌ನ ಮುಖಪುಟದಲ್ಲಿ ಪಾಸ್‌ವರ್ಡ್ ಅಥವಾ ವೈಯಕ್ತಿಕ ಗುರುತಿನ ಸಂಖ್ಯೆಯನ್ನು (ಪಿನ್) ಹೊಂದಿಸಿ. ನಿಮ್ಮ ಪ್ರತಿಯೊಂದು ಪ್ರಮುಖ ಲಾಗ್-ಇನ್‌ಗಳಿಗೆ (ಇಮೇಲ್, ಬ್ಯಾಂಕಿಂಗ್, ವೈಯಕ್ತಿಕ ಸೈಟ್‌ಗಳು, ಇತ್ಯಾದಿ) ಬೇರೆ ಪಾಸ್‌ವರ್ಡ್ ಬಳಸಿ. ನಿಮ್ಮ ಫೋನ್ ನಿಷ್ಕ್ರಿಯವಾಗಿರುವಾಗ ಐದು ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದ ನಂತರ ಸ್ವಯಂಚಾಲಿತವಾಗಿ ಲಾಕ್ ಆಗುವಂತೆ ನಿಮ್ಮ ಫೋನಿನಲ್ಲಿ ಸಂಯೋಜಿಸಿಕೊಳ್ಳಿ.

2) ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಿ ಮತ್ತು ಸುರಕ್ಷಿತಗೊಳಿಸಿ. ನಿಮ್ಮ ಫೋನ್‌ನಲ್ಲಿ ಸಂಗ್ರಹವಾಗಿರುವ ಎಲ್ಲಾ ಡೇಟಾವನ್ನು ನೀವು ಬ್ಯಾಕಪ್ ಮಾಡಬೇಕು – ಉದಾಹರಣೆಗೆ ನಿಮ್ಮ ಸಂಪರ್ಕಗಳು, ಡಾಕ್ಯುಮೆಂಟ್‌ಗಳು ಮತ್ತು ಫೋಟೋಗಳು. ಈ ಫೈಲ್‌ಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ, ಅಥವಾ ಕ್ಲೌಡ್‌ನಲ್ಲಿ ಸಂಗ್ರಹಿಸಬಹುದು. ನಿಮ್ಮ ಫೋನ್ ಕಳೆದುಹೋದರೆ, ಕದ್ದಿದ್ದರೆ ಅಥವಾ ಅಳಿಸಿದರೆ ಅದನ್ನು ಅನುಕೂಲಕರವಾಗಿ ಮರುಸ್ಥಾಪಿಸಲು ಇದು ಸಹಾಯಮಾಡುತ್ತದೆ.

3) ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿ. ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಅಪ್ಲಿಕೇಶನ್ ಕಾನೂನುಬದ್ಧವಾಗಿದೆ ಎಂದು ಖಚಿತಪಡಿಸಿಕೊಡು ಅಳವಡಿಸಿಕೊಳ್ಳಿ. ಅಪ್ಲಿಕೇಶನ್‌ನ ನ್ಯಾಯಸಮ್ಮತತೆಯನ್ನು ಪರಿಶೀಲಿಸಲು ಅದರ ಬಗ್ಗೆ ಇರುವ ವಿಮರ್ಶೆಗಳನ್ನು ನೋಡಿ, ಅಪ್ಲಿಕೇಶನ್ ಸ್ಟೋರ್‌ನ ಕಾನೂನುಬದ್ಧತೆಯನ್ನು ದೃಢೀಕರಿಸಿಕೊಳ್ಳಿ, ಮತ್ತು ಅಪ್ಲಿಕೇಶನ್ ಪ್ರಾಯೋಜಕರ ಅಧಿಕೃತ ವೆಬ್‌ಸೈಟ್ ಅನ್ನು ನೋಡಿ. ವಿಶ್ವಾಸಾರ್ಹವಲ್ಲದ ಮೂಲಗಳಿಂದ ಅಳವಡಿಸುವ ಅನೇಕ ಅಪ್ಲಿಕೇಶನ್‌ಗಳು ಮಾಲ್‌ವೇರ್ ಅನ್ನು ಒಳಗೊಂಡಿರುತ್ತವೆ. ಅದು ಒಮ್ಮೆ ನಿಮ್ಮ ಫೋನಿನಲ್ಲಿ ಸ್ಥಾಪಿತವಾದರೆ ಮಾಹಿತಿಯನ್ನು ಕದಿಯಬಹುದು, ವೈರಸ್‌ಗಳನ್ನು ಸಕ್ರಿಯಗೊಳಿಸಬಹುದು ಮತ್ತು ನಿಮ್ಮ ಫೋನ್‌ನಲ್ಲಿರುವ ವಿಷಯಗಳಿಗೆ ಹಾನಿಯನ್ನು ಉಂಟುಮಾಡಬಹುದು.

cyber safety

4) ಅಪ್ಲಿಕೇಶನ್ ಅನುಮತಿಗಳನ್ನು ಸ್ವೀಕರಿಸುವ ಮೊದಲು ಅವುಗಳನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಫೋನ್‌ನಲ್ಲಿನ ವೈಯಕ್ತಿಕ ಮಾಹಿತಿಗೆ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುವ ಬಗ್ಗೆ ಅಥವಾ ನಿಮ್ಮ ಫೋನ್‌ನಲ್ಲಿ ಕಾರ್ಯಗಳನ್ನು ನಿರ್ವಹಿಸಲು ಅಪ್ಲಿಕೇಶನ್‌ಗೆ ಪ್ರವೇಶವನ್ನು ಅನುಮತಿಸುವ ಬಗ್ಗೆ ನೀವು ಜಾಗರೂಕರಾಗಿರಬೇಕು. ಸ್ಥಾಪಿಸುವ ಮೊದಲು ಪ್ರತಿ ಅಪ್ಲಿಕೇಶನ್‌ನ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸಹ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.

5) ಉಪಯೋಗಿಸದ ಆಪ್ ಗಳನ್ನು ತೆಗೆದು ಹಾಕಿ. ನಿಮ್ಮ ಮೊಬೈಲ್‌ನಲ್ಲಿ ನೀವು ನಿತ್ಯ ಬಳಸುವ ಎಷ್ಟು ಆ್ಯಪ್‌ಗಳಿವೆ? ಅವುಗಳು ಉಪಯೋಗ ಆಗದಿದ್ದರೂ ನಿಮ್ಮ ಫೋನಿನಿಂದ ಮಾಹಿತಿಯನ್ನು ಹೊರಗೆ ಕಳಿಸಬಹುದಲ್ಲವೇ? ಅನಗತ್ಯ ಆ್ಯಪ್‌ಗಳನ್ನು ‘ಅನ್‌ಇನ್ಸ್‌ಟಾಲ್‌’ ಮಾಡಿ. ನಿಮ್ಮ ಫೋನಿನ ಸೆಟ್ಟಿಂಗ್ಸ್‌ನಲ್ಲಿ ಅಪ್ಲಿಕೇಶನ್ಸ್ ವಿಭಾಗದಲ್ಲಿ ಅಳವಡಿಕೆಯಾಗಿರುವ ಎಲ್ಲಾ ಆ್ಯಪ್‌ಗಳನ್ನು ನೋಡಬಹುದು. ಅಲ್ಲಿಂದಲೇ ಅಸ್ಥಾಪಿಸಿ.

6) ನಿಮ್ಮ ಮೊಬೈಲ್ ನ ಆಪರೇಟಿಂಗ್ ಸಿಸ್ಟಮ್ ಅನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಿಕೊಳ್ಳಿ. ಜೊತೆಗೆ ನಿಮ್ಮ ಮೊಬೈಲ್ ಸುರಕ್ಷತೆಗೆ ಸರಿಯಾದ ಆಂಟಿವೈರಸ್ ಸಾಫ್ಟ್ ವೇರ್ ಬಳಸಿರಿ.

7) ನೀವು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆಯೇ ನಿಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಸುರಕ್ಷಿತಗೊಳಿಸಿ: ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೀವು ಸರಿಯಾದ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡದಿದ್ದರೆ, ಪೋಸ್ಟ್ ಮಾಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮಗೆ ತಿಳಿಯದೆ ಇತರರು ವೀಕ್ಷಿಸಬಹುದು, ಡೌನ್‌ಲೋಡ್ ಮಾಡಬಹುದು ಮತ್ತು ಬಳಸಬಹುದು.

8) ವೀಡಿಯೊ ಚಾಟ್ ಮತ್ತು ವೀಡಿಯೊ ಕರೆಗಳಲ್ಲಿ ನಿಮ್ಮ ಗೋಚರಿಸುವಿಕೆಯ ಬಗ್ಗೆ ಗಮನವಿರಲಿ: ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿನ ನಿಮ್ಮ ವೀಡಿಯೊ ಚಾಟ್‌ಗಳನ್ನು ಇನ್ನೊಂದು ಬದಿಯಲ್ಲಿರುವ ವ್ಯಕ್ತಿ ರೆಕಾರ್ಡ್ ಮಾಡಬಹುದು. ಅಪರಿಚಿತರಿಂದ ಚಾಟ್ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ.

9) ಸೂಕ್ಷ್ಮ ವೈಯಕ್ತಿಕ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆಯಲು ಸ್ಮಾರ್ಟ್‌ಫೋನ್ ಬಳಸಬೇಡಿ: ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಇಂಟರ್ನೆಟ್ ಮತ್ತು ಕ್ಲೌಡ್ ಸ್ಟೋರೇಜ್‌ಗೆ ಸಂಪರ್ಕ ಹೊಂದಿರುತ್ತದೆ. ಕ್ಲೌಡ್‌ನೊಂದಿಗೆ ಸಂಪರ್ಕಗೊಂಡಿರುವ ಸ್ಮಾರ್ಟ್‌ಫೋನ್ ಬಳಸಿ ಚಿತ್ರ ಅಥವಾ ವೀಡಿಯೊವನ್ನು ಕ್ಲಿಕ್ ಮಾಡಿದ್ದರೆ/ರೆಕಾರ್ಡ್ ಮಾಡಿದ್ದರೆ, ಅದು ಸ್ವಯಂಚಾಲಿತವಾಗಿ ಕ್ಲೌಡ್‌ನಲ್ಲಿ ಸೇವ್ ಆಗಬಹುದು. ಬಳಕೆದಾರರು ತಮ್ಮ ಫೋನ್‌ನಿಂದ ತಮ್ಮ ಫೋಟೋಗಳು ಅಥವಾ ವೀಡಿಯೊಗಳನ್ನು ಅಳಿಸಿದರೂ ಸಹ, ಅದೇ ಫೋಟೋ ಅಥವಾ ವೀಡಿಯೊವನ್ನು ಕ್ಲೌಡ್ ಖಾತೆಯಿಂದ ಅಥವಾ ಅದೇ ಖಾತೆಯನ್ನು ಬಳಸಿಕೊಂಡು ಕ್ಲೌಡ್‌ಗೆ ಸಂಪರ್ಕಗೊಂಡಿರುವ ಯಾವುದೇ ಇತರ ಸಾಧನ/ಪಿಸಿಯಿಂದ ಮರುಪಡೆಯಬಹುದು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

10) ಸೈಬರ್ ಹಿಂಬಾಲಿಸುವಿಕೆಯಿಂದ (stalking) ನಿಮ್ಮನ್ನು ರಕ್ಷಿಸಿಕೊಳ್ಳಿ: ನಿಮ್ಮಿಂದ ನಿರಾಸಕ್ತಿಯ ಸ್ಪಷ್ಟ ಸೂಚನೆಯ ಹೊರತಾಗಿಯೂ ಸೈಬರ್ ಹಿಂಬಾಲಕರು ನಿಮ್ಮ ಮೇಲೆ ಪದೇ ಪದೇ ಆಸಕ್ತಿಯನ್ನು ತೋರಿಸುತ್ತಾರೆ. ಅವರು ಹಿಂಬಾಲಿಸಲು ಇಂಟರ್ನೆಟ್, ಇಮೇಲ್, ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಂವಹನವನ್ನು ಬಳಸುತ್ತಾರೆ. ಸಾಮಾಜಿಕ ಮಾಧ್ಯಮ ಸೈಟ್‌ಗಳು, ಮೊಬೈಲ್ ಸಾಧನಗಳು ಇತ್ಯಾದಿಗಳಿಗೆ ಸ್ಥಳ ಸೇವೆಗಳನ್ನು(location) ನಿಷ್ಕ್ರಿಯಗೊಳಿಸಿ. ನಿಮ್ಮ ವೈಯಕ್ತಿಕ ಮಾಹಿತಿಯಾದ ಫೋನ್ ಸಂಖ್ಯೆ, ಇಮೇಲ್ ವಿಳಾಸ, ಛಾಯಾಚಿತ್ರಗಳನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದನ್ನು ತಡೆಯಿರಿ. ನೀವು ಸೈಬರ್ ಹಿಂಬಾಲಿಕೆಗೆ ಸಿಕ್ಕಿದ್ದೀರಿ ಎಂದು ನೀವು ಭಾವಿಸಿದರೆ, ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಸಹಾಯ ಪಡೆಯಿರಿ.

11) ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಎಚ್ಚರದಿಂದಿರಿ- ಎಲ್ಲಾ ಖಾತೆಗಳು ನಿಜವಲ್ಲ ಮತ್ತು ಖಾತೆಗಳಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಯು ನಿಜವಲ್ಲ. ಅಪರಿಚಿತರಿಂದ ಸ್ನೇಹಿತರ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ.

12) ಸೇವೆ/ದುರಸ್ತಿ/ಮಾರಾಟ ಅಥವಾ ರಿಚಾರ್ಜ್ ಗೆ ನಿಮ್ಮ ಮೊಬೈಲ್ ಸಾಧನಗಳನ್ನು ನೀಡುವಾಗ ಜಾಗರೂಕರಾಗಿರಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

Continue Reading

ಪ್ರಮುಖ ಸುದ್ದಿ

Maruti Swift : ಹೊಸ ಮಾರುತಿ ಸ್ವಿಫ್ಟ್​ ಕಾರಿನಲ್ಲಿದೆ 50ಕ್ಕೂ ಹೆಚ್ಚು ಫೀಚರ್​ಗಳು

Maruti Swift: ಕಾರಿನಲ್ಲಿ ವೈ-ಫೈ ಮೊಬೈಲ್‌ ಚಾರ್ಜರ್‌, ಹಿಂಭಾಗದಲ್ಲಿ ಏಸಿ ವೆಂಟ್‌, ಟೆಲಿಮ್ಯಾಟಿಕ್ಸ್‌ ಮತ್ತಿತರ ಹೊಸ ಫೀಚರ್​ಗಳನ್ನು ನೀಡಲಾಗಿದೆ. ಈ ನಾಲ್ಕನೆ ತಲೆಮಾರಿನ ಸ್ವಿಫ್ಟ್‌, ʼಬಿʼ ವಿಭಾಗದ ವಾಹನಗಳಲ್ಲಿ ಸಾಮಾನ್ಯವಾಗಿರುವ ಎಲ್‌ಇಡಿ ಪ್ರೊಜೆಕ್ಟರ್​, ಹೆಡ್‌ಲೈಟ್ಸ್‌ ಮತ್ತು ಟೇಲ್‌ಲೈಟ್ಸ್‌ಗಳನ್ನು ಸಹ ಒಳಗೊಂಡಿದೆ ಎಂದು ಮಾರುತಿ ಸುಜುಕಿ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

VISTARANEWS.COM


on

Maruti Swift
Koo

ಬೆಂಗಳೂರು: ಐಷಾರಾಮಿ, ಆರಾಮದಾಯಕ ಮತ್ತು ಇಂಧನ ದಕ್ಷತೆಯ ಕಾರುಗಳ ವಿಭಾಗದಲ್ಲಿ (ಪ್ರೀಮಿಯಂ ಹ್ಯಾಚ್‌ಬ್ಯಾಕ್​ ) ಮಾರುತಿ ಸುಜುಕಿ ಕಂಪನಿಯು ದೇಶಿ ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಲಿರುವ ʼಎಪಿಕ್‌ ನ್ಯೂ ಸ್ವಿಫ್ಟ್‌ʼ ಕಾರ್‌ (Maruti Swift) 50ಕ್ಕೂ ಹೆಚ್ಚು ವೈಶಿಷ್ಟತೆಗಳನ್ನು ಒಳಗೊಂಡಿದೆ. ಇದು ನಾಲ್ಕನೇ ಪೀಳಿಗೆಯ ಸ್ವಿಫ್ಟ್ ಕಾರಾಗಿದ್ದು ಇದು 26 ಕಿಲೋಮೀಟರ್​ ಮೈಲೇಜ್ ಕೊಡುವುದಾಗಿ ಕಂಪನಿ ಹೇಳಿಕೊಂಡಿದೆ.

ಕಾರಿನಲ್ಲಿ ವೈ-ಫೈ ಮೊಬೈಲ್‌ ಚಾರ್ಜರ್‌, ಹಿಂಭಾಗದಲ್ಲಿ ಏಸಿ ವೆಂಟ್‌, ಟೆಲಿಮ್ಯಾಟಿಕ್ಸ್‌ ಮತ್ತಿತರ ಹೊಸ ಫೀಚರ್​ಗಳನ್ನು ನೀಡಲಾಗಿದೆ. ಈ ನಾಲ್ಕನೆ ತಲೆಮಾರಿನ ಸ್ವಿಫ್ಟ್‌, ʼಬಿʼ ವಿಭಾಗದ ವಾಹನಗಳಲ್ಲಿ ಸಾಮಾನ್ಯವಾಗಿರುವ ಎಲ್‌ಇಡಿ ಪ್ರೊಜೆಕ್ಟರ್​, ಹೆಡ್‌ಲೈಟ್ಸ್‌ ಮತ್ತು ಟೇಲ್‌ಲೈಟ್ಸ್‌ಗಳನ್ನು ಸಹ ಒಳಗೊಂಡಿದೆ ಎಂದು ಮಾರುತಿ ಸುಜುಕಿ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ʼಎಪಿಕ್ ನ್ಯೂ ಸ್ವಿಫ್ಟ್ʼ ನ ಇತರ ವೈಶಿಷ್ಟತೆಗಳು

ʼಎಪಿಕ್ ನ್ಯೂ ಸ್ವಿಫ್ಟ್ʼ ಉತ್ತಮ ಇಂಧನ ದಕ್ಷತೆ ಹೊಂದಿದೆ. ಸ್ವಯಂಚಾಲಿತ ಮಾದರಿಯಲ್ಲಿ ಇಂಧನ ದಕ್ಷತೆಯು ಶೇ 14ರಷ್ಟು ಸುಧಾರಿಸಿದೆ. ಮ್ಯಾನ್ಯುವಲ್‌ನಲ್ಲಿ ಇಂಧನ ದಕ್ಷತೆಯು ಶೇ 10 ರಷ್ಟು ಸುಧಾರಿಸಿದೆ. ಮೈಲೇಜ್‌ಗೆ ಸಂಬಂಧಿಸಿದಂತೆ, ಸ್ವಯಂಚಾಲಿತ ಮಾದರಿಯಲ್ಲಿ ಮೈಲೇಜ್ 25.7 ಕಿಮೀ/ಲೀಟರ್‌ ಮತ್ತು ಮ್ಯಾನ್ಯುವಲ್‌ನಲ್ಲಿ ಇದು 24.85 ಕಿಮೀ/ಲೀಟರ್‌ ನೀಡುತ್ತದೆ.. ಇವೆರಡೂ ಈ ವಿಭಾಗದಲ್ಲಿ ಗರಿಷ್ಠ ಮೈಲೇಜ್ ಅಗಿದೆ.

ಇದನ್ನೂ ಓದಿ: Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

ಸ್ವಿಫ್ಟ್‌ನಲ್ಲಿ ಬಳಸಲಾದ ಹೊಸ ಎಂಜಿನ್ ಕಾರ್ಬನ್‌ ಡೈಆಕ್ಸೈಡ್‌ (ಸಿಒ2) ಹೊರಸೂಸುವಿಕೆಯನ್ನು ಶೇ 12ವರೆಗೆ ಕಡಿಮೆ ಮಾಡುತ್ತದೆ. ಕಾರಿನ ಎಲ್ಲ ಮಾದರಿಗಳಲ್ಲಿ ಆರು ಏರ್‌ಬ್ಯಾಗ್‌ಗಳು ಇರಲಿವೆ. ಇದು ಸ್ಟ್ಯಾಂಡರ್ಡ್ ಫೀಚರ್ ಆಗಿದೆ.

ಪ್ರೀಮಿಯಂ ಹ್ಯಾಚ್ ವಿಭಾಗವು ಮುಂಬರುವ ದಿನಗಳಲ್ಲಿ ಗಮನಾರ್ಹವಾಗಿ ಬೆಳೆಯುವುದನ್ನು ನಾವು ಎದುರು ನೋಡುತ್ತಿದ್ದೇವೆ. ಸದ್ಯಕ್ಕೆ ವಾರ್ಷಿಕ 7 ಲಕ್ಷದಂತೆ ಮಾರಾಟವಾಗುತ್ತಿರುವ ಈ ವಿಭಾಗದ ಕಾರುಗಳ ಮಾರಾಟವು 2030ರ ವೇಳೆಗೆ, 10 ಲಕ್ಷಕ್ಕೆ ಏರಿಕೆಯಾಗಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಇದು ಗಮನಾರ್ಹವಾಗಿ ಬೆಳೆಯುತ್ತಿರುವ ವಿಭಾಗವಾಗಿದೆ. ಪ್ರೀಮಿಯಂ ಹ್ಯಾಚ್ ವಿಭಾಗಕ್ಕೆ ಸ್ವಿಫ್ಟ್ ಪುನಶ್ಚೇತನ ನೀಡಲಿದೆ ಎಂಬುದು ನಮ್ಮ ದೃಢ ನಂಬಿಕೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಣ್ಣಗಳ ಆಯ್ಕೆ

ಎರಡು ಆ್ಯಕ್ಸೆಸರಿ ಪ್ಯಾಕೇಜ್‌ಗಳಾದ ರೇಸಿಂಗ್ ರೋಡ್‌ಸ್ಟಾರ್ ಮತ್ತು ಥ್ರಿಲ್ ಚೇಸರ್ ನೀಡುತ್ತದೆ. ಎಪಿಕ್ ನ್ಯೂ ಸ್ವಿಫ್ಟ್ – ಎರಡು ಹೊಸ ಬಣ್ಣಗಳಾದ ಲಸ್ಟರ್ ಬ್ಲೂ ಮತ್ತು ನೋವೆಲ್ ಆರೆಂಜ್‌ನಲ್ಲಿ ಲಭ್ಯ ಇರಲಿದೆ. ಜೊತೆಗೆ ಸಿಜ್ಲಿಂಗ್ ರೆಡ್, ಪರ್ಲ್ ಆರ್ಕ್ಟಿಕ್ ವ್ಹೈಟ್, ಮ್ಯಾಗ್ಮಾ ಗ್ರೇ ಒಳಗೊಂಡಿರುವ ವ್ಯಾಪಕ ಶ್ರೇಣಿಯ ಬಣ್ಣಗಳಲ್ಲಿಯೂ ದೊರೆಯಲಿದೆ. ಮೂರು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಾದ – ಲಸ್ಟರ್ ಬ್ಲೂ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌, ಸಿಜ್ಲಿಂಗ್ ರೆಡ್ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌, ಪರ್ಲ್ ಆರ್ಕ್ಟಿಕ್ ವೈಟ್ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌ ನಲ್ಲಿಯೂ ಸಹ ಲಭ್ಯ ಇವೆ

ಸ್ವಿಫ್ಟ್​ ಭಾರತದಲ್ಲಿ ಸುಮಾರು 3 ದಶಲಕ್ಷ ಗ್ರಾಹಕರನ್ನು ಹೊಂದಿದೆ

ಸ್ವಿಫ್ಟ್ ಕಾರನ್ನು ಭಾರತದಿಂದ 39 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಹಣಕಾಸು ವರ್ಷ 2023-24 ರಲ್ಲಿ, 33,000 ಕ್ಕೂ ಹೆಚ್ಚು ಸ್ವಿಫ್ಟ್‌ಗಳನ್ನು ರಫ್ತು ಮಾಡಲಾಗಿದೆ. ಮಾರುತಿ ಸುಜುಕಿಯ ಮುಂಚೂಣಿ 3 ರಫ್ತು ಮಾದರಿಗಳಲ್ಲಿ ಸ್ವಿಫ್ಟ್ ಕೂಡ ಸೇರಿದೆ.

ಕರ್ನಾಟಕದ ಮಾರುಕಟ್ಟೆ ಹೇಗಿದೆ?

ಕರ್ನಾಟಕ ಮಾರುಕಟ್ಟೆಯಲ್ಲಿ, ಮಾರುತಿ ಸುಜುಕಿ 1,15,000 ವಾಹನಗಳನ್ನು ಮಾರಾಟ ಮಾಡಿದ್ದು, ಇದು ಶೇ 19ರಷ್ಟು ಬೆಳವಣಿಗೆಯಾಗಿದೆ. ಬೆಂಗಳೂರಿನಲ್ಲಿ 70,000 ಕಾರ್‌ಗಳನ್ನು ಮಾರಾಟ ಮಾಡಲಾಗಿದ್ದು, ರಾಜ್ಯದಲ್ಲಿನ ಒಟ್ಟಾರೆ ಮಾರಾಟದ ಶೇ 60ರಷ್ಟು ಪಾಲು ಹೊಂದಿದೆ. ಬೆಂಗಳೂರಿನಲ್ಲಿನ ಮಾರಾಟವು ಶೇ 15ರಷ್ಟು ಏರಿಕೆಯಾಗಿದೆ. ಕರ್ನಾಟಕದಲ್ಲಿ ಮಾರುತಿ ಸುಜುಕಿಯು 186 ಮಾರಾಟ ಕೇಂದ್ರಗಳು ಮತ್ತು 244 ಸರ್ವೀಸ್‌ ಕೇಂದ್ರಗಳನ್ನು ಹೊಂದಿದೆ.

Continue Reading

ಪ್ರಮುಖ ಸುದ್ದಿ

Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

Powerful Bikes: 150 ಸಿಸಿಗಳಿಗಿಂತ ಹೆಚ್ಚಿನ ಬೈಕ್​ಗಳೇ ಅವರ ಆದ್ಯತೆಗಳಾಗಿರುತ್ತವೆ. ಹಿಂದೆಲ್ಲ ಭಾರತದ ಮಾರುಕಟ್ಟೆಯಲ್ಲಿ ಪವರ್​ಫುಲ್​ ಬೈಕ್​​ಗಳ ಸಂಖ್ಯೆ ಕಡಿಮೆಯಿದ್ದವು. ಆದರೆ, ಪರಿಸ್ಥಿತಿ ಹಿಂದಿನಂತಿಲ್ಲ. ಕಳೆದ ದಶಕದಲ್ಲಿ, ಪರ್ಫಾಮೆನ್ಸ್ ಬೈಕ್ ಗಳು ಹೆಚ್ಚು ಪ್ರವೇಶಿಸಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ.

VISTARANEWS.COM


on

Powerful Bike
Koo

ಬೆಂಗಳೂರು: ಪರ್ಫಾಮೆನ್ಸ್​ ಬೈಕ್​ಗಳ ಕಡೆಗಿನ ಕ್ರೇಜ್ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಹೆಚ್ಚು ಸಿಸಿ ಹಾಗೂ ಅಧಿಕ ಪವರ್ ಬಿಡುಗಡೆ ಮಾಡುವ ಬೈಕ್​ಗಳನ್ನು ಹೊಸ ಪೀಳಿಗೆಯ ಜನರು ಇಷ್ಟ ಪಡುತ್ತಾರೆ. 150 ಸಿಸಿಗಳಿಗಿಂತ ಹೆಚ್ಚಿನ ಬೈಕ್​ಗಳೇ ಅವರ ಆದ್ಯತೆಗಳಾಗಿರುತ್ತವೆ. ಹಿಂದೆಲ್ಲ ಭಾರತದ ಮಾರುಕಟ್ಟೆಯಲ್ಲಿ ಪವರ್​ಫುಲ್​ ಬೈಕ್​​ಗಳ (Powerful Bikes) ಸಂಖ್ಯೆ ಕಡಿಮೆಯಿದ್ದವು. ಆದರೆ, ಪರಿಸ್ಥಿತಿ ಹಿಂದಿನಂತಿಲ್ಲ. ಕಳೆದ ದಶಕದಲ್ಲಿ, ಪರ್ಫಾಮೆನ್ಸ್ ಬೈಕ್ ಗಳು ಹೆಚ್ಚು ಪ್ರವೇಶಿಸಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ. ಜತೆಗೆ ಸ್ಪರ್ಧೆಯೂ ಹೆಚ್ಚಿದೆ. ಹೀಗೆ 2.5 ಲಕ್ಷ ರೂಪಾಯಿಗಿಂತ ಕಡಿಮೆ (ಎಕ್ಸ್​ಶೋರೂಮ್​) ಬೆಲೆಹೊಂದಿರುವ ಕೆಲವು ಬೈಕ್​ಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ನಿಮಗೆ ಇಷ್ಟವಾದದ್ದನ್ನು ಆಯ್ಕೆ ಮಾಡಿಕೊಳ್ಳಿ.

ಕೆಟಿಎಂ 250 ಡ್ಯೂಕ್ (31 ಬಿಹೆಚ್ ಪಿ)

ಕೆಟಿಎಂ ಡ್ಯೂಕ್ ಪವರ್​ಫುಲ್​ ಬೈಕ್​ ಮಾತ್ರವಲ್ಲದೆ ಅತ್ಯುತ್ತಮ ಹ್ಯಾಂಡ್ಲರ್ ಕೂಡ ಆಗಿದೆ. ಉತ್ತಮ ಗುಣಮಟ್ಟದ ಬಿಡಿಭಾಗಗಳು ಮತ್ತು ಫೀಚರ್​ಗಳನ್ನು ಹೊಂದಿರುವ 250 ಡ್ಯೂಕ್ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿದೆ. ಈ ಬೈಕ್ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 9,250 ಆರ್ ಪಿಎಂನಲ್ಲಿ 31 ಬಿಹೆಚ್ ಪಿ ಪವರ್ ಮತ್ತು 7,250 ಆರ್ ಪಿಎಂನಲ್ಲಿ 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೆನ್-3 250 ಡ್ಯೂಕ್ ಬೈಕಿನಲ್ಲಿ ಪರಿಷ್ಕೃತ ಎರ್ಗೊನಾಮಿಕ್ಸ್, ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಮತ್ತು ಕ್ವಿಕ್ ಶಿಫ್ಟರ್ ಹೊಂದಿದೆ. 250 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.40 ಲಕ್ಷಗಳಾಗಿದೆ.

ಟಿವಿಎಸ್ ಅಪಾಚೆ ಆರ್ ಟಿಆರ್ 310 (35.6 ಬಿಹೆಚ್ ಪಿ)

ಅಪಾಚೆ ಆರ್ ಟಿಆರ್ 310 ಬೈಕ್ ಅಪಾಚೆ ಆರ್ ಆರ್ 310 ಬೈಕಿನ ನೇಕೆಡ್ ಆವೃತ್ತಿಯಾಗಿದೆ. ಆದರೆ ಎಂಜಿನ್ ಹೆಚ್ಚಿನ ಶಕ್ತಿ ಮತ್ತು ಟಾರ್ಕ್ ಬದಲಾವಣೆಯಿಲ್ಲ. ಆರ್ ಟಿಆರ್ 310 ಬೈಕ್ 312 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9,700 ಆರ್ ಪಿಎಂನಲ್ಲಿ 35.6 ಬಿಹೆಚ್ ಪಿ ಪವರ್ ಮತ್ತು 6,650 ಆರ್ ಪಿಎಂನಲ್ಲಿ 28.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಅಪಾಚೆ ಆರ್ ಟಿಆರ್ 310 ಬೈಕ್ ಎಲೆಕ್ಟ್ರಾನಿಕ್ ವಿಜಾರ್ಡಿ ಮತ್ತು ಸೇಫ್ಟಿ ನೆಟ್​ನಂಥ ಸುರಕ್ಷತಾ ಫೀಚರ್​ಗಳಿಂ ಕೂಡಿದೆ. 2.43 ಲಕ್ಷ ರೂ.ಗಳಿಂದ 2.63 ಲಕ್ಷ ರೂ.ಗಳ ನಡುವಿನ ಬೆಲೆಯ ಮೂರು ವೇರಿಯೆಂಟ್​ಗಳು ದೊರೆಯುತ್ತವೆ.

ಬಜಾಜ್ ಡೊಮಿನಾರ್ 400 (40 ಎಚ್​ಪಿ)


ಡೊಮಿನಾರ್ 400 ಬೈಕ್ ಕೆಟಿಎಂ 390 ಡ್ಯೂಕ್ ಬೈಕಿನಿಂದ ಎರವಲು ಪಡೆದ ಎಂಜಿನ್ಹೊಂ ದಿದೆ. ಇದರ 373 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8,800 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೊಮಿನಾರ್ 400 ಬೈಕ್​​ನ ಪ್ಲಸ್​ ಮತ್ತು ಮೈನಸ್ ವಿಚಾರವೆಂದರೆ ಅದರ ತೂಕ. 192 ಕೆ.ಜಿ ತೂಕವನ್ನು ಹೊಂದಿರುವ ಇದು ಈ ಪಟ್ಟಿಯಲ್ಲಿ ಅತಿ ಭಾರವಾದ ಬೈಕ್ ಆಗಿದೆ. ಡೊಮಿನಾರ್ 400 ಬೈಕಿನ ಬೆಲೆಯು ರೂ.2.30 ಲಕ್ಷ ರೂಪಾಯಿ.

ಬಜಾಜ್ ಪಲ್ಸರ್ ಎನ್ಎಸ್400ಝಡ್ (40ಹೆಚ್​ಪಿ)

ಪಲ್ಸರ್ ಎನ್ ಎಸ್ 400 ಝಡ್ ಬಜಾಜ್ ನ ಪಲ್ಸರ್ ಸರಣಿಯ ಬೈಕುಗಳ ಪಟ್ಟಿಗೆ ಹೊಸ ಸೇರ್ಪಡೆ. ಇದು ಡೊಮಿನಾರ್ 400ರ ಎಂಜಿನ್ ಮತ್ತು ಫ್ರೇಮ್ ಅನ್ನು ಹಂಚಿಕೊಳ್ಳುತ್ತದೆ. ಆದರೆ 18 ಕೆಜಿ ಹಗುರ. 174 ಕೆ.ಜಿ ತೂಕ ಹೊಂದಿರುವ ಎನ್ ಎಸ್ 400 ಝಡ್ ಕಾರ್ಯಕ್ಷಮತೆಯ ವಿಷಯದಲ್ಲಿ ಸ್ಪಷ್ಟ ಪ್ರಯೋಜನ ಹೊಂದಿದೆ. ಎಬಿಎಸ್ ನೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುವ ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡಿಂಗ್ ಮೋಡ್ ಗಳಂತಹ ಫೀಚರ್​ಗಳಿಎ. ಪಲ್ಸರ್ ಎನ್ ಎಸ್ 400 ಝಡ್ ಬೈಕಿನ ಬೆಲೆಯು ರೂ.1.85 ಲಕ್ಷಗಳಾಗಿದೆ.

ಇದನ್ನೂ ಓದಿ: Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್​ಪೈರಿ ಡೇಟ್​​; ಅವುಗಳು ಯಾವವು ಎಂಬುದು ತಿಳಿದಿರಲಿ

ಟ್ರಯಂಫ್ ಸ್ಪೀಡ್ 400 (40hp)

ಟ್ರಯಂಫ್ ಸ್ಪೀಡ್ 400 ಹಿಂದಿನ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, 176 ಕೆಜಿ ತೂಕವನ್ನು ಹೊಂದಿರುವ ಇದು ಬಜಾಜ್ ಪಲ್ಸರ್ ಎನ್ ಎಸ್ 400 ಝಡ್ ಗಿಂತ ಕೇವಲ 2 ಕೆ.ಜಿ ಹೆಚ್ಚು ತೂಕ ಹೊಂದಿದೆ. ಟ್ರಯಂಫ್ ಬೈಕ್ 398 ಸಿಸಿ ಎಂಜಿನ್ ಸಹಾಯದಿಂದ 8,000 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 37.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 2.34 ಲಕ್ಷ ರೂ.ಗಳಲ್ಲಿ, ಟ್ರಯಂಫ್ ‘ವಾಲ್ಯೂ ಫಾರ್ ಮನಿ.

Continue Reading

ಬೆಂಗಳೂರು

Water Aerator : ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ರೆ 10 ನಿಮಿಷದಲ್ಲಿ ಮನೆ ತಲುಪುತ್ತದೆ ವಾಟರ್ ಏರಿಯೇಟರ್​

water aerator : ಏರಿಯೇಟರ್‌ ಹುಡುಕುವವರ ಸಂಖ್ಯೆ ಶೇಕಡಾ 1400 ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸ್ವಿಗ್ಗಿ ಇನ್‌ಸ್ಟಾ ಮಾರ್ಟ್‌, ಅರ್ಥ ಫೋಕಸ್‌ ಎನ್ನುವ ಕಂಪನಿಯ ಜೊತೆ ಕೈಜೋಡಿಸಿದೆ. ಈ ಮೂಲಕ ಕೇವಲ 10 ನಿಮಿಷಗಳಲ್ಲಿ ಬೇಡಿಕೆ ಸಲ್ಲಿಸುವ ಗ್ರಾಹಕರುಗಳಿಗೆ ಏರಿಯೇಟರ್‌ ಅನ್ನು ತಲುಪಿಸಲು ಆರಂಭಿಸಿದೆ.

VISTARANEWS.COM


on

water aerator
Koo

ಬೆಂಗಳೂರು : ಬೆಂಗಳೂರು ನಗರ ಹಾಗೂ ಕರ್ನಾಟಕದಾದ್ಯಂತ ನೀರಿನ ಕೊರತೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ನೀರಿನ ಸಂಪರ್ಕಕ್ಕೆ ವಾಟರ್​ ಏರಿಯೇಟರ್​​ (water aerator) ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಏರಿಯೇಟರ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಏರಿಯೇಟರ್‌ ಗೆ ಆನ್‌ಲೈನ್‌ ಫ್ಲಾಟ್‌ ಫಾರಂಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಹಾಗೂ ಫುಡ್​ ಡೆಲಿವರಿ ಆ್ಯಪ್​ ಸ್ವಿಗ್ಗಿ ಏರಿಯೇಟರ್​ ಸರಬರಾಜು ಮಾಡಲು ಆರಂಭಿಸಿದೆ.

ಅತ್ಯಂತ ವೇಗವಾಗಿ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ವೇದಿಕೆಯಾಗಿರುವ ಸ್ವಿಗ್ಗಿ ಮಾರ್ಟ್‌ನಲ್ಲೂ ಏರಿಯೇಟರ್‌ ಹುಡುಕುವವರ ಸಂಖ್ಯೆ ಶೇಕಡಾ 1400 ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸ್ವಿಗ್ಗಿ ಇನ್‌ಸ್ಟಾ ಮಾರ್ಟ್‌, ಅರ್ಥ ಫೋಕಸ್‌ ಎನ್ನುವ ಕಂಪನಿಯ ಜೊತೆ ಕೈಜೋಡಿಸಿದೆ. ಈ ಮೂಲಕ ಕೇವಲ 10 ನಿಮಿಷಗಳಲ್ಲಿ ಬೇಡಿಕೆ ಸಲ್ಲಿಸುವ ಗ್ರಾಹಕರುಗಳಿಗೆ ಏರಿಯೇಟರ್‌ ಅನ್ನು ತಲುಪಿಸಲು ಆರಂಭಿಸಿದೆ.

ಇದನ್ನೂ ಓದಿ: Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

ಈ ಮೂಲಕ ಬೆಂಗಳೂರು ಜಲಮಂಡಳಿಯ ನೀರಿನ ಸದ್ಬಳಕೆಯ ಮಹತ್ವಕಾಂಕ್ಷಿ ಯೋಜನೆಯಾದ ಏರಿಯೇಟರ್‌ ಅಳವಡಿಕೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುವ ಗುರಿಯನ್ನು ಹೊಂದಿದೆ. ಈ ಏರಿಯೇಟರ್‌ಗಳ ಬಳಕೆಯಿಂದ ಬಹಳಷ್ಟು ನೀರಿನ ಉಳೀತಾಯವನ್ನು ಮಾಡಬಹುದಾಗಿದೆ. ಕಿಚನ್‌ ಟ್ಯಾಪ್‌ಗಳಲ್ಲಿ ಅಳವಡಿಸುವುದರಿಂದ ಶೇಕಡಾ 70 ರಷ್ಟು ಮತ್ತು ಶವರ್‌ಗಳಿಂದ ಶೇಕಡಾ 50 ರಷ್ಟು ನೀರು ಉಳಿತಾಯ ಮಾಡಬಹುದಾಗಿದೆ. ಸ್ವಿಗ್ಗಿ ಇಸ್ಟಾ ಮಾರ್ಟ್‌ನಲ್ಲಿ ಕಿಚನ್‌, ಬಾತ್‌ ಮತ್ತು ಬೇಸಿನ್‌ ಟ್ಯಾಪ್‌ ಹಾಗೂ ಶವರ್‌ಗಳಲ್ಲಿ ಅಳವಡಿಸಬಹುದಾದ ಫ್ಲೋ ರಿಸ್ಟ್ರಿಕ್ಟರ್‌ ಅನ್ನು ದಾಸ್ತುನು ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯನ್ನು ತಿಳಿಸಲಾಗಿದೆ.

ಮಾ.21ರಿಂದ ನಲ್ಲಿಗಳಿಗೆ ಏರಿಯೇಟರ್‌ ಕಡ್ಡಾಯ ಮಾಡಿದ್ದ ಬೆಂಗಳೂರು ಜಲಮಂಡಳಿ

ರಾಜಧಾನಿಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ (Bangalore Water Crisis) ಉಲ್ಬಣವಾಗುತ್ತಿದೆ. ಹೀಗಾಗಿ ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಹಲವು ಕ್ರಮ ಕೈಗೊಂಡಿರುವ ಬೆಂಗಳೂರು ಜಲಮಂಡಳಿಯು(ಬಿಡಬ್ಲ್ಯುಎಸ್‌ಎಸ್‌ಬಿ), ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ ಮಾಡಿ (Aerators for Taps) ಆದೇಶ ಹೊರಡಿಸಿತ್ತು.

ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಜಲಮಂಡಲಿ ಕ್ರಮ ಕೈಗೊಂಡಿದ್ದು, ಮಾರ್ಚ್‌ 21 ರಿಂದ 31ರೊಳಗೆ ನಲ್ಲಿಗಳಿಗೆ ಕಡ್ಡಾಯವಾಗಿ ಏರಿಯೇಟರ್‌ ಅಳವಡಿಸಲು ಸೂಚನೆ ನೀಡಿತ್ತು.

ಏರಿಯೇಟರ್‌ ಅಳವಡಿಕೆಯಿಂದ ಶೇ. 60 ರಿಂದ 85ರಷ್ಟು ನೀರಿನ ಉಳಿತಾಯ ಸಾಧ್ಯವಾಗಲಿದೆ. ವಾಣಿಜ್ಯ ಮಳಿಗೆಗೆಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ಗಳು, ಐಷಾರಾಮಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ವಾಷ್ ಬೇಸಿನ್, ಕಿಚನ್, ಕೈ ಮತ್ತು ಕಾಲು ತೊಳೆಯುವ ಸ್ಥಳಗಳು, ಸ್ವಚ್ಛತೆಗಾಗಿ ಮೀಸಲಿರುವ ನಲ್ಲಿಗಳಿಂದ ಹೆಚ್ಚಿನ ನೀರು ಪೋಲಾಗುವುದನ್ನು ತಡೆಯಲು ಕ್ರಮ ಏರಿಯೇಟರ್‌ ಕಡ್ಡಾಯವಾಗಿ ಅಳವಡಿಸಲು ಸೂಚನೆ ನೀಡಲಾಗಿತ್ತು.

Continue Reading
Advertisement
Health Benefits Of Tofu
ಆರೋಗ್ಯ1 min ago

Health Benefits Of Tofu: ಪನೀರ್‌ನಂತೆ ಕಾಣುವ ಈ ಆಹಾರದ ಬಗ್ಗೆ ನಿಮಗೆ ಗೊತ್ತೆ?

2nd PUC Exam 2 Result tomorrow
ಶಿಕ್ಷಣ33 mins ago

2nd PUC Exam 2 Result: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ಇಂದು; ಸಿಇಟಿ ಫಲಿತಾಂಶ ಯಾವಾಗ?

Karnataka Weather Forecast
ಮಳೆ1 hour ago

Karnataka Weather : ಗರಿಷ್ಠ ತಾಪಮಾನ ಇಳಿಕೆ; ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Tea Tips
ಆರೋಗ್ಯ1 hour ago

Tea Tips: ಹಾಲಿನ ಚಹಾ ಬದಲು ಬ್ಲ್ಯಾಕ್‌ ಟೀ ಕುಡಿಯಿರಿ!

Sambita Patra
ದೇಶ2 hours ago

Sambit Patra: ಭಗವಾನ್‌ ಜಗನ್ನಾಥನೇ ಮೋದಿಯ ಭಕ್ತ ಎಂದ ಬಿಜೆಪಿ ನಾಯಕ; ಭುಗಿಲೆದ್ದ ವಿವಾದ

Anti Terrorism Day
ದೇಶ2 hours ago

Anti Terrorism Day: ಇಂದು ಭಯೋತ್ಪಾದನಾ ವಿರೋಧಿ ದಿನ; ಏನು ಈ ದಿನದ ಹಿನ್ನೆಲೆ?

Dina Bhavishya
ಭವಿಷ್ಯ3 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಹೆಚ್ಚು ಲಾಭ; ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

Prajwal Revanna Case
ಕರ್ನಾಟಕ7 hours ago

Prajwal Revanna Case: ಪ್ರಜ್ವಲ್ ರೇವಣ್ಣ ಪಾಸ್‌ ಪೋರ್ಟ್ ರದ್ದು ಮಾಡಲು ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ

Mobile
ದೇಶ8 hours ago

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡಿ 15 ವರ್ಷದ ಅಕ್ಕನನ್ನೇ ಗರ್ಭಿಣಿ ಮಾಡಿದ 13 ವರ್ಷದ ಬಾಲಕ!

Army Officer
Lok Sabha Election 20248 hours ago

101ನೇ ವಯಸ್ಸಿನಲ್ಲೂ ‘ಕರ್ತವ್ಯ’ ಮರೆಯದೆ ವೋಟ್‌ ಮಾಡಿದ ನಿವೃತ್ತ ಯೋಧ; ಸೆಲ್ಯೂಟ್‌ ಎಂದರು ಜನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ18 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌