RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು - Vistara News

ಕ್ರೀಡೆ

RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

RCB vs GT: ಕಳೆದ ಪಂದ್ಯದಲ್ಲಿ ಆಮೆ ಗತಿಯ ಬ್ಯಾಟಿಂಗ್​ ನಡೆಸಿ ಟೀಕೆಗೆ ಗುರಿಯಾಗಿದ್ದ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಬ್ಯಾಟಿಂಗ್​ ಜೋಶ್​ ತೋರ್ಪಡಿಸಿದರು. ಅಜ್ಮತುಲ್ಲಾ ಒಮರ್ಜಾಯ್ ಎಸೆದ ಮೊದಲ ಓವರ್​ನಲ್ಲಿ ರನ್​ ಗಳಿಸಲು ಪರದಾಡಿದ ಕೊಹ್ಲಿ ಆ ಬಳಿಕ ಸಿಡಿದು ನಿಂತರು. 44 ಎಸೆತಗಳಿಂದ 70(6 ಬೌಂಡರಿ ಮತ್ತು 3 ಸಿಕ್ಸರ್​) ರನ್​ ಬಾರಿಸಿದರು.

VISTARANEWS.COM


on

RCB vs GT
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ವಿಲ್​ ಜ್ಯಾಕ್ಸ್ ​(100*) ಅವರ ಶತಕ ಮತ್ತು ವಿರಾಟ್​ ಕೊಹ್ಲಿಯ(70*) ಅರ್ಧಶತಕದ ಸೊಗಸಾದ ಬ್ಯಾಟಿಂಗ್​ ನೆರವಿನಿಂದ ರಾಯಲ್​ ಜಾಲೆಂಜರ್ಸ್​ ಬೆಂಗಳೂರು(RCB vs GT) ತಂಡ ಗುಜರಾತ್​ ಟೈಟಾನ್ಸ್​ ವಿರುದ್ಧ ಭರ್ಜರಿ 9 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಆರ್​ಸಿಬಿಗೆ 10 ಪಂದ್ಯಗಳಲ್ಲಿ ಒಲಿದ ಕೇವಲ ಮೂರನೇ ಗೆಲುವಾಗಿದೆ. ಗೆಲುವು ಕಂಡರೂ ಕೂಡ 6 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್​ ಟೈಟಾನ್ಸ್​ ಸಾಯಿ ಸುದರ್ಶನ್​(84*) ಮತ್ತು ಶಾರೂಖ್​ ಖಾನ್​(58) ಅರ್ಧಶತಕದ ಉಪಯುಕ್ತ ಬ್ಯಾಟಿಂಗ್​ ನೆರವಿನಿಂದ 20 ಓವರ್​ಗೆ 3 ವಿಕೆಟ್​ ಕಳೆದುಕೊಂಡು ಭರ್ತಿ 200 ರನ್​ ಪೇರಿಸಿತು. ಜವಾಬಿತ್ತ ಆರ್​ಸಿಬಿ ಫುಲ್​ ಬ್ಯಾಟಿಂಗ್​ ಜೋಶ್​ನೊಂದಿಗೆ ಕೇವಲ 16 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ 206 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಕೊಹ್ಲಿ-ಜ್ಯಾಕ್ಸ್ ಬೊಂಬಾಟ್​ ಅರ್ಧಶತಕ


ಕಳೆದ ಪಂದ್ಯದಲ್ಲಿ ಆಮೆ ಗತಿಯ ಬ್ಯಾಟಿಂಗ್​ ನಡೆಸಿ ಟೀಕೆಗೆ ಗುರಿಯಾಗಿದ್ದ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಬ್ಯಾಟಿಂಗ್​ ಜೋಶ್​ ತೋರ್ಪಡಿಸಿದರು. ಅಜ್ಮತುಲ್ಲಾ ಒಮರ್ಜಾಯ್ ಎಸೆದ ಮೊದಲ ಓವರ್​ನಲ್ಲಿ ರನ್​ ಗಳಿಸಲು ಪರದಾಡಿದ ಕೊಹ್ಲಿ ಆ ಬಳಿಕ ಸಿಡಿದು ನಿಂತರು. ಅಘಫಾನಿಸ್ತಾನದ ಸಿನ್ನರ್​ಗಳಾದ ರಶೀದ್​ ಖಾನ್​, ನೂರ್​ ಅಹ್ಮದ್​ಗೆ ಸತತ ಸಿಕ್ಸರ್​ ಮತ್ತು ಬೌಂಡರಿಗಳ ರುಚಿ ತೋರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದ ವಿಲ್​ ಜಾಕ್ಸ್​ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಅಜೇಯ ಶತಕ ಬಾರಿಸಿ ಮಿಂಚಿದರು. ಗೆಲುವಿನ ರನ್​ ಮತ್ತು ಶತಕವನ್ನು ಸಿಕ್ಸರ್​ ಮೂಲಕ ಪೂರ್ತಿಗೊಳಿಸಿದರು.

ಇದನ್ನೂ ಓದಿ IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

ವಿರಾಟ್​ ಕೊಹ್ಲಿ 44 ಎಸೆತಗಳಿಂದ 70(6 ಬೌಂಡರಿ ಮತ್ತು 3 ಸಿಕ್ಸರ್​) ರನ್​ ಬಾರಿಸಿದರು. ವಿಲ್​ ಜಾಕ್ಸ್​ 41 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್​ ಮತ್ತು 5 ಬೌಂಡರಿ ಬಾರಿಸಿ ಭರ್ತಿ 100 ರನ್​ ಪೇರಿಸಿದರು. ಇದು ಅವರ ಚೊಚ್ಚಲ ಐಪಿಎಲ್​ ಶತಕವಾಗಿದೆ. ಆರ್​ಸಿಬಿ ಇದೇ ಆಟವನ್ನು ಆರಂಭಿಕ ಹಂತದಲ್ಲಿ ತೋರ್ಪಡಿಸುತ್ತಿದ್ದರೆ ಇಂದು ಪ್ಲೇ ಆಫ್​ ಸನಿಹಕ್ಕೆ ಬಂದು ನಿಲ್ಲುತ್ತಿತ್ತು. ಗುಜರಾತ್​ ಪರ ರಶೀದ್​ ಖಾನ್​ 51 ರನ್​ ಬಿಟ್ಟುಕೊಟ್ಟರೆ, ಮೋಹಿತ್​ ಶರ್ಮ ಕೇವಲ 2 ಓವರ್​ಗೆ 41 ರನ್​ ಚಚ್ಚಿಸಿಕೊಂಡರು.

ಸಾಯಿ -ಶಾರೂಖ್ ಜತೆಯಾಟ ವ್ಯರ್ಥ


ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ ತಂಡಕ್ಕೆ ಸಿನ್ನರ್​ಗಳಾದ ಸ್ವಪ್ನಿಲ್ ಸಿಂಗ್ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ಆರಂಭದಲ್ಲೇ ಆಘಾತವಿಕ್ಕಿದರು. ಸ್ವಪ್ನಿಲ್ ಸಿಂಗ್ ಅವರು ವೃದ್ಧಿಮಾನ್​ ಸಾಹಾ(5) ವಿಕೆಟ್​ ಕಡೆವಿದರೆ, ಮ್ಯಾಕ್ಸ್​ವೆಲ್ ನಾಯಕ ಶುಭಮನ್​ ಗಿಲ್​(16) ವಿಕೆಟ್​ ಕಿತ್ತರು. ಆರಂಭಿಕ ಆಘಾತ ಕಂಡ ಗುಜತಾರ್​ ತಂಡವನ್ನು ಮೇಲೆತ್ತಿದ್ದು ತಮಿಳುನಾಡು ಮೂಲಕದ ಆಟಗಾರರಾದ ಸಾಯಿ ಸುದರ್ಶನ್​ ಮತ್ತು ಶಾರೂಖ್​ ಖಾನ್​.

ಉಭಯ ಆಟಗಾರರು ಆರ್​ಸಿಬಿ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಅರ್ಧಶತಕ ಪೂರ್ತಿಗೊಳಿಸಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ಜೋಡಿ ಮೂರನೇ ವಿಕೆಟ್​ಗೆ ಅತ್ಯಮೂಲ್ಯ 86 ರನ್​ ಜತೆಯಾಟ ನಡೆಸಿತು. ಅರ್ಧಶತಕ ಪೂರ್ತಿಗೊಂಡು ಅಪಾಯಕಾರಿಯಾಗಿ ಗೋಚರಿಸಿದ್ದ ಶಾರೂಖ್​ ಖಾನ್​ ಮೊಹಮ್ಮದ್​ ಸಿರಾಜ್​ ಅವರ ಯಾರ್ಕರ್​ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಒಟ್ಟು 30 ಎಸೆತ ಎದುರಿಸಿ 5 ಸಿಕ್ಸರ್​ ಮತ್ತು 3 ಬೌಂಡರಿ ನೆರವಿನಿಂದ 58 ರನ್​ ಬಾರಿಸಿದರು. ಪಂದ್ಯ ಸೋತ ಕಾರಣ ಉಭಯ ಆಟಗಾರರ ಈ ಉತ್ತಮ ಜತೆಯಾಟ ವ್ಯರ್ಥಗೊಂಡಿತು.

ಶಾರೂಖ್ ವಿಕೆಟ್​ ಪತನದ ಬಳಿಕ ಆಡಲಿಳಿದ ಡೇವಿಡ್​ ಮಿಲ್ಲರ್ ಕೂಡ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ಅಜೇಯ 26 ರನ್​ ಬಾರಿಸಿದರು. ಸಾಯಿ ಸುದರ್ಶನ್ ಬರೋಬ್ಬರಿ 8 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ 84 ರನ್​ ಗಳಿಸಿ ಅಜೇಯರಾಗಿ ಉಳಿದರು. ಆರ್​ಸಿಬಿ ಪರ ಸಿರಾಜ್​, ಸ್ವಪ್ನಿಲ್ ಸಿಂಗ್ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ತಲಾ ಒಂದು ವಿಕೆಟ್​ ಪಡೆದರು. ಗ್ರೀನ್​ ಮೂರು ಓವರ್​ಗೆ 42 ರನ್​ ಬಿಟ್ಟುಕೊಟ್ಟು ದುಬಾರಿಯಾಗಿ ಕಂಡುಬಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

T20 World Cup : ವಿಶ್ವ ಕಪ್​ ಇತಿಹಾಸದಲ್ಲಿ ಮೊದಲ ಗೆಲುವು ದಾಖಲಿಸಿದ ಕೆನಡಾ; ಐರ್ಲೆಂಡ್​ಗೆ ನಿರಾಸೆ

T20 World Cup : ಮೊದಲು ಬ್ಯಾಟ್ ಮಾಡಿದ ಕೆನಡಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 137 ರನ್‌ ಬಾರಿಸಿತ್ತು. ಪ್ರತಿಯಾಗಿ ಆಡಿದ ಐರ್ಲೆಂಡ್‌ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾ 7 ವಿಕೆಟ್​ ಕಳೆದುಕೊಂಡು 125 ರನ್‌ ಗಳಿಸಿ ಸೋಲೋಪ್ಪಿಕೊಂಡಿತು. ಇದು ಕೂಡ ಟೂರ್ನಿಯ ಜಿದ್ದಾಜಿದ್ದಿನ ಪಂದ್ಯ ಎನಿಸಿಕೊಂಡಿತು.

VISTARANEWS.COM


on

T20 World Cup
Koo

ಬೆಂಗಳೂರು : ಗುರುವಾರವಷ್ಟೇ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಅಮೆರಿಕ ತಂಡ ಟಿ20 ಕ್ರಿಕೆಟ್ ವಿಶ್ವ ಕಪ್​ನಲ್ಲಿ ಐತಿಹಾಸಿಕ ವಿಜಯವೊಂದನ್ನು ದಾಖಲಿಸಿತ್ತು. ಇದೀಗ ಶುಕ್ರವಾರ ನಡೆದ ಪಂದ್ಯದಲ್ಲಿ ಕೆನಡಾ ತಂಡ ಟೂರ್ನಿಯ ಇತಿಹಾಸದಲ್ಲಿ ಮೊಟ್ಟ ಮೊದಲ ಗೆಲುವು ದಾಖಲಿಸಿದೆ. ಈ ತಂಡವು ತನಗಿಂತ ಸ್ವಲ್ಪ ಮಟ್ಟಿಗೆ ಬಲಿಷ್ಠವಾಗಿರುವ ಐರ್ಲೆಂಡ್ ವಿರುದ್ಧ ವಿಜಯ ಸಾಧಿಸಿದೆ.

ನ್ಯೂಯಾರ್ಕ್‌ನ ನಸ್ಸೌ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್‌ 7ರ ಶುಕ್ರವಾರ ನಡೆದ ಪಂದ್ಯದಲ್ಲಿ ಕೆನಡಾ ತಂಡ 12 ರನ್​ಗಳ ವಿಜಯ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಕೆನಡಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 137 ರನ್‌ ಬಾರಿಸಿತ್ತು. ಪ್ರತಿಯಾಗಿ ಆಡಿದ ಐರ್ಲೆಂಡ್‌ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾ 7 ವಿಕೆಟ್​ ಕಳೆದುಕೊಂಡು 125 ರನ್‌ ಗಳಿಸಿ ಸೋಲೋಪ್ಪಿಕೊಂಡಿತು. ಇದು ಕೂಡ ಟೂರ್ನಿಯ ಜಿದ್ದಾಜಿದ್ದಿನ ಪಂದ್ಯ ಎನಿಸಿಕೊಂಡಿತು.

ಕೆನಡಾ ತಂಡ ಪರ ಅ್ಯರೋನ್​ ಜಾನ್ಸನ್ ಮತ್ತು ನವನೀತ್ ಧಲಿವಾಲ್ ಬ್ಯಾಟಿಂಗ್ ಆರಂಭಿಸಿದರು. ಆದರೆ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಮೊದಲ ವಿಕೆಟ್‌ಗೆ ಕೇವಲ 12 ರನ್‌ಗಳನ್ನು ದಾಖಲಾಯಿತು. ಧಲಿವಾಲ್ ಆರು ರನ್ ಗೆ ಔಟಾದರು. ಬಳಿಕ ಪರ್ಗತ್ ಸಿಂಗ್ 18 ರನ್‌ ಗಳಿಸಿ ನಿರ್ಗಮಿಸಿದರು. ಅತ್ತ ಜಾನ್ಸನ್ ಮೂರು ಬೌಂಡರಿಗಳ ನೆರವಿನಿಂದ 14 ರನ್ ಗಳಿ ಪೆವಿಲಿಯನ್​ಗೆ ಮರಳಿದರು. ಜಾನ್ಸನ್ ಔಟಾದ ನಂತರ ಕ್ರೀಸ್​ಗೆ ಇಳಿದ ದಿಲ್‌ಪ್ರೀತ್ ಬಾಜ್ವಾ 7 ರನ್‌ ಔಟಾದರು. ಬಳಿಕ ನಿಕೋಲಸ್ ಕಿರ್ಟನ್ ಮೊವ್ವಾ ಉತ್ತಮ ಜೊತೆಯಾಟವಾಡಿದರು. 15.2 ಓವರ್‌ಗಳಲ್ಲಿ ತಂಡ 100 ರನ್ ಗಳಿಸಿತು. ಏತನ್ಮಧ್ಯೆ ಮೆಕಾರ್ಥಿ ಎಸೆದ 19ನೇ ಓವರ್‌ನಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡಿತು. 35 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಿತ 49 ರನ್ ಗಳಿಸಿದ್ದ ಕಿರ್ಟನ್‌ 1 ರನ್​ನಿಂದ ಅರ್ಧ ಶತಕದ ಅವಕಾಶ ನಷ್ಟ ಮಾಡಿಕೊಂಡರು. ಆದಾಗ್ಯೂ ತಂಡ ಪರ ಗರಿಷ್ಠ ಮೊತ್ತ ಬಾರಿಸಿದರು. ಮೊವ್ವ 36 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 37 ರನ್ ಗಳಿಸಿದರು.

ಇದನ್ನೂ ಓದಿ : T20 World Cup : ಪಾಕಿಸ್ತಾನ ತಂಡದ ಅಮೆರಿಕ ವಿರುದ್ಧ ಸೋತಿದ್ದು ಐಎಮ್​ಎಫ್​ ನೀಡುವ 80 ಕೋಟಿ ಸಾಲಕ್ಕಾಗಿ!

ಐರ್ಲೆಂಡ್‌ ಬೌಲಿಂಗ್​ನಲ್ಲಿ ಯಂಗ್ ಮತ್ತು ಮೆಕಾರ್ಥಿ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್​ನಲ್ಲಿ ಅನುಕ್ರಮವಾಗಿ 32 ಮತ್ತು 24 ರನ್‌ ಬಿಟ್ಟುಕೊಟ್ಟು ತಲಾ ಎರಡು ವಿಕೆಟ್ ಪಡೆದರು. ಅದೈರ್ ಮತ್ತು ಡೆಲಾನಿ ತಲಾ ಒಂದು ವಿಕೆಟ್ ಕಬಳಿಸಿದರು.

ಐರ್ಲೆಂಡ್‌ ಚೇಸಿಂಗ್ ಫೇಲ್​

ಗುರಿ ಬೆನ್ನಟ್ಟಲು ಶುರು ಮಾಡಿದ ಐರ್ಲೆಂಡ್ ಸತತವಾಗಿ ಮೇಲೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ನಾಯಕ ಪೌಲ್‌ ಸ್ಟಿರ್ಲಿಂಗ್ ವಿಫಲರಾಗಿ ಕೇವಲ 9 ರನ್‌ ಗಳಿಸಿ ಔಟಾದರು. ಬಾಲ್ಬಿರ್ನಿ ಕೊಡುಗೆ 17 ರನ್‌. ಹ್ಯಾರಿ ಟೆಕ್ಟರ್‌ 7 ರನ್‌ ಗಳಿಸಿದರೆ, ಲೋರ್ಕನ್ ಟಕರ್ 10 ರನ್‌ ಗಳಿಸಿ ನಿರ್ಗಮಿಸಿದರು. ಕರ್ಟಿಸ್ ಕ್ಯಾಂಫರ್ 4 ರನ್‌ಗೆ ಸೀಮಿತಗೊಂಡರು. ದಿಢೀರನೆ ಕುಸಿತ ಕಂಡ ತಂಡಕ್ಕೆ ಡಾಕ್ರೆಲ್‌ ಹಾಗೂ ಮಾರ್ಕ್‌ ಅಡೈರ್‌ ಆಸರೆಯಾದರು. ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಮಾಡಿದರು.‌ ಆದರೆ, ಕೆನಡಾ ಬೌಲರ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಕೊನೇ ಓವರ್​ನಲ್ಲಿ 17 ರನ್ ಗೆಲುವಿಗೆ ಬೇಕಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

Continue Reading

ಪ್ರಮುಖ ಸುದ್ದಿ

T20 World Cup : ಪಾಕಿಸ್ತಾನ ತಂಡ ಅಮೆರಿಕ ವಿರುದ್ಧ ಸೋತಿದ್ದು ಐಎಮ್​ಎಫ್​ ನೀಡುವ 80 ಕೋಟಿ ಸಾಲಕ್ಕಾಗಿ!

T20 World Cup: ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ತಂಡ ಸೋಲುತ್ತಿದ್ದಂತೆ ತಂಡದ ಆಟಗಾರರನ್ನು ಲೇವಡಿ ಮಾಡುವ ತಮಾಷೆಯ ವೀಡಿಯೊಗಳನ್ನು ಮಾಡಿದರು. ವಿದೇಶದಲ್ಲಿ ವಾಸಿಸುವ ಪಾಕಿಸ್ತಾನಿಗಳ ಉತ್ಸಾಹದ ಬಗ್ಗೆ ತಂಡವು ಕಾಳಜಿ ವಹಿಸುವುದಿಲ್ಲ. ಅವರು ಉತ್ತಮವಾಗಿ ಆಡುವ ಬದಲು ಮಜಾ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನದ ಯುವತಿಯೊಬ್ಬಳು ಹೇಳುತ್ತಿರುವ ವೀಡಿಯೊ ಈಗ ವೈರಲ್ ಆಗಿದೆ.

VISTARANEWS.COM


on

T20 World Cup
Koo

ಬೆಂಗಳೂರು: ಗುರುವಾರ ನಡೆದ ಟಿ 20 ವಿಶ್ವಕಪ್ ಪಂದ್ಯದಲ್ಲಿ (T20 World Cup) ಯುಎಸ್ಎ ಕ್ರಿಕೆಟ್ ತಂಡವು ಪಾಕಿಸ್ತಾನವನ್ನು ರೋಮಾಂಚಕ ಸೂಪರ್ ಓವರ್​ನಲ್ಲಿ ಸೋಲಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಗೆಲುವು ಯುಎಸ್ಎ ತಂಡದ ಪಂದ್ಯಾವಳಿಯಲ್ಲಿ ಅತ್ಯಂತ ಮಹತ್ವದ ಸಾಧನೆಯಾಗಿದೆ. ಸತತ ಎರಡು ಗೆಲುವುಗಳೊಂದಿಗೆ ಎ ಗುಂಪಿನ ಅಗ್ರಸ್ಥಾನಕ್ಕೆ ಏರಿದೆ.

ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ತಂಡ ಸೋಲುತ್ತಿದ್ದಂತೆ ತಂಡದ ಆಟಗಾರರನ್ನು ಲೇವಡಿ ಮಾಡುವ ತಮಾಷೆಯ ವೀಡಿಯೊಗಳನ್ನು ಮಾಡಿದರು. ವಿದೇಶದಲ್ಲಿ ವಾಸಿಸುವ ಪಾಕಿಸ್ತಾನಿಗಳ ಉತ್ಸಾಹದ ಬಗ್ಗೆ ತಂಡವು ಕಾಳಜಿ ವಹಿಸುವುದಿಲ್ಲ. ಅವರು ಉತ್ತಮವಾಗಿ ಆಡುವ ಬದಲು ಮಜಾ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನದ ಯುವತಿಯೊಬ್ಬಳು ಹೇಳುತ್ತಿರುವ ವೀಡಿಯೊ ಈಗ ವೈರಲ್ ಆಗಿದೆ.

ಎಕ್ಸ್ ಬಳಕೆದಾರರೊಬ್ಬರು ಈ ವೀಡಿಯೊಗೆ ಪ್ರತಿಕ್ರಿಯಿಸಿ, “ಪಾಕಿಸ್ತಾನ ಆಟಗಾರರು ಅವಳನ್ನು ಅಳುವಂತೆ ಮಾಡಿದ್ದಾರೆ. ಅವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ. ಇನ್ನೊಬ್ಬರು ಹೇಳಿದರು, “ಅವಳು ಒಂದು ಹಂತದಲ್ಲಿ ಶರ್ಟ್ ತೆಗೆದು ಎಸೆಯುತ್ತಾಳೆ ಎಂದು ನಾನು ಭಾವಿಸಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Shreyas Iyer : ಬಿಸಿಸಿಐ ಕೇಂದ್ರ ಗುತ್ತಿಗೆ ತಪ್ಪಿದ ಕುರಿತು ಮಾತನಾಡಿದ ಶ್ರೇಯಸ್ ಅಯ್ಯರ್​; ಏನಂದ್ರು ಅವರು?

ಸಾಲಕ್ಕಾಗಿ ಸೋತ ಪಾಕ್​

ಮತ್ತೊಂದು ವೀಡಿಯೊದಲ್ಲಿ, ಪಾಕಿಸ್ತಾನದ ಪ್ರಸಿದ್ಧ ಬರಹಗಾರ, ಕವಿ ಮತ್ತು ಹಾಸ್ಯಗಾರ ಅನ್ವರ್ ಮಕ್ಸೂದ್, ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ 8 ಬಿಲಿಯನ್ ಡಾಲರ್ ಸಾಲವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ತಂಡ ಸೋತಿರಬೇಕು ಎಂದು ತಮಾಷೆ ಮಾಡಿದ್ದಾರೆ. ಈ ಸೋಲಿಗೆ ಬೇರೆ ಯಾವುದೇ ಸಮರ್ಥನೀಯ ವಿವರಣೆ ಇಲ್ಲ ಎಂದು ಹೇಳಿದ್ದಾರೆ. ಭಾರತ ವಿರುದ್ಧದ ಪಾಕಿಸ್ತಾನದ ಬಹು ನಿರೀಕ್ಷಿತ ಪಂದ್ಯದ ಬಗ್ಗೆ ಮಾತನಾಡಿದ ಮಕ್ಸೂದ್, ಪಂದ್ಯಕ್ಕೆ ಟಿಕೆಟ್ ಖರೀದಿಸಿದ ಪಾಕಿಸ್ತಾನಿಗಳು ಅದನ್ನು ಅರ್ಧ ಬೆಲೆಗೆ ಮಾರಾಟ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಸೋಲಿನ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆಗಳು ಮೀಮ್ ಗಳಿಂದ ತುಂಬಿ ಕೊಂಡಿದ್ದವು. ಆಟಗಾರರ ಪ್ರದರ್ಶನವನ್ನು ಒಂದೊಂದು ರೀತಿಯಲ್ಲಿ ಲೇವಡಿ ಮಾಡಲಾಗಿದೆ. ಸರಿಯಾಗಿ ಆಡದ ಆಟಗಾರರ ಬಗ್ಗೆ ಕಾಮೆಂಟ್ ಮಾಡಲಾಗಿದೆ.

“ಹಲೋ ಪೊಲೀಸ್, ನಾನು 9/11 ಅನ್ನು ವರದಿ ಮಾಡಲು ಬಯಸುತ್ತೇನೆ” ಎಂದು ಕ್ರಿಕೆಟಿಗರಾದ ಮೊಹಮ್ಮದ್ ರಿಜ್ವಾನ್ ಮತ್ತು ಫಖರ್ ಜಮಾನ್ ಗಳಿಸಿದ ಸ್ಕೋರ್​ಗಳನ್ನು ಗೇಲಿ ಮಾಡುವ ಒಂದು ಮೀಲ್​ ಎಕ್ಸ್​ನಲ್ಲಿ ಹರಿದಾಡುತ್ತಿದೆ. ರಿಜ್ವಾನ್ 8 ಎಸೆತಗಳಲ್ಲಿ 9 ರನ್ ಗಳಿಸಿದರೆ, ಜಮಾನ್ 7 ಎಸೆತಗಳಲ್ಲಿ 11 ರನ್ ಗಳಿಸಿದ್ದರು.

ಅಜಯ್ ದೇವಗನ್ (ಗೋಪಾಲ್), ಶರ್ಮನ್ ಜೋಶಿ (ಲಕ್ಷ್ಮಣ್), ಅರ್ಷದ್ ವಾರ್ಸಿ (ಮಾಧವ್) ಮತ್ತು ತುಷಾರ್ ಕಪೂರ್ (ಲಕ್ಕಿ) ಅವರು ನಟಿಸಿರುವ ಗೋಲ್​ಮಾಲ್​ ವೀಡಿಯೊ ಕ್ಲಿಪ್ ಅನ್ನು ಬಳಕೆದಾರರು ಹಂಚಿಕೊಂಡಿದ್ದಾರೆ. ಈ ದೃಶ್ಯದಲ್ಲಿ, “ಪಾಗಲ್ ಹೋ ಗಯಾ ಹು ಮೈ (ನಾನು ಹುಚ್ಚನಾಗಿದ್ದೇನೆ)” ಎಂದು ಕೂಗುವುದನ್ನು ಕಾಣಬಹುದು.

Continue Reading

ಕ್ರೀಡೆ

Shreyas Iyer : ಬಿಸಿಸಿಐ ಕೇಂದ್ರ ಗುತ್ತಿಗೆ ತಪ್ಪಿದ ಕುರಿತು ಮಾತನಾಡಿದ ಶ್ರೇಯಸ್ ಅಯ್ಯರ್​; ಏನಂದ್ರು ಅವರು?

Shreyas Iyer : ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡದ ಭಾಗವಾಗಿದ್ದರು. ಆದಾಗ್ಯೂ, ಕಳಪೆ ಸ್ಕೋರ್​​ಗಳ ನಂತರ ಅವರನ್ನು ಕೊನೆಯ ಮೂರು ಟೆಸ್ಟ್​​ಗಳಿಗೆ ಕೈಬಿಡಲಾಯಿತು. ನಂತರ ಬೆನ್ನುನೋವಿನಿಂದಾಗಿ ಅವರು ಮುಂಬೈ ಪರ ರಣಜಿ ಟ್ರೋಫಿ ಪಂದ್ಯ ತಪ್ಪಿಸಿಕೊಂಡರು.

VISTARANEWS.COM


on

Shreyas Iyer
Koo

ಬೆಂಗಳೂರು: ಶ್ರೇಯಸ್ ಅಯ್ಯರ್ (Shreyas Iyer) ಈಗ ಐಪಿಎಲ್ ಗೆದ್ದ ಎಲೈಟ್ ನಾಯಕರ ಕ್ಲಬ್​ ಭಾಗವಾಗಿದ್ದಾರೆ. ಐಪಿಎಲ್ 2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ವೈಭವದತ್ತ ಮುನ್ನಡೆಸಿದ್ದರು. ಅವರು ತಂಡವನ್ನು ಮೂರನೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ ಖುಷಿಯಲ್ಲಿದ್ದಾರೆ. ಇದು ಬಹುತೇಕ ದೋಷರಹಿತ ಅಭಿಯಾನವಾಗಿತ್ತು. ಆದಾಗ್ಯೂ, ಐಪಿಎಲ್ 2024 ರ ಮೊದಲು, ಶ್ರೇಯಸ್ ಅಯ್ಯರ್ ಕಠಿಣ ಸಮಯ ಹೊಂದಿದ್ದರು. ಅವರನ್ನು ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ. ಅದಕ್ಕೂ ಮೊದಲು ಅವರ ಫಿಟ್ನೆಸ್ ಬಗ್ಗೆ ವರದಿಗಳು ಬಂದವು. ಹೀಗಾಗಿ ಅವರು ರಣಜಿ ಟ್ರೋಫಿಯಿಂದ ತಪ್ಪಿಸಿಕೊಂಡಿದ್ದರು.

ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡದ ಭಾಗವಾಗಿದ್ದರು. ಆದಾಗ್ಯೂ, ಕಳಪೆ ಸ್ಕೋರ್​​ಗಳ ನಂತರ ಅವರನ್ನು ಕೊನೆಯ ಮೂರು ಟೆಸ್ಟ್​​ಗಳಿಗೆ ಕೈಬಿಡಲಾಯಿತು. ನಂತರ ಬೆನ್ನುನೋವಿನಿಂದಾಗಿ ಅವರು ಮುಂಬೈ ಪರ ರಣಜಿ ಟ್ರೋಫಿ ಪಂದ್ಯ ತಪ್ಪಿಸಿಕೊಂಡರು. ಆದಾಗ್ಯೂ, ದಿ ಇಂಡಿಯನ್ ಎಕ್ಸ್​ಪ್ರೆಸ್​ ವರದಿಯ ಪ್ರಕಾರ, ಎನ್​​ಸಿಎ ಅವರ ಬಗ್ಗೆ ವ್ಯತಿರಿಕ್ತ ಫಿಟ್ನೆಸ್ ವರದಿ ನೀಡಿತ್ತು. ಈ ಸಮಯದಲ್ಲಿ, ಶ್ರೇಯಸ್ ಅಯ್ಯರ್ ಕೋಲ್ಕತಾ ನೈಟ್ ರೈಡರ್ಸ್​ ತಂಡದೊಂದಿಗೆ ಐಪಿಎಲ್ ಪೂರ್ವ ಶಿಬಿರದಲ್ಲಿ ಭಾಗವಹಿಸಿದ್ದರು. ಹೀಗಾಗಿ ಅದು ಚರ್ಚೆಯ ವಿಷಯವಾಯಿತು.

ರಾಷ್ಟ್ರೀಯ ತಂಡಕ್ಕಾಗಿ ಆಡಲು ಬಯಸುವ ತಾರೆಗಳಿಗೆ ದೇಶೀಯ ಕ್ರಿಕೆಟ್ ಕಡ್ಡಾಯ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆ ಈ ವೇಳೆ ಹೊರಡಿಸಿತ್ತು. ಇದೀಗ ಶ್ರೇಯಸ್​ ಅಯ್ಯರ್ ವೀಡಿಯೊ ಬಿಡುಗಡೆ ಮಾಡಿದ್ದು ಅಲ್ಲಿ ಅವರು ತಮ್ಮ ವಿರಾಮ, ಸಂವಹನದ ಕೊರತೆ ಬಗ್ಗೆ ಮಾತನಾಡಿದ್ದಾರೆ. ವಿಚಾರಗಳ ಬಗ್ಗೆ ಸ್ಪಷ್ಟವಾಗಿ ಹೇಳದೇ ಹೋದರೂ ಇದು ಬಿಸಿಸಿಐ ಒಪ್ಪಂದದ ತಿರಸ್ಕಾರ ಮತ್ತು ಅದರ ನಂತರ ಅವರು ಎದುರಿಸಿದ ಟೀಕೆಗಳಿಗೆ ಸ್ಪಷ್ಟ ಉತ್ತರವಾಗಿದೆ.

ನಾನು ಏಕ ದಿನ ವಿಶ್ವಕಪ್​ನಲ್ಲಿ ಅದ್ಭುತವಾಗಿ ಆಡಿದ್ದೆ. ಅದರ ನಂತರ ವಿರಾಮ ತೆಗೆದುಕೊಳ್ಳಲು ಬಯಸಿದ್ದೆ. ನನ್ನ ಫಿಟ್ನೆಸ್​ಗಾಗಿ ಕೆಲಸ ಮಾಡಲು ಮತ್ತು ಕೆಲವು ವಿಚಾರಗಳ ಬಗ್ಗೆ ಚೈತನ್ಯ ಪಡೆಯಲು ಬಯಸಿದ್ದೆ. ಸಂವಹನದ ಕೊರತೆಯಿಂದಾಗಿ, ಕೆಲವು ನಿರ್ಧಾರಗಳು ನನ್ನ ಪರವಾಗಿ ಆಗಲಿಲ್ಲ ಎಂದು ಶ್ರೇಯಸ್ ಅಯ್ಯರ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ.

ಕ್ರಿಕೆಟ್​ ಬ್ಯಾಟ್ ನನಗೆ ಸೇರಿದ್ದು. ಉತ್ತಮ ಪ್ರದರ್ಶನ ನೀಡುವುದು ಮತ್ತು ಟ್ರೋಫಿಗಳನ್ನು ಗೆಲ್ಲುವುದು ನನ್ನ ಮೇಲಿನ ಜವಾಬ್ದಾರಿ ಎಂದು ನಾನು ಅರಿತುಕೊಂಡೆ. ನಾನು ರಣಜಿ ಟ್ರೋಫಿ ಮತ್ತು ಐಪಿಎಲ್ ಗೆದ್ದ ನಂತರ ಹಿಂದೆ ನಡೆದಿರುವ ಘಟನೆಗಳಿಗೆ ಸೂಕ್ತ ಉತ್ತರ ಎಂದು ನಾನು ನಿರ್ಧರಿಸಿದೆ. ಅದೃಷ್ಟವಶಾತ್ ಎಲ್ಲವೂ ಪೂರಕವಾಗಿ ನಡೆಯಿತು. ನಡೆದಿರುವ ಎಲ್ಲ ಘಟನೆಗಳಿಗೆ ನಾನು ಅಭಾರಿಯಾಗಿದ್ದೇನೆ ಎಂದು ಶ್ರೇಯಸ್​ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

T20 World Cup : ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಅಮೆರಿಕ ತಂಡ

T20 World Cup: ಪಾಕಿಸ್ತಾನವನ್ನು 7 ವಿಕೆಟ್ ನಷ್ಟಕ್ಕೆ 159 ರನ್​​ಗಳಿಗೆ ಸೀಮಿತಗೊಳಿಸಿದ ನಂತರ, ಮೊನಾಂಕ್ ಪಟೇಲ್ ನೇತೃತ್ವದ ತಂಡವು ತನ್ನ ಇನ್ನಿಂಗ್ಸ್ ಅನ್ನು 159 ರನ್​ಗಳಿಗೆ ಮುಕ್ತಾಯaಗೊಳಿಸಿತು. ಇದರ ನಂತರ ಸೂಪರ್ ಓವರ್ ನಡೆಯಿತು ಮತ್ತು ಯುಎಸ್ಎ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸುವಲ್ಲಿ ಯಶಸ್ವಿಯಾಯಿತು>

VISTARANEWS.COM


on

T20 World Cup
Koo

ನವದೆಹಲಿ: ಐಸಿಸಿ ಟಿ 20 ವಿಶ್ವಕಪ್ (T20 World Cup) 2024 ರ 11 ನೇ ಪಂದ್ಯದಲ್ಲಿ ಯುಎಸ್ಎ ಗುರುವಾರ (ಜೂನ್ 7) ಪಾಕಿಸ್ತಾನ ತಂಡವನ್ನು ಸೂಪರ್​ ಓವರ್​ನಲ್ಲಿ ಸೋಲಿಸಿತು. ಈ ಮೂಲಕ ವಿಶೇಷ ದಾಖಲೆಯೊಂದನ್ನು ಬರೆಯಿತು. ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧದ ಸರಣಿ ಗೆಲುವು ಮತ್ತು ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಕೆನಡಾ ವಿರುದ್ಧದ ಪ್ರಭಾವಶಾಲಿ ವಿಜಯದ ನಂತರ ನಂತರ ಅಮೆರಿಕ ತಂಡ ಮತ್ತೊಂದು ಬಾರಿ ಉತ್ತಮ ಪ್ರದರ್ಶನ ನೀಡಬಹುದು ಎಂದು ಎಂದು ಕ್ರಿಕೆಟ್ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಪಾಕಿಸ್ತಾನ ತಂಡವನ್ನು ಸೋಲಿಸಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ. ಪಾಕ್ ತಂಡವನ್ನು ಕ್ಯಾರೇ ಅನ್ನದೇ ಸುಲಭವಾಗಿ ಜಯ ಗಳಿಸಿತು. ಈ ಮೂಲಕ ಸತತವಾಗಿ ಎರಡು ವಿಜಯವನ್ನು ಪಡೆದು ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿತು.

ಪಾಕಿಸ್ತಾನವನ್ನು 7 ವಿಕೆಟ್ ನಷ್ಟಕ್ಕೆ 159 ರನ್​​ಗಳಿಗೆ ಸೀಮಿತಗೊಳಿಸಿದ ನಂತರ, ಮೊನಾಂಕ್ ಪಟೇಲ್ ನೇತೃತ್ವದ ತಂಡವು ತನ್ನ ಇನ್ನಿಂಗ್ಸ್ ಅನ್ನು 159 ರನ್​ಗಳಿಗೆ ಮುಕ್ತಾಯaಗೊಳಿಸಿತು. ಇದರ ನಂತರ ಸೂಪರ್ ಓವರ್ ನಡೆಯಿತು ಮತ್ತು ಯುಎಸ್ಎ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸುವಲ್ಲಿ ಯಶಸ್ವಿಯಾಯಿತು>

ಯುಎಸ್ಎ ಹೆಚ್ಚಿನ ಯಶಸ್ಸಿನ ಮೇಲೆ ಕಣ್ಣಿಟ್ಟಿದೆ

ಪಾಕಿಸ್ತಾನದ ವಿರುದ್ಧದ ಅದ್ಭುತ ಪ್ರದರ್ಶನಕ್ಕಾಗಿ ಯುಎಸ್ಎ ವಿಶ್ವದಾದ್ಯಂತ ಪ್ರಶಂಸೆ ಪಡೆಯುತ್ತಿದ್ದರೂ, ಅವರು ವಿಶ್ರಾಂತಿ ಪಡೆಯಲು ಸಿದ್ಧರಿಲ್ಲ ಆ ತಂಡದ ವೇಗದ ಬೌಲರ್ ಅಲಿ ಖಾನ್, ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯತ್ತ ತಂಡವು ಸಂಪೂರ್ಣವಾಗಿ ಗಮನ ಹರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದೆ.

ಇದನ್ನೂ ಓದಿ: T20 World Cup : ಪಾಕಿಸ್ತಾನ ತಂಡಕ್ಕೆ ಕರಾಳ ದಿನ; ಮಾಜಿ ಆಟಗಾರರಿಂದ ಟೀಕೆ

ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ಯುಎಸ್ಎ ಈಗ ಭಾರತ ಮತ್ತು ಐರ್ಲೆಂಡ್ ವಿರುದ್ಧದ ಉಳಿದ ಗುಂಪು ಪಂದ್ಯಗಳಲ್ಲಿ ಗೆಲುವಿನ ಮೇಲೆ ಕಣ್ಣಿಟ್ಟಿದೆ ಎಂದು ಪಾಕಿಸ್ತಾನ ಮೂಲದ ವೇಗಿ ಹೇಳಿದ್ದಾರೆ.

“ಶ್ರೇಷ್ಠ ತಂಡ ಪಾಕಿಸ್ತಾನ ವಿರುದ್ಧ ನಮಗೆ ಉತ್ತಮ ಗೆಲುವು ಸಿಕ್ಕಿದೆ. ನಾವು ಈ ಹಂತಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೇವೆ. ನಾವು ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ಸೂಪರ್ 8 ಗೆ ಅರ್ಹತೆ ಪಡೆಯುವುದು ನಮ್ಮ ಕೆಲಸವಾಗಿರುವುದರಿಂದ ಆ ಕೆಲಸ ಇನ್ನೂ ಮುಗಿದಿದೆ ಎಂದು ನಾನು ಭಾವಿಸುವುದಿಲ್ಲ. ಆದ್ದರಿಂದ ತಂಡವು ನಿಜವಾಗಿಯೂ ಆತ್ಮವಿಶ್ವಾಸದಲ್ಲಿದೆ. ನಾವು ಈ ವೇಗವನ್ನು ಉಳಿಸಿಕೊಳ್ಳಲಿದ್ದೇವೆ ಮತ್ತು ಭಾರತ ಮತ್ತು ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಭರವಸೆ ಹೊಂದಿದ್ದೇವೆ”ಎಂದು ಅಲಿ ಖಾನ್ ಕ್ರಿಕ್​ಬಜ್​ಗೆ ತಿಳಿಸಿದರು.

ಆಡಿರುವ ಎರಡು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಅಮೆರಿಕ ‘ಎ’ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಉಳಿದ ಎರಡು ಪಂದ್ಯಗಳಲ್ಲಿ ಇನ್ನೂ ಒಂದು ಗೆಲುವು ಯುಎಸ್ಎ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಬಲವಾದ ಸ್ಥಾನದಲ್ಲಿರಿಸುತ್ತದೆ. ಜೂನ್ 12 ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಅವರು ಟೀಮ್ ಇಂಡಿಯಾವನ್ನು ಎದುರಿಸಲಿದ್ದಾರೆ.

Continue Reading
Advertisement
T20 World Cup
ಪ್ರಮುಖ ಸುದ್ದಿ3 hours ago

T20 World Cup : ವಿಶ್ವ ಕಪ್​ ಇತಿಹಾಸದಲ್ಲಿ ಮೊದಲ ಗೆಲುವು ದಾಖಲಿಸಿದ ಕೆನಡಾ; ಐರ್ಲೆಂಡ್​ಗೆ ನಿರಾಸೆ

Narendra Modi
ದೇಶ3 hours ago

Narendra Modi: ಹಂಗಾಮಿ ಪ್ರಧಾನಿ ಮೋದಿಗೆ ಮೊಸರು-ಸಕ್ಕರೆ ತಿನ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

Narendra Modi
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಮೋದಿ ಮೂರನೇ ಅವಧಿ, ಆಗಲಿ ಇನ್ನಷ್ಟು ವಿಕಾಸದ ಬುನಾದಿ

T20 World Cup
ಪ್ರಮುಖ ಸುದ್ದಿ3 hours ago

T20 World Cup : ಪಾಕಿಸ್ತಾನ ತಂಡ ಅಮೆರಿಕ ವಿರುದ್ಧ ಸೋತಿದ್ದು ಐಎಮ್​ಎಫ್​ ನೀಡುವ 80 ಕೋಟಿ ಸಾಲಕ್ಕಾಗಿ!

Naxals
ದೇಶ3 hours ago

ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಹತ್ಯೆ, ಮೂವರು ಯೋಧರಿಗೆ ಗಾಯ

Gas leak
ಪ್ರಮುಖ ಸುದ್ದಿ4 hours ago

Gas Leakage : ಮೈಸೂರಿನ ಗುಜರಿ ಗೋಡೌನ್​ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ

soraba BJP Mandala president prakash talakaalukoppa pressmeet
ಶಿವಮೊಗ್ಗ4 hours ago

Shivamogga News: ಸೊರಬದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತ ಆರೋಪ

Chandrababu Naidu
ದೇಶ4 hours ago

Chandrababu Naidu: 5 ದಿನದಲ್ಲಿ 870 ಕೋಟಿ ರೂ. ಗಳಿಸಿದ ‘ಕಿಂಗ್‌ ಮೇಕರ್’‌ ಚಂದ್ರಬಾಬು ನಾಯ್ಡು; ಹೇಗಂತೀರಾ?

Shreyas Iyer
ಕ್ರೀಡೆ5 hours ago

Shreyas Iyer : ಬಿಸಿಸಿಐ ಕೇಂದ್ರ ಗುತ್ತಿಗೆ ತಪ್ಪಿದ ಕುರಿತು ಮಾತನಾಡಿದ ಶ್ರೇಯಸ್ ಅಯ್ಯರ್​; ಏನಂದ್ರು ಅವರು?

assault case
ಕ್ರೈಂ5 hours ago

Assault Case: ಹರಿಹರದಲ್ಲಿ ನೈತಿಕ ಪೊಲೀಸ್ ಗಿರಿ; ಯುವಕನನ್ನು ರೂಮ್‌ನಲ್ಲಿ ಹಾಕಿ ಮನಸೋ ಇಚ್ಛೆ ಹಲ್ಲೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ8 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ10 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌