Survival Story: ಆ 17 ದಿನಗಳು...ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಕ್ಕಿಬಿದ್ದ 13 ಮಂದಿಯ ರಕ್ಷಣೆಯ ರೋಚಕ ಕಹಾನಿ - Vistara News

ವಿದೇಶ

Survival Story: ಆ 17 ದಿನಗಳು…ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಕ್ಕಿಬಿದ್ದ 13 ಮಂದಿಯ ರಕ್ಷಣೆಯ ರೋಚಕ ಕಹಾನಿ

Survival Story: ಇತ್ತೀಚೆಗೆ ತೆರೆಕಂಡ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರ ಎಲ್ಲರ ಗಮನ ಸೆಳೆದಿದೆ. ತಮಿಳುನಾಡಿನ ಗುಣ ಗುಹೆಯಲ್ಲಿ ಸಿಕ್ಕಿ ಬೀಳುವ ಗೆಳೆಯನೊಬ್ಬನನ್ನು ರಕ್ಷಿಸಲು ಯತ್ನಿಸುವ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಈ ಚಿತ್ರವನ್ನು ನೋಡುವಾಗ 2018ರಲ್ಲಿ ನಡೆದ ಥೈಲ್ಯಾಂಡ್‌ನ ಗುಹೆಯೊಂದಲ್ಲಿ ಸಿಲುಕಿದ್ದ 13 ಮಂದಿಯ ರಕ್ಷಣೆಯ ರೋಚಕ ಕಾರ್ಯಾಚರಣೆ ಕಣ್ಣ ಮುಂದೆ ಬರುತ್ತದೆ. ಅಂದಿನ ಕಾರ್ಯಾಚರಣೆ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Survival Story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇತ್ತೀಚೆಗೆ ತೆರೆಕಂಡ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್’ (Manjummel Boys) ಚಿತ್ರ ದೇಶದ ಗಮನ ಸೆಳೆದಿದೆ. ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ರೂ.ಗಿಂತಲೂ ಅಧಿಕ ಕಲೆಕ್ಷನ್‌ ಮಾಡಿದ ಈ ಚಿತ್ರ ಒಟಿಟಿಗೆ ಲಗ್ಗೆ ಇಟ್ಟು ಅಲ್ಲೂ ಸೂಪರ್‌ ಹಿಟ್‌ ಎನಿಸಿಕೊಂಡಿದೆ. ಚಿದಂಬರಂ ನಿರ್ದೇಶನದ ಈ ಸರ್ವೈವಲ್‌ ಡ್ರಾಮ ಸಾವಿನಂಚಿನಿಂದ ಬದುಕುಳಿದ ಯುವಕನೊಬ್ಬನ ಕಥೆ ಹೇಳುತ್ತದೆ. ಆತನನ್ನು ಬದುಕಿಸಲು ಸ್ನೇಹಿತರು ಪಟ್ಟ ಶ್ರಮವನ್ನು ಕಣ್ಣ ಮುಂದೆ ತಂದಿಡುತ್ತದೆ. ಈ ಚಿತ್ರವನ್ನು ನೋಡುತ್ತಿದ್ದರೆ 2018ರಲ್ಲಿ ನಡೆದ ಥೈಲ್ಯಾಂಡ್‌ನ ಗುಹೆಯೊಂದಲ್ಲಿ ಸಿಲುಕಿದ್ದ 13 ಮಂದಿಯ ರಕ್ಷಣೆಯ ರೋಚಕ ಕಾರ್ಯಾಚರಣೆ ಕಣ್ಣ ಮುಂದೆ ಬರುತ್ತದೆ. ವಿಶ್ವಾದ್ಯಂತ ಸುದ್ದಿಯಾಗಿದ್ದ ಆ ಸಾಹಸಗಾಥೆಯ ವಿವರ ಇಲ್ಲಿದೆ (Survival Story).

ಏನಾಗಿತ್ತು?

ಅದು 2018ರ ಜೂನ್‌ 23. ಥಾಯ್ ಫುಟ್ಬಾಲ್‌ ತಂಡ ದಿ ವೈಲ್ಡ್ ಬೋರ್ಸ್‌ನ 12 ಸದಸ್ಯರು (18 ವರ್ಷದೊಳಗಿನ ಮಕ್ಕಳು) 25 ವರ್ಷದ ತಮ್ಮ ತರಬೇತುದಾರ ಏಕಫೋಲ್ ಚಾಂಟಾವೊಂಗ್ ಅವರೊಂದಿಗೆ ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಕ್ಕಿ ಬೀಳುವುದರೊಂದಿಗೆ ರೋಚಕ ಘಟನೆಗೆ ಮುನ್ನಡಿ ಬರೆಯಲಾಗುತ್ತದೆ. ಬಿರುಸಾದ ಮಳೆಗೆ ಗುಹೆಯೊಳಗೆ ಸಿಕ್ಕಿ ಬೀಳುವ ಈ 13 ಮಂದಿ ಮುಂದಿನ 17 ದಿನ ಬದುಕುಳಿಯಲು ಅಕ್ಷರಶಃ ಹೋರಾಟ ನಡೆಸುತ್ತಾರೆ.

ದುರ್ಗಮ ಪ್ರದೇಶದಲ್ಲಿರುವ ಈ ಗುಹೆ ಮಕ್ಕಳ ನೆಚ್ಚಿನ ತಾಣ. ಜತೆಗೆ ಗುಹೆ ಒಳಗೆಲ್ಲ ಓಡಾಡಿ ಅವರಿಗೆ ಅಭ್ಯಾಸವಾಗಿತ್ತು. ಅಂದು ಕೂಡ ಈ ಗುಂಪು ತಮ್ಮ ಗೆಳೆಯನೊಬ್ಬನ ಹುಟ್ಟುಹಬ್ಬ ಆಚರಿಸಲು ತಿಂಡಿಗಳ ಜತೆಗೆ ಎಂದಿನಂತೆ ಥಾಮ್ ಲುವಾಂಗ್ ಗುಹೆ ಪ್ರವೇಶಿಸಿತು. ಆದರೆ ಬಳಿಕ ಸುರಿದ ಭೀಕರ ಮಳೆ ಅವರ ಜೀವನದ ಗತಿಯನ್ನೇ ಬದಲಾಯಿಸಲಿದೆ ಎಂದು ಆ ವೇಳೆಗೆ ಅವರಿಗೆ ತಿಳಿದಿರಲಿಲ್ಲ.

ರಣ ಭೀಕರ ಮಳೆ

ಮಕ್ಕಳು ಗುಹೆ ಒಳಗೆ ಪ್ರವೇಶಿಸುತ್ತಿದ್ದಂತೆ ಆರಂಭವಾಯಿತು ರಣ ಭೀಕರ ಮಳೆ. ಎಲ್ಲೆಡೆ ನೀರು ನುಗ್ಗಿ ಬರತೊಡಗಿತು. ಇದೇ ವೇಳೆ ಮಕ್ಕಳನ್ನು ಕಾಣದೆ ಪೋಷಕರು ಗಾಬರಿಗೆ ಒಳಗಾದರು. ಕೂಡಲೇ ಮಕ್ಕಳ ಫುಟ್ಬಾಲ್‌ ಕೋಚ್‌ ಏಕಫೋಲ್ ಚಾಂಟಾವೊಂಗ್ ಮಕ್ಕಳನ್ನು ಹುಡುಕಿಕೊಂಡು ಹೊರಟರು. ಮಕ್ಕಳು ಗುಹೆ ಒಳಗೆ ಇರುವುದು ಹೊರಗೆ ನಿಲ್ಲಿಸಿದ್ದ ಸೈಕಲ್‌ ಮೂಲಕ ಅವರಿಗೆ ಗೊತ್ತಾಯಿತು. ಅದಾಗಲೇ ಗುಹೆ ಒಳಗೆ ನೆರೆ ನುಗ್ಗಿತ್ತು. ಸಿಕ್ಕಿ ಬಿದ್ದಿರುವ ಮಕ್ಕಳನ್ನು ಹೇಗಾದರೂ ಮಾಡಿ ಹೊರ ಕರೆತರಬೇಕೆಂದು ಏಕಫೋಲ್ ಚಾಂಟಾವೊಂಗ್ ಕೂಡ ಗುಹೆ ಒಳ ಹೊಕ್ಕರು. ಆದರೆ ಬಳಿಕ ಅವರೂ ಅಲ್ಲಿ ಬಂಧಿಯಾದರು. ಯಾವ ಪರಿ ಪ್ರವಾಹ ಬಂದಿತ್ತು ಎಂದರೆ ಒಬ್ಬರಿಗೂ ಹೊರ ಬರಲು ಸಾಧ್ಯವಾಗಲಿಲ್ಲ. ಬಳಿಕ ಅವರನ್ನು ರಕ್ಷಿಸಲು ಕೈಗೊಂಡ ರೋಚಕ ಕಾರ್ಯಾಚರಣೆಗೆ ಇಡೀ ಜಗತ್ತೇ ಸಾಕ್ಷಿಯಾಯ್ತು. ಈ ಕಾರ್ಯಾಚರಣೆಗೆ ಭಾರತವೂ ಕೈ ಜೋಡಿಸಿತ್ತು. ಅಲ್ಲಿ ಸಿಲುಕಿಕೊಂಡಿರುವ ಮಕ್ಕಳು ಸೇರಿದಂತೆ ಕೋಚ್‌ನ ಸುರಕ್ಷತೆಗಾಗಿ ಕೋಟ್ಯಂತರ ಮಂದಿ ಪ್ರಾರ್ಥಿಸಿದ್ದರು.

9 ದಿನಗಳ ಬಳಿಕ…

ಈ ಫುಟ್ಬಾಲ್‌ ತಂಡ ಗುಹೆಯೊಳಗೆ ಸಿಕ್ಕಿಬಿದ್ದ 9 ದಿನಗಳ ಕಾಲ ಅವರನ್ನು ಸಂಪರ್ಕಿಸಲು ರಕ್ಷಣಾ ತಂಡಕ್ಕೆ ಸಾಧ್ಯವಾಗಲಿಲ್ಲ. ಬರ್ತ್‌ಡೇ ಪಾರ್ಟಿಗಾಗಿ ತಂದಿದ್ದ ತಿಂಡಿ, ಹನಿ ನೀರು ಮತ್ತು ಧ್ಯಾನ ಅವರ ಕುಟುಕು ಜೀವವನ್ನು ಉಳಿಸಿತ್ತು. ಜತೆಗೆ ಗುಹೆಯ ಮೇಲಿನಿಂತ ತೊಟ್ಟಿಕ್ಕುವ ನೀರೇ ಅವರಿಗೆ ಅಮೃತ ಸಮಾನವಾಗಿತ್ತು. ವಿಶೇಷ ಎಂದರೆ ಮಕ್ಕಳಿಗೆ ತಿಂಡಿ ಹಂಚಿದ್ದ ಕೋಚ್‌ ಅವರಿಗೆ ಕಡಿಮೆಯಾಗಬಾರದು ಎನ್ನುವ ಉದ್ದೇಶದಿಂದ ತಾವು ಸೇವಿಸಿರಲಿಲ್ಲ.

ಕೊನೆಗೂ ಮೂಡಿತು ಭರವಸೆಯ ಬೆಳಕು

ನೂರಾರು ಸ್ವಯಂ ಕಾರ್ಯಕರ್ತರು ಮತ್ತು ಅಧಿಕಾರಿಗಳು ವಿವಿಧ ದೇಶಗಳಿಂದ ನೆರವಿಗಾಗಿ ಧಾವಿಸಿದ್ದರು. ಕೊನೆಗೆ ಘಟನೆ ನಡೆದು 9 ದಿನಗಳಾದ ಬಳಿಕ ಜುಲೈ 2ರಂದು ಬ್ರಿಟನ್‌ನ ಇಬ್ಬರು ಮುಳುಗುತಜ್ಞರು ಕತ್ತಲನ್ನು ಸೀಳಿಕೊಂಡು ಗುಹೆಯ ಮುಂದೆ ಸಾಗಿದ್ದರು. ಅವರ ಹಾಯಿಸಿದ ಬೆಳಕಿಗೆ ಕೊನೆಗೂ ಕೋಚ್ ಮತ್ತು ಬಾಲಕರು ಕಾಣಿಸಿದ್ದರು. ತಿರುವು ಮುರುವುಗಳಿಂದ ಕೂಡಿದ್ದ, ಸಪೂರ ಗುಹೆಯಲ್ಲಿ ಸುಮಾರು 4 ಗಂಟೆಗಳ ಕಾಲ ಈಜಿದ ಬಳಿಕ ರಕ್ಷಣಾ ತಂಡಕ್ಕೆ ಮಕ್ಕಳು ಕಾಣಿಸಿದ್ದರು. ಅವರು ಪತ್ತೆಯಾಗಿದ್ದರೂ ರಕ್ಷಣೆ ಸುಲಭದ್ದಾಗಿರಲಿಲ್ಲ. ಗುಹೆಯ ಬಾಗಿಲಿನಿಂದ ಸುಮಾರು 2 ಮೈಲಿ ದೂರದಲ್ಲಿರುವ ಅವರನ್ನು ಹೊರಗೆ ಕರೆತಲು ಮತ್ತೂ 8 ದಿನ ಹಿಡಿಯಿತು ಎಂದರೆ ಅಲ್ಲಿನ ಪರಿಸ್ಥಿತಿಯನ್ನೊಮ್ಮೆ ಊಹಿಸಿ.

ಬಳಿಕ ಅವರಿಗೆ ಆಮ್ಲಜನಕ ಸರಬರಾಜು ಮಾಡಲು ಆರಂಭಿಸಲಾಯಿತು. ಇದರ ಜತೆಗೆ ಕಾರ್ಯಾಚರಣೆ ತಂಡ ಗುಹೆಯಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರನ್ನು ಯಂತ್ರ ಬಳಸಿ ಖಾಲಿ ಮಾಡಲು ಮುಂದಾಯಿತು. ಹೀಗೆ ಸತತ ಪ್ರಯತ್ನದ ಬಳಿಕ ಕೊನೆಗೂ ಜುಲೈ 10ರಂದು ಸುಮಾರು 17 ದಿನಗಳ ಬಳಿಕ 13 ಮಂದಿ ಸುರಕ್ಷಿತರಾಗಿ ಬಂಧಮುಕ್ತರಾದಾಗ ಇಡೀ ಜಗತ್ತೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ನೋವಿನ ವಿಚಾರ ಎಂದರೆ ಕಾರ್ಯಾಚರಣೆಯ ತಂಡದಲ್ಲಿದ್ದ ಇಬ್ಬರು ಮೃತಪಟ್ಟಿದ್ದರು.

ಭಾರತದ ನೆರವು

ಗುಹೆಯಲ್ಲಿದ್ದ ನೀರನ್ನು ಖಾಲಿ ಮಾಡುವ ಕಾರ್ಯದಲ್ಲಿ ಭಾರತವು ಗಣನೀಯ ಕೊಡುಗೆ ನೀಡಿದೆ ಎನ್ನುವುದು ನಾವೆಲ್ಲ ಹೆಮ್ಮೆ ಪಡುವ ವಿಚಾರ. ಹೌದು, ಗುಹೆಯೊಳಗೆ ತುಂಬಿದ್ದ ನೀರನ್ನು ಹೊರ ಹಾಕಲು ಥಾಯ್‌ ಸರ್ಕಾರ ಪೂನಾದ ಕಿರ್ಲೋಸ್ಕರ್‌ ಬ್ರದರ್ಸ್‌ ಕಂಪನಿಯ ಪರಿಣಿತರ ಸಹಾಯ ಪಡೆದುಕೊಂಡಿತ್ತು. ಭಾರತೀಯ ರಾಯಭಾರ ಕಚೇರಿಯ ಶಿಫಾರಸ್ಸಿನ ಮೇರೆಗೆ ಕಿರ್ಲೋಸ್ಕರ್‌ ಕಂಪನಿಯ ಭಾರತ, ಥಾಯ್ಲೆಂಡ್‌ ಮತ್ತು ಇಂಗ್ಲೆಂಡ್‌ನಲ್ಲಿರುವ ಪರಿಣಿತರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಡಾಕ್ಯುಮೆಂಟ್ರಿ

ಈ ಗ್ರೇಟ್‌ ಸರ್ವೈವಲ್‌ ಘಟನೆಯ ಕುರಿತಾಗಿ ಡಾಕ್ಯುಮೆಂಟ್ರಿ ತಯಾರಾಗಿದೆ. ʼದಿ ಟ್ರ್ಯಾಪ್ಡ್‌ 13: ಹೌ ವಿ ಸರ್ವೈವ್‌ಡ್‌ ದಿ ಥೈ ಕೇವ್‌ʼ (The Trapped 13: How We Survived The Thai Cave) ಶೀರ್ಷಿಕೆಯ ಈ ಡಾಕ್ಯುಮೆಂಟ್ರಿ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ.

ಇದನ್ನೂ ಓದಿ: Success Story:‌ ಕೆಜಿಎಫ್‌ನ ‘ರಾಕಿ’ ಹಾಗೆ ಸ್ವಂತ ಹೆಲಿಕಾಪ್ಟರ್‌ನಲ್ಲಿ ತಿರುಗಾಡುವ ರೈತ; ಯಾರಿವರು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Physical abuse: ಐದು ದಿನಗಳಿಂದ ನಿರಂತರ ಗ್ಯಾಂಗ್‌ರೇಪ್‌; ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಬೆಲ್ಜಿಯಂ ಮಹಿಳೆ ರಸ್ತೆ ಬದಿಯಲ್ಲಿ ಪತ್ತೆ

Physical abuse: ಪಾಕಿಸ್ತಾನದ 78ನೇ ಸ್ವಾತಂತ್ರ್ಯ ದಿನದಂದು ಆಗಸ್ಟ್ 14 ರಂದು ಇಸ್ಲಾಮಾಬಾದ್‌ನ ಬೀದಿಗಳಲ್ಲಿ 28 ವರ್ಷದ ಬೆಲ್ಜಿಯಂ ಮಹಿಳೆಯೊಬ್ಬರು ಕೈಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತನ್ನ ಮೇಲೆ ಐದು ದಿನಗಳ ಕಾಲ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ಆರೋಪಿಸಿದ್ದು, ಅಪರಾಧಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

VISTARANEWS.COM


on

physical abuse
Koo

ಇಸ್ಲಮಾಬಾದ್‌: ಪಾಕಿಸ್ತಾನ(Pakistan)ದಲ್ಲಿ 78ನೇ ಸ್ವಾತಂತ್ರ್ಯ ದಿನದಂದೇ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ. ಬೆಲ್ಜಿಯಂ ಮೂಲದ ಮಹಿಳೆಯ ಮೇಲೆ ಕಳೆದ ಐದು ದಿನಗಳಿಂದ ನಿರಂತರ ಸಾಮೂಹಿಕ ಅತ್ಯಾಚಾರ(Gangrape) ನಡೆದಿದೆ. ಘೋರ ಕೃತ್ಯದ ಬಳಿಕ ಮಹಿಳೆಯ ಕೈ ಕಾಲು ಕಟ್ಟಿ ಆಕೆಯನ್ನು ರಸ್ತೆಯಲ್ಲಿ ಎಸೆದಿರುವ ಘಟನೆ ವರದಿಯಾಗಿದೆ. ಇನ್ನು ಈ ಪ್ರಕರಣ ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ(Physical abuse).

ಪಾಕಿಸ್ತಾನದ 78ನೇ ಸ್ವಾತಂತ್ರ್ಯ ದಿನದಂದು ಆಗಸ್ಟ್ 14 ರಂದು ಇಸ್ಲಾಮಾಬಾದ್‌ನ ಬೀದಿಗಳಲ್ಲಿ 28 ವರ್ಷದ ಬೆಲ್ಜಿಯಂ ಮಹಿಳೆಯೊಬ್ಬರು ಕೈಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತನ್ನ ಮೇಲೆ ಐದು ದಿನಗಳ ಕಾಲ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ಆರೋಪಿಸಿದ್ದು, ಅಪರಾಧಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ಮಹಿಳೆಯನ್ನು ಬೀದಿಯಲ್ಲಿ ಎಸೆಯಲಾಗಿದ್ದು, ಆಕೆಯ ಕೈಗಳನ್ನು ಬೆನ್ನ ಹಿಂದೆ ಕಟ್ಟಲಾಗಿದೆ ಎಂದು ಸಾಮಾ ಟಿವಿ ವರದಿ ಮಾಡಿದೆ. ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಸ್ಪಂದಿಸಿ ಆಕೆಯನ್ನು ರಕ್ಷಿಸಿದ್ದಾರೆ. ಐದು ದಿನಗಳಿಂದ ಅನೇಕ ಪುರುಷರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಕೆಯ ದೂರಿನಾಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಇನ್ನು ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ತಮೀಜುದ್ದೀನ್ ಎಂಬ ಶಂಕಿತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಪ್ರಕರಣದ ದಾಖಲಾದ ನಂತರ, ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಪರಿಶೀಲನೆ ನಡೆಸಿದ್ದಾರೆ. ಇನ್ನು ಈಕೆ ಪ್ರವಾಸಕ್ಕೆಂದು ಪಾಕಿಸ್ತಾನಕ್ಕೆ ಬಂದಿದ್ದಳು. ಈ ವೇಳೆ ದುಷ್ಕರ್ಮಿಗಳಿ ಆಕೆಯನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.

ಆ ವ್ಯಕ್ತಿಯನ್ನು ಅಪ್ಬರ ಪೊಲೀಸ್ ಠಾಣೆ ಅಧಿಕಾರಿಗಳು ತಮಿಜುದ್ದೀನ್‌ನನ್ನು ಆತನ ಮನೆಯಲ್ಲಿ ಬಂಧಿಸಿದ್ದಾರೆ ಎಂದು ಪಾಕಿಸ್ತಾನ್ ಟುಡೇ ವರದಿ ಮಾಡಿದೆ. ತಮಿಜುದ್ದೀನ್, ತನ್ನ ವಿಚಾರಣೆಯ ಸಮಯದಲ್ಲಿ, ಮಹಿಳೆ ಮಾನಸಿಕವಾಗಿ ಅಸ್ಥಿರಳಾಗಿದ್ದಳು ಮತ್ತು ಘಟನೆಯ ಸಮಯದಲ್ಲಿ ವೈಯಕ್ತಿಕ ಗುರುತಿನ ಮತ್ತು ಪ್ರಯಾಣದ ದಾಖಲೆಗಳನ್ನು ಆಕೆ ಕಳೆದುಕೊಂಡಿದ್ದಳು ಎಂದು ಹೇಳಿದ್ದಾನೆ.

ಇದನ್ನೂ ಓದಿ: Pakistani Labours: ಭಿಕ್ಷಾಟನೆ, ಅಪರಾಧ ಕೃತ್ಯ; ಪಾಕಿಸ್ತಾನಿಯರನ್ನು ಒದ್ದು ಓಡಿಸುತ್ತಿರುವ ಗಲ್ಫ್‌ ರಾಷ್ಟ್ರಗಳು!

Continue Reading

ವಿದೇಶ

Independence Day 2024: ಒಂದೇ ದಿನ ಸ್ವಾತಂತ್ರ್ಯ ಪಡೆದಿದ್ದರೂ ಪಾಕಿಸ್ತಾನದಲ್ಲೇಕೆ ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ದಿನಾಚರಣೆ?

1947ರ ಆಗಸ್ಟ್‌ನಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ದೇಶವನ್ನು ಎರಡು ಸ್ವತಂತ್ರ ರಾಷ್ಟ್ರಗಳಾಗಿ ವಿಭಜಿಸಿದರು. ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ಏಕಕಾಲದಲ್ಲಿ ವಿಭಜನೆಯಾಗಿದ್ದರೂ ಎರಡು ವಿಭಿನ್ನ ದಿನಗಳಲ್ಲಿ ಯಾಕೆ ಸ್ವಾತಂತ್ರ್ಯವನ್ನು ಆಚರಿಸುತ್ತಾರೆ (Independence day 2024) ಎನ್ನುವುದು ಕುತೂಹಲಕರವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Independence day 2024
Koo

ಭಾರತ ಮತ್ತು ಪಾಕಿಸ್ತಾನ (India and Pakistan) ಒಟ್ಟಿಗೆ ಈ ಬಾರಿ 78ನೇ ಸ್ವಾತಂತ್ರ್ಯ ದಿನವನ್ನು (Independence day 2024) ಆಚರಿಸುವ ಸಂಭ್ರಮದಲ್ಲಿದೆ. ಆದರೆ ಭಾರತವು ಆಗಸ್ಟ್ 15ರಂದು ಸಂಭ್ರಮಾಚರಣೆ ನಡೆಸಿದರೆ ನೆರೆಯ ರಾಷ್ಟ್ರ ಪಾಕಿಸ್ತಾನವು ಒಂದು ದಿನ ಮುಂಚಿತವಾಗಿ ಅಂದರೆ ಆಗಸ್ಟ್ 14ರಂದು ಈ ಆಚರಣೆಯನ್ನು ನಡೆಸುತ್ತದೆ. 1947ರ ಆಗಸ್ಟ್‌ನಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ದೇಶವನ್ನು ಎರಡು ಸ್ವತಂತ್ರ ರಾಷ್ಟ್ರಗಳಾಗಿ ವಿಭಜಿಸಿದರು. ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ಏಕಕಾಲದಲ್ಲಿ ವಿಭಜನೆಯಾಗಿದ್ದರೂ ಎರಡು ವಿಭಿನ್ನ ದಿನಗಳಲ್ಲಿ ಯಾಕೆ ಸ್ವಾತಂತ್ರ್ಯವನ್ನು ಆಚರಿಸುತ್ತಾರೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಇತಿಹಾಸದಲ್ಲಿ ಏನಿದೆ?

1947ರ ಜುಲೈ 18ರಂದು ಘೋಷಿಸಲಾದ 1947ರ ಭಾರತೀಯ ಸ್ವಾತಂತ್ರ್ಯ ಕಾಯಿದೆಯು ಭಾರತ ಮತ್ತು ಪಾಕಿಸ್ತಾನಕ್ಕೆ ಜನ್ಮ ನೀಡಿತು. ಕಾಯಿದೆಯ ಪ್ರಕಾರ, 1947ರ ಆಗಸ್ಟ್ 15ರಂದು ಭಾರತದಲ್ಲಿ ಎರಡು ಸ್ವತಂತ್ರ ರಾಷ್ಟ್ರಗಳನ್ನು ಸ್ಥಾಪಿಸಲಾಗುವುದು. ಇದನ್ನು ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನ ಎಂದು ಕರೆಯಲಾಗುತ್ತದೆ ಎಂಬ ಉಲ್ಲೇಖ ಇತ್ತು.


ಆಗಸ್ಟ್ 15 ಪಾಕಿಸ್ತಾನದ ಸ್ವಾತಂತ್ರ್ಯ ದಿನವಾಗಿತ್ತು ಎಂಬುದು ಪಾಕಿಸ್ತಾನದ ಸ್ಥಾಪಕ ಪಿತಾಮಹ ಮೊಹಮ್ಮದ್ ಅಲಿ ಜಿನ್ನಾ ಅವರ ಐತಿಹಾಸಿಕ ರೇಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಇದರಲ್ಲಿ ಅವರು, ಆಗಸ್ಟ್ 15 ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾದ ಪಾಕಿಸ್ತಾನದ ಜನ್ಮದಿನವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ತನ್ನ ತಾಯ್ನಾಡನ್ನು ಹೊಂದಲು ದೊಡ್ಡ ತ್ಯಾಗ ಮಾಡಿದ ಮುಸ್ಲಿಂ ರಾಷ್ಟ್ರದ ಜನತೆಯ ಕನಸನ್ನು ಇದು ನನಸು ಮಾಡಿರುವುದನ್ನು ಸೂಚಿಸುತ್ತದೆ ಎಂದು ಜಿನ್ನಾ ಹೇಳಿದ್ದರು.

2016ರಲ್ಲಿ ಪಾಕಿಸ್ತಾನದ ಹಿರಿಯ ಪತ್ರಕರ್ತೆ ಶಾಹಿದಾ ಖಾಜಿ ಅವರು ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ, ನಾವು ಯಾವುದೇ ರೀತಿಯ ತರ್ಕವನ್ನು ಬಳಸಿದರೂ ಆಗಸ್ಟ್ 15 ಪಾಕಿಸ್ತಾನ ತನ್ನ ಸ್ವಾತಂತ್ರ್ಯವನ್ನು ಆಚರಿಸಬೇಕಾದ ದಿನವಾಗಿದೆ ಎಂದು ಹೇಳಿದ್ದರು. ಜಿನ್ನಾ ಮತ್ತು ಪಾಕಿಸ್ತಾನ ಕ್ಯಾಬಿನೆಟ್ 1947ರ ಆಗಸ್ಟ್ 15ರಂದು ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದರು.

Independence day 2024
Independence day 2024

ಅಂಚೆ ಚೀಟಿಗಳಲ್ಲೂ ಮುದ್ರಣ

ಜುಲೈ 1948ರಲ್ಲಿ ಬಿಡುಗಡೆಯಾದ ಪಾಕಿಸ್ತಾನದ ಮೊದಲ ಸ್ಮರಣಾರ್ಥ ಅಂಚೆ ಚೀಟಿಗಳಲ್ಲಿ 1947ರ ಆಗಸ್ಟ್ 15 ಅನ್ನು ದೇಶದ ಸ್ವಾತಂತ್ರ್ಯ ದಿನವೆಂದು ಉಲ್ಲೇಖಿಸಲಾಗಿದೆ. ಮುಸ್ಲಿಮರಿಗೆ 1947ರ ಆಗಸ್ಟ್ 15ರಂದು ಪವಿತ್ರವಾದ ರಂಜಾನ್ ತಿಂಗಳ ಕೊನೆಯ ಶುಕ್ರವಾರವಾದ್ದರಿಂದ ಇದು ಮಂಗಳಕರ ದಿನವಾಗಿತ್ತು.

ಪಾಕಿಸ್ತಾನದ ಮಾಜಿ ಪ್ರಧಾನಿ ಚೌಧರಿ ಮುಹಮ್ಮದ್ ಅಲಿ ಅವರು ತಮ್ಮ 1967ರ ಪುಸ್ತಕ ʼದಿ ಎಮರ್ಜೆನ್ಸ್ ಆಫ್ ಪಾಕಿಸ್ತಾನʼದಲ್ಲಿ ಹೀಗೆ ಬರೆದಿದ್ದಾರೆ: ಹದಿನೈದನೇ ಆಗಸ್ಟ್ 1947 ರಂಜಾನ್-ಉಲ್-ಮುಬಾರಕ್‌ನ ಕೊನೆಯ ಶುಕ್ರವಾರ ಇದು ಇಸ್ಲಾಂ ಧರ್ಮದ ಪವಿತ್ರ ದಿನಗಳಲ್ಲಿ ಒಂದಾಗಿದೆ. ಆ ಮಂಗಳಕರ ದಿನದಂದು, ಕ್ವೈಡ್-ಇ-ಆಜಮ್ [ಜಿನ್ನಾ] ಪಾಕಿಸ್ತಾನದ ಗವರ್ನರ್-ಜನರಲ್ ಆದರು ಮತ್ತು ಸಂಪುಟವು ಪ್ರಮಾಣ ವಚನ ಸ್ವೀಕರಿಸಿತು. ನಕ್ಷತ್ರ ಮತ್ತು ಅರ್ಧಚಂದ್ರ ಧ್ವಜವನ್ನು ಹಾರಿಸಲಾಯಿತು. ಪಾಕಿಸ್ತಾನವು ವಿಶ್ವ ಭೂಪಟದಲ್ಲಿ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು.

1947ರ ಆಗಸ್ಟ್ 14ರಂದು ಏನಾಯಿತು?

1947ರ ಆಗಸ್ಟ್ 14ರಂದು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಪಾಕಿಸ್ತಾನದ ಸಂವಿಧಾನ ಸಭೆಯಲ್ಲಿ ಭಾಷಣ ಮಾಡಿದರು. ಅವರು ಆಗಸ್ಟ್ 15ರ ಮಧ್ಯರಾತ್ರಿ ಭಾರತ ಮತ್ತು ಪಾಕಿಸ್ತಾನಕ್ಕೆ ಅಧಿಕಾರವನ್ನು ಹಸ್ತಾಂತರಿಸಬೇಕಿತ್ತು. ಆದರೆ, ಮೌಂಟ್ ಬ್ಯಾಟನ್ ಏಕಕಾಲದಲ್ಲಿ ನವದೆಹಲಿ ಮತ್ತು ಕರಾಚಿ ಎರಡರಲ್ಲೂ ಇರಲು ಸಾಧ್ಯವಿರಲಿಲ್ಲ. ಹಾಗಾಗಿ
ಮೌಂಟ್ ಬ್ಯಾಟನ್ ಅವರು ಆಗಸ್ಟ್ 14ರಂದು ಕರಾಚಿಯಲ್ಲಿ ಮೊದಲು ಪಾಕಿಸ್ತಾನಕ್ಕೆ ಅಧಿಕಾರವನ್ನು ವರ್ಗಾಯಿಸಿದರು ಮತ್ತು ಅನಂತರ ನವದೆಹಲಿಗೆ ಪ್ರಯಾಣಿಸಿದರು.


ಖ್ಯಾತ ಪಾಕಿಸ್ತಾನಿ ಇತಿಹಾಸಕಾರ ಖುರ್ಷೀದ್ ಕಮಲ್ ಅಜೀಜ್ ಅವರು ತಮ್ಮ ʼಮರ್ಡರ್ ಆಫ್ ಹಿಸ್ಟರಿʼ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: ಭಾರತದಲ್ಲಿ ಬ್ರಿಟಿಷ್ ರಾಜನ ಏಕೈಕ ಪ್ರತಿನಿಧಿಯಾಗಿದ್ದ ವೈಸ್‌ರಾಯ್ ಅಧಿಕಾರವನ್ನು ವೈಯಕ್ತಿಕವಾಗಿ ಹೊಸ ದೇಶಗಳಿಗೆ ವರ್ಗಾಯಿಸಬೇಕಾಗಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಕರಾಚಿ ಮತ್ತು ನವದೆಹಲಿಯಲ್ಲಿ ಒಂದೇ ಕ್ಷಣದಲ್ಲಿ ಖುದ್ದಾಗಿ ಹಾಜರಾಗಲು ಸಾಧ್ಯವಾಗಲಿಲ್ಲ. ಆಗಸ್ಟ್ 15ರ ಬೆಳಗ್ಗೆ ಭಾರತಕ್ಕೆ ಅಧಿಕಾರವನ್ನು ವರ್ಗಾಯಿಸಿ ಅನಂತರ ಕರಾಚಿಗೆ ಹೋಗುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಆ ಹೊತ್ತಿಗೆ ಅವರು ಹೊಸ ಭಾರತೀಯ ಡೊಮಿನಿಯನ್‌ನ ಗವರ್ನರ್ ಜನರಲ್ ಆಗುತ್ತಿದ್ದರು. ಹೀಗಾಗಿ ಅವರು ಭಾರತದ ವೈಸ್‌ರಾಯ್ ಆಗಿ ಆಗಸ್ಟ್ 14ರಂದು ಪಾಕಿಸ್ತಾನಕ್ಕೆ ಹೋಗಿ ಅಧಿಕಾರವನ್ನು ವರ್ಗಾಯಿಸಿದರು. ಇದರ ಅರ್ಥ ಪಾಕಿಸ್ತಾನವು ಆಗಸ್ಟ್ 14ರಂದು ತನ್ನ ಸ್ವಾತಂತ್ರ್ಯವನ್ನು ಗಳಿಸಿತು ಎಂಬುದಲ್ಲ.

ದಿನಾಂಕ ಏಕೆ ಬದಲಾಯಿತು?

ಭಾರತದಂತೆಯೇ ಪಾಕಿಸ್ತಾನವೂ ತನ್ನ ಸ್ವಾತಂತ್ರ್ಯವನ್ನು ಪ್ರತಿ ವರ್ಷ ಆಗಸ್ಟ್ 15ರಂದು ಆಚರಿಸಬೇಕಿತ್ತು. ಆದರೆ 1948ರಲ್ಲಿ ಪಾಕಿಸ್ತಾನವು ತನ್ನ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 14ಕ್ಕೆ ಮುಂದೂಡಿತು. ಮಾಧ್ಯಮಗಳ ವರದಿ ಪ್ರಕಾರ ಕೆಲವು ಪಾಕಿಸ್ತಾನ ನಾಯಕರು ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಬಯಸಿದ್ದರು. 1948ರ ಜೂನ್ ಅಂತ್ಯದ ವೇಳೆಗೆ ಆಗಿನ ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ನೇತೃತ್ವದಲ್ಲಿ ಮಂತ್ರಿಗಳ ಗುಂಪು ಇದಕ್ಕಾಗಿ ಸಭೆಯನ್ನು ಕರೆದಿತ್ತು. ಈ ಸಭೆಯಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಒಂದು ದಿನದ ಟ್ಟಿಗೆ ಹಿಂದೂಡಲು ನಿರ್ಧರಿಸಲಾಯಿತು. ಹೀಗಾಗಿ ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 14ಕ್ಕೆ ನಡೆಸುವ ಪ್ರಸ್ತಾಪವನ್ನು ಜಿನ್ನಾ ಅನುಮೋದಿಸಿದರು ಎನ್ನಲಾಗುತ್ತದೆ.


ಎಲ್ಲರ ಒಪ್ಪಿಗೆ ಸಿಕ್ಕಿಲ್ಲ

ʼಜಿನ್ನಾ: ಮಿಥ್ ಅಂಡ್ ರಿಯಾಲಿಟಿʼಯ ಲೇಖಕ ಯಾಸರ್ ಲತೀಫ್ ಹಮ್ದಾನಿ ಅವರು 2013ರಲ್ಲಿ ಮಾಧ್ಯಮವೊಂದಕ್ಕೆ ಮಾತನಾಡಿ, ದಿನಾಂಕ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದರು. ಪಾಕಿಸ್ತಾನವು ತನ್ನ ಗುರುತನ್ನು ತಾನೇ ಕೆತ್ತ ಬಹುದಾದ ಹೊಸ ರಾಷ್ಟ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

ಪಾಕಿಸ್ತಾನದ ನಾಯಕರು ಸ್ವಾತಂತ್ರ್ಯ ದಿನಾಚರಣೆಯನ್ನು ಆ. 14ರಂದು ಆಚರಿಸಲು ಏಕೆ ನಿರ್ಧರಿಸಿದ್ದಾರೆ ಎಂಬುದು ಸಂಪೂರ್ಣವಾಗಿ ವಿಶಿಷ್ಟ ಕತೆಯಾಗಿದೆ. ಅವರು ಬಹುಶಃ ಭಾರತಕ್ಕಿಂತ ವಿಭಿನ್ನ ದಿನದಲ್ಲಿ ಇದನ್ನು ಆಚರಿಸಬೇಕೆಂದು ಬಯಸಿದ್ದರು ಎಂದು ಪತ್ರಕರ್ತ ಖಾಜಿ ಹೇಳಿದ್ದರು. ಹೀಗಾಗಿ 1948ರಿಂದ ಪಾಕಿಸ್ತಾನವು ಆಗಸ್ಟ್ 14ರಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ.

Continue Reading

ವಿದೇಶ

Bangladesh Unrest: ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; ಮತ್ತೊಂದು ದೇಗುಲ, ಮನೆಗೆ ಬೆಂಕಿ

Bangladesh Unrest: ಗಲಭೆ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಮತ್ತೊಂದು ಹಿಂದೂ ದೇವಾಲಯ ಮತ್ತು ಮನೆಗೆ ಬೆಂಕಿ ಹಚ್ಚಲಾಗಿದೆ. ಕುರಿಗ್ರಾಮ್ ಜಿಲ್ಲೆಯ ಮುಕುಲ್ ಚಂದ್ರರಾಯ್ ಎಂಬವರ ಮನೆ ಮತ್ತು ದೇವಾಲಯದ ಮೇಲೆ ದಾಳಿ ನಡೆದಿದೆ. ರಾಯ್‌ ಅವರ ಮನೆ ಮತ್ತು ದೇವಸ್ಥಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Bangladesh Unrest
Koo

ಢಾಕಾ: ಬಾಂಗ್ಲಾದೇಶ (Bangladesh Unrest)ದಲ್ಲಿ ತಲೆದೋರಿರುವ ಅರಾಜಕತೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಜೀವಕ್ಕೆ ಅಪಾಯವನ್ನು ತಂದೊಡ್ಡಿದೆ. ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಮತ್ತೊಂದು ಹಿಂದೂ ದೇವಾಲಯ ಮತ್ತು ಮನೆಗೆ ಬೆಂಕಿ ಹಚ್ಚಲಾಗಿದೆ.

ಮಂಗಳವಾರ (ಆಗಸ್ಟ್‌ 13) ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕುರಿಗ್ರಾಮ್ ಜಿಲ್ಲೆಯ ಮುಕುಲ್ ಚಂದ್ರರಾಯ್ ಎಂಬವರ ಮನೆ ಮತ್ತು ದೇವಾಲಯದ ಮೇಲೆ ದಾಳಿ ನಡೆದಿದೆ. ರಾಯ್‌ ಅವರ ಮನೆ ಮತ್ತು ದೇವಸ್ಥಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ದುಷ್ಕರ್ಮಿಗಳು ಬೆಂಕಿ ಹಚ್ಚಿದ ತಕ್ಷಣ ಸ್ಥಳೀಯರು ಧಾವಿಸಿ ಬಂದು ನಂದಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಷ್ಟೊತ್ತಿಗಾಗಲೇ ಎಲ್ಲವೂ ಹೊತ್ತಿ ಉರಿದಿತ್ತು. ಮನೆಯಲ್ಲಿದ್ದ ಎಲ್ಲವೂ ನಾಶವಾಗಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಮುಕುಲ್ ಚಂದ್ರರಾಯ್ ಅವರು ಕುರಿಗ್ರಾಮ್ ಜಿಲ್ಲೆಯ ರಾಜರ್ಹತ್ ಉಪಜಿಲಾದ ಚಕೀರ್ ಪೋಷಾ ಯೂನಿಯನ್ ಅಡಿಯಲ್ಲಿ ಪಟೋವರಿ ಪ್ಯಾರಾ ಗ್ರಾಮದಲ್ಲಿ ವಾಸವಾಗಿದ್ದಾರೆ. ಅವರ ಪತ್ನಿ ಮತ್ತು ಮಗ ತಮ್ಮ ಸುಟ್ಟ ಮನೆ ಮತ್ತು ದೇವಾಲಯದ ಮುಂದೆ ಅಳುತ್ತಿರುವುದು ಕಂಡು ಬಂದಿದೆ.

ಸೇನೆಯೊಂದಿಗೆ ಸಂಘರ್ಷ

ಹೆಚ್ಚುತ್ತಿರುವ ಅಶಾಂತಿಯ ಮಧ್ಯೆ ಬಾಂಗ್ಲಾದೇಶದ ಹಿಂದೂ ಸಮುದಾಯದವರು ಮಂಗಳವಾರ ಢಾಕಾದಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ವಾರ ನಡೆದ ರಾಜಕೀಯ ವಿಪ್ಲವದ ನಂತರ ದೇಶದಲ್ಲಿ ಹಿಂದೂ ವಿರೋಧಿ ಹಿಂಸಾಚಾರದ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ನೊಬೆಲ್ ಪ್ರಶಸ್ತಿ ವಿಜೇತ, ಮಧ್ಯಂತರ ಸರ್ಕಾರದ ನಾಯಕ ಮುಹಮ್ಮದ್ ಯೂನುಸ್ ಪ್ರಸ್ತುತ ತಂಗಿರುವ ಢಾಕಾದ ಜಮುನಾ ಅತಿಥಿ ಗೃಹದ ಹೊರಗೆ ಪ್ರತಿಭಟನಾಕಾರರು ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಕಾಣೆಯಾದ ಕುಟುಂಬ ಸದಸ್ಯರ ಪೋಸ್ಟರ್‌ಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಮತ್ತು ಬಾಂಗ್ಲಾದೇಶ ಸೈನಿಕರ ನಡುವೆ ಘರ್ಷಣೆಯೂ ನಡೆಯಿತು.

ಇತ್ತೀಚೆಗೆ ಢಾಕಾದ ಐತಿಹಾಸಿಕ ಢಾಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯೂನುಸ್ ಹಿಂದೂ ಸಮುದಾಯಕ್ಕೆ ರಕ್ಷಣೆ ಒದಗಿಸುವ ಭರವಸೆ ನೀಡಿದ್ದರು. ಹಕ್ಕುಗಳು ಎಲ್ಲರಿಗೂ ಸಮಾನವಾಗಿರಬೇಕು ಎಂದು ಅವರು ಒತ್ತಿ ಹೇಳಿದ್ದರು. “ಹಕ್ಕುಗಳು ಎಲ್ಲರಿಗೂ ಸಮಾನವಾಗಿ ಲಭಿಸಬೇಕಿದೆ. ದಯವಿಟ್ಟು ತಾಳ್ಮೆಯಿಂದಿರಿ” ಎಂದು ಯೂನುಸ್ ಹೇಳಿದ್ದರು. ಅದಾಗ್ಯೂ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿಯುತ್ತಿರುವುದು ಕಳವಳ ಹುಟ್ಟುಹಾಕಿದೆ.

ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ ಹಿಂದೂಗಳು ಸುಮಾರು ಶೇ. 8ರಷ್ಟಿದ್ದು, ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಗುಂಪು ಎನಿಸಿಕೊಂಡಿದೆ. ದಂಗೆ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಈಗಾಗಲೇ ಹಲವೆಡೆ ಶಿಲ್ಪಗಳು, ವಿಗ್ರಹಗಳು ಮತ್ತು ದೇವಾಲಯಗಳನ್ನು ನಾಶಪಡಿಸಲಾಗಿದೆ. ವಾಸ್ತವವಾಗಿ, ಸೇನೆ ಮತ್ತು ಪೊಲೀಸರು ಹಿಂದೂಗಳ ಮನೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾ ಹಿಂದೂಗಳ ಪರ ಸೋಶಿಯಲ್‌ ಮೀಡಿಯಾ ಅಭಿಯಾನ; All eyes on hindus ಭಾರೀ ಟ್ರೆಂಡ್!

ʼʼಕೆಲವು ದಿನಗಳ ಹಿಂದೆ ಒಬ್ಬ ಹಿಂದೂ ಪ್ರಾಧ್ಯಾಪಕನನ್ನು ಬಡಿಗೆಯಿಂದ ಬರ್ಬರವಾಗಿ ಕೊಲ್ಲಲಾಯಿತು. ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬಗಳು ಎಲ್ಲವನ್ನೂ ಕಳೆದುಕೊಂಡಿವೆ ಮತ್ತು ಈಗಲೂ ಹಿಂದೂ ಸಂಘಟನೆಗಳು ಬಹಿರಂಗವಾಗಿ ಮಾತನಾಡಲು ಹೆದರುತ್ತಿವೆ. ಈ ದಾಳಿಗಳು ಮೂಲಭೂತವಾದಿಗಳಿಂದ ಅಲ್ಲ, ಆದರೆ ಪ್ರತಿಭಟನೆಯು ಭಯೋತ್ಪಾದಕ ಚಳುವಳಿಯಾಗುತ್ತಿದೆʼʼ ಎಂದು ಮೂಲಗಳು ತಿಳಿಸಿವೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ಪ್ಯಾರಿಸ್ ಒಲಿಂಪಿಕ್ಸ್ – ಭಾರತದ ಸಾಧನೆ ಕಳಪೆಯೇ?

ರಾಜಮಾರ್ಗ ಅಂಕಣ: ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಭಾರತದ ಸಾಧನೆಯು ಕಳಪೆ ಎಂದು ಹಲವರು ವಿಶ್ಲೇಷಣೆ ಮಾಡುತ್ತಾ ಇದ್ದಾರೆ. ಆದರೆ ಇದು ಕಳಪೆ ಒಲಿಂಪಿಕ್ಸ್ ಅನ್ನೋದಕ್ಕಿಂತ ಭಾರತಕ್ಕಿದು ದುರದೃಷ್ಟದ ಒಲಿಂಪಿಕ್ಸ್ ಎಂದೇ ಹೇಳಬಹುದು.

VISTARANEWS.COM


on

ರಾಜಮಾರ್ಗ ಅಂಕಣ Paris Olympics
Koo

ಭಾರತದಲ್ಲಿ ಯಾಕೆ ಶ್ರೇಷ್ಠ ಕ್ರೀಡಾ ಪ್ರತಿಭೆಗಳು ಅರಳುತ್ತಿಲ್ಲ?

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಬಹಳ ನಿರೀಕ್ಷೆಯ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕೂಟಕ್ಕೆ ತೆರೆಬಿದ್ದಾಗಿದೆ. ಭಾರತಕ್ಕೆ (India) ದೊರಕಿದ್ದು 5 ಕಂಚಿನ ಪದಕಗಳು (Bronze medal) ಮತ್ತು ಒಂದು ಬೆಳ್ಳಿಯ ಪದಕ (Silver Meadl). ಒಲಿಂಪಿಕ್ ಗ್ರಾಮದಲ್ಲಿ ಒಮ್ಮೆ ಕೂಡ ಭಾರತದ ರಾಷ್ಟ್ರಗೀತೆ ಮೊಳಗಲೇ ಇಲ್ಲ ಎಂಬ ದುಃಖ ನಮಗೆ. ಭಾರತಕ್ಕೆ ದೊರಕಿದ್ದು 71ನೇ ಸ್ಥಾನ. ಈ ಒಲಿಂಪಿಕ್ ಕೂಟದಲ್ಲಿ ಭಾರತದ ಸಾಧನೆಯು ಕಳಪೆ ಎಂದು ಹಲವರು ವಿಶ್ಲೇಷಣೆ ಮಾಡುತ್ತಾ ಇದ್ದಾರೆ. ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದು ಚಿನ್ನದ ಪದಕ (Gold Medal) ಸೇರಿ ಏಳು ಪದಕಗಳು ದೊರೆತಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿ ಭಾರತ ಸ್ವಲ್ಪ ಹಿಂದೆ ಬಿದ್ದಿದೆ.

ನಮಗೆ ಈ ಬಾರಿ 7-8 ಪದಕಗಳು ಕೂದಲೆಳೆಯ ಅಂತರದಲ್ಲಿ ಮಿಸ್ ಆದವು!

ಇದು ಕಳಪೆ ಒಲಿಂಪಿಕ್ಸ್ ಅನ್ನೋದಕ್ಕಿಂತ ಭಾರತಕ್ಕಿದು ದುರದೃಷ್ಟದ ಒಲಿಂಪಿಕ್ಸ್ ಎಂದೇ ಹೇಳಬಹುದು. ದೇಶದ 6 ಮಂದಿ ಕ್ರೀಡಾಪಟುಗಳು ಕೂಟದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದು ಪದಕವಂಚಿತರಾದರು. ಅರ್ಜುನ್ ಬಬುತಾ, ಅಂಕಿತ ಧೀರಜ್, ಮನು ಭಾಕರ್ (Manu Bhaker – ಮೂರನೇ ಪದಕ), ಅನಂತ್ ಜೀತ್, ಮಹೇಶ್ವರಿ, ಲಕ್ಷ್ಯ ಸೇನ್, ಮೀರಾಬಾಯಿ ಚಾನು ಇವರು ನಾಲ್ಕನೇ ಸ್ಥಾನಿಗಳಾಗಿ ಸ್ಪರ್ಧೆಯನ್ನು ಮುಗಿಸಿದವರು. ಹಾಗೆಯೇ ವಿನೇಶ್ ಫೊಗಟ್ (Vinesh Phogat), ನಿಶಾ ದಹಿಯ, ರಿತಿಕ ಹೂಡ ಮೊದಲಾದ ಕುಸ್ತಿ ಪಟುಗಳು ಒಲಿಂಪಿಕ್‌ನ ಕರಾಳ ನಿಯಮಕ್ಕೆ ಬಲಿಯಾಗಿ ಪದಕ ಮಿಸ್ ಮಾಡಿಕೊಂಡರು ಅನ್ನೋದು ನಮ್ಮ ನೋವು. ಇವರೆಲ್ಲರೂ ಪದಕ ಪಡೆದಿದ್ದರೆ ಭಾರತದ ಟೋಟಲ್ ಪದಕಗಳ ಸಂಖ್ಯೆ 15 ದಾಟುತ್ತಿತ್ತು ಅಲ್ಲವೇ? ಕೆಲವೊಮ್ಮೆ ಪ್ರತಿಭೆ, ಸಾಮರ್ಥ್ಯಗಳು ಇದ್ದರೆ ಸಾಕಾಗುವುದಿಲ್ಲ, ಅದೃಷ್ಟವೂ ಜೊತೆಗೆ ಇರಬೇಕು ಎಂಬ ಸಿದ್ಧಾಂತವನ್ನು ನಾವು ಈ ಬಾರಿ ಒಪ್ಪಿಕೊಳ್ಳಲೇಬೇಕಾಯಿತು.

130 ಕೋಟಿ ಜನಸಂಖ್ಯೆ ಇರುವ, ಅದರಲ್ಲಿ 60%ಕ್ಕಿಂತ ಅಧಿಕ ಯುವಜನತೆ (Below 40) ಇರುವ ದೇಶವಾದ ಭಾರತದಲ್ಲಿ ಶ್ರೇಷ್ಠ ಕ್ರೀಡಾಪ್ರತಿಭೆಗಳು ಯಾಕೆ ಅರಳುತ್ತಿಲ್ಲ ಅನ್ನುವುದು ಹಲವರು ಕೇಳುವ ಪ್ರಶ್ನೆ. ಭಾರತಕ್ಕೆ ಈಗ ಅದರದ್ದೇ ಆದ ಕ್ರೀಡಾನೀತಿ ಇದೆ. ಒಳ್ಳೆಯ ಬಜೆಟ್ ಇದೆ. ವಿದೇಶದ ಕೋಚುಗಳ ನೇಮಕ ಆಗಿದೆ. ಸ್ವತಃ ಕ್ರೀಡಾಪಟು ಆಗಿದ್ದ ಪಿಟಿ ಉಷಾ ಅಧ್ಯಕ್ಷೆಯಾಗಿರುವ ಬಲಿಷ್ಠವಾದ ಒಲಿಂಪಿಕ್ ಸಮಿತಿ ಇದೆ. ಆದರೂ ಅದಕ್ಕೆ ಅನುಗುಣವಾದ ಫಲಿತಾಂಶ ಈ ಬಾರಿ ದೊರೆತಿಲ್ಲ. ಯಾಕೆ?

ಎಲ್ಲರೂ ಉತ್ತರಿಸಲೇ ಬೇಕಾದ ಪ್ರಶ್ನೆಗಳು

1) ಅಮೇರಿಕಾ, ಚೀನಾದಂತಹ ದೇಶಗಳಲ್ಲಿ ಬಾಲ್ಯದಲ್ಲಿಯೇ ಮಗುವಿನ ಕ್ರೀಡಾಪ್ರತಿಭೆಗಳನ್ನು ಹುಡುಕಿ ತರಬೇತು ಆರಂಭ ಮಾಡುತ್ತಾರೆ. ಆದರೆ ನಮ್ಮಲ್ಲಿ ಬಾಲ್ಯದಲ್ಲಿ ಮಗು ಮೈದಾನಕ್ಕೆ ಇಳಿಯುವುದನ್ನು ಹೆತ್ತವರು ಇಷ್ಟ ಪಡುವುದಿಲ್ಲ. ಕ್ರೀಡೆಯ ಮೂಲಕ ಮಗುವಿನ ಭವಿಷ್ಯ ಕಟ್ಟುವ ಭರವಸೆ ಭಾರತದ ಹೆಚ್ಚಿನ ಪೋಷಕರಿಗೆ ಇಲ್ಲ.

2) ಒಳ್ಳೆಯ ಕ್ರೀಡಾಪಟು ರೂಪುಗೊಳ್ಳಬೇಕು ಅಂತಾದರೆ ಪರಿಣತ ಕೋಚ್, ತರಬೇತುದಾರ ಬೇಕು. ಭಾರತವು ಇನ್ನೂ ಉತ್ತಮ ಕೋಚುಗಳನ್ನು ಬೆಳೆಸಿಲ್ಲ. ಕ್ರೀಡಾ ಸಲಕರಣೆಗಳು, ಜಿಮ್ ಗಳು ಮಕ್ಕಳಿಗೆ ಹತ್ತಿರದಲ್ಲಿ ದೊರೆಯುತ್ತಿಲ್ಲ. ವಿದೇಶದ ಕೋಚಗಳನ್ನು ನೇಮಕ ಮಾಡುವಷ್ಟು ಭಾರತದ ಗ್ರಾಮಾಂತರ, ಮಧ್ಯಮವರ್ಗದ ಪೋಷಕರು ಶ್ರೀಮಂತರಾಗಿಲ್ಲ.

Neeraj Chopra
Paris Olympics

3) ಒಬ್ಬ ಒಳ್ಳೆಯ ಕ್ರೀಡಾಪಟುವು ಅರಳಬೇಕಾದರೆ ದೈಹಿಕ ಕ್ಷಮತೆ (ಫಿಸಿಕಲ್ ಫಿಟ್ನೆಸ್)ಯು ತುಂಬಾನೆ ಪ್ರಾಮುಖ್ಯ. ಅಂದರೆ ಸಣ್ಣ ಪ್ರಾಯದಲ್ಲಿ ಪೌಷ್ಟಿಕ ಆಹಾರ, ವಿಟಮಿನಗಳು ದೊರೆಯಬೇಕು. ಆ ಮಗು ಬೆವರು ಬಸಿದು ಕೆಲಸ ಮಾಡಬೇಕು. ಜಿಮ್, ಟೆನಿಸ್ ಕೋರ್ಟ್, ಬ್ಯಾಡ್ಮಿಂಟನ್ ಕೋರ್ಟು ಹತ್ತಿರದಲ್ಲಿ ಇರಬೇಕು. ಇದೆಲ್ಲ ಸಾಧ್ಯ ಆಗ್ತಾ ಇದೆಯಾ?

4) ಯಾವುದೇ ರಾಜ್ಯದಲ್ಲಿ ಕ್ರೀಡೆಗೆ ಪ್ರತ್ಯೇಕ ಸಚಿವಾಲಯ ಬೇಕು. ಒಳ್ಳೆಯ ಬಜೆಟ್ ಬೇಕು. ಆದರೆ ನಮ್ಮಲ್ಲಿ ಕ್ರೀಡಾ ಇಲಾಖೆಯು ಯುವಜನ ಸೇವಾ ಇಲಾಖೆಯ ಜೊತೆಗೆ ಇದೆ. ಬಜೆಟ್ ಕೇಳಿದರೆ ನೀವು ಖಂಡಿತವಾಗಿ ನಗುತ್ತೀರಿ. ಇನ್ನು ಪದಕ ನಿರೀಕ್ಷೆ ಮಾಡುವುದು ಹೇಗೆ?

5) ನಮ್ಮ ಶೈಕ್ಷಣಿಕ ವರ್ಷವು ಆರಂಭವಾಗುವುದೇ ಮಳೆಗಾಲದಲ್ಲಿ. ಮೊದಲ ನಾಲ್ಕು ತಿಂಗಳ ಒಳಗೆ ಎಲ್ಲ ಪಂದ್ಯಾಟಗಳು, ಕ್ರೀಡಾಕೂಟಗಳು ಮುಗಿಯಬೇಕು. ಅಂದರೆ ನಮ್ಮ ಪುಟ್ಟ ಮಕ್ಕಳು ಮಳೆಗೆ ತಲೆಕೊಟ್ಟು, ಜಾರುವ ಮೈದಾನದಲ್ಲಿ ಓಡಬೇಕು. ಮಳೆಗಾಲದ ಹೊತ್ತಲ್ಲಿ ತರಬೇತಿ ಪಡೆಯುವುದು ಯಾವಾಗ? ಒಳಾಂಗಣ ಕ್ರೀಡಾಂಗಣಗಳು ಎಷ್ಟು ಕಡೆ ಇವೆ? ಇದು ಕ್ರೀಡೆಗೆ ಪೂರಕವೇ?

6) ಕೆಲವು ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲು ಕೋಟಾ ಇದೆ. ಕೃಪಾಂಕದ ವ್ಯವಸ್ಥೆ ಇದೆ. ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆ ಇದೆ. ಆದರೆ ನಮ್ಮಲ್ಲಿ?

7) ಬಾಲ್ಯದಿಂದ ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವ, ಅದೇ ಕನಸುಗಳನ್ನು ಮಗುವಿನ ತಲೆಗೆ ತುಂಬುವ ಹೆತ್ತವರು ಮಕ್ಕಳು ಮೈದಾನಕ್ಕೆ ಇಳಿಯುವುದನ್ನು ಇಷ್ಟ ಪಡುವುದೇ ಇಲ್ಲ. ಕ್ರೀಡೆಗಳಲ್ಲಿ ಸಾಧನೆ ಮಾಡಬೇಕಾದರೆ ಮಗು ತರಗತಿ ಪಾಠ, ಪರೀಕ್ಷೆಗಳು ಇತ್ಯಾದಿಗಳಲ್ಲಿ ರಿಯಾಯಿತಿ ಪಡೆಯಬೇಕು. ಆಗ್ತಾ ಇದೆಯಾ?

8) ಎಷ್ಟೋ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ಪದವಿಪೂರ್ವ ಕಾಲೇಜುಗಳ ಹಂತಕ್ಕೆ ಬಂದರೆ 50% ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ದೊಡ್ಡ ದೊಡ್ಡ ಶಾಲೆಗಳ ಕಟ್ಟಡಗಳನ್ನು ಕಟ್ಟುವ ಕಾಲೇಜುಗಳು ಗ್ರೌಂಡ್ ಇಲ್ಲದೆ ಕೂಡ ಕ್ಲಾಸ್ ನಡೆಸುತ್ತವೆ ಎಂದರೆ ನೀವು ನಂಬಲೇಬೇಕು.

9) ಶೂಟಿಂಗ್, ಗಾಲ್ಫ್, ಜಿಮ್ನಾಸ್ಟಿಕ್ ಉಪಕರಣಗಳು ತುಂಬಾ ದುಬಾರಿ. ಸರಕಾರಿ ಬ್ಯಾಡ್ಮಿಂಟನ್ ಕೋರ್ಟು, ಸ್ವಿಮ್ಮಿಂಗ್ ಪೂಲ್, ಜಿಮ್ ಗಳು ಇರುವುದು ತಾಲೂಕಿಗೆ ಒಂದೇ! ಎಷ್ಟೋ ಕಡೆಗಳಲ್ಲಿ ಅದೂ ಇಲ್ಲ. ಖಾಸಗಿಯವರು ಹೆಚ್ಚು ಫೀಸ್ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಕ್ರೀಡಾಪ್ರತಿಭೆಗಳು ತರಬೇತು ಪಡೆಯಲು ತುಂಬಾ ದೂರಕ್ಕೆ ಹೋಗಬೇಕು. ಹಾಗಿರುವಾಗ ಪ್ರತಿಭೆಗಳು ಅರಳುವುದು ಹೇಗೆ?

10) ಸ್ಥಳೀಯ, ತಾಲೂಕು, ಜಿಲ್ಲಾಮಟ್ಟದ ಕ್ರೀಡಾಕೂಟಗಳಿಗೆ ಅದರಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅನುದಾನದ ಬೆಂಬಲ ತುಂಬ ಕಡಿಮೆ. ಹೆತ್ತವರು ಅಥವಾ ಶಿಕ್ಷಕರೇ ಖರ್ಚು ಮಾಡಬೇಕು ಅಂತಾದಾಗ ಸಹಜವಾಗಿ ಎಲ್ಲರ ಆಸಕ್ತಿ ಕಡಿಮೆ ಆಗುತ್ತದೆ.

Paris Olympics
Paris Olympics

11) ಏಷಿಯಾಡ್, ಕಾಮನ್ ವೆಲ್ತ್ ಅಥವಾ ಒಲಿಂಪಿಕ್ಸ್ ಮೊದಲಾದ ಕೂಟಗಳಲ್ಲಿ ಅರ್ಹತೆಯನ್ನು ಪಡೆಯಬೇಕಾದರೆ ಒಬ್ಬ ಕ್ರೀಡಾಪಟು ದಿನಕ್ಕೆ ಕನಿಷ್ಟ 10-12 ಘಂಟೆ ಮೈದಾನದಲ್ಲಿ ಕಠಿಣ ಪರಿಶ್ರಮಪಡಬೇಕು. ಬೆವರು ಸುರಿಸಬೇಕು. ಒಳ್ಳೆಯ ತರಬೇತುದಾರರು ಸಿಗಬೇಕು. ಸರಕಾರಗಳು ಅಂತಹ ಕ್ರೀಡಾ ಪ್ರತಿಭೆಗಳನ್ನು ದತ್ತುಸ್ವೀಕಾರ ಮಾಡಬೇಕು. ಒಳ್ಳೆಯ ಸೌಲಭ್ಯಗಳನ್ನು ಖಾತರಿ ಪಡಿಸಬೇಕು. ಪೌಷ್ಟಿಕವಾದ ಆಹಾರದ ವ್ಯವಸ್ಥೆ ಮಾಡಬೇಕು. ನೀನು ಕ್ರೀಡೆಯಲ್ಲಿ ಗಮನ ಕೊಡು, ನಾನಿದ್ದೇನೆ ಎಂದು ಭರವಸೆಯನ್ನು ತುಂಬಬೇಕು. ಇದು ಆಗ್ತಾ ಇದೆಯಾ?

12) ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಮಟ್ಟದ ಕ್ರೀಡಾತಾರೆಗಳನ್ನು ನ್ಯಾಶನಲ್ ಹೀರೋಗಳಾಗಿ ಘೋಷಣೆ ಮಾಡಬೇಕು. ಅವರ ಬದುಕಿನ ಕಥೆಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯಪುಸ್ತಕದಲ್ಲಿ ಇರಬೇಕು. ಕ್ರಿಕೆಟ್ ನಮ್ಮ ಧರ್ಮ ಆಗಿರುವ, ಕ್ರಿಕೆಟರಗಳು ನಮಗೆ ದೇವರಾಗಿರುವ ಈ ದೇಶದಲ್ಲಿ ಕ್ರೀಡಾಪಟುಗಳಿಗೆ ಸ್ಟಾರ್ ವ್ಯಾಲ್ಯೂ ತರುವುದು ಸಾಧ್ಯ ಆಗಿದೆಯಾ?

ಎಲ್ಲಕ್ಕಿಂತ ಹೆಚ್ಚಾಗಿ ಹೆತ್ತವರ ಮೈಂಡ್ ಸೆಟ್ ಬದಲಾಗಬೇಕು. ಇಲ್ಲಾಂದರೆ ನಾವು ಭಾರತದ ಕ್ರೀಡಾ ಸಾಧನೆಯನ್ನು ಕಳಪೆ ಎಂದು ದೂರುವುದನ್ನು ಬಿಡಬೇಕು.

ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

Continue Reading
Advertisement
Shocking Incident
ಪ್ರಮುಖ ಸುದ್ದಿ2 mins ago

Shocking Incident : ಮಹಿಳೆಯನ್ನು ನಗ್ನಗೊಳಿಸಿ ಶಸ್ತ್ರ ಚಿಕಿತ್ಸೆ ನಡೆಸಿದ ವಾರ್ಡ್​ ಬಾಯ್​! ವಿಡಿಯೊ ವೈರಲ್​

teacher murder case
ಕೋಲಾರ6 mins ago

Murder Case: ಶಿಕ್ಷಕಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ, ಹಂತಕರಿಂದ ಪುತ್ರಿ ಪಾರು

ITBP Recruitment 2024
ಉದ್ಯೋಗ36 mins ago

ITBP Recruitment 2024: ITBPಯಲ್ಲಿದೆ ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಉದ್ಯೋಗ; 69,100 ರೂ.ವರೆಗೂ ಸಂಬಳ

Indian Medical Association
ಪ್ರಮುಖ ಸುದ್ದಿ39 mins ago

Indian Medical Association : ವೈದ್ಯರ ಪ್ರತಿಭಟನೆ; ಶನಿವಾರದಿಂದ 24 ಗಂಟೆ ಕಾಲ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ

Mahabharat Story
ಧಾರ್ಮಿಕ57 mins ago

Mahabharat Story: ಕೌರವರೊಂದಿಗೆ ಸಂಧಾನಕ್ಕೆ ಹೋದ ಶ್ರೀ ಕೃಷ್ಣ ಪಾಂಡವರಿಗಾಗಿ ಕೇಳಿದ 5 ಗ್ರಾಮಗಳು ಈಗ ಎಲ್ಲಿವೆ ಗೊತ್ತೆ?

lakshya sen ರಾಜಮಾರ್ಗ ಅಂಕಣ
ಅಂಕಣ1 hour ago

ರಾಜಮಾರ್ಗ ಅಂಕಣ: ಪದಕವೊಂದೇ ಲಕ್ಷ್ಯ – ಲಕ್ಷ್ಯ ಸೇನ್!

Benefits of weight training for women
ಆರೋಗ್ಯ2 hours ago

Benefits of weight training for women: ತೂಕ ಎತ್ತುವ ವ್ಯಾಯಾಮ ಮಹಿಳೆಯರಿಗೆ ಏಕೆ ಬೇಕು?

Varamahalakshmi Festival 2024
ಪ್ರಮುಖ ಸುದ್ದಿ2 hours ago

Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಏನು? ಹೆಚ್ಚಿನ ಫಲ ಪಡೆಯಲು ಪೂಜೆ ಹೇಗೆ ಮಾಡಬೇಕು?

karnataka weather Forecast
ಮಳೆ2 hours ago

Karnataka Weather : ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ; ಆರೆಂಜ್‌ ಅಲರ್ಟ್‌ ಘೋಷಣೆ

Dina bhavishya
ಭವಿಷ್ಯ3 hours ago

Dina Bhavishya :ಪ್ರಭಾವಿ ವ್ಯಕ್ತಿಗಳ ಬೆಂಬಲ ಪಡೆದು ಕಾರ್ಯದಲ್ಲಿ ಯಶಸ್ಸು ಪಡೆಯುವಿರಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌