Paris Olympics 2024: ಒಲಿಂಪಿಕ್ಸ್​ಗೆ ಅರ್ಹತೆ ಪಡೆದ​ ರಾಜ್ಯದ ಇಬ್ಬರು ಸ್ವಿಮ್ಮರ್​ಗಳು - Vistara News

ಕ್ರೀಡೆ

Paris Olympics 2024: ಒಲಿಂಪಿಕ್ಸ್​ಗೆ ಅರ್ಹತೆ ಪಡೆದ​ ರಾಜ್ಯದ ಇಬ್ಬರು ಸ್ವಿಮ್ಮರ್​ಗಳು

Paris Olympics 2024: ಮಹಿಳೆಯರ ವಿಭಾಗದಲ್ಲಿ ಆಯ್ಕೆಯಾದ ಕಿರಿಯ ಈಜುಪಟು ಎನಿಸಿಕೊಂಡಿರುವ ಧಿನಿಧಿ 200 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕದ ಸ್ವಿಮ್ಮರ್​ಗಳಾದ ಶ್ರೀಹರಿ ನಟರಾಜನ್‌(Srihari Nataraj) ಹಾಗೂ ಧಿನಿಧಿ ದೇಸಿಂಘು(Dhinidhi Desinghu) ಮುಂದಿನ ತಿಂಗಳು ಆರಂಭಗೊಳ್ಳಲಿರುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics 2024) ಭಾರತವನ್ನು ಪ್ರತಿನಿಧಿಸಲಿದ್ದಾರೆ. ಶ್ರೀಹರಿಗೆ ಇದು ಸತತ 2ನೇ ಒಲಿಂಪಿಕ್ಸ್​ ಕ್ರೀಡಾಕೂಡವಾಗಿದೆ. 14 ವರ್ಷದ ಧಿನಿಧಿ ಇದೇ ಮೊದಲ ಒಲಿಂಪಿಕ್ಸ್ ಸ್ಫರ್ದೆಯಾಗಿದೆ. ಈ ಇಬ್ಬರಿಗೂ ಒಲಿಂಪಿಕ್ಸ್​ ಅರ್ಹತೆ ಸಿಕ್ಕಿರುವ ವಿಚಾರವನ್ನು ಭಾರತೀಯ ಈಜು ಫೆಡರೇಶನ್ (ಎಸ್ ಎಫ್‌ಐ) ಬುಧವಾರ ಖಚಿತಪಡಿಸಿದೆ. ಯುನಿವರ್ಸಲಿಟಿ ಕೋಟಾದಲ್ಲಿ ಇವರಿಗೆ ಈ ಅರ್ಹತೆ ಲಭಿಸಿದೆ.

2021ರ ಟೋಕಿಯೊ ಒಲಿಂಪಿಕ್ಸ್‌ ಶ್ರೀಹರಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಮೊದಲ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಇದೀಗ ದ್ವಿತೀಯ ಪ್ರಯತ್ನದಲ್ಲಿ ಐತಿಹಾಸಿಕ ಪದಕವೊಂದನ್ನು ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ. ‘ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವುದು ಸಂತಸ ತಂದಿದೆ‘ ಎಂದು 23 ವರ್ಷದ ಶ್ರೀಹರಿ ಹೇಳಿದರು. ಅವರು 100 ಮೀ, ಬ್ಯಾಕ್‌ಸ್ಟೋಕ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಆಯ್ಕೆಯಾದ ಕಿರಿಯ ಈಜುಪಟು ಎನಿಸಿಕೊಂಡಿರುವ ಧಿನಿಧಿ 200 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಒಲಿಂಕ್ಸ್​ನಲ್ಲಿ ದೇಶವನ್ನು ಪ್ರತಿನಿಧಿಸುವುದು ಜೀವಮಾನ ಶ್ರೇಷ್ಠ ಅನುಭವ ಎಂದು ಧಿನಿಧಿ ಹೇಳಿದರು.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಅದಿತಿ ಅಶೋಕ್

ಕಳೆದ ವರ್ಷ ಚೀನಾದ ಹ್ಯಾಂಗ್ ಝೂ ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಪದಕ ಗೆದ್ದ ಕರ್ನಾಟಕದ ಗಾಲ್ಫರ್ ಅದಿತಿ ಅಶೋಕ್(Aditi Ashok) ಅವರು ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ಗೆ(Paris Olympics 2024) ಅರ್ಹತೆ ಪಡೆದಿದ್ದಾರೆ. ಇವರ ಜತೆಗೆ ದೀಕ್ಷಾ ದಾಗರ್(Diksha Dagar) ಕೂಡ ಅರ್ಹತೆ ಪಡೆದಿದ್ದಾರೆ. ವಿಶ್ವ ರ್‍ಯಾಂಕಿಂಗ್ ಮೂಲಕ ಉಭಯ ಆಟಗಾರ್ತಿಯರಿಗೆ ಒಲಿಂಪಿಕ್ಸ್‌ ಟಿಕೆಟ್​ ಲಭಿಸಿದೆ.

ನಾಲ್ಕು ಮಂದಿಯ ಭಾರತದ ಗಾಲ್ಫ್​ ತಂಡದಲ್ಲಿ 24ನೇ ರ್‍ಯಾಂಕ್‌ನೊಡನೆ ಅದಿತಿ ಅರ್ಹತೆ ಪಡೆದರೆ, ದೀಕ್ಷಾ 40ನೇ ರ್‍ಯಾಂಕ್‌ನೊಡನೆ ಅವಕಾಶ ಪಡೆದರು. ಪುರುಷರ ವಿಭಾಗದಲ್ಲಿ ಅಗ್ರಮಾನ್ಯ ಗಾಲ್ಫರ್ ಶುಭಂಕರ್ ಶರ್ಮಾ ಮತ್ತು ಗಗನ್‌ಜೀತ್‌ ಭುಲ್ಲರ್ ಈಗಾಗಲೇ ಅರ್ಹತೆ ಪಡೆದಿದ್ದಾರೆ.

ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಹಾಕಿ ಇಂಡಿಯಾ

ಬೆಂಗಳೂರಿನ ಅದಿತಿ ಅಶೋಕ್ ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಈ ಕ್ರೀಡಾಕೂಟದ ಗಾಲ್ಫ್ ಕ್ರೀಡೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದರು. ಮುಂದಿನ ತಿಂಗಳು ನಡೆಯುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ ಅವರು ಐತಿಹಾಸಿಕ ಚಿನ್ನ ಗೆಲ್ಲುವಂತಾಗಲಿ ಎನ್ನುವುದು ಭಾರತೀಯರ ಮತ್ತು ಕನ್ನಡಿಗ ಹಾರೈಕೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ಅದಿತಿ ಅಮೋಘ ಪ್ರದರ್ಶನ ತೋರಿ 4 ನೇ ಸ್ಥಾನ ಗಳಿಸಿ ದೇಶದ ಗಮನ ಸೆಳೆದಿದ್ದರು. 27 ವರ್ಷ ವಯಸ್ಸಿನ ಶರ್ಮಾ ಮತ್ತು 36 ವರ್ಷ ವಯಸ್ಸಿನ ಭುಲ್ಲರ್ ಅವರಿಗೆ ಇದು ಮೊದಲ ಒಲಿಂಪಿಕ್ಸ್‌ ಆಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Team India Coach: ಟೀಮ್​ ಇಂಡಿಯಾ ಕೋಚ್​ ಆಯ್ಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಜಯ್‌ ಶಾ

Team India Coach: ಈ ಹಿಂದೆ ಗೌತಮ್​ ಗಂಭೀರ್​ ಅವರು ಕೋಚ್​ ಆಗುವುದು ಖಚಿತ, ಈಗಾಗಲೇ ಬಿಸಿಸಿಐ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿತ್ತು. ಇದೀಗ ಜಯ್​ ಶಾ ಅವರು ಗಂಭೀರ್‌(Gautam Gambhir) ಜತೆ ಡಬ್ಲ್ಯು.ವಿ. ರಾಮನ್‌ ಅವರ ಹೆಸರನ್ನು ಕೂಡ ಹೇಳಿರಿವುದು ಅಚ್ಚರಿಗೆ ಕಾರಣವಾಗಿದೆ.

VISTARANEWS.COM


on

Team India Coach
Koo

ಮುಂಬಯಿ: ಟೀಮ್​ ಇಂಡಿಯಾದ ಮುಂದಿನ ಕೋಚ್(Team India Coach)​ ಆಯ್ಕೆ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಮಹತ್ವದ ಮಾಹಿತಿ ನೀಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಗೆ ನೂತನ ಕೋಚ್​ ಭಾರತ ತಂಡದ ಜವಾಬ್ದಾರಿ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿ ಜುಲೈ 27ರಿಂದ ಆರಂಭಗೊಳ್ಳಲಿದೆ.

ಈ ಹಿಂದೆ ಗೌತಮ್​ ಗಂಭೀರ್​ ಅವರು ಕೋಚ್​ ಆಗುವುದು ಖಚಿತ, ಈಗಾಗಲೇ ಬಿಸಿಸಿಐ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿತ್ತು. ಅಲ್ಲದೆ ಟಿ20 ವಿಶ್ವಕಪ್​ ಮುಗಿದ ಒಂದೆಡರು ದಿನಗಳಲ್ಲಿ ಕೋಚ್​ ಹೆಸರು ಘೋಷಣೆಯಾಗಲಿದೆ ಎನ್ನಲಾಗಿತ್ತು. ಆದರೆ, ಇದೀಗ ಜಯ್​ ಶಾ ಅವರು ಗಂಭೀರ್‌(Gautam Gambhir) ಜತೆ ಡಬ್ಲ್ಯು.ವಿ. ರಾಮನ್‌ ಅವರ ಹೆಸರನ್ನು ಕೂಡ ಹೇಳಿರಿವುದು ಅಚ್ಚರಿಗೆ ಕಾರಣವಾಗಿದೆ. ವಿ. ರಾಮನ್‌(WV Raman) ಭಾರತದ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ಆಗಿ ಕರ್ತವ್ಯ ನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಜಯ್‌ ಶಾ, ಕೋಚ್‌ ಜತೆಗೆ ಬಿಸಿಸಿಐ ಆಯ್ಕೆಗಾರರ ನೇಮಕವೂ ಶೀಘ್ರದಲ್ಲೇ ನಡೆಯಲಿದೆ ಎಂದಿದ್ದಾರೆ. ಜತೆಗೆ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಈಗಾಗಲೇ ಸಂದರ್ಶನ ನಡೆಸಿ ಇಬ್ಬರ ಹೆಸರನ್ನು ಅಂತಿಮಗೊಳಿಸಿದೆ ಎಂದು ತಿಳಿಸಿದ್ದಾರೆ. ನೂತನ ಕೋಚ್​ಗೆ ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್‌ ಟ್ರೋಫಿ ಮೊದಲ ಸವಾಲಾಗಲಿದೆ.

ಜಾಂಟಿ ರೋಡ್ಸ್ ಫೀಲ್ಡಿಂಗ್​ ಕೋಚ್

ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ, ಕ್ರಿಕೆಟ್​ ಕಂಡ ಬೆಸ್ಟ್​ ಫೀಲ್ಡರ್​ ಜಾಂಟಿ ರೋಡ್ಸ್(Jonty Rhodes) ಅವರು ಭಾರತ ತಂಡದ ಫೀಲ್ಡಿಂಗ್​ ಕೋಚ್​(Jonty Rhodes ia’s New Fielding Coach) ಆಗಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಇತರ ಕೋಚ್​ಗಳ ಆಯ್ಕೆಯಲ್ಲಿ ತನ್ನ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಅವಕಾಶ ನೀಡಬೇಕೆಂದು ಗಂಭೀರ್​ ಅವರು ಬಿಸಿಸಿಐಗೆ ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ Team India Captain : ರೋಹಿತ್ ಶರ್ಮಾ ನಂತರ ಟಿ20 ತಂಡದ ನಾಯಕ ಯಾರು? ಇಲ್ಲಿದೆ ಐದು ಮುಂಚೂಣಿ ಹೆಸರುಗಳು

ಗಂಭೀರ್​ ಅವರು ಜಾಂಟಿ ರೋಡ್ಸ್ ಜತೆ ಐಪಿಎಲ್​ನಲ್ಲಿ ಲಕ್ನೋ ತಂಡದ ಪರ ಜತೆಯಾಗಿ 2 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೇ ಕಾಂಬಿನೇಷನ್​ನಲ್ಲಿ ಇದೀಗ ಟೀಮ್​ ಇಂಡಿಯಾದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. 2019ರಲ್ಲಿಯೂ ಜಾಂಟಿ ರೋಡ್ಸ್ ಅವರು ಭಾರತದ ತಂಡದ ಫೀಲ್ಡಿಂಗ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಭಾರತೀಯ ಮೂಲದ ಸಿಬ್ಬಂದಿಗೆ ಬಿಸಿಸಿಐ ಮಣೆ ಹಾಕಿತ್ತು. ಈ ಬಾರಿ ಗಂಭೀರ್​ ಅವರ ಅಭಯಹಸ್ತದಿಂದ ರೋಡ್ಸ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ

2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ರಾಹುಲ್​ ದ್ರಾವಿಡ್​ಗೆ ಕೋಚ್​ ಆಗಿ ಮೊದಲ ಸವಾಲಾಗಿತ್ತು. ಇಲ್ಲಿ ಕಪ್​ ಗೆಲ್ಲಲು ತಂಡ ವಿಫಲವಾಗಿತ್ತು. ಬಳಿಕ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿಯೂ ಭಾರತ ಫೈನಲ್​ನಲ್ಲಿ ಸೋಲು ಕಂಡಿತ್ತು. ನಿರ್ಗಮನದ ಹಂತದಲ್ಲಿ ಕೊನೆಗೂ ಕಪ್​ ಗೆದ್ದ ಖಷಿ ಅವರಿಗೆ ಲಭಿಸಿದೆ. ಜತೆಗೆ ಅವರ ಈ ಕನಸು ನೆರವೇರಲೆಂದು ಪ್ರಾರ್ಥಿಸಿಸಿದ ಕೊಟ್ಯಂತರ ಅಭಿಮಾನಿಗಳ ಹಾರೈಕೆ ಕೂಡ ಫಲಿಸಿದೆ. ಕೋಚ್​ ಹುದ್ದೆಯಿಂದ ಕೆಳಗಿಳಿದ ದ್ರಾವಿಡ್​ ಮುಂದಿನ ವರ್ಷ ಐಪಿಎಲ್​ನಲ್ಲಿ ಕೋಚಿಂಗ್​ ನಡೆಸುವ ಸಾಧ್ಯತೆ ಇದೆ.

Continue Reading

ಪ್ರಮುಖ ಸುದ್ದಿ

T20 World Cup 2024: ಟಿ-20 ಸ್ವಯಂವರದ ಮಂಟಪದಲ್ಲಿ ವಿಶ್ವಸುಂದರಿಗೆ ಮಾಲೆ ತೊಡಿಸಿದ ರೋಹಿತ್ ಬಳಗ

T20 World Cup 2024: ಐಸಿಸಿ ಟಿ-20 ಕ್ರಿಕೆಟ್ ಸ್ವಯಂವರದ ಅವಿಸ್ಮರಣೀಯ ದೃಶ್ಯಗಳನ್ನು ನೋಡಲು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿತ್ತು. ಇತ್ತ ಭಾರತದ ಪ್ರತಿಯೊಬ್ಬ ಅಭಿಮಾನಿಯ ಹೃದಯಬಡಿತದಲ್ಲೂ ಏರುಪೇರು ನಡೆದೇ ಇತ್ತು. ಅದೊಂದು ಮಹೋನ್ನತ ಕ್ಷಣಕ್ಕೆ ಸಾಕ್ಷಿಯಾಗಿತ್ತು ಕೆರೆಬಿಯನ್ ನಾಡಿನ ಬಾರ್ಬೊಡಸ್‍ನ ಕೆನ್ಸಿಂಗ್ಟನ್ ಓವಲ್ ಅಂಗಣ.

VISTARANEWS.COM


on

T20 World Cup 2024
Koo

ಸನತ್ ರೈ, ಬೆಂಗಳೂರು

2024ರ ಜೂನ್ 29. ಭಾರತೀಯ ಕಾಲಮಾನ ರಾತ್ರಿ 8 ಗಂಟೆ., ಟಿ-20 ವಿಶ್ವಕಪ್ ಟೂರ್ನಿಯ (T20 World Cup 2024) ಅಶ್ವಮೇಧ ಯಾಗದ ಕೊನೆಯ ಪರ್ವ. ವಿಜಯಲಕ್ಷ್ಮಿ ಸ್ವಯಂವರದ ತಹತಹಿಕೆ ಭಾರತೀಯ ಮಕ್ಕಳ ಹೃದಯದ ಭಾವಕೋಶದಲ್ಲಿ ಅವ್ಯಾಹತವಾಗಿ ಪುಟಿಯುತ್ತಲೇ ಇತ್ತು.. ಸತತ ಗೆಲುವಿನ ನಾಗಾಲೋಟದಲ್ಲಿದ್ದ ವಿಶ್ವದ ಬಲಿಷ್ಠ ಎರಡು ತಂಡಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದವು. ನಾಲ್ಕನೇ ಬಾರಿ ಚಂಚಲೆ ಚೆಲುವೆಯನ್ನು ಒಲಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರು ಭಾರತದ ರೋಹಿತ್ ಶರ್ಮಾ ಹುಡುಗರು.

ಇನ್ನೊಂದೆಡೆ ಐಸಿಸಿ ಅಖಾಡದಲ್ಲಿ ಯಾವತ್ತೂ ಭಗ್ನ ಪ್ರೇಮಿಗಳಾಗಿದ್ದ ದಕ್ಷಿಣ ಆಫ್ರಿಕಾ ಹುಡುಗರು ಇದೇ ಮೊದಲ ಬಾರಿ ವಿಶ್ವ ಸುಂದರಿಯ ಸ್ವಯಂವರದ ಮಂಟಪದ ಕೊನೆಯ ಮೆಟ್ಟಿಲು ಹತ್ತಿ ನಿಂತಿದ್ದರು. ಐಸಿಸಿ ಟಿ-20 ಕ್ರಿಕೆಟ್ ಸ್ವಯಂವರದ ಅವಿಸ್ಮರಣೀಯ ದೃಶ್ಯಗಳನ್ನು ನೋಡಲು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿತ್ತು. ಇತ್ತ ಭಾರತದ ಪ್ರತಿಯೊಬ್ಬ ಅಭಿಮಾನಿಯ ಹೃದಯಬಡಿತದಲ್ಲೂ ಏರುಪೇರು ನಡೆದೇ ಇತ್ತು. ಅದೊಂದು ಮಹೋನ್ನತ ಕ್ಷಣಕ್ಕೆ ಸಾಕ್ಷಿಯಾಗಿತ್ತು ಕೆರೆಬಿಯನ್ ನಾಡಿನ ಬಾರ್ಬೊಡಸ್‍ನ ಕೆನ್ಸಿಂಗ್ಟನ್ ಓವಲ್ ಅಂಗಣ.

ಹೌದು, ಈ ಬಾರಿ ಟಿ-20 ವಿಶ್ವಕಪ್ ಟ್ರೋಫಿಗೆ ಗೆಲುವಿನ ಮಾಲೆ ಹಾಕಿ ಭಾರತಾಂಬೆಯ ಪಾದದಡಿಯಲ್ಲಿಡಲು ರೋಹಿತ್ ಹುಡುಗರು ಭೀಷ್ಮ ಶಪಥ ಮಾಡಿದ್ದರು. ಸಮರ್ಥ ನಾಯಕ ರೋಹಿತ್, ಗುರು ದ್ರಾವಿಡಾಚಾರ್ಯರಿಗೆ ಗೆಲುವೊಂದೇ ಉಡುಗೊರೆ ಅನ್ನುವುದು ತಂಡದ ಎಲ್ಲಾ ಆಟಗಾರರ ಅಂಬೋಣವಾಗಿತ್ತು.

ಹತ್ತು ವರ್ಷಗಳ ಹಿಂದೆ ಸ್ವಯಂವರ ಮಂಟಪದಿಂದ ಹೊರದಬ್ಬಿದ್ದ ಚಂಚಲ ಚೆಲುವೆ, ಎರಡು ಬಾರಿ ಮದರಂಗಿ ಶಾಸ್ತ್ರದ ವೇಳೆಯಲ್ಲೇ ಕೈಕೊಟ್ಟಿದ್ದಳು (ಸೆಮಿಫೈನಲ್ ನಿರ್ಣಾಯಕ ಘಟ್ಟದಲ್ಲಿ). ಆದ್ರೆ ಈ ಬಾರಿ ಗುರು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಹುಡುಗರು ಪಕ್ಕಾ ರಣತಂತ್ರ ಹಣೆದು ಅಂತಿಮ ಅಂಕಣಕ್ಕೆ ಕಂಕಣ ಕಟ್ಟಿಕೊಂಡು ಇಳಿದಿದ್ದರು.

ಬ್ಯಾಟಿಂಗ್ ಆಯ್ಕೆ

ಮಹತ್ವದ ಟಾಸ್ ಗೆದ್ದ ರೋಹಿತ್ ಹಿಂದು ಮುಂದು ಯೋಚನೆ ಮಾಡದೇ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಯಾಕಂದ್ರೆ ಬ್ಯಾಟಿಂಗ್ ಶಕ್ತಿ ಮತ್ತು ಬೌಲಿಂಗ್ ಯುಕ್ತಿಯ ಮೇಲೆ ರೋಹಿತ್ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದರು. ಮಿನುಗು ತಾರೆಯಂತೆ ಹೊಳೆಯುವ ಚೆಂದುಳ್ಳಿ ಚೆಲುವೆಯ ಕೊರಳಿಗೆ ಮಾಲೆ ಹಾಕಲು ಗುರು ದ್ರಾವಿಡ್ ಕೊಟ್ಟ ದಾರದಲ್ಲಿ ಪುಷ್ಪಮಾಲೆಗಳ ಪೋಣಿಸಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶುರು ಮಾಡಿದ್ರು.

ಆರಂಭದಲ್ಲೇ ವಿರಾಟ್ ಕೊಹ್ಲಿ ಮಲ್ಲಿಗೆಯ ಕಂಪನ್ನು ಪಸರಿಸಿದ್ರು. ಒಂದರೆಗಳಿಗೆಯೂ ಮೈಮರೆಯಲಿಲ್ಲ. ತಾಳ್ಮೆ, ಏಕಾಗ್ರತೆಯೊಂದಿಗೆ ಘಮಘಮಿಸುವ ಬ್ಯಾಟಿಂಗ್ ವೈಖರಿಗೆ ಅಭಿಮಾನಿಗಳು ಕೂಡ ಮೈಮರೆತು ಕುಣಿದಾಡಿದರು. ಆದ್ರೆ ದುರದೃಷ್ಟವಶಾತ್ ಗುಲಾಬಿ ಹೂವಿನಂತೆ ಆಕರ್ಷಿಸುವ ರೋಹಿತ್ ಬ್ಯಾಟಿಂಗ್ ಅಂತಿಮ ಹಣಾಹಣಿಯಲ್ಲಿ ಹೆಚ್ಚು ಸುವಾಸನೆ ಬೀರಲಿಲ್ಲ. ಕೇಶವ್ ಮಹಾರಾಜ್ ಎಂಬ ಹರಿಣಪಾಳೆಯದ ಪತಂಗವೊಂದು ಗುಲಾಬಿಯ ಮಕರಂದವನ್ನು ಹೀರುತ್ತಿದ್ದಂತೆ ರೋಹಿತ್ ಪೋಣಿಸುವಿಕೆ ಮುಗಿದಂತಾಯ್ತು. ಹಿಟ್ ಮ್ಯಾನ್, ಗೆಲುವಿನ ಮಾಲೆಗೆ 9 (ರನ್) ಗುಲಾಬಿ ಪೋಣಿಸಿ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದಾಗ ಇಡೀ ಓವಲ್ ಅಂಗಳ ಒಂದು ಕ್ಷಣ ಸ್ತಬ್ದಗೊಂಡಿತ್ತು. ಮರು ಕ್ಷಣದಲ್ಲೇ (ಕೇಶವ್ ಮಹಾರಾಜ್) ಪತಂಗದ ಚೆಲ್ಲಾಟಕ್ಕೆ ಶೂನ್ಯ ಸುತ್ತಿದ ರಿಷಬ್ ಪಂತ್ ಸುಗಂಧ ರಾಜನಂತೆ ಬ್ಯಾಟಿಂಗ್‍ನಲ್ಲಿ ಪರಿಮಳ ಬೀರಲಿಲ್ಲ. ಹಿಂದೆಯೇ ಕೇವಲ 3 (ರನ್) ಸೂರ್ಯಕಾಂತಿಗಳಷ್ಟೇ ಮಾಲೆಗೆ ಪೋಣಿಸಿದ ಸೂರ್ಯಕುಮಾರ್ ಬಂದ ದಾರಿಗೆ ಸುಂಕವಿಲ್ಲದೆ ಹಿಂತಿರುಗಿದ್ರು. ಜೇನುನೋಣದಂತೆ ದಾಳಿ ಮಾಡಿದ ರಬಾಡ ಸ್ಕೈ ವಿಕೆಟ್ ಉರುಳಿಸಿ ಟೀಮ್ ಇಂಡಿಯಾದ ಅಭಿಮಾನಿಗಳ ಹೃದಯವನ್ನು ಘಾಸಿ ಮಾಡಿದ್ದರು. ಹೀಗೆ, ದುಂಬಿ, ಪತಂಗ, ಜೇಣುನೋಣದ ಆಕ್ರಮಣಕ್ಕೆ ಟೀಮ್ ಇಂಡಿಯಾದ ಗೆಲುವಿನ ಮಾಲೆಗೆ ಹೂ ಪೋಣಿಸುವ ಕಾರ್ಯ ನಿಧಾನವಾಗಿ ಸಾಗುತ್ತಿತ್ತು.

ಇದನ್ನೂ ಓದಿ: Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

ಆದ್ರೂ ಮಲ್ಲಿಗೆಯ ಕಂಪಿನಂತೆ ಬ್ಯಾಟ್ ಬೀಸುತ್ತಿದ್ದ ಕೊಹ್ಲಿಗೆ ಅಕ್ಸರ್ ಪಟೇಲ್ ಸಾಥ್ ನೀಡಿದ್ರು. ಲಯ ಪಡೆದುಕೊಂಡ ವಿರಾಟ್ ಕೊಹ್ಲಿ ಗೆಲುವಿನ ಹಾರಕ್ಕೆ ಮಲ್ಲಿಗೆಯನ್ನು ಪೋಣಿಸಿಕೊಂಡು ಹೋದ್ರೆ, ಇತ್ತ ಅಕ್ಸರ್ ಪಟೇಲ್ ಹೆಚ್ಚು ಸುವಾಸನೆ ಇಲ್ಲದ ಕನಕಾಂಬರ ಹೂವಿನಂತೆ ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಬ್ಯಾಟ್ ಬೀಸಿದ್ರು. ವಿರಾಟನ ಮಲ್ಲಿಗೆಯ ಜೊತೆಗೆ ಅಕ್ಸರ್ ಪಟೇಲ್ ಕನಕಾಂಬರವನ್ನು ಪೋಣಿಸಿ ಗೆಲುವಿನ ಹಾರದ ಅಲಂಕಾರವನ್ನು ಹೆಚ್ಚಿಸಿದ್ರು. ಆದ್ರೆ 47 (ರನ್) ಕನಕಾಂಬರ ಹೂಗಳನ್ನು ಗೆಲುವಿನ ಹಾರಕ್ಕೆ ಸೇರಿಸಿ ಮರಳಿ ಪೆವಿಲಿಯನ್ ಸೇರಿಕೊಂಡ್ರು.

ಇನ್ನೊಂದೆಡೆ ವಿರಾಟನ ಮಲ್ಲಿಗೆಯ ಸುವಾಸನೆ ಜೊತೆ ಸೇವಂತಿ ಹೂವಿನಂತೆ ಘಮ್ಮಂತ ಪಸರಿಸಿದ್ದು ಶಿವಂ ದುಬೆ. ಅದರಲ್ಲೂ ಕಿಂಗ್ ಕೊಹ್ಲಿ, ಬೆಳಂದಿಗಳ ಚಂದಿರನ ಬೆಳಕಿನಲ್ಲಿ ಫಳಫಳನೆ ಹೊಳೆವ ಮಲ್ಲಿಗೆಯಂತೆ ಕಂಗೊಳಿಸುತ್ತಿದ್ದರು. ಅಷ್ಟರಲ್ಲೇ ಜಾನ್ಸೆನ್ ಎಂಬ ದುಂಬಿ ಮಲ್ಲಿಗೆ ಪೋಣಿಸುತ್ತಿದ್ದ ವಿರಾಟನ ಏಕಾಗ್ರತೆಗೆ ಭಂಗವನ್ನುಂಟು ಮಾಡಿತು. ಅಷ್ಟೊತ್ತಿಗಾಗಲೇ 76 (ರನ್) ಮಲ್ಲಿಗೆ ಹೂಗಳು ಭಾರತದ ಗೆಲುವಿನ ಹಾರದಲ್ಲಿ ಸೇರಿಕೊಂಡಿದ್ದವು.

ಬಳಿಕ ಸೇವಂತಿಯ (ಶಿವಂ ದುಬೆ) ಜೊತೆ ಹಾರ್ದಿಕ್ ಪಾಂಡ್ಯ ಎಂಬ ಕೆಂಡ ಸಂಪಿಗೆಯೂ ಸ್ವಯಂವರ ಮಾಲೆಗೆ ಇನ್ನಷ್ಟು ಮೆರಗು ನೀಡಿತು. 27 ಸೇವಂತಿ ಹೂ ಪೋಣಿಸಿ ಹೂ ಮಾಲೆಗೆ ಶೃಂಗಾರ ಹೆಚ್ಚಿಸಿದ ಶಿವಂ ದುಬೆಗೆ ಮಕರಂದ ಹೀರುವ ಚತುರ ಸನ್ ಬರ್ಡ ಹಕ್ಕಿಯಂತೆ ಆನ್ರಿಚ್ ನೋರ್ಟೆಜೆ ಕುಟುಕಿದ್ರು.
ಅಂತಿಮವಾಗಿ ಪಾಂಡ್ಯ ಅವರ 5* (ರನ್) ಕೆಂಡ ಸಂಪಿಗೆಯ ಜೊತೆ ಸುಂದರ ಮಾಲೆಗೆ ಕೇವಲ 2 ಜಾಜಿ ಮಲ್ಲಿಗೆ ಹೂ ಪೋಣಿಸಿದ ರವೀಂದ್ರ ಜಡೇಜಾಗೂ ಸನ್‍ಬರ್ಡ ನೊರ್ಟೆಜೆ ಅಡ್ಡಿಯನ್ನುಂಟು ಮಾಡಿದ್ರು. ಅಷ್ಟರಲ್ಲಾಗಲೇ ರೋಹಿತ್ ಹುಡುಗರು 176 ಮಾರುದ್ದದ ಹೂಮಾಲೆಯನ್ನು ತಯಾರಿಸಿ ಇಟ್ಟಿದ್ದರು.
*
ಮುಂದಿನ ಪಾರಿ ನೀಲಿ ಜೆರ್ಸಿ ಹುಡುಗರ ಬೌಲಿಂಗ್ ಪಡೆಯದ್ದಾಗಿತ್ತು. ತಮ್ಮ ಪಾಲಿನ ಪುಷ್ಪಗಳನ್ನು ಸುಮಮಾಲೆಗೆ ಪೋಣಿಸಲು ಬುಮ್ರಾ ನೇತೃತ್ವದ ಬೌಲಿಂಗ್ ಸೈನಿಕರು ಸಿದ್ಧರಾಗಿದ್ದರು.

ವಿಶ್ವ ಕ್ರಿಕೆಟ್ ಬೌಲಿಂಗ್ ನ ನಾಯಕ ಶಿರೋಮಣಿ ಜಸ್ಪ್ರಿತ್ ಬೂಮ್ರಾ ಎರಡು (ವಿಕೆಟ್) ಗೊಂಚಲು ಚೆಂಡು ಹೂಗಳನ್ನು ಕಿತ್ತುಕೊಂಡು ಕೈ ಜಾರುತ್ತಿದ್ದ ವಿಜಯ ಮಾಲೆಗೆ ಮೆರಗು ನೀಡಿದ್ರು. ಇನ್ನೊಂದೆಡೆ ಅರ್ಶಾದೀಪ್ ಸಿಂಗ್ ಕೂಡ ಎರಡು (ವಿಕೆಟ್) ಗೊಂಚಲು ತುಳಸಿದಳಗಳನ್ನು ಪೋಣಿಸಿ ಗೆಲುವಿನ ಮಾಲೆಯ ಅಂದವನ್ನು ಹೆಚ್ಚಿಸಿದ್ರು. ಹಾಗೇ ಕುಲದೀಪ್ ಯಾದವ್ ಮೂರು (ಕ್ಯಾಚ್) ಗಂಟು ಪಾರಿಜಾತ ಹೂಗಳನ್ನು ಗೆಲುವಿನ ಹಾರಕ್ಕೆ ಪೋಣಿಸಿ ಸುವಾಸನೆಯನ್ನು ಇಮ್ಮಡಿಗೊಳಿಸಿದ್ರು. ಮತ್ತೊಂದೆಡೆ ಬ್ಯಾಟಿಂಗ್ ನಲ್ಲಿ ಶೂನ್ಯ ಸುತ್ತಿದ್ದ ರಿಷಬ್ ಪಂತ್ ಕೂಡ ಎರಡು (ಕ್ಯಾಚ್) ಸುಗಂಧರಾಜ ಹೂ ಸೇರಿಸಿ ಪರಿಮಳ ಹೆಚ್ಚಿಸಿದ್ರು. ಜೊತೆಗೆ ಅಕ್ಸರ್ ಪಟೇಲ್ 1 (ವಿಕೆಟ್) ಗಂಟು ಕನಕಾಂಬರ ಹೂ ಪೋಣಿಸಿ ದೃಷ್ಟಿ ಬೊಟ್ಟು ಇಟ್ರು. ಮಗದೊಂದು ಕಡೆ ಕಳೆಗುಂದಿದ್ದ ಸೂರ್ಯಕಾಂತಿ ಪುಷ್ಪ, ಉಗ್ರ ಸೂರ್ಯನ ಪ್ರಖರತೆಗೆ ನಾಚಿನೀರಾಗಿ ಹೋಯ್ತು. ಸೂರ್ಯನ ತೇಜೋಪುಂಜದ ಪ್ರಭಾವಳಿಗೆ ಸೂರ್ಯಕಾಂತಿ ಕೂಡ ಸದ್ದಿಲ್ಲದೆ ಬಂದು ಗೆಲುವಿನ ಹಾರ ಸೇರಿಕೊಂಡಿತ್ತು.

ಸೂರ್ಯಕುಮಾರ್ ಕ್ಯಾಚ್​

ಗೆಲುವಿನ ಹಾರ ಕಟ್ಟುವಲ್ಲಿ ಲಯ ತಪ್ಪಿದ್ದ ರೋಹಿತ್ ಹುಡುಗರನ್ನು ಸುಗ್ಗಿಯ ಸಂಕ್ರಾಂತಿ ಮಾಡುವಂತೆ ಮಾಡಿದ್ದು ಕೂಡ ಸೂರ್ಯನೇ. ಚಿಗರೆಯಂತೆ ಜಿಗಿದು ಸಮಯ ಪ್ರಜ್ಞೆಯಿಂದ ಸೂರ್ಯಕಾಂತಿಯನ್ನು (ಕ್ಯಾಚ್) ಹಿಡಿದು ಅಂದವಾದ ಮಾಲೆಗೆ ಹೊಳಪು ನೀಡಿದ್ರು. ಹೂವಿನ ಮಾಲೆಯ ಅಂದವನ್ನು ಹೆಚ್ಚಿಸಲು ಪಾಂಡ್ಯ ಮತ್ತೆ ಮೂರು (ವಿಕೆಟ್) ಕೆಂಡಸಂಪಿಗೆಯನ್ನು ಸೇರಿಸಿದ್ರು. ಕೊನೆಗೆ ಗೆಲುವಿನ ಮಾಲೆಗೆ ದಾರ ಕೊಟ್ಟಿದ್ದ ಗುರು ರಾಹುಲ್ ದ್ರಾವಿಡ್ ಆಚಾರ್ಯ ಬ್ರಹ್ಮಕಮಲವನ್ನು ಪೋಣಿಸಿ ಫಿನಿಶಿಂಗ್ ಟಚ್ ನೀಡಿಬಿಟ್ಟರು.

ಅಂತಿಮವಾಗಿ ಬಗೆ ಬಗೆಯ ಅಂದ ಚೆಂದದ ಸುಂದರ ಹೂ ಮಾಲೆಯನ್ನು ಚಂಚಲ ಚೆಲುವೆಯ ಕೊರಳಿಗೆ ಟೀಮ್ ಇಂಡಿಯಾ ಹುಡುಗರು ಹಾಕಿ ನಲಿದರು. ವೈಯ್ಯಾರದಿಂದ ಬೀಗುತ್ತಿದ್ದ ಐಸಿಸಿ ಟಿ-20ಯ ಪಟ್ಟದರಸಿಯನ್ನು ಒಲಿಸಿಕೊಂಡಾಗಿನ ಕ್ಷಣ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ನೆನಪಿನಲ್ಲಿರುತ್ತದೆ.

ಗೆಲುವಿನ ಸಂಭ್ರಮ.. ಸಡಗರ.. ಕಣ್ಣೀರು, ಭಾವುಕ, ಆನಂದಭಾಷ್ಪ, ಉತ್ಸಾಹ, ಉನ್ಮಾದ, ವಿದಾಯ, ಹತಾಶೆ, ಸೋಲು, ಬೇಸರ.. ಅಬ್ಬಾಬ್ಬಾ.. ಬಣ್ಣಿಸಲು ಪದಗಳಿಲ್ಲ

Continue Reading

ಪ್ರಮುಖ ಸುದ್ದಿ

Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

Afghanistan cricket: 2010 ರಲ್ಲಿ ರಚಿಸಲಾದ ಮಹಿಳಾ ತಂಡವನ್ನು ತಾಲಿಬಾನ್ ಅಪಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ 2021 ರಲ್ಲಿ ವಿಸರ್ಜಿಸಿಗ್ತು. ತಾಲಿಬಾನ್ ಆಡಳಿತವು ಮಹಿಳೆಯರು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಿದೆ. ಇದರ ಪರಿಣಾಮವಾಗಿ, ಅಫ್ಘಾನಿಸ್ತಾನವು ರಾಷ್ಟ್ರೀಯ ಮಹಿಳಾ ತಂಡವನ್ನು ಹೊಂದಿಲ್ಲ.

VISTARANEWS.COM


on

Afghanistan cricket
Koo

ಬೆಂಗಳೂರು: ಅಫ್ಘಾನಿಸ್ತಾನದ 17 ಮಹಿಳಾ ಆಟಗಾರರು ಆಸ್ಟ್ರೇಲಿಯಾ ಮೂಲದ ನಿರಾಶ್ರಿತರ ತಂಡವೊಂದನ್ನು (Afghanistan cricket) ರಚಿಸಲು ಸಹಾಯ ಮಾಡುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೆ (ICC) ಮನವಿ ಮಾಡಿಎ. 2020ರಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಆಟಗಾರ್ತಿಯರಿಗೆ ಗುತ್ತಿಗೆ ನೀಡಿತ್ತು. 2010 ರಲ್ಲಿ ರಚಿಸಲಾದ ಮಹಿಳಾ ತಂಡವನ್ನು ತಾಲಿಬಾನ್ ಅಪಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ 2021 ರಲ್ಲಿ ವಿಸರ್ಜಿಸಿಗ್ತು. ತಾಲಿಬಾನ್ ಆಡಳಿತವು ಮಹಿಳೆಯರು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಿದೆ. ಇದರ ಪರಿಣಾಮವಾಗಿ, ಅಫ್ಘಾನಿಸ್ತಾನವು ರಾಷ್ಟ್ರೀಯ ಮಹಿಳಾ ತಂಡವನ್ನು ಹೊಂದಿಲ್ಲ.

ಆಟಗಾರರು ಈಗ ತಮ್ಮ ವೃತ್ತಿಜೀವನವನ್ನು ಪುನರ್​ಸ್ಥಾಪಿಸಲು ಐಸಿಸಿಯನ್ನು ಸಂಪರ್ಕಿಸಿದ್ದಾರೆ. ಕಳೆದ ವಾರ, ಅವರು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರಿಗೆ ಪತ್ರ ಬರೆದು ತಮಗೆ ಮಂಡಳಿಯಿಂದ “ಬೆಂಬಲ ಮತ್ತು ಮಾರ್ಗದರ್ಶನ” ನೀಡುವಂತೆ ಮನವಿ ಮಾಡಿದ್ದಾರೆ. ಅಫ್ಘಾನಿಸ್ತಾನದ ಸರ್ಕಾರದ ನೀತಿಗಳಿಂದಾಗಿ ತಮ್ಮನ್ನು ಅಫ್ಘಾನಿಸ್ತಾನ ರಾಷ್ಟ್ರೀಯ ತಂಡ ಎಂದು ಕರೆಯಲು ಅಥವಾ ಎಸಿಬಿ ಬ್ಯಾನರ್ ಅಡಿಯಲ್ಲಿ ಆಡಲು ಸಾಧ್ಯವಿಲ್ಲ ಎಂದು ಆಟಗಾರರು ಪತ್ರದಲ್ಲಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಅವರು ಆಡಲು ಬಯಸಿದ್ದು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಮೂಲದ ಈಸ್ಟ್ ಏಷ್ಯನ್ ಕ್ರಿಕೆಟ್ ಕಚೇರಿಯಿಂದ ನಿರಾಶ್ರಿತರ ತಂಡವಾಗಿ ಆಡಳಿತ ನಡೆಸುವಂತೆ ಕೇಳಿಕೊಂಡಿದ್ದಾರೆ.

“ಕ್ರಿಕೆಟ್ ಆಡುವ ಕನಸು ಕಾಣುವ ಆದರೆ ಅಫ್ಘಾನಿಸ್ತಾನದಲ್ಲಿ ಆಡಲು ಸಾಧ್ಯವಾಗದ ಎಲ್ಲಾ ಅಫ್ಘಾನ್ ಮಹಿಳೆಯರನ್ನು ಪ್ರತಿನಿಧಿಸಲು” ಐಸಿಸಿ ಸಹಾಯ ಮಾಡಬೇಕು ಎಂದು ಆಟಗಾರರು ಮನವಿ ಮಾಡಿದ್ದಾರೆ.

ಐಸಿಸಿಗೆ ಅಫ್ಘಾನಿಸ್ತಾನ ಮಹಿಳಾ ಆಟಗಾರ್ತಿಯರು ಬರೆದ ಪತ್ರದಲ್ಲಿ ಏನಿದೆ?

ಅಫ್ಘಾನಿಸ್ತಾನ ಮಹಿಳಾ ತಂಡದಲ್ಲಿ ಈ ಹಿಂದೆ ಗುತ್ತಿಗೆ ಪಡೆದ ಆಟಗಾರ್ತಿಯರಾದ ನಾವು, ಐಸಿಸಿ ಪುರುಷರ ಟಿ 20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನದ ಸಾಧನೆಗಳಿಂದ ಹೆಮ್ಮೆಪಡುತ್ತೇವೆ/ ಸೆಮಿಫೈನಲ್ ತಲುಪಿದ ರಶೀದ್ ಖಾನ್ ಮತ್ತು ಅವರ ತಂಡವನ್ನು ಅಭಿನಂದಿಸಲು ಬಯಸುತ್ತೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮಹಿಳೆಯರಾಗಿರುವ ನಮಗೆ ಪುರುಷ ಕ್ರಿಕೆಟಿಗರಂತೆ ನಮ್ಮ ದೇಶವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂಬುದು ತೀವ್ರ ದುಃಖದ ವಿಷಯ. ಅಫ್ಘಾನ್ ಮಹಿಳೆಯರ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಮತ್ತು ಐಸಿಸಿಯ ನಾಯಕತ್ವ ಮತ್ತು ಆರ್ಥಿಕ ಬೆಂಬಲದ ಮೂಲಕ ಅವಕಾಶ ನೀಡಬೇಕು. ಹಾಗಾದರೆ ಸಾಧಿಸಬಹುದಾದ ಉತ್ತಮ ವಿಜಯಗಳನ್ನು ಸಾಧಿಸಬಹುದ. ಕ್ರಿಕೆಟ್ ಅನ್ನು ಪ್ರೀತಿಸುವ ಹುಡುಗಿಯರು ಮತ್ತು ಮಹಿಳೆಯರನ್ನು ನೇಮಕ ಮಾಡಲು ಮತ್ತು ತರಬೇತಿ ನೀಡುವಂತೆ ನಾವು ಕೋರುತ್ತೇವೆ.

ಇದನ್ನೂ ಓದಿ: IND vs SA : ಭಾರತ ವಿರುದ್ಧ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಪ್ರಕಟ

ನಿರಾಶ್ರಿತರ ತಂಡವನ್ನು ಹೊಂದುವಲ್ಲಿ ನಮ್ಮ ಗುರಿಗಳು ನಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರದರ್ಶಿಸುವುದು. ಅಫ್ಘಾನಿಸ್ತಾನದಲ್ಲಿ ಉಳಿದಿರುವ ಮಹಿಳೆಯರಿಗೆ ಭರವಸೆ ನೀಡುವುದು ಮತ್ತು ಅಫ್ಘಾನಿಸ್ತಾನದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳತ್ತ ಗಮನ ಸೆಳೆಯುವುದು ಇದರ ಉದ್ದೇಶ ಎಂದು ಪತ್ರದಲ್ಲಿ ಬರೆಯಲಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಅಫ್ಘಾನಿಸ್ತಾನ ಪುರುಷರ ತಂಡದ ಅದ್ಭುತ ಪ್ರದರ್ಶನದ ಕೆಲವೇ ದಿನಗಳ ನಂತರ ಈ ಪತ್ರ ಬಂದಿದೆ. ರಶೀದ್ ಖಾನ್ ಅಂಡ್ ಕೋ ಈ ಸ್ಪರ್ಧೆಯಲ್ಲಿ ಐತಿಹಾಸಿಕ ಅಭಿಯಾನವನ್ನು ಆನಂದಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ದಿಗ್ಭ್ರಮೆಗೊಳಿಸಿತು. ಅವರು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆದರು.

Continue Reading

ಪ್ರಮುಖ ಸುದ್ದಿ

IND vs SA : ಭಾರತ ವಿರುದ್ಧ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಪ್ರಕಟ

IND vs SA : ಲ್ಲಾ ಮೂರು ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ. ಏಕದಿನ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ತಮ್ಮ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದರೆ, ಏಕೈಕ ಟೆಸ್ಟ್​ನಲ್ಲಿ ಭಾರತವೇ ಗೆದ್ದಿದೆ.

VISTARANEWS.COM


on

IND vs SA
Koo

ಬೆಂಗಳೂರು: ಆತಿಥೇಯ ಭಾರತ ಮಹಿಳೆಯ ಕ್ರಿಕೆಟ್​ ತಂಡದ ವಿರುದ್ಧದ ಮೂರು ಪಂದ್ಯಗಳ ಟಿ 20 ಐ ಸರಣಿಗೆ (IND vs SA ) ದಕ್ಷಿಣ ಆಫ್ರಿಕಾ ಕ್ರಿಕೆಟ್​ ಸಂಸ್ಥೆ ಸೋಮವಾರ (ಜುಲೈ 1) ತನ್ನ ತಂಡವನ್ನು ಪ್ರಕಟಿಸಿದೆ. ಜುಲೈ 5 ರಿಂದ 9 ರವರೆಗೆ ಪಂದ್ಯಗಳು ನಡೆಯಲಿವೆ. ಎಲ್ಲಾ ಮೂರು ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ. ಏಕದಿನ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ತಮ್ಮ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದರೆ, ಏಕೈಕ ಟೆಸ್ಟ್​ನಲ್ಲಿ ಭಾರತವೇ ಗೆದ್ದಿದೆ.

ಕ್ಲೋಯಿ ಟ್ರಯಾನ್ ದಕ್ಷಿಣ ಆಫ್ರಿಕಾ ತಂಡಕ್ಕೆ ತಂಡಕ್ಕೆ ಸೇರಿದ ಆಟಗಾರ್ತಿ. ಬೆನ್ನುನೋವಿನಿಂದ ಚೇತರಿಸಿಕೊಂಡ ನಂತರ ಟ್ರಿಯಾನ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಅವರು ಈಗಾಗಲೇ ಭಾರತಕ್ಕೆ ಆಗಮಿಸಿದ್ದಾರೆ ಮತ್ತು ಚೆನ್ನೈನಲ್ಲಿ ನೆಟ್ ಅಭ್ಯಾಸ ನಡೆಸುತ್ತಿದ್ದಾರೆ. ಪ್ರವಾಸಿ ತಂಡ ಏಕ ದಿನ ಪಂದ್ಯವಾಡಿದ ಡೆಲ್ಮಿ ಟಕರ್ ಮತ್ತು ನೊಂಡುಮಿಸೊ ಶಂಗಾಸೆ ಅವರನ್ನು ಟಿ 20 ಪಂದ್ಯಗಳಿಗೆ ಸೇರಿಸದಿರಲು ನಿರ್ಧರಿಸಿದ್ದಾರೆ. ಆಲ್​ರೌಂಡರ್​ಗಳು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ತಂಡದ ಭಾಗವಾಗಿದ್ದರು ಅವರು ಮನೆಗೆ ಮರಳಲಿದ್ದಾರೆ. ವಿಕೆಟ್ ಕೀಪರ್ ಮೈಕ್ ಡಿ ರೈಡರ್ ಕೂಡ ಟಿ 20 ಐ ತಂಡದ ಭಾಗವಾಗಿದ್ದಾರೆ. ಕಳೆದ ತಿಂಗಳು ಅವರು ಭಾರತ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಎರಡರಲ್ಲಿ ಆಡಿದ್ದರು.

ಟಿ20 ಸರಣಿಗೆ ಆಯ್ಕೆಯಾಗಿರುವ 15 ಆಟಗಾರರ ತಂಡದೊಂದಿಗೆ ನಾವು ಉತ್ಸುಕರಾಗಿದ್ದೇವೆ. ಗಾಯದಿಂದ ಚೇತರಿಸಿಕೊಂಡ ಕ್ಲೋಯ್ ಅವರನ್ನು ನಾವು ತಂಡಕ್ಕೆ ಸೇರಿಸಿದ್ದೇವೆ. ಅವರು ತಂಡಕ್ಕೆ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರನ್ನು ಮತ್ತೆ ಅಂಗಣದಲ್ಲಿ ನೋಡಲು ನಾವು ಕಾಯಲು ಸಾಧ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಮಧ್ಯಂತರ ಮುಖ್ಯ ಕೋಚ್ ದಿಲ್ಲಾನ್ ಡು ಪ್ರೀಜ್ ಹೇಳಿದ್ದಾರೆ.

ಇದನ್ನೂ ಓದಿ: Virat Kohli : ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ

ನಾವು ಭಾರತ ವಿರುದ್ಧ ಕೊನೆಯ ಮೂರು ಟಿ 20 ಪಂದ್ಯಗಳನ್ನು ಆಡಿದ್ದೇವೆ. ನಾವು ತವರಿಗೆ ಮರಳುವ ಮೊದಲು ಮತ್ತು ಬಾಂಗ್ಲಾದೇಶದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್​​ಗಾಗಿ ನಮ್ಮ ಅಂತಿಮ ಸಿದ್ಧತೆ ಪ್ರಾರಂಭಿಸಲಿದ್ದೇವೆ ಎಂದು ಡು ಪ್ರೀಜ್ ಹೇಳಿದರು.

ದಕ್ಷಿಣ ಆಫ್ರಿಕಾ ಮೇಲೆ ಸರಣಿ ಗೆಲುವು

ಏಕದಿನ ಮತ್ತು ಏಕೈಕ ಟೆಸ್ಟ್ ಪಂದ್ಯವನ್ನು ಸೋತ ನಂತರ ದಕ್ಷಿಣ ಆಫ್ರಿಕಾ ಮುಂಬರುವ ಟಿ 20 ಐ ಸರಣಿಯನ್ನು ಗೆಲ್ಲಲು ಮುಂದಾಗಿದೆ. ಆ ತಂಡ ಪ್ರವಾಸದಲ್ಲಿ ಇನ್ನೂ ಒಂದು ಪಂದ್ಯವನ್ನು ಗೆದ್ದಿಲ್ಲ ಮತ್ತು ಮುಂಬರುವ ಸರಣಿಯಲ್ಲಿ ಸೋಲಿನ ಸರಣಿಯನ್ನು ಮುರಿಯು ಭರವಸೆಯಲ್ಲಿದ್ದಾರೆ. ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದಿದ್ದ ಭಾರತ, ಟೆಸ್ಟ್​​ನಲ್ಲೂ 10 ವಿಕೆಟ್​ಗಳ ಭರ್ಜರಿ ಗೆಲುವು ಕಂಡಿತ್ತು.

ಭಾರತ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ:

ಲಾರಾ ವೊಲ್ವಾರ್ಡ್ (ನಾಯಕಿ), ಅನ್ನೆಕ್ ಬಾಷ್, ತಜ್ಮಿನ್ ಬ್ರಿಟ್ಸ್, ನಾಡಿನ್ ಡಿ ಕ್ಲೆರ್ಕ್, ಅನಾರಿ ಡಿರ್ಕ್ಸೆನ್, ಮೈಕ್ ಡಿ ರೀಡರ್, ಸಿನಾಲೊ ಜಫ್ತಾ, ಮಾರಿಜಾನೆ ಕಾಪ್, ಅಯಬೊಂಗಾ ಖಾಕಾ, ಮಸಾಬಟಾ ಕ್ಲಾಸ್, ಸುನೆ ಲೂಸ್, ಎಲಿಸ್-ಮೇರಿ ಮಾರ್ಕ್ಸ್, ನೊಂಕುಲುಲೆಕೊ ಮಲಾಬಾ, ತುಮಿ ಸೆಖುಖುನೆ, ಕ್ಲೋಯ್ ಟ್ರಿಯಾನ್.

Continue Reading
Advertisement
Anant Ambani
ಫ್ಯಾಷನ್50 seconds ago

Anant Ambani: ಅನಂತ್ ಅಂಬಾನಿ ಬಳಿ ಇವೆ 300 ಕೋಟಿಯ ವಾಚ್‌ಗಳು! ಎಂಥೆಂಥ ಗಡಿಯಾರಗಳಿವೆ ನೋಡಿ!

Team India Coach
ಕ್ರೀಡೆ7 mins ago

Team India Coach: ಟೀಮ್​ ಇಂಡಿಯಾ ಕೋಚ್​ ಆಯ್ಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಜಯ್‌ ಶಾ

kannada marathi row
ಪ್ರಮುಖ ಸುದ್ದಿ23 mins ago

Kannada- Marathi Row: ಮಹಾರಾಷ್ಟ್ರ ಸದನದಲ್ಲಿ ಕನ್ನಡ ಪರ ದನಿ, ಗಡಿಯಲ್ಲಿ ಮರಾಠಿ ದಬ್ಬಾಳಿಕೆಗೆ ಪ್ರತಿಭಟನೆ

Food for Concentration
ಆರೋಗ್ಯ36 mins ago

Food for Concentration: ಈ ಆಹಾರಗಳ ಸೇವನೆಯಿಂದ ನಿಮ್ಮ ಏಕಾಗ್ರತೆ ಶಕ್ತಿಯೇ ಕುಂಠಿತವಾಗಬಹುದು!

Grand Marriage
Latest36 mins ago

Grand Marriage: ಭಾರತದ ಶ್ರೀಮಂತ ಕುಟುಂಬಗಳ ಅತ್ಯಂತ ಅದ್ಧೂರಿ ಮದುವೆ ಯಾರದು? ಪಟ್ಟಿ ಇಲ್ಲಿದೆ

ರಾಜಮಾರ್ಗ ಅಂಕಣ virat kohli rohit sharma
ಅಂಕಣ55 mins ago

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

niranjana ನನ್ನ ದೇಶ ನನ್ನ ದನಿ ಅಂಕಣ
ಅಂಕಣ1 hour ago

ನನ್ನ ದೇಶ ನನ್ನ ದನಿ: ಜಗತ್ತಿನ ಇತಿಹಾಸ ಕನ್ನಡದಲ್ಲಿ ತರಲು ಆಸೆಪಟ್ಟಿದ್ದ ನಿರಂಜನ

dengue fever hassan girl death
ಕ್ರೈಂ1 hour ago

Dengue fever: ಮಾರಕ ಡೆಂಗ್ಯು ಜ್ವರಕ್ಕೆ ಬಾಲಕಿ ಬಲಿ

ITR Filing
ಮನಿ-ಗೈಡ್2 hours ago

ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!

karnataka weather Forecast
ಮಳೆ2 hours ago

Karnataka Weather : ರಾಜ್ಯದ ಇಲ್ಲೆಲ್ಲ ವಿಪರೀತ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ15 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌