Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ - Vistara News

ಆರೋಗ್ಯ

Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

seeds for weight loss: ಬೀಜಗಳ ಸೇವನೆಯಿಂದಲೂ ತೂಕ ಇಳಿಸಬಹುದು. ಆದರೆ, ಯಾವ ಬೀಜಗಳನ್ನು ತಿನ್ನುವುದರಿಂದ ತೂಕವನ್ನು ನಿಮ್ಮ ಹತೋಟಿಗೆ ತರಲು ಪ್ರಯತ್ನಿಸಬಹುದು ಎಂಬುದು ಮಾತ್ರ ತಿಳಿದಿರಬೇಕು. ಅಷ್ಟೇ ಅಲ್ಲ, ಈ ಬೀಜಗಳಲ್ಲಿರುವ ಎಲ್ಲ ಬಗೆಯ ಪೋಷಕಾಂಶಗಳಿಂದ ಆರೋಗ್ಯಕರ ವಿಧಾನದಲ್ಲಿಯೇ ತೂಕ ಇಳಿಸುವುದು ಬಹಳ ಮುಖ್ಯವಾದದ್ದು. ಯಾವ ಬೀಜಗಳ ಸೇವನೆಯಿಂದ ನಿಮ್ಮ ತೂಕ ಆರೋಗ್ಯಕರವಾಗಿಯೇ ಇಳಿಯುತ್ತದೆ ಎಂಬುದನ್ನು ನೋಡೋಣ.

VISTARANEWS.COM


on

Seeds For Weight Loss
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತೂಕ ಇಳಿಸುವುದು ಎಂಬುದು ಅತ್ಯಂತ ಶಿಸ್ತು ಬೇಡುವ ಪಯಣ. ಎಷ್ಟೇ ಶಿಸ್ತಿನಿಂದ ಇದ್ದರೂ ನಾಲಿಗೆ ರುಚಿಯನ್ನು ಬೇಡುತ್ತದೆ. ರುಚಿಯ ಜೊತೆಗೂ ದೇಹವನ್ನು ಆರೋಗ್ಯವಾಗಿಡಬಹುದು ಹಾಗೂ ದೇಹದ ತೂಕವನ್ನು ಹತೋಟಿಗೆ ತರಬಹುದು ಎಂದರೆ ಆಗ ನೆನಪಾಗುವುದು ಈ ಬೀಜಗಳು. ಹೌದು ಬೀಜಗಳ ಸೇವನೆಯಿಂದಲೂ ತೂಕ ಇಳಿಸಬಹುದು (seeds for weight loss). ಆದರೆ, ಯಾವ ಬೀಜಗಳನ್ನು ತಿನ್ನುವುದರಿಂದ ತೂಕವನ್ನು ನಿಮ್ಮ ಹತೋಟಿಗೆ ತರಲು ಪ್ರಯತ್ನಿಸಬಹುದು ಎಂಬುದು ಮಾತ್ರ ತಿಳಿದಿರಬೇಕು. ಅಷ್ಟೇ ಅಲ್ಲ, ಈ ಬೀಜಗಳಲ್ಲಿರುವ ಎಲ್ಲ ಬಗೆಯ ಪೋಷಕಾಂಶಗಳಿಂದ ಆರೋಗ್ಯಕರ ವಿಧಾನದಲ್ಲಿಯೇ ತೂಕ ಇಳಿಸುವುದು ಬಹಳ ಮುಖ್ಯವಾದದ್ದು. ಬನ್ನಿ, ಯಾವ ಬೀಜಗಳ ಸೇವನೆಯಿಂದ ನಿಮ್ಮ ತೂಕ ಆರೋಗ್ಯಕರವಾಗಿಯೇ ಇಳಿಯುತ್ತದೆ ಎಂಬುದನ್ನು ನೋಡೋಣ.

Chia Seeds Black Foods

ಚಿಯಾ ಬೀಜಗಳು

ಚಿಯಾ ಬೀಜಗಳು ಪೋಷಕಾಂಶಗಳ ಪವರ್‌ ಹೌಸ್‌ ಇದ್ದ ಹಾಗೆ. ಇವುಗಳಲ್ಲಿ ಬಹುತೇಕ ಎಲ್ಲ ಪೋಷಕಾಂಶಗಳೂ ಇದ್ದು, ನಾರಿನಂಶವೂ ಇರುವುದರಿಂದ ತೂಕ ಇಳಿಕೆಗೆ ನೆರವಾಗುತ್ತದೆ, ನೀರಿನಲ್ಲಿ ನೆನೆ ಹಾಕಿದಾಗ ಚಿಯಾ ಬೀಜಗಳು ಉಬ್ಬಿಕೊಂಡು ಜೆಲ್‌ನಂತ ಕವಚವನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ತಿಂದರೂ ದೇಹದಲ್ಲಿರುವ ನೀರಿನಂಶವನ್ನು ಪಡೆದುಕೊಂಡು ಉಬ್ಬುತ್ತದೆ. ಹಾಗಾಗಿ ಇದು ಹೊಟ್ಟೆ ತುಂಬಿದ ಭಾವವನ್ನು ನೀಡುತ್ತದೆ. ಇದರಲ್ಲಿರುವ ಕರಗಬಲ್ಲ ನಾರಿನಂಶವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

Flaxseed Different Types of Seeds with Health Benefits

ಅಗಸೆ ಬೀಜಗಳು

ಅಗಸೆ ಬೀಜ ಅಥವಾ ಫ್ಲ್ಯಾಕ್‌ಸೀಡ್‌ಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ಗಳಿದ್ದು, ಜೊತೆಗೆ ಕರಗಬಲ್ಲ ನಾರಿನಂಶವೂ ಇದೆ. ಇದು ತೂಕ ಇಳಿಕೆಗೆ ಪೂರಕ. ಒಮೆಗಾ ೩ ಫ್ಯಾಟಿ ಆಸಿಡ್‌ಗಳು ದೇಹದ ಉರಿಯೂತವನ್ನೂ ಕಡಿಮೆಕೊಳಿಸಿದರೆ, ಕರಗಬಲ್ಲ ನಾರಿನಂಶವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಹಸಿವು ನಿಯಂತ್ರಣದಲ್ಲಿದ್ದು ಅತಿಯಾಗಿ ತಿನ್ನುವುದು ಹತೋಟಿಗೆ ಬರುತ್ತದೆ.

Hemp seed Different Types of Seeds with Health Benefits

ಹೆಂಪ್‌ ಬೀಜಗಳು

ಹೆಂಪ್‌ ಬೀಜಗಳಲ್ಲಿ ಸಾಕಷ್ಟು ಪ್ರೊಟೀನ್‌ ಇರುವುದರಿಂದ ತೂಕ ಇಳಿಸುವ ಮಂದಿಗೆ ಇದು ಪೂರಕ. ಪ್ರೊಟೀನ್‌ ಕರಗಲು ಹೆಚ್ಚು ಶಕ್ತಿ ಬೇಕು. ಹೀಗಾಗಿ ನಿಮ್ಮ ಕ್ಯಾಲರಿ ಇಲ್ಲಿ ಹೆಚ್ಚು ಬಳಸಲ್ಪಡುತ್ತದೆ. ಪ್ರೊಟೀನ್‌ನಿಂದ ಮಾಂಸಖಂಡಗಳು ಬಲವರ್ಧನೆಗೊಳ್ಳುವ ಜೊತೆಗೆ, ಈ ಬೀಜಗಳಲ್ಲಿರುವ ಫ್ಯಾಟಿ ಆಸಿಡ್‌ನ ಪರಿಣಾಮ ಹಸಿವೂ ಕೂಡಾ ನಿಯಂತ್ರಣದಲ್ಲಿರುತ್ತದೆ.

Pumpkin seeds in white bowl Pumpkin Seeds Benefits

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜದಲ್ಲಿ ಪ್ರೊಟೀನ್‌, ನಾರಿನಂಶ ಹಾಗೂ ಆರೋಗ್ಯಕರ ಕೊಬ್ಬು ಶ್ರೀಮಂತವಾಗಿದೆ. ಇದರಿಂದ ಹೊಟ್ಟೆ ತುಂಬಿದ ಅನುಭವವಾಗಿ ಹಸಿವು ನಿಯಂತ್ರಣದಲ್ಲಿರುತ್ತದೆ. ಪರಿಣಾಮ ಅತಿಯಾಗಿ ತಿನ್ನುವುದಕ್ಕೆ ಬ್ರೇಕ್‌ ಬಿದ್ದು ತೂಕ ಇಳಿಯುತ್ತದೆ. ಇದರಲ್ಲಿ ಮೆಗ್ನೀಶಿಯಂ ಕೂಡಾ ಇದ್ದು, ಇದರಿಂದ ಇನ್ಸುಲಿನ್‌ ಮಟ್ಟವು ಸಮತೋಲನದಲ್ಲಿರುತ್ತದೆ.

Sunflower seed Zinc Foods It also provides protein, minerals and antioxidants along with zinc

ಸೂರ್ಯಕಾಂತಿ ಬೀಜ

ಸೂರ್ಯಕಾಂತಿ ಬೀಜಗಳಲ್ಲಿ ಪ್ರೊಟೀನ್‌, ನಾರಿನಂಶ, ಖನಿಜಾಂಶಗಳ ಜೊತೆಗೆ ಎಲ್ಲ ಬಗೆಯ ಪೋಷಕಾಂಶಗಳೂ ಇವೆ. ಇದರಲ್ಲಿರುವ ಪ್ರೊಟೀನ್‌ ಹಾಗೂ ನಾರಿನಂಶ ಹೆಚ್ಚು ಹಸಿವಾಗದಂತೆ ತಡೆಯುವುದರಿಂದ ತೂಕ ಇಳಿಯುತ್ತದೆ. ಇದರಲ್ಲಿರುವ ವಿಟಮಿನ್‌ ಇ ಹಾಗೂ ಸೆಲೆನಿಯಂ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಚಯಾಪಚಯ ಕ್ರಿಯೆ ಸರಾಗವಾಗಿ ಆಗುತ್ತದೆ.

Imager Of Sesame Benefits

ಎಳ್ಳು

ಎಳ್ಳಿನಲ್ಲಿ ಲಿಗ್ನೆನ್‌ ಎಂಬ ಸಸ್ಯಾಧಾರಿತ ಕಾಂಪೌಂಡ್‌ ಇದ್ದು ಇದು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಎಳ್ಳಿನಲ್ಲಿ ಕ್ಯಾಲ್ಶಿಯಂ ಹಾಗೂ ಪ್ರೊಟೀನ್‌ ಹೇರಳವಾಗಿದೆ. ಒಳ್ಳೆಯ ಕೊಬ್ಬು ಕೂಡಾ ಇದ್ದು, ಇದರಿಂದ ಹೊಟ್ಟೆ ತುಂಬಿದ ಭಾವ ನೀಡುತ್ತದೆ.

Parasite Removal Papaya Seeds Benefits

ಪಪ್ಪಾಯಿ ಬೀಜ

ಪಪ್ಪಾಯಿ ಬೀಗಳಲ್ಲಿ ಜೀರ್ಣಕಾರಿ ಕಿಣ್ವಗಳು ಹೇರಳವಾಗಿದ್ದು, ಇದು ತೂಕ ಇಳಿಕೆಗೆ ಸಾಕಷ್ಟು ಸಹಾಯ ಮಾಡುತ್ತದೆ. ಈ ಕಿಣ್ವಗಳು ದೇಹದಲ್ಲಿರುವ ಪ್ರೊಟೀನ್‌ ಅನ್ನು ಕರಗಿಸಲು ಸಹಾಯ ಮಾಡುವ ಮೂಲಕ ಆರೋಗ್ಯಕಾರಿ ಜೀರ್ಣಕ್ರಿಯೆಗೆ ಸಹಕಾರ ನೀಡುತ್ತದೆ. ಹೊಟ್ಟೆಯುಬ್ಬರವನ್ನೂ ಇದು ಕಡಿಮೆ ಮಾಡುತ್ತದೆ. ಕಡಿಮೆ ಕ್ಯಾಲರಿಯ ಪಪ್ಪಾಯ ಬೀಜಗಳು ತೂಕ ಇಳಿಕೆಗೆ ತಮ್ಮದೇ ಆದ ಕಾಣಿಕೆ ನೀಡುತ್ತವೆ.

ಇದನ್ನೂ ಓದಿ: Oats For Weight Loss: ಓಟ್ಸ್‌ ತಿನ್ನುವುದರಿಂದ ತೂಕ ಇಳಿಯುತ್ತದೆಯೇ? ಉತ್ತರ ಇಲ್ಲಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Food for Concentration: ಈ ಆಹಾರಗಳ ಸೇವನೆಯಿಂದ ನಿಮ್ಮ ಏಕಾಗ್ರತೆ ಶಕ್ತಿಯೇ ಕುಂಠಿತವಾಗಬಹುದು!

Food for Concentration: ಕೆಲವು ಆಹಾರಗಳು ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡು ಮಿದುಳಿನ ಆರೋಗ್ಯದ ಕಾಳಜಿ ವಹಿಸುತ್ತವೆ. ಮೀನು, ಮೊಟ್ಟೆ, ಡಾರ್ಕ್‌ ಚಾಕೋಲೇಟ್‌, ಬೆರ್ರಿಗಳು, ಒಣ ಬೀಜಗಳು, ಧಾನ್ಯಗಳು, ಬೇಳೆ ಕಾಳುಗಳು ಮಿದುಳಿನ ಆರೋಗ್ಯಕ್ಕೆ ಅತ್ಯಂತ ಸೂಕ್ತ. ಇವನ್ನು ತಿನ್ನುವುದರಿಂದ ಮಿದುಳಿನ ಆರೋಗ್ಯ ಹೆಚ್ಚುತ್ತದೆ. ಆದರೆ, ಕೆಲವು ಆಹಾರ ಸೇವನೆಯಿಂದ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳೂ ಆಗುತ್ತವೆ. ಅವು ಏಕಾಗ್ರತೆಯನ್ನೂ ಕ್ಷೀಣಿಸುವಂತೆ ಮಾಡಬಲ್ಲವು.

VISTARANEWS.COM


on

Food for Concentration
Koo

ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ (Food for Concentration) ಗುಟ್ಟಿರುವುದು ನಾವೇನು ಆಹಾರ ಸೇವಿಸುತ್ತೇವೆ ಎಂಬುದರ ಮೇಲೆ. ಈಗಾಗಲೇ ಅನೇಕ ಸಂಶೋಧನೆಗಳು ನಾವು ತಿನ್ನುವ ಆಹಾರಕ್ಕೂ ನಮ್ಮ ಮಾನಸಿಕ ಆರೋಗ್ಯಕ್ಕೂ ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸಿವೆ. ಕೆಲವು ಆಹಾರಗಳು ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡು ಮಿದುಳಿನ ಆರೋಗ್ಯದ ಕಾಳಜಿ ವಹಿಸುತ್ತವೆ. ಮೀನು, ಮೊಟ್ಟೆ, ಡಾರ್ಕ್‌ ಚಾಕೋಲೇಟ್‌, ಬೆರ್ರಿಗಳು, ಒಣ ಬೀಜಗಳು, ಧಾನ್ಯಗಳು, ಬೇಳೆ ಕಾಳುಗಳು ಮಿದುಳಿನ ಆರೋಗ್ಯಕ್ಕೆ ಅತ್ಯಂತ ಸೂಕ್ತ. ಇವನ್ನು ತಿನ್ನುವುದರಿಂದ ಮಿದುಳಿನ ಆರೋಗ್ಯ ಹೆಚ್ಚುತ್ತದೆ. ಆದರೆ, ಕೆಲವು ಆಹಾರ ಸೇವನೆಯಿಂದ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳೂ ಆಗುತ್ತವೆ. ಅವು ಏಕಾಗ್ರತೆಯನ್ನೂ ಕ್ಷೀಣಿಸುವಂತೆ ಮಾಡಬಲ್ಲವು. ಬನ್ನಿ, ಯಾವೆಲ್ಲ ಆಹಾರಗಳು ಏಕಾಗ್ರತಾ ಶಕ್ತಿಯನ್ನೇ ಮೊಡಕುಗೊಳಿಸುತ್ತವೆ ಎಂಬುದನ್ನು ನೋಡೋಣ.

Cakes, Muffins

ಇವು ಅತಿಯಾದರೆ ಒಳ್ಳೆಯದಲ್ಲ

ಪೇಸ್ಟ್ರಿ, ಕೇಕ್‌, ವೈಟ್‌ ಬ್ರೆಡ್‌: ಕೇಕ್‌, ಪೇಸ್ಟ್ರಿಗಳು ಹಾಗೂ ಬ್ರೆಡ್‌ನಿಂದ ಮಾಡಿದ ಸ್ಯಾಂಡ್‌ವಿಚ್‌, ಬರ್ಗರ್‌, ಡೋನಟ್‌ ಇತ್ಯಾದಿಗಳೆಲ್ಲವೂ ಬಾಯಲ್ಲಿ ನೀರೂರುಸಬಹುದು. ನಿಮ್ಮ ಸಂಭ್ರಮವನ್ನು ಹೆಚ್ಚಿಸಬಹುದು. ಮಕ್ಕಳು ಇವಿದ್ದರೆ ಊಟ ಬಿಡಬಹುದು. ಆದರೆ, ಇವು ಅತಿಯಾದರೆ ಒಳ್ಳೆಯದಲ್ಲ. ಇವು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಏರುಪೇರುಗೊಳಿಸುವ ಜೊತೆಗೆ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು.

French Fries Closeup

ಹೆಚ್ಚು ಉಪ್ಪಿರುವ ತಿನಿಸುಗಳು

ಹೆಚ್ಚು ಉಪು ಒಳ್ಳೆಯದಲ್ಲ. ಹೆಚ್ಚು ಉಪ್ಪಿನ ಸೇವನೆಯಿಂದ ಮಿದುಳಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ. ಹೆಚ್ಚು ಉಪ್ಪಿನಿಂದ ಕೆಲವೊಮ್ಮೆ ಮಿದುಳಿನಲ್ಲಿ ಉರಿಯೂತವೂ ಆಗಬಹುದು. ಸ್ಮರಣಶಕ್ತಿ ಕುಂಠಿತಗೊಳ್ಳುವುದು, ಏಕಾಗ್ರತೆಗೆ ಧಕ್ಕೆಯುಂಟಾಗುವುದು ಇತ್ಯಾದಿಗಳೂ ಆಗುವ ಸಂಭವ ಹೆಚ್ಚು.

Selection of Colorful Sweets

ಸೋಡಾ ಹಾಗೂ ಸಕ್ಕರೆಯುಕ್ತ ಆಹಾರ

ಹೆಚ್ಚಿನ ಮಂದಿಗೆ ತಂಪಾದ ಸೋಢಾ, ಹಾಗೂ ಕಾರ್ಬೋನೇಟೆಡ್‌ ಡ್ರಿಂಕ್‌ಗಳನ್ನು ಸೇವಿಸುವುದರಿಂದ ಖುಷಿ, ಉಲ್ಲಾಸ ಸಿಗುತ್ತದೆ. ಆದರೆ, ಇವುಗಳ ಸೇವನೆಯಿಂದ ದಿಢೀರ್‌ ಸಕ್ಕರೆಯ ಅಂಶ ದೇಹದಲ್ಲಿ ಹೆಚ್ಚುತ್ತದೆ. ಸಿಹಿತಿನಿಸು, ಹಾಗೂ ಸಿಹಿಯಾದ ಡ್ರಿಂಕ್‌ಗಳನ್ನು ಕುಡಿಯುವುದರಿಂದಲೂ ಇದೇ ಆಗಬಹುದು. ಇಂತಹ ಸಿಹಿಯಿಂದ ಸಿಗುವ ಖುಷಿಗೆ ಒಗ್ಗಿಕೊಂಡ ಮನಸ್ಸು ದೇಹ ಹಲವು ಅಡ್ಡ ಪರಿಣಾಮಗಳನ್ನೂ ಕಾಣುತ್ತದೆ. ಮಾನಸಿಕವಾಗಿ ಒತ್ತಡ, ಖಿನ್ನತೆ, ಪಾರ್ಶ್ವವಾಯು, ಏಕಾಗ್ರತೆಯಲ್ಲಿ ಸಮಸ್ಯೆ ಇತ್ಯಾದಿಗಳಿಗೂ ಕಾರಣವಾಗಬಹುದು.

Image Of Coffee Side Effects

ಕಾಫಿ

ಕಾಫಿ ಕುಡಿಯುವುದರಿಂದ ಅದರಲ್ಲಿರುವ ಕೆಫಿನ್‌ನಿಂದಾಗಿ ನಿಮಗೆ ಶಕ್ತಿ ಇಮ್ಮಡಿಯಾಗಿ ಕೆಲಸದಲ್ಲಿ ಚುರುಕುತನ ಕಾಣಬಹುದು. ಆದರೆ, ಇದು ತಾತ್ಕಾಲಿಕ. ಆದರೆ ಇವು ಉದ್ವೇಗವನ್ನೂ ಹೆಚ್ಚು ಮಾಡುತ್ತದೆ. ಕೆಲವು ಮಂದಿಗೆ ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ನಿದ್ದೆಯ ಸಮಸ್ಯೆ, ಒಂದೆಡೆ ಕೂರಲು ಸಾಧ್ಯವಾಗದಿರುವಂಥ ಏಕಾಗ್ರತೆಯ ಕೊರತೆ ಇತ್ಯಾದಿಗಳೂ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಶಕ್ತಿವರ್ಧಕ ಪೇಯಗಳು

ಬಹಳ ಮಂದಿ ನಿದ್ದೆಯನ್ನು ಮುಂದೂಡಲು ಕೆಲವು ಕೆಫಿನ್‌ ಇರುವ ಪೇಯಗಳು, ಶಕ್ತಿವರ್ಧಕ ಪೇಯಗಳನ್ನು ಕುಡಿಯುತ್ತಾರೆ. ಅದು ಆ ಕ್ಷಣಕ್ಕೆ ನಿದ್ದೆಯನ್ನು ಮುಂದೂಡಬಹುದು ನಿಜವಾದರೂ, ಭವಿಷ್ಯದಲ್ಲಿ ಒಳ್ಳೆಯದನ್ನು ಮಾಡಲಾರದು. ನಿರ್ಜಲೀಕರಣ, ಮೂತ್ರಶಂಕೆ ಅತಿಯಾಗುವುದು, ಮೂಡ್‌ ಏರುಪೇರು, ಉದ್ವೇಗ, ಏಕಾಗ್ರತೆಯ ಸಮಸ್ಯೆ ಇತ್ಯಾದಿ ಸಮಸ್ಯೆಗಳನ್ನು ತಂದೊಡ್ಡಬಹುದು.

Continue Reading

ಆರೋಗ್ಯ

Mosquito Repellents: ರಾಸಾಯನಿಕದ ಅಪಾಯ ಏಕೆ? ಸೊಳ್ಳೆ ಓಡಿಸಲು ಇಲ್ಲಿವೆ 10 ನೈಸರ್ಗಿಕ ವಿಧಾನಗಳು!

ಸೊಳ್ಳೆಗಳನ್ನು ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಪನ್ನಗಳಿವೆ. ಆದರೆ ಅವುಗಳಲ್ಲಿ ಹೆಚ್ಚಿನವು ಅಲರ್ಜಿ ಮತ್ತು ಚರ್ಮದ ಸೋಂಕನ್ನು ಉಂಟು ಮಾಡುತ್ತವೆ. ಆದ್ದರಿಂದ ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯಲ್ಲೇ ನಾವು ಸೊಳ್ಳೆ ನಿವಾರಕಗಳನ್ನು (Mosquito Repellents) ಸಿದ್ಧಪಡಿಸಿಕೊಳ್ಳಬಹುದು.

VISTARANEWS.COM


on

By

Mosquito Repellents
Koo

ಮಳೆಗಾಲ (rainy season) ಆರಂಭವಾಯಿತೆಂದರೆ ಡೆಂಗ್ಯೂ (Dengue), ಮಲೇರಿಯಾ (Malaria) ಮತ್ತು ಚಿಕೂನ್‌ಗುನ್ಯಾದಂತಹ (Chikungunya) ರೋಗ ಹರಡುವಿಕೆಯು ಆರಂಭವಾಯಿತು ಎಂದೇ ತಿಳಿದುಕೊಳ್ಳಬೇಕಾದ ಕಾಲ. ಸೊಳ್ಳೆಗಳ ಸಂತಾನೋತ್ಪತ್ತಿಯ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಆರೋಗ್ಯದ ಮೇಲೆ ಭಾರಿ ಪರಿಣಾಮ ಉಂಟಾಗುತ್ತದೆ. ಹೀಗಾಗಿ ನಾವು ಮಳೆಗಾಲದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವುದು ಬಹುಮುಖ್ಯ. ಮನೆ ಹಾಗೂ ಸುತ್ತಮುತ್ತ ಸೊಳ್ಳೆಗಳ (Mosquito Repellents) ಸಂತಾನೋತ್ಪತ್ತಿ ಆಗದಂತೆ ತಡೆಯುವುದು, ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಬಹು ಮುಖ್ಯವಾಗಿದೆ.

ಸೊಳ್ಳೆಗಳನ್ನು ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಪನ್ನಗಳಿವೆ. ಆದರೆ ಅವುಗಳಲ್ಲಿ ಹೆಚ್ಚಿನವು ಅಲರ್ಜಿ ಮತ್ತು ಚರ್ಮದ ಸೋಂಕನ್ನು ಉಂಟು ಮಾಡುತ್ತವೆ. ಆದ್ದರಿಂದ ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯಲ್ಲೇ ನಾವು ಸೊಳ್ಳೆ ನಿವಾರಕಗಳನ್ನು ಸಿದ್ಧಪಡಿಸಿಕೊಳ್ಳಬಹುದು.

ಸೊಳ್ಳೆಗಳು ಮನೆಯೊಳಗೆ ಬಾರದಂತೆ ಬಳಸಬಹುದಾದ 10 ನೈಸರ್ಗಿಕ ಸೊಳ್ಳೆ ನಿವಾರಕಗಳ ಕುರಿತು ಮಾಹಿತಿ ಇಲ್ಲಿದೆ. ನೀವು ಮನೆಯಲ್ಲಿ ಇದನ್ನು ಮಾಡಿ ನೋಡಿ. ಸೊಳ್ಳೆಗಳನ್ನು ಮನೆಯಿಂದ ದೂರ ಮಾಡಿ.


1. ಬೆಳ್ಳುಳ್ಳಿ ನೀರು

ಸೊಳ್ಳೆಗಳನ್ನು ತೊಡೆದು ಹಾಕಲು ಬೆಳ್ಳುಳ್ಳಿ ನೀರು ಅತ್ಯುತ್ತಮ ದ್ರಾವಣ. ಹಲವಾರು ಔಷಧೀಯ ಗುಣವಿರುವ ಬೆಳ್ಳುಳ್ಳಿಯ ಕೆಲವು ಎಸಳು ಮತ್ತು ಸ್ವಲ್ಪ ಲವಂಗವನ್ನು ಪುಡಿ ಮಾಡಿ ಅನಂತರ ನೀರಿನಲ್ಲಿ ಕುದಿಸಬೇಕು. ಅದರ ದ್ರಾವಣವನ್ನು ಸ್ಪ್ರೇ ಬಾಟಲಿಯಲ್ಲಿ ಸುರಿದು ಅದನ್ನು ಕೋಣೆಯ ಸುತ್ತಲೂ, ಎಲ್ಲಾ ಹೊರಾಂಗಣ ಬಲ್ಬ್‌, ಗ್ಯಾರೇಜ್ ಬಳಿ ಸಿಂಪಡಿಸಿ. ಈ ದ್ರಾವಣವು ಸೊಳ್ಳೆಗಳನ್ನು ತಕ್ಷಣವೇ ಕೊಲ್ಲುತ್ತದೆ.


2. ಮಜ್ಜಿಗೆ ಸೊಪ್ಪು

ಮಜ್ಜಿಗೆ ಸೊಪ್ಪು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಸ್ಯಗಳಾಗಿವೆ. ಇದರ ಎಣ್ಣೆಯು ಸೊಳ್ಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮಜ್ಜಿಗೆ ಸೊಪ್ಪುನ ಎಲೆಗಳನ್ನು ಪುಡಿ ಮಾಡಿ ತಯಾರಿಸಿದ ಎಣ್ಣೆಯುಕ್ತ ಮಿಶ್ರಣವನ್ನು ನೇರವಾಗಿ ಚರ್ಮಕ್ಕೆ ಅನ್ವಯಿಸಬಹುದು. ಇದರಿಂದ ಹಲವು ಗಂಟೆಗಳವರೆಗೆಸೊಳ್ಳೆ ಕಚ್ಚದಂತೆ ಅದು ತಡೆಯುತ್ತದೆ. ಈ ಎಣ್ಣೆಯು ಕಡಿಮೆ ಸಾಂದ್ರತೆಯನ್ನು ಹೊಂದಿರುವ ಕಾರಣ ಪದೇ ಪದೇ ಬಳಸುವ ಅಗತ್ಯವಿರುತ್ತದೆ.


3. ವಿನೆಗರ್

ಸೊಳ್ಳೆ ನಿವಾರಣೆ ಮಾಡುವಲ್ಲಿ ವಿನೆಗರ್ ಕೂಡ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಆಪಲ್ ಸೈಡರ್ ವಿನೆಗರ್ ಅಥವಾ ಸಾಮಾನ್ಯ ವಿನೆಗರ್ ಆಗಿರಲಿ ಸೊಳ್ಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. 3 ಕಪ್ ನೀರು ಮತ್ತು 1 ಕಪ್ ವಿನೆಗರ್ ಅನ್ನು ಸ್ಪ್ರೇ ಬಾಟಲಿಯಲ್ಲಿ ತೆಗೆದುಕೊಂಡು ಅದನ್ನು ನೇರವಾಗಿ ಚರ್ಮದ ಮೇಲೆ ಅಥವಾ ಡೈನಿಂಗ್ ಟೇಬಲ್ ಮತ್ತು ಮನೆಯ ಪರದೆಯ ಸುತ್ತಲೂ ಸಿಂಪಡಿಸಿದರೆ ಮನೆಯಿಂದ ಸೊಳ್ಳೆಯನ್ನು ದೂರ ಮಾಡಬಹುದು.


4. ನಿಂಬೆ ಮತ್ತು ಲವಂಗ

ಸೊಳ್ಳೆಗಳನ್ನು ದೂರವಿಡಲು ಅರ್ಧ ನಿಂಬೆ ಮತ್ತು ಕೈ ತುಂಬ ಲವಂಗವು ಅದ್ಭುತ ಅಂಶವಾಗಿದೆ. ನಿಂಬೆ ಸ್ಲೈಸ್ ಅನ್ನು ತೆಗೆದುಕೊಂಡು, ಅದರಲ್ಲಿ ಕೆಲವು ಲವಂಗವನ್ನು ಸೇರಿಸಿ ಮತ್ತು ಕೋಣೆಯಲ್ಲಿ ಇರಿಸಿ. ಈ ಮ್ಯಾಜಿಕ್ ಅಂಶವು ಸೊಳ್ಳೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.


5. ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆಯ ಪರಿಮಳವನ್ನು ಸೊಳ್ಳೆಗಳು ಸಹಿಸುವುದಿಲ್ಲ. ಆದ್ದರಿಂದ ಸೊಳ್ಳೆಗಳನ್ನು ದೂರವಿಡಲು ಲ್ಯಾವೆಂಡರ್ ಎಣ್ಣೆಯನ್ನು ಬಳಸಬಹುದು. ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದನ್ನು ಸಿಂಪಡಿಸಬಹುದು. ಸೊಳ್ಳೆ ಕಚ್ಚದಂತೆ ತಡೆಯಲು ಚರ್ಮಕ್ಕೂ ಇದರ ಕೆಲವು ಹನಿಗಳನ್ನು ಸಿಂಪಡಿಸಬಹುದು.


6. ತುಳಸಿ

ತುಳಸಿ ಸಮೀಪ ಸೊಳ್ಳೆಗಳು ಬರುವುದಿಲ್ಲ. ಇದರಿಂದಲೂ ಎಣ್ಣೆ ತಯಾರಿಸಿ ಚರ್ಮಕ್ಕೆ ಹಚ್ಚಿಕೊಳ್ಳಬಹುದು. ಇದು ಸೊಳ್ಳೆಗಳನ್ನು ನಮ್ಮಿಂದ ದೂರವಿರಿಸುತ್ತದೆ. ಮನೆ ಸುತ್ತಮುತ್ತ ತುಳಸಿ ಗಿಡಗಳನ್ನು ನೆಡುವುದು ಕೂಡ ಸೊಳ್ಳೆಯನ್ನು ಮನೆಯಿಂದ ದೂರವಿರುವಂತೆ ಮಾಡುತ್ತದೆ.


7. ಕರ್ಪೂ

ಕರ್ಪೂರವು ಬಹುಮುಖ್ಯ ಸೊಳ್ಳೆ ನಿವಾರಕವಾಗಿದೆ. ಇದರ ದಟ್ಟವಾದ ವಾಸನೆಯು ಸೊಳ್ಳೆಗಳನ್ನು ಓಡಿಸುತ್ತದೆ. ಸುಮಾರು ಕಾಲು ಕಪ್ ನೀರಿಗೆ ಕರ್ಪೂರದ ಎರಡು ಮಾತ್ರೆಗಳನ್ನು ಹಾಕಿ ಕೋಣೆಯ ಸುತ್ತಲೂ ಅಥವಾ ಹೊರಾಂಗಣದಲ್ಲಿ ಸಿಂಪಡಿಸಿ. ಅಲ್ಲದೆ ಕೋಣೆಯಲ್ಲಿ ಕೆಲವು ಕರ್ಪೂರವನ್ನು ಸುಟ್ಟು ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ. ಸುಮಾರು 20 ನಿಮಿಷಗಳ ಕಾಲ ಅದನ್ನು ಉರಿಯಲು ಬಿಡಿ. ಕೋಣೆಯ ಹೊರಗೆ ಇರಿ. ಸೊಳ್ಳೆಗಳು ಮನೆಯಿಂದ ಓಡಿ ಹೋಗುವುದು.


8. ಪುದೀನಾ

ಸೊಳ್ಳೆಗಳನ್ನು ಎದುರಿಸಲು ಪುದೀನಾ ಮತ್ತೊಂದು ನೈಸರ್ಗಿಕ ವಿಧಾನವಾಗಿದೆ. ಪುದೀನಾವನ್ನು ಬಳಸಲು ಸ್ಪ್ರೇ ಬಾಟಲಿಯಲ್ಲಿ ಒಂದು ಕಪ್ ನೀರಿನೊಂದಿಗೆ ಪುದೀನಾ ಎಲೆಯ ತೈಲದ ಕೆಲವು ಹನಿಗಳನ್ನು ಸೇರಿಸಿ. ಚೆನ್ನಾಗಿ ಅಲ್ಲಾಡಿಸಿ ಮತ್ತು ಚರ್ಮದ ಮೇಲೆ ಸಿಂಪಡಿಸಿ. ಪುದೀನಾ ಸ್ಪ್ರೇ ರಕ್ತ ಹೀರುವ ಸೊಳ್ಳೆಗಳನ್ನು ದೂರ ಮಾಡುತ್ತದೆ.


ಇದನ್ನೂ ಓದಿ: Watermelon At Night: ಸಂಜೆ 7 ಗಂಟೆಯ ಕಲ್ಲಂಗಡಿ ಹಣ್ಣನ್ನು ತಿನ್ನಲು ಹೋಗಬೇಡಿ!

9. ತೆಂಗಿನ ಎಣ್ಣೆ ಮತ್ತು ಬೇವಿನ ಎಣ್ಣೆ

ತೆಂಗಿನ ಎಣ್ಣೆ ಮತ್ತು ಬೇವಿನ ಎಣ್ಣೆಯ ಸಂಯೋಜನೆಯು ನೈಸರ್ಗಿಕ ಸೊಳ್ಳೆ ನಿವಾರಕವಾಗಿದೆ. ತೆಂಗಿನ ಎಣ್ಣೆ ಮತ್ತು ಬೇವಿನ ಎಣ್ಣೆಯನ್ನು ಚೆನ್ನಾಗಿ ನೀರಿನಲ್ಲಿ ಬೆರೆಸಿ ಚರ್ಮದ ಮೇಲೆ ಸಿಂಪಡಿಸಿ. ಅರ್ಧ ದಿನದವರೆಗೆ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಇದು ಸಹಾಯ ಮಾಡುತ್ತದೆ.


10. ಕಾಫಿ ಬೀಜ

ಕಾಫಿ ಬೀಜಗಳು ಸೊಳ್ಳೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಇದು ಪರಿಸರ ಸ್ನೇಹಿ ಪರ್ಯಾಯ ಮಾತ್ರವಲ್ಲ ಕಾಫಿ ಬೀಜಗಳ ಮರು ಬಳಕೆ ಮಾಡಲು ಇದು ಉತ್ತಮ ಮಾರ್ಗವಾಗಿದೆ. ಕಾಫಿ ಬೀಜಗಳನ್ನು ಸುಟ್ಟು ಅದರಿಂದ ಬರುವ ಹೊಗೆಯು ಸೊಳ್ಳೆಗಳನ್ನು ಮನೆಯಿಂದ ದೂರ ಓಡಿಸುತ್ತದೆ.

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ 2ನೇ ರಾಷ್ಟ್ರೀಯ ಮಕ್ಕಳ ಪಾರ್ಶ್ವವಾಯುವಿನ ಶೃಂಗ 2024ಕ್ಕೆ ಚಾಲನೆ

Bengaluru News: ಬೆಂಗಳೂರಿನಲ್ಲಿ ಎರಡು ದಿನಗಳ 2ನೇ ರಾಷ್ಟ್ರೀಯ ಪೀಡಿಯಾಟ್ರಿಕ್ ಸ್ಟ್ರೋಕ್ ಕಾನ್ ಕ್ಲೇವ್ 2024 (ಮಕ್ಕಳ ಪಾರ್ಶ್ವವಾಯು ಶೃಂಗ 2024) ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ (ಐ.ಎಸ್.ಎ) ಅಧ್ಯಕ್ಷ ಡಾ.ನಿರ್ಮಲ್ ಸೂರ್ಯ ಉದ್ಘಾಟಿಸಿದರು.

VISTARANEWS.COM


on

2nd National Pediatric Stroke Conclave 2024 inauguration in Bengaluru
Koo

ಬೆಂಗಳೂರು: ನಗರದಲ್ಲಿ ಎರಡು ದಿನಗಳ 2ನೇ ರಾಷ್ಟ್ರೀಯ ಪೀಡಿಯಾಟ್ರಿಕ್ ಸ್ಟ್ರೋಕ್ ಕಾನ್ ಕ್ಲೇವ್ 2024 (ಮಕ್ಕಳ ಪಾರ್ಶ್ವವಾಯು ಶೃಂಗ 2024) ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ (ಐ.ಎಸ್.ಎ) ಅಧ್ಯಕ್ಷ ಡಾ. ನಿರ್ಮಲ್ ಸೂರ್ಯ (Bengaluru News) ಉದ್ಘಾಟಿಸಿದರು.

ಮಕ್ಕಳ ಪಾರ್ಶ್ವವಾಯು ರೋಗತಡೆ, ಆರೈಕೆ ಮತ್ತು ಚಿಕಿತ್ಸೆಯ ಕ್ಷೇತ್ರಗಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಣಿತರು ಒಂದೇ ಸೂರಿನಡಿ ಸೇರುವ ಅಪೂರ್ವ ಸಂದರ್ಭಕ್ಕೆ ಈ ಸಮ್ಮೇಳನ ಸಾಕ್ಷಿಯಾಯಿತು.

ಜಾಗತಿಕವಾಗಿ ಮಕ್ಕಳ ಪಾರ್ಶ್ವವಾಯು ಮಕ್ಕಳಲ್ಲಿ ಮರಣಕ್ಕೆ ಆರನೇ ಮುಂಚೂಣಿಯ ಕಾರಣವಾಗಿದೆ. ಸುಮಾರು ಐವತ್ತರಿಂದ ಅರವತ್ತು ಶೇಕಡಾ ಮಕ್ಕಳ ಪಾರ್ಶ್ವವಾಯು ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಮತ್ತು ತಡೆಯಲು ಸಾಧ್ಯ.

ಪ್ರತಿ ನಿಮಿಷ ಭಾರತದಲ್ಲಿ ಸುಮಾರು 52 ಶಿಶುಗಳು ಜನಿಸುತ್ತಿದ್ದು ಮಕ್ಕಳ ಪಾರ್ಶ್ವವಾಯುವಿನ ಸಾಮಾಜಿಕ-ಆರ್ಥಿಕ ಪರಿಣಾಮಗಳು ಅಪಾರವಾಗಿವೆ. ಭಾರತದಲ್ಲಿ ಪ್ರಕಟವಾದ ಕೆಲ ಅಧ್ಯಯನಗಳ ಪ್ರಕಾರ ಮಕ್ಕಳ ಪಾರ್ಶ್ವವಾಯು ಮಕ್ಕಳ ಆಸ್ಪತ್ರೆ ಸೇರ್ಪಡೆಯ ಶೇ.1ಕ್ಕಿಂತ ಕಡಿಮೆ ಇದೆ ಮತ್ತು ಎಲ್ಲ ಯುವ ಪಾರ್ಶ್ವವಾಯು ಪ್ರಕರಣಗಳ ಶೇಕಡಾ ಐದರಿಂದ ಹತ್ತರಷ್ಟು (40 ವರ್ಷಗಳ ವಯಸ್ಸಿಗಿಂತ ಕಿರಿಯರು) ಹೊಂದಿವೆ. ಈ ಸಂಖ್ಯೆಗಳು ಬರೀ ಅಂದಾಜು ಆಗಿದೆ ಮತ್ತು ವಾಸ್ತವ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದ್ದು ಸಾಕಷ್ಟು ಪ್ರಕರಣಗಳು ವರದಿಯಾಗುವುದಿಲ್ಲ ಮತ್ತು ಪತ್ತೆಯಾಗುವುದಿಲ್ಲ.

ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

ವಯಸ್ಕರಲ್ಲಿ ಹೆಚ್ಚು ರಕ್ತದೊತ್ತಡ, ಕರೊನರಿ ಆರ್ಟರಿ ರೋಗ, ಧೂಮಪಾನ, ಬೊಜ್ಜು, ಹೆಚ್ಚಿನ ಕೊಲೆಸ್ಟರಾಲ್ ಮತ್ತು ದುರ್ಬಲ ಜೀವನಶೈಲಿ ಇತ್ಯಾದಿ ರಿಸ್ಕ್ ಅಂಶಗಳಿರುತ್ತವೆ ಆದರೆ ಮಕ್ಕಳ ಪಾರ್ಶ್ವವಾಯುವಿಗೆ ಕಾರಣಗಳನ್ನು ಗುರುತಿಸುವುದು ಬಹಳ ಸಂಕೀರ್ಣ ಮತ್ತು ಹಲವು ಅಂಶಗಳನ್ನು ಹೊಂದಿದೆ.

ಸಮ್ಮೇಳನದಲ್ಲಿ ಉಪನ್ಯಾಸ ನೀಡುವ ತಜ್ಞರಲ್ಲಿ ಐ.ಎಸ್.ಎ ಅಧ್ಯಕ್ಷ ಡಾ.ನಿರ್ಮಲ್ ಸೂರ್ಯ, ಸಂಘಟನಾ ಅಧ್ಯಕ್ಷ ಡಾ.ವಿಕ್ರಮ್ ಹುಡೇದ್, ಡಾ.ಅರವಿಂದ್ ಶರ್ಮಾ, ಡಾ.ಮಿನಲ್ ಕೆಕಟ್ ಪುರೆ, ಡಾ.ವಿನಯನ್ ಕೆ.ಪಿ., ಡಾ.ಶೆಫಾಲಿ ಗುಲಾಟಿ ಮತ್ತು ಡಾ.ಪ್ರತಿಭಾ ಸಿಂಘಿ, ಡಾ.ಹೆಲ್ತರ್ ಫುಲ್ಲರ್ ಟನ್‌ ಮತ್ತು ಡಾ.ಮಜಾ ಸ್ಟೀನ್ಲಿನ್ ಅಂತಾರಾಷ್ಟ್ರೀಯ ತಜ್ಞರು ಪಾಲ್ಗೊಂಡಿದ್ದಾರೆ.

2ನೇ ನ್ಯಾಷನಲ್ ಪೀಡಿಯಾಟ್ರಿಕ್ ಕಾನ್ ಕ್ಲೇವ್ ಆರೋಗ್ಯ ಸೇವಾ ವೃತ್ತಿಪರರಿಗೆ ಮಕ್ಕಳ ಪಾರ್ಶ್ವವಾಯುವಿನ ರೋಗ ತಡೆ, ಆರೈಕೆ ಮತ್ತು ಚಿಕಿತ್ಸೆ ಕುರಿತು ಅವರ ಜ್ಞಾನ ಹಂಚಿಕೊಳ್ಳಲು, ಅರ್ಥಪೂರ್ಣ ಚರ್ಚೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುತ್ತದೆ. ಈ ಸಮ್ಮೇಳನವು ದೇಶಾದ್ಯಂತ ಪೂರೈಸುವ ಮಕ್ಕಳ ಆರೈಕೆಯ ಗುಣಮಟ್ಟ ಸುಧಾರಿಸುವ ಮತ್ತು ಈ ಕ್ಷೇತ್ರದ ಪ್ರಮುಖ ಸಮಸ್ಯೆಗಳನ್ನು ನಿವಾರಿಸುವ ಗುರಿ ಹೊಂದಿದೆ. ಈ ಎರಡು ದಿನಗಳ ಸಮ್ಮೇಳನದಲ್ಲಿ ಪೀಡಿಯಾಟ್ರಿಕ್ ಸ್ಟ್ರೋಕ್ ನ ನ್ಯೂರೋಇಮೇಜಿಂಗ್, ಪೀಡಿಯಾಟ್ರಿಕ್ ವ್ಯಾಸ್ಕುಲೈಟಿಸ್ ಮತ್ತು ವ್ಯಾಸ್ಕುಲೊಪಥೀಸ್, ಕಾರ್ಡಿಯೊಎಂಬೊಲಿಕ್ ಸ್ಟ್ರೋಕ್, ಹೈಪರಕ್ಯೂಟ್ ಮ್ಯಾನೇಜ್ಮೆಂಟ್ ಆಫ್ ಪೀಡಿಯಾಟ್ರಿಕ್ ಸ್ಟ್ರೋಕ್, ನ್ಯೂರೋಇಂಟರ್ವೆನ್ಷನ್ಸ್ ಇನ್ ಪೀಡಿಯಾಟ್ರಿಕ್ ಸ್ಟ್ರೋಕ್ ಮತ್ತಿತರೆ ಒಳಗೊಂಡಿವೆ.

ಇದನ್ನೂ ಓದಿ: Kannada New Movie: ಪ್ರವೀಣ್ ತೇಜ್ ಅಭಿನಯದ ʼಜಿಗರ್ ಚಿತ್ರ ಜುಲೈ 5ರಂದು ಬಿಡುಗಡೆ

ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ (ಐ.ಎಸ್.ಎ) ನಿಯಮಿತವಾಗಿ ಮಕ್ಕಳ ಪಾರ್ಶ್ವವಾಯುವಿನ ಅರಿವು ಹೆಚ್ಚಿಸುವ, ರೋಗನಿರ್ಣಯ ಸುಧಾರಿಸುವ, ಮಕ್ಕಳ ಪಾರ್ಶ್ವವಾಯು ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದು ಸುವರ್ಣ ಘಳಿಗೆಯಲ್ಲಿ ಚಿಕಿತ್ಸೆ ನೀಡುವ ಕುರಿತು ಅರಿವನ್ನು ಮೂಡಿಸುತ್ತದೆ ಮತ್ತು ಬಾಧಿತ ಮಕ್ಕಳ ಅಂಗವಿಕಲತೆ ಮಿತಿಗೊಳಿಸಲು ಕಾರ್ಯತಂತ್ರಗಳನ್ನು ವಿನೂತನ ಮಕ್ಕಳ ಪಾರ್ಶ್ವವಾಯುವಿನ ರಾಷ್ಟ್ರೀಯ ಸಮ್ಮೇಳನ ಆಯೋಜಿಸುವ ಮೂಲಕ ಕಾರ್ಯಪ್ರವೃತ್ತವಾಗಿದೆ.

Continue Reading

ಆರೋಗ್ಯ

Hyperpigmentation: ಕಾಡುವ ಈ ‘ಕಪ್ಪುಕಲೆ’ ಸಮಸ್ಯೆಗೆ ಇಲ್ಲಿದೆ ಪರಿಹಾರ

Hyperpigmentation: ಹೆಣ್ಣು ಗಂಡೆನ್ನದೆ ಕಾಡುವ ಇದು ಬಹುತೇಕರ ಸಾಮಾನ್ಯ ಸಮಸ್ಯೆ ಎಂದರೆ ಚರ್ಮದ ಮೇಲೆ ಅಲ್ಲಲ್ಲಿ ಗಾಢವಾದ ಪ್ಯಾಚ್. ಸೌಂದರ್ಯ ಸಮಸ್ಯೆಯಾಗಿರುವುದರಿಂದ ಹಲವರನ್ನು ಮಾನಸಿಕವಾಗಿಯೂ ಬಾಧಿಸುತ್ತದೆ. ಮುಖ್ಯವಾಗಿ ಹೆಣ್ಣುಮಕ್ಕಳು ತಮ್ಮ ಚರ್ಮದ ಕಾಂತಿ ಮಾಯವಾಗಿ ಮುಖದ ಮೇಲೆ ಹೀಗೆ ಕಪ್ಪನೆಯ ಪ್ಯಾಚ್‌ಗಳು ಮೂಡಿದ್ದನ್ನು ಮತ್ತೆ ಇಲ್ಲವಾಗಿಸುವುದು ಹೇಗೆ ಎಂಬ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರೆ. ಇದಕ್ಕೆ ಪರಿಹಾರ ಏನು? ಇಲ್ಲಿದೆ ಉತ್ತರ.

VISTARANEWS.COM


on

Hyperpigmentation
Koo

ತಾನು ಸುಂದರವಾಗಿ ಕಾಣಬೇಕು (Hyperpigmentation) ಎಂಬ ಇಚ್ಛೆ ಯಾರಿಗಿಲ್ಲ ಹೇಳಿ? ಆದರೆ, ಈ ಆಸೆಗೆ ತಣ್ಣೀರೆರಚುವಂತೆ ಕಾಡುವ ಚರ್ಮದ ಸಮಸ್ಯೆ ಎಂದರೆ ಅದು ಹೈಪರ್‌ ಪಿಗ್ನೆಂಟೇಶನ್‌ ಅಥವಾ ಮೆಲಾಸ್ಮಾ. ಹೆಣ್ಣು ಗಂಡೆನ್ನದೆ ಕಾಡುವ ಇದು ಬಹುತೇಕರ ಸಾಮಾನ್ಯ ಸಮಸ್ಯೆ. ಚರ್ಮದ ಮೇಲೆ ಅಲ್ಲಲ್ಲಿ ಗಾಢವಾದ ಪ್ಯಾಚ್, ಕಪ್ಪು ಕಲೆಗಳು ಮೂಡುವುದೇ ಈ ಸಮಸ್ಯೆ. ಇದು ಹೇಳಿಕೊಳ್ಳುವಂಥ ಸಮಸ್ಯೆ ಅಲ್ಲವಾದರೂ, ಚರ್ಮದ ಸೌಂದರ್ಯ ಸಮಸ್ಯೆಯಾಗಿರುವುದರಿಂದ ಹಲವರನ್ನು ಮಾನಸಿಕವಾಗಿಯೂ ಬಾಧಿಸುತ್ತದೆ. ಮುಖ್ಯವಾಗಿ ಹೆಣ್ಣುಮಕ್ಕಳು ತಮ್ಮ ಚರ್ಮದ ಕಾಂತಿ ಮಾಯವಾಗಿ ಮುಖದ ಮೇಲೆ ಹೀಗೆ ಕಪ್ಪನೆಯ ಪ್ಯಾಚ್‌ಗಳು ಮೂಡಿದ್ದನ್ನು ಮತ್ತೆ ಇಲ್ಲವಾಗಿಸುವುದು ಹೇಗೆ ಎಂಬ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರೆ. ಚರ್ಮದಲ್ಲಿ ಮೆಲನಿನ್‌ ಉತ್ಪಾದನೆ ಹೆಚ್ಚಾಗುವುದರಿಂದ ಹೀಗಾಗುತ್ತದೆ. ಸಾಮಾನ್ಯವಾಗಿ ಎಲ್ಲ ಬಗೆಯ ಚರ್ಮದ ಮಂದಿಗೂ ಈ ಸಮಸ್ಯೆ ಬರಬಹುದಾಗಿದ್ದು, ಚರ್ಮವನ್ನು ಹೆಚ್ಚು ಹೊತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಹಾಗೂ ಹಾಗೂ ಕೆಲವು ಹಾರ್ಮೋನಿನ ಸಮಸ್ಯೆಗಳಿಂದ ೩೫- ೪೦ ವಯಸ್ಸು ದಾಟುವ ಸಂದರ್ಭ ಹಲವರಲ್ಲಿ ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಗರ್ಭಿಣಿಯರಾಗಿದ್ದಾಗಲೂ ಹಾರ್ಮೋನಿನ ಏರುಪೇರಿನಿಂದ ಕಾಣಿಸಬಹುದು. ಬನ್ನಿ, ಹೈಪರ್‌ಪಿಗ್ಮೆಂಟೇಶನ್‌ ಸಮಸ್ಯೆ ಕಾಣಿಸಿಕೊಂಡಾಗ ನೀವು ನಿಮ್ಮ ಚರ್ಮಕ್ಕೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.

Dark spots, freckles,hyperpigmentation

ಏನು ಮಾಡಬೇಕು?

ನಿತ್ಯವೂ ಸನ್‌ಸ್ಕ್ರೀನ್‌ ಧರಿಸಿ

ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ದಿನವೂ ಸನ್‌ಸ್ಕ್ರೀನ್‌ ಹಚ್ಚಿ. ಇದು ಮೆಲನಿನ್‌ ಉತ್ಪಾದನೆಯನ್ನು ಹೆಚ್ಚದಂತೆ ನೋಡಿಕೊಳ್ಳುತ್ತದೆ. ಪರಿಣಾಮವಾಗಿ ಹೈಪರ್‌ಪಿಗ್ಮೆಂಟೇಶನ್‌ ಹೆಚ್ಚಾಗುವುದಿಲ್ಲ.

ಮೆದುವಾದ ಸ್ಕಿನ್‌ಕೇರ್‌ ವಸ್ತುಗಳನ್ನು ಬಳಸಿ. ನಿಮ್ಮ ಚರ್ಮದ ಮೇಲೆ ಗಾಢವಾದ, ರಾಸಾಯನಿಕಯುಕ್ತ ತೀಕ್ಷ್ಣ ಕ್ರೀಮ್‌ಗಳನ್ನು ಬಳಸಬೇಡಿ. ಹಗುರವಾದ, ಮೆದುವಾದ, ನೈಸರ್ಗಿಕ ಗುಣಗಳುಳ್ಳ ವಸ್ತುಗಳ್ನೇ ಬಳಸಿ.

ಆಂಟಿಆಕ್ಸಿಡೆಂಟ್‌ ಸೇವಿಸಿ: ನೀವು ಸೇವಿಸುವ ಆಹಾರದಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳಿರಲಿ. ಮುಖ್ಯವಾಗಿ ವಿಟಮಿನ್‌ ಸಿ ಆಕ್ಸಿಡೇಟಿವ್‌ ಒತ್ತಡದಿಂದ ಪಾರು ಮಾಡುತ್ತದೆ. ವಿಟಮಿನ್‌ ಸಿ ಯುಕ್ತ ಆಹಾರ ಸೇವಿಸಿ. ಹಾಗೂ ವಿಟಮಿನ್‌ ಸಿ ಇರುವ ಸೌಂದರ್ಯವರ್ಧಕಗಳನ್ನು ನೀವು ಬಳಸಬಹುದು.

drink water

ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯುವುದು, ಚರ್ಮಕ್ಕೆ ಸರಿಯಾದ ನೀರು ಪೂರೈಕೆ ಮಾಡುವುದು ಒಳ್ಳೆಯದು. ಇದು ನೈಸರ್ಗಿಕವಾಗಿ ಒಳಗಿನಿಂದಲೇ ಚರ್ಮವನ್ನು ರಿಪೇರಿ ಮಾಡುತ್ತದೆ.

ಚರ್ಮಕ್ಕೆ ಹೊಳಪನ್ನು ನೀಡುವ ನಿಯಾಸಿನಮೈಡ್‌, ಕೋಜಿಕ್‌ ಆಸಿಡ್‌, ಲೈಕೋರೈಸ್‌ ಇತ್ಯಾದಿಗಳಿರುವ ಸೌಂದರ್ಯವರ್ಧಕಗಳನ್ನು ಬಳಸಬಹುದು. ಇದು ಹೈಪರ್‌ಪಿಗ್ಮೆಂಟೇಶನ್‌ ಅನ್ನು ಕಡಿಮೆ ಮಾಡಿ ಚರ್ಮವನ್ನು ನಿಮ್ಮ ಹಳೆಯ ಬಣ್ಣಕ್ಕೆ ತರಲು ಸಹಾಯ ಮಾಡುತ್ತದೆ. ಕಲೆಗಳನ್ನು ಹೋಗಲಾಡಿಸುತ್ತವೆ.

ಆಗಾಗ ಎಕ್ಸ್‌ಫಾಲಿಯೇಟ್‌ ಮಾಡಿ. ಅರ್ಥಾತ್‌, ಒಳ್ಳೆಯ ನೈಸರ್ಗಿಕ ಗುಣಗಳುಳ್ಳ ಸ್ಕ್ರಬಿಂಗ್‌ ಲೋಷನ್‌ ಬಳಸಿ ವಾರಕ್ಕೆರಡು ಬಾರಿ ಸ್ಕ್ರಬ್‌ ಮಾಡಿ.

ಹೈಪರ್‌ ಪಿಗ್ಮೆಂಟೇಶನ್‌ಗೆ ಈಗ ಸಾಕಷ್ಟು ಸೌಂದರ್ಯ ಚಿಕಿತ್ಸೆಗಳೂ ಲಭ್ಯವಿವೆ. ಕೆಮಿಕಲ್‌ ಪೀಲ್‌, ಲೇಸರ್‌ ಥೆರಪಿ, ಮೈಕ್ರೋಡರ್ಮಾಬ್ರೇಶನ್‌ ಇತ್ಯಾದಿಗಳು ಈ ಸಮಸ್ಯೆಯನ್ನು ಸಾಕಷ್ಟು ಕಡಿಮೆ ಮಾಡುತ್ತವೆ. ಒಳ್ಳೆಯ ನುರಿತ ವೈದ್ಯರನ್ನು ಸಂಪರ್ಕಿಸಿ ಇವನ್ನು ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

ಇವನ್ನು ಮಾಡಬೇಡಿ

  • ಯಾವತ್ತೂ ಸನ್‌ಸ್ಕ್ರೀನ್‌ ಹಚ್ಚದೆ ಇರಬೇಡಿ. ಸನ್‌ಸ್ಕ್ರೀನ್‌ ಬಹಳ ಮುಖ್ಯ.
  • ಚರ್ಮವನ್ನು ಚಿವುಟಬೇಡಿ. ಮೊಡವೆ, ಕಜ್ಜಿಗಳಿದ್ದರೆ, ಅವುಗಳನ್ನು ಉಗುರಿನಿಂದ ಕೆರೆಯಬೇಡಿ. ಇವು ಕಲೆಯನ್ನು ಉಳಿಸಿಬಿಡುತ್ತವೆ.
  • ಆಲ್ಕೋಹಾಲ್‌, ಸಲ್ಫೇಟ್‌, ಹಾಗೂ ಗಾಢ ಪರಿಮಳಗಳುಳ್ಳ ಸೌಂದರ್ಯವರ್ಧಕ, ಕ್ರೀಂಗಳನ್ನು ಬಳಸಬೇಡಿ.
  • ನಿತ್ಯವೂ ಮಾಯ್‌ಶ್ಚರೈಸ್‌ ಮಾಡಿಕೊಳ್ಳುವುದನ್ನು ಮರೆಯಬೇಡಿ.
  • ಅತಿಯಾಗಿ ಎಕ್ಸ್‌ಫಾಲಿಯೇಟ್‌ ಮಾಡಬೇಡಿ.
  • ನಿಮ್ಮ ಚರ್ಮ ತೋರುವ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಬೇಡಿ. ಏನೇ ಅಲರ್ಜಿಯಿದ್ದರೂ ಕೂಡಲೇ ಸೂಕ್ತ ವೈದ್ಯರನ್ನು ಕಾಣಿ.
  • ಯಾವತ್ತಿಗೂ ದಿನಾಂಕ ಮುಗಿದುಹೋದ ಸೌಂದರ್ಯವರ್ಧಕಗಳನ್ನು ಬಳಸಬೇಡಿ.
Continue Reading
Advertisement
Akhilesh Yadav
ದೇಶ13 mins ago

Akhilesh Yadav: ಎಲ್ಲ ಕ್ಷೇತ್ರ ಗೆದ್ದರೂ ಇವಿಎಂಗಳನ್ನು ನಂಬಲ್ಲ ಎಂದ ಅಖಿಲೇಶ್‌ ಯಾದವ್;‌ ಮತ್ತೆ ವಿವಾದ

Viral Video
Latest16 mins ago

Viral Video: ಮೆಟ್ಟಿಲುಗಳ ಮೇಲೆ ಬೈಕ್‌ ಸವಾರಿ; ರೋಚಕ ವಿಡಿಯೊ ವೈರಲ್‌

Bike Accident
ಕರ್ನಾಟಕ18 mins ago

Bike Accident: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಸವಾರ ಸಾವು, ಇಬ್ಬರಿಗೆ ಗಾಯ

Heart Attack
ಕ್ರೀಡೆ21 mins ago

Heart Attack: ಬ್ಯಾಡ್ಮಿಂಟನ್​ ಆಡುತ್ತಿದ್ದಾಗಲೇ ಕುಸಿದು ಬಿದ್ದು  ಸಾವನ್ನಪ್ಪಿದ 17 ವರ್ಷದ ಶಟ್ಲರ್‌

Actor Kamal Haasan
Latest21 mins ago

Actor Kamal Haasan: ರಜನಿಕಾಂತ್ ಮತ್ತು ಕಮಲ್ ಹಾಸನ್ ಒಟ್ಟಾಗಿ ನಟಿಸದಿರಲು ಇದೇ ಕಾರಣ!

Google Map
ವೈರಲ್ ನ್ಯೂಸ್25 mins ago

Google Map: ಗೂಗಲ್‌ ಮ್ಯಾಪ್‌ ನಂಬಿ ಹೊರಟವರಿಗೆ ಕಾದಿತ್ತು ಬಿಗ್‌ ಶಾಕ್‌; 11ಗಂಟೆ ದಟ್ಟ ಕಾಡಿನಲ್ಲೇ ಸಿಲುಕಿದ ವಿದ್ಯಾರ್ಥಿಗಳು

karnataka cm mallikarjun kharge siddaramiah dk shivakumar
ಪ್ರಮುಖ ಸುದ್ದಿ45 mins ago

Karnataka CM: ಸಿದ್ದು- ಡಿಕೆಶಿ ಇಬ್ಬರ ಜಗಳ ಮೂರನೆಯವರಿಗೆ ಲಾಭ? ಆ ಮೂರನೆಯವರು ಇವರೇ!

Student death
ಚಿತ್ರದುರ್ಗ57 mins ago

Student Death : ಅಮ್ಮನ ಸೀರೆಯಲ್ಲಿ ನೇಣು ಬಿಗಿದುಕೊಂಡಳು ಅಪ್ರಾಪ್ತೆ

MUDA site Cm Siddaramaiah says his wife was given MUDA site during BJP regimescandal
ಕರ್ನಾಟಕ1 hour ago

MUDA site scandal: ಪತ್ನಿಗೆ ಕಾನೂನು ಪ್ರಕಾರವೇ ಮುಡಾ ಸೈಟ್‌; ಬಿಜೆಪಿ ಕಾಲದಲ್ಲೇ ನೀಡಲಾಗಿತ್ತು ಎಂದ ಸಿದ್ದರಾಮಯ್ಯ

Highest Collection Movie
ಸಿನಿಮಾ1 hour ago

Highest Collection Movie: ಅತೀ ಹೆಚ್ಚು ಗಳಿಕೆ ದಾಖಲಿಸಿದ ಭಾರತದ ಟಾಪ್‌ 10 ಸಿನಿಮಾಗಳಿವು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ22 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌