Viral Video: ಐಸ್‌ ಕ್ರೀಂನಲ್ಲಿ ಮನುಷ್ಯನ ಬೆರಳು! ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ - Vistara News

ವೈರಲ್ ನ್ಯೂಸ್

Viral Video: ಐಸ್‌ ಕ್ರೀಂನಲ್ಲಿ ಮನುಷ್ಯನ ಬೆರಳು! ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ

Viral Video: ಮಲಾಡ್‌ ನಿವಾಸಿಯಾಗಿರುವ 26 ವರ್ಷದ ಓರ್ಲೆಂ ಬ್ರೆಂಡನ್‌ ಸೆರಾವೋ ಜೂ.12ರಂದು ತನ್ನ ಸಹೋದರಿ ಆರ್ಡರ್‌ ಮಾಡಿದ್ದ ಬಟರ್‌ಸ್ಕಾಚ್‌ ಅನ್ನು ತಿನ್ನುತ್ತಿದ್ದ. ಹಾಗೆಯೇ ತಿನ್ನುತ್ತಾ ಇರುವಾಗ ಆತನ ಬಾಯಿಗೆ ಏನೋ ಸಿಕ್ಕಿಕೊಂಡ ಹಾಗೆ ಫೀಲ್‌ ಆಗುತ್ತದೆ. ಬಾಯಿಯಿಂದ ತೆಗೆದು ನೋಡಿದಾಗ ಅಲ್ಲಿ ಮನುಷ್ಯ ಬೆರಳು ಪತ್ತೆ ಆಗಿತ್ತು. ಅದನ್ನು ಕಂಡು ಹೌಹಾರಿದ ಓರ್ಲೆಂ, ತಕ್ಷಣ ಅದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದೂ ಅಲ್ಲದೇ ಐಸ್‌ಕ್ರೀಂ ಕಂಪನಿಗೂ ದೂರು ಸಲ್ಲಿಸಿದ್ದರು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಐಸ್‌ ಕ್ರೀಂ(Ice Cream) ಕೋನ್‌ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಪುಣೆಯ ಫಾರ್ಚೂನ್‌ ಕಂಪನಿಯ ಸಹಾಯಕ ಆಪರೇಟರ್‌ ಮ್ಯಾನೇಜರ್‌ ಓಂಕಾರ್‌ ಪೋಟೆಯ ಬೆರಳು ಇದಾಗಿದೆ ಎಂಬುದು ಡಿಎನ್‌ಎ(DNA) ಪರೀಕ್ಷೆಯಲ್ಲಿ(Viral Video) ಬಯಲಾಗಿದೆ. ಸಂಸ್ಥೆ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಘಟನೆ ವಿವರ:

ಮಲಾಡ್‌ ನಿವಾಸಿಯಾಗಿರುವ 26 ವರ್ಷದ ಓರ್ಲೆಂ ಬ್ರೆಂಡನ್‌ ಸೆರಾವೋ ಜೂ.12ರಂದು ತನ್ನ ಸಹೋದರಿ ಆರ್ಡರ್‌ ಮಾಡಿದ್ದ ಬಟರ್‌ಸ್ಕಾಚ್‌ ಅನ್ನು ತಿನ್ನುತ್ತಿದ್ದ. ಹಾಗೆಯೇ ತಿನ್ನುತ್ತಾ ಇರುವಾಗ ಆತನ ಬಾಯಿಗೆ ಏನೋ ಸಿಕ್ಕಿಕೊಂಡ ಹಾಗೆ ಫೀಲ್‌ ಆಗುತ್ತದೆ. ಬಾಯಿಯಿಂದ ತೆಗೆದು ನೋಡಿದಾಗ ಅಲ್ಲಿ ಮನುಷ್ಯ ಬೆರಳು ಪತ್ತೆ ಆಗಿತ್ತು. ಅದನ್ನು ಕಂಡು ಹೌಹಾರಿದ ಓರ್ಲೆಂ, ತಕ್ಷಣ ಅದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದೂ ಅಲ್ಲದೇ ಐಸ್‌ಕ್ರೀಂ ಕಂಪನಿಗೂ ದೂರು ಸಲ್ಲಿಸಿದ್ದರು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಇದಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಬೆರಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಈ ಪರೀಕ್ಷೆಯ ವರದಿಯ ಬಂದಿದ್ದು, ಪುಣೆಯ ಫಾರ್ಚೂನ್‌ ಕಂಪನಿಯ ಸಹಾಯಕ ಆಪರೇಟರ್‌ ಮ್ಯಾನೇಜರ್‌ ಓಂಕಾರ್‌ ಪೋಟೆಯ ಬೆರಳು ಇದಾಗಿದೆ ಎಂಬುದು ಡಿಎನ್‌ಎ(DNA) ಪರೀಕ್ಷೆಯಲ್ಲಿ ಬಯಲಾಗಿದೆ.

ಮಲಾಡ್ ಪಿಎಸ್‌ನ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಅದಾನೆ ಈ ಬಗ್ಗೆ ಮಾಹಿತಿ ನೀಡಿದ್ದು, ಐಸ್‌ಕ್ರೀಮ್‌ನಲ್ಲಿ ಪತ್ತೆಯಾದ ಬೆರಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ. ಶಂಕಿತ (ಕಂಪನಿಯ ಸಹಾಯಕ ನಿರ್ವಾಹಕ ವ್ಯವಸ್ಥಾಪಕ) ಡಿಎನ್‌ಎ ಸಹ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ. ಎರಡೂ ಡಿಎನ್‌ಎ ಮಾದರಿಗಳು ಹೊಂದಾಣಿಕೆಯಾಗುತ್ತಿವೆ. ಈಗ , ಈ ವಿಷಯದಲ್ಲಿ ಯಾರ ನಿರ್ಲಕ್ಷ್ಯ ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ಐಪಿಸಿ ಸೆಕ್ಷನ್ 272, 273, ಮತ್ತು 336 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: Viral Video: ಹಸು, ನಾಯಿ, ಮೇಕೆ ಮೇಲೆ ಕಿಡಿಗೇಡಿಯಿಂದ ಹೇಯಕೃತ್ಯ; ವಿಡಿಯೋ ವೈರಲ್‌-ಸಿಎಂ ಯೋಗಿಗೆ ಪತ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಲೈವ್‌ ವರದಿ ಮಾಡುತ್ತಿದ್ದಾಗ ಪಾಕ್ ಟಿವಿ ವರದಿಗಾರ್ತಿ ಮೇಲೆ ಗೂಳಿ ದಾಳಿ!

Viral Video: ಪಾಕಿಸ್ತಾನದಲ್ಲಿ ಟಿವಿ ವರದಿಗಾರ್ತಿಯೊಬ್ಬಳು ಗೂಳಿ ದಾಳಿಗೆ ಒಳಗಾದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವರದಿಗಾರ್ತಿ ಗೂಳಿ ಮಾಲೀಕರ ಬಳಿ ಅವುಗಳ ದರಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಳು. ಆಗ ಹಿಂದಿನಿಂದ ಬಂದ ಗೂಳಿಯೊಂದು ಆಕೆಯನ್ನು ಗುದ್ದಿದೆ. ಇದರಿಂದ ಆಕೆ ಕಿರುಚುತ್ತಾ ಓಡಿದ್ದಾಳೆ. ಅವಳ ಕೈಯಲ್ಲಿದ್ದ ಮೈಕ್ ಗೂಳಿಯ ಕೊಂಬಿನಲ್ಲಿ ಸಿಲುಕಿಕೊಂಡಿದ್ದು, ನಂತರ ಅದನ್ನು ಒಬ್ಬ ವ್ಯಕ್ತಿಯೊಬ್ಬರು ತೆಗೆದು ಕೊಟ್ಟಿದ್ದಾರೆ!

VISTARANEWS.COM


on

Viral Video
Koo

ಇತ್ತೀಚಿನ ದಿನಗಳಲ್ಲಿ ಗೂಳಿಗಳು, ಹಸುಗಳು ಮುಂತಾದ ಪ್ರಾಣಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡುವಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಭಾರತದಲ್ಲಿ ಎಮ್ಮೆ ಮತ್ತು ಹಸುವಿನ ದಾಳಿಗೆ ಮಹಿಳೆಯರು ಗಾಯಗೊಂಡಿದ್ದರು. ಇದೀಗ ಪಾಕಿಸ್ತಾನದಲ್ಲಿ ಟಿವಿ ವರದಿಗಾರ್ತಿಯೊಬ್ಬಳು ಗೂಳಿ ದಾಳಿಗೆ ಒಳಗಾಗಿದ್ದಾಳೆ. ಅದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವಿಡಿಯೊದಲ್ಲಿ ಪಾಕಿಸ್ತಾನದ ಟಿವಿ ವರದಿಗಾರ್ತಿ ಲೈವ್ ಪ್ರಸಾರದ ವೇಳೆ ಗೂಳಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹಾಗಾಗಿ ಅಲ್ಲಿದ್ದ ಗೂಳಿ ಮಾಲೀಕರ ಬಳಿ ಅವುಗಳ ದರಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಳು. ಆಗ ಹಿಂದಿನಿಂದ ಬಂದ ಗೂಳಿಯೊಂದು ಆಕೆಯನ್ನು ಗುದ್ದಿದೆ. ಇದರಿಂದ ಆಕೆ ಕಿರುಚುತ್ತಾ ಓಡಿದ್ದಾಳೆ. ಅವಳ ಕೈಯಲ್ಲಿದ್ದ ಮೈಕ್ ಗೂಳಿಯ ಕೊಂಬಿನಲ್ಲಿ ಸಿಲುಕಿಕೊಂಡಿದ್ದು, ನಂತರ ಅದನ್ನು ಒಬ್ಬ ವ್ಯಕ್ತಿಯೊಬ್ಬರು ತೆಗೆದು ಕೊಟ್ಟಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ಇದಕ್ಕೆ 2,89,000ಕ್ಕೂ ಹೆಚ್ಚು ವೀವ್ಸ್ ಬಂದಿದೆ. ಈ ವೀಡಿಯೊ ಬಗ್ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅನಿರೀಕ್ಷಿತ ಘಟನೆಯಾಗಿದ್ದು, ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ವರದಿಗಾರ್ತಿ ಸಂಯಮ ಕಾಪಾಡಿಕೊಂಡಿದ್ದಕ್ಕೆ ನೆಟ್ಟಿಜನ್ ಒಬ್ಬರು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಇನ್ನೊಬ್ಬರು ಇಷ್ಟಾದರೂ ಕ್ಯಾಮೆರಾ ಮ್ಯಾನ್ ಸಹಾಯಕ್ಕೆ ಬರಲಿಲ್ಲವೆಂದು ಆತನ ಬಗ್ಗೆ ಟೀಕೆ ಮಾಡಿದ್ದಾರೆ. ಈ ವಿಡಿಯೊದಲ್ಲಿ ಮಾಹಿತಿ ಸಿಗುತ್ತದೆ ಎಂದು ನೋಡಿದರೆ ಅಲ್ಲಿ ದೊಡ್ಡ ತಿರುವು ಎದುರಾಗಿದೆ ಎಂದು ಇನ್ನೊಬ್ಬ ನೆಟ್ಟಿಜನ್ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಗಾಯಗೊಂಡು ರಸ್ತೆಯಲ್ಲಿ ಪರದಾಡುತ್ತಿದ್ದ ಜೈನ ಸನ್ಯಾಸಿಗಳಿಗೆ ನೆರವಾದ ಮಹಾರಾಷ್ಟ್ರ ಸಿಎಂ

ಗೂಳಿಗಳ ಆಕ್ರಮಣ ಪ್ರಕರಣ ಇತ್ತೀಚೆಗೆ ಕೆಲವು ಕಡೆ ಕಂಡುಬರುತ್ತಿದೆ. ಈ ಹಿಂದೆ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಗೂಳಿಯೊಂದು ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಾಲಕ್ಷ್ಮಿ ಲೇಔಟ್ ಈಜುಕೊಳ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಪ್ರದರ್ಶನಕ್ಕಾಗಿ ಅಲಂಕರಿಸಿದ್ದ ಗೂಳಿ ಬೈಕ್ ಸವಾರನ ಮೇಲೆ ದಾಳಿ ಮಾಡಿದೆ. ಗೂಳಿಯ ಹೊಡೆತದಿಂದ ವ್ಯಕ್ತಿ ಟ್ರಕ್‌ನ ಚಕ್ರಗಳ ಅಡಿಯಲ್ಲಿ ಬಿದ್ದಿದ್ದರು. ಅದೃಷ್ಟವಶಾತ್, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದರು. ಹಾಗೇ ಈ ಹಿಂದೆ ಜೂನ್ 16ರಂದು ಗುಜರಾತ್ ನ ಮೊದಸಾದಲ್ಲಿ ಬೈಕ್ ನಲ್ಲಿ ಪತಿಯ ಜೊತೆ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಬೀಡಾಡಿ ಹಸುವೊಂದು ಬೆನ್ನಟ್ಟಿ ಗುದ್ದಿತ್ತು. ಆಕೆಗೆ ಗಂಭೀರ ಗಾಯಗಳಾಗಿದ್ದವು.

Continue Reading

ವೈರಲ್ ನ್ಯೂಸ್

Viral News: ಒಂದು ತಿಂಗಳಲ್ಲಿ ಐದು ಬಾರಿ ಹಾವು ಕಡಿತ; ಪವಾಡ ರೀತಿಯಲ್ಲಿ ವ್ಯಕ್ತಿ ಬಜಾವ್‌!

Viral News: ಜೂನ್ 2ರಂದು ಮೊದಲ ಬಾರಿ ಮನೆಯಲ್ಲಿ ಮಲಗಿದ್ದಾಗ ವಿಕಾಸ್ ದುಬೆ ಅವರಿಗೆ ಹಾವು ಕಚ್ಚಿತ್ತು. ಹಾವು ಕಚ್ಚಿದ ತಕ್ಷಣ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ವಿಕಾಸ್ ದುಬೆ ಮನೆಗೆ ಹಿಂದಿರುಗಿದ್ದರು. ನಂತರ ಜೂನ್ 10ರಂದು ಎರಡನೇ ಬಾರಿ ಹಾವು ಕಚ್ಚಿದೆ. ಕೂಡಲೇ ಪೋಷಕರು ಅದೇ ಆಸ್ಪತ್ರೆಗೆ ದಾಖಲಿಸಿದ್ದರು. ಗುಣಮುಖರಾಗಿ ಬಂದ ಬಳಿಕ ಮನೆಗೆ ಬಂದ ವಿಕಾಸ್ ದುಬೆ ಬಹಳ ಭಯಭೀತರಾಗಿದ್ದರು.

VISTARANEWS.COM


on

Snake Bites
Koo

ಉತ್ತರಪ್ರದೇಶ: ವ್ಯಕ್ತಿಯೊಬ್ಬನಿಗೆ ಒಂದು ತಿಂಗಳಲ್ಲಿ ಐದು ಬಾರಿ ಹಾವು ಕಚ್ಚಿದ್ದು(Snake Bite), ಪವಾಡವೆನ್ನುವಂತೆ ಆತ ಅಪಾಯದಿಂದ ಪಾರಾಗಿರುವ ಘಟನೆ(Viral News) ಉತ್ತರಪ್ರದೇಶದಲ್ಲಿ ನಡೆದಿದೆ. ಫತ್ಹೇಪುರ ನಿವಾಸಿ ವಿಕಾಸ್ ದುಬೆ ಎಂಬವರಿಗೆ 45 ದಿನದಲ್ಲಿ 5 ಬಾರಿ ಹಾವು ಕಚ್ಚಿದೆ. ಹಾವು ಕಚ್ಚಿದ ಬಳಿಕ ಶೀಘ್ರದಲ್ಲಿಯೇ ಚಿಕಿತ್ಸೆ ಪಡೆದುಕೊಂಡ ಪರಿಣಾಮ ವಿಕಾಸ್ ದುಬೆ ಜೀವ ಉಳಿದಿದೆ. ಇನ್ನು ಈ ರೀತಿಯಾಗಿ ಒಬ್ಬನ್ನೇ ವ್ಯಕ್ತಿ ಪದೇ ಪದೆ ಹಾವು ಕಡಿತಕ್ಕೆ ಒಳಗಾಗುತ್ತಿರುವ ಸಂಗತಿ ಕೇಳಿ ವೈದ್ಯರು ಮಾತ್ರವಲ್ಲದೇ ಸ್ಥಳೀಯರು ಶಾಕ್‌ ಆಗಿದ್ದಾರೆ.

ಜೂನ್ 2ರಂದು ಮೊದಲ ಬಾರಿ ಮನೆಯಲ್ಲಿ ಮಲಗಿದ್ದಾಗ ವಿಕಾಸ್ ದುಬೆ ಅವರಿಗೆ ಹಾವು ಕಚ್ಚಿತ್ತು. ಹಾವು ಕಚ್ಚಿದ ತಕ್ಷಣ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ವಿಕಾಸ್ ದುಬೆ ಮನೆಗೆ ಹಿಂದಿರುಗಿದ್ದರು. ನಂತರ ಜೂನ್ 10ರಂದು ಎರಡನೇ ಬಾರಿ ಹಾವು ಕಚ್ಚಿದೆ. ಕೂಡಲೇ ಪೋಷಕರು ಅದೇ ಆಸ್ಪತ್ರೆಗೆ ದಾಖಲಿಸಿದ್ದರು. ಗುಣಮುಖರಾಗಿ ಬಂದ ಬಳಿಕ ಮನೆಗೆ ಬಂದ ವಿಕಾಸ್ ದುಬೆ ಬಹಳ ಭಯಭೀತರಾಗಿದ್ದರು. ಅದೂ ಅಲ್ಲದೇ ಒಬ್ಬರೇ ಇರುವುದಕ್ಕೆ ಭಯ ಬಿದ್ದು ವಿಕಾಸ್ ಸ್ವಂತ ಮನೆ ತೊರೆದು ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಅಲ್ಲಿಯೂ ವಿಷಕಾರಿ ಹಾವು ಕಚ್ಚಿದೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ವಿಕಾಸ್ ದುಬೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾವು ಕಚ್ಚುವ ಭಯದಿಂದ ಸದಾ ಜನರೊಂದಿಗೆ ವಿಕಾಸ್ ಇರಿಸಲು ಆರಂಭಿಸಿದರು. ರಾತ್ರಿ ಮಲಗುವ ಸ್ಥಳದಲ್ಲಿ ಹಾವು ಬರದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಇಷ್ಟೆಲ್ಲಾ ವ್ಯವಸ್ಥೆ ಮಾಡಿಕೊಂಡರೂ ಜೂನ್ 17ರಂದು ಮನೆಯಲ್ಲಿಯೇ ಮೂರನೇ ಬಾರಿ ಹಾವು ಕಚ್ಚಿದೆ. ನಂತರ ಚಿಕಿತ್ಸೆ ಪಡೆದು ಹಿಂದಿರುಗಿ ಬರುತ್ತಿದ್ದಂತೆ ನಾಲ್ಕನೇ ಬಾರಿ ಹಾವು ಕಚ್ಚಿದೆ. ಮತ್ತೆ ಚಿಕಿತ್ಸೆ ವಿಕಾಸ್ ದುಬೆ ಅವರಿಗೆ ಚಿಕಿತ್ಸೆ ಕೊಡಿಸಲಾಯ್ತು. ನಂತರ ಗ್ರಾಮದ ಹಿರಿಯರು ಸಲಹೆ ಮೇರೆಗೆ ವಿಕಾಸ್ ದುಬೆ ಅವರನ್ನು ರಾಧಾ ನಗರದಲ್ಲಿರುವ ಅವರ ಚಿಕ್ಕಮ್ಮನ ಮನೆಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿಯೂ ವಿಕಾಸ್‌ ದುಬೆಗೆ ಐದನೇ ಬಾರಿ ಹಾವು ಕಚ್ಚಿದೆ.

ಇನ್ನು ಘಟನೆ ಬಗ್ಗೆ ವೈದ್ಯರು ಪ್ರತಿಕ್ರಿಯಿಸಿದ್ದು, ಇದೊಂದು ವಿಚಿತ್ರ ಘಟನೆಯಾಗಿದೆ. ಮೂರನೇ ಬಾರಿ ಹಾವು ಕಚ್ಚಿದಾಗ ಊರು ತೊರೆಯುವಂತೆ ಸಲಹೆ ನೀಡಿದ್ದೆ. ಆದರೂ ಮತ್ತೆ ಹಾವು ಕಚ್ಚಿದೆ. ಸದ್ಯ ವಿಕಾಸ್ ದುಬೆ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ಇಂತಹದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿತ್ತು. ಹಾವಿನ ಬಳಿ ಕಚ್ಚಿಸಿಕೊಂಡು ಹಾಗೋ-ಹೀಗೋ ಬದುಕಿ ಉಳಿದಿದ್ದವನ ಜೀವ ಹಾವಿನಿಂದಲೇ ಹೋಗಿದೆ. ಹೀಗೊಂದು ವಿಚಿತ್ರ ಘಟನೆ ರಾಜಸ್ಥಾನದ ಜೋಧ್​ಪುರದ (Rajasthan News) ಮೆಹ್ರಾನ್ ಗಢ್​​ನಲ್ಲಿ ನಡೆದಿತ್ತು. 44 ವರ್ಷದ ಜಸಬ್​ ಖಾನ್​ ಎಂಬುವರಿಗೆ ಒಂದು ಹಾವು ಕಚ್ಚಿತ್ತು. ಕಚ್ಚಿದ್ದು ವಿಷಕಾರಿ ವೈಪರ್ ಹಾವು. ಹೀಗಾಗಿ ಜಸಬ್​ ಖಾನ್​ ಕೂಡಲೇ ಪೋಖ್ರಾನ್​ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.

ಆದರೆ ಅದಾಗಿ ಒಂದೇ ವಾರದಲ್ಲಿ ಜಸಬ್ ಖಾನ್ ಪ್ರಾಣ ಹಾವಿನಿಂದಲೇ ಹೋಗಿದೆ. ಜೂ.26ರಂದು ಮತ್ತೆ ಅವರಿಗೆ ಮನೆ ಬಳಿಯೇ ಹಾವು ಕಡಿದಿದೆ. ಜೂ.20ರಂದು ಕಚ್ಚಿದ ಹಾವೇ ಕಚ್ಚಿತಾ? ಅಥವಾ ಬೇರೆ ಹಾವು ಕಚ್ಚಿದ್ದಾ? ಎಂಬುದು ಗೊತ್ತಿಲ್ಲ. ಆದರೆ ಎರಡನೇ ಸಲವೂ ಕೂಡ ಕಡಿದಿದ್ದು ವಿಷಕಾರಿ ವೈಪರ್​. ಮೊದಲ ಸಲ ಹಾವಿನ ಬಳಿ ಕಚ್ಚಿಸಿಕೊಂಡು ಬದುಕುಳಿದಿದ್ದ ಜಸಬ್ ಈ ಸಲ ಬದುಕಲಿಲ್ಲ. ಜೋಧಪುರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಜಸಬ್​ ಮೃತಪಟ್ಟಿದ್ದಾರೆ.

ಇದನ್ನೂ ಓದಿ:Uttar Pradesh stampede : ಉತ್ತರ ಪ್ರದೇಶದ ಹತ್ರಾಸ್​​ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ; 27 ಕ್ಕೂ ಹೆಚ್ಚು ಸಾವು

Continue Reading

Latest

Eknath Shinde: ಗಾಯಗೊಂಡು ರಸ್ತೆಯಲ್ಲಿ ಪರದಾಡುತ್ತಿದ್ದ ಜೈನ ಸನ್ಯಾಸಿಗಳಿಗೆ ನೆರವಾದ ಮಹಾರಾಷ್ಟ್ರ ಸಿಎಂ

Eknath Shinde: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನಕ್ಕಾಗಿ ಥಾಣೆಯಿಂದ ವಿಧಾನಸಭಾ ಭವನಕ್ಕೆ ಹೋಗುತ್ತಿದ್ದಾಗ ಘಾಟ್ಕೋಪರ್‌ನ ರಮಾಬಾಯಿ ಅಂಬೇಡ್ಕರ್ ನಗರದ ಬಳಿ ಇಬ್ಬರು ಜೈನ ಸಾಧ್ವಿಗಳು ಸಂಕಷ್ಟದ ಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ತಮ್ಮ ವಾಹನಗಳನ್ನು ನಿಲ್ಲಿಸಲು ಹೇಳಿ ವಾಹನದಿಂದ ಇಳಿದು ಇಬ್ಬರು ಜೈನ ಮಹಿಳಾ ಸನ್ಯಾಸಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.

VISTARANEWS.COM


on

Viral Video
Koo

ಮುಂಬೈ: ಯಾರಾದರೂ ಸಂಕಷ್ಟದಲ್ಲಿದ್ದಾಗ ಕೆಲವರು ಕಂಡೂ ಕಾಣದಂತೆ ಹೋಗುತ್ತಿರುತ್ತಾರೆ. ಅಂತಹ ಘಟನೆಗಳನ್ನು ನಾವು ಹಲವಾರು ಕಡೆಗಳಲ್ಲಿ ಕಂಡಿರುತ್ತೇವೆ. ಅಲ್ಲಿ ಸಹಾಯಕ್ಕೆ ಬರುವವರು ಒಬ್ಬರು-ಇಬ್ಬರು ಮಾತ್ರ. ಉಳಿದವರು ನಮಗೇಕೆ ಪರರ ಚಿಂತೆ ಎಂದು ತಮ್ಮ ಪಾಡಿಗೆ ತಾವು ಹೋಗುತ್ತಿರುತ್ತಾರೆ. ಸಾಮಾನ್ಯ ಜನರೇ ಈ ರೀತಿ ವರ್ತಿಸುವಾಗ ಇನ್ನೂ ದೊಡ್ಡ ಮನುಷ್ಯರೆನಿಸಿಕೊಂಡರು ಅಲ್ಲಿ ಏನಾಗಿದೆ ಎಂದು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ರಸ್ತೆಯಲ್ಲಿ ಸಂಕಷ್ಟಕ್ಕೀಡಾದ ಇಬ್ಬರು ವ್ಯಕ್ತಿಗಳ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ (Viral Video) ಆಗಿದೆ.

ಹೌದು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನಕ್ಕಾಗಿ ಥಾಣೆಯಿಂದ ವಿಧಾನಸಭಾ ಭವನಕ್ಕೆ ಹೋಗುತ್ತಿದ್ದಾಗ ಘಾಟ್ಕೋಪರ್‌ನ ರಮಾಬಾಯಿ ಅಂಬೇಡ್ಕರ್ ನಗರದ ಬಳಿ ಇಬ್ಬರು ಜೈನ ಸಾಧ್ವಿಗಳು (ಜೈನ ಮಹಿಳಾ ಸನ್ಯಾಸಿನಿಗಳು) ಸಂಕಷ್ಟದ ಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ತಮ್ಮ ವಾಹನಗಳನ್ನು ನಿಲ್ಲಿಸಲು ಹೇಳಿ ವಾಹನದಿಂದ ಇಳಿದು ಇಬ್ಬರು ಜೈನ ಮಹಿಳಾ ಸನ್ಯಾಸಿಗಳಿಗೆ ಸಹಾಯ ಮಾಡಲು ಬಂದಿದ್ದಾರೆ.

ಇಬ್ಬರು ಜೈನ ಮಹಿಳಾ ಸನ್ಯಾಸಿಗಳಿಗೆ ಘಾಟ್ಕೋಪರ್‌ನ ರಮಾಬಾಯಿ ಅಂಬೇಡ್ಕರ್ ನಗರದ ಬಳಿ ಅಪಘಾತವಾಗಿದ್ದು, ಅವರನ್ನು ಕಂಡು ಅವರ ಪರಿಸ್ಥಿತಿ ತಿಳಿದ ಸಿಎಂ ತಕ್ಷಣ ಗಾಯಗೊಂಡ ಮಹಿಳಾ ಸನ್ಯಾಸಿಗಳನ್ನು ಆಸ್ಪತ್ರೆಗೆ ಸಾಗಿಸಲು ತಮ್ಮ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಆ್ಯಂಬುಲೆನ್ಸ್‌ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ವಿಡಿಯೊವನ್ನು ಸಿಎಂ ಏಕನಾಥ್ ಶಿಂಧೆ ಅವರ ಅಧಿಕೃತ ಹ್ಯಾಂಡಲ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು ವೈರಲ್ ಆಗಿದೆ. ಸಿಎಂ ಮಹಾನ್ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೆಟ್ಟಿಲುಗಳ ಮೇಲೆ ಬೈಕ್‌ ಸವಾರಿ; ರೋಚಕ ವಿಡಿಯೊ ವೈರಲ್‌

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ಸಹಾಯ ಮಾಡಲು ಮುಂದಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಮುಂಬೈ ಮತ್ತು ಥಾಣೆಯಲ್ಲಿ ಲೋಕಸಭಾ ಚುನಾವಣೆಯ ಮಧ್ಯೆ, ಆಟೋ ರಿಕ್ಷಾ ಅಪಘಾತಕ್ಕೀಡಾದ ಮಹಿಳೆಗೆ ಸಿಎಂ ಶಿಂಧೆ ಸಹಾಯ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು.

ಮಹಾರಾಷ್ಟ್ರ ಸಿಎಂ ತಮ್ಮ ಕಾರಿನಿಂದ ಇಳಿದು, ಮಹಿಳೆಗೆ ಮತ್ತೊಂದು ವಾಹನದಲ್ಲಿ ಆಸ್ಪತ್ರೆಗೆ ಹೋಗಲು ಸಹಾಯ ಮಾಡಿದ್ದರು ಮತ್ತು ಅವಳ ಗಾಯಗಳಿಗೆ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

Continue Reading

Latest

Viral News: ಇಬ್ಬರು ಪತ್ನಿಯರು ಸೇರಿ ಗಂಡನಿಗೆ ಮೂರನೇ ಮದುವೆ ಮಾಡಿಸಿದರು! ವೆಡ್ಡಿಂಗ್‌ ಕಾರ್ಡ್‌ ನೋಡಿ!

Viral News: ಒಂದು ಮದುವೆಯಾಗಿ ಸರಿಯಾಗಿ ಸಂಸಾರ ಮಾಡದೇ ಡಿವೋರ್ಸ್ ತೆಗೆದುಕೊಳ್ಳುತ್ತಿರುವ ಈ ಕಾಲದಲ್ಲಿ ಆಂಧ್ರಪ್ರದೇಶದ ಈ ವ್ಯಕ್ತಿಯೊಬ್ಬ ಮಗುವಿಗಾಗಿ ಮೂರನೇ ಮದುವೆಯಾಗಿದ್ದಾನೆ. ಅಂದಹಾಗೇ ಇವನ ಮದುವೆಗೆ ಮೊದಲ ಇಬ್ಬರೂ ಹೆಂಡತಿಯರು ಒಪ್ಪಿಗೆ ಸೂಚಿಸಿರುವುದು ಇನ್ನಷ್ಟು ಆಚ್ಚರಿ ಮೂಡಿಸಿದೆ. ಮೊದಲ ಪತ್ನಿ ಪಾರ್ವತಮ್ಮ ಗರ್ಭಧರಿಸಲು ಸಾಧ್ಯವಾಗದಿದ್ದಾಗ ಪಂಡನಾ ಎರಡನೇ ಬಾರಿಗೆ ವಿವಾಹವಾಗಿದ್ದಾನೆ. 2007ರಲ್ಲಿ, ಎರಡನೇ ಪತ್ನಿ ಅಪ್ಪಲಮ್ಮನಿಂದ ಮಗು ಪಡೆದ ಬಳಿಕ ಮತ್ತೊಂದು ಮಗು ಪಡೆಯುವ ಆಸೆ ಆಗಿದೆ. ಗಂಡನ ಆಸೆಗೆ ಹೆಂಡತಿಯರಿಬ್ಬರೂ ಒಪ್ಪಿ ಮತ್ತೊಂದು ಮದುವೆಯಾಗಲು ಹೇಳಿದ್ದರು.

VISTARANEWS.COM


on

Viral News
Koo

ಸಾಮಾನ್ಯವಾಗಿ ಮಹಿಳೆಯರು ತನ್ನ ಗಂಡ ಇನ್ನೊಬ್ಬ ಮಹಿಳೆಯನ್ನು ನೋಡಿದರೆ ಸಾಕು ಕೆಂಡಮಂಡಲರಾಗುತ್ತಾರೆ. ಅಂತಹದರಲ್ಲಿ ಇಲ್ಲೊಬ್ಬ ವ್ಯಕ್ತಿ ಈಗಾಗಲೇ ಎರಡು ಮದುವೆಯಾಗಿದ್ದರೂ ಕೂಡ ಮೂರನೇ ಬಾರಿಗೆ ಮದುವೆಯಾಗಲು ಆತನ ಪತ್ನಿಯರು ಒಪ್ಪಿಗೆ ನೀಡಿದ್ದಾರಂತೆ. ಹಾಗಾಗಿ ಆತನ ಮದುವೆ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral News ) ಆಗಿದೆ.

ವ್ಯಕ್ತಿಯ ಹೆಸರು ಪಂಡನಾ ಎಂಬುದಾಗಿ ತಿಳಿದುಬಂದಿದೆ. ಮೊದಲ ಪತ್ನಿ ಪಾರ್ವತಮ್ಮ ಗರ್ಭಧರಿಸಲು ಸಾಧ್ಯವಾಗದಿದ್ದಾಗ ಪಂಡನಾ ಎರಡನೇ ಬಾರಿಗೆ ವಿವಾಹವಾಗಿದ್ದಾನೆ. 2007ರಲ್ಲಿ, ಎರಡನೇ ಪತ್ನಿ ಅಪ್ಪಲಮ್ಮನಿಂದ ಮಗು ಪಡೆದ ಬಳಿಕ ಮತ್ತೊಂದು ಮಗು ಪಡೆಯುವ ಆಸೆ ಆಗಿದೆ. ಗಂಡನ ಆಸೆಗೆ ಹೆಂಡತಿಯರಿಬ್ಬರೂ ಒಪ್ಪಿ ಮತ್ತೊಂದು ಮದುವೆಯಾಗಲು ಹೇಳಿದ್ದಾರೆ. ಹಾಗಾಗಿ ಆತ ಜೂನ್ 25, 2024ರಂದು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೆಡಬಯಾಲು ಮಂಡಲದಲ್ಲಿ ಲವ್ಯ ಎಂಬಾಕೆಯನ್ನು ವಿವಾಹವಾಗಿದ್ದಾನೆ.

ಕೆಲವು ಬುಡಕಟ್ಟು ಜನಾಂಗಗಳಲ್ಲಿ ಎರಡು ಬಾರಿ ಮದುವೆಯಾಗುವುದು ಸಾಮಾನ್ಯವಾಗಿದೆ. ಆದರೆ ಮೂರನೇ ಮದುವೆ ಅಪರೂಪ ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಗಮನ ಸೆಳೆದಿದೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದು, ಮತ್ತೊಂದು ಮಗುವನ್ನು ಬಯಸಿದರೆ, ನಾಲ್ಕನೇ ಬಾರಿಗೆ ಮದುವೆಯಾಗುತ್ತಾನಾ ಎಂದು ಹಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:  ಮೆಟ್ಟಿಲುಗಳ ಮೇಲೆ ಬೈಕ್‌ ಸವಾರಿ; ರೋಚಕ ವಿಡಿಯೊ ವೈರಲ್‌

ಈ ಹಿಂದೆ ಯೂಟ್ಯೂಬರ್ ಅರ್ಮಾನ್ ಮಲಿಕ್ ಕೂಡ ಎರಡು ಬಾರಿ ಮದುವೆಯಾಗಿದ್ದರು. ಇವರು ತನ್ನ ಇಬ್ಬರು ಹೆಂಡತಿಯರೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದಾರೆ. ಪಾಯಲ್ ಅವರನ್ನು ಪ್ರೀತಿಸಿದ ಮಲಿಕ್ ಅವರನ್ನು ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು. ನಂತರ, ಅವರ ಹಿರಿಯ ಮಗನ ಹುಟ್ಟುಹಬ್ಬದ ಸಮಾರಂಭಕ್ಕೆ ಆಗಮಿಸಿದ ಪಾಯಲ್ ಅವರ ಸ್ನೇಹಿತೆ ಕೃತಿಕಾ ಅವರನ್ನು ಪ್ರೀತಿಸಿ ವಿವಾಹವಾದರು. ಅವರಿಗೆ ಒಬ್ಬ ಮಗ ಇದ್ದಾನೆ. ಬಹುಪತ್ನಿತ್ವವನ್ನು ಉತ್ತೇಜಿಸಿದ್ದಕ್ಕಾಗಿ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಟೀಕೆಗಳು ಕೇಳಿಬಂದಿದ್ದವು. ಅಲ್ಲದೇ ಇತ್ತೀಚೆಗೆ, ಅರ್ಮಾನ್ ಮಲಿಕ್ ತನ್ನ ಇಬ್ಬರು ಹೆಂಡತಿಯರೊಂದಿಗೆ ಬಿಗ್‌ಬಾಸ್ ಒಟಿಟಿ 3 ಮನೆಗೆ ಪ್ರವೇಶಿಸಿ ಸುದ್ದಿ ಮಾಡಿದ್ದರು.

Continue Reading
Advertisement
Viral Video
Latest7 mins ago

Viral Video: ಲೈವ್‌ ವರದಿ ಮಾಡುತ್ತಿದ್ದಾಗ ಪಾಕ್ ಟಿವಿ ವರದಿಗಾರ್ತಿ ಮೇಲೆ ಗೂಳಿ ದಾಳಿ!

Hemant Nimbalkar
ಪ್ರಮುಖ ಸುದ್ದಿ11 mins ago

Hemant Nimbalkar: ವಾರ್ತಾ ಇಲಾಖೆ ಆಯುಕ್ತರಾಗಿ ಐಪಿಎಸ್​ ಅಧಿಕಾರಿ ಹೇಮಂತ್ ನಿಂಬಾಳ್ಕರ್ ನೇಮಕ

Kolar News
ಕರ್ನಾಟಕ11 mins ago

Kolar News: ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಯುವಕನ ಬಂಧನ

Tamanna Bhatia
Latest19 mins ago

Tamanna Bhatia: ‘ಜೀ ಕರ್ದಾ’ದಲ್ಲಿ ತಮನ್ನಾ ಭಾಟಿಯಾ ಪೂರ್ತಿ ಟಾಪ್‌ಲೆಸ್‌! ವಿಡಿಯೊ ಇದೆ

bengaluru student Vaishnavi M who won the prestigious award from IIT Bombay
ಬೆಂಗಳೂರು30 mins ago

Bengaluru News: ಬೆಂಗಳೂರಿನ ವಿದ್ಯಾರ್ಥಿನಿಗೆ ಐಐಟಿ ಬಾಂಬೆಯ ಪ್ರತಿಷ್ಠಿತ ಪ್ರಶಸ್ತಿ

IPL 2025
ಪ್ರಮುಖ ಸುದ್ದಿ35 mins ago

IPL 2025 : ಐಪಿಎಲ್​ ತಂಡಗಳಲ್ಲಿ ಉಳಿಸಿಕೊಳ್ಳುವ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ

Dharma Keerthiraj starrer production No 1 movie Muhurta
ಕರ್ನಾಟಕ37 mins ago

Kannada New Movie: ಗೋಪಿನಾಥ ಬೆಟ್ಟದಲ್ಲಿ ನಡೆದ ಧರ್ಮ ಕೀರ್ತಿರಾಜ್ ಅಭಿನಯದ ʼಪ್ರೊಡಕ್ಷನ್ ನಂ 1ʼ ಚಿತ್ರದ ಮುಹೂರ್ತ

Anjanadri Temple Hundi Count
ಕರ್ನಾಟಕ40 mins ago

Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು

Pancreatitis
ಆರೋಗ್ಯ42 mins ago

Pancreatitis: ಏನಿದು ಪ್ಯಾಂಕ್ರಿಯಾಟೈಟಿಸ್‌ನಿಂದ ಉಂಟಾಗುವ ಉರಿಯೂತ? ಇದಕ್ಕೇನು ಪರಿಹಾರ?

MLA Shivaram Hebbar spoke in Taluk level janaspandana programme yallapur
ಉತ್ತರ ಕನ್ನಡ44 mins ago

Uttara Kannada News: ಮಾನವೀಯ ದೃಷ್ಟಿಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಶಿವರಾಮ ಹೆಬ್ಬಾರ್ ಸೂಚನೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌