Char Dham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡುವ ಆಸೆ ಇದೆಯೆ? ಈ ಮಹತ್ವದ ಸಂಗತಿಗಳನ್ನು ತಿಳಿದುಕೊಂಡಿರಿ - Vistara News

ಪ್ರವಾಸ

Char Dham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡುವ ಆಸೆ ಇದೆಯೆ? ಈ ಮಹತ್ವದ ಸಂಗತಿಗಳನ್ನು ತಿಳಿದುಕೊಂಡಿರಿ

Char Dham Yatra 2024: ಚಾರ್‌ಧಾಮ್‌ ಮತ್ತು ಕೇದಾರನಾಥನ ದರ್ಶನ ಮಾಡಬೇಕು ಎನ್ನುವುದು ಹಿಂದೂಗಳ ಜೀವಮಾನದ ಕನಸು.ಚಳಿಗಾಲದ ಬ್ರೇಕ್‌ ಮುಗಿಸಿಕೊಂಡು ಕೇದಾರನಾಥ ಮತ್ತೆ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದಾನೆ.ಈ ವರ್ಷದ ನವೆಂಬರ್‌ 20ರವರೆಗೂ ದರ್ಶನ ಮುಂದುವರಿಯುತ್ತದೆ. ಯಾವ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ? ಈ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.

VISTARANEWS.COM


on

Char Dham Yatra 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಿಮಾಲಯ ಶ್ರೇಣಿಗಳ ನಡುವೆ ವಿರಾಜಮಾನನಾಗಿರುವ ಶಿವನ ದರ್ಶನ ಭಾಗ್ಯವೆಂಬುದು ಹಿಂದೂಗಳ ಪಾಲಿಗೆ ಜನ್ಮದ ಸೌಭಾಗ್ಯಗಳಲ್ಲಿ ಒಂದು. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಕೇದಾರನ ದರ್ಶನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಬೇಕೆಂಬ ಕನಸು ಕೋಟಿಕೋಟಿ ಭಾರತೀಯರದ್ದು. ಚಳಿಗಾಲದ ಬ್ರೇಕ್‌ ಮುಗಿಸಿಕೊಂಡು ಕೇದಾರನಾಥ ಮತ್ತೆ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದಾನೆ. ಇನ್ನು ಈ ವರ್ಷದ ನವೆಂಬರ್‌ 20ರವರೆಗೂ ಭಕ್ತರಿಗೆ ದರ್ಶನ ನೀಡಲಿದ್ದಾನೆ. ಕೇದಾರನ ಜೊತೆಜೊತೆಗೆ ಬದ್ರಿನಾಥ, ಗಂಗೋತ್ರಿ, ಯಮುನೋತ್ರಿಗಳೆಲ್ಲವೂ ಚಳಿಗಾಲದ ರಜೆಯನ್ನು ಮುಗಿಸಿಕೊಂಡು ಭಕ್ತರಿಗೆ ತೆರೆದಿವೆ. ವಿಶೇಷವೆಂದರೆ ಈ ಬಾರಿ ಎಂದೂ ಕಾಣದ ಜನಜಂಗುಳಿ ಎಲ್ಲೆಡೆ ಕಾಣುತ್ತಿದೆ. ನಿತ್ಯವೂ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರು ದರ್ಶನ ಭಾಗ್ಯ ಪಡೆದು ಪುನೀತರಾದ ಧನ್ಯತೆ ಅನುಭವಿಸುತ್ತಿದ್ದಾರೆ. ಕೇದಾರನ ದರ್ಶನಕ್ಕೆ ಯಾವಾಗ, ಹೇಗೆ ಹೋಗಬೇಕು (Char Dham Yatra 2024) ಇತ್ಯಾದಿ ಗೊಂದಲ ಪ್ರವಾಸಿಗರಿಗೆ ಇದ್ದೇ ಇರುತ್ತದೆ.

Char Dham Yatra 2024

ಚಾರ್‌ಧಾಮ್‌ ಯಾತ್ರೆ ಆರಂಭವಾದ ತಕ್ಷಣ ಅನೇಕರು ದರ್ಶನಕ್ಕೆ ಹೊರಟುಬಿಡುತ್ತಾರೆ. ಆದರೆ, ಈ ಸಂದರ್ಭ ಶಾಲಾ ಕಾಲೇಜುಗಳಿಗೂ ರಜೆ ಇರುವುದರಿಂದ ಪ್ರವಾಸೀ ಸ್ಥಳಗಳಲ್ಲಿ, ಯಾತ್ರಾ ಸ್ಥಳಗಳಲ್ಲಿ ಸಹಜವಾಗಿಯೇ ಜನಜಂಗುಳಿ ಹೆಚ್ಚು. ಹಾಗಾಗಿ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಯಾತ್ರೆ ಸುಖಕರವಾಗಿ ಆಗದು. ಜೂನ್‌, ಜುಲೈ ತಿಂಗಳಲ್ಲಿಯೂ ಉತ್ತರಾಖಂಡದ ವಾತಾವರಣದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲವಾದ್ದರಿಂದ ಈ ಎರಡು ತಿಂಗಳನ್ನೂ ನೀವು ಪರಿಗಣಿಸದೇ ಇರುವುದೇ ಒಳ್ಳೆಯದು. ಚಾರ್‌ಧಾಮ್‌ ಯಾತ್ರೆಯನ್ನು ನೆಮ್ಮದಿಯಿಂದ, ಕಡಿಮೆ ಜನರಿರುವ ಸಮಯದಲ್ಲಿ ಮಾಡಬೇಕೆನ್ನುವ ಆಸೆಯಿದ್ದರೆ, ನೀವು ಆಗಸ್ಟ್‌ನಿಂದ ಅಕ್ಟೋಬರ್‌ ಒಳಗೆ ಮಾಡುವುದು ಒಳಿತು. ಆ ಸಮಯದಲ್ಲಿ ವಾತಾವರಣವೂ ಅನುಕೂಲಕರವಾಗಿರುತ್ತದೆ. ಚಳಿ ತಡೆಯಬಲ್ಲಿರಾದರೆ ಅಕ್ಟೋಬರ್‌ ಪ್ರಶಸ್ತ.

ಹಿಮಾಲಯ ಪರ್ವತ ಪ್ರದೇಶದಲ್ಲಿ ಈ ಧಾಮಗಳಿರುವುದರಿಂದ ಖಂಡಿತವಾಗಿಯೂ ನೀವು ಅಂದುಕೊಂಡಂತೆ ಹವಾಮಾನ ಇರದು. ಅಲ್ಲಿ ಹೀಗೆಯೇ ಇದ್ದೀತೆಂದು ಊಹಿಸುವುದೂ ಕಷ್ಟ. ಇದ್ದಕ್ಕಿದ್ದಂತೆ ಮಳೆ ಬರಬಹುದು. ಬಿಸಿಲೂ ಇರಬಹುದು. ಭಾರೀ ಮಳೆಗೆ ರಸ್ತೆ ಕುಸಿದು ಬೀಳಬಹುದು. ಹಾಗಾಗಿ ಮಾನಸಿಕವಾಗಿ ಇಂತಹ ಅಡೆತಡೆಗಳಿಗೆ ಸಿದ್ಧವಾಗಿಯೇ ಹೋಗಿ. ಆದರೂ ನೀವು ಹೊರಡುವ ಮುನ್ನ ಹವಾಮಾನ ಮುನ್ಸೂಚನೆಯನ್ನೂ ಮೊದಲೇ ಪರೀಕ್ಷಿಸಿಕೊಳ್ಳಿ. ಚಾರ್‌ಧಾಮ್‌ ಯಾತ್ರೆ ಮಾಡಲು ಯಾವುದೇ ಏಜೆನ್ಸಿಗಳ ಸಹಾಯ ಬೇಕಾಗಿಲ್ಲ. ನೀವು ಸರಿಯಾಗಿ ಈ ಬಗ್ಗೆ ಭೌಗೋಳಿಕವಾಗಿ ಕೊಂಚ ಓದಿ ತಿಳಿದುಕೊಂಡರೆ, ನಿಮ್ಮ ಪಾಡಿಗೆ ಸ್ವತಂತ್ರವಾಗಿ ಬುಕ್‌ ಮಾಡಿಕೊಳ್ಳಬಹುದು. ಇದು ಕಷ್ಟವೇನಲ್ಲ. ಆದರೆ ಇದು ನಿಮ್ಮಿಂದ ಸಾಧ್ಯವಿಲ್ಲ, ತಿಳಿಯದು ಎಂದಾದಲ್ಲಿ ಏಜೆನ್ಸಿ ಸಹಾಯ ಪಡೆಯಿರಿ. ನೀವೇ ನಿಮ್ಮಷ್ಟಕ್ಕೆ ಒಂದು ಸಣ್ಣ ಸಮಾನ ಆಸಕ್ತರ ಗುಂಪಿನ ಜೊತೆಗೆ ಹೋಗುವುದು ಅತ್ಯಂತ ಸೂಕ್ತ. ಆಗ ನಿಮ್ಮ ಆಯ್ಕೆಯ ದಿನಗಳಲ್ಲಿ, ನೀವಂದುಕೊಂಡ ಜಾಗಗಳಿಗೆ ಹೋಗಿ ಅಲ್ಲಿ ಅಂದಿಕೊಂಡದ್ದಕ್ಕಿಂತ ಹೆಚ್ಚು ತಂಗಬೇಕೆಂಬ ಬಯಕೆಯಾದಲ್ಲಿ ಅದನ್ನೂ ಮಾಡಬಹುದು. ಜೆನ್ಸಿಗಳ ಸಹಾಯವಿಲ್ಲದೆ ನಿಮ್ಮಷ್ಟಕ್ಕೆ ಹೋದರೆ ಇವೆಲ್ಲ ಆಯ್ಕೆಗಳು ನಿಮ್ಮ ಕೈಯಲ್ಲೇ ಇರುತ್ತವೆ ಎಂಬುದು ನೆನಪಿಡಿ.

Kedarnath in India

ಹೇಗೆ ಹೋಗಬೇಕು?

ನವದೆಹಲಿ ಅಥವಾ ಡೆಹ್ರಾಡೂನ್‌ವರೆಗೆ ವಿಮಾನ ಪ್ರಯಾಣ ಮಾಡಿ ಅಲ್ಲಿಂದ ಹರಿದ್ವಾರ, ಋಷಿಕೇಶ, ದೇವಪ್ರಯಾಗ, ಶ್ರೀನಗರ, ರುದ್ರಪ್ರಯಾಗ ದಾಟಿಕೊಂಡು ಗೌರಿಕುಂಡ ಎಂಬಲ್ಲಿಗೆ ಸಾಗಬೇಕು. ಹರಿದ್ವಾರದಿಂದ ಗೌರಿಕುಂಡಕ್ಕೆ 123 ಕಿಮೀ ಆದರೂ, ಹಿಮಾಲಯದ ಕಡಿದಾದ ರಸ್ತೆಯಾಗಿರುವುದರಿಂದ ಈ ದಾರಿಯನ್ನು ಕ್ರಮಿಸಲು ಹೆಚ್ಚು ಸಮಯ ಬೇಕು ಎಂಬುದನ್ನು ನೆನಪಿಡಿ. ಗೌರಿಕುಂಡದಿಂದ ಕೇದಾರನವರೆಗೆ 18 ಕಿ.ಮೀಗಳ ಚಾರಣ. ಈ ಹಾದಿಯನ್ನು ಕ್ರಮಿಸಲು ನಡೆಯಬಹುದು. ನಡೆಯಲು ಸಾಧ್ಯವಿಲ್ಲವೆಂದರೆ ಕುದುರೆ/ಪೋನಿ ಅಥವಾ ಹೊತ್ತುಕೊಂಡು ಹೋಗುವ ಮಂದಿಯ ಸಹಾಯವನ್ನು ಪಡೆಯಬಹುದು. ಹೆಲಿಕಾಪ್ಟರ್‌ ಸೇವೆಯನ್ನೂ ಪಡೆಯಬಹುದು.

Helicopter service

ಹೆಲಿಕಾಪ್ಟರ್‌ ಸೇವೆ

ಕೇದಾರನಾಥಕ್ಕೆ ಹೋಗಲು ಹೆಲಿಕಾಪ್ಟರ್‌ ಸೌಲಭ್ಯವೂ ಇದೆ. ಈಗಾಗಲೇ ಬುಕ್ಕಿಂಗ್‌ ವ್ಯವಸ್ಥೆ ತೆರೆದಿದ್ದು, ಸೆಪ್ಟೆಂಬರ್‌ 15ರಿಂದ ಅಕ್ಟೋಬರ್‌ 31ರವರೆಗೆ ಹೆಲಿಕಾಪ್ಟರ್‌ ಸೇವೆ ಲಭ್ಯ ಇದೆ. IRCTC ಹೆಲಿಕಾಪ್ಟರ್‌ ಯಾತ್ರೆ ವೆಬ್‌ಸೈಟ್‌ (www.heliyatra.irctc.co.in) ತೆರೆದು ಅಲ್ಲಿ ಸೈನ್‌ ಅಪ್‌ ಮಾಡಿ ನಿಮ್ಮ ವಿವರಗಳನ್ನು ದಾಖಲು ಮಾಡಬೇಕು. ನಂತರ ಚಾರ್‌ಧಾಮ್‌ ಯಾತ್ರೆ ವಿವರಗಳ ಮೇಲೆ ಕ್ಲಿಕ್‌ ಮಾಡಿ ನಿಮಗೆ ಬೇಕಾದ ದಿನಾಂಕಕ್ಕೆ ಲಭ್ಯವಿರುವ ಹೆಲಿಕಾಪ್ಟರ್‌ ಸೇವೆಯನ್ನು ಹುಡುಕಿ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು. ಟಿಕೆಟ್‌ ಕನ್‌ಫರ್ಮ್‌ ಆದ ಮೇಲೆ ಅದನ್ನು ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: Haridwara Travel: ಹರಿದ್ವಾರಕ್ಕೆ ಭೇಟಿ ನೀಡಿದಾಗ ಈ ಸ‍್ಥಳಗಳನ್ನು ಮಿಸ್ ಮಾಡದೇ ನೋಡಿ!

ರಿಜಿಸ್ಟರ್‌ ಮಾಡಿ

ಇಷ್ಟೇ ಅಲ್ಲ, ಪ್ರತಿ ಕೇದಾರನಾಥ ಯಾತ್ರಿಯೂ ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್‌ಸೈಟ್‌ಗೆ (https://registrationandtouristcare.uk.gov.in/signin.php) ಹೋಗಿ ಅಲ್ಲಿ ನಿಮ್ಮ ಕೇದಾರನಾಥ ಭೇಟಿಯ ವಿವರಗಳನ್ನು ಮೊದಲೇ ರಿಜಿಸ್ಟರ್‌ ಮಾಡಿಕೊಳ್ಳಬೇಕು. ನಕಲಿ ಟಿಕೆಟ್‌ ಜಾಲವೂ ಇರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ. ಇಂತಹ ಮೋಸಕ್ಕೆ ಬಲಿಯಾಗಬೇಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

KSRTC Package Tour: ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಟೂರ್‌; ದರವೆಷ್ಟು?

KSRTC Package Tour: ಕೆಎಸ್‌ಆರ್‌ಟಿಸಿಯು ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸ ಮಾಡುವವರಿಗಾಗಿ ಪ್ಯಾಕೇಜ್‌ ಟೂರ್‌ ಅನ್ನು ಆಯೋಜಿಸಿದೆ. “ಬೆಂಗಳೂರು–ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ” ಮಾರ್ಗವಾಗಿ ಈ ಪ್ಯಾಕೇಜ್‌ ಟೂರ್‌ ಒಳಗೊಂಡಿದೆ.

VISTARANEWS.COM


on

Somanathapura Talakadu Madhyaranga Bharachukki Gaganachukki KSRTC Package Tour from Bengaluru
Koo

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು–ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ” ಮಾರ್ಗದಲ್ಲಿ ಕರ್ನಾಟಕ ಸರ್ಕಾರಿ ಸಾರಿಗೆಯನ್ನು ವಾರಾಂತ್ಯದ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ಪ್ಯಾಕೇಜ್ ಟೂರ್‌ (KSRTC Package Tour) ಅನ್ನು ಆಯೋಜಿಸಿದೆ.

ಸೋಮನಾಥಪುರದಿಂದ ಎಲ್ಲೆಲ್ಲಿ ಹೋಗಿ ಬರಬಹುದು?

ಈ ಪ್ಯಾಕೇಜ್‌ ಟೂರ್‌ ಅನ್ನು ಆಯ್ಕೆ ಮಾಡಿಕೊಂಡವರಿಗೆ ಜು.20 ರಂದು ಶನಿವಾರ ಬೆಳಗ್ಗೆ 6.30ಕ್ಕೆ ಬೆಂಗಳೂರಿನಿಂದ ಬಸ್‌ ಹೊರಡಲಿದೆ. ಅಲ್ಲಿಂದ ಮದ್ದೂರಿನಲ್ಲಿ ಉಪಾಹಾರ ಮುಗಿಸಿ ಸೋಮನಾಥಪುರಕ್ಕೆ ಮೊದಲು ಭೇಟಿ ನೀಡಲಾಗುತ್ತದೆ. ಸೋಮನಾಥೇಶ್ವರ ಸ್ವಾಮಿಯ ದರ್ಶನ ಪಡೆದು ಬಳಿಕ ತಲಕಾಡುಗೆ ತೆರಳಿ ಅಲ್ಲಿ ಪಂಚಲಿಂಗಗಳ ದರ್ಶನ ಪಡೆದು ಬಳಿಕ ಊಟದ ವಿರಾಮ ಇರಲಿದೆ. ಮಧ್ಯಾಹ್ನ 3 ಗಂಟೆಗೆ ತಲಕಾಡಿನಿಂದ ಮಧ್ಯರಂಗಕ್ಕೆ ಭೇಟಿ ನೀಡಿ ಅಲ್ಲಿ ರಂಗನಾಥಸ್ವಾಮಿಯ ದರ್ಶನ ಪಡೆದು, ಬಳಿಕ ಭರಚುಕ್ಕಿ ಮತ್ತು ಗಗನಚುಕ್ಕಿಗಳ ವೀಕ್ಷಣೆ ಮಾಡಲಾಗುವುದು. ಅನಂತರ ಗಗನಚುಕ್ಕಿಯಿಂದ ಸಂಜೆ 6.15ಕ್ಕೆ ಬೆಂಗಳೂರಿಗೆ ಬಸ್‌ ಹೊರಡಲಿದ್ದು, 9 ಗಂಟೆಗೆ ಬೆಂಗಳೂರಿಗೆ ತಲುಪಲಿದೆ.

ಇದನ್ನೂ ಓದಿ: Viral Video: ತರಕಾರಿ ಮಾರುವವಳ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ಪ್ರಯಾಣ ದರ ಎಷ್ಟು?

ಈ ಪ್ಯಾಕೇಜ್‌ ಟೂರ್‌ ಅನ್ನು (ಪ್ರವೇಶ ಶುಲ್ಕ, ಉಪಾಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ) ಕಾರ್ಯಾಚರಣೆ ಮಾಡಲಾಗುತ್ತದೆ. ವಯಸ್ಕರಿಗೆ 500 ರೂ. ಮತ್ತು ಮಕ್ಕಳಿಗೆ (6ರಿಂದ 12 ವರ್ಷ) 350 ರೂಪಾಯಿಯನ್ನು ಪ್ರಯಾಣ ದರವನ್ನಾಗಿ ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು- ಜೋಗ ಜಲಪಾತ ವೀಕ್ಷಣೆಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಟೂರ್‌; ಇಲ್ಲಿದೆ ಮಾಹಿತಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು –ಜೋಗ ಜಲಪಾತ” ವಯಾ ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್‌ ಎಸಿ ಸ್ಲೀಪರ್‌ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ಪ್ಯಾಕೇಜ್ ಟೂರ್‌ ಅನ್ನು ಆಯೋಜಿಸಿದೆ.

ಜೋಗದ ಜತೆ ಎಲ್ಲೆಲ್ಲಿ ಹೋಗಿ ಬರಬಹುದು?

ಈ ಪ್ಯಾಕೇಜ್‌ ಟೂರ್‌ ಅನ್ನು ಆಯ್ಕೆ ಮಾಡಿಕೊಂಡವರಿಗೆ ಜು.19 ರಂದು ಶುಕ್ರವಾರ ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಬಸ್‌ ಹೊರಡಲಿದೆ. ಅಲ್ಲಿಂದ ಶನಿವಾರ ಬೆಳಗ್ಗೆ 5.30ಕ್ಕೆ ಸಾಗರಕ್ಕೆ ತಲುಪಲಿದೆ. ಅಲ್ಲಿ ವಿಶ್ರಾಂತಿ ಪಡೆದು, ಉಪಾಹಾರ ಮುಗಿಸಿ ವರದಹಳ್ಳಿಗೆ ಮೊದಲು ಭೇಟಿ ನೀಡಲಾಗುತ್ತದೆ. ಅಲ್ಲಿಂದ ವರದಾಮೂಲ, ಇಕ್ಕೇರಿ, ಕೆಳದಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಾಗರಕ್ಕೆ ವಾಪಸ್‌ ಕರೆತರಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಸಾಗರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.

ಊಟದ ಬಳಿಕ ಜೋಗಕ್ಕೆ ತೆರಳಲಾಗುವುದು. ಅಲ್ಲಿ ಜಲಪಾತ ವೀಕ್ಷಣೆ ಬಳಿಕ ಸಂಜೆ 7 ಗಂಟೆಗೆ ಮತ್ತೆ ಸಾಗರಕ್ಕೆ ತಂದು ಬಿಡಲಾಗುವುದು. ಅಲ್ಲಿ ಶಾಪಿಂಗ್‌ ಮಾಡಲು ಸಹ ಅವಕಾಶವನ್ನು ನೀಡಲಾಗುತ್ತದೆ. ಆನಂತರ ಊಟ ಮುಗಿಸಿ ರಾತ್ರಿ 10ಕ್ಕೆ ಬೆಂಗಳೂರಿಗೆ ಬಸ್‌ ಹೊರಡಲಿದೆ. ಮರುದಿನ ಬೆಳಗ್ಗೆ 5 ಗಂಟೆಗೆ ಬೆಂಗಳೂರಿಗೆ ತಲುಪಲಿದೆ.

ಇದನ್ನೂ ಓದಿ: IND vs SL: ಶ್ರೀಲಂಕಾ ವಿರುದ್ಧದ ಸರಣಿಗೆ ಮೊಹಮ್ಮದ್ ಶಮಿ ಆಯ್ಕೆ ಸಾಧ್ಯತೆ

ಪ್ರಯಾಣ ದರ ಎಷ್ಟು?

ಈ ಪ್ಯಾಕೇಜ್‌ ಟೂರ್‌ಗೆ ವಯಸ್ಕರಿಗೆ 3,000 ರೂ. ಮತ್ತು ಮಕ್ಕಳಿಗೆ (6ರಿಂದ 12 ವರ್ಷ) 2,800 ರೂಪಾಯಿಯನ್ನು ಪ್ರಯಾಣ ದರವನ್ನಾಗಿ ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಕರ್ನಾಟಕ

KSRTC Package Tour: ಜೋಗ ಜಲಪಾತ ವೀಕ್ಷಣೆಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಟೂರ್‌!

KSRTC Package Tour: ಕೆಎಸ್‌ಆರ್‌ಟಿಸಿಯು ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸ ಮಾಡುವವರಿಗಾಗಿ ಪ್ಯಾಕೇಜ್‌ ಟೂರ್‌ ಅನ್ನು ಆಯೋಜಿಸಿದೆ. ಬೆಂಗಳೂರು-ಜೋಗ ಜಲಪಾತ ಈ ಪ್ಯಾಕೇಜ್‌ ಟೂರ್‌ ಒಳಗೊಂಡಿದೆ. ಈ ಬಸ್‌ನಲ್ಲಿ ಹೋದರೆ ಯಾವ್ಯಾವ ಪ್ರೇಕ್ಷಣೀಯ ಸ್ಥಳ ನೋಡಬಹುದು? ದರ ಎಷ್ಟು ಇತ್ಯಾದಿ ವಿವರ ಇಲ್ಲಿದೆ.

VISTARANEWS.COM


on

KSRTC Package Tour for Bengaluru to Joga Falls Viewing
Koo

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು –ಜೋಗ ಜಲಪಾತ” ವಯಾ ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್‌ ಎಸಿ ಸ್ಲೀಪರ್‌ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ಪ್ಯಾಕೇಜ್ ಟೂರ್‌ (KSRTC Package Tour) ಅನ್ನು ಆಯೋಜಿಸಿದೆ.

ಜೋಗದ ಜತೆ ಎಲ್ಲೆಲ್ಲಿ ಹೋಗಿ ಬರಬಹುದು?

ಈ ಪ್ಯಾಕೇಜ್‌ ಟೂರ್‌ ಅನ್ನು ಆಯ್ಕೆ ಮಾಡಿಕೊಂಡವರಿಗೆ ಜು.19 ರಂದು ಶುಕ್ರವಾರ ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಬಸ್‌ ಹೊರಡಲಿದೆ. ಅಲ್ಲಿಂದ ಶನಿವಾರ ಬೆಳಗ್ಗೆ 5.30ಕ್ಕೆ ಸಾಗರಕ್ಕೆ ತಲುಪಲಿದೆ. ಅಲ್ಲಿ ವಿಶ್ರಾಂತಿ ಪಡೆದು, ಉಪಾಹಾರ ಮುಗಿಸಿ ವರದಹಳ್ಳಿಗೆ ಮೊದಲು ಭೇಟಿ ನೀಡಲಾಗುತ್ತದೆ. ಅಲ್ಲಿಂದ ವರದಾಮೂಲ, ಇಕ್ಕೇರಿ, ಕೆಳದಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಾಗರಕ್ಕೆ ವಾಪಸ್‌ ಕರೆ ತರಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಸಾಗರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.

ಇದನ್ನೂ ಓದಿ: 2nd PUC Exam 3 Result : ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟ

ಊಟದ ಬಳಿಕ ಜೋಗಕ್ಕೆ ತೆರಳಲಾಗುವುದು. ಅಲ್ಲಿ ಜಲಪಾತ ವೀಕ್ಷಣೆ ಬಳಿಕ ಸಂಜೆ 7 ಗಂಟೆಗೆ ಮತ್ತೆ ಸಾಗರಕ್ಕೆ ತಂದು ಬಿಡಲಾಗುವುದು. ಅಲ್ಲಿ ಶಾಪಿಂಗ್‌ ಮಾಡಲು ಸಹ ಅವಕಾಶವನ್ನು ನೀಡಲಾಗುತ್ತದೆ. ಆನಂತರ ಊಟ ಮುಗಿಸಿ ರಾತ್ರಿ 10ಕ್ಕೆ ಬೆಂಗಳೂರಿಗೆ ಬಸ್‌ ಹೊರಡಲಿದೆ. ಮರುದಿನ ಬೆಳಗ್ಗೆ 5 ಗಂಟೆಗೆ ಬೆಂಗಳೂರಿಗೆ ತಲುಪಲಿದೆ.

ಪ್ರಯಾಣ ದರ ಎಷ್ಟು?

ಈ ಪ್ಯಾಕೇಜ್‌ ಟೂರ್‌ಗೆ ವಯಸ್ಕರಿಗೆ 3,000 ರೂ. ಮತ್ತು ಮಕ್ಕಳಿಗೆ (6ರಿಂದ 12 ವರ್ಷ) 2,800 ರೂಪಾಯಿಯನ್ನು ಪ್ರಯಾಣ ದರವನ್ನಾಗಿ ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಿಂದ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಟೂರ್‌

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು–ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ” ಮಾರ್ಗದಲ್ಲಿ ಕರ್ನಾಟಕ ಸರ್ಕಾರಿ ಸಾರಿಗೆಯನ್ನು ವಾರಾಂತ್ಯದ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ಪ್ಯಾಕೇಜ್ ಟೂರ್‌ ಅನ್ನು ಆಯೋಜಿಸಿದೆ.

ಸೋಮನಾಥಪುರದಿಂದ ಎಲ್ಲೆಲ್ಲಿ ಹೋಗಿ ಬರಬಹುದು?

ಈ ಪ್ಯಾಕೇಜ್‌ ಟೂರ್‌ ಅನ್ನು ಆಯ್ಕೆ ಮಾಡಿಕೊಂಡವರಿಗೆ ಜು.20 ರಂದು ಶನಿವಾರ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಬಸ್‌ ಹೊರಡಲಿದೆ. ಅಲ್ಲಿಂದ ಮದ್ದೂರಿನಲ್ಲಿ ಉಪಾಹಾರ ಮುಗಿಸಿ ಸೋಮನಾಥಪುರಕ್ಕೆ ಮೊದಲು ಭೇಟಿ ನೀಡಲಾಗುತ್ತದೆ. ಸೋಮನಾಥೇಶ್ವರ ಸ್ವಾಮಿಯ ದರ್ಶನ ಪಡೆದು ಬಳಿಕ ತಲಕಾಡುಗೆ ತೆರಳಿ ಅಲ್ಲಿ ಪಂಚಲಿಂಗಗಳ ದರ್ಶನ ಪಡೆದು ಬಳಿಕ ಊಟದ ವಿರಾಮ ಇರಲಿದೆ. ಮಧ್ಯಾಹ್ನ 3 ಗಂಟೆಗೆ ತಲಕಾಡಿನಿಂದ ಮಧ್ಯರಂಗಕ್ಕೆ ಭೇಟಿ ನೀಡಿ ಅಲ್ಲಿ ರಂಗನಾಥಸ್ವಾಮಿಯ ದರ್ಶನ ಪಡೆದು, ಬಳಿಕ ಭರಚುಕ್ಕಿ ಮತ್ತು ಗಗನಚುಕ್ಕಿಗಳ ವೀಕ್ಷಣೆ ಮಾಡಲಾಗುವುದು. ಅನಂತರ ಗಗನಚುಕ್ಕಿಯಿಂದ ಸಂಜೆ 6.15ಕ್ಕೆ ಬೆಂಗಳೂರಿಗೆ ಬಸ್‌ ಹೊರಡಲಿದ್ದು, 9 ಗಂಟೆಗೆ ಬೆಂಗಳೂರಿಗೆ ತಲುಪಲಿದೆ. ತಲಕಾಡು ಪಂಚಲಿಂಗಗಳ ದರ್ಶನ

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ ಕ್ರೀಡಾಕೂಟದ ಇತಿಹಾಸ ಏನು? ಇದನ್ನು ಆಯೋಜಿಸುವವರು ಯಾರು?

ಪ್ರಯಾಣ ದರ ಎಷ್ಟು?

ಈ ಪ್ಯಾಕೇಜ್‌ ಟೂರ್‌ ಅನ್ನು (ಪ್ರವೇಶ ಶುಲ್ಕ, ಉಪಾಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ) ಕಾರ್ಯಾಚರಣೆ ಮಾಡಲಾಗುತ್ತದೆ. ವಯಸ್ಕರಿಗೆ 500 ರೂ. ಮತ್ತು ಮಕ್ಕಳಿಗೆ (6ರಿಂದ 12 ವರ್ಷ) 350 ರೂಪಾಯಿಯನ್ನು ಪ್ರಯಾಣ ದರವನ್ನಾಗಿ ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ದೇಶ

Viral Video: ಅಮರನಾಥ ಯಾತ್ರೆ ಸಂಭ್ರಮದಲ್ಲಿ ಅಮೆರಿಕದ ತಾಯಿ- ಮಗ!

ಅಮೆರಿಕದ ಹೀದರ್ ಹಾಥ್‌ವೇ ಅವರು ತಮ್ಮ ಮಗ ಹಡ್ಸನ್ ಹ್ಯಾಥ್‌ವೇ ಅವರೊಂದಿಗೆ 13,000 ಅಡಿ ಎತ್ತರದಲ್ಲಿರುವ ಅಮರನಾಥ ದೇವಾಲಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋ ವೈರಲ್ (Viral Video) ಆಗಿದ್ದು, ಹಲವು ವರ್ಷಗಳ ಕನಸು ನನಸಾಗುತ್ತಿರುವುದಕ್ಕೆ ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

VISTARANEWS.COM


on

By

Viral Video
Koo

ಅಮೆರಿಕದ (America) ತಾಯಿ ಮಗ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಅಮರನಾಥ ಯಾತ್ರೆ (Amarnath Yatra) ಕೈಗೊಂಡಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (viral video) ಆಗಿದೆ.

ತಾಯಿ ಹೀದರ್ ಹಾಥ್‌ವೇ ತನ್ನ ಮಗ ಹಡ್ಸನ್ ಹ್ಯಾಥ್‌ವೇ ಅವರೊಂದಿಗೆ 13,000 ಅಡಿ ಎತ್ತರದಲ್ಲಿರುವ ಅಮರನಾಥ ದೇವಾಲಯಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಭಾರತ ಸರ್ಕಾರದ ಸಹಕಾರದಿಂದಾಗಿ ಈ ಯಾತ್ರೆಯನ್ನು ಕೈಗೊಳ್ಳಲು ಸಾಧ್ಯವಾಯಿತು. ಅಮರನಾಥಕ್ಕೆ ಹೋಗಬೇಕೆಂಬ ತಮ್ಮ ಕನಸು ನನಸಾಗುತ್ತಿದೆ ಎಂದು ಹೇಳಿದರು.

ನಾವು ಇಲ್ಲಿರುವುದಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ. ಅಮರನಾಥಕ್ಕೆ ಬರಬೇಕೆಂದು ಹಲವು ವರ್ಷಗಳಿಂದ ನಾನು ಕನಸು ಕಂಡಿದ್ದೇನೆ. ಇದು ಭಾರತ ಸರ್ಕಾರದ ಅದ್ಭುತ ಸಂಸ್ಥೆ ಮತ್ತು ಶ್ರೈನ್ ಬೋರ್ಡ್‌ನಿಂದ ಮಾತ್ರ ಸಾಧ್ಯವಾಗಿದೆ ಎಂದು ಹೀದರ್ ಹೇಳಿದರು.

ಇದು ಅತ್ಯಂತ ಸಂತೋಷದ ಕ್ಷಣ. ಎಲ್ಲವೂ ತುಂಬಾ ಅದ್ಭುತವಾಗಿದೆ. ಅಮರನಾಥ ಯಾತ್ರೆಯು ಅವಳಿ ಮಾರ್ಗಗಳಿಂದ ಜೂನ್ 29 ರಂದು ಪ್ರಾರಂಭ ಮಾಡಿದ್ದೇವೆ. ಅನಂತನಾಗ್‌ನ ಸಾಂಪ್ರದಾಯಿಕ 48 ಕಿ.ಮೀ. ನುನ್ವಾನ್- ಪಹಲ್ಗಾಮ್ ಮಾರ್ಗ ಮತ್ತು 14 ಕಿ.ಮೀ. ಕಡಿಮೆ ಆದರೆ ಕಡಿದಾದ ಬಾಲ್ಟಾಲ್ ಗಂದರ್ಬಾಲ್ ಮಾರ್ಗದಲ್ಲಿ ಯಾತ್ರೆಯು ಆಗಸ್ಟ್ 19 ರವರೆಗೆ ಮುಂದುವರಿಯುತ್ತದೆ ಎಂದು ತಿಳಿಸಿದರು.


ವಾರ್ಷಿಕ ಯಾತ್ರೆಯ ಮೊದಲ ದಿನದಂದು 13,000ಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ದೇಗುಲಕ್ಕೆ ಭೇಟಿ ನೀಡಿದರು. ಈ ವರ್ಷದಲ್ಲಿ ಇಲ್ಲಿಯವರೆಗೆ 1,50,000 ಲಕ್ಷ ಯಾತ್ರಿಕರು ಪವಿತ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ಗುಹಾ ದೇಗುಲಕ್ಕೆ 4.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡಿದ್ದರು.

ಇದನ್ನೂ ಓದಿ: BSF: ಭಾರತ-ಪಾಕ್‌ ಗಡಿಯಲ್ಲಿ ಬರೋಬ್ಬರಿ 126 ಡ್ರೋನ್‌, 150 ಕೆಜಿ ಹೆರಾಯಿನ್‌ ವಶಪಡಿಸಿಕೊಂಡ ಬಿಎಸ್‌ಎಫ್‌

ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಅಮರನಾಥ ಯಾತ್ರೆಯನ್ನು ಜುಲೈ 7 ಶನಿವಾರದಂದು ಎರಡೂ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಆದರೆ ಹವಾಮಾನ ಸುಧಾರಿಸಿದ ಅನಂತರ ಯಾತ್ರೆಯನ್ನು ಪುನರಾರಂಭಿಸಲಾಯಿತು.

Continue Reading

ಪ್ರವಾಸ

Dharamshala Tour: ಪರಿಪೂರ್ಣ ಪ್ರವಾಸದ ಅನುಭವ ಕೊಡುವ ಧರ್ಮಶಾಲಾ

ಧರ್ಮಶಾಲಾ (Dharamshala Tour) ಸುತ್ತಮುತ್ತ ಇರುವ ವಿವಿಧ ಆಕರ್ಷಣೆಗಳು ಪ್ರತಿಯೊಬ್ಬ ಪ್ರವಾಸಿಗನ ವಿಭಿನ್ನ ಆಸಕ್ತಿಗಳನ್ನು ಪೂರೈಸುತ್ತದೆ. ಆಧ್ಯಾತ್ಮಿಕ ಜ್ಞಾನೋದಯ, ಹೊರಾಂಗಣ ಸಾಹಸ ಅಥವಾ ನೈಸರ್ಗಿಕ ಸೌಂದರ್ಯದಿಂದ ಸುತ್ತುವರಿದ ಶಾಂತಿಯುತ ಧಾಮ ಇದಾಗಿದೆ. ಇಲ್ಲಿರುವ ಹತ್ತು ಪ್ರಮುಖ ಸ್ಥಳಗಳು ಸೌಂದರ್ಯ, ಸಂಸ್ಕೃತಿ ಮತ್ತು ನೆಮ್ಮದಿಯ ಪೂರ್ಣ ಅನುಭವವನ್ನು ನೀಡುತ್ತದೆ. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಲ್ಲಿಯ ಅಪೂರ್ವ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

By

Dharamshala Tour
Koo

ಭಾರತದ (india) ಉತ್ತರ (north) ಭಾಗದ ಹಿಮಾಚಲ ಪ್ರದೇಶದಲ್ಲಿರುವ (himachal pradesh) ಅತ್ಯಂತ ಸುಂದರ ಸ್ಥಳ ಧರ್ಮಶಾಲಾ (Dharamshala Tour). ಶ್ರೀಮಂತ ಸಂಸ್ಕೃತಿ, ಶಾಂತಿಯುತ ಮತ್ತು ಆಧ್ಯಾತ್ಮಿಕ ಪಟ್ಟಣವಾಗಿರುವ ಧರ್ಮಶಾಲಾಕ್ಕೆ ಹೆಚ್ಚಿನ ಪ್ರವಾಸಿಗರು ಮನಸ್ಸಿನ ಶಾಂತಿ ಮತ್ತು ರೋಮಾಂಚಕ ಅನುಭವವನ್ನು ಪಡೆಯಲು ಬರುತ್ತಾರೆ.

ಧರ್ಮಶಾಲಾ ಎಷ್ಟು ರೋಮಾಂಚನಕಾರಿಯಾಗಿದೆಯಾಗಿದೆ ಎಂದರೆ ಈ ಪ್ರದೇಶದ ಸುತ್ತಮುತ್ತಲಿನ ಆಕರ್ಷಣೆಗಳನ್ನು ಅನ್ವೇಷಿಸುವ ಮೂಲಕ ನಾವು ಅದನ್ನು ಇನ್ನಷ್ಟು ಸ್ಮರಣೀಯಗೊಳಿಸಬಹುದು. ಧರ್ಮಶಾಲಾ ಸಮೀಪ ಹಲವು ಅತ್ಯಾಕರ್ಷಕ ಸ್ಥಳಗಳಿವೆ. ಚಿಕ್ಕ ಗಿರಿಧಾಮಗಳಿಂದ ಹಿಡಿದು ಹಳೆಯ ಮಠಗಳು, ರಮಣೀಯ ಸೌಂದರ್ಯ ಗಣಿಗಳು ಇಲ್ಲಿವೆ.


ಮೆಕ್ಲಿಯೋಡ್ ಗಂಜ್

ದಲೈ ಲಾಮಾ ಅವರ ನಿವಾಸ ಮೆಕ್ಲಿಯೋಡ್ ಗಂಜ್ ಧರ್ಮಶಾಲಾದಿಂದ ಕೆಲವು ಕೆಲವು ಕಿಲೋ ಮೀಟರ್ ದೂರದಲ್ಲಿದೆ. ಟಿಬೆಟಿಯನ್ ಕಲೆ, ಪಾಕಪದ್ಧತಿ ಮತ್ತು ಟಿಬೆಟಿಯನ್ ಸಂಸ್ಕೃತಿಯನ್ನು ಒಂದೇ ಸ್ಥಳದಲ್ಲಿ ನಾವಿಲ್ಲಿ ಕಾಣಬಹುದು. ಅತ್ಯಂತ ರೋಮಾಂಚಕ ಸಾಂಸ್ಕೃತಿಕ ಜೀವನವನ್ನು ಹೊಂದಿರುವ ಇಲ್ಲಿಗೆ ಭೇಟಿ ನೀಡಿದಾಗ ನಮ್ ಗ್ಯಾಲ್ ಮಠ, ಸುಗ್ಲಾಗ್‌ಖಾಂಗ್ ಕಾಂಪ್ಲೆಕ್ಸ್ ಮತ್ತು ಟಿಬೆಟಿಯನ್ ಮ್ಯೂಸಿಯಂ ಗೆ ಭೇಟಿ ನೀಡಲು ಮರೆಯದಿರಿ.


ಟ್ರಯಂಡ್

ಸಾಹಸ ಪ್ರಿಯರಿಗೆ ಟ್ರಿಯುಂಡ್ ಭೂಮಿಯ ಮೇಲಿನ ಸ್ವರ್ಗದಂತಿದೆ. ಯಾಕೆಂದರೆ ಇದು ಅತ್ಯುತ್ತಮ ಟ್ರೆಕ್ಕಿಂಗ್ ಅವಕಾಶವನ್ನು ನೀಡುತ್ತದೆ. ಮೆಕ್ಲಿಯೋಡ್‌ಗಂಜ್ ಪಟ್ಟಣದಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ಈ ಚಾರಣ ಪ್ರದೇಶವು ಧೌಲಾಧರ್ ಶ್ರೇಣಿ ಮತ್ತು ಕಾಂಗ್ರಾ ಕಣಿವೆಯ ಸೌಂದರ್ಯವನ್ನು ಬಣ್ಣಿಸುತ್ತದೆ. ಇಲ್ಲಿ ಚಾರಣವನ್ನು ಒಂದೇ ದಿನದಲ್ಲಿ ಪೂರ್ಣಗೊಳಿಸಬಹುದು. ಆರಂಭಿಕ ಮತ್ತು ಅನುಭವಿ ಚಾರಣಿಗರಿಗೆ ಇದು ಅನುಕೂಲಕರವಾಗಿರುತ್ತದೆ.


ಭಗ್ಸು ಜಲಪಾತ

ಮೆಕ್ಲಿಯೋಡ್ ಗಂಜ್‌ನ ಆಚೆ ಸ್ವಲ್ಪ ದೂರದಲ್ಲಿ ಭಗ್ಸು ಜಲಪಾತವಿದೆ. ಇದು ಪ್ರವಾಸಿಗರಿಗೆ ಪಿಕ್ನಿಕ್ ಮತ್ತು ನಡಿಗೆಗಳಿಗೆ ಆಹ್ವಾನಿಸುವ ಮೋಡಿಮಾಡುವ ಸ್ಥಳವಾಗಿದೆ. ಹಚ್ಚ ಹಸಿರಿನ ಸುತ್ತಮುತ್ತಲಿನ ಮತ್ತು ಪ್ರಶಾಂತ ವಾತಾವರಣದ ನಡುವೆ ಹತ್ತಿರದ ಭಾಗ್ಸುನಾಥ ದೇವಾಲಯವು ಪ್ರದೇಶದಲ್ಲಿ ಧಾರ್ಮಿಕತೆ ಮತ್ತು ಶಾಂತಿಯನ್ನು ಹೆಚ್ಚಿಸಿದೆ.


ದಾಲ್ ಸರೋವರ

ಧರ್ಮಶಾಲಾದಿಂದ ಸುಮಾರು 11 ಕಿಲೋ ಮೀಟರ್ ದೂರದಲ್ಲಿರುವ ದಾಲ್ ಸರೋವರವು ದಟ್ಟವಾದ ದೇವದಾರು ಮರಗಳಿಂದ ಸುತ್ತುವರೆದಿರುವ ಪ್ರಶಾಂತ ಜಲರಾಶಿಯಾಗಿದೆ ಮತ್ತು ಅದರ ಸುತ್ತಲೂ ಹಸಿರಿನಿಂದ ಕೂಡಿದೆ. ಸರೋವರದಲ್ಲಿ ಬೋಟಿಂಗ್ ಸೌಲಭ್ಯವಿದೆ. ಇಲ್ಲಿ ಜನರು ನೀರಿನ ಶಾಂತತೆಯನ್ನು ಆನಂದಿಸಬಹುದು ಮತ್ತು ಅದರ ಸುತ್ತಲೂ ಪ್ರಕೃತಿಯ ಪ್ರಶಾಂತತೆಯನ್ನು ಅನುಭವಿಸಬಹುದು.


ನಡ್ಡಿ ಗ್ರಾಮ

ಕ್ಲಿಯೋಡ್ ಗಂಜ್ ನಿಂದ ಸ್ವಲ್ಪ ದೂರದಲ್ಲಿರುವ ನಡ್ಡಿ ಗ್ರಾಮದಿಂದ ಮೋಡಗಳ ಬಿಳಿ ಹೊದಿಕೆ ಹೊದ್ದ ಶಿಖರಗಳು ಮತ್ತು ಕಾಂಗ್ರಾ ಕಣಿವೆಯ ನೋಟವನ್ನು ಪಡೆಯಬಹುದು. ಈ ಗ್ರಾಮವು ನಗರ ಜೀವನದಿಂದ ದೂರ ಕೊಂಡೊಯ್ದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಾಹಣ ಇಷ್ಟ ಪಡುವವರಿಗೆ ಇದು ಸೂಕ್ತ ಸ್ಥಳವಾಗಿದೆ.


ಕಾಂಗ್ರಾ ಕೋಟೆ

ಕಾಂಗ್ರಾ ಕೋಟೆಯು ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಇತಿಹಾಸದ ಮೇಲೆ ಆಸಕ್ತಿ ಇರುವವರು ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬಾರದು. ಈ ಪುರಾತನ ಕೋಟೆಯು ಧರ್ಮಶಾಲಾ ಸಮೀಪದಲ್ಲಿ ಸುಮಾರು 20 ಕಿಲೋಮೀಟರ್ ದೂರದಲ್ಲಿದೆ. ಇದು ಇತಿಹಾಸ ಮತ್ತು ಪರಂಪರೆಯ ಬಗ್ಗೆ ಮಾಹಿತಿಯ ಉತ್ತಮ ಮೂಲವಾಗಿದೆ. ಈ ಕೋಟೆಯ ಸಂಕೀರ್ಣದಲ್ಲಿ ಹಲವಾರು ದೇವಾಲಯ, ಅರಮನೆ ಮತ್ತು ವಸ್ತುಸಂಗ್ರಹಾಲಯಗಳು ಪ್ರಾಚೀನ ಕಾಲದಲ್ಲಿ ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತವೆ.


ಪಾಲಂಪುರ್

ಉತ್ತರ ಭಾರತದ ಚಹಾ ರಾಜಧಾನಿ ಎಂದೂ ಕರೆಯಲ್ಪಡುವ ಪಾಲಂಪುರ್ ಧರ್ಮಶಾಲಾದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಒಂದು ಆಕರ್ಷಕ ಪಟ್ಟಣವಾಗಿದೆ. ಟೀ ತೋಟಗಳು ಅದರ ಸುತ್ತಲೂ ಹಿಮದಿಂದ ಆವೃತವಾದ ಪರ್ವತಗಳಿವೆ. ಸುಂದರ ಪ್ರಕೃತಿಯ ನಡುವೆ ಶಾಂತಿಯುತ ನಡಿಗೆಗೆ ಇದು ಸೂಕ್ತ ಸ್ಥಳವಾಗಿದೆ. ಆಂಡ್ರೆಟ್ಟಾ ಪಾಟರಿ ಸ್ಟುಡಿಯೋ, ತಾಶಿ ಜೊಂಗ್ ಮೊನಾಸ್ಟರಿ, ನ್ಯೂಗಲ್ ಖಾಡ್ ಇಲ್ಲಿನ ಕೆಲವು ಜನಪ್ರಿಯ ಆಕರ್ಷಣೆಗಳಾಗಿವೆ.


ಚಾಮುಂಡಾ ದೇವಿ ದೇವಸ್ಥಾನ

ಧರ್ಮಶಾಲಾದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿರುವ ಚಾಮುಂಡಾ ದೇವಿ ದೇವಸ್ಥಾನವು ಹಿಂದೂಗಳಿಗೆ ಪವಿತ್ರ ಕ್ಷೇತ್ರವಾಗಿದೆ. ಯಾಕೆಂದರೆ ಇದು ದುರ್ಗಾ ದೇವಿಯ ಅವತಾರವೆಂದು ಪರಿಗಣಿಸಲ್ಪಟ್ಟ ಚಾಮುಂಡಾ ದೇವಿಗೆ ಸಮರ್ಪಿಸಲಾಗಿದೆ. ಬೆಟ್ಟದ ಮೇಲೆ ನೆಲೆಸಿರುವ ಸುತ್ತಮುತ್ತಲಿನ ಬೆಟ್ಟಗಳು ಮತ್ತು ಕಣಿವೆಗಳ ವಿಹಂಗಮ ನೋಟಗಳನ್ನು ನೀಡುವುದರಿಂದ ಇದು ಭೇಟಿ ನೀಡಲು ಯೋಗ್ಯವಾದ ಆಧ್ಯಾತ್ಮಿಕ ಮತ್ತು ರಮಣೀಯ ತಾಣವಾಗಿದೆ.

ಇದನ್ನೂ ಓದಿ: Karnataka Tour: ಮಳೆಗಾಲದಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ 15 ರಮಣೀಯ ತಾಣಗಳು


ಕರೇರಿ ಸರೋವರ

ಧರ್ಮಶಾಲಾದಿಂದ ಸುಮಾರು 22 ಕಿಲೋ ಮೀಟರ್ ದೂರದಲ್ಲಿರುವ ಕರೇರಿ ಸರೋವರಕ್ಕೆ ಪ್ರವಾಸ ಮಾಡುವುದನ್ನು ತಪ್ಪಿಸಿಕೊಳ್ಳಬೇಡಿ. ಎತ್ತರದ ಆಲ್ಪೈನ್ ಕಾಡುಗಳು ಮತ್ತು ಹಿಮದಿಂದ ಆವೃತವಾದ ಶಿಖರಗಳಿಂದ ಸುತ್ತುವರೆದಿರುವ ದೊಡ್ಡ ಸರೋವರ ಇದಾಗಿದೆ. ಇದು ಕ್ಯಾಂಪಿಂಗ್ ಮತ್ತು ಪಕ್ಷಿ ವೀಕ್ಷಣೆ ಅಥವಾ ಛಾಯಾಗ್ರಹಣಕ್ಕೆ ಸೂಕ್ತವಾದ ಸ್ಥಳವಾಗಿದೆ.


ಮಸ್ರೂರ್ ರಾಕ್ ಕಟ್ ದೇವಸ್ಥಾನ

ಮಸ್ರೂರ್ ರಾಕ್ ಕಟ್ ಟೆಂಪಲ್ ಎಂಟನೇ ಶತಮಾನಕ್ಕೂ ಹಿಂದಿನ ಪ್ರಾಚೀನ ರಾಕ್-ಕಟ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಧರ್ಮಶಾಲಾದಿಂದ ಸರಿಸುಮಾರು 40 ಕಿಮೀ ದೂರದಲ್ಲಿರುವ ಈ ಪುರಾತತ್ತ್ವ ಶಾಸ್ತ್ರದ ತಾಣವು ಸಂಕೀರ್ಣವಾದ ಕೆತ್ತಿದ ಮರಳುಗಲ್ಲಿನ ದೇವಾಲಯವಾಗಿದೆ. ಇದು ಹಿಂದೂ ದೇವರಿಗೆ ಅರ್ಪಿತವಾಗಿದೆ. ಐತಿಹಾಸಿಕ ಹಿನ್ನೆಲೆಯ ಇಣುಕು ನೋಟವನ್ನು ಇಲ್ಲಿ ಕಾಣಬಹುದು. ಪುರಾತನ ಪರಂಪರೆಯನ್ನು ಹುಡುಕುವವರಿಗೆ ಇದು ಭೇಟಿ ನೀಡಲೇಬೇಕಾದ ತಾಣವಾಗಿದೆ.

Continue Reading
Advertisement
Job Alert
ಉದ್ಯೋಗ2 mins ago

Job Alert: ಅಂಚೆ ಇಲಾಖೆಯಿಂದ ಬೃಹತ್‌ ನೇಮಕಾತಿ; ಕರ್ನಾಟಕದಲ್ಲಿಯೂ ಇದೆ 1,940 ಹುದ್ದೆ: ಹೀಗೆ ಅಪ್ಲೈ ಮಾಡಿ

Viral Video
Latest17 mins ago

Viral Video: ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Jitan Sahani
ದೇಶ25 mins ago

Jitan Sahani: ಬಿಹಾರದಲ್ಲಿ ವಿಕಾಸಶೀಲ ಇನ್ಸಾನ್‌ ಪಕ್ಷದ ಮುಖ್ಯಸ್ಥನ ತಂದೆಯ ಭೀಕರ ಹತ್ಯೆ; ಮನೆ ತುಂಬ ರಕ್ತ!

karnataka assembly live
ಪ್ರಮುಖ ಸುದ್ದಿ44 mins ago

Karnataka Assembly Live: ಸದನದಲ್ಲಿ ಇಂದು ಕಿಡಿಯೆಬ್ಬಿಸಲಿರುವ ವಾಲ್ಮೀಕಿ ಹಗರಣ; ಉತ್ತರ ನೀಡಲು ಸಿಎಂ ಸಜ್ಜು; ಇಲ್ಲಿದೆ ಕ್ಷಣಕ್ಷಣದ ಲೈವ್‌

David Warner
ಕ್ರೀಡೆ46 mins ago

David Warner: ​ಚಾಂಪಿಯನ್ಸ್ ಟ್ರೋಫಿಗೆ ವಾರ್ನರ್​ ಆಯ್ಕೆ ಇಲ್ಲ ಎಂದ ಜಾರ್ಜ್​ ಬೈಲಿ

Kannada New Movie
ಸ್ಯಾಂಡಲ್ ವುಡ್50 mins ago

Kannada New Movie: ಸೆಟ್ಟೇರಿತು ‘ಆಕಾಶ್’, ‘ಅರಸು’ ಚಿತ್ರಗಳ ಡೈರೆಕ್ಟರ್ ಹೊಸ ಸಿನಿಮಾ; ಕಿರುತೆರೆಯ ಈ ಪ್ರತಿಭೆ ನಾಯಕ

Kannada In Madrasa
ಕರ್ನಾಟಕ1 hour ago

Kannada In Madrasa: ರಾಜ್ಯದ ಮದರಸಾಗಳಲ್ಲಿ ಇನ್ನು ಕನ್ನಡ ಕಲಿಕೆ ಕಡ್ಡಾಯ; ಶೀಘ್ರವೇ ಆದೇಶ!

murder case set fire bagalakote
ಕ್ರೈಂ1 hour ago

Horrible Murder Case: ಶೆಡ್‌ ಹೊರಗಿನಿಂದ ಲಾಕ್‌ ಮಾಡಿ ಬೆಂಕಿ ಇಟ್ಟ ದುಷ್ಟರು; ಇಬ್ಬರು ಸಜೀವ ದಹನ

Iti Acharya
ಸಿನಿಮಾ1 hour ago

Iti Acharya: ಬಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬ ಕನ್ನಡತಿ; ದಕ್ಷಿಣ ಭಾರತದ ಚಿತ್ರಗಳ ಬಳಿಕ ಹಿಂದಿಯಲ್ಲೂ ಅಭಿನಯ

Karnataka Assembly
ಕ್ರೀಡೆ1 hour ago

Karnataka Assembly: ಬಿಜೆಪಿಯಿಂದಲೇ ರಾಹುಲ್​ಗೆ ಶ್ಲಾಘನೆ; ಸದನದಲ್ಲಿ ಅಭಿನಂದನೆಗೆ ನಿರ್ಣಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ24 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ3 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌