Amitabh Bachchan: ಅಮಿತಾಭ್ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದರೂ ಮುಖ ಊದಿಸಿಕೊಂಡೇ ಇದ್ದ ಜಯಾ ಬಚ್ಚನ್! - Vistara News

ಬಾಲಿವುಡ್

Amitabh Bachchan: ಅಮಿತಾಭ್ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದರೂ ಮುಖ ಊದಿಸಿಕೊಂಡೇ ಇದ್ದ ಜಯಾ ಬಚ್ಚನ್!

Amitabh Bachchan: ಈ ಫೋಟೋದಲ್ಲಿ ಜಯಾ ಬಚ್ಚನ್ ಅವರ ಮುಖ ಊದಿಕೊಂಡಿದ್ದು, ಮೂಡ್ ಆಫ್ ಆದಂತಿದೆ.
ನೆಟ್ಟಿಗರಿಗೆ ಅಮಿತಾಭ್‌ ಬಚ್ಚನ್ ಹೊಗಳಿದ್ದಾರೆ. ʻಮೇಡಂಗೆ ಮೂಡ್ ಆಫ್ ಆಗಿದ್ದು ಯಾಕೆʼ ಎಂದು ಬಳಕೆದಾರರೊಬ್ಬರು ಕೇಳಿದ್ದಾರೆ. ಝೀರೋದಿಂದ ಹೀರೋವರೆಗೆ ಎಲ್ಲ ಪುರುಷರ ಸ್ಥಿತಿಯೂ ಇದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

VISTARANEWS.COM


on

Amitabh Bachchan holds umbrella for Jaya Bachchan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಮತ್ತು ಅವರ ಪತ್ನಿ ಜಯಾ ಬಚ್ಚನ್ ಒಟ್ಟಿಗೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ನಟ ಇತ್ತೀಚೆಗೆ ಸೆಟ್‌ನಿಂದ ಹೊರಬಂದಾಗ ಜಯಾಗಾಗಿ ಛತ್ರಿ ಹಿಡಿದಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಮಾನ್ಸೂನ್ ಅವಧಿಯಲ್ಲಿ ಹಾನಿಗೊಳಗಾದವರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದೀಗ ಜಯಾ ಬಚ್ಚನ್ ಈ ಫೋಟೊದಿಂದಾಗಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಫೋಟೊದಲ್ಲಿ ಜಯಾ ಬಚ್ಚನ್ ಮುಖ ಊದಿಕೊಂಡಿದ್ದು, ಮೂಡ್ ಆಫ್ ಆದಂತಿದೆ. 

ಬಿಗ್ ಬಿ ಅವರು ತಮ್ಮ ಪತ್ನಿ ಜಯಾ ಅವರೊಂದಿಗೆ ರೊಮ್ಯಾಂಟಿಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಹೀಗೆ ಬರೆದಿದ್ದಾರೆ ʻʻಪ್ರತಿದಿನ ಮಳೆ ಬೀಳುತ್ತಿದೆ..ಕೆಲಸದ ಸ್ಥಳದಲ್ಲಿಯೂ ಸಹ ಎಂದು ಈ ಫೋಟೋಕ್ಕೆ ಅಮಿತಾಬ್ ಬಚ್ಚನ್ʼʼ ಶೀರ್ಷಿಕೆ ಹಾಕಿದ್ದಾರೆ. 

ಈ ಫೋಟೋದಲ್ಲಿ ಜಯಾ ಬಚ್ಚನ್ ಅವರ ಮುಖ ಊದಿಕೊಂಡಿದ್ದು, ಮೂಡ್ ಆಫ್ ಆದಂತಿದೆ.
ನೆಟ್ಟಿಗರಿಗೆ ಅಮಿತಾಭ್‌ ಬಚ್ಚನ್ ಹೊಗಳಿದ್ದಾರೆ. ʻಮೇಡಂಗೆ ಮೂಡ್ ಆಫ್ ಆಗಿದ್ದು ಯಾಕೆʼ ಎಂದು ಬಳಕೆದಾರರೊಬ್ಬರು ಕೇಳಿದ್ದಾರೆ. ಝೀರೋದಿಂದ ಹೀರೋವರೆಗೆ ಎಲ್ಲ ಪುರುಷರ ಸ್ಥಿತಿಯೂ ಇದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Amitabh Bachchan: ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದ ಅಮಿತಾಭ್‌; ʻಬಿಗ್‌ ಬಿʼ ಕೊಂಡಾಡಿದ ರಾಮ್ ಗೋಪಾಲ್ ವರ್ಮಾ!ಇದನ್ನೂ ಓದಿ:

ಇತ್ತೀಚೆಗೆ ಅಮಿತಾಭ್‌ ನಟನೆಯ ಕಲ್ಕಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್‌ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್‌ ಮಾಡಿದ ಸಿನಿಮಾವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

KL Rahul : ಆಮಿರ್​ ಖಾನ್ ಮನೆ ಪಕ್ಕದಲ್ಲೇ 20 ಕೋಟಿ ಫ್ಲ್ಯಾಟ್ ಖರೀದಿಸಿದ ರಾಹುಲ್, ಅಥಿಯಾ ದಂಪತಿ

KL Rahul: ಅನೇಕ ಬಾಲಿವುಡ್ ಸೂಪರ್​​ಸ್ಟಾರ್​ಗಳು ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾದ ಅಮೀರ್ ಖಾನ್ ಕೂಡ ಇದ್ದಾರೆ. ಅವರು ವಿಶೇಷವಾಗಿ ಬಾಂದ್ರಾದ ಪಾಲಿ ಹಿಲ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಶಾರುಖ್ ಖಾನ್, ಸೈಫ್ ಅಲಿ ಖಾನ್, ಸಲ್ಮಾನ್ ಖಾನ್, ಜಾನ್ವಿ ಕಪೂರ್ ಮತ್ತು ತ್ರಿಪ್ತಿ ಡಿಮ್ರಿ ಎಲ್ಲರೂ ಬಾಂದ್ರಾದಲ್ಲಿ ಅಪಾರ್ಟ್​ಮೆಂಟ್​ಗಳನ್ನು ಹೊಂದಿದ್ದಾರೆ.

VISTARANEWS.COM


on

Koo

ಬೆಂಗಳೂರು: ಕರುನಾಡಿನ ಕ್ರಿಕೆಟಿಗ ಕೆ. ಎಲ್​ ರಾಹುಲ್ (KL Rahul) ಹಾಗೂ ಅವರ ಪತ್ನಿ ಅಥಿಯಾ ಶೆಟ್ಟಿ ಬಾಲಿವುಡ್​ನ ಸ್ಟಾರ್​ ದಂಪತಿ. ವಿರಾಟ್- ಅನುಷ್ಕಾ ರೀತಿಯಂತೆ ಅವರಿಬ್ಬರಿಗೂ ದೊಡ್ಡ ಅಭಿಮಾನ ವರ್ಗವಿದೆ. ಅವರು ಹೋದಲ್ಲಿ ಬಂದಲೆಲ್ಲ ಸುದ್ದಿಯಾಗುತ್ತಾರೆ. ಅಂತೆಯೇ ಅವರೀಗ ಮುಂಬೈನಲ್ಲಿ ದೊಡ್ಡ ಮನೆಯೊಂದು ಖರೀದಿಸಿದ್ದಾರೆ.

ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಪುತ್ರಿಯೂ ಆಗಿರುವ ಬಾಲಿವುಡ್ ನಟಿ ಅಥಿಯಾ 2023 ರ ಜನವರಿಯಲ್ಲಿ ರಾಹುಲ್ ಅವರನ್ನು ವಿವಾಹವಾದರು. ಇತ್ತೀಚೆಗೆ, ರಾಹುಲ್ ಮತ್ತು ಅಥಿಯಾ ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿ ಹೊಸ ಅಪಾರ್ಟ್​ಮೆಂಟ್​​ ಖರೀದಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಾಂದ್ರಾದಲ್ಲಿರುವ ಅವರ ಹೊಸ ಮನೆಯ ಮೌಲ್ಯ 20 ಕೋಟಿ ರೂಪಾಯಿ. ಸಂಧು ಪ್ಯಾಲೇಸ್​​ ಕಟ್ಟಡದ ನೆಲ ಪ್ಲಸ್ -18 ಮಹಡಿಗಳ ಕಟ್ಟಡದ ಎರಡನೇ ಮಹಡಿಯಲ್ಲಿ ಮನೆಯಿದ್ದು ಒಟ್ಟು 3,350 ಚದರ ಅಡಿ ಸ್ಥಳವನ್ನು ಹೊಂದಿದೆ.

ಅನೇಕ ಬಾಲಿವುಡ್ ಸೂಪರ್​​ಸ್ಟಾರ್​ಗಳು ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾದ ಅಮೀರ್ ಖಾನ್ ಕೂಡ ಇದ್ದಾರೆ. ಅವರು ವಿಶೇಷವಾಗಿ ಬಾಂದ್ರಾದ ಪಾಲಿ ಹಿಲ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಶಾರುಖ್ ಖಾನ್, ಸೈಫ್ ಅಲಿ ಖಾನ್, ಸಲ್ಮಾನ್ ಖಾನ್, ಜಾನ್ವಿ ಕಪೂರ್ ಮತ್ತು ತ್ರಿಪ್ತಿ ಡಿಮ್ರಿ ಎಲ್ಲರೂ ಬಾಂದ್ರಾದಲ್ಲಿ ಅಪಾರ್ಟ್​ಮೆಂಟ್​ಗಳನ್ನು ಹೊಂದಿದ್ದಾರೆ.

ರಾಹುಲ್ ಮತ್ತು ಅಥಿಯಾ ಶೆಟ್ಟಿ 1.20 ಕೋಟಿ ರೂ.ಗಳ ಸ್ಟ್ಯಾಂಪ್ ಡ್ಯೂಟಿ ಮತ್ತು 30,000 ರೂ.ಗಳ ನೋಂದಣಿ ಶುಲ್ಕ ಪಾವತಿಸಿದ್ದಾರೆ ಎಂದು ದಾಖಲೆಗಳು ತಿಳಿಸಿವೆ. ಅಪಾರ್ಟ್​ಮೆಂಟ್​ ನಾಲ್ಕು ಕಾರ್ ಪಾರ್ಕಿಂಗ್ ಸ್ಥಳ ಹೊಂದಿದೆ. ದಾಖಲೆಗಳ ಪ್ರಕಾರ ಮನೆಯನ್ನು ಜುಲೈ 15 ರಂದು ನೋಂದಾಯಿಸಲಾಗಿದೆ.

ಇತ್ತೀಚೆಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಶಸ್ತಿ ವಿಜೇತ ತಂಡ ಮತ್ತು ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಕೋಚಿಂಗ್ ಸಿಬ್ಬಂದಿಗೆ 125 ಕೋಟಿ ರೂ.ಗಳ ಬಹುಮಾನದ ಮೊತ್ತವನ್ನು ವಿತರಿಸುವುದಾಗಿ ಘೋಷಿಸಿತು. ಆದರೆ, ವಿಶ್ವ ಕಪ್ ಗೆ ರಾಹುಲ್ ಆಯ್ಕೆಯಾಗಿರಲಿಲ್ಲ. ಆದಾಗ್ಯೂ ದಂಪತಿ ಹೊಸ ಮನೆ ಖರೀದಿಸಿ ಖುಷಿಯಲ್ಲಿದ್ದಾರೆ.

ಪಾಲಿ ಹಿಲ್ ಐಷಾರಾಮಿ ಪ್ರದೇಶ

ಪಾಲಿ ಹಿಲ್ ಮುಂಬೈನ ಪ್ರೀಮಿಯಂ ಜಾಗವಾಗಿದ್ದು ಅಲ್ಲಿ ಹಲವಾರು ಬಾಲಿವುಡ್ ತಾರೆಯರು ಮತ್ತು ದೊಡ್ಡ ಮೌಲ್ಯದ ಮನೆಗಳನ್ನು ಖರೀದಿಸಿದ್ದಾರೆ. ಸ್ಥಳೀಯ ದಲ್ಲಾಳಿಗಳ ಪ್ರಕಾರ ಹಲವಾರು ಐಷಾರಾಮಿ ವಸತಿ ಯೋಜನೆಗದರವು ಪ್ರತಿ ಚದರ ಅಡಿಗೆ 1 ಲಕ್ಷ ರೂ.

ಇದನ್ನೂ ಓದಿ:Gautam Gambhir : ಬೌಲಿಂಗ್​, ಬ್ಯಾಟಿಂಗ್​ ಕೋಚ್​ಗಳ ಆಯ್ಕೆಯಲ್ಲಿ ಗಂಭೀರ್​ ಬೇಡಿಕೆಗಳನ್ನು ತಿರಸ್ಕರಿಸಿದ ಬಿಸಿಸಿಐ

ಒಂದು ಕಾಲದಲ್ಲಿ 2,000 ಚದರ ಮೀಟರ್ (ಚದರ ಮೀಟರ್) ಪ್ಲಾಟ್​​ನಲ್ಲಿದ್ದ ಬಾಲಿವುಡ್ ನಟ ದಿಲೀಪ್ ಕುಮಾರ್ ಅವರ ಸ್ಥಳೀಯ ಹೆಗ್ಗುರುತಾಗಿದ್ದ ಬಂಗಲೆಯನ್ನು ರಿಪರೇರಿ ಮಾಡಿದ ನಂತರ ಪಾಲಿ ಹಿಲ್ ಆಗಸ್ಟ್ 2023 ರಲ್ಲಿ ಸುದ್ದಿಯಾಗಿತ್ತು. ಬಾಲಿವುಡ್ ನಟ ಅಮೀರ್ ಖಾನ್ ಅವರೂ ತಮ್ಮ ಮನೆಯನ್ನು ಪುನರಾಭಿವೃದ್ಧಿ ಮಾಡಲು ಸಜ್ಜಾಗಿದ್ದಾರೆ.

Continue Reading

Latest

Tauba Tauba : ಲಂಡನ್‌ ಬೀದಿಯಲ್ಲಿ ‘ತೌಬಾ ತೌಬಾ’ ಹಾಡಿಗೆ ಸಖತ್‌ ಆಗಿ ಸ್ಟೆಪ್ಸ್‌ ಹಾಕಿದ ಬೆಡಗಿಯರು; ವಿಡಿಯೊ ವೈರಲ್

Tauba Tauba: ನಟ ವಿಕ್ಕಿ ಕೌಶಲ್ ‘ಬ್ಯಾಡ್ ನ್ಯೂಸ್‌’ ಚಿತ್ರದ ‘ತೌಬಾ ತೌಬಾ’ ಹಾಡಿನ ವಿಡಿಯೊ ಬಿಡುಗಡೆಯಾಗಿದೆ. ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ರೀಲ್ಸ್ ಪ್ರಿಯರಂತೂ ಈ ಹಾಡಿಗೆ ಈಗಾಗಲೇ ಹೆಜ್ಜೆ ಹಾಕಲು ತಯಾರಾಗಿದ್ದಾರೆ. ಲಂಡನ್ನ ಬೀದಿಯಲ್ಲಿ ಹುಡುಗಿಯರಿಬ್ಬರೂ ವಿಕ್ಕಿ ಕೌಶಲ್ ಅಭಿನಯದ ಬ್ಯಾಡ್ ನ್ಯೂಜ್ ಚಿತ್ರದ ‘ತೌಬಾ ತೌಬಾ’ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದಂತೂ ಸತ್ಯ.

VISTARANEWS.COM


on

Tauba Tauba
Koo


ಲಂಡನ್ : ವಿಕ್ಕಿ ಕೌಶಲ್ (Vicky Kaushal) ಮತ್ತು ತೃಪ್ತಿ ಡಿಮ್ರಿ ನಟನೆಯ ‘ಬ್ಯಾಡ್ ನ್ಯೂಸ್​​​ ‘ ಬಾಲಿವುಡ್​ ಚಿತ್ರ ಜುಲೈ 19ಕ್ಕೆ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಈ ಎಲ್ಲದಕ್ಕಿಂತ ಮೊದಲೇ ಅದರ ಹಾಡೊಂದು ವೈರಲ್ ಆಗಿದೆ. ‘ತೌಬಾ ತೌಬಾ’ (Tauba Tauba) ಹಾಡಿನ ವಿಡಿಯೊ ಬಿಡುಗಡೆಯಾದ ಕ್ಷಣದಿಂದ ರೀಲ್ಸ್ ಹಾಗೂ ಇನ್ನಿತರ ಕಾರಣಕ್ಕೆ ಜನಪ್ರಿಯವಾಗುತ್ತಿದೆ. ಪಂಜಾಬಿ ಸ್ಟ್ರೈಲ್​ನಲ್ಲಿರುವ ಇದರ ಡ್ಯಾನ್ಸ್ ಆನ್‍ಲೈನ್‍ನಲ್ಲಿ ಬಿರುಗಾಳಿ ಎಬ್ಬಿಸಿದೆ . ಹಾಗಾಗಿ ರೀಲ್ಸ್‌ ಪ್ರಿಯರು ಈ ಡ್ಯಾನ್ಸ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಈ ನಡುವೆ ಲಂಡನ್‍ನ ಬೀದಿಯಲ್ಲೂ ಈ ಹಾಡಿಗೆ ಯುವ ತಂಡವೊಂದು ಕುಣಿದು ಕುಪ್ಪಳಿಸಿದೆ. ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Vicky Kaushal

ಈ ವಿಡಿಯೊದಲ್ಲಿ ಕಪ್ಪು ಕುರ್ತಾ ಧರಿಸಿದ ಇಬ್ಬರು ಹುಡುಗಿಯರು ಕಲರ್​ಫುಲ್​​ ದುಪಟ್ಟಾಗಳೊಂದಿಗೆ ಬೀದಿಗಳಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ತೌಬಾ ತೌಬಾ ಹಾಡು ಪ್ಲೇ ಮಾಡಿ ಹಾಡಿನ ಬೀಟ್‍ಗಳಿಗೆ ಸಲೀಸಾಗಿ ಸ್ಟೆಪ್ ಹಾಕಿದ್ದಾರೆ. ಅಲ್ಲಿ ತಮ್ಮ ಗಿದ್ಧಾ ಸ್ಟೆಪ್‍ಗಳನ್ನು (ಪಂಜಾಬಿ ಸ್ಟೆಪ್​) ಸೇರಿದ್ದಾರೆ ಹಾಡಿನಲ್ಲಿ ವಿಕ್ಕಿ ಕೌಶಲ್ ಮಾಡುವ ಅದೇ ಹೆಜ್ಜೆಗಳನ್ನು ಅವರು ಮಾಡಲು ಪ್ರಯತ್ನಿಸಿದ್ದಾರೆ. ಈ ವಿಡಿಯೊವನ್ನು @annaikaahuja ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು ಹಂಚಿಕೊಂಡ ಬಳಕೆದಾರರು ನಟ ವಿಕ್ಕಿ ಕೌಶಲ್ ಮತ್ತು ಗಾಯಕ ಕರಣ್ ಔಜ್ಲಾ ಅವರಿಗೆ ಟ್ಯಾಗ್ ಮಾಡಿ, “@karanaujla @vickykaushal09 ನಮ್ಮ ಪಂಜಾಬಿ ರಾಜರಿಗೆ, ಗಿದ್ಧಾ ಟಚ್ ಕಡ್ಡಾಯ ಎಂದು ಬರೆದಿದ್ದಾರೆ.

ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ, ಇದಕ್ಕೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‍ಗಳು ಬಂದಿದೆ. ಅಲ್ಲದೇ ಇದರ ವೀಕ್ಷಕರ ಸಂಖ್ಯೆಗಳು ಇನ್ನೂ ವೇಗವಾಗಿ ಹೆಚ್ಚುತ್ತಿವೆ. ಈ ವೈರಲ್ ವಿಡಿಯೊಗೆ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಪೋಸ್ಟ್‌ನ ಕಾಮೆಂಟ್‍ಗಳ ವಿಭಾಗದಲ್ಲಿ ಅನೇಕ ಬಳಕೆದಾರರು ಹಾರ್ಟ್ ಮತ್ತು ಫಯರ್ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. “ನಮ್ಮ ಫೀಡ್‌ಗಳಿಗೆ ತೌಬಾ ತೌಬಾದ ಆವೃತ್ತಿ ಬೇಕು” ಎಂದು ಬಳಕೆದಾರರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬರು ತುಂಬಾ ಚೆನ್ನಾಗಿ ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನೊಬ್ಬರು “ತುಂಬಾ ಒಳ್ಳೆಯದಾಗಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು “ಜಸ್ಟ್ ವಾವ್” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಸ್ಟ್ರೆಚರ್‌ ಇಲ್ಲದ ಸರ್ಕಾರಿ ಆಸ್ಪತ್ರೆ; ಪತಿಯನ್ನು ಬೆನ್ನ ಮೇಲೆ ಹೊತ್ತು ನಡೆದ ಪತ್ನಿ! ಮನಮಿಡಿಯುವ ವಿಡಿಯೊ

ಆನಂದ್ ತಿವಾರಿ ಅವರ ನಿರ್ದೇಶನದ ‘ಬ್ಯಾಡ್ ನ್ಯೂಸ್​’ ಹಾಸ್ಯ ಚಿತ್ರದಲ್ಲಿ ತೃಪ್ತಿ ಡಿಮ್ರಿ, ವಿಕ್ಕಿ ಕೌಶಲ್ ಮತ್ತು ಎಮಿ ವಿರ್ಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜುಲೈ 19 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.

Continue Reading

ಬಾಲಿವುಡ್

Anant Ambani: ಅನಂತ್ ಅಂಬಾನಿ ಮದುವೆಯಲ್ಲಿ ಖ್ಯಾತ ಬಾಲಿವುಡ್‌ ನಟನ ಮಗಳ ದರ್ಪ; ಮುನಿಸಿಕೊಂಡಿದ್ದೇಕೆ?

Anant Ambani: ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಅವರ ಮುದ್ದಿನ ಮಗಳು. ಶನಯಾ ಅವರ ಈ ಅಸಮಾಧಾನಕ್ಕೆ ನಿಖರವಾದ ಕಾರಣವೇನು ಅನ್ನುವುದಕ್ಕೆ ಉತ್ತರ ಸದ್ಯಕ್ಕಿಲ್ಲವಾದರೂ. ತನ್ನ ಬ್ಯಾಗ್‌ನ್ನೂ ಭದ್ರತಾ ಸಿಬ್ಬಂದಿ ಪರಿಶೀಲಿಸಿದ್ದಕ್ಕೆ ಶನಯಾ ಕೋಪ ಮಾಡಿಕೊಂಡಿದ್ದಾರೆ ಎನ್ನುವ ಅಭಿಪ್ರಾಯವನ್ನು ವಿಡಿಯೊ ವೈರಲ್ ಆದ ಬೆನ್ನಲ್ಲೇ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

VISTARANEWS.COM


on

Anant Ambani wedding Shanaya Kapoor trolled for arguing with security
Koo

ಬೆಂಗಳೂರು: ರಾಜಕಾರಣಿಗಳು, ಬಾಲಿವುಡ್ ಸೂಪರ್‌ಸ್ಟಾರ್‌ಗಳು ಮತ್ತು ಕ್ರಿಕೆಟಿಗರ ಜತಗೆ, ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚಂಟ್‌ ಅವರ ಮದುವೆಯ ಅತಿಥಿಗಳ ಪಟ್ಟಿಯಲ್ಲಿ ಹಲವಾರು ಸ್ಟಾರ್ ಮಕ್ಕಳು ಭಾಗಿಯಾಗಿದ್ದರು. ಶಾರುಖ್ ಖಾನ್ ಅವರ ಮಕ್ಕಳಾದ ಆರ್ಯನ್ ಮತ್ತು ಸುಹಾನಾ ಅವರಿಂದ ಹಿಡಿದು ಜಾಹ್ನವಿ ಕಪೂರ್‌ ಮತ್ತು ಖುಷಿ ಕಪೂರ್, ಅನನ್ಯ ಪಾಂಡೆ ಜೊತೆಗೆ ಎಲ್ಲಾ ಯುವ ಸೆಲೆಬ್ರಿಟಿಗಳು ಸೇರಿದ್ದರು. ಅಲ್ಲದೆ, ಅನನ್ಯಾ ಮತ್ತು ಸುಹಾನಾ ಅವರ ಬಾಲ್ಯದ ಬೆಸ್ಟಿ, ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ಅವರ ಪುತ್ರಿ ಶನಯಾ ಕಪೂರ್ ಕೂಡ ಇದ್ದರು. ಶನಯಾ ಕಪೂರ್ ಇದೀಗ ಸುದ್ದಿಯಾಗಿದ್ದಾರೆ. ಅದ್ಯಾರದ್ದೋ ಜತೆ ವಾದವನ್ನೂ ಮಾಡುತ್ತಿದ್ದರು. ಮುಖ ಊದಿಸಿಕೊಂಡು ನಿಂತಿದ್ದರು. ಈ ವಿಚಾರ ಈಗ ಬಹಿರಂಗಗೊಂಡಿದೆ.

ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಅವರ ಮುದ್ದಿನ ಮಗಳು. ಶನಯಾ ಅವರ ಈ ಅಸಮಾಧಾನಕ್ಕೆ ನಿಖರವಾದ ಕಾರಣವೇನು ಅನ್ನುವುದಕ್ಕೆ ಉತ್ತರ ಸದ್ಯಕ್ಕಿಲ್ಲವಾದರೂ. ತನ್ನ ಬ್ಯಾಗ್‌ನ್ನೂ ಭದ್ರತಾ ಸಿಬ್ಬಂದಿ ಪರಿಶೀಲಿಸಿದ್ದಕ್ಕೆ ಶನಯಾ ಕೋಪ ಮಾಡಿಕೊಂಡಿದ್ದಾರೆ ಎನ್ನುವ ಅಭಿಪ್ರಾಯವನ್ನು ವಿಡಿಯೊ ವೈರಲ್ ಆದ ಬೆನ್ನಲ್ಲೇ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಅನಂತ್ ಮತ್ತು ರಾಧಿಕಾ ಅವರ ಮದುವೆಯ ಪ್ರಿ ವೆಡ್ಡಿಂಗ್‌ನಲ್ಲಿಯೂ ಶನಯಾ ಗ್ಲಾಮ್ ದೇಸಿ ಲುಕ್‌ಗಳು ವೈರಲ್‌ ಆಗಿತ್ತು. ಇದೀಗ ಶನಯಾ ಟ್ರೋಲ್‌ಗೆ ಗುರಿಯಾಗಿದ್ದಾರೆ. ʻʻಶನಯಾ ಬ್ಯಾಕ್‌ ಚೆಕ್ ಮಾಡಿದ್ದಕ್ಕಾಗಿ ಸಿಟ್ಟಾಗಿದ್ದಾರೆʼʼಎಂದು ಅನೇಕ ಕಮೆಂಟ್‌ ಮಾಡಿದ್ದಾರೆ. ಅಂಬಾನಿ ಮದುವೆಯಲ್ಲಿ ಗುಲಾಬ್ ಜಾಮೂನು ಕದ್ದು, ತನ್ನ ಬ್ಯಾಗ್‌ನಲ್ಲಿ ಇಟ್ಟುಕೊಂಡಿರಬಹುದು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಚಮಚ ಕಳ್ಳಿ ಎಂದು ಕಾಲೆಳೆಯುತ್ತಿದ್ದಾರೆ.

ಇದನ್ನೂ ಓದಿ: Anant Ambani Wedding: ಅನಂತ್‌ ಅಂಬಾನಿ ಮದುವೆಯಲ್ಲಿ ಬಾಂಬ್‌ ಸ್ಫೋಟಕ್ಕೆ ನಡೆದಿತ್ತಾ ಸಂಚು? ಕಿಡಿಗೇಡಿ ಅರೆಸ್ಟ್‌

Shanaya going off
byu/Jealous_Summer_4867 inBollyBlindsNGossip

ಶನಾಯಾ ಇನ್ನೂ ಯಾವುದೇ ಸಿನಿಮಾ ಮಾಡಿಲ್ಲ. ಕೆಲವರು ಇನ್ನೂ ಸಿನಿಮಾ ಮಾಡದೆಯೇ ಈ ರೀತಿ ದರ್ಪ ತೋರುತ್ತಿದ್ದಾರೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಮೋಹನ್ ಲಾಲ್ ಜೊತೆಗೆ ವೃಷಭದಲ್ಲಿ ತೆರೆಯ ಮೇಲೆ ಮಿಂಚಲಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani Wedding) ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ಅವರ ವಿವಾಹವು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತ್ತು.

ಅನಂತ್ ಮತ್ತು ರಾಧಿಕಾ ಅವರ ವಿವಾಹ ಆರತಕ್ಷತೆಯಲ್ಲಿ ಗೋವಿಂದಾ, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ತಮನ್ನಾ ಭಾಟಿಯಾ, ಬಿಪಾಶಾ ಬಸು, ಕರಣ್ ಸಿಂಗ್ ಗ್ರೋವರ್, ಭಾಗ್ಯಶ್ರೀ, ರಾಜ್ ಕುಮಾರ್ ರಾವ್, ಜಾಕಿ ಶ್ರಾಫ್, ಟೈಗರ್ ಶ್ರಾಫ್, ರಾಕುಲ್ ಪ್ರೀತ್ ಸಿಂಗ್ ಸೇರಿದಂತೆ ಅನೇಕ ಸಿನಿಮಾ ನಟ ನಟಿಯರು ಭಾಗವಹಿಸಿದ್ದರು. 

Continue Reading

ವೈರಲ್ ನ್ಯೂಸ್

Urfi Javed: ಮತ್ತೆ ಕುಡಿದು ತೇಲಾಡಿದ ಉರ್ಫಿ ಜಾವೇದ್; ವಿಡಿಯೊ ವೈರಲ್‌!

Urfi Javed: ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು.

VISTARANEWS.COM


on

Urfi Javed Steps Out Drunk For Third Time In A Month
Koo

ಬೆಂಗಳೂರು: ನಟಿ ಉರ್ಫಿ ಜಾವೇದ್ (Urfi Javed) ಮತ್ತೆ ಕುಡಿದು ತೇಲಾಡಿರುವ ವಿಡಿಯೊ ವೈರಲ್‌ ಆಗಿದೆ. ಮೂರನೇ ಬಾರಿಗೆ ಉರ್ಫಿ ಈ ರೀತಿ ಕಂಡು ಬಂದಿದ್ದಾರೆ. ಕಾರಿನ ಬಳಿ ಹೋಗಲಾರದೇ ಸ್ನೇಹಿತರ ಸಹಾಯದಿಂದ ನಟಿ ಹೋಗುವುದು ಕಂಡು ಬಂತು. ಹಳದಿ ಬಣ್ಣದ ಮಿನಿ ಡ್ರೆಸ್ ಧರಿಸಿದ್ದರು ಉರ್ಫಿ.

ಪಬ್‌ನಿಂದ ಹೊರಬಂದ ತಕ್ಷಣ, ಪಾಪರಾಜಿಗಳು ಮತ್ತು ಸ್ಥಳೀಯರು ಉರ್ಫಿಯನ್ನು ಗುಂಪುಗೂಡಿದರು. ಕಾರಿನವರೆಗೆ ನಡೆಯಲು ಪ್ರಯಾಸಪಡುತ್ತಿದ್ದಾಗ, ಅವರ ಸಹೋದರಿ ಉರ್ಫಿಯನ್ನು ಬಿಗಿಯಾಗಿ ಹಿಡಿದುಕೊಂಡು ಜನರಿಗೆ ದಾರಿ ಮಾಡಿಕೊಡುವಂತೆ ಕೇಳುತ್ತಿದ್ದರು. ʻತುಂಬ ಕುಡಿದ್ದಿದ್ದೇನೆʼʼಎಂದು ಉರ್ಫಿ ಕೂಡ ಹೋಗಲು ದಾರಿ ಮಾಡಿಕೊಂಡಿ ಎಂದು ವಿನಂತಿಸಿದ್ದಾರೆ.

ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇಂಟರ್‌ನೆಟ್‌ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿತ್ತು.

Urfi Javed: ಉರ್ಫಿ ಜಾವೇದ್‌ ಫುಲ್‌ ಟೈಟ್‌; ಸ್ನೇಹಿತೆ ಪಟ್ಟ ಹರಸಾಹಸ ಅಷ್ಟಿಷ್ಟಲ್ಲ!ಇದನ್ನೂ ಓದಿ:

ಬಾಲಿವುಡ್‌ ಕಲಾವಿದರಾದ ತುಷಾರ್ ಕಪೂರ್ ಮತ್ತು ಮೌನಿ ರಾಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಎಂದರೆ ಇದು ಉರ್ಫಿ ಜಾವೇದ್‌ ಅಭಿನಯದ ಮೊದಲ ಬಾಲಿವುಡ್‌ ಚಿತ್ರ. ಬಿಗ್‌ಬಾಸ್‌ ರಿಯಾಲಿಟಿ ಶೋದ ಮೂಲಕ ಗಮನ ಸೆಳೆದಿದ್ದ ಅವರು ಸಿನಿಮಾದಲ್ಲಿ ಯಾವ ರೀತಿ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಮೂಡಿತ್ತು. ಮಾತ್ರವಲ್ಲ ಅವರು ಸ್ಪ್ಲಿಟ್‌ವಿಲ್ಲಾ ಎಕ್ಸ್ 5 (Splitsvilla X5) ಶೋದಲ್ಲಿಯೂ ಕಾಣಿಸಿಕೊಂಡಿದ್ದಾರೆ.

Continue Reading
Advertisement
ಕ್ರೀಡೆ15 mins ago

KL Rahul : ಆಮಿರ್​ ಖಾನ್ ಮನೆ ಪಕ್ಕದಲ್ಲೇ 20 ಕೋಟಿ ಫ್ಲ್ಯಾಟ್ ಖರೀದಿಸಿದ ರಾಹುಲ್, ಅಥಿಯಾ ದಂಪತಿ

Raj B Shetty starrer roopanthara is releasing on July 26
ಕರ್ನಾಟಕ18 mins ago

Kannada New Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದ ರಾಜ್ ಬಿ ಶೆಟ್ಟಿ ನಟನೆಯ ‘ರೂಪಾಂತರ’ ಚಿತ್ರ ಜು.26ಕ್ಕೆ ರಿಲೀಸ್‌

PR Seva Award for Media Connect in Bengaluru
ಕರ್ನಾಟಕ20 mins ago

Media Connect: ಮೀಡಿಯಾ ಕನೆಕ್ಟ್‌ಗೆ ಭರವಸೆಯ ಪಿಆರ್‌ ಸೇವಾ ಪ್ರಶಸ್ತಿ

Action to reduce pulses price says Union Minister Pralhad Joshi
ಕರ್ನಾಟಕ22 mins ago

Pralhad Joshi: ಬೇಳೆ ದರ ಇಳಿಕೆಗೆ ಕೇಂದ್ರದಿಂದ ಕ್ರಮ: ಪ್ರಲ್ಹಾದ್‌ ಜೋಶಿ

Minister Mankala Vaidya instructed to file a case against IRB and National Highways officers
ಕರ್ನಾಟಕ24 mins ago

Uttara Kannada News: ಐಆರ್‌ಬಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ: ಸಚಿವ ಮಂಕಾಳ ವೈದ್ಯ ಸೂಚನೆ

Passenger Arrest
Latest35 mins ago

Passenger Arrest: ವಿಮಾನದಲ್ಲಿ ಗಗನಸಖಿ ನೀಡಿದ ನೀರು, ಆಹಾರ ಸೇವಿಸದ ಪ್ರಯಾಣಿಕನ ಬಂಧನ! ಕಾರಣ ಕುತೂಹಲಕರ!

7th Pay Commission
ಕರ್ನಾಟಕ36 mins ago

7th Pay Commission: ವೇತನ ಹೆಚ್ಚಿಸಿದ್ದಕ್ಕೆ ನೌಕರರಿಂದ ಅಭಿನಂದನೆ; ಸರ್ಕಾರದ ನಿಲುವುಗಳಿಗೆ ತಕ್ಕಂತೆ ಕೆಲಸ ಮಾಡಿ ಎಂದ ಸಿಎಂ

Gautam Gambhir
ಪ್ರಮುಖ ಸುದ್ದಿ38 mins ago

Gautam Gambhir : ಬೌಲಿಂಗ್​, ಬ್ಯಾಟಿಂಗ್​ ಕೋಚ್​ಗಳ ಆಯ್ಕೆಯಲ್ಲಿ ಗಂಭೀರ್​ ಬೇಡಿಕೆಗಳನ್ನು ತಿರಸ್ಕರಿಸಿದ ಬಿಸಿಸಿಐ

Murder Case
Latest51 mins ago

Murder Case: ನರ್ಸ್‌ ಜೊತೆ ಅಕ್ರಮ ಸಂಬಂಧ; ಪತ್ನಿ, ಇಬ್ಬರು ಮಕ್ಕಳನ್ನು ಕೊಂದ ಡಾಕ್ಟರ್‌!

Nita Ambani Saree Fashion
ಫ್ಯಾಷನ್56 mins ago

Nita Ambani Saree Fashion: ಮಾರುಕಟ್ಟೆಗೆ ಬಂತು ನೀತಾ ಅಂಬಾನಿಯ ಸೀರೆಗಳ ಮಾಡೆಲ್‌!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌