Monsoon Skincare: ಮಳೆಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು? - Vistara News

ಆರೋಗ್ಯ

Monsoon Skincare: ಮಳೆಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು?

Monsoon Skincare: ಚಳಿಗಾಲಕ್ಕೆ ನಮ್ಮ ಚರ್ಮ ಹೆಚ್ಚಿನ ಆರೈಕೆಯನ್ನು ಬೇಡುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ ಮಳೆಗಾಲದಲ್ಲಿ ಈ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ ನಾವು. ತೇವಾಂಶ ಹೆಚ್ಚಿರುವ ಋತುವಿನಲ್ಲೂ ಚರ್ಮಕ್ಕೆ ಬೇರೆ ರೀತಿಯ ಆರೈಕೆ ಬೇಕಾಗುತ್ತದೆ? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Monsoon Skincare
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾಲಕ್ಕೆ ತಕ್ಕಂತೆ ನಡೆಯಬೇಕು ಎಂಬ ಮಾತು ಸರ್ವಕಾಲಕ್ಕೂ ಸತ್ಯ. ಏಕೆಂದರೆ, ಬೇಸಿಗೆಯಲ್ಲಿದ್ದಂತೆ ಮಳೆಗಾಲದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಮಳೆಗಾಲಕ್ಕೆಂದೇ ಕೆಲವು ಪ್ರದೇಶಗಳಲ್ಲಿ ವಿಶೇಷ ತಯಾರಿಯೂ ಬೇಕಾಗುತ್ತದೆ. ಮೂರು ತಿಂಗಳು ಸತತವಾಗಿ ಮಳೆ ಚಚ್ಚುವ ಸ್ಥಳಗಳಲ್ಲಿ ಹೊರ ಜಗತ್ತಿನ ಸಂಪರ್ಕವೂ ಕಡಿಮೆಯಾಗಬಹುದು. ಅದಕ್ಕಾಗಿ ಅಕ್ಕಿ-ಬೇಳೆಗಳಲ್ಲಿ ಶೇಖರಿಸಿಟ್ಟುಕೊಂಡು, ಕೆಲವು ವಿಶೇಷ ಬಗೆಯ ತರಕಾರಿಗಳನ್ನು ಬೇಸಿಗೆಯಲ್ಲಿ ಒಣಗಿಸಿಟ್ಟುಕೊಂಡು, ದೀರ್ಘಕಾಲ ಬಾಳಿಕೆ ಬರುವ ಬೂದುಗುಂಬಳ, ಸಿಹಿಕುಂಬಳ, ಗಡ್ಡೆಗೆಣಸುಗಳು ಮುಂತಾದವನ್ನು ಮಳೆಗಾಲಕ್ಕೆಂದೇ ಕಾಪಿಟ್ಟುಕೊಳ್ಳುತ್ತಾರೆ. ಇವೆಲ್ಲ ಕೆಲವು ಪ್ರದೇಶಗಳ ಮಾತಾಯಿತು. ಆದರೆ ಹಾಗೆಲ್ಲ ಇಲ್ಲದ ಸ್ಥಳಗಳಲ್ಲೂ ಮಳೆಗಾಲಕ್ಕೆ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸೂಕ್ತ ವಸ್ತ್ರಗಳು, ಭಿನ್ನ ರೀತಿಯ ಆಹಾರಗಳು… ಹೀಗೆ. ಆದರೆ ತ್ವಚೆಯ ಆರೈಕೆಗಾಗಿ ನಾವೇನು ಮಾಡುತ್ತೇವೆ? ಚಳಿಗಾಲಕ್ಕೆ ನಮ್ಮ ಚರ್ಮ ಹೆಚ್ಚಿನ ಆರೈಕೆಯನ್ನು ಬೇಡುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ ಮಳೆಗಾಲದಲ್ಲಿ ಈ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ ನಾವು. ತೇವಾಂಶ ಹೆಚ್ಚಿರುವ ಋತುವಿನಲ್ಲೂ ಚರ್ಮಕ್ಕೆ ಬೇರೆ ರೀತಿಯ ಆರೈಕೆ ಬೇಕಾಗುತ್ತದೆ. ಏನದು ಎಂಬುದನ್ನು ತಿಳಿಯೋಣ.
ಹವಾಮಾನ ಶುಷ್ಕವಾಗಿದ್ದಾಗ ಹೆಚ್ಚಿನ ತೇವವನ್ನು ತ್ವಚೆಗೆ ನಾವೇ ಒದಗಿಸಬೇಕಾಗುತ್ತದೆ. ಆದರೆ ಋತುಮಾನವೇ ಒದ್ದೆ ಸುರಿಯುತ್ತಿರುವಾಗ ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚಿಬಿಡಬಹುದು. ಕಾರಣ, ತೈಲದಂಥ ಸೇಬಮ್‌ ಸ್ರವಿಸುವಿಕೆ ಹೆಚ್ಚಾಗುತ್ತದೆ. ಇದರ ಜೊತೆಗೆ, ವೈರಸ್‌, ಬ್ಯಾಕ್ಟೀರಿಯಗಳ ಕಾಟವೂ ಹೆಚ್ಚಿರುತ್ತದೆ. ಇವೆಲ್ಲದರ ಫಲವಾಗಿ ಚರ್ಮ ಹೊಳಪು ಕಳೆದುಕೊಂಡು, ಮಂಕಾಗಿ, ಎಣ್ಣೆ ಸುರಿದು, ಮೊಡವೆಗಳೂ ಹೆಚ್ಚುವಂತಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಚರ್ಮದ ಆರೈಕೆಯನ್ನು (Monsoon Skincare) ಪ್ರತ್ಯೇಕವಾಗಿ ಮಾಡಬೇಕಾಗುತ್ತದೆ.

Asian woman face wash exfoliate scrub soap foam with skincare cl

ಸ್ವಚ್ಛತೆ

ಎಣ್ಣೆ ಸುರಿಯುವ ಮುಖವನ್ನು ತೊಳೆದು ಶುದ್ಧವಾಗಿ ಇರಿಸಿಕೊಳ್ಳುವುದು ಮುಖ್ಯ. ಅದಕ್ಕಾಗಿ ಒಳ್ಳೆಯ ಕ್ಲೆನ್ಸರ್‌ ಬಳಸಿ. ಮುಖದ ಎಣ್ಣೆಯನ್ನು ತೆಗೆಯುವ ನೆವದಲ್ಲಿ, ತ್ವಚೆಯ ನೈಸರ್ಗಿಕ ತೈಲವನ್ನೂ ಕಿತ್ತು ತೆಗೆಯುವಂಥ ಕಠೋರ ಕ್ಲೆನ್ಸರ್‌ಗಳು ಬೇಡ. ಆದರೆ ಎಣ್ಣೆಗರೆಯುವ ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸುವಂತಿರಬೇಕು. ಜೊತೆಗೆ ಸನ್‌ಬ್ಲಾಕ್‌, ಮೇಕಪ್‌ ಮುಂತಾದ ಯಾವುದನ್ನೇ ಆದರೂ ಮುಖದ ಮೇಲೆ ಉಳಿಸಿಕೊಳ್ಳುವಂತಿಲ್ಲ. ಅದನ್ನೂ ರಾತ್ರಿ ಮಲಗುವ ಮುನ್ನ ಸಂಪೂರ್ಣ ತೆಗೆಯಬೇಕಾಗುತ್ತದೆ. ಹಾಗಿಲ್ಲದಿದ್ದರೆ ಚರ್ಮದ ರಂಧ್ರಗಳು ಬಿಗಿಯುವುದು ಖಚಿತ.

ಎಕ್ಸ್‌ಫಾಲಿಯೇಟರ್‌

ಲಘುವಾದ ಸ್ಕ್ರಬ್‌ಗಳು ಈ ಹೊತ್ತಿಗೆ ಬೇಕು. ಕಾರಣ, ಒಮ್ಮೆ ಮನೆಯಿಂದ ಹೊರಗೆ ಹೋಗ ಬಂದರೆ ವಾತಾವರಣದ ಕೊಳೆಯೆಲ್ಲ ಎಣ್ಣೆ ಸುರಿಯುವ ಮುಖಕ್ಕೆ ಅಂಟಿಕೊಳ್ಳುತ್ತದೆ. ಹಾಗಾಗಿ ಮೇಲ್ಪದರದ ಕೊಳೆಯನ್ನು ಸೌಮ್ಯವಾಗಿ ತೆಗೆಯುವುದು ಅಗತ್ಯ. ಇದಕ್ಕಾಗಿ ನಿಮ್ಮಿಷ್ಟದ ಫೇಸ್‌ಮಾಸ್ಕ್‌ ಉಪಯೋಗಿಸಿದರೂ ಆದೀತು. ಇವುಗಳನ್ನು ವಾರದಲ್ಲಿ ಮೂರು ಬಾರಿಯವರೆಗೂ ಉಪಯೋಗಿಸಬಹುದು.

skin care

ಮಾಯಿಶ್ಚರೈಸರ್

ಇದು ಮಳೆಗಾಲದಲ್ಲೂ ಬೇಕು. ಆದರೆ ಬಹಳ ಜಿಡ್ಡಿರುವಂಥದ್ದನ್ನು ಬಳಸಬೇಡಿ. ಲಘುವಾಗಿ ಚರ್ಮಕ್ಕೆ ತೇವವನ್ನು ಒದಗಿಸಿದರೆ ಸಾಕಾಗುತ್ತದೆ. ಹಾಗೆಂದು ಸಂಪೂರ್ಣ ಬಳಸದೆಯೂ ಇರಬೇಡಿ. ಇದು ಗಾಳಿ ಜೋರಾಗಿರುವ ಸಮಯವಾದ್ದರಿಂದ ಚರ್ಮವೆಲ್ಲ ಬಿರಿದಂತೆ ಆಗಬಹುದು. ವಾತಾವರಣದಲ್ಲಿ ತೇವ ಹೆಚ್ಚಿರುವ ಕಾರಣ ತೀರಾ ಎಣ್ಣೆಯ ಕ್ರೀಮ್‌ಗಳು ಬೇಡ.

ಅತಿಯಾಗಬಾರದು

ಜಾಹೀರಾತುಗಳಲ್ಲಿ ಏನೇನೋ ನೋಡಿ, ಸಿಕ್ಕಿದ್ದೆಲ್ಲವನ್ನೂ ತಂದು ಮುಖಕ್ಕೆ ಬಳಿದು ಪ್ರಯತ್ನಿಸುವ ಕಾಲವಿದು. ಹ್ಯಾಲುರೋನಿಕ್‌ ಆಮ್ಲ, ಗ್ಲೈಕಾಲ್‌, ರೆಟಿನಾಲ್‌ ಮುಂತಾದ ಹತ್ತು ಹಲವು ಅಂಶಗಳಿರುವ ನಾಲ್ಕಾರು ಉತ್ಪನ್ನಗಳನ್ನು ಒಟ್ಟಿಗೇ ಮುಖಕ್ಕೆ ಹಚ್ಚಿಕೊಳ್ಳುವವರಿದ್ದಾರೆ. ಉದಾ, ವಿಟಮಿನ್‌ ಸಿ, ವಿಟಮಿನ್‌ ಇ ಮತ್ತು ರೆಟಿನಾಲ್‌- ಇವಿಷ್ಟನ್ನೂ ಒಟ್ಟಿಗೆ ಚರ್ಮಕ್ಕೆ ಲೇಪಿಸಿದರೆ ಚರ್ಮದ ಮೇಲಿರುವ ಸೂಕ್ಷ್ಮ ರಕ್ಷಾ ಪರದೆ ಸಂಪೂರ್ಣ ನಾಶವಾಗಬಹುದು. ಯಾವ ಅಂಶದ ಗುಣಗಳು ಏನೇನು ಎಂಬುದನ್ನು ತಿಳಿದು ಬಳಸಬೇಕು. ಈ ನಿಟ್ಟಿನಲ್ಲಿ ತಜ್ಞರಲ್ಲಿ ಕೇಳಿಯೇ ಮುಂದುವರಿಯಿರಿ.

ಇದನ್ನೂ ಓದಿ: Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

ಪೋಷಕಾಂಶ

ನಮ್ಮ ಚರ್ಮದ ಆರೋಗ್ಯ ಶೇ. ೭೦ರಷ್ಟು ನಿರ್ಧಾರವಾಗುವುದು ನಮ್ಮ ದೇಹಕ್ಕೆ ದೊರೆಯುವ ಸತ್ವಗಳ ಮೇಲೆ. ಉಳಿದ ಶೇ. ೩೦ರಷ್ಟು ಮಾತ್ರವೇ ಇತರ ಆರೈಕೆಯನ್ನು ಅವಲಂಬಿಸಿದೆ. ಹಾಗಾಗಿ ಮಳೆಗಾಲವಾದರೂ ಸಾಕಷ್ಟು ನೀರು ಕುಡಿಯಿರಿ. ಈ ದಿನಗಳಲ್ಲಿ ದೊರೆಯುವ ಹಣ್ಣು-ತರಕಾರಿಗಳನ್ನು ತಿನ್ನಿ. ಜಿಡ್ಡಿ, ಕರಿದ ತಿಂಡಿಗಳನ್ನು ತಿಂದಷ್ಟೂ ಚರ್ಮದ ಅವಸ್ಥೆ ಹದಗೆಡುತ್ತದೆ. ದೇಹವನ್ನು ಆಗಾಗ ಡಿಟಾಕ್ಸ್‌ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Mosquitoes Bite: ಎಣ್ಣೆ ಹೊಡೆಯುವವರನ್ನು ಸೊಳ್ಳೆಗಳು ಕಚ್ಚುವುದು ಹೆಚ್ಚು! ಇದಕ್ಕಿದೆ ವೈಜ್ಞಾನಿಕ ಕಾರಣ!

ಮಲೇರಿಯಾ, ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಹೆಣ್ಣು ಸೊಳ್ಳೆಗಳು (Mosquitoes Bite) ಸಂತಾನೋತ್ಪತ್ತಿಗಾಗಿ ಮಾನವರನ್ನು ಕಚ್ಚುತ್ತವೆ. ಅದರಲ್ಲೂ ಕೆಲವರನ್ನು ಹೆಚ್ಚಾಗಿ ಕಚ್ಚುತ್ತವೆ. ಇದಕ್ಕೆ ಹಲವು ಪ್ರಮುಖ ಕಾರಣಗಳಿವೆ. ಇದರಲ್ಲಿ ರಕ್ತದ ಪ್ರಕಾರವೂ ಒಂದು ಪ್ರಮುಖ ಕಾರಣ ಎಂಬುದು ಗೊತ್ತಿದೆಯೇ? ಅದು ಹೇಗೆ, ಬೇರೆ ಯಾರಿಗೆಲ್ಲ ಹೆಚ್ಚಾಗಿ ಸೊಳ್ಳೆಗಳು ಕಚ್ಚುತ್ತವೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Mosquitoes Bite
Koo

ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಇದ್ದರೂ ಸಾಮಾನ್ಯವಾಗಿ ಕೆಲವರಿಗೆ ಮಾತ್ರ ಸೊಳ್ಳೆಗಳು (Mosquitoes Bite) ಹೆಚ್ಚಾಗಿ ಕಡಿಯುವುದನ್ನು ಕಾಣುತ್ತೇವೆ. ಆದರೆ ಯಾಕೆ ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ. ಹೆಣ್ಣು ಸೊಳ್ಳೆಗಳು (female Mosquitoes) ಮಾತ್ರ ರಕ್ತದಿಂದ (blood) ಪ್ರೊಟೀನ್ ಗಳನ್ನು (proteins) ಪಡೆಯಲು ಮನುಷ್ಯರನ್ನು ಕಚ್ಚುತ್ತವೆ ಮತ್ತು ಬಳಿಕ ಮೊಟ್ಟೆಗಳನ್ನು ಇಡುತ್ತದೆ. ಅದರಲ್ಲೂ ಕೆಲವರಿಗೆ ಮಾತ್ರ ಹೆಚ್ಚಾಗಿ ಸೊಳ್ಳೆಗಳು ಕಚ್ಚುತ್ತವೆ.

ಕೆಲವರು ಸೊಳ್ಳೆಗಳಿಗೆ ಹೆಚ್ಚು ಆಕರ್ಷಕವಾಗಿರಲು ಹಲವು ಕಾರಣಗಳೂ ಇವೆ. ಬೆವರು, ಲ್ಯಾಕ್ಟಿಕ್ ಆಮ್ಲ, ಅಮೋನಿಯಾ ಮತ್ತು ಇತರ ಸಂಯುಕ್ತಗಳಿಂದ ಸೊಳ್ಳೆಗಳು ಕೆಲವರಿಗೆ ಹೆಚ್ಚಾಗಿ ಕಚ್ಚುತ್ತದೆ.

ಸೊಳ್ಳೆಗಳು ಮಲೇರಿಯಾ, ಝಿಕಾ ಮತ್ತು ಡೆಂಗ್ಯೂ ಜ್ವರದಂತಹ ಹಲವು ಸಾಂಕ್ರಾಮಿಕ ರೋಗಗಳನ್ನು ಹರಡುವ ಕಾರಣ ಸೊಳ್ಳೆ ಕಡಿತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ಸೂಳ್ಳೆಗಳು ಕೆಲವು ಜನರನ್ನು ಮಾತ್ರ ಹೆಚ್ಚಾಗಿ ಕಡಿಯಲು ಕಾರಣಗಳಿವೆ ಎನ್ನುತ್ತಾರೆ ವಿಜ್ಞಾನಿಗಳು. ಇದಕ್ಕಾಗಿ ವಿವಿಧ ಅಂಶಗಳ ಬಗ್ಗೆ ಸಂಶೋಧನೆ ನಡೆಸಲಾಗಿದ್ದು ಅದರಲ್ಲಿ ರಕ್ತದ ಪ್ರಕಾರವೂ ಒಂದು ಕಾರಣವಾಗಿದೆ.

Mosquitoes Bite


ರಕ್ತದ ಪ್ರಕಾರ ಹೇಗೆ ಕಾರಣ?

ಒಂದು ರಕ್ತದ ಪ್ರಕಾರವನ್ನು ಹೊಂದಿರುವ ಜನರು ಇತರರಿಗಿಂತ ಹೆಚ್ಚು ಸೊಳ್ಳೆ ಕಡಿತಕ್ಕೆ ಒಳಗಾಗುತ್ತಾರೆ. ಪೋಷಕರಿಂದ ಪಡೆದಿರುವ ವಿಭಿನ್ನ ರಕ್ತ ಪ್ರಕಾರಗಳನ್ನು ಹೊಂದಿರುವ ಜನರು ತಮ್ಮ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ನಿರ್ದಿಷ್ಟ ಪ್ರೋಟೀನ್‌ಗಳ (ಪ್ರತಿಜನಕ) ವಿಭಿನ್ನ ಸೆಟ್‌ಗಳನ್ನು ಹೊಂದಿರುತ್ತಾರೆ.

ಎ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಪ್ರತಿಜನಕ ಮಾತ್ರ ಇರುತ್ತದೆ. ಬಿ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಬಿ ಪ್ರತಿಜನಕ ಮಾತ್ರ, ಎಬಿ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಮತ್ತು ಬಿ ಪ್ರತಿಜನಕ, ಒ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಅಥವಾ ಬಿ ಪ್ರತಿಜನಕವಿರುವುದಿಲ್ಲ.

ಕೆಲವು ಜನರು ಲಾಲಾರಸ ಅಥವಾ ಕಣ್ಣೀರಿನಂತಹ ದೇಹದ ದ್ರವಗಳಲ್ಲಿ ಈ ಪ್ರತಿಜನಕಗಳನ್ನು ಹೊಂದಿರುತ್ತಾರೆ. ಎ ರಕ್ತದ ಪ್ರಕಾರವನ್ನು ಹೊಂದಿರುವವರು ಎ ಪ್ರಕಾರದ ಪ್ರತಿಜನಕವನ್ನು ಸ್ರವಿಸುತ್ತಾರೆ. ಒ ರಕ್ತದ ಗುಂಪು ಹೊಂದಿರುವವರು ಹೆಚ್ ಪ್ರತಿಜನಕವನ್ನು ಸ್ರವಿಸುತ್ತಾರೆ. ಅಧ್ಯಯನಗಳ ಪ್ರಕಾರ ಸೊಳ್ಳೆಗಳು ಇತರ ರಕ್ತ ಪ್ರಕಾರಗಳಿಗಿಂತ ಒ ರಕ್ತದ ಗುಂಪಿನ ಜನರಿಗೆ ಹೆಚ್ಚು ಆಕರ್ಷಿತವಾಗುತ್ತವೆ. ಇದಕ್ಕೆ ರಕ್ತದ ಪ್ರಕಾರ ಮತ್ತು ಸ್ರವಿಸುವ ಸ್ಥಿತಿ ಮುಖ್ಯ ಕಾರಣವಾಗಿದೆ.

ಸೊಳ್ಳೆಗಳು ಎ, ಬಿ ಪ್ರತಿಜನಕಕ್ಕಿಂತ ಹೆಚ್ ಪ್ರತಿಜನಕವನ್ನು ಹೊಂದಿರುವ ಜನರತ್ತ ಹೆಚ್ಚು ಆಕರ್ಷಿತವಾಗುತ್ತವೆ. ಯಾಕೆಂದರೆ ಇದು ಲಾಲಾರಸ ಮತ್ತು ಕಣ್ಣೀರಿನಲ್ಲಿ ಕಂಡುಬರುವುದರಿಂದ ಸೊಳ್ಳೆಗಳು ಒಬ್ಬ ವ್ಯಕ್ತಿಯನ್ನು ಸಮೀಪಿಸಿದಾಗ ಈ ಪ್ರತಿಜನಕಗಳನ್ನು ಬಹುಬೇಗನೆ ಗ್ರಹಿಸುತ್ತದೆ ಎನ್ನಲಾಗುತ್ತದೆ.

ಇನ್ನು ಹಲವು ಕಾರಣಗಳು

ಸೊಳ್ಳೆಗಳು ನಮ್ಮತ್ತ ಹೆಚ್ಚು ಆಕರ್ಷಿತವಾಗಲು ಇನ್ನು ಹಲವು ಕಾರಣಗಳಿವೆ.

ಇಂಗಾಲದ ಡೈಆಕ್ಸೈಡ್

ಉಸಿರಾಡುವಾಗ ಇಂಗಾಲದ ಡೈಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾದರೆ ಸೊಳ್ಳೆಯು ಇವರತ್ತ ಬಹುಬೇಗನೆ ಆಕರ್ಷಿತಗೊಳ್ಳುತ್ತದೆ. ಗಾಳಿಯಲ್ಲಿ ಇಂಗಾಲದ ಡೈಆಕ್ಸೈಡ್‌ನ ಹೆಚ್ಚಳವು ಹತ್ತಿರದಲ್ಲಿರುವ ಸೊಳ್ಳೆಯನ್ನು ಎಚ್ಚರಿಸುತ್ತದೆ.

ದೇಹದ ವಾಸನೆ

ದೇಹದ ವಾಸನೆಯು ಇತರ ಜನರಿಗಿಂತ ಸೊಳ್ಳೆಗಳು ನಿಮ್ಮತ್ತ ಆಕರ್ಷಿತರಾಗಲು ಇನ್ನೊಂದು ಪ್ರಮುಖ ಕಾರಣ. ಯಾಕೆಂದರೆ ವಾಸನೆಯನ್ನು ಬಹುಬೇಗನೆ ಸೊಳ್ಳೆಗಳು ಗ್ರಹಿಸುತ್ತವೆ.
ಚರ್ಮದ ಮೇಲಿನ ಸಂಯುಕ್ತಗಳಲ್ಲಿ ಅಮೋನಿಯಾ ಮತ್ತು ಲ್ಯಾಕ್ಟಿಕ್ ಆಮ್ಲ ಸೊಳ್ಳೆಗಳನ್ನು ಬಹುಬೇಗನೆ ಆಕರ್ಷಿಸುತ್ತವೆ. ಚರ್ಮದ ಮೇಲೀನಾ ಬ್ಯಾಕ್ಟೀರಿಯಾಗಳು ಕೂಡ ದೇಹದ ವಾಸನೆಗೆ ಕಾರಣವಾಗಿರುತ್ತದೆ.

Mosquitoes Bite


ದೇಹದ ತಾಪಮಾನ

ದೇಹದ ತಾಪಮಾನವು ಸೊಳ್ಳೆಗಳನ್ನು ಆಕರ್ಷಿಸಲು ಕಾರಣವಾಗಿರುತ್ತದೆ. ದೇಹದ ತಾಪವು ಹೆಚ್ಚು ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯಾಗಲು, ಕಾರಣವಾಗಿರುತ್ತದೆ.

ಬಣ್ಣ

ಈ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ಸೊಳ್ಳೆಗಳು ಕಪ್ಪು ವಸ್ತುಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ ಎಂಬುದನ್ನು ಅಧ್ಯಯನವೊಂದು ಹೇಳಿದೆ. ನೀವು ಗಾಢ ಬಣ್ಣಗಳನ್ನು ಧರಿಸಿದರೆ ನೀವು ಹೆಚ್ಚು ಸೊಳ್ಳೆ ಕಡಿತವನ್ನು ಪಡೆಯುತ್ತೀರಿ ಎನ್ನಬಹುದು.

ಮದ್ಯಪಾನ

ಸೊಳ್ಳೆಗಳು ಮದ್ಯಪಾನ ಮಾಡುವ ಜನರತ್ತ ಹೆಚ್ಚು ಆಕರ್ಷಿತವಾಗಬಹುದು. ಇದರಲ್ಲಿ ವಾಸನೆ ಪ್ರಮುಖ ಅಂಶವಾಗಿದೆ ಎನ್ನಲಾಗುತ್ತದೆ. ಅಂದರೆ ಮದ್ಯಪಾನ ಮಾಡುವವರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದಾಯಿತು!

ಇದನ್ನೂ ಓದಿ: Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?

ಗರ್ಭಿಣಿಯರು

ಗರ್ಭಿಣಿಯರಲ್ಲದ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಸೊಳ್ಳೆಗಳು ಗರ್ಭಿಣಿಯರತ್ತ ಆಕರ್ಷಿತವಾಗುತ್ತದೆ. ಗರ್ಭಿಣಿಯರು ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುವುದರಿಂದ ಮತ್ತು ಹೆಚ್ಚಿನ ದೇಹದ ಉಷ್ಣತೆಯನ್ನು ಹೊಂದಿರುವುದರಿಂದ ಇವರತ್ತ ಸೊಳ್ಳೆಗಳು ಹೆಚ್ಚು ಆಕರ್ಷಿತರಾಗುತ್ತಾರೆ.

Continue Reading

ಆರೋಗ್ಯ

Walking Benefits: ಊಟದ ಬಳಿಕ ಕಿರು ನಡಿಗೆಯಿಂದ ಸಿಗುವ ಆರೋಗ್ಯ ಲಾಭಗಳು ಏನೇನು?

ಉತ್ತಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆ ಬಹುಮುಖ್ಯವಾಗಿದೆ. ಅದರಲ್ಲೂ ನಡಿಗೆ (Walking Benefits) ದೇಹಕ್ಕೆ ಸಂಪೂರ್ಣ ವ್ಯಯಮವನ್ನು ಒದಗಿಸುತ್ತದೆ. ದೈನಂದಿನ ದಿನಚರಿಯಲ್ಲಿ ಊಟದ ಅನಂತರ ನಡಿಗೆಯನ್ನು ಸೇರಿಸುವುದು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚು ಸಮತೋಲಿತ ಮತ್ತು ಆರೋಗ್ಯಕರ ಜೀವನಶೈಲಿಗೆ ವಿಶೇಷವಾದ ಕೊಡುಗೆಯನ್ನು ನೀಡುತ್ತದೆ. ಸಾಕಷ್ಟು ಆರೋಗ್ಯ ಪ್ರಯೋಜನವನ್ನು ಒದಗಿಸುತ್ತದೆ.

VISTARANEWS.COM


on

By

Walking Benefits
Koo

ನಿತ್ಯದ ಒತ್ತಡದ ಜಂಜಾಟದಲ್ಲಿ ಈಗಿನ ಜನರಿಗೆ ನೆಮ್ಮದಿಯಾಗಿ ಕುಳಿತು ಊಟ (lunch) ಮಾಡಲು ಪುರುಸೊತ್ತಿಲ್ಲ. ಇದ್ದರೂ ಮೊಬೈಲ್ (mobile), ಟಿವಿಯಲ್ಲಿ (TV) ಮಗ್ನರಾಗಿ ಬಿಡುತ್ತಾರೆ. ಇನ್ನು ಊಟವಾದ ಬಳಿಕ ಮೊಬೈಲ್ ಕೈಯಲ್ಲಿ ಹಿಡಿದು ಕುಳಿತು ಬಿಡುತ್ತಾರೆ. ಹೀಗಾಗಿ ಊಟವಾದ ಬಳಿಕ ನಡೆಯುವ ಅಭ್ಯಾಸ (Walking Benefits) ಬಹುತೇಕ ಮಂದಿಯಲ್ಲಿ ಕಡಿಮೆಯಾಗಿದೆ.

ಊಟದ ಅನಂತರ ಕೊಂಚ ನಡೆದರೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಉತ್ತಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆ ಬಹುಮುಖ್ಯವಾಗಿದೆ. ಅದರಲ್ಲೂ ನಡಿಗೆ ದೇಹಕ್ಕೆ ಸಂಪೂರ್ಣ ವ್ಯಯಮವನ್ನು ಒದಗಿಸುತ್ತದೆ.
ನಡಿಗೆಯು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುವ ವ್ಯಾಯಾಮವಾಗಿದೆ. ಇದು ಸ್ನಾಯುಗಳನ್ನು ಬಲಪಡಿಸುತ್ತದೆ, ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

ಊಟದ ಅನಂತರ ನಡೆಯುವುದು ವಿಶೇಷವಾಗಿ ಅನುಕೂಲಕರವಾಗಿದೆ. ಯಾಕೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ವಿಶ್ರಾಂತಿಗೆ ದೇಹ ಮತ್ತು ಮನಸ್ಸನ್ನು ಉತ್ತೇಜಿಸುತ್ತದೆ. ಊಟದ ಅನಂತರದ ಚಟುವಟಿಕೆಯು ಉಬ್ಬುವುದು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ಮಧುಮೇಹದಂತಹ ಚಯಾಪಚಯ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ತಿಂದ ಅನಂತರ ಸಣ್ಣ ನಡಿಗೆಯನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯವನ್ನು ಸ್ವಸ್ಥವಾಗಿ ಕಾಪಾಡಿಕೊಳ್ಳಬಹುದು.

Walking Benefits


ಊಟದ ಬಳಿಕ ನಡಿಗೆಯಿಂದ ಏನು ಪ್ರಯೋಜನ?

ಮಧ್ಯಾಹ್ನ ಮತ್ತು ರಾತ್ರಿ ಊಟದ ಬಳಿಕ ಕನಿಷ್ಠ ನೂರು ಹೆಜ್ಜೆ ನಡೆದರೆ ಸಾಕಷ್ಟು ಪ್ರಯೋಜನಗಳಿವೆ. ಅವುಗಳಲ್ಲಿ ಮುಖ್ಯವಾಗಿ:

ಹೃದಯ ರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ

ಊಟದ ಅನಂತರ ಲಘು ನಡಿಗೆಯಲ್ಲಿ ತೊಡಗುವುದರಿಂದ ರಕ್ತದೊತ್ತಡ, ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಬಹುದು. ಇದು ಉತ್ತಮ ರಕ್ತಪರಿಚಲನೆ ಮತ್ತು ಹೃದಯದ ಕಾರ್ಯವನ್ನು ಉತ್ತೇಜಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯರಕ್ತನಾಳದ ದಕ್ಷತೆಯನ್ನು ಹೆಚ್ಚಿಸುತ್ತದೆ.

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ

ದೇಹದ ಸ್ವಾಭಾವಿಕ ಮೂಡ್ ಎಲಿವೇಟರ್‌ಗಳಾದ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ವಾಕಿಂಗ್ ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಊಟದ ಅನಂತರದ ನಡಿಗೆಯು ದೇಹಕ್ಕೆ ವಿಶ್ರಾಂತಿಯನ್ನು ಕೊಡುತ್ತದೆ. ಮಾನಸಿಕ ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ಯೋಗಕ್ಷೇಮದ ಪ್ರಜ್ಞೆಯನ್ನು ಉತ್ತೇಜಿಸುತ್ತದೆ. ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಜೀವನದ ಗುಣಮಟ್ಟಕ್ಕೆ ಉತ್ತಮ ಕೊಡುಗೆ ನೀಡುತ್ತವೆ.

ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ

ವಾಕಿಂಗ್‌ನಂತಹ ದೈಹಿಕ ಚಟುವಟಿಕೆಯು ಸಿರ್ಕಾಡಿಯನ್ ಲಯ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುವ ಮೂಲಕ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ರಾತ್ರಿಯ ಊಟದ ಅನಂತರ ನಡೆಯುವುದು ನಿರ್ದಿಷ್ಟವಾಗಿ ವಿಶ್ರಾಂತಿ ಪಡೆಯಲು ಮತ್ತು ರಾತ್ರಿಯ ನಿದ್ರೆಗಾಗಿ ತಯಾರಾಗಲು ಸಹಾಯ ಮಾಡುತ್ತದೆ.

ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ

ಊಟದ ಅನಂತರ ನಡೆಯುವುದರಿಂದ ದೇಹದಾದ್ಯಂತ ರಕ್ತಪರಿಚಲನೆ ಮತ್ತು ಆಮ್ಲಜನಕದ ಹರಿವನ್ನು ಹೆಚ್ಚಿಸುವ ಮೂಲಕ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದಾಗಿ ಹೆಚ್ಚು ಉತ್ಸಾಹದ ಅನುಭವ ಸಿಗುತ್ತದೆ. ದೈನಂದಿನ ಕೆಲಸಗಳಲ್ಲಿ ನಿರಂತರ ಶಕ್ತಿಯ ಮಟ್ಟ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಉತ್ತೇಜಿಸುತ್ತದೆ

ವಾಕಿಂಗ್‌ನಂತಹ ನಿಯಮಿತ ದೈಹಿಕ ಚಟುವಟಿಕೆಯು ಕರುಳಿನ ಸೂಕ್ಷ್ಮಜೀವಿಯ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರುತ್ತದೆ. ಸರಿಯಾದ ಜೀರ್ಣಕ್ರಿಯೆ, ಪ್ರತಿರಕ್ಷಣಾ ಕಾರ್ಯ, ಮತ್ತು ಮಾನಸಿಕ ಆರೋಗ್ಯಕ್ಕೂ ಆರೋಗ್ಯಕರ ಕರುಳಿನ ಸೂಕ್ಷ್ಮಾಣುಜೀವಿ ಅತ್ಯಗತ್ಯ. ವಾಕಿಂಗ್ ಕರುಳಿನ ಬ್ಯಾಕ್ಟೀರಿಯಾಗಳ ನಡುವೆ ವೈವಿಧ್ಯತೆ ಮತ್ತು ಸಮತೋಲನವನ್ನು ಉತ್ತೇಜಿಸುವ ಮೂಲಕ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

Walking Benefits


ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ನಡಿಗೆಯು ಗ್ಯಾಸ್ಟ್ರಿಕ್ ಜ್ಯೂಸ್ ಮತ್ತು ಆಹಾರವನ್ನು ಒಡೆಯಲು ಅಗತ್ಯವಾದ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಉಬ್ಬುವುದು, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ಊಟದ ಅನಂತರದ ನಡಿಗೆಯು ಇನ್ಸುಲಿನ್‌ಗೆ ದೇಹದ ಸೂಕ್ಷ್ಮತೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದರಿಂದ ಶಕ್ತಿಯ ಕುಸಿತವನ್ನು ತಡೆಯಬಹುದು ಮತ್ತು ಮಧುಮೇಹಕ್ಕೆ ಸಂಬಂಧಿಸಿದ ದೀರ್ಘಕಾಲೀನ ತೊಡಕುಗಳ ಅಪಾಯವನ್ನು ಕಡಿಮೆ ಮಾಡಬಹುದು.

ತೂಕ ನಿರ್ವಹಣೆಗೆ ಸಹಾಯ

ಊಟದ ಅನಂತರ ನಡೆಯುವುದು ಕ್ಯಾಲೊರಿಗಳನ್ನು ಸುಡುಲು ಸಹಾಯ ಮಾಡುತ್ತದೆ. ಇದು ದೇಹದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಈ ಚಟುವಟಿಕೆಯು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚುವರಿ ಕ್ಯಾಲೊರಿಗಳನ್ನು ಕೊಬ್ಬಿನಂತೆ ಸಂಗ್ರಹಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಬೊಜ್ಜು ಸಂಬಂಧಿತ ಕಾಯಿಲೆಗಳಾದ ಹೃದ್ರೋಗ, ಪಾರ್ಶ್ವವಾಯು ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು

ನಡಿಗೆಯು ಮೆದುಳಿಗೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಇದು ಅರಿವಿನ ಕಾರ್ಯ, ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ. ಊಟದ ಅನಂತರ ಒಂದು ಸಣ್ಣ ನಡಿಗೆಯು ಮನಸ್ಸನ್ನು ಉಲ್ಲಾಸಗೊಳಿಸಲು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮಸ್ಯೆ-ಪರಿಹರಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ಮಾನಸಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

Continue Reading

ಆರೋಗ್ಯ

Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?

Chandipura Virus: ಗುಜರಾತ್‌ನಲ್ಲಿ ಚಾಂದಿಪುರ ವೈರಸ್ ಪತ್ತೆಯಾಗಿದೆ. ಈಗಾಗಲೇ ವೈರಸ್‌ಗೆ 6 ಮಕ್ಕಳು ಬಲಿಯಾಗಿದ್ದು, ಆತಂಕ ಮೂಡಿಸಿದೆ. ಜುಲೈ 10ರಿಂದ ಗುಜರಾತ್‌ನಲ್ಲಿ ಶಂಕಿತ ಚಂಡಿಪುರ ವೈರಲ್ ಸೋಂಕಿನಿಂದ ಆರು ಮಕ್ಕಳು ಮೃತಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಚಾಂದಿಪುರ ವೈರಸ್ ಸೋಂಕು ಹೆಚ್ಚಾಗಿ ಮಕ್ಕಳಿಗೆ ಬಾಧಿಸುತ್ತದೆ. ಅದರಲ್ಲಿಯೂ 9 ತಿಂಗಳಿನಿಂದ 14 ವರ್ಷದ ಮಕ್ಕಳಿಗೆ ಬಾಧಿಸುವ ಸಾಧ್ಯತೆ ಅಧಿಕ. ಈ ವೈರಸ್ ಮಕ್ಕಳ ಮೇಲೆ ದಾಳಿ ಮಾಡಿದಾಗ ಮೊದಲಿಗೆ ಜ್ವರ, ಅತಿಸಾರ, ವಾಂತಿ, ಎನ್ಸೆಫಾಲಿಟಿಸ್ ಎಂದು ಕರೆಯಲ್ಪಡುವ ಮೆದುಳಿನ ಜ್ವರದಂತಹ ರೋಗಲಕ್ಷಣಗಳನ್ನು ತೋರಿಸುತ್ತದೆ.

VISTARANEWS.COM


on

Chandipura Virus
Koo

ಗಾಂಧಿನಗರ: ರಾಜ್ಯ ಸೇರಿದಂತೆ ದೇಶದ ಕೆಲವೆಡೆ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದೆ. ಇತ್ತ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಹಾವಳಿ ಕಂಡು ಬಂದಿದೆ. ಈ ಮಧ್ಯೆ ಗುಜರಾತ್‌ನಲ್ಲಿ ಚಾಂದಿಪುರ ವೈರಸ್ (Chandipura Virus) ಪತ್ತೆಯಾಗಿದೆ. ಈಗಾಗಲೇ ವೈರಸ್‌ಗೆ 6 ಮಕ್ಕಳು ಬಲಿಯಾಗಿದ್ದು, ಆತಂಕ ಮೂಡಿಸಿದೆ.

ಜುಲೈ 10ರಿಂದ ಗುಜರಾತ್‌ನಲ್ಲಿ ಶಂಕಿತ ಚಂಡಿಪುರ ವೈರಲ್ ಸೋಂಕಿನಿಂದ ಆರು ಮಕ್ಕಳು ಮೃತಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಎಲ್ಲ ಸೋಂಕಿತರ ರಕ್ತದ ಮಾದರಿಗಳನ್ನು ದೃಢೀಕರಣಕ್ಕಾಗಿ ಪುಣೆಯ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ (National Institute of Virology)ಗೆ ಕಳುಹಿಸಲಾಗಿದೆ.

ರೋಗ ಲಕ್ಷಣ

ಚಾಂದಿಪುರ ವೈರಸ್ ಸೋಂಕು ಬಾಧಿತರಲ್ಲಿ ಸಾಮಾನ್ಯ ಜ್ವರದ ಲಕ್ಷಣವೇ ಕಂಡು ಬರುತ್ತದೆ. ಬಾಧಿತರಲ್ಲಿ ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಕಂಡು ಬರುತ್ತದೆ. ತಕ್ಷಣ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ರಾಬ್ಡೋವೆರಿಡೆ ವರ್ಗಕ್ಕೆ ಸೇರಿದ ವೈರಸ್ ಈ ರೋಗಕ್ಕೆ ಕಾರಣ.

ಯಾಕಾಗಿ ಈ ಹೆಸರು?

ಮಹಾರಾಷ್ಟ್ರದ ಚಾಂದಿಪುರದಲ್ಲಿ 1965ರಲ್ಲಿ ಇದು ಮೊದಲ ಬಾರಿ ಕಾಣಿಸಿಕೊಂಡಿತ್ತು. ಹೀಗಾಗಿ ಇದನ್ನು ಚಾಂದಿಪುರ ವೈರಸ್‌ ಎಂದು ಕರೆಯುತ್ತಾರೆ. ಚಾಂದಿಪುರ ವೈರಸ್ ಸೋಂಕು ಹೆಚ್ಚಾಗಿ ಮಕ್ಕಳಿಗೆ ಬಾಧಿಸುತ್ತದೆ. ಅದರಲ್ಲಿಯೂ 9 ತಿಂಗಳಿನಿಂದ 14 ವರ್ಷದ ಮಕ್ಕಳಿಗೆ ಬಾಧಿಸುವ ಸಾಧ್ಯತೆ ಅಧಿಕ. ಈ ವೈರಸ್ ಮಕ್ಕಳ ಮೇಲೆ ದಾಳಿ ಮಾಡಿದಾಗ ಮೊದಲಿಗೆ ಜ್ವರ, ಅತಿಸಾರ, ವಾಂತಿ, ಎನ್ಸೆಫಾಲಿಟಿಸ್ ಎಂದು ಕರೆಯಲ್ಪಡುವ ಮೆದುಳಿನ ಜ್ವರದಂತಹ ರೋಗಲಕ್ಷಣಗಳನ್ನು ತೋರಿಸುತ್ತದೆ. ಈ ವೈರಸ್ ವಿರುದ್ಧ ಯಾವುದೇ ಲಸಿಕೆ ಇಲ್ಲದ ಕಾರಣ ಇದನ್ನು ಇನ್ನಷ್ಟು ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.

ಒಬ್ಬರಿಂದ ಒಬ್ಬರಿಗೆ ಹರಡುತ್ತಾ?

ಇದು ಸಾಂಕ್ರಾಮಿಕ ರೋಗ ಅಲ್ಲದಿದ್ದರೂ ಸೊಳ್ಳೆ, ನೊಣ, ಉಣ್ಣೆಗಳಿಂದ ಈ ಸೋಂಕು ಹರಡುತ್ತದೆ. ಶುಚಿತ್ವ ಕೊರತೆಯೇ ಮುಖ್ಯ ಕಾರಣ. ಸದ್ಯ ಈ ರೀತಿಯ ಅನೇಕ ಪ್ರಕರಣಗಳು ಗುಜರಾತ್‌ನಲ್ಲಿ ಕಂಡುಬಂದಿವೆ. ಗುಜರಾತ್‌ನ ಸಬರ್‌ಕಾಂಠಾ ರಾವಳಿ, ಮಹಿಸಾರ, ಖೇಡಾ ಜಿಲ್ಲೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಜತೆಗೆ ರಾಜಸ್ಥಾನ, ಮಧ್ಯ ಪ್ರದೇಶದಲ್ಲಿಯೂ ಸೋಂಕು ಬಾಧಿಸಿರುವುದು ವರದಿಯಾಗಿದೆ. ಶಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರೋಗದಿಂದ ಪಾರಾಗುವುದು ಹೇಗೆ?

ಚಾಂದಿಪುರ ವೈರಸ್‌ನಿಂದ ತಪ್ಪಿಸಿಕೊಳ್ಳಲು ನೈರ್ಮಲ್ಯ ಕಾಪಾಡುವುದು ಅಗತ್ಯ. ಸೊಳ್ಳೆ, ನೊಣ ಮತ್ತು ಕೀಟಗಳು ಕಡಿಯದಂತೆ ಎಚ್ಚರ ವಹಿಸಿ. ಮಕ್ಕಳಿಗೆ ರಾತ್ರಿ ಪೂರ್ಣ ತೋಳಿನ ಬಟ್ಟೆಗಳನ್ನು ತೊಡಿಸಿ. ಸೊಳ್ಳೆಗಳು ಮತ್ತು ಕೀಟಗಳಿಂದ ತಪ್ಪಿಸಿಕೊಳ್ಳಲು ಬಲೆಗಳನ್ನು ಬಳಸಿ. ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿಡಿ. ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸಲು ಬಿಡಬೇಡಿ. ಮನೆಯ ಸುತ್ತಮುತ್ತ ನೀಡು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಿ. ಸಾಕು ಪ್ರಾಣಿಗಳ ಬಳಿಗೆ ತೆರಳುವಾಗ ಎಚ್ಚರವಹಿಸಿ.

ಇದನ್ನೂ ಓದಿ: Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Continue Reading

ಆರೋಗ್ಯ

Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

Tulsi Tea Benefits: ಮಳೆಗಾಲ ಬಂದರಂತೂ ಕಾಡುವ ಶೀತ, ಕೆಮ್ಮು ನೆಗಡಿ ಸಮಸ್ಯೆಗಳಿಗೆಲ್ಲ ತುಳಸಿ ರಾಮ ಬಾಣದಂತೆ ಕೆಲಸ ಮಾಡುತ್ತದೆ. ನಮ್ಮ ಮನೆಯಂಗಳದ ತುಳಸಿಯ ಆರೋಗ್ಯದ ಲಾಭಗಳ ಬಗ್ಗೆ ಕೆಲವೊಮ್ಮೆ ನಮಗೆ ಅವಜ್ಞೆಯಿದೆ. ಶೀತ, ನೆಗಡಿಯಾದಾಗ ವೈದ್ಯರನ್ನು ಎಡತಾಕುವ ನಾವು ನಿತ್ಯವೂ ಕೆಲವು ಅಭ್ಯಾಸಗಳನ್ನು ಮಾಡಿಕೊಂಡರೆ ಹಲವು ಸಮಸ್ಯೆಗಳಿಂದ ಪಾರಾಗಬಹುದು.

VISTARANEWS.COM


on

Tulsi Tea Benefits
Koo

ತುಳಸಿ ಗಿಡಕ್ಕೆ ನಮ್ಮ ಮನೆಗಳಲ್ಲಿ ವಿಶೇಷ ಸ್ಥಾನವಿದೆ. ತುಳಸಿಯನ್ನು ದೇವರಂತೆ ಪೂಜಿಸುವ ನಾವು, ಆಯುರ್ವೇದದಲ್ಲಿ ಹೇಳಿರುವಂತೆ ತುಳಸಿಯ ಲಾಭಗಳನ್ನೂ ಪಡೆಯುತ್ತೇವೆ. ನಿತ್ಯವೂ ದೇವರಿಗೆ ಅರ್ಪಿಸುವ ತುಳಸಿಯ ಎಲೆಗಳಲ್ಲಿ ಎಂಥಾ ಶಕ್ತಿಯಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಮಳೆಗಾಲ ಬಂದರಂತೂ ಕಾಡುವ ಶೀತ, ಕೆಮ್ಮು ನೆಗಡಿ ಸಮಸ್ಯೆಗಳಿಗೆಲ್ಲ ತುಳಸಿ ರಾಮ ಬಾಣದಂತೆ ಕೆಲಸ ಮಾಡುವ ನಮ್ಮ ಮನೆಯಂಗಳದ ತುಳಸಿಯ ಆರೋಗ್ಯದ ಲಾಭಗಳ ಬಗ್ಗೆ ಕೆಲವೊಮ್ಮೆ ನಮಗೆ ಅವಜ್ಞೆಯಿದೆ. ಶೀತ, ನೆಗಡಿಯಾದಾಗ ವೈದ್ಯರನ್ನು ಎಡತಾಕುವ ನಾವು ನಿತ್ಯವೂ ಕೆಲವು ಅಭ್ಯಾಸಗಳನ್ನು ಮಾಡಿಕೊಂಡರೆ ಹಲವು ಸಮಸ್ಯೆಗಳಿಂದ ಪಾರಾಗಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಂಡು ಈ ಎಲ್ಲ ಸಮಸ್ಯೆಗಳು ನಮ್ಮ ಹತ್ತಿರ ಸುಳಿಯದಂತೆ ನಮ್ಮನ್ನು ನಾವು ಕಾಪಾಡಬಹುದು. ಬನ್ನಿ, ಕೇವಲ ಒಂದು ತುಳಸಿ ಚಹಾ ಮಾಡಿಕೊಂಡು ನಿತ್ಯವೂ ಕುಡಿಯುವುದರಿಂದ ಯಾವೆಲ್ಲ ಲಾಭಗಳಿವೆ (Tulsi Tea Benefits) ಎಂಬುದನ್ನು ನೋಡೋಣ. ತುಳಸಿ ನಿಮ್ಮ ಮನೆಯಂಗಳದಲ್ಲಿ ಬೇಕಾದಷ್ಟು ಬೇಕಾಬಿಟ್ಟಿಯಾಗಿ ಬೆಳೆದುಕೊಂಡಿದೆ ಎಂದಾದರೆ, ತುಳಸಿಯ ಒಂದೆರಡು ಎಲೆಯನ್ನು ನಿತ್ಯವೂ ಬಾಯಲ್ಲಿ ಹಾಕಿ ಜಗಿಯಬಹುದು. ತುಳಸಿ ಗಿಡ ಇಲ್ಲ ಎಂದಾದಲ್ಲಿ, ಒಣಗಿದ ತುಳಸಿ ಎಲೆಯ ಪುಡಿಯನ್ನು ತರಿಸಿಕೊಳ್ಳಬಹುದು. ಅಥವಾ ಮನೆಯಂಗಳದ ಗಿಡದಿಂದ ನಿತ್ಯವೂ ತುಳಸೀ ಎಲೆಯನ್ನು ಕೊಯ್ದು ಚಹಾ ಮಾಡಿಕೊಂಡು (ನೀರಿನಲ್ಲಿ ಕುದಿಸಿ ಸೋಸಿಕೊಂಡು) ಕುಡಿಯಬಹುದು.

Relaxed woman at home breathing fresh air Horse Gram Benefits

ಉಸಿರಾಟ ಸುಗಮ

ತುಳಸೀ ಚಹಾವನ್ನು ನಿತ್ಯವೂ ಸೇವಿಸುವುದರಿಂದ ಉಸಿರಾಟದ, ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತಮ ಪರಿಹಾರ ದೊರೆಯುತ್ತದೆ. ಕಫ ಕಟ್ಟಿಕೊಳ್ಳುವ ಸಮಸ್ಯೆ ಇರುವವರಿಗೆ, ಬಹುಬೇಗನೆ ಶೀತ, ನೆಗಡಿಯಂತಹ ಸಮಸ್ಯೆಯಾಗುವ ಮಂದಿಗೆ, ಅಸ್ತಮಾ ತೊಂದರೆ ಇರುವವರಿಗೆ ತುಳಸೀ ಚಹಾ ಉತ್ತಮ. ಇದು ದೇಹದಲ್ಲಿ ರೋಗನಿರೋಧಕತೆಯನ್ನು ಹೆಚ್ಚಿಸಿ, ಕಟ್ಟಿಕೊಂಡ ಕಫವನ್ನು ಕರಗಿಸುವಲ್ಲಿ ನೆರವಾಗುವ ಮೂಲಕ ಉಸಿರಾಟವನ್ನು ಸುಗಮವಾಗುವಂತೆ ಮಾಡುತ್ತದೆ.

Woman Meditating in the Workplace Sitting in Front of a Laptop Practicing Stress Relief Exercises Diabetes Control

ಮಾನಸಿಕ ಒತ್ತಡ ಕಡಿಮೆ

ಕೆಲವು ಸಂಶೋಧನೆಗಳ ಪ್ರಕಾರ ತುಳಸಿಯ ಚಹಾ ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ತುಳಸಿ ಚಹಾ ಕಾರ್ಟಿಸೋಲ್‌ ಹಾರ್ಮೋನಿನ ಸಮತೋಲನಕ್ಕೆ ಸಹಾಯ ಮಾಡುವುದರಿಂದ ಒತ್ತಡ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೂ ಕೊಂಚ ಮಟ್ಟಿನ ಪರಿಹಾರ ನೀಡುತ್ತದೆ.

heart attack and Diabetes control

ಸಕ್ಕರೆ ಪ್ರಮಾಣ ನಿಯಂತ್ರಿಸುತ್ತದೆ

ನಿತ್ಯವೂ ಕುಡಿಯುವ ಹಾಲು ಹಾಕಿದ ಚಹಾ ಕಾಫಿಗಿಂತ ತುಳಸಿ ಚಹಾ ಒಳ್ಳೆಯದು. ಇದು ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಮತೋಲನಕ್ಕೆ ತರುವಲ್ಲಿಯೂ ನೆರವಾಗುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಬಹಳ ಒಳ್ಳೆಯದು.

oral health

ಬಾಯಿಯ ಆರೋಗ್ಯ ಚೆನ್ನಾಗಿರುತ್ತದೆ

ತುಳಸಿ ಚಹಾವನ್ನು ಸೇವಿಸುವುದರಿಂದ ಬಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ತುಳಸಿಯು ಬ್ಯಾಕ್ಟೀರಿಯಾಗಳನ್ನು ಓಡಿಸುವ ಕೆಲಸ ಮಾಡುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧವೂ ಕೆಲಸ ಮಾಡುತ್ತದೆ. ಬಾಯಿಯನ್ನು, ಹಲ್ಲುಗಳನ್ನು ಸ್ವಚ್ಛವಾಗಿಡುತ್ತದೆ. ಮೌತ್‌ ಫ್ರೆಶ್ನರ್‌ನಂತೆ ಕೆಲಸ ಮಾಡುತ್ತದೆ. ಬಾಯಿಯ ದುರ್ವಾಸನೆಗೂ ಇದು ಒಳ್ಳೆಯದು.

Rheumatoid Arthritis

ಸಂಧಿವಾತಕ್ಕೆ ಪರಿಹಾರ

ಸಂಧಿವಾತದಂತಹ ಸಮಸ್ಯೆ ಇರುವ ಮಂದಿಗೆ ತುಳಸಿ ಚಹಾ ಒಳ್ಳೆಯದು. ತುಳಸಿಯಲ್ಲಿರುವ ಯುಗೆನಾಳ್‌ ಎಂಬ ಎಣ್ಣೆಯಂಶದಲ್ಲಿ ಇನ್‌ಫ್ಲಮೇಟರಿ ಗುಣಗಳಿರುವುದರಿಂದ ಇದು ಜೀರ್ಣಾಂಗವ್ಯೂಹ ಹಾಗೂ ದೇಹದ ಗಂಟುಗಳ ಆರೋಗ್ಯದಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

ಕಫ ನೀರಾಗುತ್ತದೆ

ತುಳಸಿಯ ಜೊತೆಗೆ ಶುಂಠಿ, ಕರಿಮೆಣಸು, ವೀಳ್ಯದೆಲೆ ಇತ್ಯಾದಿಗಳನ್ನೂ ಸೇರಿಸಿ ನೀರಿನಲ್ಲಿ ಕುದಿಸಿ ಸೋಸಿಕೊಂಡು ಕಷಾಯ ಮಾಡಿಕೊಂಡು ಕುಡಿದರೆ ಎದೆಯಲಲಿ ಕಟ್ಟಿಕೊಂಡ ಕಫ ನೀರಾಗುತ್ತದೆ. ಒಣಕೆಮ್ಮು, ಕಫದ ಜೊತೆಗೆ ಬರುವ ಕೆಮ್ಮು, ಗಂಟಲು ಕೆರೆತ/ನೋವು ಇತ್ಯಾದಿಗಳಿಗೂ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.

Tulsi Tea

ಹೆಚ್ಚು ಸೇವನೆ ಒಳ್ಳೆಯದಲ್ಲ

ತುಳಸಿ ಸ್ವಲ್ಪ ಅಸಿಡಿಕ್‌ ಗುಣವನ್ನೂ ಹೊಂದಿರುವುದರಿಂದ ಹೆಚ್ಚು ಸೇವನೆ ಒಳ್ಳೆಯದಲ್ಲ. ದಿನಕ್ಕೊಮ್ಮೆ ಕುಡಿಯುವುದಕ್ಕೆ ಅಡ್ಡಿಯಿಲ್ಲ. ದಿನಕ್ಕೊಂದೆರಡು ಎಲೆ ಜಗಿಯುವುದರಿಂದ ಸಮಸ್ಯೆ ಬಾರದು. ಆದರೆ ಅತಿಯಾದರೆ ಒಳ್ಳೆಯದಲ್ಲ ಎಂಬುದನ್ನು ನೆನಪಿಡಿ.

Continue Reading
Advertisement
vidhana sabha karnataka assembly live
ಪ್ರಮುಖ ಸುದ್ದಿ24 mins ago

Karnataka Assembly Live: ವಾಲ್ಮೀಕಿ ಹಗರಣದ ಆರೋಪಗಳಿಗೆ ಇಂದು ಸಿಎಂ ಉತ್ತರ; ವಿಧಾನಮಂಡಲ ಕಲಾಪ ಲೈವ್‌ ಇಲ್ಲಿದೆ

Joe Biden
ವಿದೇಶ29 mins ago

Joe Biden: ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಕೊರೊನಾ ಸೋಂಕು; ಪ್ರಚಾರಕ್ಕೆ ಬ್ರೇಕ್‌

Actor Darshan Judicial Custody Ends Today May Extend Again
ಸ್ಯಾಂಡಲ್ ವುಡ್32 mins ago

Actor Darshan: ಇಂದು ಜಡ್ಜ್​ ಮುಂದೆ ದರ್ಶನ್ & ಟೀಂ ಹಾಜರು; ಜೈಲುವಾಸ ಮುಕ್ತಾಯವಾಗುತ್ತಾ?

ಕ್ರಿಕೆಟ್37 mins ago

BCCI: ಕೋಚಿಂಗ್​ ಹುದ್ದೆಗೆ ಗಂಭೀರ್ ಸೂಚಿಸಿದ್ದ ಐವರ ಹೆಸರನ್ನು ತಿರಸ್ಕರಿಸಿದ ಬಿಸಿಸಿಐ

SL vs IND
ಕ್ರಿಕೆಟ್1 hour ago

SL vs IND: ಇಂದು ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ಯಾರಿಗೆ ಒಲಿಯಲಿದೆ ನಾಯಕತ್ವ?

Narendra Modi
ರಾಜಕೀಯ1 hour ago

Narendra Modi: ಇಂದು ಮೋದಿ ನೇತೃತ್ವದಲ್ಲಿ ಬಿಜೆಪಿ ಸಭೆ: ಮಹತ್ವದ ತೀರ್ಮಾನ ಸಾಧ್ಯತೆ; ಏನೆಲ್ಲ ಚರ್ಚೆಯಾಗಲಿದೆ?

Vijay Sethupathi 'Viduthalai 2' first look out now
ಕಾಲಿವುಡ್1 hour ago

Vijay Sethupathi: ವಿಜಯ್​ ಸೇತುಪತಿ ನಟನೆಯ’ʻವಿಡುತಲೈ 2ʼ ಫಸ್ಟ್‌ ಲುಕ್‌ ಔಟ್‌!

b nagendra valmiki corporation scam
ಪ್ರಮುಖ ಸುದ್ದಿ1 hour ago

Valmiki Corporation Scam: ನಾಗೇಂದ್ರ ಕಸ್ಟಡಿ ಅಂತ್ಯ, ಇಂದು ಕೋರ್ಟ್‌ಗೆ ಹಾಜರು; ಪತ್ನಿಯೂ ಇಡಿ ವಶದಲ್ಲಿ

Actor  Karthi Stuntman falls 20 ft to his death
ಕಾಲಿವುಡ್2 hours ago

Actor  Karthi: ನಟ ಕಾರ್ತಿ ಸಿನಿಮಾ ಸೆಟ್‌ನಲ್ಲಿ ಅವಘಡ; 20 ಅಡಿಯಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಸಾವು

Paris Olympics
ಕ್ರೀಡೆ2 hours ago

Paris Olympics: ಪ್ಯಾರಿಸ್‌ ಒಲಿಂಪಿಕ್ಸ್​ ಭದ್ರತಾ ಕಾರ್ಯದಲ್ಲಿ ಭಾರತದ ಶ್ವಾನದಳ; ಬೆಂಗಳೂರಿನಲ್ಲಿ ತರಬೇತಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ5 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌