Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ? - Vistara News

ಆರೋಗ್ಯ

Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Brain Eating Amoeba: ಮೆದುಳು ಮೆಲ್ಲುವ ಅಮೀಬಾ ಎಂದೇ ಕುಖ್ಯಾತವಾಗಿರುವ ಏಕಕೋಶ ಜೀವಿಯಿಂದ ಬರುವ ಸೋಂಕಿಗೆ ಕಳೆದ ಎರಡು ತಿಂಗಳಲ್ಲಿ ಮೂವರು ಬಲಿಯಾಗಿದ್ದಾರೆ. ನೀರಿನಲ್ಲಿ ಕಂಡುಬರುವ ಇವು ಮೂಗು ಪ್ರವೇಶಿಸಿದಾಗ ಬರುವಂಥ ಸೋಂಕಿದು. ಇದರ ಬಗ್ಗೆ ಹೆಚ್ಚಿನ ವಿವರ ಈ ಲೇಖನದಲ್ಲಿದೆ.

VISTARANEWS.COM


on

Brain Eating Amoeba
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ ಈವರೆಗೆ ಅಷ್ಟಾಗಿ (Brain Eating Amoeba) ಸುದ್ದಿ ಮಾಡದ ʻಮೆದುಳು ಮೆಲ್ಲುವ ಅಮೀಬಾʼ ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಸುದ್ದಿ ಮಾಡುತ್ತಿದೆ. ಕಳೆದ ಮೂರು ತಿಂಗಳಲ್ಲಿ ಈ ಅಮೀಬಾಕ್ಕೆ ಮೂವರು ಬಲಿಯಾಗಿದ್ದಾರೆ. ನೀರಿನಲ್ಲಿರುವ ಇದು ಮೂಗಿನ ಮೂಲಕ ದೇಹ ಪ್ರವೇಶಿಸಿದರೆ ೯೭ರಷ್ಟು ಪ್ರತಿಶತ ಉಳಿಯುವ ಸಾಧ್ಯತೆಯಿಲ್ಲ ಎನ್ನುವುದು ತೀವ್ರ ಕಳವಳದ ಸಂಗತಿ. ಇಂಥ ಅಪಾಯಕಾರಿ ಸೂಕ್ಷ್ಮಾಣುವಿನ ಬಗ್ಗೆ, ಅದು ಹರಡುವ ರೀತಿ ಮತ್ತು ಪ್ರತಿಬಂಧಕ ಕ್ರಮಗಳ ಬಗ್ಗೆ ಇಲ್ಲಿದೆ ವಿವರಗಳು. ಅಮೀಬಿಕ್‌ ಮೆನಿಂಜೈಟಿಸ್ ಎಂದೂ ಕರೆಯಲಾಗುವ ಈ ಸ್ಥಿತಿಗೆ ಮುಖ್ಯ ಕಾರಣ ನಗ್ಲೇರಿಯ ಫೌಲೇರಿ ಎಂಬ ಏಕಕೋಶ ಜೀವಿ. ಕಲುಷಿತ ನೀರಿನಲ್ಲಿ ವಾಸಿಸುವ ಈ ಸೂಕ್ಷ್ಮಾಣು ನದಿ, ಹೊಳೆ, ಕೊಳ, ಬಾವಿ, ಕೆರೆಯಂಥ ಯಾವುದೇ ರೀತಿಯ ನೀರಿನಲ್ಲಿ ಇರಬಹುದು. ಒದ್ದೆ ಮಣ್ಣು ಮತ್ತು ನೀರಿನ ಪೈಪುಗಳಲ್ಲಿದ್ದರೂ ಅಚ್ಚರಿಯಿಲ್ಲ. ಇದಕ್ಕೆ ಬದುಕುವುದಕ್ಕೆ ಯಾವುದೇ ನಿಶ್ಚಿತವಾದ ಆಶ್ರಯ ಬೇಕಿಲ್ಲ, ವಾತಾವರಣದಲ್ಲಿ ಹಲವೆಡೆ ಕಾಣಬಹುದು. ವಾತಾವರಣ ಬೆಚ್ಚಗಿದ್ದಾಗ, ನೀರು ಸಹ ಬೆಚ್ಚಗಿದ್ದಾಗ ಈ ಅಮೀಬಾ ಚುರುಕಾಗುತ್ತವೆ. ಇವು ಸಾಮಾನ್ಯವಾಗಿ ನದೀತಳದ ಮಣ್ಣಿನಲ್ಲಿ ಹುದುಗಿರುತ್ತವೆ. ಡೈವಿಂಗ್‌, ಈಜು ಅಥವಾ ನೀರನ್ನು ಕದಡುವ ಯಾವುದಾದರೂ ಚಟುವಟಿಕೆಯಿಂದ ಇವು ಮೇಲ್ಮೈಗೆ ತಲುಪುತ್ತವೆ. ಅಲ್ಲಿಂದ ಮೂಗಿನ ಮೂಲಕ ದೇಹ ಪ್ರವೇಶಿಸಿ, ಮೆದುಳಿಗೆ ಲಗ್ಗೆ ಇಡುತ್ತವೆ. ಬಿಸಿ ನೀರಿನಲ್ಲೂ ಇವು ಇರಬಲ್ಲವು. ಆದರೆ ಅಂಥ ಕಲುಷಿತ ನೀರನ್ನು ನುಂಗಿದರೆ ಈ ಸಮಸ್ಯೆ ಆಗಲಿಕ್ಕಿಲ್ಲ, ಮೂಗಿಗೆ ಹೋದರೆ ಮಾತ್ರ ಉಳಿಗಾಲವಿಲ್ಲ. ವಯಸ್ಕರಿಗಿಂತಲೂ ಮಕ್ಕಳಿಗೆ ಈ ಸೋಂಕು ಬಲುಬೇಗ ತಾಗುತ್ತಿದೆ. ಹಾಗೆನ್ನುತ್ತಿದ್ದಂತೆ ನೀರು ಮುಟ್ಟುವುದಿಲ್ಲ ಎಂದು ಶಪಥ ಮಾಡುವ ಅಗತ್ಯವಿಲ್ಲ. ಕಾರಣ, ಒಂದು ದಶಲಕ್ಷ ಮಂದಿಯಲ್ಲಿ ಒಬ್ಬರಿಗೆ ಈ ಸೋಂಕು ಬರುತ್ತದೆನ್ನುವಷ್ಟು ಅಪರೂಪವಿದು.

Amoeba

ಲಕ್ಷಣಗಳೇನು?

ತೀವ್ರ ಜ್ವರ, ಅತೀವ ತಲೆನೋವು, ವಾಂತಿ ಅಥವಾ ಹೊಟ್ಟೆ ತೊಳೆಸುವುದು, ನಡುಕ, ಕುತ್ತಿಗೆ ಗಡುಸಾಗುವುದು, ಬೆಳಕು ನೋಡಲು ಕಷ್ಟ, ಗೊಂದಲ, ಕೋಮಾ… ಒಮ್ಮೆ ಈ ಅಮೀಬಾ ಮೂಗು ಪ್ರವೇಶಿಸಿದ ಮೇಲೆ, ಲಕ್ಷಣಗಳು ಕಾಣುವುದಕ್ಕೆ 2-15 ದಿನಗಳವರೆಗೆ ತೆಗೆದುಕೊಳ್ಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿದ ದಾಖಲೆಯೂ ಇಲ್ಲ. ಇದು ಮೂಗಿನ ಮೂಲಕವೇ ಪ್ರವೇಶಿಸಬೇಕು. ಒಮ್ಮೆ ಲಕ್ಷಣಗಳು ಕಾಣಿಸಿದ ಮೇಲೆ 7-10 ದಿನಗಳ ಒಳಗೆ ಸೋಂಕಿತರು ಮರಣಿಸಿದ ಪ್ರಕರಣಗಳೇ ಹೆಚ್ಚು. ಇದರಿಂದ ಚೇತರಿಸಿಕೊಂಡವರು ಅತಿ ವಿರಳ.

ಇದನ್ನೂ ಓದಿ: Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

ತಡೆಗಟ್ಟಬಹುದೇ?

ಒಮ್ಮೆ ಸೋಂಕು ಬಂದ ಮೇಲೆ ಹೆಚ್ಚೇನೂ ಮಾಡಲಾಗದು. ಇದಕ್ಕೆ ಲಸಿಕೆಯೂ ಲಭ್ಯವಿಲ್ಲ. ಆದರೆ ಬಾರದಂತೆ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು-

  • ನೀರಿನಲ್ಲಿ ಈಜುವಾಗ ಎಚ್ಚರಿಕೆ ವಹಿಸಿ. ಈಜುಕೊಳಕ್ಕೆ ಹೋಗುವುದಾದರೆ, ಸರಿಯಾಗಿ ಕ್ಲೋರಿನ್‌ ಹಾಕಿ ನೀರನ್ನು ಸೋಂಕು ರಹಿತ ಮಾಡಿದ ಕೊಳಗಳನ್ನೇ ಉಪಯೋಗಿಸಿ. ನೀರು ಬೆಚ್ಚಗಿದ್ದಷ್ಟೂ ಈ ರೋಗಾಣು ಸಕ್ರಿಯವಾಗಿರುತ್ತದೆ.
  • ಕೆರೆ ನದಿಗಳಲ್ಲಿ ಈಜುವಾಗ ತಳಭಾಗದ ಮಣ್ಣು ಕದಡದಿರಿ. ರಾಡಿ ನೀರು ಮೇಲೆ ಬಂದಂತೆ ಇಂಥ ಅಪಾಯಗಳು ಹೆಚ್ಚುತ್ತವೆ.
  • ನೈಸರ್ಗಿಕ ನೀರಿನ ತಾಣಗಳಲ್ಲಿ ಮೇಲಿಂದ ಡೈವ್‌ ಮಾಡಬೇಡಿ. ಇದರಿಂದಲೂ ಸಮಸ್ಯೆಗಳು ಕಾಡಬಹುದು.
  • ನೇತಿಯಂಥ ಕ್ರಿಯೆಗಳನ್ನು ಮಾಡುವಾಗ ಮಾಮೂಲಿ ನಲ್ಲಿ ನೀರನ್ನು ಮೂಗಿಗೆ ಹಾಕದಿರಿ. ಇದಕ್ಕಾಗಿ ಶುದ್ಧೀಕರಿಸಿದ ಸ್ವಚ್ಛ ನೀರನ್ನೇ ಬಳಸಿ. ಕುದಿಸಿ ಆರಿಸಿದ ನೀರು ಬಳಸುವುದು ಕ್ಷೇಮ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

New Medical Colleges: ಕರ್ನಾಟಕಕ್ಕೆ 3 ಪದವಿಪೂರ್ವ ವೈದ್ಯಕೀಯ ಕಾಲೇಜು ಮಂಜೂರು; 350 ಸೀಟುಗಳು ಲಭ್ಯ

New Medical Colleges: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ)ವು ಕರ್ನಾಟಕಕ್ಕೆ ಈ ಬಾರಿ ಮೂರು ಪದವಿಪೂರ್ವ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದೆ. ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ನಗರೂರ್, ಬೆಂಗಳೂರು ಉತ್ತರ), ಪಿಇಎಸ್ ವಿಶ್ವವಿದ್ಯಾನಿಲಯ ಹಾಗೂ ವೈದ್ಯಕೀಯ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆ (ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು) ಮತ್ತು ಎಸ್‍ಆರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಾಗಲಕೋಟೆ)ಗಳಿಗೆ ಅವಕಾಶ ಸಿಕ್ಕಿದೆ.

VISTARANEWS.COM


on

New Medical Colleges
Koo

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ (New Medical Colleges) ಆಯೋಗ (ಎನ್‍ಎಂಸಿ)ವು ಕರ್ನಾಟಕಕ್ಕೆ ಈ ಬಾರಿ ಮೂರು ಪದವಿಪೂರ್ವ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದೆ. ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ನಗರೂರ್, ಬೆಂಗಳೂರು ಉತ್ತರ), ಪಿಇಎಸ್ ವಿಶ್ವವಿದ್ಯಾನಿಲಯ ಹಾಗೂ ವೈದ್ಯಕೀಯ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆ (ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು) ಮತ್ತು ಎಸ್‍ಆರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಾಗಲಕೋಟೆ) ಆಗಿವೆ.

ಎಷ್ಟು ವೈದ್ಯಕೀಯ ಸೀಟು ಲಭ್ಯ?

ಈ ಮೂರು ವೈದ್ಯಕೀಯ ಕಾಲೇಜುಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭವಾಗಲಿದ್ದು, ಬಿಜಿಎಸ್‍ಗೆ 150, ಪಿಇಎಸ್‍ಗೆ 100 ಹಾಗೂ ಬಾಗಲಕೋಟೆ ಎಸ್‍ಆರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ 100 ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ.

ಇದನ್ನೂ ಓದಿ: Paris 2024 Olympics Athletics: ವಿಶ್ವ ರ್‍ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಜೆಸ್ವಿನ್‌, ಅಂಕಿತಾ ಧ್ಯಾನಿ

ರಾಜ್ಯದಿಂದ ಈ ಬಾರಿ ಒಟ್ಟು ಐದು ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಬೇಕೆಂದು ಎನ್‍ಎಂಸಿಗೆ ಮನವಿ ಮಾಡಲಾಗಿತ್ತು. ಆದರೆ ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಬೇಕೆಂಬ ಬೇಡಿಕೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಕೆಲವು ತಾಂತ್ರಿಕ ಕಾರಣಗಳಿಂದ ಅನುಮೋದನೆ ನೀಡಿಲ್ಲ.

ಪ್ರಸ್ತುತ ಮೂರು ವೈದ್ಯಕೀಯ ಕಾಲೇಜುಗಳು ಹೊಸದಾಗಿ ಪ್ರಾರಂಭ ಆಗುತ್ತಿರುವುದರಿಂದ ಪ್ರಸ್ತುತ ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 73ಕ್ಕೆ ಏರಿದೆ. ಸದ್ಯ 11,745 ವೈದ್ಯಕೀಯ ಸೀಟುಗಳು ಲಭ್ಯವಾಗುತ್ತಿದ್ದು, 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಸೀಟುಗಳ ಸಂಖ್ಯೆ 12,095ಕ್ಕೆ ಏರಿಕೆಯಾಗಲಿದೆ.

ಒಂದು ವೇಳೆ ರಾಮನಗರ ಮತ್ತು ಕನಕಪುರಕ್ಕೂ ಈ ವರ್ಷದಿಂದಲೇ ವೈದ್ಯಕೀಯ ಕಾಲೇಜುಗಳ ಪ್ರಾರಂಭಕ್ಕೆ ಎನ್‍ಎಂಸಿ ಅನುಮೋದನೆ ನೀಡಿದರೆ ಹೆಚ್ಚುವರಿಯಾಗಿ ಇನ್ನು 300 ವೈದ್ಯಕೀಯ ಸೀಟುಗಳು ಸಿಗಲಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

ರಾಮನಗರದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಸಿಬ್ಬಂದಿ ಕೊರತೆ ಮತ್ತು 650 ಬೆಡ್‍ಗಳು ಇರಬೇಕೆಂಬ ನಿಯಮವಿದೆ. ಆದರೆ ಪ್ರಸ್ತುತ ರಾಮನಗರದಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಲು ತಡವಾಗಿದೆ. ಒಂದು ವೈದ್ಯಕೀಯ ಕಾಲೇಜನ್ನು ಹೊಸದಾಗಿ ಪ್ರಾರಂಭಿಸಬೇಕಾದರೆ ಎಂಎನ್‍ಸಿ ಮತ್ತು ಎಂಸಿಐನ ಕೆಲವು ಮಾನದಂಡಗಳನ್ನು ಪಾಲಿಸಲೇಬೇಕಾಗುತ್ತದೆ.

ನಿಯಮಗಳು ಏನೇನು?

2024-25ನೇ ಶೈಕ್ಷಣಿಕ ಸಾಲಿನಿಂದ ಆರಂಭವಾಗುವ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳ ಮಿತಿಯನ್ನು ಗರಿಷ್ಠ 150ಕ್ಕೆ ನಿಗದಿಪಡಿಸಿದೆ.

ರಾಜ್ಯಗಳಲ್ಲಿರುವ 10 ಲಕ್ಷ ಜನಸಂಖ್ಯೆಗೆ 100 ವೈದ್ಯಕೀಯ ಪದವಿ ಸೀಟುಗಳು ಎಂಬ ಅನುಪಾತಕ್ಕೆ ಅನುಗುಣವಾಗಿ ಈ ಮಾನದಂಡ ರೂಪಿಸಲಾಗಿದೆ. ಹೊಸ ವೈದ್ಯಕೀಯ ಕಾಲೇಜುಗಳಲ್ಲಿನ ವೈದ್ಯಕೀಯ ಪದವಿ ಕೋರ್ಸ್, ಹೊಸ ವೈದ್ಯಕೀಯ ಕೋರ್ಸ್ ಆರಂಭ, ಹಾಲಿ ಇರುವ ಸೀಟುಗಳ ಹೆಚ್ಚಳ, ಮೌಲ್ಯಮಾಪನ ಮತ್ತು ಮೌಲ್ಯಾಂಕನ ನಿಯಮಗಳಿಗೆ ಸಂಬಂಧಿಸಿದಂತೆ ಆಯೋಗ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಈ ಬಗ್ಗೆ ವಿವರಿಸಲಾಗಿದೆ.

ಯಾವುದೇ ಕಾಲೇಜಿಗೆ ಹೆಚ್ಚುವರಿಯಾಗಿ ಅನುಮತಿಸಿದ ಕೋಟಾ ಸೀಟುಗಳು ಕೂಡ ಕಾಲೇಜಿಗೆ ಮಂಜೂರು ಮಾಡಿರುವ ಒಟ್ಟು ಸೀಟುಗಳ ಮಿತಿಯನ್ನು ಮೀರಬಾರದು. ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆದಿರುವ ಹೊಸ ವೈದ್ಯಕೀಯ ಕಾಲೇಜುಗಳಿಗೆ ಮೊದಲ ಮೂರು ವರ್ಷಗಳಲ್ಲಿ ಅನುಕ್ರಮವಾಗಿ 50, 100 ಹಾಗೂ 150 ಸೀಟುಗಳ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ.

ಹೊಸ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಸುಸಜ್ಜಿತ ಆಸ್ಪತ್ರೆ ಇರಬೇಕು. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರಬೇಕು. ಆಸ್ಪತ್ರೆಯು ಕನಿಷ್ಠ 220 ಹಾಸಿಗೆ ಸಾಮರ್ಥ್ಯ ಹೊಂದಿರಬೇಕು. ಕಾಲೇಜು ಮತ್ತು ಆಸ್ಪತ್ರೆ ನಡುವೆ ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿಯ ಪ್ರಯಾಣದ ಅಂತರ 30 ನಿಮಿಷಕ್ಕೂ ಹೆಚ್ಚಿರಬಾರದು.

ಇದನ್ನೂ ಓದಿ: PGET 2024 : ಪಿಜಿಇಟಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 10ರವರೆಗೆ ಅವಕಾಶ

ಸಹಾಯಕ ವೈದ್ಯರಿಗೆ ನೆರವಾಗುವಂತೆ ಕಾಲೇಜಿನ ವ್ಯಾಪ್ತಿಯಲ್ಲಿ ಗ್ರಾಮೀಣ ಆರೋಗ್ಯ ಕೇಂದ್ರಗಳು/ ಸಮುದಾಯ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು ಇರಬೇಕು. ಪ್ರತಿ ವೈದ್ಯಕೀಯ ಸಂಸ್ಥೆಯಲ್ಲೂ ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ಪೂರಕವಾಗುವಂತಹ ಸುಸಜ್ಜಿತ ಪ್ರಯೋಗಾಲಯ ಇರಬೇಕಾಗುತ್ತದೆ.

Continue Reading

ಆರೋಗ್ಯ

Yoga For Menopause: ಋತುಬಂಧ ಸಮಸ್ಯೆ ನಿಭಾಯಿಸಲು ಯೋಗ ನೆರವಾಗುವುದೇ?

Yoga for Menopause: ಇದ್ದಕ್ಕಿದ್ದಂತೆ ಮೈಯೆಲ್ಲಾ ಕಾವೇರಿದಂತೆ ಬಿಸಿಯಾಗುವುದು, ಮೈ ಬೆವರುವುದು, ಸುಸ್ತು-ಆಯಾಸ, ನಿಧಾನವಾಗುವ ಚಯಾಪಚಯ, ನಿದ್ದೆ ಬಾರದಿರುವುದು, ಮೂಡ್‌ ಏರುಪೇರು ಮುಂತಾದ ಹತ್ತು-ಹಲವು ಲಕ್ಷಣಗಳು ರಜೋನಿವೃತ್ತಿಯ ದಿನಗಳಲ್ಲಿ ಕಂಡುಬರುತ್ತವೆ. ಇದಕ್ಕಾಗಿ ಯೋಗಾಭ್ಯಾಸ ಹೇಗೆ ಸಹಾಯ ಮಾಡುತ್ತದೆ ಎಂಬ ಮಾಹಿತಿ ಈ ಲೇಖನದಲ್ಲಿದೆ.

VISTARANEWS.COM


on

Menopause
Koo

ರಜೋನಿವೃತ್ತಿ ಎಂಬುದು (Yoga for Menopause) ಎಲ್ಲ ಮಹಿಳೆಯರ ಬದುಕಿನ ನೈಸರ್ಗಿಕವಾಗ ಹಂತ. ಬದುಕಿನಲ್ಲಿ ಆವರೆಗೆ ಜೊತೆಯಲ್ಲಿದ್ದ ಪ್ರಜನನ ಸಾಮರ್ಥ್ಯ ಆನಂತರ ಇಲ್ಲವಾಗುವ ಹಂತವನ್ನೇ ಋತುಬಂಧ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ 40ರ ನಂತರ ಯಾವಾಗಲಾದರೂ ಆರಂಭವಾಗುವ ಈ ಹಂತ, ಕೆಲವರಲ್ಲಿ ಮುಗಿಯುವಾಗ 55 ಸಮೀಪಿಸಿರುತ್ತದೆ. ಇದೊಂದು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲ, ಬದಲಿಗೆ ಹೊಸದಾಗಿ ತಮ್ಮನ್ನು ಮಹಿಳೆಯರು ಹುಡುಕುವ ಪ್ರಕ್ರಿಯೆ. ಹಾಗಾಗಿಯೇ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಲವು ಸವಾಲುಗಳನ್ನು ಈ ದಿನಗಳು ಎದುರಿಡುತ್ತವೆ. ಇದ್ದಕ್ಕಿದ್ದಂತೆ ಮೈಯೆಲ್ಲಾ ಕಾವೇರಿದಂತೆ ಬಿಸಿಯಾಗುವುದು, ಮೈ ಬೆವರುವುದು, ಸುಸ್ತು-ಆಯಾಸ, ನಿಧಾನವಾಗುವ ಚಯಾಪಚಯ, ನಿದ್ದೆ ಬಾರದಿರುವುದು, ಮೂಡ್‌ ಏರುಪೇರು ಮುಂತಾದ ಹತ್ತು-ಹಲವು ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಅತಿಯಾಗಿ, ನಿಭಾಯಿಸಲಾರದೆ ಹಾರ್ಮೋನ್‌ ಚಿಕಿತ್ಸೆಗಳನ್ನು ತೆಗೆದುಕೊಂಡವರೂ ಇರಬಹುದು. ಕೆಲವರು ನೈಸರ್ಗಿಕ ಕ್ರಮಗಳ ಮೂಲಕ ಆರೋಗ್ಯ ಸುಧಾರಿಸಿಕೊಂಡವರೂ ಇದ್ದಿರಬಹುದು. ಅಂಥ ಕ್ರಮಗಳಲ್ಲಿ ಯೋಗ ಅ‍ಭ್ಯಾಸವೂ ಒಂದು. ಯೋಗಾಭ್ಯಾಸವು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ನೆಲೆಗಳಲ್ಲಿ ಮಾಡುವಂಥ ಪ್ರಯೋಜನಗಳೇನು ಎಂಬುದನ್ನು ನೋಡೋಣ.

Menopause 5

ದೈಹಿಕ ಲಾಭಗಳೇನು?

ಮೈ ಬಿಸಿಯಾಗುವುದು ಮತ್ತು ಅತಿಯಾಗಿ ಬೆವರುವುದು ಈ ದಿನಗಳ ಅತ್ಯಂತ ಸಾಮಾನ್ಯ ಲಕ್ಷಣ. ಹೀಗೆ ಇದ್ದಕ್ಕಿದ್ದಂತೆ ಮೈ ಬಿಸಿಯೇರುವುದು ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತದೆ. ಯೋಗದಲ್ಲಿ ಅಭ್ಯಾಸ ಮಾಡುವ ಉತ್ತಾನಪಾದಾಸನ, ಬಾಲಾಸನ, ವಿಪರೀತ ಕರಣಿಯಂಥ ಆಸನಗಳು ಮನಸ್ಸನ್ನು ವಿಶ್ರಾಂತಿಯೆಡೆಗೆ ದೂಡುತ್ತವೆ. ಇದರಿಂದ ದೇಹದ ಆಂತರಿಕ ಉಷ್ಣತೆ ಕಡಿಮೆಯಾಗಿ, ಇಂಥ ಲಕ್ಷಣಗಳನ್ನು ಕಡಿಮೆ ಮಾಡಲು ಅನುಕೂಲವಾಗುತ್ತದೆ.

Menopause Diet image

ನೋವುಗಳು

ರಜೋನಿವೃತ್ತಿಯಲ್ಲಿ ಈಸ್ಟ್ರೋಜೆನ್‌ ಹಾರ್ಮೋನಿನ ಮಟ್ಟ ಗಣನೀಯವಾಗಿ ಕುಸಿಯುವುದರಿಂದ, ಕೀಲುಗಳು, ಸ್ನಾಯುಗಳಲ್ಲಿ ನೋವಿನ ಪ್ರಮಾಣ ಹೆಚ್ಚಬಹುದು. ಈ ಹಂತದಿಂದ ಮುಂದಿನ ಬದುಕಿನಲ್ಲಿ ದೇಹದ ಕೀಲುಗಳ ನಮ್ಯತೆಯನ್ನು ಹೆಚ್ಚಿಸುವ ಮತ್ತು ಸ್ನಾಯುಗಳ ಶಕ್ತಿಯನ್ನು ವೃದ್ಧಿಸುವ ವ್ಯಾಯಾಮಗಳು ಬೇಕೇಬೇಕು. ಮಾರ್ಜರಿಯಾಸನ, ಬಿಟಿಲಾಸನ, ವೀರಭದ್ರಾಸನ, ಸೇತುಬಂಧಾಸನ, ಧನುರಾಸನದಂಥ ಭಂಗಿಗಳು ಕೀಲು ಮತ್ತು ಸ್ನಾಯುಗಳ ದೇಖರೇಕಿ ಮಾಡುವಲ್ಲಿ ನೆರವಾಗುತ್ತವೆ.

Promotes Bone Health Fish Benefits

ಮೂಳೆಗಳ ಆರೋಗ್ಯ

ಒಮ್ಮೆ ಈಸ್ಟ್ರೋಜೆನ್‌ ಪ್ರಮಾಣ ಕಡಿಮೆಯಾದರೆ, ಆಸ್ಟಿಯೊಪೊರೋಸಿಸ್‌ ನಂಥ ಮೂಳೆ ಟೊಳ್ಳಾಗುವ ತೊಂದರೆಗಳು ಅಮರಿಕೊಳ್ಳುತ್ತವೆ. ಇದಕ್ಕಾಗಿ ಕೆಲವು ವಿಶೇಷ ಆಸನಗಳು ಅಗತ್ಯವಾಗಿದ್ದು, ಈ ಮೂಲಕ ಸ್ನಾಯುಗಳನ್ನು ಬಲಗೊಳಿಸಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದು. ಇದಕ್ಕಾಗಿ ವೃಕ್ಷಾಸನ, ತ್ರಿಕೋಣಾಸನದಂಥ ಭಂಗಿಗಳು ಅಗತ್ಯವಾಗುತ್ತವೆ.

ಮಾನಸಿಕ ಆರೋಗ್ಯಕ್ಕಾಗುವ ಲಾಭ

ಆತಂಕ, ಒತ್ತಡ, ಖಿನ್ನತೆ, ಮೂಡ್‌ ಬದಲಾವಣೆಯಂಥ ಮಾನಸಿಕ ಸಮಸ್ಯೆಗಳು ಈ ದಿನಗಳಲ್ಲಿ ಎಷ್ಟೋ ಮಹಿಳೆಯರನ್ನು ಕಾಡುತ್ತದೆ. ಯೋಗದಲ್ಲಿ ಅಭ್ಯಾಸ ಮಾಡುವ ಮಾನಸಿಕ ಸ್ಥಿರತೆಯ ಕ್ರಮಗಳು ಮತ್ತು ಉಸಿರಾಟದ ತಂತ್ರಗಳು ಈ ನಿಟ್ಟಿನಲ್ಲಿ ಬಹುದೊಡ್ಡ ನೆರವು ನೀಡುತ್ತವೆ. ನಾಡಿಶೋಧನ, ಭ್ರಾಮರಿಯಂಥ ಉಸಿರಾಟದ ತಂತ್ರಗಳು ಮನಸ್ಸನ್ನು ಕೇಂದ್ರೀಕರಿಸಲು ಉಪಯುಕ್ತ. ನಿಯಮಿತವಾದ ಧ್ಯಾನದಿಂದ ಆಗುವ ಲಾಭಗಳಂತೂ ಹೇಳಿ ಮುಗಿಸಲಾಗದು.

Vastu Tips

ನಿದ್ದೆ

ಋತುಬಂಧದ ದಿನಗಳಲ್ಲಿ ಮತ್ತು ನಂತರ ಬಹಳಷ್ಟು ಮಹಿಳೆಯರು ನೆಮ್ಮದಿಯ ನಿದ್ದೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಆಳ ವಿಶ್ರಾಂತಿಗೆ ದೂಡುವಂಥ ಡಿಆರ್‌ಟಿ ಅಥವಾ ಯೋಗನಿದ್ದೆಯಂಥ ಅಭ್ಯಾಸಗಳು ನಿದ್ದೆಯ ತೊಂದರೆಯನ್ನು ಬಹುತೇಕ ದೂರ ಮಾಡುತ್ತವೆ. ಜೊತೆಗೆ ಮಕರಾಸನ, ಸುಪ್ತಬದ್ಧಕೋಣಾಸನ, ಶವಾಸನದಂಥವು ಹೆಚ್ಚುವರಿ ವಿಶ್ರಾಂತಿಯನ್ನು ಒದಗಿಸುತ್ತವೆ.

ಇದನ್ನೂ ಓದಿ: Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

ಸ್ಪಷ್ಟತೆ, ಏಕಾಗ್ರತೆ

ರಜೋನಿವೃತ್ತಿಯಲ್ಲಿ ಕಾಣುವ ಇನ್ನೊಂದು ತೊಂದರೆಯೆಂದರೆ ನೆನಪು ಮತ್ತು ಏಕಾಗ್ರತೆಯ ಕೊರತೆ. ಕೆಲವೊಮ್ಮೆ ನಿರ್ಧಾರಗಳಲ್ಲಿ ಗೊಂದಲೂ ಮೂಡುತ್ತದೆ. ಇದಕ್ಕಾಗಿ ದೇಹ-ಮನಸ್ಸುಗಳ ಹೆಚ್ಚುವರಿ ಹೊಂದಾಣಿಕೆಯನ್ನು ಬೇಡುವ ಗರುಡಾಸನ, ಅರ್ಧ ಚಂದ್ರಾಸನ ಮುಂತಾದ ಭಂಗಿಗಳು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತವೆ. ಇವುಗಳ ಜೊತೆಗೆ ಧ್ಯಾನ ಮತ್ತು ಪ್ರಾಣಾಯಾಮ ಅತ್ಯಗತ್ಯ.

Continue Reading

ಆರೋಗ್ಯ

Home remedies for Dengue: ಸರಳ ಮನೆ ಮದ್ದು ಬಳಸಿ; ಡೆಂಗ್ಯೂ ಅಪಾಯದಿಂದ ಪಾರಾಗಿ!

Home remedies for Dengue: ಡೆಂಗ್ಯೂ ಜ್ವರಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಆರೈಕೆ ಅಗತ್ಯ. ಡೆಂಗ್ಯೂ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳಿವೆ (Home Remedies). ಈ ಪರಿಹಾರಗಳು ಹೆಚ್ಚಿನ ಜ್ವರವನ್ನು ತಗ್ಗಿಸಬಹುದು ಮತ್ತು ರೋಗಲಕ್ಷಣಗಳಿಂದ ಸ್ವಲ್ಪ ವಿಶ್ರಾಂತಿ ನೀಡುವುದು. ಡೆಂಗ್ಯೂ ವ್ಯಾಪಿಸಿರುವ ಈ ಸಂದರ್ಭದಲ್ಲಿ ಸರಳ ಮನೆಮದ್ದುಗಳ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Home remedies for Dengue
Koo

ಬೆಂಗಳೂರು (bengaluru) (Home remedies for Dengue) ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂವಿನ (Dengue ) ಅಬ್ಬರ ಹೆಚ್ಚಾಗಿದೆ. ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಎಚ್ಚರ ತಪ್ಪಿದರೆ ಇದು ಪ್ರಾಣಾಪಾಯಕ್ಕೂ ಕಾರಣ ಆಗುತ್ತದೆ. ಆದರೆ ಕೆಲವು ಮನೆ ಮದ್ದಿನಿಂದ (Home Remedies) ಇದರಿಂದ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಿದೆ.

ಮಳೆಗಾಲದಲ್ಲಿ (rainy season) ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತವೆ. ಯಾಕೆಂದರೆ ನಿಂತ ನೀರು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿರುತ್ತದೆ. ವಿಪರೀತ ಜ್ವರ, ತಲೆನೋವು, ಕಣ್ಣುಗಳ ಹಿಂದೆ ನೋವು, ಆಯಾಸ, ಕೀಲು ನೋವು, ಚರ್ಮದ ದದ್ದು, ವಾಕರಿಕೆ ಮತ್ತು ವಾಂತಿ ಡೆಂಗ್ಯೂನ ಕೆಲವು ಪ್ರಮುಖ ಲಕ್ಷಣಗಳಾಗಿವೆ.

ಡೆಂಗ್ಯೂ ಜ್ವರಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಡೆಂಗ್ಯೂ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳಿವೆ. ಈ ಪರಿಹಾರಗಳು ಹೆಚ್ಚಿನ ಜ್ವರವನ್ನು ತಗ್ಗಿಸಬಹುದು ಮತ್ತು ರೋಗಲಕ್ಷಣಗಳಿಂದ ನಿಮಗೆ ಸ್ವಲ್ಪ ವಿಶ್ರಾಂತಿ ನೀಡಬಹುದು. ಡೆಂಗ್ಯೂ ಮತ್ತು ಅದರ ತೊಡಕುಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಹಾರಗಳು ಇಲ್ಲಿವೆ.


ಅಮೃತ ಬಳ್ಳಿ ರಸ

ಡೆಂಗ್ಯೂ ಜ್ವರಕ್ಕೆ ಅಮೃತ ಬಳ್ಳಿ ರಸ ಸುಪ್ರಸಿದ್ಧ ಪರಿಹಾರವಾಗಿದೆ. ಅಮೃತ ಬಳ್ಳಿಯ ರಸ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಲವಾದ ರೋಗ ನಿರೋಧಕ ಶಕ್ತಿಯು ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ಹೋರಾಡಲು, ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಒಂದು ಲೋಟ ನೀರಿನಲ್ಲಿ ಅಮೃತಬಳ್ಳಿ ಸಸ್ಯದ ಎರಡು ಸಣ್ಣ ಕಾಂಡಗಳನ್ನು ಕುದಿಸಬಹುದು. ಸ್ವಲ್ಪ ಬೆಚ್ಚಗಿರುವಾಗ ಈ ನೀರನ್ನು ಸೇವಿಸಿ. ನೀವು ಒಂದು ಕಪ್ ಬೇಯಿಸಿದ ನೀರಿಗೆ ಕೆಲವು ಹನಿ ಅಮೃತ ಬಳ್ಳಿಯ ರಸವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಬಹುದು. ಆದರೆ ಇದನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ.


ಪಪ್ಪಾಯ ಎಲೆಯ ರಸ

ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾಗುವುದರಿಂದ, ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಪಪ್ಪಾಯ ಎಲೆಯ ರಸವು ಉತ್ತಮ ಪರಿಹಾರವಾಗಿದೆ. ಪಪ್ಪಾಯ ಎಲೆಯ ರಸವು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಇದು ಡೆಂಗ್ಯೂ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಕೆಲವು ಪಪ್ಪಾಯ ಎಲೆಗಳನ್ನು ತೆಗೆದುಕೊಂಡು ಅದರಿಂದ ರಸವನ್ನು ಹೊರತೆಗೆಯಲು ಅವುಗಳನ್ನು ಪುಡಿಮಾಡಿ. ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಎರಡು ಬಾರಿ ಪಪ್ಪಾಯ ಎಲೆಯ ರಸವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು.


ತಾಜಾ ಪೇರಳೆ ರಸ

ಪೇರಳೆ ರಸವು ಬಹು ಪೋಷಕಾಂಶಗಳಿಂದ ತುಂಬಿರುತ್ತದೆ. ಇದರಲ್ಲಿ ವಿಟಮಿನ್ ಸಿಯು ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ನೀಡಲು ಆಹಾರದಲ್ಲಿ ತಾಜಾ ಪೇರಳೆ ರಸವನ್ನು ಸೇರಿಸಬಹುದು. ಪೇರಳೆ ರಸವು ನಿಮಗೆ ಇತರ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ. ದಿನಕ್ಕೆ ಎರಡು ಬಾರಿ ಒಂದು ಕಪ್ ಪೇರಳೆ ರಸವನ್ನು ಕುಡಿಯಬಹುದು ಅಥವಾ ಜ್ಯೂಸ್ ಬದಲಿಗೆ ತಾಜಾ ಪೇರಳೆ ಹಣ್ಣನ್ನು ಕೂಡ ತಿನ್ನಬಹುದು.


ಮೆಂತ್ಯ ಬೀಜಗಳು

ಮೆಂತ್ಯ ಬೀಜಗಳು ಡೆಂಗ್ಯೂ ಜ್ವರವನ್ನು ನಿಯಂತ್ರಿಸಲು ಸಹಾಯ ಮಾಡುವ ಬಹು ಪೋಷಕಾಂಶವಿರುವ ಔಷಧ ಕೆಲವು ಮೆಂತ್ಯ ಬೀಜಗಳನ್ನು ಒಂದು ಕಪ್ ಬಿಸಿ ನೀರಿನಲ್ಲಿ ನೆನೆಸಿಟ್ಟು ತಣ್ಣಗಾದ ಬಳಿಕ ದಿನಕ್ಕೆ ಎರಡು ಬಾರಿ ಕುಡಿಯಿರಿ. ಮೆಂತ್ಯ ನೀರಿನಲ್ಲಿ ವಿಟಮಿನ್ ಸಿ, ಕೆ ಮತ್ತು ಫೈಬರ್‌ ಸಮೃದ್ಧವಾಗಿರುವ ಕಾರಣ ಇತರ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಮೆಂತ್ಯ ನೀರು ಜ್ವರವನ್ನು ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಡೆಂಗ್ಯೂವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಬಲವಾದ ರೋಗನಿರೋಧಕ ಶಕ್ತಿಯು ಡೆಂಗ್ಯೂನ ಆರಂಭಿಕ ರೋಗಲಕ್ಷಣಗಳನ್ನು ಸಹ ತಡೆಯುತ್ತದೆ. ಸಿಟ್ರಸ್ ಹಣ್ಣುಗಳು, ಬೆಳ್ಳುಳ್ಳಿ, ಬಾದಾಮಿ, ಅರಿಶಿನ ಮತ್ತು ಇನ್ನೂ ಕೆಲವು ಆಹಾರ ಸಾಮಗ್ರಿಗಳಲ್ಲಿ ; ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳಿರುತ್ತವೆ. ಇವುಗಳನ್ನು ಆಹಾರದಲ್ಲಿ ಸೇರಿಸಿ ನಿಯಮಿತವಾಗಿ ಸೇವಿಸಿ.

ಇದನ್ನೂ ಓದಿ: Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

ಡೆಂಗ್ಯೂನ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷಿಸಿಕೊಳ್ಳಬೇಕು. ಈ ಪರಿಹಾರಗಳು ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮಾತ್ರ ಸಹಾಯ ಮಾಡುತ್ತದೆ. ಆದರೆ ಹೆಚ್ಚು ಕಾಲ ಮನೆಮದ್ದುಗಳನ್ನು ಅವಲಂಬಿಸಬೇಡಿ. ಕೂಡಲೇ ವೈದ್ಯರನ್ನು ಕಾಣಿರಿ.

Continue Reading

ಆರೋಗ್ಯ

Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

Period Insomnia: ಮೆನೋಪಾಸ್‌ ಸಮಯದಲ್ಲಿ, ಮೂಡ್‌ನ ಏರುಪೇರು, ಇದ್ದಕ್ಕಿದ್ದಂತೆ ಮೈಬಿಸಿಯಾಗಿ ಬೆವರುವುದು, ರಾತ್ರಿ ಎಷ್ಟೇ ಹೊತ್ತಾದರೂ ನಿದ್ದೆ ಬರದೇ ಇರುವುದು ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ನಲವತ್ತರ ಆಸುಪಾಸಿನಲ್ಲೇ ಕೆಲವರಿಗೆ ಈ ಸಮಸ್ಯೆಗಳು ಆರಂಭವಾಗುವುದುಂಟು. ಮೆನೋಪಾಸ್‌ ಹಲವು ಬಗೆಯ ಇಂತಹ ಸಮಸ್ಯೆಗಳನ್ನು ವರ್ಷಾನುಗಟ್ಟಲೆ ಹೊತ್ತು ತರುವುದುಂಟು. ಮುಖ್ಯವಾಗಿ ಮಹಿಳೆಯರು ಈ ಸಂದರ್ಭದಲ್ಲಿ ಎದುರಿಸುವ ಸಮಸ್ಯೆ ಎಂದರೆ, ನಿದ್ದೆಯದ್ದು. ಎಷ್ಟು ಹೊತ್ತಾದರೂ ರಾತ್ರಿ ನಿದ್ದೆ ಬರದೇ ಇರುವುದೇ ವ್ಯಾಪಕವಾಗಿ ಮಹಿಳೆಯರು ಅನುಭವಿಸುವ ಸಮಸ್ಯೆ. ಇದಕ್ಕೇನು ಪರಿಹಾರ?

VISTARANEWS.COM


on

Period Insomnia
Koo

ಮಹಿಳೆ ತನ್ನ ಜೀವನದ ಹಲವು ಹಂತಗಳಲ್ಲಿ ಆಗಾಗ ಹಾರ್ಮೋನಿನ ಏರುಪೇರಿನಂಥ ಸಮಸ್ಯೆಗೆ ಒಳಗಾಗುತ್ತಾಳೆ (Period Insomnia). ಮೆನೋಪಾಸ್‌ ಸಮಯದಲ್ಲಿ, ಮೂಡ್‌ನ ಏರುಪೇರು, ಇದ್ದಕ್ಕಿದ್ದಂತೆ ಮೈಬಿಸಿಯಾಗಿ ಬೆವರುವುದು, ರಾತ್ರಿ ಎಷ್ಟೇ ಹೊತ್ತಾದರೂ ನಿದ್ದೆ ಬರದೇ ಇರುವುದು ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ನಲವತ್ತರ ಆಸುಪಾಸಿನಲ್ಲೇ ಕೆಲವರಿಗೆ ಈ ಸಮಸ್ಯೆಗಳು ಆರಂಭವಾಗುವುದುಂಟು. ಮೆನೋಪಾಸ್‌ ಹಲವು ಬಗೆಯ ಇಂತಹ ಸಮಸ್ಯೆಗಳನ್ನು ವರ್ಷಾನುಗಟ್ಟಲೆ ಹೊತ್ತು ತರುವುದುಂಟು. ಮುಖ್ಯವಾಗಿ ಮಹಿಳೆಯರು ಈ ಸಂದರ್ಭದಲ್ಲಿ ಎದುರಿಸುವ ಸಮಸ್ಯೆ ಎಂದರೆ, ನಿದ್ದೆಯದ್ದು. ಎಷ್ಟು ಹೊತ್ತಾದರೂ ರಾತ್ರಿ ನಿದ್ದೆ ಬರದೇ ಇರುವುದೇ ವ್ಯಾಪಕವಾಗಿ ಮಹಿಳೆಯರು ಅನುಭವಿಸುವ ಸಮಸ್ಯೆ. ಬನ್ನಿ, ಮೆನೋಪಾಸ್‌ ಸಮಯದಲ್ಲಿ ಮಹಿಳೆಯರು ಎದುರಿಸುವ ನಿದ್ದೆಯ ಸಮಸ್ಯೆಗಳಿಗೆ ಇಲ್ಲಿ ಕೆಲವು ಸರಳ ಉಪಾಯಗಳಿವೆ.

Vastu Tips

ಮೆನೋಪಾಸ್‌ ಸಮಯದಲ್ಲಿ ಉತ್ತಮ ನಿದ್ದೆ ಬಹಳ ಮುಖ್ಯ. ಈ ಸಂದರ್ಭ ತೂಕ ಇಳಿಸುವ ಬಗ್ಗೆ, ಸಪ್ಲಿಮೆಂಟ್‌ಗಳ ಬಗ್ಗೆ ಹೇಳಿದಷ್ಟು ನಿದ್ದೆಯ ಬಗ್ಗೆ ಯಾರೂ ಹೇಳುವುದಿಲ್ಲ. ಆದರೆ, ನಿದ್ದೆ ಇಲ್ಲಿ ಅತ್ಯಂತ ಮುಖ್ಯವಾದ ಅಗತ್ಯ. ಮೆನೋಪಾಸ್‌ನ ಹಂತದಲ್ಲಿರುವ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಏಳರಿಂದ ಒಂಭತ್ತು ಗಂಟೆಗಳಷ್ಟು ನಿದ್ದೆ ಬೇಕು. ಮಧ್ಯರಾತ್ರಿಯಾದ ಮೇಲೆ ಮಲಗಿದರೆ ಖಂಡಿತಾ ಸಾಲದು.

ಒಳ್ಳೆಯ ನಿದ್ದೆ ಬರಬೇಕಾದರೆ, ಈ ಹಂತದಲ್ಲಿ ಮಹಿಳೆ ರಾತ್ರಿ ಒಂಭತ್ತರಿಂದ 11 ಗಂಟೆಯೊಳಗೆ ನಿದ್ದೆಗೆ ಜಾರಬೇಕು. ಈ ಸಮಯದಲ್ಲಿ ಮಲಗಿಬಿಟ್ಟರೆ, ಬೆಳಗ್ಗೆ ತಾಜಾ ಆಗಿ ಸೂರ್ಯ ಹುಟ್ಟುವಾಗಲೇ ಏಳಬಹುದು. ನಿಮ್ಮ ಬಹಳಷ್ಟು ಸಮಸ್ಯೆಗಳೆಲ್ಲವೂ ಇದನ್ನು ಅಭ್ಯಾಸ ಮಾಡಿಕೊಂಡರೆ ಪರಿಹಾರ ಕಾಣುತ್ತದೆ.

Menopause

ಅತ್ಯಂತ ಹೆಚ್ಚು ಅಥವಾ ಅತ್ಯಂತ ಕಡಿಮೆ ಋಥ್ರಿ ಉಣ್ಣುವುದು ಎರಡೂ ಒಳ್ಳೆಯದಲ್ಲ. ಹಿತಮಿತವಾಗಿ, ಹೊಟ್ಟೆ ಭಾರವೆನಿಸದಂತೆ ಊಟ ಮಾಡಿ. ರಾತ್ರಿ ಏಳರಿಂದ ಎಂಟು ಗಂಟೆಯೊಳಗೆ ಊಟ ಮುಗಿಸಿಬಿಡಿ. ಬೆಳಗ್ಗೆ ಎದ್ದ ಕೂಡಲೇ ಪೋಷಕಾಂಶಯುಕ್ತ ಉಪಹಾರ ಬಹಳ ಮುಖ್ಯ. ಇಡ್ಲಿ, ಪೋಹಾ, ದೋಸೆ, ಉಪ್ಪಿಟ್ಟು, ಪರಾಠಾ ಇತ್ಯಾದಿಗಳಿರುವ ಉಪಹಾರ ಒಳ್ಳೆಯದು. ಕಾರ್ಬೋಹೈಡ್ರೇಟ್‌ ಹೆಚ್ಚಿದೆ ಎಂದು ಇಂತಹ ದೇಸೀ ಆಹಾರಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಇವು ನಿಜಕ್ಕೂ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಹೊಂದಿವೆ.

ನೀವು ಮೆನೋಪಾಸ್‌ ಹಂತದಲ್ಲಿರುವಾಗ ಮನೆಯಲ್ಲೇ ಇದ್ದರೆ, ಮಧ್ಯಾಹ್ನ ಊಟವಾದ ಮೇಲೆ ಒಂದು ಸಣ್ಣ ನಿದ್ದೆ ಮಾಡಬಹುದು. ಆದರೆ ಆ ನಿದ್ದೆ ಅರ್ಧ ಗಂಟೆಯನ್ನು ಮೀರದಿರಲಿ. ಹೀಗೆ ಮಲಗುವುದರಿಂದ ಕೊಂಚ ಆರಾಮವೆನಿಸುತ್ತದೆ. ಥೈರಾಯ್ಡ್‌ ಸಮಸ್ಯೆ, ಋತುಚಕ್ರದಲ್ಲಿ ಏರಿಪೇರು ಹಾಗೂ ಕೈಕಾಲು ನೋವು, ಸೊಂಟ ನೋವಿನ ಸಮಸ್ಯೆ ಇರುವ ಮಂದಿಗೆ ಕೊಂಚ ಆರಾಮ ದೊರೆಯುತ್ತದೆ.

ಇದನ್ನೂ ಓದಿ: Foods For Hormone Balance: ಮಹಿಳೆಯರೇ, ಹಾರ್ಮೋನಿನ ಸಮತೋಲನಕ್ಕಾಗಿ ಈ ಆಹಾರಗಳನ್ನು ಮರೆಯದೇ ಸೇವಿಸಿ

ಆಲ್ಕೋಹಾಲ್‌, ತಂಬಾಕು ಇತ್ಯಾದಿಗಳಿಂದ ದೂರವಿರಿ. ಚಹಾ ಕಾಫಿ ಅಭ್ಯಾಸವಿದ್ದರೆ ದಿನಕ್ಕೆರಡು ಲೋಟಕ್ಕಿಂತ ಹೆಚ್ಚು ಸೇವಿಸಬೇಡಿ. ಚಾಕೋಲೇಟ್‌ ಕೂಡಾ ತಿನ್ನಬೇಡಿ.

Continue Reading
Advertisement
Ramniwas Rawat
ದೇಶ19 mins ago

Ramniwas Rawat: 15 ನಿಮಿಷದಲ್ಲಿ 2 ಬಾರಿ ಸಚಿವನಾಗಿ ಬಿಜೆಪಿ ಶಾಸಕ ಪ್ರಮಾಣವಚನ; ಎಲ್ಲಾಯ್ತು ಎಡವಟ್ಟು?

Paris Olympics 2024
ಕ್ರೀಡೆ30 mins ago

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿಂಧು, ಶರತ್ ಕಮಲ್ ಭಾರತದ ಧ್ವಜಧಾರಿ

MLA Satish Sail visited the flood affected areas of Karwar taluk
ಉತ್ತರ ಕನ್ನಡ42 mins ago

Uttara Kannada News: ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ. ಸೈಲ್ ಭೇಟಿ

Union Budget 2024
ದೇಶ1 hour ago

Union Budget 2024: ಕೇಂದ್ರ ಬಜೆಟ್;‌ 8ನೇ ವೇತನ ಆಯೋಗ ಸೇರಿ 7 ಬೇಡಿಕೆ ಇಟ್ಟ ಸರ್ಕಾರಿ ನೌಕರರು!

Dengue Cases
ಕರ್ನಾಟಕ1 hour ago

Dengue Cases: ರಾಜ್ಯದಲ್ಲಿ ಸೋಮವಾರ 197 ಡೆಂಗ್ಯೂ ಕೇಸ್‌ಗಳು ಪತ್ತೆ, ಒಬ್ಬರ ಸಾವು

ಕ್ರೀಡೆ1 hour ago

Kuldeep Yadav: ಕುಲ್​ದೀಪ್ ಯಾದವ್​ರನ್ನು​ ಅಭಿನಂದಿಸಿದ ಯೋಗಿ ಆದಿತ್ಯನಾಥ್

Channappa Gowda Mosambi elected as new District President of Akhila bharata Veerashaiva Mahasabha
ಯಾದಗಿರಿ2 hours ago

Yadgiri News: ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಜಿಲ್ಲಾಧ್ಯಕ್ಷರಾಗಿ ಚನ್ನಪ್ಪಗೌಡ ಮೋಸಂಬಿ ಅವಿರೋಧ ಆಯ್ಕೆ

Maharashtra Rain
Latest2 hours ago

Maharashtra Rain: ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ; ರಾಯಗಢ ಕೋಟೆಯಲ್ಲಿ ಪ್ರವಾಸಿಗರಿಗೆ ಪ್ರಾಣ ಸಂಕಟ; ವಿಡಿಯೊ ನೋಡಿ

Money Guide
ಮನಿ-ಗೈಡ್2 hours ago

Money Guide: ಕಡಿಮೆ ಅವಧಿಯಲ್ಲಿ 1 ಕೋಟಿ ರೂ. ಗಳಿಸುವುದು ಹೇಗೆ? ಇಲ್ಲಿದೆ ಹೂಡಿಕೆಯ ಲೆಕ್ಕಾಚಾರ

land fraud
ಕರ್ನಾಟಕ2 hours ago

land fraud: ಭೂ ವಂಚನೆ ತಡೆಗೆ ಪಹಣಿ-ಆಧಾರ್‌ ಜೋಡಣೆ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ: ಸಿಎಂ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect
ಮಳೆ5 hours ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ7 hours ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ9 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ10 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು11 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ1 day ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ1 day ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 day ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ2 days ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

ಟ್ರೆಂಡಿಂಗ್‌