Akshay Kumar: ಹಗ್ಗದಲ್ಲಿ ನೇತಾಡುವಾಗ ಮೂರ್ಛೆ ಹೋದ ನಟ; ರಕ್ಷಿಸಿದ ʻಕಿಲಾಡಿʼ ಅಕ್ಷಯ್​​ ಕುಮಾರ್ ! - Vistara News

ಬಾಲಿವುಡ್

Akshay Kumar: ಹಗ್ಗದಲ್ಲಿ ನೇತಾಡುವಾಗ ಮೂರ್ಛೆ ಹೋದ ನಟ; ರಕ್ಷಿಸಿದ ʻಕಿಲಾಡಿʼ ಅಕ್ಷಯ್​​ ಕುಮಾರ್ !

Akshay Kumar: ಪ್ರಸ್ತುತ ʻಸರ್ಫಿರಾʼ ಸಿನಿಮಾದ ಯಶಸ್ಸನ್ನು ಆನಂದಿಸುತ್ತಿರುವ ನಟನ ಹಳೆಯ ವಿಡಿಯೊವೊಂದು ವೈರಲ್‌ ಆಗುತ್ತಿದೆ. ಅಭಿಮಾನಿಗಳು ನಟನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಗ್ಗದಲ್ಲಿ ನೇತಾಡುವಾಗ ಮೂರ್ಛೆ ಹೋದ ನಟನನ್ನು ಅಕ್ಷಯ್‌ ಕುಮಾರ್‌ ರಕ್ಷಿಸಿದ್ದಾರೆ.

VISTARANEWS.COM


on

Akshay Kumar Rushes To Save Actor Who Faints Mid-Air During A Stunt
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ತಮ್ಮ ಬಹುಮುಖ ಅಭಿನಯದಿಂದ ಹಿಂದಿ ಮನರಂಜನಾ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ. `ಕಿಲಾಡಿ ಕುಮಾರ್’ ಎಂದು ಕರೆಯಲ್ಪಡುವ ಅವರು ಆಗಾಗ ತಮ್ಮ ಆಕ್ಷನ್ ಸೀಕ್ವೆನ್ಸ್‌ಗಳ ಮೂಲಕ ಮನ್ನೆಲೆಗೆ ಬರುತ್ತಾರೆ. ಮಾತ್ರವಲ್ಲ ದೇಹ ದಂಡಿಸಿ ವರ್ಕೌಟ್‌ ಮಾಡುತ್ತಾರೆ. ಅನೇಕ ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು ಇದೆ. ಪ್ರಸ್ತುತ ʻಸರ್ಫಿರಾʼ ಸಿನಿಮಾದ ಯಶಸ್ಸನ್ನು ಆನಂದಿಸುತ್ತಿರುವ ನಟನ ಹಳೆಯ ವಿಡಿಯೊವೊಂದು ವೈರಲ್‌ ಆಗುತ್ತಿದೆ. ಅಭಿಮಾನಿಗಳು ನಟನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಗ್ಗದಲ್ಲಿ ನೇತಾಡುವಾಗ ಮೂರ್ಛೆ ಹೋದ ನಟನನ್ನು ಅಕ್ಷಯ್‌ ಕುಮಾರ್‌ ರಕ್ಷಿಸಿದ್ದಾರೆ.

ಈಗ ಎಕ್ಸ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಕಪಿಲ್ ಶರ್ಮಾ ಅವರ ಹಳೆಯ ಕಾಮಿಡಿ ಚಾಟ್ ಶೋನ ಚಿತ್ರೀಕರಣದ ಸಮಯದಲ್ಲಿ ಮೂರ್ಛೆ ಹೋದ ನಟನ ಕಡೆಗೆ ಅಕ್ಷಯ್ ಧಾವಿಸುತ್ತಿರುವುದನ್ನು ಕಾಣಬಹುದು. ಕಪಿಲ್ ಶರ್ಮಾ ಅವರ ಹಳೆಯ ಕಾಮಿಡಿ ಚಾಟ್ ಶೋ ವೇಳೆ ಹಾಸ್ಯನಟ ಪರಿತೋಷ್ ತ್ರಿಪಾಠಿ ಅವರು ಏಕಾಏಕಿ ಮೂರ್ಛೆ ಹೋದರು. ಅಲಿ ಅಸ್ಗರ್ ಮತ್ತು ಪ್ಯಾರಿತೋಷ್ ಹಗ್ಗಕ್ಕೆ ನೇತಾಡುವ ದೃಶ್ಯ ನಿಭಾಯಿಸುತ್ತಿದ್ದರು. ಆ ಕ್ಷಣಕ್ಕೆ ಪರಿತೋಷ್ ತ್ರಿಪಾಠಿ ಮೂರ್ಛೆ ಹೋಗುತ್ತಿರುವಾಗ ಪಕ್ಕದಲ್ಲಿ ಇದ್ದ ಅಲಿ ಅಸ್ಗರ್ ತನ್ನ ಕಾಲುಗಳಿಂದ ಪಾರಿತೋಷ್‌ರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಪಾರಿತೋಷ್‌ರನ್ನು ನಿಭಾಯಿಸಲು ಆಗಲೇ ಇಲ್ಲ. ಅದೇ ಕ್ಷಣಕ್ಕೆ ಚಿತ್ರೀಕರಣ ಮಾಡುತ್ತಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್, ಪರಿತೋಷ್‌ಗೆ ಸಹಾಯ ಮಾಡಲು ಓಡಿ ಬಂದು ಮೂರ್ಛೆ ಹೋದ ನಟನನ್ನು ಹಿಡಿದುಕೊಂಡಿದ್ದಾರೆ. ಅಕ್ಷಯ್ ಮತ್ತು ಉಳಿದ ಸಿಬ್ಬಂದಿ ಕೂಡ ನಟ ಬೀಳದಂತೆ ರಕ್ಷಿಸಲು ಧಾವಿಸಿದ್ದಾರೆ. ಇದೀಗ ಅಕ್ಷಯ್‌ ಕುಮಾರ್‌ ಅವರ ಸಮಯಪ್ರಜ್ಞೆಗೆ ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಒಬ್ಬರು ಹೀಗೆ ಬರೆದಿದ್ದಾರೆ, “ತರಬೇತಿ ಪಡೆಯದ ಜನರು ಸರಿಯಾದ ಸುರಕ್ಷತಾ ಸಿಬ್ಬಂದಿ ಇಲ್ಲದೆ ಪ್ರದರ್ಶನವನ್ನು ಮಾಡಬಾರದುʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಕಿಲಾಡಿ ಕುಮಾರನ ಮೇಲೆ ಗೌರವ ಹೆಚ್ಚಾಯಿತುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Akshay Kumar:  ಅಕ್ಷಯ್ ಕುಮಾರ್‌ಗೆ ಕೋವಿಡ್‌ ಪಾಸಿಟಿವ್; ಅನಂತ್ ಅಂಬಾನಿ ಮದುವೆಗೆ ಗೈರು!

ಸಿನಿಮಾ ವಿಚಾರಕ್ಕೆ ಬಂದರೆ ಸರ್ಫಿರಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಅಕ್ಷಯ್ ಕುಮಾರ್ ಅವರು ಸಿಂಘಮ್ ಅಗೇನ್, ಖೇಲ್ ಖೇಲ್ ಮೇ, ಜಾಲಿ LLB 3, ಸ್ಕೈ ಫೋರ್ಸ್, ಹೇರಾ ಫೆರಿ 3, ಕಣ್ಣಪ್ಪ , ವೆಲ್‌ಕಮ್ ಟು ದಿ ಜಂಗಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್ ಮಂಜ್ರೇಕರ್ ನಿರ್ದೇಶನದ ʻವೇದತ್ ಮರಾಠೆ ವೀರ್ ದೌಡ್ಲೆ ಸಾತ್ʼ ಮೂಲಕ ಮರಾಠಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರವನ್ನು ನಿಭಾಯಿಸಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Urvashi Rautela: ನಟಿ ಊರ್ವಶಿ ರೌಟೇಲಾ ಬಟ್ಟೆ ಬಿಚ್ಚಿ, ಸ್ನಾನ ಮಾಡುವ ವಿಡಿಯೊ ಲೀಕ್‌!

Urvashi Rautela: ಇದೀಗ ಊರ್ವಶಿ ಅವರ ಈ ವಿಡಿಯೊ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಅನೇಕರು ಈ ವೀಡಿಯೊ PR ಸ್ಟಂಟ್ ಎಂದು ಹೇಳುತ್ತಿದ್ದಾರೆ. ಊರ್ವಶಿ ವೀಡಿಯೋದಲ್ಲಿಮಂಗಳಸೂತ್ರ ಬೇರೆ ಧರಿಸಿದ್ದಾರೆ ಹೀಗಾಗಿ ಇದು ಫೇಕ್‌ ಎಂದು ಹೇಳಲಾಗುತ್ತಿದೆ. ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಊರ್ವಶಿ, ‘ಸಿಂಗ್ ಸಾಬ್ ದಿ ಗ್ರೇಟ್’ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು.

VISTARANEWS.COM


on

Urvashi Rautela bathroom video leak on social media
Koo

ಬೆಂಗಳೂರು: ಬಾಲಿವುಡ್‌ ನಟಿ ಊರ್ವಶಿ ರೌಟೇಲಾ (Urvashi Rautela) ಅವರ ಖಾಸಗಿ ವಿಡಿಯೊವೊಂದು ಭಾರಿ ವೈರಲ್‌ ಆಗುತ್ತಿದೆ. ಸ್ನಾನ ಮಾಡುತ್ತಿರುವ ವಿಡಿಯೊವೊಂದು ಲೀಕ್‌ ಆಗಿದೆ. ಇಡಿಯೋದಲ್ಲಿ ಊರ್ವಶಿ ಬಟ್ಟೆ ಬಿಚ್ಚಿಕೊಳ್ಳುತ್ತಿರುವುದು ಕಂಡುಬಂದಿದೆ. ರೂಮಿನಲ್ಲಿ ಹಾಕಲಾಗಿದ್ದ ಕ್ಯಾಮೆರಾದ ಬಗ್ಗೆ ಆಕೆಗೆ ತಿಳಿದಿಲ್ಲ ಎಂಬಂತೆ ತೋರಿದೆ. ಅಲ್ಲದೇ ಇದು pR ಸ್ಟಂಟ್‌ ಎಂದು ಹೇಳಲಾಗುತ್ತಿದೆ. ರೌಟೇಲಾ ಅವರು ʻಸಿಂಗ್ ಸಾಬ್ ದಿ ಗ್ರೇಟ್ʼ, ʻಗ್ರೇಟ್ ಗ್ರ್ಯಾಂಡ್ ಮಸ್ತಿʼ, ಮತ್ತು ʻಹೇಟ್ ಸ್ಟೋರಿʼಯಂತಹ 4 ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದೀಗ ಊರ್ವಶಿ ಅವರ ಈ ವಿಡಿಯೊ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಅನೇಕರು ಈ ವೀಡಿಯೊ PR ಸ್ಟಂಟ್ ಎಂದು ಹೇಳುತ್ತಿದ್ದಾರೆ. ಊರ್ವಶಿ ವೀಡಿಯೋದಲ್ಲಿಮಂಗಳಸೂತ್ರ ಬೇರೆ ಧರಿಸಿದ್ದಾರೆ ಹೀಗಾಗಿ ಇದು ಫೇಕ್‌ ಎಂದು ಹೇಳಲಾಗುತ್ತಿದೆ. ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಊರ್ವಶಿ, ‘ಸಿಂಗ್ ಸಾಬ್ ದಿ ಗ್ರೇಟ್’ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಸನ್ನಿ ಡಿಯೋಲ್ ಅಭಿನಯದ ಈ ಚಿತ್ರ ಕಮರ್ಷಿಯಲ್ ಫ್ಲಾಪ್ ಆಗಿತ್ತು. ಇದರ ನಂತರ ಯೋ ಯೋ ಹನಿಸಿಂಗ್ ಅವರೊಂದಿಗೆ ‘ಲವ್ ಡೋಸ್’ ಎಂಬ ಆಲ್ಬಂನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದರು., ಮೆಗಾ ಸ್ಟಾರ್‌ ಚಿರಂಜೀವಿ ನಟನೆಯ, ‘ವಾಲ್ತೇರು ವೀರಯ್ಯ’ದಲ್ಲಿ ಐಟಂ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿದ್ದರು. ಪವನ್ ಕಲ್ಯಾಣ್ ಅಭಿನಯದ ‘ಬ್ರೋ’ ಸಿನಿಮಾದಲ್ಲಿಯೂ ಮೈ ಡಿಯರ್ ಮಾರ್ಕಂಡೇಯ ಎಂದು ಸೊಂಟ ಬಳುಕಿಸಿ ಸೌತ್‌ ಸಿನಿರಸಿಕರ ಮನಗೆದ್ದರು.

ಇದನ್ನೂ ಓದಿ: Urvashi Rautela : ಶೂಟಿಂಗ್ ವೇಳೆ ನಟಿ ಊರ್ವಶಿ ರೌಟೆಲಾಗೆ ಗಂಭೀರ ಗಾಯ; ಹೈದರಾಬಾದ್ ಆಸ್ಪತ್ರೆಗೆ ದಾಖಲು

ರಿಷಭ್​ ಪಂತ್ ಮತ್ತು ಊರ್ವಶಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ವರ್ಷಗಳ ಹಿಂದೆ ಬಾರೀ ಸದ್ದು ಮಾಡಿತ್ತು. ಇದೇ ವೇಳೆ ಊರ್ವಶಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಭ್‌ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಈ ಬಗ್ಗೆ ರಿಷಭ್‌ ನಟಿಗೆ ಖಡಕ್ ತಿರುಗೇಟು ನೀಡಿದ್ದರು. ಇದೇ ವಿಚಾರವಾಗಿ ಇವರಿಬ್ಬರ ಮಧ್ಯೆ ಟ್ವೀಟ್​ ವಾರ್​ ಕೂಡ ನಡೆದಿತ್ತು




Continue Reading

Latest

Actress Hina Khan: ಕಿಮೋಥೆರಪಿ ಅನುಭವ ಹಂಚಿಕೊಂಡಿದ್ದಾರೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಬಾಲಿವುಡ್‌ ನಟಿ

Actress Hina Khan: ಬಾಲಿವುಡ್‌ನ ಬೇಡಿಕೆಯ ನಟಿಯರಲ್ಲಿ ಒಬ್ಬರಾದ ಹೀನಾ ಖಾನ್ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ತಮ್ಮ ಕ್ಯಾನ್ಸರ್ ಜರ್ನಿಯ ಕುರಿತ ಪ್ರತಿಯೊಂದು ವಿಷಯದ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಳುತ್ತಿದ್ದಾರೆ. ಕೀಮೋಥೆರಪಿಗಾಗಿ ತಮ್ಮ ಉದ್ದನೆಯ ಕೂದಲನ್ನು ಇತ್ತೀಚೆಗೆ ಕತ್ತರಿಸಿದ್ದಾರೆ. ಈ ಫೋಟೊದ ಜೊತೆಗೆ ಈಗ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Actress Hina Khan
Koo

ಮುಂಬೈ : ಬಾಲಿವುಡ್‍ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ಹೀನಾ ಖಾನ್ (Actress Hina Khan) ಅವರು ತಮ್ಮ ನಟನೆಯ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು ಇತ್ತೀಚೆಗೆ ತಮ್ಮ ಅಧಿಕೃತ ಹ್ಯಾಂಡಲ್‍ನಲ್ಲಿ ತಾನು ಮೂರನೇ ಹಂತದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು.

ತಮ್ಮ ಸ್ತನ ಕ್ಯಾನ್ಸರ್‌ ಜರ್ನಿಯ ಕುರಿತ ಪ್ರತಿಯೊಂದು ವಿಷಯದ ಬಗ್ಗೆ ನಟಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಳುತ್ತಿದ್ದಾರೆ. ಕೀಮೋಥೆರಪಿಗಾಗಿ ತಮ್ಮ ಉದ್ದನೆಯ ಕೂದಲನ್ನು ಇತ್ತೀಚೆಗೆ ಕತ್ತರಿಸಿದ್ದಾರೆ. ಈ ಫೋಟೊದ ಜೊತೆಗೆ ಈಗ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೊಗಳನ್ನು ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ.

ಹಾಗೇ ಬುಧವಾರ, ಅವರು ಮತ್ತೊಮ್ಮೆ ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದು ಟಿಪ್ಪಣಿಯನ್ನು ಬರೆದಿದ್ದಾರೆ ಮತ್ತು ಅದರಲ್ಲಿ ಅವರು ನಿರಂತರವಾಗಿ ನೋವಿನಿಂದ ಬಳಲುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಲ್ಲದೇ ಆಸ್ಪತ್ರೆಯ ಹೌಸ್ ಕೀಪಿಂಗ್ ಸಿಬ್ಬಂದಿ ತನಗೆ ಬರೆದ ವಿಶೇಷ ಕೈಬರಹದ ಪತ್ರದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಈ ಪತ್ರದಲ್ಲಿ ಹೌಸ್‌ ಕೀಪಿಂಗ್‌ ಸಿಬ್ಬಂದಿಗಳು ನಟಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ ಹಾಗೇ ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಟಿ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರಂತೆ. ತನ್ನ ಇನ್‍ಸ್ಟಾಗ್ರಾಂ ಸ್ಟೋರಿಗಳಲ್ಲಿ ಈ ಪತ್ರದ ಫೋಟೋವನ್ನು ಹಂಚಿಕೊಂಡ ನಟಿ ಇವರ ಪ್ರೀತಿ, ಹಾರೈಕೆ ತಾನು ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕುವೈಟ್​ನಲ್ಲಿ ಈ ಚಪ್ಪಲಿಗೆ 1 ಲಕ್ಷ ರೂಪಾಯಿಯಂತೆ; ನಮ್ಮಲ್ಲಿ ಇದು ಬಾತ್​ರೂಮ್​ಗೆ ಹೋಗುವ ಚಪ್ಪಲಿ ಎಂದ ನೆಟ್ಟಿಗರು!

ಹೀನಾ ಖಾನ್ ಒಬ್ಬ ಖ್ಯಾತ ನಟಿ. ಇವರು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಾಗೇ ಅವರು ತಮ್ಮ ಜೀವನ ಆಯ್ಕೆಗಳಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಲವು ಬಾರಿ ಟೀಕೆಗೆ ಒಳಗಾಗಿದ್ದಾರೆ. ಆದರೆ ನಟಿ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ ಚಿಕಿತ್ಸೆ ಪಡೆಯಲು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದು, ನಟಿ ತನ್ನ ಚಿಕಿತ್ಸೆ ಮತ್ತು ಕೀಮೋಥೆರಪಿಯ ಬಗ್ಗೆ ತನ್ನ ಫಾಲೋವರ್ಸ್‌ಗಳಿಗೆ ಅಪ್‍ಡೇಟ್ ನೀಡುತ್ತಿರುತ್ತಾರೆ. ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಂತರ ನಟಿ ಹೀನಾ ಖಾನ್ ಅವರು ಟಿವಿ ಆ್ಯಕ್ಟರ್ ಆಗಿ ಜನಪ್ರಿಯರಾದರು. ಮುಂದೆ ಅವರು ಶಿಂಡಾ ಶಿಂಡಾ ನೋ ಪಾಪಾ ಚಿತ್ರದಲ್ಲಿ ಜಿಪ್ಪಿ ಗ್ರೆವಾಲ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Continue Reading

ಕ್ರೀಡೆ

KL Rahul : ಆಮಿರ್​ ಖಾನ್ ಮನೆ ಪಕ್ಕದಲ್ಲೇ 20 ಕೋಟಿ ಫ್ಲ್ಯಾಟ್ ಖರೀದಿಸಿದ ರಾಹುಲ್, ಅಥಿಯಾ ದಂಪತಿ

KL Rahul: ಅನೇಕ ಬಾಲಿವುಡ್ ಸೂಪರ್​​ಸ್ಟಾರ್​ಗಳು ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾದ ಅಮೀರ್ ಖಾನ್ ಕೂಡ ಇದ್ದಾರೆ. ಅವರು ವಿಶೇಷವಾಗಿ ಬಾಂದ್ರಾದ ಪಾಲಿ ಹಿಲ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಶಾರುಖ್ ಖಾನ್, ಸೈಫ್ ಅಲಿ ಖಾನ್, ಸಲ್ಮಾನ್ ಖಾನ್, ಜಾನ್ವಿ ಕಪೂರ್ ಮತ್ತು ತ್ರಿಪ್ತಿ ಡಿಮ್ರಿ ಎಲ್ಲರೂ ಬಾಂದ್ರಾದಲ್ಲಿ ಅಪಾರ್ಟ್​ಮೆಂಟ್​ಗಳನ್ನು ಹೊಂದಿದ್ದಾರೆ.

VISTARANEWS.COM


on

Koo

ಬೆಂಗಳೂರು: ಕರುನಾಡಿನ ಕ್ರಿಕೆಟಿಗ ಕೆ. ಎಲ್​ ರಾಹುಲ್ (KL Rahul) ಹಾಗೂ ಅವರ ಪತ್ನಿ ಅಥಿಯಾ ಶೆಟ್ಟಿ ಬಾಲಿವುಡ್​ನ ಸ್ಟಾರ್​ ದಂಪತಿ. ವಿರಾಟ್- ಅನುಷ್ಕಾ ರೀತಿಯಂತೆ ಅವರಿಬ್ಬರಿಗೂ ದೊಡ್ಡ ಅಭಿಮಾನ ವರ್ಗವಿದೆ. ಅವರು ಹೋದಲ್ಲಿ ಬಂದಲೆಲ್ಲ ಸುದ್ದಿಯಾಗುತ್ತಾರೆ. ಅಂತೆಯೇ ಅವರೀಗ ಮುಂಬೈನಲ್ಲಿ ದೊಡ್ಡ ಮನೆಯೊಂದು ಖರೀದಿಸಿದ್ದಾರೆ.

ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಪುತ್ರಿಯೂ ಆಗಿರುವ ಬಾಲಿವುಡ್ ನಟಿ ಅಥಿಯಾ 2023 ರ ಜನವರಿಯಲ್ಲಿ ರಾಹುಲ್ ಅವರನ್ನು ವಿವಾಹವಾದರು. ಇತ್ತೀಚೆಗೆ, ರಾಹುಲ್ ಮತ್ತು ಅಥಿಯಾ ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿ ಹೊಸ ಅಪಾರ್ಟ್​ಮೆಂಟ್​​ ಖರೀದಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಾಂದ್ರಾದಲ್ಲಿರುವ ಅವರ ಹೊಸ ಮನೆಯ ಮೌಲ್ಯ 20 ಕೋಟಿ ರೂಪಾಯಿ. ಸಂಧು ಪ್ಯಾಲೇಸ್​​ ಕಟ್ಟಡದ ನೆಲ ಪ್ಲಸ್ -18 ಮಹಡಿಗಳ ಕಟ್ಟಡದ ಎರಡನೇ ಮಹಡಿಯಲ್ಲಿ ಮನೆಯಿದ್ದು ಒಟ್ಟು 3,350 ಚದರ ಅಡಿ ಸ್ಥಳವನ್ನು ಹೊಂದಿದೆ.

ಅನೇಕ ಬಾಲಿವುಡ್ ಸೂಪರ್​​ಸ್ಟಾರ್​ಗಳು ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾದ ಅಮೀರ್ ಖಾನ್ ಕೂಡ ಇದ್ದಾರೆ. ಅವರು ವಿಶೇಷವಾಗಿ ಬಾಂದ್ರಾದ ಪಾಲಿ ಹಿಲ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಶಾರುಖ್ ಖಾನ್, ಸೈಫ್ ಅಲಿ ಖಾನ್, ಸಲ್ಮಾನ್ ಖಾನ್, ಜಾನ್ವಿ ಕಪೂರ್ ಮತ್ತು ತ್ರಿಪ್ತಿ ಡಿಮ್ರಿ ಎಲ್ಲರೂ ಬಾಂದ್ರಾದಲ್ಲಿ ಅಪಾರ್ಟ್​ಮೆಂಟ್​ಗಳನ್ನು ಹೊಂದಿದ್ದಾರೆ.

ರಾಹುಲ್ ಮತ್ತು ಅಥಿಯಾ ಶೆಟ್ಟಿ 1.20 ಕೋಟಿ ರೂ.ಗಳ ಸ್ಟ್ಯಾಂಪ್ ಡ್ಯೂಟಿ ಮತ್ತು 30,000 ರೂ.ಗಳ ನೋಂದಣಿ ಶುಲ್ಕ ಪಾವತಿಸಿದ್ದಾರೆ ಎಂದು ದಾಖಲೆಗಳು ತಿಳಿಸಿವೆ. ಅಪಾರ್ಟ್​ಮೆಂಟ್​ ನಾಲ್ಕು ಕಾರ್ ಪಾರ್ಕಿಂಗ್ ಸ್ಥಳ ಹೊಂದಿದೆ. ದಾಖಲೆಗಳ ಪ್ರಕಾರ ಮನೆಯನ್ನು ಜುಲೈ 15 ರಂದು ನೋಂದಾಯಿಸಲಾಗಿದೆ.

ಇತ್ತೀಚೆಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಶಸ್ತಿ ವಿಜೇತ ತಂಡ ಮತ್ತು ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಕೋಚಿಂಗ್ ಸಿಬ್ಬಂದಿಗೆ 125 ಕೋಟಿ ರೂ.ಗಳ ಬಹುಮಾನದ ಮೊತ್ತವನ್ನು ವಿತರಿಸುವುದಾಗಿ ಘೋಷಿಸಿತು. ಆದರೆ, ವಿಶ್ವ ಕಪ್ ಗೆ ರಾಹುಲ್ ಆಯ್ಕೆಯಾಗಿರಲಿಲ್ಲ. ಆದಾಗ್ಯೂ ದಂಪತಿ ಹೊಸ ಮನೆ ಖರೀದಿಸಿ ಖುಷಿಯಲ್ಲಿದ್ದಾರೆ.

ಪಾಲಿ ಹಿಲ್ ಐಷಾರಾಮಿ ಪ್ರದೇಶ

ಪಾಲಿ ಹಿಲ್ ಮುಂಬೈನ ಪ್ರೀಮಿಯಂ ಜಾಗವಾಗಿದ್ದು ಅಲ್ಲಿ ಹಲವಾರು ಬಾಲಿವುಡ್ ತಾರೆಯರು ಮತ್ತು ದೊಡ್ಡ ಮೌಲ್ಯದ ಮನೆಗಳನ್ನು ಖರೀದಿಸಿದ್ದಾರೆ. ಸ್ಥಳೀಯ ದಲ್ಲಾಳಿಗಳ ಪ್ರಕಾರ ಹಲವಾರು ಐಷಾರಾಮಿ ವಸತಿ ಯೋಜನೆಗದರವು ಪ್ರತಿ ಚದರ ಅಡಿಗೆ 1 ಲಕ್ಷ ರೂ.

ಇದನ್ನೂ ಓದಿ:Gautam Gambhir : ಬೌಲಿಂಗ್​, ಬ್ಯಾಟಿಂಗ್​ ಕೋಚ್​ಗಳ ಆಯ್ಕೆಯಲ್ಲಿ ಗಂಭೀರ್​ ಬೇಡಿಕೆಗಳನ್ನು ತಿರಸ್ಕರಿಸಿದ ಬಿಸಿಸಿಐ

ಒಂದು ಕಾಲದಲ್ಲಿ 2,000 ಚದರ ಮೀಟರ್ (ಚದರ ಮೀಟರ್) ಪ್ಲಾಟ್​​ನಲ್ಲಿದ್ದ ಬಾಲಿವುಡ್ ನಟ ದಿಲೀಪ್ ಕುಮಾರ್ ಅವರ ಸ್ಥಳೀಯ ಹೆಗ್ಗುರುತಾಗಿದ್ದ ಬಂಗಲೆಯನ್ನು ರಿಪರೇರಿ ಮಾಡಿದ ನಂತರ ಪಾಲಿ ಹಿಲ್ ಆಗಸ್ಟ್ 2023 ರಲ್ಲಿ ಸುದ್ದಿಯಾಗಿತ್ತು. ಬಾಲಿವುಡ್ ನಟ ಅಮೀರ್ ಖಾನ್ ಅವರೂ ತಮ್ಮ ಮನೆಯನ್ನು ಪುನರಾಭಿವೃದ್ಧಿ ಮಾಡಲು ಸಜ್ಜಾಗಿದ್ದಾರೆ.

Continue Reading

ಬಾಲಿವುಡ್

Amitabh Bachchan: ಅಮಿತಾಭ್ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದರೂ ಮುಖ ಊದಿಸಿಕೊಂಡೇ ಇದ್ದ ಜಯಾ ಬಚ್ಚನ್!

Amitabh Bachchan: ಈ ಫೋಟೋದಲ್ಲಿ ಜಯಾ ಬಚ್ಚನ್ ಅವರ ಮುಖ ಊದಿಕೊಂಡಿದ್ದು, ಮೂಡ್ ಆಫ್ ಆದಂತಿದೆ.
ನೆಟ್ಟಿಗರಿಗೆ ಅಮಿತಾಭ್‌ ಬಚ್ಚನ್ ಹೊಗಳಿದ್ದಾರೆ. ʻಮೇಡಂಗೆ ಮೂಡ್ ಆಫ್ ಆಗಿದ್ದು ಯಾಕೆʼ ಎಂದು ಬಳಕೆದಾರರೊಬ್ಬರು ಕೇಳಿದ್ದಾರೆ. ಝೀರೋದಿಂದ ಹೀರೋವರೆಗೆ ಎಲ್ಲ ಪುರುಷರ ಸ್ಥಿತಿಯೂ ಇದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

VISTARANEWS.COM


on

Amitabh Bachchan holds umbrella for Jaya Bachchan
Koo

ಬೆಂಗಳೂರು: ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಮತ್ತು ಅವರ ಪತ್ನಿ ಜಯಾ ಬಚ್ಚನ್ ಒಟ್ಟಿಗೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ನಟ ಇತ್ತೀಚೆಗೆ ಸೆಟ್‌ನಿಂದ ಹೊರಬಂದಾಗ ಜಯಾಗಾಗಿ ಛತ್ರಿ ಹಿಡಿದಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಮಾನ್ಸೂನ್ ಅವಧಿಯಲ್ಲಿ ಹಾನಿಗೊಳಗಾದವರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದೀಗ ಜಯಾ ಬಚ್ಚನ್ ಈ ಫೋಟೊದಿಂದಾಗಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಫೋಟೊದಲ್ಲಿ ಜಯಾ ಬಚ್ಚನ್ ಮುಖ ಊದಿಕೊಂಡಿದ್ದು, ಮೂಡ್ ಆಫ್ ಆದಂತಿದೆ. 

ಬಿಗ್ ಬಿ ಅವರು ತಮ್ಮ ಪತ್ನಿ ಜಯಾ ಅವರೊಂದಿಗೆ ರೊಮ್ಯಾಂಟಿಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಹೀಗೆ ಬರೆದಿದ್ದಾರೆ ʻʻಪ್ರತಿದಿನ ಮಳೆ ಬೀಳುತ್ತಿದೆ..ಕೆಲಸದ ಸ್ಥಳದಲ್ಲಿಯೂ ಸಹ ಎಂದು ಈ ಫೋಟೋಕ್ಕೆ ಅಮಿತಾಬ್ ಬಚ್ಚನ್ʼʼ ಶೀರ್ಷಿಕೆ ಹಾಕಿದ್ದಾರೆ. 

ಈ ಫೋಟೋದಲ್ಲಿ ಜಯಾ ಬಚ್ಚನ್ ಅವರ ಮುಖ ಊದಿಕೊಂಡಿದ್ದು, ಮೂಡ್ ಆಫ್ ಆದಂತಿದೆ.
ನೆಟ್ಟಿಗರಿಗೆ ಅಮಿತಾಭ್‌ ಬಚ್ಚನ್ ಹೊಗಳಿದ್ದಾರೆ. ʻಮೇಡಂಗೆ ಮೂಡ್ ಆಫ್ ಆಗಿದ್ದು ಯಾಕೆʼ ಎಂದು ಬಳಕೆದಾರರೊಬ್ಬರು ಕೇಳಿದ್ದಾರೆ. ಝೀರೋದಿಂದ ಹೀರೋವರೆಗೆ ಎಲ್ಲ ಪುರುಷರ ಸ್ಥಿತಿಯೂ ಇದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Amitabh Bachchan: ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದ ಅಮಿತಾಭ್‌; ʻಬಿಗ್‌ ಬಿʼ ಕೊಂಡಾಡಿದ ರಾಮ್ ಗೋಪಾಲ್ ವರ್ಮಾ!ಇದನ್ನೂ ಓದಿ:

ಇತ್ತೀಚೆಗೆ ಅಮಿತಾಭ್‌ ನಟನೆಯ ಕಲ್ಕಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್‌ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್‌ ಮಾಡಿದ ಸಿನಿಮಾವಾಗಿದೆ.

Continue Reading
Advertisement
Karnataka Rain
ಮಳೆ5 mins ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Virat Kohli
ಕ್ರೀಡೆ7 mins ago

Virat Kohli: ಮೊದಲ ಬಾರಿಗೆ ಮಗ ಅಕಾಯ್ ಜತೆ ಕಾಣಿಸಿಕೊಂಡ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Golden Designer Fashion Wears Trendy Golden Designer Wedding Fashion
ಫ್ಯಾಷನ್11 mins ago

Golden Designer Fashion Wears: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ಗೋಲ್ಡನ್‌ ಡಿಸೈನರ್‌ವೇರ್ಸ್!

NEET-UG 2024
ದೇಶ15 mins ago

NEET UG 2024: “ವಿದ್ಯಾರ್ಥಿಗಳ ಗುರುತು ಬಹಿರಂಗ ಪಡಿಸದೇ ನೀಟ್‌ ಫಲಿತಾಂಶ ಪ್ರಕಟಿಸಿ”-NTAಗೆ ಸುಪ್ರೀಂ ಸೂಚನೆ; ವಿಚಾರಣೆ ಮುಂದೂಡಿಕೆ

Money Guide
ಮನಿ-ಗೈಡ್22 mins ago

Money Guide: ಇಎಂಐ ಮೂಲಕ ಮೊಬೈಲ್‌ ಖರೀದಿಸುವ ಯೋಚನೆಯಲ್ಲಿದ್ದೀರಾ? ಈ ಅಂಶ ನಿಮಗೆ ತಿಳಿದಿರಲೇ ಬೇಕು

Babar Azam
ಕ್ರೀಡೆ33 mins ago

Babar Azam: 18 ವರ್ಷದ ನೆಟ್​ ಬೌಲರ್​ ಮುಂದೆ ಪರದಾಡಿದ ಪಾಕ್​ ನಾಯಕ ಬಾಬರ್​ ಅಜಂ; ವಿಡಿಯೊ ವೈರಲ್​

Train Accident
ಪ್ರಮುಖ ಸುದ್ದಿ54 mins ago

Train Accident : ಎಕ್ಸ್​ಪ್ರೆಸ್​ ರೈಲು ಅಪಘಾತ; ನಾಲ್ವರ ಸಾವು, ಹಲವರಿಗೆ ಗಾಯ

Uttar pradesh Politics
ದೇಶ56 mins ago

Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇತ್ತು ಆ 6 ಪ್ರಮುಖ ಕಾರಣಗಳು

ಯಾದಗಿರಿ1 hour ago

Murder case : ಪತ್ನಿ, ಅತ್ತೆ ಹಾಗೂ ಮಾವನಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಚಾಕುವಿನಿಂದ ಇರಿದು ಕೊಂದ

b nagendra valmiki corporation scam 2
ಕ್ರೈಂ1 hour ago

Valmiki Corporation Scam: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಮತ್ತೆ 5 ದಿನ ಇಡಿ ಕಸ್ಟಡಿಗೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 mins ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌