Mushroom Benefits: ಅಣಬೆ ಎಂಬ ವಿಟಮಿನ್‌ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ! - Vistara News

ಆರೋಗ್ಯ

Mushroom Benefits: ಅಣಬೆ ಎಂಬ ವಿಟಮಿನ್‌ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ!

Mushroom Benefits: ಎಲ್ಲ ಕಾಲದಲ್ಲೂ ಸಿಗುವ ಅಣಬೆಯಲ್ಲಿ ಭರಪೂರ ಪೋಷಕಾಂಶಗಳಿವೆ. ಸೂಪ್‌, ಸಲಾಡ್‌, ಸ್ಟರ್‌ ಫ್ರೈಗಳು ಸೇರಿದಂತೆ ಬಗೆಬಗೆಯ ಸಬ್ಜಿಗಳನ್ನೂ, ತಿನಿಸುಗಳನ್ನೂ ಇದರಿಂದ ಮಾಡಬಹುದು. ಸ್ವಲ್ಪ ಮಾಂಸದಡುಗೆಯ ರುಚಿ ನೀಡುವ ಅಣಬೆಯನ್ನು ಕೆಲವರು ಸಸ್ಯಾಹಾರವೆಂದು ಪರಿಗಣಿಸದೆ ದೂರ ಇಟ್ಟಿರುವುದೂ ಹೌದು. ತೂಕ ಇಳಿಸುವ ಮಂದಿಗೆ ಅಣಬೆಯಷ್ಟು ಉತ್ತಮ ಆಯ್ಕೆ ಇನ್ನೊಂದಿಲ್ಲ. ಕಡಿಮೆ ಕ್ಯಾಲರಿಯ, ವಿಟಮಿನ್‌ ಡಿಯಿಂದ ಸಂಪದ್ಭರಿತವಾದ, ಆರೋಗ್ಯಕರವಾದ ಆಂಟಿ ಆಕ್ಸಿಡೆಂಟ್‌ಗಳಿರುವ ಸಂಪೂರ್ಣ ಆಹಾರವಿದು.

VISTARANEWS.COM


on

Mushroom Benefits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಣಬೆ (Mushroom Benefits) ಇಂದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎಲ್ಲೆಡೆ ಸಿಗುತ್ತದೆ. ಈಗ ಮಳೆಗಾಲಕ್ಕೇ ಅಂತ ಕಾಯಬೇಕಾದ ಅಗತ್ಯವಿಲ್ಲ. ಎಲ್ಲ ಕಾಲದಲ್ಲೂ ಸಿಗುವ ಅಣಬೆಯಲ್ಲಿ ಭರಪೂರ ಪೋಷಕಾಂಶಗಳಿವೆ. ಸೂಪ್‌, ಸಲಾಡ್‌, ಸ್ಟರ್‌ ಫ್ರೈಗಳು ಸೇರಿದಂತೆ ಬಗೆಬಗೆಯ ಸಬ್ಜಿಗಳನ್ನೂ, ತಿನಿಸುಗಳನ್ನೂ ಇದರಿಂದ ಮಾಡಬಹುದು. ಸ್ವಲ್ಪ ಮಾಂಸದಡುಗೆಯ ರುಚಿ ನೀಡುವ ಅಣಬೆಯನ್ನು ಕೆಲವರು ಸಸ್ಯಾಹಾರವೆಂದು ಪರಿಗಣಿಸದೆ ದೂರ ಇಟ್ಟಿರುವುದೂ ಹೌದು. ತೂಕ ಇಳಿಸುವ ಮಂದಿಗೆ ಅಣಬೆಯಷ್ಟು ಉತ್ತಮ ಆಯ್ಕೆ ಇನ್ನೊಂದಿಲ್ಲ. ಕಡಿಮೆ ಕ್ಯಾಲರಿಯ, ವಿಟಮಿನ್‌ ಡಿಯಿಂದ ಸಂಪದ್ಭರಿತವಾದ, ಆರೋಗ್ಯಕರವಾದ ಆಂಟಿ ಆಕ್ಸಿಡೆಂಟ್‌ಗಳಿರುವ ಸಂಪೂರ್ಣ ಆಹಾರವಿದು. ನಿಯಮಿತವಾಗಿ ಅಣಬೆಯನ್ನು ಸೇವಿಸುತ್ತಿದ್ದರೆ ತೂಕ ಇಳಿಸುವವರಿಗೆ ಸಹಾಯವಾಗುತ್ತದೆ. ಇದರಲ್ಲಿರುವ ಪೊಟಾಶಿಯಂ, ಝಿಂಕ್‌ಗಳುದೇಹದ ಹಲವು ಮುಖ್ಯ ಕೆಲಸಗಳಿಗೆ ಬೇಕೇ ಬೇಕಾಗುವ ಪೋಷಕಾಂಶಗಳು. ಎಲುಬಿನ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಸಿಕೊಳ್ಳಲು ಅಣಬೆ ಉತ್ತಮ ಆಹಾರ. ಬನ್ನಿ, ಅಣಬೆಯನ್ನು ಸೇವಿಸುವುದರಿಂದ ಯಾವೆಲ್ಲ ಲಾಭಗಳಿವೆ ಎಂಬುದನ್ನು ವಿವರವಾಗಿ ನೋಡೋಣ.

Obese male suffering from chest pain high blood pressure cholesterol level Sesame Benefits

ಕೊಲೆಸ್ಟೆರಾಲ್‌ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ

ಅಣಬೆಯಲ್ಲಿ ಪ್ರೊಟೀನ್‌ ಕೂಡಾ ಹೇರಳವಾಗಿದೆ. ಆದರೆ, ಕೊಲೆಸ್ಟೆರಾಲ್‌ ಅಥವಾ ಕೊಬ್ಬು ಬಹಳ ಕಡಿಮೆ ಇದೆ. ಇದರಲ್ಲಿರುವ ನಾರಿನಂಶ ಹಾಗೂ ಕೊಬ್ಬು ಕೊಲೆಸ್ಟೆರಾಲ್‌ ಅನ್ನು ಕರಗಿಸುವಲ್ಲಿಯೂ ನೆರವಾಗುತ್ತದೆ. ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು.

Knee bone mass Bone erosion and deterioration Pumpkin Benefits

ಮೂಳೆಗಳನ್ನು ಗಟ್ಟಿಗೊಳಿಸುತ್ತದೆ

ಅಣಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ. ನಮ್ಮ ಎಲುಬನ್ನು ಸದೃಢಗೊಳಿಸಲು ಕ್ಯಾಲ್ಶಿಯಂ ನಮ್ಮ ದೇಹಕ್ಕೆ ಬೇಕೇ ಬೇಕು. ಅಣಬೆಯನ್ನು ಆಗಾಗ ಸೇವಿಸುವುದರಿಂದ ಮೂಳೆ ಸವೆತ, ಮೂಳೆಗಳ ಸಾಂದ್ರತೆ ಕಡಿಮೆಯಾಗುವುದು, ಮೂಳೆ ಮುರಿತ, ಬಲಹೀನತೆಯಂಥ ಸಮಸ್ಯೆಗಳು ಹತ್ತಿರ ಸುಳಿಯದು.

ರೋಗ ನಿರೋಧಕತೆ ಹೆಚ್ಚಿಸುತ್ತದೆ

ಅಣಬೆಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಹಾಗಾಗಿ ಇದು ದೇಹವನ್ನು ಪ್ರೀ ರ್ಯಾಡಿಕಲ್ಸ್‌ಗಳಿಂದ ಕಾಪಾಡುವಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಹಲವು ಇನ್‌ಫೆಕ್ಷನ್‌ಗಳನ್ನು ದೂರ ಓಡಿಸುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ವಿಟಮಿನ್‌ ಎ, ವಿಟಮಿನ್‌ ಬಿ ಕಾಂಪ್ಲೆಕ್ಸ್‌, ವಿಟಮಿನ್‌ ಸಿ ಎಲ್ಲವೂ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುವಲ್ಲಿ ನೆರವಾಗುತ್ತದೆ.

Improved Digestion Tea Benefits

ಮಧುಮೇಹಿಗಳಿಗೂ ಒಳ್ಳೆಯದು

ಅಣಬೆಯಲ್ಲಿ ಕ್ರೋಮಿಯಂ ಹೇರಳವಾಗಿದ್ದು, ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಇಳಿಸುವಲ್ಲಿ ನೆರವಾಗುತ್ತದೆ. ಅಣಬೆಯಲ್ಲಿ ಕಡಿಮೆ ಕಾರ್ಬೋಹೈಡ್ರೇಟ್‌ ಹಾಗೂ ಕೊಬ್ಬು ಇರುವುದರಿಂದ ಇದು ಮಧುಮೇಹಿಗಳಿಗೆ ಒಳ್ಳೆಯದನ್ನೇ ಮಾಡುತ್ತದೆ.

ಇದನ್ನೂ ಓದಿ: World Lung Cancer Day: ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರತಿವರ್ಷ 16 ಲಕ್ಷ ಮಂದಿ ಬಲಿ; ಇದರಿಂದ ಪಾರಾಗುವುದು ಹೇಗೆ?

ತೂಕ ಇಳಿಸುತ್ತದೆ

ಅಣಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶ ಇರುವುದರಿಂದ ಇದು ಜೀರ್ಣ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಕಾರ್ಬೋಹೈಡ್ರೇಟ್‌ ಕಡಿಮೆಯಿದ್ದು, ಕೊಬ್ಬು ಇಲ್ಲೇ ಇಲ್ಲ ಎನ್ನಬಹುದು. ಉಳಿದಂತೆ, ಪ್ರೊಟೀನ್‌ ಸೇರಿದಂತೆ ಎಲ್ಲ ಪೋಷಕಾಂಶಗಳೂ ಹೆಚ್ಚಿರುವುದರಿಂದ ಇದು ತೂಕ ಹೇಳಿಕೆಗೆ ಹೇಳಿ ಮಾಡಿಸಿದಂಥ ಆಹಾರ.
ಎಲ್ಲರೂ ಅಣಬೆಯನ್ನು ಇಷ್ಟಪಡಲಾರರು. ಆದರೆ, ಆರೋಗ್ಯದ ದೃಷ್ಠಿಯಿಂದ ಅಣಬೆ ಸಂಪೂರ್ಣ ಆಹಾರ. ಕೆಲವು ಅಣಬೆಗಳು ವಿಷಕಾರಿ ಕೂಡಾ. ಮಳೆಗಾಲದಲ್ಲಿ ಬೆಳೆಯುವ ಅಣಬೆಗಳನ್ನು ಸಂಗ್ರಹಿಸಿ ಅಡುಗೆ ಮಾಡುವ ಮುನ್ನ ಅಣಬೆಗಳ ಬಗ್ಗೆ ಸಾಕಷ್ಟು ಜ್ಞಾನ ಇರಬೇಕು. ಇಲ್ಲವಾದರೆ, ವಿಷಕಾಋ ಅಣಬೆಗಳನ್ನು ಸೇವಿಸುವ ಅಪಾಯ ಇದೆ. ಆದರೆ, ಮಾರುಕಟ್ಟೆಯಲ್ಲಿ ಸದಾ ಲಭ್ಯವಿರುವ ಅಣಬೆಗಳಲ್ಲಿ ಈ ಭಯವಿಲ್ಲ. ಆರಾಮವಾಗಿ ಅಡುಗೆ ಮಾಡಿ ತಿನ್ನಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Red Spinach Benefits: ಕೆಂಪು ಹರಿವೆ; ಇದು ಕೇವಲ ಸೊಪ್ಪಲ್ಲ, ಪೋಷಕಾಂಶಗಳ ಪವರ್‌ಹೌಸ್‌!

Red Spinach Benefits: ಚಳಿಗಾಲ ಬಂದರೆ, ಸೊಪ್ಪಿನದೇ ಸಾಮ್ರಾಜ್ಯ. ಚಳಿಗಾಲವನ್ನು ಹೊರತಾಗಿಯೂ ಎಲ್ಲ ಕಾಲಗಳಲ್ಲೂ ದೊರೆಯುವ ಕೆಲವು ಸೊಪ್ಪುಗಳಿಗೆ ನಿರಂತರವಾಗಿ ಸ್ಥಾನ ಇದ್ದೇ ಇರುತ್ತದೆ. ಅಂತಹ ಸೊಪ್ಪುಗಳ ಪೈಕಿ ಹರಿವೆ ಸೊಪ್ಪೂ ಒಂದು. ಹರಿವೆ ಸೊಪ್ಪಿನಲ್ಲಿ ಹಲವು ಬಗೆಗಳಿದ್ದರೂ ಕೆಂಪು ಹರಿವೆಗೆ ವಿಶೇಷ ಸ್ಥಾನ. ಪೋಷಕಾಂಶದ ವಿಷಯದಲ್ಲೂ ಇದೇ ನಂಬರ್‌ ವನ್‌.

VISTARANEWS.COM


on

Red Spinach Benefits
Koo

ಭಾರತೀಯರ ಮನೆಗಳಲ್ಲಿ ಸೊಪ್ಪಿನಡುಗೆಗೆ ವಿಶೇಷವಾದ ಸ್ಥಾನವಿದೆ. ಚಳಿಗಾಲ ಬಂದರೆ, ಸೊಪ್ಪಿನದೇ ಸಾಮ್ರಾಜ್ಯ. ಚಳಿಗಾಲವನ್ನು ಹೊರತಾಗಿಯೂ ಎಲ್ಲ ಕಾಲಗಳಲ್ಲೂ ದೊರೆಯುವ ಕೆಲವು ಸೊಪ್ಪುಗಳಿಗೆ ನಿರಂತರವಾಗಿ ಸ್ಥಾನ ಇದ್ದೇ ಇರುತ್ತದೆ. ಅಂತಹ ಸೊಪ್ಪುಗಳ ಪೈಕಿ ಹರಿವೆ ಸೊಪ್ಪೂ ಒಂದು. ಹರಿವೆ ಸೊಪ್ಪಿನಲ್ಲಿ ಹಲವು ಬಗೆಗಳಿದ್ದರೂ ಕೆಂಪು ಹರಿವೆಗೆ ವಿಶೇಷ ಸ್ಥಾನ. ಪೋಷಕಾಂಶದ ವಿಷಯದಲ್ಲೂ ಇದೇ ನಂಬರ್‌ ವನ್‌. ಕೆಂಪು ಹರಿವೆ (Red Spinach Benefits) ಕೇವಲ ಬಣ್ಣದಿಂದ ಮಾತ್ರ ಕೆಂಪಲ್ಲ. ಬಣ್ಣದಿಂದ ಯಾವ ಬದಲಾವಣೆಯೂ ಇಲ್ಲ ಎಂದುಕೊಳ್ಳಬೇಡಿ. ಕೆಂಬಣ್ಣದ ಹರಿವೆಯಲ್ಲಿ ಸಾಮಾನ್ಯ ಹರಿವೆಗಿಂತ ಹೆಚ್ಚು ಪೋಷಕಾಂಶಗಳಿವೆ. ಇದು ಆರೋಗ್ಯದ ವಿಚಾರದಲ್ಲಿ ಅಪ್ಪಟ ಚಿನ್ನ. ಇದರಲ್ಲಿ ವಿಟಮಿನ್‌ ಇ, ಸಿ ಮತ್ತು ಕೆ ಹೇರಳವಾಗಿದ್ದು, ಕಬ್ಬಿಣಾಂಶ ಹಾಗೂ ಕ್ಯಾಲ್ಶಿಯಂನಂತಹ ಅತ್ಯಗತ್ಯ ಖನಿಜಾಂಶಗಳೂ ಹೇರಳವಾಗಿವೆ. ಆಂಟಿ ಆಕ್ಸಿಡೆಂಟ್‌ಗಳಿಂದ ಶ್ರೀಮಂತವಾಗಿದ್ದು, ಇದು ಒಟ್ಟು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

Weight Loss Slim Body Healthy Lifestyle Concept Benefits Of Saffron

ತೂಕ ಇಳಿಕೆಗೆ

ಯಾರಾದರೂ, ತೂಕ ಇಳಿಸಬೇಕೆಂಬ ಯೋಚನೆಯಲ್ಲಿದ್ದರೆ ಅಂಥವರಿಗೆ ಇದು ಅತ್ಯಂತ ಉತ್ತಮವಾದ ಆಹಾರ. ಯಾಕೆಂದರೆ, ಇದರಲ್ಲಿ ಕಡಿಮೆ ಕ್ಯಾಲರಿಯಿದ್ದು, ನಾರಿನಂಶವೂ ಹೇರಳವಾಗಿದೆ. ಜೊತೆಗೆ ಬೇಕಾದ ಎಲ್ಲ ಪೋಷಕಾಂಶಗಳೂ ಭರಪೂರ ಇವೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಬೇಕಾದ ಎಲ್ಲವೂ ಇದರಲ್ಲಿದೆ. ಹೆಚ್ಚು ಹೊತ್ತು ಹೊಟ್ಟೆ ಫುಲ್‌ ಆದ ಅನುಭವ ನೀಡುವ ಕಾರಣ ಬೇರೆ ಆಗಾಗ ಏನಾದರೂ ತಿನ್ನಲು ಅನವಶ್ಯಕ ಪ್ರಚೋದನೆಯಾಗದು.

ಮಲಬದ್ಧತೆ ನಿವಾರಣೆಗೆ

ತೂಕದ ವಿಚಾರವನ್ನು ಹೊರತುಪಡಿಸಿದರೆ, ಮಲಬದ್ಧತೆಯ ಸಮಸ್ಯೆಯಿರುವ ಮಂದಿಗೂ ಇದು ಒಳ್ಳೆಯದು. ಜೀರ್ಣಕ್ರಿಯೆಗೆ ಇದು ಅತ್ಯಂತ ಒಳ್ಳೆಯದು. ಇದರಲ್ಲಿರುವ ನಾರಿನಂಶ, ಮಲಬದ್ಧತೆಯ ಸಮಸ್ಯೆಯನ್ನು ದೂರ ಓಡಿಸುತ್ತದೆ. ಇದನ್ನು ಸೇವಿಸಿದರೆ, ಬೆಳಗ್ಗೆ ಎದ್ದ ಕೂಡಲೇ ಖಂಡುತವಾಗಿಯೂ ಆರಾಮವಾಗಿ ಸುಖವಾಗಿ ಶೌಚ ಮುಗಿಸಿಕೊಳ್ಳುವಿರಿ. ಹೊಟ್ಟೆ ಹಗುರವಾಗಿ, ದೇಹ ಚುರುಕಾಗಿ ಇರಲು ಇದು ಅತ್ಯಂತ ಸೂಕ್ತವಾದ ಆಹಾರ. ಯಾವ ಔಷಧಿಗಳ ಸಹಾಯವೂ ಇಲ್ಲದೆ ಮಲಬದ್ಧತೆಯ ವಿರುದ್ಧ ಜಯ ಸಾಧಿಸಬಹುದು. ಈ ಕೆಂಪು ಹರಿವೆ ಸೊಪ್ಪಿನ ಇನ್ನೊಂದು ಪ್ರಮುಖ ಲಾಭವೆಂದರೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಪ್ರೊಟೀನ್‌ ಹಾಗೂ ವಿಟಮಿನ್‌ ಕೆ ಇರುವುದರಿಂದ, ಋತುಮಾನಕ್ಕೆ ಅನುಸಾರವಾಗಿ ಬರುವ ಆರೋಗ್ಯ ಸಮಸ್ಯೆಗಳನ್ನು ದೂರ ಓಡಿಸುತ್ತದೆ. ಅವುಗಳು ಬರದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಭದ್ರ ಕೋಟೆಯನ್ನು ಬೆಳೆಸುತ್ತದೆ.

ಇದನ್ನೂ ಓದಿ: Nutrients For The Human Body: ನಮ್ಮ ದೇಹವೆಂಬ ಕಾರ್ಯಾಲಯದಲ್ಲಿ ಕೆಲಸ ಮಾಡುವ 22 ಪೋಷಕಾಂಶಗಳ ಬಗ್ಗೆ ನಿಮಗೆ ಗೊತ್ತೇ?

ಎಲುಬಿನ ಸದೃಢತೆಗೆ

ಎಲುಬು ಗಟ್ಟಿಯಾಗಬೇಕು ಎಂದರೆ ನೀವು ಖಂಡಿತವಾಗಿಯೂ ಈ ಕೆಂಪು ಹರಿವೆ ಸೊಪ್ಪನ್ನು ಕಂಡಾಗಲೆಲ್ಲ ಖರೀದಿಸಿ ತಂದೇ ತರುವಿರಿ. ಸೊಪ್ಪನ್ನು ಶುಚಿಗೊಳಿಸಿ ಅಡುಗೆ ಮಾಡುವ ಕೆಲಸ ಸ್ವಲ್ಪ ತ್ರಾಸದಾಯಕವಾದರೂ, ಇದರ ಲಾಭ ಕೇಳಿದರೆ, ಅಂತಹ ತೊಂದರೆ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ನಿಮೇ ಅನಿಸುತ್ತದೆ. ಕೆಂಪು ಹರಿವೆಯಲ್ಲಿ ಹೇರಳವಾಗಿ ಕ್ಯಾಲ್ಶಿಯಂ, ಕಬ್ಬಿಣಾಂಶ ಹಾಗೂ ಪ್ರೊಟೀನ್‌ ಇರುವುದರಿಂದ ಮೂಳೆ ಗಟ್ಟಿಯಾಗಲು, ರಕ್ತ ದೇಹದಲ್ಲಿ ತುಂಬಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ. ಕೆಂಪು ಹರಿವೆ ಸೊಪ್ಪನ್ನು ಅಡುಗೆ ಮಾಡಲು ಕಷ್ಟವೇನಿಲ್ಲ. ನೀವು ಮಾಡುವ ದಾಲ್‌ನಲ್ಲಿ ಇದರ ಸೊಪ್ಪನ್ನು ಕತ್ತರಿಸಿ ಹಾಕಬಹುದು. ಅಥವಾ ಸೊಪ್ಪಿನ ಸಾರು ಮಾಡಬಹುದು. ಸೊಪ್ಪು ತುಂಬ ಇದ್ದರೆ ಅದನ್ನು ಪಲ್ಯ ಮಾಡಬಹುದು. ಚಪಾತಿ ಹಿಟ್ಟಿನ ಜೊತೆಗೆ ಕಲಸಿಕೊಂಡು ಸೊಪ್ಪಿನ ಪರಾಠಾ ಮಾಡಬಹುದು. ಅಥವಾ ಇನ್ನೂ ಹಲವಾರು ಆಯ್ಕೆಗಳಿವೆ. ಯಾವುದಾದರೊಂದು ಬಗೆಯ ಅಡುಗೆ ಮೂಲಕ ಆಗಾಗ ಇದನ್ನು ನಮ್ಮ ದೇಹ ಸೇರುವಂತೆ ನೋಡಿಕೊಳ್ಳಬಹುದು. ಹಾಗಾಗಿ, ಮಾರುಕಟ್ಟೆಯಲ್ಲಿ ಹರಿವೆ ಸೊಪ್ಪು ಕಂಡಾಗ ಬಿಟ್ಟು ಬರಬೇಡಿ.

Continue Reading

ಆರೋಗ್ಯ

Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!

Nita Ambani Beauty Secrets: ನೀತಾ ಅಂಬಾನಿ ಚಾಚೂ ತಪ್ಪದೆ ಪಾಲಿಸುವ ಇನ್ನೊಂದು ಡಯಟ್‌ ಸೀಕ್ರೆಟ್‌ ಎಂದರೆ ಅದು ಬೀಟ್‌ರೂಟ್‌ ಜ್ಯೂಸ್‌. ನಿತ್ಯವೂ ಬೀಟ್‌ರೂಟ್‌ ಜ್ಯೂಸ್‌ ಹೀರುವುದೇ ಅವರ ಸೌಂದರ್ಯದ, ಅತ್ಯುತ್ತಮ ಆರೋಗ್ಯದ ಹಿಂದಿರುವ ಗುಟ್ಟು ಎನ್ನಲಾಗುತ್ತದೆ. ಬೀಟ್‌ರೂಟ್‌ ಜ್ಯೂಸ್‌ ನಿತ್ಯವೂ ಹೀರುವುದರಿಂದ ಪಡೆಯಬಹುದಾದ ಲಾಭಗಳೇನು ಎಂಬ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Nita Ambani Beauty Secrets
Koo

ಮಗನ ಭರ್ಜರಿ ಮದುವೆಯಿಂದ (Nita Ambani Beauty Secrets) ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಅಂಬಾನಿ ಕುಟುಂಬದ ಕಣ್ಣು ನೀತಾ ಅಂಬಾನಿ. ವರ್ಷ ಅರುವತ್ತು ದಾಟಿದರೂ ಪುಟಿದೇಳುವ ಉತ್ಸಾಹ, ಮಾಸದ ಚೆಲುವಿನಿಂದಾಗಿಯೂ ಹಲವರಿಗೆ ಸ್ಫೂರ್ತಿ. ಬ್ಯುಸಿನೆಸ್‌ ವುಮನ್‌ ಆಗಿ, ರಿಲಯನ್ಸ್‌ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ನೀತಾ ಅಂಬಾನಿ ಆರೋಗ್ಯದ ಕಾಳಜಿಯನ್ನೂ ಸಾಕಷ್ಟು ಮಾಡುತ್ತಾರಂತೆ. ತಮ್ಮ ಫಿಟ್‌ನಸ್‌ ಕಾಳಜಿಯನ್ನು ವಹಿಸುವ ಇವರು ಬೆಳಗ್ಗೆ ಎದ್ದ ಕೂಡಲೇ ಒಂದು ವಾಕ್‌ ಹಾಗೂ ಪೋಷಕಾಂಶಯುಕ್ತ ಬ್ರೇಕ್‌ಫಾಸ್ಟ್‌ ಇವರ ಇಡೀ ದಿನದ ಲವಲವಿಕೆಯ ಸೀಕ್ರೆಟ್‌. ಅಷ್ಟೇ ಅಲ್ಲ, ನೀತಾ ಅಂಬಾನಿ ಚಾಚೂ ತಪ್ಪದೆ ಪಾಲಿಸುವ ಇನ್ನೊಂದು ಡಯಟ್‌ ಸೀಕ್ರೆಟ್‌ ಎಂದರೆ ಅದು ಬೀಟ್‌ರೂಟ್‌ ಜ್ಯೂಸ್‌ ಅಂತೆ. ನಿತ್ಯವೂ ಬೀಟ್‌ರೂಟ್‌ ಜ್ಯೂಸ್‌ ಹೀರುವ ಅವರ, ಸೌಂದರ್ಯದ, ಅತ್ಯುತ್ತಮ ಆರೋಗ್ಯದ ಹಿಂದಿರುವ ಗುಟ್ಟು ಎನ್ನಲಾಗುತ್ತದೆ. ಬನ್ನಿ ಬೀಟ್‌ರೂಟ್‌ ಜ್ಯೂಸ್‌ ನಿತ್ಯವೂ ಹೀರುವುದರಿಂದ ಪಡೆಯಬಹುದಾದ ಲಾಭಗಳೇನು ಎಂಬುದನ್ನು ನೋಡೋಣ.

Ambani Wedding Fashion

ಹೇರಳವಾಗಿ ಪೋಷಕಾಂಶ

ಬೀಟ್‌ರೂಟ್‌ ಜ್ಯೂಸ್‌ನಲ್ಲಿ ಹೇರಳವಾಗಿ ಪೋಷಕಾಂಶಗಳಿವೆ. ಮುಖ್ಯವಾಗಿ ವಿಟಮಿನ್‌ ಸಿ, ಬಿ6, ಕಬ್ಬಿಣಾಂಶ, ಮೆಗ್ನೀಶಿಯಂ, ಪೊಟಾಶಿಯಂ ಹಾಗೂ ಮ್ಯಾಂಗನೀಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಈ ಎಲ್ಲ ಪೋಷಕಾಂಶಗಳು ನಮ್ಮನ್ನು ಆರೋಗ್ಯವಾಗಿಟ್ಟುಕೊಳ್ಳುವಲ್ಲಿ ಮಹತ್ವದ ಸ್ಥಾನ ವಹಿಸುತ್ತದೆ. ವಿಟಮಿನ್‌ ಸಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಿದರೆ, ಕಬ್ಬಿಣಾಂಶವು ರಕ್ತವನ್ನು ಹೆಚ್ಚಿಸುತ್ತದೆ.

ಚುರುಕಾಗಿ ಇರಲು ಸಾಧ್ಯ

ನೀತಾ ಅಂಬಾನಿ ಈ ಜ್ಯೂಸ್‌ ಹೀರುವುದಕ್ಕೆ ಮೂಲ ಕಾರಣ ದಿನವಿಡೀ ಚುರುಕಾಗಿ ಇರುವುದಕ್ಕೆ. ಬೀಟ್‌ರೂಟ್‌ನಲ್ಲಿ ನೈಟ್ರೇಟ್‌ ಹೇರಳವಾಗಿದೆ. ದೇಹವು ಇದ್ನು ನೈಟ್ರಿಕ್‌ ಆಕ್ಸೈಡ್‌ ಆಗಿ ಪರಿವರ್ತಿಸುತ್ತದೆ. ಇದು ರಕ್ತ ಪರಿಚಲನೆಯನ್ನು ಚುರುಕುಗೊಳಿಸಲು ನೆರವಾಗುವುದಲ್ಲದೆ, ನಮ್ಮ ದೇಹಕ್ಕೆ ರಕ್ತದ ಮೂಲಕ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕವನ್ನು ಒದಗಿಸುವಲ್ಲಿಯೂ ಸಹಾಯ ಮಾಡುತ್ತದೆ. ಇದರಿಂದಾಗಿ, ಉಲ್ಲಾಸ, ಚುರುಕುತನ ಹೆಚ್ಚುತ್ತದೆ.

Heart Health Fish Benefits

ಹೃದಯದ ಆರೋಗ್ಯ ಸುಧಾರಣೆ

ಹೃದಯದ ಆರೋಗ್ಯಕ್ಕೆ ಬೀಟ್‌ರೂಟ್‌ ಜ್ಯೂಸ್‌ ಬಹಳ ಒಳ್ಳೆಯದು. ಇದು ರಕ್ತದೊತ್ತಡವನ್ನು ಸಮತೋಲನಗೊಳಿಸಿ, ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿರುವ ನೈಟ್ರೇಟ್‌ ರಕ್ತ ಪರಿಚಲನೆಯನ್ನು ಚುರುಕುಗೊಳಿಸುವ ಮೂಲಕ ಪರೋಕ್ಷವಾಗಿ ಹೃದಯವನ್ನೂ ಚುರುಕಾಗಿ ಇರಿಸುತ್ತದೆ. ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನೀತಾ ಅಂಬಾನಿ ಇದಕ್ಕಾಗಿ ಬೀಟ್‌ರೂಟ್‌ ಜ್ಯೂಸ್‌ ಅನ್ನು ಮರೆಯದೆ ಸೇವಿಸುತ್ತಾರಂತೆ.

ಜೀರ್ಣಕ್ರಿಯೆಗೆ ಅಗತ್ಯ

ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದಾಗಿರುವ ಬೀಟ್‌ರೂಟ್‌ನಲ್ಲಿ ನಾರಿನಂಶ ಸಮೃದ್ಧವಾಗಿದೆ. ಮಲಬದ್ಧತೆಯಂತಹ ಸಮಸ್ಯೆ ಹತ್ತಿರ ಸುಳಿಯದು. ಜೀರ್ಣಾಂಗವ್ಹೂಹವನ್ನು ಸದಾ ಆರೋಗ್ಯವಾಗಿಡಲು ಇದು ಸುಲಭ ನೈಸರ್ಗಿಕವಾದ ವಿಧಾನ.

active brain

ಮಿದುಳಿಗೂ ಪೂರಕ

ಮಿದುಳಿನ ಆರೋಗ್ಯಕ್ಕೂ ಕೂಡಾ ಬೀಟ್‌ರೂಟ್‌ ಉತ್ತಮ. ಬೀಟ್‌ರೂಟ್‌ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಹಾಗೂ ರಕ್ತದ ಮೂಲಕ ದೇಹಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡುವುದರಿಂದ ಮಿದುಳಿಗೂ ಸರಿಯಾದ ಪೋಷಣೆ ದೊರೆಯುತ್ತದೆ. ಕೆಲಸದಲ್ಲಿ ದೃಢತೆ, ಫೋಕಸ್‌, ಚುರುಕುತನ, ತೀಕ್ಷ್ಣ ಬುದ್ಧಿ ಇವೆಲ್ಲವಕ್ಕೂ ಬೀಟ್‌ರೂಟ್‌ ಒಳ್ಳೆಯ ಆಹಾರ.

ಚರ್ಮದ ಆರೋಗ್ಯಕ್ಕೂ ಉತ್ತಮ

ಮುಖ್ಯವಾಗಿ ಚರ್ಮದ ಆರೋಗ್ಯಕ್ಕೂ ಬೀಟ್‌ರೂಟ್‌ ಉತ್ತಮ. ಬೀಟ್‌ರೂಟ್‌ನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ವಿಟಮಿನ್‌ ಸಿ ಯೂ ಇವೆ. ಇದು ಆರೋಗ್ಯಯುತ ಚರ್ಮಕ್ಕೆ ಅಗತ್ಯ ಬೇಕಾದವು. ಆಂಟಿ ಏಜಿಂಗ್‌ ಕೂಡಾ. ನೀತಾ ಅಂಬಾನಿ ತನ್ನ ಸೌಂದರ್ಯದ ಗುಟ್ಟು ಆರೋಗ್ಯದಲ್ಲಿ ಅಡಗಿದೆ ಎಂಬುದನ್ನು ಬಲವಾಗಿ ನಂಬುವ ಕಾರಣ, ಚರ್ಮಕ್ಕೆ ಬೇಕಾದ ನೈಸರ್ಗಿಕ ಆಹಾರವನ್ನು ಇದರಲ್ಲಿ ಕಾಣುತ್ತಾರಂತೆ.

gall bladder

ಪಿತ್ತಕೋಶದ ಆರೋಗ್ಯಕ್ಕೂ ಉತ್ತಮ

ಪಿತ್ತಕೋಶದ ಆರೋಗ್ಯಕ್ಕೂ ಬೀಟ್‌ರೂಟ್‌ ಬಹಳ ಉತ್ತಮ. ಇದರಲ್ಲಿ ಡಿಟಾಕ್ಸಿಫೈಯಿಂಗ್‌ ಗುಣಗಳಿದ್ದು, ಮುಖ್ಯವಾಗಿ ಪಿತ್ತಕೋಶದ ವಿಚಾರದಲ್ಲಿ ಅದ್ಭುತ ಜಾದೂ ಮಾಡುತ್ತದೆ. ಪಿತ್ತಕೋಶದ ಆರೋಗ್ಯ ಅತ್ಯಂತ ಹೆಚ್ಚು ಗಮನ ಕೊಡಬೇಕಾದವುಗಳಲ್ಲಿ ಒಂದು.

ಔಷಧೀಯ ಗುಣ

ಸಂಧಿವಾತ ಸೇರಿದಂತೆ ಅನೇಕ ಬಗೆಯ ಉರಿಯೂತಗಳಿಗೂ ಬೀಟ್‌ರೂಟ್‌ ಔಷಧೀಯ ಗುಣಗಳನ್ನು ತನ್ನಲ್ಲಿ ಹೊಂದಿದೆ. ನಿತ್ಯ ಸೇವನೆಯಿಂದ ಇಂತಹ ಸಮಸ್ಯೆಯೂ ಬರದಂತೆ ತಡೆಯುವ ಗುಣವನ್ನು ಬೀಟ್‌ರೂಟ್‌ ಹೊಂದಿದೆ.

ಇದನ್ನೂ ಓದಿ: Health tips Kannada: ವೃತ್ತಿನಿರತ ತಾಯಂದಿರೇ, ಖಿನ್ನತೆ ಆವರಿಸಿಕೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳಿ!

ಕಡಿಮೆ ಕ್ಯಾಲರಿ

ಬೀಟ್‌ರೂಟ್‌ ಕಡಿಮೆ ಕ್ಯಾಲರಿಯನ್ನು ಹೊಂದಿದೆ. ಹಾಗಾಗಿ ತೂಕ ಇಳಿಕೆಗೂ ಇದು ಒಳ್ಳೆಯದು. ನೀತಾ ಅಂಬಾನಿ ಆರೋಗ್ಯಕರ ತೂವನ್ನು ಹೊಂದಲು ಸದಾ ಬೀಟ್‌ರೂಟ್‌ ಜ್ಯೂಸ್‌ ಅನ್ನು ತಮ್ಮ ಡಯಟ್‌ನ ಭಾಗವಾಗಿಸಿಕೊಂಡಿದ್ದಾರೆ.

Continue Reading

ಆರೋಗ್ಯ

Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

Tea vs coffee: ʻಯಾವುದು ಒಳ್ಳೆಯದು?ʼ ಎನ್ನುವ ಚಹಾ ಮತ್ತು ಕಾಫಿಯ ಅಭಿಮಾನಿಗಳ ಮೂಲಭೂತ ಪ್ರಶ್ನೆಗೆ ಉತ್ತರ ನಿರ್ಣಯ ಮಾಡುವುದು ಕೊಂಚ ಕಷ್ಟ. ಆದರೆ ಇವೆರಡೂ ಪೇಯಗಳಲ್ಲಿ ಕೆಲವು ಸಾಮ್ಯತೆಗಳು ಮತ್ತು ಕೆಲವು ಭಿನ್ನತೆಗಳು ಇರುವುದು ಹೌದು. ಅದನ್ನು ತಿಳಿದುಕೊಂಡರೆ, ಉತ್ತರವನ್ನು ನೀವೇ ನಿರ್ಧರಿಸಬಹುದು. ಇಲ್ಲಿದೆ ವಿವರಗಳು.

VISTARANEWS.COM


on

Tea vs Coffee
Koo

ಬೆಳಗಾಗುತ್ತಿದ್ದಂತೆಯೇ ನಾವು (Tea vs coffee) ಮಾಡುವ ಕೆಲಸಗಳಲ್ಲಿ ಎರಡು ಪ್ರಮುಖವಾದವು. ಒಂದು ಮೊಬೈಲ್‌ ಗೀರುವುದು, ಇನ್ನೊಂದು ಕಾಫಿ/ ಚಹಾ ಹೀರುವುದು. ಇವೆರಡೂ ಇಲ್ಲದಿದ್ದರೆ ಬೆಳಕು ಹರಿಯುವುದೇ ಇಲ್ಲ ನಮಗೆ. ಇವೆರಡೂ ದೇಹಕ್ಕೆ ನೀಡುವುದರಲ್ಲಿ ಕೆಫೇನ್‌ ಅಂಶವೇ ಪ್ರಧಾನವಾಗಿ ನಮಗೆ ಲೆಕ್ಕಕ್ಕೆ ಬರುವುದು. ಶರೀರದಲ್ಲಿ ಕಾಣುವ ಚೇತರಿಕೆಗೆ ಇದೇ ಪ್ರಧಾನವಾದ ಕಾರಣ. ಚಹಾ ಎಲೆಗಳ ರಸ ಹೀರುವುದು ಒಳ್ಳೆಯದೋ ಅಥವಾ ಕಾಫಿ ಬೀಜಗಳ ರಸ ಹೀರುವುದೋ ಎಂಬ ಚರ್ಚೆ ಬಹುಶಃ ಇವುಗಳ ಹುಟ್ಟಿನಷ್ಟೇ ಹಳೆಯದು. ಆದರೂ… ಯಾವುದು ಸೂಕ್ತ? ಅಂದಹಾಗೆ ಚಹಾದ ಹುಟ್ಟಿಗೆ ಸಾವಿರಾರು ವರ್ಷಗಳ ಹಿಂದಿನ ಸಣ್ಣದೊಂದು ಕಥೆಯೂ ಇದೆ. ಚೀನಾದ ಚಕ್ರವರ್ತಿ ಷೆನ್‌ ನಂಗ್‌ ಒಮ್ಮೆ ತನ್ನ ಪಡೆಯೊಂದಿಗೆ ಎಲ್ಲಿಗೋ ಹೋಗುತ್ತಿದ್ದ. ಆಗ ದಾರಿಯಲ್ಲಿ ವಿಶ್ರಾಂತಿ ಮತ್ತು ಆಹಾರಕ್ಕಾಗಿ ನೆರಳಿನಲ್ಲಿ ಬೀಡು ಬಿಟ್ಟಿದ್ದರು. ಏನೋ ಕಾರಣಕ್ಕಾಗಿ ಪಾತ್ರೆಯೊಂದರಲ್ಲಿ ನೀರನ್ನು ಕುದಿಸುತ್ತಿದ್ದರು. ಎಲ್ಲಿಂದಲೋ ತೂರಿ ಬಂದ ಚಹಾ ಎಲೆಗಳು ಈ ಪಾತ್ರೆಯೊಳಗೆ ಬಿದ್ದವಂತೆ. ನೀರು ತನ್ನಷ್ಟಕ್ಕೇ ಕುದಿದು, ಚಹಾ ಪರಿಮಳದ ನೀರು ಸಿದ್ಧವಾಯಿತು. ಈ ಲಘುವಾದ ಡಿಕಾಕ್ಷನ್‌ ಘಮ ಚಕ್ರವರ್ತಿಗೆ ಇಷ್ಟವಾಯಿತು ಎಂಬುದು ಚಹಾ ಹುಟ್ಟಿನ ಕಥೆ. ಇದೇನೇ ಇದ್ದರೂ, ಸಾವಿರಾರು ವರ್ಷಗಳಿಂದ ಏಷ್ಯಾದ ಸಂಸ್ಕೃತಿಗಳಲ್ಲಿ ಚಹಾಗೊಂದು ವಿಶಿಷ್ಟವಾದ ಸ್ಥಾನ ಇರುವುದಂತೂ ಹೌದು.

Tea And Coffee

ಯಾವುದು ಒಳ್ಳೆಯದು?

ಇದೀಗ ಮುಖ್ಯವಾದ ಪ್ರಶ್ನೆ- ಕಾಫಿಯೊ ಚಹಾವೊ… ಆರೋಗ್ಯಕ್ಕೆ ಯಾವುದು ಸರಿ? ಇವೆರಡೂ ಪೇಯಗಳಲ್ಲಿ ಮುಖ್ಯವಾಗಿ ಇರುವುದು ಕೆಫೇನ್‌ ಮತ್ತು ಉತ್ಕರ್ಷಣ ನಿರೋಧಕಗಳು. ಇದರಿಂದ ದೇಹದಲ್ಲಿನ ಶಕ್ತಿ ಸಂಚಯನ ಹೆಚ್ಚುತ್ತದೆ; ಮೆದುಳು ಚುರುಕಾಗುತ್ತದೆ; ಚಯಾಪಚಯ ವೃದ್ಧಿಸುತ್ತದೆ ಮತ್ತು ತೂಕ ಇಳಿಕೆಗೂ ನೆರವಾಗುತ್ತದೆ. ಹಾಗೆಂದು ಈ ಎರಡೂ ಪೇಯಗಳ ಗುಣಗಳು ಒಂದೇ ಎಂದೇನಲ್ಲ. ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳಿಗೆ ಹೆಚ್ಚಾಗಿ ಮನಸ್ಸನ್ನು ಶಾಂತವಾಗಿಸುವ ಗುಣಗಳಿವೆ. ಆದರೆ ಕಾಫಿಯಲ್ಲಿ ಕೆಫೇನ್‌ ಸಾಂದ್ರತೆ ಹೆಚ್ಚಿದ್ದು, ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಸಾಮ್ಯತೆಯೇನು?

ಇವೆರಡೂ ಪೇಯಗಳಲ್ಲಿರುವ ಸಾಮ್ಯತೆಯೇನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಇವೆರಡೂ ಪೇಯಗಳಲ್ಲಿ ಉತ್ಕರ್ಷಣ ನಿರೋಧಕಗಳು ವಿಫುಲವಾಗಿವೆ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ, ಕೆಲವು ರೀತಿಯ ರೋಗಗಳನ್ನು ದೂರ ಇರಿಸುವುದಕ್ಕೆ ಇಂಥ ಅಂಶಗಳು ನೆರವಾಗುತ್ತವೆ. ಮಿತಿಯಲ್ಲಿ ಇವುಗಳನ್ನು ಕುಡಿಯುವುದು ಒಂದರ್ಥದಲ್ಲಿ ಆರೋಗ್ಯವನ್ನು ಕಾಪಾಡಲೂಬಹುದು. ಇವೆರಡೂ ಪೇಯಗಳಲ್ಲಿ ಕೆಫೇನ್‌ ಇರುವುದು ಹೌದು. ಆದರೆ ಬ್ಲಾಕ್‌ ಟೀಗೆ ಹೋಲಿಸಿದಲ್ಲಿ ಕಾಫಿಯಲ್ಲಿರುವ ಕೆಫೇನ್‌ ಪ್ರಮಾಣ ಹೆಚ್ಚು. ಅಂದಾಜಿಗೆ ಹೇಳುವುದಾದರೆ, ಒಂದು ದೊಡ್ಡ ಕಪ್‌ ಕಾಫಿಯಲ್ಲಿ, ಮೂರು ಚಹಾಗಳಲ್ಲಿರುವಷ್ಟು ಕೆಫೆನ್‌ ದೇಹ ಸೇರುತ್ತದೆ. ಹಾಗಾಗಿ ಈ ಪೇಯಗಳ ಸೇವನೆಯನ್ನು ಮಿತಿಯಲ್ಲಿ ಇರಿಸಿಕೊಳ್ಳದಿದ್ದರೆ ನಿದ್ರಾಹೀನತೆ, ಜೀರ್ಣಾಂಗಗಳ ತೊಂದರೆ, ಮಾನಸಿನ ಆತಂಕಗಳಂಥವು ಗಂಟು ಬೀಳುತ್ತವೆ.

ಇದನ್ನೂ ಓದಿ: World Lung Cancer Day: ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರತಿವರ್ಷ 16 ಲಕ್ಷ ಮಂದಿ ಬಲಿ; ಇದರಿಂದ ಪಾರಾಗುವುದು ಹೇಗೆ?

ಭಿನ್ನತೆಗಳೇನು?

ಚಹಾದಲ್ಲಿರುವ ಎಲ್‌-ಥಿಯಾನಿನ್‌ ಅಂಶವು ಮಾನಸಿಕ ಒತ್ತಡವನ್ನು ದೂರ ಮಾಡುವ ಕ್ಷಮತೆಯನ್ನು ಹೊಂದಿದೆ. ಜೊತೆಗೆ, ಮೆದುಳನ್ನು ಜಾಗೃತ ಸ್ಥಿತಿಯಲ್ಲೂ ಇರಿಸುತ್ತದೆ. ಇದರಲ್ಲಿ ಹಲವು ರೀತಿಯ ಪಾಲಿಫೆನಾಲ್‌ಗಳಿದ್ದು, ಚಯಾಪಚಯವನ್ನು ವೃದ್ಧಿಸುತ್ತದೆ. ಗ್ರೀನ್‌ ಟೀ ಅಥವಾ ಹರ್ಬಲ್‌ ಚಹಾಗಳು ಜೀರ್ಣಾಂಗಗಳ ಬ್ಯಾಕ್ಟೀರಿಯಗಳಿಗೆ ಕೊಂಚ ಸಹಾಯ ನೀಡಿ, ತೂಕ ಇಳಿಕೆಗೂ ನೆರವಾಗುತ್ತದೆ.
ಆದರೆ ಕಾಫಿಯಲ್ಲಿರುವ ಕ್ಷಮತೆ ಬೇರೆಯೇ. ಇದರಲ್ಲಿ ಕೆಫೇನ್‌ ಅಂಶ ನೈಸರ್ಗಿಕವಾಗಿಯೇ ಹೆಚ್ಚಿರುವುದರಿಂದ ದೇಹದಲ್ಲಿ ಶಕ್ತಿಯಲ್ಲಿ ಹೆಚ್ಚಿಸಿ, ಅಥ್ಲೆಟಿಕ್‌ ಕ್ಷಮತೆಯನ್ನು ವೃದ್ಧಿಸುವಂಥದ್ದು. ಡೋಪಮಿನ್‌ ಅಂಶದಿಂದಾಗಿ ನರಗಳನ್ನು ಉತ್ತೇಜಿಸುವುದರಿಂದ ಪಾರ್ಕಿನ್‌ಸನ್‌ ಮತ್ತು ಅಲ್‌ಜೈಮರ್ಸ್‌ ರೋಗಿಗಳಿಗೆ ಇದರಿಂದಾಗುವ ಲಾಭಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮಿತಿಯಲ್ಲಿದ್ದರೆ ಯಕೃತ್‌ಗೂ ಒಳ್ಳೆಯದು. ಆದರೆ ಮಿತಿ ಮೀರಿದರೆ ಜೀರ್ಣಾಂಗಗಳ ಆರೋಗ್ಯವನ್ನು ಹದಗೆಡಿಸಿ, ವ್ಯಸನವನ್ನೂ ಅಂಟಿಸುತ್ತದೆ.

Continue Reading

ಆರೋಗ್ಯ

Blood Cancer: ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್‌ರನ್ನು ಬಲಿ ಪಡೆದ ರಕ್ತದ ಕ್ಯಾನ್ಸರ್‌ಗೆ ಏನು ಕಾರಣ? ಇದರ ಲಕ್ಷಣಗಳೇನು?

ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಒಂದು ವರ್ಷದಿಂದ ರಕ್ತದ ಕ್ಯಾನ್ಸರ್ (Blood Cancer) ವಿರುದ್ಧ ಹೋರಾಡುತ್ತಿದ್ದರು. ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಫಲ ನೀಡಲಿಲ್ಲ. ಬುಧವಾರ ಅವರು ಎಲ್ಲರನ್ನೂ ಅಗಲಿದ್ದಾರೆ. ಮಾರಣಾಂತಿಕ ಕ್ಯಾನ್ಸರ್ ಗಳಲ್ಲಿ ಒಂದಾಗಿರುವ ರಕ್ತದ ಕ್ಯಾನ್ಸರ್ ಎಂದರೇನು, ಅದರ ಲಕ್ಷಣಗಳು ಯಾವುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Blood Cancer
Koo

ರಕ್ತದ ಕ್ಯಾನ್ಸರ್‌ನೊಂದಿಗೆ (Blood Cancer) ದೀರ್ಘ ಕಾಲ ಹೋರಾಡಿದ ಭಾರತದ ಮಾಜಿ ಕ್ರಿಕೆಟಿಗ (Indian cricketer) ಅಂಶುಮಾನ್ ಗಾಯಕ್ವಾಡ್ (Anshuman Gaekwad) 71ನೇ ವಯಸ್ಸಿನಲ್ಲಿ ಬುಧವಾರ ನಿಧನರಾದರು. 1997, 1999 ಮತ್ತು 2000 ನಡುವೆ ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದ ಗಾಯಕ್ವಾಡ್ ಒಂದು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಚಿಕಿತ್ಸೆ ಫಲ ನೀಡಲಿಲ್ಲ. ರಕ್ತದ ಕ್ಯಾನ್ಸರ್ ಮಾರಣಾಂತಿಕ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಹಾಗಾದರೆ ರಕ್ತದ ಕ್ಯಾನ್ಸರ್ ಎಂದರೇನು, ಅದರ ಲಕ್ಷಣಗಳು ಯಾವುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ರಕ್ತದ ಕ್ಯಾನ್ಸರ್‌ಗೆ ಏನು ಕಾರಣ?

ದೇಹವು ರಕ್ತ ಕಣಗಳನ್ನು ಹೇಗೆ ಉತ್ಪಾದಿಸುತ್ತದೆ ಮತ್ತು ಅವು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವ ರಕ್ತ ಕ್ಯಾನ್ಸರ್ ಮೂಳೆಯಲ್ಲಿ ಪ್ರಾರಂಭವಾಗುತ್ತದೆ. ಮೂಳೆಗಳ ಮಧ್ಯಭಾಗದಲ್ಲಿರುವ ಸ್ಪಾಂಜ್ ನಂತಹ ವಸ್ತು ಕಾಂಡಕೋಶಗಳನ್ನು ಪ್ರಬುದ್ಧಗೊಳಿಸುತ್ತದೆ. ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ ಗಳಾಗಿ ಮಾರ್ಪಡುವಂತೆ ಮಾಡುತ್ತದೆ.

ಸಾಮಾನ್ಯ ರಕ್ತ ಕಣಗಳು ಸೋಂಕಿನ ವಿರುದ್ಧ ಹೋರಾಡುತ್ತವೆ. ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುತ್ತವೆ ಮತ್ತು ರಕ್ತಸ್ರಾವವನ್ನು ನಿಯಂತ್ರಿಸುತ್ತವೆ. ಆದರೆ ದೇಹವು ರಕ್ತ ಕಣಗಳನ್ನು ತಯಾರಿಸುವಾಗ ಏನಾದರೂ ಅಡ್ಡಿಯಾದರೆ ಅದು ರಕ್ತದ ಕ್ಯಾನ್ಸರ್ ಆಗಿ ಪರಿವರ್ತನೆಯಾಗುತ್ತದೆ.

ವೈದ್ಯರ ಪ್ರಕಾರ, ರಕ್ತದ ಕ್ಯಾನ್ಸರ್ ಹೊಂದಿರುವವರಲ್ಲಿ ಅಸಹಜ ರಕ್ತ ಕಣಗಳು ಸಾಮಾನ್ಯ ರಕ್ತ ಕಣಗಳನ್ನು ನಾಶಪಡಿಸುತ್ತವೆ. ಇದು ವೈದ್ಯಕೀಯ ಪರಿಸ್ಥಿತಿಗಳ ಏರಿಳಿತದ ಪರಿಣಾಮವನ್ನು ಉಂಟುಮಾಡುತ್ತದೆ.

Blood Cancer
Blood Cancer


ಭಾರತದಲ್ಲೇ ಹೆಚ್ಚು

ಅಂಕಿಅಂಶಗಳ ಪ್ರಕಾರ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ರಕ್ತದ ಕ್ಯಾನ್ಸರ್ ಪ್ರಮಾಣವನ್ನು ಹೊಂದಿದೆ. ವರ್ಷಕ್ಕೆ 1 ಲಕ್ಷದಿಂದ 5.5 ಲಕ್ಷ ಜನರಲ್ಲಿ ರಕ್ತ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಪ್ರತಿ ವರ್ಷ ಕನಿಷ್ಠ 80,000 ಹೊಸ ಪ್ರಕರಣಗಳು ಅಥವಾ ಪ್ರತಿ ಏಳು ಸೆಕೆಂಡಿಗೆ ಒಂದು ಹೊಸ ಪ್ರಕರಣ ದಾಖಲಾಗುತ್ತಿದೆ. 2022ರಲ್ಲಿ ಭಾರತದಲ್ಲಿ 70,000ಕ್ಕೂ ಹೆಚ್ಚು ಜನರು ರಕ್ತದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದರು.

ಇದರಲ್ಲಿ ಮೂರು ವಿಧ

ರಕ್ತ ಕ್ಯಾನ್ಸರ್ ಮೂರು ವಿಧವನ್ನು ಹೊಂದಿದ್ದು, ಇದರಲ್ಲಿ ಉಪವಿಧಗಳೂ ಸೇರಿವೆ.

ಲ್ಯುಕೇಮಿಯಾ: ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಸಾಮಾನ್ಯ ರಕ್ತ ಕ್ಯಾನ್ಸರ್ ಆಗಿದೆ. ಲ್ಯುಕೇಮಿಯಾದ ವಿಧಗಳಲ್ಲಿ ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ, ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾ, ದೀರ್ಘಕಾಲದ ಲಿಂಫೋಸೈಟಿಕ್ ಲ್ಯುಕೇಮಿಯಾ ಮತ್ತು ದೀರ್ಘಕಾಲದ ಮೈಲೋಜೆನಸ್ ಲ್ಯುಕೇಮಿಯಾ ಸೇರಿವೆ.

ಲಿಂಫೋಮಾ: ಇದು ದುಗ್ಧರಸ ವ್ಯವಸ್ಥೆಯ ಕ್ಯಾನ್ಸರ್. ಇದು ಮೂಳೆ ಮಜ್ಜೆಯನ್ನು ಒಳಗೊಂಡಿರುತ್ತದೆ. ಇದರ ವಿಧಗಳಲ್ಲಿ ಹಾಡ್ಗ್ ಕಿನ್ ಲಿಂಫೋಮಾ, ಹಾಡ್ಗ್ ಕಿನ್ ಅಲ್ಲದ ಲಿಂಫೋಮಾ, ಬಿ-ಸೆಲ್ ಲಿಂಫೋಮಾ ಮತ್ತು ಚರ್ಮದ ಟಿ-ಸೆಲ್ ಲಿಂಫೋಮಾ ಸೇರಿವೆ.

ಮೈಲೋಮಾ: ಮೈಲೋಮಾ ಮೂಳೆ ಮಜ್ಜೆಯಲ್ಲಿ ಪ್ರಾರಂಭವಾಗುತ್ತದೆ. ಇದು ಪ್ಲಾಸ್ಮಾ ಜೀವಕೋಶಗಳ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದೆ. ಮಲ್ಟಿಪಲ್ ಮೈಲೋಮಾ ಅತ್ಯಂತ ಸಾಮಾನ್ಯವಾದ ಮೈಲೋಮಾ ವಿಧವಾಗಿದೆ. ಮೈಲೋಮಾ ರೋಗ ನಿರ್ಣಯ ಮಾಡಿದ ಅರ್ಧಕ್ಕಿಂತ ಹೆಚ್ಚು ಜನರು ರೋಗ ನಿರ್ಣಯದ ಅನಂತರ ಕನಿಷ್ಠ ಐದು ವರ್ಷಗಳವರೆಗೆ ಬದುಕುತ್ತಾರೆ.

Blood Cancer
Blood Cancer


ಯಾಕೆ ಬರುತ್ತದೆ?

ರಕ್ತದ ಕ್ಯಾನ್ಸರ್ ಯಾಕೆ ಬರುತ್ತದೆ ಎಂಬುದಕ್ಕೆ ಖಚಿತ ಕಾರಣವಿಲ್ಲ. ಆದರೂ ಇದಕ್ಕೆ ಮುಖ್ಯವಾಗಿ ಡಿಎನ್ಎ ಕಾರಣ ಎಂದು ಅಧ್ಯಯನಗಳು ಹೇಳಿವೆ.

ಡಿಎನ್‌ಎ ರಕ್ತ ಕಣಗಳನ್ನು ಯಾವಾಗ ವಿಭಜಿಸಬೇಕು ಅಥವಾ ಗುಣಿಸಬೇಕು ಮತ್ತು ಯಾವಾಗ ಸಾಯಬೇಕು ಎಂದು ನಿರ್ಧರಿಸುತ್ತದೆ. ಆದ್ದರಿಂದ ಡಿಎನ್‌ಎ ನಿಮ್ಮ ಜೀವಕೋಶಗಳಿಗೆ ಹೊಸ ಸೂಚನೆಗಳನ್ನು ನೀಡಿದಾಗ ದೇಹವು ಅಸಹಜ ರಕ್ತ ಕಣಗಳನ್ನು ಅಭಿವೃದ್ಧಿಪಡಿಸುತ್ತದೆ. ಅದು ಸಾಮಾನ್ಯಕ್ಕಿಂತ ವೇಗವಾಗಿ ಬೆಳೆಯುತ್ತದೆ. ಗುಣಿಸುತ್ತದೆ ಮತ್ತು ಕೆಲವೊಮ್ಮೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ಬದುಕುತ್ತದೆ. ಸಾಮಾನ್ಯ ರಕ್ತ ಕಣಗಳು ನಿರಂತರವಾಗಿ ಬೆಳೆಯುತ್ತಿರುವ ಅಸಹಜ ಕೋಶಗಳ ಗುಂಪಿನಲ್ಲಿ ಕಳೆದುಹೋಗುತ್ತವೆ. ಅದು ಸಾಮಾನ್ಯ ಕೋಶಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಮೂಳೆ ಮಜ್ಜೆಯಲ್ಲಿ ಜಾಗವನ್ನು ಏಕಸ್ವಾಮ್ಯಗೊಳಿಸುತ್ತದೆ. ಅಂತಿಮವಾಗಿ ಮೂಳೆ ಮಜ್ಜೆಯು ಕಡಿಮೆ ಸಾಮಾನ್ಯ ಜೀವಕೋಶಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ ಆನುವಂಶಿಕ ಬದಲಾವಣೆಯು ಮೂರು ವಿಧದ ರಕ್ತದ ಕ್ಯಾನ್ಸರ್ ಗೆ ಕಾರಣವಾಗುತ್ತದೆ.

ರಕ್ತ ಕ್ಯಾನ್ಸರ್ ಲಕ್ಷಣಗಳೇನು?

ರಕ್ತದ ಕ್ಯಾನ್ಸರ್ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ ಎನ್ನುತ್ತಾರೆ ತಜ್ಞರು. ಆದರೂ ಮೂರು ಸಾಮಾನ್ಯವಾಗಿರುವ ಕೆಲವು ಚಿಹ್ನೆಗಳನ್ನು ಹೊಂದಿರುತ್ತದೆ.

ಆಯಾಸ, ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ನಿರಂತರ ಮತ್ತು ಹೆಚ್ಚಿನ ಜ್ವರ, ರಾತ್ರಿ ಬೆವರುವಿಕೆ, ಅಸಾಮಾನ್ಯ ರಕ್ತಸ್ರಾವ, ಅನಿರೀಕ್ಷಿತ ತೂಕ ನಷ್ಟ, ಆಗಾಗ್ಗೆ ಸೋಂಕುಗಳು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಯಕೃತ್ತು ತೊಂದರೆಗಳು, ಮೂಳೆ ನೋವು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ: Condom Cause Cancer: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

ರಕ್ತ ಕ್ಯಾನ್ಸರ್‌ನ ಅನೇಕ ರೋಗಲಕ್ಷಣಗಳು ಸಾಮಾನ್ಯ ಕಾಯಿಲೆಗಳಿಗೂ ಹೋಲುತ್ತವೆ. ಆದ್ದರಿಂದ ಈ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವವರು ರಕ್ತದ ಕ್ಯಾನ್ಸರ್ ಹೊಂದಿದ್ದಾರೆ ಎಂದೇ ಅರ್ಥವಲ್ಲ. ಆದರೆ ಕೆಲವು ವಾರಗಳಿಗಿಂತ ಹೆಚ್ಚು ಕಾಲ ದೇಹದಲ್ಲಿ ರೋಗಲಕ್ಷಣಗಳು ಅಥವಾ ಬದಲಾವಣೆಗಳನ್ನು ಗಮನಿಸಿದರೆ ವೈದ್ಯರಿಂದ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

Continue Reading
Advertisement
IPL 2025
ಕ್ರೀಡೆ2 mins ago

IPL 2025: ಇನ್ನು ಮುಂದೆ ಹೀಗೆ ಮಾಡಿದರೆ ವಿದೇಶಿ ಆಟಗಾರರಿಗೆ ಐಪಿಎಲ್ ನಿಂದ 2 ವರ್ಷ ನಿಷೇಧ?

Wayanad Landslide
ದೇಶ5 mins ago

Wayanad Landslide: ವಯನಾಡು ದುರಂತದಲ್ಲಿ ಮೃತರ ಸಂಖ್ಯೆ 344ಕ್ಕೆ ಏರಿಕೆ; ರಾಡಾರ್‌ಗೆ ಸಿಕ್ಕ ನಿಗೂಢ ಉಸಿರಾಟ ಯಾರದ್ದು?

meghashree DC Wayanad landslide 2
ಪ್ರಮುಖ ಸುದ್ದಿ16 mins ago

Wayanad Landslide: ವಯನಾಡ್‌ನಲ್ಲಿ ಕರ್ತವ್ಯಪರತೆ ಮೆರೆದ ಕನ್ನಡತಿ ಜಿಲ್ಲಾಧಿಕಾರಿ, ಭೂಕುಸಿತ ಸ್ಥಳದಲ್ಲೇ ಮೊಕ್ಕಾಂ

Dhruva Sarja in hiriyuru dboss slogan in front o martin actor
ಸ್ಯಾಂಡಲ್ ವುಡ್40 mins ago

Dhruva Sarja:  ಧ್ರುವ ಸರ್ಜಾ ಕಂಡು ʻಡಿ ಬಾಸ್’ ಎಂದು ಕೂಗಿದ ದರ್ಶನ್ ಫ್ಯಾನ್ಸ್; ಭರದಿಂದ ಸಾಗಿದೆ ‘ಮಾರ್ಟಿನ್’ ಪ್ರಚಾರ!

Bike Mileage Tips
ಆಟೋಮೊಬೈಲ್40 mins ago

Bike Mileage Tips: ಬೈಕ್‌‌ಗೆ ಟ್ಯೂಬ್, ಟ್ಯೂಬ್ ಲೆಸ್ ಟಯರ್; ಇವೆರಡರಲ್ಲಿ ಯಾವುದು ಬೆಸ್ಟ್?

Robbery Case
Latest50 mins ago

Robbery Case: ಹಾಡಹಗಲೇ ಬಂದೂಕು ತೋರಿಸಿ ಆಭರಣ ಮಳಿಗೆ ದೋಚಿದ ದರೋಡೆಕೋರರು; ವಿಡಿಯೊ ನೋಡಿ

rowdy sheeter murder case
ಕ್ರೈಂ50 mins ago

Murder Case: ಒಂಟಿ ಕೈ ರೌಡಿಯಿಂದ ಇನ್ನೊಬ್ಬ ರೌಡಿಯ ಕೊಚ್ಚಿ ಕೊಲೆ

Land Dispute
Latest53 mins ago

Land Dispute: ಭೂ ವಿವಾದ ಪ್ರಕರಣ; ಜೀವಂತ ಸಮಾಧಿಯಾದವನನ್ನು ರಕ್ಷಿಸಿದ ಬೀದಿನಾಯಿಗಳು!

Neeraj Chopra
ಕ್ರೀಡೆ59 mins ago

Neeraj Chopra: ನೀರಜ್​ ಚಿನ್ನ ಗೆದ್ದರೆ ನೀವು ಕೂಡ ಉಚಿತ ವಿದೇಶ ಪ್ರವಾಸ ಕೈಗೊಳ್ಳಬಹುದು; ಇದು ಹೇಗೆ ಸಾಧ್ಯ?

World Bank
ವಾಣಿಜ್ಯ1 hour ago

World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ6 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌