IPL 2025: ಮುಂಬೈ ತಂಡದಿಂದ ಪಾಂಡ್ಯಗೆ ಗೇಟ್​ಪಾಸ್​; ಸೂರ್ಯಕುಮಾರ್​ಗೆ ನಾಯಕತ್ವ? - Vistara News

ಕ್ರೀಡೆ

IPL 2025: ಮುಂಬೈ ತಂಡದಿಂದ ಪಾಂಡ್ಯಗೆ ಗೇಟ್​ಪಾಸ್​; ಸೂರ್ಯಕುಮಾರ್​ಗೆ ನಾಯಕತ್ವ?

IPL 2025: ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಾಯಕತ್ವದಿಂದ ಮಾತ್ರವಲ್ಲ ತಂಡದಿಂದಲೇ ಕೈಬಿಡಲು ಮುಂದಾಗಿದೆ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ.

VISTARANEWS.COM


on

IPL 2025
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಮುಂದಿನ ಆವೃತ್ತಿಯ ಐಪಿಎಲ್(IPL 2025)​ ಟೂರ್ನಿ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್(Mumbai Indians)​ ತಂಡದಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸುವ ಸೂಚನೆ ಲಭಿಸಿದೆ. ನಾಯಕ ಹಾರ್ದಿಕ್​ ಪಾಂಡ್ಯರನ್ನು (Hardik Pandya) ಈ ಹುದ್ದೆಯಿಂದ ಮಾತ್ರವಲ್ಲದೆ, ತಂಡದಿಂದಲೇ ಕೈಬಿಡಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಯಾಗಿದೆ.

ಕಳೆದ 17ನೇ ಆವೃತ್ತಿಯಲ್ಲಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ದಿಢೀರ್​ ಆಗಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕನನ್ನಾಗಿ ನೇಮಿಸಿ, 5 ಬಾರಿ ಕಪ್​ ಗೆಲ್ಲಿಸಿದ ರೋಹಿತ್​(rohit sharma) ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದು ರೋಹಿತ್‌ ಅಭಿಮಾನಿಗಳು ಸೇರಿ ತಂಡದ ಸಹ ಆಟಗಾರರಿಗೂ ತೀವ್ರ ನೋವುಂಟು ಮಾಡಿತ್ತು. ಇದೇ ವಿಚಾರವಾಗಿ ಮುಂಬೈ ಫ್ರಾಂಚೈಸಿ ವಿರುದ್ಧ ತಮ್ಮದೇ ಅಭಿಮಾನಿಗಳು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಇದೀಗ ಸೂರ್ಯಕುಮಾರ್​ ಯಾದವ್(Suryakumar Yadav)​ ಅವರನ್ನು ಮುಂದಿನ ಆವೃತ್ತಿಗೆ ನಾಯಕನನ್ನಾಗಿ ಮಾಡಲು ಮುಂಬೈ ಫ್ರಾಂಚೈಸಿ ಸಿದ್ಧತೆ ನಡೆಸಿದೆ ಎಂದು ಮೂಲಗಳು ಮಾಹಿ ನೀಡಿದೆ.

ರೋಹಿತ್​ ಬಳಿಕ ಹಾರ್ದಿಕ್‌ ಪಾಂಡ್ಯ ಅವರನ್ನು ಭಾರತದ ಭವಿಷ್ಯದ ನಾಯಕ ಎಂದು ಪರಿಗಣಿಸಲಾಗಿತ್ತು. ಇದೇ ಕಾರಣದಿಂದ ಮುಂಬೈ ಫ್ರಾಂಚೈಸಿ ಅವರನ್ನು ಗುಜರಾತ್​ ತಂಡದಿಂದ ಕರೆತಂದು ನಾಉಕನ ಸ್ಥಾನ ನೀಡಿತ್ತು. ಆದರೆ, ಇದೀಗ ಭಾರತ ತಂಡಕ್ಕೆ ಸೂರ್ಯಕುಮಾರ್​ ನಾಯಕನಾಗಿದ್ದಾರೆ. ಹೀಗಾಗಿ ಇವರಿಗೆ ನಾಯಕತ್ವ ನೀಡಲು ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ IPL 2025: ಇನ್ನು ಮುಂದೆ ಹೀಗೆ ಮಾಡಿದರೆ ವಿದೇಶಿ ಆಟಗಾರರಿಗೆ ಐಪಿಎಲ್​ನಿಂದ 2 ವರ್ಷ ನಿಷೇಧ?

ಸೂರ್ಯಕುಮಾರ್​ ಅವರಿಗೆ ನಾಯಕತ್ವ ನೀಡಿದರೆ ರೋಹಿತ್​ ಅಭಿಮಾನಿಗಳು ಕೂಡ ಅವರಿಗೆ ಬೆಂಬಲ ಸೂಚಿಸಲಿದ್ದಾರೆ. ರೋಹಿತ್​ ಅವರ ಆಪ್ತರೂ ಆಗಿರುವ ಸೂರ್ಯನಿಗೆ ನಾಯಕನ ಸ್ಥಾನ ನೀಡಿದರೆ ರೋಹಿತ್​ ಮುಂಬೈ ತಂಡ ತೊರೆಯಲ್ಲ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ರೋಹಿತ್​ ಅವರನ್ನು ಅಂದು ನಾಯಕತ್ವದಿಂದ ಕೆಳಗಿಳಿಸಿದ ವೇಳೆ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಒಡೆದು ಹೋದ ಹೃದಯದ ಎಮೊಜಿ ಹಾಕಿ ಅಸಮಾಧಾನ ಹೊರಹಾಕಿದ್ದರು.

ಪಾಂಡ್ಯ ಅವರನ್ನು ನಾಯಕತ್ವದಿಂದ ಮಾತ್ರವಲ್ಲ ತಂಡದಿಂದಲೇ ಕೈಬಿಡಲು ಮುಂದಾಗಿದೆ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ಗುಜರಾತ್‌ ಟೈಟಾನ್ಸ್‌ ತಂಡವನ್ನು ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್​ ಪಟ್ಟಕ್ಕೇರಿಸಿದ ಮತ್ತು ಒಮ್ಮೆ ಫೈನಲ್​ ತಲುಪಿಸಿದ ಸಾಧನೆ ಪಾಂಡ್ಯ ಅವರದ್ದಾಗಿತ್ತು. ಒಂದೊಮ್ಮೆ ಪಾಂಡ್ಯ ಅವರನ್ನು ಮುಂಬೈ ತಂಡದಿಂದ ಕೈ ಬಿಟ್ಟರೆ ಅವರು ಯಾವ ತಂಡ ಸೇರಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.

ಪಾಂಡ್ಯ ಅವರಿಗೆ ಭಾರತ ಟಿ20 ತಂಡದ ನಾಯಕತ್ವ ನೀಡದಿರಲು ಪ್ರಮುಖ ಕಾರಣ ಅವರ ಫಿಟ್ನೆಸ್‌ ಸಮಸ್ಯೆ. ಪಾಂಡ್ಯ ತಮ್ಮ 8 ವರ್ಷಗಳ ಕ್ರಿಕೆಟ್​ ವೃತ್ತಿಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಪದೇಪದೆ ಗಾಯಕ್ಕೆ ತುತ್ತಾಗುವ ಕಾರಣ ಪಾಂಡ್ಯ ನೇಮಕಕ್ಕೆ ಬಿಸಿಸಿಐನ ಕೆಲ ಪ್ರಮುಖ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Priyanka Goswami : ರೀಲ್ಸ್​ ಮಾಡೋದಲ್ಲ, ಸ್ಪರ್ಧೆಯಲ್ಲಿ ಓಡಿ ಪದಕ ಗೆಲ್ಲು; ಪ್ರಿಯಾಂಕ ಗೋಸ್ವಾಮಿಗೆ ನೆಟ್ಟಿಗರ ತಪರಾಕಿ

Priyanka Goswami : ಫೆಬ್ರವರಿ 2023 ರಲ್ಲಿ ನಡೆದ ಇಂಡಿಯನ್ ಓಪನ್ ನ್ಯಾಷನಲ್ ರೇಸ್ ವಾಕಿಂಗ್ ಸ್ಪರ್ಧೆಯಲ್ಲಿ ಅಗತ್ಯ ಅಂಕಗಳನ್ನು ಪಡೆದ ಗೋಸ್ವಾಮಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು. ಅವರು 2021 ರಲ್ಲಿ ಭಾರತೀಯ ರೇಸ್​ವಾಕಿಂಗ್​ ಚಾಂಪಿಯನ್​ಶಿಪ್​ ಗೆದ್ದ ನಂತರ ಭರವಸೆ ಮೂಡಿಸಿದ್ದರು. ಆ ಮೂಲಕ ಆ ವರ್ಷ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು.

VISTARANEWS.COM


on

Priyanka Goswami
Koo

ಪ್ಯಾರಿಸ್: ಪ್ಯಾರಿಸ್​ ಒಲಿಂಪಿಕ್ಸ್​ನ (Paris Olympics 2024) ರೇಸ್​ ವಾಕ್​ನಲ್ಲಿ ಭಾರತದ ಪ್ರಿಯಾಂಕ ಗೋಸ್ವಾಮಿ (Priyanka Goswami) ಕಳಪೆ ಪ್ರದರ್ಶನ ನೀಡಿದ್ದರು. ಅವರು 20 ಕಿ.ಮೀ ಓಟದ ನಡಿಗೆಯಲ್ಲಿ 45 ಮಂದಿಯಲ್ಲಿ 41 ನೇ ಸ್ಥಾನ ಪಡೆದರು. ಹೀಗಾಗಿ ಕ್ರೀಡಾಭಿಮಾನಿಗಳಿಗೆ ಬೇಸರ ಮೂಡಿರುವುದು ಸಹಜ. ಆದಾಗ್ಯೂ ಅವರು ಹೆಚ್ಚು ಟೀಕೆಗೆ ಒಳಗಾಗಿದ್ದು ರೀಲ್ಸ್​ನಿಂದಾಗಿ. ಅವರು ತಮ್ಮ ರೂಮ್​ನೊಳಗೆ ಎಸಿ ಮುಂದೆ ನಿಂತು ಮಾಡಿದ ವಿಡಿಯೊದ ಕಾರಣಕ್ಕೆ ಎಲ್ಲರೂ ಟೀಕಿಸಲು ಆರಂಭಿಸಿದ್ದಾರೆ. ರೀಲ್ಸ್ ಮಾಡೋದು ಬಿಟ್ಟು ದೇಶಕ್ಕಾಗಿ ಆಡು ಎಂಬುದಾಗಿ ಹೇಳಿದ್ದಾರೆ.

ಪ್ಯಾರಿಸ್​ನಲ್ಲಿ ಸಿಕ್ಕಾಪಟ್ಟೆ ಸೆಖೆಯಿದೆ. ಬಿಸಿಲಿನ ತಾಪ ಹಾಗೂ ಆರ್ದ್ರ ಪರಿಸ್ಥಿತಿಗಳಿಂದಾಗಿ ಆಟಗಾರರು ಬಳಲಿ ಬೆಂಡಾಗಿದ್ದಾರೆ. ಹೀಗಾಗಿ ಕ್ರೀಡಾ ಸಚಿವಾಲಯವು ಅವರಿಗೆ ಕಾಂಪಾಕ್ಟ್​ ಎಸಿಗಳನ್ನು ಕಳುಹಿಸಿಕೊಟ್ಟಿದ್ದರು. ಅದನ್ನು ಮುಂದಿಟ್ಟುಕೊಂಡು 28 ವರ್ಷದ ಅಥ್ಲೀಟ್ ರೀಲ್ಸ್ ಮಾಡಿದ್ದರು. ಹೀಗಾಗಿ ಕ್ರೀಡಾಭಿಮಾನಿಗಳು ರೀಲ್ಸ್ ಮಾಡೋದು ಬಿಟ್ಟು ಆಡು ಎಂಬುದಾಗಿ ಟೀಕೆ ಮಾಡಿದ್ದಾರೆ.

ಫೆಬ್ರವರಿ 2023 ರಲ್ಲಿ ನಡೆದ ಇಂಡಿಯನ್ ಓಪನ್ ನ್ಯಾಷನಲ್ ರೇಸ್ ವಾಕಿಂಗ್ ಸ್ಪರ್ಧೆಯಲ್ಲಿ ಅಗತ್ಯ ಅಂಕಗಳನ್ನು ಪಡೆದ ಗೋಸ್ವಾಮಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು. ಅವರು 2021 ರಲ್ಲಿ ಭಾರತೀಯ ರೇಸ್​ವಾಕಿಂಗ್​ ಚಾಂಪಿಯನ್​ಶಿಪ್​ ಗೆದ್ದ ನಂತರ ಭರವಸೆ ಮೂಡಿಸಿದ್ದರು. ಆ ಮೂಲಕ ಆ ವರ್ಷ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು.

ಇದನ್ನೂ ಓದಿ: Bikini vs : Hijab : ಸ್ಪೇನ್​, ಈಜಿಪ್ಟ್​ ನಡುವಿನ ಬೀಚ್ ವಾಲಿಬಾಲ್ ಪಂದ್ಯದ ವೇಳೆ ಕಿಡಿ ಹಚ್ಚಿದ ಬಿಕಿನಿ ವರ್ಸಸ್ ಹಿಜಾಬ್​ ಚರ್ಚೆ

ಗೋಸ್ವಾಮಿ ಅವರ ರೀಲ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ, ಅವರಂತಹ ಕ್ರೀಡಾಪಟುಗಳು ಮೈದಾನದಲ್ಲಿ ಅಭ್ಯಾಸ ಮಾಡುವುದಕ್ಕಿಂತ ರೀಲ್ಸ್​ಗಳನ್ನು ತಯಾರಿಸಲು ಸಮಯ ವ್ಯರ್ಥ ಕಳೆಯುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಜನರು ತೆರಿಗೆದಾರರ ಹಣವನ್ನು ಹೇಗೆ ವ್ಯರ್ಥ ಮಾಡುತ್ತಿದ್ದಾರೆ ಎಂದು ಕೆಲವರು ಗಮನಸೆಳೆದರು.

Continue Reading

ಕ್ರೀಡೆ

Paris Olympics: ಪ್ಯಾರಿಸ್​ ಒಲಿಂಪಿಕ್ಸ್‌ ಪದಕ ಗೆಲುವಿಗೆ ಹಿನ್ನಡೆಯಾದ ಮೊಣಕಾಲಿನ ಗಾಯ; ಕಣ್ಣೀರು ಸುರಿಸುತ್ತಾ ಸೆಮಿಯಿಂದ ಹಿಂದೆ ಸರಿದ ಮರಿನ್‌

Paris Olympics: ಕಳೆದ ಟೋಕಿಯೊ ಒಲಿಂಪಿಕ್ಸ್‌ ಕೂಟದ ವೇಳೆಯೂ ಮೊಣಕಾಲಿನ ಗಾಯದಿಂದಾಗಿ ಮರಿನ್‌ ಟೂರ್ನಿಯಿಂದ ಹಿಂದೆ ಸರಿದಿದ್ದರು. ಅಂದು ಅಭ್ಯಾಸದ ವೇಳೆ ಮರಿನ್‌ಗೆ ಮೊಣಕಾಲಿನ ಗಾಯದ ಸಮಸ್ಯೆ ಎದುರಾಗಿತ್ತು. ತೀವ್ರ ಸ್ವರೂಪದ ಗಾಯವಾದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಪ್ಯಾರಿಸ್​ನಲ್ಲಿಯೂ ಅವರಿಗೆ ಮೊಣಕಾಲಿನ ಗಾಯ ಹಿನ್ನಡೆ ಉಂಟು ಮಾಡಿದೆ.

VISTARANEWS.COM


on

Paris Olympics
Koo

ಪ್ಯಾರಿಸ್:‌ ಸ್ಪೇನ್‌ನ ಶಟ್ಲರ್‌ ಕೆರೊಲಿನಾ ಮರಿನ್‌(Carolina Marin) ಅವರು ಗಾಯದ ಸಮಸ್ಯೆಗೆ ತುತ್ತಾಗಿ ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಟೂರ್ನಿಯಲ್ಲಿ ಪದಕ ಗೆಲ್ಲುವ ಅವಕಾಶವೊಂದನ್ನು ಕಳೆದುಕೊಂಡಿದ್ದಾರೆ. ಇಂದು (ಭಾನುವಾರ) ನಡೆದ ಸೆಮಿಫೈನಲ್‌ ಪಂದ್ಯದ ವೇಳೆ ಮೊಣಕಾಲಿನ(Carolina Marin knee injure) ಗಾಯದಿಂದ ಕಣ್ಣೀರು ಸುರಿಸುತ್ತಾ ಟೂರ್ನಿಯಿಂದ ಹೊರನಡೆದರು.

ಚೀನಾದ ಹಿ ಬಿಂಗ್‌ಜಿಯಾವೊ(He Bingjiao) ವಿರುದ್ಧದ ಪಂದ್ಯದಲ್ಲಿ ಮರಿನ್​ ಮೊದಲ ಗೇಮ್​ನಲ್ಲಿ 21-14 ಅಂತರದಿಂದ ಗೆದ್ದು, ದ್ವಿತೀಯ ಗೇಮ್​ನಲ್ಲಿ 10-06 ಮುನ್ನಡೆಯಲ್ಲಿದ್ದ ವೇಳೆ ಅವರು ಬಲ ಮೊಣಕಾಲಿನ ಗಾಯ ಕಾಣಿಸಿಕೊಂಡಿತು. ಆಡುವ ಪ್ರಯತ್ನ ಮಾಡಿದರೂ ಕೂಡ ನೋವು ಗಂಭೀರ ಪ್ರಮಾಣವಾದ್ದರಿಂದ ಅಂತಿಮವಾಗಿ ಪಂದ್ಯವನ್ನು ತ್ಯಜಿಸಿದರು. ಸೋಲು ಕಾಣಬೇಕಿದ್ದ ಚೀನಾದ ಹಿ ಬಿಂಗ್‌ಜಿಯಾವೊ ನೇರವಾಗಿ ಫೈನಲ್​ ಪ್ರವೇಶಿಸುವ ಮೂಲಕ ಪದಕವೊಂದನ್ನು ಖಾತ್ರಿಪಡಿಸಿದರು.

ಕಳೆದ ಟೋಕಿಯೊ ಒಲಿಂಪಿಕ್ಸ್‌ ಕೂಟದ ವೇಳೆಯೂ ಮೊಣಕಾಲಿನ ಗಾಯದಿಂದಾಗಿ ಮರಿನ್‌ ಟೂರ್ನಿಯಿಂದ ಹಿಂದೆ ಸರಿದಿದ್ದರು. ಅಂದು ಅಭ್ಯಾಸದ ವೇಳೆ ಮರಿನ್‌ಗೆ ಮೊಣಕಾಲಿನ ಗಾಯದ ಸಮಸ್ಯೆ ಎದುರಾಗಿತ್ತು. ತೀವ್ರ ಸ್ವರೂಪದ ಗಾಯವಾದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಪ್ಯಾರಿಸ್​ನಲ್ಲಿಯೂ ಅವರಿಗೆ ಮೊಣಕಾಲಿನ ಗಾಯ ಹಿನ್ನಡೆ ಉಂಟು ಮಾಡಿದೆ.

“ದುರದೃಷ್ಟವಶಾತ್‌ ನನಗೆ ಈ ಬಾರಿಯ ಒಲಿಂಪಿಂಕ್ಸ್​ನಲ್ಲಿಯೂ ಸಂಪೂರ್ಣವಾಗಿ ಆಡಲು ಸಾಧ್ಯವಾಗಲಿಲ್ಲ. ಆದರೆ ಗಾಯದಿಂದ ಶೀಘ್ರ ಚೇತರಿಸಿಕೊಂಡು ಮುಂದಿನ ಟೂರ್ನಿಯಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ” ಎಂದು ಹೇಳಿ ಮರಿನ್​ ಕಣ್ಣೀರು ಹಾಕಿದರು. ‌ಮರಿನ್​ 2016ರ ರಿಯೊ ಒಲಿಂಪಿಕ್ಸ್‌ ಫೈನಲ್​ನಲ್ಲಿ ಭಾರತದ ಪಿ.ವಿ ಸಿಂಧು ಅವರನ್ನು ಸೋಲಿಸಿ ಚಿನ್ನ ಗೆದ್ದಿದ್ದರು. ಒಂದೊಮ್ಮೆ ಸಿಂಧು ಅವರು ಈ ಬಾರಿಯ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸುತ್ತಿದ್ದರೆ ಚಿನ್ನ ಗೆಲ್ಲುವ ಸುವರ್ಣ ಅವಕಾಶವಿತ್ತು. ಸಿಂಧು ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದರು.

ಇದನ್ನೂ ಓದಿ Paris Olympics: ಶೂಟೌಟ್​ನಲ್ಲಿ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ; ಒಲಿಂಪಿಕ್ಸ್​ನಿಂದ ಗ್ರೇಟ್​ ಬ್ರಿಟನ್ ಕಿಕ್​ ಔಟ್​

ಸೆಮಿಯಲ್ಲಿ ಸೋಲು ಕಂಡ ಸೇನ್​


ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics) ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾರತದ ಕೊನೆಯ ಭರವಸೆಯಾಗಿ ಉಳಿದಿರುವ ಲಕ್ಷ್ಯ ಸೇನ್‌(Lakshya Sen) ಭಾನುವಾರ ನಡೆದ ಹೈವೋಲ್ಟೇಜ್​ ಸೆಮಿಫೈನಲ್‌ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ವಿಶ್ವದ ಖ್ಯಾತ ಶಟ್ಲರ್​ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌(Viktor Axelsen) ವಿರುದ್ಧ 20-22 21-14 ನೇರ ಗೇಮ್​ಗಳ ಅಂತರದಿಂದ ಸೋಲು ಕಂಡು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರೂ ಕೂಡ ಕಂಚಿನ ಪದಕ ಸ್ಪರ್ಧೆಯಲ್ಲಿ ಆಡಲಿದ್ದಾರೆ.​

ಲವ್ಲಿನಾಗೆ ಸೋಲು


ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದಿದ್ದ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌(Lovlina Borgohain) ಅವರು ಇಂದು(ಭಾನುವಾರ) ನಡೆದ ಮಹಿಳಾ  75 ಕೆ.ಜಿ. ವಿಭಾಗದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ವಿರುದ್ಧ 4-1 ಅಂತರದಿಂದ ಸೋಲು ಕಂಡು ತಮ್ಮ ಒಲಿಂಪಿಕ್ಸ್​ ಅಭಿಯಾನ ಮುಗಿಸಿದರು. ಇವರ ನಿರ್ಗಮನದೊಂದಿಗೆ ಬಾಕ್ಸಿಂಗ್​ನಲ್ಲಿ ಭಾರತ ಸ್ಪರ್ಧೆ ಕೂಡ ಕೊನೆಗೊಂಡಿತು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಲವ್ಲಿನಾ 69 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. 

Continue Reading

ಪ್ರಮುಖ ಸುದ್ದಿ

Bikini vs : Hijab : ಸ್ಪೇನ್​, ಈಜಿಪ್ಟ್​ ನಡುವಿನ ಬೀಚ್ ವಾಲಿಬಾಲ್ ಪಂದ್ಯದ ವೇಳೆ ಕಿಡಿ ಹಚ್ಚಿದ ಬಿಕಿನಿ ವರ್ಸಸ್ ಹಿಜಾಬ್​ ಚರ್ಚೆ

Paris Olympics 2024 : ಬೀಚ್​ ವಾಲಿಬಾಲ್​ ಪಂದ್ಯಕ್ಕೆ ಬಿಕಿನಿ ಕಡ್ಡಾಯ. ಅಂತೆಯೇ ಸ್ಪೇನ್​ ಆಟಗಾರರು ಬಿಕಿನಿ ಧರಿಸಿದ್ದರೆ ಈಜಿಪ್ಟ್ ಬೀಚ್ ವಾಲಿಬಾಲ್ ಆಟಗಾರರು ಹಿಜಾಬ್ ಉದ್ದನೆಯ ಕಪ್ಪು ತೋಳಿನ ಶರ್ಟ್ ಮತ್ತು ಕಪ್ಪು ಉದ್ದದ ಲೆಗ್ಗಿಂಗ್ಸ್ ಧರಿಸಿದ್ದರು. ಇದಕ್ಕೂ ಮುನ್ನ ಈಜಿಫ್ಟ್​​ನ ಬೀಚ್ ವಾಲಿಬಾಲ್ ತಂಡದ ಸದಸ್ಯರು ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ಫ್ರಾನ್ಸ್ ಹಿಜಾಬ್ ನಿಷೇಧದ ವಿರುದ್ಧ ಮಾತನಾಡಿದ್ದರು.

VISTARANEWS.COM


on

Paris Olympics 2024
Koo

ಪ್ಯಾರಿಸ್ : ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ (Paris Olympics 2024) ಕ್ರೀಡಾಕೂಟದಲ್ಲಿ ಸ್ಪೇನ್ ಮತ್ತು ಈಜಿಪ್ಟ್ ನಡುವಿನ ಬೀಚ್ ವಾಲಿಬಾಲ್ ಪಂದ್ಯವು ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಚರ್ಚೆ ಹುಟ್ಟುಹಾಕಿತು. ಇಲ್ಲಿ ಆಟಗಾರ್ತಿಯರ ಪ್ರದರ್ಶನಕ್ಕಿಂತ ಅವರ ಉಡುಪು ಹೆಚ್ಚು ಗಮನ ಸೆಳೆಯಿತು. ಯಾಕೆಂದರೆ ಇಲ್ಲಿ ಈಜಿಪ್ಟ್ ಆಟಗಾರ್ತಿಯರು ಹಿಜಾಬ್ (Bikini vs : Hijab) ಹಾಕಿಕೊಂಡು ಆಡಿದರೆ ಸ್ಪೇನ್​ನ ಆಟಗಾರ್ತಿಯರು ಮೈ ಮಾಟ ತೋರಿಸುತ್ತಾ ಬಿಕಿನಿಯಲ್ಲಿ ಆಡಿದರು.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬೀಚ್ ವಾಲಿಬಾಲ್ ಪಂದ್ಯದಲ್ಲಿ ಈಜಿಪ್ಟ್ ಮಹಿಳಾ ಬೀಚ್ ವಾಲಿಬಾಲ್ ತಂಡವು ಸ್ಪೇನ್ ವಿರುದ್ಧ ಸೆಣಸಿತು. ಇದು ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಎರಡೂ ತಂಡಗಳಿಗೆ ಅಗತ್ಯವಾಗಿದ್ದ ಹಣಾಹಣಿಯಾಗಿತ್ತು. ಆದಾಗ್ಯೂ ಇಲ್ಲಿ ಫಲಿತಾಂಶದ ಕಡಗೆ ಜನ ಗಮನ ಹರಿಸಲಿಲ್ಲ. ಉಡುಪುಗಳ ಬಗ್ಗೆ ಚರ್ಚೆ ನಡೆಯಿತು. ಪಂದ್ಯದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಂತೆ, ಎರಡೂ ತಂಡಗಳ ಉಡುಗೆಗಳಲ್ಲಿನ ವ್ಯತ್ಯಾಸವು ದೊಡ್ಡ ಚರ್ಚೆಯ ವಿಷಯವಾಯಿತು. ಇದು ಬೀಚ್ ವಾಲಿಬಾಲ್​ನಲ್ಲಿ ಕ್ರೀಡಾ ಉಡುಪು ಆಯ್ಕೆಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿತು. ಅದಕ್ಕೆ ಇನ್ನೊಂದು ಕಾರಣವೆಂದರೆ ಫ್ರಾನ್ಸ್​ನಲ್ಲಿ ಹಿಜಾಬ್ ಬ್ಯಾನ್​. ಒಲಿಂಪಿಕ್ಸ್​ಗೆ ಮೊದಲೇ ಅಲ್ಲಿ ಹಿಜಾಬ್ ಬ್ಯಾನ್ ಮಾಡಲಾಗಿತ್ತು. ಆದಾಗ್ಯೂ ಈಜಿಫ್ಟ್ ಆಟಗಾರರು ಅಲ್ಲಿ ಹಿಜಾಬ್ ಸಮೇತ ಕಣಕ್ಕೆ ಇಳಿದ ಕಾರಣ ವಿವಾದಕ್ಕೆ ಒಳಗಾಗಬೇಕಾಗಿದೆ.

ಪಂದ್ಯದಲ್ಲಿ ಸ್ಪೇನ್ ಅತ್ಯುತ್ತಮ ಕೌಶಲ್ಯಗಳನ್ನು ಪ್ರದರ್ಶಿಸಿತು. ಪಂದ್ಯವನ್ನು ನೇರ ಸೆಟ್ ಗಳಲ್ಲಿ ಗೆದ್ದಿತು. ಆದರೆ ಆನ್ ಚರ್ಚೆಯು ಆಟವನ್ನು ಮೀರಿತ್ತು. ನಿಷೇಧದಿಂದಾಗಿ ಈಜಿಪ್ಟ್ ಆಟಗಾರರು ಹಿಜಾಬ್ ಧರಿಸುವುದರ ವಿರುದ್ಧ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪೇನ್ ತಮ್ಮ ಆಟದಿಂದ ಅದ್ಭುತವಾಗಿದ್ದರೂ, ಸಾಮಾಜಿಕ ಮಾಧ್ಯಮ ಬಳಕೆದಾರರು ಸ್ಟಾರ್ ಜೋಡಿ ಲಿಲಿಯಾನಾ ಫರ್ನಾಂಡಿಸ್ ಮತ್ತು ಪೌಲಾ ಸೋರಿಯಾ ಗುಟೆರೆಜ್ ಅವರನ್ನು ಬಿಟ್ಟು ಈಜಿಫ್ಟ್ ಆಟಗಾರರ ಬಗ್ಗೆಯೇ ಚರ್ಚೆ ನಡೆಸಿದರು. ಫಲಿತಾಂಶಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಸ್ಪೇನ್ ಗುರುವಾರ ಈಜಿಪ್ಟ್ ಅನ್ನು ನೇರ ಸೆಟ್​ಗಳಿಂದ ಸೋಲಿಸಿತು.

ಬಿಕಿನಿ ಕಡ್ಡಾಯ

ಬೀಚ್​ ವಾಲಿಬಾಲ್​ ಪಂದ್ಯಕ್ಕೆ ಬಿಕಿನಿ ಕಡ್ಡಾಯ. ಅಂತೆಯೇ ಸ್ಪೇನ್​ ಆಟಗಾರರು ಬಿಕಿನಿ ಧರಿಸಿದ್ದರೆ ಈಜಿಪ್ಟ್ ಬೀಚ್ ವಾಲಿಬಾಲ್ ಆಟಗಾರರು ಹಿಜಾಬ್ ಉದ್ದನೆಯ ಕಪ್ಪು ತೋಳಿನ ಶರ್ಟ್ ಮತ್ತು ಕಪ್ಪು ಉದ್ದದ ಲೆಗ್ಗಿಂಗ್ಸ್ ಧರಿಸಿದ್ದರು. ಇದಕ್ಕೂ ಮುನ್ನ ಈಜಿಫ್ಟ್​​ನ ಬೀಚ್ ವಾಲಿಬಾಲ್ ತಂಡದ ಸದಸ್ಯರು ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ಫ್ರಾನ್ಸ್ ಹಿಜಾಬ್ ನಿಷೇಧದ ವಿರುದ್ಧ ಮಾತನಾಡಿದ್ದರು.

ಇದನ್ನೂ ಓದಿ: Paris Olympics 2024 : ಪೋಲ್ ವಾಲ್ಟ್ ‌ಪಟುವಿಗೆ ಮರ್ಮಾಘಾತ! ಪದಕ ತಪ್ಪಿಸಿದ ಮರ್ಮಾಂಗ! ವಿಡಿಯೊ ನೋಡಿ

“ನಾನು ನನ್ನ ಹಿಜಾಬ್​​ನಲ್ಲಿ ಆಡಲು ಬಯಸುತ್ತೇನೆ. ಅವರು ಬಿಕಿನಿಯಲ್ಲಿ ಆಡಲು ಬಯಸುತ್ತಾಳೆ” ಎಂದು ಈಜಿಪ್ಟ್​​ನ ದೋವಾ ಎಲ್ಘೋಬಾಶಿ ಹೇಳಿದ್ದಾರೆ. ನೀವು ನಗ್ನವಾಗಿರಲು ಅಥವಾ ಹಿಜಾಬ್ ಧರಿಸಲು ಬಯಸಿದರೆ ನಿಮ್ಮ ಆಯ್ಕೆ. ಎಲ್ಲಾ ವಿಭಿನ್ನ ಸಂಸ್ಕೃತಿಗಳು ಮತ್ತು ಧರ್ಮಗಳ ಪ್ರಾತಿನಿಧ್ಯ ಎಂದು ಅವರು ಹೇಳಿದ್ದಾರೆ.

“ಹಿಜಾಬ್ ಧರಿಸುವಂತೆ ನಾನು ನಿಮಗೆ ಹೇಳುವುದಿಲ್ಲ ಮತ್ತು ಬಿಕಿನಿ ಧರಿಸಲು ನೀವು ನನಗೆ ಹೇಳುವಂತಿಲ್ಲ. ಹೇಗೆ ಉಡುಗೆ ತೊಡಬೇಕೆಂದು ಯಾರೂ ನನಗೆ ಹೇಳಲು ಸಾಧ್ಯವಿಲ್ಲ. ನಮ್ಮದು ಸ್ವತಂತ್ರ ದೇಶ, ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ಮಾಡಲು ಅವಕಾಶ ನೀಡಬೇಕು” ಎಂದು ಅವರು ಹೇಳಿದ್ದಾರೆ.

Continue Reading

ಕ್ರೀಡೆ

Paris Olympics: ಸೆಮಿ ಫೈನಲ್​ನಲ್ಲಿ ಸೋಲು ಕಂಡ ಲಕ್ಷ್ಯ ಸೇನ್‌; ಕಂಚಿಗೆ ಸ್ಪರ್ಧೆ

Paris Olympics: ದ್ವಿತೀಯ ಗೇಮ್​ನಲ್ಲಿ ಆರಂಭದಿಂದಲೇ ಬಲಿಷ್ಠ ಹೊಡೆತಗಳ ಮೂಲಕ ಆಕ್ರಮಣಕಾರಿ ಆಟವಾಡಿದ ಸೇನ್​ 7 ಅಂಕ ಗಳಿಸುವ ತನಕ ಎದುರಾಳಿಗೆ ಅಂಕವನ್ನೇ ಬಿಟ್ಟುಕೊಡದೆ ಪ್ರಾಬಲ್ಯ ಮರೆದರು. ಆ ಬಳಿಕ ದೀಢಿರ್​ ಕುಸಿತ ಕಂಡು ಸತತವಾಗಿ ಅಂಕ ಬಿಟ್ಟುಕೊಟ್ಟು ಮತ್ತೆ ಹಿನ್ನಡೆ ಅನುಭವಿಸಿ ಸೋಲು ಕಂಡರು. ಇದು ಅಕ್ಸೆಲ್ಸೆನ್‌ ವಿರುದ್ಧ ಸೇನ್​ಗೆ ಎದುರಾದ 8ನೇ ಸೋಲು.

VISTARANEWS.COM


on

Paris Olympics: Lakshya Sen lost in the semi-final
Koo

ಪ್ಯಾರಿಸ್​: ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics) ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾರತದ ಕೊನೆಯ ಭರವಸೆಯಾಗಿ ಉಳಿದಿರುವ ಲಕ್ಷ್ಯ ಸೇನ್‌(Lakshya Sen) ಭಾನುವಾರ ನಡೆದ ಹೈವೋಲ್ಟೇಜ್​ ಸೆಮಿಫೈನಲ್‌ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ವಿಶ್ವದ ಖ್ಯಾತ ಶಟ್ಲರ್​ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌(Viktor Axelsen) ವಿರುದ್ಧ 20-22 21-14 ನೇರ ಗೇಮ್​ಗಳ ಅಂತರದಿಂದ ಸೋಲು ಕಂಡು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರೂ ಕೂಡ ಕಂಚಿನ ಪದಕ ಸ್ಪರ್ಧೆಯಲ್ಲಿ ಆಡಲಿದ್ದಾರೆ.​

ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯದ ಮೊದಲ ಗೇಮ್​ನಲ್ಲಿ ಎದುರಾಳಿ ವಿಕ್ಟರ್‌ ಅಕ್ಸೆಲ್ಸೆನ್‌ 2 ಅಂಕಗಳಿಸಿದರೂ ಖಾತೆ ತೆರೆಯದ ಲಕ್ಷ್ಯ ಸೇನ್‌ ಆ ಬಳಿಕ ಫಿನಿಕ್ಸ್​ನಂತೆ ಎದ್ದು ಬಂದು ಮುನ್ನಡೆ ಸಾಧಿಸಿದರು. 8 ಅಂಕ ಗಳಿಸುವ ತನಕ ಉಭಯ ಆಟಗಾರರು ಸಮಾನವಾಗಿ ಸಾಗಿದರು. ಈ ವೇಳೆ ಸೇನ್​ ಸತತವಾಗಿ ಅಂಕಗಳಿಸಿ ಇನ್ನೇನು ಒಂದು ಗೆಲುವು ಸಾಧಿಸುತ್ತಾರೆ ಎನುವಷ್ಟರಲ್ಲಿ 3 ಅಂಕ ಹಿನ್ನಡೆಯಲ್ಲಿದ್ದ ಅಕ್ಸೆಲ್ಸೆನ್‌ ಆಕ್ರಮಣಕಾರಿ ಆಟದ ಮೂಲಕ ಗೆಲುವು ಸಾಧಿಸಿದರು. ಗೆಲುವಿನ ಅಂತರ 22-20.

ದ್ವಿತೀಯ ಗೇಮ್​ನಲ್ಲಿ ಆರಂಭದಿಂದಲೇ ಬಲಿಷ್ಠ ಹೊಡೆತಗಳ ಮೂಲಕ ಆಕ್ರಮಣಕಾರಿ ಆಟವಾಡಿದ ಸೇನ್​ 7 ಅಂಕ ಗಳಿಸುವ ತನಕ ಎದುರಾಳಿಗೆ ಅಂಕವನ್ನೇ ಬಿಟ್ಟುಕೊಡದೆ ಪ್ರಾಬಲ್ಯ ಮರೆದರು. ಅವರ ಆಟವನ್ನು ನೋಡುವಾಗ ಈ ಗೆಮ್​ ಗೆದ್ದು 1-1 ಸಮಬಲ ಸಾಧಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಯಿತು. ಉತ್ತಮ ಸ್ಥಿತಿಯಲ್ಲಿದ್ದ ಸೇನ್​ ದೀಢಿರ್​ ಕುಸಿತ ಕಂಡು ಸತತವಾಗಿ ಅಂಕ ಬಿಟ್ಟುಕೊಟ್ಟು ಹಿನ್ನಡೆ ಅನುಭವಿಸಿ ಸೋಲು ಕಂಡರು. ಇದು ಅಕ್ಸೆಲ್ಸೆನ್‌ ವಿರುದ್ಧ ಸೇನ್​ಗೆ ಎದುರಾದ 8ನೇ ಸೋಲು.

ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಈಗಾಗಲೇ ಹಲವು ಪದಕ ಗೆದ್ದಿರುವ, 2 ಬಾರಿಯ ಚಾಂಪಿಯನ್ ಆಗಿದ್ದ ಅಕ್ಸೆಲ್ಸೆನ್‌ ವಿರುದ್ಧ ಸೇನ್​ ಗೆಲುವು ಸಾಧಿಸುವುದು ಕಷ್ಟ ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಈ ನಿರೀಕ್ಷೆಯಂತೆ ಲಕ್ಷ್ಯ ಸೋಲು ಕಂಡರು. ಈ ಹಿಂದೆ ಅಕ್ಸೆಲ್ಸೆನ್‌ ವಿರುದ್ಧ ಸೇನ್​​ ಆಡಿದ್ದ 8 ಪಂದ್ಯಗಳ ಪೈಕಿ 7ರಲ್ಲಿ ಸೋಲು ಕಂಡಿದ್ದರು.

ಲವ್ಲಿನಾಗೆ ಸೋಲು


ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದಿದ್ದ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌(Lovlina Borgohain) ಅವರು ಇಂದು(ಭಾನುವಾರ) ನಡೆದ ಮಹಿಳಾ  75 ಕೆ.ಜಿ. ವಿಭಾಗದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ವಿರುದ್ಧ 4-1 ಅಂತರದಿಂದ ಸೋಲು ಕಂಡು ತಮ್ಮ ಒಲಿಂಪಿಕ್ಸ್​ ಅಭಿಯಾನ ಮುಗಿಸಿದರು. ಇವರ ನಿರ್ಗಮನದೊಂದಿಗೆ ಬಾಕ್ಸಿಂಗ್​ನಲ್ಲಿ ಭಾರತ ಸ್ಪರ್ಧೆ ಕೂಡ ಕೊನೆಗೊಂಡಿತು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಲವ್ಲಿನಾ 69 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. 

ಕಳೆದ 16ರ ಸುತ್ತಿನ ಬಾಕ್ಸಿಂಗ್​ ಹೋರಾಟದಲ್ಲಿ ಲವ್ಲಿನಾ ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್‌ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಆದರೆ ಕ್ವಾರ್ಟರ್​ ಫೈನಲ್​ನಲ್ಲಿ ಇದೇ ಹೋರಾಟ ಮುಂದುವರಿಸುವಲ್ಲಿ ವಿಫಲರಾದರು.

Continue Reading
Advertisement
Karnataka Weather Forecast
ಮಳೆ10 mins ago

Karnataka Weather : ನಿರಂತರ ಮಳೆಗೆ ಸೋರುತ್ತಿದೆ ಸರಕಾರಿ ಶಾಲೆ ಕಟ್ಟಡ; ಮುಂದಿನ ವಾರ ಹೇಗಿರಲಿದೆ ಅಬ್ಬರ

Priyanka Goswami
ಪ್ರಮುಖ ಸುದ್ದಿ20 mins ago

Priyanka Goswami : ರೀಲ್ಸ್​ ಮಾಡೋದಲ್ಲ, ಸ್ಪರ್ಧೆಯಲ್ಲಿ ಓಡಿ ಪದಕ ಗೆಲ್ಲು; ಪ್ರಿಯಾಂಕ ಗೋಸ್ವಾಮಿಗೆ ನೆಟ್ಟಿಗರ ತಪರಾಕಿ

Health tips for Over 40 supplimnt
ಆರೋಗ್ಯ35 mins ago

Health tips for Over 40: ನಿಮಗೆ 40 ದಾಟಿತೇ? ಹಾಗಾದರೆ ಈ ಸಪ್ಲಿಮೆಂಟ್‌ಗಳು ನಿಮಗೆ ಬೇಕಾಗಬಹುದು!

Marriage
ವೈರಲ್ ನ್ಯೂಸ್36 mins ago

ಮದುವೆಯಾದ ಮೇಲೂ ಪತ್ನಿಗೆ ಹಳೇ ಲವ್ವರ್‌ ಮೇಲೆ ಮೋಹ; ಆತನೊಂದಿಗೇ ಮದುವೆ ಮಾಡಿಸಿದ ಪತಿ!

Government Job
ಕರ್ನಾಟಕ43 mins ago

Government Job: ಅಂತಾರಾಷ್ಟ್ರೀಯ ಕ್ರೀಡಾಕೂಟ ಪದಕ ಗೆದ್ದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ

Paris Olympics
ಕ್ರೀಡೆ43 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್‌ ಪದಕ ಗೆಲುವಿಗೆ ಹಿನ್ನಡೆಯಾದ ಮೊಣಕಾಲಿನ ಗಾಯ; ಕಣ್ಣೀರು ಸುರಿಸುತ್ತಾ ಸೆಮಿಯಿಂದ ಹಿಂದೆ ಸರಿದ ಮರಿನ್‌

Money Guide
ಮನಿ-ಗೈಡ್54 mins ago

Money Guide: ನೆರೆ, ಭೂಕುಸಿತದಿಂದ ನಿಮ್ಮ ಮನೆಯನ್ನು ರಕ್ಷಿಸಲು ಜಸ್ಟ್‌ ಹೀಗೆ ಮಾಡಿ ಸಾಕು

Kiran Raj Ronny releasing on August 30th
ಸ್ಯಾಂಡಲ್ ವುಡ್58 mins ago

Actor Kiran Raj: ಕಿರಣ್‌ರಾಜ್‌ `ರಾನಿ’ ಸಿನಿಮಾಗೆ ಯು/ಎ ಸರ್ಟಿಫಿಕೇಟ್; ತೆರೆಗೆ ಯಾವಾಗ?

Paris Olympics 2024
ಪ್ರಮುಖ ಸುದ್ದಿ59 mins ago

Bikini vs : Hijab : ಸ್ಪೇನ್​, ಈಜಿಪ್ಟ್​ ನಡುವಿನ ಬೀಚ್ ವಾಲಿಬಾಲ್ ಪಂದ್ಯದ ವೇಳೆ ಕಿಡಿ ಹಚ್ಚಿದ ಬಿಕಿನಿ ವರ್ಸಸ್ ಹಿಜಾಬ್​ ಚರ್ಚೆ

Cable Operators
ಸಿನಿಮಾ59 mins ago

Cable vs Ott: ಒಟಿಟಿ ಪೈಪೋಟಿ; ಕೇಬಲ್‌ ಟಿವಿ ವೀಕ್ಷಕರ ಸಂಖ್ಯೆ 12 ಕೋಟಿಯಿಂದ 9 ಕೋಟಿಗೆ ಇಳಿಕೆ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ4 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌