Viral News: 20 ವರ್ಷಗಳ ಹಿಂದೆ ಅಜ್ಜ ಖರೀದಿಸಿದ್ದ ಷೇರು; ಮೊಮ್ಮಗಳು ರಾತ್ರೋರಾತ್ರಿ ಕೋಟ್ಯಧಿಪತಿ! - Vistara News

ವೈರಲ್ ನ್ಯೂಸ್

Viral News: 20 ವರ್ಷಗಳ ಹಿಂದೆ ಅಜ್ಜ ಖರೀದಿಸಿದ್ದ ಷೇರು; ಮೊಮ್ಮಗಳು ರಾತ್ರೋರಾತ್ರಿ ಕೋಟ್ಯಧಿಪತಿ!

ಷೇರು ಮಾರುಕಟ್ಟೆಯಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಅಜ್ಜ ಮಾಡಿದ್ದ ಸಣ್ಣ ಹೂಡಿಕೆಯು ಈಗ ಅವರ ಮೊಮ್ಮಗಳನ್ನು ಕೋಟ್ಯಧಿಪತಿಯನ್ನಾಗಿ ಮಾಡಿದೆ. ಅಜ್ಜ ಈ ಷೇರುಗಳ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆದರೆ ಮನೆ ಕ್ಲೀನ್‌ ಮಾಡುವಾಗ ಇದು ಕಣ್ಣಿಗೆ ಬಿದ್ದಿತ್ತು. ಯಾವುದೇ ದಾಖಲೆ ಇಲ್ಲದ ಈ ಮೊತ್ತವನ್ನು ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಮಹಿಳೆ ಸಾಕಷ್ಟು ಪರಿಶ್ರಮ ನಡೆಸಿ ಷೇರುಗಳಿಗೆ ಸಂಬಂಧಿಸಿದ ದಾಖಲೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಪ್ಪತ್ತು ವರ್ಷಗಳ ಹಿಂದೆ ಷೇರು ಮಾರುಕಟ್ಟೆಯಲ್ಲಿ ಅಜ್ಜ ಖರೀದಿಸಿದ್ದ ಲಾರ್ಸೆನ್ ಮತ್ತು ಟೂಬ್ರೊ (L&T) ನ 500 ಷೇರುಗಳು (L&T share) ಬೆಂಗಳೂರಿನ ಮಹಿಳೆಯೊಬ್ಬರನ್ನು (bengaluru women) ಕೋಟ್ಯಧೀಶ್ವರರನ್ನಾಗಿ (millionaire women) ಮಾಡಿದೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ. ಪ್ರಿಯಾ ಶರ್ಮಾ ಅವರ ಅಜ್ಜ ಉದ್ಯಮಿಯಾಗಿದ್ದು, ಅವರು ತಮ್ಮ ಗಳಿಕೆಯ ಸ್ವಲ್ಪ ಭಾಗವನ್ನು 2004ರಲ್ಲಿ ಭಾರತದ ಆರ್ಥಿಕ ರಾಜಧಾನಿ ಮುಂಬಯಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು.

ಸುರಕ್ಷಿತ ಹೂಡಿಕೆಗಾಗಿ ಅವರು ಬ್ಲೂ-ಚಿಪ್ ನಿರ್ಮಾಣದ ಪ್ರಮುಖ ಲಾರ್ಸೆನ್ ಮತ್ತು ಟೂಬ್ರೊ (L&T) ನ 500 ಷೇರುಗಳನ್ನು ಖರೀದಿ ಮಾಡಿದ್ದರು. ಬಳಿಕ ಅವರು ಅದನ್ನು ಮರೆತೇ ಬಿಟ್ಟಿದ್ದರು. ಅವರ ಮರಣದ ಬಳಿಕವೂ ಯಾರೂ ಇದನ್ನು ಗಮನಿಸಿರಲಿಲ್ಲ. ಸಾಕಷ್ಟು ಸಮಯ ಕಳೆದಿದ್ದು, ಎಲ್ ಆಂಡ್ ಟಿ ಷೇರುಗಳಲ್ಲಿನ ಹೂಡಿಕೆಯ ಮೌಲ್ಯವು ಬೆಳೆಯುತ್ತಲೇ ಇತ್ತು.

ಬೆಂಗಳೂರಿನಲ್ಲಿ ನೆಲೆಸಿದ್ದ ಹೂಡಿಕೆದಾರರ ಮೊಮ್ಮಗಳು ಪ್ರಿಯಾ ಅವರು 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅಜ್ಜನ ಕೆಲವು ದಾಖಲೆಗಳನ್ನು ನೋಡುತ್ತಿದ್ದಾಗ ಅಜ್ಜ ಷೇರು ಖರೀದಿ ಮಾಡಿರುವುದು ಗೊತ್ತಾಗಿದೆ. ಆದರೆ ಪ್ರಿಯಾ ಅವರು 500 ಎಲ್ ಆಂಡ್ ಟಿ ಷೇರುಗಳ ವಾರಸುದಾರಿಕೆಯಲ್ಲಿ ಸುಲಭವಾಗಿ ಪಡೆಯಲು ಆಗಿರಲಿಲ್ಲ. ಸ್ಟಾಕ್ ವಿಭಜನೆ ಮತ್ತು ಬೋನಸ್ ಷೇರುಗಳ ಕಾರಣದಿಂದಾಗಿ ಅವರೀಗ 4,500 ಷೇರುಗಳನ್ನು ಈಗ ಸ್ವೀಕರಿಸಿದ್ದಾರೆ. ಇವುಗಳ ಮೌಲ್ಯ 1.72 ಕೋಟಿ ರೂ. ಆಗಿದೆ.


ತನ್ನಲ್ಲಿರುವ ಸಂಪತ್ತನ್ನು ಹೆಚ್ಚಿಸಲು ಕಂಪನಿಯು ತನ್ನ ಬಾಕಿ ಉಳಿದಿರುವ ಷೇರುಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಸ್ಟಾಕ್ ವಿಭಜನೆಯಾಗುತ್ತದೆ. 1:2 ವಿಭಜನೆಯಲ್ಲಿ ಪ್ರತಿ ಷೇರನ್ನು ಎರಡಾಗಿ ವಿಂಗಡಿಸಲಾಗಿದೆ. ಹೂಡಿಕೆಯ ಮೌಲ್ಯವನ್ನು ಬದಲಾಯಿಸದೆ ಷೇರುದಾರರ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ದ್ವಿಗುಣಗೊಳಿಸುತ್ತದೆ.

ಬೋನಸ್ ಷೇರುಗಳು, ಮತ್ತೊಂದೆಡೆ, ಅಸ್ತಿತ್ವದಲ್ಲಿರುವ ಷೇರುದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೆಚ್ಚುವರಿ ಷೇರುಗಳನ್ನು ನೀಡುತ್ತದೆ. ಇದು ಈಗಾಗಲೇ ಮಾಲೀಕತ್ವದ ಷೇರುಗಳ ಸಂಖ್ಯೆಯನ್ನು ಆಧರಿಸಿವೆ.
ಎಲ್ ಆಂಡ್ ಟಿ ಷೇರುಗಳ ಸಂಖ್ಯೆಯಲ್ಲಿ 500 ರಿಂದ 4,500 ಕ್ಕೆ ಒಂಬತ್ತು ಪಟ್ಟು ಹೆಚ್ಚಳವಾಗಿರುವುದು ಮಾತ್ರವಲ್ಲ ಅವುಗಳ ಮೌಲ್ಯವೂ ಬೆಳೆದಿದೆ. ಷೇರುಗಳ ಮೌಲ್ಯ ಸುಮಾರು 1.72 ಕೋಟಿ ರೂ. ಆಗಿದ್ದು, ರಾತ್ರೋರಾತ್ರಿ ಪ್ರಿಯಾ ಶರ್ಮಾ ಕೋಟ್ಯಧಿಪತಿಯಾಗಿದ್ದಾರೆ. ಆದರೆ ಇದನ್ನು ಪಡೆಯುವುದು ಅಷ್ಟೊಂದು ಸುಲಭವಾಗಿರಲಿಲ್ಲ.

ಬೆಂಗಳೂರಿನಲ್ಲಿ ನೆಲೆಸಿರುವ ಪ್ರಿಯಾ ತಮ್ಮ ಅಜ್ಜನ ದಾಖಲೆಗಳನ್ನು ಪಡೆಯಲು ಸಾಕಷ್ಟು ಸವಾಲುಗಳನ್ನು ಎದುರಿಸಿದರು. ಪ್ರಿಯಾ ಅವರ ಅಜ್ಜನ ಉಯಿಲು ಸೇರಿದಂತೆ ಅನೇಕ ದಾಖಲೆಗಳ ಪರಿಶೀಲನೆ ಬಳಿಕವೂ ಸಾಕಷ್ಟು ತೊಡಕುಗಳು ಎದುರಾಗಿತ್ತು.

ಇದನ್ನು ಓದಿ: Ayodhya: ಅಯೋಧ್ಯೆಗೆ ವಿಮಾನ ತಲುಪುತ್ತಲೇ ಭೂಮಿಗೆ ನಮಸ್ಕರಿಸಿದ ಗಗನಸಖಿ; ಭುಗಿಲೆದ್ದಿತು ವಿವಾದ!

ಕಾನೂನಿನ ನೆರವು ಪಡೆದುಕೊಂಡ ಪ್ರಿಯಾ ಅವರು ಷೇರು ಪ್ರಮಾಣಪತ್ರದಲ್ಲಿನ ಹೆಸರು ಮತ್ತು ಪ್ರಿಯಾ ಅವರ ಅಜ್ಜನ ಅಧಿಕೃತ ದಾಖಲೆಗಳ ನಡುವಿನ ವ್ಯತ್ಯಾಸವನ್ನು ಸರಿಪಡಿಸಲು ಸಾಕಷ್ಟು ಹೋರಾಟ ಮಾಡಬೇಕಾಯಿತು. ಕೊನೆಗೆ ಸುಮಾರು ಒಂದು ವರ್ಷದ ಸತತ ಪ್ರಯತ್ನದ ಅನಂತರ ಪ್ರಿಯಾ ಅವರು ಎಲ್ ಆಂಡ್ ಟಿ ನಿಂದ ಅಜ್ಜನ ಪ್ರಮಾಣ ಪತ್ರದ ದಾಖಲೆಯನ್ನು ಪಡೆದಳು. ಇದರಿಂದ ಆಕೆ ಈಗ ಕೋಟ್ಯಧಿಪತಿಯಾಗಿದ್ದಾಳೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಇಸ್ರೇಲಿ ಅಪಹೃತನ ಮೃತ ದೇಹವನ್ನು ನಡುಬೀದಿಯಲ್ಲಿ ಒದ್ದ ಪ್ಯಾಲೆಸ್ತೀನ್‌ ಜನ!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ (Viral Video), ಹಮಾಸ್ ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿಯ ಮೃತ ದೇಹವನ್ನು ಲಗೇಜ್‌ನಂತೆ ವಾಹನದ ಹಿಂಭಾಗದಲ್ಲಿ ಹಾಕಿ ಗಾಜಾಕ್ಕೆ ಎಳೆದುಕೊಂಡು ಹೋಗುವುದು ಕಾಣಿಸುತ್ತದೆ. ಗಾಜಾದಲ್ಲಿ ನಾಗರಿಕರ ಗುಂಪು ಕಾರನ್ನು ಹಿಂಬಾಲಿಸಿ, ಆ ದೇಹವನ್ನು ರಸ್ತೆಗೆ ಎಳೆದು ಒದೆಯುತ್ತಿರುವ ದೃಶ್ಯ ಆಘಾತ ಮೂಡಿಸುತ್ತದೆ.

VISTARANEWS.COM


on

By

Viral Video
Koo

ಹತ್ಯೆಗೀಡಾದ ಹಮಾಸ್ ಒತ್ತೆಯಾಳುವಿನ (Hamas hostage) ದೇಹವನ್ನು ನಡು ರಸ್ತೆಯಲ್ಲಿ ಗಾಜಾ ನಾಗರಿಕರು (Gaza civilians) ಒದೆಯುವ, ನಿಂದಿಸುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಹತ್ಯೆಗೀಡಾದ ಹಮಾಸ್ ಒತ್ತೆಯಾಳು ಐಟಾನ್ ಲೆವಿಯ ಕುಟುಂಬವು ಇದನ್ನು ಹಂಚಿಕೊಂಡು ತೀವ್ರ ದುಃಖ ವ್ಯಕ್ತಪಡಿಸಿದೆ.

ಈ ವಿಡಿಯೋ ತುಣುಕನ್ನು ಯೋಸೆಫ್ ಹಡ್ಡಾಡ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ 7ರಂದು ಈಟಾನ್ ಲೆವಿಯ ಅಪಹರಣದ ಆಘಾತಕಾರಿ ವಿಡಿಯೋ ಇದಾಗಿದೆ. ಅವರನ್ನು ಗಾಜಾಕ್ಕೆ ಅಪಹರಿಸಿ ಅಲ್ಲಿ ಮಸೀದಿಯ ಪ್ಲಾಜಾದಲ್ಲಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ.

ಇವರು ಗಾಜಾದ ಮುಗ್ಧ ನಾಗರಿಕರು. 43 ವಾರಗಳು ಕಳೆದಿವೆ. ಆದರೆ ಇವರನ್ನು ನಾವು ಮರೆಯುವುದಿಲ್ಲ. ಎಲ್ಲಾ ಒತ್ತೆಯಾಳುಗಳನ್ನು ಹಿಂತಿರುಗಿಸಬೇಕು. ಸಾವಿಗೆ ಕಾರಣರಾದ ಪ್ರತಿಯೊಬ್ಬರನ್ನೂ ನಾಶಪಡಿಸಬೇಕು ಎಂದು ಹಡ್ಡಾಡ್ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ವಿಡಿಯೋದಲ್ಲಿ ಲೆವಿಯ ದೇಹವನ್ನು ವಾಹನದ ಹಿಂಭಾಗದಲ್ಲಿ ಲಗೇಜ್‌ನಂತೆ ಅಮಾನುಷವಾಗಿ ಹಾಕಿ ಗಾಜಾಕ್ಕೆ ಎಳೆದುಕೊಂಡು ಹೋಗುವುದು ಕಾಣಿಸುತ್ತದೆ. ಗಾಜಾದಲ್ಲಿ ನಾಗರಿಕರ ಗುಂಪು ಕಾರನ್ನು ಹಿಂಬಾಲಿಸುವುದು ಕಂಡುಬರುತ್ತದೆ. ಲೆವಿಯ ನಿರ್ಜೀವ ದೇಹವನ್ನು ಜನ ಮುಗಿಬಿದ್ದು ತುಳಿಯುವುದನ್ನು ದೃಶ್ಯಗಳಲ್ಲಿ ಕಾಣಬಹುದು.

52 ವರ್ಷದ ಲೆವಿ ಅವರು ಬ್ಯಾಟ್ ಯಾಮ್‌ನ ಟ್ಯಾಕ್ಸಿ ಡ್ರೈವರ್ ಆಗಿದ್ದರು. ಕಳೆದ ವರ್ಷ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಪ್ರಯಾಣಿಕರನ್ನು ಬಿಡಲು ಕಿಬ್ಬುಟ್ಜ್ ಬೀರಿಯಲ್ಲಿದ್ದರು. ಅವರಿಗೆ ನಿಖರವಾಗಿ ಏನಾಯಿತು ಎಂಬುದು ಅಸ್ಪಷ್ಟವಾಗಿದೆ. ಆದರೆ ಹಮಾಸ್ ಭಯೋತ್ಪಾದಕರು ಅವರನ್ನು ಹೊರಹೋಗದಂತೆ ತಡೆದಿದ್ದಾರೆ. ಅವರ ಕ್ಯಾಬ್‌ ಡ್ರೋನ್ ಅಥವಾ ಕ್ಷಿಪಣಿ ದಾಳಿಗೆ ತುತ್ತಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.


ಲೆವಿ ವಿಡಿಯೋ ನೋಡಿ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಮೃತ ದೇಹವನ್ನು ಒದೆಯುವುದು ಮನುಷ್ಯ ಮಾಡಬಹುದಾದ ಅತ್ಯಂತ ಹೇಡಿತನದ ಕೆಲಸ. ಇದು ತುಂಬಾ ಕೆಟ್ಟದು ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Ismail Haniyh Killing: ಹನಿಯೆಹ್‌ ಹತ್ಯೆ ಹಿಂದೆ ಇಸ್ರೇಲ್‌ನ ಮಾಸ್ಟರ್‌ ಪ್ಲ್ಯಾನ್‌? ಮೊಸಾದ್‌ನ ಸೀಕ್ರೆಟ್‌ ಏಜೆಂಟ್‌ಗಳಿಂದ ಬಾಂಬ್‌ ಸ್ಫೋಟ?

ಮತ್ತೊಬ್ಬರು ಭಯೋತ್ಪಾದನೆಯ ವಿರುದ್ಧದ ಅತ್ಯಂತ ನ್ಯಾಯಯುತವಾದ ಯುದ್ಧದಲ್ಲಿ ಇಸ್ರೇಲ್ ನೊಂದಿಗೆ ನಿಂತುಕೊಳ್ಳಿ ಎಂದು ಕರೆ ನೀಡಿದ್ದಾರೆ. ಈ ದುಷ್ಕರ್ಮಿಗಳು ತಮ್ಮ ಅಪರಾಧಗಳನ್ನು ಮಾಡುವಾಗ ಪ್ರದರ್ಶಿಸುವ ಉಲ್ಲಾಸ ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಇದು ಯಾವುದೇ ರೀತಿಯ ಸಾಮಾನ್ಯ ಮಾನವೀಯತೆಯಲ್ಲ. ಕ್ರೂರತೆಯಿಂದ ಕೂಡಿದೆ ಎಂದು ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ. ಭಯಾನಕ ಮತ್ತು ಕ್ಷಮಿಸಲಾಗದು ಎಂದು ಮತ್ತೊಬ್ಬರು ಹೇಳಿದ್ದು, ಗಾಜಾದ ಈ ʼಮುಗ್ಧ ನಾಗರಿಕರುʼ ಎಷ್ಟು ಕ್ರೂರರು, ಎಂತಹ ಅನಾಗರಿಕ ಸಂಸ್ಕೃತಿ ಹೊಂದಿರುವವರು ಎಂದು ಇನ್ನೊಬ್ಬರು ವ್ಯಂಗ್ಯವಾಗಿ ಹೇಳಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಉಂಗಾರ್ ರಸ್ತೆಯ ಬೋರ್ನ್ ಘಾಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವತಿ 100 ಅಡಿ ಆಳದ ಕಮರಿಗೆ ಬಿದ್ದು ಗಾಯಗೊಂಡಿದ್ದಾಳೆ. ಸ್ಥಳೀಯರು ಹಗ್ಗವನ್ನು ಬಳಸಿ ಆಕೆಯನ್ನು ರಕ್ಷಿಸಿದ್ದು, ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೊ ಸೆಲ್ಫಿ ಶೋಕಿ ಹೊಂದಿರುವವರಿಗೆ ಎಚ್ಚರಿಕೆಯ ಪಾಠವಾಗಿದೆ.

VISTARANEWS.COM


on

By

Viral Video
Koo

ಸತಾರಾ: ಸೆಲ್ಫಿ ತೆಗೆದುಕೊಳ್ಳುವಾಗ (Taking Selfie) ಯುವತಿಯೊಬ್ಬಳು 100 ಅಡಿ ಆಳದ ಕಮರಿಗೆ ಬಿದ್ದಿರುವ ಘಟನೆ ಮಹಾರಾಷ್ಟ್ರದ ಸತಾರಾ (Maharashtra’s Satara district) ಜಿಲ್ಲೆಯ ಉಂಗಾರ್ ರಸ್ತೆಯ ಬೋರ್ನ್ ಘಾಟ್‌ನಲ್ಲಿ ನಡೆದಿದೆ. ಭಾರೀ ಮಳೆಯಾಗುತ್ತಿರುವ ಪ್ರದೇಶಕ್ಕೆ ಅವರು ಶನಿವಾರ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಸ್ಥಳೀಯರು ಹಗ್ಗವನ್ನು ಬಳಸಿ ಆಕೆಯನ್ನು ರಕ್ಷಿಸಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಥಳೀಯರು ದಪ್ಪ ಹಗ್ಗವನ್ನು ಕಮರಿಗೆ ಎಸೆದಿದ್ದು ಮಹಿಳೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ವ್ಯಕ್ತಿಯೊಬ್ಬರು ಇಳಿಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಮರಳಿ ಕರೆತರುವಾಗ ಆಕೆ ನೋವಿನಿಂದ ಅಳುವುದು ಕೇಳುತ್ತದೆ. ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗೆ ತೀವ್ರ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಆದರೆ ಅಪಾಯದಿಂದ ಪಾರಾಗಿದ್ದಾಳೆ.


ಇನ್ನೊಂದು ಘಟನೆಯಲ್ಲಿ ಮಹಿಳೆ ಸಾವು

ಇತ್ತೀಚೆಗೆ ನಡೆದ ಇನ್ನೊಂದು ಘಟನೆಯಲ್ಲಿ ಮುಂಬಯಿ ನಿವಾಸಿ ಮತ್ತು ಪ್ರಸಿದ್ಧ ಪ್ರವಾಸಿ ಪ್ರಭಾವಿ ಆನ್ವಿ ಕಾಮ್ದಾರ್ (26) ಅವರು ಮಹಾರಾಷ್ಟ್ರದ ರಾಯಗಢ ಬಳಿಯ ಕುಂಭೆ ಜಲಪಾತದಲ್ಲಿ ಇನ್ ಸ್ಟಾಗ್ರಾಮ್ ರೀಲ್ ಮಾಡುತ್ತಿದ್ದಾಗ ಕಮರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಯಾಣದ ವಿಷಯಕ್ಕಾಗಿ ಆನ್ವಿ ಪ್ರಸಿದ್ಧರಾಗಿದ್ದರು. ಜುಲೈ 16ರಂದು ತಮ್ಮ ಸ್ನೇಹಿತರೊಂದಿಗೆ ಚಿತ್ರೀಕರಣ ಮಾಡುವಾಗ 350 ಅಡಿ ಆಳದ ಕಮರಿಗೆ ಬಿದ್ದಿದ್ದಾರೆ.

ಕೋಸ್ಟ್ ಗಾರ್ಡ್ ಮತ್ತು ಸ್ಥಳೀಯ ರಕ್ಷಣಾ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಯನ್ನು ವೇಗವಾಗಿ ನಡೆಸಿತ್ತು. ಸುಮಾರು ಆರು ಗಂಟೆಗಳ ಅನಂತರ ಅಣ್ವಿಯನ್ನು ರಕ್ಷಿಸಲಾಯಿತು. ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮದುವೆಯಾದ ಮೇಲೂ ಪತ್ನಿಗೆ ಹಳೇ ಲವ್ವರ್‌ ಮೇಲೆ ಮೋಹ; ಆತನೊಂದಿಗೇ ಮದುವೆ ಮಾಡಿಸಿದ ಪತಿ!

ಅವರು ಬಿದ್ದ ಮಾಹಿತಿ ತಿಳಿದ ಸ್ಥಳೀಯ ರಕ್ಷಕರು ಸುಮಾರು 15 ನಿಮಿಷಗಳಲ್ಲಿ ಬಿದ್ದ ಸ್ಥಳವನ್ನು ತಲುಪಿದ್ದರು. ಅವರು ಬಿದ್ದ ಸ್ಥಳ ತಲುಪುವಾಗ ದೊಡ್ಡ ಕಲ್ಲುಗಳು ಅವರ ಮೇಲೆ ಬೀಳುವುದರಲ್ಲಿತ್ತು. ಆದರೆ ಭಾರಿ ಅನಾಹುತ ಆ ಕ್ಷಣದಲ್ಲಿ ತಪ್ಪಿತ್ತು. ಆರಂಭದಲ್ಲಿ ರಕ್ಷಕರು ಅವರು ಸತ್ತಿರಬಹುದು ಎಂದು ಭಾವಿಸಿದ್ದರು. ಆದರೆ ಪರೀಕ್ಷಿಸಿದಾಗ ಅವರು ಇನ್ನೂ ಉಸಿರಾಡುತ್ತಿರುವುದನ್ನು ಗಮನಿಸಿ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲಾಯಿತು. ಸ್ವಲ್ಪ ದೂರದವರೆಗೆ ಅವರನ್ನು ಸ್ಟ್ರೆಚರ್‌ನಲ್ಲಿ ಹೊತ್ತೊಯ್ದು ಅನಂತರ ಹಗ್ಗದ ಮೂಲಕ ಮೇಲಕ್ಕೆ ಎತ್ತಲಾಗಿತ್ತು. ಬಳಿಕ ಅವರನ್ನು ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಮೂರ್ಛೆ ಹೋದ ವರ! ವಿಡಿಯೊ ನೋಡಿ

ಮದುವೆ ಮಂಟಪದಲ್ಲಿ ಗೆಳೆಯನ ಮಾತು ಕೇಳಿ ವರ ಕುಸಿದು ಬಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ಅನಿರೀಕ್ಷಿತ ಘಟನೆಯ ವಿಡಿಯೊ ಅಚ್ಚರಿ ಉಂಟು ಮಾಡುತ್ತದೆ. ಇನ್ನೇನು ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ವರ ಮೂರ್ಛೆ ಹೋಗುತ್ತಾನೆ. ಇದನ್ನು ಕಂಡು ವಧು ಮೂಕಳಾಗಿ ನಿಂತಿರುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸರಣ ಆಗುತ್ತಿದೆ. ಈ ವಿಡಿಯೊ ಸಾಕಷ್ಟು ಕುತೂಹಲ ಮೂಡಿಸಿದೆ. ವರನಿಗೆ ಗೆಳೆಯ ಏನು ಹೇಳಿರಬಹುದು ಎಂಬ ಬಗ್ಗೆ ಜನ ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

By

Viral Video
Koo

ಮದುವೆ (marriage) ಎಲ್ಲರ ಬದುಕಿನ ಅತ್ಯಂತ ಸುಂದರ ಕ್ಷಣವಾಗಿರುತ್ತದೆ. ಬದುಕಿನ ಹೊಸ ಅಧ್ಯಾಯ (new life) ಪ್ರಾರಂಭಿಸುವ ದಂಪತಿ ಒಟ್ಟಿಗೆ ಭವಿಷ್ಯದ ಕನಸು ಹೊತ್ತು ಸತಿಪತಿಯಾಗುವ ವಿಧಿವಿಧಾನಗಳನ್ನು ಪೂರೈಸುತ್ತಿರುತ್ತಾರೆ. ಕೆಲವರಿಗೆ ಈ ದಿನ ಅನಿರೀಕ್ಷಿತ ಮತ್ತು ಆಘಾತಕಾರಿ ನೆನಪುಗಳಾಗುತ್ತದೆ. ಇಂತಹ ಒಂದು ಘಟನೆ ನಡೆದ ವಿಡಿಯೋವೊಂದು ಇನ್‌ಸ್ಟಾಗ್ರಾಮ್‌ನಲ್ಲಿ (instagram) ವೈರಲ್ (Viral Video) ಆಗಿದೆ.

ಈ ಅನಿರೀಕ್ಷಿತ ಘಟನೆಯ ವಿಡಿಯೊ ಅಚ್ಚರಿ ಉಂಟು ಮಾಡುತ್ತದೆ. ಇನ್ನೇನು ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ವರ ಮೂರ್ಛೆ ಹೋಗುತ್ತಾನೆ. ಇದನ್ನು ಕಂಡು ವಧು ಮೂಕಳಾಗಿ ನಿಂತಿರುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸರಣ ಆಗುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಹಾರ ವಿನಿಮಯ ಸಮಾರಂಭವನ್ನು ತೋರಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಅತಿಥಿಗಳು, ವಧು ಮತ್ತು ವರನ ಸಂಬಂಧಿಕರು ಈ ಮಹತ್ವದ ಸಂದರ್ಭವನ್ನು ಉತ್ಸಾಹದಿಂದ ನೋಡುತ್ತಿದ್ದರು. ಅನಿರೀಕ್ಷಿತವಾಗಿ ವರನ ಬಳಿಗೆ ಯುವಕನೊಬ್ಬ ಬಂದು ಅವನ ಕಿವಿಯಲ್ಲಿ ಏನೋ ಪಿಸುಗುಟ್ಟುತ್ತಾನೆ. ಅವನು ಕೇಳುವುದನ್ನು ಸಹಿಸಲಾರದ ಕಾರಣ ವರನು ಆಘಾತಕ್ಕೆ ಒಳಗಾದಂತೆ ಕುಸಿದು ಬೀಳುತ್ತಾನೆ. ವರ ನೆಲದ ಮೇಲೆ ಕುಸಿದು ಬೀಳುವುದನ್ನು ನೋಡಿ ಸುತ್ತಮುತ್ತ ಇದ್ದವರು ಗಾಬರಿಯಾಗುತ್ತಾರೆ. ವಧು ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚದೆ ನಿಂತಿದ್ದು ಗಮನ ಸೆಳೆಯುತ್ತದೆ.


ವೈರಲ್ ಆಗಿರುವ ಈ ವಿಡಿಯೋ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. 2022ರ ಜುಲೈ 11ರಂದು ಹಂಚಿಕೊಂಡಿರುವ ಈ ವಿಡಿಯೋ ಎರಡು ವರ್ಷಗಳಷ್ಟು ಹಳೆಯದಾಗಿದ್ದರೂ ಈಗ ಅದು ವೈರಲ್ ಆಗುತ್ತಿದೆ. ಸಾಕಷ್ಟು ವೀಕ್ಷಣೆಗಳು ಮತ್ತು ಕಾಮೆಂಟ್‌ಗಳನ್ನು ಪಡೆದಿದೆ. ಸಾಕಷ್ಟು ಮಂದಿ ಯುವಕ ವರನಿಗೆ ಏನು ಹೇಳಿರಬಹುದು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: 20 ವರ್ಷಗಳ ಹಿಂದೆ ಅಜ್ಜ ಖರೀದಿಸಿದ್ದ ಷೇರು; ಮೊಮ್ಮಗಳು ರಾತ್ರೋರಾತ್ರಿ ಕೋಟ್ಯಧಿಪತಿ!

ವಿಡಿಯೋ ನೋಡಿ ಸಾಕಷ್ಟು ನೆಟ್ಟಿಗರು ಪ್ರಶ್ನೆಗಳನ್ನು ಕೇಳಿದ್ದು, ಊಹಾಪೋಹಗಳನ್ನು ಬರೆಯುತ್ತಿದ್ದಾರೆ. ಹೆಚ್ಚಿನವರು ವರನ ಮೂರ್ಛೆಗೆ ಕಾರಣವಾದ ಪಿಸುಮಾತಿನ ವಿಷಯದ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದಾರೆ. ವರನು ಮದುವೆಯಾಗಲಿರುವ ಮಹಿಳೆಯ ಬಗ್ಗೆ ಸ್ನೇಹಿತನು ರಹಸ್ಯವನ್ನು ಬಹಿರಂಗಪಡಿಸಿದ. ಇದರಿಂದಾಗಿ ಅವನು ಮೂರ್ಛೆ ಹೋಗುತ್ತಾನೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ವರನ ಹಿಂದಿನ ಪ್ರೇಮಿಯ ಕುರಿತು ಹೇಳಿರಬಹುದು ಎಂದು ತಿಳಿಸಿದ್ದಾರೆ. ಮದುವೆಯಲ್ಲಿ ಈ ಅನಿರೀಕ್ಷಿತ ಟ್ವಿಸ್ಟ್ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ, ಸಂತೋಷದ ಸಂದರ್ಭವನ್ನು ಅವ್ಯವಸ್ಥೆ ಮತ್ತು ಗೊಂದಲದ ಕ್ಷಣವಾಗಿ ಪರಿವರ್ತಿಸಿದೆ.

Continue Reading

ವೈರಲ್ ನ್ಯೂಸ್

ಮದುವೆಯಾದ ಮೇಲೂ ಪತ್ನಿಗೆ ಹಳೇ ಲವ್ವರ್‌ ಮೇಲೆ ಮೋಹ; ಆತನೊಂದಿಗೇ ಮದುವೆ ಮಾಡಿಸಿದ ಪತಿ!

ಚಂದನ್‌ ಹಾಗೂ ಖುಷ್ಬೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಸ್ನೇಹಿತರಾದ ಕೆಲವೇ ವರ್ಷಗಳಲ್ಲಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪರಿಸ್ಥಿತಿಯ ಒತ್ತಡಕ್ಕೋ, ಮನೆಯವರ ಒತ್ತಾಯಕ್ಕೋ ಮಣಿದಿದ್ದ ಖುಷ್ಬೂ, ರಾಜೇಶ್‌ ಕುಮಾರ್‌ನನ್ನು ಮದುವೆಯಾಗಿದ್ದಳು. ಆದರೂ, ಮಾಜಿ ಪ್ರೇಮಿಯನ್ನು ಖುಷ್ಬೂ ಮರೆತಿರಲಿಲ್ಲ.

VISTARANEWS.COM


on

Marriage
Koo

ಪಟನಾ: ಮದುವೆಯಾದ ಮೇಲೆ ಹೆಂಡತಿ ಮೇಲೆ ಸುಖಾಸುಮ್ಮನೆ ಅನುಮಾನ ಪಡುವವರಿದ್ದಾರೆ. ಹಾಗೊಂದು, ವೇಳೆ ಹೆಂಡತಿಗೆ ಮದುವೆಯಾದ ಮೇಲೂ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡರೆ ಆಕೆಯ ಮೇಲೆ ಹಲ್ಲೆ ನಡೆಸುವ, ಕೆಲವೊಮ್ಮೆ ಕೊಲೆಯನ್ನೂ ಮಾಡುವ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಆದರೆ, ಬಿಹಾರದಲ್ಲೊಬ್ಬ (Bihar) 26 ವರ್ಷದ ವ್ಯಕ್ತಿಯು ಮದುವೆಯಾದ ಬಳಿಕ ಹೆಂಡತಿಯನ್ನು ಆಕೆಯ ಮಾಜಿ ಪ್ರಿಯತಮನೊಂದಿಗೆ ಮದುವೆ ಮಾಡಿಸಿದ್ದಾನೆ. ಈ ಸುದ್ದಿ ಈಗ ವೈರಲ್‌ (Viral News) ಆಗಿದೆ.

ಬಿಹಾರದ ರಾಮನಗರ ಗ್ರಾಮದ ನಿವಾಸಿಯಾದ ರಾಜೇಶ್‌ ಕುಮಾರ್‌ ಎಂಬಾತನೇ ಹೆಂಡತಿಯನ್ನು ಆಕೆಯ ಮಾಜಿ ಪ್ರಿಯತನಮ ಜತೆ ಜೀವನ ಸಾಗಿಸಿಲು ಅವಕಾಶ ಮಾಡಿಕೊಟ್ಟಿದ್ದಾನೆ. ಕೆಲ ದಿನಗಳ ಹಿಂದಷ್ಟೇ ರಾಜೇಶ್‌ ಕುಮಾರ್‌ ಮನೆಯಲ್ಲಿ ಇಲ್ಲದಿದ್ದಾಗ ಆತನ ಪತ್ನಿ ಖುಷ್ಬೂ (22) ಮಾಜಿ ಪ್ರಿಯತಮ ಚಂದನ್‌ನನ್ನು (24) ಮನೆಗೆ ಕರೆಸಿದ್ದಳು. ಇಬ್ಬರೂ ಮನೆಯಲ್ಲಿ ಸರಸವಾಡುತ್ತಿದ್ದಾಗಲೇ ರಾಜೇಶ್‌ ಕುಮಾರ್‌ ಮನೆಗೆ ಬಂದಿದ್ದಾನೆ. ಆಗ ಇಬ್ಬರ ಪ್ರೇಮಪುರಾಣ ಬಯಲಾಗಿದೆ.

ಪತ್ನಿಯು ತನಗೆ ಮೋಸ ಮಾಡಿದಳು, ಅಕ್ರಮ ಸಂಬಂಧ ಹೊಂದಿದಳು ಎಂದು ಗಲಾಟೆ ಮಾಡದ, ಚಂದನ್‌ ಮೇಲೆ ಹಲ್ಲೆ ನಡೆಸದ, ಕೋಪದ ಕೈಗೆ ಬುದ್ಧಿ ಕೊಡದ ರಾಜೇಶ್‌ ಕುಮಾರ್‌, ಖುಷ್ಬೂ ಹಾಗೂ ಚಂದನ್‌ರ ಮದುವೆ ಮಾಡಿಸಿದ್ದಾರೆ. ಇಡೀ ಗ್ರಾಮದ ಜನರನ್ನು ಕರೆಸಿ, ಅವರನ್ನು ಸ್ಥಳೀಯ ದೇವಾಲಯಕ್ಕೆ ಕರೆದುಕೊಂಡು ಹೋಗಿ, ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಮದುವೆ ಮಾಡಿಸಿದ ಬಳಿಕ ಅವರಿಗೆ ಶುಭ ಹಾರೈಸಿ, ಬೀಳ್ಕೊಟ್ಟಿದ್ದಾರೆ.

ಚಂದನ್‌ ಹಾಗೂ ಖುಷ್ಬೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಸ್ನೇಹಿತರಾದ ಕೆಲವೇ ವರ್ಷಗಳಲ್ಲಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪರಿಸ್ಥಿತಿಯ ಒತ್ತಡಕ್ಕೋ, ಮನೆಯವರ ಒತ್ತಾಯಕ್ಕೋ ಮಣಿದಿದ್ದ ಖುಷ್ಬೂ, ರಾಜೇಶ್‌ ಕುಮಾರ್‌ನನ್ನು ಮದುವೆಯಾಗಿದ್ದರು. ಆದರೆ, ಮದುವೆಯಾದ ಬಳಿಕವೂ ಚಂದನ್‌ ಜತೆ ಖುಷ್ಬೂ ಸಂಪರ್ಕದಲ್ಲಿದ್ದಳು. ರಾಜೇಶ್‌ ಕುಮಾರ್‌ ಇಲ್ಲದಿದ್ದಾಗ ಚಂದನ್‌ ಮನೆಗೆ ಬರುತ್ತಿದ್ದ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಪತ್ನಿಯ ಸಂಬಂಧದ ಬಳಿಕವೂ ಗಲಾಟೆ, ಜಗಳ ಮಾಡಿಕೊಳ್ಳದ ರಾಜೇಶ್‌, ಆಕೆಯನ್ನು ಬೀಳ್ಕೊಟ್ಟಿರುವ ಸಮಾಧಾನದ ಗುಣಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪತ್ನಿ ಇದ್ದರೂ ಮಹಿಳಾ ಇನ್ಸ್‌ಪೆಕ್ಟರ್‌ ಜತೆ ವ್ಯಕ್ತಿ ಸರಸ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತ್ನಿ ಮಾಡಿದ್ದೇನು? Video ಇದೆ

Continue Reading
Advertisement
Viral Video
ವೈರಲ್ ನ್ಯೂಸ್9 mins ago

Viral Video: ಇಸ್ರೇಲಿ ಅಪಹೃತನ ಮೃತ ದೇಹವನ್ನು ನಡುಬೀದಿಯಲ್ಲಿ ಒದ್ದ ಪ್ಯಾಲೆಸ್ತೀನ್‌ ಜನ!

Krishnam Pranaya Sakhi
ಸಿನಿಮಾ39 mins ago

Krishnam Pranaya Sakhi: ಕೃಷ್ಣಂ ಪ್ರಣಯ ಸಖಿ ಸಿನಿಮಾದ 4ನೇ ಹಾಡು ಔಟ್;‌ ರೊಮ್ಯಾಂಟಿಕ್‌ ಸಾಂಗ್ ಇಲ್ಲಿ ಕೇಳಿ!

Mohammed Siraj
ಕ್ರೀಡೆ39 mins ago

Mohammed Siraj : ಲಂಕಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್​ ಸಿರಾಜ್​

Murder Case
ಕರ್ನಾಟಕ39 mins ago

Murder Case: 300 ರೂಪಾಯಿಗಾಗಿ ಹೆತ್ತಮ್ಮನನ್ನೇ ಕೊಂದ ಪಾಪಿ ಮಗ!

Amitabh Bachchan
ಸಿನಿಮಾ40 mins ago

Amitabh Bachchan: ʼಕೌನ್‌ ಬನೇಗಾ ಕರೋಡ್‌ಪತಿʼ ಸ್ಪರ್ಧಿಗಳ ಎದುರು ನಾನು ಅಸಹಾಯಕ; ಅಮಿತಾಭ್‌ ಹೀಗೆ ಹೇಳಿದ್ದೇಕೆ?

Paris Olympics 2024
ಕ್ರೀಡೆ52 mins ago

Paris Olympics 2024 : ಆ.​​​ 5ರಂದು ಭಾರತದ ಅಥ್ಲೀಟ್​ಗಳು ಒಲಿಂಪಿಕ್ಸ್​ನ ಯಾವ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ? ಇಲ್ಲಿದೆ ಎಲ್ಲ ಮಾಹಿತಿ

Jaskaran Singh
ಸ್ಯಾಂಡಲ್ ವುಡ್1 hour ago

Jaskaran Singh: ಕನ್ನಡತಿಯನ್ನೇ ಮದುವೆ ಆಗುವೆ ಎಂದ ‘ದ್ವಾಪರ’ ಹಾಡಿನ ಗಾಯಕ ಜಸ್‌ಕರಣ್‌ ಸಿಂಗ್!

Viral Video
ವೈರಲ್ ನ್ಯೂಸ್1 hour ago

Viral Video: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!

Western Ghats
ಕರ್ನಾಟಕ1 hour ago

Western Ghats: ನಾಳೆಯಿಂದ ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ: ಸಚಿವ ಈಶ್ವರ ಖಂಡ್ರೆ

Viral Video
ವೈರಲ್ ನ್ಯೂಸ್1 hour ago

Viral Video: ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಮೂರ್ಛೆ ಹೋದ ವರ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ7 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌