Paris Olympics: ಶೂಟೌಟ್​ನಲ್ಲಿ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ; ಒಲಿಂಪಿಕ್ಸ್​ನಿಂದ ಗ್ರೇಟ್​ ಬ್ರಿಟನ್ ಕಿಕ್​ ಔಟ್​ - Vistara News

ಕ್ರೀಡೆ

Paris Olympics: ಶೂಟೌಟ್​ನಲ್ಲಿ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ; ಒಲಿಂಪಿಕ್ಸ್​ನಿಂದ ಗ್ರೇಟ್​ ಬ್ರಿಟನ್ ಕಿಕ್​ ಔಟ್​

Paris Olympics: ವಿದಾಯದ ಒಲಿಂಪಿಕ್ಸ್​ ಆಡುತ್ತಿರುವ ಗೋಲ್​ ಕೀಪರ್​ ಪಿ.ಆರ್​. ಶ್ರೀಜೇಶ್​ ತಡೆಗೋಡೆಯಂತೆ ನಿಂತು ಹಲವು ಗೋಲುಗಳನ್ನು ತಡೆದದ್ದು ಪಂದ್ಯದ ಆಕರ್ಷಣೆಗಳಲ್ಲಿ ಒಂದಾಗಿತ್ತು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್​: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics) ಭಾರತದ ಪುರುಷರ ಹಾಕಿ ತಂಡ ಅಮೋಘ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದೆ. ಈ ಮೂಲಕ ಪದಕದ ಆಸೆ ಜೀವಂತವಾಗಿರಿಸಿದೆ. ಕೇವಲ 10 ಮಂದಿ ಆಟಗಾರರನ್ನು ಒಳಗೊಂಡ ಹರ್ಮನ್‌ಪ್ರೀತ್ ಸಿಂಗ್ ಪಡೆ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಗ್ರೇಟ್​ ಬ್ರಿಟನ್​(India vs Great Britain) ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ 4-2 ಗೋಲುಗಳ ಅಂತರದಿಂದ ಮಗುಚಿ ಹಾಕಿ ಈ ಸಾಧನೆಗೈದಿತು.

4 ಕ್ವಾರ್ಟರ್​ ಮುಕ್ತಾಯದ ವೇಳೆ 1-1 ಗೋಲುಗಳಿಂದ ಪಂದ್ಯ ಟೈಗೊಂಡ ಕಾರಣ ಫಲಿತಾಂಶ ನಿರ್ಣಾಯಕ್ಕೆ ಫೆನಾಲ್ಟಿ ಶೂಟ್​ಔಟ್​ ಮೊರೆಹೋಗಲಾಯಿತು. ಇಲ್ಲಿ ಭಾರತ ಮೇಲುಗೈ ಸಾಧಿಸಿ ಜಯಭೇರಿ ಮೊಳಗಿಸಿತು.ಕಳೆದ ಟೋಕಿಯೊ ಒಲಿಂಪಿಕ್ಸ್​ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿಯೂ ಭಾರತ ತಂಡ ಬ್ರಿಟನ್​ ತಂಡವನ್ನೇ ಮಣಿಸಿ ಸೆಮಿಫೈನಲ್​ ಪ್ರವೇಶಿಸಿತ್ತು. ಪೆನಾಲ್ಟಿ ಶೂಟೌಟ್​ನಲ್ಲಿ ಭಾರತದ ಪರ ಹರ್ಮನ್‌ಪ್ರೀತ್, ಲಲಿತ್, ಸುಖಜೀತ್, ಅಭಿಷೇಕ್ ಮತ್ತು ರಾಜ್‌ಕುಮಾರ್ ಗೋಲು ಬಾರಿಸಿದರು. ಬ್ರಿಟನ್‌ ಪರ ಜೇಮಸ್‌ ಆಲ್ಬೆ, ವಾಲಸ್‌ ಗೋಲು ಬಾರಿಸಿದರು.

ರೆಡ್​ ಕಾರ್ಡ್​ ಪಡೆದ ಅಮಿತ್‌


ಎದುರಾಳಿ ತಂಡದ ಆಟಗಾರ ಕಲ್ನಾನ್‌ನ ಮುಖಕ್ಕೆ ಹಾಕಿ ಸ್ಟಿಕ್​ ತಾಗಿಸಿದ ಪರಿಣಾಮ ಅಮಿತ್‌ಗೆ ಅಂಪೈರ್​ ರೆಡ್ ಕಾರ್ಡ್​ ನೀಡಿದರು. ಹೀಗಾಗಿ ಅವರು ಪಂದ್ಯದಿಂದ ಹೊರಗುಳಿಯಬೇಕಾಯಿತು. ಭಾರತ ಕೇವಲ 10 ಮಂದಿ ಆಟಗಾರರೊಂದಿಗೆ ಪಂದ್ಯವನ್ನಾಡಿತು. ಮೊದಲ ಕ್ವಾರ್ಟರ್​ನಲ್ಲಿಯೇ ಭಾರತಕ್ಕೆ ಈ ಆಘಾತ ಎದುರಾಯಿತು. ಈ ಕ್ವಾರ್ಟರ್​ನಲ್ಲಿ ಉಭಯ ತಂಡಗಳಿಗೆ ಗೋಲು ಬಾರಿಸುವ ಹಲವು ಅವಕಾಶ ಇತ್ತಾದರೂ ಕೂಡ ಇದನ್ನು ಸದುಪಯೋಗಪಡಿಸುವಲ್ಲಿ ವಿಫಲರಾದರು.

ಇದನ್ನೂ ಓದಿ Paris Olympics: ವಿಕ್ಟರ್‌ ವಿರುದ್ಧ ಲಕ್ಷ್ಯ ಸೇನ್​ಗೆ ಒಲಿಯಲಿ ಗ್ರೇಟ್​ ವಿಕ್ಟರಿ; ಇಂದು ಸೆಮಿ ಫೈನಲ್​

ಮಿಂಚಿದ ಶ್ರೀಜೇಶ್

ದ್ವಿತೀಯ ಕ್ವಾರ್ಟರ್​ನಲ್ಲಿ ಭಾರತ ಮೊದಲ ಗೋಲು ಬಾರಿಸುವಲ್ಲಿ ಯಶಸ್ಸು ಕಂಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ಇನ್ನೇನು ದ್ವಿತೀಯ ಕ್ವಾರ್ಟರ್​ ಮುಕ್ತಾಯ ಕಾಣಲು ಕೆಲವೇ ನಿಮಿಷ ಬಾಕಿ ಇರುವಾಗ ಲೀ ಮಾರ್ಟನ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು. ಮೂರನೇ ಕ್ವಾರ್ಟರ್​ ಮುಕ್ತಾಯಕ್ಕೆ 4 ನಿಮಿಷವಿರುವಾಗ​ ಬ್ರಿಟನ್​ಗೆ ಪೆನಾಲ್ಟಿ ಕಾರ್ನರ್​​ ಅವಕಾಶ ಸಿಕ್ಕರೂ ಕೂಡ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ವಿದಾಯದ ಒಲಿಂಪಿಕ್ಸ್​ ಆಡುತ್ತಿರುವ ಗೋಲ್​ ಕೀಪರ್​ ಪಿ.ಆರ್​. ಶ್ರೀಜೇಶ್​ ತಡೆಗೋಡೆಯಂತೆ ನಿಂತು ಹಲವು ಗೋಲುಗಳನ್ನು ತಡೆದದ್ದು ಪಂದ್ಯದ ಆಕರ್ಷಣೆಗಳಲ್ಲಿ ಒಂದಾಗಿತ್ತು. ಪೆನಾಲ್ಟಿ ಶೂಟೌಟ್​ನಲ್ಲಿಯೂ ಗೋಲುಗಳನ್ನು ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮೂರನೇ ಕ್ವಾರ್ಟರ್​ನಲ್ಲಿಯೂ ಇತ್ತಂಡಗಳ ಬಲಿಷ್ಠ ರಕ್ಷಣಾತ್ಮಕ ಆಟದಿಂದಾಗಿ ಗೋಲು ದಾಖಲಾಗಲಿಲ್ಲ. ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್​ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದರೂ ಕೂಡ ಉಭಯ ತಂಡಗಳಿಗೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. 1-1 ಗೋಲುಗಳಿಂದ ಟೈಗೊಂಡಿತು. ಟೋಕಿಯೊ ಒಲಿಂಪಿಕ್ಸ್​ ಕ್ವಾರ್ಟರ್‌ ಫೈನಲ್​ನಲ್ಲೂ ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ 3-1 ಗೋಲ್​ಗಳ ಅಂತರದಿಂದ ಗೆದ್ದು ಸೆಮಿಪೈನಲ್‌ ಪ್ರವೇಶಿಸಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Chennai Super Kings : ಮಹಿಳೆಯರ ಪ್ರೀಮಿಯರ್ ಲೀಗ್​ಗೆ ಎಂಟ್ರಿ ಪಡೆಯಲಿದೆ ಚೆನ್ನೈ ಸೂಪರ್ ಕಿಂಗ್ಸ್​

Chennai Super Kings : ಶ್ರೀನಿವಾಸನ್ ಅವರ ಪುತ್ರಿ ಮತ್ತು ಇಂಡಿಯಾ ಸಿಮೆಂಟ್ಸ್​​ನ ಪೂರ್ಣಾವಧಿ ನಿರ್ದೇಶಕಿ ರೂಪಾ ಗುರುನಾಥ್ ಅವರನ್ನು ಸಿಎಸ್​ಕೆಸಿಎಲ್ ಮಂಡಳಿಯ ಭಾಗವಾಗಿದ್ದಾರೆ. ಫ್ರ್ಯಾಂಚೈಸ್​ನ ನಿರ್ವಹಣೆಯಲ್ಲಿ ಅವರ ವ್ಯಾಪಕ ತೊಡಗಿಸಿಕೊಳ್ಳುವಿಕೆಯನ್ನು ಗಮನಿಸಿದರೆ, ಅವರು ಮುಂಬರುವ ದಿನಗಳಲ್ಲಿ ತಂಡಗಳ ವಿಸ್ತರಣಾ ಉಪಕ್ರಮಗಳನ್ನು ಮುನ್ನಡೆಸುವ ನಿರೀಕ್ಷೆಯಿದೆ. ಇದು ಮಹಿಳೆಯರ ತಂಡದಲ್ಲಿ ಹೂಡಿಕೆಗೆ ಕಾರಣವಾಗಬಹುದು.

VISTARANEWS.COM


on

Chennai Super Kings
Koo

ಬೆಂಗಳೂರು: ಕ್ರಿಕೆಟ್ ಜಗತ್ತಿಗೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಇಂಡಿಯಾ ಸಿಮೆಂಟ್ಸ್​​ನ ಕ್ರೀಡಾ ವಿಭಾಗವು ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ (ಸಿಎಸ್​ಕೆಸಿಎಲ್) ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆವೃತ್ತಿಯಲ್ಲಿ ಸಿಎಸ್​ಕೆ ಫ್ರಾಂಚೈಸಿ (Chennai Super Kings ) ಮಹಿಳೆಯರ ಕ್ರಿಕೆಟ್​ನಲ್ಲೂ ಹೂಡಿಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ 2025ನೇ ಆವೃತ್ತಿಯಲ್ಲಿ ಒಟ್ಟು ತಂಡಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ಶ್ರೀನಿವಾಸನ್ ಅವರ ಪುತ್ರಿ ಮತ್ತು ಇಂಡಿಯಾ ಸಿಮೆಂಟ್ಸ್​​ನ ಪೂರ್ಣಾವಧಿ ನಿರ್ದೇಶಕಿ ರೂಪಾ ಗುರುನಾಥ್ ಅವರನ್ನು ಸಿಎಸ್​ಕೆಸಿಎಲ್ ಮಂಡಳಿಯ ಭಾಗವಾಗಿದ್ದಾರೆ. ಫ್ರ್ಯಾಂಚೈಸ್​ನ ನಿರ್ವಹಣೆಯಲ್ಲಿ ಅವರ ವ್ಯಾಪಕ ತೊಡಗಿಸಿಕೊಳ್ಳುವಿಕೆಯನ್ನು ಗಮನಿಸಿದರೆ, ಅವರು ಮುಂಬರುವ ದಿನಗಳಲ್ಲಿ ತಂಡಗಳ ವಿಸ್ತರಣಾ ಉಪಕ್ರಮಗಳನ್ನು ಮುನ್ನಡೆಸುವ ನಿರೀಕ್ಷೆಯಿದೆ. ಇದು ಮಹಿಳೆಯರ ತಂಡದಲ್ಲಿ ಹೂಡಿಕೆಗೆ ಕಾರಣವಾಗಬಹುದು.

ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಭಾಗವಹಿಸುವ ಸಾಧ್ಯತೆಯ ಬಗ್ಗೆಯೂ ಗುರುನಾಥ್ ಯೋಚಿಸುತ್ತಿದ್ದಾರೆ. ಅದರಿಂದ ಆಗುವ ಆರ್ಥಿಕ ಕಾರ್ಯಸಾಧ್ಯತೆಯನ್ನು ನಿರ್ಣಯಿಸುತ್ತಿದ್ದಾರೆ. ಈ ವರ್ಷ ಭಾಗಿಯಾಗಿರುವ ಐದು ಐಪಿಎಲ್ ಫ್ರಾಂಚೈಸಿಗಳ ಅನುಭವಗಳಿಂದ ಒಳನೋಟಗಳನ್ನು ಪಡೆಯುತ್ತಿದ್ದಾರೆ. ಅದರ ಪ್ರಕಾರ ಮುಂದಿನ ಹೂಡಿಕೆ ಮಾಡಲು ನಿರ್ಧರಿಸಲಿದೆ.

ಇಂಡಿಯಾ ಸಿಮೆಂಟ್ಸ್ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ಕ್ರಿಕೆಟ್ ಬೆಳೆಸುವ ಶ್ರೀಮಂತ ಪರಂಪರೆ ಹೊಂದಿದೆ. ತನ್ನ ತಂಡಗಳು ಮತ್ತು ಕೋಚಿಂಗ್ ಸಿಬ್ಬಂದಿಯ ಮೂಲಕ ಗಣನೀಯ ಕೊಡುಗೆಗಳನ್ನು ನೀಡಿದೆ. ಹೀಗಾಗಿ ಈ ಕಂಪನಿಯು ಆ ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರಾಬಲ್ಯ ಪಡೆದುಕೊಂಡಿದೆ.

ಇದನ್ನೂ ಓದಿ ; Lovlina Borgohain : ಲವ್ಲಿನಾ ಬೊರ್ಗೊಹೈನ್​​ಗೆ ಸೋಲು; ಒಲಿಂಪಿಕ್ಸ್​​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯ

ಐಪಿಎಲ್ ಇತಿಹಾಸದಲ್ಲಿ ಸಿಎಸ್​ಕೆ ಹೆಚ್ಚು ಯಶಸ್ಸು ಕಂಡಿರುವ ಫ್ರಾಂಚೈಸಿ. ಮುಂಬೈ ಜತೆ 5 ಟ್ರೋಫಿಗಳ ಜಂಟಿ ಸಾಧನೆ ಮಾಡಿದೆ. ಹೀಗಾಗಿ ಶ್ರೀಮಂತ ಲೀಗ್​ನಲ್ಲಿ ಅತ್ಯಂತ ಮೌಲ್ಯಯುತ ತಂಡ ಎಂದು ವರದಿಯಾಗಿದೆ. ಬ್ರಾಂಡ್ ಮೌಲ್ಯವು 231 ಮಿಲಿಯನ್ ಡಾಲರ್ ಎಂದು ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ಇಂಕ್ ಜೂನ್​​ಲ್ಲಿ ವರದಿ ಮಾಡಿದೆ.

ಸಿಎಸ್​ಕೆಸಿಎಲ್ ಶಾಲಾ ಮಕ್ಕಳಿಗಾಗಿ ಹೆಚ್ಚುವರಿ ತರಬೇತಿ ಅಕಾಡೆಮಿಗಳನ್ನು ಉದ್ಘಾಟಿಸಿದೆ. ಅಭಿಮಾನಿಗಳ ಪಾಲ್ಗೊಳ್ಳುವಿಕೆ ಉಪಕ್ರಮಗಳನ್ನು ಹೆಚ್ಚಿಸಲು ಮತ್ತು ವರ್ಧಿತ ಪ್ರಾಯೋಜಕತ್ವ ಮತ್ತು ಸರಕು ಮಾರಾಟದ ಮೂಲಕ ಆದಾಯ ಹೆಚ್ಚಿಸಲು ಉದ್ದೇಶಿಸಿದೆ.

ಭಾರತದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಇಂಡಿಯಾ ಸಿಮೆಂಟ್ಸ್ ಗ್ರೂಪ್​ಗೆ ಮತ್ತೆ ಸೇರಿದ್ದಾರೆ. ಅಲ್ಲಿ ಅವರು ಸಿಎಸ್​ಕೆ ವಿಸ್ತರಣಾ ಚೌಕಟ್ಟಿನೊಳಗೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.

37 ವರ್ಷದ ಕ್ರಿಕೆಟಿಗ 2016 ರವರೆಗೆ ಇಂಡಿಯಾ ಸಿಮೆಂಟ್ಸ್​ನೊಂದಿಗೆ ಸಹಯೋಗ ಪಡೆದುಕೊಂಡಿದ್ದರು. 2008 ರಿಂದ 2015 ರವರೆಗೆ ಸಿಎಸ್​ಕೆ ತಂಡವನ್ನು ಪ್ರತಿನಿಧಿಸಿದ್ದರು. ಸಿಎಸ್​ಕೆ ಯಿಂದ ನಿರ್ಗಮಿಸಿದಾಗಿನಿಂದ ನಾಲ್ಕು ವಿಭಿನ್ನ ಫ್ರಾಂಚೈಸಿಗಳ ಭಾಗವಾಗಿದ್ದಾರೆ.

Continue Reading

ಕ್ರೀಡೆ

Lovlina Borgohain : ಲವ್ಲಿನಾ ಬೊರ್ಗೊಹೈನ್​​ಗೆ ಸೋಲು; ಒಲಿಂಪಿಕ್ಸ್​​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯ

Lovlina Borgohain : ನಾಲ್ಕು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಒಳಗೊಂಡ ಆರು ಬಲಿಷ್ಠ ಬಾಕ್ಸಿಂಗ್ ತಂಡವು ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿತ್ತು. ಈ ಪೈಕಿ ನಾಲ್ವರು ಪ್ರಾಥಮಿಕ ಹಂತದಲ್ಲಿಯೇ ಸೋಲು ಕಂಡಿದ್ದರು. ಬೊರ್ಗೊಹೈನ್ ಮತ್ತು ಕಿಯಾನ್ ನಡುವಿನ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿತ್ತು. ಬಾಕ್ಸರ್​ಗಳು ಮೊದಲ ದಾಳಿ ಪ್ರಾರಂಭಿಸಲು ಸಿದ್ಧರಿರಲಿಲ್ಲ. ಪಂದ್ಯದ ಆರಂಭದಲ್ಲಿಯೇ ಅಂಕಕ್ಕಿಂತ ಹಿಡಿತವೇ ಹೆಚ್ಚಾಯಿತು. ಇಬ್ಬರು ಬಾಕ್ಸರ್​ಗಳನ್ನು ಬೇರ್ಪಡಿಸಲು ರೆಫರಿ ಪದೇ ಪದೇ ಹೆಜ್ಜೆ ಹಾಕಬೇಕಾಯಿತು.

VISTARANEWS.COM


on

Lovlina Borgohain
Koo

ಬೆಂಗಳೂರು: ಟೋಕಿಯೊ ಆವೃತ್ತಿಯ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ (Lovlina Borgohain) ಭಾನುವಾರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ನಡೆದ (Paris Olympics 2024) ನಡೆದ ಮಹಿಳೆಯರ 75 ಕೆ. ಜಿ ವಿಭಾಗದ ಸ್ಪರ್ಧೆಯಲ್ಲಿ ಚೀನಾದ ಲಿ ಕಿಯಾನ್ ವಿರುದ್ಧ ಕಠಿಣ ಹೋರಾಟದ ನಂತರ ಸೋತರು. ಇದರೊಂದಿಗೆ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತದ ಬಾಕ್ಸರ್​ಗಳ ಅಭಿಯಾನವು ಪದಕವಿಲ್ಲದೆ ಕೊನೆಗೊಂಡಿತು. ಈ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್ ಬೊರ್ಗೊಹೈನ್, ಟೋಕಿಯೊ ಕ್ರೀಡಾಕೂಟದ ಬೆಳ್ಳಿ ವಿಜೇತೆ 34 ವರ್ಷದ ಆಟಗಾರ್ತಿಯ ವಿರುದ್ಧ 1-4 ಅಂತರದಿಂದ ಸೋತರು. ಇಬ್ಬರೂ ಬಾಕ್ಸರ್​ಗಳಿಗೆ ಹಿಡಿತಕ್ಕಾಗಿ ಪದೇಪದೆ ಎಚ್ಚರಿಕೆ ನೀಡಲಾಗಿತ್ತು. ಕೊನೆಗೆ ಲವ್ಲಿನಾ ತಲೆಬಾಗಿದರು. ಶನಿವಾರ ರಾತ್ರಿ ನಡೆದ ಪುರುಷರ 71 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್​​ನಲ್ಲಿ ನಿಶಾಂತ್ ದೇವ್ ನಿರ್ಗಮಿಸಿದ ನಂತರ 26 ವರ್ಷದ ಲವ್ಲಿನಾ ಒಲಿಂಪಿಕ್ಸ್​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಕೊನೆಗೊಳಿಸಿದರು.

ನಾಲ್ಕು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಒಳಗೊಂಡ ಆರು ಬಲಿಷ್ಠ ಬಾಕ್ಸಿಂಗ್ ತಂಡವು ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿತ್ತು. ಈ ಪೈಕಿ ನಾಲ್ವರು ಪ್ರಾಥಮಿಕ ಹಂತದಲ್ಲಿಯೇ ಸೋಲು ಕಂಡಿದ್ದರು. ಬೊರ್ಗೊಹೈನ್ ಮತ್ತು ಕಿಯಾನ್ ನಡುವಿನ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿತ್ತು. ಬಾಕ್ಸರ್​ಗಳು ಮೊದಲ ದಾಳಿ ಪ್ರಾರಂಭಿಸಲು ಸಿದ್ಧರಿರಲಿಲ್ಲ. ಪಂದ್ಯದ ಆರಂಭದಲ್ಲಿಯೇ ಅಂಕಕ್ಕಿಂತ ಹಿಡಿತವೇ ಹೆಚ್ಚಾಯಿತು. ಇಬ್ಬರು ಬಾಕ್ಸರ್​ಗಳನ್ನು ಬೇರ್ಪಡಿಸಲು ರೆಫರಿ ಪದೇ ಪದೇ ಹೆಜ್ಜೆ ಹಾಕಬೇಕಾಯಿತು.

ಕಿಯಾನ್ ದೃಢನಿಶ್ಚಯದಿಂದ ಕಾಣುತ್ತಿದ್ದರೆ, ಬೊರ್ಗೊಹೈನ್ ಆರಂಭದಲ್ಲಿ ಉತ್ಸಾಹಭರಿತರಾಗಿದ್ದರು. ಮೊದಲ ಸುತ್ತಿನ ಕೊನೆಯಲ್ಲಿ ಚೀನಿ ಆಟಗಾರ್ತಿ ಸ್ವಚ್ಛ ಹೊಡೆತಗಳು ಹೊಡೆದು 3-2 ಮುನ್ನಡೆ ಸಾಧಿದ್ದರು.

ಎರಡನೇ ಸುತ್ತು ಕೂಡ ಆಕರ್ಷಕವಾಗಿತ್ತು. ಕಿಯಾನ್ ತನ್ನ ವಿಧಾನದಲ್ಲಿ ಹೆಚ್ಚು ಉದ್ದೇಶ ಹೊಂದಿದ್ದರು. ಅವಳ ಬೊರ್ಗೊಹೈನ್ ಗೆ ಅತಿಯಾದ ಹಿಡಿತಕ್ಕಾಗಿ ಎರಡು ಬಾರಿ ಎಚ್ಚರಿಕೆ ಪಡೆದರು. ಹೀಗಾಗಿ ಎರಡನೇ ಹಂತವೂ 3-2 ರಿಂದ ಕಿಯಾನ್ ಪರವಾಯಿತು.

ಮೂರನೇ ಸುತ್ತಿನಲ್ಲಿಯೂ ಹಿಡಿತ ಮತ್ತು ಗೆಲುವು ಮುಂದುವರಿಯಿತು ಮತ್ತು ಇಬ್ಬರೂ ಮಹಿಳೆಯರು ಸ್ವಲ್ಪ ದಣಿದಂತೆ ತೋರಿದರು. ಬೊರ್ಗೊಹೈನ್ ಅವರನ್ನು ದೂರ ಇಡಲು ಕಿಯಾನ್ ಹೆಚ್ಚಿನ ಶ್ರಮ ತೋರಿಸಿದರು. ಪಂದ್ಯದ ವೇಗವನ್ನು ನಿಯಂತ್ರಿಸುವ ವಿಷಯಕ್ಕೆ ಬಂದಾಗ ಬೊರ್ಗೊಹೈನ್ ಅದಕ್ಕೆ ಪೂರಕವಾಗಿ ಆಡಲಿಲ್ಲ.

ಇದನ್ನೂ ಓದಿ: Parul Chaudhary : ಸ್ಟೀಪಲ್​ ಚೇಸ್​​ ಫೈನಲ್​ಗೆ ಅರ್ಹತೆ ಪಡೆಯಲು ಪಾರುಲ್ ಚೌಧರಿ ವಿಫಲ

ಅಸ್ಸಾಮಿ ಆಟಗಾರ್ತಿ ಕಳೆದ ವರ್ಷ ಏಷ್ಯನ್ ಗೇಮ್ಸ್ ಫೈನಲ್​ನಲ್ಲಿ ಕಿಯಾನ್ ವಿರುದ್ಧ ಹೋರಾಡಿ 0-5 ಅಂತರದಲ್ಲಿ ಸೋತಿದ್ದರು. 2023 ರಲ್ಲಿ ವಿಶ್ವ ಚಾಂಪಿಯನ್​ಶಿಪ್​ ಸೆಮಿಫೈನಲ್​​ನಲ್ಲಿ ಕಿಯಾನ್ ಅವರನ್ನು ಸೋಲಿಸಿದರು. ಆದರೆ, ಇಲ್ಲಿ ಮತ್ತೊಮ್ಮೆ ವೈಫಲ್ಯ ಕಂಡರು.

ಜೂನ್​​ನಲ್ಲಿ ಜೆಕಿಯಾದಲ್ಲಿ ನಡೆದ ಪೂರ್ವ-ಒಲಿಂಪಿಕ್ ಪಂದ್ಯಾವಳಿಯಲ್ಲಿ ಅವರು ಅನುಭವಿ ಆಟಗಾರ್ತಿಗೆ ಶರಣಾಗಿದ್ದರು.

Continue Reading

ಕ್ರೀಡೆ

Parul Chaudhary : ಸ್ಟೀಪಲ್​ ಚೇಸ್​​ ಫೈನಲ್​ಗೆ ಅರ್ಹತೆ ಪಡೆಯಲು ಪಾರುಲ್ ಚೌಧರಿ ವಿಫಲ

Parul Chaudhary : ಹಾಲಿ ಒಲಿಂಪಿಕ್ ಚಾಂಪಿಯನ್ ಉಗಾಂಡಾದ ಪೆರುತ್ ಚೆಮುಟೈ (9:10.51) ಹೀಟ್ ನಂಬರ್ ಒನ್ ಸ್ಥಾನ ಪಡೆದರೆ, ಕೀನ್ಯಾದ ಫೇತ್ ಚೆರೊಟಿಚ್ (9:10.57) ಮತ್ತು ಜರ್ಮನಿಯ ಗೆಸಾ ಫೆಲಿಸಿಟಿಸ್ ಕ್ರೌಸ್ (9:10.68) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಅಂಕಿತಾ ಧ್ಯಾನಿ ಅವರೊಂದಿಗೆ ಮಹಿಳೆಯರ 5000 ಮೀಟರ್ ಓಟಕ್ಕೆ ಅರ್ಹತೆ ಪಡೆಯಲು ವಿಫಲರಾಗಿದ್ದ ಪಾರುಲ್ ಅವರ ಅಭಿಯಾನವನ್ನು ಇದು ಕೊನೆಗೊಂಡಿತು.

VISTARANEWS.COM


on

Parul Chaudhary
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​​ನ (Paris Olympics 2024) ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್​ ಸ್ಪರ್ಧೆಯಲ್ಲಿ ಪಾರುಲ್ ಚೌಧರಿ (Parul Chaudhary) ವಿಫಲರಾಗಿದ್ದು ಫೈನಲ್​ಗೆ ಅರ್ಹತೆ ಪಡೆಯಲಿಲ್ಲ. ರಾಷ್ಟ್ರೀಯ ದಾಖಲೆ ಹೊಂದಿರುವ aವರು ಭಾನುವಾರ ಹೀಟ್ ರೇಸ್ ನಲ್ಲಿ ಎಂಟನೇ ಸ್ಥಾನ ಪಡೆದ ನಂತರ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾದರು. ಕ್ರೀಡಾಕೂಟಕ್ಕೆ ಮುಂಚಿತವಾಗಿ ಕೆಲವು ತಿಂಗಳುಗಳ ಕಾಲ ಯುಎಸ್ಎಯಲ್ಲಿ ತರಬೇತಿ ಪಡೆದ 29 ವರ್ಷದ ಪಾರುಲ್ ಒಟ್ಟು ದೂರವನ್ನು 9 ನಿಮಿಷ 23.39 ಸೆಕೆಂಡುಗಳಲ್ಲಿ ಓಡಿದರು. ಇದು ಅವರ ಋತುವಿನ ಅತ್ಯುತ್ತಮ ಆದರೆ 2023 ರ ಬುಡಾಪೆಸ್ಟ್ ವಿಶ್ವ ಚಾಂಪಿಯನ್​​ಶಿಪ್​ನ ಸಾಧನೆಯಾಗಿರುವ 9: 15.31 ಕ್ಕಿಂತ ಕಡಿಮೆಯಾಗಿದೆ. ಮೂರು ಹೀಟ್ ರೇಸ್ ಗಳಲ್ಲಿ ಅಗ್ರ ಐದು ಸ್ಥಾನ ಪಡೆಯುವ ತಂಡಗಳು ಫೈನಲ್ ಗೆ ಅರ್ಹತೆ ಪಡೆಯುತ್ತವೆ.

ಹಾಲಿ ಒಲಿಂಪಿಕ್ ಚಾಂಪಿಯನ್ ಉಗಾಂಡಾದ ಪೆರುತ್ ಚೆಮುಟೈ (9:10.51) ಹೀಟ್ ನಂಬರ್ ಒನ್ ಸ್ಥಾನ ಪಡೆದರೆ, ಕೀನ್ಯಾದ ಫೇತ್ ಚೆರೊಟಿಚ್ (9:10.57) ಮತ್ತು ಜರ್ಮನಿಯ ಗೆಸಾ ಫೆಲಿಸಿಟಿಸ್ ಕ್ರೌಸ್ (9:10.68) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಅಂಕಿತಾ ಧ್ಯಾನಿ ಅವರೊಂದಿಗೆ ಮಹಿಳೆಯರ 5000 ಮೀಟರ್ ಓಟಕ್ಕೆ ಅರ್ಹತೆ ಪಡೆಯಲು ವಿಫಲರಾಗಿದ್ದ ಪಾರುಲ್ ಅವರ ಅಭಿಯಾನವನ್ನು ಇದು ಕೊನೆಗೊಂಡಿತು. ಪಾರುಲ್ 3000 ಮೀಟರ್ ಸ್ಟೀಪಲ್​ಚೇಸ್​ 9:23.00 ಪ್ರವೇಶ ಮಾನದಂಡ ಮೀದಿದ್ದ ನಂತರ ನೇರ ಅರ್ಹತೆ ಪಡೆದಿದ್ದರು.

ಲಲಿತಾ ಬಾಬರ್ 2016 ರ ರಿಯೋ ಒಲಿಂಪಿಕ್ಸ್​​ನಲ್ಲಿ ಅಂತಿಮ ಸುತ್ತಿಗೆ ಅರ್ಹತೆ ಪಡೆದ ಏಕೈಕ ಭಾರತೀಯ ಮಹಿಳೆ ಹಾಗಿದ್ದಾರೆ 3000 ಮೀಟರ್ ಸ್ಟೀಪಲ್​ಚೇಸ್​ನಲ್ಲಿ ಅವರು ಅಂತಿಮವಾಗಿ 10 ನೇ ಸ್ಥಾನ ಪಡೆದಿದ್ದರು.

ಲಕ್ಷ್ಯ ಸೇನ್​ಗೆ ಸೋಲು

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics) ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾರತದ ಕೊನೆಯ ಭರವಸೆಯಾಗಿ ಉಳಿದಿರುವ ಲಕ್ಷ್ಯ ಸೇನ್‌(Lakshya Sen) ಭಾನುವಾರ ನಡೆದ ಹೈವೋಲ್ಟೇಜ್​ ಸೆಮಿಫೈನಲ್‌ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ವಿಶ್ವದ ಖ್ಯಾತ ಶಟ್ಲರ್​ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌(Viktor Axelsen) ವಿರುದ್ಧ 20-22 21-14 ನೇರ ಗೇಮ್​ಗಳ ಅಂತರದಿಂದ ಸೋಲು ಕಂಡು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರೂ ಕೂಡ ಕಂಚಿನ ಪದಕ ಸ್ಪರ್ಧೆಯಲ್ಲಿ ಆಡಲಿದ್ದಾರೆ.​

ಇದನ್ನೂ ಓದಿ: Priyanka Goswami : ರೀಲ್ಸ್​ ಮಾಡೋದಲ್ಲ, ಸ್ಪರ್ಧೆಯಲ್ಲಿ ಓಡಿ ಪದಕ ಗೆಲ್ಲು; ಪ್ರಿಯಾಂಕ ಗೋಸ್ವಾಮಿಗೆ ನೆಟ್ಟಿಗರ ತಪರಾಕಿ

ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯದ ಮೊದಲ ಗೇಮ್​ನಲ್ಲಿ ಎದುರಾಳಿ ವಿಕ್ಟರ್‌ ಅಕ್ಸೆಲ್ಸೆನ್‌ 2 ಅಂಕಗಳಿಸಿದರೂ ಖಾತೆ ತೆರೆಯದ ಲಕ್ಷ್ಯ ಸೇನ್‌ ಆ ಬಳಿಕ ಫಿನಿಕ್ಸ್​ನಂತೆ ಎದ್ದು ಬಂದು ಮುನ್ನಡೆ ಸಾಧಿಸಿದರು. 8 ಅಂಕ ಗಳಿಸುವ ತನಕ ಉಭಯ ಆಟಗಾರರು ಸಮಾನವಾಗಿ ಸಾಗಿದರು. ಈ ವೇಳೆ ಸೇನ್​ ಸತತವಾಗಿ ಅಂಕಗಳಿಸಿ ಇನ್ನೇನು ಒಂದು ಗೆಲುವು ಸಾಧಿಸುತ್ತಾರೆ ಎನುವಷ್ಟರಲ್ಲಿ 3 ಅಂಕ ಹಿನ್ನಡೆಯಲ್ಲಿದ್ದ ಅಕ್ಸೆಲ್ಸೆನ್‌ ಆಕ್ರಮಣಕಾರಿ ಆಟದ ಮೂಲಕ ಗೆಲುವು ಸಾಧಿಸಿದರು. ಗೆಲುವಿನ ಅಂತರ 22-20.

Continue Reading

ಪ್ರಮುಖ ಸುದ್ದಿ

Priyanka Goswami : ರೀಲ್ಸ್​ ಮಾಡೋದಲ್ಲ, ಸ್ಪರ್ಧೆಯಲ್ಲಿ ಓಡಿ ಪದಕ ಗೆಲ್ಲು; ಪ್ರಿಯಾಂಕ ಗೋಸ್ವಾಮಿಗೆ ನೆಟ್ಟಿಗರ ತಪರಾಕಿ

Priyanka Goswami : ಫೆಬ್ರವರಿ 2023 ರಲ್ಲಿ ನಡೆದ ಇಂಡಿಯನ್ ಓಪನ್ ನ್ಯಾಷನಲ್ ರೇಸ್ ವಾಕಿಂಗ್ ಸ್ಪರ್ಧೆಯಲ್ಲಿ ಅಗತ್ಯ ಅಂಕಗಳನ್ನು ಪಡೆದ ಗೋಸ್ವಾಮಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು. ಅವರು 2021 ರಲ್ಲಿ ಭಾರತೀಯ ರೇಸ್​ವಾಕಿಂಗ್​ ಚಾಂಪಿಯನ್​ಶಿಪ್​ ಗೆದ್ದ ನಂತರ ಭರವಸೆ ಮೂಡಿಸಿದ್ದರು. ಆ ಮೂಲಕ ಆ ವರ್ಷ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು.

VISTARANEWS.COM


on

Priyanka Goswami
Koo

ಪ್ಯಾರಿಸ್: ಪ್ಯಾರಿಸ್​ ಒಲಿಂಪಿಕ್ಸ್​ನ (Paris Olympics 2024) ರೇಸ್​ ವಾಕ್​ನಲ್ಲಿ ಭಾರತದ ಪ್ರಿಯಾಂಕ ಗೋಸ್ವಾಮಿ (Priyanka Goswami) ಕಳಪೆ ಪ್ರದರ್ಶನ ನೀಡಿದ್ದರು. ಅವರು 20 ಕಿ.ಮೀ ಓಟದ ನಡಿಗೆಯಲ್ಲಿ 45 ಮಂದಿಯಲ್ಲಿ 41 ನೇ ಸ್ಥಾನ ಪಡೆದರು. ಹೀಗಾಗಿ ಕ್ರೀಡಾಭಿಮಾನಿಗಳಿಗೆ ಬೇಸರ ಮೂಡಿರುವುದು ಸಹಜ. ಆದಾಗ್ಯೂ ಅವರು ಹೆಚ್ಚು ಟೀಕೆಗೆ ಒಳಗಾಗಿದ್ದು ರೀಲ್ಸ್​ನಿಂದಾಗಿ. ಅವರು ತಮ್ಮ ರೂಮ್​ನೊಳಗೆ ಎಸಿ ಮುಂದೆ ನಿಂತು ಮಾಡಿದ ವಿಡಿಯೊದ ಕಾರಣಕ್ಕೆ ಎಲ್ಲರೂ ಟೀಕಿಸಲು ಆರಂಭಿಸಿದ್ದಾರೆ. ರೀಲ್ಸ್ ಮಾಡೋದು ಬಿಟ್ಟು ದೇಶಕ್ಕಾಗಿ ಆಡು ಎಂಬುದಾಗಿ ಹೇಳಿದ್ದಾರೆ.

ಪ್ಯಾರಿಸ್​ನಲ್ಲಿ ಸಿಕ್ಕಾಪಟ್ಟೆ ಸೆಖೆಯಿದೆ. ಬಿಸಿಲಿನ ತಾಪ ಹಾಗೂ ಆರ್ದ್ರ ಪರಿಸ್ಥಿತಿಗಳಿಂದಾಗಿ ಆಟಗಾರರು ಬಳಲಿ ಬೆಂಡಾಗಿದ್ದಾರೆ. ಹೀಗಾಗಿ ಕ್ರೀಡಾ ಸಚಿವಾಲಯವು ಅವರಿಗೆ ಕಾಂಪಾಕ್ಟ್​ ಎಸಿಗಳನ್ನು ಕಳುಹಿಸಿಕೊಟ್ಟಿದ್ದರು. ಅದನ್ನು ಮುಂದಿಟ್ಟುಕೊಂಡು 28 ವರ್ಷದ ಅಥ್ಲೀಟ್ ರೀಲ್ಸ್ ಮಾಡಿದ್ದರು. ಹೀಗಾಗಿ ಕ್ರೀಡಾಭಿಮಾನಿಗಳು ರೀಲ್ಸ್ ಮಾಡೋದು ಬಿಟ್ಟು ಆಡು ಎಂಬುದಾಗಿ ಟೀಕೆ ಮಾಡಿದ್ದಾರೆ.

ಫೆಬ್ರವರಿ 2023 ರಲ್ಲಿ ನಡೆದ ಇಂಡಿಯನ್ ಓಪನ್ ನ್ಯಾಷನಲ್ ರೇಸ್ ವಾಕಿಂಗ್ ಸ್ಪರ್ಧೆಯಲ್ಲಿ ಅಗತ್ಯ ಅಂಕಗಳನ್ನು ಪಡೆದ ಗೋಸ್ವಾಮಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು. ಅವರು 2021 ರಲ್ಲಿ ಭಾರತೀಯ ರೇಸ್​ವಾಕಿಂಗ್​ ಚಾಂಪಿಯನ್​ಶಿಪ್​ ಗೆದ್ದ ನಂತರ ಭರವಸೆ ಮೂಡಿಸಿದ್ದರು. ಆ ಮೂಲಕ ಆ ವರ್ಷ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು.

ಇದನ್ನೂ ಓದಿ: Bikini vs : Hijab : ಸ್ಪೇನ್​, ಈಜಿಪ್ಟ್​ ನಡುವಿನ ಬೀಚ್ ವಾಲಿಬಾಲ್ ಪಂದ್ಯದ ವೇಳೆ ಕಿಡಿ ಹಚ್ಚಿದ ಬಿಕಿನಿ ವರ್ಸಸ್ ಹಿಜಾಬ್​ ಚರ್ಚೆ

ಗೋಸ್ವಾಮಿ ಅವರ ರೀಲ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ, ಅವರಂತಹ ಕ್ರೀಡಾಪಟುಗಳು ಮೈದಾನದಲ್ಲಿ ಅಭ್ಯಾಸ ಮಾಡುವುದಕ್ಕಿಂತ ರೀಲ್ಸ್​ಗಳನ್ನು ತಯಾರಿಸಲು ಸಮಯ ವ್ಯರ್ಥ ಕಳೆಯುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಜನರು ತೆರಿಗೆದಾರರ ಹಣವನ್ನು ಹೇಗೆ ವ್ಯರ್ಥ ಮಾಡುತ್ತಿದ್ದಾರೆ ಎಂದು ಕೆಲವರು ಗಮನಸೆಳೆದರು.

Continue Reading
Advertisement
Jaskaran Singh
ಸ್ಯಾಂಡಲ್ ವುಡ್4 mins ago

Jaskaran Singh: ಕನ್ನಡತಿಯ್ನನೇ ಮದುವೆ ಆಗುವೆ ಎಂದ ‘ದ್ವಾಪರ’ ಹಾಡಿನ ಗಾಯಕ ಜಸ್‌ಕರಣ್‌ ಸಿಂಗ್!

Viral Video
ವೈರಲ್ ನ್ಯೂಸ್9 mins ago

Viral Video: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!

Western Ghats
ಕರ್ನಾಟಕ16 mins ago

Western Ghats: ನಾಳೆಯಿಂದ ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ: ಸಚಿವ ಈಶ್ವರ ಖಂಡ್ರೆ

Viral Video
ವೈರಲ್ ನ್ಯೂಸ್23 mins ago

Viral Video: ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಮೂರ್ಛೆ ಹೋದ ವರ! ವಿಡಿಯೊ ನೋಡಿ

Chennai Super Kings
ಕ್ರಿಕೆಟ್40 mins ago

Chennai Super Kings : ಮಹಿಳೆಯರ ಪ್ರೀಮಿಯರ್ ಲೀಗ್​ಗೆ ಎಂಟ್ರಿ ಪಡೆಯಲಿದೆ ಚೆನ್ನೈ ಸೂಪರ್ ಕಿಂಗ್ಸ್​

BSF DG Row
ದೇಶ43 mins ago

BSF DG Row: ಬಿಎಸ್‌ಎಫ್‌ ಮುಖ್ಯಸ್ಥ ನಿತಿನ್‌ ಅಗರ್ವಾಲ್‌ ತಲೆದಂಡಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

Lovlina Borgohain
ಕ್ರೀಡೆ54 mins ago

Lovlina Borgohain : ಲವ್ಲಿನಾ ಬೊರ್ಗೊಹೈನ್​​ಗೆ ಸೋಲು; ಒಲಿಂಪಿಕ್ಸ್​​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯ

ಕರ್ನಾಟಕ1 hour ago

‌MB Patil: ಕುಮಾರಸ್ವಾಮಿಯದು ಅವಕಾಶವಾದಿ ಮೈತ್ರಿ ಎಂದ ಎಂ.ಬಿ. ಪಾಟೀಲ್

Bangladesh
ವಿದೇಶ2 hours ago

Bangladesh: ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಹಿಂಸಾಚಾರ; 32 ಜನ ಸಾವು

Road Accident
ವಿಜಯಪುರ2 hours ago

Road Accident : ಅಮಾವಾಸ್ಯೆಗೆಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಅಪಘಾತಕ್ಕೆ ಬಲಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ6 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌