Choosing The Right Pillow: ಸರಿಯಾದ ದಿಂಬನ್ನು ಆಯ್ಕೆ ಮಾಡುವುದು ಹೇಗೆ? - Vistara News

ಲೈಫ್‌ಸ್ಟೈಲ್

Choosing The Right Pillow: ಸರಿಯಾದ ದಿಂಬನ್ನು ಆಯ್ಕೆ ಮಾಡುವುದು ಹೇಗೆ?

Choosing the Right Pillow: ಮೇಲಿಂದ ಕೆಳಗಿನವರೆಗೆ ಎಲ್ಲವೂ ಸರಿ ಇರಬೇಕು ಎಂದರೆ ಕುತ್ತಿಗೆಯ ಆರೋಗ್ಯವೂ ಸರಿ ಇರಬೇಕು. ಮಲಗುವ ಭಂಗಿ ಸರಿ ಇಲ್ಲದಿದ್ದರೆ ಕುತ್ತಿಗೆ ನೋವು, ತಲೆ ನೋವು, ಭುಜದ ನೋವು ಇತ್ಯಾದಿಗಳೆಲ್ಲ ಅಂಟಿಕೊಳ್ಳುತ್ತವೆ. ಹಾಗಾಗಿ ಸರ್ವೈಕಲ್‌ ಭಾಗದ ಸ್ವಾಸ್ಥ್ಯ ರಕ್ಷಣೆಗೆ ಸರಿಯಾದ ದಿಂಬು ಬಳಕೆಯೂ ಒಂದು ಮಾರ್ಗ. ನಮಗೆಂಥಾ ದಿಂಬು ಬೇಕು? ಇಲ್ಲಿದೆ ವಿವರ.

VISTARANEWS.COM


on

Choosing the Right Pillow
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗ್ಗೆ ಏಳುತ್ತಿದ್ದಂತೆ (Choosing the Right Pillow) ಭುಜವೆಲ್ಲ ನೋವು, ಕುತ್ತಿಗೆ ತಿರುಗಿಸಲಾಗುತ್ತಿಲ್ಲವೇ? ಹೇಗೋ ಮಲಗಿದ್ದೀರಿ, ಅದಕ್ಕೇ ನೋವಾಗಿದೆ ಎಂದು ಭಾವಿಸಿದಿರೇ? ಇರಬಹುದು… ಹಾಗಿಲ್ಲದೆಯೂ ಇರಬಹುದು! ನೀವು ಬಳಸುತ್ತಿರುವ ದಿಂಬು ಹೇಗಿದೆ ಎಂಬುದನ್ನು ಗಮನಿಸಿದ್ದೀರಾ? ನಿತ್ಯವೂ ರಾತ್ರಿ ಕಣ್ತುಂಬಾ ನಿದ್ದೆ ಬರುವುದಕ್ಕೆ ನಾವು ಬಳಸುವ ದಿಂಬು ಎಷ್ಟು ಮಹತ್ವದ ಕೊಡುಗೆಯನ್ನು ನೀಡಬಲ್ಲದು ಎಂಬುದನ್ನು ನಾವು ಅರಿಯುವುದೇ ಇಲ್ಲ. ನಮ್ಮ ದೇಹಕ್ಕೆ ಸೂಕ್ತವಾದ ಭಂಗಿಯಲ್ಲಿ ಕುತ್ತಿಗೆಯನ್ನು ಇರಿಸಿಕೊಳ್ಳದಿದ್ದರೆ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ನಾವು ಬಳಸುವ ದಿಂಬು ಹೇಗಿರಬೇಕು?

Woman sleeping in bed

ಕುತ್ತಿಗೆ-ದಿಂಬಿನ ನಂಟೇನು?

ನಮ್ಮ ಕುತ್ತಿಗೆಯೆಂದರೆ ಸ್ನಾಯುಗಳು, ಟೆಂಡನ್‌ಗಳು, ಲಿಗಮೆಂಟ್‌ಗಳು ಮತ್ತು ಸಣ್ಣ ವೆರ್ಟೆಬ್ರೆಗಳ ಸಂಕೀರ್ಣ ಹಂದರ. ಮೇಲಿಂದ ಕೆಳಗಿನವರೆಗೆ ಎಲ್ಲವೂ ಸರಿ ಇರಬೇಕು ಎಂದರೆ ಕುತ್ತಿಗೆಯ ಆರೋಗ್ಯವೂ ಸರಿ ಇರಬೇಕು. ನಮ್ಮ ಬೆನ್ನುಹುರಿಯ ಸರ್ವೈಕಲ್‌ ಭಾಗದಲ್ಲಿನ ಬಾಗು ಸರಿಯಾಗಿಲ್ಲದಿದ್ದರೆ ಹಲವು ರೀತಿಯ ತೊಂದರೆಗಳು ಬರುತ್ತವೆ. ಕುತ್ತಿಗೆ ನೋವು, ತಲೆ ನೋವು, ಭುಜದ ನೋವು ಇತ್ಯಾದಿಗಳೆಲ್ಲ ಅಂಟಿಕೊಳ್ಳುತ್ತವೆ. ಹಾಗಾಗಿ ಸರ್ವೈಕಲ್‌ ಭಾಗದ ಸ್ವಾಸ್ಥ್ಯ ರಕ್ಷಣೆಗೆ ಸರಿಯಾದ ದಿಂಬು ಬಳಕೆಯೂ ಒಂದು ಮಾರ್ಗ. ಬೆಳಗ್ಗೆ ಏಳುವಾಗಲೇ ಬೆನ್ನು, ಕುತ್ತಿಗೆ, ಭುಜದಲ್ಲಿ ನೋವು, ಆಗಾಗ ತಲೆ ನೋವು ಕಾಡುವುದು, ತೋಳುಗಳಲ್ಲಿ ಬೆರಳುಗಳಲ್ಲಿ ಮರಗಟ್ಟಿದ್ದ ಅಥವಾ ಚುಚ್ಚಿದ ಅನುಭವ, ಮಲಗುವ ಭಂಗಿ ಸರಿಯಾಗದೆ ಆಗಾಗ ಎಚ್ಚರವಾಗುವುದು- ಇವೆಲ್ಲ ದಿಂಬಿನ ಸಮಸ್ಯೆಯಿಂದಲೇ ಇರಬಹುದು. ಹಾಗಿದ್ದರೆ ಏನು ಮಾಡಬೇಕು?

ಬೆನ್ನಿನ ಮೇಲೆ ಮಲಗುವವರಿಗೆ

ತೀರಾ ಎತ್ತರವಲ್ಲದ, ಮೃದುವಾದ ದಿಂಬು ಇಂಥವರಿಗೆ ಬೇಕು. ಮುಖ ಮೇಲೆ ಮಾಡಿ ಮಲಗುವಾಗ ಕುತ್ತಿಗೆಯ ಎತ್ತರವನ್ನು ಅತಿ ಎತ್ತರಕ್ಕೆ ನೂಕುವ ದಿಂಬುಗಳು ಸರ್ವೈಕಲ್‌ ಭಾಗಕ್ಕೆ ಸಮಸ್ಯೆ ತರುತ್ತವೆ.

Sleeping Tips

ಮಲಗುವ ಭಂಗಿ

ಮಗ್ಗುಲಾಗಿ ಮಲಗುವವರಿಗೆ ಸ್ವಲ್ಪ ದಪ್ಪನೆಯ ಮತ್ತು ಹೆಚ್ಚು ದೃಢವಾದ ದಿಂಬು ಸೂಕ್ತ. ಕಾರಣ, ದೇಹದ ಎತ್ತರದಲ್ಲೇ ಕುತ್ತಿಗೆಯನ್ನು ಇರಿಸಿಕೊಳ್ಳುವುದು ಅಗತ್ಯ. ಹಾಗಿಲ್ಲದಿದ್ದರೆ ಕುತ್ತಿಗೆ ಭಾಗ ನೇತಾಡಿದಂತೆ ಇರುತ್ತದೆ; ನೋವು ತರುತ್ತದೆ.

ಹೊಟ್ಟೆಯ ಮೇಲೆ ಮಲಗುವವರಿಗೆ

ಇದು ಅಷ್ಟು ಸರಿಯಾದ ಭಂಗಿಯಲ್ಲ. ಹೀಗೆ ಮಲಗುವುದರಿಂದ ಕುತ್ತಿಗೆ ಮೇಲೆ ಅತಿ ಹೆಚ್ಚಿನ ಒತ್ತಡ ಬೀಳುತ್ತದೆ. ಆದರೂ, ಇದೇ ಭಂಗಿಯಲ್ಲಿ ನಿದ್ದೆ ಬರುತ್ತದೆ ಎಂದಾದರೆ, ತೆಳ್ಳನೆಯ ದಿಂಬು ಉಪಯೋಗಿಸಿ. ದಿಂಬು ಬೇಡ ಎಂದರೂ ಸರಿಯೆ.

Mouth Sleeping

ದಿಂಬಿನ ಫಿಲ್ಲಿಂಗ್

ದಿಂಬು ಎನ್ನುತ್ತಿದ್ದಂತೆ ಮೆತ್ತನೆಯ ಹತ್ತಿ ದಿಂಬುಗಳು ಮಾತ್ರವೇ ಇರುವುದು ಎಂದು ಭಾವಿಸುವಂತಿಲ್ಲ. ಇವುಗಳಲ್ಲೂ ಹಲವಾರು ವಸ್ತುಗಳಿಂದ‌ ತಯಾರಿಸಿದವು ಲಭ್ಯವಿವೆ.

ಮೆಮರಿ ಫೋಮ್‌

ಖರೀದಿಸುವಾಗ ಕೊಂಚ ದುಬಾರಿ ಎನಿಸಿದರೂ, ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಒಳ್ಳೆಯ ಆಧಾರವನ್ನಿದು ನೀಡುತ್ತದೆ. ನಮ್ಮ ದೇಹದ ಆಕೃತಿಯನ್ನೇ ತಳೆಯುವ ಮೂಲಕ, ಎಲ್ಲಿಯೂ ಸ್ನಾಯುಗಳಿಗೆ ಪ್ರತಿರೋಧ ಒಡ್ಡದೇ, ಒತ್ತಡವನ್ನು ಕಡಿಮೆ ಮಾಡುತ್ತದೆ.

Get a good night's sleep

ಲೇಟೆಕ್ಸ್‌

ಇದೂ ಸಹ ದೃಢವಾದ ಆಧಾರವನ್ನೇ ನೀಡುತ್ತದೆ. ಜೊತೆಗೆ, ಹೈಪೋಅಲರ್ಜೆನಿಕ್‌ ಸಹ ಆಗಿರುವುದರಿಂದ, ಧೂಳು, ಮೈಟ್‌ಗಳ ಸಮಸ್ಯೆ ಇದ್ದವರಿಗೆ ಒಳ್ಳೆಯ ಆಯ್ಕೆ. ಅಂಥವರಿಗೆ ಇದನ್ನು ಉಪಯೋಗಿಸುವುದರಿಂದ ಅಲರ್ಜಿಯ ಬಾಧೆ ಕಾಡುವುದು ಕಡಿಮೆ ಆಗುತ್ತದೆ.

ಹತ್ತಿ

ಸಾಮಾನ್ಯವಾಗಿ ಹೆಚ್ಚಿನ ಮಂದಿ ಬಳಸುವುದು ಇದನ್ನೇ. ಮೊದಲಿಗೆ ಇವುಗಳು ಅಗತ್ಯಕ್ಕಿಂತ ಹೆಚ್ಚು ಎತ್ತರವಾಗಿ, ದೃಢವಾಗಿಯೇ ಇರುತ್ತವೆ. ಆದರೆ ಕ್ರಮೇಣ ತಗ್ಗಿ, ಗಂಟಾಗಿ, ಬೇಕಾದ ಆಧಾರವನ್ನು ನೀಡದಂತಾಗುತ್ತವೆ. ಅಲರ್ಜಿ ಇರುವವರಿಗೆ ಸಮಸ್ಯೆ ನೀಡಬಹುದು.

ಗರಿಗಳು/ ಕಾಯರ್‌/ ಹುಲ್ಲು

ಫೆದರ್‌ ಮತ್ತು ಹುಲ್ಲಿನ ದಿಂಬುಗಳು ಮೃದುವಾವು ಹೌದಾದರೂ, ಹೆಚ್ಚು ಆಧಾರವನ್ನು ನೀಡುವುದಿಲ್ಲ. ಅಲರ್ಜಿ ಇರುವವರಿಗಂತೂ ಇದು ಆಯ್ಕೆಯೇ ಅಲ್ಲ. ಕಾಯರ್‌ ಫಿಲ್ಲಿಂಗ್‌ ಅಂಥ ಆರಾಮವನ್ನೇನು ನೀಡುವುದಿಲ್ಲ.

ಇದನ್ನೂ ಓದಿ: Common Cooking Mistakes: ಅಡುಗೆ ಎಡವಟ್ಟಾದರೆ ಸರಿ ಪಡಿಸುವುದು ಹೇಗೆ? ಇಲ್ಲಿದೆ ಉಪಾಯ!

ಹೈಬ್ರಿಡ್‌

ಒಂದಕ್ಕಿಂತ ಹೆಚ್ಚು ವಸ್ತುಗಳನ್ನು ಬಳಸಿ ಇವುಗಳನ್ನು ಮಾಡಲಾಗುತ್ತದೆ. ಯಾವೆಲ್ಲ ವಸ್ತುಗಳ ಫಿಲ್ಲಿಂಗ್‌ ಇದೆ ಎನ್ನುವುದನ್ನು ಖರೀದಿಸುವಾಗ ಖಾತ್ರಿ ಪಡಿಸಿಕೊಳ್ಳಬೇಕು. ಇಂಥವು ಸಹ ಆರಾಮ ಮತ್ತು ಆಧಾರವನ್ನು ನೀಡಲು ಸಮರ್ಥವಾಗಿರುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯನಗರ

Vijayanagara News: ಹಗರಿಬೊಮ್ಮನಹಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

Vijayanagara News: ಹಗರಿಬೊಮ್ಮನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಸಿ.ಆರ್. ಫೌಂಡೇಷನ್, ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ಸಂಬಂಧಿತ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

VISTARANEWS.COM


on

Free eye checkup and surgery camp at Hagaribommanahalli
Koo

ಹಗರಿಬೊಮ್ಮನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಸಿ.ಆರ್. ಫೌಂಡೇಷನ್, ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ಸಂಬಂಧಿತ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು (Vijayanagara News)ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್‌ನ ಗೌರವಾಧ್ಯಕ್ಷ ಎ.ವೀರಣ್ಣ ಮಾತನಾಡಿ, ಟ್ರಸ್ಟ್ ಮತ್ತು ಫೌಂಡೇಷನ್‌ಗಳ ಸಹಯೋಗದೊಂದಿಗೆ ತಾಲೂಕು ಸೇರಿದಂತೆ ಹರಪನಹಳ್ಳಿ, ಹೊಸಪೇಟೆ ಹಾಗೂ ಹಡಗಲಿ ತಾಲೂಕುಗಳಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದೇವೆ. ಮುಂದೆ ಕೂಡ ಇಂತಹ ಜನಪರ ಕೆಲಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಸತತ ಎರಡನೆ ದಿನವೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

ಈ ವೇಳೆ ಒಟ್ಟು 209 ಜನರು ತಪಾಸಣೆಗೊಳಗಾದರು. ಅದರಲ್ಲಿ 94 ಜನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಬಳಿಕ 15ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಟ್ರಸ್ಟ್‌ನ ಪದಾಧಿಕಾರಿಗಳು ಗೌರವಿಸಿ, ಸನ್ಮಾನಿಸಿದರು.

ಶಿಬಿರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ಮೇಲ್ವಿಚಾರಕ ಕೃಷ್ಣ, ವೈದ್ಯರಾದ ಡಾ. ವಿನಯ್, ಡಾ. ದೀಪ, ತ್ಯಾಗರಾಜ್‌ ನಾಯ್ಕ್, ಇಲ್ಲಿಯ ಸರ್ಕಾರಿ ವೈದ್ಯ ಡಾ. ಶರತ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್‌ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು

ಟ್ರಸ್ಟ್‌ನ ತಾಲೂಕು ಅಧ್ಯಕ್ಷ ಭದ್ರವಾಡಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುಧಾಕರ ಪಾಟೀಲ್, ಕೆ. ಪ್ರಭಾಕರ, ನರೆಗಲ್ ಮಲ್ಲಿಕಾರ್ಜುನ, ದಿವಾಕರಗೌಡ, ಕರಿಬಸವರಾಜ್, ನಾಗರಾಜ್, ಗಜಾಪುರ ಮಂಜುನಾಥ, ಕರಿಯಪ್ಪ ಗುಜನೂರು, ಪೂಜಾರ್ ಮಲ್ಲಿಕಾರ್ಜುನ, ಕುಂಟೂರು ನಿಂಗಣ್ಣ, ಇಟ್ಟಿಗಿ ಗುರುಬಸವರಾಜ್, ಮಲ್ಲಯ್ಯ, ಕಡಬಾಳು ಮಂಜಣ್ಣ, ಎಲಿಗಾರ್ ಮಂಜುನಾಥ, ಭದ್ರವಾಡಿ ಸುರೇಶ, ಹನಸಿ ವೀರೇಶ, ಆನಂದ, ವಿಜಯ್, ಕುಮಾರಸ್ವಾಮಿ, ನೆಲ್ಕುದ್ರಿ ಕುಮಾರ್, ಐನಳ್ಳಿ ಶೇಖರ್, ಬಾಬುವಲಿ, ಸಾಲ್ಮನಿ ನಾಗರಾಜ್ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಎಚ್.ಎಂ. ನಾಗರಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.

Continue Reading

ಫ್ಯಾಷನ್

Paris Olympics Saree Fashion: ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ವೈವಿಧ್ಯಮಯ ಇಂಡೋ-ವೆಸ್ಟರ್ನ್‌ ಸೀರೆಗಳಲ್ಲಿ ಕಾಣಿಸಿಕೊಂಡ ತಾಪ್ಸಿ ಪನ್ನು!

Paris Olympics saree fashion: ಪತಿ ಬ್ಯಾಡ್ಮಿಟನ್‌ ಕೋಚ್‌ ಮಥಾಯಿಸ್‌ಗೆ ಬೆಂಬಲ ನೀಡುವ ಸಲುವಾಗಿ ಪ್ಯಾರಿಸ್‌ ಒಲಂಪಿಕ್ಸ್‌ಗೆ ಆಗಮಿಸಿದ್ದ ಬಾಲಿವುಡ್‌ ನಟಿ ತಾಪ್ಸಿ ಪನ್ನು ಬಗೆಬಗೆಯ ಸೀರೆಗಳಲ್ಲಿ, ಪ್ರಯೋಗಾತ್ಮಕ ಡ್ರೇಪಿಂಗ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಸೀರೆ ಪ್ರೇಮಿಗಳ ಗಮನ ಸೆಳೆದರು. ಅವರು ಹೇಗೆಲ್ಲ ಕಾಣಿಸಿಕೊಂಡರು? ಅವರ ಸೀರೆ ಲವ್‌ ಬಗ್ಗೆ ಫ್ಯಾಷನಿಸ್ಟ್‌ಗಳು ಹೇಳಿರುವುದೇನು? ಇಲ್ಲಿದೆ ವಿವರ.

VISTARANEWS.COM


on

Paris Olympics saree fashion
ಚಿತ್ರಗಳು: ತಾಪ್ಸಿ ಪನ್ನು, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ (Paris Olympics saree fashion) ಬಾಲಿವುಡ್‌ ನಟಿ ತಾಪ್ಸಿ ಪನ್ನು (Taapsee Pannu) ನಾನಾ ಬಗೆಯ ಸೀರೆಗಳಲ್ಲಿ, ಪ್ರಯೋಗಾತ್ಮಕ ಡ್ರೇಪಿಂಗ್‌ನಲ್ಲಿ ಕಾಣಿಸಿಕೊಂಡು ಸೀರೆ ಪ್ರಿಯರ ಗಮನ ಸೆಳೆದರು.
ಪತಿ ಬ್ಯಾಡ್ಮಿಟನ್‌ ಕೋಚ್‌ ಮಾಥಾಯಿಸ್‌ಗೆ ಬೆಂಬಲ ನೀಡುವ ಸಲುವಾಗಿ ಪ್ಯಾರಿಸ್‌ ಒಲಂಪಿಕ್ಸ್‌ಗೆ ಆಗಮಿಸಿರುವ ನಟಿ ತಾಪ್ಸಿ ಪನ್ನು ಒಂದಲ್ಲ, ಎರಡಲ್ಲ ನಾಲ್ಕೈದು ಬಗೆಯ ಸೀರೆಗಳಲ್ಲಿ ಪ್ರಯೋಗಾತ್ಮಕ ಡ್ರೇಪಿಂಗ್‌ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡು, ಅಲ್ಲಿನ ಬೀದಿ ಬೀದಿಗಳಲ್ಲಿ ಓಡಾಡಿ, ಎಲ್ಲರ ಗಮನಸೆಳೆದರು.

saree fashion

ಅಂದಹಾಗೆ, ತಾಪ್ಸಿ ಪನ್ನು (Taapsee Pannu) ಎಲ್ಲರಂತೆ ಸಾಮಾನ್ಯ ಉಡುಗೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಎಲ್ಲರೂ ಒಮ್ಮೆ ತಿರುಗಿ ನೋಡುವಂತಹ ಸೀರೆಗಳನ್ನು ಇಂಡೋ-ವೆಸ್ಟರ್ನ್‌ ಸ್ಟೈಲಿಂಗ್‌ನಲ್ಲಿ ಉಟ್ಟು ಹೈಲೈಟಾದರು. ಪ್ರತಿ ಸೀರೆಯಲ್ಲೂ ಡಿಫರೆಂಟಾಗಿ ಕಾಣಿಸಿಕೊಂಡರು. ತಾಪ್ಸಿಯ ಈ ಸೀರೆಗಳ ಸ್ಟೈಲಿಂಗ್‌, ಅವರಿಗಿರುವ ಸೀರೆ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಇತರೇ ಸಿನಿಮಾ ತಾರೆಯರು ಕೂಡ ಇವರಂತೆಯೇ ಸೀರೆಯನ್ನು ಉಡಲಾರಂಭಿಸಿದಲ್ಲಿ, ಜಾಗತೀಕ ಮಟ್ಟದಲ್ಲಿ ಭಾರತೀಯರ ಈ ಸೀರೆಗಳಿಗೆ ಪ್ರಾಮುಖ್ಯತೆ ಹೆಚ್ಚುತ್ತದೆ ಎಂದಿದ್ದಾರೆ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ. ಇನ್ನು, ಫ್ಯಾಷನಿಸ್ಟ್‌ ರಾಕಿ ಹಾಗೂ ಜಾನ್‌ ಕೂಡ ಇದನ್ನೇ ಸಮರ್ಥಿಸಿಕೊಳ್ಳುತ್ತಾರೆ.

ತಾಪ್ಸಿ ಪನ್ನು ಸೀರೆಗಳ ಡ್ರೇಪಿಂಗ್‌ ಸ್ಟೈಲಿಂಗ್‌ ಹೇಗಿತ್ತು?

  • ಪ್ಯಾರಿಸ್‌ ಒಲಂಪಿಕ್ಸ್‌ನ ಮೊದಲ ದಿನ ತಾಪ್ಸಿ ಚಿಕ್ಕ ಪಿಂಕ್‌ ಬಾರ್ಡರ್‌ನ ವೈಬ್ರೆಂಟ್‌ ಹಸಿರು ಕಾಟನ್‌ ಸೀರೆಯನ್ನು ಸ್ಕಾರ್ಫ್‌ನಂತೆ ಕುತ್ತಿಗೆ ಸುತ್ತಿ ಸ್ಲಿವ್‌ಲೆಸ್‌ ವೇಸ್ಟ್ಕೋಟ್‌ನೊಳಗೆ ತೂರಿ, ಪ್ರಿಂಟೆಡ್‌ ಸೆರಗನ್ನು ವೇಸ್ಟ್‌ಲೈನ್‌ನ ಮುಂಬರುವಂತೆ ಡ್ರೇಪ್‌ ಮಾಡಿದ್ದರು. ಇದರೊಂದಿಗೆ ಸ್ನೀಕರ್‌ ಧರಿಸಿದ್ದರು.
  • ಎರಡನೇ ದಿನ ಬ್ಲ್ಯಾಕ್‌ ಟ್ಯಾಂಕ್‌ ಟಾಪ್‌ ಜೊತೆಗೆ ಕಪ್ಪು ವರ್ಣದ ಚಿಕ್ಕ ಬಾರ್ಡರ್‌ನ ಪಿಂಕ್‌ ಕಾಟನ್‌ ಸೀರೆಯನ್ನು ಧೋತಿ ಸ್ಟೈಲ್‌ನಲ್ಲಿ ಉಟ್ಟಿದ್ದರು. ಸ್ಟ್ರಾಪ್‌ ಸ್ಯಾಂಡಲ್‌ ಧರಿಸಿದ್ದರು.
  • ಬರ್ತ್‌ಡೇ ದಿನ ತಾಪ್ಸಿ, ಡೆನಿಮ್‌ ಶರ್ಟ್ ಜೊತೆಗೆ ಪಿಂಕ್‌ ಚಿಕ್ಕ ಬಾರ್ಡರ್‌ ಇರುವ ಹಳದಿ ಬಣ್ಣದ, ಗರ್ಲ್ಸ್ ಮುಖಗಳಿರುವಂತಹ ಕ್ವಿರ್ಕಿ ಪ್ರಿಂಟ್ಸ್‌ನ ಸೀರೆಯನ್ನು ಉಟ್ಟಿದ್ದರು. ಅವರ ಎರಡು ಪುಟ್ಟ ಜುಟ್ಟು ಹಾಗೂ ಬ್ಲ್ಯಾಕ್‌ ಶೂ ಅವರಿಗೆ ಕ್ವಿರ್ಕಿ ಲುಕ್‌ ನೀಡಿತ್ತು.
  • ಮತ್ತೊಂದು ದಿನ ವೆಸ್ಟರ್ನ್‌ ಲುಕ್‌ ನೀಡುವ ಕಾಲರ್‌ ನೆಕ್‌ನ ಫುಲ್ ಸ್ಲೀವ್‌ನ ಕಾರ್ಸೆಟ್‌ ಟಾಪ್‌ ಜೊತೆಗೆ ಬ್ಲ್ಯೂ & ವೈಟ್‌ ಕಾಟನ್‌ ಸೀರೆಯನ್ನು ಉಟ್ಟಿದ್ದ ತಾಪ್ಸಿ, ಸೀರೆ ಸೆರಗನ್ನು ಬಲಕ್ಕೆ ತಿರುಗಿಸಿ, ಒಟ್ಟೊಟ್ಟಾಗಿ ಪಿನ್‌ ಮಾಡಿದ್ದರು. ಇದರೊಂದಿಗೆ ಸ್ಕೂಲ್‌ ಶೂನಂತೆ ಬಿಂಬಿಸುವ ಹಾಫ್‌ ಶೂ ಅವರಿಗೆ ಡಿಫರೆಂಟ್‌ ಲುಕ್‌ ನೀಡಿತ್ತು.

ಇದನ್ನೂ ಓದಿ: Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್‌; ಶುರುವಾಗಿದೆ ಶಾಪಿಂಗ್‌ ಭರಾಟೆ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಆರೋಗ್ಯ

Beetroot Side Effects: ಬೀಟ್‌ರೂಟ್‌ ಎಲ್ಲರಿಗೂ ಒಳ್ಳೆಯದಲ್ಲ! ಯಾರು ಇದನ್ನು ತಿನ್ನಬಾರದು ಗೊತ್ತೇ?

(Beetroot Side Effects) ಜೀರ್ಣಕ್ರಿಯೆಗೆ, ಹೃದಯದ ಆರೋಗ್ಯಕ್ಕೆ, ರಕ್ತ ತುಂಬಿಕೊಳ್ಳಲು, ಚರ್ಮ ಫಳಫಳ ಹೊಳೆದು ಆರೋಗ್ಯದಿಂದ ಕಂಗೊಳಿಸಲು, ಪಿತ್ತಕೋಶದ ಆರೋಗ್ಯಕ್ಕೆ ಸೇರಿದಂತೆ ಹಲವಾರು ಅತ್ಯಗತ್ಯ ಗುಣಗಳು ಇದರಲ್ಲಿರುವುದರಿಂದ ಬೀಟ್‌ರೂಟ್‌ ಆಗಾಗ ಸೇವಿಸುವುದು ಒಳ್ಳೆಯದು ನಿಜ. ಆದರೆ, ಎಲ್ಲರೂ ಹೀಗೆ ಬೇಕಾದಾಗಲೆಲ್ಲ ಬೀಟ್‌ರೂಟ್‌ ಸೇವಿಸಬಹುದೇ? ಇದರಿಂದ ಸಮಸ್ಯೆಗಳಾಗಲಿಕ್ಕಿಲ್ಲವೇ ಎಂಬ ಪ್ರಶ್ನೆ ನಿಮಗೆ ಮೂಡಿದರೆ ಖಂಡಿತ ಅದಕ್ಕೆ ಉತ್ತರ ಇಲ್ಲಿದೆ.

VISTARANEWS.COM


on

Beetroot
Koo

ಬೀಟ್‌ರೂಟ್‌ ಗಡ್ಡೆಯಿಂದ ಸಾಕಷ್ಟು ಆರೋಗ್ಯ ಲಾಭ ಗಳಿರುವುದು ನಿಮಗೆ ಗೊತ್ತೇ ಇದೆ. ಬೀಟ್‌ರೂಟ್‌ನಲ್ಲಿ ಮುಖ್ಯವಾಗಿ ವಿಟಮಿನ್‌ ಸಿ, ಬಿ6, ಕಬ್ಬಿಣಾಂಶ, ಮೆಗ್ನೀಶಿಯಂ, ಪೊಟಾಶಿಯಂ ಹಾಗೂ ಮ್ಯಾಂಗನೀಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಈ ಎಲ್ಲ ಪೋಷಕಾಂಶಗಳು ನಮ್ಮನ್ನು ಆರೋಗ್ಯವಾಗಿಟ್ಟುಕೊಳ್ಳುವಲ್ಲಿ ಮಹತ್ವದ ಸ್ಥಾನ ವಹಿಸುತ್ತದೆ. ಹಾಗಾಗಿ ಬೀಟ್‌ರೂಟ್‌ ಸೇವನೆಯನ್ನು ಬಹುತೇಕ ಎಲ್ಲರೂ, ಆರೋಗ್ಯವರ್ಧನೆಗೆ ಸಲಹೆ ಕೊಡುತ್ತಾರೆ. ಜೀರ್ಣಕ್ರಿಯೆಗೆ, ಹೃದಯದ ಆರೋಗ್ಯಕ್ಕೆ, ರಕ್ತ ತುಂಬಿಕೊಳ್ಳಲು, ಚರ್ಮ ಫಳಫಳ ಹೊಳೆದು ಆರೋಗ್ಯದಿಂದ ಕಂಗೊಳಿಸಲು, ಪಿತ್ತಕೋಶದ ಆರೋಗ್ಯಕ್ಕೆ ಸೇರಿದಂತೆ ಹಲವಾರು ಅತ್ಯಗತ್ಯ ಗುಣಗಳು ಇದರಲ್ಲಿರುವುದರಿಂದ ಬೀಟ್‌ರೂಟ್‌ ಆಗಾಗ ಸೇವಿಸುವುದು ಒಳ್ಳೆಯದು ನಿಜ. ಆದರೆ, ಎಲ್ಲರೂ ಹೀಗೆ ಬೇಕಾದಾಗಲೆಲ್ಲ ಬೀಟ್‌ರೂಟ್‌ ಸೇವಿಸಬಹುದೇ? ಇದರಿಂದ ಸಮಸ್ಯೆಗಳಾಗಲಿಕ್ಕಿಲ್ಲವೇ ಎಂಬ ಪ್ರಶ್ನೆ ನಿಮಗೆ ಮೂಡಿದರೆ, ಖಂಡಿತ ಅದಕ್ಕೆ ಉತ್ತರ ಇಲ್ಲಿದೆ. ಯಾಕೆಂದರೆ, ಬೀಟ್‌ರೂಟ್‌ ಸಂಪೂರ್ಣ ಆಹಾರವೇ ಆದರೂ, ಇದರಿಂದ ಕೆಲವೇ ಕೆಲವರಿಗೆ ಸಮಸ್ಯೆಯೂ ಆಗಬಹುದು. ಬನ್ನಿ, ಯಾರೆಲ್ಲ ಬೀಟ್‌ರೂಟನ್ನು ಹೆಚ್ಚು ತಿನ್ನಬಾರದು (Beetroot Side Effects) ಎಂಬುದನ್ನು ನೋಡೋಣ.

Beetroot
Beetroot Rainy Season Food

ಬೀಟ್‌ರೂಟ್‌ನಲ್ಲಿ ಆಕ್ಸಲೇಟ್‌ ಹೇರಳವಾಗಿದೆ. ಸಾಮಾನ್ಯವಾಗಿ ಕಿಡ್ನಿ ಸ್ಟೋನ್‌/ ಕಿಡ್ನಿಯಲ್ಲಿ ಕಲ್ಲು ಹೊಂದಿದವರಿಗೆ ಕಡಿಮೆ ಆಕ್ಸಲೇಟ್‌ ಇರುವ ಆಹಾರವನ್ನು ವೈದ್ಯರು ಸೂಚಿಸುತ್ತಾರೆ. ಹಾಗಾಗಿ, ಬೀಟ್‌ರೂಟ್‌ ತಿನ್ನುವುದರಿಂದ ಕಿಡ್ನಿಯ ಕಲ್ಲಿನ ಸಮಸ್ಯೆ ಉಲ್ಬಣಗೊಳ್ಳಬಹುದು. ಈಗಾಗಲೇ ಕಿಡ್ನಿ ಕಲ್ಲು ಹೊಂದಿರುವ ಮಂದಿ ಬೀಟ್‌ರೂಟ್‌ ಕಡಿಮೆ ತಿಂದರೆ ಒಳ್ಳೆಯದು.

ಬೀಟ್‌ರೂಟ್‌ನಲ್ಲಿ ನೈಟ್ರೇಟ್‌ ಹೇರಳವಾಗಿದೆ. ಈ ಕಾರಣದಿಂದ ಅದು ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಅಧಿಕ ರಕ್ತದೊತ್ತಡ ಇರುವ ಮಂದಿಗೆ ಇದು ಒಳ್ಳೆಯದು. ಅದರೆ, ರಕ್ತದೊತ್ತಡ ಕಡಿಮೆ ಇರುವ, ಲೋ-ಬಿಪಿ ಸಮಸ್ಯೆ ಹೊಂದಿರುವ ಮಂದಿ ಇದನ್ನು ಆಗಾಗ ಸೇವಿಸಿದರೆ, ಔಷಧಿಯನ್ನೂ ಜೊತೆಗೆ ತೆಗೆದುಕೊಳ್ಳುತ್ತಿದ್ದರೆ, ಅಗತ್ಯಕ್ಕಿಂತಲೂ ಹೆಚ್ಚು, ರಕ್ತದೊತ್ತಡ ಕೆಳಗಿಳಿಯಬಹುದು. ಅತಿಯಾಗಿ ಬಿಪಿ ಡೌನ್‌ ಆಗುವುದು ಅಪಾಯ ಕೂಡಾ. ಹಿತಮಿತವಾಗಿ ಅಪರೂಪಕ್ಕೊಮ್ಮೆ ಬೀಟ್‌ರೂಟ್‌ ಸೇವನೆ ತೊಂದರೆ ಮಾಡದು.

Beetroot Rainy Season Food

ಬೀಟ್‌ರೂಟ್‌ನಲ್ಲಿ ಕಡಿಮೆ ಗ್ಲಿಸೆಮಿಕ್‌ ಇಂಡೆಕ್ಸ್‌ ಇದ್ದರೂ, ಇದರಲ್ಲಿ ನೈಸರ್ಗಿಕವಾದ ಸಿಹಿಯ ಅಂಶ ಇದೆ. ಹಾಗಾಗಿ, ಈಗಾಗಲೇ ಮಧುಮೇಹದ ಸಮಸ್ಯೆ ಹೊಂದಿದ ಮಂದಿಗೆ ಬೀಟ್‌ರೂಟ್‌ ಅತಿಯಾದ ಸೇವನೆ ಸಮಸ್ಯೆ ತರಬಹುದು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಬಹುದು.

ಕೆಲವರಲ್ಲಿ ಬೀಟೂರಿಯಾ ಎಂಬ ಸಮಸ್ಯೆ ಕಾಣಿಸಬಹುದು. ಬೀಟ್‌ರೂಟ್‌ ತಿಂದರೆ, ವಿಸರ್ಜಿಸುವ ಮೂತ್ರ ಹಾಗೂ ಮಲದ ಬಣ್ಣ ಪಿಂಕ್‌ ಬಣ್ಣಕ್ಕೆ ಬದಲಾಗುತ್ತದೆ. ಇದು ಸಾಮಾನ್ಯ ಹಾಗೂ ಯಾವುದೇ ಅಪಾಯವಿಲ್ಲದ್ದೇ ಆದರೂ, ಅನೇಕರು ಇದನ್ನು ರಕ್ತ ಎಂದು ಭ್ರಮಿಸಿ ಗಾಬರಿಯಾಗುವುದೂ ಉಂಟು. ಹಾಗಾಗಿ ಈ ಬಗ್ಗೆ ತಿಳುವಳಿಕೆ ಇರಲಿ.

ಇದನ್ನೂ ಓದಿ: Health Tips: ಏನ್ ನಿಂಗೆ ಕೊಬ್ಬಾ ಅನ್ನಬೇಡಿ ಕೊಬ್ಬೂ ಇರಬೇಕು!

ಬೀಟ್‌ರೂಟ್‌ನಲ್ಲಿ ಅಧಿಕ ನಾರಿನಂಶ ಇದೆ. ಇದು ಕೆಲವರಿಗೆ ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ತಂದೊಡ್ಡಬಹುದು. ಹೊಟ್ಟೆಯಲ್ಲಿ ಗ್ಯಾಸ್‌ ಅಥವಾ ಹೊಟ್ಟೆಯುಬ್ಬರದ ಸಮಸ್ಯೆಯನ್ನೂ ಹುಟ್ಟುಹಾಕಬಹುದು. ಹಾಗಾಗಿ ಬೀಟ್‌ರೂಟ್‌ ಅಧಿಕವಾಗಿ ಸೇವಿಸಬಾರದು. ಹೆಚ್ಚಾದರೆ ಇಂತಹ ಸಮಸ್ಯೆಗಳು ಕಾಡುವ ಅಪಾಯವೂ ಇದೆ.

Continue Reading

ಫ್ಯಾಷನ್

Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್‌; ಶುರುವಾಗಿದೆ ಶಾಪಿಂಗ್‌ ಭರಾಟೆ

Shravana shopping 2024: ಶ್ರಾವಣ ಮಾಸ ಆರಂಭಗೊಂಡಿದೆ. ಮುಂಬರುವ ಸಾಲು ಸಾಲು ಹಬ್ಬ-ಹರಿದಿನಗಳನ್ನು ಆಚರಿಸುವವರು ಈಗಾಗಲೇ ಶಾಪಿಂಗ್‌ನಲ್ಲಿ ತೊಡಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಎಲ್ಲೆಡೆ ಮಾರುಕಟ್ಟೆಗಳು ಗ್ರಾಹಕರನ್ನು ಸ್ವಾಗತಿಸುತ್ತಿವೆ. ಒಟ್ಟಾರೆ ಮಾರುಕಟ್ಟೆಯ ಚಿತ್ರಣ ಹೇಗಿದೆ? ಇಲ್ಲಿದೆ ವರದಿ.

VISTARANEWS.COM


on

Shravana shopping 2024
ಚಿತ್ರಗಳು: ಮಿಂಚು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶ್ರಾವಣ ಮಾಸದ ಶಾಪಿಂಗ್‌ (Shravana shopping 2024) ಎಲ್ಲೆಡೆ ಆರಂಭಗೊಂಡಿದೆ. ಹೌದು, ಈ ವರ್ಷದ ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಜೊತೆಗೆ ಒಂದರ ಹಿಂದೊಂದರಂತೆ ಸಾಲು ಸಾಲು ಹಬ್ಬ-ಹರಿದಿನಗಳು ಆಗಮಿಸಲಾರಂಭಿಸುತ್ತವೆ. ಇದಕ್ಕೆ ಪೂರಕ ಎಂಬಂತೆ, ಹಬ್ಬಗಳನ್ನು ಆಚರಿಸುವವರು ಈಗಾಗಲೇ ಶಾಪಿಂಗ್‌ ಆರಂಭಿಸಿದ್ದಾರೆ. ಪರಿಣಾಮ, ಈ ಫೆಸ್ಟೀವ್‌ ಸೀಸನ್‌ಗೆ ತಕ್ಕಂತೆ, ಎಲ್ಲೆಡೆ ಮಾರುಕಟ್ಟೆಗಳು ಕೂಡ ಸಜ್ಜಾಗಿವೆ. ಹಾಗಾದಲ್ಲಿ, ಹಬ್ಬದ ಸೀಸನ್‌ನಲ್ಲಿ ಏನೇನೆಲ್ಲಾ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವುದಕ್ಕೆ ಬೇಡಿಕೆ ಹೆಚ್ಚಾಗಿದೆ ಎಂಬುದರ ಬಗ್ಗೆ ಇಲ್ಲಿದೆ ವರದಿ.

Shravana shopping 2024

ಪೂಜಾಲಂಕಾರ/ಗೃಹಾಲಂಕಾರ ಸಾಮಗ್ರಿಗಳು

ಗೃಹಾಲಂಕಾರ ಹಾಗೂ ಪೂಜಾಲಂಕಾರಕ್ಕೆ ಬಳಸುವ ನಾನಾ ಬಗೆಬಗೆಯ ಕೃತಕ ಹೂ ತೋರಣಗಳು, ಮಾವಿನ ಎಲೆಗಳು, ಬಾಳೆಯ ಕಂಬಗಳು, ದೀಪಗಳು, ಕೊಡುಗೆ ನೀಡುವಂತಹ ಅತ್ಯಾಕರ್ಷಕ ವಸ್ತುಗಳು ಸೇರಿದಂತೆ ನಾನಾ ಬಗೆಯವು ಮಾರುಕಟ್ಟೆಯಲ್ಲಿ ಬಿಕರಿಗೊಳ್ಳುತ್ತಿವೆ.

Shravana shopping 2024

ಸೀರೆ ಅಂಗಡಿಗಳಲ್ಲಿ ಜನಜಂಗುಳಿ

ಸೀರೆ ಅಂಗಡಿಗಳಲ್ಲಂತೂ ಜನಜಂಗುಳಿ ಈ ಮೊದಲಿಗಿಂತ ಹೆಚ್ಚಾಗಿದೆ. ಕೇವಲ ಹೆಂಗಸರು ಮಾತ್ರವಲ್ಲ, ಇಡೀ ಕುಟುಂಬವೇ ಸೀರೆ ಸೆಂಟರ್‌, ಶಾಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಹಬ್ಬ ಸಮೀಪಿಸುತ್ತಿರುವಂತೆಯೇ ನಾನಾ ಬಗೆಯ ಸೀರೆಗಳಿಗೆ ಡಿಮ್ಯಾಂಡ್‌ ಹೆಚ್ಚಿದೆ ಎನ್ನುತ್ತಾರೆ ಸೀರೆ ಮಾರಾಟಗಾರರಾದ ರಾಘವ್.

Shravana shopping 2024

ಬಂಗಾರದ ಆಭರಣಗಳ ಖರೀದಿ

ಅಕ್ಷಯ ತೃತೀಯ ಹಾಗೂ ದೀಪಾವಳಿ ಸೀಸನ್‌ ಹೊರತುಪಡಿಸಿದಲ್ಲಿ ಅತಿ ಹೆಚ್ಚು ಬಂಗಾರದ ಜ್ಯುವೆಲರಿ ಕೊಳ್ಳುವುದು ಶ್ರಾವಣ ಮಾಸದಲ್ಲಿ ಎನ್ನುತ್ತದೆ ಸಮೀಕ್ಷೆಯೊಂದು. ಇದಕ್ಕೆ ಸಾಕ್ಷಿ ಎಂಬಂತೆ, ಮುಂಬರುವ ಹಬ್ಬಗಳಿಗೆ, ಈಗಲೇ ಬಂಗಾರ ಖರೀದಿ ಮಾಡುವ ಮಾನಿನಿಯರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಆಭರಣ ಅಂಗಡಿಯೊಂದರ ಮಾಲೀಕರು.

Shravana shopping 2024

ಬೆಳ್ಳಿ ಸಾಮಗ್ರಿಗಳ ಖರೀದಿ ಭರಾಟೆ

ಇನ್ನು ಬಂಗಾರ ಮಾತ್ರವಲ್ಲ, ಬೆಳ್ಳಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆಯೂ ಸಾಗಿದೆ. ಬೆಳ್ಳಿ ತಟ್ಟೆ, ಬಟ್ಟಲು, ದೇವಿಯ ಮುಖವಾಡ, ದೀಪ, ಮಂಗಳಾರತಿ ತಟ್ಟೆ ಹೀಗೆ ನಾನಾ ಸಾಮಗ್ರಿಗಳ ಮಾರಾಟದಲ್ಲಿ ಹೆಚ್ಚಳ ಕಂಡುಬರುತ್ತಿದೆ.

Friendshipday Fashion: ಮಾನ್ಸೂನ್‌‌‌ನಲ್ಲಿ ಟ್ರೆಂಡಿಯಾದ ಫ್ರೆಂಡ್‌‌‌ಶಿಪ್‌ ಡೇ ಫ್ಯಾಷನ್‌ ಥೀಮ್‌ಇದನ್ನೂ ಓದಿ:

ಗೃಹೋಪಯೋಗಿ ವಸ್ತುಗಳ ಖರೀದಿ

ಶ್ರಾವಣ ಮಾಸದಲ್ಲಿ ಶುಭ ದಿನಗಳು ಹೆಚ್ಚಾಗಿರುವುದರಿಂದ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುವವರು ಕೂಡ ಜಾಸ್ತಿಯಾಗಿದ್ದಾರೆ. ಅದರಲ್ಲೂ, ಅಡುಗೆ ಮನೆಯ ಎಲೆಕ್ಟ್ರಾನಿಕ್‌ ಐಟಂಗಳನ್ನು ಖರೀದಿಸುವವರು ಅಧಿಕಗೊಂಡಿದ್ದಾರೆ ಎನ್ನುತ್ತಾರೆ ಎಲಾಕ್ಟ್ರಾನಿಕ್ಸ್ ಶಾಪ್‌ವೊಂದರ ಮ್ಯಾನೇಜರ್‌ ಜಯಂತ್‌.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
ಪ್ರಮುಖ ಸುದ್ದಿ41 mins ago

Rohit Sharma : ಧೋನಿಯ ನಾಯಕತ್ವದ ದಾಖಲೆಯೊಂದನ್ನು ಮುರಿದ ರೋಹಿತ್ ಶರ್ಮಾ

ಪ್ರಮುಖ ಸುದ್ದಿ52 mins ago

Gowri Movie: ‘ಗೌರಿ’ ಚಿತ್ರದ ಟ್ರೈಲರ್ ಅನಾವರಣ ಮಾಡಿದ ಕಿಚ್ಚ ಸುದೀಪ್

Bangladesh Protest
ದೇಶ57 mins ago

Bangladesh Protest: ಬಾಂಗ್ಲಾದೇಶ ಹಿಂಸಾಚಾರ ಕುರಿತು ಮೋದಿ ಮಹತ್ವದ ಸಭೆ; ಚರ್ಚಿಸಿದ ವಿಷಯಗಳೇನು?

Independence Day 2024
ಸಿನಿಮಾ57 mins ago

Independence Day 2024: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಕಥೆ ಹೇಳುವ ಟಾಪ್‌ 10 ಹಿಂದಿ ಸಿನೆಮಾಗಳಿವು

CM Siddaramaiah instructs to provide immediate relief to those affected by heavy rains
ಕರ್ನಾಟಕ1 hour ago

CM Siddaramaiah: ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ತಕ್ಷಣ ಪರಿಹಾರ; ಸಿದ್ದರಾಮಯ್ಯ ಸೂಚನೆ

ಪ್ರಮುಖ ಸುದ್ದಿ2 hours ago

Vinod Kambli : ಹದಗೆಟ್ಟಿದೆ ಮಾಜಿ ಕ್ರಿಕೆಟರ್​ ವಿನೋದ್ ಕಾಂಬ್ಳಿ ಆರೋಗ್ಯ ; ಸಚಿನ್ ಜತೆಗಾರನಿಗೆ ಈಗ ಕೈ ಹಿಡಿದುಕೊಂಡು ನಡೆಯುವ ಪರಿಸ್ಥಿತಿ!

Urban local bodies
ಪ್ರಮುಖ ಸುದ್ದಿ2 hours ago

Urban local bodies: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಿದ ಸರ್ಕಾರ; ಇಲ್ಲಿದೆ ಪಟ್ಟಿ

ವಿಸ್ತಾರ ಗ್ರಾಮ ದನಿ
ಪರಿಸರ2 hours ago

ವಿಸ್ತಾರ ಗ್ರಾಮ ದನಿ: ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ; ನಮ್ಮ ಶಾಸಕರು, ಸಂಸದರು, ಸಚಿವರು, ಅಧಿಕಾರಿಗಳು ಕೃಷಿಕರಿಗಾಗಿ ಏನು ಮಾಡಬಹುದು?

Taslima Nasrin
ವಿದೇಶ2 hours ago

Taslima Nasrin: ಇಸ್ಲಾಮಿಸ್ಟ್‌ಗಳನ್ನು ಬೆಳೆಯಲು ಬಿಟ್ಟಿದ್ದೇ ಬಾಂಗ್ಲಾ ದುಸ್ಥಿತಿಗೆ ಕಾರಣ; ತಸ್ಲೀಮಾ ನಸ್ರಿನ್‌ ಆಕ್ರೋಶ

Tollywood actor Junior NTR starrer Devara movie second song release
ಕರ್ನಾಟಕ2 hours ago

Devara Movie: ಬಂದಿದೆ ʼದೇವರʼ ಸೆಕೆಂಡ್‌ ಸಾಂಗ್‌; ಕನ್ನಡದಲ್ಲೂ ಇದೆ ʼಸ್ವಾತಿಮುತ್ತೇ ಸಿಕ್ಕಂಗೈತೆʼ ರೊಮ್ಯಾಂಟಿಕ್‌ ಹಾಡು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌